ಭಾನುವಾರ, ಏಪ್ರಿಲ್ 14, 2024

ಭರವಸೆಯ ಬೆಳಕು

ಭರವಸೆಯ ಬೆಳಕು


ಯಾರಿಂದಲೂ ಏನನ್ನೂ ನಿರೀಕ್ಷೆ ಇಟ್ಟುಕೊಳ್ಳಬಾರದು
ಪ್ರಪಂಚದಲ್ಲಿ ನಾವು ಒಂಟಿಯಾಗಿ ಬಂದು ಹೋಗುವವರು
ಇದೆಲ್ಲಾ ಗೊತ್ತಿದ್ದೂ ಗೊತ್ತಿದ್ದೂ ನನಗೆ ಬಾಳಿನಲಿ
ನಿನ್ನ ಮೇಲೆ ನಂಬಿಕೆ ಬಂದು ಬಿಟ್ಟಿದೆ ಕಣೋ..

ಅದ್ಯಾವ ಹೊಸ ನಿರೀಕ್ಷೆಗಳೋ ತಿಳಿಯದೇನಗೆ 
ನೀ ನನ್ನ ಸದಾ ಪ್ರೀತಿಸುವೆ ಎಂಬ ನಂಬಿಕೆ
ನನ್ನ ಮೇಲೆ ನಿನಗೆ ನಿತ್ಯ ಕಾಳಜಿಯ ಕಾತರ
ದೈಹಿಕವಾಗಿ ಸೋತಾಗ ಮಾನಸಿಕವಾಗಿ ನೊಂದಾಗ
ಕಣ್ಣೀರು ಒರೆಸಲು ಬರುವೆ ಎಂಬ ವಿಶ್ವಾಸ

ಯಾರ ಮೇಲೂ ಇಲ್ಲದ ಆಸೆ ಆಕಾಂಕ್ಷೆಗಳು
ನೋವಲ್ಲೂ ನಗುವ ಹೊಸ ಭರವಸೆಗಳು
ಯಾರಿಂದಲೂ ಸಿಗದ್ದು ನಿನ್ನಲಿ ಸಿಗುವ ಆಸೆ
ನೀ ಬಾಳಲಿ ಬಂದು ಖುಷಿಯ ತರುವಂತೆ..

ಯಾರಿಗೂ ಕೊಡದ ಪ್ರೀತಿ ನಿನಗೆ ದಾನ
ಕಣ್ಣೀರು, ಸಮಯ, ಪ್ರೀತಿ, ಬಹುಮಾನ
ಭಾವನೆಗಳು, ಆಲೋಚನೆಗಳು, ಭಾವಗಳು
ಎಲ್ಲವನ್ನೂ ನಿನಗೆ ಧಾರೆ ಎರೆದು ಬಿಟ್ಟಿರುವೆ

ಅಂದೇ ನೀ ನನ್ನ ಕುತ್ತಿಗೆಗೆ ತಾಳಿ ಬಿಗಿದ ಮರುಕ್ಷಣವೇ
ಮಾತಿಲ್ಲದೆ ಮೌನದಲೇ ನನ್ನ ಬಾಳ ಆರ್ಪಿಸಿರುವೆ 
ನೀ ಯಾರು ಏಕೆ ಎಲ್ಲಿ ಏನು ಏನೂ ಕೇಳಲಿಲ್ಲ ನಾ
ದೇವರ ಆಜ್ಞೆಗೆ ತಲೆಬಾಗಿ ನಮಿಸಿ ಸ್ವೀಕರಿಸಿರುವೆ

ನಾನು ನೀನು ಬೇರಿಲ್ಲ ಎಂದು ಅರಿತಿರುವೆ
ಕಷ್ಟದ ಕಡಲಿನಲೂ ನಗೆಯ ಅಳೆಯುಕ್ಕಿಸುತ್ತಿರುವೆ
ಕೆಲಸವೆಂಬ ಕಾಯಕಕೆ ಕೊರಳೊಡ್ಡಿ ಕುಳಿತಿರುವೆ
ಅಲ್ಲೂ ನಿನ್ನ ನೆನಪಿಗೆ ದಾರಿ ಇರಿಸಿರುವೆ 

ನಂಬಿಕೆಯ ವಿಷಯ ಬೇರೆಯೇ ಇರಲಿ
ಕೋಟಿ ಪುರುಷರಿಗಿಂತಲೂ ನಿನ್ನ ಮೇಲಿದೆ ಅದು
ಎಲ್ಲಿಂದ ಬಂತೋ ಯಾವ ಸೆಳೆತವೋ 
ಇಲ್ಲಿ ಹಣವಲ್ಲ, ಧನವಲ್ಲ ಕಾಳಜಿ ಕೆಲಸ ಮಾಡಿದೆ
ಒಣ ಬದುಕಿಗೆ ನೀ ನೀರ್ ಸುರಿಸಿ ಪೋಷಿಸಿದೆ

ಮತ್ತೆ ಬರಬಹುದು ಬಿಸಿಲ ಧಗೆಯ ಬೇಸಿಗೆ
ವಸಂತ ಬರುವನೆಂದು ಕೋಗಿಲೆ ಕಾಯದೇ 
ಶರದೃತುವಿನ ಹನಿ ಬಿಂದುಗಳಿಗೆ ಮನ ಬಯಸದೆ
ಮಾಗಿಯ ಚಳಿಗೆ ಮನ ಬಿಸಿಯಪ್ಪುಗೆ ನೀಡದೆ??

ಸೂರ್ಯ ಬರದೆ ಕಮಲ ಎಂದಾದರೂ  ಅರಳುವುದೇ
ರವಿ ಕಿರಣ ಸ್ಪರ್ಷಿಸದೆ ಇಳೆ ನಗುವಳೇ ಬೆಳಕಲಿ?
ಮಿನುಗು ತಾರೆಗೂ ಚಂದಿರನೇ ನಾಯಕನಲ್ಲವೇ?
ಪ್ರೀತಿ ಇಲ್ಲದೆ ಹೂವು ಅರಳಿ ನಗ ಬಹುದೇ ಜಗದಿ?

ದೇವನೊಲುಮೆಯೆ ನಮ್ಮಿಬ್ಬರ ನಡುವಿನ ಭಾಷೆ
ಆಶೀರ್ವಾದವೇ ಉಡುಗೊರೆಯು ಬದುಕಿಗೆ
ಬಾಳ ರಥ ಎಳೆಯುವ ಗಾಲಿ ನೀನಲ್ಲವೇ
ನನ್ನ ದೋಣಿಯ ನಡೆಸೋ ಅಂಬಿಗನು

ಹೃದಯ ಇಲ್ಲದೆ ಬಡಿತ ಹೇಗಾದೀತು??
ಮೆದುಳು ಇಲ್ಲದೆ ಯೋಚನೆ ಹೇಗೆ ಬಂದೀತು
ನೀರೇ ಇಲ್ಲದೆ ಸ್ನಾನ ಹೇಗೆ ನಡೆದೀತು?
ನಿನ್ನುಸಿರ ತುಂತುರಿಲ್ಲದೆ ನೆಲ ಬಿರಿಯದೆ?

ಮೋಸ ವಂಚನೆಯ ಹಾದಿಗೆ ಕಲ್ಲು ಹಾಕಿರುವೆ
ನಗೆಯುಡುಗೆ ತೊಟ್ಟು  ದಿನಗಳ ಎಳೆಯುತಿರುವೆ
ಮತ್ತೆ ಶ್ರಾವಣ ಬರುವುದೆಂಬ ನಂಬಿಕೆಯಿಂದ
ಬಟ್ಟೆಯೊಂದ ಹಾಸಿ ಭಿಕ್ಷೆಗೆ ಕಾದಿರುವೆ..

ಯಾರೂ ಕೊಡದ ಮತ್ತೇನೋ ನಿನ್ನಲಿ ಅಪೇಕ್ಷೆ
ಯಾರೂ ತೋರಿಸದ ಊರಿಗೆ ನನ್ನೊಡನೆ ಸಾಗುವೆ
ಎಲ್ಲೂ ಸಿಗದ ಆನಂದ ನಿನ್ನ ಜೊತೆ ಸಿಗುವುದು
ಬದುಕ ಚಿಗುರು ಮೊಳೆತು ಹೆಮ್ಮರವಾಗಿ ಬೆಳೆವುದು

ಮತ್ತದೇ.. ಏನೇನೋ ಒಲವ ಭಾವದ  ನಿರೀಕ್ಷೆಗಳು 
ಸಿಗುವುದೋ ಬಿಡುವುದೋ ದೈವದ ಪವಾಡವೋ
ಸ್ವಚ್ಚ ಮನಸಿಗೆ ದೇವರ ರಕ್ಷಣೆಯ ಆಶೀರ್ವಾದವೋ
ನಿತ್ಯ ನಲಿವಿಗೆ ಹಿರಿಯರ ಶಾಪಮುಕ್ತ ವರವೋ

ಹುಸಿ ಆಸೆಯ ನಂಬಿಕೆಯ  ಸಿಹಿ ಕಹಿ ಮಾತ್ರೆಯೋ
ಕಸಿ ಮಾಡಿಹ ಚಿಗುರಿನ ಹಸಿರಿನ ನೋಟವೋ
ಮಾಟವೋ ಮಂತ್ರವೋ ಯಂತ್ರ ತಂತ್ರವೋ 
ಮ್ಯಾಜಿಕ್ ಮಾಯೆಯೋ ಮತ್ತೆ ಒಲವೋ

ಏನಾದರೂ ಸರಿ ಸದಾ ಇರಲೆಂಬ ಬಯಕೆ
ಹೊಸ ಬದುಕಿಗೆ ಹೆಜ್ಜೆ ಇಡುವ ಕೊನರುವಿಕೆ 
ಮೂಟೆ ಕಟ್ಟಿ ಬಿಸಾಕಿದ ಕನಸುಗಳ ಹುಡುಕಾಟ
ನಿತ್ಯದ ಜೀವನದ ಸತ್ಯದ ನೋವಿನ  ನರಳಾಟ

ಬದುಕ ದಾರಿಯಲಿ ಕೈ ಹಿಡಿದು ಜೊತೆಯಾಗಿ ಸಾಗುವೆ 
ಬಾಳ ಪಯಣದಲಿ ಸದಾ ಜೊತೆಯಾಗಿ ನಿಲ್ಲುವೆ
ಒಂಟಿ ಜೀವಕೆ ಜಂಟಿಯಾಗಿ ನಗುವ ಹಂಚುತ
ನಂಟಿನೊಡನೆ ಜೊತೆಗೆ ನಿಲ್ಲುವೆ ಎಂಬ ಭರವಸೆ
@ಹನಿಬಿಂದು@
15.04.2024

ಶನಿವಾರ, ಏಪ್ರಿಲ್ 13, 2024

god

God is great
You are also great
Because you are the daughter of God
Heartly godly I'm with you
Because I adore you as God

God may not get angry
God always bless us
God looks each one of us
God gives chance for us
To correct our mistakes

I love you God 
I always obey you
I listen to your
I have hope on you
I have beliefs on God 

God might have given you to me
God might blessed me you
God is always cheerful
I hope you also belive in God
Because god is within you and me
@HoneyBindu@
14.04.2024




ಶುಕ್ರವಾರ, ಏಪ್ರಿಲ್ 5, 2024

ಎಲ್ಲರೂ

ಎಲ್ಲರೂ

ಬದುಕೆಂದರೆ ಹೀಗೆಯೇ..
ಎಲ್ಲರದ್ದೂ ಒಂಥರಾ ಮುಖವಾಡ..
ಮಗುವಿಗೆ ಹೇಳಲಾಗುತ್ತಿದೆಯೇ ಆಕೆ ದುಡಿಯುವ ' ವೇಶ್ಯೆ ' ಎಂಬ ಕಾಯಕದ ಬಗ್ಗೆ?
ಮಡದಿಗೆ ತಿಳಿಸಬಹುದೆ "ನಿನ್ನಲಿ ನಾ ಸಂತುಷ್ಟನಲ್ಲ, ನನ್ನ ಪ್ರಿಯತಮೆಯೇ ನನಗೆಲ್ಲ" ಅಂತ? 

ತಂದೆಗೆ ಈಗಲೇ ಅದು ಹೇಗೆ ತಾನೇ ಹೇಳಲು ಸಾಧ್ಯ... 'ಆಕೆಯೇ ನನ್ನ ಬಾಳ ಸ್ನೇಹಿತೆ ' ಎಂದು?
ತಂಗಿಯ ಕಾಲೇಜಿನ ಫೀಸು ಕಟ್ಟಲು ಲಾರಿಯಿಂದ ಸಾಮಾನು ಇಳಿಸಿ ಹಮಾಲಿ ಕೆಲಸ ಮಾಡಿದ್ದನ್ನು ಹೇಗೆ ಹೇಳುವುದು?

ತಮ್ಮನ ಕಲಿಕೆಗಾಗಿ ತಾನು ಕಲಿತು ಅವನಿಗೆ ಕಳಿಸಿದ್ದು ಅವನಿಗೆ ಗೊತ್ತಾದರೆ ಮರ್ಯಾದೆ ಪ್ರಶ್ನೆ. 
ಗೆಳತಿಯ ಗೆಳೆಯ ಕರೆ ಮಾಡಿ ಅವಳ ಬಗ್ಗೆ ಕೇಳಿದ್ದನ್ನು ಅವಳಿಗೆ ಹೇಳಿದರೆ ತಪ್ಪಾಗುತ್ತದೆ..

ಇನ್ನು ಸಮಾಜ ಎಂಬ ದೊಡ್ಡ ಶತ್ರುಗಳ ಮಿತ್ರ, ಮಿತ್ರರ ಶತ್ರು...
ಅದೇ ಆ ನಾಲ್ಕು ಜನ..
ಅವರ ಮುಂದೆ "ನಾವು ಚೆನ್ನಾಗಿದ್ದೇೆವೆ" ಎಂದು ನಾವು ತೋರಿಸಲೇ ಬೇಕಲ್ಲವೇ?

ಅದಕ್ಕಾಗಿಯೇ ಬದುಕೆಂಬ ಈ ಮುಖವಾಡ..
ಇಲ್ಲಿ ಎಲ್ಲವೂ ಮುಖವಾಡಗಳೆ..
ಒಳಗೊಂದು..ಹೊರಗೊಂದು..
@ಹನಿಬಿಂದು@
06.04.2024

ಪಯಣ

ಪಯಣ

ಅತ್ತಲು ಇತ್ತಲು ಸುತ್ತಲು ಮುತ್ತಲು
ಕತ್ತಲು ಹಗಲಲು ಸಂಜೆ ಬೆಳಕಲು
ಸಾಗುತ ಜೀವನ ಯಾನ ಮುಂದಕೆ
ತೊರೆದು ಸಾವಿರ ನೆನಪ ಹಿಂದಕೆ

ಬಾನಿನ ಆಚೆಗೂ ಭೂಮಿಯ ಒಳಗೂ
ಸಾಗರದಾಳಕು ಮೋಡದವರೆಗೂ
ನೀರು, ಗಾಳಿ, ಮಣ್ಣು ಆಕಾಶ
ಎಲ್ಲಾ ಕಡೆಯೂ ಇವೆ ಅವಕಾಶ

ಹೋಗುತ ಬರುತ ತಿರುಗುತ ನಡೆಯುತ
ಆಚೆಗೂ ಈಚೆಗೂ ಮೇಲಕು ಕೆಳಕೂ
ಸಾಗರದಾಚೆಗೂ ಬಾನಿನ ತುದಿಗೂ
ಹಿಮದ ಪರ್ವತಕು ಜಲದ ಬುಡಕೂ

ಸಾಗಿದೆ ಯಾನ ಸಾವಿನ ಕಡೆಗೂ
ಕ್ಷಣ ಕ್ಷಣ ಬೆಳೆಯುತ ದೇವನ ಎಡೆಗೂ
ಸಾಧನೆ ಮಾಡುತ ಪರರನು ಆಡುತ
ಸೋಲನು ಗೆಲ್ಲುತ ಪ್ರೀತಿಗೆ ಸೋಲುತ
ಸಾಗಿದೆ ಪಯಣ ಮೌನದ ಕಡೆಗೂ
@ಹನಿಬಿಂದು@
05.04.2024

ತುಳು ದಶಕ -1

ತುಳು ದಶಕ -1

ಬರ್ಪಿನವೆನ್ ತಡೆಯೆರೆ ಆಪುಜಿ
ಬರಂದಿನೆನ್ ಪತ್ತೆರೆ ಸಾಧ್ಯ ಇಜ್ಜಿ
ಪೋಪಿನೆನ್ ಉಂತಾಯೆರೆ ತೀರುಜಿ
ತಿಕ್ಕಂದಿನೆನ್ ಪಡೆಯೆರೆ ಭಾಗ್ಯ ಇಜ್ಜಿ

ಉಂದು ನರಮಾನಿ ಬದ್ ಕ್
ನಮ್ಮ ಪನ್ಪಿನ ಮಾತ್ರ ನಮನ್ ಸೇರುನಿ
ಪರ ಜನಕ್ ಸೇರುನ ನಮಕ್ ತಿಕ್ಕಂದ್
ಆಸೆ ಪಾಡಿನನೆ ಬತ್oಡ್ ಬೋಡು ಬೋಡುಂದು

ಯಾನ್ ಯಾನೆ ಈರ್ ಈರೆ, ಯಾನ್ ಪಡೆಯಿನ ಎಂಕ್
ಈರ್ ಬೆಂದಿನ ಇರೆಗೆ ಬೂಮಿದ ಮಿತ್ 
@ಹನಿಬಿಂದು@
05.04.2024

ಗುರುವಾರ, ಏಪ್ರಿಲ್ 4, 2024

ಬಾಳು ಬೆಳಗಲಿ

ಬಾಳು ಬಂಗಾರವಾಗಿರಲಿ

ಬಂಗಾರದಂತಹ ಬದುಕ  ಧಾರೆ ಎರೆದಿರುವೆ
ಬಂಧನವಾಗದ ಹಾಗೆ ಪೊರೆಯುವಂತಾಗಲಿ 
ಭೃಂಗದ ಹಾಗಿದ್ದೆ ಅತ್ತಿತ್ತ ಓಡಾಡುತ್ತಾ ಆರಾಮದಲಿ
ಭಯವಿಲ್ಲದ ಬಾಳ ಕಟ್ಟಿ ಕೊಡುವಂತಾಗಲಿ 

ಭೋಗ ಭಾಗ್ಯದ ಅತಿಯಾಸೆ ಎನಗಿಲ್ಲ
ಭವ್ಯ ಭವಿತವ್ಯವ ರೂಪಿಸುವ ಕನಸು ನನಸಾಗಲಿ
ಬೆಳ್ಳಿ ಬಂಗಾರದ ಧನದ ದುರಾಸೆ ಇಲ್ಲಿಲ್ಲ
ಬೆವರ ಹರಿಸಿ ದುಡಿದ ಬಾಳು ಬೆಳಗಲಿ

ಬಿಚ್ಚು ಮನಸಿನಲಿ ಮುನಿಸು ಬಾರದಿರಲಿ
ದೇವನೊಲುಮೆಯು ಸದಾ ಜೊತೆಗಿರಲಿ
ಅದೃಷ್ಟ ಅದೃಶ್ಯ ಶಕ್ತಿಯಾಗಿ ಬರುತಿರಲಿ
ಅರಗಿನ ಮನೆಯಾದರೂ ಖುಷಿಯು ಅರಳಲಿ

ದೇವರ ವರ ಪ್ರಸಾದ ನಿತ್ಯ ಜೊತೆಗಿರಲಿ
ಮನ ಮಂದಿರದಲಿ ಜ್ಯೋತಿ ಬೆಳಗುತಿರಲಿ 
ಸ್ನೇಹ ಪ್ರೇಮದ ಕಡಲುಕ್ಕಿ ಹರಿಯಲಿ
ಬಿಳಿಯ ತೆರೆಗಳು ಕಷ್ಟಗಳ ದೂರಾಗಿಸಲಿ

ಮಮತೆ ಸಾಂತ್ವನ ಝರಿಯಾಗಿ ಉಕ್ಕಲಿ
ಮಾನವತೆಯ ಹಾದಿಯಲಿ ಸಾಗುವಂತಾಗಲಿ
ಬೇರೆಂಬ ಭೇದವಿಲ್ಲದೆ ಒಂದಾಗಿ ಸಾಗುತಲಿ
ಬದುಕ ಬೇರಿನ ರಸ ಸವಿಯುವಂತಾಗಲಿ

ಬೇನೆ ಬೇಸರ ಕಳೆದು ಹೋಗಲಿ
ಬುವಿಯ ಸುಖವು ಬಳಿಗೆ ಬರಲಿ
ಬೇವು ಬೆಲ್ಲದ ಬದುಕಿನೊಳಗೆ
ಬೆರೆತು ಬಾಳುವ ಭಾಷೆ ಉಳಿಯಲಿ
@ಹನಿಬಿಂದು@
04.04.2024

ಸೋಮವಾರ, ಏಪ್ರಿಲ್ 1, 2024

ಹಾಸ್ಯ ಕವನ

ಕೋಪ

ಗುಂಡಗೂ ನಂಜಿಗೂ ಕೋಪ
ಕಾರಣ ಏಕೋ ಭೂಪ
ನಂಜಿಗೆ ಬೇಕು ಚಿನ್ನದ ಸರ
ಗುಂಡನು ಕೊಟ್ಟ ಕಾಸಿನ ಸರ

ಬಹಳ ದಿನಗಳ ಬಳಿಕ ತಿಳಿಯಿತು
ಅದು ಒಂದು ಗ್ರಾಮಿನ ಸರ
ಪಕ್ಕದ ಮನೆಯ ನರಸಮ್ಮನಿಂದ
ಅವಳ ಬಳಿಯೂ ಅದೇ ಸರ!

ನಂಜಿಯ ಕೋಪಕೆ ಮಿತಿ ಇಲ್ಲ
ಗುಂಡನ ನಗುವಿಗೆ ಸಾಟಿ ಇಲ್ಲ
ಮಡದಿಯ ಮಂಗ ಮಾಡಿಹನು
ಹಣವನು ಉಳಿಸಿ ಮೆರೆದಿಹನು 

ನಂಜಿಯ ಕೋಪದ ಹೊಳೆ ಉಕ್ಕಿತ್ತು
ಲಟ್ಟಣಿಗೆಯೊಂದು ಕೈಗೆ ಸಿಕ್ಕಿತ್ತು
ಗುಂಡನು ಬರಲು ಸಮಯವು ಇತ್ತು
 ಕೋಪದಿ ನಂಜಿ ಮನ ಬುಸುಗುಡುತಿತ್ತು

ಗುಂಡನು ಮನೆಗೆ ಖುಷಿಯಲಿ ಬರಲು
ಕೋಪವು ನೆಗೆದು ಚಿಮ್ಮುತ ಉಕ್ಕಲು
ಕೈಯಲ್ಲೊಂದು ತಿಂಡಿಯ ಕವರು
ಓಡುತ ಪರಿಮಳ ಮೂಗಿಗೆ ಬರಲು

ಕೋಪವ ಮುಂದೂಡಿ ಇಟ್ಟಾಯ್ತು
ಚಕ್ಕುಲಿ ತಿನ್ನುವ ಮನಸಾಯ್ತು
ಕೋಪವು ಕರಗಿ ನೀರಾಯ್ತು
ಅವಲಕ್ಕಿ ಸರವೇ ಪಾಲಾಯ್ತು
@ಹನಿ ಬಿಂದು@
02.04.2024

ಪನಿ

ಪನಿ

ಪನಿ ಪನಿ ಬರ್ಸಗ್
ಕಾಪುಂಡು ಉಡಲ್
ತಂಪಾಯೆರೆಗ್ ಮಡಲ್
ಇಲ್ಲದ ಮಿತ್ ಪಾಡ್ ದೀತೆ
ವಾ ದೊಂಬುಯೆ ಇತ್ತೆ
ಕುಲ್ಲರೆಗ್ ಆವಂದ್ ಉಲಾಯಿ
ಪಾರೊಡು ರಾತ್ರೆಲ ಪಿದಾಯಿ
@ಹನಿಬಿಂದು@
02.04.2024