ಗಝಲ್
ಬರಡಾದ ಕೆರೆಗೆ ಮಳೆಹನಿಯು ಬಿದ್ದಂತೆ ಬಂದೆ ಜಾನು
ಗರ ಬಡಿದ ಮನಸಿಗೆ ಸದಾನಂದವನು ತಂದೆ ಜಾನು!
ಕರವಿಡಿದು ನಿಂತು ಹೂ ಮುತ್ತನಿತ್ತು ಧೈರ್ಯ ತುಂಬಿದೆ.
ಮರದಂತೆ ಬಂದು ಬಳ್ಳಿಗಾಸರೆ ನೀಡಿ ನಿಂದೆ ಜಾನು!
ಕುದುರೆಯಂತೆ ಓಡುವ ಮನಕೆ ಕಡಿವಾಣ ಹಾಕಿ ಸಂಭಾಳಿಸಿದೆ.
ಚಹರೆ ನೋಡಿಯೆ ನನ್ನ ಅರ್ಥಮಾಡಿಕೊಂಡು ಜತೆಯಾದೆ ಜಾನು!
ಮೋಡದೊಳಗಿಂದ ನೀರು ಮಳೆ ಹನಿಯಾಗಿ ಉದುರಿದಂತೆ ತಂಪೆರೆದೆ
ಹಿತ ಬಯಸಿ ಮಿತದರಿವ ಮನದಿ ಮೂಡಿಸಿದೆ ಜಾನು!
ಪ್ರೇಮ ಶಾಂತಿಯ ಬೀಜವ ಬದುಕ ತೋಟದಲಿ ಬಿತ್ತಿದೆ
ಪದವಿರದ ಪುಷ್ಪಗಳ ಕಣ್ಣಲಿ ಅರಿವಿರದೆ ಅರಳಿಸಿದೆ ಜಾನು..
@ಪ್ರೇಮ್@
27.06.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ