ಮಂಗಳವಾರ, ಮೇ 20, 2025

ಬೇಸರವಾಗುತ್ತಿದೆ

ಜನರ ಮೇಲೆ ಬೇಸರವಾಗುತ್ತಿದೆ... 
ಮನಸ್ಸಿನ ಒಳಗೆ ಅದೇಕೋ 
ಯಾರಲ್ಲೂ ಹೇಳಿಕೊಳ್ಳಲಾಗದ
ಕರುಳು ಕಿತ್ತ ನೋವಾಗುತ್ತಿದೆ..

ಯಾರಲ್ಲಿ ಹೇಳುವುದು ಸಂಕಟ
ಯಾರಲ್ಲಿ ತೋಡಿಕೊಳ್ಳುವುದು ನೋವು? 
ಗಂಡಸರು ಕೆಟ್ಟವರೆ? 
ಎಲ್ಲಾ ಗಂಡಸರೂ ಒಳ್ಳೆಯವರೇ? 
ಅಜ್ಜ ಅಪ್ಪ ಮಾವ ಒಳ್ಳೆಯವರಾಗಿರಲಿಲ್ಲವೇ?
ಅಣ್ಣ, ತಮ್ಮ, ಕಸಿನ್ ಒಳ್ಳೆಯವರಲ್ಲವೇ?
ಗೆಳೆಯರು, ಸ್ನೇಹಿತರ ಸ್ನೇಹಿತರು ಕೆಟ್ಟವರೆ!

ಅತ್ತೆ ನಾದಿನಿ ಒರಗಿತ್ತಿ ಎಲ್ಲರೂ ಒಳ್ಳೆಯವರೇ?
ಹೆಂಗಸರು ಕೆಟ್ಟವರಿಲ್ಲವೇ 
ಆದರೂ....

ಎಲ್ಲೋ ಕಂಡೂ ಕಾಣದ ನೋವು
ಗಂಡಸರೆಂದರೆ ಭಯ ಅಭಯ
ನಂಬುವುದು ಹೇಗೆ...
ಕುಡುಕರೇ.... ಕೆಡುಕರೇ... ಕಟುಕರೆ..
ಉತ್ತರ ಯಾರಲ್ಲಿದೆ,?
ಉತ್ತರಿಸುವವರು ಯಾರು?

ಅವರ ಸಾಕಿ ಬೆಳೆಸಿದ 
ಅಮ್ಮ ಕೆಟ್ಟವಳೇ ?
ಹುಟ್ಟಿಸಿದ ಅಪ್ಪ ಕೆಟ್ಟವನೆ?
ಬುದ್ಧಿ ಹೇಳಿ ತಿದ್ದಿದ ಅಜ್ಜಿ ಅಜ್ಜ?
ಜೊತೆಗೆ ಹುಟ್ಟಿದವರು?

ಮತ್ತ ಹೆಚ್ಚಿಸಲು ಉಂಡ ಗಾಂಜಾ
ಸಿಗರೇಟು, ಬೀಡಿ ಇರಬಹುದೇ?
ಮತ್ತೇರಲು ಕುಡಿದ ಮಾಡಿರೆ ಕೆಡುಕು ಮಾಡಿತೇ?
ಮತ್ತೆ ಮತ್ತೆ ಮದವೇರಲೂ 
ಹೇಗೆ ಸಾಧ್ಯವಾಯ್ತು
ಹೆಣ್ಣು ಮಕ್ಕಳ ಮೇಲೆ ಕರುಣೆಯೇ ಇಲ್ಲವಾಯ್ತೆ!

ಹೆಣ್ಣೆಂದರೆ ವಸ್ತುವೇ?
ಭೋಗದ ಕಸವೇ?
ಮನೆಯ ಕೆಲಸದಾಕೆಯೇ!
ತಾಯಿಯನ್ನು ಹೊರತು ಪರರೆಲ್ಲ ಕೆಟ್ಟವರೇ 
ಕೆಟ್ಟವರನ್ನೆಲ್ಲ ಸಾಯಿಸುವುದಾದರೆ
ಅದೆಷ್ಟು ಕಟುಕ, ಕೊಲೆಗಾರರಿಲ್ಲ ಜಗದಲಿ
ದೇಶದಲ್ಲಿ, ರಾಜ್ಯದಲ್ಲಿ, ಧರೆಯಲಿ

ಆ ಮಗುವಿನ ದೇಹ ಯಾರಿಗೆ ನೋವು ಕೊಟ್ಟಿತ್ತು!
ಸಾಯಿಸುವ ಪಾಪ ತಾನು ಏನು ಮಾಡಿತ್ತು!
ಹೆಣ್ಣಾಗಿ ಹುಟ್ಟಿದ್ದೇ ಶಾಪವಾಯ್ತೆ
ಅವರ ಕೈಗೆ ಸಿಕ್ಕಿ ಹಾಕಿಕೊಂಡದ್ದಾದರೂ ಹೇಗೆ
ಅಮ್ಮನೇಕೆ ಅವಳನ್ನು ಒಬ್ಬಳನ್ನೇ ಹೊರಗೆ ಬಿಟ್ಟರು
ತಿರುಗಾಡಲು ಆಕೆ ಒಬ್ಬಳೆ ಹೋಗಿದ್ದಳೆ?

ಛೆ ಎಲ್ಲಾ ಪ್ರಶ್ನೆಗಳೇ..
ಉತ್ತರ ಹುಡುಕುವುದು ಎಂತು 
ಯಾರಲ್ಲಿದೇ ಉತ್ತರ
ಸಾಯಿಸಿದವರೂ ಮಾನವರೆ
ಸತ್ತವರೂ ಮಾನವರೇ
ಮಾನವತೆ ಇಲ್ಲದ ಮಾನವರು
ತಪ್ಪು ಯಾರದೋ
ಶಿಕ್ಷೆ ಇನ್ಯಾರಿಗೋ
ನೋವು ಮತ್ಯಾರಿಗೋ..
ಜಗದ ವಿಸ್ಮಯ...
ಅಸಹಾಯಕ ಬಾಳು ನಮ್ಮದು..
@ಹನಿಬಿಂದು@
17.05.2025

ಪ್ರೀತಿ

ಪ್ರೀತಿ

ನಾನೇ ನೆಟ್ಟ ಗಿಡ ಹೂ ಬಿಟ್ಟು ಕಾಯಾದಾಗಿನ ಖುಷಿಯ ಅನುಭವ! 
ಅಮ್ಮನ ಅಪ್ಪುಗೆಯಲ್ಲಿ ಮೈ ಮರೆತ ಸಂಭ್ರಮದ ಸದ್ಭಾವ!
ತಾನು ಬಗೆದುದು ತನಗೆ ದಕ್ಕಿದಾಗಿನ ಸಂತಸದ ಮುಖಭಾವ!
ಮನಸೆಲ್ಲ ಹಾಯಾಗಿ ಗಾಳಿಯಲ್ಲಿ ತೇಲಾಡಿದ ಮಧುರತೆಯ ಭಾವ!

ಏಕಾಂತತೆಯಲ್ಲೂ ನೆನೆದು ನಕ್ಕು ನೀರಾಗುವ ಮನಸ್ಸು!
ಒಂಟಿತನದಲ್ಲೂ ಒಡಲೊಳಗೆ ನುಗ್ಗಿ ಕಚಗುಳಿ ಇಡುವ ಹವಿಸ್ಸು!
ಯಾರಿಲ್ಲದೆಯೂ ನೆನಪಿಸಿ ತಾನೇ ನಗುವ ಕವಿ ಕನಸು!
ಪ್ರೀತಿಯಲಿ ದಶಕಗಳಷ್ಟು ಹಿಂದಕ್ಕೆ ಜಾರಿದ ಮಾನಸಿಕ ವಯಸ್ಸು !!

ಮತ್ತೊಮ್ಮೆ ಮಗದೊಮ್ಮೆ ದೇವರ ನೆನೆಯುವ ಕಾರ್ಯ!
ಸುಮ್ಮನೆ ಕುಳಿತರೂ ಒಂದಿಷ್ಟು ಹೊತ್ತು ಹೊತ್ತೊಯ್ಯುವ ಶೌರ್ಯ!
ಬದುಕ ಹಾದಿಯಲಿ ನಡೆಯುತ್ತಾ ಸಾಗಿದಂತೆ ಅದೇನೋ ಹೊಸ ಧೈರ್ಯ!
ಮತ್ತೆ ಮತ್ತೆ ಚುಂಬಿಸುತ್ತಿದೆ ನುಗ್ಗಿ ಬಂದು ಕೌಮಾರ್ಯ!!

ಅಲ್ಲಿ ಮೇಲು ಕೀಳು ದೊಡ್ಡ ಚಿಕ್ಕವರೆಂಬ ಬೇಧವಿಲ್ಲ!
ಬಡತನ ಸಿರಿತನಗಳ ರಾಶಿ ರಗಳೆಯು ಇಲ್ಲ!
ನಿನಗೆ ನಾನು ನನಗೆ ನೀನೆಂಬ ಮಾತಿನ ಹೊರತು ಕೂಡಿ ಕಳೆಯುವ ಲೆಕ್ಕಾಚಾರವಿಲ್ಲ!
ಒಂದೆಂಬ ಗುಣದ ನಡುವಿನ ಪರಿಶುದ್ಧ ಪ್ರೇಮದ ಹೊರತಾಗಿ ಮತ್ತೇನೂ ಕಾಣುತ್ತಿಲ್ಲ!!

ಪುಟ್ಟ ಹಕ್ಕಿ ಬಂದು ಎದೆಯೊಳಗೆ ಕಚಗುಳಿ ಇಟ್ಟಂತೆ
ಮುದ್ದು ಮಗು ಆಟವಾಡುತ್ತಾ ಹೊಟ್ಟೆಗೆ ಒದೆಯುತ್ತಾ ಚೀಪಿ ಹಾಲ ಕುಡಿದಂತೆ
ಕದ್ದ ಚಿನ್ನವ ಕಳ್ಳ ದೇವರೆದುರು ಅರ್ಪಿಸಿ ಬೇಕಾದಷ್ಟು ಇಟ್ಟುಕೊಂಡು ಉಳಿದುದ ಕೊಡು ಎಂದಾಗ ಸಿಕ್ಕಿದ ನಿಧಿಯಂತೆ
ಪುನಃ ಪುನಃ ಕರೆದು ಸಂತೈಸಿ ಹರಸಿ ಆಶೀರ್ವದಿಸಿ ಕೈ ಹಿಡಿದ ಬಂಧುವಿನಂತೆ

ಬಾನ ಬಯಲಲಿ ಸ್ವಚ್ಚಂದದಿ ಹಾರುವ ಹೊಸ ಹಕ್ಕಿಯ ನುಲಿಯದು
ಸ್ಥಾನ ಪಡೆದು ಮೇಲೇರಿದ ಮಂತ್ರಿಯ ನಗೆಯದು
ಮಾನ ಕಾಪಾಡಿಕೊಂಡು ಬದುಕುಳಿದ ಹೆಣ್ಣಿನ ಸೌಜನ್ಯದ ತುಡಿತವಿದು
ಮತ್ತದೇ ಎಳೆ ನಗು ಮತ್ತೊಂದು ತುಟಿ ಬಿರಿದ ಸಾಕ್ಷಿಯದು
@ಹನಿಬಿಂದು@
19.05.2025





ಶನಿವಾರ, ಮೇ 17, 2025

ಸತ್ಯ

ಬದುಕ ಬೇರಿನ ತೊಟ್ಟಿಲೊಳಗೆ
ನರಕ ಎಂಬ ಮಂಚದೊಳಗೆ
ನಾನು ನೀನು ಎನುವ ಮನುಜನು
ನೀತಿ ಕಲಿಯಲು ಸಾಧ್ಯವೇ?

ಅಪ್ಪ ಅಮ್ಮರು ಲೆಕ್ಕಕ್ಕಿಲ್ಲ
ಹಿರಿಯ ಕಿರಿಯಗೆ ಬೆಲೆಯೇ ಇಲ್ಲ
ಗೆಳೆಯರನ್ನೂ ಕೊಲುವರಲ್ಲ
ಮಾನವತೆಯು ಎಲ್ಲಿದೆ?

ಅಕ್ಕ ತಂಗಿ ಎನುವರಿಲ್ಲ
ಹೆಣ್ಣ ಬಾಳಿಗೆ ಧೈರ್ಯವಿಲ್ಲ
ದೇಹ ಬಳಸಿ ಹೊಡೆದು ಸಾಯಿಸಿ
ಮೋರಿಗೆಸೆದು ಹೋದರಲ್ಲ!

ಗಂಡುಗಳಿಗೂ ಹೆಣ್ಣುಗಳಿಗೂ
ಮಾನವತೆಯ ಹೇಳೋರ್ಯಾರು
ನಿತ್ಯ ಸಾವನು ನೋಡುತ್ತಿದ್ದರೂ
ತಾವೇ ಎನುತ ಮೆರೆವರಲ್ಲ!!

ದಾನ ದಯೆಯ ಮರೆತ ಜನರು
ಕಾಮ ಕ್ರೋಧ ಹೆಚ್ಚಿಸಿಹರು
ಮೋಹ ಮದದಿ ಉರಿಯುತಿಹರು
ಲೋಭ ಮತ್ಸರ ಕಾರುತಿಹರು

ತಲೆಯ ಬಾಗೋ ಗುಣವೇ ಇಲ್ಲ
ಬುದ್ಧಿ ಹೇಳಲು ಕೇಳ್ವರಿಲ್ಲ
ತಾನು ತನ್ನದು ತನಗೆ ಎಂದು
ತಮ್ಮ ಮಾತನೆ ಇಡುವರಲ್ಲ!

ಸೋತ ಮನಕೆ ಬೇಕು ಸಾಂತ್ವನ
ನೋವ ಹೃದಯಕೆ ನಿತ್ಯ ತಲ್ಲಣ
ತ್ಯಾಗ ಪ್ರೀತಿ ನೀತಿ ನಿಯಮ
ಕಲಿಯಬೇಕಿದೆ ಸರ್ವ ಜನಕೆ!

ಶಿಕ್ಷಕರಿಗೂ ಶಿಕ್ಷೆ  ಇಲ್ಲಿ
ವೈದ್ಯರಲ್ಲೂ ಮೋಸ ಕಳ್ಳ
ಅಣ್ಣ ತಮ್ಮನ ಕೊಲುವನಲ್ಲ
ಯಾರ ಇಂದು ನಂಬಲಿ

ಮಡದಿ ವಿಷವ ಉಣಿಸಿ ಸಾಯಿಸಿ
ಹೆಂಡತಿಯನು ಹೊಡೆದು ಉರುಳಿಸಿ
ಮಕ್ಕಳನ್ನು ತಾ ಬಾವಿಗೆ ತಳ್ಳುತ್ತಾ
ಪೋಷಕರಿಗೆ ಏನು ಹೇಳಲಿ?

ತನ್ನ ಜೀವಕು ಶಾಂತಿ ಇಲ್ಲ
ಪರರ ಮೇಲೆ ಧೈರ್ಯವಿಲ್ಲ
ಬೀಗ ಸಾಲದು ಗ್ರಿಲ್ಸ್ ಬೇಕು
ಅಷ್ಟೂ ಸಾಲದು ಬೇಲಿ ಬೇಕು

ತಂತ್ರ ಯುಗವೋ ಮಂತ್ರ ಯುಗವೊ
ಜನರ ಪ್ರಾಣವ ಕೀಳೋ ಮನವೋ
ದೇವ ದೈವಕ್ಕೆ ಸೆಲ್ಫಿ ಮರುಳೋ
ಗೌರವದ ಚಿಹ್ನೆ ಎಲ್ಲಿದೆ?
@ಹನಿಬಿಂದು@
17.05.2025


ಭಾವಗೀತೆ

ಭಾವಗೀತೆ

ಒಂದಾಗಿ ಬಾಳೋಣ

ನಮ್ಮ ನಮ್ಮ ಒಳಗೇಕೆ 
ಜಾತಿ ಮತದ ಜಗಳ!
ಸುಮ್ಮನಿರದೆ ಸಾಯುವರು
ನಿತ್ಯ ಜನರು ಬಹಳ//

ಅವರು ಇವರ ಮಾತು ಕೇಳಿ
ಹೊಡೆತ ಇರಿತ ಬೇಕೆ!
ಸವರುವಂಥ ಸಾವಿಗಿಲ್ಲಿ
ಜಾತಿ ಧರ್ಮ ಏಕೆ!

ಕೊಲೆ ದರೋಡೆ ನಾಲ್ಕೇ ದಿನ 
ಹೊರಟ ಯಾತ್ರೆ ತಾನೇ!
ನಾಲ್ಕು ದಿನದ ಬಾಳುವೆಗೆ 
ಸಾವಿರಾರು ಬೇನೆ!//

ಅಲ್ಲಿ ಇಲ್ಲಿ ಸರ್ವ ಜನಕು
ನೋವಿನದೇ ಬಾಳು
ಯಾರಿಗಿಲ್ಲ ಸಾವು ನೋವು
ಎಲ್ಲಾ ಒಂದೇ ಗೋಳು//
@ಹನಿಬಿಂದು@
17.05.2025

ಭಾನುವಾರ, ಮೇ 4, 2025

ಲಹರಿ

ಬದುಕು ಬರಡಾದ ಮೇಲೆ...

ಹೂ ಕಾಯಿ ಹಣ್ಣು ಮೊಗ್ಗು ಎಲೆ ಮಾತ್ರವಲ್ಲ
 ರೆಂಬೆ ಕೊಂಬೆ ಕಾಂಡ ಎಲ್ಲವೂ ಮುರಿದ ಮೇಲೆ
ಮತ್ತೆಲ್ಲಿಯ ಶಕ್ತಿ ಇಹುದು ಮರಕೆ ಬೆಳೆಯಲು!
ತಲೆಯೆತ್ತಿ ಮತ್ತೊಮ್ಮೆ ಮಗದೊಮ್ಮೆ ನಿಲ್ಲಲು!!

ತಾನೇ ತಾನಾಗಿ ತಲೆ ಎತ್ತಿ ಎತ್ತರಕ್ಕೆ ಬೆಳೆದು
ಹಲವರಿಗೆ ನೆರಳು ಮಾತ್ರವಲ್ಲ ಹೂ ಕಾಯಿ
ಹಣ್ಣು ತರಕಾರಿ ಮೊಗ್ಗು ಚಿಗುರೆಲೆ ನೀಡಿ
ಅಷ್ಟೇ ಯಾಕೆ ಅದೆಷ್ಟೋ ಜೀವಿಗಳಿಗೆ ಆಧಾರ!

ಆದರೂ ಮಾನವರಿಗೆ ದುರಾಸೆ ತೀರಿಲ್ಲ
ಅವರವರ ಮಟ್ಟಕ್ಕೆ ಮಾತ್ರ ಯೋಚನೆ
ಪರರ ಚಿಂತೆ ನಮಗಿಂದು  ಏತಕಯ್ಯಾ !
ಮರವಿರಲಿ ಮನವಿರಲಿ ಮರುಕ ಎಲ್ಲಯ್ಯ!!

ನನ್ನ ದೇಶ ನಮ್ಮ ರಾಜ್ಯ ನನ್ನ ಜಿಲ್ಲೆ
ನಮ್ಮ ಊರು ನಮ್ಮ ಮನೆ ನನ್ನ ಕುಟುಂಬ
ನಮ್ಮದೇ ಪರಿವಾರ ಬಂಧು ಬಳಗ
ನಮ್ಮ ಬಾಂಧವರು ಚೆನ್ನಾಗಿದ್ದರೆ ಸಾಕಲ್ಲ!!

ಬೇಕೆನಿಸಿದಾಗ ಬೇಕಾದ್ದು ಸಿಕ್ಕರೆ ಸಾಕು
ಪರರಲ್ಲಿ ಆದರೇನು, ಪರ ಮರವಾದರೇನು
ಗಾಳಿ ಕೊಟ್ಟು ಬದುಕುಳಿಸಿದರೆ ಸಾಕೊಮ್ಮೆ 
ಬದುಕುಳಿದ ಮೇಲೆ ಆ ಮರವೇಕೆ ಇನ್ನೊಮ್ಮೆ ??

ಮತ್ತದೇ ಬೇಡಿಕೆ ಅಗಲ ರಸ್ತೆಯದು ಬೇಕೆಂದು
ತಮ್ಮವರಿಗಾಗಿ ತನಗಾಗಿ ತನ್ನತನಕ್ಕಾಗಿ ಬೆಳೆಯಲಿಂದು
ಕಾಲಕ್ಕೆ ತಕ್ಕ ಹಾಗೆ ಕೋಲ ಕಟ್ಟುವ ಜನ ಇಲ್ಲಿಹುದು
ಉಳಿದ ಜೀವಿಗಳ ಯೋಚನೆ ನಮಗೆಲ್ಲಿಯದು??

ಗಾಳಿ ಬಂದತ್ತ ತೂರಿಕೊಳ್ಳುವ ನಡೆ ನುಡಿ ನಮ್ಮದು
ಸಿರಿವಂತನಾಗಲು ಹಲವು ಮರಗಳ ಕಡಿ ಎನುವುದು
ಮಾರಿ ಗಿಟ್ಟಿಸಿಕೊಳ್ಳುವೆ ಹಣ ಜಾಗ ನಡಿ ಹುಡುಕುವುದು
ನಾಡಿರುವುದು ನಮಗೆ ಕಾಡ ಕಡಿದುರುಳಿಸುವುದು!!

ಕೊಲೆ ದರೋಡೆ ಸುಳಿಗೆಗಳು ಇಂದು ಸಾಮಾನ್ಯ
ಹಿರಿ ಕಿರಿಯರ ಬೆಲೆ ಪ್ರೀತಿ ಒಂದೂ ಇಲ್ಲ ಮಾನ್ಯ
ಇನ್ನು ನಮ್ಮಂತಹ ಮರಗಳ ಬೆಲೆ ಇಲ್ಲಿ ಶೂನ್ಯ!!
ಇನ್ನು ಮಾನವ ನೀನ್ಯಾವ ಲೆಕ್ಕ ಇಲ್ಲದಿರಲು ನಾಣ್ಯ!

ತಾನೇ ಹುಟ್ಟಿ ತಾನೇ ಬೆಳೆದು ನೆರಳು ಕೊಡುವಾಗ
ಅದು ಯಾರಿಗೋ ದಾರಿ ಹೋಕರಿಗೆ ಹೂ ಹಣ್ಣು ನೀಡುವಾಗ
ನಮಗೆ ತರಗೆಲೆಗಳು ರಾಶಿ ಕಸವದು ಇಲ್ಲಿ ಎದುರಲ್ಲಿ ಇರುವಾಗ
ಕಡಿದು ಬಿಡಿ ಬೇಗ ಹೋಗಲಿ ದೂರ ಸಾಗಿ ಎತ್ತಲೋ ಈಗ!

ಮರವದು ಪರೋಪಕಾರಿ ತಾನೇ ಎಂದೆಂದಿಗೂ!
ಕಾಲವದು ಕಲಿಯುಗ ಜಾಗವಿಲ್ಲ ಪರೋಪಕಾರಿಗೆ ಇನ್ನೆಂದೂ
ಕಡಿ ಹೊಡಿ ಕೊಲ್ಲು ಕುಡಿ ಕುಣಿಯುವ ಸಮಯವಿದು!
ಹೆಣ್ಣು ಹೊನ್ನು ಮಣ್ಣಿದ್ದರೆ ಸಾಕು ಬಳಿಯಲಿಂದು!!

ಮರ ಹಳೆಯದು, ಎಂದು ಬೀಳುವುದೊ ತಿಳಿಯದು!
ಹಣವಿಲ್ಲ ಅದರ ಬಳಿ ಗುಣ ಮಾತ್ರ  ನಿತ್ಯ ಸತ್ಯವಿದು!
ಗುಣವಿದ್ದರೇನು ಫಲ ಹಣವಿಲ್ಲದ ಮೇಲೆ ಇಂದು!!!
ತಾನು ಬದುಕಲು ಪರರ ಬಳಸಬೇಕೆನುವ ಸೂತ್ರವಿದು!

ಮರವು ಎಂದೆಂದಿಗೂ ಅಪಾಯಕಾರಿ ಉರುಳಿ ಬಿದ್ದರೆ!
ಮಳೆ ಗಾಳಿಗೆ ಮೈಯೊಡ್ಡಿ ನಿಂತಿಹುದು,  ಬರಡಾಗಿರೆ!
ಯಾರಿಗೆ ಗೊತ್ತು ಯಾವ ಕ್ಷಣದಲ್ಲಿ ಯಾರ ಮೇಲೆ 
ತಿರುಗಿ ಬೀಳುವುದೋ,  ಎಲ್ಲಿ ಸಮಸ್ಯೆಯಾಗುವುದೋ!!

ಎಂದಾದರೂ ಎಲ್ಲಾದರೂ ಬೀಳಲಿ ಹೋಗಲಿ
ನನಗೇನೂ ಅದರ ಜೊತೆ ಸಂಬಂಧವಿಲ್ಲ ಬಾಳಲಿ! 
ಇದ್ದೂ ಇಲ್ಲದೆ ಇಲ್ಲ.  ಸಮಾಜದಲ್ಲಿ ಎಲ್ಲೂ ಏನಿಲ್ಲ
ಕಾರಣ ಮರಕ್ಕೆ ಮದುವೆ , ಊಟ,  ಹೆರಿಗೆ ನೋವಿಲ್ಲ

ಮತ್ತೆ??? ಏನಿಲ್ಲ ಮರವಲ್ಲವೇ ಅದು! ಭಾವನೆಗಳಿಲ್ಲ !
ಅದು ಅಳುವುದಿಲ್ಲ. ನೋವ ಹೇಳಿಕೊಳ್ಳುವುದಿಲ್ಲ!
ಅತ್ತು ಹೇಳಿಕೊಂಡರೂ ಕೇಳುವವರು ಧರೆಯಲಿಲ್ಲ!!
ಮರವದು ಪರೋಪಕಾರಿ, ಲೋಕಕಿದು ಇಂದು ಬೇಕಿಲ್ಲ..!!
@ಹನಿಬಿಂದು@
03.05.2025

ಬೇಡದ ಸಾಲುಗಳು

ಬೇಡದ ಸಾಲುಗಳು..

ಈ ಹಾಲಿನಂತಹ ಹಾಳು ಮನಸ್ಸು ಅಳುತ್ತದೆ
ಬೇಡವೆಂದರೂ  ಮರೆಯದಂತಿರಿಸುತ್ತದೆ
ಅದೆಷ್ಟು ಕಾಟ ಕೊಟ್ಟರೂ ಮರೆಯುತ್ತದೆ
ಅದೆಷ್ಟು ನೋವು ಕೊಟ್ಟರೂ ಸಹಿಸುತ್ತದೆ

ಅದೇನು ತೊಂದರೆ ಮಾಡಿದರೂ ಕ್ಷಮಿಸುತ್ತದೆ
ಅದೆಷ್ಟು ಅತ್ತರೂ ಒಳಗಿಂದ ಜವಾಬ್ದಾರಿ ಹೊರುತ್ತದೆ 
ಪ್ರಪಂಚದ ಪ್ರೀತಿ ಕೊಟ್ಟರು ನೋವು ಕೊಟ್ಟರು ಎನುತದೆ 
ಬದುಕಿನ ಸರ್ವ ನೋವು ತಿನ್ನಿಸಿದವರ ನೆನಪಿಸುತ್ತದೆ

ಮತ್ತೇಕೆ ನೆನಪು! ನೋವಾದಾಗ, ಕಷ್ಟ ಬಂದಾಗ
ದುಃಖ ದುಮ್ಮಾನ ಬಂದು ಬಾಳು ಬೇಡವೆನಿಸಿದಾಗ
ಮತ್ತೊಮ್ಮೆ ಮಗದೊಮ್ಮೆ ನೋವು ನಿರಾಸೆ ಕಾಡಿದಾಗ
ಒಂಟಿತನ ಒಪ್ಪಿ ಅಪ್ಪಿ ಮುತ್ತಿಕ್ಕಿ ಮುದ್ದಾಡಿದಾಗ

ನಿತ್ಯ ಅನ್ನಿಸದೇ ಇರದು ಮನದ ಮೂಲೆಯಲಿ
ಅವನು ಕೊಟ್ಟ ನೋವಿಗಿಂತ ಈ ನೋವು ದೊಡ್ಡದೇ!
ಅವನು ನೀಡಿದ ಕಷ್ಟಕ್ಕಿಂತ ಈ ಕಷ್ಟಗಳು ಕಷ್ಟವೇ!
ಛೆ, ಇಲ್ಲವೇ ಇಲ್ಲ, ಪ್ರೀತಿ ನೋವು ಕೊಡದು ಎಂದಿಗೂ
ನೋವು ಕೂಡಾ ಸಾಯದು!  ಮನದೊಂದಿಗೆ ಇಂದಿಗೂ..

ಬದುಕಲು ಅದೆಂತಹ ದೊಡ್ಡ ಚಾಲೆಂಜ್ ನೀಡಿದ್ದು ದೇವರು
ಸೋತು ಗೆಲ್ಲಿಸಿದವರು! ಮನವ ಗಟ್ಟಿಗೊಳಿಸಿದವರು ಮಾನವರು
ಏನೂ ಇಲ್ಲದ ಮಣ್ಣನ್ನು ಹದ ಮಾಡಿದವರು ಪೋಷಕರು
ಬದುಕಿನ ಪಾಠ ಕಲಿಸಿ ಗುರಿ ತಲುಪಿಸಿದ್ದು ಕಠಿಣ ಪರಿಶ್ರಮರು 

ಮತ್ತೊಂದು ಬದುಕು ಕಟ್ಟಿಕೊಳ್ಳಲು ಅನುವು
ಹೊಸದಾದ ಲೋಕಗಳ ನೋಡಲು ಮನವು 
ಅವನಾರು ಅವನ ಕೆಟ್ಟ ಗುಣಗಳ ತೆರೆವು
ದುರ್ಬುದ್ಧಿ, ದುರಭ್ಯಾಸ, ದುರ್ನಡತೆಗಳ ಅರಿವು

ಮತ್ತೆ ಒಂದಾಗಲು ಸಾಧ್ಯವೇ ಒಡೆದ ಕನ್ನಡಿಯ ಪೀಸುಗಳು 
ಪೂರ್ತಿ ಒಡೆದ ಗಾಜಿನ ಕಣ ಕಣಗಳ ಧೂಳು ತುಂಡುಗಳು
ಬತ್ತಿ ಹೋದ ನೀರ ಚಿಲುಮೆಯ ಝರಿಯ ಬುಗ್ಗೆಗಳು
ಉದುರಿ ಹೋದ ನೆತ್ತಿಯ ಕಪ್ಪು ಕಪ್ಪು ಕೂದಲುಗಳು!

ಭಾವುಕತೆ, ಭಾವನೆಗಳು, ಖುಷಿ ಎಲ್ಲಾ ಸತ್ತು ಹೋದ ಬಳಿಕ
ಮತ್ತೆ ಹೇಗೆ ಚಿಗುರೀತು ಸುಟ್ಟು ಹೋದ ಭಾವ ಬಳ್ಳಿ??
ಮತ್ತೊಮ್ಮೆ ಉಸಿರಾಡೀತೆ ಶವದ ಮೂಗಿನ ಹೊಳ್ಳೆಗಳು!
ಸಿಹಿ ಎನ್ನಲಾದೀತೆ ಉಪ್ಪು ಕಾರ ಹಾಕಿದ ಸಾಂಬಾರನ್ನು!

ಬದುಕ ಬಳ್ಳಿಯ ತುಂಬಾ ನೋವಿನ ಎಲೆಗಳನೆ ತುoಬಿಸಿ
ಸಿಡುಕ ಮುಖವನು ಹೊತ್ತು ದಿನ ರಾತ್ರಿ ಕಾಯಿಸಿ
ಕುಡುಕ ಅವತಾರ ತಾಳಿ ಅನುದಿನ ಸರ್ವರ ಭಾಧಿಸಿ
ನಡುಕ ಹುಟ್ಟುವ ಹಾಗೆ ಪ್ರೀತಿ ಬದಲು ದ್ವೇಷ ಮೂಡಿಸಿ

ಇನ್ನೆತ್ತ ಇನ್ಯಾವ ಮನ ಗಮನ ಸುಮನ ಸಹನ ಗಹನ
ತಾಳ್ಮೆ ತಡವರಿಕೆ ಕಾಯುವಿಕೆ ಸಂಕಟ ನೋವಿನ ಮನ
ಓದಿ ಮರೆತ ತರಗತಿಯ  ಪುನಃ ಕಲಿಯಲು ಅವಕಾಶವಿಲ್ಲ
ಮುರಿದ ಮನವ ಮತ್ತೆ  ಒತ್ತಿ ಕಟ್ಟಲು ಎಂದಿಗೂ  ಬದುಕಿಲ್ಲ! 
@ಹನಿಬಿಂದು@
04.05.2025


ಶನಿವಾರ, ಮೇ 3, 2025

ಲಹರಿ

ಬದುಕು ಬರಡಾದ ಮೇಲೆ...

ಹೂ ಕಾಯಿ ಹಣ್ಣು ಮೊಗ್ಗು ಎಲೆ ಮಾತ್ರವಲ್ಲ
 ರೆಂಬೆ ಕೊಂಬೆ ಕಾಂಡ ಎಲ್ಲವೂ ಮುರಿದ ಮೇಲೆ
ಮತ್ತೆಲ್ಲಿಯ ಶಕ್ತಿ ಇಹುದು ಮರಕೆ ಬೆಳೆಯಲು!
ತಲೆಯೆತ್ತಿ ಮತ್ತೊಮ್ಮೆ ಮಗದೊಮ್ಮೆ ನಿಲ್ಲಲು!!

ತಾನೇ ತಾನಾಗಿ ತಲೆ ಎತ್ತಿ ಎತ್ತರಕ್ಕೆ ಬೆಳೆದು
ಹಲವರಿಗೆ ನೆರಳು ಮಾತ್ರವಲ್ಲ ಹೂ ಕಾಯಿ
ಹಣ್ಣು ತರಕಾರಿ ಮೊಗ್ಗು ಚಿಗುರೆಲೆ ನೀಡಿ
ಅಷ್ಟೇ ಯಾಕೆ ಅದೆಷ್ಟೋ ಜೀವಿಗಳಿಗೆ ಆಧಾರ!

ಆದರೂ ಮಾನವರಿಗೆ ದುರಾಸೆ ತೀರಿಲ್ಲ
ಅವರವರ ಮಟ್ಟಕ್ಕೆ ಮಾತ್ರ ಯೋಚನೆ
ಪರರ ಚಿಂತೆ ನಮಗಿಂದು  ಏತಕಯ್ಯಾ !
ಮರವಿರಲಿ ಮನವಿರಲಿ ಮರುಕ ಎಲ್ಲಯ್ಯ!!

ನನ್ನ ದೇಶ ನಮ್ಮ ರಾಜ್ಯ ನನ್ನ ಜಿಲ್ಲೆ
ನಮ್ಮ ಊರು ನಮ್ಮ ಮನೆ ನನ್ನ ಕುಟುಂಬ
ನಮ್ಮದೇ ಪರಿವಾರ ಬಂಧು ಬಳಗ
ನಮ್ಮ ಬಾಂಧವರು ಚೆನ್ನಾಗಿದ್ದರೆ ಸಾಕಲ್ಲ!!

ಬೇಕೆನಿಸಿದಾಗ ಬೇಕಾದ್ದು ಸಿಕ್ಕರೆ ಸಾಕು
ಪರರಲ್ಲಿ ಆದರೇನು, ಪರ ಮರವಾದರೇನು
ಗಾಳಿ ಕೊಟ್ಟು ಬದುಕುಳಿಸಿದರೆ ಸಾಕೊಮ್ಮೆ 
ಬದುಕುಳಿದ ಮೇಲೆ ಆ ಮರವೇಕೆ ಇನ್ನೊಮ್ಮೆ ??

ಮತ್ತದೇ ಬೇಡಿಕೆ ಅಗಲ ರಸ್ತೆಯದು ಬೇಕೆಂದು
ತಮ್ಮವರಿಗಾಗಿ ತನಗಾಗಿ ತನ್ನತನಕ್ಕಾಗಿ ಬೆಳೆಯಲಿಂದು
ಕಾಲಕ್ಕೆ ತಕ್ಕ ಹಾಗೆ ಕೋಲ ಕಟ್ಟುವ ಜನ ಇಲ್ಲಿಹುದು
ಉಳಿದ ಜೀವಿಗಳ ಯೋಚನೆ ನಮಗೆಲ್ಲಿಯದು??

ಗಾಳಿ ಬಂದತ್ತ ತೂರಿಕೊಳ್ಳುವ ನಡೆ ನುಡಿ ನಮ್ಮದು
ಸಿರಿವಂತನಾಗಲು ಹಲವು ಮರಗಳ ಕಡಿ ಎನುವುದು
ಮಾರಿ ಗಿಟ್ಟಿಸಿಕೊಳ್ಳುವೆ ಹಣ ಜಾಗ ನಡಿ ಹುಡುಕುವುದು
ನಾಡಿರುವುದು ನಮಗೆ ಕಾಡ ಕಡಿದುರುಳಿಸುವುದು!!

ಕೊಲೆ ದರೋಡೆ ಸುಳಿಗೆಗಳು ಇಂದು ಸಾಮಾನ್ಯ
ಹಿರಿ ಕಿರಿಯರ ಬೆಲೆ ಪ್ರೀತಿ ಒಂದೂ ಇಲ್ಲ ಮಾನ್ಯ
ಇನ್ನು ನಮ್ಮಂತಹ ಮರಗಳ ಬೆಲೆ ಇಲ್ಲಿ ಶೂನ್ಯ!!
ಇನ್ನು ಮಾನವ ನೀನ್ಯಾವ ಲೆಕ್ಕ ಇಲ್ಲದಿರಲು ನಾಣ್ಯ!

ತಾನೇ ಹುಟ್ಟಿ ತಾನೇ ಬೆಳೆದು ನೆರಳು ಕೊಡುವಾಗ
ಅದು ಯಾರಿಗೋ ದಾರಿ ಹೋಕರಿಗೆ ಹೂ ಹಣ್ಣು ನೀಡುವಾಗ
ನಮಗೆ ತರಗೆಲೆಗಳು ರಾಶಿ ಕಸವದು ಇಲ್ಲಿ ಎದುರಲ್ಲಿ ಇರುವಾಗ
ಕಡಿದು ಬಿಡಿ ಬೇಗ ಹೋಗಲಿ ದೂರ ಸಾಗಿ ಎತ್ತಲೋ ಈಗ!

ಮರವದು ಪರೋಪಕಾರಿ ತಾನೇ ಎಂದೆಂದಿಗೂ!
ಕಾಲವದು ಕಲಿಯುಗ ಜಾಗವಿಲ್ಲ ಪರೋಪಕಾರಿಗೆ ಇನ್ನೆಂದೂ
ಕಡಿ ಹೊಡಿ ಕೊಲ್ಲು ಕುಡಿ ಕುಣಿಯುವ ಸಮಯವಿದು!
ಹೆಣ್ಣು ಹೊನ್ನು ಮಣ್ಣಿದ್ದರೆ ಸಾಕು ಬಳಿಯಲಿಂದು!!

ಮರ ಹಳೆಯದು, ಎಂದು ಬೀಳುವುದೊ ತಿಳಿಯದು!
ಹಣವಿಲ್ಲ ಅದರ ಬಳಿ ಗುಣ ಮಾತ್ರ  ನಿತ್ಯ ಸತ್ಯವಿದು!
ಗುಣವಿದ್ದರೇನು ಫಲ ಹಣವಿಲ್ಲದ ಮೇಲೆ ಇಂದು!!!
ತಾನು ಬದುಕಲು ಪರರ ಬಳಸಬೇಕೆನುವ ಸೂತ್ರವಿದು!

ಮರವು ಎಂದೆಂದಿಗೂ ಅಪಾಯಕಾರಿ ಉರುಳಿ ಬಿದ್ದರೆ!
ಮಳೆ ಗಾಳಿಗೆ ಮೈಯೊಡ್ಡಿ ನಿಂತಿಹುದು,  ಬರಡಾಗಿರೆ!
ಯಾರಿಗೆ ಗೊತ್ತು ಯಾವ ಕ್ಷಣದಲ್ಲಿ ಯಾರ ಮೇಲೆ 
ತಿರುಗಿ ಬೀಳುವುದೋ,  ಎಲ್ಲಿ ಸಮಸ್ಯೆಯಾಗುವುದೋ!!

ಎಂದಾದರೂ ಎಲ್ಲಾದರೂ ಬೀಳಲಿ ಹೋಗಲಿ
ನನಗೇನೂ ಅದರ ಜೊತೆ ಸಂಬಂಧವಿಲ್ಲ ಬಾಳಲಿ! 
ಇದ್ದೂ ಇಲ್ಲದೆ ಇಲ್ಲ.  ಸಮಾಜದಲ್ಲಿ ಎಲ್ಲೂ ಏನಿಲ್ಲ
ಕಾರಣ ಮರಕ್ಕೆ ಮದುವೆ , ಊಟ,  ಹೆರಿಗೆ ನೋವಿಲ್ಲ

ಮತ್ತೆ??? ಏನಿಲ್ಲ ಮರವಲ್ಲವೇ ಅದು! ಭಾವನೆಗಳಿಲ್ಲ !
ಅದು ಅಳುವುದಿಲ್ಲ. ನೋವ ಹೇಳಿಕೊಳ್ಳುವುದಿಲ್ಲ!
ಅತ್ತು ಹೇಳಿಕೊಂಡರೂ ಕೇಳುವವರು ಧರೆಯಲಿಲ್ಲ!!
ಮರವದು ಪರೋಪಕಾರಿ, ಲೋಕಕಿದು ಇಂದು ಬೇಕಿಲ್ಲ..!!
@ಹನಿಬಿಂದು@
03.05.2025

ಬಾಳು

ಬಾಳು

ಭಾವವೆಲ್ಲ ಸತ್ತ ಮೇಲೆ ಭಾವನೆಗೆಲ್ಲಿ ಜಾಗ
ಮಾನವೆಲ್ಲ ಹೋದ ಮೇಲೆ ಪ್ರಾಣಕ್ಕೆಲ್ಲಿ ವೇಗ
ತ್ರಾಣವೆಲ್ಲ ಬಿಸಿಯಾಗಿ ಬದುಕಲೆಲ್ಲಿ ತ್ಯಾಗ
ಜಾಣ ದದ್ದನಾದ ಮೇಲೆ ಅವನೇನು ಭಾಗ


ಮನದ ನೋವು ಓದಲಿಕ್ಕೆ ಲಿಪಿಯು ಇಹುದೇ ಜಗದಿ
ಕನಸು ನನಸು ಆಗಿದ್ದರೆ ಕಷ್ಟ ಇರದೆ ಭವದಿ
ವಿವಿಧ ವೇಷ ಹೊರಗಡೆಗೆ ಮನದ ಒಳಗೆ ಬೆತ್ತಲೆ
ಬಂದ ದಿನದ ಹೋಗೋ ದಿನದ ನಡುವೆ  ನಾಲ್ಕು ಕ್ಷಣಗಳೇ

ಆಚೆ ಈಚೆ ಸುತ್ತಲೂನು ಹಣದ ಆಸೆ ಒಂದಿದೆ
ಧನ ಧಾನ್ಯ ಹೆಣ್ಣು ಹೊನ್ನು ಸರ್ವರಿಗೂ ಬೇಕಾಗಿದೆ
ತಾನು ತನ್ನದು ತನ್ನವರಿಗೆ ಎನುವ ಮಾತು ಮಾತ್ರ
ಹೋಗೋ ದೇಹ ಸಾಧನೆಯ ಮರೆತರೇನು ಸೂತ್ರ....
@ಹನಿಬಿಂದು@
25.04.2025