ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -148
ಈಗ ಭಾರತ ವಿಶ್ವಗುರುವಾಗಿ ಬೆಳೆಯುತ್ತಿದೆ ನಿಮಗೆ ಅನ್ನಿಸುತ್ತಾ ಇಲ್ಲವೇ? ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು. ಎಲ್ಲಾ ದೇಶಗಳಿಗಿಂತಲೂ ಭಾರತ ಒಂದು ವಿಭಿನ್ನ ದೇಶವಾಗಿದೆ. ಭಾರತವನ್ನು ವಿವಿಧ ಆಯಾಮಗಳಲ್ಲಿ ಗಮನಿಸಿದಾಗ ಅದೊಂದು ಸುಂದರವಾದ ದೇಶವಾಗಿದೆ ಮತ್ತು ಮೂರು ಕಡೆ ನೀರಿನಿಂದ ಆವೃತವಾದ ಪ್ರದೇಶವಾಗಿದೆ. ಇಲ್ಲಿ 28 ರಾಜ್ಯಗಳಿದ್ದು 7 ಕೇಂದ್ರಾಡಳಿತ ಪ್ರದೇಶಗಳಿವೆ. 28 ದೇಶಗಳ ಭಾಷೆ, ಆಚರಣೆ, ಸಂಸ್ಕೃತಿ, ಆಚಾರ ವಿಚಾರಗಳೂ ವಿಭಿನ್ನವಾಗಿದ್ದರೂ ಐಕ್ಯತೆಯ ಮಂತ್ರವನ್ನು ನಾವು ಪಠಿಸುವುದೇ ನಮ್ಮನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಿದ ಒಂದು ಬಿಂದು. ವೇಷ ಬೇರೆ, ಭಾಷೆ ಬೇರೆ ದೇಶವೊಂದೇ ಭಾರತ... ಇದು ನಮ್ಮ ಧ್ಯೇಯ ಅಲ್ಲವೇ?
ಯಾವುದೇ ದೇಶದಲ್ಲಿ ಯುದ್ಧಗಳಾಗಲಿ, ನೋವು ಉಂಟಾಗಲಿ ಸಹಾಯಕ್ಕೆ ತೆರಳುವ ಮೊದಲ ದೇಶವೆಂದರೆ ಅದು ನಮ್ಮದೇ ದೇಶ ಅಲ್ಲವೇ? ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಸರ್ವ ಮಾನವ ಕುಲಕ್ಕೂ "ಮಾನವ ಜಾತಿ ತಾನೊಂದೆ ಒಲಮ್"ಎಂದು ಸರ್ವರಿಗೂ ಸಹಾಯ ಹಸ್ತ ಚಾಚಿ ಸಹಕಾರ ನೀಡುವ ಒಳ್ಳೆಯ ಗುಣ ಭಾರತಕ್ಕೆ ಇರುವುದು ನಾವು ವಿಶ್ವಗುರು ಎಂದೆನಿಸಲು ಎರಡನೇ ಕಾರಣ.
ಮತ್ತೆ ನಮ್ಮಿಂದ ಸಾಲ ಪಡೆದು ಬೆಳೆದ ಮತ್ತು ಬೆಳೆಯುತ್ತಿರುವ ಸಣ್ಣ ರಾಷ್ಟ್ರಗಳು. ಭಾರತದ ಸಹಾಯಕ್ಕಾಗಿ ಸದಾ ಚಿರಋಣಿಗಳಾಗಿದ್ದು, ಸಣ್ಣ ಪುಟ್ಟ ಕಷ್ಟಗಳಲ್ಲಿ ಭಾರತ ತನ್ನ ಕೈ ಬಿಡಲಾರದು ಎಂಬ ನಂಬಿಕೆಯ ಮೇಲೆ ಇರುವುದರಿಂದಲೂ ಭಾರತ ವಿಶ್ವಗುರು ಎನಿಸಿಕೊಳ್ಳಲು ಸಹಕಾರಿ ಆಗಿದೆ.
ಶಾಂತಿ, ಸಹನೆ, ಐಕ್ಯತೆ, ಸಹಬಾಳ್ವೆ, ಆರೋಗ್ಯ, ಪ್ರಕೃತಿದತ್ತ ಕೊಡುಗೆ, ಸೌಂದರ್ಯ, ಉತ್ತಮ ಪರಿಸರ, ಜಲ, ಉತ್ತಮ ಮನುಷ್ಯತ್ವದ ಜನ ಭಾರತದಲ್ಲಿ ಹೆಚ್ಛಾಗಿ ಸಿಗುತ್ತಾರೆ. ಇಲ್ಲಿನ ಜನರು ಒಳ್ಳೆಯ ಚಿಂತನೆಗಳನ್ನು ಮಾಡುತ್ತಾರೆ. ಹಾಗೆಯೇ ಧಾರ್ಮಿಕ ಗ್ರಂಥಗಳ ಅಧ್ಯಯನ, ಇಲ್ಲಿನ ಪೂಜೆ, ಮಂತ್ರ, ತಂತ್ರಸಾರಗಳು ಬಹಳ ವಿಭಿನ್ನವಾಗಿ ಇರುವುದರಿಂದ ಹಲವಾರು ಜನ ಪ್ರೇರಿತರಾಗಿ ಇಲ್ಲಿಗೆ ಬಂದು ಭಾರತವನ್ನು ಬೆಳೆಸಿರುವುದೂ ಕೂಡಾ ಇದಕ್ಕೆ ಸಾಕ್ಷಿಯಾಗಿದೆ.
ಉತ್ತಮ ಬೆಟ್ಟ ಗುಡ್ಡಗಳು, ಎಷ್ಟು ಸಂಶೋಧನೆ ನಡೆಸಿದರೂ ಮತ್ತಷ್ಟು ವಿಷಯಗಳನ್ನು ಅಡಗಿಸಿ ಇಟ್ಟುಕೊಂಡಿರುವ ಹಿಮಾಲಯದ ತಪ್ಪಲು, ಗುಹೆಗಳು, ದೇವಾಲಯಗಳು, ಪುರಾತನ ನಂಬಿಕೆ, ಆವಿಷ್ಕಾರಗಳು, ವೈಜ್ಞಾನಿಕ ಚಿಂತನೆಗಳು, ಗಣಿತದ ಲೇಖ್ಖಾಚಾರ ಗಳು, ಜ್ಯೋತಿಷ್ಯ ಶಾಸ್ತ್ರ, ಸಂಸ್ಕೃತ ಭಾಷೆ, ವೇದ ಪುರಾಣಗಳ ಆಶಯಗಳು ಓದಿದಷ್ಟು ಮುಗಿಯದ ಪುರಾಣ ಕತೆ, ಧಾರ್ಮಿಕ ವಿಚಾರಗಳು ಎಲ್ಲಾ ದೇಶದ ಜನರನ್ನೂ ಇಲ್ಲಿಗೆ ಕೈ ಬೀಸಿ ಕರೆಯುವ ಕಾರಣ ಭಾರತ ಸರ್ವರಿಗೂ ಶಾಂತಿಯ ಪಾಠ ಕಲಿಸುವ ವಿಶ್ವಗುರು ಹೌದಲ್ಲವೇ?
ಸನಾತನ ಧರ್ಮದ ಎಷ್ಟು ಕಲಿತರೂ ಮುಗಿಯದ ಕಟ್ಟು ಕಟ್ಟಳೆಗಳ ಮೂಲ ತಿಳಿಯುವ ಕುತೂಹಲ ಒಂದೆಡೆಯಾದರೆ ವಿಶ್ವದಲ್ಲೆ ಅತಿ ಹೆಚ್ಚು ಜನ ಸಂಪನ್ಮೂಲ ಹೊಂದಿರುವ ಇಲ್ಲಿನ ಜನರಿಂದ ವ್ಯಾಪಾರವನ್ನೂ ಪಡೆಯಬಹುದು, ಕೆಲಸವನ್ನೂ ಪಡೆಯಬಹುದು ಎಂಬ ಲೆಕ್ಕಾಚಾರ ಹಲವು ವ್ಯಾಪಾರೀ ದೇಶಗಳದ್ದು. ಚೀನಾ, ಅಮೇರಿಕಾ, ರಷ್ಯಾ, ಅರಬ್ ದೇಶಗಳಿಗೆ ಭಾರತ ಉತ್ತಮ ಮಾರುಕಟ್ಟೆ. ಅಲ್ಲಿ ಉತ್ಪಾದಿಸಿದ ಪ್ರತಿ ವಸ್ತುವಿಗೂ ಇಲ್ಲಿ ಬೇಡಿಕೆ ಇದೆ. ಹಣ್ಣು ಹೂವುಗಳಿಂದ ಹಿಡಿದು ಯುದ್ಧ ವಿಮಾನಗಳವರೆಗೂ, ಕಾರುಗಳು, ಕಂಪ್ಯೂಟರ್ ಮೊಬೈಲ್ ವರೆಗೂ ನಮ್ಮ ಬೇಡಿಕೆಯೇ ಹೆಚ್ಚು. ಹಾಗೂ ಭಾರತ ಎಲ್ಲರಿಗೂ ಬೇಕು.
ಪ್ರಪಂಚದ ಯಾವುದೇ ಹೂಡಿಕೆದಾರರಿಗೂ ಅವಕಾಶ ಇದೆ. ಹಾಗೆಯೇ ಕೊಡು ಕೊಳ್ಳುವುದರಲ್ಲೂ ನಾವು ಮುಂದು. ಎಲ್ಲಾ ಹಿರಿಯ ರಾಷ್ರ್ರಗಳೊಂದಿಗೂ ಉತ್ತಮ ಸ್ನೇಹ, ಗೆಳೆತನದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವುದೂ ನಮ್ಮ ದೇಶವನ್ನು ಎಂದೆಂದಿಗೂ ವಿಶ್ವಗುರುವನ್ನಾಗಿ ಮಾಡಿದೆ ಎನ್ನಲು ಎರಡು ಮಾತಿಲ್ಲ ಅಲ್ಲವೇ? ನೀವೇನಂತೀರಿ?
ಜೈ ಭಾರತ್.
@ಪ್ರೇಮ್@
10.09.2022
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ