ಶುಕ್ರವಾರ, ಮಾರ್ಚ್ 29, 2024

ಕಾತರವಿರಲಿ

ಕಾತರವಿರಲಿ

 ಆತುರ ಬೇಡ ಕಾತರವಿರಲಿ
ನಾಳೆಯ ಬಗೆಗಿನ ಬಾಳಿನಲಿ
ಸೂತ್ರದಾರನು ಮೇಲೆಯೆ ಇರುವನು
ಮಾತನಾಡದೆ ಮೌನದಲಿ

ರಾತ್ರಿಯೆ ಇರಲಿ ಹಗಲೇ ಆಗಲಿ
ತನುವಿಗೆ ಬೇಕು ವಿಶ್ರಾಂತಿ
ಜಾತಿ ಧರ್ಮಗಳು ಒಂದೇ ಆಗಿವೆ
ಮಾನವತೆಯ ಈ ಶ್ವಾಸದಲಿ

ಕಾಯಕ ಮಾಡದೆ ಕಾಯುತ ಕುಳಿತರೆ
ಸಿಗುವುದೇ ಹಸಿವಿಗೆ ಊಟ?
ಮಾಯದಿ ಬಂದು ತಥಾಸ್ತು ಎನುವನೆ
ಕೈಯಲಿ ಹಿಡಿದು  ಬಾಡೂಟ

ಕಸುವದು ಇರಲು ದುಡಿಯಲು ಬೇಕು
ಮಸಾಲೆ ತಿಂದ ದೇಹ
ದಣಿವು ಬಂದು ಕೇಳಲು ಉದಕವ
ಇಂಗಿಸಬೇಕು ದಾಹ..
@ಹನಿಬಿಂದು@
29.03.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ