ಆಹ್ಲಾದ(ಶರ)
ವರುಣನ ಕೃಪೆಯದು
ಕರುಣೆಯ ಬೀರಿದೆ
ತರುಲತೆ ನಗುತಲಿ ನಾಟ್ಯವಿದೆ..
ಚರಾಚರ ತನ್ನ
ಮರದಲು ವರವನು
ಹರನನೆ ನೆನೆಯುತ ಸಾಗುತಿದೆ .
ಭರದಲಿ ಬಾಗಿದೆ
ಗಿರಗಿರ ತಿರುಗಿದೆ
ಕರದಲಿ ಪುಷ್ಪವ ಹಿಡಿದಂತೆ..
ತರತರ ಬಣ್ಣದ
ಭರವಸೆ ತಂದಿದೆ
ಮನಸನು ಬಳಿಯಲಿ ಹಿಡಿದಂತೆ..
ಪರಿಸರ ಶುದ್ದಿಯು
ಉರಿಸದು ಮನವನು
ಹರಸುತ ಸರ್ವರ ಬೇಸರವ...
ಪರಿಪರಿಯಲಿ ಕಸ
ಸುರಿಯುತ ಜನಗಳು
ಪೊರೆವವಗೆ ಗದರುತ ಸಾಗುವರು..
@ಪ್ರೇಮ್@
04.07.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ