ಶನಿವಾರ, ಆಗಸ್ಟ್ 1, 2020

ಆಹ್ಲಾದ-ಶರ ಷಟ್ಪದಿ

ಆಹ್ಲಾದ(ಶರ)

ವರುಣನ ಕೃಪೆಯದು
ಕರುಣೆಯ ಬೀರಿದೆ
ತರುಲತೆ ನಗುತಲಿ ನಾಟ್ಯವಿದೆ..
ಚರಾಚರ ತನ್ನ 
ಮರದಲು ವರವನು
ಹರನನೆ ನೆನೆಯುತ ಸಾಗುತಿದೆ .

ಭರದಲಿ ಬಾಗಿದೆ 
ಗಿರಗಿರ ತಿರುಗಿದೆ
ಕರದಲಿ ಪುಷ್ಪವ ಹಿಡಿದಂತೆ..
ತರತರ ಬಣ್ಣದ 
ಭರವಸೆ ತಂದಿದೆ
ಮನಸನು ಬಳಿಯಲಿ ಹಿಡಿದಂತೆ..

ಪರಿಸರ ಶುದ್ದಿಯು
ಉರಿಸದು ಮನವನು
ಹರಸುತ ಸರ್ವರ ಬೇಸರವ...
ಪರಿಪರಿಯಲಿ ಕಸ 
ಸುರಿಯುತ ಜನಗಳು
ಪೊರೆವವಗೆ ಗದರುತ ಸಾಗುವರು..
@ಪ್ರೇಮ್@
04.07.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ