ಭಾನುವಾರ, ಜುಲೈ 19, 2020

1497. ಆಟಿ ಅಮವಾಸ್ಯೆ-ಕಿರು ಮಾಹಿತಿ

ಆಟಿ ಅಮವಾಸ್ಯೆ

ಜುಲೈ 16, 17ನೇ ತಾರೀಖು ಸಂಕ್ರಾಂತಿಯ ಬಳಿಕ ತುಳುವರಿಗೆ ಆಟಿ ಅಂದರೆ ಆಷಾಡ ತಿಂಗಳು ಪ್ರಾರಂಭವಾಗುವುದು. ಮುಂದಿನ ಸಂಕ್ರಾಂತಿಯವರೆಗೆ. ಮುಂದೆ ಬರುವುದು ಸೋಣ ಅಂದರೆ ಶ್ರಾವಣ ಸಂಕ್ರಾಂತಿ.

ಆಷಾಡದಲ್ಲಿ ಬರುವ ಅಮವಾಸ್ಯೆಯೇ ಆಟಿ ಅಮವಾಸ್ಯೆ. 
ಈ ದಿನ ಮರವೊಂದರ ಚೆಕ್ಕೆಯನ್ನು ತಂದು, ಅದಕ್ಕೆ ಕಾಳುಮೆಣಸು, ಜೀರಿಗೆ, ಬೆಳ್ಳುಳ್ಳಿ ಹಾಕಿ ಗುದ್ದಿ ಕಹಿಯಾದ ಅದರ ರಸವನ್ನು ಕುಡಿಯುವ ಸಂಪ್ರದಾಯವಿದೆ. ಆ ಔಷಧಕ್ಕೆ ಹಲವಾರು ರೋಗಗಳ ಗುಣಪಡಿಸುವ ಪ್ರತೀತಿಯಿದೆ.
   ಸಾಯಂಕಾಲ ಗತಿಸಿದ ಹಿರಿಯರಿಗೆ ಹಾಗೂ ರಾಹುವಿಗೆ ಕೋಳಿಯನ್ನು ಕೊಯ್ಯುವ ಸಂಪ್ರದಾಯ ಹಲವೆಡೆ ಇದೆ. ಕರ್ನಾಟಕದ ಇತರೆಡೆಗಳಲ್ಲಿ ಇರುವಂತೆ ಗಂಡನ ಪೂಜಿಸುವ ಭೀಮನಮವಾಸ್ಯೆಯಿದು. ತುಳುನಾಡಿನ ಸಂಪ್ರದಾಯ ಅಳಿಯಕಟ್ಟು ಆದ ಕಾರಣ ಗಂಡನ ಪೂಜೆಯ ಯಾವುದೇ ಹಬ್ಬವಿಲ್ಲ ಇಲ್ಲಿ. ಪ್ರಥಮ ಆದ್ಯತೆ ಹೆಣ್ಣಿಗೆ. ಯಾವ ಹಬ್ಬದಲ್ಲೂ ದೇವರ, ದೈವಗಳ ಪೂಜೆ, ಹರಕೆಯೇ ಹೊರತು ಮನುಜರಿಗಿಲ್ಲ.
@ಪ್ರೇಮ್@
20.07.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ