ಮಂಗಳವಾರ, ನವೆಂಬರ್ 8, 2022

ಗಝಲ್

ಗಝಲ್
ತನ್ನ ಉದ್ಧಾರವಾಗಬೇಕಿದೆ, ಆತ್ಮ ವಿಮರ್ಶೆ ಮಾಡಬೇಕಿದೆ ಮನವೇ
ಸರ್ವ ಬಂಡೆಗಲ್ಲುಗಳ ನಡುವೆ ನೀರಾಗಿ ಹರಿಯಬೇಕಿದೆ 
ಮನವೇ

ಬಿರುಗಾಳಿಗೆ ಎದುರಾಗಿ ಸಾಗಬೇಕಿದೆ, ತರಗೆಲೆಯ ತೆರದಿ ಜಾರುತ್ತಾ ಬೀಳುತ್ತಾ, ಓಡುತ್ತಾ
ಸರ್ವರ ಜೊತೆಗೆ ಒಂದಾಗಿ ಬೆರೆತು ಬಾಳ ಬೇಕಿದೆ ಮನವೇ..

ಅಕ್ಕರೆಯ ಸಕ್ಕರೆಯು ಒಂದೆರಡು ದಿನಕ್ಕೆ ಮಾತ್ರ ಮೀಸಲು
ಅತಿಯಾದರೆ ಅಮೃತವೂ ವಿಷವೇ, ತಿಳಿಯಬೇಕಿದೆ ಮನವೇ

ಮೋಸ, ವಂಚನೆ, ಹಗೆ, ಹೊಟ್ಟೆಕಿಚ್ಚಿನ ಜಾಲತಾಣಗಳಿಹವು
ಬದುಕ ಮೊಬೈಲ ಆ್ಯಪ್ ಗಳನು ಬಳಸುವುದ ಅರಿಯಬೇಕಿದೆ ಮನವೇ..

ಕಣ್ಣು ಕೋರೈಸುವ ಕಡೆ ಎಲ್ಲಾ ಜಗಮಗ ಬೆಳಕು, ತಳುಕು, ಮೆಲುಕು
ನೂಕುವರು ಪಾತಾಳಕೆ ಬಡವನ, ಸೆಟೆದು ನಿಲ್ಲಬೇಕಿದೆ ಮನವೇ..

ಪ್ರೀತಿ, ಸ್ನೇಹ, ಜಾಣ್ಮೆಯಿಂದಲಷ್ಟೆ ಗೆಲ್ಲಬಹುದು ಹೃದಯಗಳ ಧರೆಯಲಿ
ಪ್ರೇಮ ಭರಿತ ಹೃದಯವನು ಸರಿಯಾಗಿ ಓದ ಬೇಕಿದೆ ಮನವೇ..
@ಹನಿಬಿಂದು@
09.11.2022

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ