ಮಂಗಳವಾರ, ಜುಲೈ 28, 2020

1507. That means...

That means..

That means cherished dreams are still alive
The wishes never die
The dreams never break

The thing which was in the corner has come near
The breath touched together
So that its conform that
No more work for this mind.

Still more...still near..no..
No work to these hands..
Because what thought wanted to come near
Its already been told
Its already been passed

The seed is already sowed
It may sprout soon
That will grown as a tree forever..

This heart is entirely foreigner
That should move far one or the other day..
So far..far and far..
Combining together
The true nuts...

No more work for these beats
Happily ready to go back
To  homewards
Keeping all happy together
Now..its the time to complete the work..
That means reach the destination back
Thinking that own is own..

Others is forever others..
We are here only for the time being..
To give pleasure to others
By our works...
At last the life itself again
Proved that we are born to help
Born to dedicate
Grown to sacrifice
Has come here on the earth to sprout some good feel..
@Prem@
28.07.2020

ಸೋಮವಾರ, ಜುಲೈ 27, 2020

1506. ಇದೆ ಇಲ್ಲಗಳ ನಡುವೆ

ಇದೆ ಇಲ್ಲಗಳ ನಡುವೆ

ರಸ್ತೆಯಲಿ ಜಾಗವಿದೆ
ಚಲಿಸಲು ಧೈರ್ಯವಿಲ್ಲ!
ಬಂಧುಗಳ ನೆನಪಾಗುತ್ತಿದೆ
ಹೋಗಿ ಬರಲಾಗುತ್ತಿಲ್ಲ!

ಅಡಿಗೆ ಮಾಡುವ ಮನಸ್ಸಿದೆ
ತಿನ್ನಲು ಬರುವವರಿಲ್ಲ!
ಸಭೆ ಮಾಡಿ ಮಾತನಾಡಬೇಕಿದೆ
ಮುಖ ನೋಡಲು ಆಗುತ್ತಿಲ್ಲ!

ನೋವಿಗೆ ಸ್ಪಂಧಿಸುವ ಮನವಿದೆ
ಹತ್ತಿರ ಹೋಗುವಂತಿಲ್ಲ!
ಪಕ್ಕದ ಮನೆಯವರೊಡನೆ ಹರಟೆ ಹೊಡೆಯಬೇಕಿದೆ
ಯಾರೂ ಬಾಗಿಲು ತೆಗೆಯುತ್ತಿಲ್ಲ!

ಜೀವ ಭಯ ಮನುಜನ ಕಾಡಿದೆ
ಹತ್ತಿರ ಬರುವ ಧೈರ್ಯವಿಲ್ಲ!
ಕೊರೋನಾ ಎಲ್ಲೆಲ್ಲು ಹರಡಿದೆ
ಯಾರ ಕಣ್ಣಿಗೂ ಕಾಣುತ್ತಿಲ್ಲ!

ಜ್ಯೋತಿಷಿಗಳ ಬಳಿ ಮಂತ್ರವಿದೆ
ಕೊರೋನ ಓಡಿಸುವ ತಂತ್ರವಿಲ್ಲ
ಆಯುರ್ವೇದ ಶಕ್ತಿ ಭಾರತದಲ್ಲಿದೆ
ಅಧಿಕೃತಗೊಳಿಸುವ ಸರಕಾರವಿಲ್ಲ

ಸರಕಾರದ ಹಣ ಪೋಲಾಗುತ್ತಿದೆ
ಬಡವರಿಗೆ ತಿನ್ನಲು ಊಟವಿಲ್ಲ
ಸಿರಿವಂತರು ಆರಾಮಾಗಿ ತಿರುಗಾಡುತಿಹರು
ಬಡವರಿಗೆ ಸಾಮಾನು ತರುವ ವ್ಯವಸ್ಥೆಯಿಲ್ಲ..

ಹೂವು ಹಣ್ಣು ತರಕಾರಿಗಳಿವೆ
ಕೊಳ್ಳುವ ಜನರಲಿ ಹಣವಿಲ್ಲ
ಮಹಡಿ ಮೇಲೆ ಬದುಕುತಿಹೆವು
ಕನಸುಗಳ ನನಸಿನ ಬೆಂಬಲವಿಲ್ಲ

ಮಾಸ್ಕ್ ,ಸ್ಯಾನಿಟೈಸರ್ ಬಳಸುತಿಹೆವು.
ಅದರಲೂ ಕೊಳಕು, ರಾಸಾಯನಿಕವಿದೆಯೆಂದು ಅರಿತಿಲ್ಲ!
ಸೊಗಸಾದ ಹಸಿರು ಕಣ್ಣ ಮುಂದಿದೆ
ಸುತ್ತಾಡಲು, ತಿರುಗಾಡಲು ಅನುಮತಿಯಿಲ್ಲ!

ಕೂಡಿ ಬಾಳುವ ಆಸೆಯಿಹುದು
ಹೆಚ್ಚು ಜನ ಕೂಡುವಂತಿಲ್ಲ
ಸಾಮಾಜಿಕ ಅಂತರ ಬೇಕಿಹುದು
ಅಂಗಡಿಗಳಲಿ ಪಾಲಿಸಲಾಗುತ್ತಿಲ್ಲ!

ಕೈ ಕುಲುಕುವ ಅಭ್ಯಾಸವಿಹುದು
ಎರಡು ಗಜಕ್ಕಿಂತ ಹತ್ತಿರ ಬರುವಂತಿಲ್ಲ.
ಪಾಸಿಟಿವ್ ಚಿಂತನೆಯಿರಬೇಕು
ಪಾಸಿಟಿವ್ ರಿಸಲ್ಟ್ ಬರುವಂತಿಲ್ಲ!

ಪ್ರೀತಿ ಹಂಚಿ ಬದುಕಬೇಕು
ಮನೆಯಿಂದ ಹೊರಗೆ ತೆರಳುವಂತಿಲ್ಲ
ಈಗ ಕೆಲಸ ಬೇಕಾಗಿದೆ
ಯಾರೂ ಬರಲು ಕರೆಯುತ್ತಿಲ್ಲ..

ಮಕ್ಕಳಿಗೆ ಶಾಲೆ, ಗೆಳೆಯರು ಬೇಕಾಗಿದೆ
ಹೊರಹೋಗಲು ಪೋಷಕರು ಬಿಡುತ್ತಿಲ್ಲ
ಮಾತು ಮೌನ ಒಂದಾಗಿದೆ
ಕೊರೋನಕ್ಕೆ ಇನ್ನೂ ಸುಸ್ತಾಗಿಲ್ಲ

ಜೆಸಿಬಿ ಕಾರ್ಯ ಸ್ಥಗಿತವಾಗಿದೆ
ಮಣ್ಣಿನ ಸವೆತ ನಿಲ್ಲುತ್ತಿಲ್ಲ
ಹಸಿರು ಗಿಡ ನೆಟ್ಟಾಗಿದೆ
ಗೊಬ್ಬರ ತರಲು ಹೋಗುವಂತಿಲ್ಲ!
ಕೊರೋನ ರೋಗ ಗುಣವಾಗುತ್ತದೆ
ಖಾಯಿಗೆ ಕಡಿಮೆಯಾಗಲು ಯಾವುದೇ ಮದ್ದಿಲ್ಲ

ದೇವರು ತನ್ನಾಟ ತೋರಿಸಿಯಾಗಿದೆ
ಮಾನವ ದ್ವೇಷ ಮರೆಯುತ್ತಿಲ್ಲ
ಪ್ರಕೃತಿ ತನ್ನನು ಸರಿದೂಗಿಸಿ ಕೊಳ್ಳುತ್ತಿದೆ
ನೀಚ ಮಾನವನಿಗೆ ಅರ್ಥವಾಗುತ್ತಿಲ್ಲ!
@ಪ್ರೇಮ್@
28.07.2020

ಕೃತಿಗಳ್ಳ ಸ್ನೇಹಿತರಿಲ್ಲವೆಂಬ ಆಶಯವಿದೆ
ಮತ್ತೆಲ್ಲೋ ಪ್ರಕಟಿಸಿದರೆ ಗೊತ್ತಾಗೋದಿಲ್ಲ😃😃

ಶನಿವಾರ, ಜುಲೈ 25, 2020

1504. ಶಾಲಾ ವರದಿ

ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪೋಷಕರ ಸಹಕಾರ ಪಡೆದು ಆನ್ ಲೈನ್ ನಲ್ಲಿ ಬೋಧನೆ ಮಾಡಲಾಗುತ್ತಿದೆ. ವಾಟ್ಸಪ್ ನಲ್ಲಿ ಮೂರೂ ತರಗತಿಗಳ ಮಕ್ಕಳೆಲ್ಲರನ್ನು ತರಗತಿವಾರು ಗುಂಪುಗಳಾಗಿ ಮಾಡಿ, ಪ್ರತಿ ಶಿಕ್ಷಕರೂ ವೇಳಾಪಟ್ಟಿಯಂತೆ ವಿದ್ಯಾರ್ಥಿಗಳಿಗೆ ಶಾಲಾ ಕಾರ್ಯಗಳನ್ನು ಇದುವರೆಗೆ ನೀಡಲಾಗುತ್ತಿತ್ತು . ಆದರೆ ಈಗ ಸರಕಾರದ ಆದೇಶದ ಮೇರೆಗೆ ಎಲ್ಲಾ ವಿದ್ಯಾರ್ಥಿಗಳಿಗೂ ಚಂದನ ಟಿವಿಯ ಕಾರ್ಯಕ್ರಮಗಳ ವೇಳಾಪಟ್ಟಿ ನೀಡಿ, ಅಲ್ಲಿ ನೀಡುವ ವಿಚಾರಗಳನ್ನು ಬರೆದುಕೊಂಡು ಪ್ರತಿನಿತ್ಯ ವಾಟ್ಸಪ್ ಗುಂಪುಗಳಲ್ಲಿ ಬರವಣಿಗೆಯ ಫೋಟೋ ನೋಡಿ ಪ್ರತಿ ವಿಷಯದ ಅಧ್ಯಾಪಕರೂ ತಿದ್ದುವ ಕಾರ್ಯವನ್ನು ಮಾಡುತ್ತಾರೆ.
    ಇದನ್ನು ತಿಳಿದ ಪೋಷಕರು ಬಹಳ ಬೇಗನೇ ತಮ್ಮ ಮಕ್ಕಳನ್ನು ಎಂಟನೇ ತರಗತಿಗೆ ಸೇರಿಸಿದ್ದಾರೆ. ಈಗಾಗಲೇ ಇಪ್ಪತ್ತೊಂಬತ್ತು ವಿದ್ಯಾರ್ಥಿಗಳು ಎಂಟನೇ ತರಗತಿಗೂ, ಉತ್ತೀರ್ಣರಾದವರನ್ನೂ ಸೇರಿಸಿ ಮೂವತ್ತು ವಿದ್ಯಾರ್ಥಿಗಳು ಒಂಭತ್ತನೇ ತರಗತಿಯಲ್ಲೂ ಕಲಿಯುತ್ತಿರುವರು. ಶಿಕ್ಷಕರ ಈ ಕಾರ್ಯಕ್ಕೆ ಎಲ್ಲ ಪೋಷಕರೂ ಬೆಂಬಲ ಕೊಡುತ್ತಿರುವರು. ಹಿರಿಯರ ಮಾರ್ಗದರ್ಶನದೊಂದಿಗೇ ವಿದ್ಯಾರ್ಥಿಗಳು ಮೊಬೈಲ್ ಬಳಸುವಂತೆ ತಿಳಿ ಹೇಳಲಾಗಿದೆ.

  ಹಿರಿಯ ಶಿಕ್ಷಕರಾದ ಶ್ರೀ ಸೂಫಿ ಪೆರಾಜೆ ಅವರು ಪ್ರತಿ ಪ್ರಾಂತ್ಯಗಳ ವಿದ್ಯಾರ್ಥಿಗಳನ್ನು ಪ್ರಾಂತ್ಯವಾರು ಶಾಲೆಯಲ್ಲಿರುವ ಸರ್ವ ಶಿಕ್ಷಕರಿಗೂ ಸಮನಾಗಿ ಗುಂಪುಗಳನ್ನು ಮಾಡಿ ಹಂಚಿದ್ದಾರೆ. ಆಯಾ ಪ್ರಾಂತ್ಯದ ಎಲ್ಲಾ ವಿದ್ಯಾರ್ಥಿಗಳ ಕಲಿಕಾ ಜವಾಬ್ದಾರಿ ಸಂಬಂಧ ಪಟ್ಟ ಶಿಕ್ಷಕರದ್ದಾಗಿರುತ್ತದೆ. ಪ್ರತಿ ಶಿಕ್ಷಕರೂ ಫೋನ್ ಮುಖಾಂತರ ಸರ್ವ ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ವಿಚಾರಿಸಿಕೊಳ್ಳುತ್ತಿರುವುದು, ಆ ಮೂಲಕ ಕಲಿಕಾ ಕಾರ್ಯ ನಿರಂತರವಾಗಿ ಸಾಗುತ್ತಿರುವುದು ಎಲ್ಲಾ ಪೋಷಕರಿಗೂ ಸಂತಸ ತಂದಿದೆ.
@ಪ್ರೇಮ್@
25.07.2020

1505. ಗಝಲ್-207

ಗಝಲ್-207

ಕಳ್ಳ ಕೃಷ್ಣ ಸದಾ ನೀನಿರುವೆ ಮನದಲ್ಲಿ
ಬೆಣ್ಣೆ ಚೋರ ಬಳಿ ಸುಳಿಯುವೆ ಮನದಲ್ಲಿ..

ಗೋವಿಂದ ಗೋಪಾಲ ನಿಂತಿರುವೆ ನನ್ನಲ್ಲಿ
ಮುರಳೀ ಲೋಲ ಆಟವಾಡುತಿಹೆ ಮನದಲ್ಲಿ

ಶ್ರೀಧರ ರಾಮಚಂದಿರ ಬರಸೆಳೆವೆ ಮನಮಂದಿರವ
ಮೋಹನ ಮೋಡಿಗಾರ ತಿರುಗುವೆ ಮನದಲ್ಲಿ..

ರಾಧಾ ಚಿತ್ತ ಚೋರ ನಲಿದಾಡುತಿಹೆ ಬಳಿಯಲ್ಲಿ
ನಂದ ಕಿಶೋರ ಜಾಗ ಪಡೆದಿರುವೆ ಮನದಲ್ಲಿ..

ಹರಿ ನೀ ನರಸಿಂಹ ಈ ಜೀವ ನಿನಗಾಗಿ
ಲಕ್ಷ್ಮೀಕಾಂತ ವಾಸುದೇವ ನೆಲೆಸಿರುವೆ ಮನದಲ್ಲಿ

ಭಕ್ತವತ್ಸಲ ಕಮಲನಯನ ಕೊಳಲಗಾನ ಕೇಳುತಿರುವೆ
ಶ್ರೀವತ್ಸ ಶ್ರೀನಿವಾಸ ಶಾಶ್ವತವಾಗಿರುವೆ ಮನದಲ್ಲಿ..

ಆದಿತ್ಯ ಅಚ್ಯುತನೇ ಆದಿನಾರಾಯಣ ವರನೀಡು
ಪ್ರೇಮಾತ್ಮ ಪದ್ಮನಾಭ ಅನಂತವಾಗಿರುವೆ ಮನದಲ್ಲಿ..
@ಪ್ರೇಮ್@
25.07.2020

ಭಾನುವಾರ, ಜುಲೈ 19, 2020

1504. ಆಟಿ ಬಂತು

ಆಟಿ ಬಂತು

ಆಚರಣೆ ಹಬ್ಬಗಳ ಬದಿಗಿರಿಸಿ
ಪ್ರಕೃತಿ ವಸ್ತುಗಳ ಪ್ರೋತ್ಸಾಹಿಸಿ
ನೈಸರ್ಗಿಕ ತಿನಿಸುಗಳ ಪುಷ್ಠೀಕರಿಸಿ
ರೋಗರುಜಿನಗಳಿಂದ ದೂರವಿರಿಸೊ ಆಟಿ ಬಂತು!

ಪತ್ರೊಡೆ, ಹಲಸಿನ ಬೀಜಗಳ ಊಟ
ಚೆಕ್ಕೆ ಕಹಿ ಔಷಧಿಗಳ ಕಾಟ
ಹಿರಿಯರ ನೆನಪಿನ ರಸದೂಟ
ಹಳೆ ಸಂಪ್ರದಾಯಗಳ ನೆನಪಿಸುವ ಆಟಿ ಬಂತು.

ಆಟಿ ಕಳೆಂಜನ ನಲಿವಿನ ನೋಟ
ಮಳೆಯಲ್ಲು ಬೆಳೆವ ಅಣಬೆಯ ಹುಡುಕಾಟ
ಕಳಲೆ, ಕೆಸುಗಳ ಸಿಹಿ, ಕಾರದೂಟ
ಮಕ್ಕಳೊಡನೆ ತವರಲಿ ಕಳೆವ ಆಟಿ ಬಂತು..

ಹಬ್ಬ ಹರಿದಿನಗಳ ದೂಡಿ ಬಂತು
ಹಲವು ಕಾರ್ಯಕ್ರಮಗಳ ಮುಂದೋಡಿಸಿ ಬಿಡ್ತು
ದೈವ ದೇವ ಕಾರ್ಯಗಳ ಬೇಡವೆಂದಿತು
ಹಿರಿಯರ ಸೇವೆಗಷ್ಟೆ ಮೀಸಲಾದ ಆಟಿ ಬಂತು..
@ಪ್ರೇಮ್@
20-07-2020

1502. ನಿರೀಕ್ಷೆ

ನಿರೀಕ್ಷೆ

ಕಾದೆ ನಾನು ಮುಗುಳು ನಗೆಗಾಗಿ
ಕಾಣೆ ಮನದ  ಬಳಿ ಬರವಿಕೆಗಾಗಿ
ಕಾಯುವಿಕೆಯು ಮನದಿಂಗಿತಕಾಗಿ
ತಾರೆಯಂತೆ ಶಶಿಯ ಬರುವಿಕೆಗಾಗಿ..

ಭಯದ ಮಾತುಗಳ ಮರೆಯುವಂತೆ
ಪ್ರೀತಿಯುದಕ ತಾನೇ ಚಿಮ್ಮುವಂತೆ
ತಂತಿಯೊಳಗಿನ ಸ್ವರದ ಕಂತೆಯಂತೆ
ಮುದ್ದು ಮನಸಿನ ಭಾವದಂತೆ...

ಹೃದಯದೊಳಗಿನ ಮೃದು  ಬಡಿತ ನೀನು
ಪೃಥ್ವಿಯಂದದ ಕಿರು  ತಾಳ್ಮೆ ತಾನು
ಮೃತ್ಯು ಬಳಿಕವು ಜೀವ ಇರುವುದು
ರೆಪ್ಪೆ ಮುಚ್ಚಿದರೂ ಮುಖ ಕಾಣುತಿರುವುದು...

ಪ್ರೇಮವಿದು ಅನಂತ,  ಹಿತ ಸಾವಿಲ್ಲವಿದಕೆ
ಮೌನದಲು ಮಾತಿಹುದು ಕೊನೆಯಿಲ್ಲವಿದಕೆ
ಕಣ್ಣೋಟದಲು ನಲಿವಿಹುದು ಅನುಕ್ಷಣವು
ಪ್ರತಿ ಸ್ಪರ್ಶದಲು ಸವಿಯಿಹುದು ಪ್ರತಿದಿನವು..
@ಪ್ರೇಮ್@
19.07.2020

1497. ಆಟಿ ಅಮವಾಸ್ಯೆ-ಕಿರು ಮಾಹಿತಿ

ಆಟಿ ಅಮವಾಸ್ಯೆ

ಜುಲೈ 16, 17ನೇ ತಾರೀಖು ಸಂಕ್ರಾಂತಿಯ ಬಳಿಕ ತುಳುವರಿಗೆ ಆಟಿ ಅಂದರೆ ಆಷಾಡ ತಿಂಗಳು ಪ್ರಾರಂಭವಾಗುವುದು. ಮುಂದಿನ ಸಂಕ್ರಾಂತಿಯವರೆಗೆ. ಮುಂದೆ ಬರುವುದು ಸೋಣ ಅಂದರೆ ಶ್ರಾವಣ ಸಂಕ್ರಾಂತಿ.

ಆಷಾಡದಲ್ಲಿ ಬರುವ ಅಮವಾಸ್ಯೆಯೇ ಆಟಿ ಅಮವಾಸ್ಯೆ. 
ಈ ದಿನ ಮರವೊಂದರ ಚೆಕ್ಕೆಯನ್ನು ತಂದು, ಅದಕ್ಕೆ ಕಾಳುಮೆಣಸು, ಜೀರಿಗೆ, ಬೆಳ್ಳುಳ್ಳಿ ಹಾಕಿ ಗುದ್ದಿ ಕಹಿಯಾದ ಅದರ ರಸವನ್ನು ಕುಡಿಯುವ ಸಂಪ್ರದಾಯವಿದೆ. ಆ ಔಷಧಕ್ಕೆ ಹಲವಾರು ರೋಗಗಳ ಗುಣಪಡಿಸುವ ಪ್ರತೀತಿಯಿದೆ.
   ಸಾಯಂಕಾಲ ಗತಿಸಿದ ಹಿರಿಯರಿಗೆ ಹಾಗೂ ರಾಹುವಿಗೆ ಕೋಳಿಯನ್ನು ಕೊಯ್ಯುವ ಸಂಪ್ರದಾಯ ಹಲವೆಡೆ ಇದೆ. ಕರ್ನಾಟಕದ ಇತರೆಡೆಗಳಲ್ಲಿ ಇರುವಂತೆ ಗಂಡನ ಪೂಜಿಸುವ ಭೀಮನಮವಾಸ್ಯೆಯಿದು. ತುಳುನಾಡಿನ ಸಂಪ್ರದಾಯ ಅಳಿಯಕಟ್ಟು ಆದ ಕಾರಣ ಗಂಡನ ಪೂಜೆಯ ಯಾವುದೇ ಹಬ್ಬವಿಲ್ಲ ಇಲ್ಲಿ. ಪ್ರಥಮ ಆದ್ಯತೆ ಹೆಣ್ಣಿಗೆ. ಯಾವ ಹಬ್ಬದಲ್ಲೂ ದೇವರ, ದೈವಗಳ ಪೂಜೆ, ಹರಕೆಯೇ ಹೊರತು ಮನುಜರಿಗಿಲ್ಲ.
@ಪ್ರೇಮ್@
20.07.2020

1501. ರುಬಾಯಿ

ರುಬಾಯಿ

ಕೊರೋನ ಕೇಕೆ ಹಾಕಿ ನಗುತಿತ್ತು 
ಮನುಜನೊಡನೆ ತಾನೆ ಗೆದ್ದೆನೆಂದು ಬೀಗುತ್ತಿತ್ತು!
ಶವಗಳುರುಳಿ ಬಿದ್ದ ಅಂದವ ನೋಡುತ.
ಮನುಜನ ಮೊಗದಲಿ ಹೊಸ ಔಷಧದ ನಗುವಿತ್ತು..
@ಪ್ರೇಮ್@
05.07.2020

1500. ಶಿಶುಗೀತೆ-ತಮ್ಮ

ತಮ್ಮ

ನನ್ನ ತಮ್ಮ
ತರಲೆ ತಿಮ್ಮ
ಓಡೊ ಗುಮ್ಮ
ಹೆದರೊ ಪಮ್ಮ

ನಾಯಿ ನೋಡಲು
ಅಳುತ ಇರಲು
ತಿಂಡಿ ತರಲು
ಬಳಿಗೆ ಬರಲು..

ಮನೆಯ ಚೋರ
ಆಟದ ಪೋರ
ತುಂಟ ಕುವರ
ಅಮ್ಮನ ಚಕೋರ

ಜಾಣ ಮರಿ
ಪಾಠ ಬರಿ
ಎನಲು ಉರಿ
ಕೋಣ ಮರಿ..

ಊಟ ಬೇಡ
ಓದು ಬೇಡ
ಪೆಟ್ಟು ಬೇಡ
ಹಾಲು ಬೇಡ

ಮೊಬೈಲು ಬೇಕು
ಟಿವಿ ಬೇಕು
ತಿಂಡಿ ಬೇಕು
ಚೂರು ಸಾಕು!
@ಪ್ರೇಮ್@
07.07.2020

1499. ಹನಿಗವನ-ಬದ್ಕು

ಬದ್ಕು

ಮುಳ್ಳುಹಾದಿಯಲ್ಲಿ ನಡೆವ
ಕಲ್ಲು ಜೀವ ನಮ್ಮದು
ಸುಳ್ಳು ಮಾತನಾಡದೇನೆ
ಪೊಳ್ಳು ಕೆಲಸ ಮಾಡದೇನೆ
ಬಲ್ಲ ಜಾಣರ್ಯಾರೋ ತಿಳಿಯರು!

ಹಲ್ಲು ಗಿಂಜೋದ್ ಬಿಟ್ಟು
ಎಲ್ಲಾ ಮರೆತುಕೊಂಡು
ಬಳ್ಳಿಯಂತೆ ಬದುಕುತ್ತಾ
ದಿಲ್ಲು ಗಟ್ಟಿ ಮಾಡಿಕೊಂಡು
ಕಳ್ಳರಾಗದೆ ಉಸಿರಾಡಿದರಾಯ್ತು!
@ಪ್ರೇಮ್@
08.07.2020

1498. ಪ್ರೀತಿಹಕ್ಕಿ

ಪ್ರೀತಿಹಕ್ಕಿ

ಎನ್ನ ಮನದ ಹಕ್ಕಿ ಹಾರಿ
ಎದೆಯ ಒಳಗೆ ಕುಳಿತಿದೆ...
ನಿನ್ನ ಎದೆಯೆ ಸ್ವರ್ಗವೆಂದು
ಕಂಡು ತಣಿದು ಕುಣಿದಿದೆ...

ಬಯಕೆ ಮರವ ಹೊತ್ತು ತಂದು
ಬೇರು ಬಿಡಲು ಕಾದಿದೆ
ಬಯಲ ನೀರ ಚಿಲುಮೆಯಲ್ಲಿ
ಗರಿಯಗೆದರಿ ನಲಿದಿದೆ...

ನೋಡು ನೋಡುತಿರುವ ಹಾಗೆ
ಹಾರಿ ಹೋಗಿ ಬರುತಿದೆ
ಹೋಗಿ ಬರುವ ಹೊತ್ತಿನಲ್ಲಿ
ನೆನಪ ಕಾಳು ತರುತಿದೆ..

ಹೊತ್ತು ಗೊತ್ತು ಇಲ್ಲವದಕೆ
ಪ್ರೇಮ ಕವನ ಹೆಣೆದಿದೆ
ಗುಡಿಯ ಒಳಗೆ ಕುಳಿತು ತಾನು
ಜಗವನೆಲ್ಲ ಮರೆತಿದೆ...
@ಪ್ರೇಮ್@
08.07.2020

1496. ಭಕ್ತಿಗೀತೆ-ನಮನ

ನಮನ

ನಮನ ನಮನ ಗುರುದೇವಗೆ
ನಮನ ನಮನ ಮಹಾದೇವಗೆ..

ನಮನ ನಮನ ಗಣಾಧೀಶಗೆ
ನಮನ ನಮನ ಸಿರಿದೇವಿಗೆ
ನಮನ ನಮನ ಹರಿಹರನಿಗೆ
ನಮನ ನಮನ ಸುಬ್ರಹ್ಮಣ್ಯಗೆ

ನಮನ ನಮನ ಶ್ರೀಲಕ್ಷ್ಮಿಗೆ
ನಮನ ನಮನ ಶ್ರೀ ಶಾರದೆಗೆ
ನಮನ ನಮನ ಜೈ ಭವಾನಿಗೆ..
ನಮನ ನಮನ ಅನ್ನಪೂರ್ಣೆಗೆ

ನಮನ ನಮನ ಅಯ್ಯಪ್ಪಗೆ.
ನಮನ ನಮನ ಸಾಯಿಸಂತಗೆ
ನಮನ ನಮನ ಗುರುರಾಯಗೆ.
ನಮನ ನಮನ ಆಂಜನೇಯಗೆ
ನಮನ ನಮನ ಕವಿಹೃದಯಕೆ..

ನಮನ ನಮನ ಸಿರಿ ಪಾದಕೆ
ನಮನ ನಮನ ನಾಗಬ್ರಹ್ಮಗೆ
ನಮನ ನಮನ ಶನಿದೇವಗೆ.
ನಮನ ನಮನ ನಮ್ಮ ಕಾಯ್ವಗೆ..

ನಮನ ನಮನ ಮಾತಾಪಿತೃಗೆ
ನಮನ ನಮನ ಹಿರಿ ಮನಸಿಗೆ
ನಮನ ನಮನ ವೀರ ಯೋಧಗೆ
ನಮನ ನಮನ ಧೀರ ರೈತಗೆ..
@ಪ್ರೇಮ್@
11.07.2020

1495. ಪುರಾಣ ಪಾತ್ರ-ಊರ್ಮಿಳೆ

ನನಗಿಷ್ಟವಾದ ಪುರಾಣದ ಸ್ತ್ರೀ ಪಾತ್ರ

       ಪುರಾಣಗಳು ನಮ್ಮಜೀವನವನ್ನು ತಿದ್ದಿಕೊಳ್ಳಲಿಕ್ಕಿರುವ ಪುರಾವೆಗಳು. ಸತ್ಯ-ಅಸತ್ಯ, ನ್ಯಾಯ-ಅನ್ಯಾಯ, ಧರ್ಮ-ಅಧರ್ಮಗಳ ವ್ಯತ್ಯಾಸ ತಿಳಿಸಿ ಬದುಕನ್ನು ಹೇಗೆ ಸ್ವೀಕರಿಸಬೇಕೆನುವ ತಂತ್ರಗಳನ್ನು ಅಲ್ಲಿನ ಪ್ರತಿಯೊಂದು ಪಾತ್ರಗಳೂ ನಮಗೆ ಕಲಿಸಿ ಕೊಡುತ್ತವೆ. ಅಂತಹ ಮಹಾನ್ ಪಾತ್ರಗಳಲ್ಲಿ ರಾಮಾಯಣದ ಊರ್ಮಿಳೆಯ ಪಾತ್ರ ನನಗೆ ತುಂಬಾ ಹಿಡಿಸಿದ ಪಾತ್ರ.
    ರಾಣಿಯಾಗಿದ್ದರೂ ರಾಣಿ ಪಟ್ಟ ಸಿಗದ, ಐಶ್ವರ್ಯವಿದ್ದರೂ ಅನುಭವಿಸಲಾಗದ, ಗಂಡನಿದ್ದರೂ ಒಂಟಿಯಾಗಿ ಬದುಕಿದ, ಅರಮನೆಯಲ್ಲೂ ನೆಮ್ಮದಿ ಕಾಣದ ತಬ್ಬಲಿ ಬದುಕು ಊರ್ಮಿಳೆಯದ್ದು. 
     ರಾಮ, ಲಕ್ಷ್ಮಣ, ಸೀತೆಯರನ್ನು ಹೊಗಳಿ ಪೂಜಿಸುವವರೇ ಎಲ್ಲರೂ. ತನ್ನ ಜೀವಮಾನವಿಡೀ ತ್ಯಾಗಮಯಿಯಾಗಿ ಬದುಕಿದ ಊರ್ಮಿಳೆ ಯಾರ ಕಣ್ಣಿಗೂ ಬೀಳಲೇ ಇಲ್ಲ. 

   ವನವಾಸದಲ್ಲೂ ಸೀತೆಯೊಡನೆ ರಾಮನಿದ್ದ. ಆದರೆ ಲಕ್ಷ್ಮಣ ತನ್ನ ಜೀವನವಿಡೀ ರಾಮ-ಸೀತೆಯರ ರಕ್ಷಣೆಯಲ್ಲಿ ತೊಡಗಿದ್ದನೇ ಹೊರತು ತನ್ನ ಸತಿಗೇನು ಬೇಕು, ಅವಳ ಆಸೆಗಳೇನು, ತನ್ನ ನಿರೀಕ್ಷೆಗಳೇನು, ಆಸೆಗಳೇನು ಎಂಬ ಯಾವುದನ್ನೂ ಯಾವತ್ತೂ ಆಲಿಸುವತ್ತ ಗಮನವೇ ಕೊಡಲಿಲ್ಲ. ತನ್ನ ಆಸೆ, ಆಕಾಂಕ್ಷೆಗಳನ್ನೆಲ್ಲಾ ಬದಿಗೊತ್ತಿ ತನ್ನ ಜೀವನವನ್ನೇ ತ್ಯಾಗಕ್ಕೆ  ಮುಡಿಪಾಗಿಟ್ಟ ಊರ್ಮಿಳೆಗೆ ಹ್ಯಾಟ್ಸಪ್.
   @ಪ್ರೇಮ್@
13.07.2020

1494. ಹನಿಗವನ

ಹನಿ ಗವನ
ಹನಿಹನಿಯಾಗಿ ಸುರಿಯತಲಿ ಬಂದೆ
ಹನಿಸುತ ಜಲಧಾರೆಯನು ನಿಂದೆ
ಹಣಕೆ ಬೆಲೆಯಿಲ್ಲ ನನ್ನಲಿ ಸದಾ
ಕಣಕಣದಿ ಜಲ ಆಮ್ಲ ಬೆಸೆದಿಹುದು ಕಂದಾ..

ನೀರೆನುವೆ ಉದಕವೆನುವೆ
ಜಲ ನಾನು ಸುರಿಯುವೆ
ಗಟ್ಟಿಯಾಗಲು ಮಂಜಿನ ಗೆಡ್ಡೆ 
ಕಾಣದಾಗಲು ನೀರಾವಿ ಗುಡ್ಡೆ...
@ಪ್ರೇಮ್@
14.07.2020

1493. ಕಟ್ಟದಿರಿ ಗೋಡೆ

ಕಟ್ಟದಿರಿ ಗೋಡೆ

ಕಟ್ಟಿಕೊಳ್ಳಿ ಗೋಡೆಯನು
ಎರಡು ಮನೆಗಳ ನಡುವೆ
ಕಟ್ಟದಿರಿ ಗೋಡೆಗಳನು
ಎರಡು ಮನಗಳ ನಡುವೆ..

ಬೆಳೆಸಿಕೊಳ್ಳಿ ಅಂತರವ
ಎರಡು ದೇಹಗಳ ನಡುವೆ
ಬೆಳೆಸದಿರಿ ಅಂತರವ
ಎರಡು ಹೃದಯಗಳ ನಡುವೆ..

ಮುಚ್ಚಿಕೊಳ್ಳಿರಿ ನಿಮ್ಮ
ಕೈ ಮೂಗು ಬಾಯಿಗಳ
ಮುಚ್ಚದಿರಿ ನಿಮ್ಮ
ಎದೆಯೊಳಗಿನ ಭಾವನೆಗಳ

ಮರೆತುಬಿಡಿ ಜನರ
ಕೋಪ ದ್ವೇಷಗಳನು
ಮರೆಯದಿರಿ ಗೆಳೆಯರ
ಪ್ರೀತಿ ಸ್ನೇಹಗಳನು..

ಬಿತ್ತಿ ಬೆಳೆಸಿರಿ ನಾಡಲಿ
ಸೌಹಾರ್ದತೆಯ ಹಸಿರನು
ಕೆತ್ತಿ ಬಿಸಾಕಿರಿ ಬೇಗ
ಮತಾಂಧತೆಯ ರೋಗವನು..

ಮುಚ್ಚಿ ಬಿಡಿ ಬಾಯಿಯನು
ಜಗಳ ಕದನಗಳೆಡೆಯಲಿ
ಬಿಚ್ಚಿ ಬಿಡಿ ಕರಗಳನು
ದೇಶ ಸೇವಾ ಕಾರ್ಯಗಳಲಿ

ಮೆಚ್ಚಿಕೊಳ್ಳೋಣ ಜನರಲ್ಲಿ
ವಿಶಾಲವಾದ ಆಲೋಚನೆಗಳ
ಬಚ್ಚಿಟ್ಟುಕೊಳ್ಳೋಣ ಒಳಗಿಲ್ಲಿ
ಹತ್ತು ಹಲವು ನೋವುಗಳ..

ಚುಚ್ಚದಿರೋಣ ಪದಗಳಲಿ
ಜತೆಗಾರರಿಗೆ ಎಂದೂ
ಎಚ್ಚರಿಸೋಣ ಸರ್ವರಲಿ
ದಯೆಯನು ಮುಂದೂ..
@ಪ್ರೇಮ್@
15.07.2020

1492. ಚುಟುಕು-ಪ್ರಿಯೆಗೆ

ಚುಟುಕು

ಪ್ರಿಯೆಗೆ..

ಮಂದಾರ ಪುಷ್ಪ ನೀನೇ ಪ್ರಿಯೆ
ಮಂಗಳ ವಾದ್ಯ ಘೋಷವೂ ಸಿಹಿಯೆ
ಮುಂಬರುವ ಸುಖ ದು:ಖಗಳ ಕಡಿವಾಣ
ನನ್ನ ಬಾಳಿನ ಸ್ವಾತಂತ್ರ್ಯದ ಮಹಾದಾನ..
@ಪ್ರೇಮ್@
15.07.2020

1491. 2 ಟಂಕಾಗಳು

ಟಂಕಾ-1
ಮೀಸಲಾಗಿಸಿ
ನನ್ನ ಹೃದಯವನು
ಕಾದಿರಿಸಿದ್ದು
ನಿನಗಾಗಿಯೇ ತಾನೆ?
ಸದಾ ಕಾಲಕ್ಕೂ ನೀನೇ!

ಟಂಕಾ-2

ಮೀಸಲು ದೇವ
ಮನವದು ನನ್ನದು
ನಿನಗಾಗಿಯೇ
ಇಂದೂ ಎಂದೂ ಮುಂದೂನೂ
ಭಕ್ತಿಯಲಿ ಸುಗಿಪೆ..
@ಪ್ರೇಮ್@
16.07.2020

1490. ಜೋಗುಳದ ಹಾಡು

ಜೋಗುಳ ಹಾಡು

ಲಾಲಿ ಲಾಲಿ ಜೋಜೋ ಕಂದ
ನನ್ನ ಮುದ್ದು ಬಂಗಾರ ಅಂದ...
ಕಣ್ಣು ಮುಚ್ಚಿ ನಗುವುದಾನಂದ
ಕರವ ಹಿಡಿದ ಆಟಾನೇ ಚಂದ..
ಲಾಲಿ..ಲಾಲಿ.ಜೋ.ಜೋ.ಕಂದ

ಕೆಂಪು ತುಟಿಯ ಮೇಲೆ ಖುಷಿಯು
ಅಮ್ಮ ಬರಲು ಕಾಣೋ ತವಕವು
ಮುಗ್ಧ ನಗುವ ಮಿಂಚಿನ ಸೆಳೆತವು
ಸ್ನಿಗ್ಧ ಮನದ ರೋಚಕ ಒಲವು
ಲಾಲಿ.ಲಾಲಿ..ಜೋ.ಜೋ.ಕಂದ

ಅಳುವ ನಾಟಕದ ಮುದ ಚೆಲುವು
ಊಟ ಮಾಡದೆ ಓಡೋ ಹಠವು
ಎದ್ದು ಬಿದ್ದು ನಡೆಯೋದು ತಾಳ್ಮೆಯು
ಗುದ್ದು ಮುದ್ದು ಎಲ್ಲಾ ಪ್ರೀತಿಯು
ಲಾಲಿ ಲಾಲಿ..ಜೋ.ಜೋ ಕಂದ

ಅಮ್ಮನಂತೆ ಪ್ರೀತಿಯ ಗುಣವು
ಅಪ್ಪನಂತೆ ಕೋಪದ ದೃಷ್ಠಿಯು
ಚಂದ್ರನಂಥ ಹೊಳೆವ ಆ ಮೊಗವು
ಸೂರ್ಯನಂತೆ ಬೆಳಕೀವ ಆ ನಗುವು
ಲಾಲಿ ಲಾಲಿ ಜೋ ಜೋ ಕಂದ
@ಪ್ರೇಮ್@
20.07.2020

ಶನಿವಾರ, ಜುಲೈ 11, 2020

1489. dance-2

ಸಿನಿಮಾ ಸ್ಪರ್ಧೆಗೆ

1. ನನ್ನ ಚೆಲುವೆ..

ನನ್ನ ರಾಧೆಯ ಕಡೆಗೆ ನಾನ್ಯಾವಾಗ ಸಾಗುವೆ
ಕಣ್ಣ ಭಾಷೆಯ ಓದಲು ಅವಳ ತಡೆವೆ..

ಮೌನದರಮನೆಯ ಬಿಚ್ಚಿ ಮುದ್ದಾಡಲು
ಎಂದು ತೋರುವೆ ಪ್ರೀತಿಯ ಒಡಲು
ಬಾರೇ ನನಗಾಗಿ..ಬಾಬಾಬಾಬಾ.. ಬಾರೇ ನನಗಾಗಿ
ಮುದ್ದಿನ ಚೆಂಗುಲಾಬಿಯೇ..ಪ್ರೀತಿಯ ತೋರೇ ನನಗಾಗಿ..
ನನ್ನ ಜೀವವೆ ನಿನಗಾಗಿ ...
ನಿನ್ನ ಒಲವಿನ ಕರೆಗಾಗಿ..
ಜೀವದ ಖನಿಗಾಗಿ..//ನನ್ನ//

ತಲ್ಲಣವೀಗ ಮನದಲಿ ಏನೋ
ಪುಳಕವು ನಿನ್ನಯ ದರ್ಶನವೂ
ಪಲ್ಲಕ್ಕಿಯಲಿ ಕೂರಿಸಿ ಒಯ್ಯುವೆ
ನೃತ್ಯವನಾಡುತ  ನಗಿಸುತ ಕಾಯುವೆ
ಮನಮೋಹಿನಿಯೇ.. ಶೃಂಗಾರ ರತಿಯೇ..
ಬಾಬಾಬಾಬಾ ಗಾನದ ಸುಧೆಯೇ
ಅಂಬರ ಚುಂಬಿತ ಪ್ರೇಮವೇ
ಸಂಪಿಗೆ ಮೊಗದ ಸುಮವೇ..
ಹುಲ್ಲಿನ ಪಚ್ಚೆಯ ಹಿತವೇ..
ನನ್ನೊಲವೇ..ನನ್ನ ಜೀವವೇ.
.//ನನ್ನ//

ಮುತ್ತಿನ ರಥದಲಿ ಹೊತ್ತೊಯ್ಯುವೆ ನಿನ್ನ
ಕತ್ತಿನ ಸರದಲಿ ನಾನಿರುವೆನು ಚಿನ್ನ
ಹತ್ತಿಯ ತೂಕದ ಮಲ್ಲಿಗೆ ಎನ್ನ
ತಂಬೆಲರೇ..ಬಾಬಾಬಾಬಾ..
ತರುಲತೆಯೇ..ಬಾಬಾಬಾಬಾ
ಹುಣ್ಣಿಮೆಯೇ...ಬಾಬಾಬಾಬಾ
ಕಣ್ಮಣಿಯೇ..ಬಾಬಾಬಾಬಾ..
ನನ್ನಾಸೆಯ ಹೂವೇ...
//ನನ್ನ/
@ಪ್ರೇಮ್@
08.07.2020

1488. duet

2. Duet Song

ಹಿ- ಕ್ಯಾರೇ ದೇಖ್ ತಾಹೇ..ಆ..ಆ..
ಶಿ-ಕ್ಯೋರೇ.. ಪೂಛ್ ತಾಹೇ..ಆ..ಆ..
ಹಿ-ಪ್ರೇಮ ಲೋಕ ತೆರೆದಿದೆ ನಿನ್ನಿಂದ ಇಂದು..
ಶಿ-ಪ್ರೀತಿ ಕಣ್ಣ ತೆರೆಸಿದೆ ನಿನ್ನಿಂದ ಇಂದೂ...

ಹಿ-ರಾಣಿ ನಿನ್ನ ಮನದ ಮಾತು ಬಿಚ್ಚಿ ಹೇಳ ಬೇಕು..
ಶಿ-ಪುನೀತ್, ಪ್ರಭುದೇವನೊಡನೆ ನೃತ್ಯ ಮಾಡಬೇಕು..
ಹಿ-ಅಷ್ಟೆ ತಾನೆ ಧರೆಗೆ ಸ್ವರ್ಗ ಇಳಿಸಬಲ್ಲೆ ನಾನು..
ಶಿ-ಪ್ರೀತಿ ನನ್ನ ಇಷ್ಟ ನೀನು ಕುಣಿಯಲಾರೆಯೇನು?

ಹಿ-ಹಾಡೋಣಾ...ಕುಣಿಯೋಣಾ..ಮನಬಿಚ್ಚಿ.....ನಲಿಯೋಣಾ.. ಆ..ಆ..
ಶಿ- ವರುಣಾನಾ..ಕೇಳೋಣಾ.. ಮಳೆಹನಿಯಾ..ಕರೆಯೋಣ..ಆ..ಆ..
ಹಿ-ಗರಿಬಿಚ್ಚಿ ಹಾರೋಣ, ಕಡಲಾಚೆ ರಮಿಸೋಣ
ಶಿ- ಮನದಿಚ್ಛೆ ತಣಿಸೋಣ, ನಲಿಯುತ್ತಾ ಸಾಗೋಣ..

ಹಿ- ನಮ್ಮಾಸೆಗಾರು ಅಡ್ಡಿಯೋ....ಓ..ಓ..
ಶಿ-ಸೂರ್ಯ ಚಂದ್ರರ ಪಾತ್ರವೋ...ಓ..ಓ..
ಹಿ- ಅಭಯವ ನೀಡುವೇ.. ಕೇಳೆಲೆ ಕೋಮಲೆ..
ಶಿ- ನನ್ನ ಮನದ ಬಯಲೊಳು ನೀನೇ ನನ್ನ ಮಹಲೇ..

ಹಿ-ಮಹಾರಾಣಿಯು ನೀನು..ಮಹಾರಾಜನು ನಾನೂ..
ಶಿ- ಪ್ರೀತಿ ಸಾಗರದಲ್ಲಿ....ತೇಲೋ ನೌಕೆಯು ನಾನೂ..
ಹಿ-ಒಂದಾಗಿ ಕಲೆತು ಹಾಲಂತೆ ಬೆರೆತು ನಾನೇ ನೀನು ನೀನೇ ನಾನು ಆಗೋಣ ಬಾರೇ...
ಶಿ-ನಾವು ಸಾಗೋಣ ಬಾರೋ..
ಆ..ಆ..ಆ..ಆ..
@ಪ್ರೇಮ್@
08.07.2020

1487. ಡ್ಯಾನ್ಸ್-patho

3.Patho

ಸಾವಿರ ವರುಷಕೂ ಸಾವಿರದ ಪ್ರೀತಿಯು ಇದೆಯೇನೋ ದೇವಾ...
ಸಾಯುತ ಬದುಕುವ ಬಾಳಿನ ಆಟಕೆ ಇಂದು ಅಣಿಯೇನೋ ದೇವಾ..

ಮನದಲಿ ನೋವಿನ ಬೀಜವ ಬಿತ್ತಿ ನೀ ಎಲ್ಲಿರುವೇ..
ಕಾಣದೆ ನನ್ನಯ ತನುವಿನ ದು:ಸ್ಥಿತಿ ಮಾಯವೆ ಆಗಿರುವೇ..
ಅವಳನ್ಯಾಕೆ ಕೊಟ್ಟೆ ಬದುಕ ಮೂಟೆಯಲಿ ಇಟ್ಟೇ..
ರಥಕೆ ಚಕ್ರವ ಕೊಟ್ಟು ಹೀಗೆ ಕಿತ್ಕೊಂಡ್ ಬಿಟ್ಟೆ..
ಇದು ನ್ಯಾಯವೇ..ಹೇಳು ಭಾವವೇ..
ಮನದೆಲ್ಲೆಡೆ ನೋವ ತಾಳಿರುವೇ...ಏ..ಏ..ಏ..(ಅಳುವಿನ ಬಿಕ್ಕಳಿಕೆ)

ಕಾವನೆ ಉದಯಿಸು ಭೂಮಿಯಲಿಳಿದು
ನೋವನು ಅನುಭವಿಸು ಪ್ರೀತಿಯ ಕಳೆದು..
ತುಂಡರಿಸುತ ಮನವ ಬಾಳುವೆ ಕಲಿಸು
ನೀನಿರೆ ಹೇಳುತ ಬೇಸರ ನೀಗಿಸು..
ದೇವನೇ..ಕಾವನೇ..ನೋಡೊನೀ..ಯಾತನೇ...ದಾತನೇ..ಸಂಜಾತನೇ..
(ನೋವಿನ ಬಿಕ್ಕಳಿಕೆ..)

ನಡೆದುದ ಮರೆಯಲಿ ಹೇಗೆ ನಾನು
ನಡು ನೀರಲಿ ಕೈಬಿಟ್ಟು ಹೋದೆಯ ನೀನು
ಭಯವೂ.. ಅಧೈರ್ಯವೂ..ಬೇಸರವೂ.. ಅಸಹಾಯಕವೂ.. ನೋವೂ.. ಗಾಯವೂ
ದೇವನೆ ಕೇಳು ನನ್ನಯ ವಚನವ
ಮನದಲಿ ಬಿಚ್ಚಿದ ನೋವಿನ ರಕುತವ
ನಾನೇನನು ಮಾಡಲಿ ಕುರ್ಚಿಯ ಹಿಡಿತವು
ನೋಡದೆ ಹೋದಳು ನೀಡದೆ ವಿನಯವ
ನೀನೇ ನನಗೇ..ಕಾವಲುಗಾರ
ಬರಬೇಕೆಂದೂ..ಜೊತೆಯಲಿ ದೂರ..ದೂರ..ದೂರ..ದೂರಾ..
@ಪ್ರೇಮ್@
08.07.2020

1486. ಡ್ಯಾನ್ಸ್

4.ಟೈಟಲ್ ಟ್ರ್ಯಾಕ್..

ಡ್ಯಾನ್ಸ್ ಡ್ಯಾನ್ಸ್ ತರರರರ ಡ್ಯಾನ್ಸ್...ತಳಳಳ ಡ್ಯಾನ್ಸ್...

ತಳುತಳುಕುತ ಬಳುಬಳುಕುತ
ಕುಣಿಕುಣಿಯುತ ಮಾತೆ ಮರೆಯುತ
ಬಾರೋ...ಜಾಣಾ..ಗರಿಗೆದರಿ ಕೆದರಿ ತರತರದಿ ಧರಧರನೆ ಕುಣಿಯುವಾ...
ಮುರಿಮುರಿದು ತನುವ ಮನದಿ ಕುಣಿದು ನಲಿದು ಮೆರೆದು ದಣಿದು ತಣಿಯುವಾ .

ಮನತನುವಲಿ ಕಣಕಣದಲಿ ತಲೆತುದಿಯಲಿ ಕಾಲ್ ಬೆರಳಲಿ
ಕಣ್ಣಿನಾಳದ ತುಂಟ ಪ್ರೀತಿಯ ತುದಿತುದಿಯಲಿ
ನಲಿನಲಿಯುತ ಚಳಿ ಬಿಡಿಸುತ ಕಳಕಳಿಯಲಿ ತಳುಬಳುಕುತ..
ಬಳಿಯಲೇ..ಸಾಗುತಾ.. ಮಾತಲೇ.. ಹಾಡುತಾ..

ಗಿರಗಿರನೆ..ಸರಸರನೇ.. ತರತರನೇ.. ಹರಿಹರನೆನುತಾ..
ಬಿರಬಿರನೇ..ಧರಧರನೇ..
ಮರಮರದಲಿ..ಕರಕರದಲಿ..
ಸರೀಸೃಪದಂತೆ... ಮದಕರಿಯಂತೆ..
ನಲಿ ನಲಿ ನಲಿ ನಲಿ ನಲಿ ನಲಿದಾಡುತಲೀ...

ಗೆಜ್ಜೆ ಕಟ್ಟದೆಯೆ ಕಾಲ ಕುಣಿಸುತಾ
ಹೆಜ್ಜೆ ಎತ್ತದೆಯೇ ಮೇಳ ಸಾಗುತಾ..
ಪ್ರಜ್ಞೆ ಇಲ್ಲದೆಯೇ ನಾಟ್ಯವಾಡುತಾ..
ಸಂಜೆಯಾದುದೇ ತಿಳಿಯದೆ ಸಾಗುತಾ..
ತರತರನೇ..ಗಿರಗಿರನೇ.. ಕುಣಿಯುವಾ..
@ಪ್ರೇಮ್@
08.07.2020

1485.. ಹಣೆ ಬರಹ

ಹಣೆಬರಹ

ರಾಮನ ನೋಡಿ ಕೃಷ್ಣನ ನೋಡಿ
ಮೋಡಿಯ ಜೀವನ ಸಿಗುವುದೆ ಹಾಡಿ?

ಮನದಲಿ ನೋವು ಹೃದಯದಿ ಕಾವು
ರಾಜನೆ ಆದರು ಕಾಡಿನ ವಾಸವು
ರಾಕ್ಷಸ ಕುಲಕೆ ಅವನೇ ಗುರಿಯು
ಪ್ರತಿ ಹೆಜ್ಜೆಯಲೂ ಸಾವಿನ ಭಯವು..

ಪ್ರೀತಿಯ ರಾಧೆಯು ಸಿಗಲೇ ಇಲ್ಲ
ಪಾಪದ ಮಡದಿಯ ಕಾಡಿಗೆ ಅಟ್ಟಿ
ಲೋಕದ ಕಣ್ಣಿಗೆ ರಾಜನೇ ಆದರೂ
ವನವಾಸದೆ ಜೀವನ ಬೀಳುತ ಕಣ್ಣೀರು!

ಸಂತಸ ದು:ಖವ ನೋಡಲೇ ಬೇಕು
ಮನಪಜನ ಜೀವನ ವ್ಯಯಿಸಲು ಸಾಕು
ಪ್ರೀತಿಗೆ ಮೋಸ, ನಂಬಿಕೆ ದ್ರೋಹವು
ಮನದಲಿ ಸುಡುಸುಡು ಮೊಗದಲಿ ನಗುವು...

ಸಿರಿತನ ಬಡತನ ಸಂತಸಕ್ಕಿರದು
ಪ್ರೀತಿ ಪ್ರೇಮವು ಮನಸಿಗೆ ಸಿಗಲು
ಧನಿಕನು ಅವನೇ ನೆಮ್ಮದಿ ಇರುವವ
ಪರರ ಸೇವೆಯಲಿ ಸರ್ವಸ್ವವ ಪಡೆದವ..

ಭೂಮಿಗೆ ಬರಲು ದೇವನ ಪ್ರೀತಿಯು
ಧರೆಯಲಿ ಎಂದೂ ಅಮ್ಮನ ಪ್ರೀತಿಯು
ಸಿಗುವುದು ಗೆಳೆತನ ಹಲವರ ನೀತಿಯು
ಸಂತಸ ಪಡೆಯಲು ಬೇಕದು ಮನವು..
ಜೊತೆಯಲಿ ಶ್ರೀಹರಿ ನೀಡುವ ವರವೂ..
@ಪ್ರೇಮ್@
10.07.2020

1484. ಶರ ಷಟ್ಪದಿ

ಆಹ್ಲಾದ(ಶರ)

ವರುಣನ ಕೃಪೆಯದು
ಕರುಣೆಯ ಬೀರಿದೆ
ತರುಲತೆ ನಗುವಲಿ ನಾಟ್ಯವಿದೆ।
ಝರಿಯದು ಹರಿಯುತ
ವರವಾಗುತ ದಿನ
ಹರನನೆ ನೆನೆಯುತ ಸಾಗುತಿದೆ॥

ಭರದಲಿ ಬಾಗಿದೆ 
ಗಿರಗಿರ ತಿರುಗಿದೆ
ಕರದಲಿ ಪುಷ್ಪವ ಹಿಡಿದಂತೆ।
ತರತರ ಬಣ್ಣದ 
ಭರವಸೆ ತಂದಿದೆ
ಸಿರಿಯನು ಬಳಿಯಲಿ ಹಿಡಿದಂತೆ॥

ಪರಿಸರ ಶುದ್ದಿಯು
ಉರಿಸದು ಮನವನು
ಹರಸುತ ಸರ್ವರ ಬೇಸರವ।
ಪರಿಪರಿಯಲಿ ಕಸ 
ಸುರಿಯುತ ಜನಗಳು
ಪೊರೆವಗೆ ಗದರುತ ಸಾಗುವರು॥
@ಪ್ರೇಮ್@
04.07.2020

ಶುಕ್ರವಾರ, ಜುಲೈ 3, 2020

1483. Why So

Why so

She has dedicated
Hundred percent of
Her life to him
With all adorness
With no any expectations
With no dependance
With no future hurtings
With no other intensions
With no family bondings

With only pure heart 
With only caring
With some needs of time
With all feelings
With self responsibility
With all  confidence
With lots of cherished moments
With plenty of memories
With every minutes pleasure

With only shining eyes
With only smiling face
With only showing care
With only loving heart
With only positive mind
Wirh only golden thoghts.

Yet yet yet ....
Why that single line 
Of doubtfulness
Passed once in the mind
So disgracefully..
Unbelievable..
But true..
Why why why
Without reason..
It was serious, truth
But how and why..

What is the problem
With such a lovely heart?
With such a pure mind?
With that milky white smile?
With softy silky mood..??
@PREM@
04.07.2020