ಗುರುತರ ಕಾರ್ಯವ
ಗುರುವದು ಮಾಡುವ
ಗಮನವು ಆ ಕಡೆ ಇರಬೇಕು
ಗುಡಿಯಲಿ ಕುಳಿತೇ
ಗುಮಾನಿ ಇಲ್ಲದೆ
ಗಜಮುಖ ನೀಡುವ ವರಗಳನು
ಗುರಿಯದು ಬೇಕಿದೆ
ಗುಡುಗುವ ಜನರಿಗೆ
ಗಾಡಿಯ ವೇಗದಲೋಡುತಿಹ
ಗುಡ್ಡದ ಭೂತಕೆ
ಗುಡುಗದು ತಾಗದು
ಗುರಿಯೇ ಬಾಳಿನ ಗುರುತಂತೆ
ಗುಡಿಮಡಿ ತೊರೆದವ
ಗಡಿಯಲಿ ಕಾಯುತ
ಗಹನದಿ ಪೊರೆವನು ದೇಶವನು
ಗೋಲಿಯ ಆಟದಿ
ಗೋರುತ ನಡೆವವ
ಮಾನವ ಕೊಡುತಲಿ ಕಾಟವನು
ಗುರುಗಳು ಕರವನು
ಗಮನದಿ ಹಿಡಿದರೆ
ಬದುಕದು ಸುಂದರ ಶಿಲೆಯಂತೆ
ಗಣಪನು ವಿಘ್ನವ
ಗದರಿಸಿ ಕಳಿಸಲು
ಬಾಳದು ನಲಿವುದು ನಿಜವಣ್ಣ..
@ಪ್ರೇಮ್@
16.03.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ