ಶುಕ್ರವಾರ, ಡಿಸೆಂಬರ್ 30, 2022

ಅಮ್ಮಾ



1. ಅಮ್ಮಾ

ಬಾನಿಂದ ಇಳಿದ ಶುದ್ಧ ಮಳೆ ಹನಿ
ಧರೆಯೊಳಗಿಂದ ಅಗೆದ ಚಿನ್ನದ ಗಣಿ!
ಸದಾ ಬಾಳಲಿ ನಾನವಳ ಮಗು
ಹಸಿರಾಗಿರಲಿ ಅಮ್ಮಾ ನಿನ್ನ ನಗು!!

2. ಆಸರೆ

ಧನ ಧಾನ್ಯ ಐಶ್ವರ್ಯ ಬೇಕೇ?
ಸಿಂಗಾರ ಎಂದೂ ಅವಳೆದುರು ಸಮವೇ?
ಮುದ್ದು ಮುಖದ ಒಡತಿ ದೇವರೇ!
ನಿನ್ನ ಕೈ ತುತ್ತೇ ನಮಗಾಸರೆ! 

3.  ಜವಾಬ್ದಾರಿ

ಅಮ್ಮನೆಂಬ ಅರ್ಥದಲ್ಲಿ ಸಾಸಿರ ಪದವಡಗಿದೆ
ಧೈರ್ಯ ಸ್ಥೈರ್ಯ ಜೋಪನವೂ ಹುದುಗಿದೆ!
ಮಗುವ ಬೆಳೆಸೋ ತಾಳ್ಮೆಯ ಕೈಂಕರ್ಯ
ಮೊದಲ ಗುರುವ ಜಾಣ್ಮೆಯ ಔದಾರ್ಯ!!
@ಹನಿಬಿಂದು@
31.12.2022

ಮಂಗಳವಾರ, ಡಿಸೆಂಬರ್ 6, 2022

ಸುಗ್ಗಿ ಹಾಡು

ಸುಗ್ಗಿ ಹಬ್ಬ

ಸುಗ್ಗಿ ಹಬ್ಬ ಬಂದಿತಣ್ಣ ಕುಣಿದಾಡಿರೋ
ಹುಗ್ಗಿಯನ್ನು ತಿನ್ನುತಲಿ ನಲಿದಾಡಿರೋ..

ಬಗ್ಗಿ ಎದ್ದು ನಿಂದು ಕಲೆತು ಒಟ್ಟಾಗಿರೋ
ನುಗ್ಗಿ ಬಂದು ಗದ್ದೆಗೆಂದು ಎಲ್ಲಾ ನುಗ್ಗಿರೋ...
ಜಗ್ಗಿ ಬೇಳೆ ಕಾಳು ಭತ್ತ ರಾಗಿ ಜೋಲವೆಲ್ಲ ತೆಗೆಯಿರೋ 
ಹಿಗ್ಗಿನಿಂದ ಮನೆಗೊಯ್ಯುತಲಿ ನಾಟ್ಯವಾಡಿರೋ...

ಮುದ್ದು ಮೊಗದ ಹೆಂಗಳೆಯರ ಕೆಲಸ ನೋಡಿರೋ
ಹಟ್ಟಿಯಲ್ಲಿ ಓಡೋ ದನದ ಕರುವ ಹಿಡಿಯಿರೋ
ಮೆಟ್ಟಿ ನಿಂತು ಕಷ್ಟಗಳ ಒಂದಾಗಿರೋ
ಜಟ್ಟಿಯಂತೆ ದುಡಿದು ದಣಿದು ನಿದ್ದೆ ಮಾಡಿರೋ

ಹಳ್ಳಿಯಲ್ಲಿ ಬಾಳ್ವೆ ನೋಡಿ ರೈತನಾಗುತ
ದಿಲ್ಲಿಯಲ್ಲೂ ಬೇಕು ಕೂಳು ಎನುತ ಬೆಳೆಯುತ
ನಲ್ಲಿ ನೀರಿನಲ್ಲೂ ಬೆಳೆಯ ಬೆಳೆದು ತೋರುತ
ಗಲ್ಲಿ ಗಲ್ಲಿಗಳಿಗೂ ತರಕಾರಿ ಹಣ್ಣು ನೀಡುತ

ರೈತ ನಮಗೆ ಊಟ ಕೊಡುವ ತಂದೆ  ನೋಡಿರೋ
ನಿಯತ ಬೆಳೆಯ ಬೆಳೆಯೋ ಧರೆಯ ಹಾಡ ಹಾಡಿರೋ
ವಾತ ಪಿತ್ತ ಕಫವ ತಡೆವ ಜನರ ಕೇಳಿರೋ
ಸುಗ್ಗಿ ಬಂದಿತೆಂಬ ವಿಷಯ ಸಾರಿ ಹಾಡಿರೊ
ಹಾಡಿ ಕುಣಿದು ಹಬ್ಬದಲ್ಲಿ ಎಲ್ಲಾ ಒಂದಾಗಿರೋ..ನಕ್ಕು ನಲಿಯಿರೋ 
@ಹನಿಬಿಂದು@
06.12.2022

ಬುಧವಾರ, ನವೆಂಬರ್ 9, 2022

ಗಝಲ್

ಗಝಲ್

ಹಸಿರ ಹೊದ್ದು ಮಲಗಿರುವ ಕನ್ಯೆಯಿವಳು ನೀ ಯಾರೇ?
ಬಸಿರಲಿ ಜೀವಿಗಳ ಹೊತ್ತು ಸಾಕುವವಳು ನೀ ಯಾರೇ ?

ಬವಣೆಯ ಬದುಕನು ಒಪ್ಪಿ ಅಪ್ಪಿಕೊಂಡಿರುವಳು ಧರೆ
ಬದಲಾವಣೆ ಮಾಡುವ ಮನುಜರ ಹೊತ್ತವಳು ನೀ ಯಾರೇ?

ಗುಂಡಿ ಕೊರೆದು ನಿನ್ನೆದೆಯ ನೆತ್ತರ ಕುಡಿವವರ ಬೆಳೆಸುತಿರುವವಳು ಬುವಿ
ಗಂಡಿಯೊಳಗೂ ಜೀವಿಗಳಿಗೆ ಆಶ್ರಯವಿತ್ತವಳು ನೀ ಯಾರೇ?

ಗುಂಡು ಗುಂಡಾಗಿ ದುಂಡಾಗಿ ಬೆಳೆದವಳು ಪೃಥ್ವಿ
ಗಂಡಸರಿಗೂ ತಲೆ ತಗ್ಗಿಸದೆ ರವಿಯ ಕಿರಣದಿ ಬೆಳೆಯುವವಳು ನೀ ಯಾರೇ?

ಮಂಡಿಯೂರಿ ಬೇಡುತಿಹೆ ಧರಣಿ ದೇವಿಯೇ ಹೆಚ್ಚಿಸದಿರು ಮನುಜರನು
ಹೆಂಡ ಕುಡಿದು ಬುದ್ಧಿ ಹಾಳುಮಾಡಿಕೊಂಡವರ ಪ್ರೇಮದಿ ಪೊರೆವವಳು ನೀ ಯಾರೇ?
@ಹನಿಬಿಂದು@
09.11.2022

ಮಂಗಳವಾರ, ನವೆಂಬರ್ 8, 2022

ಗಝಲ್

ಗಝಲ್
ತನ್ನ ಉದ್ಧಾರವಾಗಬೇಕಿದೆ, ಆತ್ಮ ವಿಮರ್ಶೆ ಮಾಡಬೇಕಿದೆ ಮನವೇ
ಸರ್ವ ಬಂಡೆಗಲ್ಲುಗಳ ನಡುವೆ ನೀರಾಗಿ ಹರಿಯಬೇಕಿದೆ 
ಮನವೇ

ಬಿರುಗಾಳಿಗೆ ಎದುರಾಗಿ ಸಾಗಬೇಕಿದೆ, ತರಗೆಲೆಯ ತೆರದಿ ಜಾರುತ್ತಾ ಬೀಳುತ್ತಾ, ಓಡುತ್ತಾ
ಸರ್ವರ ಜೊತೆಗೆ ಒಂದಾಗಿ ಬೆರೆತು ಬಾಳ ಬೇಕಿದೆ ಮನವೇ..

ಅಕ್ಕರೆಯ ಸಕ್ಕರೆಯು ಒಂದೆರಡು ದಿನಕ್ಕೆ ಮಾತ್ರ ಮೀಸಲು
ಅತಿಯಾದರೆ ಅಮೃತವೂ ವಿಷವೇ, ತಿಳಿಯಬೇಕಿದೆ ಮನವೇ

ಮೋಸ, ವಂಚನೆ, ಹಗೆ, ಹೊಟ್ಟೆಕಿಚ್ಚಿನ ಜಾಲತಾಣಗಳಿಹವು
ಬದುಕ ಮೊಬೈಲ ಆ್ಯಪ್ ಗಳನು ಬಳಸುವುದ ಅರಿಯಬೇಕಿದೆ ಮನವೇ..

ಕಣ್ಣು ಕೋರೈಸುವ ಕಡೆ ಎಲ್ಲಾ ಜಗಮಗ ಬೆಳಕು, ತಳುಕು, ಮೆಲುಕು
ನೂಕುವರು ಪಾತಾಳಕೆ ಬಡವನ, ಸೆಟೆದು ನಿಲ್ಲಬೇಕಿದೆ ಮನವೇ..

ಪ್ರೀತಿ, ಸ್ನೇಹ, ಜಾಣ್ಮೆಯಿಂದಲಷ್ಟೆ ಗೆಲ್ಲಬಹುದು ಹೃದಯಗಳ ಧರೆಯಲಿ
ಪ್ರೇಮ ಭರಿತ ಹೃದಯವನು ಸರಿಯಾಗಿ ಓದ ಬೇಕಿದೆ ಮನವೇ..
@ಹನಿಬಿಂದು@
09.11.2022

ಸೋಮವಾರ, ಅಕ್ಟೋಬರ್ 31, 2022

101. ನೀವೊಂದು ಬಾರಿ ನೋಡಬೇಕು ಈ ನಾಯಿ ಹಾಸ್ಟೆಲ್

ನೀವೊಂದು ಬಾರಿ ನೋಡಲೇ ಬೇಕು ಈ ನಾಯಿ ಹಾಸ್ಟೆಲ್..

           ತನ್ನ ಜೀವನದಲ್ಲಿ ಏನಾದರೂ ಒಳ್ಳೆಯ ಕಾರ್ಯ ಮಾಡಬೇಕು ಅನ್ನಿಸಿ ಅನಾಥ ಮಕ್ಕಳಿಗಾಗಿ, ವೃದ್ಧರಿಗಾಗಿ, ವಿಧವೆಯರಿಗಾಗಿ, ಭಿಕ್ಷುಕರಿಗಾಗಿ ಆಶ್ರಮಗಳನ್ನು ತೆರೆದು, ಅವರ ಸೇವೆ ಮಾಡುವ ನಿಜವಾದ ಉತ್ತಮ ವ್ಯಕ್ತಿಗಳು ಒಂದೆಡೆಯಾದರೆ, ದುಡ್ಡಿಗಾಗಿ ಅದನ್ನು ನಡೆಸುವ ಕೆಲವರೂ ಇದ್ದಾರೆ. ಆದರೆ ಯಾರಿಂದಲೂ ಯಾವುದೇ ಪ್ರತಿಫಲ ಬಯಸದೆ, ತನ್ನ ಜೀವನವನ್ನೇ ಬೀದಿ ನಾಯಿಗಳ ಜೀವನಕ್ಕೆ ಮುಡಿಪಾಗಿಟ್ಟ ಅತಿ  ವಿರಳ ಗುಣದ ಯುವಕನೋರ್ವ ಇಲ್ಲಿದ್ದಾರೆ. ಹೌದು, ನೀವು ನಂಬಲೇ ಬೇಕು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ ಬಳಿಯ ಸುಮ್ಮ ಬಂಡಸಾಲೆ, ಪೆಜತ್ತ ಗುರಿ ಇಲ್ಲಿನ ವೀರು ಅಲಿಯಾಸ್ ವಿರಂಜಯ ಹೆಗ್ಗಡೆ ಅವರೇ ಈ ಅನಾಥ ನಾಯಿಗಳ ಆಶ್ರಮ ನಡೆಸುತ್ತಿರುವ ಮಹಾನುಭಾವ. 

        "ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್" ಎಂಬ ಹೆಸರಿನಿಂದ ಈ ಶ್ವಾನಾಶ್ರಮ  ನಡೆಸಲ್ಪಡುತ್ತಿದೆ. ಆದರೂ ಇದು ವಿರoಜಯ ಹೆಗ್ಗಡೆ ಅವರ ಪ್ರಾಣಿ ಪ್ರೀತಿಯ ದ್ಯೋತಕವಾಗಿ ನಡೆದು ಬಂದ ದಾರಿ ಆಗಿದೆ. ಒಂದಲ್ಲ, ಎರಡಲ್ಲ, ವಿವಿಧ ತಳಿಯ, ಹೆಚ್ಚಾಗಿ ಬೀದಿ ನಾಯಿಗಳನ್ನೂ  ಸೇರಿ ಇನ್ನೂರ ಅರವತ್ತಕ್ಕಿಂತಲೂ ಹೆಚ್ಚು ನಾಯಿಗಳಿವೆ ಇಲ್ಲಿ! 

      ಬೀದಿ ನಾಯಿ ಎಂದರೆ ಕಲ್ಲು ಹೊಡೆದು ಓಡಿಸುವ ನಾವು ಈ ಯುವಕನ ಔದಾರ್ಯತೆಗೆ ಮೆಚ್ಚಲೇ ಬೇಕು. ಕಾರಣ ಪ್ರತಿದಿನ 25 ಕಿ. ಗ್ರಾಂ. ಅಕ್ಕಿಯಂತೆ ದಿನಕ್ಕೆ ಎರಡು ಸಲ ಮೊಸರು ಕಲೆಸಿ ಊಟ ಕೊಡಲಾಗುತ್ತದೆ. ನಡು ನಡುವೆ ಸಣ್ಣ ಮರಿಗಳಿಗೆ ಬಿಸ್ಕೆಟ್, ಜಾತಿ ನಾಯಿಗಳಿಗೆ ಪೆಡಿಗ್ರಿ , ಆರೋಗ್ಯ ಸರಿ ಇಲ್ಲದ ನಾಯಿಗಳಿಗೆ ಮದ್ದಿನ ಜೊತೆ ಅದಕ್ಕೆ ಬೇಕಾದ ಆಹಾರ ಕೊಡುತ್ತಾರೆ. ಅದನ್ನು ನೋಡಿಕೊಳ್ಳಲು ಮೂರು ನಾಲ್ಕು ಜನರಿರುವರು. ಅವರಿಗೆ ಪ್ರತಿ ತಿಂಗಳಿಗೂ ಸಂಬಳ ಪಡೆಯುವ ಕರ್ತವ್ಯ ಕೂಡಾ ಇದಾಗಿದೆ. ಇದನ್ನೆಲ್ಲ ವಿರoಜಯ ಅವರೇ ಖುದ್ದಾಗಿ ಮುಂದೆ ನಿಂತು ನೋಡಿಕೊಳ್ಳುತ್ತಾರೆ.

    ಇಂತಹ ಪ್ರಾಣಿ ಪ್ರೇಮ ಎಲ್ಲಿ ಕಾಣುವಿರಿ ನೀವು? ಬೀದಿ ನಾಯಿಗಳಿಗಾಗಿ ತನ್ನ ಬದುಕನ್ನೇ ಮುಡಿಪಾಗಿ ಇಟ್ಟ ಜನರನ್ನು? ಖಾಯಿಲೆಯ ಹಾಗೂ ದಿಕ್ಕಿಲ್ಲದ ಸಣ್ಣ ಮರಿಗಳಿಗೆ ,ಯಾರಾದರೂ ದಾರಿಯಲ್ಲಿ ಎಸೆದು ಹೋದ, ಅಪಘಾತವಾದ ಹಲವಾರು ನಾಯಿಗಳಿಗೆ ಆಶ್ರಯ ಕೊಟ್ಟು  ತಮ್ಮ ದುಡಿತದಲ್ಲಿ ಸಾಕುವ ಜನರನ್ನು ಈ ಕಾಲದಲ್ಲಿ? ಎಷ್ಟೇ ಕೋಟಿ ಹಣವಿದ್ದರೂ ಮಕ್ಕಳು, ಮೊಮ್ಮಕ್ಕಳು ಮರಿ ಮಕ್ಕಳ ಕಾಲಕ್ಕೂ ದುಡಿಯದೆ ತಿನ್ನುವ ಹಾಗೆ ಮಾಲ್, ಹೋಟೆಲ್, ವ್ಯಾಪಾರ ಎಂದು ವ್ಯಾಪಾರಿ ಮನೋಭಾವ ಹೊತ್ತು ಬದುಕುವ  ಜನರೇ ಹೆಚ್ಚಾಗಿ ಇರುವ ಈ ಕಾಲದಲ್ಲಿ ಇವರೊಬ್ಬ ತುಂಬಾ ದಯಾಮಯಿ ವ್ಯಕ್ತಿ ಅನ್ನಿಸುವುದಿಲ್ಲವೇ? ತನ್ನ ಮನೆಯ ಸುತ್ತಮುತ್ತ ಜಾಗದಲ್ಲೇ ನಾಯಿಗಳನ್ನು ಸಾಕುತ್ತಿರುವ ಇವರಿಗೆ ಹಲವು ದಾನಿಗಳು ಉದಾರ ನೆರವು ನೀಡಿದ್ದಾರೆ. ನಾಯಿಗಳ ಗೂಡುಗಳನ್ನು ಕಟ್ಟಲು, ಎಲ್ಲಾ ನಾಯಿಗಳಿಗೆ ಕೆಂಪು ಅಕ್ಕಿ ಅಥವಾ ಕುಚ್ಲಕ್ಕಿ ಅನ್ನ ಕೊಡುವ ಕಾರಣ ಕೆಲವರು ಅನ್ನಕ್ಕೆ ಬೇಕಾದ ಅಕ್ಕಿ, ಬ್ರೆಡ್, ಮೊಸರು, ತಮ್ಮ ಹುಟ್ಟು ಹಬ್ಬವನ್ನು ಅಲ್ಲಿಗೆ ಏನಾದರೂ ಕೊಡುವ ಮೂಲಕ ಆಚರಿಸಿಕೊಂಡ ಮಹನೀಯರು ಕೂಡಾ ಇದ್ದಾರೆ. ಅವರೆಲ್ಲರನ್ನೂ , ಅವರ ಸಹಕಾರಗಳನ್ನು ವಿರಂಜಯ ಹೆಗ್ಗಡೆ ಅವರು ನೆನೆಯಲು ಮರೆಯುವುದಿಲ್ಲ.

      ಇಲ್ಲಿನ ನಾಯಿಗಳಿಗೆ ಸ್ವಾತಂತ್ರ್ಯವೂ ಇದೆ. ಸಂಜೆ ಸ್ವಲ್ಪ ಹೊತ್ತು ಅಲ್ಲೇ ತಿರುಗಾಡಿ ಬರಬಹುದು. ಆದರೆ ಕೆಲವು ಮನುಷ್ಯರ ಹಾಗೇ ಈ ನಾಯಿಗಳಿಗೆ ಶಿಸ್ತು ಕೂಡಾ ಇದೆ. ಸಣ್ಣ ಮರಿಗಳು ಗೂಡಿನಿಂದ ಹೊರ ಬಂದರೆ ಸಿಕ್ಕಿ ಸಿಕ್ಕಿದಲ್ಲಿ ಓಡುವುದಿಲ್ಲ. ಒಂದೋ ಬೇರೆ ದೊಡ್ಡ ನಾಯಿಗಳು ಕಚ್ಚುತ್ತವೆ ಎಂದೋ, ತನ್ನ ಜಾಗ ಇದೇ ಎಂದೋ ಮತ್ತೆ ಬಂದು ಗೂಡು ಸೇರುತ್ತವೆ. ಹೊಸದಾಗಿ ಬಂದ ಮರಿಗಳು ಓಡಿದರೆ ಅಲ್ಲಿರುವ ಜನ ಮತ್ತೆ ಅವುಗಳನ್ನು ನಾಯಿ ತನ್ನ ಮರಿಗಳನ್ನು ಹಿಡಿದು ತರುವ ಹಾಗೆ ಕುತ್ತಿಗೆಯ ಹಿಂಭಾಗದಲ್ಲಿ ಹಿಡಿದು ತಂದು ಗೂಡಿಗೆ ಬಿಡುತ್ತಾರೆ. 

      ಹೊಸಬರು, ಬೇರೆ ಹೊಸ ನಾಯಿಗಳನ್ನು ಕಂಡಾಗ, ಹಸಿವಾದಾಗ ಆ ನಾಯಿಗಳ ಗಲಾಟೆ ಮೇರೆ ಮೀರುತ್ತದೆ. ಒಂದು ನಾಯಿ ಕಿರುಚಲು ಶುರುವಿಟ್ಟರೆ ಸಾಕು ಕೆಲವೊಮ್ಮೆ ಎಲ್ಲಾ ನಾಯಿಗಳೂ ಒಟ್ಟಿಗೆ ಬೊಗಳುತ್ತವೆ. ಅದನ್ನು ಯಾವುದೇ ಕಿರಿ ಕಿರಿ ಇಲ್ಲದೆ ಸಹಿಸಿ ಎಲ್ಲಾ ನಾಯಿಗಳನ್ನು ಒಂದೇ ರೀತಿಯಾಗಿ ಇಲ್ಲಿ ನೋಡಿಕೊಳ್ಳಲಾಗುತ್ತದೆ. 
  
       ಇಲ್ಲಿನ ದೊಡ್ಡ ನಾಯಿಗಳಿಗೆ ಹೆಸರುಗಳಿವೆ. ಎಲ್ಲಾ ದೊಡ್ಡ ನಾಯಿಗಳನ್ನು ಆಯಾ ಹೆಸರಿನಿಂದಲೇ ಕರೆಯಲಾಗುತ್ತದೆ. ಹಾಗೆಯೇ ಖಾಯಿಲೆಯ ನಾಯಿಗಳನ್ನು ಬೇರೆಯೇ ಕೋಣೆಯಲ್ಲಿ ಇರಿಸಿ ಅವುಗಳಿಗೆ ಹೆಚ್ಚು ಸಮಯ, ಬೇರೆಯೇ ಊಟ, ಮದ್ದು ಕೊಟ್ಟು ನೋಡಿಕೊಳ್ಳಲಾಗುತ್ತದೆ. ಇಲ್ಲಿರುವ ನಾಯಿಗಳಲ್ಲದೇ ಬೇಕೆಂದರೆ  ಊರಿನ ಎಲ್ಲಾ ಸಾಕಿರುವ  ಹೆಣ್ಣು ಬೀದಿ (ಲೋಕಲ್) ನಾಯಿಗಳಿಗೂ ಉಚಿತವಾಗಿ ಸಂತಾನ ಹರಣ ಚಿಕಿತ್ಸೆಯನ್ನು ಉಚಿತವಾಗಿ ತಿಂಗಳಿಗೆ  ಒಮ್ಮೆ  ಇವರು ಕೊಡಿಸುತ್ತಾರೆ. 

    ನಾಯಿಯೊಂದು ಖಾಯಿಲೆ ಬಂದು ಇಲ್ಲಿ ಸತ್ತರೆ ಅದರ ಸಂಸ್ಕಾರ ಮಾಡಿ ಅದರ ಫೋಟೋ ತೆಗೆದು "ಮಿಸ್ಸಿಂಗ್"  ಅಂತ ಫ್ಲೆಕ್ಸ್ ನಲ್ಲಿ ಹಾಕಿ ಇಡುತ್ತಾರೆ, ಇಲ್ಲಿ ನಾವು ಇವರ ಪ್ರಾಣಿ ಪ್ರೀತಿಯನ್ನು ನೆನೆಯಬಹುದು. ಯಾವುದೇ ಪ್ರಶಸ್ತಿಗಳ  ಹಿಂದೆ  ಹೋದವರು ಇವರಲ್ಲ. ಇವರು ಉತ್ಕಟ ಪ್ರಾಣಿ ಪ್ರೇಮಿ.  ಮನುಷ್ಯರ ಹಾಗೆಯೇ ಇಲ್ಲಿ ಭಾವನಾತ್ಮಕ ಸಂಬಂಧ ನಾಯಿಗಳೊಂದಿಗೆ ವಿರಂಜಯರಿಗೆ ಇದೆ. ಹಾಗಾಗಿ ನಾಯಿಗಳೂ ಎಲ್ಲೇ ಹೋದರೂ ಮತ್ತೆ ತಿರುಗಿ ಇಲ್ಲೇ ಬರುತ್ತವೆ.  ಹೇಳಿ ಕೇಳಿ ನಾಯಿ ಮನುಷ್ಯರಿಗಿಂತಲೂ ನಿಯತ್ತಿನ ಪ್ರಾಣಿ. ಈಗ ಲೋಕಲ್ ತಳಿಯ ಬೆಕ್ಕುಗಳನ್ನು ಉಳಿಸಲು ಅವುಗಳನ್ನೂ ಕೂಡಾ ಸಾಕಲಾಗುತ್ತಿದೆ.

   ಪ್ರತಿ ನಾಯಿಯನ್ನು ಸಹ ಪ್ರತಿದಿನ ಸ್ನಾನ ಮಾಡಿಸುತ್ತಾರೆ. ಅವುಗಳು ಇರುವ ಜಾಗವನ್ನು ತೊಳೆದು ಬೆಳಗ್ಗೆ ಹಾಗೂ ಸಾಯಂಕಾಲ ಶುದ್ಧಗೊಳಿಸಲಾಗುತ್ತದೆ. ಕೆಲವು ಸಲ ಮಲ, ಮೂತ್ರ, ವಾಂತಿ ಅಲ್ಲೇ ಮಾಡಿಕೊಳ್ಳುವ ನಾಯಿಗಳನ್ನು ಬೇರೆಯೇ ಕಟ್ಟಿ ಶುಚಿಯಾಗಿ ಇಡಲಾಗುತ್ತದೆ. ಒಟ್ಟಿನಲ್ಲಿ ಇಲ್ಲಿನ ನಾಯಿಗಳು ಶುದ್ಧವಾಗಿ ಇರುತ್ತವೆ. ಮಾತ್ರವಲ್ಲ ಆಗಾಗ ಇಲ್ಲಿ ನಾಯಿಗಳಿಗೆ ರೇಬೀಸ್ ವಿರುದ್ಧ, ಬೇರೆ ಬೇರೆ ರೋಗಗಳ ವಿರುದ್ಧ ಲಸಿಕೆಗಳನ್ನು ಕೂಡಾ ನೀಡಲಾಗುತ್ತದೆ. ಈ ಪ್ರಾಣಿಗಳ ಆರೋಗ್ಯಕ್ಕಾಗಿ ಪಶು ವೈದ್ಯರು ನಿರಂತರ, ನೇರ ಸಂಪರ್ಕದಲ್ಲಿಯು, ಆಗಾಗ ಅಲ್ಲಿಗೆ ಕರೆತಂದು ಸದಾ ಅವುಗಳ ಆರೋಗ್ಯದ ಬಗ್ಗೆ ಗಮನ ಕೊಡುತ್ತಾರೆ. ಅವರ ಆಟೋ ರಿಕ್ಷಾವನ್ನು ಪೆಟ್ ಆಂಬುಲೆನ್ಸ್ ಆಗಿ ಬಳಸಲಾಗುತ್ತದೆ. ಅದರಲ್ಲಿ ನಾಯಿಗಳನ್ನು ದೂರದ ಊರಿನ ಆಸ್ಪತ್ರೆಗಳಿಗೆ ಕೊಂಡೊಯ್ದು ಆಪರೇಶನ್, ಹಾಗೂ ವಿವಿಧ ಚಿಕಿತ್ಸೆ ಕೊಡಿಸಲಾಗುತ್ತದೆ. 

    ಇಲ್ಲಿ ಇನ್ನೊಂದು ವಿಶೇಷತೆ ಇದೆ. ಎಲ್ಲಾ ನಾಯಿಗಳ ಗುಣ ಒಂದೇ ಆಗಿಲ್ಲ. ನಾಯಿ ಭಾಷೆಯನ್ನು ಅರಿಯುವುದು ಬೇರೆಯೇ ಇದೆ. ನಾಯಿಗಳ ಮುಖದ ಆಕಾರವನ್ನು ನೋಡಿ ಅವುಗಳ ಭಾವನೆಗಳನ್ನು ಓದುವ ಒಂದು ಚಾರ್ಟ್ ಇಲ್ಲಿನ ಗೋಡೆಯ ಮೇಲಿದೆ. ಕೆಲವು ನಾಯಿಗಳಿಗೆ (ಬೀದಿ ನಾಯಿ ಆದ ಕಾರಣವೋ ಏನೋ) ಬೆಳಿಗ್ಗೆ ಸಂಜೆ ಊರಿನ ರಸ್ತೆಯಲ್ಲಿ ಒಂದು ರೌಂಡ್ ಓಡಿ ಒಂದೆರಡು ಹತ್ತಿರದ ಮನೆಗೆ ಹೋಗಿ ಬಂದರೆ ಸಮಾಧಾನ. ಇಲ್ಲಿ ಅದಕ್ಕೂ ಅವಕಾಶ ಇದೆ. ಕೆಲವು ನಾಯಿಗಳಿಗೆ ಅವರು ಒಮ್ಮೆ ತನ್ನನ್ನು ಎತ್ತಿಕೊಂಡರೆ ಇಷ್ಟ. ಇನ್ನು ಕೆಲವು ನಾಯಿಗಳಿಗೆ ಇವರು ಬೆನ್ನ ಮೇಲೆ ಕೈಯಾಡಿಸಿದರೆ ಖುಷಿ. ಮತ್ತೆ ಕೆಲವು ನಾಯಿಗಳ ಬಳಿ ಅವರು ಮಾತನಾಡಿದರೆ ಅವುಗಳಿಗೆ ನೆಮ್ಮದಿ! ನಾಯಿಗಳು ಅವರ ಆಟೋದ ಮುಂದೆ ಬಂದು ನೃತ್ಯ ಮಾಡುವುದು ನೋಡಲು ಚಂದ. ಎಲ್ಲಾ ನಾಯಿಗಳನ್ನು ಕೂಡಾ ತನ್ನ ಮನೆಯ ಸದಸ್ಯರಂತೆ ಕಾಣುತ್ತಾರೆ ಅವುಗಳ ಭಾವನೆಯನ್ನು ಅರಿತ ವಿರಂಜಯ ಹೆಗ್ಗಡೆ ಅವರು. 

    ನಿಮಗೆ ಏನಾದರೂ ಅಲ್ಲಿಂದ ನಾಯಿ ಮರಿಗಳು ಬೇಕೆಂದರೆ ಚೆನ್ನಾಗಿ ಸಾಕುವವರಿಗೆ ಯಾವುದೇ ಹಣ ಕೊಡದೇ ತರುವ ಅವಕಾಶವೂ ಇದೆ.ಚೆನ್ನಾಗಿ ಸಾಕಿದರೆ ಆಯಿತು. ನಿಮ್ಮ ಮನೆಯಲ್ಲಿ ನಾಯಿ ತುಂಬಾ ಮರಿ ಹಾಕಿದೆ ಎಂದರೆ ಅಲ್ಲಿ ಬಿಟ್ಟು ಬರಲೂ ಬಹುದು. ದೊಡ್ಡ ಸಾಕು ನಾಯಿಗಳನ್ನು ಅಲ್ಲಿ ಬಿಟ್ಟು ಬರಲು ಈಗ ಅವಕಾಶ ಇಲ್ಲ ಕಾರಣ ಅಲ್ಲಿ ಜಾಗದ ಕೊರತೆ ಇದೆ. ಆದರೂ ರೋಗ ಪೀಡಿತ, ಅಪಘಾತವಾದ, ಅನಾಥ, ಸಣ್ಣ ಮರಿಗಳನ್ನು ಇಲ್ಲಿ ತೆಗೆದು ಇರಿಸಿಕೊಂಡು ಸಲಹಲಾಗುತ್ತದೆ. 

      ಹಲವಾರು ಉತ್ತಮ ತಳಿಯ ನಾಯಿಗಳೇ ಅಲ್ಲದೆ ಲೋಕಲ್ ನಾಯಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇವೆ . ರೋಗಗ್ರಸ್ತ ಹಾಗೂ ಅನಾಥ ನಾಯಿ ಮರಿಗಳಿಗೆ ಇದೊಂದು ಆಶ್ರಯ ತಾಣವಾಗಿ ಬೆಳೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂದಿನ ಯುವಕರು ದುಡಿಯುವುದರ ಜೊತೆಗೆ, ಉತ್ತಮ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರೂ ಇದ್ದಾರೆ ಎಂಬುದಕ್ಕೆ ವಿರಂಜಯ ಹೆಗ್ಗಡೆ ಅವರು ಉತ್ತಮ ಉದಾಹರಣೆ. ಜೈನ ಧರ್ಮದ ಅಹಿಂಸಾ ತತ್ವವನ್ನು ಸರಿಯಾಗಿ ಪಾಲಿಸುವ ಕಾರ್ಯವಿಲ್ಲಿ ನಡೆದಿದೆ ಎಂದು ಹೇಳಬಹುದು. ಹಾಗೆಯೇ ಇಲ್ಲಿನ ನಾಯಿಗಳಿಗೆ ಯಾವುದೇ ಮಾಂಸಾಹಾರಕ್ಕೆ ಅವಕಾಶ ಇಲ್ಲ. 


     ಇಂತಹ ಅಪರೂಪದ ನಾಯಿಗಳ ಆಶ್ರಮಕ್ಕೆ ಒಮ್ಮೆ ನೀವು ಭೇಟಿ ಕೂಡಲೇ ಬೇಕು. ಶೃಂಗೇರಿಯಿಂದ ಕಾರ್ಕಳಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಮಾಳ ಗೇಟ್ ಕಳೆದು ಸ್ವಲ್ಪ ದೂರಕ್ಕೆ ಇದೆ ಸುಮ್ಮ ಬಂಡಸಾಲೆ. ಅಲ್ಲೊಂದು ಟೆನ್ನಿಸ್ ಕೋಚಿಂಗ್ ಸೆಂಟರ್ ಕೂಡಾ ಇದೆ. ಅಲ್ಲದೆ ರಾಜ್ಯ ಮಟ್ಟದಲ್ಲಿ ಆಡ ಬಹುದಾದ ಉತ್ತಮ ಒಳಾಂಗಣ ಟೆನ್ನಿಸ್ ಕೋರ್ಟ್ ಕೂಡಾ ಇಲ್ಲಿದೆ. ರಜಾ ದಿನ ಹಾಗೂ ಆದಿತ್ಯವಾರ ಇಲ್ಲಿ ಕೋಚಿಂಗ್ ಕೂಡಾ ಕೊಡಲಾಗುತ್ತದೆ. ವಿರಂಜಯ ಅವರು ಉತ್ತಮ ಟೆನ್ನಿಸ್ ಆಟಗಾರರೂ ಹೌದು. ಹಿರಿಯರಿಗೆ ಹಾಗೂ ಮಕ್ಕಳಿಗೂ ಇಲ್ಲಿ ಟೆನ್ನಿಸ್ ಆಟವನ್ನು ಹೇಳಿ ಕೊಡಲಾಗುತ್ತದೆ. ಹಾಗೆಯೇ ಧರ್ಮಸ್ಥಳದಿಂದ ಉಡುಪಿ , ಕಾರ್ಕಳ ಮಾರ್ಗದಿಂದ ಬರುವವರು ಬಜಗೋಳಿಯಲ್ಲಿ ಬಲಕ್ಕೆ ತಿರುಗಿ ಕುದುರೆಮುಖ ರಸ್ತೆಯಲ್ಲಿ ಒಂದೆರಡು ಕಿಲೋ ಮೀಟರ್ ಮುಂದೆ ಸಾಗಬೇಕು. ಅಲ್ಲಿಯೇ ಪಕ್ಕದಲ್ಲಿ ಅಂದರೆ ಮಂಗಳೂರು - ಸೋಲಾಪುರ ಹೈ ವೇ ಯಿಂದ ಎರಡು ಕಿ.ಮೀ ಒಳಗೆ ಸಾಗಿದರೆ ಮುಡ್ರಾಲು ದುರ್ಗಾ ಪರಮೇಶ್ವರಿ ದೇವಸ್ಥಾನ ಇದೆ. ತುಂಬಾ ಸುಂದರವಾದ ಪ್ರಶಾಂತ ಪ್ರದೇಶವಿದು. ಹಸಿರು ಪ್ರಕೃತಿಯ ಮಡಿಲು. 9611944763 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ವಿರಂಜಯ ಹೆಗ್ಗಡೆ ಅವರು ಸಂಪರ್ಕಕ್ಕೆ ಸಿಗುತ್ತಾರೆ. https://youtu.be/C87mhXwdIyU ಇಲ್ಲಿ ಸ್ಥಳೀಯ ವಾರ್ತಾ ವಾಹಿನಿ ನೀಡಿದ ಸುದ್ದಿ ಮಾಹಿತಿ ಯು ಟ್ಯೂಬ್ ನಲ್ಲಿಯು ನೋಡಲು ಲಭ್ಯವಿದೆ.  ಧರ್ಮಸ್ಥಳ, ಶೃಂಗೇರಿ, ಉಡುಪಿ, ಕಾರ್ಕಳ ಪ್ರವಾಸ ಬರುವವರು ತಪ್ಪದೆ ಒಮ್ಮೆ ಭೇಟಿ ಕೊಡಬಹುದಾದ  ಜಾಗವಿದು. ಮನುಜರಂತೆ ಪ್ರಾಣಿಗಳೂ ಪ್ರೀತಿಗೆ, ಶಿಸ್ತಿಗೆ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಕಣ್ಣಾರೆ ಕಂಡು ಹೋಗುವ ಅವಕಾಶ ನಿಮ್ಮದಾಗಲಿದೆ. ಮಿಸ್ ಮಾಡಿಕೊಳ್ಳದೇ ಒಮ್ಮೆ ವಿರಂಜಯ ಹೆಗ್ಗಡೆ ಅವರ ಪ್ರಾಣಿ ಪ್ರೇಮ ನೋಡಿದರೆ ಮನ ಹರ್ಷಿತಗೊಳ್ಳುತ್ತದೆ. ಸಹಾಯ ಮಾಡುವ ಮನಸ್ಸಿದ್ದರೆ ಅದಕ್ಕೂ ಅವಕಾಶ ಇದೆ. ಮನುಷ್ಯರಿಗೆ ಅನಾಥಾಶ್ರಮ ಕಟ್ಟಿ ಅದನ್ನು ಸರಿಯಾಗಿ ನೋಡಿಕೊಳ್ಳುವುದೇ ಕಷ್ಟ ಆಗಿರುವ ಈ ಕಾಲದಲ್ಲಿ ಬೀದಿ ನಾಯಿಗಳಿಗೆ ಆಶ್ರಮ ಕಟ್ಟಿ ಅವುಗಳನ್ನು ನೋಡಿಕೊಳ್ಳುವ ಕಾರ್ಯ ಸಾಧಾರಣದ್ದೇ? ಇವರ ಕಾರ್ಯಕ್ಕೆ ನಾವು ಮೆಚ್ಚಲೇ ಬೇಕಲ್ಲವೇ? ನೀವೇನಂತೀರಿ? 
@ಹನಿಬಿ0ದು@
23.10.2021

ಬುಧವಾರ, ಅಕ್ಟೋಬರ್ 12, 2022

ಜೀವಾಮೃತ

ಜೀವಾಮೃತ

ನಿನ್ನನೆಲ್ಲಿ  ಅದೆಲ್ಲಿ ಬದುಕ ಬಿಟ್ಟಿಹರು
ಜೀವಾಮೃತವೇ ಈ ಕೆಟ್ಟ ಜನರು?
ತಮ್ಮಾರೋಗ್ಯ ಕೆಟ್ಟರೂ ಬಿಡಲಿಲ್ಲ
ಜಲ ಮಾಲಿನ್ಯವ ನಿಲ್ಲಿಸಲೇ ಇಲ್ಲ!

ಕಾರ್ಖಾನೆ ಕಸಗಳ ಸುರಿಯುವುದು
ಮನೆಯ ಚರಂಡಿಗಳ ಜೋಡಿಸುವುದು
ನದಿಯ ಕೈಗಳ ಬತ್ತಿಸುವುದು
ಜೆಸಿಬಿಯಲಿ ಗುಂಡಿಯನು ಅಗೆಯುವುದು

ಉಸಿರು ಕಟ್ಟಿಸಿ ಬಿಟ್ಟರು ತಿಳಿನೀರೆ
ಕೊಳಕು ಚೆಲ್ಲಿ ಮಲಿನಗೊಳಿಸಿದರು ಸಿಹಿನೀರೆ
ಮಿತವಾಗಿ ಬಳಸೆಂದರೆ ಕಿವಿ ಮುಚ್ಚಿಕೊಂಡರು
ಜನ ಸಂಖ್ಯೆ ಹೆಚ್ಚಿಸಿ ಬೋರು ಕೊರೆದರು

ಶುದ್ಧಗೊಳಿಸುವವರು ಇನ್ಯಾರು ಜಗದಲಿ
ನೆಟ್ಟರೆ ತಾನೇ ಹಸಿರನು ಪರಿಸರದಲಿ
ಹಸಿರ ಹಾಸಿಗೆ ಹಾಡಿದರೆ ಹೆಸರು
ಬಸಿರ ಕೂಸಿಗೆ ಬೇಕಲ್ಲ ಉಸಿರು?
@ಹನಿಬಿಂದು@
13.10.2022

ಶನಿವಾರ, ಅಕ್ಟೋಬರ್ 8, 2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -152

ಒಂದಿಷ್ಟು  ರಿಲ್ಯಾಕ್ಸ್ ತಗೊಳ್ಳಿ -152

   " ಸತ್ಯದೊಂದಿಗೆ ನನ್ನ ಪರಿಕಲ್ಪನೆಗಳು"(ಮೈ ಎಕ್ಸ್ಪರಿಮೆಂಟ್ಸ್ ವಿತ್ ಟ್ರುಥ್) ಇದು ಗಾಂಧೀಜಿ ಅವರ ಜೀವನದ ಬಗ್ಗೆ ಅವರೇ ಬರೆದ ಜೀವನ ಚರಿತ್ರೆಯ ಪುಸ್ತಕ. ಹಾಗೆ ನೋಡಿದರೆ ನಮ್ಮ ಬದುಕು ಕೂಡಾ ಇದೇ ಸತ್ಯ ಅಸತ್ಯಗಳ ನಡುವೆ ಇದೆ ಅಲ್ಲವೇ? ಸೋಲು ಗೆಲುವುಗಳ ನಡುವೆ. ನಂಬಿಕೆ ದ್ರೋಹಗಳ ನಡುವೆ. ನ್ಯಾಯ ಅನ್ಯಾಯಗಳ ನಡುವೆ. ಇವೆಲ್ಲವನ್ನು ಅನುಭವಿಸದ ಮನುಷ್ಯ ಜಗತ್ತಿನಲ್ಲಿ ಇದ್ದಾನೆ ಎಂದಾದರೆ ಅವನು ಪಶುವಿಗೂ ಸಮಾನನಲ್ಲ. ಅವುಗಳ ಬದುಕಲ್ಲೂ ಇದೆ ನೋವು-ನಲಿವು. 

ಇಂದು ಗಾಂಧೀಜಿ ಅವರು ಬದುಕಿರುತ್ತಿದ್ದರೆ ಅವರಿಗೆ ನೂರ ಐವತ್ತ ಮೂರು ವರ್ಷ ತುಂಬುತ್ತಿತ್ತು. ಅವರ ತತ್ವಾದರ್ಶಗಳಿಗೆ ಅಷ್ಟು ವರ್ಷ ಆಗಿರದೇ ಇದ್ದರೂ, ಇನ್ನೂ ಸಾವಿರ ವರ್ಷ ಕಳೆದರೂ ಆವು ಸಾಯಲಾರವು. ಆದರೆ ವಿಪರ್ಯಾಸ ಎಂದರೆ ಗಾಂಧೀ ತತ್ವಗಳು ಇಂದು ಒಂದು ರಾಜಕೀಯ ಪಕ್ಷಕ್ಕೆ ಸೀಮಿತಗೊಂಡು, ಅವರನ್ನೂ ಪಕ್ಷದ ಒಳಗೆ ಸೇರಿಸಿಕೊಳ್ಳಲಾಗಿದೆ. ಅವರ ಸ್ವಚ್ಛತೆಯ ಸಂದೇಶ ಜನರ ಮನಸ್ಸಿಗೆ ಅದೊಂಚೂರು ನಾಟಿದ್ದಿದ್ದರೆ ಇಂದು ಸ್ವಚ್ಛ ಭಾರತ್ ಅಭಿಯಾನ್ ಮಾಡಿ ನಾವೆಲ್ಲರೂ ಆ ಸೆಸ್ ಕಟ್ಟಲು ಇರುತ್ತಿರಲಿಲ್ಲ. ಅಲ್ಲದೆ ಗಾಂಧಿ ಜಯಂತಿಯ ದಿನ ಎಲ್ಲರೂ ರಸ್ತೆಗೆ ಇಳಿದು ಪ್ಲಾಸ್ಟಿಕ್ ಬಾಟಲಿಗಳು, ಕುರ್ಕುರೆ ಲೇಸ್ ಗಳ ಪ್ಯಾಕೆಟ್ಗಳು, ಚಾಕಲೇಟಿನ ರ್ಯಾಪರ್ ಗಳು ಇವುಗಳನ್ನೆಲ್ಲ ಹೆಕ್ಕುವ ಕಾಲ ಬರುತ್ತಿರಲಿಲ್ಲ. ಅದು ಬಿಡಿ, ಭಾರತೀಯರು ಅನೇಕರು ವಯಸ್ಸಾದ ಬಳಿಕ ತಮ್ಮ ಹೆತ್ತ ತಾಯಿಯನ್ನೇ ತಮಗೆ ಭಾರ ಎಂದು ವೃದ್ಧಾಶ್ರಮಕ್ಕೆ ಅಟ್ಟಿ ಬರುವವರು. ಇನ್ನು ಹೊತ್ತ ಭೂಮಿ ತಾಯಿಯನ್ನು ಅದೆಷ್ಟು ನೋಡಿಯಾರು? ತಮ್ಮನ್ನು ಹೊತ್ತ ಭೂಮಿಯ ಮೇಲೆ ಯಾವ ಕಾಳಜಿಯೂ ಜನರಿಗೆ ಇದ್ದಂತೆ ತೋರುತ್ತಿಲ್ಲ. ಕಾರಣ ವಿಪರೀತ ಚಟುವಟಿಕೆ ಮಾಡುವ ಮೂಲಕ ನೀರು, ಗಾಳಿ, ಮಣ್ಣು, ಆರೋಗ್ಯ ಎಲ್ಲವನ್ನೂ ಕೆಡಿಸಿ ಮುಂದಿನ ಜನಾಂಗಕ್ಕೆ ಸ್ವಲ್ಪ ವಿಷರಹಿತ ಆಹಾರ ಉಳಿಸುವ ಕಾರ್ಯವನ್ನೂ ಮಾಡಿಲ್ಲ ನಾವು.  ವಿಪರೀತ ರಾಸಾಯನಿಕಗಳನ್ನು, ರಸಗೊಬ್ಬರ -ಕೀಟ ನಾಶಕ ರೂಪದಲ್ಲಿ ಮಣ್ಣಿಗೆ ಕೊಟ್ಟು, ಅದರ ನೈಸರ್ಗಿಕ ಶಕ್ತಿಯನ್ನು ಕುಗ್ಗಿಸಿ, ವಿಷ ಬೆರೆಸಿದ್ದೆ ಅಲ್ಲದೆ, ಇರುವ ಬೃಹತ್ ಮರಗಳನ್ನೂ ಕಡಿದು ಹಾಕಿ ಕಟ್ಟಡ, ಕಾರ್ಖಾನೆ, ಅಗಲಗಳ ರಸ್ತೆ ನಿರ್ಮಿಸುವ ನಮಗೆ ಗಾಂಧೀಜಿಯವರ ಗುಡಿ ಕೈಗಾರಿಕೆ, ಗೃಹ ಕೈಗಾರಿಕೆ, ಚರಕಗಳ ತಾಳ್ಮೆ ಇದೆಯೇ. ನಮಗೆ ಹೆಚ್ಚು ಉತ್ಪತ್ತಿ, ಹೆಚ್ಚು ಹೆಚ್ಚು ಲಾಭ ಬರಬೇಕು ಅಷ್ಟೇ. ಗಾಂಧೀಜಿ ಅವರ ಮೂಲ ಶಿಕ್ಷಣದ ಬಗ್ಗೆ ನಾವು ಗಮನಿಸದೆ, ಆಂಗ್ಲರ ಕಲಿಕಾ ಪದ್ದತಿ ಅನುಸರಿಸಿ ಪದವಿ ಪಡೆದವನಿಗೂ ಯಾವ ಕೆಲಸವನ್ನೂ ಮಾಡದ ರೀತಿ ತರಬೇತಿ ಕೊರತೆ ಆಗಿಲ್ಲವೇ? 

ವರ್ಷಕ್ಕೆ ಒಂದು ದಿನ ಗಾಂಧೀ ಜಯಂತಿ ಎಂದು ಬಾರ್ ಗಳನ್ನು ಮುಚ್ಚಿ, ಮೊದಲೇ ಶೇಖರಿಸಿ ಇಟ್ಟ ಬಾಟಲಿ ಹಿಡಿದುಕೊಂಡು ದೇವಾಲಯಗಳಿಗೆ ಪ್ರವಾಸ ಮಾಡಿ, ರಾತ್ರಿ ಅಲ್ಲಿನ ರೂಮುಗಳಲ್ಲೂ ಕುಡಿತದ ಕಾಯಕ ಮಾಡುತ್ತಾ ಅದನ್ನು ಬಿಟ್ಟಿರಿಲಾರದ ಮಟ್ಟಿಗೆ ಹೋಗಿದ್ದೇವೆ. ಹೀಗಿದ್ದು ಗಾಂಧೀ ಜಯಂತಿ ಆಚರಿಸಿದರೆ ಏನಾದರೂ ಪ್ರಯೋಜನ ಆದೀತೆ? ಗಾಂಧೀಜಿ ಅವರ ಆತ್ಮಕ್ಕೆ ಶಾಂತಿ ದೊರಕೀತೆ?

ಗಾಂಧೀಜಿ ಹುಟ್ಟಿದ ದಿನಾಂಕದಂದೇ ಶ್ರೀಯುತ ಲಾಲ್ ಬಹದೂರ್ ಶಾಸ್ತ್ರೀ ಅವರೂ ಜನಿಸಿರುವರು. ಭಾರತ ಕಂಡ ಮಹಾನ್ ಮುಖಂಡರಲ್ಲಿ ಇವರೂ ಒಬ್ಬರು. ಅವರ ತ್ಯಾಗ, ತಾಳ್ಮೆ, ದೂರ ದೃಷ್ಟಿಯ ಆಡಳಿತ, ರೈಲ್ವೆ ಮಂತ್ರಿಯಾಗಿ, ಪ್ರಧಾನಿಯಾಗಿ ನಿರ್ವಹಿಸಿದ ಸೇವೆ ಅನನ್ಯ. ಎರಡನೇ ಪ್ರಧಾನಿಯಾಗಿ, ಆರನೇ ಗೃಹ ಮಂತ್ರಿಯಾಗಿ, ರೈಲ್ವೆ ಮಂತ್ರಿಯಾಗಿ ಭಾರತದಲ್ಲಿ ಅವರ ದಿಟ್ಟ ನಿರ್ಧಾರ, ಪಾಕಿಸ್ತಾನದ ಯುದ್ಧಕ್ಕೆ ಉತ್ತರವಾಗಿ ಅವರು ಸೈನಿಕರಿಗೆ ಕೊಟ್ಟ ಸ್ವಾತಂತ್ರ್ಯ ಎಲ್ಲವೂ ಅತ್ಯದ್ಭುತ. 

ಇಂತಹ ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮ ದಿನವಾದ ಇಂದು ಅವರಿಗಿಂತ ಕಿರಿಯರಾದ ನಾಸ್ವು ಅವರ ಉತ್ತಮ ಗುಣಗಳನ್ನು ಪಾಲಿಸೋಣ. ನಮ್ಮ ಹುಟ್ಟುಹಬ್ಬವನ್ನು ನಮ್ಮ ಮುಂದಿನ ತಲೆಮಾರಿನ ಜನತೆ ಆಚರಿಸಬೇಕು ಹಾಗೆ ಬದುಕೋಣ. ಹಾಗೆಯೇ ನಾಳೆಯಿಂದ ಶಾಲಾ ಮಕ್ಕಳಿಗೆ ದಸರಾ ರಜೆ ಪ್ರಾರಂಭ. ತದ ನಂತರ ಪರೀಕ್ಷೆಗಳು. ಹಾಗಾಗಿ ಪರೀಕ್ಷೆಯನ್ನು ಬರೆಯಲು ಮಕ್ಕಳಿಗೆ ತಯಾರಿ ಮಾಡಿಸೋಣ. ಅವರನ್ನು ಮಕ್ಕಳಾಗಿ ಆಟವಾಡಿ ಅವರಷ್ಟಕ್ಕೆ ಸ್ವಲ್ಪ ಬಿಟ್ಟು ಬಿಡೋಣ. ಅವರೂ ಸಂತಸ ಪಡಲಿ. ಕಾರಣ ಭಾರತದ ಮುಂದಿನ ನಾಯಕರು ಅವರಿಯಲ್ಲವೇ? ಗಾಂಧಿ ಶಾಸ್ತ್ರೀ ಜೀ ಅವರಂತಹ ಮಹಾನ್ ನಾಯಕರ ಗುಣಗಳು ನಮ್ಮ ಮಕ್ಕಳಲ್ಲೂ ಬರಲಿ ಅಲ್ಲವೇ?
@ಹನಿಬಿ0ದು@
02.10.2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -151

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -151

ಮಾತು ಬೆಳ್ಳಿ ಮೌನ ಬಂಗಾರ ಎಲ್ಲರೂ ತಿಳಿದಿರುವ ಗಾದೆ. ಇಂತಹ ಹೆಚ್ಚಿನ ಗಾದೆಗಳು ಈಗಿನ ಕಾಲಘಟ್ಟಕ್ಕೆ ಅನ್ವಯಿಸುವುದಿಲ್ಲ ಎಂದಾದರೆ ಅವುಗಳ ಸಾಲಲ್ಲಿ ಈ ಗಾದೆಯೂ ಸೇರಬೇಕು ಅಲ್ಲವೇ? ಇಂದು ಮಾತನಾಡದೆ ಮೌನವಾಗಿ ಕುಳಿತವನನ್ನು ಜನ ಏನು ಬೇಕಾದರೂ ಮಾಡಿಯಾರು..ಇಂದಿನ ಗಾದೆ ಮಾತು ಬಲ್ಲವನಿಗೆ ಜಗಳವಿಲ್ಲ, ಬದುಕಬಲ್ಲ! "ಅಯ್ಯೋ..ಅವರು ಬಾರಿ ಒಳ್ಳೆ ಜನ, ಎಲ್ಲಿ ನೋಡಿದರೂ ಮಾತನಾಡದೆ ಹೋಗುವುದಿಲ್ಲ .." ಎನ್ನುವುದಿಲ್ಲವೇ? ಹಾಗೆಯೇ ನೀವು ಬಾಯಿ ಮುಚ್ಚಿಕೊಂಡೆ ಇದ್ದರೆ ನಿಮ್ಮ ಅನುಭವಗಳು, ಮಾತಿನ ವೈಖರಿ, ನಿಮ್ಮ ನೋವು ನಲಿವುಗಳು, ಆಲೋಚನೆಗಳು ಪರರಿಗೆ ತಿಳಿಯುವುದು ಹೇಗೆ? ಪ್ರಾಣಿಗಳು, ಮರ ಹುಟ್ಟಿ, ಮರವಿದ್ದು ಮರ ಸತ್ತ ಹಾಗೆ. ಅದು ಕೆಟ್ಟದೇನೂ ಅಲ್ಲ ಬಿಡಿ, ಆದರೆ ಭೂಮಿಗೆ ಬಂದ ಮೇಲೆ ನಮ್ಮ ಅಸ್ತಿತ್ವದ ಛಾಪನ್ನು  ಉಳಿಸಿ ಹೋಗಬೇಕಲ್ಲ!

ನಾವು ಎಷ್ಟು ಪದವಿಗಳನ್ನು ಪಡೆದಿದ್ದೇವೆ, ಎಷ್ಟು ಜನ ಫಾಲೋವರ್ಸ್ ಗಳನ್ನು ಹೊಂದಿದ್ದೇವೆ ಎನ್ನುವುದಕ್ಕಿಂತಲೂ ನಮ್ಮ ಮಾತು ಎಷ್ಟು ಜನರಿಗೆ ಖುಷಿ ಕೊಡುತ್ತದೆ, ನಮ್ಮ ಮೌನ ಅದೆಷ್ಟು ಜನರಲ್ಲಿ ಬೇಸರ  ಮೂಡಿಸುತ್ತದೆ ಎಂಬುದು ಮುಖ್ಯ ಅಲ್ಲವೇ? ಮೂರು ದಿನದ ಬದುಕಲ್ಲಿ ನಮ್ಮ ಮಾತು ನೂರು ಮನಗಳಲ್ಲಿ ನಗು ಅದಕ್ಕಿಂತ ಬದುಕಿನ ಸಾರ್ಥಕತೆಗೆ ಅದಕ್ಕಿಂತ ಹೆಚ್ಚು ಇನ್ನೇನು ಬೇಕು ಅಲ್ಲವೇ? ಸಾಧ್ಯವಾದರೆ ಸಹಾಯ, ಇಲ್ಲದೆ ಹೋದರೆ ಮೌನ. ಬೆಸ್ಟ್ ಅಲ್ಲವೇ?

ಬದುಕು ನಾವು ಅಂದುಕೊಂಡ ಹಾಗೆ ಇರುವುದಿಲ್ಲ. ಯಾರ ಸಮಯ ಹೇಗೆ ಬರುವುದು ಎಂದು ಯಾರೂ ಹೇಳಲು ಸಾಧ್ಯವೇ ಇಲ್ಲ. ಕಚ್ಚಾ ಬಾದಾಮ್ ಹಾಡುಗಾರನ ಹಾಗೆ ಒಮ್ಮೆ ಜೀಕುಯ್ಯಾಲೆಯಲ್ಲಿ ನಿಮ್ಮ ಒಳ್ಳೆಯ ಗುಣ, ಹವ್ಯಾಸ ನಿಮ್ಮನ್ನು ಮೇಲಕ್ಕೆ ಎತ್ತಲೂ ಬಹುದು, ಗಾಳಿಪಟದಂತೆ ನೀವು ಗಾಳಿಯಲ್ಲಿ ಹಾರಲೂ ಬಹುದು. ಮತ್ತೊಮ್ಮೆ ನೂಲು ತುಂಡಾದ ಗಾಳಿಪಟ ನೆಲಕ್ಕೆ ಉದುರಿದ ಹಾಗೆ ಬೀಳಲೂ ಬಹುದು, ಅದೃಷ್ಟ ಚೆನ್ನಾಗಿ ಇದ್ದರೆ ಕೆಳಗೆ ಬೀಳದೆ ಮರದ ಮೇಲೆ ನೇತಾಡಿಕೊಂಡು ಇರಬಹುದು. 

ಮೌನಕ್ಕೆ ಶರಣಾದವ ಎಲ್ಲಿ ಹೇಗೆ ಇರುತ್ತಾನೆ ಎಂದು ಗೊತ್ತೆ ಆಗುವುದಿಲ್ಲ.  ಅತಿ ನೋವು, ಅತಿ ಬೇಸರವೂ ಮೌನಕ್ಕೆ ಕಾರಣ ಆಗ ಬಲ್ಲದು. ನಾವು ನೋಡುವ ನಗು ಮುಖಗಳ ಹಿಂದೆ ದೊಡ್ಡದಾದ ನೋವಿರಬಹುದು. ನಾವು ಅಂದುಕೊಂಡ ಹಾಗಿಲ್ಲ ಯಾರ ಬದುಕೂ ಕೂಡಾ. ಸದಾ ಏನೂ ಮಾಡದೆ ಇರುವವರನ್ನು ಸೋಮಾರಿಗಳು ಎನ್ನುತ್ತೇವೆ. ಆ ಸೋಮಾರಿತನಕ್ಕೂ ಕಾರಣ ಇಲ್ಲವೇ? ಮಾನಸಿಕ, ದೈಹಿಕ, ಆರ್ಥಿಕ, ಸಾಮಾಜಿಕ ತೊಂದರೆಗಳು ಮಾನವನ ಬೇಕು ಬೇಡಗಳನ್ನು ಸರಿಯಾಗಿ ತೂಗಿಸಲು ಸಾಧ್ಯ ಆಗದೆ ಜನ ಕೆಟ್ಟ ಅಥವಾ ಒಳ್ಳೆಯ ಅಥವಾ ಅಸಾಧಾರಣ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಆಗ ಮೌನವೂ ಗೆಳೆಯನಾಗಿ ಬಿಡುತ್ತದೆ.

 ಕೆಲವರು ಮಾತಲ್ಲಿ ಮೌನವಾಗಿ ಇದ್ದರೂ ಕೂಡಾ ಕೆಲಸದಲ್ಲಿ, ಬರವಣಿಗೆಯಲ್ಲಿ ತಮ್ಮ ಶಕ್ತಿಯನ್ನು ತೋರುತ್ತಾರೆ, ಇನ್ನು ಕೆಲವರು ತೋರಿಕೆಗಾಗಿ ಬದುಕುತ್ತಾರೆ. ಒಟ್ಟಿನಲ್ಲಿ ಬದುಕಿನ ಘಟನೆಗಳು ಮಾನವನಿಗೆ ಎಲ್ಲವನ್ನೂ ಕಲಿಸುತ್ತವೆ. ಹಾಗಾಗಿ ವಯಸ್ಸು ಹೆಚ್ಚಾದಷ್ಟು ಅನುಭವ ಹೆಚ್ಚು. ಮಾತು ಆಡಬೇಕೋ ಬೇಡವೋ ಎಂಬ ತಿಳುವಳಿಕೆ ಬರುತ್ತದೆ. ಚಿಲ್ಲರೆ ಸದ್ದು ಮಾಡುತ್ತದೆ,  ನೋಟಲ್ಲ. ಹೀಗೂ ಒಂದು ಮಾತಿದೆ, ಅಂದರೆ ಹೆಚ್ಚಿನ ವಿಷಯ ತಿಳಿದುಕೊಂಡವ ಮೌನಕ್ಕೆ ಶರಣಾಗುವನು. ಹೆಚ್ಚು ತಿಳುವಳಿಕೆ ಉಳ್ಳವ ಇನ್ನೂ ಹೆಚ್ಚು ಕೇಳುಗನಾಗುವನು. 
ನಮಗೆ ಅನ್ನಿಸಿದ್ದನ್ನೆಲ್ಲಾ ಹೇಳಲು ಅವಕಾಶ ಇದ್ದಿದ್ದರೆ, ಪ್ರತಿಯೊಬ್ಬರೂ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ತಿಳಿದಿದ್ದರೆ ಮೌನಕ್ಕೆ ಎಲ್ಲಿ ಬೆಲೆ ಇರುತ್ತಿತ್ತು? ಮೌನ ಬಂಗಾರ ಎಲ್ಲಿ ಆಗುತ್ತಿತ್ತು? ಹಾಗಂತ ಮೌನ ಬಂಗಾರವೇ ಆದರೂ ಪ್ರಪಂಚ ಮಾತಿನಲ್ಲೇ ನಡೆಯುತ್ತಿದೆ. ಸಂಜೆ ಐದರ ಬಳಿಕ ಯಾರ ಫೋನಿಗೆ ಕರೆ ಮಾಡಿದರೂ, "ನೀವು ಕರೆಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ.." ಅಲ್ಲವೇ? ಹಾಗಾದರೆ ಬೆಳ್ಳಿ ಅಂತ ಮಾತು ಬಿಟ್ಟಿದ್ದೇವೆಯೇ ನಾವು? 

ಮಾತು ಮಾನವನ ಗುಣ. ಮಾತು ಬಾರದ ಪ್ರಾಣಿಗಳೂ ಕೂಡಾ ಶಬ್ದಗಳಿಂದ ಸಾಧ್ಯವಾಗದ ಅದೆಷ್ಟೋ ಭಾವನೆಗಳನ್ನು ಆರಚುವುದು, ಕಿರುಚುವುದು, ಚೀರುವುದು, ಬೊಗಳುವುದರ ಮೂಲಕ ನಮಗೆ ತಿಳಿಯ ಪಡಿಸುತ್ತವೆ. ತಮ್ಮ ವಿಚಾರಗಳನ್ನು ದೇಹದ ಅಂಗಾಂಗಗಳನ್ನು ಅಲ್ಲಾಡಿಸುವ ಮೂಲಕವಾದರೂ ಹೇಳುತ್ತವೆ. ಅಕ್ಷರ ಅಕ್ಷರಗಳನ್ನು ಪೋಣಿಸಿ ಶಬ್ದ, ಶಬ್ದಗಳ ಆಗರ ವಾಕ್ಯ ಮಾಡುವ ಮನುಷ್ಯ ತಾನು ತನ್ನ ಮನದ ಭಾವನೆಗಳನ್ನು ಪ್ರಕಟಿಸದೇ ಇದ್ದಾಗ ನಾವು ಇದ್ದೂ ಇಲ್ಲದವರ ಹಾಗೆ ಆಗಿ ಬಿಡುತ್ತೇವೆ.

ಸ್ವಲ್ಪ ಮಾತಿರಲಿ. ಅದು ಸಮಯಕ್ಕೆ ತಕ್ಕ ಹಾಗಿರಲಿ. ಮೌನವೂ ಇರಲಿ ಆದರೆ ಆ ಮೌನ ಹಾಗೂ ಮಾತಿನಿಂದ ಇತರರ ಮನ ನೋಯದೆ ಇರಲಿ. ಬದುಕಿಗೆ ಸಹಾಯಕ ಆಗುವಲ್ಲಿ ಮೌನ ಮತ್ತು ಮಾತಿಗೆ ಸ್ಥಳ ಖಂಡಿತಾ ಇರಲಿ. ಮಾತು ಮನೆ ಕೆಡಿಸದೆ ಇರಲಿ, ಮೌನಕ್ಕೆ ಇರುವ  ಬಂಗಾರದ ಬೆಲೆ ಕಡಿಮೆ ಆಗದೆ ಇರಲಿ. ನೀವೇನಂತೀರಿ?
@ಹನಿಬಿಂದು@
22.09.2022


I Feel

ɪ ꜰᴇᴇʟ ᴍᴀɴy ᴛɪᴍᴇ 
ᴛʜᴀᴛ ᴡʜy ᴅᴏɴ'ᴛ yᴏᴜ
ᴀʀᴇ ɴᴇᴀʀ ᴛᴏ ᴍᴇ?
ᴡʜy ᴄᴀɴᴛ yᴏᴜ ᴡʜɪꜱᴩᴇʀ
ɴᴏᴡ ɪɴ ᴍy ᴇᴀʀꜱ? 

ᴡʜy ᴄᴀɴᴛ ɪ ʜᴏʟᴅ
 yᴏᴜʀ ʜᴀɴᴅꜱ ꜱᴏꜰᴛʟy?
ᴡʜy ᴅᴏɴ'ᴛ yᴏᴜ ᴋɪꜱꜱ
ᴏɴ ᴍy ꜱᴡᴇᴇᴛ ʟɪᴩꜱ?

ᴡʜy ᴄᴀɴ'ᴛ yᴏᴜ ᴊᴜᴍᴩ
ᴀɴᴅ ᴄᴏᴍᴇ ᴏᴜᴛ ᴏꜰ
ᴍy ʜᴇᴀʀᴛ ɴᴏᴡ ɪᴛꜱᴇʟꜰ?
ᴡʜy ᴄᴀɴᴛ ꜱɪᴛ ᴛᴏɢᴇᴛʜᴇʀ
ᴀɴᴅ ꜱʜᴀʀᴇ ᴏᴜʀ ꜰᴇᴇʟɪɴɢꜱ?

ᴡʜy ᴄᴀɴᴛ ᴡᴇ ᴇɴᴊᴏy ɪɴ 
ʀᴜɴɴɪɴɢ ᴡᴀᴛᴇʀ ᴛᴏɢᴇᴛʜᴇʀ?
ᴡʜy ᴅᴏɴ'ᴛ yᴏᴜ ʜᴏʟᴅ ᴍy ᴍɪɴᴅ
ᴜɴ yᴏᴜʀ ᴀʀᴍꜱ ꜱᴡɪꜰᴛʟy?
@ᴩʀᴇᴍ@
16.09.2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -150

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -150

ಇಂದು ಸಂಭವಿಸುತ್ತಿರುವ ಎಲ್ಲಾ ಪ್ರಾಕೃತಿಕ ವಿಕೋಪಗಳು ಮಾನವನ ಕೊಡುಗೆಯೇ? ಮಾನವನಿಂದಾಗಿಯೇ ಎಲ್ಲಾ ಪ್ರಾಣಿ ಪಕ್ಷಿ, ಹುಳ ಹುಪ್ಪಟೆ ಕೀಟ ಜನತುಗಳಿಗೆ ತೊಂದರೆ ಆಗುತ್ತಿದೆ. ಅವುಗಳು ತಾಳಿಕೊಳ್ಳಲು ಆಗದ ಮಟ್ಟಕ್ಕೆ ಪ್ರಕೃತಿಯನ್ನು ಬದಲಾಯಿಸಿ ಬಿಟ್ಟಿದ್ದಾನೆ ಮಾನವ. ಕೆಲವೊಂದು ಪ್ರಾಣಿ, ಪಕ್ಷಿಗಳು ಈ ಭೂಮಿಯ ಮೇಲೆ ಬದುಕಲು ಸಾಧ್ಯವೇ ಇಲ್ಲ. ಜಲ ಮಾಲಿನ್ಯದಲ್ಲಿ ನಿತ್ಯ ನೀರಿನಲ್ಲಿ ಸಾಯುತ್ತಿರುವ ಜಲಜೀವಿಗಳ ಸಂಖ್ಯೆ ಲೆಖ್ಖಕ್ಕೇ ಸಿಗದು. 

ಮಾನವ ತನಗೆ ತಾನೇ ಹೇಳಿಕೊಳ್ಳುವ ಮಾತೆಂದರೆ ತಾನು ಉನ್ನತ ಮಟ್ಟದ, ಬುದ್ಧಿ ಇರುವ ಪ್ರಾಣಿ ಎಂದು. ಆದರೆ ಮಾಡುವ ಕಾರ್ಯ ಮಾತ್ರ ಯಾವ ಪ್ರಾಣಿಯೂ ಮಾಡದ, ಪರ ಪ್ರಾಣಿಗಳಿಗೆ ನೋವು ಕೊಡುವ, ಸಾಯಿಸುವ ಕಾರ್ಯ. ಇಂತಹ ಹಲವಾರು ಘಟನೆಗಳಿಗೆ ಮಾನವನ ಕೀಳು ಮಟ್ಟದ ಕೆಲಸಗಳೇ ಕಾರಣ. ಇವು ಪ್ರಕೃತಿ ವಿಕೋಪವನ್ನೂ ತರುತ್ತವೆ. 

ಎಲ್ಲಾ ಪ್ರಾಣಿಗಳೂ ಆಹಾರ, ನಿದ್ದೆ, ಸಂತಾನೋತ್ಪತ್ತಿ ಮತ್ತು ಬದುಕಲು ಹೋರಾಡುತ್ತವೆ, ಸಿಟ್ಟಿಗೆ ಒಳಗಾಗುತ್ತವೆ, ಕಚ್ಚುತ್ತವೆ, ಹೆದರಿಸುತ್ತವೆ, ಓಡಿಸುತ್ತವೆ. ಆದರೆ ಮಾನವನ ಹೋರಾಟವೇ ಬೇರೆ. ನ್ಯಾಯಕ್ಕಾಗಿ, ಹಣಕ್ಕಾಗಿ, ಹೆಣ್ಣಿಗಾಗಿ, ಹಲವಾರು ತಲೆಮಾರುಗಳ ವರೆಗೆ ಕುಳಿತು ತಿನ್ನುವ ಆಸ್ತಿಗಾಗಿ, ಶೋಕಿಗಾಗಿ! ಕಷ್ಟ ಪಟ್ಟರೆ ತಾನೆ ದುಃಖದ ಬೆಲೆ ಗೊತ್ತಾಗುವುದು? ಈಗಿನ ಕಾಲದ ಯುವಕರ ಮನಸ್ಥಿತಿ ಹೇಗಿದೆ ಎಂದರೆ ಯಾರಾದರೂ ನೆಂಟರ, ಗೆಳೆಯರ, ಬಂಧುಗಳ ಮನೆಗೆ ಹೋಗುವಾಗ ಅಲ್ಲಿನ ಮಕ್ಕಳಿಗೆ, ಹಿರಿಯರಿಗೆ ಒಂಚೂರು ತಿಂಡಿ ತೆಗೆದುಕೊಂಡು ಹೋಗುವ ಪರಿಪಾಠವೂ ಅವರಿಗೆ ಇಲ್ಲ. ಇದನ್ನು ಅತಿಯಾದ ಮುದ್ದಿನಿಂದ ಪೋಷಕರು ಅವರಲ್ಲಿ ಬೆಳೆಸಿಲ್ಲವೋ, ಮನೆ, ಕಚೇರಿ ಇಷ್ಟೇ ಪ್ರಪಂಚವೋ, ತಾನಿರುವ ಮನೆಗೆ ಏನಾದರೂ ತೆಗೆದುಕೊಂಡು ಹೋದರೆ ಏನೇನ್ನೂವರೋ ಎಂಬ ಭಯವೋ ಗೊತ್ತಾಗದು! ಹೊರಗಿನ, ಬೇಕರಿ ತಿಂಡಿ ತಿಂದರೆ ಆರೋಗ್ಯ ಹಾಳಾಗುತ್ತದೆ, ಹಾಗಾಗಿ ಹೊರಗೆ ಚಾಟ್ಸ್, ಚೈನೀಸ್ ಫುಡ್ ತಿನ್ನುವ ನಮ್ಮ 

ಮಕ್ಕಳಿರುವಾಗ ತಿಂಡಿ, ಮಹಿಳೆಯರು ಇರುವಾಗ ಬಟ್ಟೆ, ಪಾತ್ರೆ, ಮೇಕ್ ಅಪ್ ಐಟಂ ಇವೆಲ್ಲ ನಾವು ಹೋದ ಮನೆಗೆ ತೆಗೆದುಕೊಂಡು ಹೋಗುವುದು ಸರ್ವೇ ಸಾಮಾನ್ಯ.ಆದರೆ ಈಗಿನ ಜನರೇಷನ್ ತೀರಾ ವಿರುದ್ಧ. ಹೆಚ್ಚು ತಿನ್ನಲ್ಲ. ಬ್ರೆಡ್, ಬನ್ ಅವರಿಷ್ಟದ ಊಟ. ಎರಡು ಸಣ್ಣ ಚಪಾತಿ, ಎರಡೇ ಇಡ್ಲಿ. ಹೀಗೆ..ಆದರೆ ಹೊಟ್ಟೆ ತುಂಬ ತಿಂದು ಬೆಳೆದವರು ನಾವು. ನಮಗೆ ಹಸಿವು ತಡೆಯಲು ನಮ್ಮ ಈ ಜೆನರೇಷನ್ ಗ್ಯಾಪ್ . ಎಲ್ಲರ ಬದುಕಲ್ಲೂ ಇದೆ. ಅಮ್ಮ ಒಳ್ಳೆಯ ಮಹಿಳೆ, ಮುಗ್ದೆ. ಮಗನಿಗೆ ಪ್ರತಿಯೊಂದು ವಿಷಯವನ್ನೂ ತಿಳಿ ಹೇಳಿ ಹೇಳಿ ಸಾಕಾಗಿ ಹೋಗುತ್ತದೆ. ಆದರೆ ಅಮ್ಮ ಅಲ್ವಾ..ಹೇಗೋ ಬೈದು ಹೇಳಿ ಸಹಿಸಿಕೊಳ್ಳುತ್ತಾನೆ. "ಇವರ ಗುಣವೇ ಹೀಗೆ, ಏನೂ ಮಾಡಲು ಆಗದು " ಅಂದುಕೊಳ್ಳುತ್ತಾನೆ. 

ನಮ್ಮ ಪಕ್ಕದ ಮನೆಯ ಸಂತು ಅಂತೂ ಇಂಜಿನಿಯರಿಂಗ್ ಆದ ಕೂಡಲೇ ಅಮ್ಮನಿಗೆ ಹೇಳಿದ್ದ, "ನಾನು ಮದುವೆ ಆದರೆ ನನ್ನ ಮಡದಿಯನ್ನು ಕರೆತಂದು ನಿನ್ನ ಜೊತೆಗೆ ಬಿಡಲಾರೆ. ಅದಕ್ಕೆ ನನಗೊಂದು ಮನೆ ಬೇಕು. ನೀನು ಅಮ್ಮ, ಅವಳು ನಂಬಿ ಬಂದ ಹೆಂಡತಿ. ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬಂದರೆ ನಾ ಒಂದೇ ಕಡೆ ತಿರುಗಲು ಕಷ್ಟ. ನೀವಿಬ್ಬರೂ ಕಿತ್ತಾಡಿಕೊಂಡರೆ  ಮಧ್ಯೆ ನಾನು ಯಾರ ಕಡೆ ಮಾತಾಡಲಿ? ಅದಕ್ಕೆ ನಾ ತಿಂಗಳಿಗೊಮ್ಮೆ ನೆಂಟರ ತರಹ ಬಂದು ಹೋಗುವೆ " ದೂರಾಲೋಚನೆ. ಇದೆ ಅಲ್ಲವೇ ಜನರೇಷನ್ ಗ್ಯಾಪ್! ತಾಯಿಗಾಗಿ, ತಂದೆಗಾಗಿ ಮಡದಿಯನ್ನು ಬಿಟ್ಟವರು ಅನೇಕ ಮಂದಿ. ಮಡದಿಗಾಗಿ, ಗಂಡನಿಗಾಗಿ ಹೆತ್ತವರನ್ನು ತೊರೆಯುವವರೂ ಕೆಲವರು. 

ಕಾಲ ಬದಲಾಗದು. ಜನರ ಮನಸ್ಸಿನ ಭಾವನೆಗಳು ಬದಲಾಗಿವೆ. ಬಸ್ಸಿನ ಬದಲು ಕಾರುಗಳು ಬಂದು ಮನಸ್ಸುಗಳೂ ಸಣ್ಣದಾಗಿವೆ. ಪರರ ಜೊತೆ ಹೊಂದಾಣಿಕೆ ಮಾಡಿಕೊಂಡು ಬಾಳುವ ಗುಣ ಈಗಿಲ್ಲ.  ನಾನು, ನನ್ನ ಮಕ್ಕಳು, ನನ್ನ ಕುಟುಂಬ ಅಷ್ಟೇ. ಅಕ್ಕ ತಂಗಿಯರಿಗೆ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತದೆ ಎಂದು ಅವರನ್ನು ಬಡಿಗೆಯಲ್ಲಿ ಬಡಿದು ಅವರ ಕಾಲು ಮುರಿದು ತವರು ಮನೆಗೆ ಅವರು ಬಾರದ ಹಾಗೆ ಕಾರ್ಯ ಅಣ್ಣ ಅತ್ತಿಗೆಯರು ಇರುವ ಈ ಕಾಲ. ಇನ್ನು ಪರಿಸರ ಬಿಟ್ಟಾರೆಯೇ. ತಾವು ಉಗಿಯಲು, ತಿಂದು ಬೇಡದ್ದ ಬಿಸಾಕಲು, ಪ್ಲಾಸ್ಟಿಕ್ ಬಾಟಲಿಗಳ ಎಸೆಯಲು ಭೂಮಿ. ಮತ್ತೆ ಅದನ್ನು ದುಡ್ಡು ಕೊಟ್ಟು ಕೊಳ್ಳುವುದು, ಮಾರುವುದು . ಭೂುಮಿ ತಾಯಿ ನೋವುಂಡ ಹಡೆದವ್ವನಂತೆ. ಅವಳಿಗೆ ಮತ್ತೂ ಮಕ್ಕಳಿಂದ ನೋವೇ. 
ಇನ್ನು ಇದನ್ನು ಸರಿ ಮಾಡುವವರು ಯಾರು? ಬುದ್ದಿವಂತ ಮಾನವನೇ ಮಾಡಿದ ದುಷ್ಟ ಕಾರ್ಯಕ್ಕೆ ಪರರು ಸರಿ ಮಾಡಲುಂಟೆ? ಅಲ್ಲವೇ? ನೀವೇನಂತೀರಿ?
@ಹನಿಬಿಂದು@
17.09.2022 

ಕವನ -ಕೊಂದು ಹಾಕಿದರು

ಕೊಂದು ಹಾಕಿದರು

ಹೆಮ್ಮರವನು ಕೊಂದು ಹಾಕಿದರು
ಇಂದಿಲ್ಲಿ ಸಮಾಜದ ನಡುವೆ
ಬಿರು ಬಿಸಿಲಿನಲ್ಲಿ, ಸರ್ವರ ಸಮ್ಮುಖದಲ್ಲಿ!
ಯಾರೊಬ್ಬರೂ ತಡೆಯಲಿಲ್ಲ ನನ್ನ ಸಾವನಿಲ್ಲಿ!

ನಾ ಹೆಮ್ಮರವಾಗಿ ಬೆಳೆದಿದ್ದೆ
ಅಗಲ, ಎತ್ತರ ದಷ್ಟಪುಷ್ಟ
ದೇಹದಲ್ಲಿ ಮಾತ್ರವಲ್ಲ, ಮನಸ್ಸಿನಲ್ಲೂ..

ಯಾರಿಗೂ ಕೇಡು ಬಯಸದೆ
ಓದಿ ಬರೆಯುತ್ತಾ, ಲೆಕ್ಕ ಮಾಡುತ್ತಾ
ವಯಸ್ಸನ್ನು ಎನಿಸುತ್ತಾ, ನೆರಳು ಕೊಡುತ್ತಾ..
ಕಿರಿಯರ ಆಶೀರ್ವಾದಿಸುತ್ತಾ, ಹಿರಿಯರ ನೆನೆಯುತ್ತಾ

ನನ್ನಷ್ಟಕ್ಕೆ ನಾನೇ ಬದುಕುತ್ತಿದ್ದೆ
ಹಲ್ಲಿಲ್ಲದಿದ್ದರೂ ನಗುತ್ತಿದ್ದೆ
ಜ್ಞಾನದ ಅಮೃತ ಉಣಬಡಿಸುತ್ತಿದ್ದೆ
ತಾಂತ್ರಿಕ ಯುಗ ಬಂತು ನೋಡಿ!

ಬರೆಯಲು, ಓದಲು ಯಂತ್ರಗಳೇ
ನಮ್ಮ ಮೆದುಳಿನ ಶಕ್ತಿಗೆ ಬೆಲೆ ಇಲ್ಲ
ಸಾವಿರ ಮೆದುಳು ಒಂದೇ ಯಂತ್ರದಲ್ಲಿ ಇದೆಯಂತೆ
ಇನ್ನು ನಾನು ನೀವು ಯಾಕೆ ಬೇಕು?

ರಸ್ತೆ ಅಗಲಿಸ ಬೇಕಂತೆ
ಚತುಷ್ಪಥ, ಅಷ್ಟಪಥ ಬೇಕು
ಅವರು ಮುಂದುವರೆಯಬೇಕಂತೆ ಜನರಿಗೆ!
ನಾ ಹಿರಿಯ, ಎಂದು ಬೀಳುವೇನೋ ಎಂಬ ಭಯ ಅವರಿಗೆ!

ಅಷ್ಟೇ ಅಲ್ಲ, ನನ್ನ ಎಲೆಗಳು!
ಹಿಂದೆ ಗೊಬ್ಬರವಾಗುತ್ತಿದ್ದವು
ಈಗ ಕಸ! ಗುಡಿಸಲು ಕೆಲಸದವರಿಲ್ಲ!
ಸಮಯವೂ ಇಲ್ಲ, ಮನೆ ಪರಿಶುದ್ಧ!
ಮನವೋ! ಅದರ ವಿರುದ್ಧ!

ಜೆಸಿಬಿ ಇಟಾಚಿ ಕ್ರೇನ್ ಎಲ್ಲಾ ಬಂತು
ಜನರೂ ಬಂದರು!
ಕತ್ತಿ, ಕೊಡಲಿ, ಗರಗಸ, ಯಂತ್ರಗಳು
ಅದೆಷ್ಟು ಜನ! ಸಂತಸ ಮೊಗದಿ
ಈಗಿನ ರಾಕ್ಷಸರು!
ಇಷ್ಟು ವರ್ಷ ನೆರಳು ವಿದ್ಯೆ ಕೊಟ್ಟು
ಬಾಳಿ ಬದುಕಿದ, ಬದುಕಿಸಿದ ಹಿರಿಜೀವ
ಈಗ ಕಸ, ವೇಸ್ಟ್, ಡೇಂಜರ್, ಕಿಲ್ಲರ್!
ಅಬ್ಬಾ ! ಈ ಪದಗಳು ನನಗೆ!
ನಾ ದುಡಿದು ಉತ್ತಮ ಗಾಳಿ, ನೀರು, ನೆರಳು, ಮಳೆ, ಹಣ್ಣು, ಹೂವು, ಕಾಯಿ, ಕೊಟ್ಟದ್ದನ್ನು ತಿಂದು
ನನ್ನಾಸರೆಯಲ್ಲಿ ಬೆಳೆದ ಕಿರಿಯರ
ಬೃಹತ್ ಹೆಸರುಗಳು ನನಗೆ! 

ನಾ ಸಾಯುತ್ತಿಲ್ಲ, ನನಗೆ ಸಾವು ಬೇಕಿಲ್ಲ
ಆದರೆ ಸಾಯಿಸುತ್ತಾ, ಕೊಲ್ಲುತ್ತಾ ಇದ್ದಾರೆ ನನ್ನ!
ನನ್ನ ಕೊಲ್ಲಲು ಅದೆಷ್ಟು ಜನ!
ಅದೆಷ್ಟು ಯೋಜನೆಗಳು!

ಇಂಗು ತುಂಬಿಸುತ್ತಾರಂತೆ ದೇಹದ ಒಳಗೆ
ಖರ್ಚಿನ ಬಗ್ಗೆ ಲೆಕ್ಕಾಚಾರ ಹೊರಗೆ!
ಆಸ್ಪತ್ರೆ, ಮದ್ದು, ಕಷಾಯ ಬೇಕಿಲ್ಲ ನನಗೆ
ಸಾಕುವವರೂ ಬೇಡ, ಜಾಗವಿದೆಯಲ್ಲ ಸ್ವಂತ!
ನನ್ನ ದೇಹವ ಮಾರಿದ ಹಣ ಬೇಕು ಅವರಿಗೆ!
ಬದುಕು ಈಗ ವ್ಯವಹಾರ, ಕಾಸೇ ಮುಖ್ಯ!

ಕಳೆದ ಹಗಲೆಷ್ಟೋ, ಇರುಳೆಷ್ಟೋ
ನಾ ನೆರಳಿತ್ತು  ಕೈ ಹಿಡಿದು ಸಲಹಿದ ಜನರೆಷ್ಟೋ
ನಡೆದ ಹಾದಿ ಎನಿತು ದೂರವೋ?
ಅದ್ಯಾವುದೂ ಪರಿವೆಯೇ ಇಲ್ಲ ಇಂದು
ಜ್ಞಾನ ಸಂಘ, ಪರಿವಾರ, ಯಂತ್ರಗಳ ಎದುರು ಲೆಕ್ಕಕ್ಕಿದ್ದರೆ ತಾನೇ!

ನಾ ಹಿರಿಯ ಎಂಬುದಕ್ಕೆ ಬೆಲೆ ಇಲ್ಲ
ನನ್ನ ಜ್ಞಾನಕ್ಕೂ ಬೆಲೆ ಇಲ್ಲ
ಬದುಕಿನ ಪಾಠಕ್ಕೂ ಬೆಲೆಯೇ ಇಲ್ಲ
ಕಲಿತ ವಿದ್ಯೆಗೂ ಒಲವಿಲ್ಲ
ವಯಸ್ಸು, ಓದು, ಊಹೂಹ್ಜ಼ೂ..
ನಾ ಕಾಡು ಬಿದ್ದು, ಬಿದ್ದು ಹೋಗುವ, ಮುದಿ ಜೀವ

ಇಂಗು ತುಂಬಿಸ ಬೇಕಂತೆ ನನ್ನೊಳಗೆ!
ಗರಗಸದ ಹರಿತ ಸಾಲದಂತೆ ನನಗೆ!
ಕೊಡಲಿ ಚಿಕ್ಕದಾಯಿತಂತೆ! 
ಮುರಿದ ಕೊಂಬೆಗಳಿಂದ ದನ, ಜನ, ಮನೆಗೆ ಹಾನಿಯಂತೆ!
ಅದಕ್ಕೆ ನನ್ನ ನಿಧಾನವಾಗಿ ಯಂತ್ರಗಳಿಂದ ಸಾಯಿಸಬೇಕಂತೆ!

ನನ್ನ ಯಾತನೆ! ನನ್ನ ನೋವು! 
ಯಾರಿಗೆ ಬೇಕಿದೆ ಅದು?
ಯಾಕಾಗಿ ಬೇಕಿದೆ! ನನ್ನ ಮಾರುವವ ಒಬ್ಬ, ಕತ್ತರಿಸುವವ ನಿತ್ಯ ಹೊಟ್ಟೆ ಪಾಡಿಗಾಗಿ ದುಡಿವ ಕೂಲಿ ಕೆಲಸದವ! 
ಹಣ ಮಾಡುವವ ಮಧ್ಯವರ್ತಿ
ಆಜ್ಞೆ ಮಾಡಿದವ ಇನ್ನೊಬ್ಬ!

ಯಾರನ್ನು ದೂರಲಿ ನಾನು?
ಮರ ಕಡಿಸಬೇಕು ಎಂದವನನ್ನೇ?
ಮರ ಹಳತಾಯಿತು, ಬೀಳಬಹುದು ಎನ್ನುವವನನ್ನೇ!
ಮರದ ಎಲೆಗಳು ಕಸ ಎಂದು ಜರುಗಿದವನನ್ನೇ!
ಹಳೆ ಮರವ ಕತ್ತಸರಿಸಿ ಎಂದು ಆಜ್ಞೆ ಕೊಟ್ಟವನನ್ನೇ?
ಹೊಟ್ಟೆ ಪಾಡಿನ ಬದುಕಿಗಾಗಿ ನನ್ನ ಕತ್ತರಿಸಿದವನನ್ನೇ?
ನನ್ನ ಮಾರಿ ಹಣ ಪಡೆದು ಸಾರಾಯಿ ಕುಡಿದವನನ್ನೇ?
ನನ್ನ ಬೆಂಕಿಯಿತ್ತು ಉರಿಸಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸಿದ ತಾಯನ್ನೇ?
ನನ್ನಾಸರೆಯಲ್ಲೇ ಬೆಳೆದು ನನಗೆ ಎರಡು ಬಗೆದವನನ್ನೇ?

ಸಾಯಿಸಿಬಿಟ್ಟರು ನನ್ನ!
ನಾ ಮುದುಕ! ನಾ ಹಳೆ ಮರ!
ನನ್ನಿಂದ ಪ್ರಯೋಜನವಿಲ್ಲ!
ನಾ ಬದುಕಿದ್ದರೂ ಆದಾಯ ಇಲ್ಲ!
ತುಂಡು ತುಂಡಾಗಿ ಕತ್ತರಿಸಿ!
ಮನವ ಛಿದ್ರ ಛಿದ್ರವಾಗಿಸಿ
ದೇಹದ ಹಾಗೆಯೇ!
@ಹನಿಬಿಂದು@
19.08.2022



ಶನಿವಾರ, ಸೆಪ್ಟೆಂಬರ್ 10, 2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -145

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -145

ಮನೆಯಲ್ಲಿ ಪ್ರತಿ ಭಾನುವಾರ ಹೆಚ್ಚಿನ ಮಹಿಳೆಯರ ಕೆಲಸ ಶುಚಿತ್ವ. ಇಡೀ ವಾರ ಬಾಕಿಯಾದ ಕೆಲಸಗಳನ್ನು ಹಾಗೂ ಮನೆಯ ಅಚ್ಚುಕಟ್ಟುತನವನ್ನು ಅಂದು ಮಾಡುವ ದಿನ. ಆ ದಿನ ಯಾರಾದರೂ ನೆಂಟರು ಬಂದರೆ ಮುಗಿಯಿತು, ಆ ದಿನದ ಕೆಲಸ ಬಾಕಿ ಆದ ಹಾಗೆಯೇ! ಅಥವಾ ಆ ದಿನ ಎಲ್ಲಾದರೂ ಏನಾದರೂ ಕಾರ್ಯಕ್ರಮ ಇದ್ದರೂ ಅದೇ ಕಥೆ. ಬದುಕಿನಲ್ಲಿ ಒಂದು ವೀಕೆಂಡ್  ಸ್ವಲ್ಪ ಎಡವಟ್ಟಾದರೂ ಇಡೀ ವಾರ ಸರಿ ಇರುವುದಿಲ್ಲ. ಹಾಗೆಯೇ ಜೀವನ ಕೂಡಾ. ಒಂದು ಹೆಜ್ಜೆ ತಪ್ಪಿದರೂ ಕಷ್ಟವೇ. 

    ನಾವೆಲ್ಲ ನಮ್ಮನ್ನು ಬೇರೆಯವರು ಪ್ರೀತಿಸಲಿ, ಗುರುತಿಸಲಿ, ನಾವು ಮಾಡಿದ ಕೆಲಸಕ್ಕೆ ಪರರು ಭೇಷ್ ಅನ್ನಲಿ, ನಮ್ಮ ಕಾರ್ಯ ಗುರುತಿಸಲಿ, ಬೆನ್ನು ತಟ್ಟಲಿ, ಹೊಗಳಲಿ ಅಂತೆಲ್ಲಾ ಅಂದುಕೊಳ್ಳುತ್ತೇವೆ. ನಮ್ಮ ಯೂ ಟ್ಯೂಬ್ ಚಾನೆಲ್ ಎಲ್ಲರೂ ನೋಡ ಬೇಕು, ಲೈಕ್ ಸಬ್ಸ್ಕ್ರೈಬ್ ಮಾಡಬೇಕು ನಮಗೆ. ನಮ್ಮ ವೀಡಿಯೋವನ್ನು ಎಲ್ಲರೂ ಶೇರ್ ಮಾಡಬೇಕು! ಅದರಲ್ಲೂ ಕಾಂಪಿಟೇಷನ್! ಹಾಗಾಗಿ ಕಮೆಂಟ್ ಗಳು, ಲೈಕುಗಳು ಬಾಯಿ ಬಿಟ್ಟು ಎಲ್ಲರ ಬಳಿ ಬಿಕ್ಷೆ ಬೇಡಿ ಕೇಳುವ ಹಾಗೆ ಆಗಿದೆ ಇಂದು! ಕೆಲವರು ಅದನ್ನೇ ಕಾಯಕವಾಗಿ ಮಾಡಿಕೊಂಡು ತಮ್ಮ ವ್ಲಾಗ್ ಗಳಲ್ಲೇ ಜಾಹೀರಾತು ನೀಡಿ ಬಹಳಷ್ಟು ಗಳಿಸುತ್ತಾರೆ ಅಲ್ಲವೇ? ಯಾರ್ದೋ ಲೈಕು, ಕಮೆಂಟು, ಶೇರು, ಇನ್ಯಾರದೋ ಇನ್ ಕಂ. ಇದಿಷ್ಟೇ ಬದುಕು. ಕಷ್ಟದಲ್ಲಿ ಬದುಕಿ ತೋರಿಸೋದು ಮುಖ್ಯ. ಗುರಿಯೆಡೆ ನಡೆದು, ಗುರಿ ಮುಟ್ಟುವುದರ ಜತೆಗೆ ಯಾರಿಗೂ ತೊಂದರೆ ಕೊಡದ ಹಾಗೇ ಬದುಕಬೇಕು ಎಂಬುದೇ ಎಲ್ಲಾ ಧರ್ಮಗಳ ಮೂಲ ತತ್ವ ಅಲ್ಲವೇ? ಸಾಧ್ಯವಾದರೆ ಸಹಾಯ ಮಾಡಿ, ಇಲ್ಲದೆ ಇದ್ದರೆ ಸುಮ್ಮನಿದ್ದು ಬಿಡಿ. ಮಾತನಾಡುವುದಾದರೆ ನಿಮ್ಮ ಬಗ್ಗೆ ಮಾತನಾಡಿ. ಪರರ ಬಗ್ಗೆ , ಅವರ ವರ್ತನೆ, ಅವರ ಬಟ್ಟೆ ಬರೆ, ಅವರ ಫೋನ್ ಕಾಲ್, ಅವರ ಸುತ್ತಾಟ, ಅವರ ಶಾಪಿಂಗ್, ಅವರ ಖರ್ಚಿನ ತಲೆಬಿಸಿ ಅವರಿಗೆ ಇರುತ್ತದೆ. ನಿಮಗೆ ಯಾಕೆ ತಲೆ ಬಿಸಿ ಮಾಡುವ ತೊಂದರೆ? ಎದುರು ಮನೆಗೆ ನಿತ್ಯ ನೆಂಟರು ಬಂದರೆ ಅವರೆಲ್ಲರನ್ನೂ ಪ್ರೀತಿಯಿಂದ ಸುಧಾರಿಸುವವರು  ಅವರು. ನಿಮಗೇನು ತೊಂದರೆ? ಪಕ್ಕದ ಮನೆಯವಳ ಮಗ ಓದದೇ ಇದ್ದರೆ ಬಿಡಲಿ, ಅದರ ಕಷ್ಟ ಅವರಿಗೆ ಗೊತ್ತು, ನಿಮಗೆ ಯಾಕೆ ಸಂಕಟ, ಬೇಕಿದ್ದರೆ ಕರೆದು ಸ್ವಲ್ಪ ಹೇಳಿಕೊಡಿ. ಅದರ ಬದಲು ಗೇಲಿ ಮಾಡಿ ನಗುವುದಲ್ಲ. 

ಮೇಲಿನ ಮನೆ , ಕೆಳಗಿನ ಮನೆ, ಒರಗಿತ್ತಿ, ನಾದಿನಿಯ ಅತ್ತೆ, ಅತ್ತೆ ಮಗಳ ಅತ್ತಿಗೆ ಇವರು ಹೇಗಿದ್ದರೂ ನಿಮಗೇನು? ನಿಮ್ಮ ಜೀವನ ಚೆನ್ನಾಗಿದೆಯೇ? ನಿಮ್ಮ ಸಹೋದ್ಯೋಗಿ ಕಷ್ಟ ಪಡುತ್ತಿದ್ದಾರೆ ಎಂದು ಗೊತ್ತಾದರೆ ಸಾಧ್ಯವಾದರೆ ಸಹಾಯ ಮಾಡಿ ಇಲ್ಲದೆ ಇದ್ದರೆ ನಾಲ್ಕು ಸಾಂತ್ವನದ ನುಡಿಗಳನ್ನಾದರೂ ಹೇಳಿ. ಅದರ ಬದಲಾಗಿ ಅವರು ದುಡ್ಡಿಗೆ ತೊಂದರೆ ಎದುರಿಸುತ್ತಿದ್ದಾರೆ ಎಂದರೆ ಬಡವಿ ಎಂದು ಕೀಳಾಗಿ ನೋಡದಿರಿ. ಅಗತ್ಯ ಬಿದ್ದಾಗ ಸಹಾಯ ಮಾಡಿದವರನ್ನು ಜನ ಮರೆತರೂ ದೇವರು ಮರೆಯೋಲ್ಲವಂತೆ! ನೀವು ಮಾಡಿದ ಪಾಪ ಪುಣ್ಯಗಳ ಬುತ್ತಿಯನ್ನೇ ನಾಡಿದ್ದು ನಾಲ್ಕು ಜನರ ಹೆಗಲ ಮೇಲೆ ಸಾಗುವಾಗ ಹೊತ್ತುಕೊಂಡು ಹೋಗ್ಲಿಕ್ಕೆ ಇರೋದು. ಅದು ನೆನಪಿರಲಿ.

ನಾವು ಬೇರೆಯವರ ಮನ ನೋಯಿಸಿದರೆ ನಮ್ಮ ಮಕ್ಕಳು, ಮೊಮ್ಮಕ್ಕಳ ಕಾಲಕ್ಕೂ ಆ ಶಾಪ ಹೋಗುವುದಿಲ್ವ0ತೆ. ಪಾಪ ಪುಣ್ಯಗಳ ನೀವು ನಂಬದೆ ಇದ್ದರೂ ಸರ್ವರಿಗೂ ಒಳಿತಾಗಬೇಕು ಎಂದು ನಾವು ನಂಬುತ್ತೇವೆ, ಬೇಡುತ್ತೇವೆ, ದೇವರಲ್ಲಿ ಕೇಳುತ್ತೇವೆ ಅಲ್ಲವೇ? ದೇವರನ್ನೇ ನಂಬದವನೂ ಕೂಡಾ ಬಿದ್ದರೆ ಅಮ್ಮಾ ಎನ್ನುವನು. ಆಕೆಯೂ ದೇವರ ಸ್ವರೂಪವೇ ಅಲ್ಲವೇ? 

ಇಷ್ಟೆಲ್ಲಾ ಬಯಸುವ ನಾವು ಕಾರಣ ಇಲ್ಲದೆ ಅದೆಷ್ಟು ಜನರನ್ನು ನಿಷ್ಕಲ್ಮಶವಾಗಿ ಪ್ರೀತಿಸುತ್ತೇವೆ? ಅದೆಷ್ಟು ಜನರಿಂದ ವಂಚನೆಗೆ ಒಳಗಾಗಿದ್ದೇವೆ! ಅದೆಷ್ಟು ಜನರನ್ನು ನಂಬಿ ಮೋಸ ಹೋಗಿ ಅವರ ನಿಜ ಬಣ್ಣ ಬಯಲಾದ ಮೇಲೆ ಅವರಿಗೆ ಶಾಪ ಹಾಕ್ತಾ ಕಾಲ ಕಳೆಯುತ್ತೇವೆ? ಯಾರಿಗೆ ಗೊತ್ತು ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಅವರ ಋಣ ಇಟ್ಟುಕೊಂಡು ಸತ್ತು ಹೋಗಿರಬಹುದು, ಅಥವಾ ಅವರ ಕೈಯಲ್ಲಿ ಸಾಲ ಪಡೆದು ಕೊಡದೆ ಹೋಗಿರಬಹುದು, ಅಪಘಾತ ಮಾಡಿ ಗಾಡಿ ಗುದ್ದಿ ಹೇಳದೆ ಕೇಳದೆ ಓಡಿರಬಹುದು. ಕಾಲಾಯ ತಸ್ಮಯೇ ನಮಃ!
ನಮ್ಮ ಬೆನ್ನು ನಮಗೆ ಕಾಣದು. ನಮ್ಮ ನಾಳೆಗಳ ಬಗ್ಗೆಯೂ ನಮಗೆ ತಿಳಿಯದು. ಉಪ್ಪು ತಿಂದವ ನೀರು ಕುಡಿಯಲೇ ಬೇಕು, ಕೆಸರಿಗೆ ಕೈ ಹಾಕಿದವ ಕೈ ತೊಳೆಯಲೇ ಬೇಕು. ಇಲ್ಲದೆ ಹೋದರೆ ಅವನ ಆರೋಗ್ಯ ಹಾಳಾಗುವುದು ಖಚಿತ. ನೀವು ಬೇರೊಬ್ಬರ ಹಣ ತಿಂದು ಇಂದು ನಕ್ಕು ನಲಿದರೆ ಅವನ ಅಳು ಮುಂದೊಂದು ದಿನ ನಿಮ್ಮ ಆರೋಗ್ಯಕ್ಕೇ ಕುತ್ತು ತರುತ್ತದೆ. ನೂರು ರೂಪಾಯಿ ನೀವು ಇತರರಿಗೆ ಮೋಸ ಮಾಡಿದರೆ ನಿಮ್ಮ ಸಾವಿರ ರೂಪಾಯಿ ಡಾಕ್ಟರ್ ಪಾಲಾಗುತ್ತದೆ ನೆನಪಿರಲಿ. ನ್ಯಾಯ, ಸತ್ಯ, ಅಹಿಂಸೆ, ನಂಬಿಕೆ ಕಡಿಮೆ ಆದಾಗಲೇ ಕರೋನ ವೈರಸ್ ಅಟ್ಟಹಾಸಕ್ಕೆ ಪ್ರಾರಂಭಿಸಿ ಎಲ್ಲರನ್ನೂ ಕಷಾಯ ಕುಡಿಸಿದ್ದು, ಮರೆಯದಿರಿ. ನೀವು ಇಂದು ಮಾಡಿದ ಪಾಪ ನಿಮ್ಮ ತಲೆಯ ಮೇಲಿನ ತೂಗೂಗತ್ತಿ ಆಗುವುದರಲ್ಲಿ ಎರಡು ಮಾತಿಲ್ಲ. 

ಬದುಕಿ, ಬದುಕಲು ಬಿಡಿ. ಕಷ್ಟ ಪಡಿ, ಚಿಂತೆ ಆ ದೇವನಿಗೆ ಬಿಡಿ.ಆಯುಷ್ಯ ಮುಗಿದು  ಸಾಯುವವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವೇ ಇಲ್ಲ. ಒಂದು ವೇಳೆ ಹಾಗಿದ್ದಿದ್ದರೆ ಯಾವ ಆಸ್ಪತ್ರೆಯಿಂದಲೂ ಮೃತದೇಹ ಹೊರ ಬರುತ್ತಿರಲಿಲ್ಲ. ಎಲ್ಲೆ ಹೋದರೂ ಜನರಿಗೆ ಪ್ರೀತಿ, ಸಹಾಯ ಹಸ್ತ ತೋರಿಸುವುದರಲ್ಲಿ ನಾವು ಒಂದು ಹೆಜ್ಜೆ ಮುಂದಿರೋಣ. ನೀವೇನಂತೀರಿ?
@ಪ್ರೇಮ್@

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -148

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -148

ಈಗ ಭಾರತ ವಿಶ್ವಗುರುವಾಗಿ ಬೆಳೆಯುತ್ತಿದೆ ನಿಮಗೆ ಅನ್ನಿಸುತ್ತಾ ಇಲ್ಲವೇ? ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು. ಎಲ್ಲಾ ದೇಶಗಳಿಗಿಂತಲೂ ಭಾರತ ಒಂದು ವಿಭಿನ್ನ ದೇಶವಾಗಿದೆ. ಭಾರತವನ್ನು ವಿವಿಧ ಆಯಾಮಗಳಲ್ಲಿ ಗಮನಿಸಿದಾಗ ಅದೊಂದು ಸುಂದರವಾದ  ದೇಶವಾಗಿದೆ ಮತ್ತು ಮೂರು ಕಡೆ ನೀರಿನಿಂದ ಆವೃತವಾದ ಪ್ರದೇಶವಾಗಿದೆ. ಇಲ್ಲಿ 28 ರಾಜ್ಯಗಳಿದ್ದು 7 ಕೇಂದ್ರಾಡಳಿತ ಪ್ರದೇಶಗಳಿವೆ. 28 ದೇಶಗಳ ಭಾಷೆ, ಆಚರಣೆ, ಸಂಸ್ಕೃತಿ, ಆಚಾರ ವಿಚಾರಗಳೂ ವಿಭಿನ್ನವಾಗಿದ್ದರೂ ಐಕ್ಯತೆಯ ಮಂತ್ರವನ್ನು ನಾವು ಪಠಿಸುವುದೇ ನಮ್ಮನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಿದ ಒಂದು ಬಿಂದು. ವೇಷ ಬೇರೆ, ಭಾಷೆ ಬೇರೆ ದೇಶವೊಂದೇ ಭಾರತ... ಇದು ನಮ್ಮ ಧ್ಯೇಯ ಅಲ್ಲವೇ?

ಯಾವುದೇ ದೇಶದಲ್ಲಿ ಯುದ್ಧಗಳಾಗಲಿ, ನೋವು ಉಂಟಾಗಲಿ ಸಹಾಯಕ್ಕೆ ತೆರಳುವ ಮೊದಲ ದೇಶವೆಂದರೆ ಅದು ನಮ್ಮದೇ ದೇಶ ಅಲ್ಲವೇ? ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಸರ್ವ ಮಾನವ ಕುಲಕ್ಕೂ "ಮಾನವ ಜಾತಿ ತಾನೊಂದೆ ಒಲಮ್"ಎಂದು  ಸರ್ವರಿಗೂ ಸಹಾಯ ಹಸ್ತ ಚಾಚಿ ಸಹಕಾರ ನೀಡುವ ಒಳ್ಳೆಯ ಗುಣ ಭಾರತಕ್ಕೆ ಇರುವುದು ನಾವು ವಿಶ್ವಗುರು ಎಂದೆನಿಸಲು ಎರಡನೇ ಕಾರಣ.

ಮತ್ತೆ ನಮ್ಮಿಂದ ಸಾಲ ಪಡೆದು ಬೆಳೆದ ಮತ್ತು ಬೆಳೆಯುತ್ತಿರುವ  ಸಣ್ಣ ರಾಷ್ಟ್ರಗಳು. ಭಾರತದ ಸಹಾಯಕ್ಕಾಗಿ ಸದಾ ಚಿರಋಣಿಗಳಾಗಿದ್ದು, ಸಣ್ಣ ಪುಟ್ಟ ಕಷ್ಟಗಳಲ್ಲಿ ಭಾರತ ತನ್ನ ಕೈ ಬಿಡಲಾರದು ಎಂಬ ನಂಬಿಕೆಯ ಮೇಲೆ ಇರುವುದರಿಂದಲೂ ಭಾರತ ವಿಶ್ವಗುರು ಎನಿಸಿಕೊಳ್ಳಲು ಸಹಕಾರಿ ಆಗಿದೆ. 

ಶಾಂತಿ, ಸಹನೆ, ಐಕ್ಯತೆ, ಸಹಬಾಳ್ವೆ, ಆರೋಗ್ಯ, ಪ್ರಕೃತಿದತ್ತ ಕೊಡುಗೆ, ಸೌಂದರ್ಯ, ಉತ್ತಮ ಪರಿಸರ, ಜಲ, ಉತ್ತಮ  ಮನುಷ್ಯತ್ವದ  ಜನ  ಭಾರತದಲ್ಲಿ ಹೆಚ್ಛಾಗಿ ಸಿಗುತ್ತಾರೆ. ಇಲ್ಲಿನ ಜನರು ಒಳ್ಳೆಯ ಚಿಂತನೆಗಳನ್ನು ಮಾಡುತ್ತಾರೆ. ಹಾಗೆಯೇ ಧಾರ್ಮಿಕ ಗ್ರಂಥಗಳ ಅಧ್ಯಯನ, ಇಲ್ಲಿನ ಪೂಜೆ, ಮಂತ್ರ, ತಂತ್ರಸಾರಗಳು ಬಹಳ ವಿಭಿನ್ನವಾಗಿ ಇರುವುದರಿಂದ ಹಲವಾರು ಜನ ಪ್ರೇರಿತರಾಗಿ ಇಲ್ಲಿಗೆ ಬಂದು ಭಾರತವನ್ನು ಬೆಳೆಸಿರುವುದೂ ಕೂಡಾ ಇದಕ್ಕೆ ಸಾಕ್ಷಿಯಾಗಿದೆ. 

ಉತ್ತಮ ಬೆಟ್ಟ ಗುಡ್ಡಗಳು, ಎಷ್ಟು ಸಂಶೋಧನೆ ನಡೆಸಿದರೂ ಮತ್ತಷ್ಟು ವಿಷಯಗಳನ್ನು ಅಡಗಿಸಿ ಇಟ್ಟುಕೊಂಡಿರುವ ಹಿಮಾಲಯದ ತಪ್ಪಲು, ಗುಹೆಗಳು, ದೇವಾಲಯಗಳು, ಪುರಾತನ ನಂಬಿಕೆ, ಆವಿಷ್ಕಾರಗಳು, ವೈಜ್ಞಾನಿಕ ಚಿಂತನೆಗಳು, ಗಣಿತದ ಲೇಖ್ಖಾಚಾರ ಗಳು, ಜ್ಯೋತಿಷ್ಯ ಶಾಸ್ತ್ರ, ಸಂಸ್ಕೃತ ಭಾಷೆ, ವೇದ ಪುರಾಣಗಳ ಆಶಯಗಳು ಓದಿದಷ್ಟು ಮುಗಿಯದ ಪುರಾಣ ಕತೆ, ಧಾರ್ಮಿಕ ವಿಚಾರಗಳು ಎಲ್ಲಾ ದೇಶದ ಜನರನ್ನೂ ಇಲ್ಲಿಗೆ ಕೈ ಬೀಸಿ ಕರೆಯುವ ಕಾರಣ ಭಾರತ ಸರ್ವರಿಗೂ ಶಾಂತಿಯ ಪಾಠ ಕಲಿಸುವ ವಿಶ್ವಗುರು ಹೌದಲ್ಲವೇ?

ಸನಾತನ ಧರ್ಮದ ಎಷ್ಟು ಕಲಿತರೂ ಮುಗಿಯದ ಕಟ್ಟು ಕಟ್ಟಳೆಗಳ ಮೂಲ ತಿಳಿಯುವ ಕುತೂಹಲ ಒಂದೆಡೆಯಾದರೆ ವಿಶ್ವದಲ್ಲೆ ಅತಿ ಹೆಚ್ಚು ಜನ ಸಂಪನ್ಮೂಲ ಹೊಂದಿರುವ ಇಲ್ಲಿನ ಜನರಿಂದ ವ್ಯಾಪಾರವನ್ನೂ ಪಡೆಯಬಹುದು, ಕೆಲಸವನ್ನೂ ಪಡೆಯಬಹುದು ಎಂಬ ಲೆಕ್ಕಾಚಾರ ಹಲವು ವ್ಯಾಪಾರೀ ದೇಶಗಳದ್ದು. ಚೀನಾ, ಅಮೇರಿಕಾ, ರಷ್ಯಾ, ಅರಬ್ ದೇಶಗಳಿಗೆ ಭಾರತ ಉತ್ತಮ ಮಾರುಕಟ್ಟೆ. ಅಲ್ಲಿ ಉತ್ಪಾದಿಸಿದ ಪ್ರತಿ ವಸ್ತುವಿಗೂ ಇಲ್ಲಿ ಬೇಡಿಕೆ ಇದೆ. ಹಣ್ಣು ಹೂವುಗಳಿಂದ ಹಿಡಿದು ಯುದ್ಧ ವಿಮಾನಗಳವರೆಗೂ, ಕಾರುಗಳು, ಕಂಪ್ಯೂಟರ್ ಮೊಬೈಲ್ ವರೆಗೂ ನಮ್ಮ ಬೇಡಿಕೆಯೇ ಹೆಚ್ಚು. ಹಾಗೂ ಭಾರತ ಎಲ್ಲರಿಗೂ ಬೇಕು. 

ಪ್ರಪಂಚದ ಯಾವುದೇ ಹೂಡಿಕೆದಾರರಿಗೂ  ಅವಕಾಶ ಇದೆ. ಹಾಗೆಯೇ ಕೊಡು ಕೊಳ್ಳುವುದರಲ್ಲೂ ನಾವು ಮುಂದು. ಎಲ್ಲಾ ಹಿರಿಯ ರಾಷ್ರ್ರಗಳೊಂದಿಗೂ ಉತ್ತಮ ಸ್ನೇಹ, ಗೆಳೆತನದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವುದೂ ನಮ್ಮ ದೇಶವನ್ನು ಎಂದೆಂದಿಗೂ ವಿಶ್ವಗುರುವನ್ನಾಗಿ ಮಾಡಿದೆ ಎನ್ನಲು ಎರಡು ಮಾತಿಲ್ಲ ಅಲ್ಲವೇ? ನೀವೇನಂತೀರಿ?
ಜೈ ಭಾರತ್. 
@ಪ್ರೇಮ್@
10.09.2022

ಗುರುವಾರ, ಸೆಪ್ಟೆಂಬರ್ 8, 2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -146

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -146

ಹಲವಾರು ಕುಟುಂಬಗಳಲ್ಲಿ ನೋಡಿರುವೆ. ಕಷ್ಟ ಬಂದಾಗ ಒಬ್ಬರನ್ನು ಒಬ್ಬರು ಗಮನಿಸಿ ಸಹಾಯ ಮಾಡುತ್ತಾರೆ. ಎಲ್ಲರೂ ಆರ್ಥಿಕ ಸಹಾಯ ನೀಡದಿದ್ದರೂ, ಮಾನಸಿಕವಾಗಿ ನಿಮ್ಮೊಡನೆ ನಾವಿದ್ದೇವೆ ಎಂಬ ಹಿತನುಡಿ, ಜೊತೆಗೆ ಬಂದು ಕೆಳ ಹೊತ್ತು ಇದ್ದು, ಏನಾದರೂ ಸ್ವಲ್ಪ ತಂದು ಕೊಟ್ಟು, ಬೇಗ ಗುಣಮುಖರಾಗಿ ಎಂದು ಹೇಳಿ ಹೋಗುವ ಬಂಧುಗಳನ್ನು ನೋಡಿದಾಗ ನಮಗೆ "ಅಬ್ಭಾ ! ಎಷ್ಟು ಜನ ನಮ್ಮೊಡನೆ ಇದ್ದಾರೆ, ಧನ ಸಹಾಯ ಎಲ್ಲರಿಗೂ ಅಸಾಧ್ಯ. ಆದರೂ ತಮ್ಮ ಕೆಲಸವನ್ನೆಲ್ಲ ಬದಿಗೊತ್ತಿ ಬಂದು ನಮ್ಮನ್ನು ನೋಡಿ ಮಾತನಾಡಿಸಿ ಹೋದರಲ್ಲ, ಇವರೆಲ್ಲ ನಮ್ಮವರೇ..ಅನ್ನಿಸಿ ಮಾನಸಿಕ ಸಂತಸ ಸಿಗುತ್ತದೆ. ಕೆಲವೊಮ್ಮೆ ಬಂಧುಗಳೇ ಅಲ್ಲದ ದೂರದ ಗೆಳೆಯರು, ಮನೆಯ ನೆರೆ ಹೊರೆಯವರು, ಬಂಧುಗಳ ನೆರೆಹೊರೆಯವರು, ಹಿಂದಿನ ಕ್ಲಾಸ್ಮೇಟ್ಸ್ ಎಲ್ಲರನ್ನೂ ನೋಡಿ ಮಾತನಾಡಿ ಹಳೆಯದನ್ನು ಮೆಲುಕು ಹಾಕುವಾಗ ಬದುಕು ಕಷ್ಟಗಳನ್ನೆಲ್ಲಾ ಮರೆತು ಸಂಸದಿ ಹಾಡುತ್ತದೆ. ಈ ಸುಖಕ್ಕೆ ಸ್ನೇಹಿತರು ಮತ್ತು ಬಂಧುಗಳು ಇರಬೇಕು ಅಲ್ಲವೇ? 
   ಕೆಲವೊಮ್ಮೆ ಇವರು ಸಮಸ್ಯೆಗಳನ್ನೂ ಬದುಕಲ್ಲಿ ತಂದು ಹಾಕಬಹುದು, ನಮ್ಮ ನೆರೆಹೊರೆಯವರು ನಮ್ಮ ಸಂಸಾರದಲ್ಲಿ ನುಗ್ಗಿ ನೆರೆ - ನಿಜ ಹೊರೆಯಾಗಬಹುದು. ಗಂಡ ಹೆಂಡತಿಯನ್ನು ಬೇರೆ ಮಾಡಬಹುದು, ತಾಯಿ ತಂದೆ -ಮಕ್ಕಳನ್ನು ಆಸ್ತಿಗಾಗಿ ಕಚ್ಚಾಡುವ ಹಾಗೆ ಮಾಡಬಹುದು. ಏನೇನೋ ಹೇಳಿಕೊಟ್ಟು ಜಗಳ ಹಬ್ಬಿಸಿ ನೋಡಿ ಖುಷಿ ಪಡಬಹುದು. ಇಂಥವರೂ ಇದ್ದಾರೆ. ಅವರೇ ಊಟಕ್ಕೆ ಏನಾದರೂ ಬೆರೆಸಿ ಕೊಟ್ಟು, ನಂತರ ನಮ್ಮನ್ನು ನೋಡಲು ಬರಲೂ ಬಹುದು. ಹಾಗಾಗಿ ಈಗೀಗ ಪಕ್ಕದ ಮನೆಯವರನ್ನೂ ಕೂಡಾ ನಂಬುವುದು ಕಷ್ಟ. ಕಾರಣ ವಿದ್ಯಾಭ್ಯಾಸ ಹೆಚ್ಚಾಗಿ, ಹಣದ ಮೌಲ್ಯ ಕಡಿಮೆಯಾದ ಈ ಕಾಲದಲ್ಲಿ "ಫಿಶ್ ಗಳಿಗೆ ನೀರು, ಸೆಲ್ಫಿಶ್ ಗಳಿಗೆ ಭೂಮಿ" ಎಂಬಂತಾಗಿ ಭೂಮಿ ಮೇಲೆ ಹೆಚ್ಚಿನ ಎಲ್ಲಾ  ಸೆಲ್ಫಿಶ್ ಗಳೇ ತುಂಬಿ ಹೋಗಿರುವ ಕಾರಣ ಒಳ್ಳೆಯವರನ್ನೂ ಜನ ನಂಬಲಾರದ ಪರಿಸ್ಥಿತಿ ಬಂದಿದೆ. ಒಂದೊಮ್ಮೆ ಸರಿಯಾಗಿರುವ ಹಲವಾರು ಜನ ರೋಗಿಗಳ ಹಾಗೆ ನಾಟಕ ಮಾಡಿ ಮನೆ ಮನೆಗೆ, ಬಸ್ಸಿನ ಒಳಗೆ, ರಸ್ತೆಯಲ್ಲಿ, ಸಿಗ್ನಲ್ ಗಳಲ್ಲಿ ಅಡ್ಡ ಹಾಕಿ ಭಿಕ್ಷೆ ಬೇಡಿ ಹಣ ಮಾಡಿಕೊಂಡು ಐಷಾರಾಮಿ ಬದುಕು ನಡೆಸುವ ಅದೆಷ್ಟೋ ಜನರೂ ಇದ್ದಾರೆ. ಭಾರತದ ಸಂಸ್ಕೃತಿ ಮಾತ್ರವಲ್ಲ ಪಾಶ್ಚಾತ್ಯ ಜನರಲ್ಲೂ ಒಳ್ಳೆಯದು, ಕೆಟ್ಟದು ಎನ್ನುವಂಥದ್ದು ಇದೆ. ಪರಸ್ಪರ  ಸಹಾಯ ಸಹಕಾರ, ನೋವು ನಲಿವುಗಳಲ್ಲಿ  ಒಟ್ಟಾಗುವುದು ಇತ್ಯಾದಿ ಎಲ್ಲಾ ಜನರಲ್ಲೂ ಇದೆ. ನಾನು ಎಂಬ ಅಹಂಕಾರ ಇರಬಾರದು ಎಂದು ಎಲ್ಲರೂ ಹೇಳುತ್ತಾರೆ. ಹಾಗೆಯೇ ನಿನ್ನ ಅನ್ನದ ಅಕ್ಕಿಯನ್ನು ನೀನೆ ಬೆವರು ಹರಿಸಿದ ದುಡ್ಡಿನಿಂದ ಬೇಯಿಸಬೇಕೇ ಹೊರತು ಅದು ಬೇರೆಯವರ ಬೆವರಿನ ಪಾಲಾಗಿರಬಾರದು ಎಂದು ಹೇಳಿದ ಶಾಸ್ತ್ರಗಳೇ ನಿನ್ನಲ್ಲಿ ಹೆಚ್ಚಾಗಿರುವುದನ್ನು ಪರರಿಗೆ, ಅನಾಥ, ನಿರ್ಗತಿಕರಿಗೆ, ಕಷ್ಟದಲ್ಲಿ ಇರುವವರಿಗೆ  ದಾನ ಮಾಡು ಎಂದೂ ಹೇಳಿವೆ. ಪರಸ್ಪರ ಸಹಕಾರ, ಸಹಬಾಳ್ವೆ ಮಾತು ಬರುವ ಮನುಜನಲ್ಲಿ ಮಾತ್ರ ಅಲ್ಲ, ಪ್ರಾಣಿಗಳಲ್ಲೂ ಇದೆ. ಸಿಂಹ, ಹುಲಿ, ಆನೆಗಳು, ಜಿಂಕೆಗಳು ಗುಂಪಿನಲ್ಲೇ ವಾಸಿಸುತ್ತವೆ. 

ಬುದ್ಧಿ ಹೆಚ್ಚಾದ ಹಾಗೆ ಮಾನವ ಬೇರೆ ಬೇರೆ ರಂಗಗಳಲ್ಲಿ ಎಷ್ಟು ಬೆಳೆಯುತ್ತಾನೋ ಅಷ್ಟೇ ಕೆಟ್ಟತನವನ್ನೂ ಹೆಚ್ಚಿಸಿಕೊಂಡು ಹೋಗುತ್ತಾನೆ. ವಿಶ್ವದ ದೊಡ್ಡಣ್ಣ ಎನಿಸಿದ  ಅಮೇರಿಕಾದಲ್ಲಿ ಎಲ್ಲಾ ದೇಶಗಳ ಜನರನ್ನು ಯುದ್ಧ ಮಾಡುವಂತೆ ಮಾಡುವ ಬಾಂಬುಗಳು ತಯಾರಾಗುತ್ತವೆ! ಅದರ ಬಳಕೆ ಆಗಲೆಂದು ಅವರು ಕಾಯುತ್ತಾ ಇರುತ್ತಾರೆ ಕಾರಣ? ವ್ಯಾಪಾರೀ ದೃಷ್ಟಿ! ಅದರ ಮುಂದೆ ಮಾನವತೆ, ಸರಳತೆ, ಒಗ್ಗಟ್ಟು, ಶಾಂತಿ ಮಂತ್ರ, ಸರ್ವರ ಏಳಿಗೆ ಇತ್ಯಾದಿ ಎಲ್ಲಾ ಒಳ್ಳೆಯ ಗುಣಗಳೂ ನಶಿಸಿ, ನಾನು, ನನ್ನದು, ನನ್ನ ದೇಶ, ನನ್ನ ಧರ್ಮ, ನನ್ನ ಕುಟುಂಬ, ನನ್ನ ಭಾಷೆ,  ನನ್ನ ಊರು ಇತ್ಯಾದಿ  "ನನ್ನ" ಗಳು ಹೆಚ್ಚಾದ ಹಾಗೆ ಸ್ವಂತಿಕೆ ಮೆರೆದು ಜಗಳ, ಕದನ, ಗುಂಪುಗಾರಿಕೆ ಹೆಚ್ಚಿ ಶಾಂತಿ ವ್ಯವಸ್ಥೆ ಹದಗೆಡುತ್ತದೆ. 

ಇವೆಲ್ಲಕ್ಕೂ ಕಾರಣ ನಮ್ಮ ಆಸೆಗಳು, ಆಕಾಂಕ್ಷೆಗಳು, ದುರಾಸೆಗಳು, ರಕ್ತ ಹೀರುವ ಗುಣ, ವ್ಯಾಪಾರೀ ಮನೋಭಾವ,  ಅಸೂಯೆ, ಅಹಂಕಾರ, ಮದ, ಮಾತ್ಸರ್ಯ ಇವುಗಳೇ ಆಗಿವೆ.  ನಮ್ಮಲ್ಲಿ ಹಲವರ ಮೆಂಟಾಲಿಟಿ ಹೇಗಿದೆ ಎಂದರೆ "ನನಗೆ ಸಿಗದ್ದು ಬೇರೆಯವರಿಗೂ ಸಿಗಬಾರದು". ಅದಕ್ಕೆ ಅದೆಷ್ಟೋ ಜನ ಹುಡುಗರು ಪ್ರೀತಿಸಿದ ಹುಡುಗಿ ಒಪ್ಪಿಕೊಳ್ಳದೇ ಹೋದರೆ, ಸಿಗದೇ ಹೋದರೆ ಅವಳನ್ನು ಸಾಯಿಸಿ ಬಿಟ್ಟವರು ಇಲ್ಲವೇ? ಇದು ಮಾನವನ ವಿಕೃತ ಮುಖ. ಕೆಟ್ಟ ವ್ಯಸನಗಳು, ಕಷ್ಟ ಪಡದ ಹಣ, ದುರಭ್ಯಾಸಗಳು ಇದಕ್ಕೆ ಸಹಾಯ ಮಾಡುತ್ತವೆ. ಸರಿಯಾಗಿ ಕಷ್ಟ ಪಟ್ಟು ದುಡಿದ ಯಾರೆ ಆದರೂ ತನ್ನ ಹಣವನ್ನು ವ್ಯರ್ಥ ಮಾಡಲು, ಕೆಟ್ಟದ್ದಕ್ಕೆ ಉಪಯೋಗಿಸಲಾರ ಅಲ್ಲವೇ?
ಬದುಕಿಗೆ ಯಾವುದೇ ಗ್ಯಾರೆಂಟಿ ವಾರೆಂಟಿ ಇಲ್ಲ ಎಂದು ಎಲ್ಲೈಸಿ ಪಾಲಿಸಿಯ ನಾವೇ ಸಹಿ ಹಾಕಿದ ಬಾಂಡ್ ಪೇಪರನ್ನು ಒಮ್ಮೆ ಓದಿದರೆ ಗೊತ್ತಾಗುತ್ತದೆ. ನಮ್ಮ ಹಣ ಪಡೆದು ನಮಗೆ ಕೊನೆಯಲ್ಲಿ ಕೊಡುವ ಸಂಸ್ಥೆಗಳು ಹಲವಾರು ಇವೆ. ಆದರೆ ಈಗ ನಮಗೆ ದೊಡ್ಡ ಮೊತ್ತದ ಹಣ ಕೊಡಿ, ನಾವು ದುಡಿದು ಸ್ವಲ್ಪ ಸ್ವಲ್ಪ ಹಿಂದೆ ಕೊಡುತ್ತೇವೆ ಎಂದರೆ ಅದಕ್ಕೆ ಆ ಕಂಪನಿ ಗಳು ಸಹಕರಿಸಲಾರವು. ಲೋನ್ ಹಣ ಪಡೆಯಬೇಕಾದಾರೆ ಅದೆಷ್ಟು ಕಷ್ಟ, ಅದೆಷ್ಟು ಓಡಾಡಬೇಕು, ಚೆಕ್, ಸ್ಟಾಂಪ್ ಪೇಪರ್, ಶೂರಿಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಫಾರಂ ನಂಬರ್ 16, ವೋಟರ್ ಐಡೆಂಟಿಟಿ ಕಾರ್ಡ್, ಸಂಬಳ ಪಡೆದ ಸರ್ಟಿಫಿಕೇಟ್, ಬ್ಯಾಂಕ್ ಟ್ರಾನ್ಸಾಕ್ಷನ್ ಸ್ಟೇಟ್ಮೆಂಟ್, ಹಿರಿಯ ಅಧಿಕಾರಿಗಳ ಶಿಫಾರಸ್ಸು, ವಾಸಸ್ಥಳ ದೃಢೀಕರಣ ಪತ್ರ ಎಲ್ಲಾ ಕೊಟ್ಟರೂ ಬಜಾಜ್ ನವರು ರಿಜೆಕ್ಟ್ ಮಾಡಿ ಬಿಟ್ಟರು ಒಮ್ಮೆ ನನಗೆ. ಕಾರಣ ಟ್ಯಾನ್ ನಂಬರ್ ಸರಿ ಇಲ್ಲ ಎಂದು. ಅದು ಏಕೆಂದರೆ ನಾನು ಕಳೆದ ವರ್ಷ ಇದ್ದ ಶಾಲೆಯಿಂದ ಈ ವರ್ಷ ಟ್ರಾನ್ಸ್ಫರ್ ಪಡೆದು ಬಂದಿದ್ದೆ. ಅಲ್ಲಿಗೂ ಇಲ್ಲಿಗೂ ಟ್ಯಾನ್ ಸಂಖ್ಯೆಯ ವ್ಯತ್ಯಾಸ ಇತ್ತು! ಬ್ಯಾಂಕ್ ಅಕೌಂಟ್ ನಾವು ಇದ್ದ ಊರಿಗೆ ನಾವು ಬದಲಾಯಿಸ ಬೇಕಲ್ಲವೇ? ಹಾಗೆ ಮಾಡಿದರೆ ಐಎಫೆಸ್ಸಿ ಕೋಡ್ ಬದಲಾಯಿತು ಎಂದು ರಿಜೆಕ್ಟ್ ಮಾಡ್ತಾರೆ. ಅದೇ ಎಲ್ ಐ ಸಿ ಪಾಲಿಸಿಗಾಗಿ ಮನೆ ಮನೆಗೆ ಹುಡುಕಿಕೊಂಡು ಬರ್ತಾರೆ! ಯಾರಾದ್ರೂ ಲೋನ್ ಕೊಡ್ತೇವೆ ಅಂತ ಬರ್ಲಿ ನೋಡೋಣ! ನಮ್ಮ ಮೇಲೆ ಯಾರಿಗೂ ನಂಬಿಕೆ ಇಲ್ಲ! ತೆಗೆದುಕೊಳ್ಳುವವರೇ ಎಲ್ಲಾ, ಕೊಡುವವರು ಇಲ್ಲ ಅಲ್ಲವೇ? 

ನೀವೇಷ್ಟೇ ದೊಡ್ಡ ದಾನಿಗಳಾದರೂ, ಎಲ್ಲವನ್ನೂ ಧಾರೆ ಎರೆದರೂ ನಿಮ್ಮ ಕಷ್ಟಕ್ಕೆ ನೀವು   ನಂಬಿಕೆ ಇಟ್ಟ ಯಾರೂ ಸಹಾಯಕ್ಕೆ ಬರಲಾರರು. ಬಂದರು ಎಂದಾದರೆ ನೀವು ಮಹಾನ್ ಪುಣ್ಯವಂತರು. ಹಿರಿಯರು ಹೇಳಿಲ್ಲವೇ, "ನಿಮ್ಮ ತಲೆಗೆ ನಿಮ್ಮ ಕೈ" ಅಂತ. 

ಆದರೆ ಅಲ್ಲೋ ಇಲ್ಲೊ ಒಬ್ಬೊಬ್ಬರು ದೇವರ ಹಾಗೆ ಬಂದು ಸಹಾಯ ಮಾಡುವವರು, ಏನೂ ಬಯಸದೆ ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಹಸ್ತ ಚಾಚುವವರು, ಕಷ್ಟ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿದಾಗ ಅಕೌಂಟ್ ಗೆ ಒಂದಿಷ್ಟು ತಾವು ಕಷ್ಟಪಟ್ಟು ದುಡಿದ ಹಣ ಹಾಕುವವರು ಸಾಮಾನ್ಯ ಭಾವುಕ ಜೀವಿಗಳು, ನಾಳೆ ನಮಗೆ ಏನಾದರೂ ಹೆಚ್ಚು ಕಮ್ಮಿ ಆದರೆ ಇದೇ ಪರಿಸ್ಥಿತಿ ಅಲ್ಲವೇ ಎಂದು ಆಲೋಚಿಸಿ ತಮ್ಮ ಕೈಲಾದ ಸಹಾಯ ನೀಡುತ್ತಾರೆ ಅವರು. ನಮ್ಮ ಕಷ್ಟದ ಸಮಯದಲ್ಲಿ ಅವರು ನಮಗೆ ದೇವರ ಹಾಗೆ ಕಾಣುವರು. ಆದರೆ ಕಷ್ಟ ಕೊಟ್ಟು ಓಡಿಸಿ ನಮಗೆ ಕೊಡಬೇಕಾದ ಮುಂಗಡ ಹಣವನ್ನೂ ಕೊಡದೆ ಇರುವ ಬಾಡಿಗೆ ಮನೆ ಓನರ್ ಅನ್ನು ಕುಡಾ ನಾ ನೋಡಿರುವೆ. ಹಣ ಕೇಳಿದರೆ ಜಗಳ ಮಾಡಿ "ಕೊಡೋದಿಲ್ಲ ಹೋಗು" ಎಂದಾಗ ತುಂಬಾ ನೋವಿನಲ್ಲಿ ಬಂದುಬಿಟ್ಟೆ. ಇನ್ನು ಕೋರ್ಟು ಕಚೇರಿ ಸುತ್ತಲು ರಜೆಯೂ ಇಲ್ಲ, ಮತ್ತಷ್ಟು ಹಣ ನಾವೇ ವ್ಯಯಿಸ ಬೇಕು. ಅಲ್ಲೂ ರಾಜಕೀಯ, ಅವನದೇ ಊರು, ಅವನದೇ ಜನ! ಮುಖಂಡರು , ಜನ ನಾಯಕರು ಓಟಿಗಾಗಿ ಅವನ ಕಡೆಗೆ ವಾಲುವರು.ಹೀಗಾದಾಗ ಕೆಲವೊಮ್ಮೆ ಕೈಲಾಗದ ಹತಾಶ ಭಾವನೆ ನಮ್ಮನ್ನು ಕಾಡುತ್ತದೆ. ಪರವೂರು, ಪರಮ ಕಷ್ಟ. ಹೇಳಿಕೊಳ್ಳಲು, ನ್ಯಾಯ ಕೊಡಲು ಯಾರೂ ಇಲ್ಲ ಇಲ್ಲಿ. ನೋವುಂಡ ಮನಕ್ಕೆ ನೋವೆ ಕೊಡುವವರು ಜಗದಲ್ಲಿ. ನಿಮಗೂ ಇಂತಹ ಅನುಭವ ಆಗಿದೆಯೇ? ಏನಂತೀರಿ?
@ಪ್ರೇಮ್@
27.08.2022

ಗಝಲ್

ಗಜ಼ಲ್

ಅರೆ ತೆರೆದ ಕಣ್ಣಲ್ಲಿ ಪ್ರೀತಿ ಹೇಗೆ ಕಾಣಬಲ್ಲದು ಹುಜೂರ್
ಕರೆಯುವ ಹೃದಯದ ದನಿ ಅದು ಹೇಗೆ ತಾನೇ ಕೇಳಬಲ್ಲದು ಹುಜೂರ್

ಮರದೊಳಗೆ ಹೂ ಕಾಯಿ ಹಣ್ಣ ರುಚಿ ಅಡಗಿಹುದು ಖರೆ
ಒಡಲೊಳಗೆ ಸುರಿದ ಮದಿರೆಯಲಿ ಪ್ರೀತಿ ಹೇಗೆ ಉಕ್ಕುಬಲ್ಲದು ಹುಜೂರ್

ಕಗ್ಗತ್ತಲೆಯಲಿ ಕಣ್ಣ ಭಾಷೆ, ಮುಖದ ಭಾವಗಳ ಓದಲಾಗದು ನಿಜ
ಮಗ್ಗದ ಬಟ್ಟೆಯಡಿಯಲ್ಲು ಮನದ ಹೇಯ ಕೃತ್ಯವ ನೋವು ಅಳೆಯಬಲ್ಲದು ಹುಜೂರ್

ಮೋಸ ವಂಚನೆಗಳ ಅರಿಯದ ಮನಸ್ಸು ಸುಲಭವಾಗಿ ಕಳ್ಳರ ಗುರುತಿಸಲಾಗದು ದಿಟ
ಕೋಶ ಓದಿ ದೇಶ ತಿರುಗಿದ ಮೆದುಳು ನ್ಯಾಯ ನೀತಿ ಹೇಗೆ ಮರೆಯಬಲ್ಲದು ಹುಜೂರ್

ರಾಗಿ ಕಪ್ಪಾದರೂ ಅದರೊಳಗಿನ ಪೋಷಕಾಂಶದ ಉತ್ತಮ ರುಚಿ ಬದಲಿಸದು ಎಂದೂ
ಪ್ರೇಮನ ಪರಿಶುದ್ಧ ಪ್ರೀತಿಯ ಕಡೆಗಣಿಸಿದರೆ ತಡೆಯಲು ಹೇಗೆ ಸಾಧ್ಯವಾಗಬಲ್ಲದು ಹುಜೂರ್ ?
@ಪ್ರೇಮ್@
31.08.2022

ಶಿಶುಗೀತೆ -ಇರುವೆ

ಇರುವೆ

ಸೊಕ್ಕಿನ ಇರುವೆಯು ಪಕ್ಕದ ಮನೆಕಡೆ
ಸಾಗುತಲಿತ್ತದು ಸಂತಸದಿ
ಮುಕ್ಕುತ ಸಿಹಿಯನು  ಕಕ್ಕುತ ಕಹಿಯನು
ನಡೆಯುತಲಿತ್ತು ಹೊಸತನದಿ..

ತಟ್ಟನೆ ನೋಡಿತು ಸತ್ತು ಬಿದ್ದಿದ್ದ
ದಪ್ಪನೆ ಒಂದು ಜಿರಳೆಯನು
ಪಟ್ಟನೆ ಓಡಿ ಗೆಳೆಯರ ಕರೆಯಲು
ಓಡುತ ಬಂದವು ಮಾಡಿ ಸಾಲನ್ನು

ಬಿಟ್ಟವು ಬಾಯಿಯ ಶಕ್ತಿಯು ಒಗ್ಗಟ್ಟಿನ
ನೋಡುತ ನಿಂತವು ಹಿಂದುಗಡೆ
ಕೆಟ್ಟೆವು ಸಾಲಲಿ ಒಟ್ಟಿಗೆ ಬನ್ನಿರಿ
ಎತ್ತೋಣ ನಾವು ಮುಂದುಗಡೆ..

ಸಾಲನು ಬಿಟ್ಟವು ಎದುರಿಗೆ ಬಂದವು
ಮೂತಿಯ ತೂರಿಸಿ ಎಳೆದಾಡಿದವು
ಪಾಲನು ಪಡೆಯಲು ವೇಗದಿ ಎಲ್ಲವೂ
ನೂಕುತ ಮನೆಕಡೆ ಸಾಗಿದವು..
@ಪ್ರೇಮ್@
01.09.2022

ದಶಕ -94

ದಶಕ -94
ಗುರುತರ ಜವಾಬ್ದಾರಿಯ ಹೊತ್ತು
ಗುರುವಾಗುವುದನು ಲಘುವಾಗಿ ಕಲಿಸಿ
ಗುರುಗುಟ್ಟದೆಯೇ ಗುರುವಾದ
ಗುರುವಿಗೆ ನನ್ನಯ ಎಂಟೆದೆ ನಮನವು..

ಒಳಿತನು ಕಲಿಸಿ ಕೆಡುಕನು ಓಡಿಸಿ
ಕಲಿತರೆ ಮಾತ್ರ ಗೆಲುವೆಂದು ಬೋಧಿಸಿ
ಕೊಳದಲಿ ಹೋದರೂ ವಿದ್ಯೆಯು ಇರಲಿ
ಎನುತಲಿ ತಲೆಗೆ ಬುದ್ಧಿಯ ತೂರಿದ

ಗುರುವೇ ನಿನ್ನಯ ಪಾದಕೆ ಬಾಗುವೆ
ನೀನಿಲ್ಲದೆ ನಾನಿಲ್ಲವು ಎನ್ನುತ ನಮಿಸುವೆ..
@ಪ್ರೇಮ್@
05.09.2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -147

 ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -147

ನಾಳೆ ಶಿಕ್ಷಕರ ದಿನಾಚರಣೆ.  ನಮ್ಮ ದೇಶದಲ್ಲಿ ಮಾಜಿ ರಾಷ್ಟ್ರಪತಿಗಳಾದ  ಡಾ. ಸರ್ವಪಲ್ಲಿ ರಾಧಾ ಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವೆಂದು ಆಚರಿಸುವ ಬಗ್ಗೆ ನಿಮಗೆ ತಿಳಿದಿದೆ. ಈ ವರ್ಷ ಅವರ 135ನೇ ಜಯಂತಿಯ ಆಚರಣೆ. ಈ ಶುಭ ಸಂಧರ್ಭದಲ್ಲಿ ನನಗೆ ಕಲಿಸಿ, ನನ್ನನ್ನು ಈ ಹಂತಕ್ಕೆ ತಂದ ನನ್ನೆಲ್ಲಾ ಅಂಗನವಾಡಿ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಕಾಲೇಜು, ಸ್ನಾತಕೋತ್ತರ ಪದವಿವರೆಗಿನ ಎಲ್ಲಾ   ಶಿಕ್ಷಕಿಯರು, ಶಿಕ್ಷಕರು, ಬೋಧಕರು, ಉಪನ್ಯಾಸಕರು ಪ್ರಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಭಾಷಾ ಶಿಕ್ಷಕರು, ಕೋರ್ ಶಿಕ್ಷಕರು, ಸಂಗೀತ ಶಿಕ್ಷಕರು, ಕಲಾ ಕ್ರಾಫ್ಟ್ ಶಿಕ್ಷಕರು, ಟೈಲರಿಂಗ್ ಶಿಕ್ಷಕರು, ಪ್ರಾಚಾರ್ಯರು, ಸಿ ಆರ್ ಪಿ ಗಳು, ಬಿ ಆರ್ ಪಿ ಗಳು, ಪ್ರಾಂಶುಪಾಲರು, ಬಿ ಇ ಓ, ಡಿ ಡಿ ಪಿ ಐ ಯವರು , ಹಾಗೂ ಶಿಕ್ಷಣ ಇಲಾಖೆಗೆ ತಮ್ಮ ಜೀವನವನ್ನು ಮುಡಿಪಾಗಿತ್ತು, ಸದಾ ದುಡಿಯುತ್ತಿರುವ  ಹಿರಿಯ ಕಿರಿಯ ಹಂತದ ಎಲ್ಲಾ ಬೋಧಕ  ವೃಂದಕ್ಕೆ ನನ್ನ ಹೃದಯಾಂತರಾಳದ ನಮನಗಳು. 

"ವರ್ಣ ಮಾತ್ರಮ್ ಕಳಿಸಿದಾತಮ್ ಗುರು " ಎಂಬ ಮಾತಿದೆ. ಆತ ಒಂದಕ್ಷರ ಕಳಿಸಿದರೂ ಗುರುವೇ. ಅವನ ಕಾಲ ಮಟ್ಟಕ್ಕೆ ಇಳಿದರಷ್ಟೇ ನಾವು ಕಲಿಯಬಲ್ಲೆವು, ಬೆಳೆಯಬಲ್ಲೆವು. ಅದಕ್ಕೇ ದಾಸರು ಹೇಳಿದ್ದು, "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.." ಎಂದು. ಈಗೀಗ "ಶಾಲೆಯಲ್ಲಿ ಏನೇ ತಪ್ಪು ಮಾಡಿದರೂ ಶಿಕ್ಷೆ ಕೊಡುವ ಅಧಿಕಾರ ಶಿಕ್ಷಕರಿಗೆ ಇಲ್ಲ "ದ ಕಾರಣ ಶಿಕ್ಷಕ ಸಫರರ್. ಈ ಕೆಲಸವನ್ನು ಪೊಲೀಸ್ ಡೆಪಾರ್ಟ್ಮೆಂಟ್ ಮಾಡುತ್ತಿದೆ. ಇದು ಕೆಟ್ಟದು, ಹೀಗೆ ಮಾಡಿದರೆ ಇದು ಒಳ್ಳೆಯದು, ಇದು ಜೀವನದ ಸರಿಯಾದ ಮಾರ್ಗ ಎಂದು ಕೇಳದ ಆ ವಯಸ್ಸಿನ ಮಕ್ಕಳಿಗೆ ಒಂದೆರಡು ಕೊಟ್ಟು ಬುದ್ಧಿ ಕಲಿಸುವ ಕಾಲ ಹೋಗಿದೆ. ಈಗ ಏನಿದ್ದರೂ ವಿದ್ಯಾರ್ಥಿ ಸ್ನೇಹಿ ಶಿಕ್ಷಣ. ಮಗು ಏನೇ ಮಾಡಿದರೂ ಅದು ಸರಿ. ಶಿಕ್ಷಕರು ಅವನ ಮಟ್ಟಕ್ಕೆ ಇಳಿಯಬೇಕು. ಶಿಕ್ಷಕರಿಗೆ ಗೊತ್ತಿರುವುದನ್ನು ಹೇಳಿ ಕೊಡುವುದಲ್ಲ, ಅವನಿಗೆ ಬೇಕಾದ್ದನ್ನು ಕಲಿಸಿ ಕೊಡುವುದೂ ಅಲ್ಲ, ಅವನೇ ಕಲಿಯಬೇಕು, ಶಿಕ್ಷಕರು ಗೈಡ್ ಆಗಿ ಸಹಕರಿಸಬೇಕು. ಕಲಿಯುವ ಕೆಲಸ ಮಗುವೇ ಮಾಡಬೇಕು. ಅವನ ಕಲಿಕೆಗೆ ಬೇಕಾದ ಸಾಧನ ಸಲಕರಣೆ ಹಿಡಿದುಕೊಂಡು, ಬರವಣಿಗೆ ಮೂಲಕ ಮಾತ್ರ ಅಲ್ಲ, ಕಂಪ್ಯೂಟರ್, ಇಂಟರ್ನೆಟ್, ಗೂಗಲ್ ಬಳಸಿ ಅವನಿಗೆ ತಾಂತ್ರಿಕ ಪಾಠ ನೀಡ ಬೇಕು. ಅದರಲ್ಲಿನ ವಿಡಿಯೋ ಎಡಿಟರ್, ಫ್ಲೆಕ್ಸ್, 3ಡಿ  ಮೋಷನ್ ಚಿತ್ರಗಳ ತಯಾರಿಕೆ ಇವುಗಳನ್ನೆಲ್ಲ ಕಲಿತು ಇವುಗಳನ್ನು ಬಳಸಿ ಶಿಕ್ಷಕರು ಕಲಿಸ ಬೇಕು. ಇದು ಇಂದಿನ ಶಿಕ್ಷಣ ಪದ್ದತಿ. ಇದರ ಜೊತೆ ಕಳಿಸಿದ್ದನ್ನು ನೀವು ಏನೆಲ್ಲಾ ಕಳಿಸಿದ್ದೀರಿ, ಶಾಲೆಯಲ್ಲಿ ಏನೆಲ್ಲಾ ಮಾಡಿದ್ದೀರಿ, ಮಕ್ಕಳಿಗೆ ಕಲಿಕಾ ವಾತಾವರಣ ಸೃಷ್ಟಿಸಲು ಕೈಗೊಂಡ ಕಾರ್ಯಕ್ರಮಗಳು ಇವುಗಳ ಎಲ್ಲದರ ಬಗ್ಗೆ ಸಚಿತ್ರ ವರದಿ ತಯಾರಿಸಬೇಕು. ಅದುವೇ ಸಾಕ್ಷಿ. ಇಷ್ಟೇ ಮುಗಿಯಲಿಲ್ಲ, ಅದು ಯಾವುದೇ ವಿದ್ಯಾರ್ಥಿ ಇರಲಿ ಅವನಿಗೆ ಆರರಿಂದ ಹದಿನಾಲ್ಕು ವರ್ಷದ ವರೆಗೆ, ಕಡ್ಡಾಯ ಪ್ರಾಥಮಿಕ ಶಿಕ್ಷಣ ಸಿಗಬೇಕು, ಅವನು ಶಾಲೆಯಿಂದ ಹೊರಗುಳಿಯ ಬಾರದು. ಮೂರರಿಂದ ಆರು ವರ್ಷದ ವರೆಗೆ ಪೂರ್ವ ಪ್ರಾಥಮಿಕ ಶಿಕ್ಷಣ ಮಗುವಿಗೆ ಸಿಗಬೇಕು. ಆದ ಕಾರಣ ಅವನು ಅಕ್ಷರ ಕಲಿಯದೇ ಇದ್ದರೆ, ಅವನಿಗೆ ಓದಲು ಬರೆಯಲು ಬಾರದೆ ಇದ್ದರೆ ಅದಕ್ಕೆ ಶಿಕ್ಷಕರೇ ಜವಾಬ್ದಾರಿ. ಅದು ಯಾವ ಮೆತಡ್ ಉಪಯೋಗಿಸಿ ಆದರೂ ಸರಿ, ಮಗು ಶಾಲೆಗೆ ಬರದೇ ಇದ್ದರೆ ಅವನ ಮನೆಗೆ ಹೋಗಿ ಆದರೂ ಸರಿ, ಅವನಿಗೆ ವಿದ್ಯೆ ಅವನಿಗೆ ಕಲಿಸಬೇಕು ಮತ್ತು ಅವನು ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ನೂರಕ್ಕೆ ಅರವತ್ತಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣನಾಗಬೇಕು. ಇದು ಇಂದಿನ ಶಿಕ್ಷಣದ ವಿಚಾರ.

ಇನ್ನೊಂದು ವಿಚಾರ ಏನೆಂದರೆ ಹಿಂದಿನ ಹಾಗೆ ಇಂದು ಫಸ್ಟ್ ಕ್ಲಾಸ್ ಅಂಕ ಪಡೆದು ಪಾಸಾದರೆ ಯಾವುದೇ ಪ್ರಯೋಜನ ಇಲ್ಲ ಮತ್ತು ಅದು ಏನೂ ಸಾಲದು. ಈಗ ಔಟ್ ಆಫ್ ಔಟ್ ಕಾಲ, ಮತ್ತು ತೊಂಭತ್ತು ಶೇಕಡಾಕ್ಕಿ0ತ ಹೆಚ್ಛು ಅಂಕ. ಎ ಪ್ಲಸ್ ಗ್ರೇಡ್.  ಇದಕ್ಕೆ ಶಾಲಾ ಸಮಯದಲ್ಲಿ ಮಾತ್ರವಲ್ಲ, ಪ್ರತಿ ದಿನ ಬೆಳಗ್ಗೆ ಸಂಜೆ ಸ್ಪೆಷಲ್ ಕ್ಲಾಸ್ ಕೊಟ್ಟು ಓದಿಸಬೇಕು. ಇಷ್ಟು ಅಂಕ ಎಲ್ಲಾ ವಿದ್ಯಾರ್ಥಿಗಳು ಪಡೆದರೆ ಮಾತ್ರ ಶಾಲಾ ಕ್ಯೂಪಿಐ, ತಾಲೂಕಿನ ಕ್ಯೂಪಿಐ, ಜಿಲ್ಲಾ ಕ್ಯೂಪಿಐ ಹೆಚ್ಚು ಬಂದು ರಾಜ್ಯ ಪಟ್ಟಿಯಲ್ಲಿ ಜಿಲ್ಲೆಯ ಹೆಸರು ಮೇಲೇರುತ್ತದೆ. ಇಲ್ಲದೆ ಹೋದರೆ, ಅಂದರೆ ಅಕಸ್ಮಾತ್ ಜಿಲ್ಲೆಯ, ತಾಲೂಕಿನ, ಕ್ಲಸ್ಟರ್ ನ, ಶಾಲೆಯ ಫಲಿತಾಂಶ ಏನಾದರೂ ಕಡಿಮೆ ಬಂದು ಕ್ಯೂ ಪಿ ಐ ಪಟ್ಟಿಯಲ್ಲಿ ಸ್ಥಾನ ಕೆಳಗೆ ಬಂದರೆ ಮುಗೀತು ಕತೆ. ಮುಂದಿನ ವರ್ಷವೆಲ್ಲಾ ಎಲ್ಲರ ಕಣ್ಣು ಅವರ ಮೇಲೆಯೇ. ಹಿಂದಿನ ವರ್ಷದಲ್ಲಿ ಕಲಿತ ಮಕ್ಕಳೇ ಬೇರೆ, ಇಂದು ಆ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳೇ ಬೇರೆ, ಅವರ ಭಾಷೆ, ಮನೆಯ ಪರಿಸರ,ಪರಿಸ್ಥಿತಿಗಳು,   ಆಹಾರ ಪದ್ಧತಿ, ಸಮಸ್ಯೆಗಳು ಬೇರೆಯೇ. ಅದು ಹೇಗೆ ಈ ವರ್ಷಕ್ಕೆ ಅದನ್ನು ತಾಳೆ ಮಾಡುವುದೋ ತಿಳಿಯದು. ಶಿಕ್ಷಕರು ತಮ್ಮ ಕಲಿಕೆಯ, ಕಲಿಸುವ ಸಾಮರ್ಥ್ಯವನ್ನು ಬದಲಾಯಿಸಿಕೊಂಡು ಮತ್ತೆ ಹೆಚ್ಚಿನ ಕಲಿಕೆಗೆ ಪ್ರೋತ್ಸಾಹ ನೀಡಬಹುದು, ಕಲಿಕಾ ವಿಚಾರ, ಕೌಶಾಲಗಳನ್ನು ತಿಳಿಸಿ ಕೊಡಬಹುದು. ಆದರೆ ಕಲಿಕಾ ಕಾರ್ಯ ವಿದ್ಯಾರ್ಥಿಯೇ ಸ್ವತಃ ಮಾಡಬೇಕು ಅಲ್ಲವೇ? ಅಮ್ಮ ಮನೆಯಲ್ಲಿ ಅಡುಗೆ ಮಾಡ ಬಹುದು, ತಿನ್ನಲು ಸಾಧ್ಯ ಆಗದೆ ಇದ್ದರೆ ಬಾಯಿಯೊಳಗೂ ಆಹಾರ ಇಡಬಹುದು ಆದರೆ ಜಗಿದು ನುಂಗುವ ಕಾರ್ಯ ಮಗುವೇ ಮಾಡಬೇಕು ಅಲ್ಲವೇ? ಆ ಕಾರ್ಯವನ್ನು ಮಾಡದ ಮಗುವಿಗೆ ಅದನ್ನೂ ಶಿಕ್ಷಕರೇ ಪ್ರೀತಿ ಹಾಗೂ ತಾಳ್ಮೆಯಿಂದ ಮಾಡಿಸುವ ಗುರುತರ ಜವಾಬ್ದಾರಿ ಇಂದಿನ ಶಿಕ್ಷಕರ ಮೇಲಿದೆ. 

ಒಂದು ಕಾಲದಲ್ಲಿ ಶಿಕ್ಷಕ ವೃತ್ತಿ ಅತಿ ಶ್ರೇಷ್ಠ ಎಂಬ ಭಾವ ಇತ್ತು. ಈ ವೃತ್ತಿ ಸರ್ವ ಕಾಲಕ್ಕೂ ಶ್ರೇಷ್ಠವೇ ಬಿಡಿ. ಆದರೆ ಇಂದಿನ ಒತ್ತಡದ ಪರಿಸ್ಥಿತಿಯ ಕಾರಣದಿಂದಾಗಿ ಇಂಜಿನಿಯರ್ಸ್ ಮಕ್ಕಳು ಇಂಜಿನಿಯರ್ಸ್ ಆಗ ಬಯಸುತ್ತಾರೆ, ಡಾಕ್ಟರ್ಸ್ ಮಕ್ಕಳು ತಾವೂ ಡಾಕ್ಟರ್ಸ್ ಆಗ ಬಯಸುತ್ತಾರೆ, ಆದರೆ ಯಾವುದೇ ಶಿಕ್ಷಕರ ಮಕ್ಕಳು ಮುಂದೆ ತಾವು ಶಿಕ್ಷಕ ವೃತ್ತಿಯಲ್ಲಿ ಮುಂದುವರೆಯಲು ಇಚ್ಛಿಸುವುದಿಲ್ಲ. ಕಾರಣ ಕಷ್ಟದ ಬದುಕು. ಕಲಿಯುವ, ಸದಾ ಕಲಿಯುವ , ಕಲಿಸುವ ಕಾರ್ಯ ಸುಲಭದ ಮಾತಲ್ಲ. ಒಂದು ಮನವನ್ನು ತಿದ್ದುವ ಕಾರ್ಯ, ಅದನ್ನು ಸರಿಗೊಳಿಸುವ ಕಾರ್ಯವಿದು. 

ಶಿಕ್ಷಕ ಒಂದು ಕಾಲದಲ್ಲಿ ಶಿಕ್ಷೆ ಕೊಟ್ಟು ಕಳಿಸುವವ ಆಗಿದ್ದ. ಕಾಲ ಬದಲಾದ ಹಾಗೆ ಜನರೂ ಬದಲಾದರು, ಶಿಕ್ಷಣ ಪದ್ದತಿ, ಶಿಕ್ಷಣ ವ್ಯವಸ್ಥೆ ಎಲ್ಲವೂ ಬದಲಾಯಿತು, ಗುರುಕುಲಗಳು ಕಾಣೆಯಾಗಿ ಶಾಲೆಗಳು ಬಂದವು. ರಾಜ್ಯ ಪಠ್ಯಕ್ರಮ ಶಿಕ್ಷಣ, ಕೇಂದ್ರ ಪಠ್ಯಕ್ರಮ ಶಿಕ್ಷಣ ಪದ್ದತಿ, ಅಂತರ ರಾಷ್ಟ್ರೀಯ ಪಠ್ಯಕ್ರಮ ಶಿಕ್ಷಣ ಪದ್ದತಿ ಇದರ ಜೊತೆ ಮಾತೃಭಾಷಾ ಶಿಕ್ಷಣಕ್ಕೆ ಹೋರಾಟ ಬಂದು ಎಲ್ಲಾ ಶಿಕ್ಷಣ ಕ್ರಮಗಳೂ ಈಗ ನಮ್ಮೊಡನೆ ಇವೆ. ಯಾವ ಪಠ್ಯ ಶಿಕ್ಷಣ ಕ್ರಮದಲ್ಲಿ ನಮ್ಮ ಮಕ್ಕಳನ್ನು ಓದಿಸಬೇಕು ಎಂಬುದನ್ನು ಆಯಾ ಪೋಷಕರೇ ನಿರ್ಧಾರಿಸುತ್ತಾರೆ ಆದರೆ ಪ್ರತಿ ಶಾಲೆಗೂ ಮಕ್ಕಳನ್ನು ಕರೆ ತರಬೇಕು, ತಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಾಗಬೇಕು ಎಂಬ ಒತ್ತಡ  ಶಿಕ್ಷಕರ ಮೇಲಿದೆ. 

ಶಿಕ್ಷಣ ಇಂದು ಎರಡು ರೀತಿಯಲ್ಲಿದೆ. ಸರಕಾರದಿಂದ ಸಿಗುವ ಉಚಿತ ಶಿಕ್ಷಣ ಹಾಗೂ ಖಾಸಗಿಯಿ0ದ ಪಡೆಯುವ ಶಿಕ್ಷಣ. ಇದು ಪೋಷಕರ ಜವಾಬ್ದಾರಿ. ಮನವೊಲಿಸುವುದು ನಮ್ಮ ಧರ್ಮ. ಕಲಿಕೆಗೆ ಪ್ರೋತ್ಸಾಹ ಎಲ್ಲಾ ಕಡೆ ಇದೆ. ಎಲ್ಲಾ ಶಿಕ್ಷಕರೂ , ಪೋಷಕರೂ ಶ್ರಮ ಪಡುವುದು ಮಕ್ಕಳ ಶಿಕ್ಷಣದ ಒಳಿತಿಗಾಗಿ, ಉದ್ಧಾರಕ್ಕಾಗಿ. ಇಂದಿನ ಮಕ್ಕಳು ಮುಂದಿನ ನಾಯಕರು. ದೇಶ ಆಳಲು ಅವರಿಗೆ ಬೇಕಾದ ಶಕ್ತಿ, ಸಾಮರ್ಥ್ಯ ಬುದ್ಧಿಯ ಜೊತೆಗೆ ಧೈರ್ಯ ಸ್ಥೈರ್ಯಗಳನ್ನೂ ನೀಡಿ ಅವರನ್ನು ತಯಾರುಗೊಳಿಸುವ ಶಕ್ತಿಗಳು ಮತ್ತು ಆ ಜವಾಬ್ದಾರಿ ಹೊತ್ತವರು ಪೋಷಕರು, ಶಿಕ್ಷಣ ವ್ಯವಸ್ಥೆ ಮತ್ತು ಸಮಾಜ. ಇಲ್ಲಿ ದೈಹಿಕವಾಗಿ ಅನನುಕೂಲ ಇರುವ, ಪೋಷಕರನ್ನು ಕಳೆದುಕೊಂಡ, ಮಾನಸಿಕವಾಗಿ ಸಮಸ್ಯೆಗಳಿರುವ ಮಕ್ಕಳನ್ನೂ ಗಮನಿಸಿಕೊಳ್ಳಬೇಕು. ಯಾವ ಮಗುವಿಗೂ ಅನ್ಯಾಯ ಆಗ ಬಾರದು. ಎಲ್ಲಾ ವಿದ್ಯಾರ್ಥಿಗಳನ್ನು ಕೂಡಾ ಮುಂದಿನ ಜೀವನಕ್ಕೆ ಸದೃಢಗೊಳಿಸುವ ಮಹತ್ಕಾರ್ಯವಿದು. ಆದ್ದರಿಂದ ಈ ಕೆಲಸದಲ್ಲಿ ನಿರತರಾದ ಪ್ರತಿ ಮನಕ್ಕೂ ನನ್ನದೊಂದು ಸಲಾಂ. 

ಎಲ್ಲಾ ವಿದ್ಯಾರ್ಥಿಗಳನ್ನೂ ತಮ್ಮ ಮಕ್ಕಳು ಎಂದು ನೋಡಿಕೊಳ್ಳುತ್ತಾ, ತಪ್ಪು ತಿದ್ದಿ ಸರಿ ದಾರಿಗೆ ಅವರನ್ನು ತರುವ ಪಾತ್ರದ ಜೊತೆಗೆ ಅವರ ಮುಂದಿನ ಬದುಕನ್ನೂ ಕಟ್ಟಿ ಕೊಡುವ ಕಾರ್ಯ ಮಾಡುತ್ತಾ, ಸಮಾಜದಲ್ಲಿ ಯಾವುದೇ ಪ್ರಶಸ್ತಿ, ಪುರಸ್ಕಾರಗಳ ಹಿಂದೆ ಹೋಗದೆ ತಮ್ಮ ಕಾರ್ಯವನ್ನು ತಾವು ಶ್ರದ್ಧೆಯಿಂದ ಮಾಡುತ್ತಿರುವ ಅದೆಷ್ಟೋ ಶಿಕ್ಷಕರನ್ನು ಕಂಡಿದ್ದೇನೆ. ಬಡ ವಿದ್ಯಾರ್ಥಿಗಳಿಗೆ ತಮ್ಮ ಹಣದಿಂದ ಬಟ್ಟೆ ತೆಗೆದು ಕೊಡುವ, ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದರೆ ತಮ್ಮ ಹಣದಿಂದ ಅವರಿಗೆ ಧನ ಸಹಾಯ, ಬಹುಮಾನ, ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ, ತಮ್ಮಲ್ಲಿ ಸಿಕ್ಕಿದ, ಇರುವ, ತೆಗೆದುಕೊಂಡು ಬಂದು ವಿದ್ಯಾರ್ಥಿಗಳ ಉಪಯೋಗಕ್ಕೆ ನೀಡುವ ಶಿಕ್ಷಕರು ನಮ್ಮ ಹೆಮ್ಮೆ. ಶಿಕ್ಷಕರೊಬ್ಬರು ನಮ್ಮ ಜೊತೆ ಮಥುರಾಕ್ಕೆ ಬಂದಿದ್ದಾಗ ಅಲ್ಲಿ ದೇವಾಲಯದ ಹೊರಗೆ ಭಜನೆ ಹೇಳುವಾಗ ಬಾರಿಸುವ ತಾಳ ಮಾರುತ್ತಿದ್ದರು. ತಕ್ಷಣ ಆ ಶಿಕ್ಷಕರು ಹೇಳಿದ ಮಾತು ಇಂದಿಗೂ ನನ್ನ ಕಿವಿಯಲ್ಲಿ ನಾಟಿ ನಿಂತಿದೆ. "ನಮ್ಮ ಶಾಲಾ ಮಕ್ಕಳಿಗೆ ಕಂಸಾಳೆ ನೃತ್ಯ ಮಾಡಲು ಉಪಯೋಗ ಆಗುತ್ತದೆ. ನಾನು ಅದನ್ನು ಹದಿನಾರು ಸೆಟ್ ನಮ್ಮ ಶಾಲೆಗೆ ತೆಗೆದುಕೊಳ್ಳುತ್ತೇನೆ" ಎಂದಾಗ ನನಗೆ ಅವರ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಯಿತು. ಹಾಗೆಯೇ ಹಳೆಯ ಅಂದವಾದ ಬಟ್ಟೆಗಳನ್ನು ಸಿರಿವಂತರ ಬಳಿ ಸಂಗ್ರಹಿಸಿ ಅದನ್ನು ತಮ್ಮ ಶಾಲಾ ಬಡ ವಿದ್ಯಾರ್ಥಿಗಳಿಗೆ ಹಂಚುವ, ಸಂಜೆ ಆರು ಗಂಟೆಯವರೆಗೂ ಶಾಲಾ ಕಾರ್ಯ ಮಾಡುವ, ಬೆಳಗ್ಗೆ ಎಂಟು ಗಂಟೆಗೇ ಶಾಲೆಯಲ್ಲಿ ಹಾಜರಿರುವ, ರಾತ್ರಿ ಹನ್ನೆರಡು, ಒಂದು ಗಂಟೆಯವರೆಗೂ ಕುಳಿತು ಶಾಲಾ ದಾಖಲೆಗಳನ್ನು ಆನ್ಲೈನ್ ಫೀಡ್ ಮಾಡುವ, ನಿಷ್ಠೆಯಿಂದ ರಾತ್ರಿ ಎರಡು ಗಂಟೆಯವರೆಗೆ ಕುಳಿತು ನಿಷ್ಟಾ ತರಬೇತಿ ಪೂರ್ಣಗೊಳಿಸಿ ನಿಟ್ಟಿಸಿರಿಡುವ ಶಿಕ್ಷಕರು ನಮ್ಮ ನಿಮ್ಮೆಲ್ಲರ ನಡುವೆ ಇದ್ದಾರೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಅವರ ಪೋಷಕರನ್ನೂ ತಮ್ಮ ಖರ್ಚಿನಲ್ಲೇ ಕರೆದುಕೊಂಡು ಹೋಗಿ ಆ ವಿದ್ಯಾರ್ಥಿಗಳಿಗೆ ಬ್ಯಾಂಕ್ ಅಕೌಂಟ್, ಜಾತಿ- ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮಾಡಿಸಲು ನೆರವಾಗುವ ಶಿಕ್ಷಕರು ಪ್ರಶಸ್ತಿಗಾಗಿ ಆಸೆ ಪಡುವವರಲ್ಲ, ಅರ್ಜಿ ಹಾಕಿದವರೂ ಅಲ್ಲ. ತಮ್ಮ ಮನೆಯಲ್ಲಿ ಬೆಳೆದ ತರಕಾರಿ ತಂದು ಬಿಸಿ ಊಟಕ್ಕೆ ಸಹಕರಿಸುವ ಶಿಕ್ಷಕರಿದ್ದಾರೆ. ಅವರೆಲ್ಲರ ಪರಿಶ್ರಮದ ಫಲ ಉತ್ತಮ ಗುಣದ ಆದರ್ಶ ವಿದ್ಯಾರ್ಥಿಗಳು.

ಭಾರತ ಹಲವಾರು ವೈವಿಧ್ಯತೆ ಹೊಂದಿದ್ದರೂ ಏಕತೆ ಬೆಳೆಸುವುದು ಶಿಕ್ಷಣ ಕೇಂದ್ರಗಳೇ ಅಲ್ಲವೇ?
ದೇಶ ಕಟ್ಟುವ ಇಂಜಿನಿಯರ್ ಗಳನ್ನು, ಆರೋಗ್ಯ ಭಾಗ್ಯ ಕೊಟ್ಟು ಜೀವನ ದಾನ ಕೊಡುವ, ಹೃದಯ-ಕಣ್ಣು ಕಸಿ ಮಾಡುವುದನ್ನೂ ಸೇರಿ ಎಲ್ಲಾ ರೀತಿಯ ವೈದ್ಯ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ, ವಾಹನದ ಪ್ರತಿ ಬಿಡಿ ಭಾಗಗಳನ್ನೂ ಪರಿಚಯಿಸಿ ಮೆಕ್ಯಾನಿಕ್ ಕೆಲಸಕ್ಕೆ ಸನ್ನದ್ದುಗೊಳಿಸುವ, ರಾಷ್ಟ್ರ ರಕ್ಷಣೆಯ ಮಾಡಲು ಸೈನಿಕರನ್ನು ತಯಾರುಗೊಳಿಸುತ್ತಿರುವ, ದೇಶದ ಭದ್ರ ಬುನಾದಿಗೆ ಅಡಿಪಾಯ ಹಾಕಲು ನಾಯಕರನ್ನು, ಕೆಲಸದ ಆಳುಗಳನ್ನು, ಕಂಟ್ರಾಕ್ಟರ್ ಗಳನ್ನು, ಶಿಕ್ಷಕರನ್ನು, ಮುಂದಿನ ಪೀಳಿಗೆಯ ಎಲ್ಲಾ ರಂಗಗಳಲ್ಲಿ ಮುಂದೆ ಬರುವ ವಿದ್ಯಾರ್ಥಿಗಳನ್ನು ತಯಾರು ಗೊಳಿಸುತ್ತಿರುವ, ಕಲೆ, ನಾಟಕ, ಭಜನೆ, ಗಾಯನ, ಹಾಡು, ನಟನೆ, ಸಮಾಜ ಸೇವೆ, ಕಾನೂನು ಸೇವೆ, ಪೊಲಿಸ್ ಇಂತಹ ಎಲ್ಲ  ಸೇವೆಗಳಿಗೂ  ಪ್ರತ್ಯೇಕವಾಗಿ  ಆಯಾ ಆಸಕ್ತರನ್ನು ಅಣಿಗೊಳಿಸುತ್ತಾ  ಆ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ , ದೇಶದ ಬಗ್ಗೆ ಗೌರವ, ಹಿರಿಯರಿಗೆ ಗೌರವ, ಕಿರಿಯರಿಗೆ ಸಹಕಾರ ನೀಡಲು ಕಲಿಸಿ, ದೇಶದ ಭವಿಷ್ಯಕ್ಕೆ ಭಾಷ್ಯ ಬರೆಯುತ್ತಿರುವ ಸರ್ವ ಗುರು ವೃಂದಕ್ಕೆ ತಲೆ ಬಾಗುತ್ತಾ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ ಆ ದೇವರು ನಿಮಗೆ ಆನಂದ, ಆರೋಗ್ಯ, ಆಯುಷ್ಯ ಹಾಗೂ ಎಲ್ಲಾ ಭಾಗ್ಯಗಳನ್ನೂ ದಯಪಾಲಿಸಿ ಆಶೀರ್ವದಿಸಲಿ ಎನ್ನೋಣ. ನೀವೇನಂತೀರಿ?
@ಪ್ರೇಮ್@
04.09.2022

ಕಾಲೇಜಿನ ಸುವರ್ಣ ಮಹೋತ್ಸವ ಗೀತೆ

ನೋಡಿಯೇ ನೋಡು

ಸಂಭ್ರಮ ಸಂಭ್ರಮ ಎಲ್ಲೆಲ್ಲೂ ಸಂಭ್ರಮ
ಮೂಲ್ಕಿಯ ಸರಕಾರಿ ಕಾಲೇಜಿಗೆ ಈ ವರ್ಷ
ಸುವರ್ಣ ಮಹೋತ್ಸವದ ಸಂಭ್ರಮ..//೧//

ಸಾವಿರಾರು ವಿದ್ಯಾರ್ಥಿಗಳ ಹೆಮ್ಮೆಯ ಬೀಡು
ಸಾಧಕರ ತವರೂರಿನ ಹಾಡು
ಸದಾಶಿವ ರಾಯರ ನೆಲೆವೀಡು
ಕಾರ್ನಾಡಿಗೊಮ್ಮೆ ಬಂದು ನೋಡು//೨//

ಮೂಲ್ಕಿ ಕಂಬಳ ನೋಡಿಯೇ ನೋಡು
ದುರ್ಗಾ ಮಾತೆಯು ಕುಳಿತಿಹ ಜಾಡು...
ಗಾಂಧೀಜಿ ಬಂದ ಮೈದಾನ ನೋಡು
ಮನದಿ ಖುಷಿಯ ಹಾಡನು ಹಾಡು...//೩//

ಶಿಕ್ಷಕ ವೃಂದದ ಉತ್ಸಾಹ ನೋಡು
ಕಲಿಕಾರ್ಥಿಗಳಿಗೆ ಪುಸ್ತಕ  ನೀಡು
ಹಳೆ ವಿದ್ಯಾರ್ಥಿಗಳ ಸಾಹಸ ನೋಡು
ಹೆಮ್ಮೆಯ ಶಾಲೆಯ ದರ್ಶನ ಮಾಡು..//೪//
@ಪ್ರೇಮ್@
06.09.2022

ಸೋಮವಾರ, ಆಗಸ್ಟ್ 8, 2022

ಬೇಸರವಾದ ಕ್ಷಣ

ಒಂದು ಮಾತು ನೆನಪಿಡಿ ಪ್ರಜ್ವಲ್ ನಿಮ್ಮ ಮಗ ಹೇಗೋ ಶಾಲೆಗೆ ಬಂದ ಮೇಲೆ ನಮ್ಮ ಮಗು ಕೂಡ. ಹಾಗಂತ ಅವನಿಗೆ ನೀವು ಹೊಡೆದ ಹಾಗೆ ನಾವು ಹೊಡೆಯುವುದೂ ಇಲ್ಲ, ಆ ಹಕ್ಕೂ ನಮಗಿಲ್ಲ. ಏನೋ ಸುಮ್ಮನೆ ಬುದ್ದಿ ಕಲಿಯಲಿ, ಒಳ್ಳೆದಾಗಲಿ ಅಂತ ಒಮ್ಮೆ ಮುಟ್ಟಿದ ಕೂಡಲೇ ನಿಮ್ಮ ಮಗನ ದೀರ್ಘಾವಧಿ ತೊಂದರೆಗೆ ನಾನು ಜವಾಬ್ದಾರಿ ಆಗಲು ಸಾಧ್ಯ ಇಲ್ಲ. 

ನಿಮ್ಮ ಮಗನ ಮೇಲೆ ಶಾಲೆಯಲ್ಲಿ ಕಂಪ್ಲೇಂಟ್ ಆದಾಗ ನೀವೇ ಎಲ್ಲಾ ಶಿಕ್ಷಕರು ಹಾಗೂ ಮಕ್ಕಳ ಮುಂದೆ ಅವನಿಗೆ ಕೋಣಕ್ಕೆ ಬಡಿದ ಹಾಗೆ ಹೊಡೆದಿಲ್ಲವೇ? ಆಗ ನಿಮ್ಮ ಮಗನ ಬಗ್ಗೆ ನಿಮಗೆ ಕಾಳಜಿ ಬೇಕಿತ್ತು ಅಲ್ಲವೇ? ಶಾಲೆಗೆ ಸೇರಿದ ಮರುದಿನವೇ ನೀವು ಚಪಾತಿಗೆ ಉಪ್ಪು\ ಸಕ್ಕರೆ ಅಂತ ಸರ್ಫ್ ಪೌಡರ್ ಹಾಕಿ ಚಪಾತಿ ಮಾಡಿ ತಿನ್ನಿಸಿ ಅವನಿಗೆ ಫುಡ್ ಇನ್ಫೆಕ್ಷನ್ ಆಗಿ ಅಡ್ಮಿಟ್ ಆಗಿದ್ದ. ನೀವೇ ಹೇಳಿದ ಹಾಗೆ ಚಿಕ್ಕಂದಿನಿಂದ ನೀವು ನಿಮ್ಮ ಮಗನಿಗೆ ಜಂಕ್ ಫುಡ್ ತಿನ್ನಿಸಿ ಅವನ ಹೊಟ್ಟೆ ವೀಕ್ ಆಗಿದೆ. ಅಲ್ಲದೆ ಎಲ್ಲರೂ ನೋಡಿರುವರು ಏನೆಂದರೆ ಅವನು ನಿಮ್ಮ ಬಳಿ ಇದ್ದಾಗೆಲ್ಲ ಪಕ್ಕದ ಬೇಕರಿಗೆ ಹೋಗಿ ಆಗಾಗ ತನಗೆ ಬೇಕಾದ ತಿಂಡಿ ತಂದು ತಿನ್ನುವುದು. ಹೀಗಾಗಿ ಅವನಿಗೆ ಧೀರ್ಘ ಕಾಲದ ಹೊಟ್ಟೆಯ ಸಮಸ್ಯೆ ಬಂದಿರಬಹುದು. 
ಕೋವಿಡ್ ವ್ಯಾಕ್ಸಿನ್ ಕೂಡ ನಾವು ಕಂಪಲ್ಸರಿ ಹೇಳಲೇ ಇಲ್ಲ. ನಾವು ಹೇಳಿದ್ದು ಇಲಾಖೆ ನಮ್ಮ ಮೇಲೆ ನಮ್ಮ ಶಾಲೆಯ ಯಾವ ಮಕ್ಕಳೂ ಕೂಡಾ ಕೋವಿಡ್ ವ್ಯಾಕ್ಷಿನ್ ಪಡೆಯದೇ ಇರಬಾರದು ಎಂಬ ಕಾನೂನು ತಂದ ಕಾರಣ, ಆರೋಗ್ಯ ಇಲಾಖೆಯ ಸಿಬ್ಬಂದಿಯ ಮೇಲೂ ಆ ಒತ್ತಡ ಇದ್ದ ಕಾರಣ ಅವರು ನಮ್ಮ ಮುಖ್ಯ ಶಿಕ್ಷಕರ ಮೇಲೆ, ಮುಖ್ಯ ಶಿಕ್ಷಕರು ತರಗತಿ ಶಿಕ್ಷಕರ ಮೇಲೆ ಯಾವ ಮಗುವೂ ಕೋವಿಡ್ ವ್ಯಾಕ್ಷಿನ್ ನಿಂದ ಹೊರಗುಳಿಯಬಾರದು ಎಂಬ ಒತ್ತಡ ತಂದ ಕಾರಣ ನಾವು ಎಲ್ಲಾ ಪೋಷಕರಿಗೂ ಫೋನ್ ಮುಖಾಂತರ ಸಂಪರ್ಕಿಸಿ ವಿಷಯ ತಿಳಿಸ ಬೇಕಾಯಿತು. 

"ನನ್ನ ಮಗನಿಗೆ ಆರೋಗ್ಯದ ಸಮಸ್ಯೆ ಇದೆ" ಎಂದು ನೀವು ಹೇಳಿದಾಗ ನಾನು ಅದಕ್ಕೆ ಸ್ಪಂದಿಸಿ, ಹಾಗಿದ್ದರೆ ನಮಗೆ ಇಲಾಖೆಗೆ ತೋರಿಸಲು ಒಂದು ಪತ್ರ ಬರೆದು ಕೊಡಿ ಎಂದು ಹೇಳಿದ್ದೆ. ಮತ್ತೆ ಮುಖ್ಯ ಶಿಕ್ಷಕರ ಬಳಿ ಫೋನಿನಲ್ಲಿ ಮಾತಾಡಿ ನೀವು ವ್ಯಾಕ್ಸಿನ್ ಹಾಕಿಸಲು ಒಪ್ಪಿದ್ದು, ಮಗನನ್ನು ಕರೆದುಕೊಂಡು ಹೋಗಲು ಶಾಲೆಗೆ ಬಂದಾಗಲೇ ನನಗೆ ಗೊತ್ತಾದದ್ದು. ಆಗಲೂ ನಾವು ಎಲ್ಲಾ ಶಿಕ್ಷಕರು ನಿಮಗೆ "ಮೊದಲು ಡಾಕ್ಟರ್ ಸಲಹೆ ಪಡೆದು ಆಮೇಲೆ ಅವರು ಒಪ್ಪಿದರೆ ಮಾತ್ರ ವ್ಯಾಕ್ಸಿನ್ ಹಾಕಿಸಿ " ಎಂಬ ಸಲಹೆ ನೀಡಿದ್ದೆವು. 

ನೀವು ಸಿಂಗಲ್ ಪೇರೆಂಟ್ ಎಂಬ ಕಾರಣಕ್ಕೆ ನಮ್ಮ ಶಾಲಾ ಎಲ್ಲಾ ಶಿಕ್ಷಕರು ನಿಮ್ಮ ಮಗುವನ್ನು ಹೆಚ್ಚು ಕೇರ್ ಮಾಡುತ್ತಿದ್ದೆವು. ಅವನು ಆರೋಗ್ಯ ಸಮಸ್ಯೆ ಇರುವ ಮಗು ಎಂದು ಗೊತ್ತಾದ ಕೂಡಲೇ ನಾವು ಅವನು ಏನೇ ಗಲಾಟೆ, ತೊಂದರೆ ಮಾಡಿದರೂ ನಿಮಗೇ ಹೇಳುತ್ತಿದ್ದೇವೆಯೇ ಹೊರತು ನಾವು ಅವನಿಗೆ ಯಾವ ಪನಿಶ್ಮೆಂಟ್ ಕೊಡುತ್ತಿರಲಿಲ್ಲ. ಕಾರಣ ನಮಗೂ ಮಕ್ಕಳಿವೆ . ನಾವೆಲ್ಲಾ ತಾಯಂದಿರು. ಮಕ್ಕಳನ್ನು ಬೆಳೆಸುವ ಕಷ್ಟ ತಿಳಿದವರು. ಅದೂ ಅಲ್ಲದೆ ನಾನೂ ಕೂಡಾ ಸಿಂಗಲ್ ಪೇರೆಂಟ್. 

ಮತ್ತೆ ನಿಮ್ಮ ಮಗನ ಆರೋಗ್ಯ ಕೋವಿಡ್ ವ್ಯಾಕ್ಸಿನ್ ಹಾಕಿದ ಬಳಿಕ ಹಾಳಾಯಿತು ಎಂದು ನೀವೇ ಒಪ್ಪಿಕೊಂಡಿರುವಿರಿ. ಹಾಗಿದ್ದ ಮೇಲೆ ಒಂದು ತಿಂಗಳ ಹಿಂದೆ ಸುಮ್ಮನೆ  ಮರೆತು ಹೋದ ಒಂದು ವಿಷಯ ಇಟ್ಟು, ನಿಮ್ಮ ಸಮಸ್ಯೆಗೆ ನನ್ನನ್ನು ವೃಥ ಗುರಿ ಮಾಡಿ ನನ್ನ ನೆಮ್ಮದಿ ಕೆಡಿಸುವುದು ತಪ್ಪಲ್ಲವೇ? ಇದರಲ್ಲಿ ನನ್ನದು ಏನೂ ತಪ್ಪಿಲ್ಲ. ದಯವಿಟ್ಟು ನನ್ನನ್ನು ನನ್ನಷ್ಟಕ್ಕೇ ಬದುಕಲು ಬಿಟ್ಟು ಬಿಡಿ. 

ಮೂರು ದಿನಗಳಿಂದ ಬೆಳಿಗ್ಗೆ ಶಾಲೆಗೆ ಬಂದ ಕೂಡಲೇ HM "ನಿಮ್ಮದೇ ತಪ್ಪಂತೆ, ನೀವು ಎರಡು ತಿಂಗಳ ಹಿಂದೆ ಅವನಿಗೆ ಒಂದು ಪೆಟ್ಟು ಕೊಟ್ಟಿದ್ದೀರಂತೆ. ಅದರಿಂದ ಅವನಿಗೆ ಈಗ ಹೊಟ್ಟೆ ನೋವು ಬಂದಿದೆ ಅಂತೆ. ಅವನ ಅಮ್ಮ ಹೇಳಿದರು" ಎಂದಾಗ ನನಗೆ ಇರುವ ವೈಯಕ್ತಿಕ ನೋವುಗಳೇ ಹೆಚ್ಚು. ಅವುಗಳನ್ನೆಲ್ಲಾ ನನ್ನ ಮಗುವಿನ ಮುಖ ನೋಡಿ ಅದು ಹೇಗೋ ಮರೆತು ಪ್ರತಿ ನಿತ್ಯ ಕಣ್ಣೀರು ಹಾಕಿ ಶಾಲೆಗೆ ಬರುವವಳು ನಾನು. ನನ್ನ ಬಿಪಿ ಮತ್ತಷ್ಟು ಲೋ ಆಗುತ್ತದೆ. ನನ್ನ, ನನ್ನ ಮಗುವಿನ ಕಾಳಜಿಗೂ ಯಾರಿಲ್ಲ ನನಗೆ. ನನಗೆ ಜ್ವರ ಬಂದರೆ ಒಂಭತ್ತು ವರ್ಷದ ನನ್ನ ಮಗು ಆರೈಕೆ ಮಾಡಬೇಕು ನನ್ನನ್ನು. 

ದಯವಿಟ್ಟು ಅರ್ಥ ಮಾಡಿಕೊಳ್ಳಿ. ಶಿಕ್ಷಕರು ಎಂದರೆ ರಾಕ್ಷಸರಲ್ಲ. ಅವರಿಗೂ ಅವರದ್ದೇ ಆದ ಹಲವಾರು ನೋವುಗಳಿವೆ. ವೈಯಕ್ತಿಕ ತೊಂದರೆಗಳಿವೆ. ಬೇನೆ ಬೇಸರಗಳಿವೆ. ಅವುಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಅವರು ಮನೆ ಹಾಗೂ ಹೊರಗೆ ದುಡಿಯುತ್ತಾ ಇರುತ್ತಾರೆ. ಪ್ರಪಂಚದಲ್ಲಿ ನೋವು, ಕಷ್ಟ, ದುಃಖ ಎಲ್ಲರಿಗೂ ಇದೆ. ನಮ್ಮ ಕಷ್ಟಕ್ಕೆ ಯಾರೋ ಹೇಳಿದರು ಎಂದು ನಾವು ಅನ್ಯರನ್ನು ಬೆಟ್ಟು ಮಾಡಿ ತೋರಿಸುವುದು ಎಷ್ಟು ಸರಿ? ಅದು ಕೂಡ ನಾನು ಯಾವತ್ತೂ ಯಾರಿಗೂ ಕೇಡು ಬಯಸದವಳು. ಎಲ್ಲರೂ ಚೆನ್ನಾಗಿ ಇರಬೇಕು ಎಂದು ಸದಾ ಬೇಡುವವಳು. ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಾ ಕೇವಲ ಮಗುವಿಗಾಗಿ ಬದುಕುತ್ತಿರುವ ನೊಂದ ಹೆಣ್ಣು. ಶಾರೀರಿಕ ಹಾಗೂ ಮಾನಸಿಕ ನೋವನ್ನು ಅನುಭವಿಸುತ್ತಾ, ಯಾರ ರಗಳೆಗೂ ಹೋಗದೆ ನಾನಾಯಿತು ನನ್ನ ಬದುಕಾಯಿತು ಎಂದು ಮಗುವಿಗಾಗಿ ನನ್ನೆಲ್ಲ ನೋವನ್ನು ನುಂಗಿ ಕೊಳ್ಳುತ್ತಾ ತಂತಿಯ ಮೇಲಿನ ನಡಿಗೆಯ ಹಾಗೆ ಬದುಕು ಸಾಗಿಸುತ್ತಿರುವವಳು ನಾನು. 

ಈ ತರ ಎಲ್ಲಾ ಸುಳ್ಳು ಆರೋಪ ಹಾಕಿ ನೀವು ನನ್ನನ್ನು ದಿನ ದಿನ ಜೀವಂತ ಸಾಯಿಸುತ್ತಿರುವಿರಿ. ನನ್ನ ಬದುಕಿನ ನೋವುಗಳೇ ಹೆಚ್ಚು ನನಗೆ. ಶಾಲೆಯಲ್ಲಿ ಮಕ್ಕಳ ಜೊತೆ ನನ್ನೆಲ್ಲ ನೋವುಗಳನ್ನು ಮರೆತು, ಮನೆಯಲ್ಲಿ ಮಗಳ ಜೊತೆ ಅದು ಹೇಗೋ ಬ್ಯಾಲೆನ್ಸ್ ಮಾಡಿ ಬದುಕು ಎಂಬ ನಾವೆಯಲ್ಲಿ ಸಾಗುತ್ತಿದ್ದೇನೆ. 

ಈಗ ಸರಿಯಾದ ಗೆಳೆಯರು ಸಿಗದ ಕಾರಣ, ಇದ್ದ ಅವನಂಥ ಅವನಿಗೆ ಸರಿಯಾದ ಗೆಳೆಯರು ಟಿಸಿ ಪಡೆದು ಬೇರೆ ಶಾಲೆಗೆ ಹೋದ ಕಾರಣ ನಿಮ್ಮ ಮಗನಿಗೆ ಈ ಶಾಲೆ ಬೇಡವಾಗಿದೆ. ಬರೆಯಲು ಸೋಮಾರಿತನ ಅವನಿಗೆ. ತರಗತಿಯಲ್ಲಿ ಬರೆಯದ ಕಾರಣ ಬೇರೆ ಮಕ್ಕಳ ನೋಟ್ಸ್ ಕೊಟ್ಟು ಮನೆಯಲ್ಲಿ ನೋಟ್ಸ್ ನೀವೇ ಬರೆಸಿರುವುದು ನೆನಪಿದೆ ನಿಮಗೆ. ಇನ್ನಾದರೂ ಕಲಿಕೆಯ ಕಡೆ ವಾಲುತ್ತಾನೆ ಅವನು ಅಂದುಕೊಂಡಿದ್ದೆ. ಆಗ ಗೊತ್ತಾಯಿತು ಅವನ ಕಲಿಕೆಯ ನಿರಾಸಕ್ತಿ. ಹೊರಗಿನ ಕೆಟ್ಟ ಗೆಳೆಯರ ಪ್ರಭಾವವೂ ಅವನ ಮೇಲಿದೆ. ತರಗತಿಯ ಮುಂದೆ ಮೇಲೆ ಕೆಟ್ಟ ಪದಗಳ ಪ್ರಯೋಗ ಮಾಡುವಾಗ "ಅದನ್ನು ಎಲ್ಲಿ ಕಲಿತೆ " ಎಂದು ಕೇಳಿದರೆ "ಮೊದಲಿನ ಶಾಲೆಯಲ್ಲಿ ಇದ್ದ ಮಕ್ಕಳು ಹೇಳುತ್ತಿದ್ದರು, ಟ್ಯೂಷನ್ ಕ್ಲಾಸಿನಲ್ಲಿ ಮಕ್ಕಳು ಹೇಳುತ್ತಿದ್ದರು " ಎಂದು ಹೇಳುತ್ತಾನೆ. ಪೋಷಕರಾಗಿ ನೀವು, ಶಿಕ್ಷಕರಾಗಿ ನಾವು ಮಗುವಿನ ವರ್ತನೆಯನ್ನು ಸರಿ ಮಾಡುವ ಕಡೆ ಲಕ್ಷ್ಯ ವಹಿಸಬೇಕು. ಮಗುವಿನ ಆರೋಗ್ಯ ಚಿಕ್ಕ ಮಗುವಾಗಿ ಇದ್ದಾಗಿನಿಂದಲೂ ಅಮ್ಮ ಕೊಡುವ ಆಹಾರದ ಮೇಲೆ ಅವಲಂಬಿಸಿದೆ. ಮೆಡಿಕಲ್ ಫೀಲ್ಡ್ ನಲ್ಲಿ ಇರುವ ನಿಮಗೆ ಅದು ತಿಳಿದಿದೆ  ನಾನು ಹೇಳುವ ಅಗತ್ಯ ಇಲ್ಲ. ಮಗುವಿನ ದೈಹಿಕ, ಮಾನಸಿಕ ಬೆಳವಣಿಗೆಗೆ ನಾವು ಶ್ರಮಿಸಬೇಕೆ ಹೊರತು ನಮ್ಮ ಟೆನ್ಶನ್ ಶಿಕ್ಷಕರ ಮೇಲೆ ಹಾಕುವುದರಿಂದ, ಬೇರೆಯವರನ್ನು ಅದಕ್ಕೆ ಸಿಕ್ಕಿಸಿ ಹಾಕುವುದರಿಂದ ಅದು ಸಾಲ್ವ್ ಆಗದು. ಅವನಿಗೆ ಈ ಶಾಲೆಯಲ್ಲಿ ಸರಿಯಾದ ಸ್ನೇಹಿತರು ಇಲ್ಲದ ಕಾರಣ ಅವನಿಗೆ ಬೇರೆ ಶಾಲೆಗೆ ಹೋಗ ಬೇಕು ಎಂಬ ಕಾರಣಕ್ಕೂ ಅವನು ಶಾಲಾ ಶಿಕ್ಷಕರ ಹೆಸರು ಹೇಳಿರಬಹುದು. ಶಾಲಾ ಶಿಸ್ತಿಗೆ ಅವನು ಒಗ್ಗಿಕೊಳ್ಳದ ಕಾರಣ ಮೊದಲಿನ ಶಾಲೆಯಿಂದ ನೀವು ಬಿಡಿಸಿ ಇಲ್ಲಿ ತಂದು ಸೇರಿಸಿದ್ಫು. ಇಲ್ಲೂ ಅವನಿಗೆ ಅದೇ ತೊಂದರೆ ಆಗಿರಲೂ ಬಹುದು. ಮನೆಯಲ್ಲಿ ನೀವು ಅವನನ್ನು ಫ್ರೀ ಆಗಿ ಬೆಳೆಸಿದ ಕಾರಣ ಈ ಶಾಲೆಯ ಶಿಸ್ತು ಅವನಿಗೆ "ನಾನು ಇಲ್ಲಿ ಹೊಂದಿಕೊಳ್ಳಲು ಆಗುವುದಿಲ್ಲ, ಬೇರೆ ಶಾಲೆಗೆ ಹೋಗ ಬೇಕು" ಅನಿಸಿ ಅವನು ಅದನ್ನು ನೇರವಾಗಿ ಹೇಳಲು ಆಗದೆ "ಆ ಶಾಲೆಯ ಶಿಕ್ಷಕರ ಮೇಲೆ ಹಾಕಿದರೆ ಹಾಗಾದರೂ ನನ್ನ ಅಮ್ಮ ನನ್ನನ್ನು ಬೇರೆ ಶಾಲೆಗೆ ಸೇರಿಸಿಯಾರು " ಅಂದುಕೊಂಡು ಹಾಗೆ ಹೇಳಿರಬಹುದು. ಎಲ್ಲಾ ದಿಕ್ಕಿನಲ್ಲೂ ನಾವು ಆಲೋಚಿಸಬೇಕಾಗುತ್ತದೆ. ಮಗುವಿನ ಮಾನಸಿಕ ಆಲೋಚನೆಗಳಿಗೂ ಬೆಲೆ ಕೊಡಿ. ಅವನಿಗೆ ಈ ಶಾಲೆ ಬೇಡ ಎಂದರೆ ಬೇರೆ ಅವನಿಗೆ ಇಷ್ಟವಾಗುವ , ಅವನ ಗೆಳೆಯರು ಇರುವ ಶಾಲೆಗೆ ಸೇರಿಸಿ. ಬದಲಾಗಿ ದಯವಿಟ್ಟು, ಹಿಂದೆ ಮುಂದೆ ಯೋಚಿಸದೆ ಯಾವುದೇ ಶಿಕ್ಷಕರನ್ನು ದೂಷಿಸಬೇಡಿ. ನನ್ನ ವೃತ್ತಿ ಜೀವನದಲ್ಲಿ ಇದು ಹದಿನೆಂಟನೇ ವರ್ಷ. ಇದುವರೆಗೂ ಯಾವ ವಿದ್ಯಾರ್ಥಿಗೂ ನಾ ಜೋರಾಗಿ ಯಾವುದೇ ಅಂಗಗಳಿಗೆ ಹಾನಿ ಆಗುವ ಹಾಗೆ ಹೊಡೆದದ್ದಾಗಲೀ, ಅದರಿಂದ ಅವನಿಗೆ ಸಮಸ್ಯೆ ಆಗಿದ್ದಾಗಲೀ ಇಲ್ಲ. ಇಲ್ಲೂ ಆ ಕಾರಣವೇ ಇರಲು ಸಾಧ್ಯ ಇಲ್ಲ. ನಮ್ಮ ಶಾಲೆಗೆ ಬರುವ ಮಕ್ಕಳು ನಮ್ಮ ಮಕ್ಕಳು. ನಮಗೆ ಅವರ ಕಾಳಜಿ ಇದೆಯೇ ಹೊರತು ಯಾವ ಮಕ್ಕಳ ಮೇಲೂ ದ್ವೇಷ ಇಲ್ಲ. ಇನ್ನು ಹತ್ತು ವರ್ಷ ಬಿಟ್ಟು ಬಂದರೂ ಕೂಡಾ ನಾವು ಅವರನ್ನು ನಮ್ಮ ಮಕ್ಕಳ ಹಾಗೆಯೇ ಟ್ರೀಟ್ ಮಾಡುತ್ತೇವೆ. ಇದು ಶಿಕ್ಷಕ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ. 

ನೀವು ಇನ್ನು ಮುಂದೆಯೂ ಸುಮ್ಮನೆ ನನ್ನ ಹೆಸರು ಹೇಳಿ ಅನ್ಯಥಾ ನಿಮ್ಮ ಟೆನ್ಶನ್ ನನ್ನ ತಲೆಗೆ ಕಟ್ಟಿ ಬಿಟ್ಟರೆ ನನಗೆ ಬದುಕುವ ಶಕ್ತಿ ಇಲ್ಲ. ನಾನು ಡೆತ್ ನೋಟ್ ನಲ್ಲಿ ನಿಮ್ಮ ಹೆಸರನ್ನೇ ಬರೆದು ಜೀವನ ಕೊನೆಗೊಳಿಸ ಬೇಕಾಗುತ್ತದೆ ಏಕೆಂದರೆ ತುಂಬಾ ನೊಂದು ಹೋಗಿರುವೆ ಬದುಕಲ್ಲಿ. ನೋವು ತಿಂದು ಸಾಕಾಗಿದೆ. ಜವಾಬ್ದಾರಿ, ಒಂಟಿತನ, ಬೇಸರ, ಶಾರೀರಿಕ ಆರೋಗ್ಯ, ಟೆನ್ಶನ್   ಎಲ್ಲಾ ಸೇರಿ ಮನಸ್ಸು ಕದಡಿ ಹೋಗಿದೆ. ಅದರ ನಡುವೆ ಇಂತಹ ಮತ್ತಷ್ಟು ಟೆನ್ಶನ್ ಹೊರಲು ನನ್ನ ಮನಸ್ಸಿಗೆ ಇಂದು ಶಕ್ತಿ ಇಲ್ಲವಾಗಿದೆ. ದಯವಿಟ್ಟು ಒಂದು ಹೆಣ್ಣಾಗಿ ಅರ್ಥ ಮಾಡಿಕೊಳ್ಳಿ. 

ಇದಕ್ಕೂ ಮೀರಿ ಏನೂ ಹೇಳುವ ಶಕ್ತಿ ನನಗಿಲ್ಲ.

ಶನಿವಾರ, ಜುಲೈ 30, 2022

ಚುಟುಕು

ಚುಟುಕು

ಓಡುವ ರೈಲಿಗೂ ನಿಲ್ದಾಣ ಇರುವುದು
ಓದುವ ಮಗುವಿಗೂ ಹವ್ಯಾಸ ಬೆಳೆವುದು
ಓರೆ - ಕೋರೆಯ ಸರಿಪಡಿಸುತ ನಡೆವುದು
ಓಟದ ಬದುಕಲಿ ಸಹಾಯ ಚಾಚುವುದು..
@ಪ್ರೇಮ್@

ಪ್ರಾರ್ಥನೆ

ಪ್ರಾರ್ಥನೆ
ದೇವ ನಿನ್ನ ನಂಬಿ ನಾನು ಬದುಕಿ ಬಾಳುವೆ
ನಿನ್ನ ದಯೆಯ ನಮಗೆ ನೀಡು ಹರಸೆ ಬೇಡುವೆ//

ನಿನ್ನ ಕರುಣೆಯಿಂದ ಎಲ್ಲ ಯಶವು ಕಾಣಲಿ
ನಿನ್ನ ಶಕ್ತಿಯೊಲವು ಸೇರಿ ಬದುಕು ಸಾಗಲಿ//

ನಿತ್ಯ ನಾನು ಬೇಡುವೆನು ಕಾಯೋ ನಮ್ಮನು
ಸತ್ಯ ಶಾಂತಿ ಕೀರ್ತಿ ಕೊಟ್ಟು ಸಲಹು ನಮ್ಮನು//
@ಪ್ರೇಮ್@
23.05.2022

ಶುಕ್ರವಾರ, ಜುಲೈ 15, 2022

ದಶಕ -89

 ದಶಕ -89


ನಾವು ನಮ್ಮ ನಡುವೆ ಗೋಡೆ ಕಟ್ಟಿದ್ದೇವೆ

ನಾವು ನಮ್ಮ ನಡುವೆ ಕಂದಕ ತೋಡಿದ್ದೇವೆ

ಮಳೆ ಚಳಿ ಸೆಕೆ ಬೆವರು ಬಿಸಿ ಗಾಳಿ ಬರುತ್ತಿರಲಿ

ಮರಗಳ ಕಡಿದು ಸರ್ವ ನಾಶ ಮಾಡುತ್ತಿದ್ದೇವೆ..


ಮಾತು ಕಡಿಮೆ ಮಾಡಿ ಮೌನವಾಗಿದ್ದೇವೆ

ಬೇಡದ ಕಡೆ ಮಾತನಾಡಿ ಸೋತವರಾಗಿದ್ದೇವೆ

ನೀತಿ ಇಲ್ಲದೆ ಬದುಕಿ ಅಮಾನವರಾಗಿದ್ದೇವೆ

ಕೋಟೆಗಳ ಕಟ್ಟಿ ಸಾಮ್ರಾಜ್ಯ ಸ್ಥಾಪಿಸಿದ್ದೇವೆ..


ಮನಗಳ ನಡುವೆ ನೋವಿನ ದ್ವೇಷ ಹಂಚಿದ್ದೇವೆ

ಹೃದಯಗಳ ನಡುವಿನ ಸೇತುವೆ ಮುರಿದಿದ್ದೇವೆ.

@ಪ್ರೇಮ್@

14.07.2022


ಭಾನುವಾರ, ಮೇ 29, 2022

ಮಳೆಬಿಲ್ಲು

ಮಳೆಬಿಲ್ಲು
@ಪ್ರೇಮ್@
ಸಹಶಿಕ್ಷಕಿ, 
ಸ.ಪ.ಪೂ.ಕಾಲೇಜು ಮುಲ್ಕಿ
ರಾಗ - ಕೋಡಗನ ಕೋಳಿ

ಮಳೆಬಿಲ್ಲು ಶಾಲೆಗೆ ಬಂದಿತ್ತಾ..
 ಈ ವರ್ಷದಿಂದ..
 ಮಳೆಬಿಲ್ಲು ಶಾಲೆಗೆ ಬಂದಿತ್ತಾ..//

ಪುಸ್ತಕ ಬದಿಗೆ ಇಟ್ಟು
ಬಳಪಾನ ಮರೆತೇ ಬಿಟ್ಟು//
ಆಟದಿ ಕುಣಿತದಿ ಸಂತಸ ಪಡುವ
 ಕ್ಷಣವ ತಂದಿತ್ತಾ
ಮಳೆಬಿಲ್ಲು ಶಾಲೆಗೆ ಬಂದಿತ್ತಾ ಇಲ್ಲಿ...//

ಹಳೆ ಹಳೆಯ ಗುಂಪಿನ ಆಟ
ಆಟಿಕೆಗಳ ತಯಾರಿ ಕೂಟ//
ಶಾಲೆಯ ಒಳಗೂ ಸಮ್ಮರ್ ಕ್ಯಾಂಪಿನ
ನೆನಪನು ತಂದಿತ್ತಾ..ಇಲ್ಲಿ ..
ಮಳೆಬಿಲ್ಲು ಶಾಲೆಗೆ ಬಂದಿತ್ತಾ.....//

ನಾಟಕದ ಹಬ್ಬವೇ ಚಂದ
ಕಥೆಗಳ ಕೇಳುವುದಂದ//
ಚಿತ್ರ ಚಿತ್ತಾರದ ಅಂದದಲ್ಲಿ
ಶಾಲೆಯು ಮಿಂಚಿತ್ತಾ..ಇಂದು..
ಮಳೆಬಿಲ್ಲು ಶಾಲೆಗೆ ಬಂದಿತ್ತಾ//

ಕವಿತೆಯ ಕಟ್ಟಿದೆವಣ್ಣ
ಹಾಡನ್ನು ಹಾಡಿದೆವಣ್ಣ//
ಹಸಿರಿನೆಡೆಗೆ ಭಾರೀ ಖುಷಿಯಲಿ
ಗುಂಪು ಹೊರಟಿತ್ತಾ..ಇಲ್ಲಿ .
ಮಳೆಬಿಲ್ಲು ಶಾಲೆಗೆ ಬಂದಿತ್ತಾ....//

ಚಿತ್ರಗಳ ಜಗತ್ತೇ ಮೋಡಿ
ಗಣಿತದ ಗಮ್ಮತ್ತು ಕೂಡಿ//
ಇತಿಹಾಸವನು ನೆನಪಿಗೆ ತರುವ
ಕಾರ್ಯ ನಡೆದಿತ್ತಾ ಇಲ್ಲಿ...
ಮಳೆಬಿಲ್ಲು ಶಾಲೆಗೆ ಬಂದಿತ್ತಾ....//

ಬೆಂಕಿ ಇಲ್ಲದ ಅಡುಗೆ
ಸಾಂಬಾರ್  ತಿನಿಸುಗಳ ಬಳಕೆ//
ಮಕ್ಕಳ ಗೊಂಚಲು ಒಟ್ಟು ಸೇರಿ
ಸಂಭ್ರಮ ಪಟ್ಟಿತ್ತಾ...ಇಲ್ಲಿ..
ಮಳೆಬಿಲ್ಲು ಶಾಲೆಗೆ ಬಂದಿತ್ತಾ..//

ಕಸದಿಂದ ರಸವನು ಮಾಡಿ
ಶಾಲೆಯನು ಸಿಂಗಾರ ಮಾಡಿ//
ಶಾಲೆಯ ವೇಳೆ ರಜದ ದಿನದ
ಆನಂದ ತಂದಿತ್ತಾ.....ಇಲ್ಲಿ .
ಮಳೆಬಿಲ್ಲು ಶಾಲೆಗೆ ಬಂದಿತ್ತಾ..//

ಸರಕಾರಿ ಶಾಲೆಯು ಬೆಳೆಯೇ
ಮಕ್ಕಳು ಅಂದದಿ ಕಲಿಯೇ//
ಕಲಿಕಾ ಚೇತರಿಕೆ ಎಂಬ ವಿಧಾನ
ಹೊಸದಾಗಿ ಬಂದಿತ್ತಾ....ಇಲ್ಲಿ..
ಮಳೆಬಿಲ್ಲು ಶಾಲೆಗೆ ಬಂದಿತ್ತಾ..//
@ಪ್ರೇಮ್@
28.05.2022



ಭಾನುವಾರ, ಮೇ 22, 2022

ಲಿಮೆರಿಕ್

ಲಿಮೆರಿಕ್

ಬಾಳು

ಅರೆಗಳಿಗೆ ಮನ ಯೋಚಿಸುವುದು
ಇನ್ನೊಂದು ಕ್ಷಣ ಬೇಸರಿಸುವುದು
ನಡುವೆ ಹಲ ಕೆಲಸಗಳ ಒತ್ತಡದಾಟ
ಮಕ್ಕಳು ಸಂಸಾರದ ಒಳ ಜಂಜಾಟ!
ಬದುಕು ಹೀಗೆಯೇ ಸುಖ ಕಷ್ಟಗಳ ಸರಮಾಲೆಯಿದು.
@ಪ್ರೇಮ್@
23.05.2022

ಮಂಗಳವಾರ, ಮೇ 17, 2022

https://writer.pocketnovel.com/?referrer=pruthvi.soori@pocketfm.com

_*ಕನ್ನಡದಲ್ಲಿ ಕಥೆ, ಕಾದಂಬರಿ ಸೇರಿದಂತೆ ಕುತೂಹಲಕಾರಿ ಬರಹವನ್ನು ಬರೆಯುವವರಿಗೆ ಒಂದು ಸುವರ್ಣಾವಕಾಶ.*_ ನಿಮ್ಮ ಬಿಡುವಿನ ವೇಳೆ ಕಥೆ, ಕಾದಂಬರಿ ಬರೆದು ಸಂಭಾವನೆ ಪಡೆಯಲು ನಿಮಗಾಗಿ ಇಲ್ಲಿದೆ ಅವಕಾಶ.

*ಬರಹ ಹೇಗಿರಬೇಕು?*
ಕನ್ನಡದಲ್ಲಿ ನೀಳ್ಗತೆ ಅಥವಾ ಕಾದಂಬರಿ  ಬರೆಯ ಬೇಕಿರುತ್ತದೆ.

*ಸಂಭಾವನೆ ಪಡೆಯುವುದು ಹೇಗೆ?*
 ಬರೆಯಲು ಶುರು ಮಾಡಿದ ಒಂದು ತಿಂಗಳಲ್ಲಿ ಮೂವತ್ತು ಸಾವಿರ ಪದ ಮುಗಿಸಿದರೇ welcome bonus 3000 rupees ಸಿಗಲಿದೆ, ಬಳಿಕ ಮುಂದಿನ ತಿಂಗಳಿನಿಂದ ‌ಮೂವತ್ತು ದಿನದೊಳಗೆ ಐವತ್ತು ಸಾವಿರ ಪದ ಮುಗಿಸಿದರೆ (Writers Benefit Program WBP) 6000 rupees ಸಿಗಲಿದೆ. ತಿಂಗಳಲ್ಲಿ ಐವತ್ತು ಸಾವಿರ ಪದಕ್ಕಿಂತ ಹೆಚ್ಚು ಪದಗಳ ಬರಹವನ್ನು ಬರೆದರೂ ಹೆಚ್ಚಿಗೆ ಸಂಭಾವನೆ ಪಡೆಯಬಹುದು.

ಬರವಣಿಗೆಯಲ್ಲಿ ಆಸಕ್ತಿ ಇರುವ ಯಾರು ಬೇಕಾದರೂ ಬರೆಯಬಹುದು. 

ಮಾಹಿತಿಗಾಗಿ: 
*ಪೃಥ್ವಿ ಸೂರಿ* +91 82775 89859

*ಈಗಲೇ ರಿಜಿಸ್ಟರ್ ಆಗಿ..* https://writer.pocketnovel.com/?referrer=pruthvi.soori@pocketfm.com

ಮಂಗಳವಾರ, ಏಪ್ರಿಲ್ 19, 2022

ನ್ಯಾನೋ ಕಥೆ - ಆಕೆ

ನಿರ್ಲಕ್ಷ್ಯ...

ಆಕೆ...

ಆಕೆಯ ಹೆಸರು ಆಶಾ. ಹೆಸರಿಗೆ ತಕ್ಕಂತೆ ಆಸೆಯ ಬಗ್ಗೆ. ಎಲ್ಲವೂ ತನಾಗೇ ಬೇಕು. ಎಲ್ಲರನ್ನೂ ನೋಡುವುದು. ತನ್ನದನ್ನು ಮರೆತು ಹೊಸದನ್ನು ಹುಡುಕಿ ತರುವುದು. ಹಾಗೆ ಪೇಟೆಯಲ್ಲಿ ಒಮ್ಮೆ ಹುಡುಕುವಾಗ ಜೊತೆಯಲ್ಲಿ ಇದ್ದ ತನ್ನ ಮಗು ಪ್ರಣೀತಾಳನ್ನು ಮರೆತೇ ಬಿಟ್ಟಳು. ಮಗು ಅಲ್ಲಿಯೇ ಬಾಕಿ. ಮನೆಗೆ ಹೋದಾಗಲೇ ಗೊತ್ತಾದದ್ದು. ಮತ್ತೆ ಮಾರುಕಟ್ಟೆಗೆ ಬಂದು, ಮಗುವನ್ನು ಹುಡುಕಿ ಕರೆದುಕೊಂಡು ಹೋಗುವಲ್ಲಿ ಸಾಕೋ ಸಾಕು.
@ಪ್ರೇಮ್@
19.04.2022

ಶುಕ್ರವಾರ, ಏಪ್ರಿಲ್ 8, 2022

ಅಬಾಬಿ

ಅಬಾಬಿ

ಮನೆಯೆಲ್ಲ ಸೋರುತ್ತಿದೆ
ಮನಸ್ಸು ಕೂಡ ಸೋರಿ ಹೋಗಿದೆ
ಮೂಗು ಸುಮ್ಮನಿರುವುದೇ
ಈಶಾ
ಸೋರುವಿಕೆ ನಿಂತೂ ನಿಲ್ಲದಿರಲಿ..
@ಪ್ರೇಮ್@
08.04.2022

ಸೋಮವಾರ, ಏಪ್ರಿಲ್ 4, 2022

122

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -123

ಮಾರ್ಚ್ 22ರಿಂದ ಪಿಯುಸಿ ಹಾಗೂ 28ರಿಂದ ಈ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಕೆಲವೊಂದು ಸೂಚನೆಗಳು. ಪ್ರೀತಿಯ ಮಕ್ಕಳೇ, ಹಾಗೂ ಹೆತ್ತವರೇ, ಪೋಷಕರೇ ನಿಮಗೆಲ್ಲ ಶಿಕ್ಷಕರ ನೆಲೆಯಲ್ಲಿ ಕಿವಿ ಮಾತುಗಳು ಇಲ್ಲಿವೆ. ಜೀವನದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಎಂಬುದು  ಪ್ರಮುಖ ಘಟ್ಟಗಳು. ಅದರಲ್ಲೂ ಈ ವರ್ಷಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಕೋರೋನ ಕಾಲದಲ್ಲಿ ಎಂಟನೇ ತರಗತಿಯ ಪರೀಕ್ಷೆ ಬರೆಯಲು ಅಣಿಯಾಗಿದ್ದವರು. ಅಲ್ಲಿ ಅವರನ್ನು ಪರೀಕ್ಷೆ ಇಲ್ಲದೆ ಆಂತರಿಕ ಅಂಕಗಳ ಆಧಾರದ ಮೇಲೆ ಉತ್ತೀರ್ಣಗೊಳಿಸಲಾಯಿತು. ಮುಂದಿನ ವರ್ಷವೂ ಕರೋನ, ಒಮಿಕ್ರಾನ್, ಹಳದಿ ಕಪ್ಪು ಫಂಗಸ್ ಎಂದೆಲ್ಲಾ ಸರಿಯಾಗಿ ಒಂದೆರಡು ತಿಂಗಳು ಕೂಡಾ ಶಾಲೆಗೆ ಬರಲು ಆಗದೆ ಆನ್ ಲೈನ್ ತರಗತಿಯಲ್ಲಿ ಕಲಿತೇ ಅಷ್ಟೋ ಇಷ್ಟೋ ಬರೆದು ಅದು ಹೇಗೋ ಹತ್ತನೇ ತರಗತಿಗೆ ಬಂದವರು. ಕರೋನ ಸಮಯದಲ್ಲಿ ರಿಸ್ಕ್ ತೆಗೆದುಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  ಬರೆದು ಪಾಸ್ ಆದ ಬ್ಯಾಚ್ ಈಗ ಪಿಯುಸಿ 

ಈ ವರ್ಷದ ಎಸ್ ಎಸ್ ಎಲ್ ಸಿ ಮಕ್ಕಳು ಸರಿಯಾಗಿ ಪರೀಕ್ಷೆ ಬರೆದದ್ದು ತಮ್ಮ ಏಳನೇ  ತರಗತಿಯಲಿ ಮಾತ್ರ. ಪ್ರೌಢ ಶಾಲೆಗೆ ಬಂದ ಮೇಲೆ ಅವರು ಯಾವಾಗಲೂ ಮೂರು ಗಂಟೆಗಳ ಕಾಲ ನಿರಂತರವಾಗಿ ಕುಳಿತು ಪರೀಕ್ಷೆ ಬರೆಯಲೇ ಇಲ್ಲ. ಹಾಗಿರುವಾಗ ಮೂರು ಗಂಟೆಗಳ ಪರೀಕ್ಷೆಯನ್ನು ಎದುರಿಸುವ ತಾಳ್ಮೆ ತರುವುದೂ ಕೂಡಾ ಶಿಕ್ಷಕರಿಗೆ ಈಗ ಇರುವ ಸವಾಲುಗಳಲ್ಲಿ ಒಂದು. ಮತ್ತೆ ಎರಡೆರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮಾಡಿ, ಮಕ್ಕಳನ್ನು ಕಲಿಕಾ ಗುಂಪುಗಳಾಗಿ ವಿಭಾಗಿಸಿ, ಪುನರಾವರ್ತನೆ, ಪುನರ್ಮನನ ಮಾಡಿಸಿ, ಬರೆಸಿ, ಓದಿಸಿ, ತಿದ್ದಿಸಿ, ತೀಡಿಸಿ, ಬೆಳಗ್ಗೆ, ಸಂಜೆ ಶಾಲಾ ಅವಧಿ ಮೀರಿ, ತಮ್ಮ ಮನೆಯ ಕೆಲಸಗಳನ್ನೆಲ್ಲ ಬದಿಗೊತ್ತಿ, ತಮ್ಮ ಮಕ್ಕಳ ಕಲಿಕೆಯನ್ನು ಪರರಿಗೆ ವಹಿಸಿ, ಎಲ್ಲಾ ಶಿಕ್ಷಕರೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸರಿಯಾದ ಕ್ರಮದಲ್ಲಿ ಕಲಿಕೆಯನ್ನು ಮಾಡಿಸಿ ಪರೀಕ್ಷೆಗೆ ತಯಾರಿ ಮಾಡಿ, ಪರೀಕ್ಷೆ ಪ್ರಾರಂಭ ಆಗಿ, ಮುಗಿದು, ಫಲಿತಾಂಶ ಬರುವವರೆಗೂ ವಿದ್ಯಾರ್ಥಿಗಳಿಗಿಂತ ಹೆಚ್ಚು ಟೆನ್ಷನ್ ಶಿಕ್ಷಕರಿಗೆ. ನಮ್ಮ ಶಾಲೆಯ ರಿಸಲ್ಟ್ ಹೇಗೆ ಬರುವುದೋ ಎಂದು.

ಅದೇನೇ ಇರಲಿ, ವಿದ್ಯಾರ್ಥಿಗಳು ಸ್ಪಷ್ಟತೆ, ಸರಳ, ಸುಂದರ ಬರವಣಿಗೆಗೆ ಪ್ರಾಮುಖ್ಯತೆ ಕೊಡಬೇಕು. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯಬೇಕು. ಏನಾದರೂ ಉತ್ತರ ಬರೆದಿದ್ದರೆ ತಾನೇ ಅಂಕಗಳನ್ನು ಕೊಡಲು ಸಾಧ್ಯ ಆಗುವುದು? ಬರೆದದ್ದನ್ನು ಸರಿಯಾಗಿ ಓದಲು ಸಾಧ್ಯ ಆದರೆ ಮಾತ್ರ ಪೂರ್ತಿ ಅಂಕಗಳು ಸಿಗಲು ಸಾಧ್ಯ , ಅಲ್ಲವೇ? 

ಸಾಮಾನ್ಯ ವಿಜ್ಞಾನದಲ್ಲಿ ಚಿತ್ರಗಳನ್ನು ಕಲಿಯಬೇಕಿದೆ. ಅದನ್ನು ಸರಿಯಾಗಿ ಕಲಿತರೂ ಬರೆಯುವುದು ಅಂದವಾಗಿ ಇಲ್ಲದೆ ಇದ್ದರೆ, ಗುರುತಿಸಿದ್ದು ತಪ್ಪಾದರೆ ಅಂಕಗಳು ಸಿಗುವುದಿಲ್ಲ. ಆದ್ದರಿಂದ ಶೇಡಿಂಗ್ ಮಾಡಿ, ಸರಿಯಾಗಿ ಪ್ರತಿ ಭಾಗಗಳನ್ನು ಗುರುತಿಸಿ ಬರೆದಿದ್ದೇ ಆದರೆ ಪೂರ್ಣ ಅಂಕಗಳು ದೊರೆಯುತ್ತವೆ.  ಸಮಾಜವಿಜ್ಞಾನಗಳಲ್ಲಿ ಭೂಪಟವನ್ನು ಅಂದವಾಗಿ ಬರೆದು, ದಿಕ್ಕುಗಳನ್ನು ಗುರುತಿಸಿ, ಸರಿಯಾದ ಜಾಗದಲ್ಲಿ ಆಯಾ ಸ್ಥಳಗಳನ್ನು ಗುರುತಿಸುವ ಕೌಶಲ್ಯವನ್ನು ಕರಗತವಾಗಿಸಿಕೊಂಡರೆ ಅಂಕಗಳ ಗಳಿಕೆ ಸುಲಭ. ಗಣಿತದ ಲೆಕ್ಕಗಳನ್ನು ಮಾಡುವಾಗ  ಸ್ಪಷ್ಟವಾಗಿ ಬರೆದಾಗ ತಿದ್ದುವ ಯಾವುದೇ ಶಿಕ್ಷಕರಿಗೆ ಪೂರ್ಣ ಅಂಕಗಳನ್ನು ನೀಡಲು ಸುಲಭವಾಗುತ್ತದೆ. ಆದ್ದರಿಂದ ಉತ್ತಮ ಹಸ್ತಾಕ್ಷರಕ್ಕೇ ಮಾನ್ಯತೆ. ಕಲಿಯುವಾಗ ಬರೀ ಓದಿ ಕಲಿಯದೆ ಬರೆದು ಬರೆದು ಕಲಿತಾಗ ವೇಗವಾಗಿ ಬರೆಯುವ ಸಾಮರ್ಥ್ಯವೂ ಹೆಚ್ಚುತ್ತದೆ. 

  ಭಾಷಾ ವಿಷಯಗಳಲ್ಲಿ ಪ್ರಬಂಧ ರಚನೆ ಮಾಡುವಾಗ ನಿಮ್ಮ ನಿತ್ಯ ಜೀವನದ ಅನುಭವಗಳನ್ನು ಬಳಸಿಕೊಳ್ಳಿ, ಅವುಗಳನ್ನು ಸಮಯಕ್ಕೆ ಸರಿಯಾಗಿ ವಿಷಯಕ್ಕೆ ಪೂರಕವಾಗಿ ಉಲ್ಲೇಖಿಸಿ. ಸ್ವಂತ ಬರಹಕ್ಕೆ ಆದ್ಯತೆ ನೀಡಿ. ಯಾವುದೇ ಪ್ರಶ್ನೆಗೆ ಉತ್ತರವನ್ನು ಉರು ಹೊಡೆಯುವ ಬದಲು ಅರ್ಥ ಮಾಡಿಕೊಂಡು ಕಲಿಯಿರಿ. ಸಮಾಜ ವಿಜ್ಞಾನ, ಹಿಂದಿ, ಕನ್ನಡ ಅಥವಾ ಪ್ರಥಮ ಭಾಷೆ ಇಂಗ್ಲಿಷ್ ಎಲ್ಲಾ ವಿದ್ಯಾರ್ಥಿಗಳಿಗೂ ಸಾಮಾನ್ಯವಾಗಿ ಅತಿ ಹೆಚ್ಚು ಸ್ಕೋರ್ ಮಾಡುವ ವಿಷಯಗಳು.  ಗಣಿತ ಹಾಗೂ ವಿಜ್ಞಾನದ ವಿಷಯ ಇಷ್ಟವಾದ ವಿದ್ಯಾರ್ಥಿಗಳಿಗೆ ಅದರಲ್ಲಿ ಉತ್ತಮ ಅಂಕಗಳು ಸಿಗಬೇಕು ಎಂದಿದ್ದರೂ ಸ್ಪಷ್ಟತೆ, ಅಂದವಾದ ಬರಹ, ಪ್ರತಿಯೊಂದು ಪ್ರಶ್ನೆಗೂ ಸರಿಯಾದ ಪ್ರಶ್ನೆ ಸಂಖ್ಯೆ ಬರೆದು ಅಂದವಾಗಿ ಉತ್ತರ ಬರೆಯ ಬೇಕಾದುದು ಅಗತ್ಯ ಅಲ್ಲವೇ?

ಆಂಗ್ಲ ಭಾಷೆಯೇ ಆಗಿರಲಿ, ಸಂಸ್ಕೃತ, ಹಿಂದಿ, ಕನ್ನಡವೇ ಆಗಿರಲಿ ಅಥವಾ ಇತರ ಕೋರ್ ವಿಷಯಗಳೇ ಆಗಿರಲಿ, ಪ್ರತಿ ವಿದ್ಯಾರ್ಥಿಯೂ ಎಷ್ಟು ಕಲಿತಿರುವನೋ ಅದನ್ನು ತನ್ನ ಉತ್ತರ ಪತ್ರಿಕೆಯಲ್ಲಿ ತಿದ್ದುವ ಶಿಕ್ಷಕರಿಗೆ ಅರ್ಥ ಆಗುವಂತೆ ಮುಟ್ಟಿಸುವುದು ಒಂದು ಕಲೆ. ಅಂದವಾದ ಬರಹಕ್ಕೆ ಅಂಕಗಳು ಹೆಚ್ಚಾಗಿಯೇ ಬರುತ್ತವೆ ಎನ್ನುವುದು ಖಚಿತ. ಚಿತ್ತು ಕಾತು, ಗೀಚುಗಳನ್ನು ತಪ್ಪಿಸಿ, ಅಂದ, ಸ್ಪಷ್ಟ ಬರವಣಿಗೆಯೊಂದಿಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆದಾಗ ಅಂಕಗಳನ್ನು ಯಾವ ಶಿಕ್ಷಕರೂ ಕಸಿದುಕೊಳ್ಳಲು ಸಾಧ್ಯ ಇಲ್ಲ. ಸರಿಯಾಗಿ ಬರೆಯದೆ ತನಗೆ ಸರಿಯಾದ ಅಂಕಗಳನ್ನು ನೀಡಲಿಲ್ಲ ಎಂದು ಶಿಕ್ಷಕರನ್ನು ದೂರಿ ನೂರಾರು ರೂಪಾಯಿಗಳನ್ನು ಸುರಿದು ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ತರಿಸಿ, ಶಿಕ್ಷಕರಿಗೆ ತೋರಿಸಿದಾಗ "ನೀನು ಬರೆದ ಉತ್ತರಕ್ಕೆ ಸರಿಯಾದ ಅಂಕಗಳೆ ಸಿಕ್ಕಿವೆ. ಇನ್ನು ಹೆಚ್ಚು ಕೊಡಲು ಸಾಧ್ಯ ಆಗದು" ಎಂದು ಅವರೆಂದರೆ ವೃಥಾ ಖರ್ಚು. ಅದರ ಬದಲು ನಿಮ್ಮ ಬರವಣಿಗೆಯ ಸ್ಪಷ್ಟತೆ ಶಿಕ್ಷಕರ ಗಮನೆ ಸೆಳೆದು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯ ಇದೆ. ಇದು ಹತ್ತನೇ ತರಗತಿ ಅಥವಾ ಪಿಯುಸಿ ವಿಧ್ಯಾರ್ಥಿಗಳಿಗೆ ಮಾತ್ರವಲ್ಲ. ಪ್ರತಿ ವಿದ್ಯಾರ್ಥಿಗೂ ಅನ್ವಯಿಸುತ್ತದೆ. ಇದು ಮುಂದಿನ ಜೀವನಕ್ಕೂ ಅನ್ವಯಿಸುತ್ತದೆ. ನಗರ ಅಥವಾ ಹಳ್ಳಿಯಲ್ಲಿ ಎಷ್ಟೊಂದು ರಿಕ್ಷಗಳಿದ್ದರೂ ಉತ್ತಮವಾಗಿ ರಿಕ್ಷಾ ಚಲಾಯಿಸುವ, ಜವಾಬ್ದಾರಿ ತೆಗೆದುಕೊಂಡು ಸಮಯಪ್ರಜ್ಞೆ ಮೆರೆಯುವ, ಅಂದವಾಗಿ ತನ್ನ ರಿಕ್ಷಾ ಇಟ್ಟುಕೊಂಡಿರುವ ರಿಕ್ಷಾವನ್ನೇ ಜನ ಆಯ್ಕೆ ಮಾಡಿಕೊಳ್ಳುತ್ತಾರೆ, ಎಷ್ಟು ಜನ ಟೈಲರ್ ಗಳಿದ್ದರೂ ಅಂದವಾಗಿ ಹೊಲಿಯುವವನಿಗೇ ಹೆಚ್ಚು ಬಟ್ಟೆ ಬರುವಂತೆ ಅಂದವಾಗಿ, ಸ್ಪಷ್ಟವಾಗಿ ಬರೆಯುವವನಿಗೆ ಹೆಚ್ಚು ಅಂಕಗಳು ಕಟ್ಟಿಟ್ಟ ಬುತ್ತಿ ನೆನಪಿರಲಿ. 

ಕಠಿಣ ಪರಿಶ್ರಮ ಎಂದೂ ಹಾದಿ ತಪ್ಪದು. ಸ್ಪಷ್ಟ ಓದು, ಶುದ್ಧ ಬರಹ ಬದುಕಿನಲ್ಲಿ ನಮ್ಮನ್ನು ಎತ್ತರಕ್ಕೆ ಏರಿಸುವ ಅಂಶ. ಅದನ್ನೇ ಪರಿಪಾಲಿಸಿ. ಬೇರೆ ಸಮಯಕ್ಕಿಂತ ಹೆಚ್ಚು ಓದಿ. 

ಕಲಿಕೆಯನ್ನು ಇಷ್ಟ ಪಡಿ. ಆನಂದಿಸಿ. ಹೇಗೆ ಮೊಬೈಲ್ ಗಳಲ್ಲಿ ಬರುವ ರೀಲ್ ವಿಡಿಯೋಗಳನ್ನು ನೋಡಿ ಆನಂದಿಸುವಿರೋ ಹಾಗೆಯೇ ಪ್ರತಿ ವಿಷಯದ ಮೇಲೆ ಪ್ರೀತಿ ಇರಲಿ. ಕಾರಣ ಇದು ನಿಮ್ಮ ಜೀವನವನ್ನು ಬೆಳಗುವ ಅಂಶ. ಮೊಬೈಲ್, ಟಿವಿ, ಚಲನಚಿತ್ರ, ಜಾತ್ರೆ, ಕಬಡ್ಡಿ, ಕ್ರಿಕೆಟ್ ಎಲ್ಲವೂ ಯಾವಾಗಲೂ ಇವೆ, ಇರುತ್ತವೆ. ಅವುಗಳಿಗಾಗಿ ನಿಮ್ಮ ಕಲಿಕೆಯನ್ನು ತ್ಯಾಗ ಮಾಡಿದರೆ ಮುಂದೆ ನಿಮ್ಮ ಬದುಕಿನ ಹಲವಾರು ಹಂತಗಳಲ್ಲಿ ಕಷ್ಟ ಪಡುವವರು ನೀವೇ. ಕ್ಷಣದ ಆಕರ್ಷಣೆಗಳಿಗೆ ಬಲಿಯಾಗಿ ಜೀವನ ಪೂರ್ತಿ ಧುಖಿಸದಿರಿ. ಬದಲಾಗಿ ಸಿಕ್ಕಿದ ಸಮಯವನ್ನು ಉಪಯೋಗಿಸಿ. 
ಮೊಬೈಲ್ ಅಟ್ರಾಕ್ಷನ್ ಹೆಚ್ಚಿದ್ದರೆ ಯುಟ್ಯೂಬ್ ನಲ್ಲಿ ಉತ್ತರಿಸಿದ ಪ್ರಶ್ನೆ ಪತ್ರಿಕೆಗಳು, ಪಾಸಿಂಗ್ ಪ್ಯಾಕೆಜ್, ನಿಮಗೆ ಕಷ್ಟವಾದ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದು ಹೇಗೆ ಎಂಬುದನ್ನೇ ಹುಡುಕಿ ನೋಡಿ. ನಿಮ್ಮ ಯಾವುದೇ ಸರ್ಚ್ ನಿಮ್ಮನ್ನು ಉತ್ತಮ ಅಂಕಗಳಿಗೆ ಕೊಂಡು ಹೋಗುವುದೇ ಆಗಿರಲಿ. 
ಮಕ್ಕಳೇ, ಜೀವನದಲ್ಲಿ ಅವಕಾಶ ಮತ್ತು ಯಶಸ್ಸು ಒಂದೇ ಬಾರಿ ಬಂದು ಬಾಗಿಲು ತಟ್ಟುವುದು. ಆಗ ನಾವು ಸಮಯ ಹಾಳು ಮಾಡಿ ಮತ್ತೆ ಕೊರಗಿದರೆ ಫಲವಿಲ್ಲ. ನಿಮ್ಮ ಶಿಕ್ಷಕರ, ಪೋಷಕರ ಗುರಿ, ಉದ್ದೇಶಗಳನ್ನು ಈಡೇರಿಸುವುದು ಮತ್ತು ನಿಮ್ಮ ಕುಟುಂಬದ ಮರ್ಯಾದೆ, ಘನತೆ, ಗೌರವ ಕಾಪಾಡುವುದರ ಜೊತೆಗೆ ನಿಮ್ಮ ಭವಿಷ್ಯದ ಕೀಲಿಕೈ ನಿಮ್ಮ ಕೈಯಲ್ಲೇ ಇದೆ ಈಗ. ಅದನ್ನು ಈ ಸಮಯದಲ್ಲಿ ಶಿಕ್ಷಕರ ಸಹಾಯದಿಂದ ಸರಿಯಾಗಿ ಕಲಿತು, ಬಳಸಿಕೊಳ್ಳಿ, ಯಶಸ್ಸು ನಿಮ್ಮದಾಗಿಸಿಕೊಳ್ಳಿ. 
ಭವ್ಯ ಭವಿಷ್ಯ ನಿಮಗಾಗಿ ಕಾದಿದೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ನೀವು ಏನು ಆಲೋಚಿಸುವಿರೋ ಹಾಗೆಯೇ ಆಗುತ್ತದೆ. ನಾವು ಉತ್ತಮ ಅಂಕಗಳನ್ನು ಪಡೆದು ನಮ್ಮ ಗುರಿ ಸಾಧಿಸುತ್ತೇವೆ ಎಂಬ ಅಚಲ ವಿಶ್ವಾಸ ನಿಮ್ಮಲ್ಲಿ ಇರಲಿ. ಅದರೊಂದಿಗೆ ಕಠಿಣ ಪರಿಶ್ರಮವೂ ಇರಲಿ. ದೇವರ,ಗುರು ಹಿರಿಯರ  ಆಶೀರ್ವಾದವನ್ನು ಕೂಡಾ ಪಡೆಯುವುದನ್ನು ಮರೆಯದಿರಿ.  ಜೀವನದಲ್ಲಿ ಬಂದ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ, ಉತ್ತಮವಾಗಿ, ಅಂದವಾಗಿ ಬರೆಯಿರಿ. ಯಶಸ್ಸು ಕಟ್ಟಿಟ್ಟ ಬುತ್ತಿ. ಆಲ್ ದ ಬೆಸ್ಟ್ ವಿದ್ಯಾರ್ಥಿ ಮಿತ್ರರೇ. ಇಂದಿನ ಮಕ್ಕಳು ಇಂದೂ , ನಾಳೆಯೂ, ಮುಂದೂ ಭಾರತೀಯ ಪ್ರಜೆಗಳೇ. ಭವ್ಯ ಭಾರತದ ಮುಂದಿನ ಕನಸುಗಳು, ಶಿಲ್ಪಿಗಳು ನೀವೇ ಅಲ್ಲವೇ? ನೀವೇನಂತೀರಿ?
@ಪ್ರೇಮ್@
19.03.2022

121

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -123

ಮಾರ್ಚ್ 22ರಿಂದ ಪಿಯುಸಿ ಹಾಗೂ 28ರಿಂದ ಈ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಕೆಲವೊಂದು ಸೂಚನೆಗಳು. ಪ್ರೀತಿಯ ಮಕ್ಕಳೇ, ಹಾಗೂ ಹೆತ್ತವರೇ, ಪೋಷಕರೇ ನಿಮಗೆಲ್ಲ ಶಿಕ್ಷಕರ ನೆಲೆಯಲ್ಲಿ ಕಿವಿ ಮಾತುಗಳು ಇಲ್ಲಿವೆ. ಜೀವನದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಎಂಬುದು  ಪ್ರಮುಖ ಘಟ್ಟಗಳು. ಅದರಲ್ಲೂ ಈ ವರ್ಷಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಕೋರೋನ ಕಾಲದಲ್ಲಿ ಎಂಟನೇ ತರಗತಿಯ ಪರೀಕ್ಷೆ ಬರೆಯಲು ಅಣಿಯಾಗಿದ್ದವರು. ಅಲ್ಲಿ ಅವರನ್ನು ಪರೀಕ್ಷೆ ಇಲ್ಲದೆ ಆಂತರಿಕ ಅಂಕಗಳ ಆಧಾರದ ಮೇಲೆ ಉತ್ತೀರ್ಣಗೊಳಿಸಲಾಯಿತು. ಮುಂದಿನ ವರ್ಷವೂ ಕರೋನ, ಒಮಿಕ್ರಾನ್, ಹಳದಿ ಕಪ್ಪು ಫಂಗಸ್ ಎಂದೆಲ್ಲಾ ಸರಿಯಾಗಿ ಒಂದೆರಡು ತಿಂಗಳು ಕೂಡಾ ಶಾಲೆಗೆ ಬರಲು ಆಗದೆ ಆನ್ ಲೈನ್ ತರಗತಿಯಲ್ಲಿ ಕಲಿತೇ ಅಷ್ಟೋ ಇಷ್ಟೋ ಬರೆದು ಅದು ಹೇಗೋ ಹತ್ತನೇ ತರಗತಿಗೆ ಬಂದವರು. ಕರೋನ ಸಮಯದಲ್ಲಿ ರಿಸ್ಕ್ ತೆಗೆದುಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  ಬರೆದು ಪಾಸ್ ಆದ ಬ್ಯಾಚ್ ಈಗ ಪಿಯುಸಿ 

ಈ ವರ್ಷದ ಎಸ್ ಎಸ್ ಎಲ್ ಸಿ ಮಕ್ಕಳು ಸರಿಯಾಗಿ ಪರೀಕ್ಷೆ ಬರೆದದ್ದು ತಮ್ಮ ಏಳನೇ  ತರಗತಿಯಲಿ ಮಾತ್ರ. ಪ್ರೌಢ ಶಾಲೆಗೆ ಬಂದ ಮೇಲೆ ಅವರು ಯಾವಾಗಲೂ ಮೂರು ಗಂಟೆಗಳ ಕಾಲ ನಿರಂತರವಾಗಿ ಕುಳಿತು ಪರೀಕ್ಷೆ ಬರೆಯಲೇ ಇಲ್ಲ. ಹಾಗಿರುವಾಗ ಮೂರು ಗಂಟೆಗಳ ಪರೀಕ್ಷೆಯನ್ನು ಎದುರಿಸುವ ತಾಳ್ಮೆ ತರುವುದೂ ಕೂಡಾ ಶಿಕ್ಷಕರಿಗೆ ಈಗ ಇರುವ ಸವಾಲುಗಳಲ್ಲಿ ಒಂದು. ಮತ್ತೆ ಎರಡೆರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮಾಡಿ, ಮಕ್ಕಳನ್ನು ಕಲಿಕಾ ಗುಂಪುಗಳಾಗಿ ವಿಭಾಗಿಸಿ, ಪುನರಾವರ್ತನೆ, ಪುನರ್ಮನನ ಮಾಡಿಸಿ, ಬರೆಸಿ, ಓದಿಸಿ, ತಿದ್ದಿಸಿ, ತೀಡಿಸಿ, ಬೆಳಗ್ಗೆ, ಸಂಜೆ ಶಾಲಾ ಅವಧಿ ಮೀರಿ, ತಮ್ಮ ಮನೆಯ ಕೆಲಸಗಳನ್ನೆಲ್ಲ ಬದಿಗೊತ್ತಿ, ತಮ್ಮ ಮಕ್ಕಳ ಕಲಿಕೆಯನ್ನು ಪರರಿಗೆ ವಹಿಸಿ, ಎಲ್ಲಾ ಶಿಕ್ಷಕರೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸರಿಯಾದ ಕ್ರಮದಲ್ಲಿ ಕಲಿಕೆಯನ್ನು ಮಾಡಿಸಿ ಪರೀಕ್ಷೆಗೆ ತಯಾರಿ ಮಾಡಿ, ಪರೀಕ್ಷೆ ಪ್ರಾರಂಭ ಆಗಿ, ಮುಗಿದು, ಫಲಿತಾಂಶ ಬರುವವರೆಗೂ ವಿದ್ಯಾರ್ಥಿಗಳಿಗಿಂತ ಹೆಚ್ಚು ಟೆನ್ಷನ್ ಶಿಕ್ಷಕರಿಗೆ. ನಮ್ಮ ಶಾಲೆಯ ರಿಸಲ್ಟ್ ಹೇಗೆ ಬರುವುದೋ ಎಂದು.

ಅದೇನೇ ಇರಲಿ, ವಿದ್ಯಾರ್ಥಿಗಳು ಸ್ಪಷ್ಟತೆ, ಸರಳ, ಸುಂದರ ಬರವಣಿಗೆಗೆ ಪ್ರಾಮುಖ್ಯತೆ ಕೊಡಬೇಕು. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯಬೇಕು. ಏನಾದರೂ ಉತ್ತರ ಬರೆದಿದ್ದರೆ ತಾನೇ ಅಂಕಗಳನ್ನು ಕೊಡಲು ಸಾಧ್ಯ ಆಗುವುದು? ಬರೆದದ್ದನ್ನು ಸರಿಯಾಗಿ ಓದಲು ಸಾಧ್ಯ ಆದರೆ ಮಾತ್ರ ಪೂರ್ತಿ ಅಂಕಗಳು ಸಿಗಲು ಸಾಧ್ಯ , ಅಲ್ಲವೇ? 

ಸಾಮಾನ್ಯ ವಿಜ್ಞಾನದಲ್ಲಿ ಚಿತ್ರಗಳನ್ನು ಕಲಿಯಬೇಕಿದೆ. ಅದನ್ನು ಸರಿಯಾಗಿ ಕಲಿತರೂ ಬರೆಯುವುದು ಅಂದವಾಗಿ ಇಲ್ಲದೆ ಇದ್ದರೆ, ಗುರುತಿಸಿದ್ದು ತಪ್ಪಾದರೆ ಅಂಕಗಳು ಸಿಗುವುದಿಲ್ಲ. ಆದ್ದರಿಂದ ಶೇಡಿಂಗ್ ಮಾಡಿ, ಸರಿಯಾಗಿ ಪ್ರತಿ ಭಾಗಗಳನ್ನು ಗುರುತಿಸಿ ಬರೆದಿದ್ದೇ ಆದರೆ ಪೂರ್ಣ ಅಂಕಗಳು ದೊರೆಯುತ್ತವೆ.  ಸಮಾಜವಿಜ್ಞಾನಗಳಲ್ಲಿ ಭೂಪಟವನ್ನು ಅಂದವಾಗಿ ಬರೆದು, ದಿಕ್ಕುಗಳನ್ನು ಗುರುತಿಸಿ, ಸರಿಯಾದ ಜಾಗದಲ್ಲಿ ಆಯಾ ಸ್ಥಳಗಳನ್ನು ಗುರುತಿಸುವ ಕೌಶಲ್ಯವನ್ನು ಕರಗತವಾಗಿಸಿಕೊಂಡರೆ ಅಂಕಗಳ ಗಳಿಕೆ ಸುಲಭ. ಗಣಿತದ ಲೆಕ್ಕಗಳನ್ನು ಮಾಡುವಾಗ  ಸ್ಪಷ್ಟವಾಗಿ ಬರೆದಾಗ ತಿದ್ದುವ ಯಾವುದೇ ಶಿಕ್ಷಕರಿಗೆ ಪೂರ್ಣ ಅಂಕಗಳನ್ನು ನೀಡಲು ಸುಲಭವಾಗುತ್ತದೆ. ಆದ್ದರಿಂದ ಉತ್ತಮ ಹಸ್ತಾಕ್ಷರಕ್ಕೇ ಮಾನ್ಯತೆ. ಕಲಿಯುವಾಗ ಬರೀ ಓದಿ ಕಲಿಯದೆ ಬರೆದು ಬರೆದು ಕಲಿತಾಗ ವೇಗವಾಗಿ ಬರೆಯುವ ಸಾಮರ್ಥ್ಯವೂ ಹೆಚ್ಚುತ್ತದೆ. 

  ಭಾಷಾ ವಿಷಯಗಳಲ್ಲಿ ಪ್ರಬಂಧ ರಚನೆ ಮಾಡುವಾಗ ನಿಮ್ಮ ನಿತ್ಯ ಜೀವನದ ಅನುಭವಗಳನ್ನು ಬಳಸಿಕೊಳ್ಳಿ, ಅವುಗಳನ್ನು ಸಮಯಕ್ಕೆ ಸರಿಯಾಗಿ ವಿಷಯಕ್ಕೆ ಪೂರಕವಾಗಿ ಉಲ್ಲೇಖಿಸಿ. ಸ್ವಂತ ಬರಹಕ್ಕೆ ಆದ್ಯತೆ ನೀಡಿ. ಯಾವುದೇ ಪ್ರಶ್ನೆಗೆ ಉತ್ತರವನ್ನು ಉರು ಹೊಡೆಯುವ ಬದಲು ಅರ್ಥ ಮಾಡಿಕೊಂಡು ಕಲಿಯಿರಿ. ಸಮಾಜ ವಿಜ್ಞಾನ, ಹಿಂದಿ, ಕನ್ನಡ ಅಥವಾ ಪ್ರಥಮ ಭಾಷೆ ಇಂಗ್ಲಿಷ್ ಎಲ್ಲಾ ವಿದ್ಯಾರ್ಥಿಗಳಿಗೂ ಸಾಮಾನ್ಯವಾಗಿ ಅತಿ ಹೆಚ್ಚು ಸ್ಕೋರ್ ಮಾಡುವ ವಿಷಯಗಳು.  ಗಣಿತ ಹಾಗೂ ವಿಜ್ಞಾನದ ವಿಷಯ ಇಷ್ಟವಾದ ವಿದ್ಯಾರ್ಥಿಗಳಿಗೆ ಅದರಲ್ಲಿ ಉತ್ತಮ ಅಂಕಗಳು ಸಿಗಬೇಕು ಎಂದಿದ್ದರೂ ಸ್ಪಷ್ಟತೆ, ಅಂದವಾದ ಬರಹ, ಪ್ರತಿಯೊಂದು ಪ್ರಶ್ನೆಗೂ ಸರಿಯಾದ ಪ್ರಶ್ನೆ ಸಂಖ್ಯೆ ಬರೆದು ಅಂದವಾಗಿ ಉತ್ತರ ಬರೆಯ ಬೇಕಾದುದು ಅಗತ್ಯ ಅಲ್ಲವೇ?

ಆಂಗ್ಲ ಭಾಷೆಯೇ ಆಗಿರಲಿ, ಸಂಸ್ಕೃತ, ಹಿಂದಿ, ಕನ್ನಡವೇ ಆಗಿರಲಿ ಅಥವಾ ಇತರ ಕೋರ್ ವಿಷಯಗಳೇ ಆಗಿರಲಿ, ಪ್ರತಿ ವಿದ್ಯಾರ್ಥಿಯೂ ಎಷ್ಟು ಕಲಿತಿರುವನೋ ಅದನ್ನು ತನ್ನ ಉತ್ತರ ಪತ್ರಿಕೆಯಲ್ಲಿ ತಿದ್ದುವ ಶಿಕ್ಷಕರಿಗೆ ಅರ್ಥ ಆಗುವಂತೆ ಮುಟ್ಟಿಸುವುದು ಒಂದು ಕಲೆ. ಅಂದವಾದ ಬರಹಕ್ಕೆ ಅಂಕಗಳು ಹೆಚ್ಚಾಗಿಯೇ ಬರುತ್ತವೆ ಎನ್ನುವುದು ಖಚಿತ. ಚಿತ್ತು ಕಾತು, ಗೀಚುಗಳನ್ನು ತಪ್ಪಿಸಿ, ಅಂದ, ಸ್ಪಷ್ಟ ಬರವಣಿಗೆಯೊಂದಿಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆದಾಗ ಅಂಕಗಳನ್ನು ಯಾವ ಶಿಕ್ಷಕರೂ ಕಸಿದುಕೊಳ್ಳಲು ಸಾಧ್ಯ ಇಲ್ಲ. ಸರಿಯಾಗಿ ಬರೆಯದೆ ತನಗೆ ಸರಿಯಾದ ಅಂಕಗಳನ್ನು ನೀಡಲಿಲ್ಲ ಎಂದು ಶಿಕ್ಷಕರನ್ನು ದೂರಿ ನೂರಾರು ರೂಪಾಯಿಗಳನ್ನು ಸುರಿದು ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ತರಿಸಿ, ಶಿಕ್ಷಕರಿಗೆ ತೋರಿಸಿದಾಗ "ನೀನು ಬರೆದ ಉತ್ತರಕ್ಕೆ ಸರಿಯಾದ ಅಂಕಗಳೆ ಸಿಕ್ಕಿವೆ. ಇನ್ನು ಹೆಚ್ಚು ಕೊಡಲು ಸಾಧ್ಯ ಆಗದು" ಎಂದು ಅವರೆಂದರೆ ವೃಥಾ ಖರ್ಚು. ಅದರ ಬದಲು ನಿಮ್ಮ ಬರವಣಿಗೆಯ ಸ್ಪಷ್ಟತೆ ಶಿಕ್ಷಕರ ಗಮನೆ ಸೆಳೆದು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯ ಇದೆ. ಇದು ಹತ್ತನೇ ತರಗತಿ ಅಥವಾ ಪಿಯುಸಿ ವಿಧ್ಯಾರ್ಥಿಗಳಿಗೆ ಮಾತ್ರವಲ್ಲ. ಪ್ರತಿ ವಿದ್ಯಾರ್ಥಿಗೂ ಅನ್ವಯಿಸುತ್ತದೆ. ಇದು ಮುಂದಿನ ಜೀವನಕ್ಕೂ ಅನ್ವಯಿಸುತ್ತದೆ. ನಗರ ಅಥವಾ ಹಳ್ಳಿಯಲ್ಲಿ ಎಷ್ಟೊಂದು ರಿಕ್ಷಗಳಿದ್ದರೂ ಉತ್ತಮವಾಗಿ ರಿಕ್ಷಾ ಚಲಾಯಿಸುವ, ಜವಾಬ್ದಾರಿ ತೆಗೆದುಕೊಂಡು ಸಮಯಪ್ರಜ್ಞೆ ಮೆರೆಯುವ, ಅಂದವಾಗಿ ತನ್ನ ರಿಕ್ಷಾ ಇಟ್ಟುಕೊಂಡಿರುವ ರಿಕ್ಷಾವನ್ನೇ ಜನ ಆಯ್ಕೆ ಮಾಡಿಕೊಳ್ಳುತ್ತಾರೆ, ಎಷ್ಟು ಜನ ಟೈಲರ್ ಗಳಿದ್ದರೂ ಅಂದವಾಗಿ ಹೊಲಿಯುವವನಿಗೇ ಹೆಚ್ಚು ಬಟ್ಟೆ ಬರುವಂತೆ ಅಂದವಾಗಿ, ಸ್ಪಷ್ಟವಾಗಿ ಬರೆಯುವವನಿಗೆ ಹೆಚ್ಚು ಅಂಕಗಳು ಕಟ್ಟಿಟ್ಟ ಬುತ್ತಿ ನೆನಪಿರಲಿ. 

ಕಠಿಣ ಪರಿಶ್ರಮ ಎಂದೂ ಹಾದಿ ತಪ್ಪದು. ಸ್ಪಷ್ಟ ಓದು, ಶುದ್ಧ ಬರಹ ಬದುಕಿನಲ್ಲಿ ನಮ್ಮನ್ನು ಎತ್ತರಕ್ಕೆ ಏರಿಸುವ ಅಂಶ. ಅದನ್ನೇ ಪರಿಪಾಲಿಸಿ. ಬೇರೆ ಸಮಯಕ್ಕಿಂತ ಹೆಚ್ಚು ಓದಿ. 

ಕಲಿಕೆಯನ್ನು ಇಷ್ಟ ಪಡಿ. ಆನಂದಿಸಿ. ಹೇಗೆ ಮೊಬೈಲ್ ಗಳಲ್ಲಿ ಬರುವ ರೀಲ್ ವಿಡಿಯೋಗಳನ್ನು ನೋಡಿ ಆನಂದಿಸುವಿರೋ ಹಾಗೆಯೇ ಪ್ರತಿ ವಿಷಯದ ಮೇಲೆ ಪ್ರೀತಿ ಇರಲಿ. ಕಾರಣ ಇದು ನಿಮ್ಮ ಜೀವನವನ್ನು ಬೆಳಗುವ ಅಂಶ. ಮೊಬೈಲ್, ಟಿವಿ, ಚಲನಚಿತ್ರ, ಜಾತ್ರೆ, ಕಬಡ್ಡಿ, ಕ್ರಿಕೆಟ್ ಎಲ್ಲವೂ ಯಾವಾಗಲೂ ಇವೆ, ಇರುತ್ತವೆ. ಅವುಗಳಿಗಾಗಿ ನಿಮ್ಮ ಕಲಿಕೆಯನ್ನು ತ್ಯಾಗ ಮಾಡಿದರೆ ಮುಂದೆ ನಿಮ್ಮ ಬದುಕಿನ ಹಲವಾರು ಹಂತಗಳಲ್ಲಿ ಕಷ್ಟ ಪಡುವವರು ನೀವೇ. ಕ್ಷಣದ ಆಕರ್ಷಣೆಗಳಿಗೆ ಬಲಿಯಾಗಿ ಜೀವನ ಪೂರ್ತಿ ಧುಖಿಸದಿರಿ. ಬದಲಾಗಿ ಸಿಕ್ಕಿದ ಸಮಯವನ್ನು ಉಪಯೋಗಿಸಿ. 
ಮೊಬೈಲ್ ಅಟ್ರಾಕ್ಷನ್ ಹೆಚ್ಚಿದ್ದರೆ ಯುಟ್ಯೂಬ್ ನಲ್ಲಿ ಉತ್ತರಿಸಿದ ಪ್ರಶ್ನೆ ಪತ್ರಿಕೆಗಳು, ಪಾಸಿಂಗ್ ಪ್ಯಾಕೆಜ್, ನಿಮಗೆ ಕಷ್ಟವಾದ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದು ಹೇಗೆ ಎಂಬುದನ್ನೇ ಹುಡುಕಿ ನೋಡಿ. ನಿಮ್ಮ ಯಾವುದೇ ಸರ್ಚ್ ನಿಮ್ಮನ್ನು ಉತ್ತಮ ಅಂಕಗಳಿಗೆ ಕೊಂಡು ಹೋಗುವುದೇ ಆಗಿರಲಿ. 
ಮಕ್ಕಳೇ, ಜೀವನದಲ್ಲಿ ಅವಕಾಶ ಮತ್ತು ಯಶಸ್ಸು ಒಂದೇ ಬಾರಿ ಬಂದು ಬಾಗಿಲು ತಟ್ಟುವುದು. ಆಗ ನಾವು ಸಮಯ ಹಾಳು ಮಾಡಿ ಮತ್ತೆ ಕೊರಗಿದರೆ ಫಲವಿಲ್ಲ. ನಿಮ್ಮ ಶಿಕ್ಷಕರ, ಪೋಷಕರ ಗುರಿ, ಉದ್ದೇಶಗಳನ್ನು ಈಡೇರಿಸುವುದು ಮತ್ತು ನಿಮ್ಮ ಕುಟುಂಬದ ಮರ್ಯಾದೆ, ಘನತೆ, ಗೌರವ ಕಾಪಾಡುವುದರ ಜೊತೆಗೆ ನಿಮ್ಮ ಭವಿಷ್ಯದ ಕೀಲಿಕೈ ನಿಮ್ಮ ಕೈಯಲ್ಲೇ ಇದೆ ಈಗ. ಅದನ್ನು ಈ ಸಮಯದಲ್ಲಿ ಶಿಕ್ಷಕರ ಸಹಾಯದಿಂದ ಸರಿಯಾಗಿ ಕಲಿತು, ಬಳಸಿಕೊಳ್ಳಿ, ಯಶಸ್ಸು ನಿಮ್ಮದಾಗಿಸಿಕೊಳ್ಳಿ. 
ಭವ್ಯ ಭವಿಷ್ಯ ನಿಮಗಾಗಿ ಕಾದಿದೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ನೀವು ಏನು ಆಲೋಚಿಸುವಿರೋ ಹಾಗೆಯೇ ಆಗುತ್ತದೆ. ನಾವು ಉತ್ತಮ ಅಂಕಗಳನ್ನು ಪಡೆದು ನಮ್ಮ ಗುರಿ ಸಾಧಿಸುತ್ತೇವೆ ಎಂಬ ಅಚಲ ವಿಶ್ವಾಸ ನಿಮ್ಮಲ್ಲಿ ಇರಲಿ. ಅದರೊಂದಿಗೆ ಕಠಿಣ ಪರಿಶ್ರಮವೂ ಇರಲಿ. ದೇವರ,ಗುರು ಹಿರಿಯರ  ಆಶೀರ್ವಾದವನ್ನು ಕೂಡಾ ಪಡೆಯುವುದನ್ನು ಮರೆಯದಿರಿ.  ಜೀವನದಲ್ಲಿ ಬಂದ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ, ಉತ್ತಮವಾಗಿ, ಅಂದವಾಗಿ ಬರೆಯಿರಿ. ಯಶಸ್ಸು ಕಟ್ಟಿಟ್ಟ ಬುತ್ತಿ. ಆಲ್ ದ ಬೆಸ್ಟ್ ವಿದ್ಯಾರ್ಥಿ ಮಿತ್ರರೇ. ಇಂದಿನ ಮಕ್ಕಳು ಇಂದೂ , ನಾಳೆಯೂ, ಮುಂದೂ ಭಾರತೀಯ ಪ್ರಜೆಗಳೇ. ಭವ್ಯ ಭಾರತದ ಮುಂದಿನ ಕನಸುಗಳು, ಶಿಲ್ಪಿಗಳು ನೀವೇ ಅಲ್ಲವೇ? ನೀವೇನಂತೀರಿ?
@ಪ್ರೇಮ್@
19.03.2022

120

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -123

ಮಾರ್ಚ್ 22ರಿಂದ ಪಿಯುಸಿ ಹಾಗೂ 28ರಿಂದ ಈ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಕೆಲವೊಂದು ಸೂಚನೆಗಳು. ಪ್ರೀತಿಯ ಮಕ್ಕಳೇ, ಹಾಗೂ ಹೆತ್ತವರೇ, ಪೋಷಕರೇ ನಿಮಗೆಲ್ಲ ಶಿಕ್ಷಕರ ನೆಲೆಯಲ್ಲಿ ಕಿವಿ ಮಾತುಗಳು ಇಲ್ಲಿವೆ. ಜೀವನದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಎಂಬುದು  ಪ್ರಮುಖ ಘಟ್ಟಗಳು. ಅದರಲ್ಲೂ ಈ ವರ್ಷಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಕೋರೋನ ಕಾಲದಲ್ಲಿ ಎಂಟನೇ ತರಗತಿಯ ಪರೀಕ್ಷೆ ಬರೆಯಲು ಅಣಿಯಾಗಿದ್ದವರು. ಅಲ್ಲಿ ಅವರನ್ನು ಪರೀಕ್ಷೆ ಇಲ್ಲದೆ ಆಂತರಿಕ ಅಂಕಗಳ ಆಧಾರದ ಮೇಲೆ ಉತ್ತೀರ್ಣಗೊಳಿಸಲಾಯಿತು. ಮುಂದಿನ ವರ್ಷವೂ ಕರೋನ, ಒಮಿಕ್ರಾನ್, ಹಳದಿ ಕಪ್ಪು ಫಂಗಸ್ ಎಂದೆಲ್ಲಾ ಸರಿಯಾಗಿ ಒಂದೆರಡು ತಿಂಗಳು ಕೂಡಾ ಶಾಲೆಗೆ ಬರಲು ಆಗದೆ ಆನ್ ಲೈನ್ ತರಗತಿಯಲ್ಲಿ ಕಲಿತೇ ಅಷ್ಟೋ ಇಷ್ಟೋ ಬರೆದು ಅದು ಹೇಗೋ ಹತ್ತನೇ ತರಗತಿಗೆ ಬಂದವರು. ಕರೋನ ಸಮಯದಲ್ಲಿ ರಿಸ್ಕ್ ತೆಗೆದುಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  ಬರೆದು ಪಾಸ್ ಆದ ಬ್ಯಾಚ್ ಈಗ ಪಿಯುಸಿ 

ಈ ವರ್ಷದ ಎಸ್ ಎಸ್ ಎಲ್ ಸಿ ಮಕ್ಕಳು ಸರಿಯಾಗಿ ಪರೀಕ್ಷೆ ಬರೆದದ್ದು ತಮ್ಮ ಏಳನೇ  ತರಗತಿಯಲಿ ಮಾತ್ರ. ಪ್ರೌಢ ಶಾಲೆಗೆ ಬಂದ ಮೇಲೆ ಅವರು ಯಾವಾಗಲೂ ಮೂರು ಗಂಟೆಗಳ ಕಾಲ ನಿರಂತರವಾಗಿ ಕುಳಿತು ಪರೀಕ್ಷೆ ಬರೆಯಲೇ ಇಲ್ಲ. ಹಾಗಿರುವಾಗ ಮೂರು ಗಂಟೆಗಳ ಪರೀಕ್ಷೆಯನ್ನು ಎದುರಿಸುವ ತಾಳ್ಮೆ ತರುವುದೂ ಕೂಡಾ ಶಿಕ್ಷಕರಿಗೆ ಈಗ ಇರುವ ಸವಾಲುಗಳಲ್ಲಿ ಒಂದು. ಮತ್ತೆ ಎರಡೆರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮಾಡಿ, ಮಕ್ಕಳನ್ನು ಕಲಿಕಾ ಗುಂಪುಗಳಾಗಿ ವಿಭಾಗಿಸಿ, ಪುನರಾವರ್ತನೆ, ಪುನರ್ಮನನ ಮಾಡಿಸಿ, ಬರೆಸಿ, ಓದಿಸಿ, ತಿದ್ದಿಸಿ, ತೀಡಿಸಿ, ಬೆಳಗ್ಗೆ, ಸಂಜೆ ಶಾಲಾ ಅವಧಿ ಮೀರಿ, ತಮ್ಮ ಮನೆಯ ಕೆಲಸಗಳನ್ನೆಲ್ಲ ಬದಿಗೊತ್ತಿ, ತಮ್ಮ ಮಕ್ಕಳ ಕಲಿಕೆಯನ್ನು ಪರರಿಗೆ ವಹಿಸಿ, ಎಲ್ಲಾ ಶಿಕ್ಷಕರೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸರಿಯಾದ ಕ್ರಮದಲ್ಲಿ ಕಲಿಕೆಯನ್ನು ಮಾಡಿಸಿ ಪರೀಕ್ಷೆಗೆ ತಯಾರಿ ಮಾಡಿ, ಪರೀಕ್ಷೆ ಪ್ರಾರಂಭ ಆಗಿ, ಮುಗಿದು, ಫಲಿತಾಂಶ ಬರುವವರೆಗೂ ವಿದ್ಯಾರ್ಥಿಗಳಿಗಿಂತ ಹೆಚ್ಚು ಟೆನ್ಷನ್ ಶಿಕ್ಷಕರಿಗೆ. ನಮ್ಮ ಶಾಲೆಯ ರಿಸಲ್ಟ್ ಹೇಗೆ ಬರುವುದೋ ಎಂದು.

ಅದೇನೇ ಇರಲಿ, ವಿದ್ಯಾರ್ಥಿಗಳು ಸ್ಪಷ್ಟತೆ, ಸರಳ, ಸುಂದರ ಬರವಣಿಗೆಗೆ ಪ್ರಾಮುಖ್ಯತೆ ಕೊಡಬೇಕು. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯಬೇಕು. ಏನಾದರೂ ಉತ್ತರ ಬರೆದಿದ್ದರೆ ತಾನೇ ಅಂಕಗಳನ್ನು ಕೊಡಲು ಸಾಧ್ಯ ಆಗುವುದು? ಬರೆದದ್ದನ್ನು ಸರಿಯಾಗಿ ಓದಲು ಸಾಧ್ಯ ಆದರೆ ಮಾತ್ರ ಪೂರ್ತಿ ಅಂಕಗಳು ಸಿಗಲು ಸಾಧ್ಯ , ಅಲ್ಲವೇ? 

ಸಾಮಾನ್ಯ ವಿಜ್ಞಾನದಲ್ಲಿ ಚಿತ್ರಗಳನ್ನು ಕಲಿಯಬೇಕಿದೆ. ಅದನ್ನು ಸರಿಯಾಗಿ ಕಲಿತರೂ ಬರೆಯುವುದು ಅಂದವಾಗಿ ಇಲ್ಲದೆ ಇದ್ದರೆ, ಗುರುತಿಸಿದ್ದು ತಪ್ಪಾದರೆ ಅಂಕಗಳು ಸಿಗುವುದಿಲ್ಲ. ಆದ್ದರಿಂದ ಶೇಡಿಂಗ್ ಮಾಡಿ, ಸರಿಯಾಗಿ ಪ್ರತಿ ಭಾಗಗಳನ್ನು ಗುರುತಿಸಿ ಬರೆದಿದ್ದೇ ಆದರೆ ಪೂರ್ಣ ಅಂಕಗಳು ದೊರೆಯುತ್ತವೆ.  ಸಮಾಜವಿಜ್ಞಾನಗಳಲ್ಲಿ ಭೂಪಟವನ್ನು ಅಂದವಾಗಿ ಬರೆದು, ದಿಕ್ಕುಗಳನ್ನು ಗುರುತಿಸಿ, ಸರಿಯಾದ ಜಾಗದಲ್ಲಿ ಆಯಾ ಸ್ಥಳಗಳನ್ನು ಗುರುತಿಸುವ ಕೌಶಲ್ಯವನ್ನು ಕರಗತವಾಗಿಸಿಕೊಂಡರೆ ಅಂಕಗಳ ಗಳಿಕೆ ಸುಲಭ. ಗಣಿತದ ಲೆಕ್ಕಗಳನ್ನು ಮಾಡುವಾಗ  ಸ್ಪಷ್ಟವಾಗಿ ಬರೆದಾಗ ತಿದ್ದುವ ಯಾವುದೇ ಶಿಕ್ಷಕರಿಗೆ ಪೂರ್ಣ ಅಂಕಗಳನ್ನು ನೀಡಲು ಸುಲಭವಾಗುತ್ತದೆ. ಆದ್ದರಿಂದ ಉತ್ತಮ ಹಸ್ತಾಕ್ಷರಕ್ಕೇ ಮಾನ್ಯತೆ. ಕಲಿಯುವಾಗ ಬರೀ ಓದಿ ಕಲಿಯದೆ ಬರೆದು ಬರೆದು ಕಲಿತಾಗ ವೇಗವಾಗಿ ಬರೆಯುವ ಸಾಮರ್ಥ್ಯವೂ ಹೆಚ್ಚುತ್ತದೆ. 

  ಭಾಷಾ ವಿಷಯಗಳಲ್ಲಿ ಪ್ರಬಂಧ ರಚನೆ ಮಾಡುವಾಗ ನಿಮ್ಮ ನಿತ್ಯ ಜೀವನದ ಅನುಭವಗಳನ್ನು ಬಳಸಿಕೊಳ್ಳಿ, ಅವುಗಳನ್ನು ಸಮಯಕ್ಕೆ ಸರಿಯಾಗಿ ವಿಷಯಕ್ಕೆ ಪೂರಕವಾಗಿ ಉಲ್ಲೇಖಿಸಿ. ಸ್ವಂತ ಬರಹಕ್ಕೆ ಆದ್ಯತೆ ನೀಡಿ. ಯಾವುದೇ ಪ್ರಶ್ನೆಗೆ ಉತ್ತರವನ್ನು ಉರು ಹೊಡೆಯುವ ಬದಲು ಅರ್ಥ ಮಾಡಿಕೊಂಡು ಕಲಿಯಿರಿ. ಸಮಾಜ ವಿಜ್ಞಾನ, ಹಿಂದಿ, ಕನ್ನಡ ಅಥವಾ ಪ್ರಥಮ ಭಾಷೆ ಇಂಗ್ಲಿಷ್ ಎಲ್ಲಾ ವಿದ್ಯಾರ್ಥಿಗಳಿಗೂ ಸಾಮಾನ್ಯವಾಗಿ ಅತಿ ಹೆಚ್ಚು ಸ್ಕೋರ್ ಮಾಡುವ ವಿಷಯಗಳು.  ಗಣಿತ ಹಾಗೂ ವಿಜ್ಞಾನದ ವಿಷಯ ಇಷ್ಟವಾದ ವಿದ್ಯಾರ್ಥಿಗಳಿಗೆ ಅದರಲ್ಲಿ ಉತ್ತಮ ಅಂಕಗಳು ಸಿಗಬೇಕು ಎಂದಿದ್ದರೂ ಸ್ಪಷ್ಟತೆ, ಅಂದವಾದ ಬರಹ, ಪ್ರತಿಯೊಂದು ಪ್ರಶ್ನೆಗೂ ಸರಿಯಾದ ಪ್ರಶ್ನೆ ಸಂಖ್ಯೆ ಬರೆದು ಅಂದವಾಗಿ ಉತ್ತರ ಬರೆಯ ಬೇಕಾದುದು ಅಗತ್ಯ ಅಲ್ಲವೇ?

ಆಂಗ್ಲ ಭಾಷೆಯೇ ಆಗಿರಲಿ, ಸಂಸ್ಕೃತ, ಹಿಂದಿ, ಕನ್ನಡವೇ ಆಗಿರಲಿ ಅಥವಾ ಇತರ ಕೋರ್ ವಿಷಯಗಳೇ ಆಗಿರಲಿ, ಪ್ರತಿ ವಿದ್ಯಾರ್ಥಿಯೂ ಎಷ್ಟು ಕಲಿತಿರುವನೋ ಅದನ್ನು ತನ್ನ ಉತ್ತರ ಪತ್ರಿಕೆಯಲ್ಲಿ ತಿದ್ದುವ ಶಿಕ್ಷಕರಿಗೆ ಅರ್ಥ ಆಗುವಂತೆ ಮುಟ್ಟಿಸುವುದು ಒಂದು ಕಲೆ. ಅಂದವಾದ ಬರಹಕ್ಕೆ ಅಂಕಗಳು ಹೆಚ್ಚಾಗಿಯೇ ಬರುತ್ತವೆ ಎನ್ನುವುದು ಖಚಿತ. ಚಿತ್ತು ಕಾತು, ಗೀಚುಗಳನ್ನು ತಪ್ಪಿಸಿ, ಅಂದ, ಸ್ಪಷ್ಟ ಬರವಣಿಗೆಯೊಂದಿಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆದಾಗ ಅಂಕಗಳನ್ನು ಯಾವ ಶಿಕ್ಷಕರೂ ಕಸಿದುಕೊಳ್ಳಲು ಸಾಧ್ಯ ಇಲ್ಲ. ಸರಿಯಾಗಿ ಬರೆಯದೆ ತನಗೆ ಸರಿಯಾದ ಅಂಕಗಳನ್ನು ನೀಡಲಿಲ್ಲ ಎಂದು ಶಿಕ್ಷಕರನ್ನು ದೂರಿ ನೂರಾರು ರೂಪಾಯಿಗಳನ್ನು ಸುರಿದು ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ತರಿಸಿ, ಶಿಕ್ಷಕರಿಗೆ ತೋರಿಸಿದಾಗ "ನೀನು ಬರೆದ ಉತ್ತರಕ್ಕೆ ಸರಿಯಾದ ಅಂಕಗಳೆ ಸಿಕ್ಕಿವೆ. ಇನ್ನು ಹೆಚ್ಚು ಕೊಡಲು ಸಾಧ್ಯ ಆಗದು" ಎಂದು ಅವರೆಂದರೆ ವೃಥಾ ಖರ್ಚು. ಅದರ ಬದಲು ನಿಮ್ಮ ಬರವಣಿಗೆಯ ಸ್ಪಷ್ಟತೆ ಶಿಕ್ಷಕರ ಗಮನೆ ಸೆಳೆದು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯ ಇದೆ. ಇದು ಹತ್ತನೇ ತರಗತಿ ಅಥವಾ ಪಿಯುಸಿ ವಿಧ್ಯಾರ್ಥಿಗಳಿಗೆ ಮಾತ್ರವಲ್ಲ. ಪ್ರತಿ ವಿದ್ಯಾರ್ಥಿಗೂ ಅನ್ವಯಿಸುತ್ತದೆ. ಇದು ಮುಂದಿನ ಜೀವನಕ್ಕೂ ಅನ್ವಯಿಸುತ್ತದೆ. ನಗರ ಅಥವಾ ಹಳ್ಳಿಯಲ್ಲಿ ಎಷ್ಟೊಂದು ರಿಕ್ಷಗಳಿದ್ದರೂ ಉತ್ತಮವಾಗಿ ರಿಕ್ಷಾ ಚಲಾಯಿಸುವ, ಜವಾಬ್ದಾರಿ ತೆಗೆದುಕೊಂಡು ಸಮಯಪ್ರಜ್ಞೆ ಮೆರೆಯುವ, ಅಂದವಾಗಿ ತನ್ನ ರಿಕ್ಷಾ ಇಟ್ಟುಕೊಂಡಿರುವ ರಿಕ್ಷಾವನ್ನೇ ಜನ ಆಯ್ಕೆ ಮಾಡಿಕೊಳ್ಳುತ್ತಾರೆ, ಎಷ್ಟು ಜನ ಟೈಲರ್ ಗಳಿದ್ದರೂ ಅಂದವಾಗಿ ಹೊಲಿಯುವವನಿಗೇ ಹೆಚ್ಚು ಬಟ್ಟೆ ಬರುವಂತೆ ಅಂದವಾಗಿ, ಸ್ಪಷ್ಟವಾಗಿ ಬರೆಯುವವನಿಗೆ ಹೆಚ್ಚು ಅಂಕಗಳು ಕಟ್ಟಿಟ್ಟ ಬುತ್ತಿ ನೆನಪಿರಲಿ. 

ಕಠಿಣ ಪರಿಶ್ರಮ ಎಂದೂ ಹಾದಿ ತಪ್ಪದು. ಸ್ಪಷ್ಟ ಓದು, ಶುದ್ಧ ಬರಹ ಬದುಕಿನಲ್ಲಿ ನಮ್ಮನ್ನು ಎತ್ತರಕ್ಕೆ ಏರಿಸುವ ಅಂಶ. ಅದನ್ನೇ ಪರಿಪಾಲಿಸಿ. ಬೇರೆ ಸಮಯಕ್ಕಿಂತ ಹೆಚ್ಚು ಓದಿ. 

ಕಲಿಕೆಯನ್ನು ಇಷ್ಟ ಪಡಿ. ಆನಂದಿಸಿ. ಹೇಗೆ ಮೊಬೈಲ್ ಗಳಲ್ಲಿ ಬರುವ ರೀಲ್ ವಿಡಿಯೋಗಳನ್ನು ನೋಡಿ ಆನಂದಿಸುವಿರೋ ಹಾಗೆಯೇ ಪ್ರತಿ ವಿಷಯದ ಮೇಲೆ ಪ್ರೀತಿ ಇರಲಿ. ಕಾರಣ ಇದು ನಿಮ್ಮ ಜೀವನವನ್ನು ಬೆಳಗುವ ಅಂಶ. ಮೊಬೈಲ್, ಟಿವಿ, ಚಲನಚಿತ್ರ, ಜಾತ್ರೆ, ಕಬಡ್ಡಿ, ಕ್ರಿಕೆಟ್ ಎಲ್ಲವೂ ಯಾವಾಗಲೂ ಇವೆ, ಇರುತ್ತವೆ. ಅವುಗಳಿಗಾಗಿ ನಿಮ್ಮ ಕಲಿಕೆಯನ್ನು ತ್ಯಾಗ ಮಾಡಿದರೆ ಮುಂದೆ ನಿಮ್ಮ ಬದುಕಿನ ಹಲವಾರು ಹಂತಗಳಲ್ಲಿ ಕಷ್ಟ ಪಡುವವರು ನೀವೇ. ಕ್ಷಣದ ಆಕರ್ಷಣೆಗಳಿಗೆ ಬಲಿಯಾಗಿ ಜೀವನ ಪೂರ್ತಿ ಧುಖಿಸದಿರಿ. ಬದಲಾಗಿ ಸಿಕ್ಕಿದ ಸಮಯವನ್ನು ಉಪಯೋಗಿಸಿ. 
ಮೊಬೈಲ್ ಅಟ್ರಾಕ್ಷನ್ ಹೆಚ್ಚಿದ್ದರೆ ಯುಟ್ಯೂಬ್ ನಲ್ಲಿ ಉತ್ತರಿಸಿದ ಪ್ರಶ್ನೆ ಪತ್ರಿಕೆಗಳು, ಪಾಸಿಂಗ್ ಪ್ಯಾಕೆಜ್, ನಿಮಗೆ ಕಷ್ಟವಾದ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದು ಹೇಗೆ ಎಂಬುದನ್ನೇ ಹುಡುಕಿ ನೋಡಿ. ನಿಮ್ಮ ಯಾವುದೇ ಸರ್ಚ್ ನಿಮ್ಮನ್ನು ಉತ್ತಮ ಅಂಕಗಳಿಗೆ ಕೊಂಡು ಹೋಗುವುದೇ ಆಗಿರಲಿ. 
ಮಕ್ಕಳೇ, ಜೀವನದಲ್ಲಿ ಅವಕಾಶ ಮತ್ತು ಯಶಸ್ಸು ಒಂದೇ ಬಾರಿ ಬಂದು ಬಾಗಿಲು ತಟ್ಟುವುದು. ಆಗ ನಾವು ಸಮಯ ಹಾಳು ಮಾಡಿ ಮತ್ತೆ ಕೊರಗಿದರೆ ಫಲವಿಲ್ಲ. ನಿಮ್ಮ ಶಿಕ್ಷಕರ, ಪೋಷಕರ ಗುರಿ, ಉದ್ದೇಶಗಳನ್ನು ಈಡೇರಿಸುವುದು ಮತ್ತು ನಿಮ್ಮ ಕುಟುಂಬದ ಮರ್ಯಾದೆ, ಘನತೆ, ಗೌರವ ಕಾಪಾಡುವುದರ ಜೊತೆಗೆ ನಿಮ್ಮ ಭವಿಷ್ಯದ ಕೀಲಿಕೈ ನಿಮ್ಮ ಕೈಯಲ್ಲೇ ಇದೆ ಈಗ. ಅದನ್ನು ಈ ಸಮಯದಲ್ಲಿ ಶಿಕ್ಷಕರ ಸಹಾಯದಿಂದ ಸರಿಯಾಗಿ ಕಲಿತು, ಬಳಸಿಕೊಳ್ಳಿ, ಯಶಸ್ಸು ನಿಮ್ಮದಾಗಿಸಿಕೊಳ್ಳಿ. 
ಭವ್ಯ ಭವಿಷ್ಯ ನಿಮಗಾಗಿ ಕಾದಿದೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ನೀವು ಏನು ಆಲೋಚಿಸುವಿರೋ ಹಾಗೆಯೇ ಆಗುತ್ತದೆ. ನಾವು ಉತ್ತಮ ಅಂಕಗಳನ್ನು ಪಡೆದು ನಮ್ಮ ಗುರಿ ಸಾಧಿಸುತ್ತೇವೆ ಎಂಬ ಅಚಲ ವಿಶ್ವಾಸ ನಿಮ್ಮಲ್ಲಿ ಇರಲಿ. ಅದರೊಂದಿಗೆ ಕಠಿಣ ಪರಿಶ್ರಮವೂ ಇರಲಿ. ದೇವರ,ಗುರು ಹಿರಿಯರ  ಆಶೀರ್ವಾದವನ್ನು ಕೂಡಾ ಪಡೆಯುವುದನ್ನು ಮರೆಯದಿರಿ.  ಜೀವನದಲ್ಲಿ ಬಂದ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ, ಉತ್ತಮವಾಗಿ, ಅಂದವಾಗಿ ಬರೆಯಿರಿ. ಯಶಸ್ಸು ಕಟ್ಟಿಟ್ಟ ಬುತ್ತಿ. ಆಲ್ ದ ಬೆಸ್ಟ್ ವಿದ್ಯಾರ್ಥಿ ಮಿತ್ರರೇ. ಇಂದಿನ ಮಕ್ಕಳು ಇಂದೂ , ನಾಳೆಯೂ, ಮುಂದೂ ಭಾರತೀಯ ಪ್ರಜೆಗಳೇ. ಭವ್ಯ ಭಾರತದ ಮುಂದಿನ ಕನಸುಗಳು, ಶಿಲ್ಪಿಗಳು ನೀವೇ ಅಲ್ಲವೇ? ನೀವೇನಂತೀರಿ?
@ಪ್ರೇಮ್@
19.03.2022

119

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -123

ಮಾರ್ಚ್ 22ರಿಂದ ಪಿಯುಸಿ ಹಾಗೂ 28ರಿಂದ ಈ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಕೆಲವೊಂದು ಸೂಚನೆಗಳು. ಪ್ರೀತಿಯ ಮಕ್ಕಳೇ, ಹಾಗೂ ಹೆತ್ತವರೇ, ಪೋಷಕರೇ ನಿಮಗೆಲ್ಲ ಶಿಕ್ಷಕರ ನೆಲೆಯಲ್ಲಿ ಕಿವಿ ಮಾತುಗಳು ಇಲ್ಲಿವೆ. ಜೀವನದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಎಂಬುದು  ಪ್ರಮುಖ ಘಟ್ಟಗಳು. ಅದರಲ್ಲೂ ಈ ವರ್ಷಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಕೋರೋನ ಕಾಲದಲ್ಲಿ ಎಂಟನೇ ತರಗತಿಯ ಪರೀಕ್ಷೆ ಬರೆಯಲು ಅಣಿಯಾಗಿದ್ದವರು. ಅಲ್ಲಿ ಅವರನ್ನು ಪರೀಕ್ಷೆ ಇಲ್ಲದೆ ಆಂತರಿಕ ಅಂಕಗಳ ಆಧಾರದ ಮೇಲೆ ಉತ್ತೀರ್ಣಗೊಳಿಸಲಾಯಿತು. ಮುಂದಿನ ವರ್ಷವೂ ಕರೋನ, ಒಮಿಕ್ರಾನ್, ಹಳದಿ ಕಪ್ಪು ಫಂಗಸ್ ಎಂದೆಲ್ಲಾ ಸರಿಯಾಗಿ ಒಂದೆರಡು ತಿಂಗಳು ಕೂಡಾ ಶಾಲೆಗೆ ಬರಲು ಆಗದೆ ಆನ್ ಲೈನ್ ತರಗತಿಯಲ್ಲಿ ಕಲಿತೇ ಅಷ್ಟೋ ಇಷ್ಟೋ ಬರೆದು ಅದು ಹೇಗೋ ಹತ್ತನೇ ತರಗತಿಗೆ ಬಂದವರು. ಕರೋನ ಸಮಯದಲ್ಲಿ ರಿಸ್ಕ್ ತೆಗೆದುಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  ಬರೆದು ಪಾಸ್ ಆದ ಬ್ಯಾಚ್ ಈಗ ಪಿಯುಸಿ 

ಈ ವರ್ಷದ ಎಸ್ ಎಸ್ ಎಲ್ ಸಿ ಮಕ್ಕಳು ಸರಿಯಾಗಿ ಪರೀಕ್ಷೆ ಬರೆದದ್ದು ತಮ್ಮ ಏಳನೇ  ತರಗತಿಯಲಿ ಮಾತ್ರ. ಪ್ರೌಢ ಶಾಲೆಗೆ ಬಂದ ಮೇಲೆ ಅವರು ಯಾವಾಗಲೂ ಮೂರು ಗಂಟೆಗಳ ಕಾಲ ನಿರಂತರವಾಗಿ ಕುಳಿತು ಪರೀಕ್ಷೆ ಬರೆಯಲೇ ಇಲ್ಲ. ಹಾಗಿರುವಾಗ ಮೂರು ಗಂಟೆಗಳ ಪರೀಕ್ಷೆಯನ್ನು ಎದುರಿಸುವ ತಾಳ್ಮೆ ತರುವುದೂ ಕೂಡಾ ಶಿಕ್ಷಕರಿಗೆ ಈಗ ಇರುವ ಸವಾಲುಗಳಲ್ಲಿ ಒಂದು. ಮತ್ತೆ ಎರಡೆರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮಾಡಿ, ಮಕ್ಕಳನ್ನು ಕಲಿಕಾ ಗುಂಪುಗಳಾಗಿ ವಿಭಾಗಿಸಿ, ಪುನರಾವರ್ತನೆ, ಪುನರ್ಮನನ ಮಾಡಿಸಿ, ಬರೆಸಿ, ಓದಿಸಿ, ತಿದ್ದಿಸಿ, ತೀಡಿಸಿ, ಬೆಳಗ್ಗೆ, ಸಂಜೆ ಶಾಲಾ ಅವಧಿ ಮೀರಿ, ತಮ್ಮ ಮನೆಯ ಕೆಲಸಗಳನ್ನೆಲ್ಲ ಬದಿಗೊತ್ತಿ, ತಮ್ಮ ಮಕ್ಕಳ ಕಲಿಕೆಯನ್ನು ಪರರಿಗೆ ವಹಿಸಿ, ಎಲ್ಲಾ ಶಿಕ್ಷಕರೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸರಿಯಾದ ಕ್ರಮದಲ್ಲಿ ಕಲಿಕೆಯನ್ನು ಮಾಡಿಸಿ ಪರೀಕ್ಷೆಗೆ ತಯಾರಿ ಮಾಡಿ, ಪರೀಕ್ಷೆ ಪ್ರಾರಂಭ ಆಗಿ, ಮುಗಿದು, ಫಲಿತಾಂಶ ಬರುವವರೆಗೂ ವಿದ್ಯಾರ್ಥಿಗಳಿಗಿಂತ ಹೆಚ್ಚು ಟೆನ್ಷನ್ ಶಿಕ್ಷಕರಿಗೆ. ನಮ್ಮ ಶಾಲೆಯ ರಿಸಲ್ಟ್ ಹೇಗೆ ಬರುವುದೋ ಎಂದು.

ಅದೇನೇ ಇರಲಿ, ವಿದ್ಯಾರ್ಥಿಗಳು ಸ್ಪಷ್ಟತೆ, ಸರಳ, ಸುಂದರ ಬರವಣಿಗೆಗೆ ಪ್ರಾಮುಖ್ಯತೆ ಕೊಡಬೇಕು. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯಬೇಕು. ಏನಾದರೂ ಉತ್ತರ ಬರೆದಿದ್ದರೆ ತಾನೇ ಅಂಕಗಳನ್ನು ಕೊಡಲು ಸಾಧ್ಯ ಆಗುವುದು? ಬರೆದದ್ದನ್ನು ಸರಿಯಾಗಿ ಓದಲು ಸಾಧ್ಯ ಆದರೆ ಮಾತ್ರ ಪೂರ್ತಿ ಅಂಕಗಳು ಸಿಗಲು ಸಾಧ್ಯ , ಅಲ್ಲವೇ? 

ಸಾಮಾನ್ಯ ವಿಜ್ಞಾನದಲ್ಲಿ ಚಿತ್ರಗಳನ್ನು ಕಲಿಯಬೇಕಿದೆ. ಅದನ್ನು ಸರಿಯಾಗಿ ಕಲಿತರೂ ಬರೆಯುವುದು ಅಂದವಾಗಿ ಇಲ್ಲದೆ ಇದ್ದರೆ, ಗುರುತಿಸಿದ್ದು ತಪ್ಪಾದರೆ ಅಂಕಗಳು ಸಿಗುವುದಿಲ್ಲ. ಆದ್ದರಿಂದ ಶೇಡಿಂಗ್ ಮಾಡಿ, ಸರಿಯಾಗಿ ಪ್ರತಿ ಭಾಗಗಳನ್ನು ಗುರುತಿಸಿ ಬರೆದಿದ್ದೇ ಆದರೆ ಪೂರ್ಣ ಅಂಕಗಳು ದೊರೆಯುತ್ತವೆ.  ಸಮಾಜವಿಜ್ಞಾನಗಳಲ್ಲಿ ಭೂಪಟವನ್ನು ಅಂದವಾಗಿ ಬರೆದು, ದಿಕ್ಕುಗಳನ್ನು ಗುರುತಿಸಿ, ಸರಿಯಾದ ಜಾಗದಲ್ಲಿ ಆಯಾ ಸ್ಥಳಗಳನ್ನು ಗುರುತಿಸುವ ಕೌಶಲ್ಯವನ್ನು ಕರಗತವಾಗಿಸಿಕೊಂಡರೆ ಅಂಕಗಳ ಗಳಿಕೆ ಸುಲಭ. ಗಣಿತದ ಲೆಕ್ಕಗಳನ್ನು ಮಾಡುವಾಗ  ಸ್ಪಷ್ಟವಾಗಿ ಬರೆದಾಗ ತಿದ್ದುವ ಯಾವುದೇ ಶಿಕ್ಷಕರಿಗೆ ಪೂರ್ಣ ಅಂಕಗಳನ್ನು ನೀಡಲು ಸುಲಭವಾಗುತ್ತದೆ. ಆದ್ದರಿಂದ ಉತ್ತಮ ಹಸ್ತಾಕ್ಷರಕ್ಕೇ ಮಾನ್ಯತೆ. ಕಲಿಯುವಾಗ ಬರೀ ಓದಿ ಕಲಿಯದೆ ಬರೆದು ಬರೆದು ಕಲಿತಾಗ ವೇಗವಾಗಿ ಬರೆಯುವ ಸಾಮರ್ಥ್ಯವೂ ಹೆಚ್ಚುತ್ತದೆ. 

  ಭಾಷಾ ವಿಷಯಗಳಲ್ಲಿ ಪ್ರಬಂಧ ರಚನೆ ಮಾಡುವಾಗ ನಿಮ್ಮ ನಿತ್ಯ ಜೀವನದ ಅನುಭವಗಳನ್ನು ಬಳಸಿಕೊಳ್ಳಿ, ಅವುಗಳನ್ನು ಸಮಯಕ್ಕೆ ಸರಿಯಾಗಿ ವಿಷಯಕ್ಕೆ ಪೂರಕವಾಗಿ ಉಲ್ಲೇಖಿಸಿ. ಸ್ವಂತ ಬರಹಕ್ಕೆ ಆದ್ಯತೆ ನೀಡಿ. ಯಾವುದೇ ಪ್ರಶ್ನೆಗೆ ಉತ್ತರವನ್ನು ಉರು ಹೊಡೆಯುವ ಬದಲು ಅರ್ಥ ಮಾಡಿಕೊಂಡು ಕಲಿಯಿರಿ. ಸಮಾಜ ವಿಜ್ಞಾನ, ಹಿಂದಿ, ಕನ್ನಡ ಅಥವಾ ಪ್ರಥಮ ಭಾಷೆ ಇಂಗ್ಲಿಷ್ ಎಲ್ಲಾ ವಿದ್ಯಾರ್ಥಿಗಳಿಗೂ ಸಾಮಾನ್ಯವಾಗಿ ಅತಿ ಹೆಚ್ಚು ಸ್ಕೋರ್ ಮಾಡುವ ವಿಷಯಗಳು.  ಗಣಿತ ಹಾಗೂ ವಿಜ್ಞಾನದ ವಿಷಯ ಇಷ್ಟವಾದ ವಿದ್ಯಾರ್ಥಿಗಳಿಗೆ ಅದರಲ್ಲಿ ಉತ್ತಮ ಅಂಕಗಳು ಸಿಗಬೇಕು ಎಂದಿದ್ದರೂ ಸ್ಪಷ್ಟತೆ, ಅಂದವಾದ ಬರಹ, ಪ್ರತಿಯೊಂದು ಪ್ರಶ್ನೆಗೂ ಸರಿಯಾದ ಪ್ರಶ್ನೆ ಸಂಖ್ಯೆ ಬರೆದು ಅಂದವಾಗಿ ಉತ್ತರ ಬರೆಯ ಬೇಕಾದುದು ಅಗತ್ಯ ಅಲ್ಲವೇ?

ಆಂಗ್ಲ ಭಾಷೆಯೇ ಆಗಿರಲಿ, ಸಂಸ್ಕೃತ, ಹಿಂದಿ, ಕನ್ನಡವೇ ಆಗಿರಲಿ ಅಥವಾ ಇತರ ಕೋರ್ ವಿಷಯಗಳೇ ಆಗಿರಲಿ, ಪ್ರತಿ ವಿದ್ಯಾರ್ಥಿಯೂ ಎಷ್ಟು ಕಲಿತಿರುವನೋ ಅದನ್ನು ತನ್ನ ಉತ್ತರ ಪತ್ರಿಕೆಯಲ್ಲಿ ತಿದ್ದುವ ಶಿಕ್ಷಕರಿಗೆ ಅರ್ಥ ಆಗುವಂತೆ ಮುಟ್ಟಿಸುವುದು ಒಂದು ಕಲೆ. ಅಂದವಾದ ಬರಹಕ್ಕೆ ಅಂಕಗಳು ಹೆಚ್ಚಾಗಿಯೇ ಬರುತ್ತವೆ ಎನ್ನುವುದು ಖಚಿತ. ಚಿತ್ತು ಕಾತು, ಗೀಚುಗಳನ್ನು ತಪ್ಪಿಸಿ, ಅಂದ, ಸ್ಪಷ್ಟ ಬರವಣಿಗೆಯೊಂದಿಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆದಾಗ ಅಂಕಗಳನ್ನು ಯಾವ ಶಿಕ್ಷಕರೂ ಕಸಿದುಕೊಳ್ಳಲು ಸಾಧ್ಯ ಇಲ್ಲ. ಸರಿಯಾಗಿ ಬರೆಯದೆ ತನಗೆ ಸರಿಯಾದ ಅಂಕಗಳನ್ನು ನೀಡಲಿಲ್ಲ ಎಂದು ಶಿಕ್ಷಕರನ್ನು ದೂರಿ ನೂರಾರು ರೂಪಾಯಿಗಳನ್ನು ಸುರಿದು ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ತರಿಸಿ, ಶಿಕ್ಷಕರಿಗೆ ತೋರಿಸಿದಾಗ "ನೀನು ಬರೆದ ಉತ್ತರಕ್ಕೆ ಸರಿಯಾದ ಅಂಕಗಳೆ ಸಿಕ್ಕಿವೆ. ಇನ್ನು ಹೆಚ್ಚು ಕೊಡಲು ಸಾಧ್ಯ ಆಗದು" ಎಂದು ಅವರೆಂದರೆ ವೃಥಾ ಖರ್ಚು. ಅದರ ಬದಲು ನಿಮ್ಮ ಬರವಣಿಗೆಯ ಸ್ಪಷ್ಟತೆ ಶಿಕ್ಷಕರ ಗಮನೆ ಸೆಳೆದು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯ ಇದೆ. ಇದು ಹತ್ತನೇ ತರಗತಿ ಅಥವಾ ಪಿಯುಸಿ ವಿಧ್ಯಾರ್ಥಿಗಳಿಗೆ ಮಾತ್ರವಲ್ಲ. ಪ್ರತಿ ವಿದ್ಯಾರ್ಥಿಗೂ ಅನ್ವಯಿಸುತ್ತದೆ. ಇದು ಮುಂದಿನ ಜೀವನಕ್ಕೂ ಅನ್ವಯಿಸುತ್ತದೆ. ನಗರ ಅಥವಾ ಹಳ್ಳಿಯಲ್ಲಿ ಎಷ್ಟೊಂದು ರಿಕ್ಷಗಳಿದ್ದರೂ ಉತ್ತಮವಾಗಿ ರಿಕ್ಷಾ ಚಲಾಯಿಸುವ, ಜವಾಬ್ದಾರಿ ತೆಗೆದುಕೊಂಡು ಸಮಯಪ್ರಜ್ಞೆ ಮೆರೆಯುವ, ಅಂದವಾಗಿ ತನ್ನ ರಿಕ್ಷಾ ಇಟ್ಟುಕೊಂಡಿರುವ ರಿಕ್ಷಾವನ್ನೇ ಜನ ಆಯ್ಕೆ ಮಾಡಿಕೊಳ್ಳುತ್ತಾರೆ, ಎಷ್ಟು ಜನ ಟೈಲರ್ ಗಳಿದ್ದರೂ ಅಂದವಾಗಿ ಹೊಲಿಯುವವನಿಗೇ ಹೆಚ್ಚು ಬಟ್ಟೆ ಬರುವಂತೆ ಅಂದವಾಗಿ, ಸ್ಪಷ್ಟವಾಗಿ ಬರೆಯುವವನಿಗೆ ಹೆಚ್ಚು ಅಂಕಗಳು ಕಟ್ಟಿಟ್ಟ ಬುತ್ತಿ ನೆನಪಿರಲಿ. 

ಕಠಿಣ ಪರಿಶ್ರಮ ಎಂದೂ ಹಾದಿ ತಪ್ಪದು. ಸ್ಪಷ್ಟ ಓದು, ಶುದ್ಧ ಬರಹ ಬದುಕಿನಲ್ಲಿ ನಮ್ಮನ್ನು ಎತ್ತರಕ್ಕೆ ಏರಿಸುವ ಅಂಶ. ಅದನ್ನೇ ಪರಿಪಾಲಿಸಿ. ಬೇರೆ ಸಮಯಕ್ಕಿಂತ ಹೆಚ್ಚು ಓದಿ. 

ಕಲಿಕೆಯನ್ನು ಇಷ್ಟ ಪಡಿ. ಆನಂದಿಸಿ. ಹೇಗೆ ಮೊಬೈಲ್ ಗಳಲ್ಲಿ ಬರುವ ರೀಲ್ ವಿಡಿಯೋಗಳನ್ನು ನೋಡಿ ಆನಂದಿಸುವಿರೋ ಹಾಗೆಯೇ ಪ್ರತಿ ವಿಷಯದ ಮೇಲೆ ಪ್ರೀತಿ ಇರಲಿ. ಕಾರಣ ಇದು ನಿಮ್ಮ ಜೀವನವನ್ನು ಬೆಳಗುವ ಅಂಶ. ಮೊಬೈಲ್, ಟಿವಿ, ಚಲನಚಿತ್ರ, ಜಾತ್ರೆ, ಕಬಡ್ಡಿ, ಕ್ರಿಕೆಟ್ ಎಲ್ಲವೂ ಯಾವಾಗಲೂ ಇವೆ, ಇರುತ್ತವೆ. ಅವುಗಳಿಗಾಗಿ ನಿಮ್ಮ ಕಲಿಕೆಯನ್ನು ತ್ಯಾಗ ಮಾಡಿದರೆ ಮುಂದೆ ನಿಮ್ಮ ಬದುಕಿನ ಹಲವಾರು ಹಂತಗಳಲ್ಲಿ ಕಷ್ಟ ಪಡುವವರು ನೀವೇ. ಕ್ಷಣದ ಆಕರ್ಷಣೆಗಳಿಗೆ ಬಲಿಯಾಗಿ ಜೀವನ ಪೂರ್ತಿ ಧುಖಿಸದಿರಿ. ಬದಲಾಗಿ ಸಿಕ್ಕಿದ ಸಮಯವನ್ನು ಉಪಯೋಗಿಸಿ. 
ಮೊಬೈಲ್ ಅಟ್ರಾಕ್ಷನ್ ಹೆಚ್ಚಿದ್ದರೆ ಯುಟ್ಯೂಬ್ ನಲ್ಲಿ ಉತ್ತರಿಸಿದ ಪ್ರಶ್ನೆ ಪತ್ರಿಕೆಗಳು, ಪಾಸಿಂಗ್ ಪ್ಯಾಕೆಜ್, ನಿಮಗೆ ಕಷ್ಟವಾದ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದು ಹೇಗೆ ಎಂಬುದನ್ನೇ ಹುಡುಕಿ ನೋಡಿ. ನಿಮ್ಮ ಯಾವುದೇ ಸರ್ಚ್ ನಿಮ್ಮನ್ನು ಉತ್ತಮ ಅಂಕಗಳಿಗೆ ಕೊಂಡು ಹೋಗುವುದೇ ಆಗಿರಲಿ. 
ಮಕ್ಕಳೇ, ಜೀವನದಲ್ಲಿ ಅವಕಾಶ ಮತ್ತು ಯಶಸ್ಸು ಒಂದೇ ಬಾರಿ ಬಂದು ಬಾಗಿಲು ತಟ್ಟುವುದು. ಆಗ ನಾವು ಸಮಯ ಹಾಳು ಮಾಡಿ ಮತ್ತೆ ಕೊರಗಿದರೆ ಫಲವಿಲ್ಲ. ನಿಮ್ಮ ಶಿಕ್ಷಕರ, ಪೋಷಕರ ಗುರಿ, ಉದ್ದೇಶಗಳನ್ನು ಈಡೇರಿಸುವುದು ಮತ್ತು ನಿಮ್ಮ ಕುಟುಂಬದ ಮರ್ಯಾದೆ, ಘನತೆ, ಗೌರವ ಕಾಪಾಡುವುದರ ಜೊತೆಗೆ ನಿಮ್ಮ ಭವಿಷ್ಯದ ಕೀಲಿಕೈ ನಿಮ್ಮ ಕೈಯಲ್ಲೇ ಇದೆ ಈಗ. ಅದನ್ನು ಈ ಸಮಯದಲ್ಲಿ ಶಿಕ್ಷಕರ ಸಹಾಯದಿಂದ ಸರಿಯಾಗಿ ಕಲಿತು, ಬಳಸಿಕೊಳ್ಳಿ, ಯಶಸ್ಸು ನಿಮ್ಮದಾಗಿಸಿಕೊಳ್ಳಿ. 
ಭವ್ಯ ಭವಿಷ್ಯ ನಿಮಗಾಗಿ ಕಾದಿದೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ನೀವು ಏನು ಆಲೋಚಿಸುವಿರೋ ಹಾಗೆಯೇ ಆಗುತ್ತದೆ. ನಾವು ಉತ್ತಮ ಅಂಕಗಳನ್ನು ಪಡೆದು ನಮ್ಮ ಗುರಿ ಸಾಧಿಸುತ್ತೇವೆ ಎಂಬ ಅಚಲ ವಿಶ್ವಾಸ ನಿಮ್ಮಲ್ಲಿ ಇರಲಿ. ಅದರೊಂದಿಗೆ ಕಠಿಣ ಪರಿಶ್ರಮವೂ ಇರಲಿ. ದೇವರ,ಗುರು ಹಿರಿಯರ  ಆಶೀರ್ವಾದವನ್ನು ಕೂಡಾ ಪಡೆಯುವುದನ್ನು ಮರೆಯದಿರಿ.  ಜೀವನದಲ್ಲಿ ಬಂದ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ, ಉತ್ತಮವಾಗಿ, ಅಂದವಾಗಿ ಬರೆಯಿರಿ. ಯಶಸ್ಸು ಕಟ್ಟಿಟ್ಟ ಬುತ್ತಿ. ಆಲ್ ದ ಬೆಸ್ಟ್ ವಿದ್ಯಾರ್ಥಿ ಮಿತ್ರರೇ. ಇಂದಿನ ಮಕ್ಕಳು ಇಂದೂ , ನಾಳೆಯೂ, ಮುಂದೂ ಭಾರತೀಯ ಪ್ರಜೆಗಳೇ. ಭವ್ಯ ಭಾರತದ ಮುಂದಿನ ಕನಸುಗಳು, ಶಿಲ್ಪಿಗಳು ನೀವೇ ಅಲ್ಲವೇ? ನೀವೇನಂತೀರಿ?
@ಪ್ರೇಮ್@
19.03.2022

118

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -123

ಮಾರ್ಚ್ 22ರಿಂದ ಪಿಯುಸಿ ಹಾಗೂ 28ರಿಂದ ಈ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಕೆಲವೊಂದು ಸೂಚನೆಗಳು. ಪ್ರೀತಿಯ ಮಕ್ಕಳೇ, ಹಾಗೂ ಹೆತ್ತವರೇ, ಪೋಷಕರೇ ನಿಮಗೆಲ್ಲ ಶಿಕ್ಷಕರ ನೆಲೆಯಲ್ಲಿ ಕಿವಿ ಮಾತುಗಳು ಇಲ್ಲಿವೆ. ಜೀವನದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಎಂಬುದು  ಪ್ರಮುಖ ಘಟ್ಟಗಳು. ಅದರಲ್ಲೂ ಈ ವರ್ಷಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಕೋರೋನ ಕಾಲದಲ್ಲಿ ಎಂಟನೇ ತರಗತಿಯ ಪರೀಕ್ಷೆ ಬರೆಯಲು ಅಣಿಯಾಗಿದ್ದವರು. ಅಲ್ಲಿ ಅವರನ್ನು ಪರೀಕ್ಷೆ ಇಲ್ಲದೆ ಆಂತರಿಕ ಅಂಕಗಳ ಆಧಾರದ ಮೇಲೆ ಉತ್ತೀರ್ಣಗೊಳಿಸಲಾಯಿತು. ಮುಂದಿನ ವರ್ಷವೂ ಕರೋನ, ಒಮಿಕ್ರಾನ್, ಹಳದಿ ಕಪ್ಪು ಫಂಗಸ್ ಎಂದೆಲ್ಲಾ ಸರಿಯಾಗಿ ಒಂದೆರಡು ತಿಂಗಳು ಕೂಡಾ ಶಾಲೆಗೆ ಬರಲು ಆಗದೆ ಆನ್ ಲೈನ್ ತರಗತಿಯಲ್ಲಿ ಕಲಿತೇ ಅಷ್ಟೋ ಇಷ್ಟೋ ಬರೆದು ಅದು ಹೇಗೋ ಹತ್ತನೇ ತರಗತಿಗೆ ಬಂದವರು. ಕರೋನ ಸಮಯದಲ್ಲಿ ರಿಸ್ಕ್ ತೆಗೆದುಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  ಬರೆದು ಪಾಸ್ ಆದ ಬ್ಯಾಚ್ ಈಗ ಪಿಯುಸಿ 

ಈ ವರ್ಷದ ಎಸ್ ಎಸ್ ಎಲ್ ಸಿ ಮಕ್ಕಳು ಸರಿಯಾಗಿ ಪರೀಕ್ಷೆ ಬರೆದದ್ದು ತಮ್ಮ ಏಳನೇ  ತರಗತಿಯಲಿ ಮಾತ್ರ. ಪ್ರೌಢ ಶಾಲೆಗೆ ಬಂದ ಮೇಲೆ ಅವರು ಯಾವಾಗಲೂ ಮೂರು ಗಂಟೆಗಳ ಕಾಲ ನಿರಂತರವಾಗಿ ಕುಳಿತು ಪರೀಕ್ಷೆ ಬರೆಯಲೇ ಇಲ್ಲ. ಹಾಗಿರುವಾಗ ಮೂರು ಗಂಟೆಗಳ ಪರೀಕ್ಷೆಯನ್ನು ಎದುರಿಸುವ ತಾಳ್ಮೆ ತರುವುದೂ ಕೂಡಾ ಶಿಕ್ಷಕರಿಗೆ ಈಗ ಇರುವ ಸವಾಲುಗಳಲ್ಲಿ ಒಂದು. ಮತ್ತೆ ಎರಡೆರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮಾಡಿ, ಮಕ್ಕಳನ್ನು ಕಲಿಕಾ ಗುಂಪುಗಳಾಗಿ ವಿಭಾಗಿಸಿ, ಪುನರಾವರ್ತನೆ, ಪುನರ್ಮನನ ಮಾಡಿಸಿ, ಬರೆಸಿ, ಓದಿಸಿ, ತಿದ್ದಿಸಿ, ತೀಡಿಸಿ, ಬೆಳಗ್ಗೆ, ಸಂಜೆ ಶಾಲಾ ಅವಧಿ ಮೀರಿ, ತಮ್ಮ ಮನೆಯ ಕೆಲಸಗಳನ್ನೆಲ್ಲ ಬದಿಗೊತ್ತಿ, ತಮ್ಮ ಮಕ್ಕಳ ಕಲಿಕೆಯನ್ನು ಪರರಿಗೆ ವಹಿಸಿ, ಎಲ್ಲಾ ಶಿಕ್ಷಕರೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸರಿಯಾದ ಕ್ರಮದಲ್ಲಿ ಕಲಿಕೆಯನ್ನು ಮಾಡಿಸಿ ಪರೀಕ್ಷೆಗೆ ತಯಾರಿ ಮಾಡಿ, ಪರೀಕ್ಷೆ ಪ್ರಾರಂಭ ಆಗಿ, ಮುಗಿದು, ಫಲಿತಾಂಶ ಬರುವವರೆಗೂ ವಿದ್ಯಾರ್ಥಿಗಳಿಗಿಂತ ಹೆಚ್ಚು ಟೆನ್ಷನ್ ಶಿಕ್ಷಕರಿಗೆ. ನಮ್ಮ ಶಾಲೆಯ ರಿಸಲ್ಟ್ ಹೇಗೆ ಬರುವುದೋ ಎಂದು.

ಅದೇನೇ ಇರಲಿ, ವಿದ್ಯಾರ್ಥಿಗಳು ಸ್ಪಷ್ಟತೆ, ಸರಳ, ಸುಂದರ ಬರವಣಿಗೆಗೆ ಪ್ರಾಮುಖ್ಯತೆ ಕೊಡಬೇಕು. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯಬೇಕು. ಏನಾದರೂ ಉತ್ತರ ಬರೆದಿದ್ದರೆ ತಾನೇ ಅಂಕಗಳನ್ನು ಕೊಡಲು ಸಾಧ್ಯ ಆಗುವುದು? ಬರೆದದ್ದನ್ನು ಸರಿಯಾಗಿ ಓದಲು ಸಾಧ್ಯ ಆದರೆ ಮಾತ್ರ ಪೂರ್ತಿ ಅಂಕಗಳು ಸಿಗಲು ಸಾಧ್ಯ , ಅಲ್ಲವೇ? 

ಸಾಮಾನ್ಯ ವಿಜ್ಞಾನದಲ್ಲಿ ಚಿತ್ರಗಳನ್ನು ಕಲಿಯಬೇಕಿದೆ. ಅದನ್ನು ಸರಿಯಾಗಿ ಕಲಿತರೂ ಬರೆಯುವುದು ಅಂದವಾಗಿ ಇಲ್ಲದೆ ಇದ್ದರೆ, ಗುರುತಿಸಿದ್ದು ತಪ್ಪಾದರೆ ಅಂಕಗಳು ಸಿಗುವುದಿಲ್ಲ. ಆದ್ದರಿಂದ ಶೇಡಿಂಗ್ ಮಾಡಿ, ಸರಿಯಾಗಿ ಪ್ರತಿ ಭಾಗಗಳನ್ನು ಗುರುತಿಸಿ ಬರೆದಿದ್ದೇ ಆದರೆ ಪೂರ್ಣ ಅಂಕಗಳು ದೊರೆಯುತ್ತವೆ.  ಸಮಾಜವಿಜ್ಞಾನಗಳಲ್ಲಿ ಭೂಪಟವನ್ನು ಅಂದವಾಗಿ ಬರೆದು, ದಿಕ್ಕುಗಳನ್ನು ಗುರುತಿಸಿ, ಸರಿಯಾದ ಜಾಗದಲ್ಲಿ ಆಯಾ ಸ್ಥಳಗಳನ್ನು ಗುರುತಿಸುವ ಕೌಶಲ್ಯವನ್ನು ಕರಗತವಾಗಿಸಿಕೊಂಡರೆ ಅಂಕಗಳ ಗಳಿಕೆ ಸುಲಭ. ಗಣಿತದ ಲೆಕ್ಕಗಳನ್ನು ಮಾಡುವಾಗ  ಸ್ಪಷ್ಟವಾಗಿ ಬರೆದಾಗ ತಿದ್ದುವ ಯಾವುದೇ ಶಿಕ್ಷಕರಿಗೆ ಪೂರ್ಣ ಅಂಕಗಳನ್ನು ನೀಡಲು ಸುಲಭವಾಗುತ್ತದೆ. ಆದ್ದರಿಂದ ಉತ್ತಮ ಹಸ್ತಾಕ್ಷರಕ್ಕೇ ಮಾನ್ಯತೆ. ಕಲಿಯುವಾಗ ಬರೀ ಓದಿ ಕಲಿಯದೆ ಬರೆದು ಬರೆದು ಕಲಿತಾಗ ವೇಗವಾಗಿ ಬರೆಯುವ ಸಾಮರ್ಥ್ಯವೂ ಹೆಚ್ಚುತ್ತದೆ. 

  ಭಾಷಾ ವಿಷಯಗಳಲ್ಲಿ ಪ್ರಬಂಧ ರಚನೆ ಮಾಡುವಾಗ ನಿಮ್ಮ ನಿತ್ಯ ಜೀವನದ ಅನುಭವಗಳನ್ನು ಬಳಸಿಕೊಳ್ಳಿ, ಅವುಗಳನ್ನು ಸಮಯಕ್ಕೆ ಸರಿಯಾಗಿ ವಿಷಯಕ್ಕೆ ಪೂರಕವಾಗಿ ಉಲ್ಲೇಖಿಸಿ. ಸ್ವಂತ ಬರಹಕ್ಕೆ ಆದ್ಯತೆ ನೀಡಿ. ಯಾವುದೇ ಪ್ರಶ್ನೆಗೆ ಉತ್ತರವನ್ನು ಉರು ಹೊಡೆಯುವ ಬದಲು ಅರ್ಥ ಮಾಡಿಕೊಂಡು ಕಲಿಯಿರಿ. ಸಮಾಜ ವಿಜ್ಞಾನ, ಹಿಂದಿ, ಕನ್ನಡ ಅಥವಾ ಪ್ರಥಮ ಭಾಷೆ ಇಂಗ್ಲಿಷ್ ಎಲ್ಲಾ ವಿದ್ಯಾರ್ಥಿಗಳಿಗೂ ಸಾಮಾನ್ಯವಾಗಿ ಅತಿ ಹೆಚ್ಚು ಸ್ಕೋರ್ ಮಾಡುವ ವಿಷಯಗಳು.  ಗಣಿತ ಹಾಗೂ ವಿಜ್ಞಾನದ ವಿಷಯ ಇಷ್ಟವಾದ ವಿದ್ಯಾರ್ಥಿಗಳಿಗೆ ಅದರಲ್ಲಿ ಉತ್ತಮ ಅಂಕಗಳು ಸಿಗಬೇಕು ಎಂದಿದ್ದರೂ ಸ್ಪಷ್ಟತೆ, ಅಂದವಾದ ಬರಹ, ಪ್ರತಿಯೊಂದು ಪ್ರಶ್ನೆಗೂ ಸರಿಯಾದ ಪ್ರಶ್ನೆ ಸಂಖ್ಯೆ ಬರೆದು ಅಂದವಾಗಿ ಉತ್ತರ ಬರೆಯ ಬೇಕಾದುದು ಅಗತ್ಯ ಅಲ್ಲವೇ?

ಆಂಗ್ಲ ಭಾಷೆಯೇ ಆಗಿರಲಿ, ಸಂಸ್ಕೃತ, ಹಿಂದಿ, ಕನ್ನಡವೇ ಆಗಿರಲಿ ಅಥವಾ ಇತರ ಕೋರ್ ವಿಷಯಗಳೇ ಆಗಿರಲಿ, ಪ್ರತಿ ವಿದ್ಯಾರ್ಥಿಯೂ ಎಷ್ಟು ಕಲಿತಿರುವನೋ ಅದನ್ನು ತನ್ನ ಉತ್ತರ ಪತ್ರಿಕೆಯಲ್ಲಿ ತಿದ್ದುವ ಶಿಕ್ಷಕರಿಗೆ ಅರ್ಥ ಆಗುವಂತೆ ಮುಟ್ಟಿಸುವುದು ಒಂದು ಕಲೆ. ಅಂದವಾದ ಬರಹಕ್ಕೆ ಅಂಕಗಳು ಹೆಚ್ಚಾಗಿಯೇ ಬರುತ್ತವೆ ಎನ್ನುವುದು ಖಚಿತ. ಚಿತ್ತು ಕಾತು, ಗೀಚುಗಳನ್ನು ತಪ್ಪಿಸಿ, ಅಂದ, ಸ್ಪಷ್ಟ ಬರವಣಿಗೆಯೊಂದಿಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆದಾಗ ಅಂಕಗಳನ್ನು ಯಾವ ಶಿಕ್ಷಕರೂ ಕಸಿದುಕೊಳ್ಳಲು ಸಾಧ್ಯ ಇಲ್ಲ. ಸರಿಯಾಗಿ ಬರೆಯದೆ ತನಗೆ ಸರಿಯಾದ ಅಂಕಗಳನ್ನು ನೀಡಲಿಲ್ಲ ಎಂದು ಶಿಕ್ಷಕರನ್ನು ದೂರಿ ನೂರಾರು ರೂಪಾಯಿಗಳನ್ನು ಸುರಿದು ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ತರಿಸಿ, ಶಿಕ್ಷಕರಿಗೆ ತೋರಿಸಿದಾಗ "ನೀನು ಬರೆದ ಉತ್ತರಕ್ಕೆ ಸರಿಯಾದ ಅಂಕಗಳೆ ಸಿಕ್ಕಿವೆ. ಇನ್ನು ಹೆಚ್ಚು ಕೊಡಲು ಸಾಧ್ಯ ಆಗದು" ಎಂದು ಅವರೆಂದರೆ ವೃಥಾ ಖರ್ಚು. ಅದರ ಬದಲು ನಿಮ್ಮ ಬರವಣಿಗೆಯ ಸ್ಪಷ್ಟತೆ ಶಿಕ್ಷಕರ ಗಮನೆ ಸೆಳೆದು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯ ಇದೆ. ಇದು ಹತ್ತನೇ ತರಗತಿ ಅಥವಾ ಪಿಯುಸಿ ವಿಧ್ಯಾರ್ಥಿಗಳಿಗೆ ಮಾತ್ರವಲ್ಲ. ಪ್ರತಿ ವಿದ್ಯಾರ್ಥಿಗೂ ಅನ್ವಯಿಸುತ್ತದೆ. ಇದು ಮುಂದಿನ ಜೀವನಕ್ಕೂ ಅನ್ವಯಿಸುತ್ತದೆ. ನಗರ ಅಥವಾ ಹಳ್ಳಿಯಲ್ಲಿ ಎಷ್ಟೊಂದು ರಿಕ್ಷಗಳಿದ್ದರೂ ಉತ್ತಮವಾಗಿ ರಿಕ್ಷಾ ಚಲಾಯಿಸುವ, ಜವಾಬ್ದಾರಿ ತೆಗೆದುಕೊಂಡು ಸಮಯಪ್ರಜ್ಞೆ ಮೆರೆಯುವ, ಅಂದವಾಗಿ ತನ್ನ ರಿಕ್ಷಾ ಇಟ್ಟುಕೊಂಡಿರುವ ರಿಕ್ಷಾವನ್ನೇ ಜನ ಆಯ್ಕೆ ಮಾಡಿಕೊಳ್ಳುತ್ತಾರೆ, ಎಷ್ಟು ಜನ ಟೈಲರ್ ಗಳಿದ್ದರೂ ಅಂದವಾಗಿ ಹೊಲಿಯುವವನಿಗೇ ಹೆಚ್ಚು ಬಟ್ಟೆ ಬರುವಂತೆ ಅಂದವಾಗಿ, ಸ್ಪಷ್ಟವಾಗಿ ಬರೆಯುವವನಿಗೆ ಹೆಚ್ಚು ಅಂಕಗಳು ಕಟ್ಟಿಟ್ಟ ಬುತ್ತಿ ನೆನಪಿರಲಿ. 

ಕಠಿಣ ಪರಿಶ್ರಮ ಎಂದೂ ಹಾದಿ ತಪ್ಪದು. ಸ್ಪಷ್ಟ ಓದು, ಶುದ್ಧ ಬರಹ ಬದುಕಿನಲ್ಲಿ ನಮ್ಮನ್ನು ಎತ್ತರಕ್ಕೆ ಏರಿಸುವ ಅಂಶ. ಅದನ್ನೇ ಪರಿಪಾಲಿಸಿ. ಬೇರೆ ಸಮಯಕ್ಕಿಂತ ಹೆಚ್ಚು ಓದಿ. 

ಕಲಿಕೆಯನ್ನು ಇಷ್ಟ ಪಡಿ. ಆನಂದಿಸಿ. ಹೇಗೆ ಮೊಬೈಲ್ ಗಳಲ್ಲಿ ಬರುವ ರೀಲ್ ವಿಡಿಯೋಗಳನ್ನು ನೋಡಿ ಆನಂದಿಸುವಿರೋ ಹಾಗೆಯೇ ಪ್ರತಿ ವಿಷಯದ ಮೇಲೆ ಪ್ರೀತಿ ಇರಲಿ. ಕಾರಣ ಇದು ನಿಮ್ಮ ಜೀವನವನ್ನು ಬೆಳಗುವ ಅಂಶ. ಮೊಬೈಲ್, ಟಿವಿ, ಚಲನಚಿತ್ರ, ಜಾತ್ರೆ, ಕಬಡ್ಡಿ, ಕ್ರಿಕೆಟ್ ಎಲ್ಲವೂ ಯಾವಾಗಲೂ ಇವೆ, ಇರುತ್ತವೆ. ಅವುಗಳಿಗಾಗಿ ನಿಮ್ಮ ಕಲಿಕೆಯನ್ನು ತ್ಯಾಗ ಮಾಡಿದರೆ ಮುಂದೆ ನಿಮ್ಮ ಬದುಕಿನ ಹಲವಾರು ಹಂತಗಳಲ್ಲಿ ಕಷ್ಟ ಪಡುವವರು ನೀವೇ. ಕ್ಷಣದ ಆಕರ್ಷಣೆಗಳಿಗೆ ಬಲಿಯಾಗಿ ಜೀವನ ಪೂರ್ತಿ ಧುಖಿಸದಿರಿ. ಬದಲಾಗಿ ಸಿಕ್ಕಿದ ಸಮಯವನ್ನು ಉಪಯೋಗಿಸಿ. 
ಮೊಬೈಲ್ ಅಟ್ರಾಕ್ಷನ್ ಹೆಚ್ಚಿದ್ದರೆ ಯುಟ್ಯೂಬ್ ನಲ್ಲಿ ಉತ್ತರಿಸಿದ ಪ್ರಶ್ನೆ ಪತ್ರಿಕೆಗಳು, ಪಾಸಿಂಗ್ ಪ್ಯಾಕೆಜ್, ನಿಮಗೆ ಕಷ್ಟವಾದ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದು ಹೇಗೆ ಎಂಬುದನ್ನೇ ಹುಡುಕಿ ನೋಡಿ. ನಿಮ್ಮ ಯಾವುದೇ ಸರ್ಚ್ ನಿಮ್ಮನ್ನು ಉತ್ತಮ ಅಂಕಗಳಿಗೆ ಕೊಂಡು ಹೋಗುವುದೇ ಆಗಿರಲಿ. 
ಮಕ್ಕಳೇ, ಜೀವನದಲ್ಲಿ ಅವಕಾಶ ಮತ್ತು ಯಶಸ್ಸು ಒಂದೇ ಬಾರಿ ಬಂದು ಬಾಗಿಲು ತಟ್ಟುವುದು. ಆಗ ನಾವು ಸಮಯ ಹಾಳು ಮಾಡಿ ಮತ್ತೆ ಕೊರಗಿದರೆ ಫಲವಿಲ್ಲ. ನಿಮ್ಮ ಶಿಕ್ಷಕರ, ಪೋಷಕರ ಗುರಿ, ಉದ್ದೇಶಗಳನ್ನು ಈಡೇರಿಸುವುದು ಮತ್ತು ನಿಮ್ಮ ಕುಟುಂಬದ ಮರ್ಯಾದೆ, ಘನತೆ, ಗೌರವ ಕಾಪಾಡುವುದರ ಜೊತೆಗೆ ನಿಮ್ಮ ಭವಿಷ್ಯದ ಕೀಲಿಕೈ ನಿಮ್ಮ ಕೈಯಲ್ಲೇ ಇದೆ ಈಗ. ಅದನ್ನು ಈ ಸಮಯದಲ್ಲಿ ಶಿಕ್ಷಕರ ಸಹಾಯದಿಂದ ಸರಿಯಾಗಿ ಕಲಿತು, ಬಳಸಿಕೊಳ್ಳಿ, ಯಶಸ್ಸು ನಿಮ್ಮದಾಗಿಸಿಕೊಳ್ಳಿ. 
ಭವ್ಯ ಭವಿಷ್ಯ ನಿಮಗಾಗಿ ಕಾದಿದೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ನೀವು ಏನು ಆಲೋಚಿಸುವಿರೋ ಹಾಗೆಯೇ ಆಗುತ್ತದೆ. ನಾವು ಉತ್ತಮ ಅಂಕಗಳನ್ನು ಪಡೆದು ನಮ್ಮ ಗುರಿ ಸಾಧಿಸುತ್ತೇವೆ ಎಂಬ ಅಚಲ ವಿಶ್ವಾಸ ನಿಮ್ಮಲ್ಲಿ ಇರಲಿ. ಅದರೊಂದಿಗೆ ಕಠಿಣ ಪರಿಶ್ರಮವೂ ಇರಲಿ. ದೇವರ,ಗುರು ಹಿರಿಯರ  ಆಶೀರ್ವಾದವನ್ನು ಕೂಡಾ ಪಡೆಯುವುದನ್ನು ಮರೆಯದಿರಿ.  ಜೀವನದಲ್ಲಿ ಬಂದ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ, ಉತ್ತಮವಾಗಿ, ಅಂದವಾಗಿ ಬರೆಯಿರಿ. ಯಶಸ್ಸು ಕಟ್ಟಿಟ್ಟ ಬುತ್ತಿ. ಆಲ್ ದ ಬೆಸ್ಟ್ ವಿದ್ಯಾರ್ಥಿ ಮಿತ್ರರೇ. ಇಂದಿನ ಮಕ್ಕಳು ಇಂದೂ , ನಾಳೆಯೂ, ಮುಂದೂ ಭಾರತೀಯ ಪ್ರಜೆಗಳೇ. ಭವ್ಯ ಭಾರತದ ಮುಂದಿನ ಕನಸುಗಳು, ಶಿಲ್ಪಿಗಳು ನೀವೇ ಅಲ್ಲವೇ? ನೀವೇನಂತೀರಿ?
@ಪ್ರೇಮ್@
19.03.2022

125

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -123

ಮಾರ್ಚ್ 22ರಿಂದ ಪಿಯುಸಿ ಹಾಗೂ 28ರಿಂದ ಈ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಕೆಲವೊಂದು ಸೂಚನೆಗಳು. ಪ್ರೀತಿಯ ಮಕ್ಕಳೇ, ಹಾಗೂ ಹೆತ್ತವರೇ, ಪೋಷಕರೇ ನಿಮಗೆಲ್ಲ ಶಿಕ್ಷಕರ ನೆಲೆಯಲ್ಲಿ ಕಿವಿ ಮಾತುಗಳು ಇಲ್ಲಿವೆ. ಜೀವನದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಎಂಬುದು  ಪ್ರಮುಖ ಘಟ್ಟಗಳು. ಅದರಲ್ಲೂ ಈ ವರ್ಷಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಕೋರೋನ ಕಾಲದಲ್ಲಿ ಎಂಟನೇ ತರಗತಿಯ ಪರೀಕ್ಷೆ ಬರೆಯಲು ಅಣಿಯಾಗಿದ್ದವರು. ಅಲ್ಲಿ ಅವರನ್ನು ಪರೀಕ್ಷೆ ಇಲ್ಲದೆ ಆಂತರಿಕ ಅಂಕಗಳ ಆಧಾರದ ಮೇಲೆ ಉತ್ತೀರ್ಣಗೊಳಿಸಲಾಯಿತು. ಮುಂದಿನ ವರ್ಷವೂ ಕರೋನ, ಒಮಿಕ್ರಾನ್, ಹಳದಿ ಕಪ್ಪು ಫಂಗಸ್ ಎಂದೆಲ್ಲಾ ಸರಿಯಾಗಿ ಒಂದೆರಡು ತಿಂಗಳು ಕೂಡಾ ಶಾಲೆಗೆ ಬರಲು ಆಗದೆ ಆನ್ ಲೈನ್ ತರಗತಿಯಲ್ಲಿ ಕಲಿತೇ ಅಷ್ಟೋ ಇಷ್ಟೋ ಬರೆದು ಅದು ಹೇಗೋ ಹತ್ತನೇ ತರಗತಿಗೆ ಬಂದವರು. ಕರೋನ ಸಮಯದಲ್ಲಿ ರಿಸ್ಕ್ ತೆಗೆದುಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  ಬರೆದು ಪಾಸ್ ಆದ ಬ್ಯಾಚ್ ಈಗ ಪಿಯುಸಿ 

ಈ ವರ್ಷದ ಎಸ್ ಎಸ್ ಎಲ್ ಸಿ ಮಕ್ಕಳು ಸರಿಯಾಗಿ ಪರೀಕ್ಷೆ ಬರೆದದ್ದು ತಮ್ಮ ಏಳನೇ  ತರಗತಿಯಲಿ ಮಾತ್ರ. ಪ್ರೌಢ ಶಾಲೆಗೆ ಬಂದ ಮೇಲೆ ಅವರು ಯಾವಾಗಲೂ ಮೂರು ಗಂಟೆಗಳ ಕಾಲ ನಿರಂತರವಾಗಿ ಕುಳಿತು ಪರೀಕ್ಷೆ ಬರೆಯಲೇ ಇಲ್ಲ. ಹಾಗಿರುವಾಗ ಮೂರು ಗಂಟೆಗಳ ಪರೀಕ್ಷೆಯನ್ನು ಎದುರಿಸುವ ತಾಳ್ಮೆ ತರುವುದೂ ಕೂಡಾ ಶಿಕ್ಷಕರಿಗೆ ಈಗ ಇರುವ ಸವಾಲುಗಳಲ್ಲಿ ಒಂದು. ಮತ್ತೆ ಎರಡೆರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮಾಡಿ, ಮಕ್ಕಳನ್ನು ಕಲಿಕಾ ಗುಂಪುಗಳಾಗಿ ವಿಭಾಗಿಸಿ, ಪುನರಾವರ್ತನೆ, ಪುನರ್ಮನನ ಮಾಡಿಸಿ, ಬರೆಸಿ, ಓದಿಸಿ, ತಿದ್ದಿಸಿ, ತೀಡಿಸಿ, ಬೆಳಗ್ಗೆ, ಸಂಜೆ ಶಾಲಾ ಅವಧಿ ಮೀರಿ, ತಮ್ಮ ಮನೆಯ ಕೆಲಸಗಳನ್ನೆಲ್ಲ ಬದಿಗೊತ್ತಿ, ತಮ್ಮ ಮಕ್ಕಳ ಕಲಿಕೆಯನ್ನು ಪರರಿಗೆ ವಹಿಸಿ, ಎಲ್ಲಾ ಶಿಕ್ಷಕರೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸರಿಯಾದ ಕ್ರಮದಲ್ಲಿ ಕಲಿಕೆಯನ್ನು ಮಾಡಿಸಿ ಪರೀಕ್ಷೆಗೆ ತಯಾರಿ ಮಾಡಿ, ಪರೀಕ್ಷೆ ಪ್ರಾರಂಭ ಆಗಿ, ಮುಗಿದು, ಫಲಿತಾಂಶ ಬರುವವರೆಗೂ ವಿದ್ಯಾರ್ಥಿಗಳಿಗಿಂತ ಹೆಚ್ಚು ಟೆನ್ಷನ್ ಶಿಕ್ಷಕರಿಗೆ. ನಮ್ಮ ಶಾಲೆಯ ರಿಸಲ್ಟ್ ಹೇಗೆ ಬರುವುದೋ ಎಂದು.

ಅದೇನೇ ಇರಲಿ, ವಿದ್ಯಾರ್ಥಿಗಳು ಸ್ಪಷ್ಟತೆ, ಸರಳ, ಸುಂದರ ಬರವಣಿಗೆಗೆ ಪ್ರಾಮುಖ್ಯತೆ ಕೊಡಬೇಕು. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯಬೇಕು. ಏನಾದರೂ ಉತ್ತರ ಬರೆದಿದ್ದರೆ ತಾನೇ ಅಂಕಗಳನ್ನು ಕೊಡಲು ಸಾಧ್ಯ ಆಗುವುದು? ಬರೆದದ್ದನ್ನು ಸರಿಯಾಗಿ ಓದಲು ಸಾಧ್ಯ ಆದರೆ ಮಾತ್ರ ಪೂರ್ತಿ ಅಂಕಗಳು ಸಿಗಲು ಸಾಧ್ಯ , ಅಲ್ಲವೇ? 

ಸಾಮಾನ್ಯ ವಿಜ್ಞಾನದಲ್ಲಿ ಚಿತ್ರಗಳನ್ನು ಕಲಿಯಬೇಕಿದೆ. ಅದನ್ನು ಸರಿಯಾಗಿ ಕಲಿತರೂ ಬರೆಯುವುದು ಅಂದವಾಗಿ ಇಲ್ಲದೆ ಇದ್ದರೆ, ಗುರುತಿಸಿದ್ದು ತಪ್ಪಾದರೆ ಅಂಕಗಳು ಸಿಗುವುದಿಲ್ಲ. ಆದ್ದರಿಂದ ಶೇಡಿಂಗ್ ಮಾಡಿ, ಸರಿಯಾಗಿ ಪ್ರತಿ ಭಾಗಗಳನ್ನು ಗುರುತಿಸಿ ಬರೆದಿದ್ದೇ ಆದರೆ ಪೂರ್ಣ ಅಂಕಗಳು ದೊರೆಯುತ್ತವೆ.  ಸಮಾಜವಿಜ್ಞಾನಗಳಲ್ಲಿ ಭೂಪಟವನ್ನು ಅಂದವಾಗಿ ಬರೆದು, ದಿಕ್ಕುಗಳನ್ನು ಗುರುತಿಸಿ, ಸರಿಯಾದ ಜಾಗದಲ್ಲಿ ಆಯಾ ಸ್ಥಳಗಳನ್ನು ಗುರುತಿಸುವ ಕೌಶಲ್ಯವನ್ನು ಕರಗತವಾಗಿಸಿಕೊಂಡರೆ ಅಂಕಗಳ ಗಳಿಕೆ ಸುಲಭ. ಗಣಿತದ ಲೆಕ್ಕಗಳನ್ನು ಮಾಡುವಾಗ  ಸ್ಪಷ್ಟವಾಗಿ ಬರೆದಾಗ ತಿದ್ದುವ ಯಾವುದೇ ಶಿಕ್ಷಕರಿಗೆ ಪೂರ್ಣ ಅಂಕಗಳನ್ನು ನೀಡಲು ಸುಲಭವಾಗುತ್ತದೆ. ಆದ್ದರಿಂದ ಉತ್ತಮ ಹಸ್ತಾಕ್ಷರಕ್ಕೇ ಮಾನ್ಯತೆ. ಕಲಿಯುವಾಗ ಬರೀ ಓದಿ ಕಲಿಯದೆ ಬರೆದು ಬರೆದು ಕಲಿತಾಗ ವೇಗವಾಗಿ ಬರೆಯುವ ಸಾಮರ್ಥ್ಯವೂ ಹೆಚ್ಚುತ್ತದೆ. 

  ಭಾಷಾ ವಿಷಯಗಳಲ್ಲಿ ಪ್ರಬಂಧ ರಚನೆ ಮಾಡುವಾಗ ನಿಮ್ಮ ನಿತ್ಯ ಜೀವನದ ಅನುಭವಗಳನ್ನು ಬಳಸಿಕೊಳ್ಳಿ, ಅವುಗಳನ್ನು ಸಮಯಕ್ಕೆ ಸರಿಯಾಗಿ ವಿಷಯಕ್ಕೆ ಪೂರಕವಾಗಿ ಉಲ್ಲೇಖಿಸಿ. ಸ್ವಂತ ಬರಹಕ್ಕೆ ಆದ್ಯತೆ ನೀಡಿ. ಯಾವುದೇ ಪ್ರಶ್ನೆಗೆ ಉತ್ತರವನ್ನು ಉರು ಹೊಡೆಯುವ ಬದಲು ಅರ್ಥ ಮಾಡಿಕೊಂಡು ಕಲಿಯಿರಿ. ಸಮಾಜ ವಿಜ್ಞಾನ, ಹಿಂದಿ, ಕನ್ನಡ ಅಥವಾ ಪ್ರಥಮ ಭಾಷೆ ಇಂಗ್ಲಿಷ್ ಎಲ್ಲಾ ವಿದ್ಯಾರ್ಥಿಗಳಿಗೂ ಸಾಮಾನ್ಯವಾಗಿ ಅತಿ ಹೆಚ್ಚು ಸ್ಕೋರ್ ಮಾಡುವ ವಿಷಯಗಳು.  ಗಣಿತ ಹಾಗೂ ವಿಜ್ಞಾನದ ವಿಷಯ ಇಷ್ಟವಾದ ವಿದ್ಯಾರ್ಥಿಗಳಿಗೆ ಅದರಲ್ಲಿ ಉತ್ತಮ ಅಂಕಗಳು ಸಿಗಬೇಕು ಎಂದಿದ್ದರೂ ಸ್ಪಷ್ಟತೆ, ಅಂದವಾದ ಬರಹ, ಪ್ರತಿಯೊಂದು ಪ್ರಶ್ನೆಗೂ ಸರಿಯಾದ ಪ್ರಶ್ನೆ ಸಂಖ್ಯೆ ಬರೆದು ಅಂದವಾಗಿ ಉತ್ತರ ಬರೆಯ ಬೇಕಾದುದು ಅಗತ್ಯ ಅಲ್ಲವೇ?

ಆಂಗ್ಲ ಭಾಷೆಯೇ ಆಗಿರಲಿ, ಸಂಸ್ಕೃತ, ಹಿಂದಿ, ಕನ್ನಡವೇ ಆಗಿರಲಿ ಅಥವಾ ಇತರ ಕೋರ್ ವಿಷಯಗಳೇ ಆಗಿರಲಿ, ಪ್ರತಿ ವಿದ್ಯಾರ್ಥಿಯೂ ಎಷ್ಟು ಕಲಿತಿರುವನೋ ಅದನ್ನು ತನ್ನ ಉತ್ತರ ಪತ್ರಿಕೆಯಲ್ಲಿ ತಿದ್ದುವ ಶಿಕ್ಷಕರಿಗೆ ಅರ್ಥ ಆಗುವಂತೆ ಮುಟ್ಟಿಸುವುದು ಒಂದು ಕಲೆ. ಅಂದವಾದ ಬರಹಕ್ಕೆ ಅಂಕಗಳು ಹೆಚ್ಚಾಗಿಯೇ ಬರುತ್ತವೆ ಎನ್ನುವುದು ಖಚಿತ. ಚಿತ್ತು ಕಾತು, ಗೀಚುಗಳನ್ನು ತಪ್ಪಿಸಿ, ಅಂದ, ಸ್ಪಷ್ಟ ಬರವಣಿಗೆಯೊಂದಿಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆದಾಗ ಅಂಕಗಳನ್ನು ಯಾವ ಶಿಕ್ಷಕರೂ ಕಸಿದುಕೊಳ್ಳಲು ಸಾಧ್ಯ ಇಲ್ಲ. ಸರಿಯಾಗಿ ಬರೆಯದೆ ತನಗೆ ಸರಿಯಾದ ಅಂಕಗಳನ್ನು ನೀಡಲಿಲ್ಲ ಎಂದು ಶಿಕ್ಷಕರನ್ನು ದೂರಿ ನೂರಾರು ರೂಪಾಯಿಗಳನ್ನು ಸುರಿದು ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ತರಿಸಿ, ಶಿಕ್ಷಕರಿಗೆ ತೋರಿಸಿದಾಗ "ನೀನು ಬರೆದ ಉತ್ತರಕ್ಕೆ ಸರಿಯಾದ ಅಂಕಗಳೆ ಸಿಕ್ಕಿವೆ. ಇನ್ನು ಹೆಚ್ಚು ಕೊಡಲು ಸಾಧ್ಯ ಆಗದು" ಎಂದು ಅವರೆಂದರೆ ವೃಥಾ ಖರ್ಚು. ಅದರ ಬದಲು ನಿಮ್ಮ ಬರವಣಿಗೆಯ ಸ್ಪಷ್ಟತೆ ಶಿಕ್ಷಕರ ಗಮನೆ ಸೆಳೆದು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯ ಇದೆ. ಇದು ಹತ್ತನೇ ತರಗತಿ ಅಥವಾ ಪಿಯುಸಿ ವಿಧ್ಯಾರ್ಥಿಗಳಿಗೆ ಮಾತ್ರವಲ್ಲ. ಪ್ರತಿ ವಿದ್ಯಾರ್ಥಿಗೂ ಅನ್ವಯಿಸುತ್ತದೆ. ಇದು ಮುಂದಿನ ಜೀವನಕ್ಕೂ ಅನ್ವಯಿಸುತ್ತದೆ. ನಗರ ಅಥವಾ ಹಳ್ಳಿಯಲ್ಲಿ ಎಷ್ಟೊಂದು ರಿಕ್ಷಗಳಿದ್ದರೂ ಉತ್ತಮವಾಗಿ ರಿಕ್ಷಾ ಚಲಾಯಿಸುವ, ಜವಾಬ್ದಾರಿ ತೆಗೆದುಕೊಂಡು ಸಮಯಪ್ರಜ್ಞೆ ಮೆರೆಯುವ, ಅಂದವಾಗಿ ತನ್ನ ರಿಕ್ಷಾ ಇಟ್ಟುಕೊಂಡಿರುವ ರಿಕ್ಷಾವನ್ನೇ ಜನ ಆಯ್ಕೆ ಮಾಡಿಕೊಳ್ಳುತ್ತಾರೆ, ಎಷ್ಟು ಜನ ಟೈಲರ್ ಗಳಿದ್ದರೂ ಅಂದವಾಗಿ ಹೊಲಿಯುವವನಿಗೇ ಹೆಚ್ಚು ಬಟ್ಟೆ ಬರುವಂತೆ ಅಂದವಾಗಿ, ಸ್ಪಷ್ಟವಾಗಿ ಬರೆಯುವವನಿಗೆ ಹೆಚ್ಚು ಅಂಕಗಳು ಕಟ್ಟಿಟ್ಟ ಬುತ್ತಿ ನೆನಪಿರಲಿ. 

ಕಠಿಣ ಪರಿಶ್ರಮ ಎಂದೂ ಹಾದಿ ತಪ್ಪದು. ಸ್ಪಷ್ಟ ಓದು, ಶುದ್ಧ ಬರಹ ಬದುಕಿನಲ್ಲಿ ನಮ್ಮನ್ನು ಎತ್ತರಕ್ಕೆ ಏರಿಸುವ ಅಂಶ. ಅದನ್ನೇ ಪರಿಪಾಲಿಸಿ. ಬೇರೆ ಸಮಯಕ್ಕಿಂತ ಹೆಚ್ಚು ಓದಿ. 

ಕಲಿಕೆಯನ್ನು ಇಷ್ಟ ಪಡಿ. ಆನಂದಿಸಿ. ಹೇಗೆ ಮೊಬೈಲ್ ಗಳಲ್ಲಿ ಬರುವ ರೀಲ್ ವಿಡಿಯೋಗಳನ್ನು ನೋಡಿ ಆನಂದಿಸುವಿರೋ ಹಾಗೆಯೇ ಪ್ರತಿ ವಿಷಯದ ಮೇಲೆ ಪ್ರೀತಿ ಇರಲಿ. ಕಾರಣ ಇದು ನಿಮ್ಮ ಜೀವನವನ್ನು ಬೆಳಗುವ ಅಂಶ. ಮೊಬೈಲ್, ಟಿವಿ, ಚಲನಚಿತ್ರ, ಜಾತ್ರೆ, ಕಬಡ್ಡಿ, ಕ್ರಿಕೆಟ್ ಎಲ್ಲವೂ ಯಾವಾಗಲೂ ಇವೆ, ಇರುತ್ತವೆ. ಅವುಗಳಿಗಾಗಿ ನಿಮ್ಮ ಕಲಿಕೆಯನ್ನು ತ್ಯಾಗ ಮಾಡಿದರೆ ಮುಂದೆ ನಿಮ್ಮ ಬದುಕಿನ ಹಲವಾರು ಹಂತಗಳಲ್ಲಿ ಕಷ್ಟ ಪಡುವವರು ನೀವೇ. ಕ್ಷಣದ ಆಕರ್ಷಣೆಗಳಿಗೆ ಬಲಿಯಾಗಿ ಜೀವನ ಪೂರ್ತಿ ಧುಖಿಸದಿರಿ. ಬದಲಾಗಿ ಸಿಕ್ಕಿದ ಸಮಯವನ್ನು ಉಪಯೋಗಿಸಿ. 
ಮೊಬೈಲ್ ಅಟ್ರಾಕ್ಷನ್ ಹೆಚ್ಚಿದ್ದರೆ ಯುಟ್ಯೂಬ್ ನಲ್ಲಿ ಉತ್ತರಿಸಿದ ಪ್ರಶ್ನೆ ಪತ್ರಿಕೆಗಳು, ಪಾಸಿಂಗ್ ಪ್ಯಾಕೆಜ್, ನಿಮಗೆ ಕಷ್ಟವಾದ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದು ಹೇಗೆ ಎಂಬುದನ್ನೇ ಹುಡುಕಿ ನೋಡಿ. ನಿಮ್ಮ ಯಾವುದೇ ಸರ್ಚ್ ನಿಮ್ಮನ್ನು ಉತ್ತಮ ಅಂಕಗಳಿಗೆ ಕೊಂಡು ಹೋಗುವುದೇ ಆಗಿರಲಿ. 
ಮಕ್ಕಳೇ, ಜೀವನದಲ್ಲಿ ಅವಕಾಶ ಮತ್ತು ಯಶಸ್ಸು ಒಂದೇ ಬಾರಿ ಬಂದು ಬಾಗಿಲು ತಟ್ಟುವುದು. ಆಗ ನಾವು ಸಮಯ ಹಾಳು ಮಾಡಿ ಮತ್ತೆ ಕೊರಗಿದರೆ ಫಲವಿಲ್ಲ. ನಿಮ್ಮ ಶಿಕ್ಷಕರ, ಪೋಷಕರ ಗುರಿ, ಉದ್ದೇಶಗಳನ್ನು ಈಡೇರಿಸುವುದು ಮತ್ತು ನಿಮ್ಮ ಕುಟುಂಬದ ಮರ್ಯಾದೆ, ಘನತೆ, ಗೌರವ ಕಾಪಾಡುವುದರ ಜೊತೆಗೆ ನಿಮ್ಮ ಭವಿಷ್ಯದ ಕೀಲಿಕೈ ನಿಮ್ಮ ಕೈಯಲ್ಲೇ ಇದೆ ಈಗ. ಅದನ್ನು ಈ ಸಮಯದಲ್ಲಿ ಶಿಕ್ಷಕರ ಸಹಾಯದಿಂದ ಸರಿಯಾಗಿ ಕಲಿತು, ಬಳಸಿಕೊಳ್ಳಿ, ಯಶಸ್ಸು ನಿಮ್ಮದಾಗಿಸಿಕೊಳ್ಳಿ. 
ಭವ್ಯ ಭವಿಷ್ಯ ನಿಮಗಾಗಿ ಕಾದಿದೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ನೀವು ಏನು ಆಲೋಚಿಸುವಿರೋ ಹಾಗೆಯೇ ಆಗುತ್ತದೆ. ನಾವು ಉತ್ತಮ ಅಂಕಗಳನ್ನು ಪಡೆದು ನಮ್ಮ ಗುರಿ ಸಾಧಿಸುತ್ತೇವೆ ಎಂಬ ಅಚಲ ವಿಶ್ವಾಸ ನಿಮ್ಮಲ್ಲಿ ಇರಲಿ. ಅದರೊಂದಿಗೆ ಕಠಿಣ ಪರಿಶ್ರಮವೂ ಇರಲಿ. ದೇವರ,ಗುರು ಹಿರಿಯರ  ಆಶೀರ್ವಾದವನ್ನು ಕೂಡಾ ಪಡೆಯುವುದನ್ನು ಮರೆಯದಿರಿ.  ಜೀವನದಲ್ಲಿ ಬಂದ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ, ಉತ್ತಮವಾಗಿ, ಅಂದವಾಗಿ ಬರೆಯಿರಿ. ಯಶಸ್ಸು ಕಟ್ಟಿಟ್ಟ ಬುತ್ತಿ. ಆಲ್ ದ ಬೆಸ್ಟ್ ವಿದ್ಯಾರ್ಥಿ ಮಿತ್ರರೇ. ಇಂದಿನ ಮಕ್ಕಳು ಇಂದೂ , ನಾಳೆಯೂ, ಮುಂದೂ ಭಾರತೀಯ ಪ್ರಜೆಗಳೇ. ಭವ್ಯ ಭಾರತದ ಮುಂದಿನ ಕನಸುಗಳು, ಶಿಲ್ಪಿಗಳು ನೀವೇ ಅಲ್ಲವೇ? ನೀವೇನಂತೀರಿ?
@ಪ್ರೇಮ್@
19.03.2022

124

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -123

ಮಾರ್ಚ್ 22ರಿಂದ ಪಿಯುಸಿ ಹಾಗೂ 28ರಿಂದ ಈ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಕೆಲವೊಂದು ಸೂಚನೆಗಳು. ಪ್ರೀತಿಯ ಮಕ್ಕಳೇ, ಹಾಗೂ ಹೆತ್ತವರೇ, ಪೋಷಕರೇ ನಿಮಗೆಲ್ಲ ಶಿಕ್ಷಕರ ನೆಲೆಯಲ್ಲಿ ಕಿವಿ ಮಾತುಗಳು ಇಲ್ಲಿವೆ. ಜೀವನದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಎಂಬುದು  ಪ್ರಮುಖ ಘಟ್ಟಗಳು. ಅದರಲ್ಲೂ ಈ ವರ್ಷಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಕೋರೋನ ಕಾಲದಲ್ಲಿ ಎಂಟನೇ ತರಗತಿಯ ಪರೀಕ್ಷೆ ಬರೆಯಲು ಅಣಿಯಾಗಿದ್ದವರು. ಅಲ್ಲಿ ಅವರನ್ನು ಪರೀಕ್ಷೆ ಇಲ್ಲದೆ ಆಂತರಿಕ ಅಂಕಗಳ ಆಧಾರದ ಮೇಲೆ ಉತ್ತೀರ್ಣಗೊಳಿಸಲಾಯಿತು. ಮುಂದಿನ ವರ್ಷವೂ ಕರೋನ, ಒಮಿಕ್ರಾನ್, ಹಳದಿ ಕಪ್ಪು ಫಂಗಸ್ ಎಂದೆಲ್ಲಾ ಸರಿಯಾಗಿ ಒಂದೆರಡು ತಿಂಗಳು ಕೂಡಾ ಶಾಲೆಗೆ ಬರಲು ಆಗದೆ ಆನ್ ಲೈನ್ ತರಗತಿಯಲ್ಲಿ ಕಲಿತೇ ಅಷ್ಟೋ ಇಷ್ಟೋ ಬರೆದು ಅದು ಹೇಗೋ ಹತ್ತನೇ ತರಗತಿಗೆ ಬಂದವರು. ಕರೋನ ಸಮಯದಲ್ಲಿ ರಿಸ್ಕ್ ತೆಗೆದುಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  ಬರೆದು ಪಾಸ್ ಆದ ಬ್ಯಾಚ್ ಈಗ ಪಿಯುಸಿ 

ಈ ವರ್ಷದ ಎಸ್ ಎಸ್ ಎಲ್ ಸಿ ಮಕ್ಕಳು ಸರಿಯಾಗಿ ಪರೀಕ್ಷೆ ಬರೆದದ್ದು ತಮ್ಮ ಏಳನೇ  ತರಗತಿಯಲಿ ಮಾತ್ರ. ಪ್ರೌಢ ಶಾಲೆಗೆ ಬಂದ ಮೇಲೆ ಅವರು ಯಾವಾಗಲೂ ಮೂರು ಗಂಟೆಗಳ ಕಾಲ ನಿರಂತರವಾಗಿ ಕುಳಿತು ಪರೀಕ್ಷೆ ಬರೆಯಲೇ ಇಲ್ಲ. ಹಾಗಿರುವಾಗ ಮೂರು ಗಂಟೆಗಳ ಪರೀಕ್ಷೆಯನ್ನು ಎದುರಿಸುವ ತಾಳ್ಮೆ ತರುವುದೂ ಕೂಡಾ ಶಿಕ್ಷಕರಿಗೆ ಈಗ ಇರುವ ಸವಾಲುಗಳಲ್ಲಿ ಒಂದು. ಮತ್ತೆ ಎರಡೆರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮಾಡಿ, ಮಕ್ಕಳನ್ನು ಕಲಿಕಾ ಗುಂಪುಗಳಾಗಿ ವಿಭಾಗಿಸಿ, ಪುನರಾವರ್ತನೆ, ಪುನರ್ಮನನ ಮಾಡಿಸಿ, ಬರೆಸಿ, ಓದಿಸಿ, ತಿದ್ದಿಸಿ, ತೀಡಿಸಿ, ಬೆಳಗ್ಗೆ, ಸಂಜೆ ಶಾಲಾ ಅವಧಿ ಮೀರಿ, ತಮ್ಮ ಮನೆಯ ಕೆಲಸಗಳನ್ನೆಲ್ಲ ಬದಿಗೊತ್ತಿ, ತಮ್ಮ ಮಕ್ಕಳ ಕಲಿಕೆಯನ್ನು ಪರರಿಗೆ ವಹಿಸಿ, ಎಲ್ಲಾ ಶಿಕ್ಷಕರೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸರಿಯಾದ ಕ್ರಮದಲ್ಲಿ ಕಲಿಕೆಯನ್ನು ಮಾಡಿಸಿ ಪರೀಕ್ಷೆಗೆ ತಯಾರಿ ಮಾಡಿ, ಪರೀಕ್ಷೆ ಪ್ರಾರಂಭ ಆಗಿ, ಮುಗಿದು, ಫಲಿತಾಂಶ ಬರುವವರೆಗೂ ವಿದ್ಯಾರ್ಥಿಗಳಿಗಿಂತ ಹೆಚ್ಚು ಟೆನ್ಷನ್ ಶಿಕ್ಷಕರಿಗೆ. ನಮ್ಮ ಶಾಲೆಯ ರಿಸಲ್ಟ್ ಹೇಗೆ ಬರುವುದೋ ಎಂದು.

ಅದೇನೇ ಇರಲಿ, ವಿದ್ಯಾರ್ಥಿಗಳು ಸ್ಪಷ್ಟತೆ, ಸರಳ, ಸುಂದರ ಬರವಣಿಗೆಗೆ ಪ್ರಾಮುಖ್ಯತೆ ಕೊಡಬೇಕು. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯಬೇಕು. ಏನಾದರೂ ಉತ್ತರ ಬರೆದಿದ್ದರೆ ತಾನೇ ಅಂಕಗಳನ್ನು ಕೊಡಲು ಸಾಧ್ಯ ಆಗುವುದು? ಬರೆದದ್ದನ್ನು ಸರಿಯಾಗಿ ಓದಲು ಸಾಧ್ಯ ಆದರೆ ಮಾತ್ರ ಪೂರ್ತಿ ಅಂಕಗಳು ಸಿಗಲು ಸಾಧ್ಯ , ಅಲ್ಲವೇ? 

ಸಾಮಾನ್ಯ ವಿಜ್ಞಾನದಲ್ಲಿ ಚಿತ್ರಗಳನ್ನು ಕಲಿಯಬೇಕಿದೆ. ಅದನ್ನು ಸರಿಯಾಗಿ ಕಲಿತರೂ ಬರೆಯುವುದು ಅಂದವಾಗಿ ಇಲ್ಲದೆ ಇದ್ದರೆ, ಗುರುತಿಸಿದ್ದು ತಪ್ಪಾದರೆ ಅಂಕಗಳು ಸಿಗುವುದಿಲ್ಲ. ಆದ್ದರಿಂದ ಶೇಡಿಂಗ್ ಮಾಡಿ, ಸರಿಯಾಗಿ ಪ್ರತಿ ಭಾಗಗಳನ್ನು ಗುರುತಿಸಿ ಬರೆದಿದ್ದೇ ಆದರೆ ಪೂರ್ಣ ಅಂಕಗಳು ದೊರೆಯುತ್ತವೆ.  ಸಮಾಜವಿಜ್ಞಾನಗಳಲ್ಲಿ ಭೂಪಟವನ್ನು ಅಂದವಾಗಿ ಬರೆದು, ದಿಕ್ಕುಗಳನ್ನು ಗುರುತಿಸಿ, ಸರಿಯಾದ ಜಾಗದಲ್ಲಿ ಆಯಾ ಸ್ಥಳಗಳನ್ನು ಗುರುತಿಸುವ ಕೌಶಲ್ಯವನ್ನು ಕರಗತವಾಗಿಸಿಕೊಂಡರೆ ಅಂಕಗಳ ಗಳಿಕೆ ಸುಲಭ. ಗಣಿತದ ಲೆಕ್ಕಗಳನ್ನು ಮಾಡುವಾಗ  ಸ್ಪಷ್ಟವಾಗಿ ಬರೆದಾಗ ತಿದ್ದುವ ಯಾವುದೇ ಶಿಕ್ಷಕರಿಗೆ ಪೂರ್ಣ ಅಂಕಗಳನ್ನು ನೀಡಲು ಸುಲಭವಾಗುತ್ತದೆ. ಆದ್ದರಿಂದ ಉತ್ತಮ ಹಸ್ತಾಕ್ಷರಕ್ಕೇ ಮಾನ್ಯತೆ. ಕಲಿಯುವಾಗ ಬರೀ ಓದಿ ಕಲಿಯದೆ ಬರೆದು ಬರೆದು ಕಲಿತಾಗ ವೇಗವಾಗಿ ಬರೆಯುವ ಸಾಮರ್ಥ್ಯವೂ ಹೆಚ್ಚುತ್ತದೆ. 

  ಭಾಷಾ ವಿಷಯಗಳಲ್ಲಿ ಪ್ರಬಂಧ ರಚನೆ ಮಾಡುವಾಗ ನಿಮ್ಮ ನಿತ್ಯ ಜೀವನದ ಅನುಭವಗಳನ್ನು ಬಳಸಿಕೊಳ್ಳಿ, ಅವುಗಳನ್ನು ಸಮಯಕ್ಕೆ ಸರಿಯಾಗಿ ವಿಷಯಕ್ಕೆ ಪೂರಕವಾಗಿ ಉಲ್ಲೇಖಿಸಿ. ಸ್ವಂತ ಬರಹಕ್ಕೆ ಆದ್ಯತೆ ನೀಡಿ. ಯಾವುದೇ ಪ್ರಶ್ನೆಗೆ ಉತ್ತರವನ್ನು ಉರು ಹೊಡೆಯುವ ಬದಲು ಅರ್ಥ ಮಾಡಿಕೊಂಡು ಕಲಿಯಿರಿ. ಸಮಾಜ ವಿಜ್ಞಾನ, ಹಿಂದಿ, ಕನ್ನಡ ಅಥವಾ ಪ್ರಥಮ ಭಾಷೆ ಇಂಗ್ಲಿಷ್ ಎಲ್ಲಾ ವಿದ್ಯಾರ್ಥಿಗಳಿಗೂ ಸಾಮಾನ್ಯವಾಗಿ ಅತಿ ಹೆಚ್ಚು ಸ್ಕೋರ್ ಮಾಡುವ ವಿಷಯಗಳು.  ಗಣಿತ ಹಾಗೂ ವಿಜ್ಞಾನದ ವಿಷಯ ಇಷ್ಟವಾದ ವಿದ್ಯಾರ್ಥಿಗಳಿಗೆ ಅದರಲ್ಲಿ ಉತ್ತಮ ಅಂಕಗಳು ಸಿಗಬೇಕು ಎಂದಿದ್ದರೂ ಸ್ಪಷ್ಟತೆ, ಅಂದವಾದ ಬರಹ, ಪ್ರತಿಯೊಂದು ಪ್ರಶ್ನೆಗೂ ಸರಿಯಾದ ಪ್ರಶ್ನೆ ಸಂಖ್ಯೆ ಬರೆದು ಅಂದವಾಗಿ ಉತ್ತರ ಬರೆಯ ಬೇಕಾದುದು ಅಗತ್ಯ ಅಲ್ಲವೇ?

ಆಂಗ್ಲ ಭಾಷೆಯೇ ಆಗಿರಲಿ, ಸಂಸ್ಕೃತ, ಹಿಂದಿ, ಕನ್ನಡವೇ ಆಗಿರಲಿ ಅಥವಾ ಇತರ ಕೋರ್ ವಿಷಯಗಳೇ ಆಗಿರಲಿ, ಪ್ರತಿ ವಿದ್ಯಾರ್ಥಿಯೂ ಎಷ್ಟು ಕಲಿತಿರುವನೋ ಅದನ್ನು ತನ್ನ ಉತ್ತರ ಪತ್ರಿಕೆಯಲ್ಲಿ ತಿದ್ದುವ ಶಿಕ್ಷಕರಿಗೆ ಅರ್ಥ ಆಗುವಂತೆ ಮುಟ್ಟಿಸುವುದು ಒಂದು ಕಲೆ. ಅಂದವಾದ ಬರಹಕ್ಕೆ ಅಂಕಗಳು ಹೆಚ್ಚಾಗಿಯೇ ಬರುತ್ತವೆ ಎನ್ನುವುದು ಖಚಿತ. ಚಿತ್ತು ಕಾತು, ಗೀಚುಗಳನ್ನು ತಪ್ಪಿಸಿ, ಅಂದ, ಸ್ಪಷ್ಟ ಬರವಣಿಗೆಯೊಂದಿಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆದಾಗ ಅಂಕಗಳನ್ನು ಯಾವ ಶಿಕ್ಷಕರೂ ಕಸಿದುಕೊಳ್ಳಲು ಸಾಧ್ಯ ಇಲ್ಲ. ಸರಿಯಾಗಿ ಬರೆಯದೆ ತನಗೆ ಸರಿಯಾದ ಅಂಕಗಳನ್ನು ನೀಡಲಿಲ್ಲ ಎಂದು ಶಿಕ್ಷಕರನ್ನು ದೂರಿ ನೂರಾರು ರೂಪಾಯಿಗಳನ್ನು ಸುರಿದು ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ತರಿಸಿ, ಶಿಕ್ಷಕರಿಗೆ ತೋರಿಸಿದಾಗ "ನೀನು ಬರೆದ ಉತ್ತರಕ್ಕೆ ಸರಿಯಾದ ಅಂಕಗಳೆ ಸಿಕ್ಕಿವೆ. ಇನ್ನು ಹೆಚ್ಚು ಕೊಡಲು ಸಾಧ್ಯ ಆಗದು" ಎಂದು ಅವರೆಂದರೆ ವೃಥಾ ಖರ್ಚು. ಅದರ ಬದಲು ನಿಮ್ಮ ಬರವಣಿಗೆಯ ಸ್ಪಷ್ಟತೆ ಶಿಕ್ಷಕರ ಗಮನೆ ಸೆಳೆದು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯ ಇದೆ. ಇದು ಹತ್ತನೇ ತರಗತಿ ಅಥವಾ ಪಿಯುಸಿ ವಿಧ್ಯಾರ್ಥಿಗಳಿಗೆ ಮಾತ್ರವಲ್ಲ. ಪ್ರತಿ ವಿದ್ಯಾರ್ಥಿಗೂ ಅನ್ವಯಿಸುತ್ತದೆ. ಇದು ಮುಂದಿನ ಜೀವನಕ್ಕೂ ಅನ್ವಯಿಸುತ್ತದೆ. ನಗರ ಅಥವಾ ಹಳ್ಳಿಯಲ್ಲಿ ಎಷ್ಟೊಂದು ರಿಕ್ಷಗಳಿದ್ದರೂ ಉತ್ತಮವಾಗಿ ರಿಕ್ಷಾ ಚಲಾಯಿಸುವ, ಜವಾಬ್ದಾರಿ ತೆಗೆದುಕೊಂಡು ಸಮಯಪ್ರಜ್ಞೆ ಮೆರೆಯುವ, ಅಂದವಾಗಿ ತನ್ನ ರಿಕ್ಷಾ ಇಟ್ಟುಕೊಂಡಿರುವ ರಿಕ್ಷಾವನ್ನೇ ಜನ ಆಯ್ಕೆ ಮಾಡಿಕೊಳ್ಳುತ್ತಾರೆ, ಎಷ್ಟು ಜನ ಟೈಲರ್ ಗಳಿದ್ದರೂ ಅಂದವಾಗಿ ಹೊಲಿಯುವವನಿಗೇ ಹೆಚ್ಚು ಬಟ್ಟೆ ಬರುವಂತೆ ಅಂದವಾಗಿ, ಸ್ಪಷ್ಟವಾಗಿ ಬರೆಯುವವನಿಗೆ ಹೆಚ್ಚು ಅಂಕಗಳು ಕಟ್ಟಿಟ್ಟ ಬುತ್ತಿ ನೆನಪಿರಲಿ. 

ಕಠಿಣ ಪರಿಶ್ರಮ ಎಂದೂ ಹಾದಿ ತಪ್ಪದು. ಸ್ಪಷ್ಟ ಓದು, ಶುದ್ಧ ಬರಹ ಬದುಕಿನಲ್ಲಿ ನಮ್ಮನ್ನು ಎತ್ತರಕ್ಕೆ ಏರಿಸುವ ಅಂಶ. ಅದನ್ನೇ ಪರಿಪಾಲಿಸಿ. ಬೇರೆ ಸಮಯಕ್ಕಿಂತ ಹೆಚ್ಚು ಓದಿ. 

ಕಲಿಕೆಯನ್ನು ಇಷ್ಟ ಪಡಿ. ಆನಂದಿಸಿ. ಹೇಗೆ ಮೊಬೈಲ್ ಗಳಲ್ಲಿ ಬರುವ ರೀಲ್ ವಿಡಿಯೋಗಳನ್ನು ನೋಡಿ ಆನಂದಿಸುವಿರೋ ಹಾಗೆಯೇ ಪ್ರತಿ ವಿಷಯದ ಮೇಲೆ ಪ್ರೀತಿ ಇರಲಿ. ಕಾರಣ ಇದು ನಿಮ್ಮ ಜೀವನವನ್ನು ಬೆಳಗುವ ಅಂಶ. ಮೊಬೈಲ್, ಟಿವಿ, ಚಲನಚಿತ್ರ, ಜಾತ್ರೆ, ಕಬಡ್ಡಿ, ಕ್ರಿಕೆಟ್ ಎಲ್ಲವೂ ಯಾವಾಗಲೂ ಇವೆ, ಇರುತ್ತವೆ. ಅವುಗಳಿಗಾಗಿ ನಿಮ್ಮ ಕಲಿಕೆಯನ್ನು ತ್ಯಾಗ ಮಾಡಿದರೆ ಮುಂದೆ ನಿಮ್ಮ ಬದುಕಿನ ಹಲವಾರು ಹಂತಗಳಲ್ಲಿ ಕಷ್ಟ ಪಡುವವರು ನೀವೇ. ಕ್ಷಣದ ಆಕರ್ಷಣೆಗಳಿಗೆ ಬಲಿಯಾಗಿ ಜೀವನ ಪೂರ್ತಿ ಧುಖಿಸದಿರಿ. ಬದಲಾಗಿ ಸಿಕ್ಕಿದ ಸಮಯವನ್ನು ಉಪಯೋಗಿಸಿ. 
ಮೊಬೈಲ್ ಅಟ್ರಾಕ್ಷನ್ ಹೆಚ್ಚಿದ್ದರೆ ಯುಟ್ಯೂಬ್ ನಲ್ಲಿ ಉತ್ತರಿಸಿದ ಪ್ರಶ್ನೆ ಪತ್ರಿಕೆಗಳು, ಪಾಸಿಂಗ್ ಪ್ಯಾಕೆಜ್, ನಿಮಗೆ ಕಷ್ಟವಾದ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದು ಹೇಗೆ ಎಂಬುದನ್ನೇ ಹುಡುಕಿ ನೋಡಿ. ನಿಮ್ಮ ಯಾವುದೇ ಸರ್ಚ್ ನಿಮ್ಮನ್ನು ಉತ್ತಮ ಅಂಕಗಳಿಗೆ ಕೊಂಡು ಹೋಗುವುದೇ ಆಗಿರಲಿ. 
ಮಕ್ಕಳೇ, ಜೀವನದಲ್ಲಿ ಅವಕಾಶ ಮತ್ತು ಯಶಸ್ಸು ಒಂದೇ ಬಾರಿ ಬಂದು ಬಾಗಿಲು ತಟ್ಟುವುದು. ಆಗ ನಾವು ಸಮಯ ಹಾಳು ಮಾಡಿ ಮತ್ತೆ ಕೊರಗಿದರೆ ಫಲವಿಲ್ಲ. ನಿಮ್ಮ ಶಿಕ್ಷಕರ, ಪೋಷಕರ ಗುರಿ, ಉದ್ದೇಶಗಳನ್ನು ಈಡೇರಿಸುವುದು ಮತ್ತು ನಿಮ್ಮ ಕುಟುಂಬದ ಮರ್ಯಾದೆ, ಘನತೆ, ಗೌರವ ಕಾಪಾಡುವುದರ ಜೊತೆಗೆ ನಿಮ್ಮ ಭವಿಷ್ಯದ ಕೀಲಿಕೈ ನಿಮ್ಮ ಕೈಯಲ್ಲೇ ಇದೆ ಈಗ. ಅದನ್ನು ಈ ಸಮಯದಲ್ಲಿ ಶಿಕ್ಷಕರ ಸಹಾಯದಿಂದ ಸರಿಯಾಗಿ ಕಲಿತು, ಬಳಸಿಕೊಳ್ಳಿ, ಯಶಸ್ಸು ನಿಮ್ಮದಾಗಿಸಿಕೊಳ್ಳಿ. 
ಭವ್ಯ ಭವಿಷ್ಯ ನಿಮಗಾಗಿ ಕಾದಿದೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ನೀವು ಏನು ಆಲೋಚಿಸುವಿರೋ ಹಾಗೆಯೇ ಆಗುತ್ತದೆ. ನಾವು ಉತ್ತಮ ಅಂಕಗಳನ್ನು ಪಡೆದು ನಮ್ಮ ಗುರಿ ಸಾಧಿಸುತ್ತೇವೆ ಎಂಬ ಅಚಲ ವಿಶ್ವಾಸ ನಿಮ್ಮಲ್ಲಿ ಇರಲಿ. ಅದರೊಂದಿಗೆ ಕಠಿಣ ಪರಿಶ್ರಮವೂ ಇರಲಿ. ದೇವರ,ಗುರು ಹಿರಿಯರ  ಆಶೀರ್ವಾದವನ್ನು ಕೂಡಾ ಪಡೆಯುವುದನ್ನು ಮರೆಯದಿರಿ.  ಜೀವನದಲ್ಲಿ ಬಂದ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ, ಉತ್ತಮವಾಗಿ, ಅಂದವಾಗಿ ಬರೆಯಿರಿ. ಯಶಸ್ಸು ಕಟ್ಟಿಟ್ಟ ಬುತ್ತಿ. ಆಲ್ ದ ಬೆಸ್ಟ್ ವಿದ್ಯಾರ್ಥಿ ಮಿತ್ರರೇ. ಇಂದಿನ ಮಕ್ಕಳು ಇಂದೂ , ನಾಳೆಯೂ, ಮುಂದೂ ಭಾರತೀಯ ಪ್ರಜೆಗಳೇ. ಭವ್ಯ ಭಾರತದ ಮುಂದಿನ ಕನಸುಗಳು, ಶಿಲ್ಪಿಗಳು ನೀವೇ ಅಲ್ಲವೇ? ನೀವೇನಂತೀರಿ?
@ಪ್ರೇಮ್@
19.03.2022