ಕವಿತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವಿತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಫೆಬ್ರವರಿ 9, 2026

ನನ್ನ ಕವಿತೆ

ನನ್ನ ಕವಿತೆ

ನನ್ನ ಕವಿತೆ ಸುತ್ತ ಚಿಟ್ಟೆ
ನೃತ್ಯ ಮಾಡಿ ಬರುತಲಿ
ಕಾವ್ಯ ದೇವಿ ಮೈಯ ಮರೆತು ee

ಲೀನವಾಗಿ ನಲಿಯಲಿ 

ರಾಗ ಭಾವ ಲಯ ಸ್ವರಗಳು
ಒಟ್ಟಿನಲ್ಲಿ ಬೆರೆಯಲಿ
ನಿತ್ಯ ಸತ್ಯ ಗತ್ಯ ಮಿಳಿಸಿ
ಕತ್ತಿನಲ್ಲಿ ಕುಣಿಯಲಿ

ನಾಲಗೆಯಲ್ಲಿ ಕುಣಿಯುತಲಿ 
ನೋಟದಲ್ಲಿ ಕಾಣುತಲಿ 
ಭಾವದಲಿ ಸ್ಪುರಿಸುತಲಿ 
ನೋವಿನಲಿ ನಗುವಿರಲಿ

ನೋವನೆಲ್ಲ ಅಳಿಸುತಲಿ 
ಕಷ್ಟಗಳ ಸರಿಸುತಲಿ
ಚಿಂತೆಗಳ ಬಿಸುಟುತಲಿ 
ಕನ್ನಡವ ಹರಸುತಲಿ 
@ಹನಿಬಿಂದು@
27.04.2025

ಶನಿವಾರ, ಏಪ್ರಿಲ್ 12, 2025

ಕವಿತೆ

ಕವಿತೆ
ಬರೆಯಲು ಹೊರಟೆ ಒಲವಿನ ಕವಿತೆ
ತಡೆವವರಾರಿಲ್ಲಿ
ನಾನು ಅವಳು ಒಂದೇ ಅಲ್ಲವೇ
ಹಿಡಿಯುವರಾರಿಲ್ಲಿ

ಮೋಹದ ಜಾಲದಿ ಬಂಧಿಯಾಗಿಹೆ 
ನೋಡುವರಾರಿಲ್ಲಿ
ನೋವು ನಲಿವು ಏನೇ ಬರಲಿ
ಕೇಳುವರಾರಿಲ್ಲಿ

ನನಗೆ ನೀನು ನಿನಗೆ ನಾನು
ಸರಿಸಾಟಿ ಬೇರೆಲ್ಲಿ
ಪ್ರೇಮವು ಶೂನ್ಯ ಬದುಕೇ ಮಾನ್ಯ
ತಿಳಿದವರ್ಯಾರಿಲ್ಲಿ 
@ಹನಿಬಿಂದು@
13.04.2025

ಭಾನುವಾರ, ನವೆಂಬರ್ 24, 2024

ನವಿಲುಗರಿ

ನೀನಿತ್ತ ನವಿಲುಗರಿ
ನಿನ್ನೊಳಿಹುದು ತಲೆಯ ಮೇಲೆ ಅಂದದ ನವಿಲುಗರಿ
ತನ್ನೊಳಗೆ ತಾನು ಕಲಿತು ಮೆರೆಯಬೇಕು ಸಿರಿ

ದೀಪ ಬೆಳಕು ಶಾಂತಿ ಮಂತ್ರ ಭಕ್ತಿ ಬೇಕು ಸದಾ
ಕೃಷ್ಣ ನಿನ್ನ ಕೊಳಲ ದನಿಯ ಕೇಳಿ ನಾನು ಫಿದಾ
ಗರಿಯ ಬಿಚ್ಚಿ ಕುಣಿವ ನವಿಲ ಖುಷಿಯ ಹಾಗೆ ಇಂದು
ನಿನ್ನ ನೆನೆದು ಬಾಳಿನಲ್ಲಿ ನಿತ್ಯ ಹಸಿರು ಮುಂದು

ಚುಕ್ಕೆ ತಾರೆ ಹೊಳೆಯುವಂತೆ ಮನದ ತುಂಬ ನಗು
ಪಕ್ಕದಲ್ಲಿ ರಾಧೆ ಇರಲು ಬಾಳ ಜೊತೆ ಹಿಗ್ಗು
ನಾನು ನೀನು ಎನಲು ಏನು ಬೇರೆ ಎಂಬ ಭಾವ
ಪ್ರೀತಿಯಲ್ಲಿ ಎಲ್ಲರೊಂದೆ ನೋವ ನೀಗಿ ಜೀವ

ತಾನು ತನ್ನದೆನುವ ತನ್ನತನದ ನೋವು ಸಾಕು
ನೀನೇ ಎನಲು ಬದುಕ ನಾವೆ ಮುಂದೆ ಸಾಗ ಬೇಕು
ಮುದದಿ ನಂಬಿ ದಿನವ ಕಳೆಯೆ ಹಿತವು ಇಹುದಿಲ್ಲಿ
ಸಂಗೀತದ ಅಲೆಯು ಹೊಮ್ಮಿ ನಿತ್ಯ ಗಾನ ಚೆಲ್ಲಿ
ಹನಿ ಬಿಂದು 
24.11.2024

ಶುಕ್ರವಾರ, ಅಕ್ಟೋಬರ್ 25, 2024

ಭಾವಗಳು

ಭಾವಗಳು

ಭಾವಗಳ ತೂಕವದು ಭಾವನೆಗೆ ನಿಲುಕದ್ದು
ಅಲ್ಲವೇ ನನ್ನೊಲವೆ ಕೇಳು ನೀನು?
ನಾವೆಯಲಿ ಪಯಣಿಗರು ನಾವೆಲ್ಲ ಇಲ್ಲಿ
ಸಲ್ಲದು ರೋಷ ದ್ವೇಷ ಮೋಸದಾಟ

ಕಾವ ಕಬ್ಬಿಣದ ತುದಿಯ ನಡಿಗೆ ಬೇಕಿಲ್ಲಿ
ಸಾವು ಬರುವರೆಗೆ ನಿತ್ಯ ಪಯಣ
ನೋವ ನುಂಗುತ್ತಾ ನಗಬೇಕು ಸತ್ಯ
ಬೇವು ಬೆಲ್ಲದ ಜೀವನದ ಸಾಂಗತ್ಯ

ತಾನು ತನ್ನದು ತನಗೆ ಎನುವ ಆಸೆಯು ಬೇಡ
ನಾವು ನಮ್ಮದು ನಮಗೆ ಎನ್ನುವುದು ಇರಲಿ
ಕಾವು ಕೊಡುತಲಿ ಬಿಸಿಯ ಹೆಚ್ಚಿಸಿ ಜೀವ
ಮೊಳೆಯುವ ತವಕ ಹೊಸ ಬಾಳಿಗಾಗಿ

ಭಾವನೆಯ ಭರವಸೆಯು ನಾಳಿನ ನಂಬಿಕೆಯು 
ಭೋಗ ಭಾಗ್ಯದ ಆಸೆ ಒಳಗೊಳಗೆ 
ಜಾವದಲಿ ಎದ್ದು ಆಟ ಪಾಠದಲಿ ಬಿದ್ದು
ನೋಟದೊಳಗಿನ ಮನದ ಯೋಚನೆಯ ಬೇರು..
@ಹನಿಬಿಂದು@
25.10.2023

ಗುರುವಾರ, ಸೆಪ್ಟೆಂಬರ್ 19, 2024

ಕವಿತೆ

ಕವಿತೆ
ರಾಗ - ಗಜಮುಖನೆ

ಎಡ್ಡೆ ಮಲ್ತಿ ಜನಕ್‌ಲೆಗ್ ನ್ಯಾಯ ತಿಕ್ಕುಂಡು 
ರಡ್ಡ್ ಬಗೆಪಿ ಮಾನ್ಯನ್ ದೇವೆರ್ ತೂವೊನೊಡು//ಪಲ್ಲವಿ//

ಕಾಸ್ ಕೈಟ್ ಪತ್ತ್ ಮೆರೆಪಿ ಶೋಕಿ ದಾಯೆ?
ಮೋಸ ಮಲ್ತ್ ಬದುಕುನೈನ್ ಬುಡ್ದು  ಆಯೇ /೨ಸರಿ/
ಮಾತೆರ್ಲಾ ನಮ್ಮಲೆಕನೆ  ಪಂದ್ ಬದ್‌ಕಿಯೆರ್ಡಾ
ದೇವೆರ್ಲಾ ಮರಪಯೇರ್ ಎಡ್ಡೆ ಮದಿಪು ಕೊರ್ದು //೧//

ತಾನ್ ತನ್ನ ತನ್‌ಕೆ ಪಂದ್ ದಿನಲ ಕಲೆಯೆoದಾoಡ 
ದಾನೆ ಪಂದ್ ಕೇನರೇಗ್ ಏರ್ ಬರುವೆ ಪನ್ಲೇ/೨ಸರಿ/
ಈರ್ಲ ಬೋಡು ಮೇರ್ಲ ಬೋಡು ನಮ ಪೂರ ಒಂಜೇ
ಪನ್ಪಿ ಎಡ್ಡೆ ಮನಸ್ದಾಯಗ್  ದೇವೆರೆ ದಯೆ  ಉಂಡು//೨//
@ಹನಿಬಿಂದು@
19.04.2024

ಮೋಕೆ

ರಾಗ: ಜೊತೆಯಲಿ ಜೊತೆ ಜೊತೆಯಲಿ 

ಕವಿತೆ
ಮೋಕೆ

ಪಕ್ಕಿ ಪಾರುನ ಮೋಡ ಸೇರುನ
ಉಂದು ಮೋಕೆ ಅತಾ...//೩//
ಓ.. ಏತ್ ಎಡ್ಡೆಂತಿನ ಉಡಲ್..
ಎನ್ನ ಮನಸ್‌ದ ಪಾತೆರ ಈರೆ ಪಂಡರಾ....//ಪಕ್ಕಿ//

ಕಂಡ ಗುಡ್ಡೆ ನೀರ್ ಕಡಲ್ ನಮಕೆ ಪಂತಿನ...//೩//ಆಹಾ....
ಸೇರ್‌ದ್ ನಲಿಪುಗ ಒಟ್ಟು ನಡಪುಗ
ಕನತ ಊರುನು ನಮ ಸೇರ್‌ಗ
ಬದ್‌ಕ್‌ದಾ ಪೊಸ ಕತೆನ್‌ಲಾ
ಒಟ್ಟಾದೇ ನಮ ಬರೆವೊಡು
ಬಲೆ..ಇಡೆಗೆ..ನಮ್ ಸೇರ್ದ್ ನಲಿಪುಗಾ.../ಪಕ್ಕಿ/
@ಹನಿಬಿಂದು@
19.06.2022

ಮಂಗಳವಾರ, ಆಗಸ್ಟ್ 13, 2024

ತುಳು ಕವನ

@prem Ramesh shetty
ಮೋಕೆ 

ಮೋಕೆ ಬೊರ್ಚ ಬಾಳ ತೇರ್ 
ನೂಕು ನೂಕು ಪೋಯೆರೆ 
ತೂಕ ನಾಲ್ ದಿನಲ ನಮ
ಮಿತ್ ಪೋಯರಾಪುಜಾ...

ನ್ಯಾಯ ನೀತಿ ತತ್ ಪೋಪಿ
ಗುಣಲ ನಮ್ಮ ಅತ್ ಯೇ
ಕಾಯ ಮಾಯ ಗೊತ್ತೇ ಇಜ್ಜಿ
ಪೊಯರುಂಡು ಪೂರಯೆ

ತಾಲ್ವೆ ಮೋಕೆ ಶಾಂತಿ ಕುಸಿ
ಬೋಡು ನಮಕ್ ಏಪಲ 
ತಾದಿ ತತ್ತಿನಾಂಡ ಬರೊಲಿ 
ಕೇಂದ್ ಪತ್ ಇಲ್ಲಗ್ಲ 

ಯಾನ್ ಈರ್ ಪನ್ ಪಿ ವಚನ
ಬೊರ್ಚಿ ನಮಕ್ ಏಪಲ 
ನಮ ಪನ್ ಪಿ ಧ್ಯೇಯ ವಾಕ್ಯ
ದೊರೆಯದೊಂತೆ ದಿನಕ್ಲ
@ಹನಿಬಿಂದು@

ಗುರುವಾರ, ಜುಲೈ 18, 2024

ಅಪರ್ಣಾ ಗೆ ಅರ್ಪಣೆ

ಅಪರ್ಣಾ ಗೆ ಅರ್ಪಣೆ

ಬಂಧುಗಳು ಬಳಗದವರು
ಸ್ನೇಹಿತರು ಊರವರು
ಎಲ್ಲರೂ ನೆನೆಯುತಿಹರು
ಈಗ, ಎಲ್ಲಾ ಮುಗಿದ ಬಳಿಕ

ನೆನಪುಗಳ ಹಾಡುವರು
ಬರೆಯುವರು ಹೇಳುವರು
ಅಸೌಖ್ಯದ ಕಾರಣವ
ಇದೀಗ, ಎಲ್ಲಾ ಮುಗಿದ ಬಳಿಕ 

ರೇಡಿಯೋ ಧಾರಾವಾಹಿ
ಚಂದನದ ಕಾರ್ಯಕ್ರಮ
ನಿರೂಪಣೆ ನಟನೆ
ಅಂದದ ಕನ್ನಡಾಲಾಪನೆ 
ಇದೆಲ್ಲವೂ ನಿಂತಿತು
ಕರ್ನಾಟಕ ಬರಿದಾಯಿತು
ತುಂಬಲಾರದ ನಷ್ಟವಾಯ್ತು

ಹುಟ್ಟಿ ಬರಲಿ ಇನ್ನೂ
ನಿನ್ನಂಥ ಹೆಣ್ಣು ಮಗಳು
ಕನ್ನಡವ ಉಳಿಸಲು
ಕನ್ನಡಮ್ಮ ಹರಸಲು
ಬೆಳೆದು ಭಾಷೆ ಬೆಳೆಸಲು

ಕನ್ನಡ ನುಡಿ ನುಡಿಗಳಲಿ
ಇಲ್ಲಿ ನಿನ್ನ ಹೆಸರಿಹುದು
ಹೋಗಲಿಲ್ಲ ಮೆಟ್ರೋ ಧ್ವನಿ
ಎಂದೆಂದಿಗೂ ಶಾಶ್ವತ ಖನಿ 
ಸತ್ಯಕ್ಕೆ ಎಂದೂ ಸಾವಿಲ್ಲ
ಎಂದು ತೋರಿಸಿದ ಮಣಿ 
@ಹನಿಬಿಂದು@
12.07.2024

ಭಾನುವಾರ, ಜುಲೈ 7, 2024

ಮಾನಾದಿಗೆ

ಮಾನಾದಿಗೆ

ಮಾನಾದಿಗೆ ಕೊರಿಯರೆ ನಮ
ಮಾನವೆರಾದ್ ಮಾನವತೆನ್ 
ಮೆರೆಯೊಡಾಯಿನ ಕಾಲ
ಇತ್ತೆ ಬೈದ್ oಡ್ ಅಣ್ಣಾ ಅಕ್ಕಾ ಅಕ್ಯೆರೆ 

ಕೊರ್ದು ಗೆತೊನ್ನ ಮನಸ್
ಉಡಲ್ ದಿoಜಿದಿ ಮೋಕೆಡ್ 
ಕಡಲ ಇಸ್ತಾರದ ಕುಸಿಟ್ 
ಮಾನಾದಿಗೆ ಕೊರ್ಪಿನವು 
ನಮ್ಮ ತುಳುವೆರೆ ಕಟ್ಟ್ 

ಐಸಿರದ ಮಾನಾದಿಗೆ
ಗೆತೊನರೆಗ್ಲಾ ಪುಣ್ಯ ಬೋಡು 
ಕೊರ್ಪಿನ ಕೈಕ್ ಲಾ ತಾಕತ್ ಬರೊಡು 
ಮನಸ್ ಮೈದಾನ ಅವೊಡು 
ಪರಪ್ಪತ್ತಿಗೆ ತೂಪಿನoಚ ಆವೋಡು

ಮಾನಾದಿಗೆ ಕೊರೊಡು 
ಮಾನಾದಿಗೆ ಗೆತೊನೊಡು 
ಕೊಚ್ಚೊನರೆ ಬಲ್ಲಿ ಏಪಲ 
ಯಾನ್ ಎನ್ನನೇ ಪನ್ಪಿನ 
ಮೂಲು ದಾಲ ಇಜ್ಜಿ 
ಬನ್ನಗ ಪೋನಗ ಕಾಲಿ
ಕೈಲ ಮೈಲ ಮಾತ್ರ!
ತಿಕ್ಕಿನ ಮಾನಾದಿಗೆಲ
ಮೂಲೆ ಬಾಕಿ!
@ಹನಿಬಿಂದು@
07.05.2024

ಗುರುವಾರ, ಜೂನ್ 27, 2024

ಸತ್ಯಕ್ಕೆ ಸತ್ವವಿಲ್ಲ

ಸತ್ಯಕ್ಕೆ ಸತ್ವವಿಲ್ಲ 

ಮನದ ಭಾವವೆಲ್ಲ ಇಂದು
ಬತ್ತಿ ಹೋದ ಹಾಗಿದೆ
ಹಕ್ಕಿ ಹಾರಿ ಹೋಗಿ ತಾನು
ಮರದ ಮೇಲೆ ಕುಳಿತಿದೆ

ಹಿಗ್ಗಿನಿಂದ ಬೇರೆ ಮರಿಗೆ
ಗುಟುಕು ನೀಡಿ ಸಲಹಿದೆ
ಬೇಡ ಬೇಡವೆಂದು ತನ್ನ
ಬಳಿಯೆ ಕರೆದುಕೊಂಡಿದೆ

ಕಣ್ಣೀರೆಲ್ಲ ಹೆಪ್ಪುಗಟ್ಟಿ
ಮಂಜುಗಡ್ಡೆಯಾಗಿದೆ
ನೋವ ಕಡಲು ಉಕ್ಕಿ ಹರಿದು
ಸಾವು ಸನಿಹ ಕರೆದಿದೆ

ಬೇನೆ ಬೇಸರೆಲ್ಲ ಸೇರಿ
ಯಾಕೋ ನಗೆಯು ಮಾಸಿದೆ
ಆದರೇನು ತನಗೆ ತಾನೇ
ಸರಿಯ ಪಡಿಸದಾಗಿದೆ

ಬೇರೆ ಬೇರೆ ಮನವು ನಿತ್ಯ
ಆಲೋಚನೆ ಬೇರೆ ಸತ್ಯ
ನಂಬಿಕೆಯೂ ಆಯ್ತು ಮಿಥ್ಯ
ಭರವಸೆಗೆ ಇಲ್ಲ ಸತ್ವ

@ಹನಿಬಿಂದು@
28.06.2024


ಗುರುವಾರ, ಜೂನ್ 20, 2024

ಅವನು

ಅವನು

ಮನೆಗೆ ಬಂದೆ, ಬಟ್ಟೆ ಬದಲಾಯಿಸಿದೆ
ಕೈ ಕಾಲು ತೊಳೆದು ಮೊಬೈಲ್ ಒತ್ತುತ್ತಾ ಕುಳಿತೆ,
ಕಾಫಿ ಬಂತು ಕುಡಿದೆ, ಲೋಟವಿಟ್ಟೆ 
ತಿಂಡಿ ಬಂತು ತಿಂದೆ, ತಟ್ಟೆ ಇಟ್ಟೆ 

ಕೈ ತೊಳೆದೆ ಮೊಬೈಲ್ ಹಿಡಿದೆ
ವಾಟ್ಸ್ ಆ್ಯಪ್, ಮುಖ ಪುಟ, ಇನ್ಸ್ಟಾ 
ಮತ್ತೆ ವಾರ್ತೆ, ಒಂದಿಷ್ಟು ರೀಲ್ಸ್ ನಗು
ಮತ್ತೆ ಎದ್ದೆ ಸ್ನಾನ ಮಾಡಿ ಬಂದೆ

ರಾತ್ರಿ ಆಯ್ತು ಊಟ ಮಾಡಿ 
ಮೊಬೈಲ್ ಒತ್ತುತ್ತಾ ಹಾಗೆಯೇ ಮಲಗಿದೆ

ಬೆಳಗ್ಗೆ ಎದ್ದೆ,  ಹಲ್ಲುಜ್ಜಿ, ಸ್ನಾನ ಮಾಡಿದೆ
ಕಾಫಿ ತಿಂಡಿ ಆಯ್ತು, ಮೊಬೈಲ್ ನೋಡಿದೆ
ಕಾರು ಸ್ಟಾರ್ಟ್ ಮಾಡಿ ಕೆಲಸಕ್ಕೆ ಹೊರಟೆ 

ಮಾರುಕಟ್ಟೆಗೆ ಹೋಗಿ ತರಕಾರಿ ತಂದೆ...
ಸಂಜೆ ಮನೆಗೆ ಬಂದೆ, ........
.....ಹೀಗೆಯೇ ಬದುಕು!
ಕಾರಣ ನನಗಿಲ್ಲಿ ಮನೆಯಲ್ಲಿ ಬೇರೆ ಕೆಲಸವಿಲ್ಲ!
@ಹನಿಬಿಂದು@
20.06.2024

ಶುಕ್ರವಾರ, ಏಪ್ರಿಲ್ 5, 2024

ಪಯಣ

ಪಯಣ

ಅತ್ತಲು ಇತ್ತಲು ಸುತ್ತಲು ಮುತ್ತಲು
ಕತ್ತಲು ಹಗಲಲು ಸಂಜೆ ಬೆಳಕಲು
ಸಾಗುತ ಜೀವನ ಯಾನ ಮುಂದಕೆ
ತೊರೆದು ಸಾವಿರ ನೆನಪ ಹಿಂದಕೆ

ಬಾನಿನ ಆಚೆಗೂ ಭೂಮಿಯ ಒಳಗೂ
ಸಾಗರದಾಳಕು ಮೋಡದವರೆಗೂ
ನೀರು, ಗಾಳಿ, ಮಣ್ಣು ಆಕಾಶ
ಎಲ್ಲಾ ಕಡೆಯೂ ಇವೆ ಅವಕಾಶ

ಹೋಗುತ ಬರುತ ತಿರುಗುತ ನಡೆಯುತ
ಆಚೆಗೂ ಈಚೆಗೂ ಮೇಲಕು ಕೆಳಕೂ
ಸಾಗರದಾಚೆಗೂ ಬಾನಿನ ತುದಿಗೂ
ಹಿಮದ ಪರ್ವತಕು ಜಲದ ಬುಡಕೂ

ಸಾಗಿದೆ ಯಾನ ಸಾವಿನ ಕಡೆಗೂ
ಕ್ಷಣ ಕ್ಷಣ ಬೆಳೆಯುತ ದೇವನ ಎಡೆಗೂ
ಸಾಧನೆ ಮಾಡುತ ಪರರನು ಆಡುತ
ಸೋಲನು ಗೆಲ್ಲುತ ಪ್ರೀತಿಗೆ ಸೋಲುತ
ಸಾಗಿದೆ ಪಯಣ ಮೌನದ ಕಡೆಗೂ
@ಹನಿಬಿಂದು@
05.04.2024

ಗುರುವಾರ, ಏಪ್ರಿಲ್ 4, 2024

ಬಾಳು ಬೆಳಗಲಿ

ಬಾಳು ಬಂಗಾರವಾಗಿರಲಿ

ಬಂಗಾರದಂತಹ ಬದುಕ  ಧಾರೆ ಎರೆದಿರುವೆ
ಬಂಧನವಾಗದ ಹಾಗೆ ಪೊರೆಯುವಂತಾಗಲಿ 
ಭೃಂಗದ ಹಾಗಿದ್ದೆ ಅತ್ತಿತ್ತ ಓಡಾಡುತ್ತಾ ಆರಾಮದಲಿ
ಭಯವಿಲ್ಲದ ಬಾಳ ಕಟ್ಟಿ ಕೊಡುವಂತಾಗಲಿ 

ಭೋಗ ಭಾಗ್ಯದ ಅತಿಯಾಸೆ ಎನಗಿಲ್ಲ
ಭವ್ಯ ಭವಿತವ್ಯವ ರೂಪಿಸುವ ಕನಸು ನನಸಾಗಲಿ
ಬೆಳ್ಳಿ ಬಂಗಾರದ ಧನದ ದುರಾಸೆ ಇಲ್ಲಿಲ್ಲ
ಬೆವರ ಹರಿಸಿ ದುಡಿದ ಬಾಳು ಬೆಳಗಲಿ

ಬಿಚ್ಚು ಮನಸಿನಲಿ ಮುನಿಸು ಬಾರದಿರಲಿ
ದೇವನೊಲುಮೆಯು ಸದಾ ಜೊತೆಗಿರಲಿ
ಅದೃಷ್ಟ ಅದೃಶ್ಯ ಶಕ್ತಿಯಾಗಿ ಬರುತಿರಲಿ
ಅರಗಿನ ಮನೆಯಾದರೂ ಖುಷಿಯು ಅರಳಲಿ

ದೇವರ ವರ ಪ್ರಸಾದ ನಿತ್ಯ ಜೊತೆಗಿರಲಿ
ಮನ ಮಂದಿರದಲಿ ಜ್ಯೋತಿ ಬೆಳಗುತಿರಲಿ 
ಸ್ನೇಹ ಪ್ರೇಮದ ಕಡಲುಕ್ಕಿ ಹರಿಯಲಿ
ಬಿಳಿಯ ತೆರೆಗಳು ಕಷ್ಟಗಳ ದೂರಾಗಿಸಲಿ

ಮಮತೆ ಸಾಂತ್ವನ ಝರಿಯಾಗಿ ಉಕ್ಕಲಿ
ಮಾನವತೆಯ ಹಾದಿಯಲಿ ಸಾಗುವಂತಾಗಲಿ
ಬೇರೆಂಬ ಭೇದವಿಲ್ಲದೆ ಒಂದಾಗಿ ಸಾಗುತಲಿ
ಬದುಕ ಬೇರಿನ ರಸ ಸವಿಯುವಂತಾಗಲಿ

ಬೇನೆ ಬೇಸರ ಕಳೆದು ಹೋಗಲಿ
ಬುವಿಯ ಸುಖವು ಬಳಿಗೆ ಬರಲಿ
ಬೇವು ಬೆಲ್ಲದ ಬದುಕಿನೊಳಗೆ
ಬೆರೆತು ಬಾಳುವ ಭಾಷೆ ಉಳಿಯಲಿ
@ಹನಿಬಿಂದು@
04.04.2024

ಶನಿವಾರ, ಮಾರ್ಚ್ 30, 2024

ಮುಸ್ಸಂಜೆ

ಮುಸ್ಸಂಜೆ

ಬಾರೆ ಬಾರೆ ಮುಸ್ಸಂಜೆ ಹೊತ್ತಲ್ಲಿ
ತೋರೆ ಮೊಗವ ಪ್ರೀತಿಯ ತುತ್ತಲ್ಲಿ//

ಜಗವ ಮೆರೆವ ಆಸೆ ನನ್ನಲ್ಲಿ
ನಿನ್ನ ಹೊರತು ಯಾರಿಲ್ಲ ಬಾಳಲ್ಲಿ
ಸ್ನೇಹ ಪ್ರೇಮ ಮೋಹ ನೀನೇ
ಕ್ಷೇಶ ಕಳೆವ ಪ್ರಪಂಚ ತಾನೇ//ಬಾರೆ//

ಪಾರ್ಕು ಸಿನೆಮಾ ಹೋಟೆಲೆಮಗೆ
ಸುತ್ತಿ ಸುತ್ತಿ ಬಹಳ ಸಲುಗೆ
ನೀನು ನಾನು ನಾನು ನೀನು
ಪರರ ಚಿಂತೆ ನಮಗೆ ಏನು!//ಬಾರೆ//

ಬದುಕು ಎಲ್ಲ ನಿನ್ನ ಜೊತೆಗೆ
ಕಳೆಯುವಾಸೆ ಹೀಗೆ ನನಗೆ
ಪ್ರತಿ ಸಂಜೆಯೂ ನಡೆವ ಘಳಿಗೆ
ಕೈ ಹಿಡಿದು ಇರುವ ಬೆಸುಗೆ//ಬಾರೆ//

ಏಳೇಳು ಜನುಮ ಇದ್ದರೂನು
ನಿನ್ನ  ಜೊತೆಗೆ ತಾನೇ ನಾನು
ಭಯವು ಏಕೆ ನೀನೇ ಜೇನು
ಬಾಳಿನಲ್ಲಿ ನಾವೊಂದೆ ಅಲ್ವೇನು? //ಬಾರೆ//
@ಹನಿಬಿಂದು@
30.03.2024

ಶುಕ್ರವಾರ, ಮಾರ್ಚ್ 29, 2024

ಕಾತರವಿರಲಿ

ಕಾತರವಿರಲಿ

 ಆತುರ ಬೇಡ ಕಾತರವಿರಲಿ
ನಾಳೆಯ ಬಗೆಗಿನ ಬಾಳಿನಲಿ
ಸೂತ್ರದಾರನು ಮೇಲೆಯೆ ಇರುವನು
ಮಾತನಾಡದೆ ಮೌನದಲಿ

ರಾತ್ರಿಯೆ ಇರಲಿ ಹಗಲೇ ಆಗಲಿ
ತನುವಿಗೆ ಬೇಕು ವಿಶ್ರಾಂತಿ
ಜಾತಿ ಧರ್ಮಗಳು ಒಂದೇ ಆಗಿವೆ
ಮಾನವತೆಯ ಈ ಶ್ವಾಸದಲಿ

ಕಾಯಕ ಮಾಡದೆ ಕಾಯುತ ಕುಳಿತರೆ
ಸಿಗುವುದೇ ಹಸಿವಿಗೆ ಊಟ?
ಮಾಯದಿ ಬಂದು ತಥಾಸ್ತು ಎನುವನೆ
ಕೈಯಲಿ ಹಿಡಿದು  ಬಾಡೂಟ

ಕಸುವದು ಇರಲು ದುಡಿಯಲು ಬೇಕು
ಮಸಾಲೆ ತಿಂದ ದೇಹ
ದಣಿವು ಬಂದು ಕೇಳಲು ಉದಕವ
ಇಂಗಿಸಬೇಕು ದಾಹ..
@ಹನಿಬಿಂದು@
29.03.2024

ಮಂಗಳವಾರ, ಮಾರ್ಚ್ 26, 2024

ಹುಡುಕು

ಹುಡುಕು

ನಾನು ಕಳೆದು ಹೋಗಿದ್ದೇನೆ
ಕಳೆದೇ ಹೋಗಿದ್ದೇನೆ
ನನ್ನೊಳಗಿಂದ...
ನಿನ್ನೊಳಗಿರುವೆನೆ?
ಹುಡುಕಿ ನೋಡು ಒಮ್ಮೆ..
ಒಳಗಿರುವೆನೆ ನಿನ್ನ
ಹೊರಗೆ ಇರುವೆನೆ
ನಡುವೆ ಇರುವೆನೆ

ನಿನ್ನ ಒಳಗೆ ಹೊರಗೆ ನಡುವೆ
ತಪ್ಪಿದಲ್ಲಿ ಮನದ ಬದಿಗೆ
ಇಲ್ಲದಿರಲು ಹಿಂದೆ ಮುಂದೆ
ಮೇಲೆ ಕೆಳಗೆ ಎಲ್ಲಾ ನೋಡು
ನಿನ್ನ ಕಣ ಕಣಗಳಲ್ಲು
ಒಳಗೆ ಸೇರಿ ಹೋಗಿ
ಕರಗಿ ಹೋಗಿ ಕಾಣದಾಗಿ
ಮತ್ತೆ ಸೇರಿ ಹೋಗಿ
ಒಂದೇ ಆಗಿ ಬೇರೆ ಸಿಗದೆ
ಬೆರೆತು ಸೇರಿ ಹೋಗಿ

ಮತ್ತೆ ಹೇಗೆ ಹುಡುಕಿ ತಂದು
ಇಡಲು ನೀನು ನನ್ನ
ಹಾರಿ ಜಾರಿ ಹೋಗಲಾರೆ
ಅವಿತು ಒಳಗೆ ನಿನ್ನ
@ಹನಿಬಿಂದು@
26.03.2024


ಸೋಮವಾರ, ಮಾರ್ಚ್ 25, 2024

ಖುಷಿಯ ಕ್ಷಣ

ಖುಷಿಯ ಕ್ಷಣ

ಹೃದಯದೊಳಗೆ ಪ್ರೇಮ ವೀಣೆ
ಮೃದುವಾಗಿ ಮೀಟಿ ಹಾಡಲು
ಕೃತ್ರಿಮತೆಯ ಪರದೆ ಇರದು
ಭೃಂಗ ನಲಿದು ಹಾಡಲು..

ಗಮನ ದೀಪ ಪ್ರೀತಿ ಎಣ್ಣೆಯಲ್ಲಿ
ಉರಿದು ಬೆಳಗಲು
ಮೋಸ ಸುಳ್ಳು  ಕಷ್ಟ ನೋವು
ಸುಟ್ಟು ನಾಶವಾಗಲು

ಒಂದೇ ಜೀವ ಒಂದೇ ಒಲವ
ಮೊಲ್ಲೆ ಕಂಪು ಬೀರಲು
ಮುಂದೆ ಮುಂದೆ ಕೈಯ ಹಿಡಿದು
ಜೊತೆಗೆ ದಾರಿ ಸಾಗಲು

ಸಿಹಿಯ ನೀಡಿ ಕಹಿಯ ಮರೆತು
ಖುಷಿಯ ಕ್ಷಣವ ಸವಿಯಲು
ಬೇಧ ಭಾವವಿರದೆ ಮನದಿ
ನಲಿದು ನಾಟ್ಯವಾಡಲು..

ಬಾಳ ಕುಸುಮ ಬಿರಿದು ನಗಲು
ನೋವನೆಲ್ಲ ಮಾರಲು
ಆಳ ತಲುಪಿದಂತೆ ಪ್ರೀತಿ
ಕ್ಷಣವೂ ಇಲ್ಲಿ ಕಾವಲು..
@ಹನಿಬಿಂದು@
25.03.2024

ಮಂಗಳವಾರ, ಮಾರ್ಚ್ 19, 2024

ಶುಭ ಮುಂಜಾನೆ

ಶುಭ ಮುಂಜಾನೆ

ಬಂದಿದೆ ಹೊಸ ದಿನ ಹೊತ್ತು ಹೊಸತನ
ಬದುಕಿನ ಹಾದಿಯ ಮೆಟ್ಟಿಲಲಿ
ತಂದಿದೆ ಹೊಸ ಕಳೆ ಮೆತ್ತಿ ಮಧುವಿನ
ಸವಿಯನು ಸರ್ವರ ಮನಸಿನಲಿ

ರಾಜಗು ಮಂತ್ರಿಗು ಪ್ರಜೆಗೂ ಇಹುದು
ಇಪ್ಪತ್ನಾಲ್ಕು ಗಂಟೆ ಇಲ್ಲಿ
ಬಹು ನಾಜೂಕಲಿ ಬಳಸಲು ಬೇಕಿದೆ
ಸಾಧನೆ ಶಿಖರವ ಏರುತಲಿ 

ಅದೇ ರವಿ ಅದೇ ಚಿಲಿಪಿಲಿಯಾದರೂ
ನವ ಭಾವಗಳು ಹೊಮ್ಮುವವು
ಧರೆಯ ಮಾಸಗಳು ಬದಲಾಗುತ ಸಾಗುವ
ಹಾಗೆಯೇ ಬಾಳಿನ ಕ್ಷಣಗಳವು

ಹೊಸದಿನ ಹೊಸಮನ ತೆರೆಯಲಿ ಹೊಸತನು
ನವ ಕನಸುಗಳು ಮೂಡುತಲಿ
ನಾವೀನ್ಯ ಬೇಕಿಂದು ಎಲ್ಲರ ನೆನಪಿಗೆ
ಸಾಧನೆ ಪಥದಲಿ ಏರುತಲಿ..
@ಹನಿಬಿಂದು@
20.03.2024

ಗುರುವಾರ, ಫೆಬ್ರವರಿ 15, 2024

ಹರ ಲೀಲೆ

                  ಹರಲೀಲೆ

ಹರಶಿವ ಎನ್ನಲು ವರವನ್ನು ನೀಡುವ
ಪರಶಿವ ಎಂದೂ ಸಂತಸದಿ
ಪರರನ್ನು ಗೌರವ ಸ್ನೇಹದಿ ನೋಡುವ
ನರರನು ಕಾಯುವ ಸುಖ ನೀಡಿ

ಮಕ್ಕಳ ಪೊರೆವ ಈಶನ ಮನದಲ್ಲಿ 
ಕಕ್ಕುಲ ಇರದು ಅನವರತ
ಪಕ್ಕೆಲು ಬಲ್ಲು ಶಕ್ತಿಯ ಕೊಡುತ್ತಲಿ
 ಸಂಕುಲ ಬೆಳೆಸುವ ಅವ  ಸತತ

ನಕ್ಕರೆ ಅವನು ಚಂದಿರನಂತೆ 
ಸಕ್ಕರೆ ಯಂತಹ ಸಿಹಿಯವನು
ಸಿಕ್ಕರೆ ತಪ್ಪು ಬಿಡಲಾರೆನು ಅಂತೆ 
ಮೂರ್ಖರೆ ಕಲಿಯಿರಿ ಪಾಠವನು

ಪ್ರಾಣಿ ಪಕ್ಷಿಗಳ ಕೂಗು ಇಂಪಿನಲು
  ಶಿವನರಾಗವಿದೆ ನೋಡಿದಗೆ 
ಸುಖವನ್ನು ಹಂಚುತನಡೆವ ಜನರೊಳು 
ಸೌಖ್ಯದ ಹಾಡಿದೆ ಹಾಡಿದಗೆ//
@ಹನಿಬಿಂದು@
16.02.2024

ಶುಕ್ರವಾರ, ಡಿಸೆಂಬರ್ 15, 2023

ಬದುಕಿನ ಆಟ


ಬದುಕಿನ ಆಟ 

ಬಟ್ಟೆಯೊಳಗಿನ ದೇಹ ಕಾಣದು
ದೇಹದೊಳಗಿನ ಭಾವ ನಿಲುಕದು
ಭಾವದೊಳಗಿನ ಬಂಧ ತಿಳಿಯದು
ಭಾವ ಬಂಧಕೆ ಬಟ್ಟೆ ಸಾಕಾಗದು

ದಾರಿ ದೂರವೂ ಪ್ರೀತಿ  ಮಧುರ
ಕೋರಿ ಸಂಬಂಧವ ಮನವು ಸನಿಹ 
ಮಾರಿ ಅಷ್ಟ ಐಶ್ವರ್ಯ ಧನವನು
ಪಡೆಯಲಾಗದು ಪ್ರೀತಿ ಋಣವನು

ಮೋಹ ಕಾಮ ಸ್ವಾರ್ಥ ಮತ್ಸರ
ಶುದ್ಧ ಪ್ರೀತಿಯು ತರುವ ವಿಚಾರ
ತಾನು ತನ್ನದು ತನಗೇ ಬೇಕೆನುತ
ವೇಣು ನಾದದ ಬಲೆಗೆ ಬೀಳುತ

ಒಂಟಿ ಬದುಕು ತೀರಾ ನೀರಸ
ಗಂಟು ಹಾಕಲು ಪರರ ಸಾಹಸ
ಜಂಟಿಯಾಗಿ ಇರಲು ಕಷ್ಟವೂ
ತಂಟೆ ಮಾಡುತ ಜಗಳ ಕದನವೂ

ಪ್ರೀತಿ ನೆಮ್ಮದಿ ಶಾಂತಿ ಅರಸುತ
ಭೀತಿ ಬಾಳುವೆ ನಿತ್ಯ ಕಳೆಯುತ
ಕೋಟಿ ಹಣದ ಆಸೆ ಇಡುತ
ಮೇಟಿ ವಿದ್ಯೆಯೇ ಮೇಲು ಎನುತ

ಬದುಕಿನಾಟವು ಸಾಗಿ ಮುಂದು
ನೋವಿನಾಟಕೆ ಕೊನೆಯು ಎಂದು
ತನು ಮನದ ಸಂತಸ ಬಯಸಿ ಇಂದು
ಮನುಜ ಬಯಕೆಗೆ ಅಂತ್ಯ ಎಂದು?
@ಹನಿಬಿಂದು@
03.12.2023