ಮಂಗಳವಾರ, ಡಿಸೆಂಬರ್ 23, 2025

ಚಿಟ್ಕಾ

ಚಿಟ್ಕಾ 

ಬಚ್ಚೆಲ್

ಬೇನೆ ಬಚ್ಚೆಲ್ ಏರೆಗಿಜ್ಜಿ 
ಮೋನೆ ತೂಯೆರೆ ಆಪುಜಿ
ಬೆಂದ್ ಬತ್ತ್ ಬಯ್ಯ ಆನಗ
ಉಸಪ್ಪ ಪಂದ್ ಕುಲ್ಲುಗ!
@ಹನಿಬಿಂದು@
23.12.2025

ಶುಕ್ರವಾರ, ಡಿಸೆಂಬರ್ 19, 2025

ಪನಿ

ಪನಿ ಕಬಿತೆ
ಸೋಜಿ
ಕೋಲ ನೇಮ ಜಾತ್ರೆಡ್ 
ಪರ್ನ ಸೋಜಿ ಮರತ್ಂ‌ಡ್
ಪೊಸ ಜ್ಯೂಸು ಬತ್ಂಡ್
ಊರ್ದ ಬಾಜೆಲ್ ದೂರಾಂಡ್
@ಹನಿಬಿಂದು@
19.12.2025

ಗುರುವಾರ, ಡಿಸೆಂಬರ್ 18, 2025

ಸುಳ್ಯ

ಡಾ.ಸುಂದರ ಕೆನಾಜೆ 
ಸುಳ್ಯ ತಾಲೂಕು ರಚನೆಯಾಗಿ 60 ವರ್ಷಗಳಾದ ಹಿನ್ನೆಲೆಯಲ್ಲಿ ಸುದ್ದಿ ಚಾನೆಲ್ ಗಾಗಿ ಸುಳ್ಯದ ಸಂಶೋಧನಾ ಕ್ಷೇತ್ರದ ಪ್ರಗತಿ ಬಗ್ಗೆ ಮಾತನಾಡುವಂತೆ ಗೆಳೆಯ ದುರ್ಗಾಕುಮಾರ್ ನಾಯರ್ ಕೆರೆ  ಮಧ್ಯಾಹ್ನ ಕೇಳಿಕೊಂಡರು. ನಾನು ಮಾತನಾಡುತ್ತಿದ್ದಂತೆ ಕಾರಣಾಂತರದಿಂದ ಕರೆ ಕಡಿತವಾಯಿತು. ಒಂದು ನಿಮಿಷಕ್ಕಿಂತ ಹೆಚ್ಚು ಮಾತನಾಡಲು ಆಗಲಿಲ್ಲ. ಆದರೆ ನಾನು ಮಾತನಾಡಬೇಕೆಂದು ಯೋಚಿಸಿದ ವಿಷಯಗಳನ್ನು ಹಾಗೇ ಇಲ್ಲಿ ದಾಖಲಿಸಿದ್ದೇನೆ. ಅನೇಕರ ಕೆಲಸಗಳು ನನ್ನ ಗಮನಕ್ಕೆ ಈ ಕ್ಷಣಕ್ಕೆ ಬಾರದೇ ಬಿಟ್ಟು ಹೋಗಿರಬಹುದು. ಅವರ ಕೆಲಸಗಳೂ ದೊಡ್ಡದೆಂದು ಭಾವಿಸುತ್ತಾ ಓದುವಂತೆ ವಿನಂತಿ.
        **********
              *ಸುಳ್ಯ ತಾಲೂಕಿನ ಸಂಶೋಧನಾ ನೆಲೆ*

     1965 ರ ನಂತರ ಸುಳ್ಯ ಸಂಶೋಧನಾ ಕ್ಷೇತ್ರದಲ್ಲೂ ಬೆಳೆದಿದೆ. ಅದಕ್ಕೂ ಪೂರ್ವದಿಂದಲ್ಲೇ ಸುಳ್ಯ ಒಂದೆಡೆಯಿಂದ ಕೇರಳ, ಮತ್ತೊಂದು ಕಡೆಯಿಂದ ಕೊಡಗು, ಹಾಸನ, ತುಳುನಾಡಿನ ಬೆಳ್ತಂಗಡಿ, ಪುತ್ತೂರಿಗೆ ನೇರ ಸಂಪರ್ಕ ಇದ್ದು ಸಾಂಸ್ಕೃತಿಕ ಭಿನ್ನತೆಗೆ ಕಾರಣವಾದ ಪ್ರದೇಶ. ಮೂಲತಃ ಹೊಯ್ಸಳ ಬಲ್ಲಾಳರ ಸಂಪರ್ಕ ಜತೆಗೆ ಜೈನ ಬಲ್ಲಾಳ ಆಳ್ವಿಕೆ, ಕೊಡಗು ರಾಜರ ಆಳ್ವಿಕೆ, ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಬಾಂಬೆ ಮತ್ತು ಕೆನರಾ ಸಂಪರ್ಕ, ನಂತರ ಮದ್ರಾಸ್ ಆಡಳಿತ ವಿಭಾಗಕ್ಕೆ ಸೇರಿದ ಪ್ರದೇಶ ಸುಳ್ಯ. ಮೈಸೂರು ರಾಜ್ಯ ರಚನೆಯ ನಂತರ ಹೆಚ್ಚು ಕನ್ನಡದ ಪ್ರಭಾವ ಈ ಭಾಗಕ್ಕಾಯಿತು. ಪಂಜೆ, ಗೋವಿಂದ ಪೈ, ಕೊಳಂಬೆಯಂತಹಾ ಶ್ರೇಷ್ಠ ಸಾಹಿತಿ, ಸಂಶೋಧಕರ ಪ್ರಭಾವವೂ ಕಡಿಮೆಯದ್ದಲ್ಲ. 
          ತಾಲೂಕು ರಚನೆಯಾಗಿ ಹತ್ತು ವರ್ಷಗಳಲ್ಲಿ ಅಂದರೆ 1976ರಲ್ಲಿ ಸುಳ್ಯದಲ್ಲಿ ಡಿಗ್ರಿ ಕಾಲೇಜು ಸ್ಥಾಪನೆ ಯಾಯಿತು. ಮತ್ತೆ ಹತ್ತು ವರ್ಷ ಅಂದರೆ 1986ರಲ್ಲಿ ಸುಬ್ರಹ್ಮಣ್ಯದಲ್ಲೂ ಡಿಗ್ರಿ ಕಾಲೇಜು, ಮತ್ತೆ ಹತ್ತು ವರ್ಷ ಬಹುಶಃ1996 ಬೆಳ್ಳಾರೆಯಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭವಾಯಿತು. ಹಾಗಾಗಿ ಅನೇಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸಂಶೋಧನಾ ರಂಗದಲ್ಲಿ ಆಸಕ್ತಿ ಹೊಂದಿದವರಾದರು. ಮಂಗಳೂರು ವಿ.ವಿಯ ಪ್ರಭಾವ, ಜತೆಗೆ ಎಂಬತ್ತರ ದಶಕದಲ್ಲಿ ಆರಂಭಗೊಂಡ ಸುದ್ದಿ ಪತ್ರಿಕೆ ಸುಳ್ಯದ ಸಾಹಿತ್ಯ, ಸಂಶೋಧನೆಯನ್ನು ಬೆಳೆಸಲು ದಾರಿ ಮಾಡಿಕೊಟ್ಟಿದೆ. ಪರಿಣಾಮ ಸಾಹಿತ್ಯ, ಚರಿತ್ರೆ, ಜಾನಪದ, ಜನಾಂಗೀಯ ಅಧ್ಯಯನ, ಭಾಷಿಕ, ಕೃಷಿ ಮತ್ತು ಸ್ಥಳಗಳು, ಆರಾಧನೆಗಳ ಕುರಿತು  ಸಂಶೋಧನೆಗಳು ನಡೆದಿವೆ.
        ಕ್ರಮಾನುಗತವಲ್ಲದಿದ್ದರೂ ನೆನಪಾದದ್ದನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ತಕ್ಷಣಕ್ಕೆ ಎಲ್ಲವೂ ನೆನಪಾಗದೇ ಬಿಟ್ಟು ಹೋಗಿರಲೂಬಹುದು. ಸಾಹಿತ್ಯದಲ್ಲಿ ಅನೇಕರು ಕನ್ನಡ ಸಾಹಿತ್ಯ ಮತ್ತು ಪಾಶ್ಚಾತ್ಯ ಸಾಹಿತ್ಯಗಳ ಅಧ್ಯಯನ ನಡೆಸಿ ಕೃತಿ ರಚಿಸಿದ ಉದಾಹರಣೆಗಳು ಸುಳ್ಯದಲ್ಲೂ ಇವೆ. ಅದು ತಾಲೂಕು ರಚನೆಗೂ ಪೂರ್ವದ್ದು, ನಿರಂಜನರವರ ಅನೇಕ ಐತಿಹಾಸಿಕ ಕಾದಂಬರಿ ಮತ್ತು ಬರಹಗಳಿಗೆ ಸುಳ್ಯವೇ ಮೂಲ ಮತ್ತು ಅಮರ ಸುಳ್ಯದ ದಂಗೆಯ ಕುರಿತು ಮೊದಲು ಬೆಳಕು ಚೆಲ್ಲಿದವರೂ ಇವರೇ. ಅದು ಸೃಜನಶೀಲ ಸಾಹಿತ್ಯವಾದರೂ ಅದರಲ್ಲಿ ಸಂಶೋಧನೆಯ ನೆರಳಿದೆ. ಹಾಗೇ ವಿದ್ವಾನ್ ಟಿ.ಜಿ ಮುಡೂರುರವರ ಸಾಹಿತ್ಯಕ ಬರಹದಲ್ಲೂ ಕೂಡ ಕನ್ನಡ ಸಂಶೋಧನಾ ರಂಗದ ಛಾಯೆ ಇದೆ.
      ಕೋಡಿ ಕುಶಾಲಪ್ಪ ಗೌಡರು ಅಂತರಾಷ್ಟ್ರೀಯ ಭಾಷಾವಿಜ್ಞಾನಿ ಭಾಷೆಯ ಕುರಿತು ಆಳವಾದ ಅಧ್ಯಯನ ಮತ್ತು ಅರೆಭಾಷೆಯ ಕುರಿತ ಅಧಿಕೃತ ಅಧ್ಯಯನ ನಡೆಸಿದವರು. ಅದು ಮುಖ್ಯವಾಗಿ ಸುಳ್ಯ ಕೇಂದ್ರತ ಸಂಶೋಧನೆ. ಜನಾಂಗೀಯ ಅಧ್ಯಯನ ಮತ್ತು ಅಕಾಡೆಮಿಕ್ ಅಧ್ಯಯನ ಶಿಸ್ತಿನ ಮೂಲಕ ಸಂಶೋಧನೆಗೆ ಹೊಸ ದಿಕ್ಕು ತೊರಿದವರು ಡಾ. ಪುರುಷೋತ್ತಮ ಬಿಳಿಮಲೆಯವರು. ಅವರ ಗೌಡ ಜನಾಂಗ ಅಧ್ಯಯನ, ಇತರ ಕೃತಿಗಳಾದ ಕರಾವಳಿ ಜಾನಪದ, ಕೂಡುಕಟ್ಟು, ಕೊರಗರು ಇವೆಲ್ಲವೂ ಅದಕ್ಕೆ ಉತ್ತಮ ಉದಾಹರಣೆಗಳು. ಎಲ್ಲವೂ ಸುಳ್ಯ ಕೇಂದ್ರತ ಸಂಶೋಧನೆಗಳು. 
     ಪಾಲ್ತಾಡಿ ರಾಮಕೃಷ್ಣ ಅಚಾರ್ ರವರ ಸುಳ್ಯದ ಗಡಿಭಾಗದ ಪುತ್ತೂರಿನ ಪಾಲಾಡ್ತಿಯವರಾದರೂ ಅವರ ನಲಿಕೆ ಜನಾಂಗದ ಕುಣಿತಗಳ ಕುರಿತ ಅಧ್ಯಯನ ಕೂಡ ಸುಳ್ಯದ ನಲಿಕೆಯವರನ್ನು ಕೇಂದ್ರೀಕರಿಸಿ ನಡೆಸಿದ್ದಾಗಿದೆ. ಅಲ್ಲದೇ ಅವರ ಅನೇಕ ಇತರ ಸಂಶೋಧನಾ ಕೃತಿಗಳು ಕೂಡ ಸುಳ್ಯದ ಹಿನ್ನಲೆಯಲ್ಲೇ ರಚಿಸಲ್ಪಟ್ಟವುಗಳು. ಅವಳಿ ವೀರರಿಗೆ ಹೆಸರಾದ ನಾಡು ಸುಳ್ಯ. ಇಲ್ಲಿ ಬಹುತೇಕ ಎಲ್ಲಾ ಅವಳಿ ವೀರರು ಓಡಾಡಿದ್ದಾರೆ ಎನ್ನುವ ಪ್ರತೀತಿ ಇದೆ. ಅದರಲ್ಲಿ ಡಾ.ವಾಮನ ನಂದಾವರರು ಎಣ್ಮೂರಿನ ಕೋಟಿ-ಚೆನ್ನಯ ಬಗ್ಗೆ ಮೊದಲ ಜಾನಪದೀಯ ಅಧ್ಯಯನ ನಡೆಸಿದರು. ಆ ಮೂಲಕ ಮುಖ್ಯವಾಗಿ ಸುಳ್ಯದ ಬಿಲ್ಲವ ಸಮಾಜ ಮತ್ತು ಸುಳ್ಯದ ಚರಿತ್ರೆಯ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. 
     ಡಾ.ಸುಂದರ ನಾಯ್ಕರವರು ಸುಳ್ಯದ ಮರಾಠಿ ಜನಾಂಗವನ್ನು ಇಟ್ಟುಕೊಂಡು ಸಂಶೋಧನೆ ನಡೆಸಿದ್ದಾರೆ. ಬುಡಕಟ್ಟು ಜನಾಂಗದ ಆಚರಣೆ ಮತ್ತು ಸಾಂಸ್ಕೃತಿಕ ಹಿನ್ನಲೆಯ ಮಹತ್ವದ ದಾಖಲೆ ಇದಾಗಿದೆ. ಡಾ.ರತ್ನಾಕರ ಮಲ್ಲಮೂಲೆಯವರು ಮಣಿಯಾಣಿ ಜನಾಂಗ ಅಧ್ಯಯನದಲ್ಲಿ ಸುಳ್ಯದ ಯಾದವ ಸಮುದಾಯದ ಅಧ್ಯಯನ ನಡೆಸಿದ್ದಾರೆ. ಇದು ಹಿಂದುಳಿದ ವರ್ಗಗಳ ಸಾಂಸ್ಕೃತಿಕ ಬದುಕನ್ನು ಪ್ರತಿನಿಧಿಸುವ ಅಧ್ಯಯನ.
        ಬೇರೆಬೇರೆ ಜನಾಂಗಗಳ ಕುಣಿತಗಳ ಬಗ್ಗೆ ಉಡುಪಿಯ ಆರ್. ಆರ್. ಸಿ ಯವರು ದಾಖಲೀಕರಣ ನಡೆಸಿದ್ದಾರೆ ಮತ್ತು ಅದರ ಬಗ್ಗೆ ಬಿಡಿ ಲೇಖನಗಳ, ಸಂಶೋಧನಾ ಬರೆಹಗಳೂ ಪ್ರಕಟಗೊಂಡಿವೆ. ಇನ್ನು ಕೆಲವು ಜನಾಂಗೀಯ ಅಧ್ಯಯನಗಳು ನಡೆದಿರಬಹುದು. ತಕ್ಷಣಕ್ಕೆ ನೆನಪಿಗೆ ಬರುತ್ತಿಲ್ಲ. ಆದರೆ ಇಲ್ಲಿ ಮುಗೇರ ಜನಾಂಗ, ಆದಿ ದ್ರಾವಿಡ, ಮಲೆಕುಡಿಯರ ಬಗ್ಗೆ ಸುಳ್ಯದ ಹೊರತಾದ ಸಂಶೋಧಕರು ಅಧ್ಯಯನಕ್ಕೆ ಬಳಸಿಕೊಂಡ ಉದಾಹರಣೆ ಇದೆ(ಡಾ.ಅಭಯ ಕುಮಾರ್ ಕೌಕ್ರಾಡಿ, ಕೊಯಿರಾ ಬಾಳೆಪುಣಿ ಮೊದಲಾದವರು)
       ಡಾ.ಮಾಧವ ಪರಾಜೆ ದ್ರಾವಿಡ ಅಧ್ಯಯನಕ್ಕೆ ಸಂಬಂಧಿಸಿದಂತೆ ಹಂಪಿ ವಿ.ವಿಯ ದ್ರಾವಿಡ ಅಧ್ಯಯನ ವಿಭಾಗದಲ್ಲಿ ಸುಳ್ಯದ ಸಂದರ್ಭವನ್ನು ಬಳಸಿಕೊಂಡು ಅಧ್ಯಯನ ನಡೆಸಿದ್ದಾರೆ. ಡಾ.ವಿಶ್ವನಾಥ ಬದಿಕಾನರ ಅರೆಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ಕಥೆಗಳ ಅಧ್ಯಯನದಲ್ಲಿ ಸುಳ್ಯವನ್ನೇ ಪ್ರಧಾನವಾಗಿಸಿದ್ದಾರೆ. ಡಾ.ಸುಂದರ ಕೇನಾಜೆಯವರು ಭತ್ತದ ಬೇಸಾಯದ ಜಾನಪದ ಅಧ್ಯಯನದಲ್ಲಿ ಹಾಗೂ ತನ್ನ ಇತರ ಕೃತಿಗಳಾದ ನೆಲದನೆಲೆ, ಕಾಲಚಿತ್ರ, ತರವಾಡು, ತುಳು ಜನಪದ ಸಾಹಿತ್ಯ ಶಿಕ್ಷಣ, ಹಲವು ಬಿಡಿ ಲೇಖನ ಮತ್ತು ಅಂಕಣಗಳಲ್ಲಿ ಸುಳ್ಯವನ್ನೇ ಕೇಂದ್ರೀಕರಿಸಿ ಸಂಶೋಧನೆಗಳನ್ನು ನಡೆಸುತ್ತಾ ಅಲ್ಲಿಲ್ಲಿ ದಾಖಲಿಸುತ್ತಾ ಬಂದಿದ್ದಾರೆ.
     ಡಾ.ಪೂವಪ್ಪ ಕಣಿಯೂರುರವರ ಉಳ್ಳಾಕು ಅಧ್ಯಯನ ಮತ್ತು ಇತರ ಕೃತಿಗಳು ಸುಳ್ಯ ಕೇಂದ್ರಿತ ಸಂಶೋಧನೆಗಳಾಗಿವೆ. ಅವರ ನಾಗರ ಮಡಿಕೆ ಕುಕ್ಕೆ ದೇವಾಲಯಕ್ಕೆ ಸಂಬಂಧಿಸಿದ ಕೃತಿ. ಡಾ.ಚಂದ್ರಶೇಖರ ದಾಮ್ಲೆಯವರ ಜಾತ್ರೆಗಳ ಕುರಿತ ಅಧ್ಯಯನ ಹಾಗೂ ಇತರ ಬರೆಹ ಸುಳ್ಯದ ಸಮಾಜಶಾಸ್ತ್ರೀಯ ಅಧ್ಯಯನಕ್ಕೆ ಉದಾಹರಣೆ. ಡಾ.ಪ್ರಭಾಕರ ಶಿಶಿಲರ ಅನೇಕ ಕೃತಿಗಳು ಹಾಗೂ ಅವರ ಅರ್ಥಶಾಸ್ತ್ರೀಯ ಬರೆಹಗಳಲ್ಲಿ ಈ ಭಾಗದ ಸಂಶೋಧನಾ ಪ್ರವೃತ್ತಿ ಕಾಣಬಹುದು.
     ಡಾ.ಯು.ಪಿ ಶಿವಾನಂದರವರು ಪತ್ರಿಕೋಧ್ಯಮಿಯಾದರೂ ಸುಮಾರು ನಲವತ್ತು ವರ್ಷಗಳಿಂದ ಸುಳ್ಯದ ಪತ್ರಿಕೋದ್ಯಮ, ಕೃಷಿ, ರಾಜಕೀಯ ಬೆಳವಣಿಗೆಯ ಕುರಿತು ನಿರಂತರ ಬರೆಯುತ್ತಾ ಬಂದವರು. ಚಲನಾಶೀಲ ಅಧ್ಯಯನವಾಗಿ ಇವರ ಬರೆಹಗಳನ್ನು ಪರಿಗಣಿಸಬೇಕು. ಇದೊಂದು ಸಂಶೋಧನಾ ಪ್ರಕಾರವೂ ಆಗಿದೆ.
     ದೇವಿಪ್ರಸಾದ್ ಸಂಪಾಜೆ ಅಮರ ಸುಳ್ಯದ ಚಾರಿತ್ರಿಕ ಮಹತ್ವದ ಬಗ್ಗೆ ಸಂಶೋಧನಾತ್ಮಕವಾಗಿ ಮೊದಲು ಬೆಳಕು ಚೆಲ್ಲಿದವರು. ಆನಂತರ ಡಾ.ವಿದ್ಯಾಧರ ಕುಡೆಕಲ್ಲುರವರು ಈ ಹೋರಾಟದ ಅನೇಕ ಹೊಸ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಿ ಹಂಪಿ ವಿ.ವಿ ಯಿಂದ ಡಿಲಿಟ್ ಪದವಿ ಪಡೆದಿದ್ದಾರೆ. ಇನ್ನೂ ಅನೇಕರು ಈ ಬಗ್ಗೆ ಕೃತಿ ರಚಿಸಿದ್ದಾರೆ. ಆದರೆ ಕೊಡಗಿನ ಡಾ.ತಂಬಡ ವಿಜಯ ಪೂಣಚ್ಚರವರು ಇದರ ಕುರಿತು ಅತ್ಯಂತ ವಿಸ್ತೃತ ಮತ್ತು ಕರಾರುವಾಕ್ಕಾದ ಸಂಶೋಧನೆ ನಡೆಸಿ ಕೃತಿಯನ್ನೂ ಪ್ರಕಟಿಸಿ ಅಂತಿಮವೆಂಬಂತೆ ದಾಖಲಿಸಿದ್ದಾರೆ.
      ಮಂಗಳೂರಿನ ಡಾ.ಚಿನ್ನಪ್ಪ ಗೌಡರು ಭೂತಾರಾಧನೆಯ ಸಂಶೋಧನೆಯಲ್ಲಿ ಸುಳ್ಯದ ಪ್ರಮುಖ ಭೂತಾರಾಧನೆಯ ಪ್ರಕಾರವಾದ ಜಾಲಾಟವನ್ನು ಸುಳ್ಯದಿಂದ ಮಾತ್ರ ಗುರುತಿಸಿ ದಾಖಲಿಸಿದ್ದಾರೆ. ಡಾ.ಅನುರಾಧ ಕುರುಂಜಿಯವರು ಸುಳ್ಯದ ಪ್ರಮುಖ ಸಾಹಿತಿ ನಿರಂಜನರ ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಇದಲ್ಲದೇ ಪ್ರಭಾಕರ ಶಿಶಿಲ, ಸುಬ್ರಾಯ ಚೊಕ್ಕಾಡಿ, ಡಾ.ರಾಮಚಂದ್ರ ದೇವ ಇವರ ಕೃತಿಗಳ ಬಗ್ಗೆಯೂ ಸಾಹಿತ್ಯಕ ಅಧ್ಯಯನಗಳು ಒಂದಷ್ಟು ನಡೆದಿವೆ. ಇನ್ನೂ ಅನೇಕ ಸಾಹಿತಿಗಳ ಕುರಿತ ಸಂಶೋಧನೆ ನಡೆಸಬಹುದು.
        ಡಾ.ಕೊಳಂಬೆ ಚಿದಾನಂದ ಗೌಡರು ಆಧುನಿಕ ಕಂಪ್ಯೂಟರ್ ಕ್ಷೇತ್ರದ ಬಗ್ಗೆ ಅಧ್ಯಯನ ನಡೆಸಿದವರು ಇವರ ವಸ್ತು ಸುಳ್ಯದ್ದಲ್ಲದಿದ್ದರೂ ಇವರು ಸುಳ್ಯ ಮೂಲದವರು.  ಡಾ.ರೇವತಿ ನಂದನ್ ರವರ ಪಶ್ಚಿಮ ಘಟ್ಟಗಳ ಇರುವೆಗಳ ಅಧ್ಯಯನದಲ್ಲಿ ಸುಳ್ಯದ ಇರುವೆಗಳೂ ಸೇರಿವೆ. ಡಾ.ದೇವಿಪ್ರಸಾದ್ ರವರ ಸಸ್ಯ ವೈವಿಧ್ಯಗಳ ಅಧ್ಯಯನದಲ್ಲಿ ಸುಳ್ಯದ ಸಸ್ಯಗಳೂ ಅಧ್ಯಯನಕ್ಕೆ ಒಳಪಟ್ಟಿವೆ. ಎ.ಕೆ ಹಿಮಕರರವರು ಕಂದ್ರಪ್ಪಾಡಿಯ ಪುರುಷ ದೈವಗಳ ಹಿನ್ನಲೆಯ ಕೆಲವೊಂದು ಚಾರಿತ್ರಿಕ ಸಂಗತಿಗಳ ಕುರಿತು ಕೃತಿ ರಚಿಸಿದ್ದಾರೆ. ಅಲ್ಲದೇ ಚಂದ್ರಶೇಖರ ಮಂಡೆಕೋಲುರವರ ಅನ್ವೇಷಣೆ ಕೃತಿ, ದಿನೇಶ್ ಕುಕ್ಕುಜಡ್ಕ, ಭರತೇಶ್ ಅಲಸಂಡೆಮಜಲು, ಚರಣ್ ಐವರ್ನಾಡು, ಅನಿಂದಿತ್ ಗೌಡರಂತಹಾ ಸಂಶೋಧನಾ ಪ್ರವೃತ್ತಿಯ ಲೇಖಕರು ಸುಳ್ಯದ ಸಂಸ್ಕೃತಿಗೆ ಸಂಬಂಧಿಸಿದಂತೆ ಕೃತಿ, ಲೇಖನಗಳನ್ನು ಪ್ರಕಟಿಸಿದ್ದಾರೆ. ಕಳೆದ ಅವಧಿಯ ಅರೆಭಾಷಾ ಅಕಾಡೆಮಿಯ ಮಹತ್ವದ ಕೆಲಸವಾದ ಅರೆಭಾಷಾ ವಿಶ್ವಕೋಶದಲ್ಲಿ ಇಲ್ಲಿನ ಹಲವು ಸಂಶೋಧನಾ ಬರೆಹಗಳು ಪ್ರಕಟಗೊಂಡಿವೆ. ಇದಲ್ಲದೇ ಅನೇಕ ಎಂಫಿಲ್, ಪಿಎಚ್.ಡಿ ಅಧ್ಯಯನಗಳು ಮತ್ತು ಅಂತಹಾ ಸಂಶೋಧಕರಿಗೆ ಸುಳ್ಯ ಆಶ್ರಯ ಕೊಟ್ಟಿದೆ.
       ಪೂಮಲೆ, ಬಂಟಮಲೆ, ಕೋಳಿಕಮಲೆ, ದೇಸಮಲೆ, ಕುಮಾರ ಪರ್ವತದ ಬಗ್ಗೆ ಬಿಡಿ ಲೇಖನಗಳ ಪ್ರಕಟಗೊಂಡಿವೆ. ಆದರೆ ಸಮಗ್ರ ನಡೆಯಬೇಕಾಗಿದೆ. ನಡೆಸಬಹುದು. ಸುಳ್ಯದ ಯಕ್ಷಗಾನ ಕ್ಷೇತ್ರದ ಬಗ್ಗೆ ಅಧ್ಯಯನ ನಡೆದಿದೆ, ಆದರೆ ಅದು ಕಡಿಮೆಯೇ. ಕಳೆದ 50 ವರ್ಷಗಳಲ್ಲಿ ಮತ್ತು ಅದರ ಹಿಂದಿನ ಸುಳ್ಯದ ಶೈಕ್ಷಣಿಕ ಬೆಳವಣಿಗೆಗಳ ಬಗ್ಗೆ ಒಂದಷ್ಟು ಚಾರಿತ್ರಿಕ ಸಂಚಿಕೆಗಳು, ಬಿಡಿ ಲೇಖನಗಳು, ಅಧ್ಯಯನ ವರದಿಗಳು ಪ್ರಕಟಗೊಂಡಿವೆ. ಇನ್ನೂ ಹೆಚ್ಚಿಗೆ ಸಂಶೋಧನೆ ನಡೆಯಲು ಅವಕಾಶ ಇದೆ.
      ಸುಳ್ಯದ ಬಹುತೇಕ ದೇವಸ್ಥಾನ ದೈವಸ್ಥಾನಗಳಲ್ಲಿ ಎರಡೆರಡು(ಕೆಲವು ಮೂರು) ಬಾರಿ ಬ್ರಹ್ಮಕಲಶ ನಡೆದು ಸ್ಮರಣ ಸಂಚಿಕೆ ಪ್ರಕಟಿಸಿವೆ. ಕೆಲವೊಂದು ಸಂಚಿಕೆಯಲ್ಲಿ ಸಂಶೋಧನಾತ್ಮಕ ಅಂಶಗಳು ದಾಖಲಾದದ್ದೂ ಇದೆ. ಕೆಲವು ಕಡೆ ಅಷ್ಟಮಂಗಲದ ಜ್ಯೋತಿಷಿ ಹೇಳಿದ್ದನ್ನೇ ಸಂಶೋಧನೆ ಎಂದು ದಾಖಲಿಸಿದ್ದೂ ಇದೆ. ಆದರೆ ಅಕಾಡೆಮಿಕ್ ಶಿಸ್ತಿನ ಅಧ್ಯಯನಗಳು ಅಲ್ಲಿ ನಡೆಯಲೇಬೇಕು.
    ಸ್ಥಳನಾಮಗಳ ಬಗ್ಗೆ ಸಂಶೋಧನೆ ನಡೆದಿಲ್ಲ, ನಡೆಯುವ ಅಗತ್ಯ ಇದೆ. ಸುಳ್ಯದ ಚರಿತ್ರೆ 1837ಕ್ಕಿಂತ ಹಿಂದೆ ಹೋದದ್ದು ಬಹಳ ಕಡಿಮೆ. ಡಾ.ಚಿನ್ನಸ್ವಾಮಿ ಸೋಸಲೆಯವರ "ಕರಾವಳಿ ಕರ್ನಾಟಕದ ಜೈನ ಅರಸು ಮನೆತನಗಳು" ಎಂಬ ಕೃತಿಯಲ್ಲಿ ಇಲ್ಲಿ ಜೈನ ಬಲ್ಲಾಳರ ಬಗ್ಗೆ  ಹಾಗೂ ಡಾ.ಪಾದೂರು ಗುರುರಾಜ್ ಭಟರವರು "ತುಳುವ ಹಿಸ್ಟರಿ & ಕಲ್ಚರ್" ಕೃತಿಯಲ್ಲಿ ಇಲ್ಲಿ ಪ್ರಮುಖ ದೇವಾಲಯದ ಮೂರ್ತಿ ಶಿಲ್ಪಗಳ ಬಗ್ಗೆ ಸಂಶೋಧನಾ ವಿವರಣೆ ನೀಡಿದ್ದಾರೆ.  ಹಂಪಿ ವಿ.ವಿ ಪ್ರಕಟಿಸಿದ ತುಳು ಸಾಹಿತ್ಯ ಚರಿತ್ರೆ ಎಂಬ ಬೃಹತ್ ಗ್ರಂಥದಲ್ಲಿ ಸುಳ್ಯ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿಲ್ಲ, ಯಾಕೆಂದರೆ ಆ ಕಡೆ ತುಳು ಅಲ್ಲದ, ಈ ಕಡೆ ಕೊಡವ, ಕನ್ನಡ ಅಲ್ಲದ ಪ್ರದೇಶ ಸುಳ್ಯ. ಹಾಗಾಗಿ ಸುಳ್ಯದ್ದು ಸಾಹಿತ್ಯಹೀನ ಪರಂಪರೆಯೋ ಎನ್ನುವ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ.   
        ನವಶಿಲಾಯುಗದ ಕುರುಹುಗಳು ಸುಳ್ಯದ ಕೆಲವು ಭಾಗಗಳಲ್ಲಿ ಇದ್ದರೂ ಅಧ್ಯಯನಕ್ಕೆ ಒಳಪಟ್ಟಿಲ್ಲ. ಅಗತ್ಯ ಇದೆ. ಭೂತಾರಾಧನೆಯಲ್ಲಿ ಮಲೆಯಾಳಿ ದೈವಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕು. ನಾಗಾರಾಧನೆಗೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನದ ಅಗತ್ಯ ಇದೆ. ಸುಳ್ಯದ ಭಾಷೆ ಮತ್ತು ಭಾಷಾ ವೈವಿಧ್ಯದ ಬಗ್ಗೆ ಬಹಳ ಮಹತ್ವದ ಅಧ್ಯಯನ ಆಗಬೇಕಾಗಿದೆ.
      ಕೃಷಿ ಸಂಶೋಧನೆ ಇನ್ನೂ ಹೆಚ್ಚಿಗೆ ನಡೆಯಬೇಕು. ಅದರಲ್ಲೂ ಅಡಿಕೆ ಮತ್ತಿತರ ಕೃಷಿಯ ಬಗ್ಗೆ ಬೇರೆಬೇರೆ ಆಯಾಮಗಳ ಅಧ್ಯಯನ ನಡೆಯಬೇಕು. ಪರಿಸರದ ಬಗ್ಗೆಯೂ ಸೇರಿಸಬೇಕು. ಅಭಿವೃದ್ಧಿಯ ವಿಷಯ ಬಂದಾಗ ಇದು ಮೀಸಲು ಕ್ಷೇತ್ರ ಈ ಬಗ್ಗೆ ತೌಲನಿಕ ಅಧ್ಯಯನದ ಮತ್ತು ಸೂಕ್ಷ್ಮ ಪ್ರದೇಶವಾದ ಸುಳ್ಯದ ಅಭಿವೃದ್ಧಿಯ ಮಾನದಂಡದ ಬಗ್ಗೆಯೂ ಗಂಭೀರ ಸಂಶೋಧನೆ ನಡೆಯಬೇಕು. ಕೆಲವು ಡಿಜಿಟಲ್ ಮಾಧ್ಯಮಗಳು, ಚಾನೆಲ್‌ಗಳು ಕೆಲವು ಸಂಶೋಧನಾತ್ಮಕ ಸ್ಟೋರಿಗಳನ್ನು ಪ್ರಕಟಿಸುವುದನ್ನೂ ಗಮನಿಸಿದ್ದೇನೆ. ಉದಾಹರಣೆಗೆ ಮೇನಾಲದ ಗುಹೆ, ಅಲ್ಲಲ್ಲಿ ನಡೆಯುವ ಜಾತ್ರೆ, ಕೋಲ, ಕ್ರೀಡೆ... ಇತ್ಯಾದಿ. ಈ ಬಗ್ಗೆ ಇನ್ನೂ ವಿಸ್ತೃತ ಸಂಶೋಧನೆ ನಡೆಸಬಹುದು. 
        ಒಟ್ಟಿನಲ್ಲಿ ಸುಳ್ಯ ಸಂಶೋಧಕರಿಗೆ ಸಂಮೃದ್ಧ ನೆಲ.‌ಆಸಕ್ತ ಮತ್ತು ಸೂಕ್ತ ಮಾರ್ಗದರ್ಶನ ಮಾಡುವ ವ್ಯವಸ್ಥೆ ಮಾತ್ರ ಬೇಕಾಗಿದೆ. ಅದು ಸಿಗಲಿ ಎಂದು ಆಶಿಸುತ್ತೇನೆ. ಕೆಲವು ಹೆಸರುಗಳು ತಕ್ಷಣಕ್ಕೆ ನೆನಪಿಗೆ ಬಾರದೇ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಕ್ಷಮೆ ಇರಲಿ. ಧನ್ಯವಾದಗಳು.
           *ಡಾ.ಸುಂದರ ಕೇನಾಜೆ*

ಬುಧವಾರ, ಡಿಸೆಂಬರ್ 17, 2025

ಭಾವ

ಭಾವ
ಭಾವ ಮಂದಿರದಲ್ಲಿ ನಿನ್ನೊಲವ ಧ್ಯಾನ 
ಏಕಾಗಿ ಬೇಕು 
ನಾವೆಯೊಳಗೆ ಕುಳಿತು ಬರೆಯುವ ಕವನ
 ತಾನಾಗಿಯೇ ಬರಬೇಕು 

ಹಗಲು ಇರುಳಿನಲಿ ತವಕಿಸುವ ಪರಿ 
ಹೇಗೆ ತಿಳಿಯಬೇಕು 
ಮುಗ್ಗಲು ಬದಲಿಸುತ್ತಾ  ಅತ್ತೊಮ್ಮೆ ಇತ್ತೊಮ್ಮೆ ಸುತ್ತುವ ನೋವ 
ಹೇಗೆ ಹೇಳಬೇಕು 

ಬುಗುರಿಯಂತೆ ತಿರುಗುತ್ತಾ ಮನದೊಳಗೆ ನಗುತ್ತಾ 
ಅಳುವನೆಂತು ಮರೆಯಬೇಕು
ಹಾಡು ಹಕ್ಕಿಗೆ ಇಲ್ಲಿ ಸ್ವರ ಬದಲಾಗಿ ಹೋಗಿದೆ
ಭಾವವೆಲ್ಲಿ ಹೊರ ಹೊಮ್ಮಬೇಕು

ರವಿಯಿಲ್ಲದ ಇರುಳಿನಲಿ ಬೆಳದಿಂಗಳ ಬೆಳಕ
ಪ್ರತಿ ದಿನ ಹೇಗೆ ಹುಡಕಬೇಕು
ಅತ್ತಿತ್ತ ಓಡುತ್ತ ಸುತ್ತಲೂ ಹುಡುಕುತ್ತ
ನಾನೆತ್ತ ಸಾಗಬೇಕು
@ ಹನಿಬಿಂದು@
14.12.2025

ಭಾವಗೀತೆ

ಭಾವ

ಭಾವಗೀತೆ

ಭಾವ ಮಂದಿರದಲ್ಲಿ ನಿನ್ನೊಲವ ಧ್ಯಾನವಿಲ್ಲಿ 
ನೋವ ತರದೇ ಇರಲಿ ಕಾಲವಿಲ್ಲಿ
ಜೀವ ನೋವಲಿ ಮಿಂದು ಆಗಿಹುದು ಪುಡಿಯಿಲ್ಲಿ
ಕಾವ ದೇವನು ನೋಡಿ ಹರಸಿ ಬಿಡಲಿ

ಜೇನ ಮಾತಿನ ನಡುವೆ ಹೃದಯ ಬಯಸಿಹುದಿಂದು 
ನೀ ಬಂದು ಜೊತೆ ಸೇರಿ ಬಾಳಬೇಕೆಂದು
ನೋವನೆಲ್ಲವ ಬಿಸುಟು ನಗೆಯ ಚಾದರ ಹೊದ್ದು
ಸಿಹಿ ಗೊರಕೆ ಹೊಡೆಯುವ ಕ್ಷಣವು ಬರಲೆಂದು
ಮುಗಿಲ ಮಲ್ಲಿಗೆ ಬಂದು ಮುಡಿಗೇರಲೆಂದು 

ತಾಳ ಲಯವೂ ಸೇರೆ ಸಮಯವೂ ಸಂಗೀತ
ಬಾಳ ಗೊಂಚಲಿನಲ್ಲಿ ಹೂವ ಪರಿಮಳವಿನಿತು
ಸಾಲು ಕಷ್ಟದ ಮುಂದೆ ನೀನು ಸುಖದಿನಿತ 
ನರ್ತಿಸುವ ಕಾಲಿಗಿದು ತನನ ತಕದಿಮಿತ

ಏಳು ಬಣ್ಣದ ಕಾಮನ ಬಿಲ್ಲಿನಂದವು ಇಲ್ಲಿ
ಮನದೊಳಗೆ ಸರಿದಾಡಿ ಉಸಿರ ಬೆಸೆದಿಲ್ಲಿ
ನೂರು ವರ್ಣದ ಹೂವ ಕಂಪು ತುಂಬಿಹುದಿಲ್ಲಿ
ಹಾರುತಿಹ ಬಾನಿಗೆ ಬೆಳಕ ಚೆಲ್ಲಿ
@ಹನಿಬಿಂದು@
17.12.2025

ಭಾನುವಾರ, ಡಿಸೆಂಬರ್ 14, 2025

ಭಾವ

ಭಾವ
ಭಾವ ಮಂದಿರದಲ್ಲಿ ನಿನ್ನೊಲವ ಧ್ಯಾನ 
ಏಕಾಗಿ ಬೇಕು 
ನಾವೆಯೊಳಗೆ ಕುಳಿತು ಬರೆಯುವ ಕವನ
 ತಾನಾಗಿಯೇ ಬರಬೇಕು 

ಹಗಲು ಇರುಳಿನಲಿ ತವಕಿಸುವ ಪರಿ 
ಹೇಗೆ ತಿಳಿಯಬೇಕು 
ಮುಗ್ಗಲು ಬದಲಿಸುತ್ತಾ  ಅತ್ತೊಮ್ಮೆ ಇತ್ತೊಮ್ಮೆ ಸುತ್ತುವ ನೋವ 
ಹೇಗೆ ಹೇಳಬೇಕು 

ಬುಗುರಿಯಂತೆ ತಿರುಗುತ್ತಾ ಮನದೊಳಗೆ ನಗುತ್ತಾ 
ಅಳುವನೆಂತು ಮರೆಯಬೇಕು
ಹಾಡು ಹಕ್ಕಿಗೆ ಇಲ್ಲಿ ಸ್ವರ ಬದಲಾಗಿ ಹೋಗಿದೆ
ಭಾವವೆಲ್ಲಿ ಹೊರ ಹೊಮ್ಮಬೇಕು

ರವಿಯಿಲ್ಲದ ಇರುಳಿನಲಿ ಬೆಳದಿಂಗಳ ಬೆಳಕ
ಪ್ರತಿ ದಿನ ಹೇಗೆ ಹುಡಕಬೇಕು
ಅತ್ತಿತ್ತ ಓಡುತ್ತ ಸುತ್ತಲೂ ಹುಡುಕುತ್ತ
ನಾನೆತ್ತ ಸಾಗಬೇಕು
@ ಹನಿಬಿಂದು@
14.12.2025

ಬುಧವಾರ, ಡಿಸೆಂಬರ್ 10, 2025

ಸಾಮಾಜಿಕ ಜಾಲ ತಾಣಗಳು ಮತ್ತು ವಿದ್ಯಾರ್ಥಿಗಳು


“ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿದ್ದಾರೆಯೇ?”
— ಒಂದು ಸಾಹಿತ್ಯಿಕ ವಿಮರ್ಶೆ

ಶತಮಾನಗಳ ಹಿಂದೆ ವಿದ್ಯೆಯ ದಾರಿಗಳಲ್ಲಿ ಬೆಳಕನ್ನು ಹೊತ್ತಿದ್ದ ಕಂದೀಲಿನ ಜ್ವಾಲೆಯ ಮೇಲೆ ಈಗ ಸ್ಮಾರ್ಟ್‌ಫೋನ್‌ಗಳ ಹೊಳೆಯುವ ಪರದೆಗಳ ಬೆಳಕು ಸುರಿದಿದೆ. ಜ್ಞಾನವನ್ನು ಅರಸಲು ಕಿಲೋಮೀಟರ್‌ಗಳ ಪಯಣ ಬೇಕಿದ್ದ ಯುಗದಲ್ಲಿ, ಇಂದಿನ ವಿದ್ಯಾರ್ಥಿಗಳ ಕೈಯಲ್ಲಿ ಜಗತ್ತು ಎಳನೀರು ಕುಡಿಯುವಷ್ಟು ಸುಲಭವಾಗಿ ಲಭ್ಯ. ವ್ಯಾಸಂಗಕ್ಕೆ ಇದು ಹೊಸ ದಿಕ್ಕು ಕೊಟ್ಟರೂ, ಈ ಬೆಳಕು ಎಷ್ಟು ದಾರಿದೀಪ, ಎಷ್ಟು ದಹನ — ಇದು ನಮ್ಮ ಕಾಲದ ದೊಡ್ಡ ಪ್ರಶ್ನೆ.“ಹೊತ್ತಿಗೆ ಹಚ್ಚಿದ ಬೆಂಕಿ ಬೆಳಕನ್ನೂ ಕೊಡುತ್ತದೆ, ಸುಟ್ಟೂ ಬಿಡುತ್ತದೆ.”ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳೂ ಇದೇ ಸ್ವರೂಪ. ಬೆಳಕನ್ನು ಕೊಡುತ್ತವೆ, ಆದರೆ ಕೆಲವೊಮ್ಮೆ ಜ್ವಾಲೆಯನ್ನೂ ಹಚ್ಚುತ್ತವೆ. ವಿಶೇಷವಾಗಿ ವಿದ್ಯಾರ್ಥಿಗಳ ಜಗತ್ತಿನಲ್ಲಿ.

ವಿಶೇಷವಾಗಿ ಸಾಮಾಜಿಕ ಜಾಲತಾಣಗಳು.
ಒಂದು ಕಾಲದಲ್ಲಿ ‘ಸಮಾಜ’ ಎಂದರೆ ಹಳ್ಳಿ, ಬಡಾವಣೆ, ತರಗತಿ, ಕುಟುಂಬ.. ಇಂದು ‘ಸಮಾಜ’ ಒಂದೇ ಕೈಯಲ್ಲಿ ಮಗು, ಇನ್ನೊಂದು ಕೈಯಲ್ಲಿ ನಶೆ. ಈ ಪರಿವರ್ತನೆಯ ಗಾಳಿಯಲ್ಲಿ ವಿದ್ಯಾರ್ಥಿ ಮನಸ್ಸು ಎಷ್ಟು ಸುಲಭವಾಗಿ ಕಂಪಿಸುತ್ತದೆ ಎಂಬುದು ನೋಡುವಂತಿದೆ. ಗಾಳಿ ಮಳೆ ನೋಡಿದ ಗಿಡವೊಂದು ಬಾಗಿದಂತೆ, ಇಂದಿನ ವಿದ್ಯಾರ್ಥಿ–ಮನಸ್ಸು ದೃಶ್ಯ-ಧ್ವನಿ-ಹಂಚಿಕೆಗಳ ಪ್ರವಾಹದಲ್ಲಿ ತನ್ನ ಅಸ್ತಿತ್ವ ಕೊಚ್ಚಿ ಹೋದ ಹಾಗಿದೆ. . ಹೀಗಾಗಿ ಪ್ರಶ್ನೆ ಎದ್ದಿದೆ:
“ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿದ್ದಾರೆಯೇ?”
ಈ ಪ್ರಶ್ನೆಗೆ ಉತ್ತರ ಹುಡುಕುವುದು ನಮ್ಮ ಕಾಲದ ನೈತಿಕ ಕರ್ತವ್ಯ.

ಜಗತ್ತನ್ನು ತೆರೆದ ಜಾಲಗಳು... ಆದರೆ...
ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಕೈಯಲ್ಲಿ ಜ್ಞಾನ ಗಂಭೀರಗಳ ಬಾಗಿಲುಗಳನ್ನು ತೆರೆಯುತ್ತಿವೆ ಎಂದರೆ ಅದು ಸತ್ಯ. ಕಲಿಕೆಯ ಹೊಸ ತಂತ್ರಗಳು, ಪ್ರೇರಣಾದಾಯಕ ಕಥೆಗಳು, ಜಾಗತಿಕ ಚರ್ಚೆಗಳು—ಇವೆಲ್ಲ ವಿದ್ಯಾರ್ಥಿಗೆ ಅಸಾಮಾನ್ಯವಾದ ಹೊಸ ಅನುಭವಗಳನ್ನು ಕೊಡುತ್ತವೆ. ವರ್ಗಕೊಠಡಿ ನಾಲ್ಕು ಗೋಡೆಗಳ ನಡುವೆ ಸೀಮಿತವಾಗಿದ್ದ ಜ್ಞಾನ, ಇಂದು ಒಂದು ಪೋಸ್ಟ್‌ನಿಂದಲೇ ವಿಸ್ತಾರಗೊಂಡಿದೆ.
ಆದರೆ, ಈ ಜಾಲಗಳ ಜಾಲದಲ್ಲಿ ಒಂದು ಕಾಣದ ಬಲೆಯನ್ನೂ ಜೋಡಿಸಲಾಗಿದೆ.ಜ್ಞಾನದ ಬಾಗಿಲು ತೆರೆದು ಕೊಡುತ್ತಿದ್ದಂತೆಯೇ, ಒಳಗೆ ಮೃದುವಾಗಿ ಜಾರಿ ಬರುವ ಒಂದು ಮತ್ತಾದ ಅನುಭವವಿದೆ—ಗಮನ ಸೆಳೆಯುವ ಅರ್ಥವೇ ಆಗದ ಗೊತ್ತಿಲ್ಲದ ಹೊಸ ವ್ಯಸನ.
ಅಪ್ಲಿಕೇಶನ್‌ಗಳು ವಿದ್ಯಾರ್ಥಿಗಳ ಸಮಯವನ್ನೇ ಕುಡಿಯಲು ನಿರ್ಮಿತವಾಗಿವೆ. ಸ್ಕ್ರೋಲ್ ಮಾಡುತ್ತ ಹೋದರೆ ಎಂದಿಗೂ ಮುಗಿಯದ ಒಂದು ನದಿಯಂತೆ, ಅದರ ದಡಕ್ಕೆ ತಲುಪುವ ಆಸೆಯೇ ಇಲ್ಲ.ಹೀಗಾಗಿ ವಿದ್ಯಾರ್ಥಿಯ ದಿಕ್ಕು ತಪ್ಪುವುದು ಅಚ್ಚರಿಯೇ ಅಲ್ಲ.

ಲೈಕ್ ಎಂಬ ಮಿಠಾಯಿ....
ಒಂದು ದಿನ ಮೊಬೈಲ್ ಹಿಡಿದು ಕುಳಿತ ವಿದ್ಯಾರ್ಥಿಯನ್ನು ಗಮನಿಸಿ:ಅವನ ಮುಖದಲ್ಲಿ ನಗು ಬೀಳುವುದು ಯಾಕೆ?
ಹೊಸ ಸಾಧನೆಗಾಗಿ ಯಾರಾದರೂ ಶ್ಲಾಘನೆ ಮಾಡಿದ್ದಕ್ಕೆನಾ?
ಇಲ್ಲ.ಒಬ್ಬ ಅಪರಿಚಿತನ ‘ಲೈಕ್’‌ಗಾಗಿ.ಸಾಮಾಜಿಕ ಜಾಲತಾಣಗಳು ಮನೋವಿಜ್ಞಾನದ ಅತ್ಯಂತ ಸೂಕ್ಷ್ಮ ಗುಟ್ಟು.

ಮನುಷ್ಯನ ಒಪ್ಪಿಗೆಯ ಹಂಬಲ—ಇದನ್ನೇ ಕೆಣಕುತ್ತಿವೆ.
ದಿನದ ಓದುವಿಕೆ, ಅಭ್ಯಾಸ, ನೆನೆಪು—ಎಲ್ಲವನ್ನೂ ಮರೆತು ವಿದ್ಯಾರ್ಥಿ “ನನ್ನ ಪೋಸ್ಟ್‌ಗೆ ಎಷ್ಟು ಲೈಕ್ ಬಂದಿತು?” ಎಂಬ ಪ್ರಶ್ನೆಗೆ ಬದಿಯಾಗುತ್ತಾನೆ.ಇದು ಮಿಠಾಯಿ ತಿನ್ನುವುದಲ್ಲ—ಮಿಠಾಯಿಯೇ ಅವನನ್ನು ತಿಂದುಬಿಡುವ ಪರಿಸ್ಥಿತಿ.
ಅಲ್ಲದೆ, ಮತ್ತೊಬ್ಬರ ಜೀವನದ ಜಗಮಗಾಟವನ್ನು ನೋಡಿ ಮನಸ್ಸು ಹೋಲಿಕೆಗಳ ರೋಗಕ್ಕೆ ಒಳಗಾಗುತ್ತದೆ.
"ಅವನ ಜೀವನ ಹೀಗೆ, ನನ್ನದು ಯಾಕೆ ಹೀಗೆ?" ಎಂಬ ತಳಮಳವು ವಿದ್ಯಾರ್ಥಿಯ ಮೆದುಳನ್ನು ಗುದ್ದುತ್ತಾ ಅದು ಕಾಣದ ಒತ್ತಡಕ್ಕೆ ಕಾರಣವಾಗುತ್ತದೆ.

ಕುಂಠಿತ ಕಲಿಕೆ
ಇದೀಗ ಪ್ರಮುಖವಾಗಿ ನೋಡಬೇಕಾದ ಸಮಸ್ಯೆ ಓದಿನ ಮೇಲೆ ಬೀಳುತ್ತಿರುವ ಪರಿಣಾಮ.
ಒಂದು ಅಧ್ಯಾಯ ಓದಲು ಬೇಕಾದ ದಿಟ್ಟ ಗಮನ, ಸಾಮಾಜಿಕ ಜಾಲತಾಣಗಳ ಏರಿಳಿತಗಳಿಂದ ತುಂಡಾಗಿ ತುಂಡಾಗುತ್ತದೆ. ಸದಾ ಬೆಳಗುವ ಸೂಚನೆಗಳು, ಗಂಟು ಮೂಡುವ ‘ನೋಟಿಫಿಕೇಶನ್’ ಧ್ವನಿಗಳು—ಇವೆಲ್ಲ ವ್ಯಕ್ತಿಯ ಗಮನಶಕ್ತಿಯನ್ನು ಗಾಳಿಯಂತೆ ಚದರಿಸುತ್ತವೆ. ಇಂದಿನ ವಿದ್ಯಾರ್ಥಿಗಳು ಅನುಭವಿಸುವ ಸಾಮಾನ್ಯ ಸ್ಥಿತಿ:
ಪಾಠದ ನಡುವೆ ಸದ್ದು. ಸದ್ದಿನ ಹಿಂದೆ ಸಂದೇಶ. ಸಂದೇಶದ ಹಿಂದೆ ಕುತೂಹಲ.ಕುತೂಹಲದ ಹಿಂದೆ ಪುಟ ಪುಟ ಸ್ಕ್ರೋಲ್.ಪಾಠ ದೂರ. ನಿದ್ದೆ ಹತ್ತಿರ.ಈ ಚಕ್ರದಲ್ಲಿ ವ್ಯಾಸಂಗ ಒಂದು ಮೌನ ಯೋಧನಂತೆ ಯಾವುದೂ ಮಾತನಾಡದೆ, ತನ್ನ ಸ್ಥಾನವನ್ನು ನಿಧಾನವಾಗಿ ಕಳೆದುಕೊಳ್ಳುತ್ತದೆ. ಕಳೆದುಕೊಳ್ಳುವುದು ಕೇವಲ ಸಮಯವಲ್ಲ—ನಿಷ್ಠೆ, ಗಮನ, ಆತ್ಮವಿಶ್ವಾಸ, ಸೃಜನಶೀಲತೆ—ಇವೆಲ್ಲ.

ಡಿಜಿಟಲ್ ಎಳೆ ....
ದಾಸ್ಯ ಎಂದರೆ ನಾವು ಕಲ್ಪಿಸಿಕೊಳ್ಳುವುದು ಹಗ್ಗ, ಬಂಧನ, ಕಬ್ಬಿಣದ ಸರಪಣಿ. ಆದರೆ 21ನೇ ಶತಮಾನದಲ್ಲಿ ದಾಸ್ಯಕ್ಕೆ ರೂಪವೇ ಬದಲಾಗಿದೆ.ಇಂದಿನ ದಾಸ್ಯ ಮೃದುವಾದದ್ದು.
ಕೈಗೆ ಸುತ್ತಿರುವುದು ಕಬ್ಬಿಣವಲ್ಲ—ಕೈಯಲ್ಲೇ ಸುತ್ತಿಕೊಂಡಿರುವ ಗ್ಯಾಜೆಟ್.ಹೃದಯಕ್ಕೆ ಬಿಗಿದಿರುವುದು ಕಟ್ಟೆಯಲ್ಲ—‘ಸಂದೇಶ ಬರುತ್ತಿರಬಹುದು’ ಎನ್ನುವ ಭಾವ.ವಿದ್ಯಾರ್ಥಿಗಳು ಎಂದೂ ಹೇಳುತ್ತಾರೆ:“ಸ್ವಲ್ಪ ಮಾತ್ರ ನೋಡ್ತೀನಿ…”ಆ ‘ಸ್ವಲ್ಪ’ ಅಲೆಗಳಲ್ಲಿ ಅವರೆಂದೂ ಅರಿಯದಂತೆ ಗಂಟೆಗಳು ಮಣ್ಣಾಗುತ್ತವೆ.
ಒಮ್ಮೆ ಇದು ಅಭ್ಯಾಸವಾಯಿತೆಂದರೆ, ಮನಸ್ಸು ತನ್ನ ಇಚ್ಛೆಯಿಂದ ಜಾಲತಾಣಕ್ಕೆ ಹೋಗುವುದಿಲ್ಲ; ಜಾಲತಾಣವೇ ಮನಸ್ಸಿನ ಮೇಲೆ ಹೆಜ್ಜೆ ಹಾಕುತ್ತದೆ.
ಅದು ನಿಜವಾದ ದಾಸ್ಯ.

ಮಧ್ಯೆ ಒಂದು ಬೆಳಕಿನ ಹಾದಿ:
ಈ ಬರಹ ಓದಿದರೆ ಸಾಮಾಜಿಕ ಜಾಲತಾಣಗಳು ಸಂಪೂರ್ಣ ಕೆಟ್ಟವು ಎಂಬ ಭಾವ ಮೂಡಬಹುದು. ಆದರೆ ಅದು ಸತ್ಯವಲ್ಲ.ಜಾಲತಾಣಗಳು ದಾಸ್ಯಕ್ಕೆ ಕಾರಣವಾಗಬಹುದು, ಆದರೆ ಅವುಗಳನ್ನು ನಿಯಂತ್ರಿಸಿದರೆ, ಅವು ವಿದ್ಯಾರ್ಥಿಗಳಿಗೆ
– ತಂತ್ರಜ್ಞಾನ ಕಲಿಕೆ
– ಜಾಗತಿಕ ಅವಕಾಶಗಳು
– ಅಧ್ಯಯನ ವಿಡಿಯೊಗಳು
– ಹೊಸ ಚಿಂತನೆ
– ಸಂಘಟಿತ ಕಲಿಕೆ
ಎಲ್ಲವನ್ನೂ ಕೊಡುಗೆಯಾಗಿ ನೀಡುತ್ತವೆ.
ಸಮಸ್ಯೆ ತಂತ್ರಜ್ಞಾನದಲ್ಲಲ್ಲ;
ತಂತ್ರಜ್ಞಾನವನ್ನು ನಾವು ಹೇಗೆ ಬಳಸುತ್ತೇವೆ ಎನ್ನುವುದಲ್ಲಿದೆ.
ವಿದ್ಯಾರ್ಥಿಗೆ ಜಾಲತಾಣ ಬೇಕು—ಆದರೆ ಮಿತಿಯೊಂದಿಗೆ.
ಜ್ಞಾನ ಬೇಕು—ಆದರೆ ಜ್ಞಾನಕ್ಕೆ ಹೊರೆ ಹಾಕದ ರೀತಿಯಲ್ಲಿ.
ಸಂಪರ್ಕ ಬೇಕು—ಆದರೆ ಆತ್ಮಸಮ್ಮಾನದ ಬೆಲೆಯ ಮೇಲೆ ಇಲ್ಲ.ಬಯಕೆ ಬೇಕು—ಆದರೆ ಬಯಕೆಯೇ ರಾಜನಾಗದಂತೆ.
ಕುತೂಹಲ ಮತ್ತು ಜ್ಞಾನ ಮನುಷ್ಯನನ್ನು ಮುನ್ನಡೆಸುವ ಎರಡು ರೆಕ್ಕೆಗಳು: ಕೃತಕ ಬುದ್ಧಿಮತ್ತೆ, ಮಲ್ಟಿಮೀಡಿಯಾ ಶಿಕ್ಷಣ, ಆನ್‌ಲೈನ್ ಕೋರ್ಸ್‌ಗಳು—ಇವೆಲ್ಲವೂ ವಿದ್ಯಾರ್ಥಿಯ ಭವಿಷ್ಯವನ್ನು ಬೆಳಗಿಸಲು ಬಂದಿರುವ ದೀಪಗಳು.
ಸಾಮಾಜಿಕ ಜಾಲತಾಣಗಳು ನವೀನತೆಯ ಕಿಟಕಿ;
ಅದನ್ನು ಮುಚ್ಚುವುದು ಪರಿಹಾರವಲ್ಲ.ಅದರ ಹಿಂದೆ ತಲೆ ಕಚ್ಚುವ ಸರ್ಪವನ್ನು ಅರಿತುಕೊಳ್ಳುವುದು ಮಾತ್ರವೇ ಪರಿಹಾರ.ವಿದ್ಯಾರ್ಥಿ ತನ್ನ ಕುತೂಹಲವನ್ನು ಜ್ಞಾನದತ್ತ ತಿರುಗಿಸಿದಾಗ, ಜಾಲತಾಣಗಳು ಅವನಿಗೆ ಅತಿ ಉತ್ತಮ ಸಂಗಾತಿಯಾಗುತ್ತವೆ.ಆದರೆ ಕುತೂಹಲವನ್ನು ಉಪಯೋಗಿಸಿ ವ್ಯಸನಗಳ ಪಿಂಜರಕ್ಕೆ ಸೆಳೆಯುವಾಗ, ಜಾಲತಾಣವೇ ಅವನನ್ನು ಕಣ್ಮರೆ ಮಾಡುವ ಜಾಲವನ್ನಾಗುತ್ತದೆ.

ದಾಸ್ಯದಿಂದ ಮುಕ್ತಿ:
ಹೀಗಾಗಿ, ಪ್ರಶ್ನೆಗೆ ಉತ್ತರ ಸ್ಪಷ್ಟ:
ಹೌದು—ಅನುಶಾಸನವಿಲ್ಲದೆ ಬಳಸಿದರೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ದಾಸರಾಗುತ್ತಾರೆ.
ಆದರೆಇಲ್ಲ—ಅವರಿಗೆ ಅರಿವು, ಮಿತಿ, ಮತ್ತು ಸ್ವಯಂ ಶಿಸ್ತು ಇದ್ದರೆ.ವಿದ್ಯಾರ್ಥಿ ಮನಸ್ಸು ಒಂದು ಯಾವ ಗುಣವನ್ನಾದರೂ ಶೀಘ್ರವಾಗಿ ತೆಗೆದುಕೊಳ್ಳಬಲ್ಲ ಉಗುರಿನಂತೆ.ಅದನ್ನು ಹಿಡಿಯುವ ಕೈ ಜಾಲತಾಣಗಳದ್ದಾಗಲಿ, ಅಥವಾ ಸ್ವವಿವೇಕದದ್ದಾಗಲಿ—ಆಯ್ಕೆ ವಿದ್ಯಾರ್ಥಿಯದೆಯೇ.ಮಾನವ ತನ್ನ ನಿರ್ಮಿತ ತಂತ್ರಜ್ಞಾನಕ್ಕೆ ದಾಸನಾಗಬಾರದು;ತಂತ್ರಜ್ಞಾನವೇ ಮಾನವನಿಗೆ ದಾಸವಾಗಬೇಕಾದ್ದು.ಈ ಅರಿವೇ ವಿದ್ಯಾರ್ಥಿಯನ್ನು ನಿಜವಾದ ಮುಕ್ತನಾಗಿಸುತ್ತದೆ.
ಈಗಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ನಾನು ಹೇಳುವ ಒಂದು ವಾಕ್ಯ:
“ತಂತ್ರಜ್ಞಾನ ನಮ್ಮ ಕೈಯಲ್ಲಿ ಇರಲಿ; ನಮ್ಮ ಮನಸ್ಸಿನೊಳಗೆ ಅಲ್ಲ.”

ಇತ್ತೀಚಿಗೆ ವಿದ್ಯಾರ್ಥಿಗಳ ಜೀವನ ಒಂದು ಹೊಸ ಕುತೂಹಲದ ದಿಕ್ಕಿಗೆ ತಿರುಗಿದೆ. ಪಠ್ಯಪುಸ್ತಕಗಳ ಮೇಲಿನ ಹಿಡಿತವನ್ನು ಮೊಬೈಲ್‌ಗಳ ಮೇಲಾಗಿರುವ ಬಿಗಿಯಾದ ಹಿಡಿತ ಮರೆಮಾಡುತ್ತಿದೆ. ಬೆಳಗ್ಗೆ ಎದ್ದೊಡನೆ ಸೂರ್ಯನ ಬೆಳಕನ್ನು ನೋಡುವ ಮುನ್ನ, ಮೊಬೈಲ್ ಪರದೆಯ ಬೆಳಕನ್ನು ನೋಡುವ ಪೀಳಿಗೆ ಇದು. ಹೀಗಾಗಿ “ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿದ್ದಾರೆಯೇ?” ಎಂಬ ಪ್ರಶ್ನೆ ಕೇವಲ ಚರ್ಚೆಯ ವಿಷಯವಲ್ಲ, ನಮ್ಮ ಕಾಲದ ಆಂತರಿಕ ಚಿಂತನೆಯಾಗಿದೆ.
ಸಾಮಾಜಿಕ ಜಾಲತಾಣಗಳು ಪ್ರಥಮ ದೃಷ್ಟಿಯಲ್ಲಿ ಜ್ಞಾನಪಥದ ಸುಲಭ ಸೇತುವೆಯಂತೆ ಕಾಣುತ್ತವೆ. ಪಠ್ಯವಿಡಿಯೋಗಳು, ಪ್ರೇರಣಾದಾಯಕ ಕಥೆಗಳು, ಮನರಂಜನಾ ದೃಶ್ಯಗಳು—all in one. ಅದರಲ್ಲೇ ಜಗತ್ತಿನ ಜ್ಞಾನವೂ ಸೇರಿಕೊಂಡಿದೆ. ಹೀಗಾಗಿ ವಿದ್ಯಾರ್ಥಿಗಳ ಕಾಲದಲ್ಲಿ ಇದು ಸಂಪೂರ್ಣ ಹೊಸ ಯುಗದ ಅನ್ವೇಷಣೆಯಂತೆ. ಆದರೆ, “ತುಪ್ಪದಲ್ಲಿ ಕೈ ಹಾಕಿದರೆ ಚೂರು ತುಪ್ಪ, ಚೂರು ಬೆಂಕಿ” ಎನ್ನುವ ಗಾದೆಯಂತೆ, ಇದರ ಬಳಕೆಯಲ್ಲಿಯೂ ಎರಡು ಮುಖಗಳಿವೆ.
ಒಮ್ಮೆ ವಿದ್ಯಾರ್ಥಿ ಸಾಮಾಜಿಕ ಜಾಲತಾಣಗಳಿಗೆ ಕಾಲಿಟ್ಟರೆ, ವಿಸ್ತಾರವಾದ ಜಗತ್ತಿನ ಬಾಗಿಲು ತೆರೆಯುತ್ತದೆ. ವಿದ್ಯಾರ್ಥಿಯ ಕುತೂಹಲಕ್ಕೆ ಇದು ಅನಿರೀಕ್ಷಿತ ಗಾಳಿ. ಅಸಂಖ್ಯಾತ ವಿಷಯಗಳು, ಕಲಿಕೆಯ ಅವಕಾಶಗಳು ಮತ್ತು ವೈವಿಧ್ಯಮಯ ಜ್ಞಾನ—all ಒಂದು ಅಂಗಳದಲ್ಲೇ. ಹೀಗಾಗಿ ಕೆಲವರು ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಾಯಕವೆಂದು ನಂಬುತ್ತಾರೆ. ಇದರಲ್ಲಿ ತಪ್ಪಿಲ್ಲ. ಜ್ಞಾನವನ್ನು ಹುಡುಕುವ ಮನಸ್ಸಿಗೆ ಜಾಲತಾಣಗಳು ಅನಂತ ಮಾರ್ಗ.
ಆದರೆ ಸಮಸ್ಯೆ ಜ್ಞಾನಕ್ಕಿಂತ ಹೆಚ್ಚು ಗಮನ ಸೆಳೆಯುವ ವೈಖರಿಯಲ್ಲಿದೆ. ಒಂದು ಪೋಸ್ಟ್ ಎಷ್ಟು ಜನ ನೋಡಿದರು? ಎಷ್ಟು ಲೈಕ್? ಎಷ್ಟು ಕಾಮೆಂಟ್? ಎಂಬ ಪ್ರಶ್ನೆಗಳು ವಿದ್ಯಾರ್ಥಿಯ ಮನಸ್ಸನ್ನು ಅಲೆಯಂತೆ ಆಡಿಸುತ್ತವೆ. ಈ ಅಲೆಗಳಿಗೆ ತುತ್ತಾದರೆ ಓದು ಹಿನ್ನಡೆಯುವುದು ಸಹಜ. ‘ತಲೆ ಎತ್ತಿದ ಬೆಳೆಗೇ ಕೊಕ್ಕರೆಯ ಕಣ್ಣು’ ಎನ್ನುವ ಮಾತಿನಂತೆ, सामाजिक ಜಾಲತಾಣಗಳು ವಿದ್ಯಾರ್ಥಿಯ ಒಲವನ್ನೇ ಮೊದಲು ಸೆಳೆಯುತ್ತವೆ.
: “ಗಾಳಿಯ ಗೆಜ್ಜೆಯಲ್ಲಿ ಹೂವು ನಲಿದರೂ, ನೆಲದ ಬಲ ಮರೆವುದಿಲ್ಲ.”ವಿದ್ಯಾರ್ಥಿಯ ಆಯುಧ ಓದು; ಜಾಲತಾಣಗಳು ಹೂವಿನ ಗಾಳಿ. ನಲಿವಿದೆ, ಸುಂದರತೆ ಇದೆ. ಆದರೆ ಒಳಗಿನ ಬಲ ಕುಂದಬಾರದು.. ಇಂದಿನ ವಿದ್ಯಾರ್ಥಿಗಳು ಪರದೆಗಳ ಮೇಲೆ ಹೆಚ್ಚು ಸಮಯ ಕಳೆಯುತ್ತಾಿರುವುದು ಗೋಚರಿಸುವ ವಾಸ್ತವ. ಒಂದು ಕ್ಷಣ ಮೊಬೈಲ್ ಕೈಯಿಂದ ದೂರ ಮಾಡಿದರೂ ಮನಸ್ಸಿಗೆ ಅಸಮಾಧಾನ. ಸ್ವಲ್ಪ ಸಮಯ ‘ಸ್ಕ್ರೋಲ್’ ಮಾಡೋಣ ಎನ್ನುವುದೇ, ಗಂಟೆಗಳು ಹಾರಿ ಹೋಗುತ್ತದೆ. ಕಣ್ಣಿಗೆ ಕಾಣದ ಒಬ್ಬ ನೃತ್ಯಗಾರ, ಜೀವಿತದ ವೇಗವನ್ನು ನಿರ್ದೇಶಿಸುತ್ತಿರುವಂತೆ. ಈ ಒಳಗಣ ಬಂಧನವೇ ದಾಸ್ಯ. ಹಗ್ಗವಿಲ್ಲ, ಕಬ್ಬಿಣವಿಲ್ಲ; ಆದರೆ ಬಂಧನವಿದೆ.
ವಿದ್ಯಾರ್ಥಿಗಳ ಆರೋಗ್ಯಕ್ಕೂ ಇದು ಹಾನಿ. ನಿರಂತರ ಪರದೆ ನೋಡುವುದರಿಂದ ಕಣ್ಣು ದಣಿಯುವುದು, ನಿದ್ದೆಯ ಸ್ಟೈಲ್ ಬದಲಾಗುವುದು, ಮಾನಸಿಕ ಒತ್ತಡ ಹೆಚ್ಚುವುದು—all ಕಂಡು ಬರುತ್ತಿವೆ. ಜೊತೆಗೆ, ಮನಸ್ಸು ಸದಾ ಬೇರೆತನದ ಜಗತ್ತಿನಲ್ಲಿ ಅಲೆದಾಡುವುದರಿಂದ ಏಕಾಗ್ರತೆ ನೀರಿನ ಮೇಲಿನ ಚಂದ್ರನಂತೆ—ಕಣ್ಣಿಗೆ ಕಂಡರೂ ಕೈಗೆ ಸಿಗುವುದಿಲ್ಲ.
ಭೌತಿಕ ಜಗತ್ತಿನ ಸಂಬಂಧಗಳು ಸಹ ಸಾಮಾಜಿಕ ಜಾಲತಾಣಗಳ ನೆರಳಲ್ಲಿ ನಿಧಾನವಾಗಿ ನಶಿಸುತ್ತಿವೆ. ಸ್ನೇಹಿತರು ಇದ್ದರೂ ಸಂಭಾಷಣೆ ಕಡಿಮೆ. ಕುಟುಂಬ ಇದ್ದರೂ ಒಟ್ಟುಗೂಡುವಿಕೆ ಕಡಿಮೆ. ಪರದೆಗಳು ನಗುವನ್ನು ತರುತ್ತವೆ, ಆದರೆ ಮಾನವೀಯ ಉಷ್ಣತೆಯನ್ನಲ್ಲ. ವಿದ್ಯಾರ್ಥಿಗಳು ‘ವರ್ಚುವಲ್’ ಜಗತ್ತಿನಲ್ಲಿ ಸ್ನೇಹಿತರ ಸಾವಿರ ಮಂದಿಯನ್ನು ಪಡೆಯಬಹುದು; ಆದರೆ ನಿಜ ಜೀವನದಲ್ಲಿ ಅವರಲ್ಲಿ ಒಬ್ಬರನ್ನೂ ಮನದಾಳದಿಂದ ಅರಿಯುವುದಿಲ್ಲ. ಇದು ಒಂದು ಮೌನದ ಏಕಾಂತ.
ಮತ್ತೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲಿರುವ ‘ಆಕರ್ಷಕ’ ಜೀವನಗಳನ್ನು ನೋಡಿ ವಿದ್ಯಾರ್ಥಿಯ ಮನಸ್ಸು ಹೋಲಿಕೆಗಳ ಕಾಡಿಗೆ ಪ್ರವೇಶಿಸುತ್ತದೆ. “ಅವಳ ಜೀವನ ಹೀಗಿದೆ, ನನ್ನದು ಯಾಕೆ ಅಲ್ಲ?” ಎಂಬ ಪ್ರಶ್ನೆಯ ಮಿಂಚು ಮನಸ್ಸಿಗೆ ಹೊಡೆದುಬಿಡುತ್ತದೆ. ಹೀಗೆ ಅನುಭವಿಸುವ ಒತ್ತಡ ವಿದ್ಯಾರ್ಥಿಯ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಸ್ವಲ್ಪ ಕಷ್ಟ ಬಂದಾಗಲೇ ಗತಿಪೊಡಿಯುವ ಸ್ವಭಾವ ಬೆಳೆಸುತ್ತದೆ.
ವಿದ್ಯಾಭ್ಯಾಸವೂ ಮಂಕಾಗುತ್ತದೆ. ಪಾಠದೊಳಗೆ ತಲೆ ಹಾಕುವ ಬದಲು, ಮನಸ್ಸು ಜಾಲತಾಣಗಳ ಹಿಂದೆ ಓಡುವುದು. ಶಾಲೆಯ ಪಾಠಕ್ಕಿಂತ, ಯಾರು ಏನು ಹಾಕಿದ್ದಾರೆ ಎಂಬುದು ಮುಖ್ಯ. ಇದು ಮೌನವಾಗಿ ಶಿಕ್ಷಣದ ಮಣಿಯನ್ನು ಕಲ್ಲಾಗಿ ಪರಿವರ್ತಿಸುವಂತೆ.
ಆದರೆ, ಎಲ್ಲದರಲ್ಲಿಯೂ ನಕಾರಾತ್ಮಕತೆ ಮಾತ್ರವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಜ್ಞಾನವಿದೆ, ಸೃಜನಶೀಲತೆಗೆ ಅವಕಾಶವಿದೆ, ಪ್ರತಿಭೆಯನ್ನು ತೋರಿಸಲು ವೇದಿಕೆ ಇದೆ. ವಿಶ್ವದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯ. ಆದರೆ, “ನೀರಿಗೆ ಅಳತೆ ಇರಬೇಕು; ಹೆಚ್ಚು ಮಾಡಿದರೆ ಜಲಪ್ರಳಯ” ಎನ್ನುವ ಗಾದೆಯಂತೆ, ಬಳಕೆಗೆ ಮಿತಿ ಇರಬೇಕು.
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದೇ ತಪ್ಪಲ್ಲ. ಆದರೆ ಅದರ ಬಳಕೆ ವಿದ್ಯಾರ್ಥಿಯನ್ನೇ ಬಳಸಬಾರದು. ಇದು ಅತ್ಯಂತ ಮಹತ್ವದ ಮಂತ್ರ. ಜಾಲತಾಣಗಳು ಜ್ಞಾನಕ್ಕಾಗಿ ಇದ್ದರೆ ಅದು ಆಶೀರ್ವಾದ. ಮನಸ್ಸನ್ನು ಹಿಡಿಯಲು ಶುರುವಾಯಿತೆಂದರೆ ಅದು ಅಭಿಶಾಪ.
ಇಲ್ಲಿ ಶಿಕ್ಷಕರು, ಪೋಷಕರು ಮತ್ತು ಸಮಾಜ—allರ ಪಾತ್ರ ಮುಖ್ಯ. ಜಾಲತಾಣಗಳ ಬಳಕೆಗೆ ಮಿತಿಯನ್ನು ಕಲಿಸುವುದು, ಸಮಯ ನಿರ್ವಹಣೆ ತಿಳಿಸುವುದು, ಮೌಲ್ಯಗಳ ದಾರಿಯಲ್ಲಿ ನಿಲ್ಲಿಸುವುದು—ಇವೆಲ್ಲ ಅತ್ಯಂತ ಅಗತ್ಯ. ವಿದ್ಯಾರ್ಥಿಗಳು ಸ್ವತಃ ಮನೆಯೊಳಗಿನ, ಶಾಲೆಯೊಳಗಿನ ಮಾನವೀಯ ಸಂಬಂಧಗಳ ಬೆಲೆಯನ್ನು ಅರಿಯಬೇಕು. ಪರದೆ ಮನರಂಜನೆ ನೀಡಬಹುದು, ಆದರೆ ವ್ಯಕ್ತಿತ್ವ ರೂಪಿಸುವುದು ಬದುಕಿನ ಅನುಭವಗಳೇ.

ಸಾಮಾಜಿಕ ಜಾಲತಾಣಗಳು ದಿಕ್ಕು ತಪ್ಪಿಸಿದರೂ, ಬುದ್ಧಿ ಜಾಗೃತವಾಗಿದ್ದರೆ ವಿದ್ಯಾರ್ಥಿಯ ಹೆಜ್ಜೆಗಳು ತಪ್ಪಾಗುವುದಿಲ್ಲ.
ಸಾರಾಂಶವಾಗಿ ಹೇಳಬೇಕಾದರೆ—
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿರುವುದು ನಿಜ, ಆದರೆ ಅನಿವಾರ್ಯವಲ್ಲ. ನಿಯಂತ್ರಣ, ಮಿತಿ, ಮತ್ತು ಜ್ಞಾನ ಇದ್ದರೆ ಜಾಲತಾಣಗಳು ವಿದ್ಯಾರ್ಥಿಗಳ ಸ್ನೇಹಿತ. ಅಸವಾಧಾನ ಇದ್ದರೆ ಅವೇ ಬಂಧ.
ಡಿಜಿಟಲ್ ಜಗತ್ತು ನಮ್ಮ ಸುತ್ತಲೂ ಒಂದು ಬೃಹತ್ ಬಲೆಯಂತೆ ಹಬ್ಬಿದೆ. ಆ ಬಲೆಯೊಳಗೆ ಸಿಲುಕುವುದು ಸುಲಭ. ಆದರೆ ಅದರ ಮೇಲೆ ಮಿದುಳಿನ ಬೆಳಕು ಚೆಲ್ಲಿದರೆ, ಅದೇ ಜಾಲ ಜ್ಞಾನಪಥದ ಸೇತುವೆಯಾಗಿ ಬದಲಾಗಬಹುದು.
ಸಾಮಾಜಿಕ ಜಾಲತಾಣಗಳು ನಮ್ಮ ಕೈಯಲ್ಲಿ ಇರಲಿ;
ನಾವು ಅವುಗಳ ಕೈಯಲ್ಲಿ ಇರಬಾರದು.
ಇದನ್ನೇ ಅರಿತ ವಿದ್ಯಾರ್ಥಿ ನಿಜವಾದ ಮುಕ್ತನು.

ಕೊನೆಯ ಮಾತು“ಬುದ್ಧಿ ದೀಪವಾಗಿದ್ದರೆ ಜಗತ್ತಿನ ಕತ್ತಲು ಹತ್ತಿರ ಬರುವುದಿಲ್ಲ.”

@ಹನಿಬಿಂದು@

ವಿವಿಧ ಮೂಲಗಳಿಂದ ಆರಿಸಲಾಗಿದೆ..

ಡಿಜಿಟಲೀಕರಣ


ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲೀಕರಣ: ಸಾಧಕ ಮತ್ತು ಬಾಧಕಗಳು

ಯುಗಾಂತರಗಳ ಬೆಳಕು ಮರಳಿ ಮರಳಿ ಬದಲಾವಣೆಯ ರೂಪ ತಾಳುತ್ತದೆ. ಮನುಷ್ಯನ ಕಲಿಕೆಯು ಕೂಡ ಕಾಲದೊಂದಿಗೆ ರೂಪಾಂತರಗೊಳ್ಳುತ್ತದೆ. ಒಂದೇ ಕಾಲದಲ್ಲಿ ತಾಳೆ ಗರಿಗಳಿಂದ ಆರಂಭವಾದ ವಿದ್ಯೆಯನು, ಬರಹದ ಪುಸ್ತಕಗಳ ಮಾರ್ಗವಾಗಿ, ಇಂದಿನ ಡಿಜಿಟಲ್ ಪರದೆಯೊಳಗೆ ಪ್ರವೇಶಿಸಿದೆ. ಇಷ್ಟು ದೀರ್ಘ ಪಯಣದ ನಂತರ “ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲೀಕರಣ” ಎಂಬುದು ಸರ್ವಸ್ವರೂಪದಲ್ಲಿ ನವೀನ ಯುಗದ ಮಂತ್ರ. ಈ ಮಂತ್ರದಲ್ಲಿ ಸಾಧಕಗಳ ಗಾನವೂ ಇದೆ, ಬಾಧಕಗಳ ನಿಸ್ವರ ಕಿರುಚಾಟವೂ ಇದೆ. ಆ ಸಂಗೀತದ ಮೇಳೆಯಲ್ಲಿ ನಾವು ಮನುಷ್ಯ ಸಮಾಜ ಮುಂದೇನನ್ನು ಕಾಣಲಿದೆ ಎಂಬ ಪ್ರಶ್ನೆಗಳೂ ಮೆರೆದು ಶೋಧಕ ಮನಸ್ಸನ್ನು ರಂಗು ರಂಗಿನ ಮಂಚಕ್ಕೆ ಆಹ್ವಾನಿಸುತ್ತವೆ.

ಇತ್ತೀಚಿನ ದಶಕಗಳಲ್ಲಿ ಮಾನವ ಸಮಾಜವು ಕಂಡ ಪ್ರಮುಖ ಪರಿವರ್ತನೆಗಳಲ್ಲಿ ಒಂದೆಂದರೆ ಡಿಜಿಟಲೀಕರಣ. ಈ ಪರಿವರ್ತನೆ ಜೀವನದ ಪ್ರತಿಯೊಬ್ಬ ವಿಭಾಗವನ್ನು ಮುಟ್ಟಿದಂತೆ, ಶಿಕ್ಷಣ ಕ್ಷೇತ್ರವೂ ಅದರ ಸ್ಪರ್ಶದಿಂದ ಸಂಪೂರ್ಣ ಹೊಸ ಬಣ್ಣ ಪಡೆದುಕೊಂಡಿತು.. ಒಂದೇ ಪುಸ್ತಕ, ಒಂದೇ ಫಲಕ, ಒಂದೇ ಶಿಕ್ಷಕ—ಇವೆಲ್ಲವು ಸಾಕಾಗುತ್ತಿದ ಕಾಲ ನಿಧಾನವಾಗಿ ಹಿಂದೆ ಸರಿಯುತ್ತಿದೆ. ಅದರ ಜಾಗವನ್ನು ಕಂಪ್ಯೂಟರ್ ಪರದೆಗಳು, ಸ್ಮಾರ್ಟ್ ಫೋನ್‌ಗಳು, ಆನ್‌ಲೈನ್ ತರಗತಿಗಳು ಮತ್ತು ಅನೇಕ ತಂತ್ರಜ್ಞಾನ ಸಾಧನಗಳು ಹಿಡಿದಿವೆ. ಈ ಬದಲಾವಣೆ ನಮ್ಮ ವಿದ್ಯಾಭ್ಯಾಸಕ್ಕೆ ಹೊಸ ದಾರಿ ತೆರೆದರೂ, ಅದರ ನೆರಳುಗಳೂ ನಮ್ಮೊಂದಿಗೆ ಸಾಗುತ್ತಿವೆ.
ಡಿಜಿಟಲ್ ಯುಗದ ಮೊದಲ ಉಡುಗೊರೆ ಎಂಬಂತೆ ಬರುವ ಪ್ರಮುಖ ಲಕ್ಷಣವೇ ಸುಲಭ ಪ್ರವೇಶ. ಇಂದಿನ ವಿದ್ಯಾರ್ಥಿ ಕೋಣೆಯೊಳಗೆ ಬಂಧಿಯಾಗಿರಬೇಕಿಲ್ಲ; ಆಕಾಶದ ಕೊಳಲಿನಿಂದ ಗೂಗಲ್ ಕ್ಲಾಸ್ರೂಮ್‌ಗಳವರೆಗೆ ಜ್ಞಾನವು ಎಲ್ಲೆಡೆ ಹಾದಿಗಳಲ್ಲಿ ಪರಿಚಯಿಸುತ್ತಿದೆ. ಒಮ್ಮೆ ಪಾಠ ಪುಸ್ತಕಗಳೇ ಜ್ಞಾನಕ್ಕೆ ಕಿಟಕಿ ಆಗಿದ್ದ ಕಾಲ ಕಳೆದಿದೆ—ಇಂದಿಗೆ ಒಂದೇ ಮೌಸ್ ಕ್ಲಿಕ್‌ಗೆ ಲಕ್ಷಾಂತರ ಹೊಸ ಜ್ಞಾನ ಕಣಗಳು ಬೆಳಕಿನತ್ತ ಹರಿದು ಬರುತ್ತಿವೆ. ವಿದ್ಯಾರ್ಥಿಗೆ ಕಲಿಕೆಯ ಸ್ವಾತಂತ್ರ್ಯ—ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ—ಎಂಬುದು ಕಲಿಕೆಯ ಸುಂದರ ಕ್ರಾಂತಿಯಷ್ಟೇ. ವಿಜ್ಞಾನವನ್ನು ಕೇವಲ ಓದಲು ಮಾತ್ರವಲ್ಲ, 3D ಅನಿಮೇಷನ್ ಮುಖಾಂತರ ಕಾಣಲು, ಗಣಿತದ ಹೈಪೋತೇಸಿಸ್‌ಗಳನ್ನು ಸಮೀಕರಣಗಳ ಆಟದಲ್ಲಿ ಅನುಭವಿಸಲು, ಇತಿಹಾಸದ ಘಟನಗಳನ್ನು ವಾಸ್ತವಿಕ ಲೋಕಕ್ಕೆ ಹೋಲುವ ವರ್ಚುವಲ್ ರಿಯಾಲಿಟಿಯ ಮೂಲಕ ಪ್ರವೇಶಿಸಲು ಸಾಧ್ಯವಾಗಿದೆ. ಇದು ಕೇವಲ ಪಾಠವಲ್ಲ—ಇದು ಕಲಿಕೆಯತ್ತ ಒಂದು ಅನುಭವಯಾತ್ರೆ. ಕಲಿಯುವವನ ಮನಸ್ಸಿನಲ್ಲಿ ಕುತೂಹಲದ ಚಿಗುರುಗಳನ್ನು ಮರು ಬೆಳೆಯುವಂತೆ ಮಾಡುವ ಅದ್ಭುತ ಶಕ್ತಿ ಡಿಜಿಟಲ್ ಶಿಕ್ಷಣದ್ದು.
ಪಾಠದ ಪ್ರಗತಿಯನ್ನು ಅಳೆಯುವ ಚಾತುರ್ಯದ ಸಾಧನಗಳು ಕೂಡ ಡಿಜಿಟಲೀಕರಣದ ಮತ್ತೊಂದು ಗಿಫ್ಟ್.
ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಬಗೆಯನ್ನು ಗುರುತಿಸಿ, ಅವರ ಗಟ್ಟಿತನಗಳನ್ನು ಅಳೆಯಲು ಸಾಧ್ಯವಾಗಿದೆ. ಪರ್ಸನಲೈಜ್ಡ್ ಲರ್ನಿಂಗ್ ಎಂಬುದು ಇಂದಿನ ಶಿಕ್ಷಣದ ಅಮೂಲ್ಯ ಕೊಂಡಿಯಾಗಿದ್ದು, ತಾಳಿಹೋದ ವಿದ್ಯಾರ್ಥಿಯು ಮತ್ತೆ ಓಟಕ್ಕೆ ಸೇರಲು, ವೇಗವಾಗಿ ಕಲಿಯುವ ವಿದ್ಯಾರ್ಥಿಗೆ ಮತ್ತಷ್ಟು ಹಾದಿಗಳನ್ನು ತೆರೆಯಲು ಇದು ನೆರವಾಗುತ್ತದೆ.
ಇದಕ್ಕೆ ಜೊತೆಗೂಡಿ, ಡಿಜಿಟಲೀಕರಣ ಪರಿಸರಕ್ಕೆ ಸ್ನೇಹಿ.
ಪುಸ್ತಕಗಳ ಪುಟಗಳ ಹಿಂದಿರುವ ಮರಗಳ ಕರಗುವ ಕತೆ ನಿಧಾನವಾಗಿ ಮುಗಿಯುತ್ತಿದೆ. ನೂರಾರು ಪುಸ್ತಕಗಳನ್ನು ಬರೆಯಲು ಬೇಕಾದ ಮರಗಳನ್ನು ಉಳಿಸಿ, ಒಂದೇ ಉಪಕರಣದಲ್ಲಿ ಸಾವಿರಾರು ಪುಸ್ತಕಗಳನ್ನು ಉಳಿಸಬಹುದಾದ ಇ-ಲೈಬ್ರರಿ, ಪ್ರಕೃತಿಯ ಒಲವಿಗೆ ಮತ್ತೊಂದು ದೀಪ ಹಚ್ಚುತ್ತದೆ. ಡಿಜಿಟಲೀಕರಣದ ಒಳಿತುಗಳನ್ನು ಮೊದಲು ನೋಡಿದರೆ, ಶಿಕ್ಷಣದ ಜಗತ್ತು ಎಂದಿಗೂ ಇದುವರೆಗೆ ಕಂಡಿರದಷ್ಟು ವಿಶಾಲವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಒಂದು ಬೃಹತ್ ಗ್ರಂಥಾಲಯವನ್ನು ತರಗತಿಯೊಳಗೆ ತರಲು ಈಗ ಸಾಧ್ಯ. ವಿಶ್ವದ ಅಗ್ರ ವಿಶ್ವವಿದ್ಯಾಲಯಗಳ ಉಪನ್ಯಾಸಗಳು ಕೆಲವೇ ಕ್ಲಿಕ್ಕುಗಳಲ್ಲಿ ವಿದ್ಯಾರ್ಥಿಗೆ ಸೇರಿಬಿಡುತ್ತವೆ. ಹಳ್ಳಿಯ ಓರ್ವ ವಿದ್ಯಾರ್ಥಿ ನಗರಗಳ ಮಟ್ಟದ ಜ್ಞಾನವನ್ನು ಸುಲಭವಾಗಿ ಪಡೆಯಬಲ್ಲನು. ಮತ್ತು ಈ ಅಂತರವನ್ನು ಅಳಿಸಿ ಹಾಕಿದದ್ದು ಡಿಜಿಟಲ್ ತಂತ್ರಜ್ಞಾನ. ಓದುಗನಿಗೆ ಹೊಸ ವಿಷಯ ಕಲಿಯಲು ಶಿಕ್ಷಕರ ಸಹಾಯದ ಜೊತೆಗೆ ಅನೇಕ ವಿಡಿಯೋ ಪಾಠಗಳು, ಆನಿಮೆಷನ್‌ಗಳು, ಗ್ರಾಫಿಕಲ್ ಉದಾಹರಣೆಗಳು ಬೆಂಬಲ ನೀಡುತ್ತವೆ. ವಿಷಯ ಕಠಿಣವಾಗಿದ್ದರೂ, ಅದರ ದೃಶ್ಯರೂಪ ಮನಸ್ಸಿನಲ್ಲಿ ಸುಲಭವಾಗಿ ನೆಲೆಗೊಳ್ಳುತ್ತದೆ. ಈ ಮೂಲಕ ಕಲಿಕೆಯ ಅನುಭವ ಹೆಚ್ಚು ಆನಂದಕರವಾಗುತ್ತದೆ. ಕೆಲವೊಮ್ಮೆ ವಿದ್ಯಾರ್ಥಿ ಏಕಾಗ್ರತೆ ಕಳೆದುಕೊಳ್ಳುವಾಗ ಸಾಂಪ್ರದಾಯಿಕ ಪಾಠ ಹೇಳುವ ವಿಧಾನಗಳಿಗಿಂತ ತಂತ್ರಜ್ಞಾನವು ಹೆಚ್ಚು ಆಕರ್ಷಕವಾಗುತ್ತದೆ. ಹೀಗಾಗಿ, ಡಿಜಿಟಲೀಕರಣವು ಕಲಿಕೆಯನ್ನು ಕೇವಲ ಕರ್ತವ್ಯವಷ್ಟೇ ಅಲ್ಲ, ನಿಜವಾದ ಆಸಕ್ತಿಯನ್ನಾಗಿ ಮಾಡುತ್ತದೆ.
ಶಿಕ್ಷಕರು ಕೂಡಾ ಇದರಿಂದ ದೂರ ಉಳಿದಿಲ್ಲ. ಪಾಠ ಸಿದ್ಧತೆ ಹೆಚ್ಚು ಪರಿಣಾಮಕಾರಿ ಆಗಿದ್ದು, ವಿದ್ಯಾರ್ಥಿಗಳ ಪ್ರಗತಿ ಅಂಕಿ ಅಂಶಗಳನ್ನು ತಕ್ಷಣ ವಿಶ್ಲೇಷಿಸಬಹುದು. ಶಿಕ್ಷಣದ ಗುಣಮಟ್ಟ ಸುಧಾರಿಸಲು ಬೇಕಾದ ಮಾಹಿತಿಗಳು ಕ್ಷಣಾರ್ಧದಲ್ಲಿ ದೊರೆಯುತ್ತವೆ. ಪಠ್ಯಪುಸ್ತಕಗಳು ನವೀಕರಣಗೊಂಡಾಗ ಅವು ವಿದ್ಯಾರ್ಥಿಗಳ ಮೊಬೈಲ್‌ಗಳಿಗೆ ಒಂದು ಸೂಚನೆಯಷ್ಟರಲ್ಲಿ ತಲುಪುತ್ತವೆ. ಜ್ಞಾನವನ್ನು ಹಂಚುವ ದಾರಿಗಳು ಅನೇಕವಾಗಿರುವುದರಿಂದ ಕಲಿಕೆಯ ವೇಗವೂ ಹೆಚ್ಚಿದೆ.
ಇದನ್ನೆಲ್ಲ ನೋಡಿದಾಗ ಡಿಜಿಟಲೀಕರಣವು ಶಿಕ್ಷಣಕ್ಕೆ ನೀಡಿದ ಕೊಡುಗೆಗಳು ಅನೇಕ. ಆದರೂ, ಆ ಬೆಳಕಿನ ಹಿಂದೆ ಕೆಲವು ಗಾಢ ನೆರಳುಗಳೂ ಬದುಕಿನ ಕಷ್ಟಗಳಂತೆ ನಿಂತಿವೆ.
ಪ್ರಮುಖವಾದ ಬಾಧಕವೇನೆಂದರೆ, ತಂತ್ರಜ್ಞಾನಕ್ಕೆ ಅಗತ್ಯವಿರುವ ಉಪಕರಣಗಳ ಲಭ್ಯತೆ ಎಲ್ಲರಿಗೂ ಸಮಾನವಾಗಿಲ್ಲ. ಕೆಲ ಹಳ್ಳಿಗಳಲ್ಲಿ ಇಂದಿಗೂ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಹಾರೈಸಬೇಕಾದ ಕನಸು. ಈ ಅಸಮಾನತೆ ಶಿಕ್ಷಣದ ಮೂಲ ಉದ್ದೇಶವಾದ ಸಮಾನತೆಗೆ ತೊಂದರೆ ಉಂಟುಮಾಡುತ್ತದೆ. ಹೀಗಾಗಿ, ಡಿಜಿಟಲೀಕರಣವು ಕೆಲವೊಮ್ಮೆ ಶಿಕ್ಷಣವನ್ನು ಎಲ್ಲರ ಹಕ್ಕು ಎನ್ನುವುದಕ್ಕೆ ಬದಲಾಗಿ ಆಯ್ದವರ ಭಾಗ್ಯವನ್ನಾಗಿಸುತ್ತದೆ. ಇದು ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ದೊಡ್ಡ ಅಂತರಗಳಲ್ಲಿ ಒಂದಾಗಿದೆ.
ಇನ್ನೊಂದು ಬಾಧಕವೆಂದರೆ ತಂತ್ರಜ್ಞಾನಕ್ಕೆ ಅವಲಂಬನೆ. ವಿದ್ಯಾರ್ಥಿಗಳು ಪರದೆಗಳತ್ತ ನಿರಂತರವಾಗಿ ತಿರುಗಿಬಿಡುವ ಮೂಲಕ ಅವರು ಓದುಗನವಿರಾದರೆ, ಪರದೆಗಬ್ಬರರಾಗಿ ಹೋಗುತ್ತಾರೆ. ಪುಸ್ತಕದ ವಾಸನೆ, ಅಧ್ಯಯನದ ನೆಮ್ಮದಿ, ತರಗತಿಯ ಸಂವಾದ—ಇವೆಲ್ಲ ನಿಧಾನವಾಗಿ ದೂರವಾಗುತ್ತಿವೆ. ಪರದೆಗಳ ಜಗತ್ತು ಆಕರ್ಷಕವಾದರೂ, ಅದು ಒಂಟಿತನದ ಮೌನ ಜಗತ್ತು. ಮನುಷ್ಯನಿಗೆ ಬೇಕಾಗಿರುವ ಮಾನವೀಯ ಸ್ಪರ್ಶವನ್ನು ತಂತ್ರಜ್ಞಾನ ನೀಡಲಾರದು.
ಡಿಜಿಟಲ್ ಉಪಕರಣಗಳ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳ ಆರೋಗ್ಯಕ್ಕೂ ತೊಂದರೆ. ದೃಷ್ಟಿದೋಷ, ನಿದ್ದೆಗೆಡಿಕೆ, ಒತ್ತಡ, ಏಕಾಗ್ರತೆ ಕುಸಿತ—ಇವು ಈಗ ಸಾಮಾನ್ಯವಾಗಿವೆ. ಮೊಬೈಲ್ ಕೈಯಲ್ಲಿ ಇದ್ದಾಗ ಮನಸ್ಸು ಪಾಠಕ್ಕಿಂತ ಸೂಚನೆಗಳ ಕಡೆ ಓಡುತ್ತದೆ. ಒಂದು ವಿಷಯ ತಿಳಿದುಕೊಳ್ಳಲು ತೆರೆಯಲ್ಪಟ್ಟ ಸಾಧನ ವಿದ್ಯಾರ್ಥಿಯನ್ನು ಹಲವು ಬೇಸರದ ದಾರಿಗಳಲ್ಲಿ ನಡೆಸಬಹುದು. ಹೀಗಾಗಿ, ಕಲಿಕೆಯೆಂಬ ಗುರಿಗೆ ಹೋಗಬೇಕಾದ ದಾರಿ ಜಂಜಾಟಗಳಿಂದ ತುಂಬಿಬಿಡುತ್ತದೆ. ಡಿಜಿಟಲ್ ಕಲಿಕೆಯಲ್ಲಿ ಮತ್ತೊಂದು ದೊಡ್ಡ ಸಮಸ್ಯೆ ಸಂವೇದನಾತ್ಮಕ ಅನುಭವಗಳ ಕೊರತೆ. ವಿಜ್ಞಾನ ಪ್ರಯೋಗಾತ್ಮಕ, ಕೃಷಿ, ಕಲಾ ವಿಷಯಗಳು—ಇವುಗಳನ್ನು ಪರದೆಗಳಲ್ಲಿ ನೋಡುವುದರಿಂದ ತುಂಬಾ ತಿಳಿದುಕೊಳ್ಳಬಹುದು, ಆದರೆ ಆ ಅನುಭವ ಸಂಪೂರ್ಣವಾಗುವುದಿಲ್ಲ. ಮಣ್ಣಿನ ಸ್ಪರ್ಶವನ್ನು ಚಿತ್ರದಿಂದ ಕಲಿಯಲಾಗುವುದಿಲ್ಲ, ರಸಾಯನಿಕ ಪ್ರತಿಕ್ರಿಯೆಯ ತೀವ್ರತೆಯನ್ನು ಕೇವಲ ವಿಡಿಯೋದಲ್ಲಿ ನೋಡುವುದರಿಂದ ಅರಿಯಲಾಗುವುದಿಲ್ಲ. ಹೀಗಾಗಿ, ಪ್ರತಿಯೊಂದು ವಿಷಯವೂ ಡಿಜಿಟಲ್ ರೂಪದಲ್ಲಿ ಒಂದೇ ಗುಣಮಟ್ಟದಲ್ಲಿ ಕಲಿಸಬಹುದು ಎಂಬುದು ಸತ್ಯವಲ್ಲ. ಇದೇ ವೇಳೆ ಶಿಕ್ಷಕರು ಕೂಡಾ ಸವಾಲುಗಳನ್ನು ಎದುರಿಸುತ್ತಾರೆ. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಬೇಕಾದ ತರಬೇತಿ, ಸಮಯ, ಸಹನೆ—ಇವು ಎಲ್ಲರಲ್ಲೂ ಸಮಾನವಾಗಿರದು. ಹೊಸ ಸಾಧನಗಳನ್ನು ಬಳಸುವುದು ಕೆಲವರಿಗೆ ಹೊಣೆ, ಕೆಲವರಿಗೆ ಭಾರ. ತರಗತಿ ಸಾಗುವಾಗ ತಾಂತ್ರಿಕ ದೋಷಗಳು ನೋವುಂಟುಮಾಡುತ್ತವೆ. ಹೀಗಾಗಿ, ಕಲಿಕೆಯ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ತಂತ್ರಜ್ಞಾನ ಕೆಲವೊಮ್ಮೆ ಅಡ್ಡಿಯಾಗುತ್ತದೆ. ವಿದ್ಯಾರ್ಥಿಗಳ ಮಧ್ಯೆ ಶಿಸ್ತು ಕಾಪಾಡುವುದು ಮತ್ತೊಂದು ದೊಡ್ಡ ಸವಾಲು. ಆನ್‌ಲೈನ್ ತರಗತಿಯಲ್ಲಿ ಶಿಕ್ಷಕನ ಕಣ್ಣು ವಿದ್ಯಾರ್ಥಿಯ ಮೇಲೆ ನೇರವಾಗಿ ಬೀಳುವುದಿಲ್ಲ. ವಿದ್ಯಾರ್ಥಿ ಗಮನಹರಿಸುತ್ತಿದ್ದಾನೋ, ಬೇರೆ ಪರದಿಗಳನ್ನು ತಿರುಗುತ್ತಿದ್ದಾನೋ ಎಂಬುದು ಅಂದಾಜು. ಕೇವಲ ಹಾಜರಾತಿ ಸಾಕಾಗುವುದಿಲ್ಲ; ಕಲಿಕೆಯ ಗುಣಮಟ್ಟವನ್ನು ಪರಿಶೀಲಿಸುವುದು ಕಷ್ಟ.
ಡಿಜಿಟಲೀಕರಣದಿಂದ ಹುಟ್ಟಿರುವ ಮತ್ತೊಂದು ಪ್ರಮುಖ ಚಿಂತನೆ ಮೌಲ್ಯಗಳ ಕುಸಿತ. ಒಮ್ಮೆ ಶಾಲೆ ಎಂದರೆ ಮೌಲ್ಯಗಳನ್ನು ಕಲಿಸುವ ಮಂದಿರವಾಗಿತ್ತು. ಶಿಕ್ಷಕರ ನಡೆ-ನುಡಿ, ಸ್ನೇಹಿತರ ಸಹಾಯ, ತರಗತಿಯಲ್ಲಿ ಉಳಿದ ಸಂವಾದ—ಇವು ಮನುಷ್ಯನನ್ನು ಮನುಷ್ಯನನ್ನಾಗಿಸುತ್ತಿದ್ದವು. ಈಗ ಪರದೆಗಳ ನಡುವೆ ಸಿಲುಕಿಕೊಂಡ ವಿದ್ಯಾರ್ಥಿ ಮನುಷ್ಯರಿಂದ ದೂರವಾಗುತ್ತಿರುವ ಭಾವುಕ ಸ್ಥಿತಿ ಕಂಡುಬರುತ್ತಿದೆ. ಜ್ಞಾನ ದೊರೆಯುತ್ತಿದೆ, ಆದರೆ ಮನುಷ್ಯತನದ ಬಿಸಿಲು ಮಸುಕಾಗುತ್ತಿದೆ.

ಆದರೂ, ಡಿಜಿಟಲೀಕರಣವನ್ನು ಸಂಪೂರ್ಣವಾಗಿ ತಪ್ಪು ಎಂದು ಹೇಳುವುದು ಸರಿಯಲ್ಲ. ಮಾನವ ನಿರ್ಮಿಸಿರುವ ಪ್ರತಿಯೊಂದು ಸಾಧನದಂತೆ ಇದಕ್ಕೂ ಒಳ್ಳೆಯದು–ಕೆಟ್ಟದ್ದು ಎರಡೂ ಇದೆ. ತಂತ್ರಜ್ಞಾನವನ್ನು ಹೇಗೆ ಬಳಸಬೇಕು ಎಂಬ ಜ್ಞಾನವೇ ಮುಖ್ಯ. ವಿದ್ಯಾರ್ಥಿಗಳು ಪರದೆಗಳನ್ನು ಬಳಸಿದಂತೆ ಪುಸ್ತಕಗಳನ್ನು ಬಳಕೆ ಮಾಡಬೇಕು. ಶಿಕ್ಷಕರು ಡಿಜಿಟಲ್ ಸಾಧನಗಳನ್ನು ಉಪಯೋಗಿಸಿದಂತೆ ಮೌಲ್ಯಾಧಾರಿತ ಪಾಠವನ್ನೂ ನೀಡಬೇಕು. ಮನೆಯವರು ಮಕ್ಕಳಿಗೆ ಉಪಕರಣ ಕೊಟ್ಟಂತೆ ಮಿತಿ ಕಲಿಸಬೇಕು. ಸರ್ಕಾರ ಮತ್ತು ಸಮಾಜವರೆಲ್ಲರೂ ತಂತ್ರಜ್ಞಾನವನ್ನು ಎಲ್ಲರಿಗೂ ತಲುಪಿಸಬೇಕಾದ ಜವಾಬ್ದಾರಿ ಹೊರುವ ಅಗತ್ಯವೂ ಇದೆ.
ಡಿಜಿಟಲೀಕರಣದ ಬಾಧಕಗಳು ಮತ್ತು ಪ್ರಭಾವಗಳ ನಡುವೆ ನಿಂತಿರುವಾಗ ನಾವು ಅರಿಯಬೇಕಾದ ಸತ್ಯ ಏನೆಂದರೆ: ತಂತ್ರಜ್ಞಾನ ನಮ್ಮ ಜೀವನದ ಒಂದು ಭಾಗ ಮಾತ್ರ; ಅದು ನಮ್ಮ ಬದುಕಿನ ಮಾಲಿಕನಲ್ಲ. ಶಿಕ್ಷಣದ ಮೂಲ ಗುರಿ ಮನುಷ್ಯನನ್ನು ಜ್ಞಾನಿ ಮಾಡುವುದೇ ಹೊರತು ಪರದೆಗಳ ದಾಸನನ್ನಾಗಿಸುವುದಲ್ಲ. ಡಿಜಿಟಲೀಕರಣವು ಶಿಕ್ಷಣಕ್ಕೆ ನೀಡಿದ ಸಾಧಕಗಳು ಅಪಾರ. ಜ್ಞಾನವನ್ನು ಎಲ್ಲರಿಗೂ ತಲುಪಿಸುವ ಸಾಮರ್ಥ್ಯ, ಕಲಿಕೆಯನ್ನು ಆಕರ್ಷಕವಾಗಿಸುವ ಶಕ್ತಿ, ವಿಶ್ವದ ಮಟ್ಟದ ವಿಷಯಗಳನ್ನು ನಮ್ಮ ಕೈಗೆ ತರುವ ಸಾಮರ್ಥ್ಯ—ಇವೆಲ್ಲವು ಶಿಕ್ಷಣವನ್ನು ಹೊಸ ದಾರಿಯಲ್ಲಿ ನಡೆಸುತ್ತಿವೆ. ಆದರೆ ಅದಕ್ಕೆ ತೋರಿದ ಬಾಧಕಗಳು, ಅಸಮಾನತೆ, ಆರೋಗ್ಯದ ಸಮಸ್ಯೆಗಳು, ಮೌಲ್ಯಗಳ ಕುಂದನೆ, ತಂತ್ರಜ್ಞಾನ ಅವಲಂಬನೆ—ಇವೆಲ್ಲವನ್ನು ನಿರ್ಲಕ್ಷಿಸಲಾಗುವುದಿಲ್ಲ. ಹೀಗಾಗಿ, ತಂತ್ರಜ್ಞಾನ ಮತ್ತು ಮಾನವೀಯತೆಯ ನಡುವೆ ಸಮತೋಲನ ಸಾಧಿಸುವುದು ನಮ್ಮ ಕಾಲದ ಅತ್ಯಂತ ಅಗತ್ಯವಾದ ಕರ್ತವ್ಯ.
ಆದರೆ ಜಗತ್ತಿನ ಪ್ರತಿಯೊಂದು ಬೆಳಕಿಗೂ ತನ್ನ ನೆರಳು ಇರುತ್ತದೆ. ಶಿಕ್ಷಣದ ಡಿಜಿಟಲೀಕರಣ ಕೂಡ ಅದಕ್ಕೆ ಹೊರತಲ್ಲ.
ಮೊದಲನೆಯದಾಗಿ ಬರುವ ಒಂದು ಗಂಭೀರ ಸಮಸ್ಯೆ—ಡಿಜಿಟಲ್ ಅಂತರ.ನಗರದ ವಿದ್ಯಾರ್ಥಿ ವೇಗದ ಇಂಟರ್‌ನೆಟ್‌ನ ಹಾರಿನಲ್ಲಿ ಏರಿದಾಗ, ಹಳ್ಳಿಯ ವಿದ್ಯಾರ್ಥಿ ಒಂದು ಸಿಗ್ನಲ್ ಹಿಡಿಯಲು ಕಿಟಕಿಯ ಗಡಿಯಾರದ ಬಳಿ ಕುಳಿತಿರುವುದನ್ನು ನಾವು ಕ್ಷಣಕ್ಕೊಂದು ನೋಡುತ್ತೇವೆ. ಈ ಅಂತರದಲ್ಲಿ ಕುಸಿಯುತ್ತಿರುವುದು ಕೇವಲ ಸಿಗ್ನಲ್ ಅಲ್ಲ—ಸಮಾನ ಅವಕಾಶಗಳ ವಿಶ್ವಾಸ.ಡಿಜಿಟಲೀಕರಣವು ಜ್ಞಾನವನ್ನು ಎಲ್ಲರಿಗೂ ತಲುಪಿಸುತ್ತದೆ ಎಂಬ ಮಾತು ಅಷ್ಟರಲ್ಲಿ ನಿಜವಾಗುವುದಿಲ್ಲ; ಅಗತ್ಯ ಮೂಲ ಸೌಕರ್ಯವಿಲ್ಲದೆ ಅದು ಕೆಲವು ಮಕ್ಕಳಿಗೆ ದೂರದ ಕನಸೇ. ಇನ್ನೊಂದು ಸಮಸ್ಯೆ—ಮಾನವೀಯ ಸಂಪರ್ಕದ ಕರಗುವಿಕೆ.
ಒತ್ತಾದ ಶಿಕ್ಷಕನ ಕಣ್ಣು, ಸ್ನೇಹಿತನ ಬೆನ್ನಿಗೆ ಸಾಟಿಯಾಗಿ ಹೊಡೆಯುವ ಉತ್ತೇಜನ, ತರಗತಿಯ ಗದ್ದಲದಲ್ಲಿರುವ ಕಲಿಕೆಯ ರಸದೌತಣ—ಇವುಗಳೆಲ್ಲ ಡಿಜಿಟಲ್ ವಿಶ್ವದಲ್ಲಿ ಮೌನವನ್ನೇ ಧರಿಸುತ್ತವೆ. ವಿದ್ಯಾರ್ಥಿಯ ಪ್ರಶ್ನೆಗೆ ಗುರು ನೀಡುವ ತಕ್ಷಣದ ಉತ್ತರದ ಬಿಸುಗಣ್ಣಿನ ಬದಲು, ಚಾಟ್‌ಬಾಕ್ಸ್‌ನಲ್ಲಿ ಕಾಣುವ 'ಟೈಪಿಂಗ್...' ಎಂಬ ಚಿಕ್ಕ ಅಕ್ಷರದ ನಿರೀಕ್ಷೆ ಉಳಿಯುತ್ತದೆ.
ಕಲಿಕೆಯ ಮಾನವೀಯ ಸ್ಪರ್ಶ, ಸಂಬಂಧಗಳ ಉಷ್ಣತೆ, ಭಾವನೆಗಳ ಮ್ಯಾಂತ್ರಿಕ ಬಣ್ಣಗಳು ತೆರೆಮೇಲೆ ಸಂಪೂರ್ಣವಾಗಿ ಮೂಡುವುದಿಲ್ಲ.ಇನ್ನೊಂದು ಬಾಧಕ—ಧ್ಯಾನಚ್ಯುತಿ. ಪಠ್ಯ ಪುಸ್ತಕದ ಪುಟಗಳ ಮೌನಕ್ಕೆ ಬದಲಿ, ಪರದೆಯ ಮೇಲಿರುವ ಪಾಠದ ಪಕ್ಕಕ್ಕೆ ಅಲರ್ಟ್‌ಗಳು, ಜಾಹೀರಾತುಗಳು, ಆಟಗಳ ಆಕರ್ಷಣೆ, ವಿಡಿಯೋಗಳ ಪ್ರಲೋಭನೆ. ಓದಿಗೆ ಎಷ್ಟು ಸಮಯ ಕೊಡುತ್ತಾನೆ?—ಈ ಪ್ರಶ್ನೆಗೆ ವಿದ್ಯಾರ್ಥಿಯ ಬೆರಳುಗಳು ಮೌನ ಉತ್ತರಿಸಬಹುದು!
ಡಿಜಿಟಲ್ ಶಿಕ್ಷಣ ಕಲಿಕೆಯನ್ನು ಸುಲಭಗೊಳಿಸಿದರೂ, ಏಕಾಗ್ರತೆಯನ್ನು ಕಳೆದುಕೊಳ್ಳುವ ಸುತ್ತುಗುತ್ತಲನ್ನು ನಿರ್ಮಿಸಲು ಸಾಧ್ಯತೆ ಹೆಚ್ಚು.
ಇನ್ನು ಒಂದು ನಿಗೂಢ ಸಂಗತಿ ಡೇಟಾ ಸುರಕ್ಷತೆ.
ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಗಳು, ಅವರ ಕಲಿಕೆಗಾಗಿ ಬಳಸುವ ಅಪ್ಲಿಕೇಶನ್‌ಗಳಡಿಯಲ್ಲಿ ಸಂಗ್ರಹವಾಗುತ್ತಿರುವುದು ಕೆಲವೊಮ್ಮೆ ಅಪಾಯಕ್ಕೆ ದಾರಿ ಮಾಡಬಹುದು. ಜ್ಞಾನವನ್ನು ನೀಡುವ ಹೆಸರು ಕೇಳಿದರೂ, ಅವರ ಮಾಹಿತಿಯನ್ನು ಕದಿಯುವ ನೆರಳುಗಳು ಕೂಡ ಈ ಯುಗದಲ್ಲಿ ಅಪರೂಪವಲ್ಲ.
ಡಿಜಿಟಲ್ ಶಿಕ್ಷಣ neither a savior nor a villain—ಅದು ಒಂದು ಸಾಧನ, ಒಂದು ಹೊಸ ದಾರಿ. ಈ ದಾರಿ ಸರಿಯಾಗಿ ಬಳಸಿದರೆ ಜ್ಞಾನವನ್ನು ಹೊಸ ಗಗನಗಳಿಗೆ ಕೊಂಡೊಯ್ಯುತ್ತದೆ; ತಪ್ಪಾಗಿ ಬಳಸಿದರೆ ಕಲಿಕೆಯ ಮೂಲಸ್ವರೂಪವೇ ಕಣ್ಮರೆಯಾಗುವ ಅಪಾಯವಿದೆ.
ಹೀಗಾಗಿ ನಾವು ಏನು ಮಾಡಬೇಕು?
ಡಿಜಿಟಲ್ ಮೂಲಸೌಕರ್ಯವನ್ನು ಎಲ್ಲರಿಗೂ ತಲುಪಿಸಬೇಕು—ಇದು ಸಮಾನತೆಯ ಮೊದಲ ಹೆಜ್ಜೆ.
ಶಿಕ್ಷಕರಿಗೆ ತಾಂತ್ರಿಕ ತರಬೇತಿ ನೀಡಬೇಕು—ಪರದೆ ಹಿಂದೆಯಾದರೂ ಮಾನವೀಯತೆ ಉಳಿಯಬೇಕು.
ವಿದ್ಯಾರ್ಥಿಗಳಿಗೆ ಡಿಜಿಟಲ್ ಜವಾಬ್ದಾರಿಯನ್ನು ಕಲಿಸಬೇಕು—ಏಕಾಗ್ರತೆಯನ್ನು ಕಳೆದುಕೊಳ್ಳದಂತೆ.
ಪಾಠಗಳನ್ನು ತಾಂತ್ರಿಕ ಮೆ ರವಣಿಗೆಗೆ ಮಾತ್ರ ಮೀಸಲಿಟ್ಟುಬಿಡ ಬಾರದು—ಅನುಭವ, ಸಂವೇದನೆ, ಸಂವಾದ ಉಳಿಯಬೇಕು.
ಡಿಜಿಟಲೀಕರಣದಿಂದ ಶಿಕ್ಷಣದ ಹೊಲದಲ್ಲಿ ಬೆಳೆಯುತ್ತಿರುವ ಜ್ಞಾನಸಸ್ಯಗಳು ನೂತನ ಬಣ್ಣಗಳನ್ನು ತೋರಿಸುತ್ತಿವೆ. ಇವುಗಳಲ್ಲಿ ಕೆಲವು ಬಣ್ಣಗಳು ಬೆಳಕು ಹೊಳೆಯುವವು, ಕೆಲವು ನೆರಳಲ್ಲಿ ಮಸುಕಾಗುವವು. ಆದರೆ ಬೆಳಕು-ನೆರಳಿನ ಈ ನೃತ್ಯವೇ ಮಾನವ ಸಮಾಜದ ಬೆಳವಣಿಗೆ. ಶಿಕ್ಷಣ ಕ್ಷೇತ್ರದ ಡಿಜಿಟಲೀಕರಣ ಹೊಸ ಯುಗದ ವಾಗ್ದಾನವೂ ಹೌದು, ಹೊಸ ಪರೀಕ್ಷೆಯೂ ಹೌದು.ಜ್ಞಾನಕ್ಕಾಗಿ ಬಾಗಿಲು ತೆರೆದಿರುವ ಈ ಕಾಲದಲ್ಲಿ ಜವಾಬ್ದಾರಿಯೊಂದಿಗೆ ನಡೆದು, ಮಾನವೀಯತೆ ಮತ್ತು ತಂತ್ರಜ್ಞಾನವನ್ನು ಸಮತೋಲನದಲ್ಲಿ ಹಿಡಿದರೆ—ನಾಳೆಯ ವಿದ್ಯಾರ್ಥಿ ಕೇವಲ ಜ್ಞಾನಿ ಆಗುವುದಲ್ಲ; ಸಂವೇದನಾಶೀಲ, ವಿಚಾರವಂತ, ಜವಾಬ್ದಾರಿಯುತ ನಾಗರಿಕನಾಗಿ ಬೆಳೆಯುತ್ತಾನೆ.ಈ ಡಿಜಿಟಲ್ ಯುಗದ ಪಯಣ—ಇನ್ನು ಮುಂದುವರಿಯುತ್ತದೆ. ಪ್ರತಿ ಕ್ಲಿಕ್ ಒಂದು ಹೊಸ ಪ್ರಶ್ನೆ, ಪ್ರತಿ ಸ್ವೈಪ್ ಹೊಸ ದಾರಿ,
ಪ್ರತಿ ವಿದ್ಯಾರ್ಥಿ—ಭವಿಷ್ಯದ ಸಾಧ್ಯತೆಯೊಂದು. ತಂತ್ರಜ್ಞಾನ ಹೌದು, ಬೇಕು. ಆದರೆ ಅದನ್ನು ಹಿಡಿಯುವ ಕೈ ನಮ್ಮದು; ಅದರಿಂದ ಹಿಡಿಯಲ್ಪಡುವ ಮನಸ್ಸು ಅಲ್ಲ. ಈ ಜಾಣ್ಮೆಯ ಅರಿವು ಇಂದಿನ ಶಿಕ್ಷಣದ ನಿಜವಾದ ಮಾರ್ಗದೀಪ.
@ಹನಿಬಿಂದು@

ವಿವಿಧ ಮೂಲಗಳಿಂದ....

ಗುಪ್ತ ಗಾಮಿನಿ

ಗುಪ್ತಗಾಮಿನಿ 

ಮನದ ಮೂಲೆಯಲೆಲ್ಲೋ ಭೀಕರ ಪ್ರವಾಹ
ಗೀಚಿದ ಕಾದಂಬರಿಯ ಸಹಸ್ರ ಸಾಲುಗಳಂತೆ!
ಗುಪ್ತಗಾಮಿನಿಯಾಗಿ ಹರಿದು ಹೋಗುತಲಿದೆ 
ಭಾವನೆಗಳ ಕಡಲಿನ ಆಳದ ದೈತ್ಯ ಅಲೆಗಳಂತೆ 

ಅಂದವರು ಇಂದ್ಯಾರೋ ಬದುಕ ಗುಳ್ಳೆಯೊಳಗೆ 
ಮುಂದಿನ ಕ್ಷಣಗಳ ಲೆಕ್ಕವಿಟ್ಟವರಿಹರೇ ಇಲ್ಲಿ !
ಸಂದುಗೊಂದಿನ ಮುರುಕು ದಾರಿಯ ಚಲನೆಯಲಿ 
ಮೂಕವಾಗಿ ಹಾಡುತಿಹ ಗಾನ ಕೋಗಿಲೆ ಗಂಟಲಲಿ!

ರೈಲು ಬಸ್ಸು ಕಾರು ಸೈಕಲ್ ವಿಮಾನದಲ್ಲಾದರೇನು
ತಲುಪುವ ಕೊನೆಯ ಗಮ್ಯವು ಸರಿಯೇ ಇಲ್ಲದಿರಲು !
ನಾವೆಯಿದು ತುಂಬಿಹುದು ರಾಶಿ ರಾಶಿ ಕಸ ಕಡ್ಡಿಗಳನ್ನ
ಮಾನವತೆಯ ಸವಿ ಭಾವಗಳ ತುಂಬಿಕೊಳದಿರಲು!!

ಮಳೆ ಗಾಳಿ ಚಳಿ ಬಿಸಿಲು ಗುಡುಗು ಏನಿದ್ದರೇನಂತೆ
ತಲೆಯೊಳಗೆ ಒಂದಿಷ್ಟು ನವ ಕನಸುಗಳು ಬೇಕಲ್ಲವೇ?
ಶಿಲೆಯಾದರೂ  ಕೆತ್ತಿದ ಸಾವಿರ ಏಟು ತಿಂದು ಬಂದಿಹುದು
ಇಳೆಯೊಳಗಿನ ಸದ್ದು ಗದ್ದಲವಿರದ ಮನಕೆ ಬೆಲೆ ಬೇಡವೆ!
@ಹನಿಬಿಂದು@
11.12.2025


ಬದುಕು

ಬದುಕು

ಯಾಕೋ ಅರಿಯದು ಮನದ ತುಮುಲ
ಒಮ್ಮೆ ಗರಿಗೆದರಿ ಹಾರುವ ಹಂಬಲ
ಮತ್ತೊಮ್ಮೆ ರೆಕ್ಕೆ ಮುರಿದು ಬಿದ್ದ ಸಪ್ಪಳ
ಮಗದೊಮ್ಮೆ ಅತ್ತಿತ್ತಲಿಂದ ಸಹಾಯ, ಜನಬಲ

ಮೌನದಲ್ಲೇ ಜಗವ ಅರಿವ ಕಾತರ
ಮಾತಿನ ಚುಚ್ಚುವಿಕೆ ಹರಿತ ಆತುರ
ಇಂದಿಲ್ಲಿ ನಾಳೆ ಎಲ್ಲೋ ಅರಿತಿರುವಿರ
ಬದುಕಲಿಲ್ಲಿ ಹೋರಾಟ ನಿತ್ಯ ನಿರಂತರ

ಬಾನ ಬಯಲ ಸೀಮೆ ಮುಟ್ಟುವ ಬಯಕೆ
ದಾರಿ ಸವೆಸಲು ಕೂಡಾ ಸಾಗದ ದಿನಕೆ 
ಬೇಕು ಹಲವಾರು ಸಾವಿರ  ದಿನನಿತ್ಯ ಜನಕೆ 
ಸಹಿಸಲು , ಹೊಂದಾಣಿಕೆ ಕಷ್ಟ ಪರರ ಆಶಯಕೆ 

ನೀನೇನು ಸಣ್ಣ? ನಾನೆಲ್ಲಿ ಹಿರಿಯ?
ದುಡ್ಡಿದ್ದವ ದೊಡ್ಡಪ್ಪ  ಜೀವಿಸುವ  ನಿರ್ಭಯ!
ಬಡತನದ ಕೂಪದಿ ಬೆಂದ ಬದುಕು ಸಾಕು
ಮತ್ತಷ್ಟು ಮಗದೊಂದಿಷ್ಟು ಜನಕೆ ನಮ್ಮಿಂದಲೇ ಬೇಕು!!

ಕಿತ್ತುಕೊಂಡವನ ಬಗ್ಗೆ ದೇವರಿಗಿಲ್ಲ ಕೋಪ
ಕಳೆದುಕೊಂಡವನಿಗೂ ಇಲ್ಲ ನಿಜ ಕರುಣೆ ಅನುಕಂಪ
ಜೋರಾದರೆ ಬದುಕಿಯಾನು ಬುವಿಯಲ್ಲಿ , ಪಾಪದವನಲ್ಲ
ಹೊಡಿ ಬಡಿ ಕೊಲ್ಲು ಸಾಯಿಸು ಎಂದವಗೆ ಕಾಲವಿಲ್ಲಿ! 

ಪುಣ್ಯ ಪಾಪಕ್ಕೆ ಹೆದರಿ ಓಡಿ ಹೋಗಿದೆ ಎಲ್ಲೋ
ನ್ಯಾಯ ಅನ್ಯಾಯದಿಂದ ತಲೆಮರೆಸಿ ಕೂತಿದೆ ಮೂಲೆಯಲಿ ಮತ್ತೆಲ್ಲೋ
ಹಣವಿದ್ಧವನ ಬೆನ್ನಲ್ಲಿ ಜೋತು ಬಿದ್ದಿದೆ ಉದ್ಧಾರ
ಬಡವನೆಂದೂ ಪರದಾಡುವ ನೇರ ದಾರಿ ಇಂದು  ಮಿಥ್ಯ

ಸಂಕಟ ನೋವು ಬೇಸರ ಬೇನೆಗಳ ಬಾಳು ವ್ಯರ್ಥ
ಸತ್ಯ ಹೇಳಿದರೆ ಸತ್ತು ಹೋಗುವ
ಅನ್ಯಾಯ ಮಾಡಿದವ ಅನ್ನ ತಿನ್ನುವ ಕಾಲವಿದು
ಕಾಲದ ಜೊತೆ ಓಡಲು ಕಲಿತರೆ ಬದುಕುವೆ
ಮೀನು ಹಾರಿತೆಂದು ಏಡಿ ಹಾರಲು ಹೋದರೆ 
ಮುರಿದೀತು ಕೈ ಕಾಲ ಬೆರಳು ತಕ್ಷಣವೇ

ಮತ್ತೆಲ್ಲಿಯ ನಾಳೆ ಮತ್ತೆಲ್ಲಿಯ ಕನಸು
ಮತ್ತೆಲ್ಲಿಯ ಅವನು ಮತ್ತೆಲ್ಲಿಯ ಸಹಾಯ
ಮತ್ಯಾರ ಅಭಯ. ಜಯ, ಕಾತರ, ನಂಬಿಕೆ?
ಮತ್ತಾರು ನಮ್ಮವರು, ಸಹಾಯಕರು, ಬೆಂಬಲಿಗರು

ನಾವೆಲ್ಲಾ ನಿತ್ಯ ಒಂಟಿಗಳಿಲ್ಲಿ ಧರೆಯಲಿ 
ಪರಮಾತ್ಮ ಆಡಿಸುವ ಆಟಗಾರ ಅಲ್ಲಿ
ಸಾವಿಗಾಗಿ ದಿನವೊಂದು ಬರಲಿದೆ ಇಲ್ಲಿ
ಅಲ್ಲಿವರೆಗೂ ಹಿಂದೆ ನೋಡದೆ ಓಡುತ್ತಾ ಗೆಲ್ಲಿ
@ಹನಿಬಿಂದು@
09.12.2024

ಶನಿವಾರ, ಡಿಸೆಂಬರ್ 6, 2025

ಭಾವಗೀತೆ

 ಪ್ರೀತಿ

ನನ್ನ ನಿನ್ನ ನಡುವೆ ಬಂಧ
ಕಣ್ಣ ಸಂಚು ಮಾಡಿತು
ಸಣ್ಣ ಸಣ್ಣ ನೋಟವಿಂದು
ಬಣ್ಣದರ್ಥ ಕೊಟ್ಟಿತು

ನಿನ್ನೆ ಯಾರೋ ಇದ್ದವರು
ಮುನ್ನ ಒಟ್ಟು ಸೇರಲು
ಸುಣ್ಣದಂಥ ಬಿಳಿಯ ಪ್ರೀತಿ
ಮಣ್ಣ ಮೇಲೆ ಮೂಡಲು

ಭಿನ್ನ ಭಾವ ಬದಿಗೆ ಸರಿಸಿ
ತನ್ನ ನೋವ ಬೆರೆಸಿ
ಜ್ಞಾನ ಧಾರೆ ಹೆಚ್ಚಿಸುತ್ತಾ
ಹೃಣ್ಮನಗಳ ಸೇರಿಸಿ

ರನ್ನ ಮುದ್ದು ಆತ್ಮೀಯತೆ
ಪುಣ್ಯ ಕಾರ್ಯ ಮಾಡುತ
ಹೆಣ್ಣ ಜನ್ಮ ಸಾರ್ಥಕ್ಯದ
ಹೊನ್ನ ಭಾವ ಮೂಡುತ
@ಹನಿಬಿಂದು@
06.12.2025

ಅಮ್ಮ

ಅಮ್ಮ

ಆಕಾಶದ ಎತ್ತರಕ್ಕೆ ಬೆಳೆಯಬಹುದೇ ಯಾರಾದರೂ
ಅದು ನೀನೇ... ನೀನೇ..ತೋರಿಸಿರುವೆ ಖದರು...
ಮರುಗಿರಲಿ ಕೊರಗಿರಲಿ ಬೆಂದು ಬಾಡಿರಲಿ
ಒಳಗೊಳಗೇ ನೋವ ನುಂಗಿ ಮುಖದ ನಗುವಿನಲಿ

ಹಗಲು ರಾತ್ರಿ ದುಡಿದು ಗಳಿಸಿ ಮಕ್ಕಳಿಗಾಗಿ
ಕೈ ಕಾಲನು ಸವೆಸಿ ಕಠಿಣ ಪರಿಶ್ರಮಿಯಾಗಿ
ನೀನೆಂದರೆ ದೇವಿ ನೀನೆಂದರೆ ಮಾಯೆ 
ನಿನ್ನುಸಿರೇ ನಮ್ಮ ದಾರಿ ದೀಪ ಛಾಯೆ..

ನನ್ನುಸಿರಲಿ ನಿನ್ನಿಸಿರಿದೆ ನನ್ನ ಬಾಳು ನೀನೇ
ರಕ್ತವೂ... ಮಾಂಸವೂ.. ಎಲ್ಲವೂ ನಿನ್ನದೇ
ತಟ್ಟಿದ ಮೈ ಮನಗಳು ಬೆಳೆದಿವೆ ನಿನ್ನಿಂದಲೇ..
ಬೇರು ನಿನ್ನಲಿ ಇಳಿದು ಹೋಗಿದೆ ಮಗುವಿಂದಲೇ

ನೀನಿದ್ದರೆ ನನಗೆ ಬಲ ನಿನ್ನಿಂದಲೇ ನನಗೀ ಛಲ
ನೀನಿದ್ದರೆ ದೈವೀ ಕಳೆ ನಾನೇನೇ ನಿನ್ನ ಬೆಳೆ 
ಈ ಹಾಡು ನಿನಗಾಗಿ.  ಒಡೆದ ಕೈ ಕಾಲಿಗಾಗಿ 
ಕಷ್ಟದ ಬೆನ್ನತ್ತಿರುವ ನಿನ್ನೀ ನೋವಿಗಾಗಿ
@ಹನಿಬಿಂದು@
07.11.2025

ಶುಕ್ರವಾರ, ಡಿಸೆಂಬರ್ 5, 2025

ತುಳು

ಮಣೆ 
ನೆಲಟ್ಟ್ ಕುಲ್ಲು ಪಂದ್ ಪಂಡ ಬಿನ್ನಗ್ ಅತ್ತ್‌ಗೆ ಮಲ್ಲ ಮರ್ಯಾದಿ 
ಅವ್ವೇ ಬತ್ತಿನಾಯಗ್ ಕುಲ್ಲೆರೆ ಮಣೆ ಕೊರುಂಡ ಅವ್ವೆಗೆ ಪಿರಾಕ್ದ ಜನಕ್ಲೆ ಮರ್ಯಾದಿ
ಬತ್ತಿ ಕೂಡ್ಲೆ ಚಾ ತಿಂಡಿ ಅತ್ತ್ ಕೊರಿಯೆರೆ
ಒಂಜಿ ಗ್ಲಾಸ್ ನೀರ್ ಬೆಲ್ಲದ ತುಂಡು ತಿನಿಯರೆ! 
@ಹನಿಬಿಂದು@
05.12.2025

ಸೋಮವಾರ, ಡಿಸೆಂಬರ್ 1, 2025

ಚಳಿಯ ಕಚಗುಳಿ

ಜಡೆಗವನ
ಚಳಿಯ ಕಚಗುಳಿ

ಚಳಿಯೇ ನೀನೆಲ್ಲಿದ್ದೆ ನನ್ನ ಎಬ್ಬಿಸಿ ತಟ್ಟಲು
ತಟ್ಟುತ್ತಾ ಮಲಗಿಸಿದರೂ ತಾಯಿ ಚಳಿ ಬಿಡದು
ಬಿಡದೆ ಕಾಡುತಿಹೆ ನೀ ನನ್ನ ಬೇತಾಳನಂತೆ ಇಂದು 
ಇಂದಿಲ್ಲಿ ನಾಳೆ ಅದೆಲ್ಲಿಗೆ ನಿನ್ನ ಸವಾರಿ ದೊರೆಯೇ
ದೊರೆ ಮಗನೂ ಹೆದರುವನು ನಿನ್ನೀ ಆರ್ಭಟಕೆ
ಆರ್ಭಟ ಮಿಂಚು ಮಳೆ ಗುಡುಗಿಲ್ಲದೆ ನೀ ಕೊರೆವೆ
ಕೊರೆದು  ಗಡ್ಡ ಮನ ಮೈ ಕೈಯ ನಡುಗಿಸುವೆ
ನಡುಗುವ ಕೈಗಳಿಂದ ನಾನೆಂದೂ ಬರೆಯಲಾರೆ
ಬರೆಯಬಿಡು ಚಳಿಯೇ ನೀ ದೂರ ಓಡಿಬಿಡು
ಓಡುತ್ತಾ ಹೋದೇಯ ಮತ್ತೆ!  ಸ್ವಲ್ಪ ಇಲ್ಲೇ ಇರು ಬಿಸಿಲ ಧಗೆ ತಾಳಲಾರೆ
ತಾಳು ತಾಳು ಮಳೆಯೂ ಬೇಕು, ನೀನೂ ಬೇಕು
ಬೇಕಾಗಿರುವುದು ಏಕೆಂದರೆ ಗಿಡ ಮರಗಳ ಹೂವು ಅರಳಿಸಿ ಹಣ್ಣು ತರಿಸಲು!!!
@ಹನಿಬಿಂದು@
01.12.2025

ಭಾನುವಾರ, ನವೆಂಬರ್ 30, 2025

ಡಿಸೆಂಬರ್ 22: ರಾಷ್ಟ್ರೀಯ ಗಣಿತ ದಿನ

ಜಗತ್ತಿನ ಹಬ್ಬ

ಒಮ್ಮೆ ಒಂದು ಶಾಲೆಯಲ್ಲಿ ಮಕ್ಕಳು ಆಟವಾಡುತ್ತಿದ್ದರು. ಹಠಾತ್ತಾಗಿ ಶಿಕ್ಷಕಿ ಎಲ್ಲರನ್ನು ಕರೆದರು.
“ಮಕ್ಕಳೇ, ನಾಳೆ ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನ ಆಚರಣೆ ಇದೆ,” ಎಂದರು.

ಎಲ್ಲ ಮಕ್ಕಳು ಆಶ್ಚರ್ಯದಿಂದ ಒಬ್ಬರನ್ನೊಬ್ಬರು ನೋಡಿಕೊಂಡರು.
“ಗಣಿತ ದಿನವೂ ಇದೆಯಾ, ಮ್ಯಾಡಂ?” ಎಂದು ರವಿ ಕೇಳಿದ.
“ಹೌದು ರವಿ,” ಅಂದರವರು ನಗುತ್ತಾ. “ಇದು ಸಾಮಾನ್ಯ ದಿನ ಅಲ್ಲ. ಭಾರತೀಯ ಗಣಿತ ಲೋಕಕ್ಕೆ ಕೀರ್ತಿ ತಂದುಕೊಟ್ಟ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ.”

ಎಲ್ಲರೂ ಕುತೂಹಲದಿಂದ ಅವರ ಮಾತನ್ನು ಕೇಳತೊಡಗಿದರು.

ಗಣಿತ ಎಂದರೆ ಏನು?

ಮ್ಯಾಡಂ ಹೇಳಿದರು:
“ನಿಮ್ಮಾರಿಗಂತೂ ಗಣಿತ ಅಂದರೆ ಪಾಠಪುಸ್ತಕ, ಲೆಕ್ಕ, ಪರೀಕ್ಷೆ… ಆದರೆ ಗಣಿತ ಪ್ರಕೃತಿಯ ಭಾಷೆ.
ಹೂವುಗಳು ಹೇಗೆ ಅರಳುತ್ತವೋ, ನಕ್ಷತ್ರಗಳು ಹೇಗೆ ಚಲಿಸುತ್ತವೋ—ಅದರ ಎಲ್ಲಲ್ಲಿ ಗಣಿತ ಅಡಗಿದೆ.”

ಮಕ್ಕಳು ಕಿಟಕಿಯ ಹೊರಗೆ ಹೂವುಗಳ ಮೇಲೆ ತಿರುಗುತ್ತಿದ್ದ ಚಿಟ್ಟೆಗಳನ್ನು ನೋಡಿ, “ಇದರಲ್ಲಿ ಗಣಿತ ಇದೆಯಾ?” ಎಂದು ಆಸಕ್ತಿಯಿಂದ ಕೇಳಿದರು.
“ಹೌದು,” ಮ್ಯಾಡಂ ಹೇಳಿದರು, “ಚಿಟ್ಟೆಗಳ ರೆಕ್ಕೆಗಳ ವಿನ್ಯಾಸಕ್ಕೂ ಗಣಿತದ ಒಪ್ಪಂದವಿದೆ!”

ಹಳೆಯ ಕಾಲದ ಗಣಿತಜ್ಞರು

ಶಿಕ್ಷಕಿ ಕಥೆಯಂತೆ ಹೇಳತೊಡಗಿದರು:

“ಬಹಳ ವರ್ಷಗಳ ಹಿಂದೆಯೇ ಭಾರತದಲ್ಲಿ ಆರ್ಯಭಟ, ಭಾಸ್ಕರಾಚಾರ್ಯ, ಮಹಾವೀರಾಂತಹ ಮಹಾನ ಗಣಿತಜ್ಞರು ಬದುಕಿದ್ದರು.
ಆರ್ಯಭಟರು ಪೈ ಎಂಬ ಸಂಖ್ಯೆಯ ಮೌಲ್ಯವನ್ನು ತಿಳಿಸಿದರು. ಭಾಸ್ಕರಾಚಾರ್ಯರ ‘ಲೀಲಾವತಿ’ ಎಂಬ ಪುಸ್ತಕದಲ್ಲಿ ತುಂಬಾ ಸುಲಭವಾಗಿ ಗಣಿತದ ಪ್ರಶ್ನೆಗಳು ಇವೆ.
ಅವರು ಮಾಡಿದ ಕೆಲಸಗಳು ಇಂದಿಗೂ ನಾವು ಬಳಸುವ ವಿಜ್ಞಾನಕ್ಕೆ ಬೇಸು.”

ಮಕ್ಕಳ ಕಣ್ಣುಗಳು ಇನ್ನಷ್ಟು ಚುರುಕಾಗಿದವು.
“ಏನು ಮ್ಯಾಡಂ! ಇಷ್ಟು ವರ್ಷಗಳ ಹಿಂದೆ ಅವರು ಇದನ್ನೆಲ್ಲಾ ಕಂಡುಹಿಡಿದಿದ್ರಾ?” ಎಂದು ಆಶ್ಚರ್ಯಪಟ್ಟರು.

ರಾಮಾನುಜನ್ – ಸಂಖ್ಯೆಗಳ ಮಂತ್ರಿಕ

ಮ್ಯಾಡಂ ಮುಂದುವರಿಸಿದರು:

“ಇವೆಲ್ಲರಿಗೂ ಮೇಲೆ, ಕೇವಲ 32 ವರ್ಷ ಬದುಕಿದರೂ ಗಣಿತ ಲೋಕದಲ್ಲಿ ಅಚ್ಚರಿ ಮೂಡಿಸಿದ ಒಬ್ಬ ವಿಸ್ಮಯ ಪ್ರತಿಭೆ ಇದ್ದ.
ಅವರ ಹೆಸರು–ಶ್ರೀನಿವಾಸ ರಾಮಾನುಜನ್.”

ಮಕ್ಕಳು ಆ ಹೆಸರನ್ನು ಮರುಮರು ಉಚ್ಛರಿಸಿದರು.

“ರಾಮಾನುಜನ್ ಬಡ ಕುಟುಂಬದವರು. ಆದರೆ ಅವರಿಗೆ ಸಂಖ್ಯೆಗಳು ಸ್ನೇಹಿತರಂತೆ.
ಬೀದಿ ದೀಪದ ಬೆಳಕಿನಲ್ಲೂ ಕುಳಿತು ಅವರು ಪ್ರಶ್ನೆಗಳನ್ನೇ ಪರಿಹರಿಸುತ್ತಿದ್ದರು.
ಗಣಿತ ಪುಸ್ತಕಗಳು ಕಡಿಮೆ ಇದ್ದರೂ ತಮ್ಮದೇ ಯೋಚನೆಯಿಂದ ಸಾವಿರಾರು ಹೊಸ ಸೂತ್ರಗಳನ್ನು ರಚಿಸಿದರು.”

ರವಿ ಕುತೂಹಲದಿಂದ ಕೇಳಿದ:
“ಮ್ಯಾಡಂ, 1729 ಅನ್ನೋ ಸಂಖ್ಯೆ ವಿಶೇಷ ಅಂತ ಹೇಳ್ತಾರೆ. ಯಾಕೆ?”

ಮ್ಯಾಡಂ ನಗು ತಡೆದುಕೊಳ್ಳಲಾಗದೆ ಹೇಳಿದರು:
“ಹಾರ್ಡಿ ಎಂಬ ಗಣಿತಜ್ಞರು ಆಸ್ಪತ್ರೆಯಲ್ಲಿ ತುಂಬಾ ಅಸ್ವಸ್ಥರಾಗಿದ್ದ ರಾಮಾನುಜನ್ ಅವರನ್ನು ಭೇಟಿ ಮಾಡಲು ಬಂದರು.
‘ನಾನು ಬಂದ ಟ್ಯಾಕ್ಸಿಯ ಸಂಖ್ಯೆ 1729; ಅದರಲ್ಲಿ ಯಾವುದೇ ವಿಶೇಷತೆ ಇಲ್ಲ’ ಎಂದು ಹೇಳಿದರು.
ಅಷ್ಟರಲ್ಲಿ ರಾಮಾನುಜನ್ ತಕ್ಷಣ ಉತ್ತರಿಸಿದರು:
‘ಅದು ವಿಶೇಷ ಸಂಖ್ಯೆ ಸಾರ್! ಅದು ಎರಡು ವಿಭಿನ್ನ ರೀತಿಯಲ್ಲಿ ಎರಡು ಘನಗಳ ಮೊತ್ತವಾಗಿ ಬರಬಹುದಾದ ಅತಿ ಚಿಕ್ಕ ಸಂಖ್ಯೆ!’
ಅವರು ಅಸ್ವಸ್ಥರಾಗಿದ್ದರೂ ಸಂಖ್ಯೆಗಳ್ಳಿಗೆ ಇಷ್ಟು ಸ್ಪಷ್ಟವಾಗಿ ಯೋಚಿಸಿದ್ದರು.”

ಮಕ್ಕಳು ಆಶ್ಚರ್ಯದಿಂದ ಬಾಯ್ಬಿಟ್ಟೇ ಕುಳಿತುಬಿಟ್ಟರು.

 

ಗಣಿತ ಎಲ್ಲೆಲ್ಲಿ ಇದೆ? 

 ಮೇಡಂ ಹೇಳಿದರು:

“ಮಕ್ಕಳೇ, ಗಣಿತ ಕೇವಲ ಲೆಕ್ಕವಲ್ಲ.
ನಿಮ್ಮ ಆಟದ ಚೆಂಡಿನ ಗೋಳಾಕೃತಿ,
ನಿನ್ನ ಮನೆಗೆ ಹೋಗುವ ರಸ್ತೆಯ ನೇರತೆ,
ನೀವು ದಿನವೂ ತಿನ್ನುವ ಹಣ್ಣಿನ ಬೀಜಗಳ ವಿನ್ಯಾಸ—ಎಲ್ಲವೂ ಗಣಿತವನ್ನು ಮಾತನಾಡುತ್ತವೆ.

ಮೊಬೈಲ್, ಕಂಪ್ಯೂಟರ್, ಜಿಪಿಎಸ್… ಇವೆಲ್ಲವೂ ಗಣಿತದಿಂದಲೇ ಸಾಧ್ಯ.”

ಈ ದಿನದ ಉದ್ದೇಶ

“ನಮ್ಮ ದೇಶದಲ್ಲಿ 2012ರಿಂದ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ,” ಮ್ಯಾಡಂ ಹೇಳಿದರು.

“ಈ ದಿನದ ಉದ್ದೇಶ:
– ಗಣಿತದ ಭಯವನ್ನು ಕಡಿಮೆ ಮಾಡುವುದು
– ಗಣಿತವನ್ನು ಆನಂದದಿಂದ ಕಲಿಸುವುದು
– ರಾಮಾನುಜನ್ ಅವರ ಸಾಧನೆಯನ್ನು ನೆನಪಿಸುವುದು
– ಹೊಸ ಪ್ರತಿಭೆಗಳನ್ನು ಬೆಳೆಸುವುದು”

ಮಕ್ಕಳು ತಕ್ಷಣ ಚಪ್ಪಾಳೆ ಹೊಡೆದು, “ನಾವು ಕೂಡಾ ಗಣಿತವನ್ನು ಹೊಸದಾಗಿ ಕಲ್ತೀನಿ ಮ್ಯಾಡಂ!” ಎಂದು ಹೇಳಿದರು.

ಶಿಕ್ಷಕಿ ಹೇಳಿದ ಕಥೆ ಎಲ್ಲ ಮಕ್ಕಳ ಮನಸ್ಸಿಗೂ ತಾಕಿತು.
ಗಣಿತ ಅಂದರೆ ಕಷ್ಟವಲ್ಲ, ಕುತೂಹಲ.
ಗಣಿತ ಅಂದರೆ ಒಣ ಅಂಕೆಗಳು ಅಲ್ಲ; ಪ್ರಕೃತಿ, ಕಲ್ಪನೆ, ಮತ್ತು ಸಮಸ್ಯೆ ಪರಿಹರಿಸುವ ಕಲೆ.

ಡಿಸೆಂಬರ್ 22 ಅವರುಗಳಿಗೆ ಕೇವಲ ಒಂದು ದಿನವಲ್ಲ;
ಸಂಖ್ಯೆಗಳ ಲೋಕವನ್ನು ಹೊಸ ಕಣ್ಣಿನಿಂದ ನೋಡಲು ಶುಭಾರಂಭವಾಗಿದೆ.


ಶುಕ್ರವಾರ, ನವೆಂಬರ್ 28, 2025

ಇಂದು

ಇಂದು

ಒಂದು ಎರಡು ಸಾಲದು
ಬಂದು ಬರಡು ಆಗದು
ಸಿಂಧುವಿನ ಚಿಲುಮೆಯಿದು
ಮುಂದೆ ದಾರಿ ತಿಳಿಯದು

ನಂದು ನಿಂದು ಬಗೆಯದು
ಸಂದು ಗೊಂದು ತುಂಬದು
ಕಂದು ಬಣ್ಣ ಕಾಫಿಯದ್ದು
ಮಿಂದು ಆರೋಗ್ಯವೆಂದೂ ಕೆಡದು

ಗೊಂದು ಅಂಟಿ ಬಿಡುವುದು
ನೊಂದು ಸಾವು ಸಲ್ಲದು
ತಂದು ಸುರಿದು ಮುಗಿಯದು
ದುಂದು ವೆಚ್ಚ ಮಾಡಬಾರದು

ಬಂದು ನೋಡು ತಿಳಿವುದು
ಬಿಂದು ಇಲ್ಲದೆ ಏನಿಹುದು
ಮಂದ ಬುದ್ಧಿ ಇರಬಾರದು
ಅಂದು ಬದುಕು ನಿರಾಳವಿಹುದು

ಅಂದುಕೊಂಡೆ ಬಾಳುತಿಹುದು
ಇಂದು ಜನರ ಜ್ಞಾನ ಬೆಳೆದು
ಹಿಂದು ಮುಂದು ಗಮನಿಪುದು
ಎಂದೂ ಬುದ್ದಿ ಬಳಸುವುದು
@ಹನಿಬಿಂದು@
29.11.2025



ಬುಧವಾರ, ನವೆಂಬರ್ 26, 2025

ಭಾವಗೀತೆ

ಭಾವಗೀತೆ

ಕೃಷಿಯನು ಮೆರೆಸೋಣ

ಕತ್ತಿಯ ಹಿಡಿದು ರುಮಾಲು ಸುತ್ತಿ
ಗದ್ದೆಗೆ ಹೋಗೋಣ ನಾವು...
ಗದ್ದೆಗೆ ಹೋಗೋಣ...
ಹಾಡನು ಹಾಡುತ ಹಸಿರಿಗೆ ನಮಿಸುತ
ಪೈರನು ಕೊಯ್ಯೋಣ..ನಾವು
ಕಟಾವು ಮಾಡೋಣ//ಪ//

ಆಹಾರ ಬೆಳೆಸಿ ಆರೋಗ್ಯ ಉಳಿಸುವ
ಕಾರ್ಯಕೆ ಸಾಗೋಣ ಕೃಷಿಯ..
ಕಾರ್ಯಕೆ ಸಾಗೋಣ
ಅಣ್ಣ ಅಕ್ಕ ಬನ್ನಿರಿ ಎಲ್ಲರೂ
ಕೃಷಿಯನು ಉಳಿಸೋಣ
ರೈತನೆ ದೇಶದ ಬೆನ್ನೆಲುಬೆಂದು
ಸಹಾಯ ಮಾಡೋಣ... ರೈತಗೆ
ಸಹಾಯ ಮಾಡೋಣ...//೧//

ಪೈರನು ಬಡಿಯುತ ಭತ್ತವು ಬೀಳಲು
ರಾಶಿಯ ಮಾಡೋಣ ನಾವು...
ರಾಶಿಯ ಮಾಡೋಣ
ಕೈಗಳು ಸೇರಲು ಕೆಲಸವು ಹಗುರ
ಒಂದಾಗಿ ದುಡಿಯೋಣ
ನಾಡಿಗೆ ಅನ್ನವನೀಯುವ ಕಾರ್ಯವ
ಸರ್ವರೂ ಮಾಡೋಣ..ನಾವೆಲ್ಲಾ
ಸರ್ವರೂ ಮಾಡೋಣ..//೨//

ಜೈ ಜೈ ಘೋಷವ ಹಾಡುತ ನಾವು
ಒಟ್ಟಾಗಿ ಬಾಳೋಣ ನಾವು...
ಒಟ್ಟಾಗಿ ಬಾಳೋಣ
ಭಾರತ ಮಾತೆಯ ಮಕ್ಕಳು ಎನುವ
ಭಾವವ ಹೊಂದೋಣ
ಜಾತಿ ಮತ್ಸರ ದೂರವೇ ಇರಿಸಿ
ಕೃಷಿಯನು ಮೆರೆಸೋಣ...ನಾಡಿನ
ರೈತಗೆ ನಮಿಸೋಣ..//೩//
@ಹನಿಬಿಂದು@
03.11.2025

ಮಂಗಳವಾರ, ನವೆಂಬರ್ 18, 2025

ಶಿಶುಗೀತೆ

ಶಿಶು ಗೀತೆ

ಬಾರೋ ಗೆಳೆಯ

ಬಾರೋ ಗೆಳೆಯ ಹೇಳುವೆ ಕಥೆಯ
ಪರಿಸರ ಹಸಿರಾಗಿ ಇದೆಯೇ
ತಾರೋ ಎಲೆಯ ನೀಡುವೆ ಊಟವ
ಬಾಳೆಯ ಎಲೆಯಲಿ ಸರಿಯೇ

ಹಸಿರನು ಉಳಿಸಲು ಗಿಡಮರ ಬೆಳೆಸಿ
ನೀರನು ಹರಿಸೋಣ
ಬೇಸರ ಕಳೆಯಲು ಮರಗಳ ಕೆಳಗೆ
ನಗುತಲಿ ಆಡೋಣ

ತಿಂಡಿಯ ತಂದು ನೀರನು ಕುಡಿದು
ಲಾಗವ ಹಾಕೋಣ
ಮಂಗನ ಹಾಗೆ ಕುಣಿಯುತ ನಾವು
ಜೋಕಾಲಿ ತೂಗೋಣ
@ಹನಿಬಿಂದು@
18.11.2025

ಬುಧವಾರ, ನವೆಂಬರ್ 12, 2025

ದಿನಾಚರಣೆಗಳು

ದಿನ ದಿನದ ದಿನಾಚರಣೆಗಳ ಬಗ್ಗೆ ತಿಳಿಸುವ ಪ್ರಯತ್ನ

ರುಬಾಯಿ

ರುಬಾಯಿ 
11 ಅಚ್ಚರ
ನಲಿಕೆ ತೆಲಿಕೆ ಮಾತ ದೆತೊಂದು
ನಮಕ್ ಬದ್‌ಕ್ ಜೊತೆಟ್ ಕೂಡ್ದು
ನಂಜಿ ತೆಲಿಕೆ ಕೋಪ –ತಾಪ ದಾಯೆ
ಒಟ್ಟು ಸೇರ್ದ್ ಬದ್ಕ್‌ಗ ಒಂಜಾವೊಂದು 
@ಹನಿಬಿಂದು@
12.11.2025

ಸೋಮವಾರ, ನವೆಂಬರ್ 3, 2025

ಗಝಲ್

ಗಝಲ್

ದತ್ತ ಪದ : ಹೊಸತನ (ಗೈರ್ ಮುರುದ್ಧಫ್ ಗಝಲ್)

ಹೊಸತನ ಬಂದಿದೆ  ಹುರುಪನು ತಂದಿದೆ
ಎಲ್ಲೆಡೆ  ಹಸಿರಿನ  ಸಿಹಿ ನಗುವನು ಚೆಲ್ಲಿದೆ..

ಬಳುಕುತ ಕುಲುಕುತ ತವರನು ನೆನೆಯುತ
ಸರ್ವರ ಜೊತೆಗೂಡಿ ಜತೆಯಲಿ ಆಟವನು ಆಡಿದೆ

ಬೇಡದ ಬೇಕಾದ ಎಲ್ಲವ ತಂದಿತ್ತ ಮಾನವನು
ತಾನೇ ಬದುಕುವ ಮಣ್ಣಿಗೆ ಕಸವನು ಸುರಿದಿದೆ

ಬರುತಿದೆ ಬೇಸರದ ಉಪ್ಪು ನೀರದು ಕಣ್ಣಲ್ಲಿ
ನಮ್ಮ ಮನದೊಳಗೆ ಕಿಡಿ ನೋವನು ಕುಣಿಸಿದೆ

ಬಸಿದ ಭಾವಗಳು ತೆರೆಯುಕ್ಕಿ ಹರಿಯುತಲಿ 
ಮಸಿಯ ಹಾಗಿನ ತನ್ನ ತನುವನು ಹಿಂಡಿದೆ

ಪ್ರೀತಿಯ ನೀತಿಯ ಕೀರ್ತಿಯ ಸ್ಪೂರ್ತಿಯ ಮಾತೆಲ್ಲಿ
ಹನಿ ಹನಿಯಾಗಿ ಸುರಿದೆಲೆ ಎಲೆಯನು ತೋಯಿಸಿದೆ 
@ಹನಿಬಿಂದು@
03.11.2025

ಗುರುವಾರ, ಅಕ್ಟೋಬರ್ 30, 2025

ಸುಗಿಪು

ಲಚ್ಚಿಮಿಡ ನಟ್ಟೊನುಗ

ಅಪ್ಪೆ ಲಚಿಮಿ ಪಣವು ಕೊರ್ದು
ಕಾಪೊಡಿತ್ತೆ ಈರೆಯೇ
ಕೆಪ್ಪೆ ಯಾನ್ ಬೂಮಿ ಬತ್ತ್
ಶಾಪೊ ನಮಕ್ ಬೊರ್ಚಿಯೆ//

ಸೀಕ್ ಸಂಕಡ ಕೊರಂದೆ ಈರ್
ಕಡಪ ದೇಸೊಗು ಪಾಡ್‌ಲೆ
ದೇಕಿ ಇಜ್ಜಿ ನಮಡ ಮೂಲು
ಇರೆ ಬುಡ್ಪಿ ಬಾಲೆಲತ್ತ್‌ಯೆ

ಅಡ್ಡ ಬೂರ್ದು ಕೇನೊಂದುಲ್ಲ
ಹೆಡ್ಡೆರೆನ್ ಸುದಾರ್ಪೊಡು
ಎಡ್ಡೆ ಪಾತೆರ ಬಾಯಿಡ್ ಬರಡ್
ರಡ್ಡ್ ದಿನೊತ ಬಾಲ್ವೆಡ್

ಸಾರ ಸಾರ ಬಯಕೆಲಿಜ್ಜಿ
ಅಪ್ಪೆ ಇರೆನ್ ಸುಗಿಪೊಡು
ಬಾರ ತುಂಬೆರೆ ಸಗ್‌ತಿ ಇಜ್ಜಿ
ತಪ್ಪು ಇತ್ಂಡ ಮಾನ್ಯೊಡು

ಮೋಸ ಒ೦ಚನೆ ನಮಡ ಇಜ್ಜಿ
ನಂಜಿ ಮಚ್ವರ ನಂಕ್ ಬೊರ್ಚಿ
ಮಾತ ಇರೆನ ಕುಸಿತ ಲೀಲೆ
ಪೂರ ಕಷ್ಟ ದೂರ ದೀಲೆ//
@ಹನಿಬಿಂದು@
31.10.2025



ಚುಟುಕು

ಚುಟುಕು
ಅವನು ಅವನಿಗಾಗಿ ಬಂದಿದ್ದ
ಅವಳು ಅವನಿಗಾಗಿ ಕಾದಿದ್ದಳು
ಅವನಿಗೆ ಹಗಲು ರಾತ್ರಿ ಅವನಿಂದಲೇ..
ಅವನಿಗೆ ಅವನು ಬೇಕಲ್ಲವೇ?
@ಹನಿಬಿಂದು@

tanka

ಗುರುವಾರ-ಟಂಕಾ.

ಬೆರಿ ಪಾಡಡ
ದೂರ ಪೋವಡ ನನ
ಬೆರಿಸಾಯಾಲ
ಎಡ್ಡೆಡಿಪ್ಪುನ ಧರ್ಮ
ದೂರಾಂಡ ನಮ್ಮ ಕರ್ಮ
@ ಹನಿಬಿಂದು@
30–10–2025

ಗುರುವಾರ, ಅಕ್ಟೋಬರ್ 23, 2025

ಟಂಕಾ

ಟಂಕಾ 

ಅಲೆನ್ ತೂಯೆ
ಕೈತಲ್ ಪೋಯೆ ಕೂಡ್ಲೆ
ರಡ್ಡ್ ನೆರ್ಯಲ್
ಪೆಟ್ಟ್‌ಲಾ ಪಾಡುವಲ್
ಬಲಿತ್ ಪಿರ ಬತ್ತೆ 
@ಹನಿಬಿಂದು@
23.10.2025

ನಮ್ಮ ಬಾಸೆ

ನಮ ಕನ್ನಡ ಬಾಸೆಗ್ಲಾ ದಾಯೆ ಜಾಗೆ ಕೊರೊಡು?

ತುಲುವೆರಾಯಿನ ನಮ ತುಳುನಾಡ್ ದ ಉದಯ ಆಯಿನ ಪರ್ಬ ಮಲ್ತ್ಂಡ ಯಾವಂದ? ಕನ್ನಡೊದ ರಾಜ್ಯೋತ್ಸವೊದ ಉಚ್ಚಯ ನಮ ದಾಯೆ ಮಲ್ಪೊಡು ಪನ್ಪಿನ ಪ್ರಶ್ನೆ ನಮಕ್ ಮಾತೆರೆಗ್ಲಾ ಬರ್ಪಿನವು ಸಾಜ. ತುಳುನಾಡ್‌ಡ್ ಇಪ್ಪುನ ನಮ ಪೂರ ತುಳು ಅಪ್ಪೆನ ಮಟ್ಟೆಲ್ದ ಜೋಕುಲು ಸರಿ. ಆಂಡ ನಮ್ಮ ತುಳು ಅಪ್ಪೆ ಉಂತುದಿನಿ ನಮ್ಮ ಕರ್ನಾಟಕ ರಾಜ್ಯೊಡು ಆತೆ?

" ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ" ಪಂದ್ ಕುವೆಂಪು ಅಪ್ಪೆ ಮಗಲೆನ್ ಪುಗಾರಿ ಲೆಕ್ಕ, ಕನ್ನಡ ಅಪ್ಪೆನ ಒಂಜಿ ಮಗಲ್ ಅತ್ತ್‌ಂಡಲ ಸಗೆ ಸಂಗಡಿ ಲೆಕ್ಕ ನಮ್ಮ ತುಳು ಅಪ್ಪೆ. ಅಂಚ ಇಪ್ಪುನಗ ತುಳುಕ್ಕುಲ್ಲಾ ಕನ್ನಡದ ಲೆಕ್ಕೊನೆ ಸಾರ ಸಾರ ಒರ್ಸೊದ ಪಿರಪತ್ ಉಂಡುಗೆ. ಇಲ್ಲಡ್ ನಮ ಅಪ್ಪೆ ಬಾಸೆ ತುಳುನು ಅಮ್ಮಡ ಕಲ್ತ. ಆಂಡಲ ನಮ ಸಾಲೆಗ್ ಪೋದು ನಮ್ಮ ಅಲೋಚನೆಲೆನ್ ಬರೆಯರೆ ಬೊಕ್ಕ ಬೇತೆಕ್ಲೆನ ಯೋಚನೆಲೆನ್, ನಂಬೊಲಿಗೆನ್ ಓದರೆ ಸುರುಟ್ಟು ಕಲ್ದಿನಿ ಕನ್ನಡ ಬಾಸೆಡ್. ಅಂಚ ಇಪ್ಪುನಗ ನಮ ತುಳುನಾಡ್‌ಡ್ ಪುಟ್ಟುದು ಬುಲೆಯಿನಕುಲೇ ಆಂಡಲಾ ಈ ಕರುನಾಡ್‌ಗ್ ಸೇರ್ದಿನ ಕಾರನೊಡು ನಮ ಕನ್ನಡಮ್ಮನ ನೀರ್‌ಲಾ ಪರೊಂದು ಉಲ್ಲ. ಅಂಚ ಆನಗ ನಮ್ಮ ರಗುತೊಡುಲಾ ಕನ್ನಡದ ಕಮ್ಮೆನೆ ತುಲುಡ್ದು ಬೊಕ್ಕ ಕಂಡಿತ ಬರ್ಪುಂಡೆ. ಅಂಚಾದ್ ನಮ ಪೂರ ಒಟ್ಟು ಸೇರ್ದ್ ಕನ್ನಡ ರಾಜ್ಯೊತ್ಸವೊನ್ಲಾ ಆಚರ್ನೆ ಮಲ್ಪುನವು ನಮ್ಮ ದರ್ಮ ಆತೇ?

ಪ್ರತಿ ಇಂಗ್ಲಿಸ್ ಒರ್ಸೊದ ನವೆಂಬರ್ ತಿಂಗೊಲ್ದ ಸುರುತ್ತ ದಿನತ್ತಾನಿ ಇಡೀ ಕರುನಾಡು ಅತ್‌ಂಡ ಕರ್ನಾಟಕ ರಾಜ್ಯೊದ ಜನಕ್ಕುಲಾಯಿನ ನಮ ಕನ್ನಡ ರಾಜ್ಯೊ ಆಯಿನ ಕುಸಿಕ್ ಅವೆನ್ ಪರ್ಬೊದ ಲೆಕ್ಕ ಆಚರ್ನೆ ಮಲ್ಪುವ. ಕನ್ನಡ ಬಾಸೆ, ಪಿರಾಕ್ ದ ಕಟ್ಟ್‌ಲು, ಆಚರ್ನೆಲು ಪೂರ ಒರಿಯರೆ ಬೋಡಾದ್, ನಮ್ಮ ಜೋಕುಲು ಅವೆನ್ ತೂದು ನನ ಅಕುಲ್ಲಾ ಅವೆನ್ ದುಂಬುಗು ನಡಪಾವೊಂದು ಪೋಯರೆ ಆವು ಬೋಡು. ಪರ ಊರುಗು ಪೋಯಿನಲ್ಪ ತುಳು, ಕನ್ನಡದಕ್ಲು ಒಟ್ಟಾದ್ ನಮ ಕರ್ನಾಟಕದಕುಲು ಪನ್ಪಿನ ಕುಸಿಟ್ಟೆ ದಿನ ದೆಪ್ಪುವೆರ್.ಗಟ್ಟದ ಮಿತ್ತ್ ಏರಾಂಡಲಾ ನಮ ಪೋಂಡ ಆತ್‌ಂಡ ಅಲ್ಪದಕುಲು ಇಡೆ ಬತ್ ಬ್ಯಾರ ಮಲ್ಪೊಡಾಂಡ ನಮಕ್ ಅಕ್ಲೆಡ ಪಾತೆರ್ಯರೆ ಸಾಯಗ್ ಬರ್‌ಪಿನಿ ಕನ್ನಡೊನೆ ಆತೆ?

ಕನ್ನಡ ನಾಡ್ ಪಂದ್ ಪಟ್ಟ್‌ನಗ ತುಳುತ ನಮ್ಮ ಜಾಗೆನ್ಲಾ ಹಿರಿಯಕ್ಲು ಕರ್ನಾಟಕೊದೊಟ್ಟಿಗೆ ಪಾಡಿಯೆರ್. ಅಕುಲು ಮಿನಿ ನಮನ್ ಕೇರಲೊದ ಒಟ್ಟುಗು ಪಾಡ್ದುಂಡ ನಮ ಮಾತ ಇನಿ ಮಲಿಯಾಲಿ ಕಲ್ಪೊಡಿತ್ಂಡ್. ಅಂಚಾದ್ ಪರ ರಾಜ್ಯೊಗು ಪೋಯಿನಪಗ ನಮ ಕರ್ನಾಟಕಡ್ ಪುಟ್ಟಿ ಬಲತಿನ ಜೋಕುಲು ಪನ್ಪ. ಪರ ದೇಸೊಗು ಪೋಯಿನಪಗ ನಮ ಇಂಡಿಯಾದಕ್ಲು ಪಂದ್ ಪನ್ಪ. ಅಡೆಗ್ ನಮಕ್ ಮೂಜಿ ಅಪ್ಪೆಡಿಕುಲು. ಪೆದಿ ಅಪ್ಪೆಲಾ ಸೇರ್ಂಡ ನಾಲ್ ಜನ. ಅಜ್ಜಿನ್ಲಾ ಪತ್ಂಡ ಐನ್ ಜನ. ಭಾರತ ನಮ್ಮ ಅಜ್ಜಿ ಆಂಡ ಕನ್ನಡ ನಮ್ಮ ಮಲ್ಲಮ್ಮ, ತುಲುವಲ್ಪೆ ನಮ್ಮಪ್ಪೆ. ನೇಲ್ಯಪ್ಪೆನ್ಲಾ ನಮ ಓಲ್ಲ ಬುಡ್ದು ಕೊರ್ಪುಜ ಅತೆ? ಆರ್ಲಾ ನಮ್ಮಾರೆ... ನಮಲಾ ಅರೆನ ಜೋಕುಲೆ..ಅಂಚಾದ್ ನಮ ರಾಜ್ಯೊತ್ಸವೊದ ಆಚರ್ನೆಗ್ಲಾ
ಒಟ್ಟು ಸೇರೊಂದು ಗಾಂಡ್ ಗೌಜಿಡ್ ಮಲ್ಪೊಡು.

ನಂದಲಿಕೆದ ಕವಿ ಪಿರಾಕ್‌ದ ಲಕ್ಶ್ಮೀಸೆರ್ಲಾ ತುಲುನಾಡ್ದಾರೆ ಆಂಡಲಾ ಆರ್ ಬರೆಯಿನ ಸಾಯಿತ್ಯೊಲು ಪೂರಾ ಕನ್ನಡೊಡು ಉಂಡುಗೆ. ತುಳುನಾಡ್‌ದ ನಮ್ಮ ಕಲಾವಿದೆರ್‌ಲಾ, ಮಸ್ತ್ ಜನೊಕ್ಲೆಗ್ ನಮ ಮುಟ್ಟೊಡು ಪನ್ಪಿನ ಕಾರನೊಗು ಕನ್ನಡ, ತೆಲುಗು, ತಮಿಲುದಂಚಿ ಮೋನೆ ಪಾಡೊಂದು ಉಲ್ಲೆರ್. ಬೇಲೆಗಾದ್ ಪರ ಊರುಗು ಪೋದು ಬದುಕುನ ನಮ್ಮ ತುಳುವೆರ್ ಅಪ್ಪೆ ಬಾಸೆನ್ ಮರತ್ ಆ ಊರುದ ಬಾಸೆಲೆನೆ ಅಕ್ಲೆನ ಜೋಕುಲೆಗ್ ಕಲ್ಪಾವೊಂದು ಉಲ್ಲೆರ್.

ಆವು ಏತೋ ಜನಕ್ ತುಳು ಪಾತೆರುನಿ ಪಂಡ ಯಾನ್ ಎಲ್ಯ ಆಪೆ ಪನ್ಪಿನ ಬೇಜಾರ್ ಉಂಡು. ಅಂಚ ಅಕುಲು ಅಕ್ಲೆನ ಜೋಕ್ಲೆಡ ಕನ್ನಡೊಡೆ ಪಾತೆರುವೆರ್. ಅಡೆಗ್ ಒಂಜಿ ಜನಾಂಗೊದ ತುಳು ದುಂಬು ಪೋವಂದೆ ಬಾಸೆ ಅಕ್ಲೆನ ಕುಟುಮೊಡು ಅಲ್ಪೊನೆ ಸೈತ್ ಪೋಪುಂಡು. ಅಂಚ ಆಯರೆ ಅವ್‌ಕಾಸ ಕೊರಂದೆ ನಮ್ಮ ಬಾಸೆಲೆನ್ ನಮ ಗಳಸೊಂದು, ಒರಿಪವೊಂದು ಪೋಪಿನ ಮಾಮಲ್ಲ ಜಬದಾರಿ ನಮ್ಮ ಪೂರ ಜನೊತ್ತ ಪುಗೆಲ್ಡ್ ಉಂಡು. ಸರಿ ಅತ್ತೆ? ಐತ ಒಟ್ಟುಗು ಕನ್ನಡೊನು ಒರಿಪಾಯರೆಗ್ಲಾ ನಮ ನಮ್ಮ ಕೈಟ್ ಆಯಿನ ಸಾಯ ಮಲ್ತೊಂದು, ಬರೆಯೊಂದು, ಓದೊಂದು, ನಮ್ಮ ಲಿಪಿ ನಮಾತೆಗೆ ಕಲ್ತೊಂದು ಬತ್‌ಂಡ ಎಲ್ಯ ಪಿರಾಕ್ ದ ನಮ್ಮ ಪಾತೆರ ಮರಪಂದೆ ಪೋವು. ಇಜ್ಜಿಡ ಬೇತೆ ಕೆಲವು ಬಾಸೆದ ಲೆಕ್ಕ ಸಯಿತ್ ಪೋವು ಮಾರ್ರೆ... ನನ ಬಾಸೆಲೆನ್ ಒರಿಪುನ ಬೊಕ್ಕ ಗಲಸುನ ಮಾತ್ರ ನಮ್ಮ ಜಬದಾರಿ . ಅವೆನ್ ದುಂಬುದ ಜನಕುಲೆ ಎದುರು ಕೊನೊದು ದೀಪುನಿ. ಬೊಕ್ಕ ದುಂಬೊತ್ತ ತರೆ ಕೊರೊಡಾಯಿನಿ ನಮ್ಮ ಜೋಕುಲು , ಅಕುಲು ಅಕ್ಲೆನ ಕಾಲೊಡು. ಅಪಗ ಪೂರಾ ಲೋಕ ಇಂಗ್ಲಿಸ್‌ಮಯ ಆಪುಂಡು.‌ ದಾಯೆ ಪನ್ನಗ ನಮ್ಮ ಜೋಕುಲು ಕಲ್ಪುನಿ ಅವೆನೆ ಅತೇ?

ತುಳು ಆವಡ್ ಕನ್ನಡ ಆವಡ್, ಒರಿಯೊಡು. ಪರ್ಬ ಉಚ್ಚಯೊಗು ಮಾತ್ರ ಆತ್, ನಿಚ್ಚ ಗಲಸುನ ಬದ್ಕ್‌ದ ಬಾಸೆ ಆದ್ ಅವು ಒರಿಯೊಡು. ಬ್ಯಾರೊಗಾದ್ ನಮ್ಮ ದೇಸೊಗು ಬತ್ತಿನ ಇಂಗ್ಲಿಸ್‌ದಕ್ಲೆನ್ ತೂಲೆಗೆ. ಸಾಲೆ ಓಪನ್ ಮಲ್ತ್‌ದ್ ಏತ್ ಸೋಕುಡೆ ಅಕ್ಲೆನ ಬಾಸೆನ್ ಮಾತೆರ್ಲಾ ಕಲ್ಪುಲೆಕ್ಕ ಮಲ್ತೆರ್! ಆತೆ ಅತ್.... ಒರಿಪಾದ್‌ಲಾ ಪೋತೆರ್. ಇತ್ತೆ ನಮಕ್ ನಮ್ಮ ಅಪ್ಪೆ ಬಾಸೆಡ್ದ್ ಸೋಕು ಇಂಗ್ಲಿಸ್ ಬರ್ಪುಂಡು. ಅಂಚೆನೆ ನಮ್ಮ ಬಾಸೆನ್ಲಾ ಪೂರೆರೆಗ್ ಪಟ್ಟೊಡು. ಕನ್ನಡ ಆವಡ್ ತುಳು ಆವಡ್, ಪರ್ಬ ಮಲ್ತ್ ಬಾಸೆದ ಬುಲೆಚ್ಚಿಲ್‌ಗ್ ನಮ ಪೂರ ಒಂಜಾವೊಡು. ನಿಕುಲು ದಾದ ಪನ್ಪರ್?
@ಹನಿಬಿಂದು@


ಅಂಚೆ ದಿನ ಲೇಖನ

ಅಕ್ಟೋಬರ್ 9 – ವಿಶ್ವ ಪೋಸ್ಟ್ ಅಪಿಸ್‌ದ ದಿನ

ಅಕ್ಟೋಬರ್ ತಿಂಗೊಲ್ದ 9ನೇ ದಿನ, ವಿಶ್ವ ಅಂಚೆ ದಿನ (World Post Day) ವಿಶ್ವ ಪೋಸ್ಟ್ ಆಪೀಸ್ದ ದಿನ ಪಂದ್ ಆಚರಣೆ ಮಲ್ಪುವೆರ್. ಉಂದು ಆ ದಿನೊತ್ತ ಪಿರಾವುದ ಕತೆ  ದಾದ ಪಂಡ  1874 ನೇ ವರ್ಷದ ಅಕ್ಟೋಬರ್ 9 ದಾನಿ ಸುರು  ಆಂಡ್. ಆ ದಿನ ಸ್ವಿಟ್ಜರ್‌ಲ್ಯಾಂಡ್‌ನ ಬೆರ್ನ್ ನಗರಡ್,ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (UPU) ಪಂದ್ ಒಂಜಿ ಅಂತರರಾಷ್ಟ್ರೀಯ ಸಂಸ್ಥೆ ಸ್ಥಾಪನೆ ಆಂಡ್. ಉಂದೆತ್ತ ಉದ್ದೇಶ ದೇಸ ಸೇವೆ ಅಂಚೆನೆ  ಪೊಸ್ಟ್ ದ ಸೇವೆಗ್ ಒಂಜಿ ನಿಯಮ, ಒಂಜಿ ವ್ಯವಸ್ಥೆ ಕನವೊಡು ಪನ್ಪಿನವು.ಬೊಕ್ಕ ಸಮುದಾಯದ ಸೇವೆ ಸುಲಭ ಮಲ್ಪುನವು ಆದಿತ್ತ್ಂಡ್.

UPU ಸ್ಥಾಪನೆ ಆಯಿನ ದಿನೊತ್ತ ನೆಂಪುಗು 1969 ರ್ದ್ ವಿಶ್ವ ಅಂಚೆ ದಿನ ಆಚರ್ನೆ ಮಲ್ಪುನ  ಸುರು ಆಂಡ್. ಅವೆರ್ದ್  ಬೊಕ್ಕ, ಅಕ್ಟೋಬರ್ 9 ದಾನಿ  ಪ್ರತಿ ವರ್ಸ ಅಂಚೆ ಸೇವೆದ ಮಹತ್ವ ಜನೊಕ್ಲೆಗ್ ತೋಜಾಯರೆ, ಆವೆತ ಬಗ್ಗೆ ವಿಸಯೊ ಕೊರಿಯೆರೆ,  ಜೋಕ್ಲೆಗ್, ಜವನೆರೆಗ್ ಪೋಸ್ಟುದ ಬಗ್ಗೆ ಎಡ್ಡೆ ಪ್ರೇರಣೆ ಕೊರ್ಪುನ. ಬೇಲೆನ್ ಆವು ಮಲ್ತೊಂದು ಉಂಡು. 

ಅಂಚೆ ಸೇವೆ – ಕಾಲದ ಬದಲಾವನೆ

ಪಿರಾವುದ ಕಾಲೊಡ್ದು ಜನ ಕಾಗಜಿ ಬರೆಪೆರ್, ದುಂಬು ತಾರಿದ  ಒಲಿಟ್ಟ್  ಬರೆವೊಂಡು  ಇತ್ತೆರ್. ಬೊಕ್ಕ ಬೊಕ್ಕ ಪೇಪರ್ ಬತ್ಂಡ್. ನಮಕ್ ನಮ್ಮಕ್ಲೆಗ್ ದಾದಾಂಡಲಾ ವಿಸಯೊ, ಮಾಹಿತಿ ಮುಟ್ಟಾವೊಡಾಂಡ, ವಿಸಯೊಲೆನ್ ಅರಿಕೆ ಮಲ್‌ತೊನೊಡು ಪಂದ್ ಆಂಡ, ಮನಸ್ದ ಪತೆರೊಲೆನ್ ನಮ್ಮಕ್ಲೆಡ ಪಟ್ಟೊನೊಡು ಪಂದ್ ಆಂಡ ಅಪಗದ ಕಾಲೊಡು  ಫೋನ್ ಇತ್ತಿಜಿ. ಅಪಗ. ತನ್ಕ್ ಗೊತ್ತಿತ್ತಿ ಅಚ್ಚರೊಡು ಪೇಪರ್‌ಡ್ ಬರೆದ್ ಪಿರವುಡು ಆವು ಏರೆಗ್ ಸೇರೊಡ ಅಕ್ಲೆನ ಎಡ್ದ್ರಸ್ ಬರೆದ್ ಪೋಸ್ಟ್ ದ ದಬ್ಬಿಗ್ ಪಾಡ್ಂಡ ಮನದಾನಿ ಕಾಂಡೆ ಪೋಸ್ಟ್ ಮ್ಯಾನ್ ಅವೆನ್  ಪತೊಂದು ಪೋಪೆರ್. ಬೊಕ್ಕ ಆವು ವಾ ಊರುಗು ಪೋವಡಾ ಆ ಊರುಗು ಸೀಲ್ ಪಾಡ್ದ್ ಅವೆನ್ ಬಸ್ ಟ್ಟಾ ಇಜ್ಜಿಂಡ ರೈಲ್ ಡಾ ಪಾಡ್ದ್ ಕಡಪುಡುವೆರ್. ಅವೆರ್ದ್ ಬೊಕ್ಕ  ಒಂಜಿ ವಾರ ಕಾಪೊಡು.  ಅಪಗ ಆವು ನಮಕ್  ಬೊಡಿತ್ತಿನಕ್ಲೆಗ್  ತಿಕ್ಕುಂಡು, ಅಕ್ಲೆಗ್ ಓದೆರೆ ಬತ್ಂಡ ಅಕುಲು ಓದುದು ಅರ್ಥ ಮಲ್ತೊನ್‌ವೆರ್ . ಇಜ್ಜಿಡ ಪೋಸ್ಟ್ ಮೆನ್ ಇಜ್ಜಿಡ ಏರಾಂಡ ಬರವು ಕಲ್ದಿನಕ್ಲೆಡ ಅವೆನ್ ಓದದ್ ಇಸಯ ತೆರಿಯಾನುವೆರ್. ಅಕ್ಲೆಗ್ ಪಿರ ದಾದಾಂಡಲ ನಮಕ್ ಪನೊಡಾಂಡ ಪಿರ ಕಾಗಜಿ ಬರೆಪೆರ್ ನಮಕ್. ಬೇಗ ಪೋವೊಡಾಂಡ ಟೆಲಿಗ್ರಾಮ್. ಆಂಡ ಆವು ಬತ್೦ಡ ಮಾತೆರ್ಲಾ ಪೋಡ್ಯೊಂದು ಇತ್ತೆರ್. ಏರೆನಾಂಡಲ ಸಾವುದ ಸುದ್ದಿ ಬರ್ಪುಂಡಾ ಪಂದ್. 
ಆಂಡ ಆ ಕಾಕಜಿ ಬರೆಪಿನ ಬೇಲೆಡ್ ನಮಕ್ ಮಸ್ತ್ ಖುಷಿ ಇತ್ಂಡ್. ನಮ್ಮ ಉಡಲ್ದ ಪಾತೆರೊನು ಪೂರ ನಮ್ಮ ಕೈಟೇ ಬರೆದ್ ಅವೆನ್ ನಮಕ್ ಬೊಡಾಯಿನಕುಲು ಓದುನ, ಅಕುಲು ಅವೆನ್ ಓದುದು ಐಕ್ ಪಿರ ಜರೂರು ಕಾಕಜಿ ಬರೆಪಿನ, ಐಕ್ ದಿನ ದಿನ ಪೋಸ್ಟ್ ಮೇನ್ ನ್ ಕಾಪುನ ಆವು ಪೂರ ಒಂಜಿ ಕುಸಿತ ಅನುಭವ ಆದಿತ್ಂಡ್. ಅವೆಟ್ ನಮಕ್ ಹೃದಯ ಸ್ಪರ್ಶದ ಅನುಭವ ತಿಕ್ಕೊಂದು ಇತ್ಂಡ್. ಒಂಜಿ ಕಾಕಜಿ ಬತ್ಂಡ ಅವೆನ್ ಒಂಜಿ ಸರ್ತಿ ಮಾತ್ರ ಅತ್ತ್ ನಾಲೈನ್ ಸರ್ತಿ ಓದೊಂದು ಇತ್ತ. ಆತೆ ಅತ್, ಒಯ್ತ್ ಒಯ್ತ್ ಗೆತೊಂದು ಇಲ್ಲದ ಜೊಕ್ಲೆಡ್ದ್ ಪತ್ ಮಲ್ಲಕ್ಲೆ ಮುಟ್ಟ ಮಾತೆರ್ಲಾ ಓದೊಂದು ಇತ್ತೆರ್. ಹಿರಿಯಕ್ಲೆಗ್ ಓದರೆ ಬತ್ತಿಜಿಡ ಅಕ್‌ಲು ಜೋಕ್ಲೆಡ ಜೋರು ಜೋರು ಓದದ್ ಇಸಯ ತೆರಿಯೊಂದು ಇತ್ತೆರ್. ಆತೆ ಅತ್, ಕಂಡನಿ ಸೈತಿನ ಪೊಂಜೋವುಲೆಗ್, ಆಜಿಪ ವರ್ಸ ಕರಿನಕ್ಲೆಗ್ ಪೂರ ಗವರ್ಮೆಂಟ್ ದ ಕಾಸ್ ಬರೊಂದು ಇತ್‌ಂಡ್. ಪ್ರತಿ ತಿಂಗೊಲು ಬರ್ಪಿನ ಆ ಕಾಸ್ ಗ್ ಜನ ಕಾತೊಂದು ಇತ್ತೆರ್. ಕಾಸ್ ದಾಂತಿನ ಆ ಕಾಲೊಡು ನೂದು ರೂಪಾಯಿ ಬತ್ಂಡ ಅವು ಮಾಮಲ್ಲ ಕಾಸ್. ಐಟ್ ಬಾರಿ ಬೇಲೆಲು ಆವೊಂದಿತ್ತ. ಆ ಕಾಸ್ ಕಂತ್ ಕೊರಿನ ಪೋಸ್ಟ್ ಮೆನ್ ನ ಮಿತ್ ಖುಷಿ ಆದ್ ಐನ್ ರುಪಾಯಿನ್ ಪೊoಜೊವುನಕುಲು ಅರೆಗ್ ಕೊರೊಂದು ಇತ್ತೆರ್. ಅಂಚ ಮಸ್ತ್ ಜನ ಕೊರಿನ ಕಾಸ್ ಅರೆಗ್ ಕಮ್ಮಿ ಸಂಬಳ ಆಂಡಲಾ ದಿನ ದೆಪ್ಪೆರೆ ಎಡ್ಡೆ ಆವೊಂದು ಇತ್‌ಂಡ್. ಇತ್ತೆದ ಕಾಲೊಡು ಐನ್ ರುಪಾಯಿಗ್ ದಾಲ ಬರ್ಪುಜಿಡಲ ಅಪಗ ಆವು ಮಲ್ಲನೆ ಆದಿತ್‌ಂಡ್. ಐಟ್ ಒಂಜಿ ಎಡ್ಡೆ ಪಾತೆರ ಕತೆ, ಸಂಬಂಧ ಒರಿಯೊಂದು ಇತ್ಂಡ್. 
ಅವ್ವೇ ಅತ್ತಂದೆ ಪೋಸ್ಟ್ ಆಪೀಸ್ ಬದಲಾದ್ ಪೊಸ ಪೊಸ ಕೆಲಸೊಲು ಬತ್ತ. ಕರೆಂಟ್ ಬಿಲ್ ಕಟ್ಟುನ ಸುರು ಆಂಡ್. ಬೊಕ್ಕ ಕಾಸ್ ಮಿನಿ ಇತ್‌ಂಡ ಅವುಲೆ ಕಟ್ಟೊಲಿ, ತಿಂಗೊಲು ತಿಂಗೊಲು ಆರ್ಡಿ ಕಟ್ಟೊಲಿ, ಬೊಕ್ಕ ಇನ್ಸೂರ್ ಮಲ್ಪೊಲಿ ಬ್ಯಾಂಕ್ ದ ಲೆಕ್ಕನೆ  ಪಾಸ್ ಬೂಕು ಮಲ್ತ್ ಅಲ್ಪಲಾ ಕಾಸ್ ಕಟ್ ದ್ ನಮಕ್ ಬೋಡನಗ  ಗೆತೊನೊಲಿ. ಕಾಕಜಿ ಮಾತ್ರ ಅತ್ ಬೇತೆ ಪಾರ್ಸಲ್ ಲಾ ಕಡಪುಡೊಲಿ. ಬೂಕು, ಕುಂಟು, ತಿಂಡಿ ಇಂಚಿನ ಪೂರ ನಮಕ್ ಬೋಡಿತ್ತಿನಕ್ಲೆಗ್ ಕಡಪುಡ್ದು ಕೊರೊಲಿ. ಇಂಚಿನ ಪೂರ ಪೊಸ ಪೊಸ ಅವಕಾಸೊಲು ಬನ್ನಗ ಜನಕ್ಕುಲು ಪೋಸ್ಟ್ ಆಪೀಸ್ ಗ್ ನನಲಾ ಮುಟ್ಟ ಬತ್ತೆರ್. ಜನಕ್ಲೆನ ಬದ್ಕ್ ಡ್ ಆವು ಒಂಜಿ ಅಂಗ ಆಯಿಲೆಕ್ಕ ಆಂಡ್. 
ಆಂಡ ಕಾಲ ಬಡಲಾಯಿಲೆಕ್ಕನೆ ಜನ ಬೊಕ್ಕ ನಮಕ್ ತಿಕ್ಕುನ ಸೇವೆಲಾ ಬದಲ್ ಆಂಡ್. ಇಲ್ಲಡೆ ಕುಲ್ಲುದು ಬೇಲೆ ಮಲ್ಪುನ ಸುರು ಆಂಡ್. ಅಪಗ ಪೋಸ್ಟ್ ಅಪೀಸ್ ಲ ಮೊಬೈಲ್ ಬ್ಯಾಂಕಿಂಗ್ ಆಕ್ಟಿವೇಟ್ ಮಲ್ಪೊಡಾಂಡ್. ಅಂಚ ಪೋಸ್ಟಲ್ ಬ್ಯಾಂಕಿಂಗ್ ಬತ್Oಡ್. ಇನ್ಸೂರೆನ್ಸ್ ಬತ್೦ಡ್. 
 ಜನ ಕಾಕಜಿ ಬರೆಪಿನ, ಪಾಡುನ ಕಾಪುನ ಕಾಲ ಪೋಂಡು. ಮೇಸ್ಸೇಜ್ ಬತ್‌ಂಡ್. ಅಂಚ ಕಾಸ್ ಲಾ ಮೊಬೈಲ್ ಡ್ ಪಾಡುಲೆಕ್ಕ ಆಂಡ್. 
ಆಂಡ ನನಲಾ ಪೋಸ್ಟ್ ಆಪೀಸ್ ನನಲಾ ಪೂರ ಊರುಡುಲಾ ಉಂಡು. ಬೇಲೆದ ಕಾಕಜಿಲು, ಅಪೀಸ್ ದ ಕಾಕಜಿಲು ಇತ್ತೆಲಾ ಐಟೇ ಬರ್ಪಿನಿ. ಪಾರ್ಸೆಲ್ ಕಮ್ಮಿ ರೇಟ್ ಡ್ ಐಟೇ ಬರ್ಪುನಿ. ದೂರೊದ ಊರುಲೆಗ್, ಬೇತೆ ದೇಸೊಗು ದಾದಾಂಡಲಾ ನಮ್ಮಕ್ಲೆಗ್ ಕಡಪುಡೊಡು ಪಂದ್ ಆಂಡ ಐಟೇ ಸುಲಭ. ಅಂಚಾದ್ ಪೋಸ್ಟ್ ಆಪೀಸ್ ಗ್ ಇತ್ತೆಲಾ ಅವ್ವೇ ಅಯಿನ ಬಿಲೆ ಉಂಡು. ಸ್ಟಾಂಪ್ ಲಾ ಅಲ್ಪನೇ ತಿಕ್ಕುನು. 

ಇತ್ತೆ ಸುಖನ್ಯಾ ಸುರಕ್ಷಾ, ಜೂವೊದ ಇನ್ಸೂರೆನ್ಸ್, ಪೆನ್ಷನ್ ಪ್ಲಾನ್ ಇಂಚಿನ ಪೂರ ಬೈದ್ಂಡ್. ಮಾತ್ರ ಆತ್, ಪೋಸ್ಟುದ ಏ ಟಿ ಎಂ ಲಾ ಉಂಡು. ನೆನ್ ಪೂರ ನಮ ಗಲಸೊಂದು  ಬರೊಡು ಆತೆ. ಅಪಗ ಅಂಚೆ ದಿನ ಮಲ್ತಿನ ಸಾರ್ಥಕ ಅತೆ ?ನಿಕ್ಲು ದಾದ ಪನ್ಪರ್? 
@ಹನಿಬಿಂದು@
01.10.2025

ಬಾಸೆ ಒರಿಯೊಡು

ನಮ ಕನ್ನಡ ಬಾಸೆಗ್ಲಾ ದಾಯೆ ಜಾಗೆ ಕೊರೊಡು?

ತುಲುವೆರಾಯಿನ ನಮ ತುಳುನಾಡ್ ದ ಉದಯ ಆಯಿನ ಪರ್ಬ ಮಲ್ತ್ಂಡ ಯಾವಂದ? ಕನ್ನಡೊದ ರಾಜ್ಯೋತ್ಸವೊದ ಉಚ್ಚಯ ನಮ ದಾಯೆ ಮಲ್ಪೊಡು ಪನ್ಪಿನ ಪ್ರಶ್ನೆ ನಮಕ್ ಮಾತೆರೆಗ್ಲಾ ಬರ್ಪಿನವು ಸಾಜ. ತುಳುನಾಡ್‌ಡ್ ಇಪ್ಪುನ ನಮ ಪೂರ ತುಳು ಅಪ್ಪೆನ ಮಟ್ಟೆಲ್ದ ಜೋಕುಲು ಸರಿ. ಆಂಡ ನಮ್ಮ ತುಳು ಅಪ್ಪೆ ಉಂತುದಿನಿ ನಮ್ಮ ಕರ್ನಾಟಕ ರಾಜ್ಯೊಡು ಆತೆ?

" ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ" ಪಂದ್ ಕುವೆಂಪು ಅಪ್ಪೆ ಮಗಲೆನ್ ಪುಗಾರಿ ಲೆಕ್ಕ, ಕನ್ನಡ ಅಪ್ಪೆನ ಒಂಜಿ ಮಗಲ್ ಅತ್ತ್‌ಂಡಲ ಸಗೆ ಸಂಗಡಿ ಲೆಕ್ಕ ನಮ್ಮ ತುಳು ಅಪ್ಪೆ. ಅಂಚ ಇಪ್ಪುನಗ ತುಳುಕ್ಕುಲ್ಲಾ ಕನ್ನಡದ ಲೆಕ್ಕೊನೆ ಸಾರ ಸಾರ ಒರ್ಸೊದ ಪಿರಪತ್ ಉಂಡುಗೆ. ಇಲ್ಲಡ್ ನಮ ಅಪ್ಪೆ ಬಾಸೆ ತುಳುನು ಅಮ್ಮಡ ಕಲ್ತ. ಆಂಡಲ ನಮ ಸಾಲೆಗ್ ಪೋದು ನಮ್ಮ ಅಲೋಚನೆಲೆನ್ ಬರೆಯರೆ ಬೊಕ್ಕ ಬೇತೆಕ್ಲೆನ ಯೋಚನೆಲೆನ್, ನಂಬೊಲಿಗೆನ್ ಓದರೆ ಸುರುಟ್ಟು ಕಲ್ದಿನಿ ಕನ್ನಡ ಬಾಸೆಡ್. ಅಂಚ ಇಪ್ಪುನಗ ನಮ ತುಳುನಾಡ್‌ಡ್ ಪುಟ್ಟುದು ಬುಲೆಯಿನಕುಲೇ ಆಂಡಲಾ ಈ ಕರುನಾಡ್‌ಗ್ ಸೇರ್ದಿನ ಕಾರನೊಡು ನಮ ಕನ್ನಡಮ್ಮನ ನೀರ್‌ಲಾ ಪರೊಂದು ಉಲ್ಲ. ಅಂಚ ಆನಗ ನಮ್ಮ ರಗುತೊಡುಲಾ ಕನ್ನಡದ ಕಮ್ಮೆನೆ ತುಲುಡ್ದು ಬೊಕ್ಕ ಕಂಡಿತ ಬರ್ಪುಂಡೆ. ಅಂಚಾದ್ ನಮ ಪೂರ ಒಟ್ಟು ಸೇರ್ದ್ ಕನ್ನಡ ರಾಜ್ಯೊತ್ಸವೊನ್ಲಾ ಆಚರ್ನೆ ಮಲ್ಪುನವು ನಮ್ಮ ದರ್ಮ ಆತೇ?

ಪ್ರತಿ ಇಂಗ್ಲಿಸ್ ಒರ್ಸೊದ ನವೆಂಬರ್ ತಿಂಗೊಲ್ದ ಸುರುತ್ತ ದಿನತ್ತಾನಿ ಇಡೀ ಕರುನಾಡು ಅತ್‌ಂಡ ಕರ್ನಾಟಕ ರಾಜ್ಯೊದ ಜನಕ್ಕುಲಾಯಿನ ನಮ ಕನ್ನಡ ರಾಜ್ಯೊ ಆಯಿನ ಕುಸಿಕ್ ಅವೆನ್ ಪರ್ಬೊದ ಲೆಕ್ಕ ಆಚರ್ನೆ ಮಲ್ಪುವ. ಕನ್ನಡ ಬಾಸೆ, ಪಿರಾಕ್ ದ ಕಟ್ಟ್‌ಲು, ಆಚರ್ನೆಲು ಪೂರ ಒರಿಯರೆ ಬೋಡಾದ್, ನಮ್ಮ ಜೋಕುಲು ಅವೆನ್ ತೂದು ನನ ಅಕುಲ್ಲಾ ಅವೆನ್ ದುಂಬುಗು ನಡಪಾವೊಂದು ಪೋಯರೆ ಆವು ಬೋಡು. ಪರ ಊರುಗು ಪೋಯಿನಲ್ಪ ತುಳು, ಕನ್ನಡದಕ್ಲು ಒಟ್ಟಾದ್ ನಮ ಕರ್ನಾಟಕದಕುಲು ಪನ್ಪಿನ ಕುಸಿಟ್ಟೆ ದಿನ ದೆಪ್ಪುವೆರ್.ಗಟ್ಟದ ಮಿತ್ತ್ ಏರಾಂಡಲಾ ನಮ ಪೋಂಡ ಆತ್‌ಂಡ ಅಲ್ಪದಕುಲು ಇಡೆ ಬತ್ ಬ್ಯಾರ ಮಲ್ಪೊಡಾಂಡ ನಮಕ್ ಅಕ್ಲೆಡ ಪಾತೆರ್ಯರೆ ಸಾಯಗ್ ಬರ್‌ಪಿನಿ ಕನ್ನಡೊನೆ ಆತೆ?

ಕನ್ನಡ ನಾಡ್ ಪಂದ್ ಪಟ್ಟ್‌ನಗ ತುಳುತ ನಮ್ಮ ಜಾಗೆನ್ಲಾ ಹಿರಿಯಕ್ಲು ಕರ್ನಾಟಕೊದೊಟ್ಟಿಗೆ ಪಾಡಿಯೆರ್. ಅಕುಲು ಮಿನಿ ನಮನ್ ಕೇರಲೊದ ಒಟ್ಟುಗು ಪಾಡ್ದುಂಡ ನಮ ಮಾತ ಇನಿ ಮಲಿಯಾಲಿ ಕಲ್ಪೊಡಿತ್ಂಡ್. ಅಂಚಾದ್ ಪರ ರಾಜ್ಯೊಗು ಪೋಯಿನಪಗ ನಮ ಕರ್ನಾಟಕಡ್ ಪುಟ್ಟಿ ಬಲತಿನ ಜೋಕುಲು ಪನ್ಪ. ಪರ ದೇಸೊಗು ಪೋಯಿನಪಗ ನಮ ಇಂಡಿಯಾದಕ್ಲು ಪಂದ್ ಪನ್ಪ. ಅಡೆಗ್ ನಮಕ್ ಮೂಜಿ ಅಪ್ಪೆಡಿಕುಲು. ಪೆದಿ ಅಪ್ಪೆಲಾ ಸೇರ್ಂಡ ನಾಲ್ ಜನ. ಅಜ್ಜಿನ್ಲಾ ಪತ್ಂಡ ಐನ್ ಜನ. ಭಾರತ ನಮ್ಮ ಅಜ್ಜಿ ಆಂಡ ಕನ್ನಡ ನಮ್ಮ ಮಲ್ಲಮ್ಮ, ತುಲುವಲ್ಪೆ ನಮ್ಮಪ್ಪೆ. ನೇಲ್ಯಪ್ಪೆನ್ಲಾ ನಮ ಓಲ್ಲ ಬುಡ್ದು ಕೊರ್ಪುಜ ಅತೆ? ಆರ್ಲಾ ನಮ್ಮಾರೆ... ನಮಲಾ ಅರೆನ ಜೋಕುಲೆ..ಅಂಚಾದ್ ನಮ ರಾಜ್ಯೊತ್ಸವೊದ ಆಚರ್ನೆಗ್ಲಾ
ಒಟ್ಟು ಸೇರೊಂದು ಗಾಂಡ್ ಗೌಜಿಡ್ ಮಲ್ಪೊಡು.

ನಂದಲಿಕೆದ ಕವಿ ಪಿರಾಕ್‌ದ ಲಕ್ಶ್ಮೀಸೆರ್ಲಾ ತುಲುನಾಡ್ದಾರೆ ಆಂಡಲಾ ಆರ್ ಬರೆಯಿನ ಸಾಯಿತ್ಯೊಲು ಪೂರಾ ಕನ್ನಡೊಡು ಉಂಡುಗೆ. ತುಳುನಾಡ್‌ದ ನಮ್ಮ ಕಲಾವಿದೆರ್‌ಲಾ, ಮಸ್ತ್ ಜನೊಕ್ಲೆಗ್ ನಮ ಮುಟ್ಟೊಡು ಪನ್ಪಿನ ಕಾರನೊಗು ಕನ್ನಡ, ತೆಲುಗು, ತಮಿಲುದಂಚಿ ಮೋನೆ ಪಾಡೊಂದು ಉಲ್ಲೆರ್. ಬೇಲೆಗಾದ್ ಪರ ಊರುಗು ಪೋದು ಬದುಕುನ ನಮ್ಮ ತುಳುವೆರ್ ಅಪ್ಪೆ ಬಾಸೆನ್ ಮರತ್ ಆ ಊರುದ ಬಾಸೆಲೆನೆ ಅಕ್ಲೆನ ಜೋಕುಲೆಗ್ ಕಲ್ಪಾವೊಂದು ಉಲ್ಲೆರ್.

ಆವು ಏತೋ ಜನಕ್ ತುಳು ಪಾತೆರುನಿ ಪಂಡ ಯಾನ್ ಎಲ್ಯ ಆಪೆ ಪನ್ಪಿನ ಬೇಜಾರ್ ಉಂಡು. ಅಂಚ ಅಕುಲು ಅಕ್ಲೆನ ಜೋಕ್ಲೆಡ ಕನ್ನಡೊಡೆ ಪಾತೆರುವೆರ್. ಅಡೆಗ್ ಒಂಜಿ ಜನಾಂಗೊದ ತುಳು ದುಂಬು ಪೋವಂದೆ ಬಾಸೆ ಅಕ್ಲೆನ ಕುಟುಮೊಡು ಅಲ್ಪೊನೆ ಸೈತ್ ಪೋಪುಂಡು. ಅಂಚ ಆಯರೆ ಅವ್‌ಕಾಸ ಕೊರಂದೆ ನಮ್ಮ ಬಾಸೆಲೆನ್ ನಮ ಗಳಸೊಂದು, ಒರಿಪವೊಂದು ಪೋಪಿನ ಮಾಮಲ್ಲ ಜಬದಾರಿ ನಮ್ಮ ಪೂರ ಜನೊತ್ತ ಪುಗೆಲ್ಡ್ ಉಂಡು. ಸರಿ ಅತ್ತೆ? ಐತ ಒಟ್ಟುಗು ಕನ್ನಡೊನು ಒರಿಪಾಯರೆಗ್ಲಾ ನಮ ನಮ್ಮ ಕೈಟ್ ಆಯಿನ ಸಾಯ ಮಲ್ತೊಂದು, ಬರೆಯೊಂದು, ಓದೊಂದು, ನಮ್ಮ ಲಿಪಿ ನಮಾತೆಗೆ ಕಲ್ತೊಂದು ಬತ್‌ಂಡ ಎಲ್ಯ ಪಿರಾಕ್ ದ ನಮ್ಮ ಪಾತೆರ ಮರಪಂದೆ ಪೋವು. ಇಜ್ಜಿಡ ಬೇತೆ ಕೆಲವು ಬಾಸೆದ ಲೆಕ್ಕ ಸಯಿತ್ ಪೋವು ಮಾರ್ರೆ... ನನ ಬಾಸೆಲೆನ್ ಒರಿಪುನ ಬೊಕ್ಕ ಗಲಸುನ ಮಾತ್ರ ನಮ್ಮ ಜಬದಾರಿ . ಅವೆನ್ ದುಂಬುದ ಜನಕುಲೆ ಎದುರು ಕೊನೊದು ದೀಪುನಿ. ಬೊಕ್ಕ ದುಂಬೊತ್ತ ತರೆ ಕೊರೊಡಾಯಿನಿ ನಮ್ಮ ಜೋಕುಲು , ಅಕುಲು ಅಕ್ಲೆನ ಕಾಲೊಡು. ಅಪಗ ಪೂರಾ ಲೋಕ ಇಂಗ್ಲಿಸ್‌ಮಯ ಆಪುಂಡು.‌ ದಾಯೆ ಪನ್ನಗ ನಮ್ಮ ಜೋಕುಲು ಕಲ್ಪುನಿ ಅವೆನೆ ಅತೇ?

ತುಳು ಆವಡ್ ಕನ್ನಡ ಆವಡ್, ಒರಿಯೊಡು. ಪರ್ಬ ಉಚ್ಚಯೊಗು ಮಾತ್ರ ಆತ್, ನಿಚ್ಚ ಗಲಸುನ ಬದ್ಕ್‌ದ ಬಾಸೆ ಆದ್ ಅವು ಒರಿಯೊಡು. ಬ್ಯಾರೊಗಾದ್ ನಮ್ಮ ದೇಸೊಗು ಬತ್ತಿನ ಇಂಗ್ಲಿಸ್‌ದಕ್ಲೆನ್ ತೂಲೆಗೆ. ಸಾಲೆ ಓಪನ್ ಮಲ್ತ್‌ದ್ ಏತ್ ಸೋಕುಡೆ ಅಕ್ಲೆನ ಬಾಸೆನ್ ಮಾತೆರ್ಲಾ ಕಲ್ಪುಲೆಕ್ಕ ಮಲ್ತೆರ್! ಆತೆ ಅತ್.... ಒರಿಪಾದ್‌ಲಾ ಪೋತೆರ್. ಇತ್ತೆ ನಮಕ್ ನಮ್ಮ ಅಪ್ಪೆ ಬಾಸೆಡ್ದ್ ಸೋಕು ಇಂಗ್ಲಿಸ್ ಬರ್ಪುಂಡು. ಅಂಚೆನೆ ನಮ್ಮ ಬಾಸೆನ್ಲಾ ಪೂರೆರೆಗ್ ಪಟ್ಟೊಡು. ಕನ್ನಡ ಆವಡ್ ತುಳು ಆವಡ್, ಪರ್ಬ ಮಲ್ತ್ ಬಾಸೆದ ಬುಲೆಚ್ಚಿಲ್‌ಗ್ ನಮ ಪೂರ ಒಂಜಾವೊಡು. ನಿಕುಲು ದಾದ ಪನ್ಪರ್?
@ಹನಿಬಿಂದು@


ಭಾನುವಾರ, ಅಕ್ಟೋಬರ್ 19, 2025

ನಮ್ಮ ಕಾರ್ಲ

🔴 *"ದೀಪಗಳ ಹಬ್ಬ ದೀಪಾವಳಿಯ ,ಮಹತ್ವ ಸಾರೋಣ"* 

🔴 *ಪ್ರತಿ ದೀಪವು ,ಮಾನವನ ದಯೆ, ಜ್ಞಾನ, ಪ್ರೀತಿಯ ಸಂಕೇತ*

✒️ *ಪ್ರೇಮಾ ಆರ್ ಶೆಟ್ಟಿ*

 https://news.nammakarla.in/ದೀಪಗಳ-ಹಬ್ಬ-ದೀಪಾವಳಿಯ-ಮಹತ್/

✨ *"ನಮ್ಮ ಕಾರ್ಲ" ವಾಟ್ಸಾಪ್ ಗ್ರೂಪ್ ಲಿಂಕ್...👇👇👇*

 https://chat.whatsapp.com/E4ONk3bChoGEI3SDfyvTN3?mode=wwt

ಶನಿವಾರ, ಅಕ್ಟೋಬರ್ 18, 2025

ಗುಣಿತಾಕ್ಷರ ಕವನ

ಗುಣಿತಾಕ್ಷರ ಕವನ

ಬರವಣಿಗೆಯ ಹೃದಯವ ಹೊತ್ತು
ಬಾರೆಯ ಎಂದಿದೆ ಮನದ ಮುತ್ತು
ಬಿರಿದಿದೆ ಸುಂದರ ಭಾವದ ಮಣಿತುತ್ತು
ಬೀಸಣಿಗೆಯಂತೆ ಬೀಸುತಿದೆ ಪ್ರೇಮ ಕಸರತ್ತು//

ಬುಗಿಲೆದ್ದಿದೆ ಆನಂದದ ಕಿರುನಗೆ
ಬೂರುಗ ಹಸಿರಿನ ಮೈಮನ ಬೆಸುಗೆ
ಬೃಂದಾವನದಲಿ ಹಾರುವ ಚಿಟ್ಟೆಯ ಸಲುಗೆ
ಬೆನಕನ ರಕ್ಷೆಯು ನಮ್ಮಯ ಉಸಿರಿಗೆ//

ಬೇಸಿಗೆ ಬಿಸಿಲಿನ ಉರಿಯಲು ಚಳಿಯು
ಬೈಸಿಕಲಲಿ ಜೊತೆಯಲಿ ಸಾಗಿದ ಸವಿಯು
ಬೊಮ್ಮನ ವರವದು ಸಿಕ್ಕಿದ ಖುಷಿಯು
ಬೋರೆಂದು ಸುರಿವ ಮಳೆಹನಿಯ ಮಧುರತೆಯು 

ಬೌ ಬೌ ಎನುವ ನಾಯಿಯ ನಿಷ್ಠೆಯುಲಿ
ಬಂಗಾರದ ಮನದ ಬದುಕಿನ ನೋಟದಲಿ
ಬ: ಕಷ್ಟಗಳ ಎದೆಗುಂದದೆ ಎದುರಿಸುತಲಿ ಬದುಕೋಣ
@ಹನಿಬಿಂದು@
09.08.2025

ಹಾಯ್ಕು

ಹಾಯ್ಕು
ಈ ವರ್ಸ ಬರ್ಸ
ಬುಡ್ಪಿನ ಓಲ್ಲ ತೋಜ್ಜಿ
ಬರ್ಸೊದ ಪರ್ಬ
@ಹನಿಬಿಂದು@
18.10.2025

ಶುಕ್ರವಾರ, ಅಕ್ಟೋಬರ್ 17, 2025

pani ಕಬಿತೆ

ಪನಿ ಕಬಿತೆ

ಬರ್ಸ
ಗುದ್ದೊಂದುಲ್ಲೆರ್ ಮೋಡಣ್ಣೆ
ಬಾರಿ ಜೋರುಡೆ
ಬಾನ ಪರಿದ್ ಬೂರೊಂದುಂಡು 
ಬರ್ಸ ಬೇಗೊಡೆ 
@ಹನಿಬಿಂದು@
17.10.2025

ಮಂಗಳವಾರ, ಅಕ್ಟೋಬರ್ 14, 2025

ಕಥೆ

ಹಲವು ಕನ್ನಡ ರಾಜರ ಹಾಸ್ಯ ಪ್ರಸಂಗಗಳು

1. ವಿಕ್ರಮಾದಿತ್ಯ :ಕಲ್ಲ್ಯಾಣದ ರಾಜರ
ಮನೆಗಳ ಮಧ್ಯೆ ಬೆಳಗಿನ ಸೂರ್ಯೋದಯದಂತೆ ಹೊಳೆಯುತ್ತಿದ್ದ ಚಕ್ರವರ್ತಿ ವಿಕ್ರಮಾದಿತ್ಯನ ನಾಡು.
ಅವನ ರಾಜ್ಯದಲ್ಲಿ ಕವಿ, ತತ್ವಜ್ಞಾನಿ, ಯೋಧ ಎಲ್ಲರೂ ಗೌರವಿಸಲ್ಪಟ್ಟರು.ಒಮ್ಮೆ ರಾಜ ಸಭೆಯಲ್ಲಿ ಒಬ್ಬ ಕವಿ ಹೊಸ ಕಾವ್ಯವನ್ನು ಓದಿದ. ಅದರ ಛಂದಸ್ಸು, ಭಾವ, ಕಲ್ಪನೆಗಳು ಅದ್ಭುತವಾಗಿದ್ದರೂ, ರಾಜನು ತಕ್ಷಣ ಪ್ರಶಂಸಿಸಲಿಲ್ಲ.
ಕವಿ ನೊಂದನು, ಆದರೆ ರಾಜನ ಕಣ್ಣುಗಳಲ್ಲಿ ವಿಚಾರದ ಆಳತೆ ಕಾಣಿಸಿತು.ಮುಂದಿನ ದಿನ ರಾಜನು ಕವಿಯನ್ನು ಕರೆಯಿಸಿಕೊಂಡು ಹೇಳಿದರು: “ಒಳ್ಳೆಯ ಕಾವ್ಯವು ಹೂವಿನ ಪರಿಮಳದಂತೆ — ರಾತ್ರಿ ಕಳೆದರೂ ಮನಸ್ಸಿನಲ್ಲಿ ಉಳಿಯಬೇಕು. ನಿನ್ನ ಕಾವ್ಯ ಉಳಿಯಿತು.” ಅಂದಿನಿಂದ ಕವಿ ನಮನಗೊಂಡು “ಕಾವ್ಯ ಚಕ್ರವರ್ತಿ”ನೆಂದು ರಾಜನನ್ನು ಕೊಂಡಾಡಿದ.ಕಲ್ಲ್ಯಾಣದ ವಿಕ್ರಮಾದಿತ್ಯನು ಕಲೆಯ ಪ್ರೋತ್ಸಾಹಕನಾಗಿಯೂ, ನ್ಯಾಯದ ಸೂರ್ಯನಾಗಿಯೂ ಜನಮಾನಸದಲ್ಲಿ ಶಾಶ್ವತನಾದ.

೨. ಎರಡನೇ ಪುಲಕೇಶಿ:ನರ್ಮದೆಯ ಯೋಧನ ಗರ್ಜನೆ
ಬಾದಾಮಿಯ ಕೋಟೆಯೊಳಗಿಂದ ಘಂಟೆಗಳು ಮೊಳಗುತ್ತಿದ್ದುವು. ಸೇನೆಯ ಕುದುರೆಗಳು ಸಜ್ಜಾಗಿದ್ದುವು.
ಉತ್ತರದಿಂದ ಬಂದ ಹರ್ಷವರ್ಧನ ತನ್ನ ಪ್ರಭಾವವನ್ನು ದಕ್ಷಿಣದ ಮೇಲೆ ಹರಿಸಲು ಬಯಸಿದ್ದ. ಆದರೆ ನರ್ಮದೆಯ ತೀರದಲ್ಲಿ ಅವನನ್ನು ಎದುರಿಸಿದ ಒಬ್ಬ ರಾಜನ ಧ್ವಜ ಆಕಾಶವನ್ನು ಮುಟ್ಟಿತ್ತು — ಅವನು ಪುಲಕೇಶಿ ದ್ವಿತೀಯ. ಹರ್ಷನ ಸೇನೆ ಅಪಾರವಾಗಿದ್ದರೂ, ಪುಲಕೇಶಿಯ ತಂತ್ರ, ಧೈರ್ಯ, ಮತ್ತು ಶಿಸ್ತು ಅದಕ್ಕಿಂತ ಭಾರೀ.
ಯುದ್ಧದ ನಾದ ನರ್ಮದೆಯ ತೀರದಲ್ಲಿ ಮೊಳಗಿತು.
ಸಂಜೆ ಹೊತ್ತಿಗೆ ಹರ್ಷನ ಸೇನೆ ಹಿಂತಿರುಗಿತು; ನರ್ಮದೆಯು ಉತ್ತರ–ದಕ್ಷಿಣ ಭಾರತದ ಗಡಿಯಾದಳು. “ನರ್ಮದೆಯ ದಕ್ಷಿಣ ತೀರವನ್ನು ಹರ್ಷನ ಕುದುರೆಗಳು ಮುಟ್ಟಲಿಲ್ಲ” — ಬಾಣಭಟ್ಟನ ವಾಕ್ಯ ಇತಿಹಾಸವಾಯಿತು. ಪುಲಕೇಶಿಯ ವಿಜಯದಿಂದ ದಕ್ಷಿಣ ಭಾರತದ ಗೌರವ ಅಕ್ಷಯವಾಯಿತು.

೩. ವಿಜಯನಗರದ ಕೃಷ್ಣದೇವರಾಯ: ಬುದ್ಧಿ, ಬಲ ಮತ್ತು ಕಾವ್ಯದ ಚಕ್ರವರ್ತಿಹಂಪಿಯ ಕಲ್ಲುಗಳು ಹಾಡುತ್ತಿದ್ದವು — “ರಾಜಾಧಿರಾಜ ಕೃಷ್ಣದೇವರಾಯ ಬಂದರು!” ಅವರ ಕಾಲ ವಿಜಯನಗರದ ಚಿನ್ನದ ಯುಗವಾಗಿತ್ತು. ಸೇನೆಗಳು ಶಕ್ತಿಶಾಲಿ, ಜನರು ಸಂತೋಷಿ, ಕಲೆಗಳು ಉಜ್ವಲ. ಒಮ್ಮೆ ರಾಜ ಸಭೆಯಲ್ಲಿ ಪಂಡಿತರು ತೆನಾಲಿರಾಮನನ್ನು ಪರೀಕ್ಷಿಸಲು ಕೇಳಿದರು:“ಜಗತ್ತಿನಲ್ಲಿ ಅತಿ ಭಾರವಾದ ವಸ್ತು ಯಾವದು?” ತೆನಾಲಿರಾಮ ನಗುತ ಹೇಳಿದರು:“ರಾಜನ ಕಣ್ಣು ಮುಚ್ಚುವ ಮುನ್ನ ಜನರ ಕಣ್ಣೀರು. ಅದು ಅತಿ ಭಾರವಾದುದು.” ರಾಜನು ಮೌನವಾಗಿ ನಿಂತು ಹೇಳಿದರು:“ನಿನ್ನ ಬುದ್ಧಿಯು ನನ್ನ ರಾಜ್ಯದ ಕಿರೀಟದ ಹೂವಂತೆ.” ಅವರ ರಾಜ್ಯದ ಎಂಟು ಕವಿಗಳನ್ನು “ಅಷ್ಟದಿಗ್ಗಜರು” ಎಂದರು.ಕೃಷ್ಣದೇವರಾಯನ ಆಮುಕ್ತಮಾಲ್ಯದೇ ಕೃತಿ ದೇವದರ್ಶನದಂತೆ ಇಂದಿಗೂ ಓದಲ್ಪಡುತ್ತದೆ.

೪. ರಾಜಾ ಒಡೆಯರ್: ದೇವಿಯ ಕನಸಿನ ಮೈಸೂರು. ಮೈಸೂರು ಬೆಟ್ಟಗಳ ನಡುವೆ ಶಾಂತ ರಾತ್ರಿ.
ರಾಜಾ ಒಡೆಯರ್ ಕನಸಿನಲ್ಲಿ ದೇವಿಯ ರೂಪವನ್ನು ಕಂಡರು. ಆಕೆ ಚಾಮುಂಡಿಯಂತೆ ಕತ್ತಿಯುಳ್ಳವಳು, ಕರುಣೆಯುಳ್ಳವಳು. ಆಕೆ ಹೇಳಿದರು “ನಿನ್ನ ರಾಜ್ಯ ನನ್ನ ಆಶೀರ್ವಾದದಿಂದ ಬೆಳೆಯುತ್ತದೆ. ನನ್ನ ನಾಮದಲ್ಲಿ ನಗರ ನಿರ್ಮಿಸು.”ಬೆಳಗಿನ ಸೂರ್ಯೋದಯದ ಜೊತೆ ರಾಜನು ದೇವಿಯ ಮಂದಿರ ನಿರ್ಮಿಸಲು ಪ್ರಾರಂಭಿಸಿದ. ಇಂದಿನ ಚಾಮುಂಡಿ ಬೆಟ್ಟದ ದೇವಾಲಯ ಆ ಕನಸಿನ ಸಾಕ್ಷಿ.
ಮೈಸೂರಿನ ಜನರು ಹೇಳುತ್ತಾರೆ “ನಮ್ಮ ನಗರ ದೇವಿಯ ಆಶೀರ್ವಾದದಿಂದ ಹುಟ್ಟಿದುದು.” ಆದರಿಂದಲೇ ದಸರೆಯ ಹಬ್ಬ ಮೈಸೂರು ಹೃದಯದ ಉತ್ಸವವಾಯಿತು.
ರಾಜಾ ಒಡೆಯರ್ “ಮೈಸೂರಿನ ಸ್ಥಾಪಕ”ನಾಗಿ ಜನಮನದಲ್ಲಿ ನೆಲೆಯಾದ.

೫. ಚಿಕ್ಕದೇವರಾಜ ಒಡೆಯರ್: ಊರಿನ ಹಳ್ಳಿಯೊಂದರಲ್ಲಿ ರೈತರು ಬೆಳೆ ಬತ್ತಿದ ಕಾರಣದಿಂದ ನೊಂದಿದ್ದರು.ಒಂದು ಸಂಜೆ, ಒಬ್ಬ ವೇಷಧಾರಿ ಅತಿಥಿ ಅವರ ಮಧ್ಯೆ ಬಂದು ಕುಳಿತ. ಅವನು ರಾಜನೇ ಎಂಬುದು ಯಾರಿಗೂ ಗೊತ್ತಿರಲಿಲ್ಲ. ರೈತರು ಹೇಳಿದರು:“ನಮ್ಮ ರಾಜನ ಕಣ್ಣೀರು ನಮಗೆ ಸಿಕ್ಕಿಲ್ಲ, ನೀರೇ ಇಲ್ಲ!” ಆ ಮಾತು ರಾಜನ ಹೃದಯವನ್ನು ಚುಚ್ಚಿತು.
ಮುಂದಿನ ದಿನದಿಂದ ಕಾಲುವೆ ನಿರ್ಮಾಣ ಆರಂಭವಾಯಿತು. ನೀರಿನ ಹರಿವಿನೊಂದಿಗೆ ಹಳ್ಳಿಗಳಲ್ಲಿ ನಗು ಹರಿಯಿತು.
ಚಿಕ್ಕದೇವರಾಜ ಒಡೆಯರ್ ಜನರ ಕಣ್ಣೀರನ್ನು ನಗುವಾಗಿಸಿದ “ದೇವರಾಯ ರಾಜ”ನಾದರು.ಅವರ ಕಾಲದಲ್ಲಿ ಮೈಸೂರಿನ ಕೃಷಿ, ಆಡಳಿತ, ಮತ್ತು ಕಲೆಗಳು ಹೊಸ ಜೀವ ಪಡೆದವು.
ಐವರು ವಿಕ್ರಮಾದಿತ್ಯನ ಕಾವ್ಯಬುದ್ಧಿ, ಪುಲಕೇಶಿಯ ಧೈರ್ಯ, ಕೃಷ್ಣದೇವರಾಯನ ಬುದ್ಧಿವೈಭವ, ರಾಜಾ ಒಡೆಯರ್‌ನ ಭಕ್ತಿ, ಮತ್ತು ಚಿಕ್ಕದೇವರಾಜ ಒಡೆಯರ್‌ನ ದಯೆ ಎಲ್ಲರೂ ಸೇರಿ ಕನ್ನಡದ ಚಕ್ರವರ್ತಿ ಪರಂಪರೆಯ ಪಂಚನಕ್ಷತ್ರಗಳಂತೆ ಹೊಳೆಯುತ್ತಾರೆ ಅಲ್ಲವೇ ನೀವೇನಂತೀರಿ?
@ಹನಿಬಿಂದು@
14.10.2025

ಕಥೆ

ಜವಾಬ್ದಾರಿ....

ಒಂದು ಹಳ್ಳಿಯ ತುದಿಯಲ್ಲಿ ಚಿಕ್ಕ ಮನೆ ಒಂದಿತ್ತು. ಆ ಮನೆಯಲ್ಲಿ ಕಮಲಾ ಎಂಬ ವೃದ್ಧೆ ವಾಸಿಸುತ್ತಿದ್ದಳು. ವಯಸ್ಸು ಅರವತ್ತನ್ನು ದಾಟಿದ್ದರೂ ಕಮಲಾ ಚುರುಕುತನ ಕಳೆದುಕೊಂಡಿರಲಿಲ್ಲ. ಆಕೆಯ ಜೊತೆ ಇದ್ದದ್ದು ಹತ್ತು ವರ್ಷದ ಮೊಮ್ಮಗಳು ಶಶಿಕಲಾ. ಕಣ್ಣಿನಲ್ಲಿ ಕುತೂಹಲ, ಮನಸ್ಸಿನಲ್ಲಿ ಕನಸುಗಳಿಂದ ತುಂಬಿದ ಹುಡುಗಿ.ಅಜ್ಜಿ ಸಾಕಿದ ಮೊಮ್ಮಗಳು!
ಶಶಿಕಲಾಳ ತಾಯಿ ವಿಮಲಾ. ಕಮಲೆಯ ಏಕೈಕ ಮಗಳು. ವಿಮಲಾ ಯೌವನದಲ್ಲೇ ಗಂಡನನ್ನು ಕಳೆದುಕೊಂಡು, ಬದುಕಿನ ಹೊರೆ ಹೊತ್ತು ನಗರಕ್ಕೆ ತೆರಳಿದ್ದಳು. “ಹೊಸ ಬದುಕು ಕಟ್ಟಿಕೊಳ್ಳಬೇಕು” ಎಂಬ ಆಶಯದಲ್ಲಿ ಕೆಲಸ ಹುಡುಕಿಕೊಂಡಿದ್ದಳು. ನಗರ ಜೀವನದಲ್ಲಿ ಶೋಕಿ ವ್ಯಕ್ತಿ ನವೀನ ದಾಸ ವಿಮಲೆಯ ಬದುಕಿಗೆ ಕಾಲಿಟ್ಟ. ಅವನ ಸಿಹಿ ಮಾತುಗಳಿಗೆ ಮತ್ತು ಹಣಕ್ಕಾಗಿ ಮೋಹಗೊಂಡು ವಿಮಲಾ ತನ್ನ ಮಗಳು ಶಶಿಕಲಾಳ ಕಡೆ ಗಮನ ಕೊಡದೆ ಹೋದಳು. ಅಜ್ಜಿಯ ಮನೆಗೆ ಬಿಟ್ಟು ಬಂದಿದ್ದ ಮಗಳನ್ನು ತಿಂಗಳಿಗೆ ಒಂದು ಬಾರಿ ಹಣ ಕೊಟ್ಟು, ವರ್ಷಕ್ಕೆ ಎರಡು ಬಟ್ಟೆ ತಂದು ಕೊಟ್ಟು ತನ್ನ ಕರ್ತವ್ಯ ಮುಗಿಸಿದಂತಾಗುತ್ತಿದ್ದಳು.

ಕಮಲೆಗೆ ಶಶಿಕಲಾ ಜೀವಕ್ಕಿಂತ ಪ್ರಿಯಳು. ಆದರೆ ಆ ಪ್ರೀತಿ ಮಮತೆಯ ರೂಪದಲ್ಲಿಗಿಂತ ಶಿಸ್ತು ಮತ್ತು ಕೆಲಸದ ರೂಪದಲ್ಲೇ ತೋರುತ್ತಿತ್ತು. “ಏ ಶಶಿಕಲೆ, ನೀರು ತಂದುಕೊಡು, ಹಸುಗಳಿಗೆ ಹುಲ್ಲು ಹಾಕು! ಮನೆಯಲ್ಲಿ ಕೊಂಚ ಅಚ್ಚು ಮಾಡು!” ಎಂದು ದಿನವೂ ಕಮಲಾ ಶಶಿಕಲಾಳನ್ನು ಕರೆದಾಡುತ್ತಿದ್ದಳು. ಶಶಿಕಲಾ ಮೌನವಾಗಿ ಕೆಲಸ ಮಾಡುತ್ತಿದ್ದರೂ ಅಜ್ಜಿಯ ಪ್ರೀತಿಯ ಅಂತರಾಳವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಕಮಲೆಯ ಬೈಗುಳದೊಳಗೆ ಮಮತೆ ತುಂಬಿಕೊಂಡಿತ್ತು — “ಈ ಹುಡುಗಿಯನ್ನು ನಾನು ಸಾಕದಿದ್ದರೆ ಯಾರು ನೋಡಿಕೊಳ್ಳುತ್ತಾರೆ?” ಎಂಬ ಕಳಕಳಿ ಕೂಡಾ ಇತ್ತಾದರೂ ಕೆಲಸವೇನೂ ಕಡಿಮೆ ಮಾಡಿಸಿಕೊಳ್ಳುತ್ತಿರಲಿಲ್ಲ. ಅಪ್ಪ ಇಲ್ಲದ ಅನಾಥ ಹೆಣ್ಣು ಮಗು, ಮುಂದಿನ ಖರ್ಚುಗಳು ತನ್ನ ಮೇಲೆ ಬರುವವೊ ಎಂಬ ತಾತ್ಸಾರವೋ ಎನ್ನುವಂತೆ ಶಶಿಕಲಾಳನ್ನು ಸಾಕುತ್ತಿದ್ದಳು.

ವರ್ಷಗಳು ಕಳೆಯುತ್ತಾ ಹೋದವು. ಶಶಿಕಲಾ ಹದಿನಾರು ವರ್ಷದಾಗುತ್ತಿದ್ದಂತೆ ಕಮಲೆಯ ಆರೋಗ್ಯ ಕುಸಿಯತೊಡಗಿತು. ಒಂದು ಸಂಜೆ ಶಶಿಕಲಾ ಅಜ್ಜಿಗೆ ಕಾಫಿ ಕೊಟ್ಟಾಗ, ಕಮಲಾ ನಿಧಾನವಾಗಿ ಹೇಳಿದಳು — “ನಿನ್ನ ತಾಯಿ ನನ್ನ ಮಾತು ಕೇಳಿ ಮನೆಗೆ ಬಂದ್ರೆ ನನಗೆ ಚೇತರಿಸಿಕೊಳ್ಳುವ ವಿಶ್ವಾಸ ಬರುತ್ತದೆ, ಆದರೆ ಆಕೆ ಲೋಕದ ಮೋಹದಲ್ಲಿ ಮುಳುಗಿದ್ದಾಳೆ.” ಅಷ್ಟರಲ್ಲಿ ವಿಮಲಾಳ ಬದುಕಿನಲ್ಲಿ ಬದಲಾವಣೆ ಬಂತು. ಶೋಕಿ ಹೊತ್ತ ಆಕೆಯ ಪ್ರಿಯಕರ ಮತ್ತೊಬ್ಬ ಹುಡುಗಿಯ ಜೊತೆ ತೆರಳಿಬಿಟ್ಟ. ಆಘಾತಗೊಂಡ ವಿಮಲಾ ತನ್ನ ತಪ್ಪು ಅರಿತುಕೊಂಡಳು. “ನಾನು ತಾಯಿಯಾಗಿ ನನ್ನ ಕರ್ತವ್ಯ ಮರೆಯುತ್ತಿದ್ದೆ,” ಎಂದುಕೊಂಡು ತಕ್ಷಣ ಹಳ್ಳಿಗೆ ಬಂದು ತಾಯಿಯ ಮನೆ ತಲುಪಿದಳು. ಅಲ್ಲಿ ಕಮಲಾ ಹಾಸಿಗೆಯಲ್ಲೇ ಅಸ್ವಸ್ಥಳಾಗಿದ್ದಳು. ಮಗಳನ್ನು ನೋಡಿ ಕಣ್ಣೀರು ಹಾಕುತ್ತಾ “ಈಗ ಬುದ್ದಿ ಬಂತೇ ನಿನಗೆ?” ಎಂದು ನಗುತ್ತಾ ಆ ಮೊಮ್ಮಗಳ ಕಡೆ ನೋಡುತ್ತಾಳೆ. ಆ ದಿನದಿಂದ ವಿಮಲಾ ತನ್ನ ಮಗಳ ಬದುಕನ್ನು ಬದಲಿಸುವ ನಿರ್ಧಾರ ಕೈಗೊಂಡಳು.

ಹಳ್ಳಿಯ ಸರಕಾರಿ ಶಾಲೆಯಲ್ಲಿ ಓಡುತ್ತಿದ್ದ ತನ್ನ ಮಗಳನ್ನು ವಿಮಲಾ ನಗರಕ್ಕೆ ಕರೆತಂದು ಅಲ್ಲಿಯ ಉತ್ತಮ ಶಾಲೆಗೆ ಸೇರಿಸಿದಳು. ಹಳ್ಳಿಯ ಶಾಲೆಯಿಂದ ಆರಂಭವಾದ ಪಾಠದ ಹಾದಿ ನಗರಕ್ಕೆ ತಲುಪಿತು. ಶಶಿಕಲಾ ಹಗಲು ಓದಿನಲ್ಲಿ, ರಾತ್ರಿ ತಾಯಿಯ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಳು. ಕಷ್ಟದ ಜೀವನವನ್ನು ಎದುರಿಸುತ್ತಾ, ವರ್ಷಗಳ ಪರಿಶ್ರಮದ ಫಲವಾಗಿ ಶಿಕ್ಷಕಿಯಾಗಿ ನೇಮಕವಾಯಿತು. ಆ ದಿನ ತಾಯಿಯ ಕಣ್ಣಲ್ಲಿ ತೃಪ್ತಿಯ ಕಣ್ಣೀರು ಕಾಣಿಸಿಕೊಂಡಿತ್ತು.

ಆದರೆ ಕಮಲಾ ಆ ಸಂತೋಷವನ್ನು ನೋಡಲಿಲ್ಲ. ಶಶಿಕಲಾ ಕಾಲೇಜು ಮುಗಿಸುತ್ತಿದ್ದ ಸಮಯದಲ್ಲಿ ಕಮಲಾ ಈ ಲೋಕ ತ್ಯಜಿಸಿದಳು. ಅಜ್ಜಿಯ ಅಂತ್ಯಕ್ರಿಯೆಯ ದಿನ ಶಶಿಕಲಾ ನಿಂತು ಕಣ್ಣೀರಿನಿಂದ ಹೇಳಿದಳು — “ಅಜ್ಜಿ, ನಿನ್ನ ಕಠಿಣ ಪ್ರೀತಿಯೇ ನನಗೆ ಬಲ ಕೊಟ್ಟಿತು.ಇನ್ಯಾರು ನನಗೆ?" ಎಂದು ಅಳುತ್ತಿದ್ದಳು.

ಶಶಿಕಲಾಳ ಮದುವೆಯನ್ನು ವಿಮಲಾ ಸರಳ ರೀತಿಯಲ್ಲಿ ಮಾಡಿಸಿದಳು. ಮಗಳ ಬಾಳು ಹಾದಿಯ ಮೇಲೆ ನಿಂತು ತಾನು ಶಾಂತಿಯನ್ನು ಹುಡುಕತೊಡಗಿದಳು. ಕೆಲವು ವರ್ಷಗಳ ನಂತರ ವಿಮಲಾ ಮತ್ತೊಬ್ಬ ವಿನೋದ್ ಎನ್ನುವವನನ್ನು ಮದುವೆಯಾಗಿ ಹೊಸ ಬದುಕು ಪ್ರಾರಂಭಿಸಿದಳು. ಈ ಬಾರಿ ಅದು ಪ್ರೇಮಕ್ಕಿಂತಲೂ ಶಾಂತಿಯ ಬದುಕು. ವಿನೋದ್ ಕೂಡಾ ಬೇರೆ ಹೆಣ್ಣಿನಿಂದ ಮೋಸಕ್ಕೆ ಒಳಗಾಗಿದ್ದವನು. ವಿಮಲಾಳನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿದನು.

ಶಶಿಕಲಾ ತನ್ನ ತಾಯಿಯ ಹೊಸ ಬದುಕನ್ನು ನೋಡಿ ನಗುತ್ತಿದ್ದಳು. ಮನೆಯಲ್ಲಿ ಕಮಲೆಯ ನೆನಪು, ವಿಮಲೆಯ ಪಾಠ ಮತ್ತು ತನ್ನ ಪರಿಶ್ರಮ ಈ ಮೂರು ತಲೆಮಾರಿನ ಕಥೆ ಒಂದು ವೃತ್ತದಂತೆ ಪೂರ್ಣಗೊಂಡಿತು.

ಆ ಮನೆಯಲ್ಲಿ ಇಂದು ಹಳೆಯ ಗೋಡೆಗಳ ನಡುವೆಯೂ ಒಂದು ಮಾತು ಕೇಳಿಸುತ್ತಿದೆ —
“ಪ್ರೀತಿ ಬಾಯಲ್ಲಿ ಹೇಳುವದಲ್ಲ, ಬದುಕಿನಲ್ಲಿ ತೋರಿಸುವುದು ಮುಖ್ಯ.ಇದನ್ನರಿತು ಬಾಳು."
@ಹನಿಬಿಂದು@
14.10.2025



ಪಾಠ

ಗಣತಿಯಿಂದ ಪಾಠ ಕಲಿತದ್ದು..ಟ್ರೈನಿಂಗ್ ಸಿಗದ ಕಾರಣ ಗಣತಿ ಮುಗಿದ ಬಳಿಕ ಇದೆಲ್ಲಾ ಗೊತ್ತಾದದ್ದು...
1. ಮುಚ್ಚಿದ ಬಾಗಿಲುಗಳ ಮನೆ ಇರಬಹುದು. ಹಾಗಾಗಿ ಸೂಪರ್ವೈಸರನ್ನು ಒಟ್ಟಿಗೆ ಕರೆದುಕೊಂಡು ಹೋಗಿ ಅವರ ಮೊಬೈಲ್ ಮೂಲಕ ಅದನ್ನು ಡಿಲೀಟ್ ಮಾಡಿಸಬೇಕು.
2. ಬಾಗಿಲು ಮುಚ್ಚಿದ ಮನೆಗಳ photo gprs map ಸಹಿತ ತೆಗೆದಿಡಬೇಕು.
3. ಆಧಾರ್ ಕಾರ್ಡ್ ಬಳಸಿ ಎಷ್ಟು ಮನೆ ಮಾಹಿತಿ, ರೇಷನ್ ಕಾರ್ಡ್ ಬಳಸಿ ಮಾಹಿತಿ ನೀಡಿದ ಮನೆಗಳು ಎಷ್ಟು ಎಂಬ ಲೆಕ್ಕ ಬರೆದಿಡಬೇಕು.
4. DM ನಂಬರ್ ಅನ್ನು ಪ್ರತಿ ಮನೆಯ UHID no ಬರೆದ ಕೆಳಗೆ ಬರೆದಿಡಬೇಕು.
5. ಹೊಸ UHID ಕ್ರಿಯೇಟ್ ಮಾಡಿದ ಮನೆಗಳ RR no note ಮಾಡಿ ಇಟ್ಟುಕೊಳ್ಳಬೇಕು.
6. ಎಲ್ಲಾ ಮನೆಯ ಜನರ UHID, ADAAR, RATION CARD, NAME, PHONE NO, RR no ಇದೆಲ್ಲ ನಮ್ಮ ಬಳಿ ಇದ್ದರೆ ಒಳ್ಳೆಯದು.
7. ನಿರಾಕರಣೆ, closed, ಬೇರೆ UHID create ಮಾಡಿದ ಮನೆಗಳ ಪಟ್ಟಿ ಬೇರೆಯೇ ಇದ್ದು ಅವುಗಳ RRNo ಯಜಮಾನನ ಹೆಸರಿನ ಸಮೇತ ತಪ್ಪದೆ note ಮಾಡಿ ಇಟ್ಟಿರಬೇಕು.
8. ಮನೆಯವರ, ಮನೆಯ ಮಾಹಿತಿ ಸಿಗಬೇಕಾದರೆ ಲೈನ್ಮನ್ ಅಥವಾ ಮೆಸ್ಕಾಂ ಸಂಪರ್ಕಿಸಬಹುದು. ಆದರೆ ಅವರ RR no ಕಡ್ಡಾಯವಾಗಿ ತಿಳಿದಿರಬೇಕು.
9. ಎರಡೆರಡು ಬಾರಿ ಒಂದು ಮನೆಯ ಗಣತಿ ಮಾಡಲು ಆಗದು. ಹೊಸ UHID ಕ್ರಿಯೇಟ್ ಮಾಡಿದರೂ ಕೂಡಾ.
10. ನಮ್ಮ ಊರು ಬೇರೆ ಜಿಲ್ಲೆಯಲ್ಲಿ ಇದ್ದರೂ ಕೂಡಾ ನಮ್ಮ ಮನೆಯ ಗಣತಿಯನ್ನು ನಾವೇ ಮಾಡಿಕೊಳ್ಳಬಹುದು.
11. ಗುರಿ ಸಾಧಿಸುವುದು ಮುಖ್ಯ. ಯಾರ ಮನೆಯನ್ನು ಬೇಕಾದರೂ ಗಣತಿ ಮಾಡಬಹುದು. ಬೇಕಾ ಬಿಟ್ಟಿಯಾಗಿ ರಸ್ತೆ ಬದಿಯಲ್ಲಿ ಕಾಣುವ ಎಲ್ಲಾ ಮನೆಗಳನ್ನು ಕೂಡಾ.
12. ಆದರೆ ನಮ್ಮ ಪಟ್ಟಿಯಲ್ಲಿ ಇರುವ ಮನೆಗಳನ್ನು ಇತರರು ಮಾಡದೆ ಹೋದರೆ ನೀವು ಬೇರೆಯವರ 200 ಮನೆ ಮುಗಿಸಿದರೂ ಸಹ ನಿಮ್ಮ ಮನೆಗಳನ್ನು ನೀವೇ ಗಣತಿ ಮಾಡಬೇಕು.
13. ಗಣತಿಯ ಜೊತೆ ಜೊತೆಗೆ ಸೂಪರ್ವೈಸರ್ ಜನ ಇಲ್ಲದ, ಅಂಗಡಿ ಮೊದಲಾದ ಮನೆಗಳನ್ನು delete ಮಾಡುತ್ತಾ ಹೋಗಬೇಕು.
14. ಆಧಾರ್ ಕಾರ್ಡ್ ವೆರಿಫಿಕೇಶನ್ ಗೆ ಮೊದಲು ಅದಕ್ಕೆ ಕೊಟ್ಟ ಮೊಬೈಲ್ phone ಜೊತೆಗೆ ಇರಬೇಕಾದ್ದು ಕಡ್ಡಾಯ.
15. Ration card ಡಿಲೀಟ್ ಆಗಿದ್ದರೆ, ಆಧಾರ್ ಕಾರ್ಡ್ ಗೆ ಕೊಟ್ಟ ಮೊಬೈಲ್ ಫೋನ್ ನಂಬರ್ ಇಲ್ಲದೆ ಹೋದರೆ ಗಣತಿ ಸಾಧ್ಯ ಇಲ್ಲ.
16. ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ಪರವೂರಿನಿಂದ ಬಂದು ಇರುವವರು ರಜೆಯಲ್ಲಿ ಬಂದಿದ್ದರೆ ಪುಣ್ಯ.
17. ಗಣತಿ ನಿರಾಕರಿಸಿದರೆ ನಮ್ಮ ಟಾರ್ಗೆಟ್ಗೆ ಕೊಕ್. ಲೆಕ್ಕಕ್ಕೆ ಜಾಸ್ತಿ ಕೆಲಸ.
18. ಎರಡು ಮೂರು ಜನ ಒಟ್ಟಿಗೆ ಹೋಗಿ ಎರಡು ಮೂರು ಮೊಬೈಲ್ ಫೋನುಗಳಲ್ಲಿ ಬೇಕಾದರೂ(ಗಣತಿಗೆ ಹೆಸರು ಇಲ್ಲದ ವಿದ್ಯಾರ್ಥಿಗಳೂ) ಕೂಡಾ ಅವರ ಗೆಳೆಯ, ಗೆಳತಿಯರ, ಪೋಷಕರ ಹೆಸರಿನಲ್ಲಿ ಒಂದೇ ಸಲಕ್ಕೆ ಬೇಗ ಬೇಗ ಗಣತಿ ಮಾಡಿ ಮುಗಿಸಿ ಟಾರ್ಗೆಟ್ ರೀಚ್ ಆಗಬಹುದು. ಇದಕ್ಕೆ ಯಾವುದೇ ರೆಸ್ಟ್ರಿಕ್ಷನ್s ಇಲ್ಲ.
19. ಒಟ್ಟಾರೆ ನಮ್ಮ ಯಾವುದೇ ಮನೆ pending ಲಿಸ್ಟಿನಲ್ಲಿ ಇರಬಾರದು.
20. ಯಾವುದೇ ಮನೆಗೆ ಹೊಸ UHID ಬಳಸಿದ್ದರೆ ಅದರ RR no ಕೊಟ್ಟು ಅದನ್ನು ವ್ಯಾಲಿಡೇಟ್ ಮಾಡುವ ಎಕ್ಸ್ಟ್ರಾ ಕೆಲಸ ನಮ್ಮ ಮೇಲಿದೆ.
21. ಬೀಗ ಹಾಕಿರುವ ಮತ್ತು ಖಾಲಿ ಇರುವ ಎಲ್ಲಾ ಮನೆಗಳ ಲೊಕೇಶನ್ ಮತ್ತು ಪೋಟೋ ಕಡ್ಡಾಯವಾಗಿ ಅವುಗಳ ಡಿಲಿಷನ್ ಗೆ ಬೇಕು.
22. ಮನೆ ಗಣತಿ ಆಗದೆ ಹೋದರೆ ಸೂಪರ್ವೈಸರ್ ಗೆ ಸೂಕ್ತ ಕಾರಣ ನೀಡಬೇಕು.
23. ಬೇರೆ ಜಿಲ್ಲೆಗಳ ಗಣತಿಯನ್ನು ಕೂಡಾ ಮಾಹಿತಿ ಕೊಡುವವರು ಇದ್ದರೆ ಇಲ್ಲಿಂದಲೇ ಮಾಡಿ ಮುಗಿಸಬಹುದು.
24. ಮೊಬೈಲ್ ಗೆ ತೊಂದರೆ ಆದರೆ, ನೆಟ್ ಪ್ಯಾಕ್ ಇಲ್ಲದೆ ಹೋದರೆ ಯಾವುದೇ ಕಾರಣಕ್ಕೂ ಈ ಲೆಕ್ಕಾಚಾರ ಸಾಧ್ಯ ಇಲ್ಲ.
25. ಒಂದು ಮನೆಯಲ್ಲಿ ಒಬ್ಬರೇ ಇದ್ದರೂ ಕೂಡಾ ಕನಿಷ್ಠ ಪಕ್ಷ ಅರ್ಧ ಗಂಟೆ ಸರಿಯಾಗಿ ಮಾಹಿತಿ ನೀಡುವವರಿಗೆ ಬೇಕೇ ಬೇಕು. (ಕೆಲವರಿಗೆ ರೇಷನ್ ಕಾರ್ಡ್/ಆಧಾರ್ ಕಾರ್ಡ್ ವೋಟರ್ ಐಡಿ ಹುಡುಕಿ ತರಲು ಇನ್ನೂ ಅರ್ಧ ಗಂಟೆ ಬೇಕು.)
26. ಎಲ್ಲರೂ ಕೆಲಸಕ್ಕೆ, ಶಾಲೆಗೆ ಹೋದ ಬಳಿಕ ಮನೆಯಲ್ಲಿ ಇರುವುದು ತುಂಬಾ ವಯಸ್ಸಾದ ಹಿರಿಯರು ಮಾತ್ರ. ಅವರಲ್ಲಿ ಈ ಎಲ್ಲಾ ಮಾಹಿತಿ ಪಡೆಯಲು ಗಣತಿದಾರರು ಹರಸಾಹಸ ಮಾಡಬೇಕು. ಹೆಚ್ಚಿನ ಜನರಿಗೆ ಅವರ ಫೋನ್ ನಂಬರ್ ಗೊತ್ತಿಲ್ಲ, ಒಟಿಪಿ ನೋಡಲು ಕೂಡ ಬರುವುದಿಲ್ಲ. ದೇವಸ್ಥಾನ, ಕಾರ್ಯಕ್ರಮಗಳಿಗೆ ಹೊರಟವರಿಗೆ ಮಾಹಿತಿ ಕೊಡಲು ಸಮಯ ಇರುವುದಿಲ್ಲ. ಅವರಿಗೆ ಉತ್ತರ "ನಾಳೆ ಬನ್ನಿ."
27. ನಾನು ಮಾಹಿತಿ ಕೊಡುವುದಿಲ್ಲ, ಇದು ನನಗೆ ಇಷ್ಟ ಇಲ್ಲ ಏನು ಬೇಕಾದರೂ ಮಾಡಿಕೊಳ್ಳಿ " ಎಂದವರಿಗೆ ಉತ್ತರ ಒಂದು ಸಣ್ಣ ನಗು, ಅಷ್ಟೇ.
28. ಇಷ್ಟೆಲ್ಲಾ ಲೆಕ್ಕ ತೆಗೆದುಕೊಂಡು ನಮಗೆ ಏನು ಕೊಡುತ್ತೀಯಮ್ಮಾ ಎಂದವರಿಗೆ ನಾವೇನು ಕೊಡಲು ಸಾಧ್ಯ?
29. ನೀವೇನು ಎಲ್ಲಾ ಲೆಕ್ಕ ಕೇಳಿ ಕೊಟ್ಟು ನಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಿಸುತ್ತೀರಾ? ನಮ್ಮ ಜಾತಿ ಬದಲಾಯಿಸುತ್ತೀರಾ? ಸರಕಾರದಿಂದ ಒಳ್ಳೆಯ ರಸ್ತೆ ಸ್ಯಾಂಕ್ಷನ್ ಮಾಡಿಸುತ್ತೀರಾ ಎಂದವರಿಗೆ ಕೊಡಲು ನಮ್ಮ ಬಳಿ ಇರುವ ಉತ್ತರ ಮೌನ.
30. ನನ್ನ photo, ಒಟಿಪಿ ನಿಮಗೇಕೆ ಬೇಕು, ನಾವು ಗ್ಯಾಸ್ ಇದ್ದರೂ ಕಟ್ಟಿಗೆಯಲ್ಲೇ ಅಡುಗೆ ಮಾಡೋದು ಹಾಗೆಯೇ ಬರ್ಕೊಳ್ಳಿ, ಅದೇನು ಕೊಡುತ್ತೀರೋ ಮನೆಗೆ ಒಬ್ಬರಿಗೆ ಸರಕಾರಿ ಕೆಲಸ ಕೊಡಿಸಿ ಎಂದವರಿಗೆ ಹೇಳಲು ನಮ್ಮ ಬಳಿ ಸೈಲೆನ್ಸ್ ಬಿಟ್ಟರೆ ಏನಿಲ್ಲ.
ಇದಿಷ್ಟು ಅರ್ಥ ಮಾಡಿಡಿಕೊಟ್ಟ, ಕೆಲವರ ಮನೆಯ ಬಡತನ, ಸಿರಿತನ, ಕಷ್ಟ ಸುಖಗಳನ್ನು ತೋರಿಸಿಕೊಟ್ಟ, ನಾವು ನಾವೇ ಶಿಕ್ಷಕರು ಗಲಾಟೆ ಮಾಡಿಕೊಳ್ಳುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿ ಕೊಟ್ಟ, ನಾಲ್ಕೈದು ಜನ ಒಂದೇ ಮನೆಗೆ ತಿರುಗಿ ಮನೆಯವರೇ ಸುಸ್ತಾಗುವ ಹಾಗೆ ಮಾಡಿದ, ಟೀಚರ್ಸ್ ಗೆ ಬೇರೆ ಕೆಲಸ ಇಲ್ಲ ಎಂದು ಮನೆಯವರೆಲ್ಲಾ ಆಡಿಕೊಳ್ಳುವ ಹಾಗೆ ಮಾಡಿದ ಗಣತಿಯಿಂದ ಬಡವರು ಉದ್ಧಾರ ಆಗಲಿ. ಎಲ್ಲಾ ಜಾತಿಯ ಜನರಿಗೆ ಅವರ ಬಡತನದ ಆಧಾರದ ಮೇಲೆ ಕೆಲಸ ಸಿಗಲಿ, ದುಡಿಯಲು ಆಗದೆ ಒಬ್ಬರೇ ಇರುವ ಹಿರಿಯ ಜೀವಗಳಿಗೆ ಉಚಿತ ಸೌಲಭ್ಯ ಸಿಗಲಿ ಎಂಬ ಶುಭ ಆಶಯಗಳೊಂದಿಗೆ, ಮುಂದಿನ ಗಣತಿಯನ್ನು ಹೋಲ್ ಸೇಲ್ ವ್ಯಾಪಾರ ಮಾಡದೆ ಸರಿಯಾಗಿ, ಒಂದೇ ತೆರನಾಗಿ ಹಂಚಿ ಕೊಟ್ಟು ಅವರವರ ಏರಿಯಾ ಅವರೇ ಮಾಡಿ ಮಾಹಿತಿ ಕೊಡುವ ಹಾಗೆ ಮಾಡಿ ಎಂದು ಮೇಲಧಿಕಾರಿಗಳ ಗಮನಕ್ಕೆ ತಿಳಿಯಪಡಿಸುತ್ತಾ, ಮಹಿಳೆಯರಿಗೂ, ದೈಹಿಕ ಅಸ್ವಸ್ಥರಿಗೂ ಹಲವಾರು ತೊಂದರೆಗಳು ಇರುತ್ತವೆ. ಮನೆಗಳೂ ಕೂಡಾ ದೂರ ದೂರ ಇರುತ್ತವೆ, ಸರಿಯಾದ ಸಮಯಕ್ಕೆ ಹಳ್ಳಿಗಳಿಗೆ ಬಸ್ಗಳು ಇರುವುದಿಲ್ಲ. ಹಾಗಾಗಿ ಟಾರ್ಗೆಟ್ ಕೊಟ್ಟು ಕೊಲ್ಲಬೇಡಿ ಮತ್ತು ದೈಹಿಕ ಅನಾರೋಗ್ಯ (ನಡುವೆ) ಕಾಣಿಸಿದರೆ ಅದಕ್ಕೆ ವಿಶ್ರಾಂತಿಗೆ ಅವಕಾಶ ಕೊಡಿ ಎಂಬ ದಯನೀಯ ಬೇಡಿಕೆ ಇಡುತ್ತಾ, ಇಷ್ಟೊಂದು ಕಾಡಬೇಡಿ ರಜೆಯ ಸಮಯದಲ್ಲಿ ಶಿಕ್ಷಕರನ್ನು ಎಂದು ಕೇಳಿಕೊಳ್ಳುತ್ತಾ, ಎಲ್ಲರಿಗೂ ಒಳಿತಾಗಲಿ, ಈ ಒಳಿತಿನ ಕಾರ್ಯಕ್ಕೆ ನಾವೂ ಕಾರಣಕರ್ತರಾಗಲಿ ಎಂಬ ಶುಭ ಆಶಾ ಭಾವನೆಗಳೊಂದಿಗೆ,
@ಹನಿಬಿಂದು@
17.10.2025


ಕಥೆ


ಸೀತೆಯ ಬದುಕಿನ ಬೆಳಕು

ಸೀತಾ ಎಂಬ ಹೆಸರಿನ ಆಕೆ ಜೀವನದ ಕಠಿಣ ಪರೀಕ್ಷೆಗಳನ್ನು ಎದುರಿಸಿದವಳು. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಳು. ಸಂಬಳ ಅಷ್ಟೇನೂ ಹೆಚ್ಚಾಗಿರಲಿಲ್ಲ. ಆದರೆ ಆ ಕೆಲಸವೇ ಆಕೆಗೆ ಆತ್ಮ ಸಂತೋಷದ ಮೂಲವಾಗಿತ್ತು. ಹಿರಿಯರು ಜಾತಕ, ಉದ್ಯೋಗ ಎಲ್ಲಾ ನೋಡಿ ಮದುವೆ ಮಾಡಿ ಕೊಟ್ಟ ಗಂಡನು ಒಂದು ದಿನ ಎಲ್ಲವನ್ನೂ ಬಿಟ್ಟು ಬೇರೆ ಮದುವೆಯಾಗಿದ್ದ ಮತ್ತು ಎರಡನೇ ಹೆಂಡತಿಯ ಬಳಿಯೇ ನೆಲೆಸಿದ್ದ. ಅದು ಯಾವ ಮೋಡಿ ಮಾಡಿ ಬಿಟ್ಟಿದ್ದಳೋ ಆಕೆ ತಿಳಿಯದು. ಆ ದಿನದಿಂದ ಸೀತಾಳ ಜೀವನ ಬದಲಾಯಿತು. ಇಬ್ಬರು ಚಿಕ್ಕ ಮಕ್ಕಳ ಜವಾಬ್ದಾರಿ ಸಂಪೂರ್ಣವಾಗಿ ಆಕೆಯ ಹೆಗಲ ಮೇಲೆ ಬಂತು.

ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಆಕೆಗೆ ಆಕೆಯ ತವರು ಕುಟುಂಬದ ಸಹಕಾರವೇ ಇರಲಿಲ್ಲ. ಯಾರೂ ಆಕೆಯ ನೋವನ್ನು ಗಮನಿಸಲಿಲ್ಲ. ರಾತ್ರಿ ಹೊತ್ತು ಕಣ್ಣೀರು ಹಾಕಿಕೊಂಡು ಮಕ್ಕಳ ನಿದ್ರೆ ನೋಡುವ ಸೀತಾಳ ಮನದಲ್ಲಿ ಒಂದು ನಿರ್ಧಾರ ಮಾತ್ರ — “ನನ್ನ ಮಕ್ಕಳು ನನ್ನಂತಾಗಬಾರದು.”

ಬೆಳಗ್ಗೆ ಕೆಲಸಕ್ಕೆ ಹೋಗಿ, ಸಂಜೆ ಮನೆಗೆ ಬಂದು ಅಡುಗೆ ಮಾಡುತ್ತಾ, ಮಕ್ಕಳ ಪಾಠ ಕೇಳಿಸುತ್ತಾ ಆಕೆ ತನ್ನ ಜೀವನದ ಪ್ರತಿಯೊಂದು ಕ್ಷಣವನ್ನೂ ಬಲಿದಾನ ಮಾಡಿದಳು. ಅನೇಕ ದಿನಗಳು ಹೊಟ್ಟೆ ಬಿದ್ದರೂ ಮಕ್ಕಳ ಹೊಟ್ಟೆ ಖಾಲಿ ಬಿಡಲಿಲ್ಲ. ದೇವರ ದಯೆಯಿಂದ, ಮಕ್ಕಳಿಬ್ಬರೂ ಬುದ್ಧಿವಂತರು. ಸೀತಾಳ ಪ್ರಾರ್ಥನೆ ಮತ್ತು ಶ್ರಮದಿಂದ ಅವರು ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿದರು.
ಕಾಲ ಕ್ರಮೇಣ, ಮಗನೊಬ್ಬ ಇಂಜಿನಿಯರ್ ಆಗಿ, ಮಗಳು ವೈದ್ಯೆಯಾಗುವಷ್ಟು ಮುನ್ನಡೆದರು. ಅವರು ದೊಡ್ಡ ನೌಕರಿಗಳಲ್ಲಿ ಸೇರಿ ತಾಯಿಯ ತಲೆ ಎತ್ತುವಂತೆ ಮಾಡಿದರು. ಒಂದು ದಿನ, ಸೀತಾಳ ಮಕ್ಕಳು ಆಕೆಯನ್ನು ಕರೆದುಕೊಂಡು ವಿದೇಶಕ್ಕೆ ಕರೆದೊಯ್ದರು. ಮತ್ತು ಅಲ್ಲಿ ಆಕೆ ಮೊದಲ ಬಾರಿಗೆ ತಾನು “ಒಂಟಿ” ಅಲ್ಲ ಎಂಬ ಭಾವನೆ ಅನುಭವಿಸಿದಳು.
ಒಮ್ಮೆ ಕಣ್ಣೀರುಗಳಿಂದ ತುಂಬಿದ ಆಕೆಯ ಕಣ್ಣುಗಳು ಈಗ ಹೆಮ್ಮೆಯಿಂದ ಕಂಗೊಳಿಸುತ್ತಿದ್ದವು. ಸೀತಾಳ ಕಥೆ ಜೀವನದ ಒಂದು ಸತ್ಯವನ್ನು ನೆನಪಿಸುತ್ತದೆ — ಒಂಟಿತನದಲ್ಲೂ ನಂಬಿಕೆ ಇರಲಿ; ಶ್ರಮ ಮತ್ತು ದೇವರ ದಯೆ ಇದ್ದರೆ ಅಸಾಧ್ಯವೆಂಬುದೇ ಇಲ್ಲ. ಎಲ್ಲರಿಗೂ ನಾಲ್ಕು ಜನರಂತೆ ಬಾಳುವ ಒಂದು ದಿನ ಬಂದೇ ಬರುತ್ತದೆ.
@ಹನಿಬಿಂದು@
13.10.2025


ಕಥೆ by Diya


ಅಮ್ಮನ ಮಾತು ಯಾಕೆ ಕೇಳ್ಬೇಕು?

ಮಾಲೂರು ಎಂಬುದು ಒಂದು ಚಿಕ್ಕ ಹಳ್ಳಿ. ಅಲ್ಲಿ ಒಂದು ಸುಂದರ ಮನೆಯಲ್ಲಿ ಮಿಂಟು ಎಂಬ ಬೆಕ್ಕು ತನ್ನ ಪುಟ್ಟ ಮಗ ಚಿಂಟು ಜೊತೆ ವಾಸಿಸುತ್ತಿತ್ತು. ಚಿಂಟು ಕಪ್ಪು ಬಿಳಿ ಬಣ್ಣದ, ಚುರುಕು ಕಣ್ಣುಗಳ, ಕುತೂಹಲದಿಂದ ತುಂಬಿದ್ದ ಬೆಕ್ಕುಮರಿ. ಆದರೆ ಅವನಿಗೆ ಒಂದು ಚಿಕ್ಕ ತೊಂದರೆ ಇತ್ತು. ಅದೇ ಅವನು ತುಂಬಾ ಹಠಮಾರಿ! ಅಮ್ಮನ ಮಾತು ಕೇಳುವುದು ಅವನಿಗೆ ಇಷ್ಟವಿರಲಿಲ್ಲ.

ಒಂದು ಬೆಳಗ್ಗೆ ಮಿಂಟು ಅಮ್ಮ ಚಿಂಟುವಿಗೆ ಹೇಳಿತು:
“ಚಿಂಟು, ಮನೆ ಹೊರಗೆ ಹೋಗ್ಬೇಡ, ನದಿ ಪಕ್ಕದಲ್ಲಿ ದೊಡ್ಡ ನಾಯಿಯಿದೆ. ಅದು ಸಣ್ಣ ಬೆಕ್ಕುಮರಿಗಳನ್ನು ಓಡಿಸಿ ಹಿಡಿದು ಸಾಯಿಸಿಬಿಡುತ್ತದೆ!”

ಆದರೆ ಚಿಂಟು ಮುಖದ ಮೇಲೆ ನಗು ತಂದು ಜೋರಾಗಿ ಹೇಳಿದ: "ನನಗೆ ಯಾವುದೂ ಆಗಲ್ಲ ಅಮ್ಮಾ! ನಾನು ವೇಗವಾಗಿ ಓಡಬಹುದು!” ಎಂದು ಕೂಗಿ, ಓಡಿ ಹೋದ.
ಅಮ್ಮ ಎಷ್ಟೋ ಸಲ ಕರೆದರೂ, ಚಿಂಟು ಕೇಳಲಿಲ್ಲ. ಅವನು ನದಿಯತ್ತ ಓಡಿ, ಕಲ್ಲುಗಳ ಮೇಲೆ ಕುಣಿದು, ಜಿಗಿದು ಆಡತೊಡಗಿದ. ಆಕಸ್ಮಿಕವಾಗಿ ಹತ್ತಿರದ ಹುಲ್ಲಿನಲ್ಲಿ ಒಂದು ದೊಡ್ಡ ನಾಯಿ “ಬೌ! ಬೌ!” ಎಂದು ಬೊಗಳಿತು. ಚಿಂಟು ಬೆದರಿದ, ಅವನ ಕಿವಿಗಳು ನಿಂತವು, ಕಾಲುಗಳು ಕಂಪಿಸಿದವು. ಅವನು ಬಹಳ ವೇಗವಾಗಿ ಓಡಿದನು, ತನ್ನ ಪುಟ್ಟ ಪಾದಗಳು ಮಣ್ಣಿನಲ್ಲಿ ಹೂತು, ಮತ್ತೆ ಜಾರಿ ಬಿದ್ದು ಬಿಟ್ಟವು.

ಅಮ್ಮ ಮಿಂಟು ಇದನ್ನು ದೂರದಿಂದ ನೋಡುತ್ತಿದ್ದಳು. ತಕ್ಷಣ ಓಡಿ ಬಂದು ಚಿಂಟುವನ್ನು ತನ್ನ ಬಾಯಲ್ಲಿ ಕಚ್ಚಿಕೊಂಡು ಸುರಕ್ಷಿತವಾಗಿ ಮನೆಗೆ ತಂದಳು. ಚಿಂಟು ಅಮ್ಮನ ಹೊಟ್ಟೆಯ ಮೇಲೆ ನಾಚಿಕೊಂಡು ಬಿದ್ದ. ಮಿಂಟು ಅವನ ತಲೆಯನ್ನು ತಟ್ಟಿ ಮೃದುವಾಗಿ ಹೇಳಿತು: “ನೋಡು ಚಿಂಟು, ನಾನು ನಿನ್ನನ್ನು ಕೇವಲ ಭಯಪಡುವುದಕ್ಕೆ ಮಾತ್ರ ಹೇಳಲ್ಲ. ನಿನ್ನ ಒಳ್ಳೆಯದಕ್ಕೇ ಹೇಳುತ್ತೇನೆ. ಅಮ್ಮನ ಮಾತು ಕೇಳೋದರಲ್ಲಿ ತಪ್ಪೇನಿಲ್ಲ, ಬಾಳು ತುಂಬಾ ಸುಲಭವಾಗುತ್ತದೆ.” ಚಿಂಟು ತಲೆಯಾಟಿ ಹೇಳಿದ: “ಕ್ಷಮಿಸು ಅಮ್ಮಾ. ನಾನು ಮುಂದಿನ ಸಲ ನಿನ್ನ ಮಾತು ಕೇಳ್ತೀನಿ.”

ಆ ದಿನದಿಂದ ಚಿಂಟು ಬದಲಾದ. ಬೆಳಗ್ಗೆ ಎದ್ದೊಡನೆ ಅಮ್ಮನ ಜೊತೆ ಹಾಲು ಕುಡಿದು, ಹಿತವಾಗಿ ಆಡಿ, ಅಮ್ಮ ಹೇಳಿದುದನ್ನೆಲ್ಲಾ ಶ್ರದ್ಧೆಯಿಂದ ಕೇಳುತ್ತಿದ್ದ. ಹಳ್ಳಿಯಲ್ಲೆಲ್ಲಾ “ಚಿಂಟು ಬದಲಾಗಿದ್ದಾನೆ” ಎಂಬ ಸುದ್ದಿ ಹರಡಿತು.
ಮಿಂಟು ಅಮ್ಮನ ಮುಖದಲ್ಲಿ ತೃಪ್ತಿಯ ನಗು ಕಾಣಿಸಿತು. ಚಿಂಟು ಅಮ್ಮನ ಬದಿಯಲ್ಲಿ ಮಲಗಿ ಯೋಚಿಸುತ್ತಿದ್ದ –
“ಅಮ್ಮನ ಮಾತು ಕೇಳೋದು ಎಷ್ಟೋ ಚೆನ್ನಾಗಿದೆ! ಅದು ಪ್ರೀತಿ ತುಂಬಿದ ಮಾರ್ಗದರ್ಶನ.”
ಅಂದು ಸಂಜೆ ಆಕಾಶದ ನಕ್ಷತ್ರಗಳು ಮಿಂಟು ಮತ್ತು ಚಿಂಟುವಿನ ಮನೆಯ ಮೇಲೆ ಮಿನುಗುತ್ತ, ಅವರ ಮಮತೆಯ ಕಥೆ ಹೇಳಿದವು.
ನೀತಿ: ಅಮ್ಮನ ಮಾತು ಯಾವಾಗಲೂ ಪ್ರೀತಿಯಿಂದ ಕೂಡಿರುತ್ತದೆ . ಆದ್ದರಿಂದ ಅದನ್ನು ಕೇಳಿದರೆ ಜೀವನ ಸುರಕ್ಷಿತವಾಗುತ್ತದೆ.
–ದಿಯಾ ಉದಯ್

chitkaa

ಚಿಟ್‌ಕಾ 

ಬರ್ಸ
ಪೋಪುಜಿ ಬರ್ಸ ಈ ವರ್ಸೊಡು
ಪಿರ ಪಿರ ಜೋರು ದೊರಿಯೊಂದುಂಡು 
ನಾಯಿ ಕುದ್ಕೆ ಅರೆದಿಲೆಕ್ಕನೆ
ಕನ್ ಮುಚ್ಚಿಲ್ ಗೊಬ್ಬೊಂದುಂಡು 
@ಹನಿಬಿಂದು@
14.10.2025

ಸೋಮವಾರ, ಅಕ್ಟೋಬರ್ 6, 2025

ಲಿಮರಿಕ್

ಲಿಮರಿಕ್ 
ನವರಾತ್ರಿ

ದುಷ್ಟ ರಾಕ್ಷಸರ ಸದೆ ಬಡಿದವಳು
ಶಿಷ್ಟ ಜನಗಳ ಪೋಷಿಸುವವಳು
ಶಕ್ತಿ ಮಾತೆ ಧರೆ ಆಳುವಾಕೆ
ಯುಕ್ತಿಯಿಂದಲಿ ಸರ್ವರ ಪೊರೆವಾಕೆ
ನವಶಕ್ತಿಯಾಗಿ ದುರ್ಗೆಯಾಗಿ ಮೆರೆದವಳು
@ಹನಿಬಿಂದು@
23.09.2025

ಶುಕ್ರವಾರ, ಸೆಪ್ಟೆಂಬರ್ 26, 2025

ಮಂಗಳವಾರ, ಸೆಪ್ಟೆಂಬರ್ 23, 2025

ಲಿಮರಿಕ್

ಲಿಮರಿಕ್ 
ನವರಾತ್ರಿ

ದುಷ್ಟ ರಾಕ್ಷಸರ ಸದೆ ಬಡಿದವಳು
ಶಿಷ್ಟ ಜನಗಳ ಪೋಷಿಸುವವಳು
ಶಕ್ತಿ ಮಾತೆ ಧರೆ ಆಳುವಾಕೆ
ಯುಕ್ತಿಯಿಂದಲಿ ಸರ್ವರ ಪೊರೆವಾಕೆ
ನವಶಕ್ತಿಯಾಗಿ ದುರ್ಗೆಯಾಗಿ ಮೆರೆದವಳು
@ಹನಿಬಿಂದು@
23.09.2025

ಭಾನುವಾರ, ಸೆಪ್ಟೆಂಬರ್ 21, 2025

ಹನಿ ಮಿಡಿದಿದೆ

ಹನಿ ಮಿಡಿದಿದೆ

ಕಣ್ಣ ರೆಪ್ಪೆಯ ಸಣ್ಣ ಕೂದಲಿನ ತುದಿಯಷ್ಟು
ಮಣ್ಣ ಅತಿ ಸಣ್ಣ ಕಾಣದ ಬಿಂದುವಿನಷ್ಟು
ಸುಣ್ಣ ಹಾಕಿ ಉಳಿದ ಸೂಜಿಯ ಮೊನೆಯಷ್ಟು
ತಣ್ಣನೆಯ ಮಂಜಿನ ಒಂದು ಹನಿಯಷ್ಟು
ಗಮನ ಸಮಯ ಪ್ರೀತಿಯ ಗೆಳೆತನ ಬೇಕಾಗಿದೆ..

ಇಂದಿಲ್ಲಿ ಈಗ ನಾಳೆ ಮರುಕ್ಷಣ ಮರುದಿನ ಅದೆಲ್ಲೋ  
ಮುಂದೆ ಕಣ್ಣೀರು ಜಾರಿ ಹೋದರೆ ಪಾತಾಳದಲ್ಲೋ 
ನಾನೆಂಬ ಪದ ಹೋಗಿ ಇನ್ಯಾರ ದೇಹದಲ್ಲೋ 
ಕಂದನಾಗಿ ಮತ್ತೆ ಹುಟ್ಟಿ ಅದ್ಯಾವ ಮಡಿಲಿನಲ್ಲೊ 
ಇಂದಿಲ್ಲಿ ಜೊತೆಯಾಗಿ ಇರುವಾಗ ಬಳ್ಳಿ ಮರದ ಆಸರೆಗೆ ಕಾದಿದೆ 

ಕಾಡಿ ಕಾಡಿ ನೀಡೆಂಬುದ ಮತ್ತೆ ಮತ್ತೆ  ಬೇಡಿದಂತೆ
ಕೂಡಿ ಬಾಳುವ ಸುಖವ ಕೊಡುವ ಭರವಸೆಯ ಬೆಳಕಂತೆ
ಹಾಡಿ ಹೊಗಳಿ ಕಲೆತು ಬಾಳುವ ಒಂದೇ ಉಸಿರಂತೆ
ಮೋಡಿ ಮಾಡಿ ಬೆಳೆಸುವ ಮಹಾನ್ ಕನಸುಗಾರನಂತೆ
ಜೋಡಿ ಬಳಸಿ ಬಂದಿಹುದು ನಯನವೆರಡು ಒಂದಾದಂತೆ

ಬೇಕು ಬೇಕೆಂಬ ತುಡಿತದ ಸವಾಲಿನ ಬದುಕು
ಬೇಕೆಂಬುದು ಸಿಗದೆ ಬೇಡವೆಂಬುದ ನೀಡುವ ವಿಧಿಯೆಡೆಗಿನ ಅಳುಕು
ಸಾಕೆಂಬ ಒಂದು ಕ್ಷಣದ ಹೊಟ್ಟೆಯ ಹಸಿವಿನ ತುಣುಕು
ಏಕೆಂಬುದೇ ತಿಳಿಯದೆ ಹಲವು ಕ್ಷಣ ಭಾವರಹಿತ ಸಿಡುಕು
ಮತ್ತದೇ ಗೆಳೆತನಕೆ ಆಶಿಸುವ  ವಿಧ ವಿಧ ಪರಿಯ ಮಿಡಿತದ ಇಣುಕು
@ಹನಿಬಿಂದು@
22.09.2025

ಬುಧವಾರ, ಸೆಪ್ಟೆಂಬರ್ 10, 2025

ಮಾಜಂದೀ ಗಾಯ

ಮಾಜಂದಿ ಗಾಯೊ

ಈ ಎನ್ನ ಬಾಲ್ ಗ್ ಬತ್ತ
ಖುಷಿ ಕೊರ್ಪ ಪಂದೆ ನೆಂತೆ
ಕೈಪೆದ ಬಿತ್ತ್ ಪಾಡ್ದ್ ಪೋಯತ್ತ
ನನ ಅವೆನೆಂಚ ತಾಂಗೊನೊಡು ಮಿತ್ತ್..

ಮೈಕ್ ಮಾತ್ರತ್ ಇನಿ
ಈ ಉಡಲ್ ಗ್ಲಾ ಬೇನೆ ಕೊರ್ಯ 
ಸೈತ್ ಪೋಪಿನಡೆ ಆಯೆ
ಬೇನೆನ್ ಪಟ್ಟೊನುನು ಏರ್ಯ..

ಕೈತಲ್ ಬನ್ನಗ ಬರ್ಪುಂಡು ಕೋಪ
ಮೂಂಕು ಮುಟ್ಟ ಪರ್ದ್ ಬೂರ್ದು 
ಬೆನಂದೆ ಏರೆನ್ಲಾ ತೂವಂದೆ 
ಏರ್ಲಾ ಪನ್ಯ ಕೇನಂದೆ 
ತನ್ನೊಚ್ಚಿಡೆ ನಡತನ ಬುಡಂದೆ
ಇನಿ ಪೂರ ಬುಡ್ದು ಪೋಯೆರಾ ಪನoದೆ 

ಯಾನ್ ನಿಕ್ಕಾದ್ ಎನ್ನ ಬಾಲ್‌ನ್ ದಾಯೆ
ಹಾಲ್ ಮಲ್ತೊನೊಡು ಇತ್ತೆ
ಓಡೆ ಬೊಡಾಂಡ ಪೋಲ
ಎನ್ನಾತೆಗೆ ಯಾನ್ ನನ 
ನಿನ್ನಾತೆಗೆ ಈ ಯಾನ್ ನಿಕ್ ಕನ
ನಿನ್ನ ಬಾಲ್‌ವೆಡ್ ನನ ಯಾನಿಜ್ಜಿ
ಎನ್ನ ಉಡೆದ್ ಪೋಯಿನ ಕನ್ನಡಿದ
ತುಂಡು ತುಂಡುಡುಲಾ ಈ ಇಜ್ಜ..
@ಹನಿಬಿಂದು@
10.09.2025

ಶುಕ್ರವಾರ, ಆಗಸ್ಟ್ 29, 2025

To my Chinnu

❤️Love you Chinnu

Chinnu mamma always loves you
She tells you to read for your life
Mom never hates her child forever
She expects a baby to build her life for a good future

Even in my absence you should be strong
My wish to you always my daughter should share knowledge to others
I love you and only you always
Mom rashly tells you to read for your goodness of better tomorrow

Think that mom never let others scold you
But it's her responsibility to make you bold and wise
Always parents expect their children to be in top
It's not a pressure or torture it's a new hope

My pretty daughter should score good marks
I never punished you scoring less or bit
But have I no right to scold you or tell you good words?
Thousand miles to travel and keep a single step with new hope..

I'm yours you are my world ever
Nobody for me in this world to say you are mine other than you
My life is dedicated to you today and tomorrow
My goals are on you and my time is for you..I'm always with you.

Never think that mothers expect more
Think that I must do my good being a lovely child and my princess
You are cute, innocent, bold and wise
Mamma expects the good health of your eyes ...

Avoiding mobile is good for children
It kills the time and spoils the brain cells, thoughts brighten
Be grateful to be a daughter of a teacher
Be happy always being my friend and guide,a superstar

You are my future model Miss World heroin love and all
You are my name fame and super power
No torture no scoldings or angry
It's the first step of your bright future degree
You are gold, diamond, butterfly and platinum
Be happy always and keep the people happy including mom

You are my cute pie and lovely child forever
You are my life my dream together
Without you I'm alone here and there
You are the queen of tomorrow in my future..
Love you ever and ever
Love and live your future with goals to be bigger .

Hit the bad one with your power and nature
Let the others feel difficult to reach your tower
Grow like a rock and to the society as a power
Be always helper to the needy, aged and poor.

As you know in the society people are bad and danger
For such a society be stronger and stronger
But be always my smile and my lovely daughter
Let the smile bloom in your face forever..

Yours and only yours loving
-@HoneyBindu@ ❤️
30.08.2025

ಸೋಮವಾರ, ಆಗಸ್ಟ್ 25, 2025

ಗಣೇಶ ಸ್ತುತಿ

*ಗಣಪತಿ ಸ್ತುತಿ*

*ವಂದನೆ ವಂದನೆ ಕೋಟಿ ವಂದನೆ*
*ಮೊದಲ ಪೂಜೆಯ ನಾಯಕ ಗಣಪನೆ//*
*ತಂದೆ ತಾಯಿಯರ ಪ್ರಪಂಚ ಎಂದೆ* 
*ಸವಿ ಸವಿ ಕಡುಬನು ಸೇವಿಸಿ ನಿಂದೆ//ಪಲ್ಲವಿ//*

*ಮೂಷಿಕ ವಾಹನ ಮೋದಕ ಕರದಲಿ*
*ಮೂರ್ಲೊಕಡೊಡೆಯ ಪೋಷಕ ಜೊತೆಯಲಿ*
*ಮುದ್ದು ಮಗನು ನೀ ಸೊಂಡಿಲ ಅಧಿಪತಿ*
*ಮೋದದಿ ಕಾಯೋ ಬೇಡುವೆ  ಗಣಪತಿ//*

*ಚಾಮರ ಕರ್ಣ ವಿಘ್ನ ವಿನಾಶಕ*
 *ಎಡೆಬಿಡದೆಮ್ಮನು ಕಾಯೋ ವಿನಾಯಕ*
*ಲಕ್ಷ್ಮೀ ಸರಸ್ವತಿ ಜೊತೆ ಕುಳಿತಿರುವ*
*ಮಾತೆಯ ಪ್ರಿಯಸುತ ನೀನಾಗಿರುವೆ//*
@ಹನಿಬಿಂದು@
26.08.2025

ಮಂಗಳವಾರ, ಆಗಸ್ಟ್ 12, 2025

ಸಾಲ

*ಸಾಲ*

ಸಾಲದ ಸಾಲದಲ್ಲಿ ಮುಳುಗದಿರು ತಮ್ಮಾ
ಸೋಲು ಅನುಭವಿಸುವೆ ಶಾಪ ಬಿದ್ದು ತಿಮ್ಮ
ಸಾಲ ಪಡೆದುಕೊಂಡು ಕೊಡಲಾಗದ ಸ್ಥಿತಿ ತಲುಪುವೆ 
ಕೇಳಿದಾಗ ನುಣುಚಿಕೊಳ್ಳಲು ಆರಂಭಿಸುವೆ 

ಮತ್ತೆ ಮತ್ತೆ ಕೇಳುವನು ಕೊಟ್ಟ ಆ ಪುಣ್ಯವಂತ
ಕೊಡದೆ ಹೋದರೆ ಬಿಡಲಾರ ಮಹಾ ಬುದ್ಧಿವಂತ
ಕೊಟ್ಟವ ಕೋಡಂಗಿ ಈಸ್ಕೊಂಡವ ಈರಬದ್ರನಂತೆ 
ಅದು ಹಳೇ ಗಾದೆ ಈಗ ಹೊಸತಿಹುದಂತೆ 

ಸೈಬರ್ ಕಳ್ಳರು ಬಹಳ ಹೆಚ್ಚಿಹರಂತೆ
ಕುಳಿತಲ್ಲಿಂದಲೇ ನಮ್ಮ ಖಾತೆಗೆ ಕನ್ನ ಹಾಕುವರಂತೆ
ಬ್ಯಾಂಕಲ್ಲಿ ಕಾಸಿಡುವ ಕಾಲ ಇಂದಲ್ಲವಂತೆ
ಇನ್ಕಮ್ ಟ್ಯಾಕ್ಸ್ ನವರಿಗೂ ಅದು ಗೊತ್ತಾಗುವುದಂತೆ

ಮನೆಯಲ್ಲಿ ಇಟ್ಟರೆ ನೋಟು ಬ್ಯಾನು 
ಬ್ಯಾಂಕ್ ನಲ್ಲಿ ಇಟ್ಟರೆ ಟ್ಯಾಕ್ಸ್ ವ್ಯಾನು
ದುಡ್ಡಿದ್ದವನೇ ಈಗ  ದೊಡ್ಡಪ್ಪನಂತೆ
ಆದರೆ ಅದನ್ನಿಡಲು ಜಾಗವೇ ಇಲ್ವಂತೆ!

ಮೂಟೆ ಮೂಟೆ ಬಿಸಾಕಿದರು ನೋಟು ಬ್ಯಾನ್ ಸಮಯದಲ್ಲಿ
ಒಂದೆರಡು ಲಕ್ಷ ಯಾರ ಕೈಲೂ ಇಲ್ಲ ಇಲ್ಲಿ
ಯಾವುದೇ ಬ್ಯಾಂಕ್ ಅಲ್ಲಲ್ಲಿ ಮುಳುಗಲಿ 
ಎಲ್ಲರ ಲಕ್ಷಗಳು ತೊಳೆದು ಹೋಯ್ತಲ್ಲಿ !!

ಮನೆಯಲ್ಲೂ ಭಯ ಬ್ಯಾಂಕಲ್ಲೂ ಭಯ
ದುಡ್ಡಿಲ್ಲದವನಿಗೆ ಎಲ್ಲಾದರೇನು ಯಾಕೆ ಭಯ?
ದುಡಿದದ್ದು ಬದುಕಲು, ವ್ಯಾಪಾರ ಲಾಭವೀಗ!!
ಅಲ್ಲೂ ಉಂಟಂತೆ ಕಾಂಪಿಟೇಶನ್ ಬಹಳವೀಗ!!

ದುಡ್ಡಿದ್ದರೆ ತಾನೇ ಟೆನ್ಶನ್ ಭಯ ಗಾಬರಿ
ನಮ್ಮಲ್ಲಿ ಏನಿಲ್ಲದಾಗಲೂ ಟೆನ್ಶನ್ ಬರೋಬರಿ!!
ಮದುವೆ ಆಗಿಲ್ಲ ಮನೆ ಕಟ್ಲಿಲ್ಲ ಕೆಲಸ ಸಿಕ್ಕಿಲ್ಲ
ಮತ್ತೆ ಯಾವಾಗ ಉತ್ತರ ಈ ಪ್ರಶ್ನೆಗಳಿಗೆಲ್ಲ?

ಮತ್ತೆ ಕೊನೆಗೆ ಓಡಿ ಪಡೆಯಬೇಕು ಸಾಲ
ಪರರಿಗೆ ತಿನ್ನಿಸದೆ ಇದ್ದರೂ ಕಟ್ಟಬೇಕಲ್ಲ ಕೋಲ 
ನನ್ನದಲ್ಲದಿದ್ದರೂ ಇಹರು ಮನೆಯಲ್ಲಿ ಮಡದಿ ಮಕ್ಕಳು
ಹಣವಿಲ್ಲದೆ ಸಾಲ ಮಾಡಿ ನಾ ಹಲವರ ಬಾಯಿಗೆ ಸಿಗಲು!

ಕೆಲಸವಿಲ್ಲ , ಮನೆಯಲ್ಲಿ ಬೇಕಾದ್ದು ಕೊಳ್ಳಲು ಹಣವಿಲ್ಲ
ಕಳ್ಳತನ ಮಾಡುವಂತಹ ಕಲೆಗಳನು ಅರಿತಿಲ್ಲ
ದುಡಿದರೂ ಸಂಬಳ ಪರರಂತೆ ಸಾಲುತ್ತಿಲ್ಲ
ಫ್ರೀ ಬಸ್ ಹಣ ಇದ್ದರೂ ಬದುಕು ನಡೆಯುತ್ತಿಲ್ಲ!!!

ಸಾಲವೇ ಎಲ್ಲಾ ನಿನ್ನಿಂದಲೇ ಬದುಕೆಲ್ಲ..!!
ಹಿಂದೆ ಪಡೆದವನಿಗೆ ಕೊಡಲು ಧನವಿಲ್ಲ
ಬ್ಯಾಂಕ್ ಲೋನ್ ಕೊಳ್ಳಲು ಅಡವಿಡಲು ಏನಿಲ್ಲ
ದುಡ್ಡಿದ್ದವನಲ್ಲಿ ಪಡೆದರೆ ನಿತ್ಯ ಕೇಳುತಿಹನಲ್ಲ! 
@ಹನಿಬಿಂದು@
13.08.2025

ಸೋಮವಾರ, ಆಗಸ್ಟ್ 11, 2025

ಮನಕೆ ಮಾತು

ಮನಕೆ ಮಾತು

ಸೋಲಿಗೆ ಸೋಲದೆ ಇರೋಣ ಎಂದಿಗೂ
ಸೋಲು ನಮ್ಮ ಸೋಲಿಸುವ ಮೊದಲು
ಸೋಲನ್ನು ಸೋಲಿಸಿ ಗೆದ್ದು ತೋರಿಸೋಣ

ಸೋಲಿಗೆ ತಲೆ ಬಾಗದೆ ಸೋಲು ಸೋಲಿಸಿದೆ ಎಂದು ತಾ ಮೆರೆಯದಿರಲಿ
ಸೋಲನ್ನು ಸೋಲಿಸಿ ಸೋಲಿಗೆ ಸೋಲನು ಉಣಬಡಿಸಿ
ಸೋಲಿಗೂ ಸದಾ ಸೋಲಿಹುದು 
ಎನುವ ಸತ್ಯವ ಸಾರಿ ಬಿಡೋಣ

ಸೋಲು ನಮ್ಮ ಸೋಲಿಸುವ ಮೊದಲೇ
ನಾವು ಸೋಲನು ಸೋಲಿಸಿ ಗೆದ್ದು ತೋರಿಸೋಣ
ಸೋಲು ಗೆದ್ದೆನೆಂದು ಬೀಗುವ ಮೊದಲು ನಾವೇ ಸೋಲನು ಸೋಲಿಸಿ ಗೆಲುವ ಪಡೆದವರು ಎಂದು ಬೀಗಿ ಬಿಡೋಣ

ಸೋಲಿಗೆ ಸೋತು ಸುಣ್ಣವಾಗದೆ
ಸೋಲಿಗೆ ಅಂಜದೆ ಅಳುಕದೆ
ಸೋಲನ್ನು ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಿ
ಸೋಲನ್ನು ಹತ್ತಿ ಗೆಲುವನ್ನು ಮುಟ್ಟಿ ಬಿಡೋಣ

ಮನವೇ ನೀ ಸೋಲಿಗೆ ಸೋತರೆ ಸೇರುವೆ ಸೋತವರ ಸಾಲಿಗೆ
ಸೋಲು ನಮ್ಮ ಸೋಲಿಸುವ ಮೊದಲೇ
ಸೋಲಿಗಿಂತ ವೇಗವಾಗಿ ಓಡಿ ಸೋಲ ಸೋಲಿಸಿ ಮುಂದಾಗೋಣ
ಸೋಲು ಸೋತು ಹಿಂದಕ್ಕೋಡಿ ಹೋಗಲಿ
ಗೆಲುವಿನ ಬಾವುಟ, ಬಹುಮಾನ ಎಲ್ಲವೂ ನಮ್ಮದಾಗಲಿ..

ಸೋಲು ಸೋತು ದೂರ ಓಡಲಿ
ಗೆಲುವು ಪ್ರೀತಿಯಿಂದ ಬಿಗಿದಪ್ಪಿಕೊಳ್ಳಲಿ...
@ಹನಿಬಿಂದು@
10.08.2021

ಭಾನುವಾರ, ಆಗಸ್ಟ್ 10, 2025

ಚುಟುಕು

ಬೇಕು 

ಬದುಕುವ ಹಕ್ಕಿಗೆ ಹಕ್ಕಿನ ತೊಂದರೆ
ಹದ್ದಿನ ಕಣ್ಣಿಗೂ ಸ್ವಾತಂತ್ರ್ಯ ಬಂದರೆ!
ಮುದ್ದಿನ ಮನವದು ಹಾರದೇ ಇರುವುದೇ!
ಗುದ್ದಲು ಕೂಡ ಪ್ರೀತಿಯಲದೇ ಬೇಕಾಗಿದೆ!!
@ಹನಿಬಿಂದು@
10.08.2025

ಶನಿವಾರ, ಆಗಸ್ಟ್ 9, 2025

ಸೋದರನ ಕರೆ

ಭ್ರಾತೃತ್ವ ಬಂಧ 

ಸಹೋದರನ ಕರೆ

ತಂಗಿಯೇ ಬಳಿಯೇ ಇರಲಾರೆನು ನಿತ್ಯವೂ 
ಬೆಳೆಯಲು ಬೇಕು ನಮ್ಮ ಬಾಳು ಕ್ಷಣ ಕ್ಷಣವೂ
ಗಳಿಕೆಯು ಇರಲು ಸಂಬಂಧ ಸುಸೂತ್ರ
ಮಿಳಿತದ ಭಾವಕೆ  ಭ್ರಾತೃತ್ವ ಸ್ತೋತ್ರ//

ಕಾಣದ ಕೈಗಳ ಪ್ರೀತಿಯೂ ಇಹುದು
ದೂರದಿ ಸಂತೈಕೆಯ ಭಾವವೂ ನೆನಪಿಹುದು 
ಭಾರದ ಹೃದಯದಿ ಕಾಯಕ ಹಲವೆಡೆ
ರಕ್ಷೆಯು ಕೈಯಲಿ ಬಿಡದು ಕೆಡುವೆಡೆ..//

ಮನದಲಿ ನೆನಪು ಹೆಣಗದ ಹಾಗೆಯೇ
ಕನಸಲು ಬಯಸುವೆ ಒಳ್ಳೆಯ ಬಗೆಯೇ
ನೀನೆನಗೆ ನಾ ನಿನಗೆ ಸೋತಾಗ ಗೆದ್ದಾಗ
ಬೀಸಣಿಗೆ ಸೆಕೆಯಲಿ ಬಾಳಲಿ ಬಿದ್ದಾಗ//

ಒಳ್ಳೆಯತನ ನಮ್ಮುಸಿರ ಪವಿತ್ರ ಬಂಧವು
ರಕ್ಷಣೆಯ ನೀಡುವಲಿ ಸರ್ವ ಸ್ವಾತಂತ್ರ್ಯವು
ಭಾರತದ ಭವದ ಭಾವವಿದು ಬಾಡದಿರಲಿ
ಭವ್ಯ ಬದುಕಿನ ಬಳುವಳಿಯು ಬಸವಳಿಯದಿರಲಿ ..//
@ಹನಿಬಿಂದು@
10.08.2025