ಸೋಮವಾರ, ಫೆಬ್ರವರಿ 25, 2019

807. ವಿಮರ್ಶೆ-11

11. *ತಗ್ಗೀಹಳ್ಳಿ ರವಿಕುಮಾರ* ರ

*"ಬುದ್ಧಿಮತ್ತೆಯ ಕೀಲಿಕೈ"*

*"ದೇವರೇ, ನನಗೆಂದು ನೀನಿತ್ತ  ಎನ್ನ ಮನೆಯ ಕೀಲಿ ಕೈ*
*ಕೈಯಾರೆ ಕಳೆದುಕೊಂಡಿಹೆ ಹುಡುಕಿಕೊಡು ಕರುಣದೇ"*
🍅🍅🍅🍅🍅🍅🍅

ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಗಾದೆಯಂತೆ ತಾನೇ ಕಳೆದುಕೊಂಡ ಕತೆಯಿದು. ತನ್ನ ಜೀವನವ ತನಗೇ ಸರಿಪಡಿಸಿಕೊಳ್ಳಲಾರದವನ ವ್ಯಥೆಯಿದು.
🍅🍅🍅🍅🍅🍅

*"ಒಳಹೋಗಲಾರೆ ಸ್ಥಿತಿ ಕೆಟ್ಟಿದೆ ವಿಷಾನಿಲ ಜೀವಹಾರಿಯಾಗಿ*
*ಧಗೆಯಿಂದ ಭವ ಉರಿದಿದೇ ಭಯದಿಂದ ಭವಿತವಳಿದಿದೆ"*
🍅🍅🍅🍅🍅🍅🍅
ಮನುಜನ ಆಸೆಗೆ ಕೊನೆಯಿಲ್ಲದೆ ತಾನಿರುವ ಪರಿಸರಕ್ಕೇ ಬೆಂಕಿ ಹಚ್ಚುವ ಕಾರ್ಯವದು.
🍅🍅🍅🍅🍅🍅🍅🍅

*"ನೀರ್ಗಲ್ಲು ಕರಗಿ ನೀರೋಘ ಮಣ್ಣ ಕೊರೆದು ಹರಿದರಿದು*
*ಆವಾಸಗಳೆಲ್ಲಾ ನಿರ್ಜನವಾಗಿ ಕುಳಿರ್ಗಾಳಿಗೆ ಕಲ್ಲು ಚಿಲುಮೆ"*
🍅🍅🍅🍅🍅🍅🍅
ಪರಿಸರ ನಾಶದ ಪರಿಣಾಮಗಳ ಕವಿ ನಾಲ್ಕೇ ಸಾಲುಗಳಲಿ ಕಟ್ಟಿ ಕೊಟ್ಟಿರುವರು. ಸೂಪರ್.
🍅🍅🍅🍅🍅🍅

*"ವನಬನ ಖಗಮೃಗ ನಂದನಾ ಬಣಬಣ ನಗರೀಕೃತ ಚರಣ*
*ಮೋಜು ಚೆಲ್ಲಾಟದಿ ನಡೆದು ತೇಜಕಳೆದ ಬಾಳಿನ ಚಾರಣ"*
🍅🍅🍅🍅🍅🍅
ವಾವ್..ಪದ ಪುಂಜಗಳ ಪ್ರಯೋಗ ನಿರರ್ಗಳ. ನಿರ್ಮಲ, ನವನವೀನ. ತನ್ಮಯ ಓದುಗ ಹೃದಯ.
🍅🍅🍅🍅🍅🍅🍅🍅

*"ಕಾಪಾಡು ದೇವಾ,*
*ಕಲುಷಿತವಾಗಿರುವೆ ಭಯಭೀತಗೊಂಡಿರುವೆ ಓ ಗುರುವೇ*
*ಬೇಗೆಯಿಂದ ಬಲುಬಳಲಿರುವೆ, ಬೀಗದ ಕೈ ದಯಪಾಲಿಸು*
*ಬೀಗದೇ ಮರಳಾದ ಭುವಿಯ, ಹಸಿರಾಗಿಸುವೆ ಉಸಿರಾಡುವೆ*
*ಮರುಳನಾಗದೇ ಮನುವಾಗುವೆ"*
🍅🍅🍅🍅🍅🍅🍅
ಎಲ್ಲಾ ತಾನೇ ಮಾಡಿಕೊಂಡು ಕೊನೆಯಲ್ಲಿ ದೇವನಿಗೆ ಮೊರೆ ಹೋಗುವ ಭಕ್ತನ ನೈಜ ಬಿಂಬ.
🍅🍅🍅🍅🍅🍅🍅

*"ಭಕ್ತಾ, ಮರುಳಾ ನೀನು,*
*ಮುಕ್ತ ಸರಳನಾಗಿ ಚಿಂತಿಸು*
*ಕುತರ್ಕಿಯಾಗದೇ ತರ್ಕಿಸು*
*ಭುವನದ ಪಂಚತತ್ವ ಶುದ್ಧೀಕರಿಸು*
*ಛಲಬಿಡದೇ ಸಾಧಿಸು ಆರಾಧಿಸು*
*ಸಮತೋಲವರಿತು ಆನಂದಿಸು*
*ಸಚ್ಚಿದಾನಂದ ಅನುಭವಿಸು*
*ನಿನ್ನ ಕಪೋಲದ ಚೀಲದಲ್ಲೇ*
*ಬುದ್ಧಿಮತ್ತೆಯ ಕೀಲಿಯಿಹುದು*
*ಹುಡುಕದಿರು ಇನ್ನೆಲ್ಲೂ ಹುಚ್ಚನಂತೆ*
*ವಸುಂಧರೆಯ ಕಾಪಿಡು*
*ಜನಾಂಗಗಳೇ ಮೆಚ್ಚುವಂತೇ"*
🍅🍅🍅🍅🍅🍅🍅
ದೇವನ ಉತ್ತರ ಸಕಾಲಿಕ. ಉನ್ನತ ಆದರ್ಶದ ಕವಿತೆ. ಆದರೆ ಮಾನವನಿಗೆ ಬುದ್ಧಿ ಬರಬೇಕೇ!
@@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ