ಪ್ರೀತಿ
ನನ್ನ ನಿನ್ನ ನಡುವೆ ಬಂಧ
ಕಣ್ಣ ಸಂಚು ಮಾಡಿತು
ಸಣ್ಣ ಸಣ್ಣ ನೋಟವಿಂದು
ಬಣ್ಣದರ್ಥ ಕೊಟ್ಟಿತು
ನಿನ್ನೆ ಯಾರೋ ಇದ್ದವರು
ಮುನ್ನ ಒಟ್ಟು ಸೇರಲು
ಸುಣ್ಣದಂಥ ಬಿಳಿಯ ಪ್ರೀತಿ
ಮಣ್ಣ ಮೇಲೆ ಮೂಡಲು
ಭಿನ್ನ ಭಾವ ಬದಿಗೆ ಸರಿಸಿ
ತನ್ನ ನೋವ ಬೆರೆಸಿ
ಜ್ಞಾನ ಧಾರೆ ಹೆಚ್ಚಿಸುತ್ತಾ
ಹೃಣ್ಮನಗಳ ಸೇರಿಸಿ
ರನ್ನ ಮುದ್ದು ಆತ್ಮೀಯತೆ
ಪುಣ್ಯ ಕಾರ್ಯ ಮಾಡುತ
ಹೆಣ್ಣ ಜನ್ಮ ಸಾರ್ಥಕ್ಯದ
ಹೊನ್ನ ಭಾವ ಮೂಡುತ
@ಹನಿಬಿಂದು@
06.12.2025
ಶನಿವಾರ, ಡಿಸೆಂಬರ್ 6, 2025
ಭಾವಗೀತೆ
ಅಮ್ಮ
ಶುಕ್ರವಾರ, ಡಿಸೆಂಬರ್ 5, 2025
ತುಳು
ಸೋಮವಾರ, ಡಿಸೆಂಬರ್ 1, 2025
ಚಳಿಯ ಕಚಗುಳಿ
ಭಾನುವಾರ, ನವೆಂಬರ್ 30, 2025
ಡಿಸೆಂಬರ್ 22: ರಾಷ್ಟ್ರೀಯ ಗಣಿತ ದಿನ
ಜಗತ್ತಿನ ಹಬ್ಬ
ಒಮ್ಮೆ ಒಂದು ಶಾಲೆಯಲ್ಲಿ ಮಕ್ಕಳು ಆಟವಾಡುತ್ತಿದ್ದರು. ಹಠಾತ್ತಾಗಿ ಶಿಕ್ಷಕಿ ಎಲ್ಲರನ್ನು ಕರೆದರು.
“ಮಕ್ಕಳೇ, ನಾಳೆ ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನ ಆಚರಣೆ ಇದೆ,” ಎಂದರು.
ಎಲ್ಲ ಮಕ್ಕಳು ಆಶ್ಚರ್ಯದಿಂದ ಒಬ್ಬರನ್ನೊಬ್ಬರು ನೋಡಿಕೊಂಡರು.
“ಗಣಿತ ದಿನವೂ ಇದೆಯಾ, ಮ್ಯಾಡಂ?” ಎಂದು ರವಿ ಕೇಳಿದ.
“ಹೌದು ರವಿ,” ಅಂದರವರು ನಗುತ್ತಾ. “ಇದು ಸಾಮಾನ್ಯ ದಿನ ಅಲ್ಲ. ಭಾರತೀಯ ಗಣಿತ ಲೋಕಕ್ಕೆ ಕೀರ್ತಿ ತಂದುಕೊಟ್ಟ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ.”
ಎಲ್ಲರೂ ಕುತೂಹಲದಿಂದ ಅವರ ಮಾತನ್ನು ಕೇಳತೊಡಗಿದರು.
ಗಣಿತ ಎಂದರೆ ಏನು?
ಮ್ಯಾಡಂ ಹೇಳಿದರು:
“ನಿಮ್ಮಾರಿಗಂತೂ ಗಣಿತ ಅಂದರೆ ಪಾಠಪುಸ್ತಕ, ಲೆಕ್ಕ, ಪರೀಕ್ಷೆ… ಆದರೆ ಗಣಿತ ಪ್ರಕೃತಿಯ ಭಾಷೆ.
ಹೂವುಗಳು ಹೇಗೆ ಅರಳುತ್ತವೋ, ನಕ್ಷತ್ರಗಳು ಹೇಗೆ ಚಲಿಸುತ್ತವೋ—ಅದರ ಎಲ್ಲಲ್ಲಿ ಗಣಿತ ಅಡಗಿದೆ.”
ಮಕ್ಕಳು ಕಿಟಕಿಯ ಹೊರಗೆ ಹೂವುಗಳ ಮೇಲೆ ತಿರುಗುತ್ತಿದ್ದ ಚಿಟ್ಟೆಗಳನ್ನು ನೋಡಿ, “ಇದರಲ್ಲಿ ಗಣಿತ ಇದೆಯಾ?” ಎಂದು ಆಸಕ್ತಿಯಿಂದ ಕೇಳಿದರು.
“ಹೌದು,” ಮ್ಯಾಡಂ ಹೇಳಿದರು, “ಚಿಟ್ಟೆಗಳ ರೆಕ್ಕೆಗಳ ವಿನ್ಯಾಸಕ್ಕೂ ಗಣಿತದ ಒಪ್ಪಂದವಿದೆ!”
ಹಳೆಯ ಕಾಲದ ಗಣಿತಜ್ಞರು
ಶಿಕ್ಷಕಿ ಕಥೆಯಂತೆ ಹೇಳತೊಡಗಿದರು:
“ಬಹಳ ವರ್ಷಗಳ ಹಿಂದೆಯೇ ಭಾರತದಲ್ಲಿ ಆರ್ಯಭಟ, ಭಾಸ್ಕರಾಚಾರ್ಯ, ಮಹಾವೀರಾಂತಹ ಮಹಾನ ಗಣಿತಜ್ಞರು ಬದುಕಿದ್ದರು.
ಆರ್ಯಭಟರು ಪೈ ಎಂಬ ಸಂಖ್ಯೆಯ ಮೌಲ್ಯವನ್ನು ತಿಳಿಸಿದರು. ಭಾಸ್ಕರಾಚಾರ್ಯರ ‘ಲೀಲಾವತಿ’ ಎಂಬ ಪುಸ್ತಕದಲ್ಲಿ ತುಂಬಾ ಸುಲಭವಾಗಿ ಗಣಿತದ ಪ್ರಶ್ನೆಗಳು ಇವೆ.
ಅವರು ಮಾಡಿದ ಕೆಲಸಗಳು ಇಂದಿಗೂ ನಾವು ಬಳಸುವ ವಿಜ್ಞಾನಕ್ಕೆ ಬೇಸು.”
ಮಕ್ಕಳ ಕಣ್ಣುಗಳು ಇನ್ನಷ್ಟು ಚುರುಕಾಗಿದವು.
“ಏನು ಮ್ಯಾಡಂ! ಇಷ್ಟು ವರ್ಷಗಳ ಹಿಂದೆ ಅವರು ಇದನ್ನೆಲ್ಲಾ ಕಂಡುಹಿಡಿದಿದ್ರಾ?” ಎಂದು ಆಶ್ಚರ್ಯಪಟ್ಟರು.
ರಾಮಾನುಜನ್ – ಸಂಖ್ಯೆಗಳ ಮಂತ್ರಿಕ
ಮ್ಯಾಡಂ ಮುಂದುವರಿಸಿದರು:
“ಇವೆಲ್ಲರಿಗೂ ಮೇಲೆ, ಕೇವಲ 32 ವರ್ಷ ಬದುಕಿದರೂ ಗಣಿತ ಲೋಕದಲ್ಲಿ ಅಚ್ಚರಿ ಮೂಡಿಸಿದ ಒಬ್ಬ ವಿಸ್ಮಯ ಪ್ರತಿಭೆ ಇದ್ದ.
ಅವರ ಹೆಸರು–ಶ್ರೀನಿವಾಸ ರಾಮಾನುಜನ್.”
ಮಕ್ಕಳು ಆ ಹೆಸರನ್ನು ಮರುಮರು ಉಚ್ಛರಿಸಿದರು.
“ರಾಮಾನುಜನ್ ಬಡ ಕುಟುಂಬದವರು. ಆದರೆ ಅವರಿಗೆ ಸಂಖ್ಯೆಗಳು ಸ್ನೇಹಿತರಂತೆ.
ಬೀದಿ ದೀಪದ ಬೆಳಕಿನಲ್ಲೂ ಕುಳಿತು ಅವರು ಪ್ರಶ್ನೆಗಳನ್ನೇ ಪರಿಹರಿಸುತ್ತಿದ್ದರು.
ಗಣಿತ ಪುಸ್ತಕಗಳು ಕಡಿಮೆ ಇದ್ದರೂ ತಮ್ಮದೇ ಯೋಚನೆಯಿಂದ ಸಾವಿರಾರು ಹೊಸ ಸೂತ್ರಗಳನ್ನು ರಚಿಸಿದರು.”
ರವಿ ಕುತೂಹಲದಿಂದ ಕೇಳಿದ:
“ಮ್ಯಾಡಂ, 1729 ಅನ್ನೋ ಸಂಖ್ಯೆ ವಿಶೇಷ ಅಂತ ಹೇಳ್ತಾರೆ. ಯಾಕೆ?”
ಮ್ಯಾಡಂ ನಗು ತಡೆದುಕೊಳ್ಳಲಾಗದೆ ಹೇಳಿದರು:
“ಹಾರ್ಡಿ ಎಂಬ ಗಣಿತಜ್ಞರು ಆಸ್ಪತ್ರೆಯಲ್ಲಿ ತುಂಬಾ ಅಸ್ವಸ್ಥರಾಗಿದ್ದ ರಾಮಾನುಜನ್ ಅವರನ್ನು ಭೇಟಿ ಮಾಡಲು ಬಂದರು.
‘ನಾನು ಬಂದ ಟ್ಯಾಕ್ಸಿಯ ಸಂಖ್ಯೆ 1729; ಅದರಲ್ಲಿ ಯಾವುದೇ ವಿಶೇಷತೆ ಇಲ್ಲ’ ಎಂದು ಹೇಳಿದರು.
ಅಷ್ಟರಲ್ಲಿ ರಾಮಾನುಜನ್ ತಕ್ಷಣ ಉತ್ತರಿಸಿದರು:
‘ಅದು ವಿಶೇಷ ಸಂಖ್ಯೆ ಸಾರ್! ಅದು ಎರಡು ವಿಭಿನ್ನ ರೀತಿಯಲ್ಲಿ ಎರಡು ಘನಗಳ ಮೊತ್ತವಾಗಿ ಬರಬಹುದಾದ ಅತಿ ಚಿಕ್ಕ ಸಂಖ್ಯೆ!’
ಅವರು ಅಸ್ವಸ್ಥರಾಗಿದ್ದರೂ ಸಂಖ್ಯೆಗಳ್ಳಿಗೆ ಇಷ್ಟು ಸ್ಪಷ್ಟವಾಗಿ ಯೋಚಿಸಿದ್ದರು.”
ಮಕ್ಕಳು ಆಶ್ಚರ್ಯದಿಂದ ಬಾಯ್ಬಿಟ್ಟೇ ಕುಳಿತುಬಿಟ್ಟರು.
ಗಣಿತ ಎಲ್ಲೆಲ್ಲಿ ಇದೆ?
ಮೇಡಂ ಹೇಳಿದರು:
“ಮಕ್ಕಳೇ, ಗಣಿತ ಕೇವಲ ಲೆಕ್ಕವಲ್ಲ.
ನಿಮ್ಮ ಆಟದ ಚೆಂಡಿನ ಗೋಳಾಕೃತಿ,
ನಿನ್ನ ಮನೆಗೆ ಹೋಗುವ ರಸ್ತೆಯ ನೇರತೆ,
ನೀವು ದಿನವೂ ತಿನ್ನುವ ಹಣ್ಣಿನ ಬೀಜಗಳ ವಿನ್ಯಾಸ—ಎಲ್ಲವೂ ಗಣಿತವನ್ನು ಮಾತನಾಡುತ್ತವೆ.
ಮೊಬೈಲ್, ಕಂಪ್ಯೂಟರ್, ಜಿಪಿಎಸ್… ಇವೆಲ್ಲವೂ ಗಣಿತದಿಂದಲೇ ಸಾಧ್ಯ.”
ಈ ದಿನದ ಉದ್ದೇಶ
“ನಮ್ಮ ದೇಶದಲ್ಲಿ 2012ರಿಂದ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ,” ಮ್ಯಾಡಂ ಹೇಳಿದರು.
“ಈ ದಿನದ ಉದ್ದೇಶ:
– ಗಣಿತದ ಭಯವನ್ನು ಕಡಿಮೆ ಮಾಡುವುದು
– ಗಣಿತವನ್ನು ಆನಂದದಿಂದ ಕಲಿಸುವುದು
– ರಾಮಾನುಜನ್ ಅವರ ಸಾಧನೆಯನ್ನು ನೆನಪಿಸುವುದು
– ಹೊಸ ಪ್ರತಿಭೆಗಳನ್ನು ಬೆಳೆಸುವುದು”
ಮಕ್ಕಳು ತಕ್ಷಣ ಚಪ್ಪಾಳೆ ಹೊಡೆದು, “ನಾವು ಕೂಡಾ ಗಣಿತವನ್ನು ಹೊಸದಾಗಿ ಕಲ್ತೀನಿ ಮ್ಯಾಡಂ!” ಎಂದು ಹೇಳಿದರು.
ಶಿಕ್ಷಕಿ ಹೇಳಿದ ಕಥೆ ಎಲ್ಲ ಮಕ್ಕಳ ಮನಸ್ಸಿಗೂ ತಾಕಿತು.
ಗಣಿತ ಅಂದರೆ ಕಷ್ಟವಲ್ಲ, ಕುತೂಹಲ.
ಗಣಿತ ಅಂದರೆ ಒಣ ಅಂಕೆಗಳು ಅಲ್ಲ; ಪ್ರಕೃತಿ, ಕಲ್ಪನೆ, ಮತ್ತು ಸಮಸ್ಯೆ ಪರಿಹರಿಸುವ ಕಲೆ.
ಡಿಸೆಂಬರ್ 22 ಅವರುಗಳಿಗೆ ಕೇವಲ ಒಂದು ದಿನವಲ್ಲ;
ಸಂಖ್ಯೆಗಳ ಲೋಕವನ್ನು ಹೊಸ ಕಣ್ಣಿನಿಂದ ನೋಡಲು ಶುಭಾರಂಭವಾಗಿದೆ.
ಶುಕ್ರವಾರ, ನವೆಂಬರ್ 28, 2025
ಇಂದು
ಇಂದು
ಒಂದು ಎರಡು ಸಾಲದು
ಬಂದು ಬರಡು ಆಗದು
ಸಿಂಧುವಿನ ಚಿಲುಮೆಯಿದು
ಮುಂದೆ ದಾರಿ ತಿಳಿಯದು
ನಂದು ನಿಂದು ಬಗೆಯದು
ಸಂದು ಗೊಂದು ತುಂಬದು
ಕಂದು ಬಣ್ಣ ಕಾಫಿಯದ್ದು
ಮಿಂದು ಆರೋಗ್ಯವೆಂದೂ ಕೆಡದು
ಗೊಂದು ಅಂಟಿ ಬಿಡುವುದು
ನೊಂದು ಸಾವು ಸಲ್ಲದು
ತಂದು ಸುರಿದು ಮುಗಿಯದು
ದುಂದು ವೆಚ್ಚ ಮಾಡಬಾರದು
ಬಂದು ನೋಡು ತಿಳಿವುದು
ಬಿಂದು ಇಲ್ಲದೆ ಏನಿಹುದು
ಮಂದ ಬುದ್ಧಿ ಇರಬಾರದು
ಅಂದು ಬದುಕು ನಿರಾಳವಿಹುದು
ಅಂದುಕೊಂಡೆ ಬಾಳುತಿಹುದು
ಇಂದು ಜನರ ಜ್ಞಾನ ಬೆಳೆದು
ಹಿಂದು ಮುಂದು ಗಮನಿಪುದು
ಎಂದೂ ಬುದ್ದಿ ಬಳಸುವುದು
@ಹನಿಬಿಂದು@
29.11.2025
ಬುಧವಾರ, ನವೆಂಬರ್ 26, 2025
ಭಾವಗೀತೆ
ಭಾವಗೀತೆ
ಕೃಷಿಯನು ಮೆರೆಸೋಣ
ಕತ್ತಿಯ ಹಿಡಿದು ರುಮಾಲು ಸುತ್ತಿ
ಗದ್ದೆಗೆ ಹೋಗೋಣ ನಾವು...
ಗದ್ದೆಗೆ ಹೋಗೋಣ...
ಹಾಡನು ಹಾಡುತ ಹಸಿರಿಗೆ ನಮಿಸುತ
ಪೈರನು ಕೊಯ್ಯೋಣ..ನಾವು
ಕಟಾವು ಮಾಡೋಣ//ಪ//
ಆಹಾರ ಬೆಳೆಸಿ ಆರೋಗ್ಯ ಉಳಿಸುವ
ಕಾರ್ಯಕೆ ಸಾಗೋಣ ಕೃಷಿಯ..
ಕಾರ್ಯಕೆ ಸಾಗೋಣ
ಅಣ್ಣ ಅಕ್ಕ ಬನ್ನಿರಿ ಎಲ್ಲರೂ
ಕೃಷಿಯನು ಉಳಿಸೋಣ
ರೈತನೆ ದೇಶದ ಬೆನ್ನೆಲುಬೆಂದು
ಸಹಾಯ ಮಾಡೋಣ... ರೈತಗೆ
ಸಹಾಯ ಮಾಡೋಣ...//೧//
ಪೈರನು ಬಡಿಯುತ ಭತ್ತವು ಬೀಳಲು
ರಾಶಿಯ ಮಾಡೋಣ ನಾವು...
ರಾಶಿಯ ಮಾಡೋಣ
ಕೈಗಳು ಸೇರಲು ಕೆಲಸವು ಹಗುರ
ಒಂದಾಗಿ ದುಡಿಯೋಣ
ನಾಡಿಗೆ ಅನ್ನವನೀಯುವ ಕಾರ್ಯವ
ಸರ್ವರೂ ಮಾಡೋಣ..ನಾವೆಲ್ಲಾ
ಸರ್ವರೂ ಮಾಡೋಣ..//೨//
ಜೈ ಜೈ ಘೋಷವ ಹಾಡುತ ನಾವು
ಒಟ್ಟಾಗಿ ಬಾಳೋಣ ನಾವು...
ಒಟ್ಟಾಗಿ ಬಾಳೋಣ
ಭಾರತ ಮಾತೆಯ ಮಕ್ಕಳು ಎನುವ
ಭಾವವ ಹೊಂದೋಣ
ಜಾತಿ ಮತ್ಸರ ದೂರವೇ ಇರಿಸಿ
ಕೃಷಿಯನು ಮೆರೆಸೋಣ...ನಾಡಿನ
ರೈತಗೆ ನಮಿಸೋಣ..//೩//
@ಹನಿಬಿಂದು@
03.11.2025
ಮಂಗಳವಾರ, ನವೆಂಬರ್ 18, 2025
ಶಿಶುಗೀತೆ
ಬುಧವಾರ, ನವೆಂಬರ್ 12, 2025
ರುಬಾಯಿ
ಸೋಮವಾರ, ನವೆಂಬರ್ 3, 2025
ಗಝಲ್
ಗುರುವಾರ, ಅಕ್ಟೋಬರ್ 30, 2025
ಸುಗಿಪು
ಲಚ್ಚಿಮಿಡ ನಟ್ಟೊನುಗ
ಅಪ್ಪೆ ಲಚಿಮಿ ಪಣವು ಕೊರ್ದು
ಕಾಪೊಡಿತ್ತೆ ಈರೆಯೇ
ಕೆಪ್ಪೆ ಯಾನ್ ಬೂಮಿ ಬತ್ತ್
ಶಾಪೊ ನಮಕ್ ಬೊರ್ಚಿಯೆ//
ಸೀಕ್ ಸಂಕಡ ಕೊರಂದೆ ಈರ್
ಕಡಪ ದೇಸೊಗು ಪಾಡ್ಲೆ
ದೇಕಿ ಇಜ್ಜಿ ನಮಡ ಮೂಲು
ಇರೆ ಬುಡ್ಪಿ ಬಾಲೆಲತ್ತ್ಯೆ
ಅಡ್ಡ ಬೂರ್ದು ಕೇನೊಂದುಲ್ಲ
ಹೆಡ್ಡೆರೆನ್ ಸುದಾರ್ಪೊಡು
ಎಡ್ಡೆ ಪಾತೆರ ಬಾಯಿಡ್ ಬರಡ್
ರಡ್ಡ್ ದಿನೊತ ಬಾಲ್ವೆಡ್
ಸಾರ ಸಾರ ಬಯಕೆಲಿಜ್ಜಿ
ಅಪ್ಪೆ ಇರೆನ್ ಸುಗಿಪೊಡು
ಬಾರ ತುಂಬೆರೆ ಸಗ್ತಿ ಇಜ್ಜಿ
ತಪ್ಪು ಇತ್ಂಡ ಮಾನ್ಯೊಡು
ಮೋಸ ಒ೦ಚನೆ ನಮಡ ಇಜ್ಜಿ
ನಂಜಿ ಮಚ್ವರ ನಂಕ್ ಬೊರ್ಚಿ
ಮಾತ ಇರೆನ ಕುಸಿತ ಲೀಲೆ
ಪೂರ ಕಷ್ಟ ದೂರ ದೀಲೆ//
@ಹನಿಬಿಂದು@
31.10.2025
ಚುಟುಕು
ಚುಟುಕು
ಅವನು ಅವನಿಗಾಗಿ ಬಂದಿದ್ದ
ಅವಳು ಅವನಿಗಾಗಿ ಕಾದಿದ್ದಳು
ಅವನಿಗೆ ಹಗಲು ರಾತ್ರಿ ಅವನಿಂದಲೇ..
ಅವನಿಗೆ ಅವನು ಬೇಕಲ್ಲವೇ?
@ಹನಿಬಿಂದು@
tanka
ಗುರುವಾರ, ಅಕ್ಟೋಬರ್ 23, 2025
ಟಂಕಾ
ನಮ್ಮ ಬಾಸೆ
ನಮ ಕನ್ನಡ ಬಾಸೆಗ್ಲಾ ದಾಯೆ ಜಾಗೆ ಕೊರೊಡು?
ತುಲುವೆರಾಯಿನ ನಮ ತುಳುನಾಡ್ ದ ಉದಯ ಆಯಿನ ಪರ್ಬ ಮಲ್ತ್ಂಡ ಯಾವಂದ? ಕನ್ನಡೊದ ರಾಜ್ಯೋತ್ಸವೊದ ಉಚ್ಚಯ ನಮ ದಾಯೆ ಮಲ್ಪೊಡು ಪನ್ಪಿನ ಪ್ರಶ್ನೆ ನಮಕ್ ಮಾತೆರೆಗ್ಲಾ ಬರ್ಪಿನವು ಸಾಜ. ತುಳುನಾಡ್ಡ್ ಇಪ್ಪುನ ನಮ ಪೂರ ತುಳು ಅಪ್ಪೆನ ಮಟ್ಟೆಲ್ದ ಜೋಕುಲು ಸರಿ. ಆಂಡ ನಮ್ಮ ತುಳು ಅಪ್ಪೆ ಉಂತುದಿನಿ ನಮ್ಮ ಕರ್ನಾಟಕ ರಾಜ್ಯೊಡು ಆತೆ?
" ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ" ಪಂದ್ ಕುವೆಂಪು ಅಪ್ಪೆ ಮಗಲೆನ್ ಪುಗಾರಿ ಲೆಕ್ಕ, ಕನ್ನಡ ಅಪ್ಪೆನ ಒಂಜಿ ಮಗಲ್ ಅತ್ತ್ಂಡಲ ಸಗೆ ಸಂಗಡಿ ಲೆಕ್ಕ ನಮ್ಮ ತುಳು ಅಪ್ಪೆ. ಅಂಚ ಇಪ್ಪುನಗ ತುಳುಕ್ಕುಲ್ಲಾ ಕನ್ನಡದ ಲೆಕ್ಕೊನೆ ಸಾರ ಸಾರ ಒರ್ಸೊದ ಪಿರಪತ್ ಉಂಡುಗೆ. ಇಲ್ಲಡ್ ನಮ ಅಪ್ಪೆ ಬಾಸೆ ತುಳುನು ಅಮ್ಮಡ ಕಲ್ತ. ಆಂಡಲ ನಮ ಸಾಲೆಗ್ ಪೋದು ನಮ್ಮ ಅಲೋಚನೆಲೆನ್ ಬರೆಯರೆ ಬೊಕ್ಕ ಬೇತೆಕ್ಲೆನ ಯೋಚನೆಲೆನ್, ನಂಬೊಲಿಗೆನ್ ಓದರೆ ಸುರುಟ್ಟು ಕಲ್ದಿನಿ ಕನ್ನಡ ಬಾಸೆಡ್. ಅಂಚ ಇಪ್ಪುನಗ ನಮ ತುಳುನಾಡ್ಡ್ ಪುಟ್ಟುದು ಬುಲೆಯಿನಕುಲೇ ಆಂಡಲಾ ಈ ಕರುನಾಡ್ಗ್ ಸೇರ್ದಿನ ಕಾರನೊಡು ನಮ ಕನ್ನಡಮ್ಮನ ನೀರ್ಲಾ ಪರೊಂದು ಉಲ್ಲ. ಅಂಚ ಆನಗ ನಮ್ಮ ರಗುತೊಡುಲಾ ಕನ್ನಡದ ಕಮ್ಮೆನೆ ತುಲುಡ್ದು ಬೊಕ್ಕ ಕಂಡಿತ ಬರ್ಪುಂಡೆ. ಅಂಚಾದ್ ನಮ ಪೂರ ಒಟ್ಟು ಸೇರ್ದ್ ಕನ್ನಡ ರಾಜ್ಯೊತ್ಸವೊನ್ಲಾ ಆಚರ್ನೆ ಮಲ್ಪುನವು ನಮ್ಮ ದರ್ಮ ಆತೇ?
ಪ್ರತಿ ಇಂಗ್ಲಿಸ್ ಒರ್ಸೊದ ನವೆಂಬರ್ ತಿಂಗೊಲ್ದ ಸುರುತ್ತ ದಿನತ್ತಾನಿ ಇಡೀ ಕರುನಾಡು ಅತ್ಂಡ ಕರ್ನಾಟಕ ರಾಜ್ಯೊದ ಜನಕ್ಕುಲಾಯಿನ ನಮ ಕನ್ನಡ ರಾಜ್ಯೊ ಆಯಿನ ಕುಸಿಕ್ ಅವೆನ್ ಪರ್ಬೊದ ಲೆಕ್ಕ ಆಚರ್ನೆ ಮಲ್ಪುವ. ಕನ್ನಡ ಬಾಸೆ, ಪಿರಾಕ್ ದ ಕಟ್ಟ್ಲು, ಆಚರ್ನೆಲು ಪೂರ ಒರಿಯರೆ ಬೋಡಾದ್, ನಮ್ಮ ಜೋಕುಲು ಅವೆನ್ ತೂದು ನನ ಅಕುಲ್ಲಾ ಅವೆನ್ ದುಂಬುಗು ನಡಪಾವೊಂದು ಪೋಯರೆ ಆವು ಬೋಡು. ಪರ ಊರುಗು ಪೋಯಿನಲ್ಪ ತುಳು, ಕನ್ನಡದಕ್ಲು ಒಟ್ಟಾದ್ ನಮ ಕರ್ನಾಟಕದಕುಲು ಪನ್ಪಿನ ಕುಸಿಟ್ಟೆ ದಿನ ದೆಪ್ಪುವೆರ್.ಗಟ್ಟದ ಮಿತ್ತ್ ಏರಾಂಡಲಾ ನಮ ಪೋಂಡ ಆತ್ಂಡ ಅಲ್ಪದಕುಲು ಇಡೆ ಬತ್ ಬ್ಯಾರ ಮಲ್ಪೊಡಾಂಡ ನಮಕ್ ಅಕ್ಲೆಡ ಪಾತೆರ್ಯರೆ ಸಾಯಗ್ ಬರ್ಪಿನಿ ಕನ್ನಡೊನೆ ಆತೆ?
ಕನ್ನಡ ನಾಡ್ ಪಂದ್ ಪಟ್ಟ್ನಗ ತುಳುತ ನಮ್ಮ ಜಾಗೆನ್ಲಾ ಹಿರಿಯಕ್ಲು ಕರ್ನಾಟಕೊದೊಟ್ಟಿಗೆ ಪಾಡಿಯೆರ್. ಅಕುಲು ಮಿನಿ ನಮನ್ ಕೇರಲೊದ ಒಟ್ಟುಗು ಪಾಡ್ದುಂಡ ನಮ ಮಾತ ಇನಿ ಮಲಿಯಾಲಿ ಕಲ್ಪೊಡಿತ್ಂಡ್. ಅಂಚಾದ್ ಪರ ರಾಜ್ಯೊಗು ಪೋಯಿನಪಗ ನಮ ಕರ್ನಾಟಕಡ್ ಪುಟ್ಟಿ ಬಲತಿನ ಜೋಕುಲು ಪನ್ಪ. ಪರ ದೇಸೊಗು ಪೋಯಿನಪಗ ನಮ ಇಂಡಿಯಾದಕ್ಲು ಪಂದ್ ಪನ್ಪ. ಅಡೆಗ್ ನಮಕ್ ಮೂಜಿ ಅಪ್ಪೆಡಿಕುಲು. ಪೆದಿ ಅಪ್ಪೆಲಾ ಸೇರ್ಂಡ ನಾಲ್ ಜನ. ಅಜ್ಜಿನ್ಲಾ ಪತ್ಂಡ ಐನ್ ಜನ. ಭಾರತ ನಮ್ಮ ಅಜ್ಜಿ ಆಂಡ ಕನ್ನಡ ನಮ್ಮ ಮಲ್ಲಮ್ಮ, ತುಲುವಲ್ಪೆ ನಮ್ಮಪ್ಪೆ. ನೇಲ್ಯಪ್ಪೆನ್ಲಾ ನಮ ಓಲ್ಲ ಬುಡ್ದು ಕೊರ್ಪುಜ ಅತೆ? ಆರ್ಲಾ ನಮ್ಮಾರೆ... ನಮಲಾ ಅರೆನ ಜೋಕುಲೆ..ಅಂಚಾದ್ ನಮ ರಾಜ್ಯೊತ್ಸವೊದ ಆಚರ್ನೆಗ್ಲಾ
ಒಟ್ಟು ಸೇರೊಂದು ಗಾಂಡ್ ಗೌಜಿಡ್ ಮಲ್ಪೊಡು.
ನಂದಲಿಕೆದ ಕವಿ ಪಿರಾಕ್ದ ಲಕ್ಶ್ಮೀಸೆರ್ಲಾ ತುಲುನಾಡ್ದಾರೆ ಆಂಡಲಾ ಆರ್ ಬರೆಯಿನ ಸಾಯಿತ್ಯೊಲು ಪೂರಾ ಕನ್ನಡೊಡು ಉಂಡುಗೆ. ತುಳುನಾಡ್ದ ನಮ್ಮ ಕಲಾವಿದೆರ್ಲಾ, ಮಸ್ತ್ ಜನೊಕ್ಲೆಗ್ ನಮ ಮುಟ್ಟೊಡು ಪನ್ಪಿನ ಕಾರನೊಗು ಕನ್ನಡ, ತೆಲುಗು, ತಮಿಲುದಂಚಿ ಮೋನೆ ಪಾಡೊಂದು ಉಲ್ಲೆರ್. ಬೇಲೆಗಾದ್ ಪರ ಊರುಗು ಪೋದು ಬದುಕುನ ನಮ್ಮ ತುಳುವೆರ್ ಅಪ್ಪೆ ಬಾಸೆನ್ ಮರತ್ ಆ ಊರುದ ಬಾಸೆಲೆನೆ ಅಕ್ಲೆನ ಜೋಕುಲೆಗ್ ಕಲ್ಪಾವೊಂದು ಉಲ್ಲೆರ್.
ಆವು ಏತೋ ಜನಕ್ ತುಳು ಪಾತೆರುನಿ ಪಂಡ ಯಾನ್ ಎಲ್ಯ ಆಪೆ ಪನ್ಪಿನ ಬೇಜಾರ್ ಉಂಡು. ಅಂಚ ಅಕುಲು ಅಕ್ಲೆನ ಜೋಕ್ಲೆಡ ಕನ್ನಡೊಡೆ ಪಾತೆರುವೆರ್. ಅಡೆಗ್ ಒಂಜಿ ಜನಾಂಗೊದ ತುಳು ದುಂಬು ಪೋವಂದೆ ಬಾಸೆ ಅಕ್ಲೆನ ಕುಟುಮೊಡು ಅಲ್ಪೊನೆ ಸೈತ್ ಪೋಪುಂಡು. ಅಂಚ ಆಯರೆ ಅವ್ಕಾಸ ಕೊರಂದೆ ನಮ್ಮ ಬಾಸೆಲೆನ್ ನಮ ಗಳಸೊಂದು, ಒರಿಪವೊಂದು ಪೋಪಿನ ಮಾಮಲ್ಲ ಜಬದಾರಿ ನಮ್ಮ ಪೂರ ಜನೊತ್ತ ಪುಗೆಲ್ಡ್ ಉಂಡು. ಸರಿ ಅತ್ತೆ? ಐತ ಒಟ್ಟುಗು ಕನ್ನಡೊನು ಒರಿಪಾಯರೆಗ್ಲಾ ನಮ ನಮ್ಮ ಕೈಟ್ ಆಯಿನ ಸಾಯ ಮಲ್ತೊಂದು, ಬರೆಯೊಂದು, ಓದೊಂದು, ನಮ್ಮ ಲಿಪಿ ನಮಾತೆಗೆ ಕಲ್ತೊಂದು ಬತ್ಂಡ ಎಲ್ಯ ಪಿರಾಕ್ ದ ನಮ್ಮ ಪಾತೆರ ಮರಪಂದೆ ಪೋವು. ಇಜ್ಜಿಡ ಬೇತೆ ಕೆಲವು ಬಾಸೆದ ಲೆಕ್ಕ ಸಯಿತ್ ಪೋವು ಮಾರ್ರೆ... ನನ ಬಾಸೆಲೆನ್ ಒರಿಪುನ ಬೊಕ್ಕ ಗಲಸುನ ಮಾತ್ರ ನಮ್ಮ ಜಬದಾರಿ . ಅವೆನ್ ದುಂಬುದ ಜನಕುಲೆ ಎದುರು ಕೊನೊದು ದೀಪುನಿ. ಬೊಕ್ಕ ದುಂಬೊತ್ತ ತರೆ ಕೊರೊಡಾಯಿನಿ ನಮ್ಮ ಜೋಕುಲು , ಅಕುಲು ಅಕ್ಲೆನ ಕಾಲೊಡು. ಅಪಗ ಪೂರಾ ಲೋಕ ಇಂಗ್ಲಿಸ್ಮಯ ಆಪುಂಡು. ದಾಯೆ ಪನ್ನಗ ನಮ್ಮ ಜೋಕುಲು ಕಲ್ಪುನಿ ಅವೆನೆ ಅತೇ?
ತುಳು ಆವಡ್ ಕನ್ನಡ ಆವಡ್, ಒರಿಯೊಡು. ಪರ್ಬ ಉಚ್ಚಯೊಗು ಮಾತ್ರ ಆತ್, ನಿಚ್ಚ ಗಲಸುನ ಬದ್ಕ್ದ ಬಾಸೆ ಆದ್ ಅವು ಒರಿಯೊಡು. ಬ್ಯಾರೊಗಾದ್ ನಮ್ಮ ದೇಸೊಗು ಬತ್ತಿನ ಇಂಗ್ಲಿಸ್ದಕ್ಲೆನ್ ತೂಲೆಗೆ. ಸಾಲೆ ಓಪನ್ ಮಲ್ತ್ದ್ ಏತ್ ಸೋಕುಡೆ ಅಕ್ಲೆನ ಬಾಸೆನ್ ಮಾತೆರ್ಲಾ ಕಲ್ಪುಲೆಕ್ಕ ಮಲ್ತೆರ್! ಆತೆ ಅತ್.... ಒರಿಪಾದ್ಲಾ ಪೋತೆರ್. ಇತ್ತೆ ನಮಕ್ ನಮ್ಮ ಅಪ್ಪೆ ಬಾಸೆಡ್ದ್ ಸೋಕು ಇಂಗ್ಲಿಸ್ ಬರ್ಪುಂಡು. ಅಂಚೆನೆ ನಮ್ಮ ಬಾಸೆನ್ಲಾ ಪೂರೆರೆಗ್ ಪಟ್ಟೊಡು. ಕನ್ನಡ ಆವಡ್ ತುಳು ಆವಡ್, ಪರ್ಬ ಮಲ್ತ್ ಬಾಸೆದ ಬುಲೆಚ್ಚಿಲ್ಗ್ ನಮ ಪೂರ ಒಂಜಾವೊಡು. ನಿಕುಲು ದಾದ ಪನ್ಪರ್?
@ಹನಿಬಿಂದು@
ಅಂಚೆ ದಿನ ಲೇಖನ
ಬಾಸೆ ಒರಿಯೊಡು
ನಮ ಕನ್ನಡ ಬಾಸೆಗ್ಲಾ ದಾಯೆ ಜಾಗೆ ಕೊರೊಡು?
ತುಲುವೆರಾಯಿನ ನಮ ತುಳುನಾಡ್ ದ ಉದಯ ಆಯಿನ ಪರ್ಬ ಮಲ್ತ್ಂಡ ಯಾವಂದ? ಕನ್ನಡೊದ ರಾಜ್ಯೋತ್ಸವೊದ ಉಚ್ಚಯ ನಮ ದಾಯೆ ಮಲ್ಪೊಡು ಪನ್ಪಿನ ಪ್ರಶ್ನೆ ನಮಕ್ ಮಾತೆರೆಗ್ಲಾ ಬರ್ಪಿನವು ಸಾಜ. ತುಳುನಾಡ್ಡ್ ಇಪ್ಪುನ ನಮ ಪೂರ ತುಳು ಅಪ್ಪೆನ ಮಟ್ಟೆಲ್ದ ಜೋಕುಲು ಸರಿ. ಆಂಡ ನಮ್ಮ ತುಳು ಅಪ್ಪೆ ಉಂತುದಿನಿ ನಮ್ಮ ಕರ್ನಾಟಕ ರಾಜ್ಯೊಡು ಆತೆ?
" ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ" ಪಂದ್ ಕುವೆಂಪು ಅಪ್ಪೆ ಮಗಲೆನ್ ಪುಗಾರಿ ಲೆಕ್ಕ, ಕನ್ನಡ ಅಪ್ಪೆನ ಒಂಜಿ ಮಗಲ್ ಅತ್ತ್ಂಡಲ ಸಗೆ ಸಂಗಡಿ ಲೆಕ್ಕ ನಮ್ಮ ತುಳು ಅಪ್ಪೆ. ಅಂಚ ಇಪ್ಪುನಗ ತುಳುಕ್ಕುಲ್ಲಾ ಕನ್ನಡದ ಲೆಕ್ಕೊನೆ ಸಾರ ಸಾರ ಒರ್ಸೊದ ಪಿರಪತ್ ಉಂಡುಗೆ. ಇಲ್ಲಡ್ ನಮ ಅಪ್ಪೆ ಬಾಸೆ ತುಳುನು ಅಮ್ಮಡ ಕಲ್ತ. ಆಂಡಲ ನಮ ಸಾಲೆಗ್ ಪೋದು ನಮ್ಮ ಅಲೋಚನೆಲೆನ್ ಬರೆಯರೆ ಬೊಕ್ಕ ಬೇತೆಕ್ಲೆನ ಯೋಚನೆಲೆನ್, ನಂಬೊಲಿಗೆನ್ ಓದರೆ ಸುರುಟ್ಟು ಕಲ್ದಿನಿ ಕನ್ನಡ ಬಾಸೆಡ್. ಅಂಚ ಇಪ್ಪುನಗ ನಮ ತುಳುನಾಡ್ಡ್ ಪುಟ್ಟುದು ಬುಲೆಯಿನಕುಲೇ ಆಂಡಲಾ ಈ ಕರುನಾಡ್ಗ್ ಸೇರ್ದಿನ ಕಾರನೊಡು ನಮ ಕನ್ನಡಮ್ಮನ ನೀರ್ಲಾ ಪರೊಂದು ಉಲ್ಲ. ಅಂಚ ಆನಗ ನಮ್ಮ ರಗುತೊಡುಲಾ ಕನ್ನಡದ ಕಮ್ಮೆನೆ ತುಲುಡ್ದು ಬೊಕ್ಕ ಕಂಡಿತ ಬರ್ಪುಂಡೆ. ಅಂಚಾದ್ ನಮ ಪೂರ ಒಟ್ಟು ಸೇರ್ದ್ ಕನ್ನಡ ರಾಜ್ಯೊತ್ಸವೊನ್ಲಾ ಆಚರ್ನೆ ಮಲ್ಪುನವು ನಮ್ಮ ದರ್ಮ ಆತೇ?
ಪ್ರತಿ ಇಂಗ್ಲಿಸ್ ಒರ್ಸೊದ ನವೆಂಬರ್ ತಿಂಗೊಲ್ದ ಸುರುತ್ತ ದಿನತ್ತಾನಿ ಇಡೀ ಕರುನಾಡು ಅತ್ಂಡ ಕರ್ನಾಟಕ ರಾಜ್ಯೊದ ಜನಕ್ಕುಲಾಯಿನ ನಮ ಕನ್ನಡ ರಾಜ್ಯೊ ಆಯಿನ ಕುಸಿಕ್ ಅವೆನ್ ಪರ್ಬೊದ ಲೆಕ್ಕ ಆಚರ್ನೆ ಮಲ್ಪುವ. ಕನ್ನಡ ಬಾಸೆ, ಪಿರಾಕ್ ದ ಕಟ್ಟ್ಲು, ಆಚರ್ನೆಲು ಪೂರ ಒರಿಯರೆ ಬೋಡಾದ್, ನಮ್ಮ ಜೋಕುಲು ಅವೆನ್ ತೂದು ನನ ಅಕುಲ್ಲಾ ಅವೆನ್ ದುಂಬುಗು ನಡಪಾವೊಂದು ಪೋಯರೆ ಆವು ಬೋಡು. ಪರ ಊರುಗು ಪೋಯಿನಲ್ಪ ತುಳು, ಕನ್ನಡದಕ್ಲು ಒಟ್ಟಾದ್ ನಮ ಕರ್ನಾಟಕದಕುಲು ಪನ್ಪಿನ ಕುಸಿಟ್ಟೆ ದಿನ ದೆಪ್ಪುವೆರ್.ಗಟ್ಟದ ಮಿತ್ತ್ ಏರಾಂಡಲಾ ನಮ ಪೋಂಡ ಆತ್ಂಡ ಅಲ್ಪದಕುಲು ಇಡೆ ಬತ್ ಬ್ಯಾರ ಮಲ್ಪೊಡಾಂಡ ನಮಕ್ ಅಕ್ಲೆಡ ಪಾತೆರ್ಯರೆ ಸಾಯಗ್ ಬರ್ಪಿನಿ ಕನ್ನಡೊನೆ ಆತೆ?
ಕನ್ನಡ ನಾಡ್ ಪಂದ್ ಪಟ್ಟ್ನಗ ತುಳುತ ನಮ್ಮ ಜಾಗೆನ್ಲಾ ಹಿರಿಯಕ್ಲು ಕರ್ನಾಟಕೊದೊಟ್ಟಿಗೆ ಪಾಡಿಯೆರ್. ಅಕುಲು ಮಿನಿ ನಮನ್ ಕೇರಲೊದ ಒಟ್ಟುಗು ಪಾಡ್ದುಂಡ ನಮ ಮಾತ ಇನಿ ಮಲಿಯಾಲಿ ಕಲ್ಪೊಡಿತ್ಂಡ್. ಅಂಚಾದ್ ಪರ ರಾಜ್ಯೊಗು ಪೋಯಿನಪಗ ನಮ ಕರ್ನಾಟಕಡ್ ಪುಟ್ಟಿ ಬಲತಿನ ಜೋಕುಲು ಪನ್ಪ. ಪರ ದೇಸೊಗು ಪೋಯಿನಪಗ ನಮ ಇಂಡಿಯಾದಕ್ಲು ಪಂದ್ ಪನ್ಪ. ಅಡೆಗ್ ನಮಕ್ ಮೂಜಿ ಅಪ್ಪೆಡಿಕುಲು. ಪೆದಿ ಅಪ್ಪೆಲಾ ಸೇರ್ಂಡ ನಾಲ್ ಜನ. ಅಜ್ಜಿನ್ಲಾ ಪತ್ಂಡ ಐನ್ ಜನ. ಭಾರತ ನಮ್ಮ ಅಜ್ಜಿ ಆಂಡ ಕನ್ನಡ ನಮ್ಮ ಮಲ್ಲಮ್ಮ, ತುಲುವಲ್ಪೆ ನಮ್ಮಪ್ಪೆ. ನೇಲ್ಯಪ್ಪೆನ್ಲಾ ನಮ ಓಲ್ಲ ಬುಡ್ದು ಕೊರ್ಪುಜ ಅತೆ? ಆರ್ಲಾ ನಮ್ಮಾರೆ... ನಮಲಾ ಅರೆನ ಜೋಕುಲೆ..ಅಂಚಾದ್ ನಮ ರಾಜ್ಯೊತ್ಸವೊದ ಆಚರ್ನೆಗ್ಲಾ
ಒಟ್ಟು ಸೇರೊಂದು ಗಾಂಡ್ ಗೌಜಿಡ್ ಮಲ್ಪೊಡು.
ನಂದಲಿಕೆದ ಕವಿ ಪಿರಾಕ್ದ ಲಕ್ಶ್ಮೀಸೆರ್ಲಾ ತುಲುನಾಡ್ದಾರೆ ಆಂಡಲಾ ಆರ್ ಬರೆಯಿನ ಸಾಯಿತ್ಯೊಲು ಪೂರಾ ಕನ್ನಡೊಡು ಉಂಡುಗೆ. ತುಳುನಾಡ್ದ ನಮ್ಮ ಕಲಾವಿದೆರ್ಲಾ, ಮಸ್ತ್ ಜನೊಕ್ಲೆಗ್ ನಮ ಮುಟ್ಟೊಡು ಪನ್ಪಿನ ಕಾರನೊಗು ಕನ್ನಡ, ತೆಲುಗು, ತಮಿಲುದಂಚಿ ಮೋನೆ ಪಾಡೊಂದು ಉಲ್ಲೆರ್. ಬೇಲೆಗಾದ್ ಪರ ಊರುಗು ಪೋದು ಬದುಕುನ ನಮ್ಮ ತುಳುವೆರ್ ಅಪ್ಪೆ ಬಾಸೆನ್ ಮರತ್ ಆ ಊರುದ ಬಾಸೆಲೆನೆ ಅಕ್ಲೆನ ಜೋಕುಲೆಗ್ ಕಲ್ಪಾವೊಂದು ಉಲ್ಲೆರ್.
ಆವು ಏತೋ ಜನಕ್ ತುಳು ಪಾತೆರುನಿ ಪಂಡ ಯಾನ್ ಎಲ್ಯ ಆಪೆ ಪನ್ಪಿನ ಬೇಜಾರ್ ಉಂಡು. ಅಂಚ ಅಕುಲು ಅಕ್ಲೆನ ಜೋಕ್ಲೆಡ ಕನ್ನಡೊಡೆ ಪಾತೆರುವೆರ್. ಅಡೆಗ್ ಒಂಜಿ ಜನಾಂಗೊದ ತುಳು ದುಂಬು ಪೋವಂದೆ ಬಾಸೆ ಅಕ್ಲೆನ ಕುಟುಮೊಡು ಅಲ್ಪೊನೆ ಸೈತ್ ಪೋಪುಂಡು. ಅಂಚ ಆಯರೆ ಅವ್ಕಾಸ ಕೊರಂದೆ ನಮ್ಮ ಬಾಸೆಲೆನ್ ನಮ ಗಳಸೊಂದು, ಒರಿಪವೊಂದು ಪೋಪಿನ ಮಾಮಲ್ಲ ಜಬದಾರಿ ನಮ್ಮ ಪೂರ ಜನೊತ್ತ ಪುಗೆಲ್ಡ್ ಉಂಡು. ಸರಿ ಅತ್ತೆ? ಐತ ಒಟ್ಟುಗು ಕನ್ನಡೊನು ಒರಿಪಾಯರೆಗ್ಲಾ ನಮ ನಮ್ಮ ಕೈಟ್ ಆಯಿನ ಸಾಯ ಮಲ್ತೊಂದು, ಬರೆಯೊಂದು, ಓದೊಂದು, ನಮ್ಮ ಲಿಪಿ ನಮಾತೆಗೆ ಕಲ್ತೊಂದು ಬತ್ಂಡ ಎಲ್ಯ ಪಿರಾಕ್ ದ ನಮ್ಮ ಪಾತೆರ ಮರಪಂದೆ ಪೋವು. ಇಜ್ಜಿಡ ಬೇತೆ ಕೆಲವು ಬಾಸೆದ ಲೆಕ್ಕ ಸಯಿತ್ ಪೋವು ಮಾರ್ರೆ... ನನ ಬಾಸೆಲೆನ್ ಒರಿಪುನ ಬೊಕ್ಕ ಗಲಸುನ ಮಾತ್ರ ನಮ್ಮ ಜಬದಾರಿ . ಅವೆನ್ ದುಂಬುದ ಜನಕುಲೆ ಎದುರು ಕೊನೊದು ದೀಪುನಿ. ಬೊಕ್ಕ ದುಂಬೊತ್ತ ತರೆ ಕೊರೊಡಾಯಿನಿ ನಮ್ಮ ಜೋಕುಲು , ಅಕುಲು ಅಕ್ಲೆನ ಕಾಲೊಡು. ಅಪಗ ಪೂರಾ ಲೋಕ ಇಂಗ್ಲಿಸ್ಮಯ ಆಪುಂಡು. ದಾಯೆ ಪನ್ನಗ ನಮ್ಮ ಜೋಕುಲು ಕಲ್ಪುನಿ ಅವೆನೆ ಅತೇ?
ತುಳು ಆವಡ್ ಕನ್ನಡ ಆವಡ್, ಒರಿಯೊಡು. ಪರ್ಬ ಉಚ್ಚಯೊಗು ಮಾತ್ರ ಆತ್, ನಿಚ್ಚ ಗಲಸುನ ಬದ್ಕ್ದ ಬಾಸೆ ಆದ್ ಅವು ಒರಿಯೊಡು. ಬ್ಯಾರೊಗಾದ್ ನಮ್ಮ ದೇಸೊಗು ಬತ್ತಿನ ಇಂಗ್ಲಿಸ್ದಕ್ಲೆನ್ ತೂಲೆಗೆ. ಸಾಲೆ ಓಪನ್ ಮಲ್ತ್ದ್ ಏತ್ ಸೋಕುಡೆ ಅಕ್ಲೆನ ಬಾಸೆನ್ ಮಾತೆರ್ಲಾ ಕಲ್ಪುಲೆಕ್ಕ ಮಲ್ತೆರ್! ಆತೆ ಅತ್.... ಒರಿಪಾದ್ಲಾ ಪೋತೆರ್. ಇತ್ತೆ ನಮಕ್ ನಮ್ಮ ಅಪ್ಪೆ ಬಾಸೆಡ್ದ್ ಸೋಕು ಇಂಗ್ಲಿಸ್ ಬರ್ಪುಂಡು. ಅಂಚೆನೆ ನಮ್ಮ ಬಾಸೆನ್ಲಾ ಪೂರೆರೆಗ್ ಪಟ್ಟೊಡು. ಕನ್ನಡ ಆವಡ್ ತುಳು ಆವಡ್, ಪರ್ಬ ಮಲ್ತ್ ಬಾಸೆದ ಬುಲೆಚ್ಚಿಲ್ಗ್ ನಮ ಪೂರ ಒಂಜಾವೊಡು. ನಿಕುಲು ದಾದ ಪನ್ಪರ್?
@ಹನಿಬಿಂದು@
ಭಾನುವಾರ, ಅಕ್ಟೋಬರ್ 19, 2025
ನಮ್ಮ ಕಾರ್ಲ
ಶನಿವಾರ, ಅಕ್ಟೋಬರ್ 18, 2025
ಗುಣಿತಾಕ್ಷರ ಕವನ
ಶುಕ್ರವಾರ, ಅಕ್ಟೋಬರ್ 17, 2025
pani ಕಬಿತೆ
ಮಂಗಳವಾರ, ಅಕ್ಟೋಬರ್ 14, 2025
ಕಥೆ
ಹಲವು ಕನ್ನಡ ರಾಜರ ಹಾಸ್ಯ ಪ್ರಸಂಗಗಳು
1. ವಿಕ್ರಮಾದಿತ್ಯ :ಕಲ್ಲ್ಯಾಣದ ರಾಜರ
ಮನೆಗಳ ಮಧ್ಯೆ ಬೆಳಗಿನ ಸೂರ್ಯೋದಯದಂತೆ ಹೊಳೆಯುತ್ತಿದ್ದ ಚಕ್ರವರ್ತಿ ವಿಕ್ರಮಾದಿತ್ಯನ ನಾಡು.
ಅವನ ರಾಜ್ಯದಲ್ಲಿ ಕವಿ, ತತ್ವಜ್ಞಾನಿ, ಯೋಧ ಎಲ್ಲರೂ ಗೌರವಿಸಲ್ಪಟ್ಟರು.ಒಮ್ಮೆ ರಾಜ ಸಭೆಯಲ್ಲಿ ಒಬ್ಬ ಕವಿ ಹೊಸ ಕಾವ್ಯವನ್ನು ಓದಿದ. ಅದರ ಛಂದಸ್ಸು, ಭಾವ, ಕಲ್ಪನೆಗಳು ಅದ್ಭುತವಾಗಿದ್ದರೂ, ರಾಜನು ತಕ್ಷಣ ಪ್ರಶಂಸಿಸಲಿಲ್ಲ.
ಕವಿ ನೊಂದನು, ಆದರೆ ರಾಜನ ಕಣ್ಣುಗಳಲ್ಲಿ ವಿಚಾರದ ಆಳತೆ ಕಾಣಿಸಿತು.ಮುಂದಿನ ದಿನ ರಾಜನು ಕವಿಯನ್ನು ಕರೆಯಿಸಿಕೊಂಡು ಹೇಳಿದರು: “ಒಳ್ಳೆಯ ಕಾವ್ಯವು ಹೂವಿನ ಪರಿಮಳದಂತೆ — ರಾತ್ರಿ ಕಳೆದರೂ ಮನಸ್ಸಿನಲ್ಲಿ ಉಳಿಯಬೇಕು. ನಿನ್ನ ಕಾವ್ಯ ಉಳಿಯಿತು.” ಅಂದಿನಿಂದ ಕವಿ ನಮನಗೊಂಡು “ಕಾವ್ಯ ಚಕ್ರವರ್ತಿ”ನೆಂದು ರಾಜನನ್ನು ಕೊಂಡಾಡಿದ.ಕಲ್ಲ್ಯಾಣದ ವಿಕ್ರಮಾದಿತ್ಯನು ಕಲೆಯ ಪ್ರೋತ್ಸಾಹಕನಾಗಿಯೂ, ನ್ಯಾಯದ ಸೂರ್ಯನಾಗಿಯೂ ಜನಮಾನಸದಲ್ಲಿ ಶಾಶ್ವತನಾದ.
೨. ಎರಡನೇ ಪುಲಕೇಶಿ:ನರ್ಮದೆಯ ಯೋಧನ ಗರ್ಜನೆ
ಬಾದಾಮಿಯ ಕೋಟೆಯೊಳಗಿಂದ ಘಂಟೆಗಳು ಮೊಳಗುತ್ತಿದ್ದುವು. ಸೇನೆಯ ಕುದುರೆಗಳು ಸಜ್ಜಾಗಿದ್ದುವು.
ಉತ್ತರದಿಂದ ಬಂದ ಹರ್ಷವರ್ಧನ ತನ್ನ ಪ್ರಭಾವವನ್ನು ದಕ್ಷಿಣದ ಮೇಲೆ ಹರಿಸಲು ಬಯಸಿದ್ದ. ಆದರೆ ನರ್ಮದೆಯ ತೀರದಲ್ಲಿ ಅವನನ್ನು ಎದುರಿಸಿದ ಒಬ್ಬ ರಾಜನ ಧ್ವಜ ಆಕಾಶವನ್ನು ಮುಟ್ಟಿತ್ತು — ಅವನು ಪುಲಕೇಶಿ ದ್ವಿತೀಯ. ಹರ್ಷನ ಸೇನೆ ಅಪಾರವಾಗಿದ್ದರೂ, ಪುಲಕೇಶಿಯ ತಂತ್ರ, ಧೈರ್ಯ, ಮತ್ತು ಶಿಸ್ತು ಅದಕ್ಕಿಂತ ಭಾರೀ.
ಯುದ್ಧದ ನಾದ ನರ್ಮದೆಯ ತೀರದಲ್ಲಿ ಮೊಳಗಿತು.
ಸಂಜೆ ಹೊತ್ತಿಗೆ ಹರ್ಷನ ಸೇನೆ ಹಿಂತಿರುಗಿತು; ನರ್ಮದೆಯು ಉತ್ತರ–ದಕ್ಷಿಣ ಭಾರತದ ಗಡಿಯಾದಳು. “ನರ್ಮದೆಯ ದಕ್ಷಿಣ ತೀರವನ್ನು ಹರ್ಷನ ಕುದುರೆಗಳು ಮುಟ್ಟಲಿಲ್ಲ” — ಬಾಣಭಟ್ಟನ ವಾಕ್ಯ ಇತಿಹಾಸವಾಯಿತು. ಪುಲಕೇಶಿಯ ವಿಜಯದಿಂದ ದಕ್ಷಿಣ ಭಾರತದ ಗೌರವ ಅಕ್ಷಯವಾಯಿತು.
೩. ವಿಜಯನಗರದ ಕೃಷ್ಣದೇವರಾಯ: ಬುದ್ಧಿ, ಬಲ ಮತ್ತು ಕಾವ್ಯದ ಚಕ್ರವರ್ತಿಹಂಪಿಯ ಕಲ್ಲುಗಳು ಹಾಡುತ್ತಿದ್ದವು — “ರಾಜಾಧಿರಾಜ ಕೃಷ್ಣದೇವರಾಯ ಬಂದರು!” ಅವರ ಕಾಲ ವಿಜಯನಗರದ ಚಿನ್ನದ ಯುಗವಾಗಿತ್ತು. ಸೇನೆಗಳು ಶಕ್ತಿಶಾಲಿ, ಜನರು ಸಂತೋಷಿ, ಕಲೆಗಳು ಉಜ್ವಲ. ಒಮ್ಮೆ ರಾಜ ಸಭೆಯಲ್ಲಿ ಪಂಡಿತರು ತೆನಾಲಿರಾಮನನ್ನು ಪರೀಕ್ಷಿಸಲು ಕೇಳಿದರು:“ಜಗತ್ತಿನಲ್ಲಿ ಅತಿ ಭಾರವಾದ ವಸ್ತು ಯಾವದು?” ತೆನಾಲಿರಾಮ ನಗುತ ಹೇಳಿದರು:“ರಾಜನ ಕಣ್ಣು ಮುಚ್ಚುವ ಮುನ್ನ ಜನರ ಕಣ್ಣೀರು. ಅದು ಅತಿ ಭಾರವಾದುದು.” ರಾಜನು ಮೌನವಾಗಿ ನಿಂತು ಹೇಳಿದರು:“ನಿನ್ನ ಬುದ್ಧಿಯು ನನ್ನ ರಾಜ್ಯದ ಕಿರೀಟದ ಹೂವಂತೆ.” ಅವರ ರಾಜ್ಯದ ಎಂಟು ಕವಿಗಳನ್ನು “ಅಷ್ಟದಿಗ್ಗಜರು” ಎಂದರು.ಕೃಷ್ಣದೇವರಾಯನ ಆಮುಕ್ತಮಾಲ್ಯದೇ ಕೃತಿ ದೇವದರ್ಶನದಂತೆ ಇಂದಿಗೂ ಓದಲ್ಪಡುತ್ತದೆ.
೪. ರಾಜಾ ಒಡೆಯರ್: ದೇವಿಯ ಕನಸಿನ ಮೈಸೂರು. ಮೈಸೂರು ಬೆಟ್ಟಗಳ ನಡುವೆ ಶಾಂತ ರಾತ್ರಿ.
ರಾಜಾ ಒಡೆಯರ್ ಕನಸಿನಲ್ಲಿ ದೇವಿಯ ರೂಪವನ್ನು ಕಂಡರು. ಆಕೆ ಚಾಮುಂಡಿಯಂತೆ ಕತ್ತಿಯುಳ್ಳವಳು, ಕರುಣೆಯುಳ್ಳವಳು. ಆಕೆ ಹೇಳಿದರು “ನಿನ್ನ ರಾಜ್ಯ ನನ್ನ ಆಶೀರ್ವಾದದಿಂದ ಬೆಳೆಯುತ್ತದೆ. ನನ್ನ ನಾಮದಲ್ಲಿ ನಗರ ನಿರ್ಮಿಸು.”ಬೆಳಗಿನ ಸೂರ್ಯೋದಯದ ಜೊತೆ ರಾಜನು ದೇವಿಯ ಮಂದಿರ ನಿರ್ಮಿಸಲು ಪ್ರಾರಂಭಿಸಿದ. ಇಂದಿನ ಚಾಮುಂಡಿ ಬೆಟ್ಟದ ದೇವಾಲಯ ಆ ಕನಸಿನ ಸಾಕ್ಷಿ.
ಮೈಸೂರಿನ ಜನರು ಹೇಳುತ್ತಾರೆ “ನಮ್ಮ ನಗರ ದೇವಿಯ ಆಶೀರ್ವಾದದಿಂದ ಹುಟ್ಟಿದುದು.” ಆದರಿಂದಲೇ ದಸರೆಯ ಹಬ್ಬ ಮೈಸೂರು ಹೃದಯದ ಉತ್ಸವವಾಯಿತು.
ರಾಜಾ ಒಡೆಯರ್ “ಮೈಸೂರಿನ ಸ್ಥಾಪಕ”ನಾಗಿ ಜನಮನದಲ್ಲಿ ನೆಲೆಯಾದ.
೫. ಚಿಕ್ಕದೇವರಾಜ ಒಡೆಯರ್: ಊರಿನ ಹಳ್ಳಿಯೊಂದರಲ್ಲಿ ರೈತರು ಬೆಳೆ ಬತ್ತಿದ ಕಾರಣದಿಂದ ನೊಂದಿದ್ದರು.ಒಂದು ಸಂಜೆ, ಒಬ್ಬ ವೇಷಧಾರಿ ಅತಿಥಿ ಅವರ ಮಧ್ಯೆ ಬಂದು ಕುಳಿತ. ಅವನು ರಾಜನೇ ಎಂಬುದು ಯಾರಿಗೂ ಗೊತ್ತಿರಲಿಲ್ಲ. ರೈತರು ಹೇಳಿದರು:“ನಮ್ಮ ರಾಜನ ಕಣ್ಣೀರು ನಮಗೆ ಸಿಕ್ಕಿಲ್ಲ, ನೀರೇ ಇಲ್ಲ!” ಆ ಮಾತು ರಾಜನ ಹೃದಯವನ್ನು ಚುಚ್ಚಿತು.
ಮುಂದಿನ ದಿನದಿಂದ ಕಾಲುವೆ ನಿರ್ಮಾಣ ಆರಂಭವಾಯಿತು. ನೀರಿನ ಹರಿವಿನೊಂದಿಗೆ ಹಳ್ಳಿಗಳಲ್ಲಿ ನಗು ಹರಿಯಿತು.
ಚಿಕ್ಕದೇವರಾಜ ಒಡೆಯರ್ ಜನರ ಕಣ್ಣೀರನ್ನು ನಗುವಾಗಿಸಿದ “ದೇವರಾಯ ರಾಜ”ನಾದರು.ಅವರ ಕಾಲದಲ್ಲಿ ಮೈಸೂರಿನ ಕೃಷಿ, ಆಡಳಿತ, ಮತ್ತು ಕಲೆಗಳು ಹೊಸ ಜೀವ ಪಡೆದವು.
ಐವರು ವಿಕ್ರಮಾದಿತ್ಯನ ಕಾವ್ಯಬುದ್ಧಿ, ಪುಲಕೇಶಿಯ ಧೈರ್ಯ, ಕೃಷ್ಣದೇವರಾಯನ ಬುದ್ಧಿವೈಭವ, ರಾಜಾ ಒಡೆಯರ್ನ ಭಕ್ತಿ, ಮತ್ತು ಚಿಕ್ಕದೇವರಾಜ ಒಡೆಯರ್ನ ದಯೆ ಎಲ್ಲರೂ ಸೇರಿ ಕನ್ನಡದ ಚಕ್ರವರ್ತಿ ಪರಂಪರೆಯ ಪಂಚನಕ್ಷತ್ರಗಳಂತೆ ಹೊಳೆಯುತ್ತಾರೆ ಅಲ್ಲವೇ ನೀವೇನಂತೀರಿ?
@ಹನಿಬಿಂದು@
14.10.2025
ಕಥೆ
ಜವಾಬ್ದಾರಿ....
ಒಂದು ಹಳ್ಳಿಯ ತುದಿಯಲ್ಲಿ ಚಿಕ್ಕ ಮನೆ ಒಂದಿತ್ತು. ಆ ಮನೆಯಲ್ಲಿ ಕಮಲಾ ಎಂಬ ವೃದ್ಧೆ ವಾಸಿಸುತ್ತಿದ್ದಳು. ವಯಸ್ಸು ಅರವತ್ತನ್ನು ದಾಟಿದ್ದರೂ ಕಮಲಾ ಚುರುಕುತನ ಕಳೆದುಕೊಂಡಿರಲಿಲ್ಲ. ಆಕೆಯ ಜೊತೆ ಇದ್ದದ್ದು ಹತ್ತು ವರ್ಷದ ಮೊಮ್ಮಗಳು ಶಶಿಕಲಾ. ಕಣ್ಣಿನಲ್ಲಿ ಕುತೂಹಲ, ಮನಸ್ಸಿನಲ್ಲಿ ಕನಸುಗಳಿಂದ ತುಂಬಿದ ಹುಡುಗಿ.ಅಜ್ಜಿ ಸಾಕಿದ ಮೊಮ್ಮಗಳು!
ಶಶಿಕಲಾಳ ತಾಯಿ ವಿಮಲಾ. ಕಮಲೆಯ ಏಕೈಕ ಮಗಳು. ವಿಮಲಾ ಯೌವನದಲ್ಲೇ ಗಂಡನನ್ನು ಕಳೆದುಕೊಂಡು, ಬದುಕಿನ ಹೊರೆ ಹೊತ್ತು ನಗರಕ್ಕೆ ತೆರಳಿದ್ದಳು. “ಹೊಸ ಬದುಕು ಕಟ್ಟಿಕೊಳ್ಳಬೇಕು” ಎಂಬ ಆಶಯದಲ್ಲಿ ಕೆಲಸ ಹುಡುಕಿಕೊಂಡಿದ್ದಳು. ನಗರ ಜೀವನದಲ್ಲಿ ಶೋಕಿ ವ್ಯಕ್ತಿ ನವೀನ ದಾಸ ವಿಮಲೆಯ ಬದುಕಿಗೆ ಕಾಲಿಟ್ಟ. ಅವನ ಸಿಹಿ ಮಾತುಗಳಿಗೆ ಮತ್ತು ಹಣಕ್ಕಾಗಿ ಮೋಹಗೊಂಡು ವಿಮಲಾ ತನ್ನ ಮಗಳು ಶಶಿಕಲಾಳ ಕಡೆ ಗಮನ ಕೊಡದೆ ಹೋದಳು. ಅಜ್ಜಿಯ ಮನೆಗೆ ಬಿಟ್ಟು ಬಂದಿದ್ದ ಮಗಳನ್ನು ತಿಂಗಳಿಗೆ ಒಂದು ಬಾರಿ ಹಣ ಕೊಟ್ಟು, ವರ್ಷಕ್ಕೆ ಎರಡು ಬಟ್ಟೆ ತಂದು ಕೊಟ್ಟು ತನ್ನ ಕರ್ತವ್ಯ ಮುಗಿಸಿದಂತಾಗುತ್ತಿದ್ದಳು.
ಕಮಲೆಗೆ ಶಶಿಕಲಾ ಜೀವಕ್ಕಿಂತ ಪ್ರಿಯಳು. ಆದರೆ ಆ ಪ್ರೀತಿ ಮಮತೆಯ ರೂಪದಲ್ಲಿಗಿಂತ ಶಿಸ್ತು ಮತ್ತು ಕೆಲಸದ ರೂಪದಲ್ಲೇ ತೋರುತ್ತಿತ್ತು. “ಏ ಶಶಿಕಲೆ, ನೀರು ತಂದುಕೊಡು, ಹಸುಗಳಿಗೆ ಹುಲ್ಲು ಹಾಕು! ಮನೆಯಲ್ಲಿ ಕೊಂಚ ಅಚ್ಚು ಮಾಡು!” ಎಂದು ದಿನವೂ ಕಮಲಾ ಶಶಿಕಲಾಳನ್ನು ಕರೆದಾಡುತ್ತಿದ್ದಳು. ಶಶಿಕಲಾ ಮೌನವಾಗಿ ಕೆಲಸ ಮಾಡುತ್ತಿದ್ದರೂ ಅಜ್ಜಿಯ ಪ್ರೀತಿಯ ಅಂತರಾಳವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಕಮಲೆಯ ಬೈಗುಳದೊಳಗೆ ಮಮತೆ ತುಂಬಿಕೊಂಡಿತ್ತು — “ಈ ಹುಡುಗಿಯನ್ನು ನಾನು ಸಾಕದಿದ್ದರೆ ಯಾರು ನೋಡಿಕೊಳ್ಳುತ್ತಾರೆ?” ಎಂಬ ಕಳಕಳಿ ಕೂಡಾ ಇತ್ತಾದರೂ ಕೆಲಸವೇನೂ ಕಡಿಮೆ ಮಾಡಿಸಿಕೊಳ್ಳುತ್ತಿರಲಿಲ್ಲ. ಅಪ್ಪ ಇಲ್ಲದ ಅನಾಥ ಹೆಣ್ಣು ಮಗು, ಮುಂದಿನ ಖರ್ಚುಗಳು ತನ್ನ ಮೇಲೆ ಬರುವವೊ ಎಂಬ ತಾತ್ಸಾರವೋ ಎನ್ನುವಂತೆ ಶಶಿಕಲಾಳನ್ನು ಸಾಕುತ್ತಿದ್ದಳು.
ವರ್ಷಗಳು ಕಳೆಯುತ್ತಾ ಹೋದವು. ಶಶಿಕಲಾ ಹದಿನಾರು ವರ್ಷದಾಗುತ್ತಿದ್ದಂತೆ ಕಮಲೆಯ ಆರೋಗ್ಯ ಕುಸಿಯತೊಡಗಿತು. ಒಂದು ಸಂಜೆ ಶಶಿಕಲಾ ಅಜ್ಜಿಗೆ ಕಾಫಿ ಕೊಟ್ಟಾಗ, ಕಮಲಾ ನಿಧಾನವಾಗಿ ಹೇಳಿದಳು — “ನಿನ್ನ ತಾಯಿ ನನ್ನ ಮಾತು ಕೇಳಿ ಮನೆಗೆ ಬಂದ್ರೆ ನನಗೆ ಚೇತರಿಸಿಕೊಳ್ಳುವ ವಿಶ್ವಾಸ ಬರುತ್ತದೆ, ಆದರೆ ಆಕೆ ಲೋಕದ ಮೋಹದಲ್ಲಿ ಮುಳುಗಿದ್ದಾಳೆ.” ಅಷ್ಟರಲ್ಲಿ ವಿಮಲಾಳ ಬದುಕಿನಲ್ಲಿ ಬದಲಾವಣೆ ಬಂತು. ಶೋಕಿ ಹೊತ್ತ ಆಕೆಯ ಪ್ರಿಯಕರ ಮತ್ತೊಬ್ಬ ಹುಡುಗಿಯ ಜೊತೆ ತೆರಳಿಬಿಟ್ಟ. ಆಘಾತಗೊಂಡ ವಿಮಲಾ ತನ್ನ ತಪ್ಪು ಅರಿತುಕೊಂಡಳು. “ನಾನು ತಾಯಿಯಾಗಿ ನನ್ನ ಕರ್ತವ್ಯ ಮರೆಯುತ್ತಿದ್ದೆ,” ಎಂದುಕೊಂಡು ತಕ್ಷಣ ಹಳ್ಳಿಗೆ ಬಂದು ತಾಯಿಯ ಮನೆ ತಲುಪಿದಳು. ಅಲ್ಲಿ ಕಮಲಾ ಹಾಸಿಗೆಯಲ್ಲೇ ಅಸ್ವಸ್ಥಳಾಗಿದ್ದಳು. ಮಗಳನ್ನು ನೋಡಿ ಕಣ್ಣೀರು ಹಾಕುತ್ತಾ “ಈಗ ಬುದ್ದಿ ಬಂತೇ ನಿನಗೆ?” ಎಂದು ನಗುತ್ತಾ ಆ ಮೊಮ್ಮಗಳ ಕಡೆ ನೋಡುತ್ತಾಳೆ. ಆ ದಿನದಿಂದ ವಿಮಲಾ ತನ್ನ ಮಗಳ ಬದುಕನ್ನು ಬದಲಿಸುವ ನಿರ್ಧಾರ ಕೈಗೊಂಡಳು.
ಹಳ್ಳಿಯ ಸರಕಾರಿ ಶಾಲೆಯಲ್ಲಿ ಓಡುತ್ತಿದ್ದ ತನ್ನ ಮಗಳನ್ನು ವಿಮಲಾ ನಗರಕ್ಕೆ ಕರೆತಂದು ಅಲ್ಲಿಯ ಉತ್ತಮ ಶಾಲೆಗೆ ಸೇರಿಸಿದಳು. ಹಳ್ಳಿಯ ಶಾಲೆಯಿಂದ ಆರಂಭವಾದ ಪಾಠದ ಹಾದಿ ನಗರಕ್ಕೆ ತಲುಪಿತು. ಶಶಿಕಲಾ ಹಗಲು ಓದಿನಲ್ಲಿ, ರಾತ್ರಿ ತಾಯಿಯ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಳು. ಕಷ್ಟದ ಜೀವನವನ್ನು ಎದುರಿಸುತ್ತಾ, ವರ್ಷಗಳ ಪರಿಶ್ರಮದ ಫಲವಾಗಿ ಶಿಕ್ಷಕಿಯಾಗಿ ನೇಮಕವಾಯಿತು. ಆ ದಿನ ತಾಯಿಯ ಕಣ್ಣಲ್ಲಿ ತೃಪ್ತಿಯ ಕಣ್ಣೀರು ಕಾಣಿಸಿಕೊಂಡಿತ್ತು.
ಆದರೆ ಕಮಲಾ ಆ ಸಂತೋಷವನ್ನು ನೋಡಲಿಲ್ಲ. ಶಶಿಕಲಾ ಕಾಲೇಜು ಮುಗಿಸುತ್ತಿದ್ದ ಸಮಯದಲ್ಲಿ ಕಮಲಾ ಈ ಲೋಕ ತ್ಯಜಿಸಿದಳು. ಅಜ್ಜಿಯ ಅಂತ್ಯಕ್ರಿಯೆಯ ದಿನ ಶಶಿಕಲಾ ನಿಂತು ಕಣ್ಣೀರಿನಿಂದ ಹೇಳಿದಳು — “ಅಜ್ಜಿ, ನಿನ್ನ ಕಠಿಣ ಪ್ರೀತಿಯೇ ನನಗೆ ಬಲ ಕೊಟ್ಟಿತು.ಇನ್ಯಾರು ನನಗೆ?" ಎಂದು ಅಳುತ್ತಿದ್ದಳು.
ಶಶಿಕಲಾಳ ಮದುವೆಯನ್ನು ವಿಮಲಾ ಸರಳ ರೀತಿಯಲ್ಲಿ ಮಾಡಿಸಿದಳು. ಮಗಳ ಬಾಳು ಹಾದಿಯ ಮೇಲೆ ನಿಂತು ತಾನು ಶಾಂತಿಯನ್ನು ಹುಡುಕತೊಡಗಿದಳು. ಕೆಲವು ವರ್ಷಗಳ ನಂತರ ವಿಮಲಾ ಮತ್ತೊಬ್ಬ ವಿನೋದ್ ಎನ್ನುವವನನ್ನು ಮದುವೆಯಾಗಿ ಹೊಸ ಬದುಕು ಪ್ರಾರಂಭಿಸಿದಳು. ಈ ಬಾರಿ ಅದು ಪ್ರೇಮಕ್ಕಿಂತಲೂ ಶಾಂತಿಯ ಬದುಕು. ವಿನೋದ್ ಕೂಡಾ ಬೇರೆ ಹೆಣ್ಣಿನಿಂದ ಮೋಸಕ್ಕೆ ಒಳಗಾಗಿದ್ದವನು. ವಿಮಲಾಳನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿದನು.
ಶಶಿಕಲಾ ತನ್ನ ತಾಯಿಯ ಹೊಸ ಬದುಕನ್ನು ನೋಡಿ ನಗುತ್ತಿದ್ದಳು. ಮನೆಯಲ್ಲಿ ಕಮಲೆಯ ನೆನಪು, ವಿಮಲೆಯ ಪಾಠ ಮತ್ತು ತನ್ನ ಪರಿಶ್ರಮ ಈ ಮೂರು ತಲೆಮಾರಿನ ಕಥೆ ಒಂದು ವೃತ್ತದಂತೆ ಪೂರ್ಣಗೊಂಡಿತು.
ಆ ಮನೆಯಲ್ಲಿ ಇಂದು ಹಳೆಯ ಗೋಡೆಗಳ ನಡುವೆಯೂ ಒಂದು ಮಾತು ಕೇಳಿಸುತ್ತಿದೆ —
“ಪ್ರೀತಿ ಬಾಯಲ್ಲಿ ಹೇಳುವದಲ್ಲ, ಬದುಕಿನಲ್ಲಿ ತೋರಿಸುವುದು ಮುಖ್ಯ.ಇದನ್ನರಿತು ಬಾಳು."
@ಹನಿಬಿಂದು@
14.10.2025
ಪಾಠ
ಗಣತಿಯಿಂದ ಪಾಠ ಕಲಿತದ್ದು..ಟ್ರೈನಿಂಗ್ ಸಿಗದ ಕಾರಣ ಗಣತಿ ಮುಗಿದ ಬಳಿಕ ಇದೆಲ್ಲಾ ಗೊತ್ತಾದದ್ದು...
1. ಮುಚ್ಚಿದ ಬಾಗಿಲುಗಳ ಮನೆ ಇರಬಹುದು. ಹಾಗಾಗಿ ಸೂಪರ್ವೈಸರನ್ನು ಒಟ್ಟಿಗೆ ಕರೆದುಕೊಂಡು ಹೋಗಿ ಅವರ ಮೊಬೈಲ್ ಮೂಲಕ ಅದನ್ನು ಡಿಲೀಟ್ ಮಾಡಿಸಬೇಕು.
2. ಬಾಗಿಲು ಮುಚ್ಚಿದ ಮನೆಗಳ photo gprs map ಸಹಿತ ತೆಗೆದಿಡಬೇಕು.
3. ಆಧಾರ್ ಕಾರ್ಡ್ ಬಳಸಿ ಎಷ್ಟು ಮನೆ ಮಾಹಿತಿ, ರೇಷನ್ ಕಾರ್ಡ್ ಬಳಸಿ ಮಾಹಿತಿ ನೀಡಿದ ಮನೆಗಳು ಎಷ್ಟು ಎಂಬ ಲೆಕ್ಕ ಬರೆದಿಡಬೇಕು.
4. DM ನಂಬರ್ ಅನ್ನು ಪ್ರತಿ ಮನೆಯ UHID no ಬರೆದ ಕೆಳಗೆ ಬರೆದಿಡಬೇಕು.
5. ಹೊಸ UHID ಕ್ರಿಯೇಟ್ ಮಾಡಿದ ಮನೆಗಳ RR no note ಮಾಡಿ ಇಟ್ಟುಕೊಳ್ಳಬೇಕು.
6. ಎಲ್ಲಾ ಮನೆಯ ಜನರ UHID, ADAAR, RATION CARD, NAME, PHONE NO, RR no ಇದೆಲ್ಲ ನಮ್ಮ ಬಳಿ ಇದ್ದರೆ ಒಳ್ಳೆಯದು.
7. ನಿರಾಕರಣೆ, closed, ಬೇರೆ UHID create ಮಾಡಿದ ಮನೆಗಳ ಪಟ್ಟಿ ಬೇರೆಯೇ ಇದ್ದು ಅವುಗಳ RRNo ಯಜಮಾನನ ಹೆಸರಿನ ಸಮೇತ ತಪ್ಪದೆ note ಮಾಡಿ ಇಟ್ಟಿರಬೇಕು.
8. ಮನೆಯವರ, ಮನೆಯ ಮಾಹಿತಿ ಸಿಗಬೇಕಾದರೆ ಲೈನ್ಮನ್ ಅಥವಾ ಮೆಸ್ಕಾಂ ಸಂಪರ್ಕಿಸಬಹುದು. ಆದರೆ ಅವರ RR no ಕಡ್ಡಾಯವಾಗಿ ತಿಳಿದಿರಬೇಕು.
9. ಎರಡೆರಡು ಬಾರಿ ಒಂದು ಮನೆಯ ಗಣತಿ ಮಾಡಲು ಆಗದು. ಹೊಸ UHID ಕ್ರಿಯೇಟ್ ಮಾಡಿದರೂ ಕೂಡಾ.
10. ನಮ್ಮ ಊರು ಬೇರೆ ಜಿಲ್ಲೆಯಲ್ಲಿ ಇದ್ದರೂ ಕೂಡಾ ನಮ್ಮ ಮನೆಯ ಗಣತಿಯನ್ನು ನಾವೇ ಮಾಡಿಕೊಳ್ಳಬಹುದು.
11. ಗುರಿ ಸಾಧಿಸುವುದು ಮುಖ್ಯ. ಯಾರ ಮನೆಯನ್ನು ಬೇಕಾದರೂ ಗಣತಿ ಮಾಡಬಹುದು. ಬೇಕಾ ಬಿಟ್ಟಿಯಾಗಿ ರಸ್ತೆ ಬದಿಯಲ್ಲಿ ಕಾಣುವ ಎಲ್ಲಾ ಮನೆಗಳನ್ನು ಕೂಡಾ.
12. ಆದರೆ ನಮ್ಮ ಪಟ್ಟಿಯಲ್ಲಿ ಇರುವ ಮನೆಗಳನ್ನು ಇತರರು ಮಾಡದೆ ಹೋದರೆ ನೀವು ಬೇರೆಯವರ 200 ಮನೆ ಮುಗಿಸಿದರೂ ಸಹ ನಿಮ್ಮ ಮನೆಗಳನ್ನು ನೀವೇ ಗಣತಿ ಮಾಡಬೇಕು.
13. ಗಣತಿಯ ಜೊತೆ ಜೊತೆಗೆ ಸೂಪರ್ವೈಸರ್ ಜನ ಇಲ್ಲದ, ಅಂಗಡಿ ಮೊದಲಾದ ಮನೆಗಳನ್ನು delete ಮಾಡುತ್ತಾ ಹೋಗಬೇಕು.
14. ಆಧಾರ್ ಕಾರ್ಡ್ ವೆರಿಫಿಕೇಶನ್ ಗೆ ಮೊದಲು ಅದಕ್ಕೆ ಕೊಟ್ಟ ಮೊಬೈಲ್ phone ಜೊತೆಗೆ ಇರಬೇಕಾದ್ದು ಕಡ್ಡಾಯ.
15. Ration card ಡಿಲೀಟ್ ಆಗಿದ್ದರೆ, ಆಧಾರ್ ಕಾರ್ಡ್ ಗೆ ಕೊಟ್ಟ ಮೊಬೈಲ್ ಫೋನ್ ನಂಬರ್ ಇಲ್ಲದೆ ಹೋದರೆ ಗಣತಿ ಸಾಧ್ಯ ಇಲ್ಲ.
16. ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ಪರವೂರಿನಿಂದ ಬಂದು ಇರುವವರು ರಜೆಯಲ್ಲಿ ಬಂದಿದ್ದರೆ ಪುಣ್ಯ.
17. ಗಣತಿ ನಿರಾಕರಿಸಿದರೆ ನಮ್ಮ ಟಾರ್ಗೆಟ್ಗೆ ಕೊಕ್. ಲೆಕ್ಕಕ್ಕೆ ಜಾಸ್ತಿ ಕೆಲಸ.
18. ಎರಡು ಮೂರು ಜನ ಒಟ್ಟಿಗೆ ಹೋಗಿ ಎರಡು ಮೂರು ಮೊಬೈಲ್ ಫೋನುಗಳಲ್ಲಿ ಬೇಕಾದರೂ(ಗಣತಿಗೆ ಹೆಸರು ಇಲ್ಲದ ವಿದ್ಯಾರ್ಥಿಗಳೂ) ಕೂಡಾ ಅವರ ಗೆಳೆಯ, ಗೆಳತಿಯರ, ಪೋಷಕರ ಹೆಸರಿನಲ್ಲಿ ಒಂದೇ ಸಲಕ್ಕೆ ಬೇಗ ಬೇಗ ಗಣತಿ ಮಾಡಿ ಮುಗಿಸಿ ಟಾರ್ಗೆಟ್ ರೀಚ್ ಆಗಬಹುದು. ಇದಕ್ಕೆ ಯಾವುದೇ ರೆಸ್ಟ್ರಿಕ್ಷನ್s ಇಲ್ಲ.
19. ಒಟ್ಟಾರೆ ನಮ್ಮ ಯಾವುದೇ ಮನೆ pending ಲಿಸ್ಟಿನಲ್ಲಿ ಇರಬಾರದು.
20. ಯಾವುದೇ ಮನೆಗೆ ಹೊಸ UHID ಬಳಸಿದ್ದರೆ ಅದರ RR no ಕೊಟ್ಟು ಅದನ್ನು ವ್ಯಾಲಿಡೇಟ್ ಮಾಡುವ ಎಕ್ಸ್ಟ್ರಾ ಕೆಲಸ ನಮ್ಮ ಮೇಲಿದೆ.
21. ಬೀಗ ಹಾಕಿರುವ ಮತ್ತು ಖಾಲಿ ಇರುವ ಎಲ್ಲಾ ಮನೆಗಳ ಲೊಕೇಶನ್ ಮತ್ತು ಪೋಟೋ ಕಡ್ಡಾಯವಾಗಿ ಅವುಗಳ ಡಿಲಿಷನ್ ಗೆ ಬೇಕು.
22. ಮನೆ ಗಣತಿ ಆಗದೆ ಹೋದರೆ ಸೂಪರ್ವೈಸರ್ ಗೆ ಸೂಕ್ತ ಕಾರಣ ನೀಡಬೇಕು.
23. ಬೇರೆ ಜಿಲ್ಲೆಗಳ ಗಣತಿಯನ್ನು ಕೂಡಾ ಮಾಹಿತಿ ಕೊಡುವವರು ಇದ್ದರೆ ಇಲ್ಲಿಂದಲೇ ಮಾಡಿ ಮುಗಿಸಬಹುದು.
24. ಮೊಬೈಲ್ ಗೆ ತೊಂದರೆ ಆದರೆ, ನೆಟ್ ಪ್ಯಾಕ್ ಇಲ್ಲದೆ ಹೋದರೆ ಯಾವುದೇ ಕಾರಣಕ್ಕೂ ಈ ಲೆಕ್ಕಾಚಾರ ಸಾಧ್ಯ ಇಲ್ಲ.
25. ಒಂದು ಮನೆಯಲ್ಲಿ ಒಬ್ಬರೇ ಇದ್ದರೂ ಕೂಡಾ ಕನಿಷ್ಠ ಪಕ್ಷ ಅರ್ಧ ಗಂಟೆ ಸರಿಯಾಗಿ ಮಾಹಿತಿ ನೀಡುವವರಿಗೆ ಬೇಕೇ ಬೇಕು. (ಕೆಲವರಿಗೆ ರೇಷನ್ ಕಾರ್ಡ್/ಆಧಾರ್ ಕಾರ್ಡ್ ವೋಟರ್ ಐಡಿ ಹುಡುಕಿ ತರಲು ಇನ್ನೂ ಅರ್ಧ ಗಂಟೆ ಬೇಕು.)
26. ಎಲ್ಲರೂ ಕೆಲಸಕ್ಕೆ, ಶಾಲೆಗೆ ಹೋದ ಬಳಿಕ ಮನೆಯಲ್ಲಿ ಇರುವುದು ತುಂಬಾ ವಯಸ್ಸಾದ ಹಿರಿಯರು ಮಾತ್ರ. ಅವರಲ್ಲಿ ಈ ಎಲ್ಲಾ ಮಾಹಿತಿ ಪಡೆಯಲು ಗಣತಿದಾರರು ಹರಸಾಹಸ ಮಾಡಬೇಕು. ಹೆಚ್ಚಿನ ಜನರಿಗೆ ಅವರ ಫೋನ್ ನಂಬರ್ ಗೊತ್ತಿಲ್ಲ, ಒಟಿಪಿ ನೋಡಲು ಕೂಡ ಬರುವುದಿಲ್ಲ. ದೇವಸ್ಥಾನ, ಕಾರ್ಯಕ್ರಮಗಳಿಗೆ ಹೊರಟವರಿಗೆ ಮಾಹಿತಿ ಕೊಡಲು ಸಮಯ ಇರುವುದಿಲ್ಲ. ಅವರಿಗೆ ಉತ್ತರ "ನಾಳೆ ಬನ್ನಿ."
27. ನಾನು ಮಾಹಿತಿ ಕೊಡುವುದಿಲ್ಲ, ಇದು ನನಗೆ ಇಷ್ಟ ಇಲ್ಲ ಏನು ಬೇಕಾದರೂ ಮಾಡಿಕೊಳ್ಳಿ " ಎಂದವರಿಗೆ ಉತ್ತರ ಒಂದು ಸಣ್ಣ ನಗು, ಅಷ್ಟೇ.
28. ಇಷ್ಟೆಲ್ಲಾ ಲೆಕ್ಕ ತೆಗೆದುಕೊಂಡು ನಮಗೆ ಏನು ಕೊಡುತ್ತೀಯಮ್ಮಾ ಎಂದವರಿಗೆ ನಾವೇನು ಕೊಡಲು ಸಾಧ್ಯ?
29. ನೀವೇನು ಎಲ್ಲಾ ಲೆಕ್ಕ ಕೇಳಿ ಕೊಟ್ಟು ನಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಿಸುತ್ತೀರಾ? ನಮ್ಮ ಜಾತಿ ಬದಲಾಯಿಸುತ್ತೀರಾ? ಸರಕಾರದಿಂದ ಒಳ್ಳೆಯ ರಸ್ತೆ ಸ್ಯಾಂಕ್ಷನ್ ಮಾಡಿಸುತ್ತೀರಾ ಎಂದವರಿಗೆ ಕೊಡಲು ನಮ್ಮ ಬಳಿ ಇರುವ ಉತ್ತರ ಮೌನ.
30. ನನ್ನ photo, ಒಟಿಪಿ ನಿಮಗೇಕೆ ಬೇಕು, ನಾವು ಗ್ಯಾಸ್ ಇದ್ದರೂ ಕಟ್ಟಿಗೆಯಲ್ಲೇ ಅಡುಗೆ ಮಾಡೋದು ಹಾಗೆಯೇ ಬರ್ಕೊಳ್ಳಿ, ಅದೇನು ಕೊಡುತ್ತೀರೋ ಮನೆಗೆ ಒಬ್ಬರಿಗೆ ಸರಕಾರಿ ಕೆಲಸ ಕೊಡಿಸಿ ಎಂದವರಿಗೆ ಹೇಳಲು ನಮ್ಮ ಬಳಿ ಸೈಲೆನ್ಸ್ ಬಿಟ್ಟರೆ ಏನಿಲ್ಲ.
ಇದಿಷ್ಟು ಅರ್ಥ ಮಾಡಿಡಿಕೊಟ್ಟ, ಕೆಲವರ ಮನೆಯ ಬಡತನ, ಸಿರಿತನ, ಕಷ್ಟ ಸುಖಗಳನ್ನು ತೋರಿಸಿಕೊಟ್ಟ, ನಾವು ನಾವೇ ಶಿಕ್ಷಕರು ಗಲಾಟೆ ಮಾಡಿಕೊಳ್ಳುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿ ಕೊಟ್ಟ, ನಾಲ್ಕೈದು ಜನ ಒಂದೇ ಮನೆಗೆ ತಿರುಗಿ ಮನೆಯವರೇ ಸುಸ್ತಾಗುವ ಹಾಗೆ ಮಾಡಿದ, ಟೀಚರ್ಸ್ ಗೆ ಬೇರೆ ಕೆಲಸ ಇಲ್ಲ ಎಂದು ಮನೆಯವರೆಲ್ಲಾ ಆಡಿಕೊಳ್ಳುವ ಹಾಗೆ ಮಾಡಿದ ಗಣತಿಯಿಂದ ಬಡವರು ಉದ್ಧಾರ ಆಗಲಿ. ಎಲ್ಲಾ ಜಾತಿಯ ಜನರಿಗೆ ಅವರ ಬಡತನದ ಆಧಾರದ ಮೇಲೆ ಕೆಲಸ ಸಿಗಲಿ, ದುಡಿಯಲು ಆಗದೆ ಒಬ್ಬರೇ ಇರುವ ಹಿರಿಯ ಜೀವಗಳಿಗೆ ಉಚಿತ ಸೌಲಭ್ಯ ಸಿಗಲಿ ಎಂಬ ಶುಭ ಆಶಯಗಳೊಂದಿಗೆ, ಮುಂದಿನ ಗಣತಿಯನ್ನು ಹೋಲ್ ಸೇಲ್ ವ್ಯಾಪಾರ ಮಾಡದೆ ಸರಿಯಾಗಿ, ಒಂದೇ ತೆರನಾಗಿ ಹಂಚಿ ಕೊಟ್ಟು ಅವರವರ ಏರಿಯಾ ಅವರೇ ಮಾಡಿ ಮಾಹಿತಿ ಕೊಡುವ ಹಾಗೆ ಮಾಡಿ ಎಂದು ಮೇಲಧಿಕಾರಿಗಳ ಗಮನಕ್ಕೆ ತಿಳಿಯಪಡಿಸುತ್ತಾ, ಮಹಿಳೆಯರಿಗೂ, ದೈಹಿಕ ಅಸ್ವಸ್ಥರಿಗೂ ಹಲವಾರು ತೊಂದರೆಗಳು ಇರುತ್ತವೆ. ಮನೆಗಳೂ ಕೂಡಾ ದೂರ ದೂರ ಇರುತ್ತವೆ, ಸರಿಯಾದ ಸಮಯಕ್ಕೆ ಹಳ್ಳಿಗಳಿಗೆ ಬಸ್ಗಳು ಇರುವುದಿಲ್ಲ. ಹಾಗಾಗಿ ಟಾರ್ಗೆಟ್ ಕೊಟ್ಟು ಕೊಲ್ಲಬೇಡಿ ಮತ್ತು ದೈಹಿಕ ಅನಾರೋಗ್ಯ (ನಡುವೆ) ಕಾಣಿಸಿದರೆ ಅದಕ್ಕೆ ವಿಶ್ರಾಂತಿಗೆ ಅವಕಾಶ ಕೊಡಿ ಎಂಬ ದಯನೀಯ ಬೇಡಿಕೆ ಇಡುತ್ತಾ, ಇಷ್ಟೊಂದು ಕಾಡಬೇಡಿ ರಜೆಯ ಸಮಯದಲ್ಲಿ ಶಿಕ್ಷಕರನ್ನು ಎಂದು ಕೇಳಿಕೊಳ್ಳುತ್ತಾ, ಎಲ್ಲರಿಗೂ ಒಳಿತಾಗಲಿ, ಈ ಒಳಿತಿನ ಕಾರ್ಯಕ್ಕೆ ನಾವೂ ಕಾರಣಕರ್ತರಾಗಲಿ ಎಂಬ ಶುಭ ಆಶಾ ಭಾವನೆಗಳೊಂದಿಗೆ,
@ಹನಿಬಿಂದು@
17.10.2025
ಕಥೆ
ಸೀತೆಯ ಬದುಕಿನ ಬೆಳಕು
ಸೀತಾ ಎಂಬ ಹೆಸರಿನ ಆಕೆ ಜೀವನದ ಕಠಿಣ ಪರೀಕ್ಷೆಗಳನ್ನು ಎದುರಿಸಿದವಳು. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಳು. ಸಂಬಳ ಅಷ್ಟೇನೂ ಹೆಚ್ಚಾಗಿರಲಿಲ್ಲ. ಆದರೆ ಆ ಕೆಲಸವೇ ಆಕೆಗೆ ಆತ್ಮ ಸಂತೋಷದ ಮೂಲವಾಗಿತ್ತು. ಹಿರಿಯರು ಜಾತಕ, ಉದ್ಯೋಗ ಎಲ್ಲಾ ನೋಡಿ ಮದುವೆ ಮಾಡಿ ಕೊಟ್ಟ ಗಂಡನು ಒಂದು ದಿನ ಎಲ್ಲವನ್ನೂ ಬಿಟ್ಟು ಬೇರೆ ಮದುವೆಯಾಗಿದ್ದ ಮತ್ತು ಎರಡನೇ ಹೆಂಡತಿಯ ಬಳಿಯೇ ನೆಲೆಸಿದ್ದ. ಅದು ಯಾವ ಮೋಡಿ ಮಾಡಿ ಬಿಟ್ಟಿದ್ದಳೋ ಆಕೆ ತಿಳಿಯದು. ಆ ದಿನದಿಂದ ಸೀತಾಳ ಜೀವನ ಬದಲಾಯಿತು. ಇಬ್ಬರು ಚಿಕ್ಕ ಮಕ್ಕಳ ಜವಾಬ್ದಾರಿ ಸಂಪೂರ್ಣವಾಗಿ ಆಕೆಯ ಹೆಗಲ ಮೇಲೆ ಬಂತು.
ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಆಕೆಗೆ ಆಕೆಯ ತವರು ಕುಟುಂಬದ ಸಹಕಾರವೇ ಇರಲಿಲ್ಲ. ಯಾರೂ ಆಕೆಯ ನೋವನ್ನು ಗಮನಿಸಲಿಲ್ಲ. ರಾತ್ರಿ ಹೊತ್ತು ಕಣ್ಣೀರು ಹಾಕಿಕೊಂಡು ಮಕ್ಕಳ ನಿದ್ರೆ ನೋಡುವ ಸೀತಾಳ ಮನದಲ್ಲಿ ಒಂದು ನಿರ್ಧಾರ ಮಾತ್ರ — “ನನ್ನ ಮಕ್ಕಳು ನನ್ನಂತಾಗಬಾರದು.”
ಬೆಳಗ್ಗೆ ಕೆಲಸಕ್ಕೆ ಹೋಗಿ, ಸಂಜೆ ಮನೆಗೆ ಬಂದು ಅಡುಗೆ ಮಾಡುತ್ತಾ, ಮಕ್ಕಳ ಪಾಠ ಕೇಳಿಸುತ್ತಾ ಆಕೆ ತನ್ನ ಜೀವನದ ಪ್ರತಿಯೊಂದು ಕ್ಷಣವನ್ನೂ ಬಲಿದಾನ ಮಾಡಿದಳು. ಅನೇಕ ದಿನಗಳು ಹೊಟ್ಟೆ ಬಿದ್ದರೂ ಮಕ್ಕಳ ಹೊಟ್ಟೆ ಖಾಲಿ ಬಿಡಲಿಲ್ಲ. ದೇವರ ದಯೆಯಿಂದ, ಮಕ್ಕಳಿಬ್ಬರೂ ಬುದ್ಧಿವಂತರು. ಸೀತಾಳ ಪ್ರಾರ್ಥನೆ ಮತ್ತು ಶ್ರಮದಿಂದ ಅವರು ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿದರು.
ಕಾಲ ಕ್ರಮೇಣ, ಮಗನೊಬ್ಬ ಇಂಜಿನಿಯರ್ ಆಗಿ, ಮಗಳು ವೈದ್ಯೆಯಾಗುವಷ್ಟು ಮುನ್ನಡೆದರು. ಅವರು ದೊಡ್ಡ ನೌಕರಿಗಳಲ್ಲಿ ಸೇರಿ ತಾಯಿಯ ತಲೆ ಎತ್ತುವಂತೆ ಮಾಡಿದರು. ಒಂದು ದಿನ, ಸೀತಾಳ ಮಕ್ಕಳು ಆಕೆಯನ್ನು ಕರೆದುಕೊಂಡು ವಿದೇಶಕ್ಕೆ ಕರೆದೊಯ್ದರು. ಮತ್ತು ಅಲ್ಲಿ ಆಕೆ ಮೊದಲ ಬಾರಿಗೆ ತಾನು “ಒಂಟಿ” ಅಲ್ಲ ಎಂಬ ಭಾವನೆ ಅನುಭವಿಸಿದಳು.
ಒಮ್ಮೆ ಕಣ್ಣೀರುಗಳಿಂದ ತುಂಬಿದ ಆಕೆಯ ಕಣ್ಣುಗಳು ಈಗ ಹೆಮ್ಮೆಯಿಂದ ಕಂಗೊಳಿಸುತ್ತಿದ್ದವು. ಸೀತಾಳ ಕಥೆ ಜೀವನದ ಒಂದು ಸತ್ಯವನ್ನು ನೆನಪಿಸುತ್ತದೆ — ಒಂಟಿತನದಲ್ಲೂ ನಂಬಿಕೆ ಇರಲಿ; ಶ್ರಮ ಮತ್ತು ದೇವರ ದಯೆ ಇದ್ದರೆ ಅಸಾಧ್ಯವೆಂಬುದೇ ಇಲ್ಲ. ಎಲ್ಲರಿಗೂ ನಾಲ್ಕು ಜನರಂತೆ ಬಾಳುವ ಒಂದು ದಿನ ಬಂದೇ ಬರುತ್ತದೆ.
@ಹನಿಬಿಂದು@
13.10.2025
ಕಥೆ by Diya
ಅಮ್ಮನ ಮಾತು ಯಾಕೆ ಕೇಳ್ಬೇಕು?
ಮಾಲೂರು ಎಂಬುದು ಒಂದು ಚಿಕ್ಕ ಹಳ್ಳಿ. ಅಲ್ಲಿ ಒಂದು ಸುಂದರ ಮನೆಯಲ್ಲಿ ಮಿಂಟು ಎಂಬ ಬೆಕ್ಕು ತನ್ನ ಪುಟ್ಟ ಮಗ ಚಿಂಟು ಜೊತೆ ವಾಸಿಸುತ್ತಿತ್ತು. ಚಿಂಟು ಕಪ್ಪು ಬಿಳಿ ಬಣ್ಣದ, ಚುರುಕು ಕಣ್ಣುಗಳ, ಕುತೂಹಲದಿಂದ ತುಂಬಿದ್ದ ಬೆಕ್ಕುಮರಿ. ಆದರೆ ಅವನಿಗೆ ಒಂದು ಚಿಕ್ಕ ತೊಂದರೆ ಇತ್ತು. ಅದೇ ಅವನು ತುಂಬಾ ಹಠಮಾರಿ! ಅಮ್ಮನ ಮಾತು ಕೇಳುವುದು ಅವನಿಗೆ ಇಷ್ಟವಿರಲಿಲ್ಲ.
ಒಂದು ಬೆಳಗ್ಗೆ ಮಿಂಟು ಅಮ್ಮ ಚಿಂಟುವಿಗೆ ಹೇಳಿತು:
“ಚಿಂಟು, ಮನೆ ಹೊರಗೆ ಹೋಗ್ಬೇಡ, ನದಿ ಪಕ್ಕದಲ್ಲಿ ದೊಡ್ಡ ನಾಯಿಯಿದೆ. ಅದು ಸಣ್ಣ ಬೆಕ್ಕುಮರಿಗಳನ್ನು ಓಡಿಸಿ ಹಿಡಿದು ಸಾಯಿಸಿಬಿಡುತ್ತದೆ!”
ಆದರೆ ಚಿಂಟು ಮುಖದ ಮೇಲೆ ನಗು ತಂದು ಜೋರಾಗಿ ಹೇಳಿದ: "ನನಗೆ ಯಾವುದೂ ಆಗಲ್ಲ ಅಮ್ಮಾ! ನಾನು ವೇಗವಾಗಿ ಓಡಬಹುದು!” ಎಂದು ಕೂಗಿ, ಓಡಿ ಹೋದ.
ಅಮ್ಮ ಎಷ್ಟೋ ಸಲ ಕರೆದರೂ, ಚಿಂಟು ಕೇಳಲಿಲ್ಲ. ಅವನು ನದಿಯತ್ತ ಓಡಿ, ಕಲ್ಲುಗಳ ಮೇಲೆ ಕುಣಿದು, ಜಿಗಿದು ಆಡತೊಡಗಿದ. ಆಕಸ್ಮಿಕವಾಗಿ ಹತ್ತಿರದ ಹುಲ್ಲಿನಲ್ಲಿ ಒಂದು ದೊಡ್ಡ ನಾಯಿ “ಬೌ! ಬೌ!” ಎಂದು ಬೊಗಳಿತು. ಚಿಂಟು ಬೆದರಿದ, ಅವನ ಕಿವಿಗಳು ನಿಂತವು, ಕಾಲುಗಳು ಕಂಪಿಸಿದವು. ಅವನು ಬಹಳ ವೇಗವಾಗಿ ಓಡಿದನು, ತನ್ನ ಪುಟ್ಟ ಪಾದಗಳು ಮಣ್ಣಿನಲ್ಲಿ ಹೂತು, ಮತ್ತೆ ಜಾರಿ ಬಿದ್ದು ಬಿಟ್ಟವು.
ಅಮ್ಮ ಮಿಂಟು ಇದನ್ನು ದೂರದಿಂದ ನೋಡುತ್ತಿದ್ದಳು. ತಕ್ಷಣ ಓಡಿ ಬಂದು ಚಿಂಟುವನ್ನು ತನ್ನ ಬಾಯಲ್ಲಿ ಕಚ್ಚಿಕೊಂಡು ಸುರಕ್ಷಿತವಾಗಿ ಮನೆಗೆ ತಂದಳು. ಚಿಂಟು ಅಮ್ಮನ ಹೊಟ್ಟೆಯ ಮೇಲೆ ನಾಚಿಕೊಂಡು ಬಿದ್ದ. ಮಿಂಟು ಅವನ ತಲೆಯನ್ನು ತಟ್ಟಿ ಮೃದುವಾಗಿ ಹೇಳಿತು: “ನೋಡು ಚಿಂಟು, ನಾನು ನಿನ್ನನ್ನು ಕೇವಲ ಭಯಪಡುವುದಕ್ಕೆ ಮಾತ್ರ ಹೇಳಲ್ಲ. ನಿನ್ನ ಒಳ್ಳೆಯದಕ್ಕೇ ಹೇಳುತ್ತೇನೆ. ಅಮ್ಮನ ಮಾತು ಕೇಳೋದರಲ್ಲಿ ತಪ್ಪೇನಿಲ್ಲ, ಬಾಳು ತುಂಬಾ ಸುಲಭವಾಗುತ್ತದೆ.” ಚಿಂಟು ತಲೆಯಾಟಿ ಹೇಳಿದ: “ಕ್ಷಮಿಸು ಅಮ್ಮಾ. ನಾನು ಮುಂದಿನ ಸಲ ನಿನ್ನ ಮಾತು ಕೇಳ್ತೀನಿ.”
ಆ ದಿನದಿಂದ ಚಿಂಟು ಬದಲಾದ. ಬೆಳಗ್ಗೆ ಎದ್ದೊಡನೆ ಅಮ್ಮನ ಜೊತೆ ಹಾಲು ಕುಡಿದು, ಹಿತವಾಗಿ ಆಡಿ, ಅಮ್ಮ ಹೇಳಿದುದನ್ನೆಲ್ಲಾ ಶ್ರದ್ಧೆಯಿಂದ ಕೇಳುತ್ತಿದ್ದ. ಹಳ್ಳಿಯಲ್ಲೆಲ್ಲಾ “ಚಿಂಟು ಬದಲಾಗಿದ್ದಾನೆ” ಎಂಬ ಸುದ್ದಿ ಹರಡಿತು.
ಮಿಂಟು ಅಮ್ಮನ ಮುಖದಲ್ಲಿ ತೃಪ್ತಿಯ ನಗು ಕಾಣಿಸಿತು. ಚಿಂಟು ಅಮ್ಮನ ಬದಿಯಲ್ಲಿ ಮಲಗಿ ಯೋಚಿಸುತ್ತಿದ್ದ –
“ಅಮ್ಮನ ಮಾತು ಕೇಳೋದು ಎಷ್ಟೋ ಚೆನ್ನಾಗಿದೆ! ಅದು ಪ್ರೀತಿ ತುಂಬಿದ ಮಾರ್ಗದರ್ಶನ.”
ಅಂದು ಸಂಜೆ ಆಕಾಶದ ನಕ್ಷತ್ರಗಳು ಮಿಂಟು ಮತ್ತು ಚಿಂಟುವಿನ ಮನೆಯ ಮೇಲೆ ಮಿನುಗುತ್ತ, ಅವರ ಮಮತೆಯ ಕಥೆ ಹೇಳಿದವು.
ನೀತಿ: ಅಮ್ಮನ ಮಾತು ಯಾವಾಗಲೂ ಪ್ರೀತಿಯಿಂದ ಕೂಡಿರುತ್ತದೆ . ಆದ್ದರಿಂದ ಅದನ್ನು ಕೇಳಿದರೆ ಜೀವನ ಸುರಕ್ಷಿತವಾಗುತ್ತದೆ.
–ದಿಯಾ ಉದಯ್
chitkaa
ಸೋಮವಾರ, ಅಕ್ಟೋಬರ್ 6, 2025
ಲಿಮರಿಕ್
ಶುಕ್ರವಾರ, ಸೆಪ್ಟೆಂಬರ್ 26, 2025
ಮಂಗಳವಾರ, ಸೆಪ್ಟೆಂಬರ್ 23, 2025
ಲಿಮರಿಕ್
ಭಾನುವಾರ, ಸೆಪ್ಟೆಂಬರ್ 21, 2025
ಹನಿ ಮಿಡಿದಿದೆ
ಬುಧವಾರ, ಸೆಪ್ಟೆಂಬರ್ 10, 2025
ಮಾಜಂದೀ ಗಾಯ
ಶುಕ್ರವಾರ, ಆಗಸ್ಟ್ 29, 2025
To my Chinnu
❤️Love you Chinnu
Chinnu mamma always loves you
She tells you to read for your life
Mom never hates her child forever
She expects a baby to build her life for a good future
Even in my absence you should be strong
My wish to you always my daughter should share knowledge to others
I love you and only you always
Mom rashly tells you to read for your goodness of better tomorrow
Think that mom never let others scold you
But it's her responsibility to make you bold and wise
Always parents expect their children to be in top
It's not a pressure or torture it's a new hope
My pretty daughter should score good marks
I never punished you scoring less or bit
But have I no right to scold you or tell you good words?
Thousand miles to travel and keep a single step with new hope..
I'm yours you are my world ever
Nobody for me in this world to say you are mine other than you
My life is dedicated to you today and tomorrow
My goals are on you and my time is for you..I'm always with you.
Never think that mothers expect more
Think that I must do my good being a lovely child and my princess
You are cute, innocent, bold and wise
Mamma expects the good health of your eyes ...
Avoiding mobile is good for children
It kills the time and spoils the brain cells, thoughts brighten
Be grateful to be a daughter of a teacher
Be happy always being my friend and guide,a superstar
You are my future model Miss World heroin love and all
You are my name fame and super power
No torture no scoldings or angry
It's the first step of your bright future degree
You are gold, diamond, butterfly and platinum
Be happy always and keep the people happy including mom
You are my cute pie and lovely child forever
You are my life my dream together
Without you I'm alone here and there
You are the queen of tomorrow in my future..
Love you ever and ever
Love and live your future with goals to be bigger .
Hit the bad one with your power and nature
Let the others feel difficult to reach your tower
Grow like a rock and to the society as a power
Be always helper to the needy, aged and poor.
As you know in the society people are bad and danger
For such a society be stronger and stronger
But be always my smile and my lovely daughter
Let the smile bloom in your face forever..
Yours and only yours loving
-@HoneyBindu@ ❤️
30.08.2025
ಸೋಮವಾರ, ಆಗಸ್ಟ್ 25, 2025
ಗಣೇಶ ಸ್ತುತಿ
ಮಂಗಳವಾರ, ಆಗಸ್ಟ್ 12, 2025
ಸಾಲ
ಸೋಮವಾರ, ಆಗಸ್ಟ್ 11, 2025
ಮನಕೆ ಮಾತು
ಭಾನುವಾರ, ಆಗಸ್ಟ್ 10, 2025
ಚುಟುಕು
ಶನಿವಾರ, ಆಗಸ್ಟ್ 9, 2025
ಸೋದರನ ಕರೆ
ಕಾಗುಣಿತ ಕವನ
ಮಂಗಳವಾರ, ಆಗಸ್ಟ್ 5, 2025
ಚಿಟ್ಕಾ
ಭಾನುವಾರ, ಜುಲೈ 13, 2025
ಚುಟುಕು
ಶುಕ್ರವಾರ, ಜುಲೈ 11, 2025
ನ್ಯಾನೋ ಕಥೆ
ಗುರುವಾರ, ಜುಲೈ 10, 2025
ಗಜಲ್
ಮಂಗಳವಾರ, ಜೂನ್ 3, 2025
ಕಲಿತು ಕಲಿಸಬೇಕಿದೆ ನಾವು
ಕಲಿತು ಕಲಿಸಬೇಕಿದೆ ನಾವು
ಬದುಕೆಂದರೆ ಒಂದು ದಿನದ ಆಟವಲ್ಲ. ಅದು ಆಟಗಳ ಜೊತೆಗೆ ಗುದ್ದಾಟವೂ ಇರುವ ಏಳು-ಬೀಳುಗಳ ಸರಮಾಲೆ.ಆದರೆ ಇಲ್ಲಿ ನೆಮ್ಮದಿ ಎಂಬುದು ಬಡವ ಶ್ರೀಮಂತ ಯಾರಿಗೂ ಇಲ್ಲ. ಬಡವ ಹಣದಲ್ಲಿ ಬಡವನಾದರೆ, ಹಣದಲ್ಲಿ ಶ್ರೀಮಂತ ಎನಿಸಿಕೊಂಡವ ಗುಣದಲ್ಲಿ ಬಡವ. ಅಷ್ಟೇ ಅಲ್ಲ, ನೆಮ್ಮದಿಯಲ್ಲಿ ಎಲ್ಲರೂ ಬಡವರೇ. ಶ್ರೀರಾಮ,ಶ್ರೀಕೃಷ್ಣ,ಏಸುಕ್ರಿಸ್ತ,ಶಿವ,ಭರತ ಚಕ್ರವರ್ತಿ,ಗಣಪತಿ ಎಲ್ಲರ ಅವತಾರಗಳನ್ನು ಒಮ್ಮೆ ಅವಲೋಕಿಸಿದರೆ ತಿಳಿಯುತ್ತದೆ. ಮಹಿಳೆಗೂ ಇದು ತಪ್ಪಿದ್ದಲ್ಲ.ಸೀತೆ,ದ್ರೌಪದಿ,ಕುಂತಿ,ಊರ್ಮಿಳಾ,ಮಂಡೋದರಿ,ಕೈಕೇಯಿ ಎಲ್ಲರೂ ರಾಣಿಯರೇ ಆಗಿದ್ದರೂ ಕೂಡಾ ಬದುಕ ರುಚಿ ಸಂತಸದಿ ಸವಿಯಲು ಅವರಿಗೆ ಸಿಕ್ಕಿತ್ತೇ? ಬದುಕು ಯಾರೋ ಕಟ್ಟಿಕೊಟ್ಟ ಹಣದ ಗಂಟಲ್ಲ, ಬದಲಾಗಿ ಯಾರೋ ಮಾಡಿಟ್ಟ ಹೊಲ. ಅಲ್ಲಿ ಸಮತಟ್ಟು ಮಾಡಲು ಕಷ್ಟವಿದೆ. ಅಗೆದು,ಉಳುಮೆ ಮಾಡಿ,ಮಣ್ಣು ಹದಮಾಡಿ,ಉತ್ತು,ಬಿತ್ತಿ,ಕಳೆ ತೆಗೆದು, ನಾಟಿ ಮಾಡಿ,ಹಗಲು ರಾತ್ರಿ ದುಡಿದು ಬೆವರು ಸುರಿಸಿದರೆ ಮಾತ್ರ ನೆಮ್ಮದಿಯ ಬೆಳೆ ಸಿಕ್ಕೀತು.ಅದಕ್ಕೆ ಬೆಲೆಯೂ ಬಂದೀತು.ಯಾರೋ ಮಾಡಿಟ್ಟ ಹೊಲಕ್ಕೆ ಲಗ್ಗೆ ಇಡಲು ಸಾಧ್ಯವಿಲ್ಲ. ಇಟ್ಟರೂ,ಮುಂದೆಯೂ ಅದೇ ರೀತಿ ಕಾಳಜಿ, ಕೆಲಸ ಜಾಗೃತಿ ಬೇಕು.
ಭೂಮಿಗೆ ಬಂದ ಪ್ರತಿಯೊಬ್ಬನೂ ಬದುಕಿನಲ್ಲಿ ನೆಮ್ಮದಿಯನ್ನೇ ಹುಡುಕುತ್ತಾನೆ.ಅದಕ್ಕಾಗಿಯೇ ಹಲವಾರು ಕೆಲಸ ಕಾರ್ಯಗಳು ಕೂಡ.ನೆಮ್ಮದಿ ಸಿಕ್ಕಿತು ಎನ್ನುವಷ್ಟರಲ್ಲಿ ಮತ್ತೊಂದು ಖಾಯಿಲೆ,ಮಗದೊಂದು ಸಾವಿನ ನೋವು,ಸಂಕಟ.ಹೀಗೆ ಕಷ್ಟ ಸುಖಗಳು ಒಂದರ ಹಿಂದೆ ಬೇವು ಬೆಲ್ಲದ ತೆರದಿ ನುಗ್ಗುತ್ತಾ ಬರುತ್ತವೆ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಮುಂದೆ ಹೋಗುವವ ಜಾಣ.ಎಲ್ಲರೂ ಕಲಿಕೆಯಲ್ಲಿ ಎಷ್ಟೇ ಜಾಣರಾದರೂ ಬದುಕಿನ ಶಾಲೆಯಲ್ಲಿ ದಡ್ಡರೇ.ಅಲ್ಲಿ ಜಾಣ ಅನ್ನಿಸಿಕೊಳ್ಳುವವ ಕೋಟಿಗೊಬ್ಬ.ಅವನನ್ನು ಎಲ್ಲರೂ ಇಷ್ಟ ಪಟ್ಟು ಮೇಲಿಡುತ್ತಾರೆ.ದೇವರ ಹಾಗೆ ಪೂಜಿಸುತ್ತಾರೆ.ಆದರೆ ಒಂದು ದಿನ ಅವನನ್ನೂ ಕೂಡಾ ಜನ ಕೆಳಗೆ ದೂಕಿ ಅವನ ಮೇಲೆ ನಡೆಯುತ್ತಾರೆ ಎಂಬುದು ಕಟು ಸತ್ಯ. ಅಲ್ಲೂ ಹೋರಾಟವೇ.ಉತ್ತಮವಾಗಿ ದುಡಿದು,ಮಕ್ಕಳಿಗೆ ಬೇಕಾದಷ್ಟು ಆಸ್ತಿ ಮಾಡಿ ಇಟ್ಟ ಸಿರಿವಂತ ಮಕ್ಕಳು ಹಿರಿ ವಯಸ್ಸಿನಲ್ಲಿ ರೋಗಿ ಆದ ಪೋಷಕರನ್ನು ವಿಷ ಹಾಕಿ ಸಾಯಿಸಲು ಕೂಡಾ ಹೆದರುವುದಿಲ್ಲ. ಅಂತಹ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಮತ್ತು ಅಂತಹ ಪೈಶಾಚಿಕ ಬುದ್ಧಿಯುಳ್ಳವರು ನಾವು ಕೂಡಾ ಆಗಿದ್ದೇವೆ, ನಮ್ಮ ಮುಂದಿನ ಜನಾಂಗವನ್ನು ಶಿಸ್ತು, ಸಂಯಮಗಳ ಬದುಕಿನ ಪಾಠ ಕಲಿಸದೇ ಕೇವಲ ಓದು, ಬರಹ, ಹಣದ ದಾಹ ಕಲಿಸಿ, ವೈದ್ಯ, ಇಂಜಿನಿಯರ್ ಮಾಡಿ ಹಣದ ರಾಕ್ಷಸರನ್ನಾಗಿ ಬೆಳೆಸಿ ಬಿಟ್ಟಿದ್ದೇವೆ.ನಾವು ಹೇಗೆ ನಮ್ಮ ಮಕ್ಕಳು ನಮ್ಮ ಹಾಗೆ ಬಡವರಾಗಿ ಬದುಕಬಾರದು, ಅವರಿಗಾಗಿ ನಾವು ಏನಾದರೂ ಮಾಡಿ ಇಟ್ಟಿರಬೇಕು ಎಂದು ಆಸೆ ಪಟ್ಟು, ವ್ಯಾಪಾರದ ಮೊರೆ ಹೋಗಿದ್ದೆವೋ ಹಾಗೆ ನಮ್ಮ ಮಕ್ಕಳು ಬದುಕನ್ನೇ ವ್ಯಾಪಾರ ಮಾಡಿಕೊಂಡಿದ್ದಾರೆ.
ಬದುಕು ಎಂದರೆ ಎಲ್ಲವನ್ನೂ ಬದಿಗೊತ್ತಿ, ಕೆಲಸ ಮಾಡಿ ಹಣ ಮಾಡುವುದು,ಮಕ್ಕಳನ್ನು ಓದಿಸುವುದು,ಶಾಪಿಂಗ್,ಬೇಕಾದ್ದು ಕೊಳ್ಳುವುದು ಎಂಬ ಪಾಠ ನಮ್ಮನ್ನು,ಹಿರಿಯರನ್ನು ನೋಡಿ ಆ ಮಗು ಕಲಿತ ಪಾಠ.ಅದಕ್ಕೆ ಮಕ್ಕಳನ್ನು ಬೆಳೆಸುವಾಗ ಪ್ರತಿ ಪೋಷಕರು ನೀತಿ,ಪುರಾಣ,ಅಜ್ಜಿ ಕತೆಗಳು ಇವುಗಳ ಮೂಲಕ ನೀತಿ ಕಲಿಸಬೇಕಲ್ಲವೇ?ಇಂದಿನ ಕಾಲದಲ್ಲಿ ಈ ಪಾಠ ಹೇಳಬೇಕಾದ ಅಜ್ಜಿಯರು ಒಂದು ಕಡೆ ಹೊರಗೆ ದುಡಿತ, ಸುಸ್ತು,ಇಲ್ಲದೆ ಹೋದರೆ ಟಿವಿ,ಮೊಬೈಲ್ಗಳಲ್ಲಿ ತಾವೇ ಮುಳುಗಿ ಹೋಗಿರುವುದು ವಿಪರ್ಯಾಸ.ಹಿರಿಯರು ಫ್ರೀ ಇದ್ದರೆ ಮಕ್ಕಳೇ ಮೊಬೈಲ್,ಲ್ಯಾಪ್ಟಾಪ್,ನೋಟ್ ಪ್ಯಾಡ್ಗಳಲ್ಲಿ,ಗೇಮ್ಸ್ನಲ್ಲಿ ಮುಳುಗಿ ಹೋಗಿರುತ್ತಾರೆ.ಎಷ್ಟು ಎಂದರೆ ಹತ್ತನೇ ತರಗತಿ ಪರೀಕ್ಷೆಯ ಭಾಷಾ ಉತ್ತರ ಪತ್ರಿಕೆಯ ಹದಿನೈದು ಪುಟಗಳಲ್ಲಿಯು ಒಬ್ಬ ವಿದ್ಯಾರ್ಥಿ 'ಮೋಯೆ ಮೋಯೆ' ಎಂಬ ಪದವನ್ನು ಕನಿಷ್ಠ 500 ಬಾರಿ ಬರೆದಿಟ್ಟಿದ್ದಾನೆ ಎಂದರೆ ಅವನ ಭಂಡ ಧೈರ್ಯ, ಅವನಿಗೆ ತರಗತಿಯಲ್ಲಿ ಸಿಕ್ಕ ಪಾಠವನ್ನು ಅವನು ಕೇರ್ಲೆಸ್ ಮಾಡಿದ್ದು,ಪೋಷಕರ ಮಾತನ್ನು ಕೇಳದೆ ಇದ್ದುದು,ತನ್ನ ಮುಂದಿನ ಬದುಕಿನ ಬಗ್ಗೆ ಕನಸುಗಳು,ಶ್ರಮ, ಗುರಿ, ಸತ್ಯ,ನ್ಯಾಯ-ನಿಷ್ಠೆಯಿಲ್ಲದೆ ಇರುವುದು ಕಾಣುತ್ತಿಲ್ಲವೇ? ಬರೆಯಲು ಬಾರದೆ ಇದ್ದವನು ಅದು ಹೇಗೋ ಒಂದಷ್ಟು ಪ್ರಶ್ನೆಗಳಿಗೆ ಆದರೂ ಕಷ್ಟಪಟ್ಟು ಅಲ್ಪ ಸ್ವಲ್ಪ ಸರಿ ಉತ್ತರ ಬರೆದಾನು.ಇದು ಏನು ಮಾಡಿದರೂ ಕೇಳದ ಮರ್ಕಟ ಬುದ್ಧಿಯಲ್ಲವೇ? ಈ ಮೊಂಡುತನ ಸರಿಪಡಿಸಲು ಸಾಧ್ಯ ಇಲ್ಲವೇ? ಹೇಗೆ?
ಒಂದೇ ಉತ್ತರ. ನಮಗೂ, ನಮ್ಮ ಮಕ್ಕಳಿಗೂ ಇಂದು ತಾಳ್ಮೆ ಇಲ್ಲವಾಗಿದೆ.ಬಸ್ಸ್ಟಾಪ್ನಲ್ಲಿ ನಿಂತು ಬಸ್ ಕಾಯುವ ವ್ಯವಧಾನ,ಬಸ್ಸ್ಟಾಂಡಿನವರೆಗೆ ನಡೆದುಕೊಂಡು ಹೋಗುವ ತಾಳ್ಮೆ,ಧೈರ್ಯ,ಶಕ್ತಿ,ಬಸ್ಸಿನ ಒಳಗೆ ಒಬ್ಬರಿಗೆ ಮತ್ತೊಬ್ಬರ ಜೊತೆ ಹೊಂದಾಣಿಕೆ ಇವೆಲ್ಲ ಕಲಿಕೆಗೆ ಅವಕಾಶ ಮಾಡಿ ಕೊಡುತ್ತವೆ.ಇವನ್ನೆಲ್ಲ ನಾವು ಕಷ್ಟ ಎನ್ನದೆ ನಾವೇ ಕಾಲೇಜಿನವರೆಗೆ, ಶಾಲೆಯವರೆಗೆ ಪಿಕ್ಅಪ್ ಡ್ರಾಪ್, ಇಲ್ಲವೇ ಸ್ಕೂಲ್ ವ್ಯಾನು, ಬಸ್ಸು,ಕಾರು,ರಿಕ್ಷಾಗಳ ನೀಡಿದ ಕಾರಣವಿದು. ಯಾವುದರ ಪರಿವೆಯೂ ಆ ಮಗುವಿಗೆ ಇಲ್ಲ. ಒಂದು ಬಸ್ ಹೋದರೆ ತಾಳ್ಮೆಯಿಂದ ಇನ್ನೊಂದು ಬಸ್ ಬರುವವರೆಗೆ ಕಾಯಬೇಕು,ಅಥವಾ ಬೇರೆ ರೂಟ್ನಲ್ಲಿ ಹೋಗುವ ಬಸ್ ಹಿಡಿದು ಅರ್ಧದಲ್ಲಿ ಮೊದಲು ಹೋದ ಬಸ್ ಅನ್ನು ಕ್ಯಾಚ್ ಮಾಡಬಹುದು ಮೊದಲಾದ ಲಾಜಿಕ್ ಆಲೋಚನೆಗಳನ್ನು ಅವರ ಮನಸ್ಸಿನ ಒಳಗೆ ಬರಲು ನಾವು ಅವಕಾಶ ಕೊಟ್ಟಿದ್ದರೆ ತಾನೇ?
ನಮ್ಮ ಮಕ್ಕಳನ್ನು ನಮ್ಮೊಂದಿಗೆ ಇಟ್ಟು, ನಮ್ಮ ಆಚಾರ ಕಲಿಸಿ ಬೆಳೆಸುವ ಕ್ರಮವೂ ಈಗಿಲ್ಲ, ಅದೆಲ್ಲೋ ದೂರದ ರೆಸಿಡೆನ್ಶಿಯಲ್ ಸ್ಕೂಲ್. ಕಾರಣ ವಿದ್ಯೆ ಚೆನ್ನಾಗಿ ಕೊಡಬೇಕು. ಹೇಗೆ?ಮುಂದೆ ಒಳ್ಳೆ ಕಾಲೇಜಿನಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಸೀಟು ಸಿಗುವ ಹಾಗೆ ಹೈ ಫೈ ಆಂಗ್ಲ ಮಾಧ್ಯಮದ,ಸಿಬಿಎಸ್ಈ,ಐಸಿಐಸಿಈ, ಅದಕ್ಕಿಂತಲೂ ಮೇಲಿನ ಇಂಟರ್ ನ್ಯಾಶನಲ್ ಸ್ಕೂಲ್ ಸೆಲೆಕ್ಟ್ ಮಾಡಿ ಓದಿಸಬೇಕು. ಕೆಲಸ ಸಿಕ್ಕಿದರೆ ಆಯ್ತು. ಪೋಷಕರು ಖುಷಿ,ಕೈ ತುಂಬಾ ಸಂಬಳ. ವರ್ಷಕ್ಕೆ ಇಂತಿಷ್ಟು ಲಕ್ಷಗಳ ಅಗ್ರೀಮೆಂಟು.ಜೀವನ ನಿರ್ವಹಣೆ ಗೊತ್ತಿಲ್ಲ, ಉತ್ತಮ ಗುಣಗಳನ್ನು ಕಲಿತೇ ಇಲ್ಲ. ಬರೀ ಸಿಈಟಿಗೆ ರೆಡಿ ಮಾಡಿದ್ದು ಬಿಟ್ಟರೆ ಗುಣಗಳ ಬಗ್ಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ.ಹಾಗಾಗಿಯೇ ಇಂದಿನ ಮೆಡಿಕಲ್, ಇಂಜಿನಿಯರಿಂಗ್, ಎಂಬಿಎ ಮೊದಲಾದ ಪದವಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಡ್ರಗ್ ಅಡಿಕ್ಟ್ಸ್!!!ಕಾರಣ? ಸಿಗದ ಪ್ರೀತಿ!!uಸಿಗದ ನೆಮ್ಮದಿ ಒಂದೇ!ಸಮಯ ಕಳೆಯಲು ಇಲ್ಲದ ಉತ್ತಮ ಹವ್ಯಾಸಗಳು, ಗೊತ್ತಿಲ್ಲದ ನೀತಿ ಪಾಠಗಳು!ಕಲಿಕೆ ಕೂಡಾ ಈಗ ವ್ಯಾಪಾರ. ಹವ್ಯಾಸಕ್ಕಾಗಿ ಹಾಡು, ನೃತ್ಯ, ಯಕ್ಷಗಾನ, ಚಿತ್ರಕಲೆ ಯಾವುದನ್ನು ಕಲಿಯಬೇಕು ಅಂದುಕೊಂಡರೂ ಎಲ್ಲಾ ಕ್ಲಾಸ್ಗಳು. ಒಂದಷ್ಟು ಎಕ್ಸ್ಟ್ರಾ ಸಮಯ, ಹಣ ಇಷ್ಟೇ. ಹಣವಿದ್ದರೆ ಹೊಸ ಕಲಿಕೆ ಇಂದು.ಬಡವ ಎಲ್ಲದರಲ್ಲೂ ಹಿಂದೆ ಎನ್ನುವಂತಾಗಿದೆ ಈ ಕಾಲ.
ಮಕ್ಕಳಿoದು ಹಿರಿಯರ ಬಳಿ ಮಾತನಾಡಲು ಕಲಿತಿಲ್ಲ,ಅವರಿಗೆ ಹಿರಿಯರನ್ನು ಸಂಬೋಧಿಸಲು ತಿಳಿದಿಲ್ಲ. ಅಜ್ಜ ಅಜ್ಜಿಯರ ಜೊತೆ ಮನಬಿಚ್ಚಿ ಮಾತನಾಡಲು ಮಾತೃ ಭಾಷೆಯನ್ನು ನಾವುಗಳು ಕಳಿಸಿ ಕೊಟ್ಟಿದ್ದರೆ ತಾನೇ?ಎಡ-ಬಲ ಎಂದರೇನು ಅವರಿಗೆ ತಿಳಿಯಬೇಕಾದರೆ ಹೊರದೇಶದ ಭಾಷೆ ಬೇಕು. ಇನ್ನು ಈ ನೆಲದ ಸಂಸ್ಕೃತಿ ಹೇಗೆ ತಾನೇ ತಿಳಿಯಬಲ್ಲರು! ಅಷ್ಟೇ ಅಲ್ಲ,ಭಾಷಾ ಕಲಿಕೆ ಒಂದೆಡೆಗಿರಲಿ, ಜನರ ಸ್ನೇಹದ ಬದಲು ಕಂಪ್ಯೂಟರ್, ಮೊಬೈಲ್ ಗೀಳು ಹೆಚ್ಚಿದೆ.ಇನ್ನು ಕೆಲವರು ಇಂಜಿನಿಯರ್ಗಳಾಗಿ ಮನೆಯಲ್ಲೇ ಕುಳಿತು ಕೆಲಸ.ಅವರ ನಿದ್ದೆಗೂ ಕೆಲಸಕ್ಕೂ ಸಮಯದ ಪರಿವೆಯೇ ಇಲ್ಲ.ಕೈ ತುಂಬಾ ಸಂಬಳ.ಆದರೇನು? ಮನೆಗೆ ಯಾರು ಬಂದರು, ಯಾರು ಹೋದರು, ಬಂಧುಗಳಾರು-ಇವನ್ನೆಲ್ಲ ನೋಡಲು ಸಮಯ ಇಲ್ಲವೇ ಇಲ್ಲ. ಇನ್ನು ಹತ್ತಿರದ ಮನೆಗೆ ಹೋಗಿ ಅಲ್ಲಿನ ಜನರೊಡನೆ ಮಾತುಕತೆ,ಮಕ್ಕಳೊಂದಿಗೆ ಆಟ ಇವೆಲ್ಲಾ ಈಗ ಹಳೇ ಚಾಳಿ ಬಿಡಿ.
ಅಲ್ಲಲ್ಲಿ ಒಂದೆರಡು ಉತ್ತಮ ಗುಣದ ಶಿಕ್ಷಕರು,ವೈದ್ಯರು,ಇತರ ಜನರು,ಬಂಧುಗಳ ಮೇಲೆ ಪ್ರೀತಿ ಇರುವ ಹಿರಿ ಕಿರಿಯರು,ಸಹಾಯ ಪಡೆದುದನ್ನು ಮರೆಯದ ಉದಾತ್ತ ಮನಸುಗಳು,ಸಮಾಜ ಸೇವೆಯ ತುಡಿತವಿರುವ ಹೃದಯಗಳು,ಪರರಿಗೆ ನೋವನ್ನು ಕೊಡಲು ಬಯಸದೆ ಬದುಕುವ ಹೆಮ್ಮೆಯ ಜೀವಿಗಳು, ತಾನು ಇನ್ನು ಸ್ವಲ್ಪ ಕಾಲ ಮಾತ್ರ ಬದುಕುವುದು ಎಂದು ತಿಳಿದಿದ್ದರೂ ನಗುತ್ತಾ, ಇತರರಿಗೆ ಧೈರ್ಯ ತುಂಬುವ ಜೀವಗಳು ಭೂಮಿಯ ಮೇಲೆ ಇನ್ನೂ ಇರುವರು. ಇವರಿಂದಲೇ ಮಳೆ,ಬೆಳೆ ಸರಿಯಾಗಿ ಆಗುತ್ತಾ ಇರುವುದೋ ಏನೋ?
ಅಷ್ಟೇ ಅಲ್ಲದೆ ಕುಡಿತದ,ಅಮಲು ಪದಾರ್ಥಗಳ ಮತ್ತಿನಲ್ಲಿ ಮತ್ತೂ ಹಣ ಕೇಳಿ,ಕೊಡದಿರುವ ಪೋಷಕರನ್ನು ಕಡಿದು ಕೊಂದು,ಅವರಲ್ಲಿದ್ದ ಹಣವನ್ನೆಲ್ಲ ನುಂಗಿ ನೀರು ಕುಡಿದು,ತದನಂತರ ತನ್ನ ಬದುಕನ್ನು ಹಾಳುಮಾಡಿಕೊಂಡು ಕೊನೆಗೊಳಿಸುವ ಮಕ್ಕಳೂ ಇದ್ದಾರೆ.ಕುಡಿತದ ಮತ್ತಿನಲ್ಲಿ ಹೆಣ್ಣನ್ನು ಕೊಲೆ ಮಾಡಿ ಸುಖಿಸುವ ಮಾನವ ರಾಕ್ಷಸರು, ಮಕ್ಕಳನ್ನು ದೈವಕ್ಕೆ ಬಲಿ ಕೊಡುವಂತಹ ಮೂಢ ನಂಬಿಕೆಗಳಿನ್ನೂ ನಮ್ಮ ಸಮಾಜದಲ್ಲಿ ಇದ್ದೇ ಇವೆ. ಬಾಲ್ಯವಿವಾಹ,ಕೆಲವೊಂದು ಕೆಟ್ಟ ಆಚರಣೆಗಳು.ಗಂಡು ಮಕ್ಕಳಿಗೆ ಶ್ರೇಷ್ಠ ಸ್ಥಾನ ಮಾನ, ಹೆಣ್ಣು ಅಡುಗೆ ಮನೆಗೆ ಸೀಮಿತ,ಇವೇ ಮುಂತಾದ ಸಾಮಾಜಿಕ ಧೋರಣೆಗಳು ಎಲ್ಲಾ ಕಡೆ ಸರಿ ಸಮನಾಗಿ ಬದುಕಲೂ ಬಿಡಲಾರವು. ತಾನೇ ಮೇಲೆಂದು ಸಮಾಜದಲ್ಲಿ ಬೀಗುವ ಗಂಡು. ಅವರನ್ನೇ ನಂಬಿರುವ ಮಹಿಳೆಯರು ಈಗಲೂ ಇದ್ದಾರೆ. ಅವರಿಗೆ ಒಂಟಿಯಾಗಿ ಬದುಕಲು ಆಗದು. ಜೊತೆ ಕಲಿತು,ಕಲೆತು ಅಭ್ಯಾಸ.ನಾವು ಎಚ್ಚೆತ್ತು ನಡೆದಾಗ ಮಾತ್ರ ಪ್ರತಿಯೊಬ್ಬರ ಬದುಕು ಸರಿಯಾದೀತು. ನಮ್ಮ ಮುಂದಿನ ಜನಾಂಗವನ್ನು ಕೂಡಾ ನಾವೇ ಸರಿಪಡಿಸಿ ಶುದ್ಧಗೊಳಿಸಿ ಇಡಬೇಕಿದೆ. ಇಲ್ಲದೆ ಹೋದರೆ ಗಾಳಿ, ನೀರು, ಶಬ್ಧ, ಮಣ್ಣು ಮಲಿನ ಆದ ಹಾಗೆ ಮನಸ್ಸುಗಳು ಕೂಡಾ ಮಲಿನ ಆಗುವುದರಲ್ಲಿ ಎರಡು ಮಾತಿಲ್ಲ. ನೀವೇನಂತೀರಿ?
@ಹನಿಬಿಂದು@
17.04.2024
ಮಂಗಳವಾರ, ಮೇ 20, 2025
ಬೇಸರವಾಗುತ್ತಿದೆ
ಪ್ರೀತಿ
ಶನಿವಾರ, ಮೇ 17, 2025
ಸತ್ಯ
ಬದುಕ ಬೇರಿನ ತೊಟ್ಟಿಲೊಳಗೆ
ನರಕ ಎಂಬ ಮಂಚದೊಳಗೆ
ನಾನು ನೀನು ಎನುವ ಮನುಜನು
ನೀತಿ ಕಲಿಯಲು ಸಾಧ್ಯವೇ?
ಅಪ್ಪ ಅಮ್ಮರು ಲೆಕ್ಕಕ್ಕಿಲ್ಲ
ಹಿರಿಯ ಕಿರಿಯಗೆ ಬೆಲೆಯೇ ಇಲ್ಲ
ಗೆಳೆಯರನ್ನೂ ಕೊಲುವರಲ್ಲ
ಮಾನವತೆಯು ಎಲ್ಲಿದೆ?
ಅಕ್ಕ ತಂಗಿ ಎನುವರಿಲ್ಲ
ಹೆಣ್ಣ ಬಾಳಿಗೆ ಧೈರ್ಯವಿಲ್ಲ
ದೇಹ ಬಳಸಿ ಹೊಡೆದು ಸಾಯಿಸಿ
ಮೋರಿಗೆಸೆದು ಹೋದರಲ್ಲ!
ಗಂಡುಗಳಿಗೂ ಹೆಣ್ಣುಗಳಿಗೂ
ಮಾನವತೆಯ ಹೇಳೋರ್ಯಾರು
ನಿತ್ಯ ಸಾವನು ನೋಡುತ್ತಿದ್ದರೂ
ತಾವೇ ಎನುತ ಮೆರೆವರಲ್ಲ!!
ದಾನ ದಯೆಯ ಮರೆತ ಜನರು
ಕಾಮ ಕ್ರೋಧ ಹೆಚ್ಚಿಸಿಹರು
ಮೋಹ ಮದದಿ ಉರಿಯುತಿಹರು
ಲೋಭ ಮತ್ಸರ ಕಾರುತಿಹರು
ತಲೆಯ ಬಾಗೋ ಗುಣವೇ ಇಲ್ಲ
ಬುದ್ಧಿ ಹೇಳಲು ಕೇಳ್ವರಿಲ್ಲ
ತಾನು ತನ್ನದು ತನಗೆ ಎಂದು
ತಮ್ಮ ಮಾತನೆ ಇಡುವರಲ್ಲ!
ಸೋತ ಮನಕೆ ಬೇಕು ಸಾಂತ್ವನ
ನೋವ ಹೃದಯಕೆ ನಿತ್ಯ ತಲ್ಲಣ
ತ್ಯಾಗ ಪ್ರೀತಿ ನೀತಿ ನಿಯಮ
ಕಲಿಯಬೇಕಿದೆ ಸರ್ವ ಜನಕೆ!
ಶಿಕ್ಷಕರಿಗೂ ಶಿಕ್ಷೆ ಇಲ್ಲಿ
ವೈದ್ಯರಲ್ಲೂ ಮೋಸ ಕಳ್ಳ
ಅಣ್ಣ ತಮ್ಮನ ಕೊಲುವನಲ್ಲ
ಯಾರ ಇಂದು ನಂಬಲಿ
ಮಡದಿ ವಿಷವ ಉಣಿಸಿ ಸಾಯಿಸಿ
ಹೆಂಡತಿಯನು ಹೊಡೆದು ಉರುಳಿಸಿ
ಮಕ್ಕಳನ್ನು ತಾ ಬಾವಿಗೆ ತಳ್ಳುತ್ತಾ
ಪೋಷಕರಿಗೆ ಏನು ಹೇಳಲಿ?
ತನ್ನ ಜೀವಕು ಶಾಂತಿ ಇಲ್ಲ
ಪರರ ಮೇಲೆ ಧೈರ್ಯವಿಲ್ಲ
ಬೀಗ ಸಾಲದು ಗ್ರಿಲ್ಸ್ ಬೇಕು
ಅಷ್ಟೂ ಸಾಲದು ಬೇಲಿ ಬೇಕು
ತಂತ್ರ ಯುಗವೋ ಮಂತ್ರ ಯುಗವೊ
ಜನರ ಪ್ರಾಣವ ಕೀಳೋ ಮನವೋ
ದೇವ ದೈವಕ್ಕೆ ಸೆಲ್ಫಿ ಮರುಳೋ
ಗೌರವದ ಚಿಹ್ನೆ ಎಲ್ಲಿದೆ?
@ಹನಿಬಿಂದು@
17.05.2025