ಉಪ್ಪಿಟ್ಟು
ಯಾರದು ಏನೇ ಹೆಸರನು ಪಡೆಯಲಿ
ಕಾಲವು ಆಂಗ್ಲರ ಜತೆಗೇ ಓಡಲಿ
ಹೆಸರನು ಬದಲಿಸೆ ಕನ್ನಡವಾಗೆ ಉಳಿದಿಹೆ
ಉಪ್ಪಿಟ್ಟು ಎನುವರು ಎನ್ನ ಸಜ್ಜಿಗೆ ಕರಾವಳಿಯಲಿ ನಾ..
ಈರುಳ್ಳಿ ಬೆಳ್ಳುಳ್ಳಿ ಇದ್ದರು ಸರಿಯೇ
ಕೆಲವೆಡೆ ಇವು ಇಲ್ಲದಿದ್ದರೂ ಸರಿಯೇ
ರವೆಯನು ಚೆನ್ನಾಗಿ ನೀ ಹುರಿಯೇ
ಉಪ್ಪು ಮೆಣಸು ರುಚಿಗೆ ಸಾಕು!
ಸರ್ವ ಕಾಲದ ಬಡವರ ಬಂಧು
ಉಪವಾಸಕೂ ನಾನೇ ಸಿಂಧು
ತಿನುವಿರಿ ನನ್ನ ಬೇಗನೆ ಮಿಂದು
ಬಿಸಿ ಬಿಸಿ ತಿನ್ನಲು ಎಲ್ಲರೂ ಮುಂದು
ಸಣ್ಣಗೆ ಉರಿಯಲು, ಒಲೆಯಲಿ ರವೆಯ
ಬೇಗನೆ ಆಗುವ ತಿಂಡಿಯು ನಾನೇ!
ರೋಗಿಗು ಯೋಗಿಗು ಹೊಟ್ಟೆಯ ತಣಿಸಲು
ಭೋಗ ಭಾಗ್ಯಕೆ ನಮಿಸುವ ಪರಿಯೊಳು
@ಹನಿಬಿಂದು@
01.08.2023
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ