[1/15, 11:56 AM] +91 70267 76576: ಪ್ರೇಮಾ ಜೀ ಅವರ
ನಯನ
ಯತ್ರ ನಾರ್ಯಂತು ಪುಜ್ಯಂತೆ ರಮಂತೆ ತತ್ರ ತತ್ರ ದೇವತಾಃ ಎಂದು ಹೇಳುತ್ತೇವೆ ಆದರೆ ಬದುಕು ಬಲು ಬಿರುಸು ಹೆತ್ತ ಕರುಳೆ ಕಿತ್ತು ತಿನ್ನುವ ಹದ್ದಾಗುತ್ತದೆ.ಆಶ್ರಯದ ನೆಪದಲ್ಲೇ ಆಕ್ರಂದನ ಕೇಳುತ್ತದೆ.ಮುಗಿಯದ ಶೋಷಣೆಯಲ್ಲಿ ಅರಳುವ ಹೂ ಗಳೇಷ್ಟೋ, ಕಮರಿದ ಮೊಗ್ಗುಗಳೇಷ್ಟೋ. ಆ ನಯನಳ ಕಣ್ಣೀರಿಗೆ ಕೊಣೆಯಲ್ಲಿ....
ಮಾರ್ಮಿಕ ಕಥೆ ಜೀ
ಕವಿ ಭಾವ ತಿಳಿಯುವಲ್ಲಿ ತಪ್ಪಾಗಿದ್ದರೆ ಒಂದು ಕ್ಷಮೆ ಇರಲಿ ಜೀ...
ಜಯಶ್ರೀ...
[1/16, 8:39 PM] Wr Sudha Telkar Mam: ಸೊಗಸಾದ ವಿಮರ್ಶೆಗೆ ಮನಃಪೂರ್ವಕ ಧನ್ಯವಾದಗಳು ಪ್ರೇಮ್. ಬಹಳ ಜನ ರಿಟೈರ್ ಆದ ಮೇಲೂ ದುಡಿಯುವುದು ನಿಜ. ನಿನ್ನ ಅನಿಸಿಕೆಗೆ ನನ್ನ ಸಹಮತವಿದೆ.
ಕೆಲವು ಸಲ ಮನೆಯಲ್ಲಿ ಪ್ರೋತ್ಸಾಹ ಇರದೆಯೋ , ಅನಾರೋಗ್ಯದಿಂದಲೋ ಎಲ್ಲರೂ ದುಡಿಯಲಾಗುವುದಿಲ್ಲ. ವಯಸ್ಸು ಹೆಚ್ಚಾಗಿದ್ದರೂ ಕೈಲಾಗುವುದಿಲ್ಲ.
ಆದರೂ ತುಂಬಾ ಅವಸರದಲ್ಲಿ ಬರೆದೆ. ನನಗೇ ತೃಪ್ತಿಯೆನಿಸಲಿಲ್ಲ.
ಇಂದಿನ ಅಡ್ಮಿನಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿರುವೆ. ಸಲಹೆ ,ಸೂಚನೆಗಳಿಗೆ ಸದಾ ಸ್ವಾಗತವಿದೆ ಪ್ರೇಮ್. ಅಭಿನಂದನೆಗಳು.🙏🙏💐💐😊
[1/18, 2:44 PM] Wr Veena Joshi Ankola: ಪ್ರೇಮ ಅವರ ಪ್ರಾಣ
* ಪ್ರಾಣ ಅಮೂಲ್ಯ .
* ಅದನ್ನು ಚೆನ್ನಾಗಿ ಪದಗಳ ಜೋಕಾಲಿಯಲಿ ಇಟ್ಟು ಚೆನ್ನಾಗಿ
ತೂಗಿದ್ದೀರಿ
* ವಾಸ್ತವವಾಗಿ ಮನುಷ್ಯ ಪ್ರಾಣಿ
ಇತರ ಜೀವಿಗಳ ಜೀವಕ್ಕೆ ಕವಡೆ
ಕಾಸಿನ ಕಿಮ್ಮತ್ತು ನೀಡಿದೆ ಮೆರೆಯುತ್ತಿದ್ದಾನೆ.
ಪ್ರಪಂಚ ಸಮತೋಲನ ಇಲ್ಲದಿರೆ ಉರುಳುವುದು ಸತ್ಯ
ಎಂಬುದನ್ನು ಅರಿತರೆ ಒಳಿತು .
ಉತ್ತಮ ಕಥೆ ಓದಿಸಿದಿರಿ ಧನ್ಯವಾದಗಳು .
[1/20, 1:49 PM] +91 98866 11494: ನಮಸ್ತೆ ಪ್ರೇಮ ಮೇಡಂ🙏
ನಿಮ್ಮ ಕಾಮಿಡಿ ಕವನಗಳು ಸೂಪರ್ ಮೇಡಂ.....
ನಾಯಿಯ ಬಗ್ಗೆ ಅದ್ಭುತವಾಗಿ ಬರೆದಿದ್ದೀರಿ...... ನಾಯಿಯ ನಿಯತ್ತು, ಮನೆಯ ಕಾಯುವ ಪರಿ ಮತ್ತು ಅನುಮತಿ ಇಲ್ಲದೆ ಮನೆಗೆ ಬಂದರೆ ಅದು ಕೊಡುವ ಶಿಕ್ಷೆಯ ಬಗ್ಗೆ ಉತ್ತಮವಾಗಿ ಕವನದ ಮೂಲಕ ಬರೆದಿದ್ದೀರಿ ಮೇಡಂ.......ಶುಭವಾಗಲಿ.... ಧನ್ಯವಾದಗಳು ಮೇಡಂ.
ಕೆ ಎಸ್ ಗೀತಾವಿಜಯ ಕುಮಾರ್
[1/28, 6:51 AM] Wr Shivaprasad Aradhya: ಪ್ರೇಮರವರ ಕವನ ನೀತಿ ಭೋದಕವಾಗಿದ್ದು ವಿಜ್ಞಾನ ಎಷ್ಟೇ ಬೆಳೆದರೂ ಅಹಂಕಾರ ವೂ ಅಷ್ಟೇ ಬೆಳೆಯಿತು. ಪ್ರಕೃತಿಯ ಮುಂದೆ ಅವನಾಟವೇನೂ ನಡೆಯದು.ಎಂಬುದು ಈ ಕವನದಿ ವ್ಯಕ್ತವಾಗಿದೆ.
ಬೆಳ್ಳಂಬೆಳಗ್ಗಿನ ಕವನ ಬೇಗನೆ ಬರೆದು ಹಾಕುವ ಉಸಾಬರಿಯಲ್ಲಿ ಬರೆದಂತೆ ಕಂಡರೂ ನೀತಿ ಭೋದಕವಾಗಿದೆ. ಪ್ರಾಸ ಬರಲ್ಲಿಲ್ಲವಾ ಚಿಂತಿಸಬೇಡಿ ಮುಕ್ತವಾಗಿ ಗಪದ್ಯ ಬರೆಯಿರಿ.ಪ್ರಾಸಮಯವಾಗಿ ಬರೆಯುವ ಯತ್ನ ನಡೆಯಿತು ತಮ್ಮದು ಇರಲಿ ಹೀಗೇ ಬರೆಯುತ್ತಿರಿ ಶುಭವಾಗಲಿ
ಶಿವಪ್ರಸಾದ್ ಆರಾಧ್ಯ
[1/28, 10:00 AM] Wr Nagamma: ಪ್ರೇಮ್ ..ಜೀ ನಮಸ್ತೆ🙏🏼.
ನೀತಿ ಕಲಿ...
ವಾಸ್ತವದ..ಅತಿಯಾಸೆಗಾಗಿ ಆಡಂಬರದ... ಬದುಕಿಗಾಗಿ..ಮಾನವ ಮಾಡುವ, ಯೋಚಿಸುವ , ಯೋಜಿಸು..ವ..ಆಯಾಮಗಳನ್ನು ...ಬಹಳ ಪ್ರಬುದ್ಧ..ಪದಗಳಲ್ಲಿ...ಕವನದೊಳಗೆ ಹಿಡಿದಿಟ್ಟ..ಪರಿಯದು..ಸೊಗಸಾಗಿದೆ...
ಧನ್ಯವಾದಗಳು.
ಎಸ್.ನಾಗಮ್ಮ🌹
[1/29, 7:21 PM] Wr Shivaprasad Aradhya: ಧರೆಯ ಮೊರೆ ನನಗೂ ಕೇಳಿತು ಪ್ರೇಮ್ ಸದಾ ಸಮಾಜಮುಖಿಯಾಗೇ ಬಡಿದೆಬ್ಬುಸುವ ಅರಿವಿನ ಕವನಗಳ ಮಾತೆ ತಾವು ಚೆನ್ನಾಗಿ ಬರೆದಿದ್ದೀರಿ ಅಭಿನಂದನೆಗಳು
ಶಿವಪ್ರಸಾದ್ ಆರಾಧ್ಯ
[1/30, 2:29 PM] Wr Shakunthala Dalera: *ಪ್ರೇಮ್ ರವರ " ಅಮವಾಸೆ ಬೇಡ" ಕವನದಲ್ಲಿ...*
ಅಮವಾಸೆ ಕಳೆದ ನಂತರವೇ ಹುಣ್ಣಿಮೆ... ಕಾಯಬೇಕು ಅಷ್ಟೇ. ವಿರಹ ವೇದನೆಯನ್ನು ಅಮವಾಸೆಗೆ ಹೋಲಿಸಿ ಅರ್ಪಿಸಿದ ಭಾವನಾತ್ಮಕ ಪರಿಗೆ ಶರಣು ಮೇಡಂ...ಒಳ್ಳೆಯ ಕವನ ಓದಿಸಿದ್ದಕ್ಕೆ ಧನ್ಯವಾದಗಳು 👌👌👌👌🙏🙏🙏🙏
[2/11, 7:31 AM] Wr Shivaprasad Aradhya: ಈ ದಿನದ ಮೊದಲಕವನ ಆಳವಾಗಿದೆ. ಅದು ಭೂಮಿಯೊಳಗೇ ಹೋಗಿದೆ.ಒಂದು ಮೊದಲ ಕವನವೇ ಅತ್ಯುತ್ತಮವಾಗಿ ಹೊರಹೊಮ್ಮುತಿರುವ ಬಳಗದ ಹಾಗೂ ಕವಿಯ ಹೆಗ್ಗಳಿಕೆ ಇದಾಗಿದೆ.
ತೆರೆಮರೆಯ ಸಾಧನೆ ನಿಜಕ್ಕೂ ಮನೆಯ ತಾಯಿಯದು.ಆಕೆ ಒಳಗೆ ನನಗಾಗಿ ನಮ್ಮ ಕುಟುಂಬಕ್ಕೆ ಚಾಕರಿ ಮಾಡುತಾ ನನ್ನನ್ನು ಚಿಂತಕರ ಚಾವಡಿಗೆ ಬಿಟ್ಟಿದ್ದಾಳೆ.ಆದರೆ ನಿಜವಾದ ಚಿಂತಕಿ ನನ್ನವಳು.ನಾನು ಬರಿಯ ಸೊನ್ನೆ
ತಾಯಿ ಬೇರಂತೆ ಕುಟುಂಬದ ಜೀವಾಳ ಒಲವ ಜಲ ಅವಳು.ಹುಡುಕುಡುಕಿ ಒಲವುಗಳ ಸಾಗಿ ನೆಲೆಯ ಭದ್ರ ಪಡಿಸುವಾಕಿ.ಸಂಸಾರದ ಗಿಡ ಮರವಾಗಿ ನೆಲೆಯಾಗಲು ತಾಯಿ ತಾಯಿ ಬೇರಾಗಿ ಹೊರಜಗದ ಮರೆಯಲೇ ದುಡಿಯುವವಳು.
ಅಪ್ಪ ಆಕಾಶ ಅಮ್ಮ ಭೂಮಿ.ಅಪ್ಪನ ತಲೆಯೆತ್ತಿ ಓಡಾಡುವ ಘನತೆಯ ಹಿಂದೆ ಅಮ್ಮನ ಆಳವಾದ ತಪವಿದೆ.ಮನೋಜ್ಞವಾಗಿ ಬರೆದಿರುವ ತಾಯಿಗೆ ಶರಣು ಶುಭೋದಯ ಶುಭವಾಗಲಿ
ಶಿವಪ್ರಸಾದ್ ಆರಾಧ್ಯ
[2/13, 1:46 PM] Wr Vinuta Kicchikeri: ಪ್ರೇಮ್ ಮೇಡಮ್ ಜೀ ನಮಸ್ತೇ
👉🏻 ರಾಗ ಬಧ್ಧವಾಗಿ ಬರೆದ ಕವನ ಚಂದ
👉🏻 ಇಂದಿನ ಪದ ಬಳಕೆ ಮಾಡಿ ಮೂಡಿಬಂದಿದೆ
👉🏻 ಸರ್ಕಾರಿ ಶಾಲೆಯಲ್ಲಿ ಏನು ಕಲಿಸುತ್ತಾರೆ ಎಂಬುದಕ್ಕೆ ಉತ್ತರವಿದೆ
👉🏻 ಪಾಲಕರು ಎಷ್ಟು ಕಷ್ಟ ಪಟ್ಟು ನಮ್ಮನ್ನು ಓದಲಿ ಎಂಬ ಉದ್ದೇಶ, ಶಿಕ್ಷಕರು ನಮಗೆ ಒಳ್ಳೆಯ ಪಾಠ,ಕಲಿಕೆ,ನೀತಿ ಕಥೆಗಳು, ನಾವು ನಮ್ಮ ಸ್ನೇಹಿತರ ಜೊತೆ ಹೇಗಿರಬೇಕೆಂಬುದನ್ನು ಶಾಲೆ ಕಲಿಸಿಕೊಡುತ್ತದೆ..ಪದವಿ ಪಡೆದರು ಸಾಲದು ಅಮ್ಮನ ಜೀವನ ಪಾಠವೂ ಮುಖ್ಯ. ರುಚಿ,ಶುಚಿಯ ಬಗ್ಗೆ ಒಂದಷ್ಟು ತಿಳುವಳಿಕೆ ನೀಡುವದು ಅಮ್ಮ ಎಂಬುದನ್ನು ನಿಮ್ಮ ಕವನದಲ್ಲಿ ತಿಳಿಸಿದ್ದೀರಿ
👉🏻ಕೊನೆಯ ಚರಣ ಹಿಡಿಸಿತು
ಧನ್ಯವಾದಗಳು💐
ವಿನುತಾ ಕಿಚ್ಚಿಕೇರಿ
[2/15, 2:27 PM] Wr Vara Lakshmi Amma: ಪ್ರೇಮ ಅವರ ಶಿವಸ್ತುತಿ
ಸಾಮಾನ್ಯವಾಗಿ ನಾವು ಪ್ರಾರ್ಥನೆ ಮಾಡುವಾಗ ಅದು ಕೊಡು, ಇದು ಕೊಡು, ಎಂದು ಬೇಡಿಕೆಗಳ ಪಟ್ಟಿ ಇಡುತ್ತಾ ಹೋಗುತ್ತೇವೆ, ಆದರೆ ಕವಯತ್ರಿ ಪ್ರೇಮ ಅವರು ನಮ್ಮಲ್ಲಿರುವ ಮಾತ್ಸರ್ಯ, ದ್ವೇಷ ಅವುಗಳನ್ನು ನೀಗಿಸಿ ಎಲ್ಲರಲ್ಲಿ ಪ್ರೇಮಭಾವವನ್ನು ತುಂಬಿ, ಭಕ್ತಿಮಾರ್ಗದಲ್ಲಿ ನಡೆಯುವ ಶಕ್ತಿ ಕೊಡು ಎಂದು ಶಿವನನ್ನು ಸ್ತುತಿಸಿದ್ದಾರೆ. ಭಕ್ತಿಯ ಮಾರ್ಗದಲ್ಲಿ ನಡೆಯುತ್ತಾ ಜೀವನದ ಉತ್ತುಂಗಕ್ಕೇರುವ ಬಯಕೆ ವ್ಯಕ್ತಪಡಿಸಿದ್ದಾರೆ. ಸದುದ್ದೇಶದ ಕವನ 🙏
[2/15, 6:02 PM] Wr Nagamma: ಪ್ರೇಮ್ ಜೀ🙏🏼
ನಿಮ್ಮ
ಶಿವಸ್ತುತಿಗೆ..
ತಲೆದೂಗಿದೆ..
ನನ್ನ ಗುಣಗಳ ಉತ್ತುಂಗಕ್ಕೇರಿಸು..ವಾವ್ ಸೂಪರ್..
ಚೆಂದದ ದೈವ ಸ್ಮರಣೆ
.
.ಭಕ್ತಿ ಸ್ಪುರಣ..!!
ತಮ್ಮ..ಸುಂದರ ವಾದಶಿವಸ್ತುತಿಗಾಗಿ..
ಧನ್ಯವಾದಗಳು.
ಎಸ್. ನಾಗಮ್ಮ🌹
[2/17, 11:47 AM] +91 99641 78536: 💐🙏 ಪ್ರೇಮ್ ಸರ 🌹
ಬದುಕು ಬಂಗಾರ🌹
🌹ಸುಂದರವಾದ ಕವನ ರಚನಿ ಭಾವನೆಗಳಿಂದ ತುಂಬಿದ, ಮನಸಿನ ಭಾವ ಬಂಧನ ವಿಶೇಷ ಸ್ನೇಹ ಮಿಲನಗಳ ಹೇಳುವ ಕವನ 👌👌👌
ಅಂದದ ಕವನ 👌👌👌
ಬಾಬಣ್ಣ.
(ಪ್ರಶಾಂತ ಆರ ದೈವಜ್ಞ)
ಕರೇಕ್ಯಾತನಹಳ್ಳಿ.
[2/18, 8:11 AM] Wr Vinuta Kicchikeri: ಪ್ರೇಮ್ ಮೇಡಮ್ ಜೀ🙏
👉🏻ಕವನದ ಆಶಯ ಸೂಪರ್
👉🏻 ಬದುಕಲ್ಲಿ ಏನೇನು ನೋಡಬಹುದು...ಒಂದು ಮುಂಜಾನೆಯಿಂದ ಸಂಜೆಯವರೆಗೆ ಎಂಬುದನ್ನು ಬಹಳ ಚೆನ್ನಾಗಿ ಬರೆದಿರುವಿರಿ.
👉🏻ಕೊನೆಯ ಚರಣ ಮನಸ್ಸಿಗೆ ಹಿಡಿಸಿತು
👉🏻 ಆದರೆ ಕಣ್ಣೀರು ಪದ ನನಗೆ ಕಾಣಲಿಲ್ಲ(ಕ್ಷಮಿಸಿ)
ಕೊನೆಯ ಸಾಲಿನಲ್ಲಿ ಇತರರಿಗೆ ಆಗಬೇಕಿತ್ತೇನೋ..ಲಗುಬಗೆಯಿಂದ ಬರೆದಿರುವಿರಿ ಅನಿಸಿತು
ಧನ್ಯವಾದಗಳು👏💐
ವಿನುತಾ ಕಿಚ್ಚಿಕೇರಿ
[2/18, 10:33 AM] +91 89701 82067: ಪ್ರೇಮ್ರವರೆ ಯೋಚನಾಲಹರಿಯನ್ನು ತುಂಬಾ ಆಳಕ್ಕಿಳಿಸುವ ಕವನ."ಸಂತನಾದರೂ ಮನದಿ ದುಃಖವಿರುವ ಹಾಗೆ" ಎಷ್ಟು ಆಳವಾದ ಯೋಚನೆ!!ವಾಹ್...ಕೆಲವರಿಗೆ ಹಾಗೆ ಕಷ್ಟಗಳು ಬಂದರೆ ಬರುತ್ತಲೇ ಇರುತ್ತವೆ.ಆದರೆ ಕರಿಮೋಡವೂ ಕಳೆದು ಮಳೆಯಾಗುತ್ತದೆ ಕಾಯಬೇಕಷ್ಟೇ.ಮೂರನೆಯ ಚಾರಣ ಓದುತ್ತಾ ಜಯಂತ್ ಕಾಯ್ಕಿಣಿಯವರ "ಬೊಗಸೆಯಲ್ಲಿ ಮಳೆ" ಕೃತಿ ನೆನಪಾಯಿತು.ಗಡಿ ಅಂದರೆ ಏನಪ್ಪಾ ಎಂದು ಪ್ರಶ್ನಿಸುವ ಸೈನಿಕರಿಗೆಲ್ಲ ಆಟಿಕೆಯ ಪಿಸ್ತೂಲ್ ನೀಡುವ ಮೂಲಕ ಎಲ್ಲರನ್ನೂ ನಗಿಸಬಾರದೇಕೆ ಎಂದು ಮುಗ್ಧವಾಗಿ ಪ್ರಶ್ನಿಸುವ ಮಗು ದೇಶದೇಶಗಳ ನಡುವಿನ ವೈಮನಸ್ಯದ ವಿಷಯ ಬಂದಾಗ ಪ್ರತೀ ಬಾರಿಗೂ ನೆನಪಾಗುತ್ತದೆ ನನಗೆ.ತಾ ಬದುಕಿ ಇತರರಿಗೂ ಅವಕಾಶ ಕೊಡಬೇಕು ಎನ್ನುವ ಕವಿ ಭಾವ ಇಷ್ಟವಾಗುತ್ತದೆ.🙏🏻
ನಿಶ್ಮಿತಾ ಪಳ್ಳಿ
[2/18, 5:13 PM] Tr Ramesh: ಪ್ರೇಮ್ ಅವರ ಕವನ *ಜೀ-ವನ ಕ-ವನ* ಚೆನ್ನಾಗಿದೆ. ಮೂರು ದಿನದ ಬಾಳು.. ಪ್ರೀತಿಯಿಂದ ಬಾಳುವುದೊಂದನ್ನು ಬಿಟ್ಟು ಮತ್ತೆಲ್ಲ ಮಾಡುತ್ತಿದ್ದೇವೆ.. ದಿನವೂ ಸಂತಸವಾಗಿ ಬಾಳುವ ಎಂಬುದನ್ನು ಬಹಳ ಅರ್ಥವತ್ತಾಗಿ ತಿಳಿಸಿದ ಕವನ..
ಧನ್ಯವಾದಗಳು ತಮಗೆ 🙏
[2/19, 7:08 AM] Wr Shivaprasad Aradhya: ಪ್ರೇಮ ಕವಿಯತ್ರಿಯ ಬರಹ
ಚ್ಚ ಚ್ಚ ಆದಿಪ್ರಾಸದಲಿ ಹುಚ್ಚ ಎಬ್ಬಿಸಿ ಕುಣಿಸಿವತಣಿಸಿದ ಕವಿಗೆ ಶರಣು ಆದರೆ ತುಚ್ಛಗೆ ದಾನ ಮಾಡಬಾರದು.ಅರ್ಹರಿಗೆ ನೀಡಬೇಕು ಪ್ರಾಸ ದ ಬರದಲಿ ತಪ್ಪಾಗಿದೆ.ಒಟ್ಟಾರೆ ಪ್ರಾಸದ ಬರದಲಿ ಹೀಗೂ ಹುಚ್ಚೆದ್ದು ಬರೆಯಬಹುದೆಂದು ತೋರಿಸಿದ್ದೀರಿ ಅಬ್ಬಬ್ಬಾ ಭಲೇ ಕವಿಯೇ ನೀವೇನು ಸುಮ್ಮನೇನಾ ಎಚ್ಚರವಾಗಿರಬೇಕು ವಿಮರ್ಶೆಗೂ ಮುನ್ನ
ಶಿವಪ್ರಸಾದ್ ಆರಾಧ್ಯ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ