ಭಾವಗೀತೆ
ಕೃಷಿಯನು ಮೆರೆಸೋಣ
ಕತ್ತಿಯ ಹಿಡಿದು ರುಮಾಲು ಸುತ್ತಿ
ಗದ್ದೆಗೆ ಹೋಗೋಣ ನಾವು...
ಗದ್ದೆಗೆ ಹೋಗೋಣ...
ಹಾಡನು ಹಾಡುತ ಹಸಿರಿಗೆ ನಮಿಸುತ
ಪೈರನು ಕೊಯ್ಯೋಣ..ನಾವು
ಕಟಾವು ಮಾಡೋಣ//ಪ//
ಆಹಾರ ಬೆಳೆಸಿ ಆರೋಗ್ಯ ಉಳಿಸುವ
ಕಾರ್ಯಕೆ ಸಾಗೋಣ ಕೃಷಿಯ..
ಕಾರ್ಯಕೆ ಸಾಗೋಣ
ಅಣ್ಣ ಅಕ್ಕ ಬನ್ನಿರಿ ಎಲ್ಲರೂ
ಕೃಷಿಯನು ಉಳಿಸೋಣ
ರೈತನೆ ದೇಶದ ಬೆನ್ನೆಲುಬೆಂದು
ಸಹಾಯ ಮಾಡೋಣ... ರೈತಗೆ
ಸಹಾಯ ಮಾಡೋಣ...//೧//
ಪೈರನು ಬಡಿಯುತ ಭತ್ತವು ಬೀಳಲು
ರಾಶಿಯ ಮಾಡೋಣ ನಾವು...
ರಾಶಿಯ ಮಾಡೋಣ
ಕೈಗಳು ಸೇರಲು ಕೆಲಸವು ಹಗುರ
ಒಂದಾಗಿ ದುಡಿಯೋಣ
ನಾಡಿಗೆ ಅನ್ನವನೀಯುವ ಕಾರ್ಯವ
ಸರ್ವರೂ ಮಾಡೋಣ..ನಾವೆಲ್ಲಾ
ಸರ್ವರೂ ಮಾಡೋಣ..//೨//
ಜೈ ಜೈ ಘೋಷವ ಹಾಡುತ ನಾವು
ಒಟ್ಟಾಗಿ ಬಾಳೋಣ ನಾವು...
ಒಟ್ಟಾಗಿ ಬಾಳೋಣ
ಭಾರತ ಮಾತೆಯ ಮಕ್ಕಳು ಎನುವ
ಭಾವವ ಹೊಂದೋಣ
ಜಾತಿ ಮತ್ಸರ ದೂರವೇ ಇರಿಸಿ
ಕೃಷಿಯನು ಮೆರೆಸೋಣ...ನಾಡಿನ
ರೈತಗೆ ನಮಿಸೋಣ..//೩//
@ಹನಿಬಿಂದು@
03.11.2025
ಬುಧವಾರ, ನವೆಂಬರ್ 26, 2025
ಭಾವಗೀತೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ