ಬುಧವಾರ, ನವೆಂಬರ್ 3, 2021

ವರದಿ

*ಸಾಮರಸ್ಯದ ಬೀಜ ಬಿತ್ತುವ ಇಂತಹ ವಿದ್ಯಾರ್ಥಿ ಸಂಘಟನೆಗಳು ಸಮಾಜಕ್ಕೆ ಮಾದರಿ : ಶಿಕ್ಷಕಿ ಪ್ರೇಮಾ ಉದಯ ಕುಮಾರ್‌*

ಪಾಣೆಮಂಗಳೂರು ಸಲ್-ಸಬೀಲ್ ವಿದ್ಯಾರ್ಥಿ ಸಂಘಟನೆ ಆಯೋಜಿಸಿದ ಸಲ್-ಸಬೀಲ್  ಎಕ್ಸಲೆನ್ಸ್ ಪ್ರಶಸ್ತಿಗೆ ಆಯ್ಕೆಯಾದ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇಲ್ಲಿನ ಆಂಗ್ಲ ಭಾಷಾ ಶಿಕ್ಷಕಿ ಪ್ರೇಮಾ ಉದಯ್ ಕುಮಾರ್ ರವರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಸುಳ್ಯ ಐವರ್ನಾಡು ಶಾಲೆಯಲ್ಲಿ ಇತ್ತೀಚೆಗೆ ನಡೆಸಲಾಯಿತು.

ಪ್ರಶಸ್ತಿ ಪಡೆದು ಮಾತನಾಡಿದ ಅವರು "ಈಗ ಮೊಬೈಲ್ ಜಾಲ ತಾಣಗಳಲ್ಲಿ ಅವಕಾಶಗಳು ಹೆಚ್ಚು, ಅದನ್ನು ಸರಿಯಾಗಿ ಬಳಸಿಕೊಂಡು ತಮ್ಮ ಹವ್ಯಾಸಗಳನ್ನು ಹೆಚ್ಚಾಗಿ ವೃದ್ಧಿಸಿಕೊಳ್ಳಬಹುದು. ಸಾಮರಸ್ಯದ ಬೀಜ ಬಿತ್ತುವ ಇಂತಹ ಯುವ ಸಂಘಟನೆಗಳೇ ಸಮಾಜಕ್ಕೆ ಬೇಕಾದುದು ಹಾಗೂ ತನಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಬರೆದೆ ಎನ್ನುತ್ತಾ, ಭಾರತದ ಸಾಮರಸ್ಯದ ಪರಂಪರೆಯನ್ನು ಭವಿಷ್ಯದಲ್ಲಿ ಭದ್ರಗೊಳಿಸುವ ಬಗೆ"  ಈ ವಿಷಯ ತುಂಬಾ ಪ್ರಸ್ತುತ ಹಾಗೂ ಸಕಾಲಿಕ, ಬರಹಗಾರರು ಇಂತಹ ಒಳ್ಳೆಯ ವಿಷಯಕ್ಕೆ ಸಮಾಜದಲ್ಲಿ  ಸಂದೇಶ ನೀಡಲು ಸಹಾಯಕ ಹಾಗೂ ಅದು ಈಗಿನ ಕಾಲಕ್ಕೆ ಅಗತ್ಯ ಕೂಡಾ, ಈ ಅವಕಾಶವನ್ನು ಒದಗಿಸಿದ ಸಂಘಟನೆಗೆ ಕೃತಜ್ಞತೆ ಅರ್ಪಿಸಿದರು.


  "ಸಲ್ - ಸಬೀಲ್ ಎನ್ನುವ ಈ ವಿದ್ಯಾರ್ಥಿ ಸಂಘಟನೆಯು ಯುವ ಮನಗಳ ವೇದಿಕೆಯಾಗಿದ್ದು , ಲೇಖನ ಸ್ಪರ್ಧೆಗಳಂತಹ ಉತ್ತಮ ಕಾರ್ಯಗಳನ್ನು ಮಾಡುತ್ತಾ ವಿದ್ಯಾರ್ಥಿಗಳು ಹಾಗೂ ಬರಹಗಾರರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಸಂತಸ ತಂದಿದೆ" ಎಂದು ಈ ಸಂದರ್ಭದಲ್ಲಿ ಮಾತನಾಡಿದ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಸುಳ್ಯ ಇಲ್ಲಿನ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಸೂಫಿ ಪೆರಾಜೆ ಅವರು ಮೆಚ್ಚುಗೆಯ ವ್ಯಕ್ತಪಡಿಸಿದರು.

 ಸಂಘಟನೆಯ ಕಾರ್ಯಗಳ ಬಗ್ಗೆ ತಿಳಿದು ಹರ್ಷಿತರಾದ ಉಪನ್ಯಾಸಕ ಶ್ರೀಯುತ ಚಾರ್ಲ್ಸ್ ರವರು ಮಾತನಾಡಿ "ಈ ಸಂಘಟನೆಯು ಇನ್ನೂ ಉತ್ತಮ ಅವಕಾಶಗಳನ್ನು ಸಮಾಜಕ್ಕೆ ನೀಡಲಿ "ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ವಿಭಾಗದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ಸಲ್ ಸಬೀಲ್ ಸಂಸ್ಥೆಯ ಪದಾಧಿಕಾರಿಗಳಾದ ನಜೀಬ್ ಬೋಗೋಡಿ, ಜಾಫರ್  ಬೋಗೋಡಿ, ಜಮಾಲ್ ಆಲಡ್ಕ, ರಾಶಿದ್ ಬೋಗೋಡಿ ಮೊದಲಾದವರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಗಣಿತ ಶಿಕ್ಷಕರಾದ ನಾರಾಯಣ ಬಿ. ಅವರು ವಂದಿಸಿ ಸಲ್-ಸಬೀಲ್ ಸಂಸ್ಥೆಯ ಉಪಾಧ್ಯಕ್ಷರಾದ ಉಬೈದ್ ಬೋಗೋಡಿ ನಿರೂಪಿಸಿದರು.

ಇದೇ ಸಂದರ್ಭ ಶಾಲೆಗೆ ನೆನಪಿನ ಕಾಣಿಕೆ ನೀಡಿ ಸಂಘಟನೆಯ ಪರವಾಗಿ ಗೌರವಿಸಲಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ