ಸೋಮವಾರ, ಡಿಸೆಂಬರ್ 23, 2019

1293. ಹನಿ-ಮೌನ

ಮೌನ

ಅವನು ಮೌನ ರಾಗ..
ಅವಳ ಬೊಂಬಾಯಿಯ ನಡುವೆ..
ಅವಳದು ಮನದಲೆ ಮಾತು..
ಅತ್ತೆಯ ವಯಸಿನ, ಅನುಭವದ ನುಡಿ ಸಾಗರದ ಮುಂದೆ..
@ಪ್ರೇಮ್@

1292.ನರಮಾನಿ

ನರಮಾನಿ

ನರಮಾನಿ ಯಾನ್ ಪಶುವತ್ತ್!
ಕಣ್ಣೀರ್ ತೂದು ಕೈಟೇ ಒರೆಸುವೆ
ಬಡವುದ ಸಮಯಡ್ ಬತ್ತಿನಾಯನ ಬಡವು ಇಂಗಾವೆ
ಖಾಲಿ ಕೈಟಿಪ್ಪುನಗ ಬಂಜಿಗ್ ಕೊರುವೆ
ಮನಸ್ ಮಲ್ಲ ಮಲ್ತ್ ಇಲ್ಲಡ್ ಕುಲ್ಲಾವೆ
ಆಂಡ ಮೋಸ ಮಲ್ತಿನಾಯಗ್ ಜಾಗ್ ಕೊರಯೆ!

ನರಮಾನಿ ಯಾನ್ ಪಶುವತ್ತ್!
ಪೆತ್ತ ಕಂಜಿಗ್ ಗೌರವ ಕೊರುವೆ,
ನಾಯಿ ಪುಚ್ಚೆಗ್ ಮೋಕೆ ಕೊರುವೆ
ಚನಿಲ್ ಮುಲಕುಲೆಗಿಲ್ಲಡ್ ಜಾಗ್ ಕೊರುವೆ
ರಡ್ಡ್ ನಾಲಯಿದಾಯನ್ ಮಾಪು ಮಲ್ಪಾಯೆ!

ನರಮಾನಿ ಯಾನ್ ಪಶುವತ್ತ್!
ಪೇರ್ ಗ್ ಪೇರ್ ಕೊರುವೆ
ನೀರ್ ಗ್ ನೀರ್ ಕೊರುವೆ,
ಸರಿ ತಪ್ಪುನು ಎದುರೇ ಪನು ವೆ
ತುಳುವಪ್ಪೆ ಬಾಲೆನ್ ಮಟ್ಟಿಲ್ ಡ್ ಉಂತಾವೆ!

@ಪ್ರೇಮ್@
.03.12.2019

1295.ತುಳುವಪ್ಪೆನ ಬಾಲೆ

ತುಳುವಪ್ಪೆನ ಬಾಲೆ

ನಿಟ್ಟೆಲ್ಡ್ ಪಾಡೊಂದು ತಾಂಕೊಂದುಲ್ಲರ್ ಎನನ್
ಅಪ್ಪೆ ಇರೆ ಪಾದೊದ ಧೂಳು ಯಾನ್
ಸಂದಾಯೆರೆ ಆವಂದ್ ಇರೆನ ಋಣನ್
ಕೈಮುಗಿದ್ ಪಾದೊದ ಬರಿಟ್ ದೀತೆ ಈ ಕಬಿತೆನ್..

ಅಪ್ಪೆ ಸರಸತಿ ಕೊರಿನ ಇದ್ಯೆದ ತುಡರ್ ಡ್
ಬರೆತೆ ನಾಲಕ್ಷರ ಇರೆಗಾದ್ ಉಡಲ್ ಡ್ದ್
ನಲಿತೊಂದುಲ್ಲೆ ಇರೆನೊಟ್ಟು ಬಾಲೆದ ಲೆಕ್ಕ ಅನುದಿನೊಟ್ಟು
ಅಮ್ಮನಿಲ್ಲಡ್ ಬಾಲೆಗ್ ಬಙ್ಗ ಬರಂದ್ ಕನಮನೊಟ್ಟು..

ಇರೆ ಪಾದೊಗು ಅಡ್ಡ ಬೂರ್ದು, ಕೈ ಮುಗಿದ್ ನಟ್ಟುವೆ
ತಪ್ಪು ಮಲ್ತೊಂದಿಪ್ಪುನ ನರಮಾನಿಗ್ ಎಡ್ಡೆ ಬುದ್ಧಿ ಬರಡ್ಂದ್ ಕೇನುವೆ
ಬುಲೆ ಒರಿಯಡ್, ಬರ್ಸ ಬೋಡಾಯಿನಾತೆ ಬರಡ್
ರಡ್ಡ್ ಮೋನೆದ ಜನತ ಎಡ್ಡೆ ಮೋನೆ ಮಾತ್ರ ಒರಿಯಡ್
@ಪ್ರೇಮ್@
23.12.2019

ಸೋಮವಾರ, ಡಿಸೆಂಬರ್ 9, 2019

1289. ಜೀ-ವನ

ಜೀ-ವನ

ವನವಿದು ಬದುಕು ಹಸಿರಿನ ಆಗರ
ನಗುವಲು ನೋವು ಕ್ಷಣಗಳ ಸಾಗರ.
ಮನಗಳ ಮಿಲನ ಭಾವದ ಜನನ
ಮಿದುಳಿಗು ಹೃದಯಕೂ ತಂತಾನೆ ತನನ

ಗೊಂದಲ ಗೋಪುರ ನಲಿವುದೋ ನಿಲುವುದೋ
ನಿಂತರೆ ದೂಕು ಕುಂತರೆ ಎಳೆತವುದು
ದೇವನ ಗಡಿಗೆಲಿ ಸರ್ವರೂ ಸಮಾನರು..

ಜಗಳವು ಸಣ್ಣ ವಿಷಯದ ಕುರಿತು
ಅಳುವದು ಬರುವುದು ಜತೆಯಲೆ ಬೆರೆತು
ತೊಳಲಾಟದ ಗಳಿಗೆಯು ಹೋಗುವೆ ಮೊಳೆತು..

ಹೊಸತು ಹಳತರ ಸಮಾಗಮ ಇಲ್ಲಿ
ಕಷ್ಟದಿ ದಿನಗಳ ಸಾಗಿಸುವುದ ಕಲಿ
ಹಣವೆಂಬ ನೋಟಿಗೆ ಬೆಲೆಯಿಹುದಿಲ್ಲಿ..

ಮನುಷ್ಯತ್ವ ಕಲಿತರೆ ಏರುವೆ ನೀನು
ಸಹಾಯದಿ ಬದುಕಲು ಜೀವನ ಜೇನು
ಹಿಗ್ಗದೆ ಕುಗ್ಗದೆ ನೆಮ್ಮದಿ ಕಾಣು..
@ಪ್ರೇಮ್@
10.12.2019

1291. ಹಾಯ್ಕುಗಳು

ಹಾಯ್ಕುಗಳು

ಮನಬಂದಂತೆ
ಬದುಕಲಾರೆ ನೀನು
ಜಗದೊಳಗೆ

ತಿದ್ದಿ ನಡೆಯೋ
ಮಾನವತೆಯ ತೋರಿ
ಪರದಾಡದೆ

ನಕ್ಕು ನಲಿದು
ಬೇಸರದಿ ಕುದಿದು
ಹಿಗ್ಗು ಕುಗ್ಗಿದು

ನಯವಿನಯ
ಬಗುಮಾನ ಬಿಡುತ
ಬಾಳಬೇಕಲ್ಲ..
@ಪ್ರೇಮ್@
10.12.2019

1288. ತುಳು ಕವಿತೆ- ಬದ್ಕ್ ಇಂಚ ಉಪ್ಪಡ್

ಬದ್ ಕ್ ಇಂಚ ಉಪ್ಪಡ್..

ಬಂಡೆದ ಲೆಕ್ಕ ಗಟ್ಟಿ ಆವೊಡು
ಮಂಡೆದ ಉಲಾಯಿತ್ತಿನ ಬರವು ಸರವು..
ಉಂಡುದು ತಿಂದ್ ದ್ ಬದ್ ಕ್ಂಡ ಯಾವಂದ್
ಗುಂಡು ಕಲ್ಲ್ ದ ಲೆಕ್ಕ ಕುಲ್ಲುಂಡ ಆವಂದ್!
ಬೊಂಡಿತ್ತಿ ಮಂಡೆನ್ ಉಪಯೋಗ ಮಲ್ತೊಂದು
ಬದುಕುನ ಸಾದಿನ್ ನಮನೇ ನಾಡೊನೊಡು!

ಯಾನೊರಿ ಬಾಳುವೆ, ಒರಿನಕುಲು ಸಯ್ಯಡ್
ಪನ್ಪಿನ ಪಾತೆರತ್ತ್ , ಬದ್ಕೆರೆ ಬುಡೊಡು,
ತಾನ್ ಖುಷಿಟ್ ಬಾಳೊಂದು ನಾಲ್ ಜನಕ್
ಕೈಟಾಪಿ ಸಹಾಯ ಪಟ್ಟೊಂದು ಬರೊಡು.
ಐಟ್ ಖುಷಿ ಪಡೆದ್ ಬಾಳ್ವೆ ನಡಪೊಡು.

ಕೊರಿನೇನ್ ಪನಂದೆ, ಪುದರ್ ಗಾಸೆ ಪಾಡದೆ
ಮನಸ್ಫೂರ್ತಿಯಾದ್ ಸಂತಸ ಪಡೆವೊಡು!
ನೀರ್ ಲ ಆವು, ಪೇರ್ ಲ ಆವು ಏಪಲ
ಸಾಧ್ಯ ಆಪಿ ಸಹಕಾರ ನಮ ಕೊರುಡು
ಕೊರುದು ದೇವೆರೆಗ್ ಅವೆನ್ ಬುಡೊಡು!

ಯಾನ್ ಮಲ್ತೆ ಪಂದ್ ಪಂಡೊಂದು ಬರ್ಪಿನತ್ತ್
ದೇವೆರ್ ಎನ್ನ ಕೈಟ್ ಮಲ್ಪಾಯಿನಿ ಪನ್ಪಿ
ಪಾತೆರನ್ ಏಪಲ ನೆನೆಪು ದೀವೊನೊಡು.
ನಮ ಮಲ್ಪಿ ಎಡ್ಡೆ ಕಾರ್ಯಗ್ ದೇವೆರೆ ದಯೆ ಉಂಡು
ನಾಯಿಗ್ ನೀರ್ ಕೊರುಂಡಲಾ ಸ್ವರ್ಗದ ಲೆಕ್ಕೊಗುಂಡು!
ನಮ ಮಲ್ತಿನ ಕಾರ್ಯೊಲೆನ ಲೆಕ್ಕ ಬೂರೊಂದುಂಡು
ಎಡ್ಡೆ ಕಾರ್ಯದ ಬೂಕುಡು ಪುದರ್ ಬರಡ್
ಹಾಳ್ ಬೇಲೆ ಮಲ್ತ್ ಬದ್ ಕ್ ಬೊರ್ಚಿ.
ದೇವೆರೆನ ದಯೆ ಒಂಜಿ ಏಪಲ ಬೋಡು..
@ಪ್ರೇಮ್@
02.12.2019

1287.. ಝುಲ್ ಕಾಫಿಯಾ ಗಝಲ್

ಜುಲ್ ಕಾಫಿಯಾ ಗಝಲ್

ತಾಯಿ ಭಾರತಿ ಸಲಹುವ ಕರುಣೆಯನು ನೀತಿಯನು ಮರೆಯಲಾರೆ
ಮನದಣಿಯೆ ಮಣಿದು ಬಾಗುತ ನೆರವನು ಗೆಲುವನು ಮರೆಯಲಾರೆ.

ಮೌನವಾಗಿ ಮಕ್ಕಳ ಪೊರೆವ ಮಾತೆಯ ಸಹನೆಯು ಅತ್ಯದ್ಭುತ.
ಪೌರುಷವಿರುವ ಪರಾಕ್ರಮಿಯಂತೆ ಕಾಯುವ ಬಲವನು ಉಲ್ಲಾಸವನು ಮರೆಯಲಾರೆ.

ಹಿಂದು,ಬೌದ್ಧ ,ಜೈನ, ಮುಸ್ಲಿಮ್, ಕ್ರೈಸ್ತರೆಲ್ಲರ ಸಮನ್ವಯ.
ಹಿಂದಿ,ದ್ರಾವಿಡ ಭಾಷೆಗಳ ಹರಿವನು ಛಲವನು ಮರೆಯಲಾರೆ.

ಭರತನಾಟ್ಯ, ಕೂಚುಪುಡಿ, ಬಾಂಗ್ರಾ,ಒಡಿಸ್ಸಿ,ಯಕ್ಷಗಾನಗಳ ಮಿಲನ!
ಕೇಸರಿ ಬಿಳಿ ಹಸಿರಿನ ಸವಿಯನು ಹೊಳಪನು ಮರೆಯಲಾರೆ.

ಹಣತೆಯಂದದಿ ಬಾಳ ಬೆಳಗುವ ಮನದ ಸಂಭ್ರಮ ಸಡಗರ.
ಹರಿತವಾದ ಕತ್ತಿಯಂದದಿ ಸೆಳೆವ ಪ್ರೇಮವನು ತಾಳ್ಮೆಯನು ಮರೆಯಲಾರೆ.
9901327499

1290. ಭಾವಗೀತೆ -ನನ್ನೊಲವಿಗೆ

ಭಾವಗೀತೆ

ನನ್ನೊಲವಿಗೆ...

ನನ್ನೊಲವ ಹೃದಯ ಗುಡಿಯಲಿ
ಬಚ್ಚಿಟ್ಟು ನಿನ್ನ ಪೂಜಿಸುತಿರುವೆ
ಪ್ರತಿದಿನ ಪ್ರತಿಕ್ಷಣ ಇನಿಯಾ
ನೀ ಬರುವೆಯೆಂಬ ಭಾವದಿ
ನೀ ಜೊತೆಯಲಿರುವೆಯೆಂಬ ಮನದಿ...

 ಬಳಿಯಲಿರದಿದ್ದರೂ ದೇಹ
ನೀ ಬಳಿಯಿರುವೆ ಪ್ರೀತಿಯಲಿ ಸದಾ
ಬದುಕಿಗಾಧಾರ ನಿನ್ನೊಲವೆಂದೂ
ನಾನಿರುವೆ ನಿನಗಾಗಿ ಎಂದೆಂದೂ..

ಮನದ ಮಾತುಗಳೊಂದೆ
ಮೌನ ಭಾಷೆಯೂ ಒಂದೆ
ಒಲವಿನಲಿ ನಲಿವು ಗೆಲುವೊಂದೇ
ನೀ ಜೊತೆಯಿರೆ ನಾನೆಂದೂ ಮುಂದೆ

ಒಡಲ ಪ್ರೇಮವದು ಸದಾ
ನನ್ನೊಡನಿರುವುದು, ನಾ ಫಿದಾ
ನಿನ್ನ ಅಮೂಲ್ಯ ಪ್ರೀತಿರತ್ನಕೆ
ಬೇರೂರಿರುವೆ ಮನದಾಳಕೆ..
@ಪ್ರೇಮ್@
08.12.2019

ಗುರುವಾರ, ನವೆಂಬರ್ 21, 2019

1286. ಹಾಸ್ಯಕವನ-ತಲೆನೋವು

ಇವೆಲ್ಲಾ ತಲೆನೋವೇ..

ಮನೆಗೆ ನೆಂಟರು ಬರುವರೆಂದರೆ ತಲೆನೋವೇ..
ಹತ್ತಿರದ ಬಂಧುಗಳ ಮದುವೆಯೆಂದರೂ ತಲೆನೋನವೇ..

ತಲೆಗೆ ಸಂಸಾರದ ಭಾರ ಬೀಳಲು ತಲೆನೋವು
ಮಕ್ಕಳು ಓದಲು ಹಿಂದೆ ಬೀಳಲು ತಲೆನೋವು
ಮಡದಿಯು ತವರು ಮನೆಗೆ ಓಡಲು ತಲೆನೋವು
ಗುಡಿ ಮಂದಿರದಲಿ ಮಹಾನ್ ಪೂಜೆಯು ತಲೆನೋವು!

ಆಫೀಸಲ್ಲಿ ಕೆಲಸ ಅತಿ ಹೆಚ್ಚಾಗಲು ತಲೆನೋವು
ಮನೆಯಲಿ ಹೆಂಡತಿಗೆ ಕೋಪ ಬರಲು ತಲೆನೋವು
ಮಾವ ಆಸ್ತಿ ಕೊಡದಿರೆ ಮತ್ತಷ್ಟು ತಲೆನೋವು
ಅತ್ತೆ ಮಗಳ ನೋಡಲು ಬಂದರೆ ಅಳಿಯಗೆ ತಲೆನೋವು

ಹೆಣ್ಣು ನೋಡಲು ಹೋದರೆ ಗೆಳತಿಗೆ ತಲೆನೋವು
ಗಂಡು ನೋಡಲು ಬಂದರೆ ಪ್ರಿಯಕರನ ನೆನೆದು ತಲೆನೋವು
ತಂದೆ ಗೆಳತಿಯೊಂದಿಗಿರುವುದ ನೋಡಿದೊಡೆ ತಲೆನೋವು
ಮೊಬೈಲ್ ಸೀಕ್ರೆಟ್ ತಂಗಿ ನೋಡಲು ತಲೆನೋವು
ಪಕ್ಕದ ಮನೆಯಾಂಟಿ ಸಿನಿಮಾ ಥಿಯೇಟರಲಿ ಸಿಗಲು ತಲೆನೋವು

ಅಂಕಲ್ ಗೆ ಕಾಲೇಜೋದುವ ಮಗಳಿರಲು ತಲೆನೋವು
ಆಂಟಿಗೆ ತನ್ನ ಕೂದಲುದ್ದ ಬಂದರೆ ತಲೆನೋವು
ಮನೆಯಲಿ ಕಾರ್ಯಕ್ರಮವಿರಲು ತಲೆನೋವು

ಗದ್ದೆಯಲಿ ಹಸಿರು  ಬೆಳೆ ಬರದಿರಲು ತಲೆನೋವು
ತೋಟಕ್ಕೆ ಹುಳ ಬರಲು ಮತ್ತೆ ತಲೆನೋವು
ಜ್ವರ ಬಂದು ಸುಸ್ತಾಗೆ ಬಹುದೊಡ್ಡ ತಲೆನೋವು
ಮಾವನ ಮಗಳಿಗೆ ಕೊಟ್ಟ ಪತ್ರ ಮಾವ ನೋಡೆ ತಲೆನೋವು
ಅತ್ತೆ ಅಮ್ಮ ಹೆಂಡತಿ ಒಟ್ಟಾದರೆ ಮಹಾನ್ ತಲೆನೋವು

ತಲೆಯೇ ಇಲ್ಲದಿದ್ದರೂ ತಲೆಯೊಳಗೇನಿಲ್ಲದಿರಲು ತಲೆನೋವು
ವಿಧಿ ಮಾತ ಕೇಳದಿರಲು ಬರಬರುತ ತಲೆನೋವು
ವಯಸಾಗುವುದ ನೆನೆನೆನೆದು ಏರುತ್ತದೆ ತಲೆನೋವು
ಅಂದುಕೊಂಡ ಕೆಲಸವಾಗದಿರಲು ತಲೆನೋವು.
@ಪ್ರೇಮ್@
19.11.2019

1285. ಹಾಯ್ಕುಗಳು

ಹಾಯ್ಕುಗಳು

ಮನಗಳಲಿ 
ಮತಕ್ಕಾಗಿ ಜಗಳ
ಬಾರದಿರಲಿ..

ಮನದೊಳಗೆ 
ದೇವ ಸ್ತುತಿಗೆ ಅಲ್ಪ
ಜಾಗವಿರಲಿ..

ಮನದಂಚಲಿ
ಮದನೆಯ ಪ್ರೀತಿಗೆ
ಬೆಲೆಯಿರಲಿ.

ಮನಕೆಂದಿಗೂ
ಮನುಜ ಗುಣಗಳ
ತಿಳಿದಿರಲಿ..
@ಪ್ರೇಮ್@
20.11.2019

1284. ಭಾವಗೀತೆ-ಧರೆಗೆ

ಧರೆಗೆ..


ತಾಯೇ ಏಕೆ ಮುಚ್ಕೊಂಡಿರುವೆ
ಮಂಜಲ್ ನಿನ್ನ ಮೈನಾ..
ಜನ್ರು ನಿನ್ಗೆ ಬಿಡ್ತಾ ಇಲ್ವಾ
ಕೊಟ್ರಾ ಎಲ್ಲಾ ಕೈನಾ...

ಹೊದ್ಕೊಂಡಂಗೆ ಕುಂತ್ಕಂಡ್ ನೀನು
ಯಾರ್ನ ನೋಡ್ತಿದ್ದೀಯ?
ಚಳಿಯೋ ನನ್ಗೆ ತಡಿಯಕ್ಕಾಯ್ತಿಲ್ಲ
ಯಾಕ್ ಹಿಂಗ್ ಮಾಡ್ತಿದ್ದೀಯ?

ರವಿಯು ಬರೋಕೆ ಕಾಯ್ತವ್ನಲ್ಲ
ಬರ್ಲಿ ಕಿರಣದ್ ಬೆಳಕು.
ಕವಿಯು ಕುಂತು ಬರಿತವ್ನಲ್ಲ
ಹೋಗ್ಲಿ ಮನದ ಮುಸುಕು..

ಬೇಡದ್ದೆಲ್ಲ ಮೇಲ್ ಮೇಲೆ
ಬಿಸಾಕ್ಬೇಡ್ರಂತ ತೋರ್ಸು!
ನಿನ್ನಯ ಕಷ್ಟವ ಅರಿಯದ ಜನಕೆ
ಹಿಡ್ಕೊಂಡ್ ನಾಲ್ಕು ಬಾರ್ಸು..
@ಪ್ರೇಮ್@
22.11.2019

ಮಂಗಳವಾರ, ನವೆಂಬರ್ 12, 2019

1283. ಹನಿಗಳು-2

 ನೀ...

ನೀ ನಗುತಲಿರಲು ಮನೆಯಲಿ
ಸದಾ ದೀಪಾವಳಿ
ನೀ ಕೋಪಗೊಳಲು ಮನದಿ
ನೆನಪಾಗುವಳು  ಮಹಾಕಾಳಿ!
ನೀನು ಸುರಿಸೆ ಕಣ್ಣೀರನು
ಉಕ್ಕಿ ಹರಿದ ನದಿಯು ಕಾಳಿ!
@ಪ್ರೇಮ್@
30.10.2019


ದೇವರು

ನಮ್ಮ ಸುಖ-ದು:ಖಗಳು
ಕಷ್ಟ ನಷ್ಟ ತಾಪತ್ರಯಗಳು
ಸಂತೋಷ ಸಂಭ್ರಮಗಳು
ದೇವರು ನಮ್ಮನ್ನು ಪರೀಕ್ಷಿಸಿ
ಗುಣವನ್ನಳೆದು ದಯಪಾಲಿಸಿದ
ತೀರ್ಪಿನ ವಾಕ್ಯಗಳು!
@ಪ್ರೇಮ್@
01.10.2019

1282. 3 ವಚನಗಳು

ವಚನಗಳು

1.
ಸಿರಿ ಸಂಪತ್ತನು ಬೇಡುತ 
ಸರಿ-ತಪ್ಪುಗಳ ಮರೆತು ತಾ
ಸರಿ ದಾರಿಯಲಿ ನಡೆಯದಿರೆ
ಕರುಣಿಪನಾ ಸಿರಿಯ ನಮ್ಮ ಈಶಾ?

2.

ಮನದೊಳಗೆ ದ್ವೇಷವನೆ ತುಂಬಿ
ಮುಖದಿ ಕಿರುನಗುವ ಸೂಸುತಲಿ
ಮನಸಿಲ್ಲದ ಮನಸಿನಲಿ ಮಾತಾಡೆ
ವರಗಳ ಮಳೆಯೀವನೇ ನಮ್ಮ ಈಶಾ..

3.
ಮರದಂತೆ ತಾ ಹುಟ್ಟಿ
ಮರದಂತೆ ಬದುಕಣ್ಣ
ಸರ್ವರಿಗಲ್ಲದಿದ್ದರೂ ಸರಿ
ಹಲವು ಸರಿ ಬೀಜಗಳನುದುರಿಸಿ
ತನ್ನಂತೆ ಬೆಳೆವ ಉತ್ತಮ
ಸಸಿಗಳ ಬೆಳೆಸಬೇಕಲ್ಲವೇ ಈಶಾ...
@ಪ್ರೇಮ್@
03.11.2019

1281. ಗಝಲ್-5

ಗಝಲ್

ಸಮಾಜದೊಳಗೆ ನೋವ ಕೊಡಲನೇಕರು ಹುಟ್ಟಿರುವರು ದೋಸ್ತ್.
ಸರಿಸಮಾನನಲ್ಲವೆಂದು ಬಗೆದು ಪರಿಪರಿಯಲಿ ತೆಗಳುವರು ದೋಸ್ತ್.

ತಾಯ ಪ್ರೀತಿ, ತಂದೆಯ ಜವಾಬ್ದಾರಿಯಿರಬೇಕು ಜೀವನದಿ.
ಪ್ರೀತಿಯ ಅವಿರತ ಮಳೆಗೈಯದೆ ದ್ವೇಷ ಕಾರುವರು ದೋಸ್ತ್!

ಹೃದಯವೆಂಬ ಮಂದಿರದಿ ಸಮಯಕಿರಲಿ ಬಹಳವೇ ಮಹತ್ವ.
ಎದೆದೊಳಿರಬೇಕು ಕರುಣೆ, ಹೊಂದಾಣಿಕೆಯೆಂಬುದ ಮರೆವರು ದೋಸ್ತ್!

ತಮ್ಮ ಕಾಲಬುಡವನೆ ಮಲಿನಗೊಳಿಸುವ ಜನರಿಹರು!
ಪರರ ಕಾರ್ಯಕೆ ಸದಾ ಕೊಡಲಿ ಹಾಕುತಲಿಹರು ದೋಸ್ತ್!

ಸರಿಯಿದ್ದರೂ ಸರಿಯಿಲ್ಲ ಸಹಿಸದೆ ಸಹನೆಯಿಂದ ಜಗದೊಳಗೆ.
ಸುಳ್ಳಿದ್ದರೂ ಸತ್ಯವೆನುವಂತೆ ನಟನೆ ಮಾಡೆನುವರು ದೋಸ್ತ್!

ಮರಕಡಿದು ಮನೆಮಾಡಿ ಮಸೆಮಸೆದ ಮನದಿ ಬದುಕುತಿಹರು.
ಮುಖವಾಡವ ಧರಿಸಿ ನಗುತ ಒಳಗೊಳಗೆ ಕೆಂಡದಂತೆ ಕುದಿಯುವರು ದೋಸ್ತ್!

ಪರಸ್ಪರ ಸಹಕಾರ, ಸರಿದಾರಿಯಲಿ ಇದ್ದು ಒಂದಾಗಬೇಕು.
ಪ್ರೇಮದಿ ಪ್ರೀತಿ ಹಂಚುತಲಿ ಸರ್ವರೂ ಬಾಳಲಾರರು ದೋಸ್ತ್!
@ಪ್ರೇಮ್@
04.11.2019

1280. ಗಝಲ್-6

ಗಝಲ್

ನನ್ನ ಕೇಳದೆಯೇ ಹುಡುಗನನ್ನು ನೋಡಿ ಮದುವೆಯೆನುವಾಗ ನಾ ಮೌನ ಸಖಿ!
ಪ್ಯಾರ್ ಎಂದರೇನೆಂದು ನನಗೆ ತಿಳಿಯುವುದಿಲ್ಲವೆಂದು ಅರಿತಾಗ ನಾ ಮೌನ ಸಖಿ..

ಶಾಲೆಗೆ ಹೋಗಿ ಮನೆಗೆ ಬರುವಾಗಲೂ ಪರರಂತೆ ಸ್ವಾತಂತ್ರ್ಯ ಎನಗೆ ಇರಲಿಲ್ಲ. 
ಗೊಂಬೆಯಂತೆ ಸಾಕಿ ಬೆಳೆಸಿ, ತನ್ನಾಕಾಂಕ್ಷೆಗಳ ಹೇರುವಾಗ ನಾ ಮೌನ ಸಖಿ..

ಬೇಕಾದ, ನೋಡಿದ, ಹಲವು ಆಸೆಪಟ್ಟ ವಸ್ತುಗಳ ಖರೀದಿಸುವ ಆಸೆಯೇನೋ ನನಗಿತ್ತು.
ಏನು ಬೇಕು ನಿನಗೆನುವ ಪ್ರಶ್ನೆಗಳೇ ಬರದಾಗ ನಾ ಮೌನ ಸಖಿ..

ಹುಟ್ಟುವಾಗಲೇ ಸರ್ವರೂ ಅವಳು ಹೆಣ್ಣು ಎಂಬ ಹಣೆಪಟ್ಟಿ ತೊಡಿಸಿದರು ಎನಗೆ.
ಗಿಳಿಯಂತೆ ನನ್ನ ಪಂಜರದೊಳು ಇಟ್ಟು ಸಾಕುವಾಗ ನಾ ಮೌನ ಸಖಿ..

ಕ್ಷಣವೂ ಖುಲ್ಲಾ ಬದುಕಲು ಅವಕಾಶಗಳು ಎಂದೂ ಸಿಗಲೇ ಇಲ್ಲ  ಬಾಳಲಿ.
ಕೈಲಿರುವ ವಸ್ತುವನು ಬಾಯಿಗಿಡಲೂ ಹಿರಿಯರ ಕೇಳಬೇಕಾದಾಗ ನಾ ಮೌನ ಸಖಿ..

ಎದ್ದರೂ, ಕುಂತರೂ, ನಿಂತರೂ ಏಕೆ, ಹೇಗೆ, ಎಲ್ಲಿ ಎನುವ ಪ್ರಶ್ನೆಗಳು.
ಸಿರಿತನದ ಸುಳಿಯ ಒಳಗೆ ಸಿಕ್ಕಿ ನಲುಗುವಾಗ ನಾ ಮೌನ ಸಖಿ..

ಪ್ರೀತಿ, ಪ್ರೇಮ, ಇಶ್ಕ್ , ಮೊಹಬ್ಬತ್ ಗಳು ನನ್ನ ಪದಕೋಶದಲಿ ಬರಲೇ ಇಲ್ಲ.
ಕೈ ಹಿಡಿದ ಪುರುಷ ಪುರುಷನಲ್ಲದವನೆಂದು ತಿಳಿದಾಗ ನಾ ಮೌನ ಸಖಿ..
@ಪ್ರೇಮ್@
05.11.2019

1279. ಗಝಲ್-7

ಗಝಲ್

ನೀನು ತಾಯಿ ಮನೆಗೆ ಹೋದೆ ಖುಷಿಯಲಿ ಜಾನು!
ಈ ಒಂಟಿತನವನು ನಾ ಹೇಗೆ ಮರೆಯಲಿ ಜಾನು?

 ಹುಣಸೆ ಮರದ ಒಂಟಿ ಪಿಶಾಚಿಯಂತಾಗಿಹೆನು!
ಯಾರ ಜೊತೆ ಭಾವನೆಗಳ ಹಂಚಿಕೊಳ್ಳಲಿ ಜಾನು?

ಮನವಲ್ಲ ನಿನ್ನ ಹೃದಯದಲ್ಲೆ ನೆಲೆವೂರಿದೆಯಲ್ಲ?
ಹರುಷದಿ ಯಾರೊಡನೆ ಹೊಂದಿಕೊಳ್ಳಲಿ ಜಾನು?

ಸಂಸಾರ ಸಾಗರದಿ ಮಿಂದು ಶುಭ್ರನಾಗುತ್ತಿದ್ದೆ.
ಸಂಗಾತಿ ಇರದ ಮನೆಯಲಿ ಹೇಗಿರಲಿ ಜಾನು?

ನಿಟ್ಟುಸಿರ ಸಹಕಾರ ನಿನ್ನಿಂದ ನನಗಿದೆ ಸದಾಕಾಲ,
ನೀನಿರದೆ ಗುಡಿಯೊಳಗೆ  ಯಾರಿಗೇನೆನಲಿ ಜಾನು?

ಬರದ ಬಾಳಲಿ ಬಂಗಾರವಾಗಿ ನೀ ಬಂದಿರುವೆ.
ಬಡವನ ಬಹಳ ಪ್ರೀತಿಸಲು ಇರು ಬಳಿಯಲಿ ಜಾನು.

ನೀನಿರದ ಕ್ಷಣದಿ ಮರವ ಬಿಟ್ಟ ಬಳ್ಳಿಯಂತಾಗುವೆ,
ನೀನಿಲ್ಲದ ಖಾಲಿ ಮನೆಯಲಿ ಏನ ತಿನ್ನಲಿ ಜಾನು?

ಗಗನ ಸುಮವಾಗಿಹೆ ನೀನಿಂದು ನನ್ನ ಕರೆಗಳಿಗೆ
ಗಹನದಲಿ ಚಿಂತಿಸುತ ಹೇಗೆ ಸುಮ್ಮನಿರಲಿ ಜಾನು?

ಪ್ರೇಮ ಭಾವವ ಮೈದುಂಬಿಸಿಕೊಂಡವಳು ನನ್ನಾಕೆ
ಮುದುಡಿದ ಹೂವಂತಾಗಿಹೆ,ಹೇಗರಳಲಿ ಜಾನು?
@ಪ್ರೇಮ್@
07.11.2019

1278. ಗಝಲ್-8

ಮಾರುಗೆದ್ದರಾಗದು ಮನಗೆಲ್ಲಬೇಕಲ್ಲವೇ ಗಾಲಿಬ್..
ಮನನೊಂದರೂ ಮನೆ ಕಟ್ಟಲಿಲ್ಲವೇ ಗಾಲಿಬ್..

ಮದದಿಂದ ಮೆರೆದೆ ಮುದದಲಿ ನೀನು
ಮದವೇರಿದುದು ಕರಗಿತಲ್ಲವೇ ಗಾಲಿಬ್..?

ಮುದುಕರನೂ ಬಿಡದೆ ಕಾಡಿರುವೆಯಾ
ಮೋಜಿನ ಬದುಕು ನನ್ನದಾಗಿಲ್ಲವೇ ಗಾಲಿಬ್..

ಮದಿರೆಯ ಮಂಥನದಿ ಮನನೋಯಿಸಿದೆ
ಮೋಹಕ ನೋಟದಿ ನಾ ಬದುಕಲಿಲ್ಲವೇ ಗಾಲಿಬ್..?

ಮೋಸದಾಟದಿ ಸೋಲಿಸಿ ಮೆರೆದೆ.
ಮೋದಕ ಪ್ರಿಯ ನನಗೊಲಿಯಲಿಲ್ಲವೇ ಗಾಲಿಬ್?

ಮುಂಗುಸಿಯಂತಿದ್ದ ನನ್ನ ಮೇಲೆ ಹಾವಿನಂತೆರಗಿದೆ.
ಜನ ನಿನಗೆ ಮಸಿಮುಸಿ ನಗಲಿಲ್ಲವೇ ಗಾಲಿಬ್?

ಮುಖವಾಡವ ಹೊತ್ತು ಮೈಮರೆತೆ
ಮೋಸದಲಿ ಪ್ರೇಮ ಸೋತರೂ ಗೆಲ್ಲಲಿಲ್ಲವೇ ಗಾಲಿಬ್?
@ಪ್ರೇಮ್@
08.11.2019

1277. ಗಝಲ್-9

ಗಝಲ್

ಕಾರ್ಗತ್ತಲ ಬಾಳಲಿ ಕಿಡಿಯಾಗಿ ಬಂದೆ ಭಗವಾನ್..
ಕಾರಿರುಳ ರಾತ್ರಿಯಲಿ ಬೆಳಕಾಗಿ ನಿಂದಿರುವೆ ಭಗವಾನ್..

ಕರುವಿಗೆ ಹಸುವಿನಂತೆ ಹಾಲುಣಿಸಿ ಸಲಹುತಿರುವೆ.
ಮನದಿ ಶಾಂತಿ ಸಂತೋಷವ ತುಂಬಿರುವೆ ಭಗವಾನ್.

ನಾಯಿ ನರಿಗಳು ಬದಿಯಲಿ ಬರಿದೆ ಊಳಿಡುತಿವೆ.
ನಾಶ ಮಾಡದೆ ಸಿಹಿ ಕನಸುಗಳ ತ೦ದಿರುವೆ ಭಗವಾನ್.

ಜಗದಿ ರತ್ನಖಚಿತ ದೇಹವೆನಗೆ ಬೇಕಾಗಿಯೇ ಇಲ್ಲ.
ತಾಳ್ಮೆಯಿಂದ ಜನ್ಮವ ಸಾರ್ಥಕಗೊಳಿಸಿಸಿರುವೆ ಭಗವಾನ್.

ಬಾಳಲಿ ನೋವು ನಲಿವುಗಳ ಸಮದಿ ಹಂಚಿರುವೆ!
ಬಾಡದ ನೆನಪುಗಳ ಬೀಜ ಬಿತ್ತಿರುವೆ ಭಗವಾನ್.

ನಲಿವನು ತುಂಬಿ ಹೃದಯದಿ ಕಲಿಕೆಯಿತ್ತಿರುವೆ.
ನಾದವ ತುಂಬುತ ನಾಟ್ಯವಾಡುತಿರುವೆ ಭಗವಾನ್.

ಪ್ರೇಮವ ಮನಕೆ ಮೊಗೆಮೊಗೆದು ನೀಡುತಲಿರುವೆ.
ಭಕ್ತಿ ಬೆಳಕಿನ ಕಿರಣಗಳ ಪಸರಿಸಿರುವೆ ಭಗವಾನ್.
@ಪ್ರೇಮ್@
09.11.2019

1275. ಗಝಲ್-10

ಗಝಲ್

ಜೀವಕೆ ಜೀವವಾದೆ ನೀ ನಮ್ಮ ಕುಕೂರ್
ಮನೆಗೆ ಮಗುವಾದೆ ನೀ ನಮ್ಮ ಕುಕೂರ್..

ಇಡೀ ಕುಟುಂಬ ವರ್ಗವ ಸಂತಸದಿ ತೇಲಿಸಿದೆ
ಮಕ್ಕಳೊಡನೆ ಆಟವಾಡಿದೆ ನೀ ನಮ್ಮ ಕುಕೂರ್!

ಜನರೊಡನೆ ಸಂಯಮದಿ ಬೆರೆತು ಹೋದೆ
ಪ್ರೀತಿಗೆ ನೀತಿಯಾದೆ ನೀ ನಮ್ಮ ಕುಕೂರ್..

ಮುದ್ದು ನಾಯಿಮರಿಯಾಗಿ ಬೆಳೆದುದೇ ತಿಳಿಯದು
ನಗೆಗಡಲಲ್ಲಿ ತೇಲಿಸಿದೆ ನೀ ನಮ್ಮ ಕುಕೂರ್..

ಮನೆ ಮನವ ಹಗುರಾಗಿಸುತ ಬದುಕಿದೆ.
ಧೃತಿಗೆಡದೆ ಬಾಳಿದೆ ನೀ ನಮ್ಮ ಕುಕೂರ್..

ನೋವುಂಡರೂ ತೊಂದರೆ ಕೊಡಲಿಲ್ಲ ನೀನು
ಮದ್ದಿನಂತೆ ಬಾಳ ಸವೆಸಿದೆ ನೀ ನಮ್ಮ ಕುಕೂರ್..

ಪ್ರೀತಿಯಲಿ ಬಾಳುತ್ತ ಪ್ರೀತಿ ನಗುವ ಹಂಚಿದೆ 
 ಸ್ವಾಮಿನಿಷ್ಠೆಯ ಪಾಠ ಕಲಿಸಿದೆ ನೀ ನಮ್ಮ ಕುಕೂರ್.
@ಪ್ರೇಮ್@
12.11.2019

1274. ಗಝಲ್-11

ಗಝಲ್

ಕಾರ್ಗತ್ತಲ ಬಾಳಲಿ ಕಿಡಿಯಾಗಿ ಬಂದೆ ಭಗವಾನ್..
ಕಾರಿರುಳ ರಾತ್ರಿಯಲಿ ಬೆಳಕಾಗಿ ನಿಂದಿರುವೆ ಭಗವಾನ್..

ಕರುವಿಗೆ ಹಸುವಿನಂತೆ ಹಾಲುಣಿಸಿ ಸಲಹುತಿರುವೆ.
ಮನದಿ ಶಾಂತಿ ಸಂತೋಷವ ತುಂಬಿರುವೆ ಭಗವಾನ್.

ನಾಯಿ ನರಿಗಳು ಬದಿಯಲಿ ಬರಿದೆ ಊಳಿಡುತಿವೆ.
ನಾಶ ಮಾಡದೆ ಸಿಹಿ ಕನಸುಗಳ ತ೦ದಿರುವೆ ಭಗವಾನ್.

ಜಗದಿ ರತ್ನಖಚಿತ ದೇಹವೆನಗೆ ಬೇಕಾಗಿಯೇ ಇಲ್ಲ.
ತಾಳ್ಮೆಯಿಂದ ಜನ್ಮವ ಸಾರ್ಥಕಗೊಳಿಸಿಸಿರುವೆ ಭಗವಾನ್.

ಬಾಳಲಿ ನೋವು ನಲಿವುಗಳ ಸಮದಿ ಹಂಚಿರುವೆ!
ಬಾಡದ ನೆನಪುಗಳ ಬೀಜ ಬಿತ್ತಿರುವೆ ಭಗವಾನ್.

ನಲಿವನು ತುಂಬಿ ಹೃದಯದಿ ಕಲಿಕೆಯಿತ್ತಿರುವೆ.
ನಾದವ ತುಂಬುತ ನಾಟ್ಯವಾಡುತಿರುವೆ ಭಗವಾನ್.

ಪ್ರೇಮವ ಮನಕೆ ಮೊಗೆಮೊಗೆದು ನೀಡುತಲಿರುವೆ.
ಭಕ್ತಿ ಬೆಳಕಿನ ಕಿರಣಗಳ ಪಸರಿಸಿರುವೆ ಭಗವಾನ್.
@ಪ್ರೇಮ್@
09.11.2019

1276.ವಿಮರ್ಶೆಗಳು

[11/11, 12:55 PM] @PREM@: 1. ಶಿವ ಪ್ರಸಾದಣ್ಣನವರ ಗಝಲ್


🍬ಸ್ನೇಹಿತರ ಬಗ್ಗೆ ಸವಿವರವಾಗಿ ತಿಳಿಸಿದ ಗಝಲ್.
🍬ಸುಖ ದು:ಖಗಳ ಜೊತೆಯಾಗಿ ಹಂಚಿಕೊಂಡ ಪರಿ ನವಿರಾಗಿದೆ.
🍬ಉತ್ತಮ ಪದ ಸಂಪತ್ತು.
⁉ ಮೊದಲ ಶೇರ್ ನಲ್ಲಿ ಕೈ ಎನ್ನುವ ಪದ 2 ಸಲ ಬಂದಿದೆ. ಹೀಗೆ ಬರೆಯಬಹುದೇ...
@ಪ್ರೇಮ್@
[11/11, 12:58 PM] @PREM@: 2. ಚಂಪೂ ಗುರುಗಳ ಗಝಲ್

🍬ವಾವ್..ಓದುವ ಖುಷಿಯೇ ಬೇರೆ.
🍬ಉಪಮೆ, ರೂಪಕ, ಶಬ್ದಾಲಂಕಾರಗಳು ಮೇಳೈಸಿದ ಸಂಭ್ರಮ.
ಉತ್ತಮವಾಗಿದೆ ಸರ್..
ಈ ಗಝಲ್ ಓದಿಸಿದ ನಿಮಗೆ ಧನ್ಯೋಸ್ಮಿ..
@ಪ್ರೇಮ್@
[11/11, 3:07 PM] @PREM@: 3 .ಸಿರಾಜ್ ಸರ್ ಗಝಲ್

🍬ವಾವ್ ನಿಜ ದೋಸ್ತ್ ನ ನಿಜ ಗುಣಗಳ ಸುರಿಮಳೆ ಸರ್.

🍬ನಿಜವಾದ ಸ್ನೇಹದ ವರ್ಣನೆ, ಇಂತಹ ಒಂದು ಗೆಳೆಯ ನನಗೂ ಇರಬೇಕೆಂದು ಎಲ್ಲರೂ ಬಯಸುವ ಹಾಗಿದೆ..
🍬ರೂಪಕ ಉಪಮೆಗಳ ಬ್ಯಾಟಿಂಗ್ ಸೂಪರ್.
⁉ಒಂದು ಕಡೆ ಅಕ್ಷರವೊಂದು ಬಿಟ್ಟು ಹೋದಂತಿದೆ ಗುರುಗಳೇ..
@ಪ್ರೇಮ್@
[11/11, 3:14 PM] @PREM@: 4. ನೂರ್ ಸರ್

🍬ಉತ್ತಮ ಗಝಲ್ ಸರ್

⁉ಕೆಲವೊಂದು ಉರ್ದು ಪದಗಳಾದ ಖಫನ್..ಇವುಗಳ ಅರ್ಥ ತಿಳಿಸಿ ಸರ್.
⁉ಕೆಲವೊಂದು ಸಾಲುಗಳನ್ನು ಅರ್ಥೈಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ, ತಿಳಿದವರು ವಿಮರ್ಶಿಸಿ ಪ್ಲೀಸ್.
@ಪ್ರೇಮ್@
[11/11, 3:18 PM] @PREM@: 5. ಪ್ರಮೀಳಾ ಚುಳ್ಳಿಕ್ಕಾನ ಅವರ ಗಝಲ್.
🍬ನಿಯಮ ಪಾಲಿಸಿದ ಸುಂದರ ಗಝಲ್.
⁉ಇಂದಿನ ಥೀಮ್ ಗೆಳೆತನದ ಬಗ್ಗೆ ಬರೆಯಬೇಕಿತ್ತಲ್ಲವೇ ಮೇಡಂ..
ಗೆಳೆತನಕ್ಕೆ ನಾವು ಕೊಟ್ಟ ಸ್ಥಾನದ ಕುರಿತಾಗಿ ಬರೆಯಿರಿ..
[11/11, 3:24 PM] @PREM@: 6. ಪ್ರಮೀಳಾ ರಾಜ್ ಮೇಡಂ ಅವರ ಗಝಲ್

🍬ಗೆಳತಿಗೆ ಸಮರ್ಪಿಸಿದ ಉತ್ತಮ ಗಝಲ್.
🍬ಗೆಳೆತನದ ಸ್ಥಾನ ಗೆಳತಿಗೆ ಸಮರ್ಪಿತವಾಗಿದೆ.
ಉತ್ತಮ.
[11/11, 3:35 PM] @PREM@: 7. ಲಕ್ಷ್ಮಿಕಾಂತ್ ರವರ ಗಝಲ್

🍬ಸೂಪರಾಗಿದೆ ಸರ್.
🍬ಪದಪುಂಜಗಳು ಸೂಪರ್. ಉಪಮೆಗಳ ಸೇರಿಸಬಹುದಾಗಿತ್ತೇನೋ.
⁉ಶೇರ್ಗಳು 8 ಇವೆ. ಅವು ಬೆಸ ಸಂಖ್ಯೆಯಲ್ಲಿರಬೇಕಲ್ಲವೇ ಸರ್..
⁉ಮುತ್ತಂಥ ಎಂದಾಗಬೇಕಲ್ಲವೇ..
⁉ದೋಸ್ತಿ, ಗೆಳೆತನ ಎರಡೂ ಒಂದೇ ಅಲ್ಲವೇ..?

⁉ಸ್ನೇಹ ನಿನ್ನದು ಮೊದಲನೆ ಸಾಲುಗಳಲ್ಲಿ 2 ಕಡೆ ರಿಪೀಟ್ ಆಗಿದೆ ನೋಡಿ,ಸರಿಪಡಿಸಿ..
[11/11, 3:45 PM] @PREM@: 8. ಶ್ರೀಯವರ ಗಝಲ್
🍬ಸಹೇಲಿಗೆ ಬರೆದ ಮುದ್ದಾದ ಗಝಲ್.
⁉4 ಶೇರ್ ಗಳು ಮಾತ್ರ ಇವೆ. ಬೆಸ ಸಂಖ್ಯೆಯಾಗಿಸಲು ಪ್ರಯತ್ನಿಸಿ.
⁉ಅಕ್ಷರ ಟೈಪಿಂಗ್ ದೋಷಗಳು ತುಂಬಾ ಇವೆ, ಸರಿಪಡಿಸಿ. ಉದಾ- ಬೀಗಿದಪ್ಪಿ, ಸಹೇಲಿ..
⁉ಹೃಸ್ವದ ಬದಲು ಧೀರ್ಘಾಕ್ಷರ ಬಳಸಿದರೆ ಗಝಲ್  ಇಫೆಕ್ಟಿವ್.. ಅಲ್ಲವೇ..
⁉ಪ್ರತಿ ಪದಗಳ ನಡುವೆ ಗ್ಯಾಪಿಂಗ್ ಸರಿ ಇರಲಿ. ತೆಪ್ಪ ತಂದು, ಮುಂದೆ ಸಾಗುವಾಗ..ಹೀಗೆ
⁉ಕೊನೆಯ ಶೇರ್ ಸರಿಪಡಿಸಿ, ಮೊದಲ ಶೇರ್ನಂತೆ ಮೂಡಿಬಂದಿದೆ ಅದು.
[11/11, 4:16 PM] @PREM@: 9. ಪ್ರಶಾಂತ್ ಆರ್

⁉ಗಜಲ ಅಲ್ಲ ಅದು ಗಝಲ್.
⁉ನಿಯಮ ಅನುಸರಿಸಿಲ್ಲ ಸರ್, ಕವನವಾಗಿದೆ.
🍬ಹಲವಾರು ಗಝಲ್ ಗಳ ಓದಿ ಸರ್, ತಿಳಿದವರಿಂದ ಕೇಳಿ. ಯತೀಶಣ್ಣ ಹೇಳಿ ಕೊಡುವರು. ಗಝಲ್ ಗುರುಗಳಾದ ನೂರ್ ಸರ್, ಚಂಪೂ ಸರ್, ಸಿರಾಜ್ ಸರ್ ಬಳಿಯಲ್ಲಿ ಕಲಿಯಿರಿ. ನಾವೂ ನಿಮ್ಮ ಹಾಗೆ ತಪ್ಪಾಗೇ ಬರೆದು ಹನಿಹನಿಯಲ್ಲೆ ತಿದ್ದಿಸಿಕೊಂಡು ಕಲಿತವರು.
🍬ಉತ್ತಮ ಪ್ರಯತ್ನ ಸರ್.. ಆಲ್ ದ ಬೆಸ್ಟ್ ನಿಮಗೆ.
ಬೇಗ ಗಝಲ್ ಕವಿಯಾಗಿರೆಂಬ ಶುಭ ಹಾರೈಕೆಗಳು.
ಹನಿ ಬಳಗ ಉತ್ತಮವಾಗಿದ್ದು ಒಂದು ಶಾಲೆಯಂತಿದೆ. ನಿಮಗಿಲ್ಲಿ ಕಲಿಕೆಗೆ ವಿಫುಲ ಗುರುಗಳೂ, ಅವಕಾಶಗಳೂ ಇವೆ. ಬಳಸಿಕೊಳ್ಳಿ.
[11/11, 4:20 PM] @PREM@: 10. ಅನಿತಾ ಅವರ ಗಝಲ್
🍬ಕಾಫಿಯಾ ಉತ್ತಮ,
⁉ರದೀಫ್ ಎಲ್ಲಿ ಮೇಡಂ..
⁉ನೀವು ಇನ್ನೂ ಹಲವು ಗಝಲ್ ಗಳನ್ನು ಓದಿ ಅದರ ಬಗ್ಗೆ ತಿಳಿದವರ ಕೇಳಿ, ಕಲಿಯಬೇಕಿದೆ ಮೇಡಂ. ಬೇಗ ಕಲಿಯಿರಿ, ಆಲ್ ದ ಬೆಸ್ಟ್..💐💐
[11/11, 4:41 PM] @PREM@: 11. ಭಾಗ್ಯ ಮೇಡಂ

🍬ಪುಟ್ಟದಾದ ಅಂದವಾದ ಗಝಲ್. ತೊಟ್ಟಿಲಲ್ಲಿ ಸಣ್ಣ ಮಗು ಆಡಿದಂತಿದೆ.
🍬ಕಡಿಮೆ ಪದಗಳಲ್ಲಿ ಹಲವು ಗುಣಗಳ ತುಂಬಿಸಿ ಸಂಪದ್ಭರಿತವಾಗಿಸಿದ್ದೀರಿ.
🍬ಸೂಪರ್ ಮೇಡಂ..
[11/11, 4:47 PM] @PREM@: 12. ನಾಗಮ್ಮನವರ ಗಝಲ್
🍬ಉತ್ತಮ ಕವಿಭಾವ.
🍬ಉತ್ತಮ ಪದಸಂಪತ್ತು.
⁉ಮೂರು, ನಾಲ್ಕು, ಐದನೆ ಶೇರ್ ಗಳನ್ನು ಗಮನಿಸಿ ಅಮ್ಮಾ ಒಮ್ಮೆ.ಸರಿಯಾದ ವಾಕ್ಯಗಳಾಗಿ ವಿಭಜನೆಯಾಗದೆ ದ್ವಿಪದಿ ಸಾಲುಗಳು ಕನ್ಫ್ಯೂಝ್ ಮಾಡಿವೆ.
[11/11, 4:51 PM] @PREM@: 13. ಸುಮಾ ಮೇಡಂ
🍬ಉತ್ತಮ ಪದಸಂಪತ್ತು.
🍬ಕವಿಭಾವ ಸೂಪರ್.
⁉ಮೊದಲನೆಯ ಶೇರ್ ನಲ್ಲಿ ರದೀಫ್ ಪಾಲನೆಯಾಗಿಲ್ಲ. ಅಲ್ಲಿ ರಾ ಇದೆ, ಉಳಿದ ಶೇರ್ ಗಳಲ್ಲಿ ರು ಇದೆ. ಗಮನಿಸಿ.
⁉ಕ್ಷೀರು ಪದ ಕನ್ನಡದಲ್ಲಿ ನಾ ಕೇಳಿಲ್ಲ, ಅರ್ಥವೇನು?
[11/11, 4:54 PM] @PREM@: 14. ಸುಧಾ ಅಮ್ಮನವರ ಗಝಲ್
🍬ಪುನೀತಳಾದೆ ಓದಿ ಸವಿಮನದ ಭಾವಪೂರ್ಣ ಗಝಲ್.
🍬ಗೆಳತಿಯ ಪ್ರೀತಿ, ಭಾವವ ಅಲಂಕಾರದಿ ಕಟ್ಟಿಕೊಟ್ಟ ಗಝಲ್.
🍬ನನಗೆ ತಿಳಿದಂತೆ ನಿಯಮ ಪಾಲಿಸಿದ ಗಝಲ್ ಉತ್ತಮ.
[11/11, 4:57 PM] @PREM@: 15. ಶಕುಂತಳಾ ಅಕ್ಕನವರ ಗಝಲ್
🍬ಗೆಳತಿಯ ಪ್ರೀತಿಯ ಹೊಗಳಿದ ಸುಂದರ ಗಝಲ್.
🍬ಉತ್ತಮ ಕವಿಭಾವ. ಗಳೆತನವನುಂಡ ಉತ್ತಮ ಸಾಲುಗಳು.
⁉ಜೀವ ಜಾತಿಯೆಂದು ಕಣ್ತೆರೆಸಿದೆ.. ಈ ಸಾಲು ಅರ್ಥವಾಗಲಿಲ್ಲ ನನಗೆ...
[11/11, 5:00 PM] @PREM@: 16. ದೀಪಾ ಸದಾನಂದ ಅವರ ಗಝಲ್
🍬ಉತ್ತಮ ಭಾವದಿಂದ ಮೂಡಿಬಂದ ಕವನವಾಗಿದೆ.
⁉ಮೇಡಂ ಗಝಲ್ ನಿಯಮಗಳ ಪಾಲಿಸಿಲ್ಲ, ತುಂಬಾ ಗಝಲ್ ಗಳ ಓದಿ, ತಿಳಿದವರಿಂದ ಕೇಳಿ ಕಲಿಯಿರಿ.
🍬ಪ್ರಯತ್ನ ಉತ್ತಮ. ಬೇಗ ಕಲಿಯಿರಿ ಆಲ್ ದ ಬೆಸ್ಟ್. ನಿಮ್ಮ ಗಝಲ್ ಗಳ ಓದಿ ಸಂತಸಪಡುವ ಮನ ನಮ್ಮದಾಗಲಿ..
[11/11, 5:04 PM] @PREM@: 17. ಶ್ವೇತಪ್ರಿಯರ ಗಝಲ್

🍬ಗೆಳೆತನವಿಲ್ಲದ ಪರಿತಪಿಸುವ ಗಝಲ್ ಇದಾಗಿದೆ.
⁉ಗೆಳೆತನಕ್ಕೆ ನಾವು ಕೊಟ್ಟ ಸ್ಥಾನ ಎಂಬ ಥೀಮ್ ಇಂದಿನದು, ಸರ್ ಬಹುಶಃ ಯಾರ ಗೆಳೆತನವೂ ಜಾತಿಯನ್ನು ಆಧಾರಿಸಿ ಇಲ್ಲವೆಂಬುದನ್ನು ನಾನು ಸಾವಿರಾರು ಗೆಳೆಯರಿಂದ ಅರಿತಿರುವೆ. ಹಾಗಾಗಿ ಇಂದಿನ ಥೀಮ್ ಗೆ ಈ ಗಝಲ್ ಎಷ್ಟು ಸಮಂಜಸವೋ ಹಿರಿಯರು, ಬಲ್ಲವರು ಹೇಳಬೇಕಷ್ಟೆ.

ಶುಕ್ರವಾರ, ನವೆಂಬರ್ 8, 2019

1273. ಹಾಗೇ ಸುಮ್ಮನೆ

ಹಾಗೇ ಸುಮ್ಮನೆ..

ನೀನಿಲ್ಲದ ನಾನು
ಕರೆಂಟಿಲ್ಲದ ಫ್ಯಾನು..!

ನೀನಿಲ್ಲದ ನಾನು
ಬಲವಿಲ್ಲದ ಚೈನು..!

ನೀನಿಲ್ಲದ ನಾನು
ಇಂಕಿಲ್ಲದ ಪೆನ್ನು..!

ನೀನಿಲ್ಲದ ನಾನು
ದುಡ್ಡಿಲ್ಲದ ಫೈನು!

ನೀನಿಲ್ಲದ ನಾನು
ಬುಲೆಟ್ಟಿಲ್ಲದ ಗನ್ನು!

ನೀನಿಲ್ಲದ ನಾನು
ಸಾರವಿಲ್ಲದ ಮಣ್ಣು!

ನೀನಿಲ್ಲದ ನಾನು
ದೃಷ್ಟಿಯಿಲ್ಲದ ಕಣ್ಣು!

ನೀನಿಲ್ಲದ ನಾನು 
ಬೆಲೆಯಿಲ್ಲದ ಹೊನ್ನು!

ನೀನಿಲ್ಲದ ನಾನು
ಕೊಳೆತು ಹೋದ ಹಣ್ಣು!

ನೀನಿಲ್ಲದ ನಾನು
ಕಿಕ್ಕಿಲ್ಲದ ಜಿನ್ನು!

ನೀನಿಲ್ಲದ ನಾನು
ಖಾಲಿಯಾದ ಟಿನ್ನು!

ನೀನಿಲ್ಲದ ನಾನು
ಶಾರ್ಪಿಲ್ಲದ ಪಿನ್ನು!

ನೀನಿಲ್ಲದ ನಾನು
ಹಾಳಾದ ಬನ್ನು!

ನೀನಿಲ್ಲದ ನಾನು
ಗೆರೆಯಿಲ್ಲದ ಕಮಾನು!

ನೀನಿಲ್ಲದ ನಾನು
ನೊರೆಯಿಲ್ಲದ ಸಾಬೂನು!

ನೀನಿಲ್ಲದ ನಾನು
ಧೈರ್ಯವಿಲ್ಲದ ಡಾನು!

ನೀನಿಲ್ಲದ ನಾನು
ಶಕ್ತಿಯಿಲ್ಲದ ಪೈಲ್ವಾನು!

ನೀನಿಲ್ಲದ ನಾನು 
ನೀರಿಲ್ಲದ ರೈನು!!!

ನೀನಿಲ್ಲದ ನಾನು
ಓಡಲಾರದ ಟ್ರೈನು!!

ನೀನಿಲ್ಲದ ನಾನು
ಎತ್ತಲಾರದ ಕ್ರೇನು!

ನೀನಿಲ್ಲದ ನಾನು
ಚಲಿಸಲಾರದ ಡ್ರೋನು!

ನೀನಿಲ್ಲದ ನಾನು
ಗಟ್ಟಿಯಿಲ್ಲದ ಬೋನು!

ನೀನಿಲ್ಲದ ನಾನು
ಗಾಳಿಯಿಲ್ಲದ ಬಲೂನು!!
@ಪ್ರೇಮ್@
09.11.2019

1272.ಹೀಗಿರಬಲ್ಲೆ

ಹೀಗಿರಬಲ್ಲೆ..

ಮರವ ಚಿಗುರಿಸಲು ತಿಳಿದಿಲ್ಲ ನನಗೆ
ಆದರೆ ಮನಗಳ ಚಿಗುರಿಸಬಲ್ಲೆ..
ಮನಗಳ ಸುಳ್ಳು ಹೇಳಿ ಉಬ್ಬಿಸಲಾರೆ
ಕಟು ಸತ್ಯವನು ಸಾರಿ ತಿದ್ದಬಲ್ಲೆ...

ಮುಂದೆ ಚೆನ್ನಾಗಿ ಮಾತನಾಡಿ ಹೊಗಳಲಾರೆ
ಹಿಂದೆ ಬೇರೆಯೇ ಹೇಳಿ ತೆಗಳಲೊಲ್ಲೆ
ಎದುರು ಮರ್ಯಾದೆಯ ಕೊಟ್ಟು ಮೇಲೇರಿಸಿ
ಹಿಂದೆ ದ್ವೇಷ ಕಕ್ಕುವ ಕಾರ್ಯ ಮಾಡಲೊಲ್ಲೆ.

ಹೃದಯದಿ ಅಹಿತವ ತುಂಬಿ ನಗುತ ಬದುಕಲಾರೆ
ನೋವ ತೋಡುತ ಹಗುರಾಗಬಲ್ಲೆ.
ಮೆದುಳಲಿ ದುರಾಲೋಚನೆಗಳ ತುಂಬಿಕೊಳ್ಳಲಾರೆ
ಇತರರ ದುಷ್ಟ ಕಾರ್ಯಗಳೆಡೆ ತಲೆ ಹಾಕಲೊಲ್ಲೆ.

ಮಾಡಲಿರುವ ಕಾರ್ಯಗಳ ಬಗ್ಗೆ ಯೋಚಿಸುವೆ
ಇತರರ ಹೀಗಳೆದು ಕೆಳಗಿಳಿಸಲೊಲ್ಲೆ..
ಪರರ ಉತ್ತಮ ಕಾರ್ಯಗಳ ಅಭಿನಂದಿಸುವೆ
ದುಶ್ಚಟಗಳ ನೇರವಾಗಿ ಖಂಡಿಸಬಲ್ಲೆ..

ನನ್ನ ವಚನವ ಪಾಲಿಸಿ ನುಡಿದಂತೆ ನಡೆವೆ
ಹಿರಿಯರಾಣತಿಯ ಮರೆಯಲೊಲ್ಲೆ..
ಕಿರಿಯರಿಗೆ ಗುರುವಾಗಿ ಕೈ ಹಿಡಿದು ನಡೆಸುವೆ.
ನೋವುಣಲು ಆಲೋಚನೆಗಳ ಮಾಡಲೊಲ್ಲೆ..
@ಪ್ರೇಮ್@
08.11.2019

ಬುಧವಾರ, ಅಕ್ಟೋಬರ್ 23, 2019

1271. ಎನ್ನ ಮಲ್ಲಿಗೆ

ಎನ್ನ ಮಲ್ಲಿಗೆ

ಮೆಲ್ಲನೆ ಬತ್ತಿನ ಎನ್ನ ಬಯ್ಯ ಮಲ್ಲಿಗೆ
ಎಲೆಲ್ಯ ಪಜ್ಜೆನ್  ದೀವೊಂದು ಪೋಪಿನಿ ಓಡೆಗೆ
ಪೊಲ್ಯಂದ್ ಪಜಿರ್ ದ ಒಂಜಿ ಕಡ್ಡಿಲ..

ದಾದಲ ಪೋಡ್ಯಡ ಯಾನ್ ಲ ಉಲ್ಲೆ
ಕಾಲ ಬರಡ್ ಕೈತಲ್ ಬರುವೆ
ಮಿಲ್ಲ್ ಗ್ ಪಂದೊರ ಬಲ ತೂಯರೆ ಎನನ್
ಕಲ್ಲ್ ಡ್ ಕುಲ್ಲುದು ತೂದೊರ ಪೋವೆ.

ಬಾಲೆ ಈ ಎಂಕಾದೆ ಬಲತ್ತ ಮೆಲ್ಲನೆ
ಮಲ್ಲಿಗೆ ಎನ್ನ ಏಪಲ ಕಮ್ಮೆನೆ
ಬಲ್ಲಿಗೆ ಸುತ್ತರೆ ಊರಿಡಿ ಒರ್ತಿಯೆ
ಬರ್ಪೆ ಯಾನ್ ಲೆತ್ತ್ಂಡ ಬೇಗನೆ..

ಮದಿಮೆ ಆಯರೆ ಕಾತೊಂದು ಉಲ್ಲೆ
ತಂಗಡಿನ ಕೊರಿಯರ ಬಾಕಿ ಉಲ್ಲಲ್
ಅವೆರ್ದ್ ಬೊಕ್ಕ ನಮ್ಮನೆ ನಲಿಕೆ
ಊರಿಡಿ ನಮ್ಮನೆ ಮೋಕೆದ ತೆಲಿಕೆ..
@ಪ್ರೇಮ್@
23.10.2019

ಸೋಮವಾರ, ಅಕ್ಟೋಬರ್ 21, 2019

1269. ಕೊರಗಜ್ಜಗ್

ಕೊರಗಜ್ಜಗ್

ತೂಯೆರೆ ಇರೆನೊರ ಆಸೆಲ ಆಂಡ್
ಬರಿಯರೆ ತೀರುಜಿ ಕೊರಗಜ್ಜ
ನೂಕು ನುಗ್ಗೆಲ್ ಡ್ ನೂರೆರೆ ಆವಂದ್
ಎಡ್ಡೆ ಮಲ್ಪುಲೆ ಕೊರಗಜ್ಜ

ತೂನಗ ಇರೆನೊರ ಕಣ್ಣುಲು ತಣಿವುಂಡು
ಕಾಪುಲೆ ಪಂಡ್ ದ್ ಮನಸ್ ಕೇನುಂಡು..

ತೂಯೆಡ ಇರೆನ್  ಉಡಲ್ ನಲಿಪುಂಡು
ಈರೆ ಕಾಪುನಿಂದ್ ಪೂರ ಪನ್ಪುಂಡು..

ನಲಿಕೆಲ ತೆಲಿಕೆಲ ಇರೆನ ಪ್ರಸಾದ
ಕಲಿಪೆರೆ ಪೂರ ಕೊರ್ಲೆ ಆಶೀರ್ವಾದ..
ನಡಪರೆ ತೀರಂದ್ ಬೆನಿಯರೆಗಾವಂದ್
ಜೋಕ್ಲೆಗ್ ತಾಂಕುನ ಬುದ್ಧಿನ್ ಕೊರ್ಲೆಂದ್

ಸತ್ಯಲ ಸುಖಲ ಇರೆಗೇ ತೆರಿವುನಿ
ತಪ್ಪುಲ ಸರಿಲ ಈರೇ ತೂಪಿನಿ..
ಯಾನ್ ಎನ್ನ ಪನ್ಪಿ ದಾದ ಉಂಡು
ಪೂರಲ ಇರೆನನೆ ಕಲೆ ತೋಜುಂಡು..

ಬೇನೆಲ ಬೇಜಾರ್ ಲ ಕೊರಂದೆ ಕಾಪುಲೆ
ಭಯ ಭಕ್ತಿನ್ ಹೆಚ್ಚಾದ್ ಉಡಲ್ ಡ್ ನೆಲೆಯಾಲೆ..
@ಪ್ರೇಮ್@
21.10.2019

ಶುಕ್ರವಾರ, ಅಕ್ಟೋಬರ್ 18, 2019

1078.ಹುಲುಮಾನವ ನೀ ಕಲಿ

ಹುಲುವಿನಂಥ ಮಾನವ ಕಲಿಯೊ,
ಗಿಡಮರ ಕಡಿದು ಸಾಯುವೆಯೊ?
ನೆಡುಗಿಡ, ಬದುಕಿಗದೆ ಊಟ!

ಉದಕ ಕೆಡುವುದು ಮನುಜನ ಕೆಲಸಕೆ!
ಗಾಳಿಯು ಕೆಡುವುದು ಹೊಗೆ ಮೇಲೇರೆ
ಮೈಮನಕದು ಬೀಡಂತೆ

1270. ಕವನ-ಸಹನೆಯಿರಲಿ

ಸಹನೆಯಿರಲಿ..

ಸಪ್ತ ಸಾಗರವ ದಾಟುವ ಮಾನವನೆ
ಪ್ರಪಂಚ ಪರ್ಯಟನೆ ನಡೆಸಿ ಬರುವವನೆ
ಏಳು ಜನುಮಗಳನೆತ್ತಿ ನರಕದಿ ಜೀವಿಸುವವನೆ
ಬಾಳ ಬಂಡಿಯಲಿ ಬಹಳ ಸಹನೆಯಿರಲಿ..

ಸಾಮಾನು ಕೊಳ್ಳಲು ಹೋರಗೆ ಹೋದಾಗ
ಮನೆ, ಕೋಣೆಯ ಬಾಡಿಗೆ ಕೊಡುವಾಗ
ತನ್ನ ವಸ್ತುಗಳ ದಾನ ಮಾಡುವಾಗ
ಹೊಟ್ಟೆಯ ತುಂಬಿಸಲು ಪರದಾಡುವಾಗ
ಸಬುದ್ಧಿಯ ಸಜೀವಿಯೇ ಸಹನೆಯೊಂದಿರಲಿ..

ಪರರೊಡನೆ ಸದಾ ಬೆರೆಯುತಲಿರಲು
ವ್ಯಾಪಾರ ವಹಿವಾಟು ನಡೆಸುತಲಿರಲು
ಪರರ ಕೈ ಕೆಳಗೆ ದುಡಿಯಿತಲಿರಲು
ಪರಶಿವನಿತ್ತ ಪರಮ ಸಹನೆಯಿರಲಿ..

ಸಂತುಲಿತ ಸಂಪತ್ತನ್ನನುಭವಿಸಲು
ಸನ್ಮಾರ್ಗದಿ ಜೀವನ ನಡೆಸಲು
ಸುಖ ದು:ಖಗಳ ಒಂದಾಗಿ ಸ್ವೀಕರಿಸಲು
ಸಕಲರಿಗೆ ಸಾಂತ್ವನದ ಸಹನೆಯಿರಲಿ..

ಸೋಲು ಗೆಲುವಿನ ಸಾಹಸ ಪಡುತಿರಲು
ಸಂಗೀತದ ರಸ ಪಡೆದು ಆನಂದಿಸಲು
ಸಹಯೋಗದಲಿ ಸತತ ಸಂತಸವಾಗಿರಲು
ಸಂಕಟ ಹರನಂಥ ಸಹನೆಯು ಇರಲಿ..
@ಪ್ರೇಮ್@
19.10.2019

1249. ಕತೆ ಅವಳು

"ಹೆಂಡತಿ ದುಡಿಯಲಿ, ಹೊರಗೆ ಹೋಗಿ ದುಡಿಯದೆ ಇರಲಿ, ಅವಳ ಕನಸು ನನ್ನ ಮನೆ, ನನ್ನ ಕುಟುಂಬ ತಾನೇ, ಗಂಡ ಅವಳಿಗೆ ಬೇಕಾದ ಪ್ರೀತಿ, ವಾತ್ಸಲ್ಯ, ಮಾತು,ಅವಳಿಗಾಗಿ ಒಂದಿಷ್ಟು ಸಮಯ ಮೀಸಲಿಟ್ಟರೆ ತಾನೇ ಬದುಕು ಸುಂದರವಾಗುವುದು?" ಯೋಚಿಸುತ್ತಾ ಕುಳಿತ ಮಾನ್ವಿತಾ ಅಖಿಲೇಶ್ ಗೆ ಕಣ್ಣೀರು ಧಾರಾಕಾರವಾಗಿ ಸುರಿದು ಹೋಗುತ್ತಲೇ ಇತ್ತು. ಕಷ್ಟಗಳನ್ನೇ ಉಂಡ ಮಾನ್ವಿತಾಳ ಕಣ್ಣೀರೇಕೋ ಬತ್ತಿರಲಿಲ್ಲ, "ಜೀವನದಲ್ಲಿಮನುಜರ,ಹಿರಿಯರ,ಬಂಧುಗಳ ಸಹಾಯ ಸಿಗದಿದ್ದರೇನಂತೆ? ಭೂಮಿಗೆ ತಂದ ಆ ದೇವನಿಲ್ಲವೇ ಸಲಹಿ ಕಾಪಾಡಲು?" ಹೀಗೊಂದು ಮೊಂಡು ವಾದವ ಹಿಡಿದು ನಗುನಗುತ್ತಲೇ ಒಂಟಿ ಜೀವನ ನಡೆಸುತ್ತಿದ್ದಳು.
    ಪತಿರಾಯ ಅಖಿಲೇಶ್ ಮಿಶ್ರ. ಸಾಮಾಜಿಕ ಹೋರಾಟಗಾರ. ಸಮಾಜ ಸೇವಾ ಧುರೀಣ.  ನೆರೆಹೊರೆ,ಬಂಧು ಬಳಗವೆನ್ನದೆ ರಾತ್ರಿ ಹಗಲು ಸೇವೆಗೆ ಸದಾ ಸಿದ್ಧನಾಗುವವ. ಇಂಥ ಒಳ್ಳೆಯ ಹುಡುಗನನ್ನು ಪಡೆಯಲು ಪುಣ್ಯ ಮಾಡಿರಬೇಕೆಂದು ಮದುವೆಯ ಸಂಧರ್ಭದಲ್ಲಿ ಯಾರೋ ಹೇಳಿದ ಮಾತು ಈಗಲೂ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು ಮಾನ್ವಿತಾಳಿಗೆ. ದೇಶ ಸೇವೆ ಮಾಡುವೆನೆಂದು ಹೋದ ಅಖಿಲೇಶ್ ಟ್ರೈನಿಂಗ್ ಕಷ್ಟವಾಯ್ತೆಂದು ಹೇಳದೆ ಕೇಳದೆ ಆಫೀಸರ್ ಗಳ ಕಣ್ಣು ತಪ್ಪಿಸಿ ಓಡಿಬಂದಿದ್ದ. ತನ್ನ ಮಗ ಸೋಮಾರಿಯೆಂದು ತಾಯಿಗೂ ಗೊತ್ತಿತ್ತು. ಆದರೂ ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೇ? ಮಾನ್ವಿತಾಳ ಕೊರಳಿಗದು ಉರುಳಾಗಿತ್ತು!
     ತನಗೆ ಬೇಕಾದದ್ದೇನಾದರೂ ಕೊಡುವುದಿರಲಿ, ತನಗೆ ಆರೋಗ್ಯ ಸರಿ ಇರದಿದ್ದರೂ ತಿರುಗಿ ನೋಡುತ್ತಿರಲಿಲ್ಲ ಅಖಿಲೇಶ. ಮನೆಯಲ್ಲೇನೂ ಮಾಡಲು ಕೆಲಸವಿರದಿದ್ದಾಗ ತಾನು ಕಲಿತ ವಿದ್ಯೆ ನಾಲ್ಕಾರು ಮಕ್ಕಳಿಗೆ ದಾರಿದೀಪವಾಗಲಿ, ತಾನೂ ಪೈಸೆ ಪೈಸೆಗೂ ಗಂಡನನ್ನು ಬೇಡುವುದು ತಪ್ಪುತ್ತದೆಯೆಂದರಿತ ಮಾನ್ವಿತಾ ದ್ವಿತೀಯ ಪಿಯುಸಿ ಮುಗಿದ ಬಳಿಕ ನರ್ಸರಿ ಟ್ರೈನಿಂಗ್ ಮಾಡಿದ ಕಾರಣ ಸ್ಟಾಂಡರ್ಡ್ ಖಾಸಗಿ ಶಾಲೆಯೊಂದರಲ್ಲಿ ನರ್ಸರಿ ಶಿಕ್ಷಕಿಯಾಗಿ ಸೇರಿದಳು. ಮನೆಯಿಂದ ಬಹಳವೇ ದೂರವಿತ್ತು ಆ ಶಾಲೆ. ಆದರೆ ಜಿಲ್ಲೆಯಲ್ಲೇ ದೊಡ್ಡ ಹೆಸರಿದ್ದ ಶಾಲೆಯಲ್ಲಿ ಕೆಲಸ ಮಾಡುವುದರಲ್ಲಿ ತೃಪ್ತಿಯೂ ಇತ್ತು, ಉತ್ತಮ ಸಂಬಳವೂ ದೊರೆಯುತ್ತಿತ್ತು. ಪುಟ್ಟ ಪುಟ್ಟ ಮುದ್ದು ಮಕ್ಕಳ ಒಡನಾಟವಂತೂ ತನಗೆ ಮಕ್ಕಳಿಲ್ಲವೆಂಬ ನೋವನ್ನೆಲ್ಲ ಮರೆಸಿತ್ತು. ಮಕ್ಕಳ ಪೋಷಕರೂ ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸದಲ್ಲಿದುದರಿಂದ ಹೋದ ಕಡೆಯೆಲ್ಲಾ ಗೌರವದ ಜೊತೆಗೆ ಕೆಲಸ ಕಾರ್ಯಗಳು ಹೂವೆತ್ತಿಟ್ಟಂತೆ ಬೇಗಬೇಗ ಮುಗಿಯುತ್ತಿದ್ದವು. ಇದು ಮಾನ್ವಿತಾಗೆ ಸಂತಸ ನೀಡುತ್ತಿತ್ತು. ಆದರೆ ಕೆಲಸ ಬಿಡಬೇಕೆಂಬ ಸೂಚನೆ ಆಗಾಗ ಗಂಡ ಹಾಗೂ ಅತ್ತೆಯಿಂದ ಬರುತ್ತಿತ್ತು. ಅದರಲ್ಲಿ ಮೈದುನ, ನಾದಿನಿಯರ, ಓರಗಿತ್ತಿಯರ ಕುಮ್ಮಕ್ಕೂ ಇರುತ್ತಿತ್ತು.
   ಅತ್ತೆಯೋ ರಣಚಂಡಿ!ಇನ್ನು ನಾದಿನಿ ಕಿಲಾಡಿ ಮಿಟುಕಲಾಡಿ! ಮೈದುನ ಕನ್ನಡ ಮಿಡಿಯಂನಲ್ಲೆ ಮೇಡ್ ಇನ್ ಅಮೇರಿಕಾ ತರಹ ಆಡ್ತಿದ್ದ! ಓರಗಿತ್ತಿ ತಾನು ಮನೆಕೆಲಸ ಮಾಡಿಕೊಂಡಿಲ್ವಾ, ಇವಳ್ಯಾಕೆ ಹೊರಗೆ ಹೋಗೋದು,ಮನೇಲಿ ನನ್ನಂತೆ ದುಡೀಲಿ ಅನ್ನೋ ವಯ್ಯಾರ! ಎಲ್ಲರ ದೃಷ್ಟಿ ಮಾನ್ವಿತಾ ಮೇಲೆಯೇ! 
      "ಜೀವನವೇ ಹಾಗೆ! ಗಣಿತಕ್ಕಿಂತಲೂ ಕಠಿಣ.ಕೆಲವೊಂದು ಸಮಸ್ಯೆಗಳಿಗೆ ಪರಿಹಾರವೇ ಇಲ್ಲ!ತಾನೂ ಮಾಡಲಾಗದು, ಇತರರೂ ಕೊಡಲಾರರು. ಅವು ತಾವೇ ತಾವಾಗಿ ಸರಿ ಮಾಡುವಂಥದ್ದೂ ಅಲ್ಲ! ಕಾಲ, ದೇವರೇ ನಿರ್ಧರಿಸಬೇಕಷ್ಟೇ ಅವುಗಳನ್ನೆಲ್ಲ! ತನ್ನ ಜೀವನದ ಏಳು ಬೀಳಿನ ಹಂತಗಳೂ ಹೀಗೆಯೇ…" ಯೋಚಿಸುತ್ತಾ ಕುಳಿತವಳಿಗೆ ಪಕ್ಕದಲ್ಲೇ ಬಿದ್ದಿದ್ದ ಪತ್ರಿಕೆಯ ತುಣುಕೊಂದು ಕಂಡಿತು. ಎತ್ತಿಕೊಂಡು ಓದಿದವಳ ಬದುಕು ಬದಲಾಗುವ ವಿಷಯ ಅದರಲ್ಲಿದೆಯೆಂದು ಮಾನ್ವಿತಾ ಅಂದುಕೊಳ್ಳಲೇ ಇಲ್ಲ.
     ಹೌದು, ಅದೊಂದು ಜಾಹೀರಾತು. ಸಂಗೀತ ಬಲ್ಲವರಿಗೆ ಪಾರ್ಟ್ಟೈಮ್ ಕೆಲಸ. ಓದುವಾಗಿನ ಪ್ರತಿ ಭಾನುವಾರ ಸಂಗೀತದ ವಿಶೇಷ ತರಗತಿಗಳನ್ನು ತೆಗೆದುಕೊಂಡು ಸೀನಿಯರ್ ಗ್ರೇಡ್ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣಳಾಗಿದ್ದಳು ಮಾನ್ವಿತಾ. ಅದನ್ನು ಬಳಸಿ ತನ್ನ ಪೂರ್ಣ ವ್ಯಕ್ತಿತ್ವ ತೊರಿಸುವ ಅವಕಾಶ ಅವಳಿಗೆ ಬೇಕಿತ್ತು. ಅಂತಹ ಒಂದು ಅವಕಾಶ ಅವಳ ಕಾಲ ಬಳಿಗೇ ಪುಟ್ಟ ಪೇಪರಿನ ಮೂಲಕ ಬಂದಿತ್ತು! ಅವಕಾಶ ಬಿಡಲಿಲ್ಲ. ತಕ್ಷಣವೇ ಆ "ರಾಗರಂಜಿನಿ" ಸಂಗೀತ ಶಾಲೆಯ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸಂಬಂಧಪಟ್ಟವರಿಗೆ ಫೋನಾಯಿಸಿದಳು. ಆ ಕಡೆಯಿಂದ ಕರೆ ರಿಸೀವ್ ಆದಾಗ ಅರಿವಿಲ್ಲದೆ ನಡುಗಿದಳು. ಆ ನಡುಕ ಜೀವನ ಬದಲಾದ ಕುರುಹೇನೋ! ಮತ್ತೆ ಒಂದೇ ವಾರದಲ್ಲಿ ಸೆಲೆಕ್ಟಾಗಿ ತನ್ನ ಪೂರ್ಣ ವ್ಯಕ್ತಿತ್ವ ಬದಲಾಗುವ ಕಾಲ ಬಂದೇ ಬಿಟ್ಟಿತು. ಮತ್ತೆಂದೂ ಮನೆ, ಸಂಬಂಧಿಕರು, ಒಂಟಿತನ, ಮಾತು ಇವುಗಳ ಕಡೆ ಗಮನ ಹರಿಸಲಿಲ್ಲ ಮಾನ್ವಿತ. ರಾಜ್ಯ , ರಾಷ್ಟ್ರ ಮಟ್ಟದ ಸಂಗೀತ  ಕಲಾವಿದೆಯಾಗಿ, ಪ್ರತಿನಿಧಿಯಾಗಿ, ಉತ್ತಮ ಶಿಕ್ಷಕಿಯಾಗಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಬೆಳೆದಳು, ಬೆಳೆಯುತ್ತಲೇ ಹೋದಳು.
    ಮಾತನಾಡುತ್ತ ಕುಳಿತ ಸಂಬಂಧಿಗಳೂ ಬೆಳೆಯುತ್ತಾ ಹೋದರು,ತಮ್ಮ ವಯಸ್ಸಿನಲ್ಲಿ ಮಾತ್ರ!
@ಪ್ರೇಮ್@

1120. ಚುಟುಕು-ಧೂಮಪಾನ

ಚಿತ್ರ ಕವನ
ಅತಿಯಾದರೆ ಧೂಮಪಾನ
ಪಡೆವೆ ಯಮನ ಜೊತೆ ಯಾನ ಅನುಭವಿಸುವೆ ಸರ್ವ ನೋವ
ಸೇರುವೆ ರವರವ ನರಕವ! @ಪ್ರೇಮ್@

1091. ಈಗಿನ ಶಿಕ್ಷಣದ ವ್ಯವಸ್ಥೆ

ಲೇಖನ

ವಿಷಯ-ಈಗಿನ ಶಿಕ್ಷಣದ ವ್ಯವಸ್ಥೆ

   ಶಿಕ್ಷಣ ಎಂದಾಗ ಮೊದಲನೆಯದಾಗಿ ನೆನಪಿಗೆ ಬರುವುದು ಮನೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಆದರೆ ಕಾಲ ಬದಲಾಗಿದೆ. ಈಗ ಮೊಬೈಲೇ ಮೊದಲ ಗುರು.ಮಗುವಿಗೆ ಪ್ರಿ ಸ್ಕೂಲ್ ಮೊದಲ ಶಾಲೆ. ಈಗಿನ ಅಮ್ಮಂದಿರಿಗೆ ಸಮಯವಿಲ್ಲವಲ್ಲ! ತಾವು ದುಡಿದು ಕೆಲಸದವರಿಗೆ ಸಂಬಳ ಕೊಡಬೇಕು! ಪಾಪ ಮಕ್ಕಳ ಗತಿ! ಯಾವುದೋ ಕೆಲಸದವಳ ಜೊತೆಯೋ, ಸಂಬಂಧಿಕರ ಮನೆಯಲ್ಲೋ, ಸಂಬಂಧವೇ ಇಲ್ಲದವರ ಮನೆಯಲ್ಲೋ ಹುಟ್ಟಿದ ತಪ್ಪಿಗೆ ಬೆಳೆಯ ಬೇಕಾದ ಪರಿಸ್ಥಿತಿ ಬಂದೊದಗಿದೆ ಇಂದು!
    ಅದೇನೇ ಇರಲಿ, ಮೂಲ ಹುಡುಕಲು ಹೋಗಬಾರದಂತೆ! ಮೊದಲು ಆರು ವರುಷವಿದ್ದ ಶಾಲಾ ವಯಸ್ಸೀಗ ಮೂರು ವರುಷಕ್ಕೆ ಇಳಿದಿದೆ. ಮೂರು ವರುಷ ಹತ್ತು ತಿಂಗಳಲ್ಲಿ ಶಾಲೆಗೆ ಸೇರಿಸುವ ನಿಯಮವಿದ್ದರೂ ಪೋಷಕರಿಗೆ ತಾಳ್ಮೆ ಎಂಬುದಿಲ್ಲ, ಅದಕ್ಕಿಂತ ಮೊದಲೇ ತಂದು ತುರುಕಿ ಬಿಡುತ್ತಾರೆ ಪ್ರಿ ಕೆಜಿ ತರಗತಿಗೆ!
     ಹಲ ಶಾಲೆಗಳೂ ಪ್ರಿಕೆಜಿಗೇ ಲಕ್ಷಗಟ್ಟಲೆ ಪಡೆದು ತಮ್ಮ ಕಟ್ಟಡ ವೃದ್ಧಿಸುತ್ತಲೇ ಹೋಗುತ್ತಿವೆ. ಇಲ್ಲಿ ನಾವು ಮಾತನಾಡಬೇಕಾದುದು ಸರಕಾರಿ ಶಾಲೆ ಅಥವಾ ಖಾಸಗಿ ಶಾಲೆಯ ಶಿಕ್ಷಣ ವ್ಯವಸ್ಥೆಯ ಬಗ್ಗೆ.
     ನಾನೊಬ್ಬ ಶಿಕ್ಷಕಿಯಾಗಿದ್ದು ಖಾಸಗಿ ಶಾಲೆಯಲ್ಲೂ, ಸರಕಾರಿ ಶಾಲೆಯಲ್ಲೂ ದುಡಿದ ಅನುಭವ ಇರುವ ಕಾರಣ ನಾನು ಹೇಳುವುದಿಷ್ಟೆ. ಸರಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಂತೆಯೇ ಇದು ಕೂಡಾ. ಸರಕಾರವೂ ಶಾಲೆಗಳಿಗೆ ಬೇಕಾದ ಎಲ್ಲಾ ಅನುದಾನಗಳನ್ನು ಕೊಡುತ್ತದೆ. ಇಲ್ಲಿ ನಾವು ಭೌತಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಎಲ್ಲಾ ಕೋನಗಳಿಂದ ಹೇಳ ಹೊರಟರೆ ನಾನು ಎರಡೂ ಶಿಕ್ಷಣ ವ್ಯವಸ್ಥೆಗಳಲ್ಲೂ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳನ್ನು ಪಟ್ಟಿ ಮಾಡಬಲ್ಲೆ.
   ಶಾಲಾಡಳಿತ ಬೇರೆ ಬೇರೆಯಾಗಿದ್ದರೂ ಸರಕಾರಿಯಾದರೂ, ಖಾಸಗಿಯಾದರೂ ಶಿಕ್ಷಕರು ಒಂದೇ. ಪ್ರತಿಯೊಬ್ಬರೂ ತನ್ನ ವಿದ್ಯಾರ್ಥಿ ಮೇಲೆ  ಹೋಗಬೇಕೆಂದು ಬಯಸುವವರೇ. ಆದರೆ ಖಾಸಗಿ ಶಾಲೆಗೆ ಬರುವ ಮಕ್ಕಳು ೨ನೇ, ೩ನೆ ಕೆಲವು ೪ನೇ ಜನರೇಶನ್ ಕಲಿಕಾರ್ಥಿಗಳು! ಅದೇ ಸರಕಾರಿ ಶಾಲೆಗಳಲ್ಲಿ ಓದುತ್ತಿರವ ಹೆಚ್ಚಿನ ವಿದ್ಯಾರ್ಥಿಗಳು ಮೊದಲ ತಪ್ಪಿದರೆ ಎರಡನೆ ಜನರೇಶನ್ ವಿದ್ಯಾರ್ಥಿಗಳು! ಅವರಿಂದಲೇ ಮನೆ ಬೆಳಗಬೇಕು ಅಥವಾ ಅವರು ಕಲಿತು ತಮ್ಮ ಹಿರಿಯರಿಗೆ ಹೇಳಿ ಕೊಡಬೇಕಾದವರು. ಅವನಾದರೂ ಕಲಿತು ಏನಾದರೂ ಕೆಲಸಕ್ಕೆ ಸೇರಲಿ ನಮ್ಮಂತೆ ಕಷ್ಟ ಪಡೋದು ಬೇಡ ಎಂಬ ಯೋಚನೆ ಪೋಷಕರಿಗೆ! ಆದರೇನು! ಹೆಚ್ಚಿನ ಪೋಷಕರು ಕುಡುಕರು, ಕೆಲವು ತಾಯಿ ತಂದೆ ಇಬ್ಬರೂ ಸಂಜೆಯಾದರೆ ಟೈಟು! ಪಾಪ ಮಕ್ಕಳ ಅವಸ್ಥೆ ಯಾರು ಕೇಳಬೇಕೋ! ಬುದ್ಧಿ ಹೇಳಬೇಕಾದವರಿಗೆ ಮಕ್ಕಳೇ ಬುದ್ಧಿ ಕಲಿಸುವ ಕಾರ್ಯ ಮಾಡಬೇಕು. ಇನ್ನು ಕೆಲವರ ಮನೆಯಲ್ಲಿ ಕತ್ತಲಾದ ಕೂಡಲೇ ತಂದೆ ಅನ್ನಿಸಿಕೊಂಡ ಪ್ರಾಣಿಯ ಗಲಾಟೆ, ಪೆಟ್ಟು ಪ್ರಾರಂಭವಾಗಿ ಮನೆ ರಣರಂಗವಾಗಿರುವಾಗ ಮನೆ ಯಾವ ರೀತಿಯ ಪಾಠ ಶಾಲೆಯಾಗಬಹುದು ನೀವೇ ಯೋಚಿಸಿ. ಇನ್ನು ಕಲಿಕೆ, ಸರಕಾರ ಹೇಳುವ  ಶೇಕಡಾ ನೂರರ ಫಲಿತಾಂಶ ಸಾಧ್ಯವೇ ಹೇಳಿ.
   ಆದರೆ ಈ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಲ್ಲಿಸಿ ಮಗುವನ್ನು ಮುಂದೆ ತರುವ ಗುರುತರ ಜವಾಬ್ದಾರಿ ಸರಕಾರಿ ಶಾಲೆಯ ಶಿಕ್ಷಕರ ಮೇಲಿದೆ. ಕೆಲವೊಂದು ಪ್ರಾಥಮಿಕ ಶಾಲೆಯ ಮಕ್ಕಳು ಅಮ್ಮನಿಗಿಂತ ತಮ್ಮ ಶಿಕ್ಷಕಿಯ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಇನ್ನು ಕೆಲವು ಮಕ್ಕಳು ಶಾಲೆಯಲ್ಲಿ ಹೊಟ್ಟೆ ತುಂಬ ಸಿಗುವ ಊಟಕ್ಕಾಗಿ,ಹಾಲಿಗಾಗಿ ಶಾಲೆಗೆ ಈಗಲೂ ಬರುತ್ತಾರೆಂದರೆ ಅತಿಶಯೋಕ್ತಿಯಿಲ್ಲ. ಮತ್ತೆ ಕೆಲವು ವಿದ್ಯಾರ್ಥಿಗಳಿಗೆ ಶಾಲೆಗೆ ಬಂದರಷ್ಟೆ ನೆಮ್ಮದಿ. ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಯಾಕೆ ಬರುತ್ತೇವೆಂದೇ ಗೊತ್ತಿಲ್ಲ. ಹಲವು ವಿದ್ಯಾರ್ಥಿಗಳಿಗೆ ಶಾಲೆ, ಗಣಿತ, ಇಂಗ್ಲಿಷ್, ಹಿಂದಿ ಎಂದರಾಗದು. ಬದಲಾಗಿ ಮದುವೆ ಮನೆ, ಪೂಜೆ, ಬಂಧುಗಳ ಮನೆ, ಹಬ್ಬ, ಅಜ್ಜಿಯ ಮುದ್ದು, ತೋಟ-ಗದ್ದೆಯ ಕೆಲಸ ಇಷ್ಟ. ಇಂತಹ ವಿವಿಧ ಆಯಾಮದಲ್ಲಿ ಯೋಚಿಸುವ ಕಲಿಕೆಯ ಬೆಲೆಯೇ ಅರಿತಿರದ ಮಕ್ಕಳ ಜೀವನ ರೂಪಿಸುವ ಬಹುದೊಡ್ಡ ಸವಾಲು ಸರಕಾರಿ ಶಿಕ್ಷಕರದ್ದು.
   ಅದರೊಂದಿಗೆ ತಮ್ಮದೇ ಮಕ್ಕಳೆಂಬ ಭಾವನೆಯಿಂದ ಅವರನ್ನು ನೋಡಬೇಕಿದೆ. ಅವರ ಜೀವನದ ರೂವಾರಿಗಳು ಶಿಕ್ಷಕರೇ. ಮುಂದೆ ಜೀವನದಲ್ಲಿ ಅವರು ಯಾವ ಕ್ಷೇತ್ರವನ್ನು ಆರಿಸಿಕೊಳ್ಳಬೇಕು, ಅವರಲ್ಲಿ ಹುದುಗಿರುವ ಸುಪ್ತವಾದ ಗುಣ, ಕಲೆಗಳನ್ನು ಹುಡುಕಿ ತೆಗೆದು ಅವರನ್ನು ಆ ದಿಸೆಯಲ್ಲಿ ಬೆಳೆಸುವವರು ಅವರೇ. ಎಷ್ಟೋ ಜನ ಶಿಕ್ಷಕರು ಉತ್ತಮ ಕಲಿಕೆಯ ಬಡ ವಿದ್ಯಾರ್ಥಿಗೆ ತಾವೇ ಬಟ್ಟೆ ಪುಸ್ತಕ ತೆಗೆದು ಕೊಟ್ಟರೆ, ಮತ್ತೆ ಕೆಲವು ಶಿಕ್ಷಕರು ತಮ್ಮ ಮನೆಯಲ್ಲೆ ತಮ್ಮ ಮಕ್ಕಳಂತೆ ಅವರನ್ನು ಸಾಕುವವರಿದ್ದಾರೆ! ತಮ್ಮ ಪಾಠದ ಅವಧಿಯಲ್ಲಿ ಪಾಠ ಪ್ರವಚನ ಬೋಧಿಸಲು ಸಾಧ್ಯವಾಗದೆ ಇರುವ ಘಟನೆಗಳು ಅನೇಕ ಇರುತ್ತವೆ ಈಗಿನ ಸರಕಾರಿ ಶಿಕ್ಷಣ ಪದ್ಧತಿಯಲ್ಲಿ. ಉದಾಹರಣೆಗೆ ಕಂಪ್ಯೂಟರ್, ಸ್ಕೌಟ್, ಗೈಡ್, ಸೇವಾದಳ, ವಿಷಯ ತರಬೇತಿಗಳು, ಮೀಟಿಂಗ್ ಗಳು, ವಿಸಿಟ್ ಗಳು, ದಾಖಲೆಗಳ ನಿರ್ವಹಣೆ.. ಖಾಸಗಿ ಶಾಲೆಗಳಲ್ಲಿ ಆಯಾ, ಪಿಓನ್, ಕ್ಲರ್ಕ್ ಗಳಿದ್ದಂತೆ ಸರಕಾರಿ ಶಾಲೆಗಳಲ್ಲಿ ಇರುವುದಿಲ್ಲ, ಇದ್ದರೂ ಬೆರಳೆಣಿಕೆಯ ಶಾಲೆಗಳಲ್ಲಿ ಮಾತ್ರ! ಉಳಿದ ಶಾಲೆಗಳಲ್ಲೆಲ್ಲ ಮಕ್ಕಳು, ಟೀಚರ್ ಗಳೇ ಪ್ಲಂಬರ್ಗಳು, ಎಲೆಕ್ಟ್ರಿಷಿಯನ್ ಗಳು, ಪಿಓನುಗಳು,ಸಪ್ಲಾಯರ್ ಗಳು,ಆಯಾಗಳು! ಕೆಲವು ಕಡೆ ಅಡಿಗೆಯವರು ಕೂಡಾ!
  ಅದರಿಂದ ಸರಕಾರಿ ಶಾಲೆಗಳಲ್ಲಿ ಕಲಿಕೆಯೊಂದಿಗೆ ಜೀವನ ಮೌಲ್ಯಗಳನ್ನೂ ಅರಿವಿಲ್ಲದೆ ಕಲಿಯುವರು. ಬಡತನ ಜೀವನದಲ್ಲಿ ಎಲ್ಲವನ್ನೂ ಕಲಿಸುವುದಂತೆ. ಅಂತೆಯೇ ಕೂಡಿ ಬಾಳುವುದು, ಪರಸ್ಪರ ಸಹಾಯ, ಒಗ್ಗಟ್ಟು  ಕಲಿಯಲು ಶಾಲೆಯೇ ದೇವಾಲಯ! ಮೇಲು-ಕೀಳು, ಜಾತಿ ಪದ್ಧತಿಯ ಕೋಟೆ ಮಕ್ಕಳಲ್ಲಿಲ್ಲ, ಅದನ್ನು ಸರಕಾರದ ಸವಲತ್ತು, ಲೆಕ್ಕ, ಫೀಜುಗಳಲ್ಲಿ ತೋರಿಸಲಾಗುತ್ತದೆಯೇ ಹೊರತು ತರಗತಿಯೊಳಗೆ ಮೈಮುನ, ಜಾರ್ಜ್, ಗಣೇಶ ಎಲ್ಲರೂ ಒಂದೇ.
     ಕಲಿಕೆ ಎಂದರೆ ಓದು ಬರಹ ಮಾತ್ರವಲ್ಲ. ಜೀವನ ಪಾಠ. ಮುಂದಿನ ಜೀವನಕ್ಕೆ ಅಡಿಗಲ್ಲು. ಭಾರತದ ಮುಂದಿನ ಬಲಿಷ್ಠ ರಾಷ್ಟ್ರ ಕಟ್ಟುವ ಪ್ರಜೆಯ ನಿರ್ಮಾಣ. ಆ ದಿಸೆಯಲ್ಲಿ ಕಲೋತ್ಸವ, ಆಟೋಟ ಸ್ಪರ್ಧೆಗಳು, ಪ್ರತಿಭಾ ಕಾರಂಜಿ, ದಿನಾಚರಣೆಗಳು, ಪ್ರವಾಸ, ಶಾಲಾ ಕ್ರೀಡೋತ್ಸವ, ವಾರ್ಷಿಕೋತ್ಸವ, ಬೀಳ್ಕೊಡುಗೆ ಸಮಾರಂಭಗಳು ಮಕ್ಕಳ ಮುಂದಿನ ಜೀವನ ರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಶಾಲೆಯಲ್ಲಿ ನಡೆಯುವ ನೃತ್ಯ, ಪ್ರಬಂಧ, ಗಾಯನ, ಲೇಖನ ಸ್ಪರ್ಧೆಗಳು, ಗುಂಪು, ನಾಯಕತ್ವ, ಸಂಸತ್, ಶಾಲಾ ನಾಯಕನ ಚುನಾವಣಾ ಆಯ್ಕೆ, ಚರಚೆಗಳು, ರಸಪ್ರಶ್ನೆ, ಜಾಣತನದ ಆಟಗಳು, ಕಾರ್ಯಕ್ರಮ ನಿರ್ವಹಣೆ, ಸ್ವಯಂ ಸೇವಕರು, ಜೀವನಕ್ಕೆ ಸರಿಯಾದ ಅಡಿಗಲ್ಲನ್ನು ಹಾಕುವಲ್ಲಿ ಯಶಸ್ವಿಯಾಗಿವೆ. ಗೆದ್ದಾಗ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುವ ಪುಟ್ಟ ಕೈಗಳೇ ಬಿದ್ದಾಗ ಹಿಡಿದೆತ್ತಲು ಬರುತ್ತವೆ. ಅವುಗಳೇ ನಿಜವಾದ ಮೌಲ್ಯಗಳು. ಇವುಗಳನ್ನೆಲ್ಲ ಶಿಕ್ಷಣ ಕಲಿಸುತ್ತದೆ.
    ಇದ್ದುದರಲ್ಲಿ ಹಂಚಿ ಬದುಕುವ ಗುಣ, ಸ್ಕೌಟ್, ಗೈಡ್ಸ್ ನಲ್ಲಿ ಸಾಹಸಗಳು, ಕಾರ್ಯಕ್ರಮ, ತರಗತಿಗಳಲ್ಲಿ ತೊಡಗಿಸಿಕೊಳ್ಳುವಿಕೆ, ರಾತ್ರಿ ತರಗತಿಯಲ್ಲಿ ಪರಿಶ್ರಮದ ಮಹತ್ವ, ವಿಶೇಷ ತರಗತಿಗಳಲ್ಲಿ ಸಮಯದ ಮಹತ್ವ, ಕಾರ್ಯಕ್ರಮಗಳ ಕೊನೆಯಲ್ಲಿ ಉಳಿದ ವಸ್ತುಗಳ ಜವಾಬ್ದಾರಿ, ಪೋಲಾಗದಂತೆ ವಿಲೇವಾರಿ ಇವೆಲ್ಲ ನಿತ್ಯ ಜೀವನಕ್ಕೆ ಬೇಕಾದ ಕಲಿಕೆಗಳೇ ಅಲ್ಲವೇ?
   ಕಷ್ಟ ಪಟ್ಟು ಕಲಿತ ಯಾವುದೇ ಕೆಲಸವೂ ವ್ಯರ್ಥ ಅನ್ನಿಸದು. ಅಂತೆಯೇ ಈ ಗುಣಗಳು ಕೂಡಾ. ಖಾಸಗಿ ಶಾಲೆಯಲ್ಲಿ ಈ ಎಲ್ಲಾ ಜವಾಬ್ದಾರಿಯನ್ನು ಪೋಷಕ ವೃಂದ, ಶಾಲಾಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಹಾಗೂ ಶಿಕ್ಷಕ ಬಳಗ ಹೊತ್ತರೆ, ಸರಕಾರಿ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರೇ ಕೇಂದ್ರ ಬಿಂದುಗಳು. ವಿದ್ಯಾರ್ಥಿಗಳಿಗೆ ಅವರೇ ಮಾರ್ಗದರ್ಶಿಗಳು. ಅವರಂತಾಗಬೇಕೆಂಬುದೇ ಮೊದಲ ಗುರಿ.
  ಈ ನಿಟ್ಟಿನಲ್ಲಿ ಸರಕಾರಿ ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚು ಮೌಲ್ಯಯುತವಾಗಿದೆ ಹಾಗೂ ಜವಾಬ್ದಾರಿಯುತವೂ ಆಗಿದೆ ಎಂಬುದು ನನ್ನ ಅನಿಸಿಕೆ. ನೀವೇನಂತೀರಿ?
@ಪ್ರೇಮ್@

ಬುಧವಾರ, ಅಕ್ಟೋಬರ್ 16, 2019

1268. ವಿನಂತಿ

ವಿನಂತಿ

ನನ್ನದೆನುವ ನಾನಂಬಿದ ದೇವರೇ
ನನ್ನ ಬೇಡಿಕೆಗಳ ನಿನ್ನ ಮುಂದಿರಿಸಿರುವೆ..
ತಥಾಸ್ತು ಅಂದುಬಿಡು ಸಾಕು
ನನ್ನ ಜೀವನವಿದೋ ಸಾರ್ಥಕ್ಯ...

ನನಗೇನೂ ದಯಪಾಲಿಸದಿರು ನೀನು
ಶಾಂತಿ, ಆರೋಗ್ಯ, ನೆಮ್ಮದಿಯ ಬದಲಾಗಿ!

ರಾಜಕಾರಿಣಿಗಳಿಗೆ ಕೊಡು ದುಡ್ಡು ತುಂಬಿದ ಮೂಟೆಗಳ
ಹಾಗಾದರೂ ಸಮಾಜಸೇವೆ ಮಾಡಲಿ..

ಕಣ್ಣಿಲ್ಲ, ಕೈಯಿಲ್ಲ, ಕಾಲಿಲ್ಲ, ಕಿವಿಯಲಿ ಶಕ್ತಿಯಿಲ್ಲದವರಿಹರು ಬಹಳ
ಕೊಡು ನೀನು ಜಗದಲಿ ದೇವನೇ ಅವರಿಗೆ ಸಹಾಯ ಮಾಡೊ ಮನಗಳ..

ಓದು ಬರಹ ತಿಳಿದ ಅಜ್ಞಾನಿಗಳಿಹರು ಜಗದಿ ಬಹಳ
ಬುದ್ಧಿ ನೀಡು ಸಲಹು ಅವರಿಗೆ ನಿತ್ಯ ಜೀವನದ ನಗೆಮೊಗದ ಕಾರ್ಯಗಳ..

ಮಗುವಿಗೂ ಹಿಂಸಿಸುತ, ಮಾನ ಕಳೆಯುವ ಗುಂಪಿಹುದು
ಕ್ಷಮಿಸದೆ ಸಾಯಿಸಿಬಿಡು ಅಂಥ ದುಷ್ಕರ್ಮಿಗಳನು..

ಮನೆ ಮಠ ಬಂಗಾರ ವಜ್ರ ವೈಡೂರ್ಯ ಬೇಕು
ತಲೆಮಾರಿಗೂ ಸಂಗ್ರಹಿಸಿಡುತ ಇತರರ ನೋವಿಗೆ ಕಾರಣವಾದವನ ವಧಿಸು..

ಸರ್ವರ ವದನದಲಿ ನಗುತರಿಸು,
ಸರ್ವರ ಸಂಕಷ್ಟ ಪರಿಹರಿಸು,
ದ್ವೇಷ ಮತ್ಸರವ ಓಡಿಸಿಬಿಡು
ಪ್ರೀತಿ, ಸಹಬಾಳ್ವೆಯ ಬೆಳೆಸಿಬಿಡು..
@ಪ್ರೇಮ್@
15.10.20೧9

1264. 2 ಹನಿಗಳು

[12/6/2018, 5:02 PM]  ಪರ್ತಿನಾಯನ ಪನಿ

ಯಾನ್ ಲಾ ಈಲಾ ಒಂಜೆ
ಎಂಕ್ ಲಾ ನಿಕ್ ಲಾ ನಂಜೆ!!!!
ದಿಂಜಾವ ದಿನಲ ಬಂಜಿ..
ಬರಂದ್ ಬರಿಕ್ ಒಂಜಿಲಾ ಕಂಜಿ!!!
@ಪ್ರೇಮ್@
[12/7/2018, 7:50 PM]

ಕುಡುಕನ ಹನಿ
ನಾನೂ ಒಂದೆ ನೀನೂ ಒಂದೆ
ನನಗೂ ನಿನಗೂ ನಂಜೇ..
ತುಂಬಿಸುವೆವು ದಿನಾಲೂ ಹೊಟ್ಟೆ
ಬಳಿ ಸುಳಿಯದು ದನದ ಕರು ಕೂಡಾ..

1265.poems

[8/18/2018, 8:03 AM] @PREM@: Life

No positive no negative
Yet to receive both
Follow these two ever
Forget also must
Upliftment is also must
So life is positive and negative.

Addition of our friends,
Family, good, happiness
Most of the rewards
Recalling best moments
Unforgettable persons.
Godly people, their helps..

Subtraction is bad moments,
Sad failures, failed attempts
Cheaters being close friends
Loss of money, health, patience
Incedents which brought tears
Meaningless works of ours

Life is a game of football
Play it in a single ball
See, you shouldn't fall
One day the Lord will call
Let the feelings grow tall
Life should be ever memorable..
@Prem@
[8/31/2018, 11:06 PM] @PREM@: Who's what
When we watch
With witty warm
Wonder....
Wonderful or weak..
Worry or weary..
From west
or whatever ...
Which wind we
would want..
Wao work !
well will..
Why worry?
Wet weather..
who's way ..
Whole for wheat ..
When winding
Who worry..
Worth winning..
We'll wait..
Wear white wit..
Without words..
@prem@
[9/4/2018, 9:41 PM] @PREM@: ಮೊಬೈಲ್

ನನ್ನ ಮೊಬೈಲ್ ನನ್ನ ಗೆಳೆಯ
ಎಲ್ಲಿ ಹೋಗೆ ಬರುವುದು
ಚಿಕ್ಕ ಮೊಬೈಲು ದೊಡ್ಡದಾಗಿ
ಬ್ಯಾಗಿನಲ್ಲೆ ಇರುವುದು..

ವಾಟ್ಸಪ್ಪು ಫೇಸುಬುಕ್ಕು
ನೋಡದೆ ಇರಲಾರೆನು
ಮೆಸೆಂಜರ್ ಯೂ-ಟ್ಯೂಬ್
ಬಿಟ್ಟು ಬಿಡಲಾರೆನು..

ಮುಖ ನೋಡದ ಮಾತಾಡದ
ಗೆಳೆಯರನೇಕ ಇರುವರು
ಫೋಟೋ ನೋಡಿ ಕವನ ಓದಿ
ಕಮೆಂಟ್ ಅನೇಕ ಕೊಡುವರು..

ಕರೆಯು ಕಡಿಮೆ ಸಂದೇಶ ಕಡಿಮೆ
ದುಡಿದ ಹಣವು ವ್ಯರ್ಥ ನೆಟ್ಟಿಗೆ
ಸಮಯವೆಲ್ಲ ಹಾಳು ಮಾಡಿ
ರೋಗ ಬೆರಳು, ಕಣ್ಣಿಗೆ

ನಿದ್ದೆ ಬಿಟ್ಟು ರಮ್ಮಿ ಆಡೆ
ಮನವು ಕುಣಿದು ಅಳುವುದು..
ಸೊಟ್ಟ ನಿಂತು ಫೋಟೊ ತೆಗೆದು
ಮನವು ಖುಷಿಯ ಪಡುವುದು..

ನನ್ನ ಫೋನು ಅಮೂಲ್ಯ ಸಮಯವೆಲ್ಲ
ನುಂಗಿ ನೀರು ಕುಡಿವುದು
ಚಿಕ್ಕ ಫೋನು ಬೇಡ ಈಗ
ಕುಣಿವುದಿಲ್ಲ ತಕತಕ..

@ಪ್ರೇಮ್@

1266.ನಿನ್ನಂತಾಗಬಲ್ಲೆನೇ ನಾ

ನಿನ್ನಂತಾಗಬಲ್ಲೆನೇ ನಾನು

ನಿನ್ನಂತಾಗಬಲ್ಲೆನೇ ನಾನು
ಬೋಧಿಸತ್ವದ ಕೆಳಗಿನ ಬುದ್ಧನೇ...
ಸುಖ-ದುಃಖಗಳ ಸಮನಾಗಿ ಸ್ವೀಕರಿಸುತಲಿ
ಕಷ್ಟ-ಸಂತಸಗಳಲಿ ಮುಗುಳ್ನಗೆಯ ಬೀರುತಲಿ..

ನಿನ್ನೊಲುಮೆಯ ನನಗೆ ಹರಿಸು
ನಿನ್ನಾಶೀರ್ವಾದವ ನನ್ನೆಡೆ ಪಸರಿಸು
ನಿನ್ನಂತೆ ನಾನಾಗಲು ಸದಾ ಆಶೀರ್ವದಿಸು..
ಜಾತಿ-ಮತಗಳ ಹೊಡೆದೋಡಿಸೆ ಸಹಕರಿಸು..

ಮನದೊಳಗಿನ ದ್ವೇಷ ಕಸಗಳ ಗುಡಿಸೆ,
ಹೃದಯಗಳೊಳಗೆ ಪ್ರೀತಿ ಜ್ಯೋತಿಯ ಬೆಳಗಿಸೆ,
ಕರುಣೆ ಕಡಲಲಿ ಇತರರಿಗೆ ಸಹಕರಿಸೆ,
ಮನದಾಳದಿ ಪರರ ಒಳಿತಿಗೆ ಶ್ರಮಿಸೆ ...

ಪರಿಸರವ ಹಾಳುಮಾಡದೆ ಉಳಿಸಲು
ನೀರು-ನೆಲಕೆ ವಿಷವ ಸುರಿಯದಿರಲು,
ಪ್ಲಾಸ್ಟಿಕ್ ರಬ್ಬರ್ ಗಳ ಸುಡದಿರಲು
ರಾಸಾಯನಿಕಯುಕ್ತ ಆಹಾರ ತಿನ್ನದಿರಲು..

ಬುದ್ಧನೇ ನೀನೆನಗೆ ಶಕ್ತಿ ಕೊಡು,
ಮಹಾನುಭಾವನೇ ಯುಕ್ತಿ, ಭಕ್ತಿ  ನೀಡು,
ಮುಂದಿನ ಭವಿಷ್ಯಕೆ ಭದ್ರ ಬುನಾದಿ ಕಟ್ಟಿ,
ನಿನ್ನಂತೆ ಅತ್ಯಾಸೆಯ ತೊರೆಸಿ ಕಾಪಾಡು..

@ಪ್ರೇಮ್@

1266.ನಿನ್ನಂತಾಗಬಲ್ಲೆನೇ ನಾ

ನಿನ್ನಂತಾಗಬಲ್ಲೆನೇ ನಾನು

ನಿನ್ನಂತಾಗಬಲ್ಲೆನೇ ನಾನು
ಬೋಧಿಸತ್ವದ ಕೆಳಗಿನ ಬುದ್ಧನೇ...
ಸುಖ-ದುಃಖಗಳ ಸಮನಾಗಿ ಸ್ವೀಕರಿಸುತಲಿ
ಕಷ್ಟ-ಸಂತಸಗಳಲಿ ಮುಗುಳ್ನಗೆಯ ಬೀರುತಲಿ..

ನಿನ್ನೊಲುಮೆಯ ನನಗೆ ಹರಿಸು
ನಿನ್ನಾಶೀರ್ವಾದವ ನನ್ನೆಡೆ ಪಸರಿಸು
ನಿನ್ನಂತೆ ನಾನಾಗಲು ಸದಾ ಆಶೀರ್ವದಿಸು..
ಜಾತಿ-ಮತಗಳ ಹೊಡೆದೋಡಿಸೆ ಸಹಕರಿಸು..

ಮನದೊಳಗಿನ ದ್ವೇಷ ಕಸಗಳ ಗುಡಿಸೆ,
ಹೃದಯಗಳೊಳಗೆ ಪ್ರೀತಿ ಜ್ಯೋತಿಯ ಬೆಳಗಿಸೆ,
ಕರುಣೆ ಕಡಲಲಿ ಇತರರಿಗೆ ಸಹಕರಿಸೆ,
ಮನದಾಳದಿ ಪರರ ಒಳಿತಿಗೆ ಶ್ರಮಿಸೆ ...

ಪರಿಸರವ ಹಾಳುಮಾಡದೆ ಉಳಿಸಲು
ನೀರು-ನೆಲಕೆ ವಿಷವ ಸುರಿಯದಿರಲು,
ಪ್ಲಾಸ್ಟಿಕ್ ರಬ್ಬರ್ ಗಳ ಸುಡದಿರಲು
ರಾಸಾಯನಿಕಯುಕ್ತ ಆಹಾರ ತಿನ್ನದಿರಲು..

ಬುದ್ಧನೇ ನೀನೆನಗೆ ಶಕ್ತಿ ಕೊಡು,
ಮಹಾನುಭಾವನೇ ಯುಕ್ತಿ, ಭಕ್ತಿ  ನೀಡು,
ಮುಂದಿನ ಭವಿಷ್ಯಕೆ ಭದ್ರ ಬುನಾದಿ ಕಟ್ಟಿ,
ನಿನ್ನಂತೆ ಅತ್ಯಾಸೆಯ ತೊರೆಸಿ ಕಾಪಾಡು..

@ಪ್ರೇಮ್@

1263. ಭಾವಗೀತೆಗಳು

ನಲ್ಲೆಗೆ...

ಭಯವೇಕೆ ಓ ನಲ್ಲೆ ಇಂದು ನಿನಗೆ
ಬೇಗ ಬೇಗ ಸಾಗಿ ಬಾರೇ ನನ್ನ ಬಳಿಗೆ//

ನನ್ನ ಹೃದಯ ರಾಜ್ಯವಿದು ಎಂದೂ ನಿನಗೆ
ನನ್ನ ಜೀವ ಭಾವ ನಿಂದು ಕೊನೆಯವರೆಗೆ//

ಬಾರೆ ಬಾರೆ ಚೆಂದುಳ್ಳಿ ಚೆಲುವೆ ಬಾರೆ,
ತಾರೆ ತಾರೆ ನಿನ್ನ ಒಲವ ನನಗೆ ತಾರೆ//

ಅಂಜುವೆ ಏಕೆ ನನ್ನ ನಲ್ಲೆ ಒಲಿದು ಬಾರೆ,
ಬಿಂಕದ ಹೆಣ್ಣೆ,ಒಲವಿನ ಬೆಣ್ಣೆ ಮೊಗವ ತೋರೆ//

ಸೀರೆಯ ನೀರೆ, ಒಲವಿನ ಧಾರೆ ಬಾರೇ ಬೇಗ,
ಬಂದರೆ ನೀನು ಖುಷಿಯಲಿ ನಾನು ಹಾಕುವೆ ಲಾಗ//

ನನ್ನಯ ಜೀವ ಎಂದಿಗೂ ನೀನೆ,
ನನ್ನಯ ಜೀವನ ನಿನಗೇ ಜಾಣೆ//

@ಪ್ರೇಮ್@
[1/13/2018, 9:56 AM] @PREM@: ಪಯಣದೆಡೆಯಲಿ....
ಕಹಿಯ ಮರೆತು,ಸಿಹಿಯ ಮೆಲುಕು ಹಾಕುತ್ತಾ ಜೀವನ ಪಯಣದಲಿ
ನಾ ಸಾಗುತ್ತಿರುವೆ ಮುಂದಕ್ಕೆ//

ಬೇವು-ಬೆಲ್ಲಗಳ ಜೊತೆಯಲಿ ಸವಿಯುತ
ಹೂ -ಹಣ್ಣುಗಳ ಅದರಲಿ ಬೆರೆಸುತ
ನಾ ಸಾಗುತಿರುವೆ ಮುಂದಕ್ಕೆ//

ಅಲ್ಲಲ್ಲಿ ಕಸದ ರಾಶಿ, ಬೇಡವಾದುದ ಹಾಕಿಹರು ಏರಿಸಿ,
ಬೇಸರಿಸುವೆ, ಮಾಲಿನ್ಯ ತಡೆಯಲಾರೆನೆನಿಸಿ,
ನಾ ಸುಮ್ಮನೆ ಸಾಗುತಿರುವೆ ಮುಂದಕ್ಕೆ//

ಮರಗಳ ಕಡಿದು ಮಾರ್ಗವ ಜೋಡಿಸಿ,
ಗಿಡಗಳ ನೆಟ್ಟು,ಧೂಳನು ಹಬ್ಬಿಸಿ,ಅಸಹಾಯಕಿ ಎನಿಸಿ,
ನಾ ಸಾಗುತಿರುವೆ ಮುಂದಕ್ಕೆ//

ಪ್ಲಾಸ್ಟಿಕ್ ಸಾಮಾನು ಎಲ್ಲೆಡೆ ಎಸೆದು,
ಮೈಕಿನ ಮುಂದೆ ಸ್ವಚ್ಛತೆ ಭಾಷಣ ಬಿಗಿದು,
ಆ ಜನರ ನೋಡುತ್ತಾ ನಾ ಸಾಗುತಿರುವೆ ಮುಂದೆ....

@ಪ್ರೇಮ್@
[1/13/2018, 6:53 PM] @PREM@: ನೀನಿಲ್ಲದ ಕ್ಷಣ

ನೀನಿಲ್ಲದ ಕ್ಷಣವದು ಬೇಸರವೇ ಬರುವುದು
ಮನದ ಮೂಲೆಯಿಂದ ಎಲ್ಲ ನರಗಳಳುವುದು...

ಬೆಟ್ಟದಿಂದ ಬಾಗಿ ಬಿದ್ದ ಮರದ ಹಾಗೆ ಮನವಿದೆ,
ಪುಟ್ಟ ಕಂದ ತಾಯ ಕಳೆದು ಅಳುವಂತೆ ಅನಿಸಿದೆ...

ಸಂಜೆ ಸೂರ್ಯ ಮುಳುಗಿದಾಗ ಭುವಿಯಂತೆ ಮನ ಕತ್ತಲಾಗಿದೆ,
ಮಂಜು ಬಿದ್ದ ಗಿಡದ ಎಲೆಯು
ಕಾಣದಂತೆ ತನು ಮುಸುಕಿದೆ...

ನನ್ನ ಮನದ ದೀಪವಾರಿ ಬೆಳಕು ಮಾಯವಾಗಿದೆ
ತನ್ನತನವೆ ಮರೆತು ಹೋಗಿ ನಿನ್ನ ನೆನಪೆ ಕಾಡಿದೆ...

@ಪ್ರೇಮ್@
[1/23/2018, 11:46 PM] @PREM@: ನನ್ನ ಬದುಕ ದಾರಿಯಲಿ
ನಿನ್ನಾಗಮನದ ನಿರೀಕ್ಷೆಯಲಿ
ಕೈ ಹಿಡಿದು ನಡೆಸುವಲಿ
ಬರಲಾರೆಯ ಜೊತೆಯಲಿ//೧//

ಹೃದಯ ಗೂಡು ಕಾದಿದೆ
ಮನದ ಮಾತು ಬೇಡಿದೆ
ಆಗಮನವ ಬಯಸಿದೆ
ಬಾರೆಂದು ನಮಿಸಿದೆ//೨//

ನಿನ್ನ ಪ್ರೀತಿ ನನಗೆ ಬೇಕು
ನಿನ್ನ ನಗೆಯೆ ನನಗೆ ಸಾಕು
ನಿನ್ನ ಎದೆಯ ಜಾಗ ಸಿಕ್ಕು
ನಾನು ಅಲ್ಲೆ ನಿಲ್ಲ ಬೇಕು//೩//

ನನ್ನ ಬದುಕು ನಿನಗೆ ಮುಡಿಪು
ನೀನೆ ಬಂದು ನನ್ನ ಹುಡುಕು
ತಡವು ಏಕೆ ನನ್ನ ಚೆಲುವೆ
ನನ್ನ ಮನದಿ ನೀನೆ ಇರುವೆ//೪//
@ಪ್ರೇಮ್@
[2/5/2018, 10:05 PM] @PREM@: ಒಲವಿಗೆ ಕರೆ

ಮನಕೆ ಸಂತಸವ ನೀಡು ನನ್ನೊಲವೆ
ಬಳಿಯಲಿ ಬಂದೊದಗಿ
ಬತ್ತಿದ ದೀಪಕೆ ಹಾಕು ನೀ ಎಣ್ಣೆಯ
ಪ್ರೇಮದ  ಮಳೆ ಸುರಿಸಿ...//ಪ//

ಮನದಲಿ ಇರುವ ಸುಡು ಬಿಸಿಲ
ದೂರ ನೀ ಮಾಡು
ಎದೆಯಲಿ ಪ್ರೀತಿಯ ಉತ್ಸಾಹ ತುಂಬುತ
ಹರುಷವ ನೀ ನೀಡು..//೧//

ಪ್ರೀತಿಯ ದೀಪವ ಮನದಲಿ ಬೆಳಗಿಸು
ನೀ ಇಂದೆ ಬಂದು ಬೇಗ..
ನಮ್ಮ ಎದೆಕದವ ತೆರೆಯುತ ಬೆಳೆಯುತ
ಸಾಗುವ ನಾವು ಈಗ...//೨//

ಸಂಗೀತ ನೃತ್ಯದಿ, ನರ್ತನ ರಾಗದಿ
ಬೆಳೆಸೋಣ ಪ್ರೀತಿಯನು
ನನ್ನ ಕಣ್ಣಿಗೆ ನೀನೆ ಕಾಡಿಗೆಯು
ಪ್ರೀತಿಯ ಹಂಚು ಬೇಗ...//೩//

ರಾತ್ರಿ- ರಾಣಿಯು ನೀನೆ ಆಗಿಹೆ,
ಹೆಣ್ಣೆಂಬ ಬೇಧವಿಲ್ಲ
ನೀನೆ ನಾನಾಗಿ, ನಾನೆ ನೀನಾಗಿ ಹಾಡು ಬಾ 

@ಪ್ರೇಮ್@
[2/8/2018, 4:36 PM] @PREM@: 1. ಪ್ರಶ್ನೆ

ನನ್ನ ಕಣ್ಣ ಬಿಂಬದಲ್ಲಿ
ಮೂಡಿದವರು ಯಾರು?
ನನ್ನ ಮನದ ಪೊಟರೆಯಲ್ಲಿ
ನೆಲೆಸಿದವರು ಯಾರು!//

ಕನ್ನಡಿಯಲಿ ಇಣುಕುವಾಗ
ನನ್ನೊಳಗೆ ಕಂಡವರು ಯಾರು?
ನನ್ನೆದೆ ತೊಟ್ಟಿಲಲ್ಲಿ
ನಗೆ ಮೀಟಿದವರು ಯಾರು?//

ಇಷ್ಟ ಪಟ್ಟ ದೃಷ್ಠಿ ಬೊಟ್ಟ
ಕೊಡಿಸಿದವರು ಯಾರು?
ದಿಟ್ಟತನವ ಕಲಿಸಿಕೊಟ್ಟು
ಬೆಳೆಸಿದವರು ಯಾರು?//

ಕೆನ್ನೆ ತುಂಬ ಮುತ್ತು ಕೊಟ್ಟು
ತುತ್ತುಣಿಸಿದವರು ಯಾರು?
ಲಲ್ಲೆಗರೆದು, ಒಲ್ಲೆನೆನಲು
ಬಲವಿತ್ತು ಬಲಪಡಿಸಿದವರು ಯಾರು?//

ಅತ್ತು -ಕರೆದು ರಂಪವಾಡೆ
ಎತ್ತಿ ಕೊಂಡೋರ್ಯಾರು?
ಹೆತ್ತು-ಹೊತ್ತು ಸಾಕಿ-ಸಲಹಿ
ದೇವರಾದೋರ್ಯಾರು?
@ಪ್ರೇಮ್@
[8/20/2018, 6:29 PM] @PREM@: ಕವನ

ನಿಧಿಯಂತಿರುವ ಸಾಲುಗಳೇ
ಈ ಕವನದ ಪದ ಪುಂಜಗಳೇ
ಜೋಡಿಯಾಗಿ ಕುಳಿತ ಅಕ್ಷರಗಳೆ
ಗುಂಪಾಗಿ ನೆರೆದ ಸಾಲುಗಳೆ..

ಹೃದಯದಿ ಜನಿಸಿ ಬೆಳೆಯುತಲಿದ್ದು
ಮನದಲಿ ಗೂಡನು ಕಟ್ಟುತ ಬಂದು
ಬಾಯಿಗೆ ರಾಗದಿ ಹಾಡಲಿ ತಂದು
ಕಿವಿಗೆ ತಣ್ಣನೆ ತಂಪ ನೀಡಿತಿಂದು..

ಎದೆಯಾಳದ ಖುಷಿಯು ಹೊರಬಂತು
ಮನಮಲ್ಲಿಗೆಯ ಕಂಪನು ಹರಡಿತು
ಗಾಯಕನಿಂದ ಸೊಂಪಾಗಿ ಬೆಳೆಯಿತು
ಜನಮನರಲ್ಲಿ ಮೆಚ್ಚುಗೆ ಗಳಿಸಿತು..

ಮನಕಾನಂದವ ನೀಡಿದ ಗೀತೆ
ಜನಮನ ತಣಿಸಿದ ಸಂಪ್ರೀತೆ
ಮೆದುಳಲಿ ನಲಿದ ತನುಜಾತೆ
ಕೈಯನು ಹಿಡಿದು ನಡೆಸಿದ ಮಾತೆ..
@ಪ್ರೇಮ್@