ಮಂಗಳವಾರ, ಆಗಸ್ಟ್ 21, 2018

425. ಸುನೀತ ಕಾವ್ಯ

ಇಳೆ

ಹಸಿರು ಸೀರೆಯ ತಿರೆಯೇ
ನೀಲಿ ಕೂದಲಿನ ಚೆಲುವೆ
ಸೂರ್ಯನ ಕರೆದೆ ಬೆಳಕು ಕೊಡೆಂದೆ
ಚಂದಿರನೊಡನೆ ತಂಪನು ಕಂಡೆ
ಚುಕ್ಕೆದಳಾ ತನ್ನ ತಲೆಯಲಿ ಮುಡಿದು
ಜೀವಿಗಳನು ತನ್ನ ಬಸಿರಲಿ ಪಡೆದು
ಸಲಹಿ ಸಾಕುವ ಮಹಾಮಾತೆ
ತಾಳ್ಮೆ ತಳೆದಿಹ ಪ್ರಕೃತಿ ಮಾತೆ..

ಜನಮನಕೆ ನೀ ಆರೋಗ್ಯದಾತೆ
ಬಿಸುಟುವರು ಕರಗದ ಕಸವ ನಿನ್ನ ಮೇಲೆ
ಹಾಳುಗೆಡಹುವರು ನೆಲ,ನೀರು, ಗಾಳಿಯ
ಮಣ್ಣು, ಗಿಡ ಮರ ಎಲ್ಲವೂ ಮಾಯ
ಬುದ್ಧಿಯ ಕಲಿಸು ಸಿದ್ಧಿಯ ಮಾತೆ
ಪೊರೆ ನೀ ಸಕಲ ಜಗವ
ನೀಡಿ ಒಳ್ಳೆ ಮನವ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ