ಶುಕ್ರವಾರ, ಮಾರ್ಚ್ 30, 2018

226. ಭಾವಗೀತೆ-ಅರಿಕೆ

ಭಾವಗೀತೆ
ಅರಿಕೆ

ದಿನಕರನೆ ನಿನ್ನ ಉರಿಯ ಕಡಿಮೆಮಾಡೊ
ನಾ ತಾಪ ತಾಳಲಾರೆ ಶಕ್ತಿ ನೀಡೊ..
ನಮಸ್ಕರಿಸುತಿರುವೆ ದೇವ ನೀನೇ ಕಾಪಾಡೊ
ಬೆಂಕಿಯಲ್ಲಿ ಬೇಯಲಾರೆ ಮಳೆಯ ತಾರೊ//

ರವಿಚಂದಿರ ಒಟ್ಟಾಗಿ ಬೆಳಕ ತರುವಿರಿ
ನನ್ನ ಮನವ ಅರಿತುಕೊಂಡು ನೀವು ಬರುವಿರಿ
ಆದರೇನೊ ಬದುಕು ಅಂಧಕಾರದಲ್ಲಿ ಮುಳುಗಿದೆ
ನೀವೆ ನನ್ನ ಬೆಳಗಬೇಕು ದಾರಿ ಕಾಣದಾಗಿದೆ//

ಬಿಸಿಲು ಏರಿ ಮಳೆಯು ಇರದೆ
ತಬ್ಬಾಗಿಹೆ ತಂಗಾಳಿ ಇತ್ತ ಬರದೆ
ಆದಿತ್ಯ ನೀನೆ ಬಲವು ಈ ಧರೆಗೆ
ಬರವು ನೀನಿಲ್ಲದೆ ಎಂದೂ ನನಗೆ//

ತಿರೆಯ ಬೇಡಿಕೆ ಅರಿತುಕೊಳ್ಳೊ
ನನ್ನೆದೆಗೆ ತಂಪ ತಂಗಾಳಿ ತಳ್ಳೊ
ಜಗದ ಎಲ್ಲ  ಜೀವದಾಗರ ನೀನೆ
ನನ್ನ ಜೀವ ರಕ್ಷಕ ನೀನೆ ತಾನೇ//

ಬರದ ಬೇಗೆ ತಾಳಲಾರೆ
ಮನಕೆ ಮುದವ ನೀಡಲಾರೆ
ನನ್ನೆದೆಗೆ ತಂಪ ಹರಿಸಬೇಕು
ಈ ಧರಣಿಯ ನೀನೆ ಕಾಯಬೇಕು//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ