ಶನಿವಾರ, ನವೆಂಬರ್ 18, 2023

It's happy

It's happy

It's happy to be with you friends in my life
Happy to be with you all my students
Immense pleasure to be with our children
Much love to be with cutest relatives

A great fun to be with worth colleague
Happiest moments to be with  parents
Lucky to be with experienced grand parents
Most delicious hours to be with classmates

Like to be with old school friends
Nice to meet our teachers 
Heaven to be with whole joint family
Hearty pleasure to be with small kids

Dignity to have a meeting with dignitaries
Love to be with lovely beautiful ladies
Long live our soul with happiness
Love to live this small and cute life.
@HoneyBindu@
19.11.2023




ಶುಕ್ರವಾರ, ನವೆಂಬರ್ 17, 2023

ಖುಷಿಯ ಕ್ಷಣ

ಖುಷಿಯ ಕ್ಷಣ

ಅಂದು ಮೊಬೈಲ್ ತೋರಿತು ಕರೆಯಿದೆ
ನಿಮ್ಮ ಮಗಳ ಕವನ ಚೆನ್ನಾಗಿದೆ
ಕವನಗಳ ಪಟ್ಟಿಯಲ್ಲಿ ಮೇಲಿದೆ 
ಇಮ್ಮಡಿಯಾದ ಸಂತಸ ಬಂದಿದೆ

ಮತ್ತೆ ಕಾತರ ಕಳವಳ ಆತಂಕದೊಳಗೆ 
ಮತ್ತೊಂದಿಷ್ಟು ಖುಷಿ ಖುಷಿ ಒಳಗೊಳಗೆ
ಕೆಲಸದ ಒತ್ತಡ ಅತ್ತಿತ್ತ ಓಡಾಟದ ನಡುವಿಗೆ
ಎಲ್ಲವನ್ನೂ ಮರೆಯಿಸಿದ ದೀಪಾವಳಿ ಹಬ್ಬ

ಬಂಧುಗಳ ಒಟ್ಟು ಸೇರುವಿಕೆ ಅಲ್ಲಿ
ಅಡುಗೆ ಹರಟೆ ಮೆಲುಕು ಮಾತಲ್ಲಿ
ಜೊತೆಯೂಟ ನೆನಪು ಹಿರಿಯ ಮುಖಗಳಲ್ಲಿ
ಹಸಿರಿನ ಜೊತೆ ಬಾಲ್ಯದ ನೆನಪೂ ಜೊತೆಯಲ್ಲಿ

ಸಂಜೆ ಅಲ್ಲಿಂದ ಇಲ್ಲಿಗೆ ಓಡಾಟ
ಕೆಲಸದ ಒತ್ತಡದ ಗೋಳಾಟ
ಹಬ್ಬದ ರಜೆಯ ಮುಗಿದಾಟ
ಆಗಲೇ ಫಲಿತಾಂಶದ ಹುಡುಕಾಟ

ಬಂದೇ ಬಂತು ಐದು ಗಂಟೆಗೆ ಲಿಂಕು
ಮಕ್ಕಳ ಜಗಲಿ ಪತ್ರಿಕೆಯ ಕಡೆಯಿಂದ
ಹೆದರಿ ಹೆದರಿ ಜೋರಾದ ಎದೆ ಬಡಿತ
ತೆರೆಯುತ್ತಲೇ ಮೊದಲ ಪುಟದಲ್ಲಿ 
ಹಾ, ಇಲ್ಲ, ಬೇರೊಂದು ಸುಂದರ
ಪುಷ್ಪದಂತಹ ಮುಗುಳುನಗೆಯ ಹೊತ್ತ ಮಗು

ನೋಡಲು ಆನಂದ, ಮುಂದಿನ ಪುಟ
ಅದೋ ಅಲ್ಲಿತ್ತು, ಮೊದಲ ಸ್ಥಾನದ
ಮತ್ತೊಂದು ಹೆಸರು ಮಗಳದೆ ಆಗಿತ್ತು
ಅದೊಂದು ಸಡಗರ, ಹಬ್ಬ, ಆನಂದ

ಕಾತರ ಖುಷಿ ಕಣ್ಣೀರು ಒಂದಾದ ಕ್ಷಣ
ಮರೆಯಲಾರದ ಅಮೃತ ಘಳಿಗೆ
ಹರ್ಷ, ಕುಣಿಯುವಷ್ಟು, ಲೋಕದ ಸಿಹಿ
ಎಲ್ಲಾ ಒಮ್ಮೆಲೇ ತಿಂದಷ್ಟು ಹಿತ ಭಾವ

ಹೀಗೆಯೇ ಉಳಿಯಲಿ ಈ ಸಂತೋಷ
ಮಗನಾಗಲಿ ಮಗಳಾಗಲಿ ಉತ್ತಮ ಗುಣವಿರಲಿ
ಹೆಣ್ಣು ಮಗು ಎಂದವಗೆ ತಿಳಿಯಲಿ
ಹೆಣ್ಣು ಹೊನ್ನೆಂದು...
@ಹನಿಬಿಂದು@
15.11.2023


ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -210

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -210

      ನನ್ನೊಳಗಿನ ನಾನೆಂಬ ಗೆಳತಿಯ ಜೊತೆಗೆ ಒಂದಿಷ್ಟು ಹರಟೆ, ಮಾತು, ಸಿಂಹಾವಲೋಕನ, ಪರೀಕ್ಷೆ, ಸರಿ ತಪ್ಪುಗಳ ಲೆಕ್ಕಾಚಾರ, ಬೇಕಾದ್ದು ಬೇಡದರ ಚೂರು ಕ್ಲೀನಿಂಗ್.
ನಾನು ಸೌಮ್ಯ ಸ್ವರೂಪಿ. ಆದರೆ ಸ್ವಲ್ಪ ಹಠಮಾರಿ. ಯಾರಾದರೂ ನನ್ನನ್ನು ಡಿ ಗ್ರೇಡ್ ಮಾಡಿದರೆ ನಾ ಒಪ್ಪಿಕೊಳ್ಳಲಾರೆ. ಕಾರಣ ನನಗೆ ಒಳ್ಳೆ ಮನಸ್ಸಿದೆ, ಹೃದಯ ಚೆನ್ನಾಗಿದೆ. ಮನದ ಯಾವುದೇ ಮೂಲೆಯಲ್ಲಿ ದುರಾಸೆ, ಕಪಟ, ರೋಷ, ದ್ವೇಷಗಳು ಇಲ್ಲ. ಬಹಳ ಜನರಿಂದ ಆದ ನೋವಿದೆ. ಆ ನೋವಿಗೆ ನಾನು ದ್ವೇಷ ಸಾಧಿಸಲು ಹೋಗುತ್ತಿಲ್ಲ. ಬದಲಾಗಿ ಶಾಂತ, ನಿಶಬ್ದ, ಸೈಲೆಂಟ್ ಇವೇ ನನ್ನ ಅಸ್ತ್ರಗಳು.
  ಮಂಡೆ ಗಟ್ಟಿ ಇದೆ ಎಂದು ಬಂಡೆಗೆ ಗುದ್ದುವ ಸ್ವಭಾವ ನನ್ನದಲ್ಲ. ಎದುರಿನ ವ್ಯಕ್ತಿ ಹೇಗೆ ಇದ್ದಾನೆ, ಅವನ ಶಕ್ತಿಯ ಇತಿ ಮಿತಿಗಲೇನು ಎಂದು ಸದಾ ತಿಳಿಯುತ್ತೇನೆ. ಪರರ ಬಗ್ಗೆ ಅವರಿವರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಫಿಲ್ಮ್ ಆಕ್ಟರ್ಸ್, ಸೀರಿಯಲ್ ಆಕ್ಟರ್ಸ್, ಕ್ರಿಕೆಟರ್ಸ್, ಡಾನ್ಸರ್ಸ್ ಇಂಥವರ ಖಾಸಗಿ ಜೀವನದ ಬಗ್ಗೆ ಮಾತನಾಡಿ ಅವರನ್ನು ಡಿ ಗ್ರೇಡ್ ಮಾಡುವ ಸ್ವಭಾವ ನನಗಿಲ್ಲ. ಏಕೆಂದರೆ ಎಲ್ಲರೂ ಪರಿಸ್ಥಿತಿಯ ಕೈಗೊಂಬೆಗಳು. ಯಾರು ಯಾವ ಕಾಲದಲ್ಲಿ ಯಾರೊಡನೆ ಬದುಕುತ್ತಾರೆ, ಎಲ್ಲಿ ಬದುಕುತ್ತಾರೆ, ಎಲ್ಲಿ ಸಾಯುತ್ತಾರೆ ಅಂತ ಡಿಸೈಡ್ ಮಾಡಿರುವುದು ವಿಧಿ. ನಾನಲ್ಲ ನೀವಲ್ಲ. ಪ್ರತಿ ಒಬ್ಬರ ಮನೆಯ ದೋಸೆಯು ತೂತಿರುವಾಗ ಇನ್ನು ಯಾರ ಮನೆಯ ದೋಸೆಯ ಬಗ್ಗೆ ಮಾತನಾಡಲು ಇನ್ನೇನು ಹೊಸತು ಉಳಿದಿದೆ ಅಲ್ಲವೇ?
   ಮಾನವತೆ ಇದೆ ನನ್ನಲ್ಲಿ. ಕಷ್ಟಕ್ಕೆ ಕರಗುತ್ತೇನೆ, ಇಲ್ಲದೆ ಇದ್ದರೂ ಸಹಾಯ ಮಾಡಲು ಹೋಗಿ ನಾನೇ ಸಿಕ್ಕಿ ಬೀಳುತ್ತೇನೆ. ಮತ್ತೆ ಆ ಬಲೆಯಲ್ಲಿ ಒದ್ದಾಡಿ ನೋವು ತಂದುಕೊಳ್ಳುತ್ತೇನೆ. ಪರರನ್ನು ಪಾಪ ಎಂದು ಸಹಾಯ ದೃಷ್ಟಿಯಿಂದ ನೋಡಿ, ಸಹಾಯ ಮಾಡಲು ಹೋದಾಗ ಅವರೇ ನನ್ನ ಗುಂಡಿಗೆ ನೂಕಿ ಹೋಗುತ್ತಾರೆ. ಕಷ್ಟ ಪಟ್ಟು ಎದ್ದು ಬರುತ್ತೇನೆ. ಸಡನ್ ಕೋಪದ ಕೈಗೆ ಬುದ್ಧಿ ಕೊಡುವ ಗುಣ ನನ್ನದು ಅಲ್ಲ. ಯೋಚಿದುವೆ.
  ಸ್ವಲ್ಪ ಉಡಾಫೆ ಸ್ವಭಾವ. ಮಾಡಬೇಕಾದ ಕೆಲಸವನ್ನು ಲಾಸ್ಟ್ ಡೇಟ್ ವರೆಗೆ ಪೆಂಡಿಂಗ್ ಇಟ್ಟು ಕೊನೆ ಕ್ಷಣದಲ್ಲಿ ಮಾಡಲು ಹೋಗಿ ಎಡವಟ್ ಮಾಡಿಕೊಳ್ಳೋದು ನನ್ನ ಕೆಲಸ. ಅದು ಪರೀಕ್ಷೆಯೇ ಇರಲಿ, ಜೀವನ ಪರೀಕ್ಷೆಯೇ ಇರಲಿ, ಬೇರೆ ಕೆಲಸವೇ ಇರಲಿ. 
ಮತ್ತೆ ಬೇರೆಯವರು ನನ್ನ ಬಗ್ಗೆ ಕೆಟ್ಟದಾಗಿ ಕೆಟ್ಟ ಯೋಚನೆ ಮಾಡುತ್ತಾರೆ ಅಂತ ನಾನು ಅಂದುಕೊಳ್ಳುವುದಿಲ್ಲ. ಕಾರಣ ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಆಲೋಚಿಸುವುದಿಲ್ಲ ಮತ್ತು ನನ್ನ ಬಗ್ಗೆ ಕೆಟ್ಟದಾಗಿ ಆಲೋಚಿಸಲು ಏನೂ ಇಲ್ಲ, ನಾನು ಸೊಳ್ಳೆ,ಇರುವೆ,  ಜಿರಳೆ, ಜೇಡದ ಹೊರತು ಯಾವ  ಪ್ರಾಣಿ, ಪಕ್ಷಿ, ಕೀಟವನ್ನು ಕೂಡಾ ಸಾಯಿಸಿಲ್ಲ. ಮನುಷ್ಯರಿಗೆ ಅನ್ಯಾಯ ಮಾಡಲಿಲ್ಲ, ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ಮೋಸ ಮಾಡಲಿಲ್ಲ, ಪಾರ್ಶಿಯಾಲಿಟಿ ಅಂತೂ ಮಾಡಲೇ ಇಲ್ಲ. ಎಲ್ಲಾ ಮಕ್ಕಳಿಗೂ ತಿದ್ದಿ ಬುದ್ಧಿ ಹೇಳುತ್ತೇನೆ, ಕೇಳದೆ ಹಠ ಮಾಡಿದವನಿಗೆ ಸ್ವಲ್ಪ ಖಾರವಾಗಿಯೇ ಹೇಳುತ್ತೇನೆ. ಅದು ಅವನ ಒಳ್ಳೆಯದಕ್ಕೆ. ಎಲ್ಲರಿಗೂ ತುಂಬಾ ಪ್ರೀತಿ ಕೊಡುತ್ತೇನೆ ನನ್ನಲ್ಲಿ ಸಾಧ್ಯ ಆದಷ್ಟು. ನೋವು ಕೊಟ್ಟವರಿಗೂ ಕೆಟ್ಟದು ಬಯಸುವುದಿಲ್ಲ. ಬದಲಾಗಿ ದೇವರೇ ಅವರನ್ನು ನನ್ನ ಬದುಕಿನಿಂದ ದೂರ ಇರಿಸು ಎಂದು ಬೇಡುತ್ತೇನೆ.
  ದೇವರಲ್ಲಿ ನಾನು ಮನಸ್ಸಿಗೆ ಹಾಗೂ ದೇಹಕ್ಕೆ ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯ ಇಷ್ಟನ್ನು ಬಿಟ್ಟು ಮತ್ತೆ ಕೇಳುವುದು ಸರ್ವೇ ಜನಾಃ ಸುಖಿನೋ ಭವಂತು ಇಷ್ಟೇ. ಎಲ್ಲರೂ ಚೆನ್ನಾಗಿರಲಿ, ಎಲ್ಲರನ್ನೂ ಚೆನ್ನಾಗಿ ಇಡಿ ಎಂದು. ಮಾನವನ ಕ್ರೂರತೆ ತೊಲಗಲಿ ಎಂದು ಬೇಡುತ್ತೇನೆ. ರಾಕ್ಷಸ ಪ್ರವೃತ್ತಿ ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ, ಸಣ್ಣ ಮಕ್ಕಳ ಮೇಲೂ ಅತ್ಯಾಚಾರ ಇವುಗಳೆಲ್ಲ ಮನ ನೋಯಿಸುವ ಕಾರ್ಯಗಳು ಅಲ್ಲವೇ? ವಿಷ ಉಣಿಸಿ ಮಾನವ ಹಾಗೂ ಪ್ರಾಣಿ ಪಕ್ಷಿ ಮೀನುಗಳನ್ನು ಸಾಯಿಸುವುದು, ತಲ್ವಾರ್, ಚಾಕು ಚೂರಿ ಹಾಕಿ ಸಾಯಿಸುವುದು ಇವೆಲ್ಲ ಕರುಳು ಹಿಂಡುವ ನೋವುಗಳು. 
  ಎಲ್ಲಾ ಧರ್ಮಗಳ ತಿರುಳು ಒಂದೇ ಆಗಿದ್ದರೂ ಪರ ಧರ್ಮದವರನ್ನು ಹೀಗಳೆಯುವುದು ನನಗೆ ಆಗದ ವಿಷಯ. ಬೈಬಲ್, ಕುರಾನ್, ಗೀತೆ ಓದಿರುವ ನನಗೆ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಸಿಖ್ ಎಲ್ಲರ ಜೊತೆಗೂ ಗೆಳೆತನವೂ ಇದೆ. ಎಲ್ಲಾ ಜಾತಿ, ಎಲ್ಲಾ ಧರ್ಮದ ಜನರನ್ನು ಕೂಲಂಕುಷವಾಗಿ ಬರಹಗಾರ್ತಿಯ ಕಣ್ಣಲ್ಲಿ ನೋಡಿದಾಗ ನನ್ನ ಅರಿವಿಗೆ ಬಂದದ್ದು ಎಲ್ಲಾ ಜಾತಿ ಧರ್ಮಗಳಲ್ಲಿ ಜನರು ಒಳ್ಳೆಯವರೂ ಇದ್ದಾರೆ, ಕೆಟ್ಟವರು ಕೂಡಾ ಇದ್ದಾರೆ. ಒಳ್ಳೆಯ ಜನರನ್ನು ಎಲ್ಲರೂ ಇಷ್ಟ ಪಡುತ್ತಾರೆ. ಅದಕ್ಕೆ ಉದಾಹರಣೆ ಪುನೀತ್ ರಾಜಕುಮಾರ್, ಡಾ. ಎ.ಪೀ.ಜೆ. ಅಬ್ದುಲ್ ಕಲಾಂ, ಮದರ್ ತೆರೆಸಾ, ರಾಜ್ ಕುಮಾರ್, ಕಲ್ಪನಾ ಚಾವ್ಲಾ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ , ಸಾಲುಮರದ ತಿಮ್ಮಕ್ಕ, ಅಬ್ರಹಾಂ ಲಿಂಕನ್. ಜನರ ಎದೆಯಲ್ಲಿ ಇನ್ನೂ ಒಳ್ಳೆಯತನಕ್ಕೆ ಪ್ರೀತಿ, ಜಾಗ ಇದ್ದೇ ಇದೆ ಅಲ್ಲವೇ?
       ಮನುಷ್ಯರು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕೆಟ್ಟವರೆ..ಕಾರಣ ಇತರರು ಬಯಸದ ಯಾವುದಾದರೂ ಕೆಟ್ಟ ಗುಣ ನಮ್ಮೊಳಗೆ ಇರಬಹುದು.  ಅಥವಾ ನನಗೆ ಇಷ್ಟ ಆದ ನನ್ನ ಗುಣ ಇತರರಿಗೆ ಇಷ್ಟ ಆಗದೆ ಇರಬಹುದು. ಎಲ್ಲರೂ ಐಶ್ವರ್ಯ ರೈ ಅವರ ಸೌಂದರ್ಯವನ್ನು ಹೊಗಳಿದರೆ "ಅವಳಿಗಿಂತ ಸುಂದರಿಯರು ಬೇರೆ ಇಲ್ವಾ?" ಎನ್ನುವವರೂ ಇರಬಹುದು. ಅದು ಅವರವರ ಭಾವಕ್ಕೆ ನಿಳುಕಿದ್ದು. ನಮ್ಮ ನಮ್ಮ ಜ್ಞಾನದ ಎತ್ತರಕ್ಕೆ ನಾವು ಮಾತನಾಡಬಲ್ಲೆವು ಅಲ್ಲವೇ! ವಿಜ್ಞಾನಿಗಳಿಗೆ ತಿಳಿದ ಮಾಹಿತಿ ಬಹುಶಃ ಕನ್ನಡ ಪ್ರಾಧ್ಯಾಪಕರಿಗೆ ಗೊತ್ತಿಲ್ಲ. ಕನ್ನಡ ಪಂಡಿತರಿಗೆ ತಿಳಿದ ಭಾಷಾಜ್ಞಾನ ಡಾಕ್ಟರಿಗೆ ಗೊತ್ತಿರಲಿಕ್ಕಿಲ್ಲ, ವ್ಯಕ್ತಿತ್ವ ಬದಲಾವಣೆ ಇದೆ. ಹಾಗಂತ ಯಾರೂ ಮೇಧಾವಿಗಳು ಅಲ್ಲ ಎಂದಲ್ಲ, ಯಾರೂ ದಡ್ಡರು ಕೂಡ ಅಲ್ಲ, ಅವರವರ ಜ್ಞಾನ ಅವರಿಗೆ ಇದೆ. ಯಾವುದೋ ಒಂದು ವಿಷಯ ಎಲ್ಲರಿಗೂ ತಿಳಿದಿರಬೇಕು ಎಂದೇನೂ ಇಲ್ಲ ಅಲ್ವಾ? 
ಇನ್ನು ಬಟ್ಟೆ ಬರೆಗಳ ವಿಷಯಕ್ಕೆ ಬಂದಾಗ ಕೆಲವೊಂದು ಮಾಡೆಲ್ ಗಳು, ಸಿನೆಮಾ ನಟರು, ನಟಿಯರು, ಟಿವಿ ಧಾರಾವಾಹಿ, ಸಿನೆಮಾ ಹಾಗೂ ಟಿವಿ ಕಾರ್ಯಕ್ರಮಗಳಲ್ಲಿ ಅವರು ಧರಿಸುವ ಅರ್ಧಂಬರ್ಧ ಮಾನವನ್ನೂ ಮುಚ್ಚಲು ಹಿಂದುಳಿದ ಬಟ್ಟೆಗಳು ನನಗೆ ಇಷ್ಟ ಆಗದು. ನಾನು ಅವುಗಳನ್ನು ಹಾಕುವುದೂ ಇಲ್ಲ, ಇಷ್ಟ ಪಡುವುದು ಕೂಡ ಇಲ್ಲ. ನಾವು ಹಿರಿಯರು ಮಕ್ಕಳಿಗೆ, ಮುಂದಿನ ಜನಾಂಗಕ್ಕೆ ಮಾದರಿ ಆಗಿರಬೇಕು, ಹಿರಿಯರೇ ಬಿಕಿನಿಯಲ್ಲಿ ಕುಣಿದರೆ ಕಿರಿಯರು ಬಟ್ಟೆ ಬಿಚ್ಚಿ ಕುಣಿಯುವುದರಲ್ಲಿ ತಪ್ಪಿಲ್ಲ. ಅಲ್ಲಿಗೆ ನಮ್ಮ ಸಂಸ್ಕೃತಿ ನಾಶ ಮಾಡುವುದು ನಾವೇ ಅಲ್ಲವೇ? ಅದಕ್ಕೆ ನನ್ನ ಸಹಮತ ಇಲ್ಲ. 
   ಬದುಕು ನಾಲ್ಕು ದಿನ, ಪಾಪ ಪುಣ್ಯಗಳ ನಂಬುವವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಎಲ್ಲಾ ಧರ್ಮಗಳೂ, ಧರ್ಮ ಗ್ರಂಥಗಳೂ ಇದರ ಬಗ್ಗೆ ಹೇಳಿವೆ. ಸ್ವರ್ಗ, ನರಕದ ಕಲ್ಪನೆ ಜಗತ್ತಿನ ಎಲ್ಲಾ ಮೂಲೆಯಲ್ಲೂ ಇದೆ. ಹಾಗಾಗಿ ಒಳ್ಳೆಯತನಕ್ಕೆ ನನ್ನ ಮತ. 
  ಪರಿಸರ ನನ್ನ ಲವರ್. ತುಂಬಾ ಪ್ರೀತಿಸುವೆ ಹಸಿರನ್ನು. ನನ್ನ ಕಾರ್ಯಗಳಲ್ಲಿ ಇಪ್ಪತ್ತು ವರ್ಷಗಳ ಮೊದಲೇ ಪ್ಲಾಸ್ಟಿಕ್ ಭೂಮಿಗೆ ಬಿಸಾಡಲಾರೆ ಎಂಬ ಪ್ರತಿಜ್ಞೆ ಮಾಡಿ ಅದರಂತೆ ನಡೆಯುತ್ತಿರುವ ವ್ಯಕ್ತಿ ನಾನು. ಯಾವುದೇ ಚಾಕಲೇಟು ಕವರ್, ಬಾಟಲಿಯನ್ನು ಮನೆ ತನಕ ತಂದು ಮತ್ತೆ ಕಸದ ತೊಟ್ಟಿಗೆ ಹಾಕುವ ಪರಿಪಾಠ ಇದೆ. ಅದಕ್ಕೆ ನನ್ನ ಮೇಲೆ ನನಗೆ ಹೆಮ್ಮೆ.
ನೋವಿದೆ, ನಲಿವಿದೆ, ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದ ಖುಷಿ ಇದೆ. ಸಾಧನೆಯ ಗೆಲುವಿದೆ , ಇನ್ನೂ ಸಾಧಿಸ ಬೇಕೆಂಬ ಛಲವಿದೆ, ಸಾಧಿಸಲು ಬಹಳ ಇದೆ ಕಲಿತದ್ದು ಏನೂ ಸಾಲದು ಎಂಬ ತಿಳಿವಿದೆ, ಕೆಲವೊಂದು ವಿಷಯದಲ್ಲಿ ಅಸಹಾಯಕಳಾಗಿ ಬಿಟ್ಟೆ ಎಂಬ ಕಣ್ಣೀರಿದೆ, ಬದುಕು ನಾವು ಅಂದುಕೊಂಡ ಹಾಗೆ ಇಲ್ಲ, ವಿಧಿ ಲಿಖಿತದಂತೆ ಇದೆ ಎಂಬ ಅರಿವಿದೆ, ಕಷ್ಟ ಪಟ್ಟರೆ ಸುಖ ಖಂಡಿತ ಎಂಬ ಜ್ಞಾನವಿದೆ, ಬದುಕಿನ ದಾರಿಯ ಎಡರು ತೊಡರುಗಳ ಬಗ್ಗೆ, ನೋವು ನಲಿವಿನ ಬಗ್ಗೆ ತಿಳಿದಿದೆ. ಪರರಿಗೆ ನೋವು ಕೊಡದೆ ಬದುಕಿದ ಸಮಾಧಾನವೂ ಇದೆ. ಮುಂದೆ ಸಾಗುವಾಗ ಇರುವ ತೊಂದರೆಗಳ ಬಗ್ಗೆ ಭಯವಿದೆ. ಪ್ರತಿ ಹೆಜ್ಜೆಯ ಮೇಲೂ ಗಮನ ಇದೆ. 
   ನನ್ನ ಗುಣವನ್ನು ನಾ ಬಹಳ ಪ್ರೀತಿಸುವೆ, ಸೋಮಾರಿತನ ದ್ವೇಷಿಸುವ ನಾನು ಪರರಿಗೆ ನೋವು ಕೊಡಲಾರೆ. ಸರ್ವರಿಗೂ ನನ್ನಲ್ಲಿ ಪ್ರೀತಿ, ಸ್ನೇಹವಿದೆ. ಮೋಸವಿಲ್ಲ. ಸಹಾಯ ಬಯಸುವವರು ಬಹಳ ಜನ , ಸಹಾಯ ಮಾಡಲಾಗದ ಅಶಕ್ತತೆಗೆ ನೋವಿದೆ. ನನ್ನತನವಿದೆ. ಪರರಿಗೆ ಸಹಾಯ ಮಾಡಿದ ಹೆಮ್ಮೆ ಇದೆ. ಬೇಡದ್ದನ್ನು ತಿರಸ್ಕರಿಸಿದ ತೃಪ್ತಿ ಇದೆ. ಒಂಥರಾ ಡೇರಿಂಗ್ ಇದೆ, ಅಳುಕುತನವೂ ಇದೆ. ಒಟ್ಟಿನಲ್ಲಿ ಮಾನವತೆ ಇರುವ ಮಾನವ ಗುಣವಿದೆ. 
ಎಲ್ಲವೂ ಸರಿ, ಎಲ್ಲವೂ ಸತ್ಯ, ಹೀಗಿದ್ದರೆ ಮನುಷ್ಯ ದೇವರಾಗಿ ಬಿಡುತ್ತಾನೆ. ಮನುಷ್ಯ ಹಾಗಿದ್ದರೆ ದೇವರಿಗೆ ರೆಸ್ಪೆಕ್ಟ್, ಮೌಲ್ಯ, ಬೆಲೆ ಇಲ್ಲ. ಆದ ಕಾರಣ ದೇವರು ಮನುಷ್ಯನನ್ನು ದೇವರಾಗಲು ಬಿಡಲಾರ ಅಲ್ಲವೇ? ತನ್ನ ಸೀಟು ಹೋದರೆ? ಭೂ ಲೋಕದಲ್ಲಿ ಎಲ್ಲಾ ಕುರ್ಚಿಗಾಗಿಯೇ ಕಾದಾಟ, ಜಗಳ, ಓಟು, ಮೃತ್ಯು ಎಲ್ಲಾ ನಡೆಯುತ್ತದೆ. ಹೆಸರು, ಖ್ಯಾತಿಗೆ ಜನ ಬೇಗ ಬಲಿಯಾಗುತ್ತಾರೆ. 
ಎಲ್ಲರ ಬದುಕಿನ ತಿರುಳು ಇಷ್ಟೇ. ಬರುವಾಗ ತರಲಿಲ್ಲ, ಹೋಗುವಾಗ ಕೊಂಡು ಹೋಗುವುದಿಲ್ಲ, ಬರಿಗೈಲಿ ಬಂದು ಹಾಗೆಯೇ ಹೋಗುವ ಬದುಕಿನಲ್ಲಿ ಆಸೆ, ಆಮಿಷ, ಅಧಿಕಾರ, ಮದ, ಮಾತ್ಸರ್ಯ, ಹೊಟ್ಟೆಕಿಚ್ಚು, ನಂಜು. 
ಹತ್ತಿರವಿದ್ದರೂ  ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ..
ಸದಾ ನಾ ನೇನೆಸುವ ಕವಿ ಸಾಲುಗಳು. ನೀವೇನಂತೀರಿ?
@ಹನಿಬಿಂದು@
16.11.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -209

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -209

    ಬಾಳಿನಲ್ಲಿ ಮಾನವನಾದರೆ ಗಂಡಾಗಿ ಹುಟ್ಟಬೇಕು. ರಾತ್ರಿ ಎಷ್ಟು ಹೊತ್ತಿನ ವರೆಗೂ ಎಲ್ಲೂ,ಯಾರ ಜೊತೆಯೂ ಕೇವಲ ಒಂದು ಚಡ್ಡಿ ತೊಟ್ಟರೂ ಯಾರೂ ಏನೂ ಅನ್ನಲಾರರು. ಜೊತೆಗೆ ಅವರ ಮಾನ ಮರ್ಯಾದೆ ಹೋಗದು. ಮನೆಯ ಹಿರಿಯರ ಕಡಿವಾಣ ಇರದು. ಹೆಣ್ಣು ಮಕ್ಕಳಿಗೆ ಇದ್ದ ಹಾಗೆ ಅವರಿಗೆ ಅಲ್ಲಿ ಹೋಗಬೇಡ, ಇಲ್ಲಿ ಬರಬೇಡ, ಅವನ ಬಳಿ ಮಾತನಾಡಬೇಡ, ಯಾರದೇ ಬೈಕಿನಲ್ಲಿ , ಕಾರಿನಲ್ಲಿ ಓಡಾಡಬೇಡ, ಅದೂ ಇದೂ ತಿನ್ನಬೇಡ ಹೀಗೆ ಕಂಡೀಷನ್ ಇಲ್ಲ. ಆದರೆ ಅದೇ ಬದುಕಾಗಬಾರದು. ಪರರನ್ನು ಅವಂಬಿಸಿಯೇ ಬದುಕು ಸಾಗಿದರೆ ತನ್ನತನ ಇರದು. ತಾನು ಹುಟ್ಟಿದ ಬಳಿಕ ಮರದಂತೆ ನಾಲ್ಕು ಜನರಿಗೆ ನೆರಳಾದರೂ ಕೊಡಬೇಕು ಅಲ್ಲವೇ! ಹೂ ಹಣ್ಣು ಕೊಡಲು ಸಾಧ್ಯ ಆಗದೇ ಇದ್ದರೂ ಸಹ ಆದೀತು ಅಲ್ಲವೇ? ಪರೋಪಕಾರಿ ಆಗಿರ ಬೇಕೇ ಹೊರತು ಪರ ಉಪದ್ರವಿ ಆಗಬಾರದು. 

    ಹಿಂದಿನ ಕಾಲದಲ್ಲಿ ಪ್ರತಿ ಸಂಜೆ ಸ್ನಾನ ಮಾಡಿ ದೀಪ ಬೆಳಗಿಸಿ ಭಜನೆ ಹಾಡಿದ ಬಳಿಕ ಒಳ್ಳೆಯ ಮನಸ್ಸು, ನೆಮ್ಮದಿ, ಧನಾತ್ಮಕ ಶಕ್ತಿ, ಉದಾತ್ತ ಆಲೋಚನೆಗಳು ಬರುತ್ತಿದ್ದವು. ಇಂದಿನ ದಿನಗಳಲ್ಲಿ ಟಿವಿ ಸೀರಿಯಲ್ ಗಳ ನಾಟಕ ಹೆಚ್ಚಿನ ಮಹಿಳೆಯರ ಮನಸ್ಸನ್ನು ಹಾಳು ಮಾಡಿ ಮನಸ್ಸಿನ ಮಾಲಿನ್ಯಕ್ಕೆ ಎಡೆ ಮಾಡಿ ಸಂಸಾರ ಹಾಳು ಮಾಡಿದೆ ಮತ್ತು ಮಾಡುತ್ತಿದೆ ಎಂದರೆ ತಪ್ಪಾಗದು. 
  ನಿನ್ನೆ ನವೆಂಬರ್ ಹನ್ನೊಂದು, ಕರ್ನಾಟಕದ ವೀರ ಮಹಿಳೆ ಒನಕೆ  ಓಬವ್ವನ ಜನ್ಮದಿನ. ಕರ್ನಾಟಕದ ಮಹಿಳೆಯರು ಅನಾದಿ ಕಾಲದಿಂದಲೂ ಶೂರ, ದಿಟ್ಟ ವೀರರು ಎಂಬುದಕ್ಕೆ ಸಾಕ್ಷಿ ಅವಳು. ಆ ದಿಟ್ಟತನವನ್ನು ಇಂದಿನ ಮಹಿಳೆ ತೋರದೆ ಇದ್ದರೆ ಈಗಿನ ಹಾಗೆಯೇ ದೌರ್ಜನ್ಯ, ಕೊಲೆ , ಹಿಂಸೆ, ಮಾನಸಿಕ ಹಾಗೂ ದೈಹಿಕ ಹಿಂಸಾಚಾರಗಳು ನಡೆಯುತ್ತಲೇ ಇರುತ್ತವೆ. ಹೆಣ್ಣನ್ನು ಯಾವ ರೀತಿಯಿಂದಲೂ ಆಗಬಹುದು, ದೈಹಿಕವಾಗಿ ಅನುಭವಿಸಬೇಕು ಎಂಬ ವಾಂಛೆಯು ಅವಳನ್ನು ಸಾಯಿಸಿ ಶವದ ಜೊತೆ ಚಕ್ಕಂದವಾಡುವವರೆಗೂ ಈ ತಾಂತ್ರಿಕ ಯುಗದಲ್ಲಿ ತಲುಪಿದೆ ಎಂದರೆ ಜನರ ಮನಸ್ಸು ಎಷ್ಟು ಮಲಿನಗೊಂಡಿರಬೇಕು! ಯೋಚಿಸಬೇಕಾದ ಸಂಗತಿ. ಮತ್ತಿನ ಮತ್ತಲ್ಲಿ ತಾಯಿ ಯಾರು ಅಕ್ಕ ತಂಗಿಯರು ಯಾರು ಮಗಳು ಯಾರು ಎಂದು ಆಲೋಚಿಸದೆ ತನ್ನ ಆಸೆಯ ಕೈಗೆ ಮನಸ್ಸು ಕೊಟ್ಟ ಭೂಪನನ್ನು ಕೊಂದರೂ ಪಾಪ ಬಾರದು. ಎಲ್ಲರೂ ಕೆಟ್ಟವರೆ ಎಂದಲ್ಲ. ಆದರೆ ಕೆಟ್ಟ ಹುಳಗಳು ಈಗಲೂ ಇವೆ ಎನ್ನುವುದು ಸತ್ಯ. ಅದು ಗಂಡು ಮತ್ತು ಹೆಣ್ಣು ಇಬ್ಬರಲ್ಲಿಯೂ. ಕಾಟ ಕೊಡುವ ಅತ್ತೆ, ನಾದಿನಿ, ಓರಗಿತ್ತಿ, ಸವತಿ ಎಲ್ಲರೂ ಹೆಂಗಸರೇ. ಹೆಣ್ಣನ್ನು ಕೀಳಾಗಿ ನೋಡುವ ಪತಿ, ಮಾವ, ಭಾವಂದಿರು, ಉಳಿದ ಅಪರಿಚಿತ ಗಂಡಸರು ಮೇಲ್ ಎಂದು ಕರೆಸಿಕೊಳ್ಳಲು ಅನ್ ಲಾಯಕ್ ಅಲ್ಲವೇ?
    ಅದರ ಜೊತೆ ಪರಿಸರವೂ ಹೆಣ್ಣೆಂದು ನಂಬುವವರು ನಾವು. ಮಾನವರ ದಬ್ಬಾಳಿಕೆ ಪ್ರಕೃತಿ ಮಾತೆಯ ಮೇಲೂ ನಡೆದು ಅವಳನ್ನೂ ಬೆತ್ತಲಾಗಿಸಿ ಆಗಿದೆ. ಈಗ ಪರಿಸರ ಉಳಿಸಿ ಎಂಬ ಕೂಗು ನಾವೇ ಹಾಕಬೇಕಿದೆ. ಕಾರಣ ನಮ್ಮ ಕಾಲಿಗೆ ಕೊಡಲಿ ಹಾಕಿ ಕೊಂಡವರು ನಾವೇ. ಈಗ ಬೊಬ್ಬಿಟ್ಟರೆ ಎಂಬ ಯಾವ ಪ್ರಯೋಜನವೂ ಇಲ್ಲ. ಇದೀಗ ಹಬ್ಬ ಅದರಲ್ಲೂ ಎಲ್ಲರೂ ಆಚರಿಸುವ ದೀಪಾವಳಿ ಹಬ್ಬ ದಿವಾಳಿಯಾಗಿ ಬಂದಿದೆ. ಕಾರಣ ಈ ವರ್ಷ ಎಲ್ಲಾ ಪಟಾಕಿಗಳನ್ನು ಹಚ್ಚುವ ಹಾಗಿಲ್ಲ. ಕೇವಲ ಗ್ರೀನ್ ಸೀಲ್ ಇರುವ ಪರಿಸರ ಸ್ನೇಹಿ ಪಟಾಕಿಗಳನ್ನು ರಾತ್ರಿ ಎಂಟರಿಂದ ಹತ್ತರ ವರೆಗೆ ಮಾತ್ರ ಹಚ್ಚಿ ಖುಷಿ ಪಡಿ ಎಂದು ಮೇಲಿನಿಂದ ಆದೇಶ ಬಂದಿದೆ. ಮಣ್ಣಿನ ಹಣತೆಯಿಂದ ದೀಪ ಹಚ್ಚೋಣ ಬಿಡಿ. ಕುಂಬಾರರಿಗೆ ಸಹಾಯ ಆಗುತ್ತದೆ. ಹಾಗೆಯೇ ಪಟಾಕಿ, ಸ್ವಲ್ಪ ಶಾಪಿಂಗ್ ಕಟ್ ಮಾಡಿ ಸ್ವಲ್ಪ ಪರಿಸರ ಶುದ್ಧ, ಹಾಗೆಯೇ ಬಡವರಿಗೆ ಒಂದಿಷ್ಟು ದಾನ ಮಾಡಿ ಮನಸ್ಸಿನ ಮಾಲಿನ್ಯವನ್ನು ಕೂಡ ಸರಿಪಡಿಸಿಕೊಳ್ಳೋಣ ಅಲ್ಲವೇ? ಯಾರಿಗೆ ಗೊತ್ತು ಯಾವಾಗ ಪಟ್ಟ ಬಿದ್ದು ಸಾಯುತ್ತೇವೆ ಅಂತ? ಸಾಯುವ ಕೊನೆ ಕ್ಷಣದವರೆಗೂ ಕೈಲಾದ ಸಹಾಯ ಮಾಡೋಣ. ಇತರರ ಮನಸ್ಸು ನೋಯೊಸದೆ ಇರೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
11.11.2023

ದಶಕ -118

ಸೋಮವಾರ, ನವೆಂಬರ್ 6, 2023

Thought

Thought

Think thik and think
After let it drop in ink!
Thought may be new
Unique and never told..

Manage goodness in thought
Mapping mind in high esteem
Migration of heart to upper level
So that thought should be
 A marvelous quote!

Thinking should provoke
Minds and hearts
Knowledge and feelings
Creativity and ideas 
Motivations should sprout
By spontaneous flow of thought..
@HoneyBindu@
07.11.2023

ಶುಕ್ರವಾರ, ನವೆಂಬರ್ 3, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -207

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -207          

     ನಮ್ಮ ರಾಜ್ಯ ಕರ್ನಾಟಕದ ನಾಡಹಬ್ಬ ದಸರಾ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದೆ. ಭುವನೇಶ್ವರಿ ದೇವಿಗೆ ಗೌರವದ ನಮನ ಹಾಗೂ ನಮ್ಮ ದೇಸಿ ಸಂಸ್ಕೃತಿಯ ಅನಾವರಣ, ಕನ್ನಡ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ, ವಿಧ ವಿಧ ಕರ್ನಾಟಕ ಹಾಗೂ ದೇಶ ವಿದೇಶಗಳ ಕಲಾಕಾರರು, ಬರಹಗಾರರು, ಹಾಡುಗಾರರು, ಕವಿ ಬಂಧುಗಳಿಗೆ ಅವರವರ ಪ್ರತಿಭೆಗಳಿಗೆ ಅನಾವರಣ ಮಾಡಿಕೊಡಲು ಮೈಸೂರು ವೇದಿಕೆಯಾಗಿದೆ. ಹಾಗೆಯೇ ಅವರ ಪ್ರತಿಭೆಯನ್ನು ಗುರುತಿಸಿ ಅವರನ್ನು ಸನ್ಮಾನ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೆ ಹೊಸ ಹೊಸ ಪ್ರತಿಭೆಗಳಿಗೆ ಕೂಡಾ ಅಲ್ಲಿ ಅವಕಾಶ ಸಿಗುತ್ತಿದೆ. ಇಷ್ಟು ಮಾತ್ರ ಅಲ್ಲ, ನಮ್ಮ ಕರ್ನಾಟಕದ ಹಲವು ವ್ಯಾಪಾರಿಗಳಿಗೂ ತಮ್ಮ ವ್ಯಾಪಾರಕ್ಕೆ ಇಲ್ಲಿ ಎಕ್ಸಿಬಿಷನ್ ನಲ್ಲಿ ಅವಕಾಶ ಇದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕಲೆಯಲ್ಪಡುವ ಮೈಸೂರು ಮಹಾರಾಣಿಯ ಹಾಗೆ ಝಗಮಗಿಸುತ್ತಿದೆ. ಎತ್ತ ನೋಡಿದರೂ ದೀಪದ ಸಾಲುಗಳು. ಅಂದವಾದ ಅರಮನೆ. ವಿಶ್ವ ವಿಖ್ಯಾತ ಜಂಬೂ ಸವಾರಿ. ಬನ್ನಿ ಪೂಜೆ. ಆನೆ ಕುದುರೆಗಳ ಸಾಲು. ತಾಲೀಮು. ಸೈಕಲ್, ಬೈಕುಗಳ ಜೊತೆ ಆಟ. ಎಲ್ಲವೂ ಚಂದವೇ. ಕುಸ್ತಿ, ಕತ್ತಿವರಸೆ ಇಂತಹ ದೇಸಿ ಕ್ರೀಡೆಗಳಿಗೆ ಅವಕಾಶ. ರಾಜರ ಆಳ್ವಿಕೆಯ ಒಂದು ಅಂಶವನ್ನು ನಾವಿಲ್ಲಿ ಮತ್ತೆ ಕಾಣಲು ಸಾಧ್ಯ ಅಲ್ಲವೇ?     ಇದು ರಾಜ್ಯದ ಸಂಭ್ರಮ ಆದರೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ, ರಾಜ್ಯದ ರಾಜಧಾನಿ ಹಾಗೂ ಹಲವು ತಾಲೂಕು ಕೇಂದ್ರಗಳಲ್ಲೂ , ಹಲವು ದೇವಿ ದೇವಾಲಯಗಳಲ್ಲೂ , ಊರಿನಲ್ಲೂ, ಹಲವಾರು ಮನೆಮನೆಗಳಲ್ಲಿ ದಸರಾ ಗೊಂಬೆ ಇಟ್ಟು  ಪೂಜಿಸಿ ತಮ್ಮದೇ ಆದ ಶೈಲಿಯಲ್ಲಿ  ದಸರಾ ಹಬ್ಬವನ್ನು ಆಚರಿಸಲಾಗುತ್ತದೆ.ದೇವಾಲಯಗಳಲ್ಲಿ ನವರಾತ್ರಿಯ ಒಂಭತ್ತು ದಿನಗಳಲ್ಲೂ ದೇವಿಯ ವಿವಿಧ ರೂಪಗಳಾದ  ಪ್ರಥಮ ದಿನ ಶೈಲಪುತ್ರಿ ,ದ್ವಿತೀಯ ದಿನ ಬ್ರಹ್ಮಚಾರಿಣಿ ,  ತೃತೀಯ ದಿನ ಚಂದ್ರಘಂಟಾ , ಚತುರ್ಥಿ ದಿನ ಕೂಷ್ಮಾಂಡ  ಪಂಚಮ ದಿನ ಸ್ಕಂದಮಾತಾ . ಷಷ್ಠಿ ದಿನ ಕಾತ್ಯಾಯಿನಿ, ಸಪ್ತಮಿ ದಿನ ಕಾಳರಾತ್ರಿ , ಅಷ್ಟಮಿ ದಿನ  ಮಹಾಗೌರಿ ಹಾಗೂ ನವಮಿ ದಿನ ಸಿದ್ಧಿದಾತ್ರಿ ರೂಪದಲ್ಲಿ ಪೂಜಿಸಲಾಗುತ್ತದೆ. ಎಲ್ಲಾ ದೇವಿಯ ರೂಪಕ್ಕೂ ಪ್ರತ್ಯೇಕ ಕಥೆಗಳಿವೆ. ಆಯಾ ರೂಪದಲ್ಲೇ ದೇವಿಯನ್ನು ಏಕೆ ಪೂಜಿಸಬೇಕು ಎಂದು ಪುರಾಣ ಗ್ರಂಥಗಳಲ್ಲಿ ಹೇಳಲಾಗಿದೆ. ತದ ನಂತರ ಹತ್ತನೆಯ ದಿನ ಉತ್ತಮ ದಿನ. ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ವಿಜಯ ದಶಮಿಯಷ್ಟು ಒಳ್ಳೆಯ ದಿನ ಬೇರಿಲ್ಲ. ತಮ್ಮ ತಮ್ಮ ಆಯುಧಗಳ ಪೂಜೆ, ಯಾವುದೇ ಶುಭ ಕಾರ್ಯದ ಆರಂಭ, ಬನ್ನಿ ಪೂಜೆ ಇವೆಲ್ಲ ಹತ್ತನೆ ದಿನದ ದಶಮಿಯಂದು. ಗೊಂಬೆಗಳ ವಿಸರ್ಜನೆಯ ಕಾರ್ಯವೂ ಅಂದೇ ನಡೆಯುತ್ತದೆ.   ನವರಾತ್ರಿಗೆ ನವರಂಗ್ ಅಥವಾ ನವ ವಿಧವಾದ ಬಣ್ಣಗಳು ದೇವಿಯ ಶೃಂಗಾರಕ್ಕೆ ಮೀಸಲು. ಅಂತೆಯೇ ನಮ್ಮ ಮಹಿಳೆಯರು ಕೂಡಾ ಅದೇ ಬಣ್ಣ ಉಟ್ಟು ಖುಷಿ ಪಡುತ್ತಾರೆ. ಮೊದಲನೇ ದಿನ ಬಿಳಿ, ಎರಡನೇ ದಿನ ಕೆಂಪು, ಮೂರನೇ ದಿನ ನೀಲಿ, ನಾಲ್ಕನೇ ದಿನ ಹಳದಿ, ಐದನೇ ದಿನ ಹಸಿರು, ಆರನೇ ದಿನ ಊದ ಬಣ್ಣ ಅಥವಾ ಸಿಮೆಂಟ್ ಬಣ್ಣ, ಏಳನೇ ದಿನ ಕೇಸರಿ, ಎಂಟನೇ ದಿನ ನವಿಲ ಹಸಿರು ಮತ್ತು ಒಂಭತ್ತನೇ ದಿನ ಗುಲಾಬಿ ಬಣ್ಣಗಳು ದೇವಿಯ ಪೂಜಾ ಅಲಂಕಾರಕ್ಕೆ ಮೀಸಲು. ಇದೇ ಬಣ್ಣ ಎಂದು ಗುರುತಿಸಿದವರು ನಾವುಗಳೇ. ಒಟ್ಟಿನಲ್ಲಿ ದಸರೆಯ ಸಮಯದಲ್ಲಿ ಕರ್ನಾಟಕ ಹಾಗೂ ದೇಶದ ವಿವಿಧ ಭಾಗಗಳಲ್ಲಿ ವರ್ಣಮಯವಾಗಿ ಆಚರಣೆ ನಡೆಯುತ್ತದೆ. ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ , ಗುಜರಾತಿನಲ್ಲಿ ಗಾರ್ಭಾ ಹೀಗೇ ವಿವಿಧ ರಾಜ್ಯಗಳಲ್ಲಿ ಹೆಸರುಗಳಲ್ಲಿ ಅದು ನಡೆಯುತ್ತದೆ. ಒಟ್ಟಿನಲ್ಲಿ ಪೂಜೆ, ಅಲಂಕಾರದ ಮೂಲಕ ಶಕ್ತಿ ಸೇವೆ ಹಾಗೂ ಸಂಸ್ಕೃತಿಯ ಅನಾವರಣ ಇಲ್ಲಿ ನಡೆಯುತ್ತದೆ.     ಭಾರತ ಕಲೆ ಸಂಸ್ಕೃತಿಯ ತವರೂರು. ಪ್ರತಿ ನಾಲ್ಕು ಕಿಲೋ ಮೀಟರ್ ಗೆ ಬದಲಾಗುವ ಭಾಷಾ ಶೈಲಿ, ಆಚರಣೆಗಳು, ಆಹಾರ ಪದ್ಧತಿ, ವಿವಿಧತೆಯನ್ನು ತಂದಿವೆ, ವಿವಿಧ ಪೂಜಾ ವಿಧಾನ ಭಕ್ತಿಯನ್ನು ಮೆರೆಸಿವೆ.      ಶ್ರೀಮತಿ ವಾಸಂತಿ ಅಂಬಲಪಾಡಿ ಅವರ ಒಂದು ಅವಾಬಿಯ ತುಣುಕನ್ನು ಇಲ್ಲಿ ಹೇಳಬೇಕೆಂದು ಅನ್ನಿಸುತ್ತಿದೆ. ಅದರ ಭಾವಾರ್ಥ ಹೀಗಿದೆ. ಹಿಂದಿನ ಕಾಲದಲ್ಲಿ ದೇವಿಯ ಪಾತ್ರ ಮಾಡಬೇಕೆಂದಿದ್ದರೆ ವ್ರತ, ಪೂಜೆ, ಉಪವಾಸ ಮಾಡಬೇಕಿತ್ತು, ಆದರೆ ಇಂದು ಮೇಕಪ್ ಮ್ಯಾನ್ ಒಬ್ಬ ಇದ್ದರೆ ಸಾಕು. ಕಾಲ ಬದಲಾಗಿದೆ, ಪಾಶ್ಚಾತ್ಯರು ಕಾಲಿಟ್ಟ ಬಳಿಕ ಭಾರತದಲ್ಲಿ ಇಲ್ಲಿನ ಭಕ್ತಿ, ನಂಬಿಕೆ ಕಡಿಮೆಯಾಗಿ ಹೊರದೇಶದ ಫ್ಯಾನ್ಸಿ ಬದುಕು ಹೆಚ್ಚಿದೆ. ಅದರ ಜೊತೆ ಇಲ್ಲಿನ ಸಾಂಪ್ರದಾಯಿಕ ಉಡುಗೆ, ತೊಡುಗೆ, ಪದ್ದತಿ, ಆಚಾರ, ವಿಚಾರಗಳ ಮೇಲೂ ಬಲವಾದ ಅಡ್ಡ ಪರಿಣಾಮ ಬೀರಿ ತುಂಡು ತುಂಡಾದ, ಹರಿದ, ಅಲ್ಲಲ್ಲಿ ತೂತಾದ, ಮೈ ಮುಚ್ಚದ, ಮಾನ ಮರ್ಯಾದೆಯನ್ನು ಕೂಡಾ ಹರಾಜು ಹಾಕುವ ಬಟ್ಟೆಗಳು ಟಿವಿ ಶೋ ಗಳಿಂದ ಹಿಡಿದು, ವಿವಿಧ ಕಾರ್ಯಕ್ರಮಗಳು, ನಿತ್ಯ ಬದುಕು, ಅಲೆದಾಟ, ಸುತ್ತಾಟಗಳಲ್ಲೂ, ಕಾಣಿಸಿಕೊಂಡು ಕೆಲವೊಮ್ಮೆ ನೋಡುಗರ ಕಣ್ಣಿಗೆ ಹೇಸಿಗೆ ಹುಟ್ಟಿಸುತ್ತವೆ. ಅಷ್ಟು ಮಾತ್ರವಲ್ಲ, ಕೆಲವೊಂದು ಬಟ್ಟೆಗಳು ಪೋಷಕರೇ ತಮ್ಮ ಮಕ್ಕಳನ್ನು ಕಾಮದ ದೃಷ್ಟಿಯಲ್ಲಿ ನೋಡುವಂತೆ ಆಗಿದೆ. ನಮ್ಮದೇ ಸಾಂಪ್ರದಾಯಿಕ ಉಡುಗೆಯನ್ನು ಧರಿಸುವ ವಿಧಾನವೂ ಬದಲಾಗಿದೆ. ಅಲ್ಲಲ್ಲಿ ಧರ್ಮ ಸಂಸ್ಕೃತಿ ನೆಲೆಸಿ ಬೆಳೆಸಲು ಇಂತಹ ಹಬ್ಬ , ಹರಿದಿನ ಪೂಜಾ ವಿಶೇಷಗಳು ಸಹಕಾರಿ. ಹೀಗಾದರೂ ನಮ್ಮ ಸಂಸ್ಕೃತಿ ಬಿಂಬಿಸುವ ಕಾರ್ಯ ಸಾಗಲಿ ಎಂದು ಆಶಿಸೋಣ ಅಲ್ಲವೇ? ನೀವೇನಂತೀರಿ?@ಹನಿಬಿಂದು@
21.10.2023  

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -208

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 208

      ಬದುಕಿನಲ್ಲಿ ಗಾಳಿ, ನೀರು, ಅಹಾರಕ್ಕಿಂತಲೂ ಮುಖ್ಯವಾದ ಒಂದು ಭಾವವಿದೆ. ಅದು ಪ್ರೀತಿ. ಮನುಷ್ಯನ ಬದುಕಿನ ಮೂಲ ಬೇರು. ಬಾಳ್ವೆಯ ಇತಿಹಾಸ, ವಿಜ್ಞಾನ, ಗಣಿತದ ಲೆಕ್ಕಾಚಾರ, ಭಾಷಾ ಬಳಕೆ ಎಲ್ಲವೂ. ಶಾಲೆಯಲ್ಲಿ ಮಕ್ಕಳು ನೋಡಿ, ಶಿಕ್ಷಕರು ಕಲಿಸಿದ ಪಾಠ ಬಾರದೆ ಹೋದರೂ, ಪರೀಕ್ಷೆಯಲ್ಲಿ ಒಂದು ಅಂಕವೂ ಬಾರದೆ ಇದ್ದರೂ ತನ್ನ ಪ್ರೀತಿಸುವ ಹುಡುಗಿ ಅಥವಾ ಹುಡುಗನಿಗೆ ಪತ್ರ ಬರೆಯಲು ಬರುತ್ತದೆ ಅವರಿಗೆ. ಅದು ಯಾವ ಯಾವುದಾದರೂ ಕೋಡ್ ಪದ ಬಳಸಿ, ಅದು ಯಾವ ಭಾಷೆಯದಾದರೂ ಅಕ್ಷರ ಬಳಸಿ ತಮ್ಮ ಮನದ ಭಾವನೆಗಳನ್ನು ಪದಗಳ ಅಥವಾ ಚಿತ್ರಗಳ ರೂಪದಲ್ಲಿ ಬಿಂಬಿಸಿ ತಾವು ಅವರ ಪ್ರೀತಿಯನ್ನು ಪಡೆಯಲು ಹಾತೊರೆಯುತ್ತಾರೆ ಅಲ್ಲವೇ? ಇದು ಜೀವಿಗಳಿಗೆ ಪ್ರಕೃತಿ ಸಹಜ ಕೊಡುಗೆ. ಕೋಗಿಲೆ ಹಾಡುವುದು, ನವಿಲು ನರ್ತಿಸುವುದು ಎಲ್ಲವೂ ಪ್ರೀತಿಗಾಗಿ ಅಲ್ಲವೇ? ದುಂಬಿ ಹಾರುವುದು, ಮೋಡಗಳು ಕೂಡುವುದು ಕೂಡ ಹಾಗೆಯೇ. ಇಲ್ಲದೆ ಹೋದರೆ ಮಳೆಯಿಲ್ಲ, ಬೆಳಕಿಲ್ಲ, ಹಸಿರಿಲ್ಲ. ಭೂಮಿ ಸೂರ್ಯನ ಸುತ್ತ ತಿರುಗದೆ ಇದ್ದರೆ, ದಿನಾ ಬೆಳಗ್ಗೆ ಸೂರ್ಯ ಉದಯಿಸಿ ಭೂಮಿಗೆ ಕಾಣಿಸಿ ಕೊಳ್ಳದೆ ಇದ್ದರೆ ಜಗ ಹಸಿರಿನಲ್ಲಿ ಝಗಮಗಿಸಲು ಸಾಧ್ಯವೇ?
         ನಮ್ಮನ್ನು ತುಂಬಾ ಪ್ರೀತಿಸುವವರಿಗೆ ನಾವು ಅವರ ಪರ್ಮಿಷನ್ ಕೇಳಿ ಪ್ರೀತಿ ಮಾಡಲ್ಲ, ಕರೆ ಮಾಡಲ್ಲ, ಕೇರ್ ಮಾಡಲ್ಲ ಅಲ್ವಾ? ನಮಗೆ ಅವರು ಸದಾ ಬೇಕು. ಹಾಗಾಗಿ ನಾವು ಅವರ ಪ್ರೀತಿಯನ್ನು ಯಾರ ಜೊತೆಗೂ ಹಂಚಿ ಕೊಳ್ಳಲು ಇಷ್ಟ ಪಡಲ್ಲ. ಅವರನ್ನು ಬಿಟ್ಟು ಇರುವ, ಬದುಕುವ ಮಾತೇ ಇಲ್ಲ. ಅದು ಬದುಕಿನ ಬಾಂಧವ್ಯ. ಪ್ರೀತಿ ಎಟರ್ನಲ್ ಅಂತಾರೆ ಆಂಗ್ಲರು. ಅದೊಂದು ದೇವ ಗುಣ. ಅದು ಹುಟ್ಟಿದರೆ ಸಾಯದು. ಪ್ರೀತಿ ಪರಿಶುದ್ಧ, ನಿಷ್ಕಲ್ಮಶ. ಭೂಮಿಯ ಮೇಲೆ ಬದುಕುವ ಕೆಲವು ಮಾನವನನ್ನು ಬಿಟ್ಟು ಇತರ ಪ್ರಾಣಿಗಳು ಅದನ್ನು ಅನುಭವಿಸಿ ಬದುಕುತ್ತವೆ. ಮೋಸ, ವಂಚನೆ, ದ್ರೋಹ ಇವೆಲ್ಲ ಮನುಷ್ಯ ಗುಣಗಳು. 
    ಪರಿಶುದ್ಧ ಪ್ರೀತಿಗೆ ಈ ಮನುಷ್ಯ ಗುಣಗಳು ಅಡ್ಡ ಬರಲು ಸಾಧ್ಯವೇ ಇಲ್ಲ. ಅದಕ್ಕೆ ಲೈಲಾ ಮಜ್ನು ಜೋಡಿ ಇಂದಿಗೂ ಪ್ರಖ್ಯಾತ. ಪರಿಶುದ್ಧ ಪ್ರೀತಿ ಒಟ್ಟಿಗೆ ಇರಲು ಬಯಸುತ್ತದೆ, ಮಾನಸಿಕವಾಗಿ. ಅಲ್ಲಿ ದೇಹ ಖಂಡಿತಾ ಮುಖ್ಯ ಅಲ್ಲ. ನಮ್ಮ ದೇಹ ಕೊಳೆತು ನಾರುವ ಮೂಳೆ ಮಾಂಸ ಅಷ್ಟೇ. ಹೆಚ್ಚೆಂದರೆ ನೂರು ವರ್ಷದ ಆಯುಷ್ಯ. ಆದರೆ ಪ್ರೀತಿ ಹಾಗಲ್ಲ. ಜನ್ಮ ಜನ್ಮಾಂತರದ ಬಂಧ . ಅದೊಂದು ನಂಬಿಕೆ, ಅದು ಭರವಸೆ. ಅದು ಒಂದೇ ಎನ್ನುವ ಭಾವ, ಸಮೀಕರಿಸಲು, ಸರಿದೂಗಿಸಲು, ಬಿಡಿಸಲು, ಮಂಡಿಸಲು ಆಗದ, ಇದುವರೆಗೆ ಪೂರ್ತಿಯಾಗಿ ಯಾರೂ ಪದಗಳಲ್ಲಿ ವಿವರಿಸಿ  ಹೇಳಲು ಆಗದ ಖುಷಿ, ನೋವು, ಕಣ್ಣೀರು, ಸುಖ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ ವರ್ಗಗಳು ಅಲ್ಲಿ ಇರಲೇಬೇಕು. ಅದು ಅತ್ಯುನ್ನತ ಪ್ರೀತಿ. ಎಲ್ಲವನ್ನೂ ಮರೆತು ಮಗುವಿನ ಹಾಗೆ ಪ್ರೀತಿಸುತ್ತಾ, ಪ್ರೀತಿಯಿಂದ, ಖುಷಿ ಕೊಡುತ್ತಾ ಬಾಳುವುದು. ಈ ರೀತಿ ಬದುಕುವ ಮನುಷ್ಯರು ಸಾವಿರಕ್ಕೆ ಒಬ್ಬರು ಸಿಗಬಹುದು ಅಷ್ಟೇ. ಬದುಕಿನಲ್ಲಿ ಅವರು ಸದಾ ಸುಖಿಗಳು. 
 ಆದರೆ ಯಾರು ನಮ್ಮ ಕೇರಿಂಗ್ ಅನ್ನು ಇಷ್ಟ ಪಡಲ್ಲ, ಡಿಸ್ಟರ್ಬ್ ಅಂದುಕೊಳ್ತಾರೆ, ಇವರು ಯಾಕಾದ್ರೂ ಕರೆ ಮಾಡ್ತಾರೋ ಅನ್ನಿಸಿದರೆ, ಅವರಿಗೆ ನಮ್ಮ ಕಾಲ್, ಮೆಸ್ಸೇಜ್ ಕಿರಿ ಕಿರಿ ಅನ್ನಿಸುವುದೋ ಅವರು ನಮ್ಮವರಲ್ಲ. ಅವರು ನಮ್ಮನ್ನು ಮನಸಾರೆ ಪ್ರೀತಿಸುವವರು ಖಂಡಿತಾ ಅಲ್ಲ. ಇಷ್ಟನ್ನು ಮನದಟ್ಟು ಮಾಡಿಕೊಳ್ಳ ಬೇಕು. 
ನಿಜವಾದ ನಿಷ್ಕಲ್ಮಶ ಪ್ರೀತಿ ಬದುಕಿನಾದ್ಯಂತ ಎಲ್ಲವನ್ನೂ ಸಹಿಸುವ ಶಕ್ತಿ ನೀಡುತ್ತದೆ. ಕಾರಣ ನಮ್ಮ ಪಾಯಿಂಟ್ ಪ್ರೀತಿಸುವ ವ್ಯಕ್ತಿ. ಕಾರಣ ಅವರು ನಾಳೆ ನಮ್ಮೊಡನೆ ಇರಬಹುದು ಅಥವಾ ಇಲ್ಲದೆ ಇರಬಹುದು. ಇರುವಷ್ಟು ದಿನ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು, ಕೇರ್ ಮಾಡುವುದು ನಮ್ಮ ಕರ್ತವ್ಯ. ಅದೇ ನಿಜವಾದ ಪ್ರೀತಿ. ಆ ಪ್ರೀತಿ ಸಿಕ್ಕಿದ ಮನುಷ್ಯ ಮಾತ್ರ ಬದುಕನ್ನು ನಿಜವಾಗಿ ಎಂಜಾಯ್ ಮಾಡ್ತಾನೆ. ಇಲ್ಲ ಅಂದರೆ ಪರ್ವತದ ತುದಿಗೆ ಹತ್ತಿ ಎಣ್ಣೆ ಹೊಡೀತಾ, ಸಿಗರೇಟ್ ಸೇದುತ್ತಾ ಅದರಲ್ಲೇ ಖುಷಿ ಪಡ್ತಾ ಇರ್ತಾನೆ. ಹೆಂಗಸರು ಅದೇನೇನೋ ಸಂಘ, ಡಾನ್ಸ್, ಮಹಿಳಾ ಕ್ಲಬ್, ಟೂರ್  ಅಂತ  ಸುತ್ತುತ್ತಾ ಇರ್ತಾರೆ. ನಿಜವಾದ ಪ್ರೀತಿ ಇರುವವರು ನಾನು ಬ್ಯುಸಿ ಎಂದು ಎಂದಿಗೂ ಹೇಳಲಾರರು. ಅದೇ ಮಾತನ್ನು ಪ್ರೀತಿಯಿಂದ ಒಂದು ನಿಮಿಷದಲ್ಲಿ ಮನವರಿಕೆ ಮಾಡಿ ಕೊಡುತ್ತಾರೆ ಅಲ್ಲವೇ? ಬೈಗುಳವನ್ನೂ , ಬುದ್ದಿ ಮಾತುಗಳನ್ನೂ ಅಂದವಾದ ಪದಗಳಲ್ಲಿ ಹೇಳಿದರೆ, ನಿಧಾನವಾಗಿ ಹೇಳಿದರೆ, ಮನ ಮುಟ್ಟುವಂತೆ ಅರ್ಥ ಮಾಡಿಸಿದರೆ ಪ್ರೀತಿ ಕಡಿಮೆ ಆಗುವುದೇ? ಒಟ್ಟಿನಲ್ಲಿ ಮನುಷ್ಯನನ್ನು ನಿಜವಾದ ದಾರಿಯಲ್ಲಿ ಸರಿಯಾಗಿ ಕರೆದುಕೊಂಡು ಹೋಗುವುದು ನಿಷ್ಕಲ್ಮಶ ಪರಿಶುದ್ಧ ಪ್ರೀತಿ ಮಾತ್ರ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
02.10.2023

ಹಾರೈಕೆಗಳು

ಗೆಳತಿ ಶಕುವಿಗೆ

ನಿನ್ನ ಒಡನಾಟದ ಆ ಸವಿ ಅದೆಂತು ಮರೆಯಲು ಸಾಧ್ಯ ಗೆಳತಿ? ಜೊತೆಗೆ ಕಳೆದ ಮೂರು ವರುಷಗಳ ನೆನಪು ನೂರು ವರುಷಗಳವರೆಗೆ. ಕಠಿಣ ಪರಿಶ್ರಮ ,ಶ್ರದ್ಧೆ, ವಿಶ್ವಾಸ ,ತನ್ನತನ , ಕಷ್ಟ ಸಹಿಷ್ಣುತೆ, ಎಲ್ಲಾ ಸಂದರ್ಭಗಳಲ್ಲಿ ಸ್ಥಿತಪ್ರಜ್ಞತೆ ಇವುಗಳೆಲ್ಲ ನಾ ನಿನ್ನ ನೋಡಿ ಹಾಗೂ ನಿನ್ನ ಗೆಳೆತನದಲ್ಲಿ ಕಲಿತ ಗುಣಗಳು.ನಿನ್ನ ಗೆಳೆತನ ನನಗೆ ಬಹಳ ಒಳ್ಳೆಯ ಗುಣಗಳನ್ನು ಕಲಿಸಿಕೊಟ್ಟಿದೆ ಎಂದರೆ ತಪ್ಪಲ್ಲ. ಬದುಕಿನಲ್ಲಿ ಉತ್ತಮ ಗೆಳೆಯರನ್ನು ಹೊಂದುವುದು ಕೂಡ ಒಂದು ದೈವದತ್ತ ವರವೇ ಸರಿ.
ಉತ್ತಮ ಗೆಳೆಯರು ಮತ್ತು ಉತ್ತಮ ಪುಸ್ತಕಗಳು ನಮ್ಮ ಜೀವನವನ್ನು ಬಹಳಷ್ಟು ನಿರ್ಧರಿಸಿದೆ ಎಂದು ತಿಳಿದವರು ಹೇಳುತ್ತಾರೆ. ನನ್ನ ಜೀವನದಲ್ಲಿ ನಾನು ಏನಾದರೂ ಅಲ್ಪಸಲ್ಪ ಸಾಧಿಸಿದ್ದರೆ ಅದರಲ್ಲಿ ನಿನ್ನ ಪ್ರಭಾವವು ಇರಬಹುದು ಎಂದು ನನ್ನ ಅನಿಸಿಕೆ. ಯಾವುದೇ ಸಾಧನೆಗೆ ಹೆದರಬೇಕಾದ ಅವಶ್ಯಕತೆ ಇಲ್ಲ ಧೈರ್ಯ ಮುಖ್ಯ ಎಂದು ಆದಾಗ ಹೇಳಿಕೊಟ್ಟ ಗೆಳತಿ ನೀನು. ನೋವಿನಲ್ಲಿ ನಗಿಸಿ ಬದುಕಿಗೆ ಧೈರ್ಯ ತುಂಬಿದ ಶಕ್ತಿ. ನಿನ್ನ ನೋಡಿ ಕಲಿಯುವುದು ಬಹಳಷ್ಟು ಇದೆ.
ಸಾಧನೆ ನಮ್ಮ ಆಲೋಚನೆಗಳನ್ನು ತಲುಪಬಲ್ಲ ಸಾಧನ ಎಂಬುದನ್ನು ನಿನ್ನಿಂದ ಕಲಿತೆ. ಯಾರು ಏನೇ ಹೇಳಿದರೂ ನಮ್ಮ ಮನದ ಮಾತನ್ನು ಕೇಳಿ ಅದರಂತೆ ನಡೆಯಬೇಕು ಎಂದು ತೋರಿಸಿದ ದಿಟ್ಟೆ ನೀನು .

ನಿನ್ನ ವಿದ್ಯಾರ್ಥಿಗಳು ಅದೃಷ್ಟವಂತರು. ಒಂದು ದಿನವಾದರೂ ನಿನ್ನ ವಿದ್ಯಾರ್ಥಿಯಾಗಿ ನಿನ್ನ ತರಗತಿಯಲ್ಲಿ ಕುಳಿತುಕೊಳ್ಳಲು ಆಸೆ ಇದೆ. ಸಾಧನೆಗೆ ಸಮಯ ಬೇಕಿಲ್ಲ. ಯಾವಾಗಲೂ ಸಾಧಿಸಬಹುದು, ಮನಸ್ಸು ಮುಖ್ಯ ಎಂಬುದನ್ನು ಬದುಕಿನಲ್ಲಿ ನಿಜವಾಗಿ ತೋರಿಸಿಕೊಟ್ಟ ನಿನಗೆ ಜನುಮ ದಿನದ ಶುಭಾಶಯಗಳು.
ಉತ್ತಮ ಭವಿಷ್ಯ ಕ್ಕೆ ಮನದುಂಬಿ ಹಾರೈಕೆಗಳು. ಸಾಧನೆ ಮತ್ತಷ್ಟು ಹೆಚ್ಚಲಿ. ನಿನ್ನ hard work, dedication, smiling nature, disciplined life ನನ್ನಲ್ಲೂ ಬರಲಿ..
@ಹನಿಬಿಂದು@
04.11.2023