ಗುರುವಾರ, ಮೇ 30, 2024

ನಾನೇ

ಹೌದು, ಏಕಾಗಬಾರದು?
ಮನದೊಳಗೆ ಚಿಂತೆಯ ಕಿಡಿಯೊಂದು ಗೀರಿರಲು
ನನ್ನನಿಸಿಕೆ ಆಳದಲಿ ಬಾಳ ರಥ ಎಳೆವ ನಾವಿಕ
ದಡ ಮುಟ್ಟಿಸುವ ಶಸ್ತ್ರ ಸಜ್ಜಿತ ಸೈನಿಕರಂತೆ
ಚಿಂತೆಯ ಅಳಿಸುವ ಗೆಳೆಯನ ಪಡಿ ನೆರಳಿನಂತೆ
ಬದುಕ ರೂವಾರಿ ರಾಜ ನಾನೇ ಏಕಾಗಬಾರದು?

ಸಾವಿರ ಮುಳ್ಳುಗಳಿರುವ ಗಿಡದಲೂ ಒಳಗೆ
ಸುಂದರ ಗುಲಾಬಿ ಅರಳುವಂತೆ ಅಲ್ಲವೇ?
ಶೂದ್ರನ ಗದ್ದೆಯಲ್ಲೂ  ಒಳ್ಳೆ ತಳಿ ಬೆಳೆಯಬಲ್ಲದು
ಯಾರಿಗೆ ಯಾವ ಕಲೆಯೋ ಯಾರು ಬಲ್ಲರು
ನಮ್ಮ ಬದುಕ ಬಾವುಟ ನಾವೇ ಹಾರಿಸಲಾರೆವೇ?

ಬಲೆಯ ಬೀಸಿದಾಗ ಮೀನು ಸಿಗಬಹುದೆಂಬ ನಂಬಿಕೆ
ಮೀನುಗಾರರ ಕೂಗಾಟಕ್ಕೆ ಮರೆಯದೇ ನೋವ ಶಿಖೆ?
ಪ್ರಕಾಶಕರ ಪುಸ್ತಕ ಮಾರಾಟಕ್ಕೂ ಪ್ರೇರಣೆ ಬರಹದ್ದು
ನಾಯಿ ಮರಿ ಕೋತಿಗಳಿಗೆ ಆಹಾರ ನಿತ್ಯ ಬೇಕಾದುದು
ಇನ್ನು ಹೇಳುವವನ ಬದುಕ ಅವನೇ ತಿದ್ದಿ ನಡೆಯ ಬೇಕಾದ್ದು

ರಾಜ ರಾಣಿಯರ ಕಾಲ ಹೋಗಿ ಮತ್ತೆ ಬರುವಂತಿದೆ
ಹಣ ಉಳ್ಳವನೆ ರಾಜ, ಬಡವನೇ ಸಾಮಾನ್ಯ ಪ್ರಜೆ
ಗುಣವಂತರಿಗೆ ಕಾಲವೇ ಇದು ಎಂಬ ವ್ಯಾಖ್ಯಾನ
ಆದರೂ ಬಾಳ ಬೇಕಿದೆ ಕಣ್ಮುಚ್ಚಿ ಮಕ್ಕಳು ಮರಿಗಾಗಿ
ತಪ್ಪು ಮಾಡದ ಮೇಲೆ ಹೆದರಿ ಏಕೆ ಬಾಳ ಬೇಕಿದೆ?
@ಹನಿಬಿಂದು@
30.05.2024

ಬುಧವಾರ, ಮೇ 29, 2024

ಏನೇನೋ

ಏನೇನೋ

ದೇವನ ಲೀಲೆ ಬದುಕಿನ ಹಾದಿ
ಒಂದೂ ಅರಿಯೆನು ನಾನಿಲ್ಲಿ
ಪ್ರೀತಿ ಕಾಳಜಿ ಸ್ನೇಹ ದ್ವೇಷವೂ
ಎಲ್ಲವೂ ಬರುವುದು ಒಬ್ಬರಲಿ

ನ್ಯಾಯ ನೀತಿ ಸಮಾನತೆಗಾಗಿ
ಹೋರಾಟ ತಾನೇ ಬದುಕಿನಲಿ
ಕಾಯ ಮರೆತರೂ ಉದರವು ಬಿಡದು
ಸ್ವಾತಂತ್ರ್ಯ ಬೇಕು ಬಾಳಿನಲಿ

ಮೋಸ ಅನ್ಯಾಯ ನಡೆಯದು ಇಲ್ಲಿ
ಕೇಳೋ ಮೂರ್ಖ ಭೂಮಿಯಲಿ
ಇಂದು ರಾಜನು ನಾಳೆ ಸಭಿಕನು
ಅರಿಯೋ ದೇವನ ಸೃಷ್ಟಿಯಲಿ

ಕಡಲಿನ ಆಳದ ಮುತ್ತನು ಹಿಡಿಯಲು
ಬಾಳಿನ ವೇಗವು ಗುರಿಯಾಗಿ
ಹನಿ ಸೇರಿದರೆ ಹಳ್ಳವು ಎಂಬುದು
ಸರ್ವ ಹೃದಯಕೂ ಜೊತೆಯಾಗಿ
@ಹನಿಬಿಂದು@
29.05.2024

ಶನಿವಾರ, ಮೇ 18, 2024

ಕುಕ್ಕು

ಕುಕ್ಕು 

ಸಾದಿಡ್ ಅವರ ಪೋವೊಂದು ಇತ್ತೆ
ಬರಿಟ್ ಇತ್ತಿನ ಮರಡ್ತ್ ಒಂಜಿ ಕುಕ್ಕು 
ಪರ್oದ್ ದ್ ಬೂರ್ದು ಇತ್oಡ್ 
ಬಗ್ ದ್ ಅಂಚಿ ಇಂಚಿ ತೂದು ಪೆಜ್ಜಿಯೆ

ಮೆಲ್ಲ ಕೈಟ್ ಮುದ್ದೆ ಮಲ್ತ್ ದೀಯೆ
ಕಿಸೆಕ್ಕ್ ಪಾಡೆರೆ ಸರಿ ಆಯಿಜಿ
ಅವೆಟ್ ಮಯನ ಉಂಡತೆ
ಅಂಚ ಕೈಟೆ ಪತೊಂದು ಮಂಪೋಯೆ

ಇಲ್ಲದ ತಡಮೆ ದಾಂಟ್ ನಗನೆ ಜೋಕ್ಲೆನ
ಬೊಬ್ಬೆ ಸುರು ಆಂಡ್ ತೂಲೆ
ಪಪ್ಪ ಇಲ್ಲಗ್ ಬತ್ತೆರ್ ಪನ್ಪಿನ ಕುಸಿತ
ಆಂಡ ಯಾನ್ ಪೋದು ಮೀದ್ 
ಉಂಡುದು ಜೆಪ್ಪುನಿ ಮೊಬೈಲ್ ತೂಪಿನಿ

ಜೋಕ್ಲೆಗ್ ಟೈಮ್ ಕೊರಿಯರ 
ನಮಕ್  ಪುರ್ಸೊತ್ತು ಓಲಂಡು
ಅಕಲೆಗ್ ದಾಲ ಬೇಲೆ ಇಜ್ಜೆ ತೂಲೆ
ಕಾಂಡೆದ್ ಬಯ್ಯ ಮುಟ್ಟ ಗೊಬ್ಬು ಒಂಜೇ

ಕೈಟ್ ಕುಕ್ಕು ತೂದು ಪಾರ್ ಬತ್ತೆರ್
ಇಲ್ಲದಲೆಡ ಕೊರಿಯ ಮೆಲ್ಲ ಪೋದು
ಜೋಕ್ಲೆಗ್ ರಡ್ ಮಿಠಾಯಿ ಕೊರುದು
ಆಲ್ ಉಪ್ಪುಂಚೆ ಮಲ್ತ್ ದೀಯಲ್

ಪೂರೆರೆಗ್ಲ ಸೋಕುಡೆ ಗಂಜಿ ಸೇರ್oಡ್ 
ಜೋಕುಲು ಕೈನ್ ಎದ್ ರ್ ಪಿರ ಪೂರಾ ನಕ್ಕೊಂಡ
ಒಂಜಿ ಕುಕ್ಕುಡುಲಾ ಮಾತೆರೆಗ್ಲಾ ಆಂಡ್ 
ಉಂದುವೇ ಕುಕ್ಕುದ ರುಚಿತ ಪವರ್
@ಹನಿಬಿಂದು@
13.05.2024

ಓಡುತಲಿರುವೆ

ಓಡುತಲಿರುವೆ 

ಓಡುತಲಿರುವೆ ಸಮಯದ ಜೊತೆಗೆ
ಗಡಿಯಾರದೊಳಗಿನ ಮುಳ್ಳಂತೆ
ಕಾಡುತಲಿಹವು ಸುಖ ದುಃಖಗಳು 
ಬೆನ್ನನು ಬಿಡದ ಬೇತಾಳನಂತೆ 

ಏರಿಕೆ ಇಳಿಕೆ ಸಾಮಾನ್ಯ ಪಾಠ
ಮೇಲಕು ಕೆಳಕೂ ಜೀಕಾಟ 
ಓಡುವ ಸಮಯದ ಹಿಂದೆ
ಬದುಕಿದೆ ನಮ್ಮದು ಮುಂದೆ..

ಇಂದಿನ ಓಟ ನಾಳಿನ ಕಾಣಿಕೆ
ಕಂದನ ಕೂಗಿನ ಹಾಗೆ
ಹಾಡಿನ ತಾಳ ಭಾವ ರಾಗ
ಮೋಡಿಯ ಮಾಡುತ ಹೀಗೆ 

ಸುಖ ದುಃಖಗಳ ಎದುರಿಸಿ ಓಟ
ಸಿಹಿ ಕಹಿ ನೆನಪು ಕೂಡಿ
ಮುತ್ತು ಮತ್ತು ಮೆಟ್ಟುವ ಆಟ 
ಸಾಗುತಲಿ ಬಾಳ ನಾಗಾಲೋಟ
@ಹನಿಬಿಂದು@

ಶೋಷಣೆ

ಶೋಷಣೆ

ಘೋಷಣೆ ಕೂಗಲು ಎಲ್ಲರೂ ಮುಂದು
ಶೋಷಣೆ ಮಾತ್ರ ಮಹಿಳೆಗೆ ಸಿಂಧು
ಸಮರ್ಪಣೆ ಜಗದಲಿ ಅವಳಲಿ ಮಾತ್ರವೇ
ಆಕರ್ಷಣೆ ಇದ್ದರೂ ಒಮ್ಮೆಗೆ ಮರೆವರು

ಘರ್ಷಣೆ ನಿತ್ಯವೂ ಬದುಕಿನ ಪಥದಲಿ 
ಪೋಷಣೆ ಮಾಡಲು ಸರ್ವರ ಮನೆಯಲಿ
ಬವಣೆಯು ಬಾಳಲಿ ಹೆಣ್ಣಿನ ಬದುಕಲಿ
ವಿವರಣೆ ಹೇಗೆ ಶೀಲಕೆ ಬೇಡಲಿ

ಮಣೆಯನು ಹಾಕದು ಸರಕಾರ ಇಲ್ಲಿ
ಕೆನೆಯನ್ನು ಬೇಡುವ ಕೃಷ್ಣನ ತೆರದಲಿ
ಜಾಗರಣೆ ಬದುಕಲಿ ಆಗದು ಎಂದೂ
ತ್ಯಾಗವೇ ಸ್ತ್ರೀಯ ಕ್ಷಣದಲಿ ಮುಂದೂ

ಪ್ರೀತಿಯ ಮಾತನು ಕೇಳಲು ಬೇಕು
ಹಾಸಿಗೆಯಡಿಯಲಿ ಬೀಳಲು ಬೇಕು
ಅಮ್ಮ ಅಕ್ಕ ಮಡದಿಯೂ ಬೇಕು
ಹೆಣ್ಣು ಮಗು ಮಾತ್ರ ಸಾಯಲು ಬೇಕು..
@ಹನಿಬಿಂದು@
18.05.2024

ಶುಕ್ರವಾರ, ಮೇ 17, 2024

ಬೇಕಾಗಿದೆ ಸಮಾನತೆ

ಬೇಕಾಗಿದೆ ಸಮಾನತೆ

ದೇವರು ದೈಹಿಕ ಶಕ್ತಿಯನ್ನೇನೋ ಕೊಟ್ಟುಬಿಟ್ಟ
ಆದರೆ ಕೇಳುವ ಮಾತನಾಡುವ ಶಕ್ತಿ ಬಿಟ್ಟುಬಿಟ್ಟ
ಯಾವ ಜನ್ಮದ ಕರ್ಮ ಫಲವೋ ತಿಳಿಯದು
ಜನ ಕಿವುಡ ಮೂಗ ಎಂದರೂ ನನಗೆ ಕೇಳದು 

ಅನುಕಂಪ ಬೇಕಿಲ್ಲ ನಮ್ಮ ಈ ಬಾಳಿಗೆ
ಅವಕಾಶ ಬೇಕು, ಇತರರಂತೆ ಸರಿ ಸಮಾನ
ಅಸಹಾಯಕರಲ್ಲ ನಾವು, ತುಟಿ ಓದಬಲ್ಲೆವು
ಆಂಗಿಕ ಚಲನೆಯಿಂದ ಹೇಳಬಲ್ಲೆವು ಭಾವಗಳ

ಕೈ ಕಾಲು ಕಣ್ಣು ಮೂಗು ಸರಿ ಇಲ್ಲವೇ!
ಭಾವಗಳ ಬಿತ್ತರಿಸಿ ಬಿಡಲು ಸಾಕಲ್ಲವೇ
ನಾವೂ ಪರರಂತೆ ಮನುಜ ಮಕ್ಕಳೇ
ಕೊಡಿ ನಮಗೆ ಕಾಯಕವ ಜನಗಳೇ

ಸರಿ ಸಮಾನ ನಾವುಗಳು ನೀಡಿ ಪ್ರೀತಿಯ
ಸಹವಾಸ ಬೆಳಗಿಸುವುದು ನಿಮ್ಮ ನೀತಿಯ
ಸಣ್ಣ ಚಲನೆಯ ಅರ್ಥವೂ ತಿಳಿವುದು
ಗ್ರಹಿಕೆ ಬಹಳ ನಮ್ಮೊಳಗೆ ಎಂದೆಂದೂ

ದೂಕದಿರಿ ನಮ್ಮ ಮನೆಯಿಂದ ಹೊರಕ್ಕೆ
ಅಟ್ಟದಿರಿ ದೇವಾಲಯಗಳ ಎದುರು ಭಿಕ್ಷೆಗೆ
ಓದು ಬರಹಕ್ಕೆ ಕಳಿಸಿ ನಮ್ಮವರ ಶಾಲೆಗೆ
ಸಾಧಿಸಿ ತೋರುವೆವು ಎಲ್ಲರ ಜೊತೆಗೆ
@ಹನಿಬಿಂದು@
15.05.2024

ಕಥೆ

ಪಿಟ್ಟಿ ಕತೆ

ಮದಿಮೆ 
"ಬೋಡಿತ್ತ್ಂಡಾ ಎಂಕ್ ಈ ಮದಿಮೆ? " ರೇಖಾ ಎನ್ನ್ ಎನ್ನ್ ದ್ ಬುಲಿತೊಂದು ಇತ್ತಲ್. ಪದಿನೈನ್‌ ವರ್ಸ ಮೋಕೆ ಮಲ್ತ್ ದ್ ಮದಿಮೆ ಆಯಿನ , ಅಪ್ಪೆನ ಮೋಕೆ ಕೊರುವೆ ಪಂದ್ ಎನ್ನಿನ ಕಂಡನಿ ಮದಿಮೆ ಆಯಿನ ರಾತ್ರೆಡ್ ಗೊತ್ತಾಂಡ್, " ಆಯೆ ಊರುಡು ಬಾರೀ ಪುದರ್ ಪೋಯಿನ ಡಾಕ್ಟರ್. ಆಂಡ ಆಯೆ ಆಣ್ ಅತ್ತ್. ಆಂಡ ಇತ್ತೆ ದಾದ ಮಲ್ಪುನಿ ಏರೆಡ ಪನ್ಪಿನಿ ಎನ್ನ ಕಷ್ಟ? ವಾ ಆಣ್ ಬತ್ತ್ ಕೇಂಡಲಾ ಬೊರ್ಚಿ ಪಂದ್ ಕಡೆಕ್ ದೇವೆರ್ ಎಂಕ್ ಕೊರ್ನಿ ಉಂದುವೆ ಸಿಕ್ಷೆ . ಇತ್ತೆ ಎರೆನ್ ಪಂಡಲಾ ತಪ್ಪೆ! ಈ ಜನ ಒಂಜಿ ದಿನಲೂ ನೆತ್ತ ಬಗ್ಗೆ ಎನಡ ಪಂತಿಜೆರ್. ಮಲ್ಲ ಮೋಸ. ಆಯಿನ ಆವಡ್ ಬದ್ಕ್ ತ್ಯಾಗ ಮಲ್ಪುವೆ" ಎನ್ಕ್ ದ್ ಕಣ್ ಮುಚ್ಚಿದ್ ಜೆತ್ತಲ್.
@ಹನಿಬಿಂದು@
16.05.2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 233

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -233

          ಬಸವಣ್ಣ ಹೇಳಿದ ಮಾತು ಎಲ್ಲರಿಗೂ ತಿಳಿದಿದೆ. "ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದು ಎನಬೇಕು..." ಬದುಕು ಈ ನುಡಿಯ ಮೇಲೆಯೇ ನಿಂತಿದೆ ಅಲ್ಲವೇ? ನಮ್ಮ ನಡೆ ನುಡಿ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲುದು ಎಂಬುದಕ್ಕೆ ಲಾಲ್ ಬಹಾದ್ದೂರ್ ಶಾಸ್ತ್ರಿ, ಮಹಾತ್ಮ ಗಾಂಧೀಜಿ ಇವರು ಸಾಕ್ಷಿ. ಗಾಂಧೀಜಿ ಸ್ವಾತಂತ್ರ್ಯ ಪೂರ್ವದಲ್ಲಿ ಏನು ಕರೆ ಕೊಟ್ಟರೂ ಅದನ್ನು ಮಾಡಲು ಭಾರತೀಯರು ತುದಿಗಾಲಲ್ಲಿ ನಿಂತಿದ್ದರು. ಯಾರು ಅವರ ಮಾತನ್ನು ಕೇಳಲಿಲ್ಲವೋ ಅವರೆಲ್ಲ ಉಗ್ರಗಾಮಿಗಳು ಎನಿಸಿ ನೇಣಿಗೆ ಕೊರಳೊಡ್ಡಿದರು. 
      " ಮೀನು ಮಾರುವವಳ ಜೊತೆ ಗೆಳೆತನಕ್ಕಿಂತ ಗಂಧ ಮಾರುವವಳ ಜೊತೆ ಜಗಳವೆ ಲೇಸು"  ಎಂಬ ಒಂದು ಗಾದೆ ಮಾತು ಇದೆ. ಅಂದರೆ ಒಳ್ಳೆಯ ಜನರೊಡನೆ ಗೆಳೆತನ ಮಾಡಬೇಕು ಎಂಬ ಅರ್ಥ. ಇಲ್ಲಿ ಉತ್ತಮ ಮಾತುಗಾರರ ಜೊತೆ ಸೇರಿದರೆ ನಾವು ಬೆಳೆಯುತ್ತೇವೆ. ಜಗಳಗಂಟರ, ಸದಾ ಋಣಾತ್ಮಕವಾಗಿ ಯೋಚಿಸುತ್ತಾ ಅದರ ಬಗ್ಗೆಯೇ ಮಾತನಾಡುವವರ ಜೊತೆ ಸೇರಿದಾಗ ನಾವು ಕೂಡ ಅಧಮರು ಎನಿಸಿಕೊಳ್ಳುತ್ತೇವೆ ಅಲ್ಲವೇ?
         ಮಾತಿನಲ್ಲೇ ಸರಸ, ವಿರಸ ಎಲ್ಲಾ ಅಲ್ಲವೇ? ನಮ್ಮ ಯೋಚನೆಗಳೇ ನಮ್ಮ ಮಾತುಗಳಾಗಿ ಹೊರ ಹೊಮ್ಮುವುದಲ್ಲವೇ? ನಮ್ಮ ಆಲೋಚನೆಗಳು ಉತ್ತಮವಾಗಿ ಇದ್ದರೆ ಮಾತುಗಳೂ ಕೂಡ ಅವುಗಳಲ್ಲಿ ಹೊರ ಹೊಮ್ಮುತ್ತವೆ. ಮಾತು ಮೃತ್ಯು, ಮಾತೇ ಮುತ್ತು. ಮಾತಿನಲಿ ವೀಣೆ ನುಡಿಸಬಹುದು, ಮಾತಿನಲಿ ಕಥೆ ಕಟ್ಟಬಹುದು, ಮಾತಿನಲಿ ಜಗಳ, ಮಾತಿನಲ್ಲೇ ಮಂಟಪ, ಮಾತಿನಲ್ಲೇ ಸರಸ ವಿರಸ..
    ಮತ್ತೂ ಬರಲು ಮುತ್ತು ಉದುರಲು ಮಾತು ಬೇಕು, ಮಾತೆಂದರೆ ಮುತ್ತು ಉದುರುವುದು ಮಾತ್ರವಲ್ಲ, ಮತ್ತು ಕೊಡುವಂತೆ ಇರಬೇಕು, ಮೆಟ್ಟುವಂತೆ ಇರಬಾರದು, ಮುತ್ತುವಂತೆ, ಮನ ಮುಟ್ಟುವಂತೆ ಇರಬೇಕು. ಮಾತಿನಲಿ ಮಿತ್ಯ ಇರಬಾರದು. ಮಾತು ನಗು ತರುವಂತೆ, ನಗುವಂತೆ ಇರಬೇಕೆ ಹೊರತು ಪರರ ಅಣಕಿಸುವಂತೆ ಇರಬಾರದು.       
      ಮಾತಿನಲ್ಲಿ ಮನೆ ಕಟ್ಟುವವರೂ, ಮಾತಿನಲ್ಲಿ ಮೂಗು ತೋರಿಸುವವರೂ, ಮಾತಿನಲ್ಲಿ ಮನೆ ಕೆಡಿಸುವವರೂ, ಮಾತಿನಲ್ಲೇ ಮುತ್ತು ಉದುರಿಸುವವರೂ, ಮಾತೆಂದರೆ ಜಗಳ ಎನ್ನುವವರೂ, ಮಾತಿನಲ್ಲೇ ಬೀಳುವವರೂ, ಮಾತಿನಲ್ಲೇ ಬದುಕುವವರೂ, ಮಾತಿನಲ್ಲೇ ಕೊಳ್ಳುವವರು, ಮಾತಿನಲ್ಲೇ ಬೇಳೆ ಬೇಯಿಸುವವರು, ಮಾತಿನಲ್ಲೇ ಕಟ್ಟಿ ಹಾಕುವವರು, ಮಾತಿನಲ್ಲಿ ಬೆಲ್ಲ, ಮಾತೆಂದರೆ ಬೇವು ಹಲವರದು. 
     ಕೆಲವರು ಮಾತನಾಡಲು ಶುರುವಿಟ್ಟರೆ ಎಸ್ಕೇಪ್ ಆಗಲು ನೋಡುವವರು ಹಲವಾರು ಮಂದಿ ಇದ್ದಾರೆ. ಮೈಕ್ ಸಿಕ್ಕಿದರೆ ಸಾಕು ಗಂಟೆಗಟ್ಟಲೆ ಮಾತನಾಡುವ ಜನರೂ ಇದ್ದಾರೆ. ಬರೀ ಸುಳ್ಳಿನಲ್ಲೇ ಮಾತನಾಡಿ ಎಲ್ಲರನ್ನೂ ಮೆಚ್ಚಿಸಿ ತಾನು ಗ್ರೇಟ್ ಅನ್ನಿಸಿಕೊಳ್ಳುವವರೂ ಇದ್ದಾರೆ. ಮಾತಿಗೆ ಮಾತು ಬೆಳೆದು ಜಗಳಕ್ಕೆ  ತಲುಪಿ ಮನೆ ಎರಡು ಮಾಡುತ್ತದೆ, ಕುಟುಂಬ ಎರಡು ಮಾಡುತ್ತದೆ, ರಾಜ್ಯ, ದೇಶ ತುಂಡರಿಸುತ್ತದೆ! ಮಾತಿಗೆ ಅದೆಂತಹ ಪವರ್!!!
     ನಮ್ಮ ಮಾತು ಮುದ ಕೊಡುವಂತೆ ಇರಲಿ, ದೇಶ ಕಟ್ಟುವಂತೆ ಇರಲಿ, ರಾಜ್ಯ ಬೆಳಗುವ ಹಾಗಿರಲಿ, ಮನೆ ಮೇಲೆ ಮನೆಯೇರುವ ಹಾಗಿರಲಿ, ಸತ್ಯ ಇರಲಿ, ಮಾತು ಮುತ್ತಿನಂತೆ, ಚಿನ್ನದಂತೆ, ಹಿತವಾಗಿ, ಮಿತವಾಗಿ ಇರಲಿ. ಮೆತ್ತುವಂತೆ ಇರದೆ ಎಲ್ಲರೂ ಮೆಚ್ಚುವಂತೆ ಇರಲಿ. ಮನ್ನಿಸುವ ಹಾಗಿರಲಿ, ಮುದ್ಧಿಸುವ ಹಾಗಿರಲಿ, ಮೆಚ್ಚಿಸುವಂತೆ ಇರದೆ, ಮೆಚ್ಚುವ ಹಾಗಿದ್ದರೆ ಚೆನ್ನ ಅಲ್ಲವೇ? ಮಾತೇ ಮಾಣಿಕ್ಯ. ಮಾತೆ ಒಪ್ಪುವ ಮಾತಿರಲಿ. ಮಾತು ಸಕ್ಕರೆಯಂತೆ ಸಿಹಿಯಾಗಿ ಇರಲಿ, ಮತ್ತು ಬರುವಂತೆ ಬೇಡ, ಮುತ್ತು ಕೊಡುವಂತೆಯೂ ಬೇಡ, ಮತ್ತಿನಲಿ ಮಾತಾಡುವುದು ಬೇಡ, ಕನ್ನಡ ಮಾತಾಡೋಣ, ತಾಯ್ನುಡಿ ಮರೆಯದೆ ಇರೋಣ, ಮಾತಿಂದ ಸರ್ವರನ್ನು ಮತಿಗೊಳಿಸೋಣ. ಕಷ್ಟ ಎನ್ನುವವರ ಮಾತಿಗಿಳಿಸಿ ಕಷ್ಟ ಮರೆಸೋಣ. ಮತ್ತೆ ನೀವೇನಂತೀರಿ?
@ಹನಿಬಿಂದು@
11.05.2024
       

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -231

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -231

     ಬೇಸಿಗೆಯ ಉರಿ ಮುಗಿಲು ಮುಟ್ಟಿದೆ. ಕಾರಣ? ಒಂದೇ.. ಕಡಿಮೆಯಾದ ಹಸಿರು, ಹೆಚ್ಚಿದ ಜನ ಸಂಖ್ಯೆ ಮತ್ತು ಕಾಂಕ್ರೀಟ್ ಕಾಡು. ಪ್ರತಿನಿತ್ಯ ಇಡೀ ದೇಶದಲ್ಲಿ ರಸ್ತೆಗಳ ಅಗಲೀಕರಣಕ್ಕಾಗಿ ಹಿಂದೆ ನೆಟ್ಟಿದ್ದ ಸಾಲು ಮರಗಳನ್ನು ಧರೆಗೆ ಉರುಳಿಸಲಾಗುತ್ತಿದೆ. ಅಷ್ಟೇ ಅಲ್ಲ, ಮನೆಯ ಅಂಗಳದಲ್ಲಿ ಇರುವ ಮರ ಉತ್ತಮ ಆಮ್ಲಜನಕ ಕೊಡುತ್ತದೆ, ನೆರಳು ಕೊಡುತ್ತದೆ ಹಾಗೂ ನಾವು ಹೊರ ಬಿಟ್ಟ ಇಂಗಾಲದ ಡೈಆಕ್ಸೈಡ್ ನ್ನು ಹಗಲಲ್ಲಿ ತಾನೇ ಉಸಿರಾಡಿ ಆಹಾರ ತಯಾರಿಸಿ ಇಡೀ ವಾತಾವರಣವನ್ನು ತಂಪು ಮಾಡುತ್ತದೆ. ಅಷ್ಟೇ ಅಲ್ಲ , ಮೋಡ ತಡೆದು ತಂಪಾಗಿಸಿ  ಮಳೆ ಸುರಿಸುತ್ತದೆ. ಹೂ ಹಣ್ಣು ಕಾಯಿ ಕೊಡುತ್ತದೆ. ಹಲವಾರು ಜೀವ ಜಂತುಗಳಿಗೆ ಬದುಕಲು ಆಶ್ರಯ ಒದಗಿಸಿ ಕೊಡುತ್ತದೆ. ಒಣಗಿದ ಎಲೆಗಳು ಕೆಳಗೆ ಬಿದ್ದು ತರಗೆಲೆಯಾಗಿ ಸಾವಯವ ಗೊಬ್ಬರ ಆಗುತ್ತದೆ. ಆದ್ರ ಮೇಲೆ ಹಲವಾರು ಪಕ್ಷಿಗಳು ಕುಳಿತು ಹಾಡುತ್ತವೆ. ದನಗಳು ಮತ್ತು ಜನಗಳು , ನಾಯಿಗಳೂ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಾರೆ. ವಾತಾವರಣದ ಜಲಚಕ್ರ, ಅನಿಲ ಚಕ್ರಕ್ಕೆ ಸಹಕಾರ ನೀಡುತ್ತದೆ. 
     ಆದರೆ ನಮಗೆ ಅದು ಕಾಣುವುದು ಹೀಗೆ. ಅದು ಬಹಳ ದೊಡ್ಡ ಮರ, ಮುದಿ ಆಗಿದೆ, ಮಳೆ, ಗಾಳಿ ಬಂದರೆ ಬೀಳಬಹುದು. ಅದರ ಒಣಗಿದ ಎಲೆಗಳೋ ಕಸ. ಗುಡಿಸಿ ಗುಡಿಸಿ ಸಾಕಾಗುತ್ತದೆ. ನಮ್ಮ ಅಂಗಳದ ಸ್ವಚ್ಛತೆ ಆ ಮರದಿಂದ ಹದಗೆಡುತ್ತದೆ. ಮನೆಯ ಮುಂದೆ ಇರುವ ಮರ ಮನೆಯ ಅಂದ ಕೆಡಿಸುತ್ತದೆ. ಮರದ ನೀರು ಬಿದ್ದು ಹಾಕಿದ ಸಿಮೆಂಟ್ ಕರಗಿ ಹೋಗುತ್ತದೆ. ಮರದ ಮೇಲೆ ಪಕ್ಷಿಗಳು ಕುಳಿತು ಹಿಕ್ಕೆ ಹಾಕಿ ಮನೆ ಮುಂದೆ ಗಲೀಜು. ಅಲ್ಲಿ ದನಗಳು ಬಂದು ಸೆಗಣಿ ಹಾಕಿ, ಮೂತ್ರ ಮಾಡಿ ಜಾಗ ಹಾಳು ಮಾಡುತ್ತವೆ. ವಾಸನೆ ಬರುತ್ತದೆ. ಆಯಾ ವಾಸನೆಗೆ ಸೊಳ್ಳೆ ಉತ್ಪತ್ತಿ ಆಗುತ್ತದೆ. ಅದರಿಂದ ಖಾಯಿಲೆ ಬರುತ್ತದೆ. ಮರದ ಟೊಂಗೆ ಗಾಳಿ ಮಳೆಗೆ ಏನಾದರೂ ಮುರಿದು ಬಿದ್ದರೆ ನಮಗೆ ಹಾನಿ.

    ಮತ್ತೆ ಬಿಸಿಲು ಕಳೆದು ಮಳೆ ಬರಲು ಪ್ರಾರಂಭವಾಯಿತು. ಅದು ಎಂತಹ ಮಳೆ ಅಂತೀರಿ ಬಹಳ ದೊಡ್ಡ ಜಡಿ ಮಳೆ. ಇದ್ದ ಮಣ್ಣು ಎಲ್ಲ ಕೊಚ್ಚಿಕೊಂಡು ಹೋಗುವ ಹಾಗೆ ಧೋ ಎಂದು ಸುರಿಯುತ್ತಿದೆ.  ಮಳೆ ಮಾತ್ರವಲ್ಲ ಗುಡುಗು ಸಹಿತ ಮಳೆ. ಈ ಗುಡುಗಿನ ದೆಸೆಯಿಂದ ಕರೆಂಟ್ ಇಲ್ಲ ಕರೆಂಟ್ ಇಲ್ಲದ ಕಾರಣ ನೀರು ಇಲ್ಲ ಮತ್ತು ಸೆಕೆ ಕೂಡ ತಡೆಯಲಾಗುತ್ತಿಲ್ಲ. ಮೊಬೈಲ್ ನಲ್ಲಿ ಚಾರ್ಜ್ ಇಲ್ಲ ಇಯರ್ ಎಂಡ್ ಆದ ಕಾರಣ ಸಂಬಳವೂ ಲೇಟು. ಎಲ್ಲಾ ಇಲ್ಲಗಳ ನಡುವೆ ಜೀವನ ಸಾಗುತ್ತಿದೆ. ಒಂದೆಡೆ ಹೀಗಾದರೆ ಇನ್ನೊಂದೆಡೆ ಅಬ್ಬರದ ರಂಪಾಟ. ಕೇವಲ ಒಂದು ಮದುವೆಯಾಗಿ ಕೋಟಿಗಟ್ಟಲೆ ಹಣ ಸುರಿಯುವವರು, ಮನೆಯ ಗ್ರಹ ಪ್ರವೇಶಕ್ಕಾಗಿ ಕೋಟೆಗಟ್ಟಲೆ ಖರ್ಚು ಮಾಡುವವರು, ಮಗನ ಮದುವೆ ನಡೆದ ಮೇಲೆ ಪಾರ್ಟಿ ಗಾಗಿ ಕೋಟಿಗಟ್ಟಲೆ ಖರ್ಚು ಮಾಡುವವರು, ಇವರ ನಡುವೆ ಬಡವರು ಬದುಕುವುದು ಹೇಗೋ? ಸಿರಿವಂತರ ಅಟ್ಟಹಾಸಕ್ಕೆ ಪ್ರಕೃತಿ ಮೊಮ್ಮನ ಮರುಗಿದರೆ ಬಡವರಿಗೂ ಬದುಕು ಕಷ್ಟವೇ. ಇದರ ಕಷ್ಟ ನಷ್ಟಗಳನ್ನು ಅನುಭವಿಸುವವರು ಮಾತ್ರ ಎಲ್ಲರೂ. ಅದಕ್ಕಿಂತ ಮೊದಲು ನಾವು ಎಚ್ಚೆತ್ತುಕೊಂಡರೆ ಉತ್ತಮ. ಪ್ರತಿ ಮನೆಯ ಸುತ್ತಲೂ ಕನಿಷ್ಠ ಹತ್ತಾದರೂ ಗಿಡಗಳನ್ನು ನೆಡಬೇಕು ಎಂಬ ಸರಕಾರದಿಂದ ಕಾನೂನು ಬರಬೇಕು. ಹಾಗಿದ್ದರೆ ಮಾತ್ರ ಮುಂದಿನ ಪೀಳಿಗೆ ಉಳಿಯಬಹುದು ಮತ್ತು ಬೆಳೆಯಬಹುದು. ನೀವೇನಂತೀರಿ?
@ಹನಿಬಿಂದು@

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -230

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -230

     ಬೇಸಿಗೆಯ ಉರಿ ಮುಗಿಲು ಮುಟ್ಟಿದೆ. ಕಾರಣ? ಒಂದೇ.. ಕಡಿಮೆಯಾದ ಹಸಿರು, ಹೆಚ್ಚಿದ ಜನ ಸಂಖ್ಯೆ ಮತ್ತು ಕಾಂಕ್ರೀಟ್ ಕಾಡು. ಪ್ರತಿನಿತ್ಯ ಇಡೀ ದೇಶದಲ್ಲಿ ರಸ್ತೆಗಳ ಅಗಲೀಕರಣಕ್ಕಾಗಿ ಹಿಂದೆ ನೆಟ್ಟಿದ್ದ ಸಾಲು ಮರಗಳನ್ನು ಧರೆಗೆ ಉರುಳಿಸಲಾಗುತ್ತಿದೆ. ಅಷ್ಟೇ ಅಲ್ಲ, ಮನೆಯ ಅಂಗಳದಲ್ಲಿ ಇರುವ ಮರ ಉತ್ತಮ ಆಮ್ಲಜನಕ ಕೊಡುತ್ತದೆ, ನೆರಳು ಕೊಡುತ್ತದೆ ಹಾಗೂ ನಾವು ಹೊರ ಬಿಟ್ಟ ಇಂಗಾಲದ ಡೈಆಕ್ಸೈಡ್ ನ್ನು ಹಗಲಲ್ಲಿ ತಾನೇ ಉಸಿರಾಡಿ ಆಹಾರ ತಯಾರಿಸಿ ಇಡೀ ವಾತಾವರಣವನ್ನು ತಂಪು ಮಾಡುತ್ತದೆ. ಅಷ್ಟೇ ಅಲ್ಲ , ಮೋಡ ತಡೆದು ತಂಪಾಗಿಸಿ  ಮಳೆ ಸುರಿಸುತ್ತದೆ. ಹೂ ಹಣ್ಣು ಕಾಯಿ ಕೊಡುತ್ತದೆ. ಹಲವಾರು ಜೀವ ಜಂತುಗಳಿಗೆ ಬದುಕಲು ಆಶ್ರಯ ಒದಗಿಸಿ ಕೊಡುತ್ತದೆ. ಒಣಗಿದ ಎಲೆಗಳು ಕೆಳಗೆ ಬಿದ್ದು ತರಗೆಲೆಯಾಗಿ ಸಾವಯವ ಗೊಬ್ಬರ ಆಗುತ್ತದೆ. ಆದ್ರ ಮೇಲೆ ಹಲವಾರು ಪಕ್ಷಿಗಳು ಕುಳಿತು ಹಾಡುತ್ತವೆ. ದನಗಳು ಮತ್ತು ಜನಗಳು , ನಾಯಿಗಳೂ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಾರೆ. ವಾತಾವರಣದ ಜಲಚಕ್ರ, ಅನಿಲ ಚಕ್ರಕ್ಕೆ ಸಹಕಾರ ನೀಡುತ್ತದೆ. 
     ಆದರೆ ನಮಗೆ ಅದು ಕಾಣುವುದು ಹೀಗೆ. ಅದು ಬಹಳ ದೊಡ್ಡ ಮರ, ಮುದಿ ಆಗಿದೆ, ಮಳೆ, ಗಾಳಿ ಬಂದರೆ ಬೀಳಬಹುದು. ಅದರ ಒಣಗಿದ ಎಲೆಗಳೋ ಕಸ. ಗುಡಿಸಿ ಗುಡಿಸಿ ಸಾಕಾಗುತ್ತದೆ. ನಮ್ಮ ಅಂಗಳದ ಸ್ವಚ್ಛತೆ ಆ ಮರದಿಂದ ಹದಗೆಡುತ್ತದೆ. ಮನೆಯ ಮುಂದೆ ಇರುವ ಮರ ಮನೆಯ ಅಂದ ಕೆಡಿಸುತ್ತದೆ. ಮರದ ನೀರು ಬಿದ್ದು ಹಾಕಿದ ಸಿಮೆಂಟ್ ಕರಗಿ ಹೋಗುತ್ತದೆ. ಮರದ ಮೇಲೆ ಪಕ್ಷಿಗಳು ಕುಳಿತು ಹಿಕ್ಕೆ ಹಾಕಿ ಮನೆ ಮುಂದೆ ಗಲೀಜು. ಅಲ್ಲಿ ದನಗಳು ಬಂದು ಸೆಗಣಿ ಹಾಕಿ, ಮೂತ್ರ ಮಾಡಿ ಜಾಗ ಹಾಳು ಮಾಡುತ್ತವೆ. ವಾಸನೆ ಬರುತ್ತದೆ. ಆಯಾ ವಾಸನೆಗೆ ಸೊಳ್ಳೆ ಉತ್ಪತ್ತಿ ಆಗುತ್ತದೆ. ಅದರಿಂದ ಖಾಯಿಲೆ ಬರುತ್ತದೆ. ಮರದ ಟೊಂಗೆ ಗಾಳಿ ಮಳೆಗೆ ಏನಾದರೂ ಮುರಿದು ಬಿದ್ದರೆ ನಮಗೆ ಹಾನಿ. ನೀವೇನಂತೀರಿ?
@ಹನಿಬಿಂದು@
          

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -229

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -229

   ಕಲಿತು ಕಲಿಸಬೇಕಿದೆ ನಾವು

       ಬದುಕೆಂದರೆ ಒಂದು ದಿನದ ಆಟ ಅಲ್ಲ. ಅದು ಆಟಗಳ ಜೊತೆಗೆ ಗುದ್ದಾಟವೂ ಇರುವ ಏಳು ಬೀಳುಗಳ ಸರಮಾಲೆ. ಆದರೆ ಇಲ್ಲಿ ನೆಮ್ಮದಿ ಎಂಬುದು ಬಡವ ಶ್ರೀಮಂತ ಯಾರಿಗೂ ಇಲ್ಲ. ಬಡವ ಹಣದಲ್ಲಿ ಬಡವನಾದರೆ, ಹಣದಲ್ಲಿ  ಶ್ರೀಮಂತ ಎನಿಸಿ ಕೊಂಡವ ಗುಣದಲ್ಲಿ ಬಡವ. ಅಷ್ಟೇ ಅಲ್ಲ, ನೆಮ್ಮದಿಯಲ್ಲಿ ಎಲ್ಲರೂ ಬಡವರೇ. ಶ್ರೀರಾಮ, ಶ್ರೀಕೃಷ್ಣ, ಏಸುಕ್ರಿಸ್ತ, ಶಿವ ಪಾರ್ವತಿ, ಭರತ ಚಕ್ರವರ್ತಿ,  ಗಣಪತಿ ಎಲ್ಲರ ಅವತಾರ, ಬದುಕನ್ನು ಒಮ್ಮೆ ಅವಲೋಕಿಸಿದರೆ ತಿಳಿಯುತ್ತದೆ, ಹೆಣ್ಣು ಮಕ್ಕಳಿಗೂ ಇದು ತಪ್ಪಿದ್ದಲ್ಲ. ಸೀತೆ, ದ್ರುಪದ ರಾಜನ ರಾಜಕುಮಾರಿ ದ್ರೌಪದಿ, ಕುಂತಿ, ಊರ್ಮಿಳಾ,  ಮಂಡೋದರಿ, ಕೈಕೇಯಿ ಎಲ್ಲರೂ ರಾಣಿಯರೇ ಆಗಿದ್ದರೂ ಕೂಡಾ ಬದುಕ ರುಚಿ ಸಂತಸದಿ ಸವಿಯಲು ಅವರಿಗೆ ಸಿಕ್ಕೀತೇ? ಬದುಕು ಯಾರೋ ಕಟ್ಟಿಕೊಟ್ಟ ಹಣದ ಗಂಟಲ್ಲ, ಬದಲಾಗಿ ಯಾರೋ ಮಾಡಿಟ್ಟ ಹೊಲ. ಅಲ್ಲಿ  ಸಮತಟ್ಟು  ಮಾಡಲು ಕಷ್ಟವಿದೆ.  ಅಗೆದು,  ಉಳುಮೆ ಮಾಡಿ, ಮಣ್ಣು ಹದ ಮಾಡಿ ಉತ್ತು, ಬಿತ್ತಿ, ಕಳೆ ತೆಗೆದು,  ನಾಟಿ ಮಾಡಿ, ಹಗಲು ರಾತ್ರಿ ದುಡಿದು ಬೆವರು ಸುರಿಸಿದರೆ ಮಾತ್ರ ನೆಮ್ಮದಿಯ ಬೆಳೆ ಸಿಕ್ಕೀತು. ಅದಕ್ಕೆ ಬೆಲೆಯೂ ಬಂದೀತು. ಯಾರೋ ಮಾಡಿಟ್ಟ ಹೊಲಕ್ಕೆ ಲಗ್ಗೆ ಇಡಲು ಸಾಧ್ಯ ಇಲ್ಲ. ಇಟ್ಟರೂ, ಮುಂದೆಯೂ ಅದೇ ರೀತಿ ಕಾಳಜಿ, ಕೆಲಸ ಜಾಗೃತಿ ಬೇಕು. ಭೂಮಿಗೆ ಬಂದ   ಪ್ರತಿಯೊಬ್ಬನೂ ಬದುಕಿನಲ್ಲಿ ನೆಮ್ಮದಿಯನ್ನೇ ಹುಡುಕುತ್ತಾನೆ. ಅದಕ್ಕಾಗಿಯೇ ಹಲವಾರು ಕೆಲಸ ಕಾರ್ಯಗಳು ಕೂಡ. ನೆಮ್ಮದಿ ಸಿಕ್ಕಿತು ಎನ್ನುವಷ್ಟರಲ್ಲಿ ಮತ್ತೊಂದು ಖಾಯಿಲೆ, ಮಗದೊಂದು ಸಾವಿನ ನೋವು, ಸಂಕಟ. ಹೀಗೆ ಕಷ್ಟ ಸುಖಗಳು ಒಂದರ ಹಿಂದೆ ಬೇವು ಬೆಲ್ಲದ ತೆರದಿ ನುಗ್ಗುತ್ತಾ ಬರುತ್ತವೆ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಮುಂದೆ ಹೋಗುವವ ಜಾಣ. 
    ಎಲ್ಲರೂ ಕಲಿಕೆಯಲ್ಲಿ ಎಷ್ಟೇ ಜಾಣರಾದರೂ ಬದುಕಿನ ಶಾಲೆಯಲ್ಲಿ ದಡ್ಡರೇ. ಅಲ್ಲಿ ಜಾಣ ಅನ್ನಿಸಿಕೊಳ್ಳುವವ  ಕೋಟಿಗೊಬ್ಬ.  ಅವನನ್ನು ಎಲ್ಲರೂ ಇಷ್ಟ ಪಟ್ಟು ಮೇಲಿಡುತ್ತಾರೆ. ದೇವರ ಹಾಗೆ ಪೂಜಿಸುತ್ತಾರೆ. ಆದರೆ ಒಂದು ದಿನ ಅವನನ್ನೂ ಕೂಡಾ ಜನ ಕೆಳಗೆ ದೂಕಿ ಅವನ ಮೇಲೆ ನಡೆಯುತ್ತಾರೆ ಎಂಬುದು ಕಟು ಸತ್ಯ. ಮತ್ತೆ ಅವನದ್ದೂ ಕೂಡ ಬದುಕಿಗೆ ಹೋರಾಟವೇ. 
         ಉತ್ತಮವಾಗಿ ಬದುಕಿ , ದುಡಿದು, ಮಕ್ಕಳಿಗೆ ಬೇಕಾದಷ್ಟು ಆಸ್ತಿ ಮಾಡಿ ಇಟ್ಟ ಸಿರಿವಂತ ಮಕ್ಕಳು ಹಿರಿ ವಯಸ್ಸಿನಲ್ಲಿ ರೋಗಿ ಆದ ಪೋಷಕರನ್ನು ವಿಷ ಹಾಕಿ ಸಾಯಿಸಲು ಕೂಡಾ ಹೆದರುವುದಿಲ್ಲ. ಅಂತಹ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಮತ್ತು ಅಂತಹ ಪೈಶಾಚಿಕ ಬುದ್ಧಿಯುಳ್ಳವರು ನಾವು ಕೂಡಾ ಆಗಿದ್ದೇವೆ, ನಮ್ಮ ಮುಂದಿನ ಜನಾಂಗವನ್ನು  ಶಿಸ್ತು, ಸಂಯಮಗಳ ಬದುಕಿನ ಪಾಠ ಕಲಿಸದೇ ಕೇವಲ ಓದು , ಬರಹ, ಹಣದ ದಾಹ ಕಲಿಸಿ, ವೈದ್ಯ, ಇಂಜಿನಿಯರ್ ಮಾಡಿ ಹಣದ ರಾಕ್ಷಸರನ್ನಾಗಿ ಬೆಳೆಸಿ ಬಿಟ್ಟಿದ್ದೇವೆ. ನಾವು ಹೇಗೆ ನಮ್ಮ ಮಕ್ಕಳು ನಮ್ಮ ಹಾಗೆ  ಬಡವರಾಗಿ ಬದುಕಬಾರದು, ಅವರಿಗಾಗಿ ನಾವು ಏನಾದರೂ ಮಾಡಿ ಇಟ್ಟಿರಬೇಕು ಎಂದು ಆಸೆ ಪಟ್ಟು, ವ್ಯಾಪಾರದ ಮೊರೆ ಹೋಗಿದ್ದೆವೋ ಹಾಗೆ ನಮ್ಮ ಮಕ್ಕಳು ಬದುಕನ್ನೇ ವ್ಯಾಪಾರ ಮಾಡಿಕೊಂಡಿದ್ದಾರೆ. 
       ಆದರೆ ಅವರ ಬದುಕಿನಲ್ಲಿ ಒಂದು ಟ್ವಿಸ್ಟ್ ಇದೆ. ಅದು ಏನೆಂದರೆ ಅವರಿಗೆ ನಾವು ಒಂದು ವಿಧದಲ್ಲಿ ಕೆಲಸ ಮಾಡುವುದು, ದುಡಿಯುವುದು, ಹಣ ಗಳಿಸುವುದು ಹೇಗೆ ಎಂದು ಲಕ್ಷಗಟ್ಟಲೆ ಹಣ ಸುರಿದು ಕಾಲೇಜುಗಳಲ್ಲಿ ಹೇಳಿ ಕೊಟ್ಟಿದ್ದೇವೆ. ಅದಷ್ಟೇ ಅವರಿಗೆ ಗೊತ್ತು. ಬದುಕಿನ ಪಾಠ ಮಾಡಲು ನಮಗೆ ಪುರುಸೊತ್ತು ಇದ್ದರೆ ತಾನೇ? ಹಾಗಾಗಿ ಅವರು ಕಲಿಯಲಿಲ್ಲ. ನಾವು ಕೂಡ ನಮ್ಮ ವಯಸ್ಸಿನಲ್ಲಿ ಅವರಿಗೆ ಸಮಯ  ಕೊಡದೆ ದುಡಿದದ್ದೆ ತಾನೇ. ಅವರು ನಮಗೆ ಸಮಯ ಕೊಡದೆ ಅವರ ದುಡಿಯುವ ವಯಸ್ಸಿನಲ್ಲಿ ದುಬೈ, ಜಪಾನ್, ಅಮೆರಿಕ, ಯುರೋಪ್ ಅಂತ  ಅಲ್ಲಲ್ಲಿ ಹೋಗಿ ಗಂಟೆಯ ಲೆಕ್ಕದಲ್ಲಿ  ದುಡಿಯುತ್ತಿದ್ದಾರೆ. 
         ಬದುಕು ಎಂದರೆ ಎಲ್ಲವನ್ನೂ ಬದಿಗೊತ್ತಿ, ಕೆಲಸ ಮಾಡಿ ಹಣ ಮಾಡುವುದು, ಮಕ್ಕಳನ್ನು ಓದಿಸುವುದು, ಶಾಪಿಂಗ್,  ಬೇಕಾದ್ದು ಕೊಳ್ಳುವುದು ಎಂಬ ಪಾಠ ನಮ್ಮನ್ನು, ಹಿರಿಯರನ್ನು ನೋಡಿ ಆಯಾ ಮಗು ಕಲಿತ ಪಾಠ. ಅದಕ್ಕೆ ಮಕ್ಕಳನ್ನು ಬೆಳೆಸುವಾಗ ಪ್ರತಿ ಪೋಷಕರು ನೀತಿ ಕಥೆಗಳು , ಪುರಾಣ ಪುಣ್ಯ ಕಥೆಗಳು, ಅಜ್ಜಿ ಕತೆಗಳು ಇವುಗಳ ಮೂಲಕ ನೀತಿ ಕಲಿಸಬೇಕು. ಇಂದಿನ ಕಾಲದಲ್ಲಿ ನೀತಿ ಪಾಠ ಹೇಳಬೇಕಾದ ಅಜ್ಜಿಯರು ಒಂದು ಕಡೆ ಹೊರಗೆ ದುಡಿತ, ಸುಸ್ತು, ಇಲ್ಲದೆ ಹೋದರೆ ಟಿವಿ, ಮೊಬೈಲ್ ಗಳಲ್ಲಿ ತಾವೇ ಮುಳುಗಿ ಹೋಗಿರುವುದು ವಿಪರ್ಯಾಸ. ಅಜ್ಜಿ ಅಜ್ಜಂದಿರು ಫ್ರೀ ಇದ್ದರೆ ನಮ್ಮ ಮಕ್ಕಳೇ ಮೊಬೈಲ್, ಲ್ಯಾಪ್ ಟಾಪ್, ನೋಟ್ ಪ್ಯಾಡ್ ಗಳಲ್ಲಿ, ಗೇಮ್ಸ್ ನಲ್ಲಿ ಮುಳುಗಿ ಹೋಗಿರುತ್ತಾರೆ. ಎಷ್ಟು ಎಂದರೆ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯ  ಭಾಷಾ ಉತ್ತರ ಪತ್ರಿಕೆಯ ಹದಿನೈದು ಪುಟಗಳಲ್ಲಿ ಒಬ್ಬ ವಿದ್ಯಾರ್ಥಿ ಎಲ್ಲಾ ಪುಟಗಳಲ್ಲೂ ಎಲ್ಲಾ ಪ್ರಶ್ನೆಗಳಿಗೂ ಮೋಯೆ ಮೋಯೆ ಎಂಬ ಪದವನ್ನು  ಕನಿಷ್ಠ 500 ಬಾರಿ ಬರೆದು ಇಟ್ಟಿದ್ದಾನೆ ಎಂದರೆ ಅವನ ಭಂಡ ಧೈರ್ಯ, ಅವನಿಗೆ ತರಗತಿಯಲ್ಲಿ ಸಿಕ್ಕ ಪಾಠವನ್ನು ಅವನು ಕೇರ್ ಲೆಸ್ ಮಾಡಿದ್ದು, ಪೋಷಕರ ಮಾತನ್ನು ಕೇಳದೆ ಇದ್ದುದು, ತನ್ನ ಮುಂದಿನ ಬದುಕಿನ ಬಗ್ಗೆ ಕನಸುಗಳು, ಶ್ರಮ, ಗುರಿ ಇಲ್ಲದ್ದು, ಸತ್ಯ, ನ್ಯಾಯ, ನಿಷ್ಠೆ ಇಲ್ಲದ್ದು ಎದ್ದು ಕಾಣುತ್ತಿಲ್ಲವೇ? ಬರೆಯಲು ಬಾರದೆ ಇದ್ದವನು ಅದು ಹೇಗೋ ಒಂದಷ್ಟು ಪ್ರಶ್ನೆಗಳಿಗೆ ಆದರೂ ಕಷ್ಟಪಟ್ಟು  ಅಲ್ಪ ಸ್ವಲ್ಪ ಸರಿ ಉತ್ತರ ಬರೆದಾನು. ಇದು ಏನು ಮಾಡಿದರೂ ಕೇಳದ ಮರ್ಕಟ ಬುದ್ಧಿ ಅಲ್ಲವೇ? ಇದನ್ನು ಸರಿಪಡಿಸಲು ಸಾಧ್ಯ ಇಲ್ಲವೇ? ಹೇಗೆ? 
         ಒಂದೇ ಉತ್ತರ. ನಮಗೂ, ನಮ್ಮ ಮಕ್ಕಳಿಗೂ ಇಂದು ತಾಳ್ಮೆ ಇಲ್ಲವಾಗಿದೆ. ಬಸ್ ಸ್ಟಾಪ್ ನಲ್ಲಿ ನಿಂತು ಬಸ್ ಕಾಯುವ ವ್ಯವಧಾನ, ಬಸ್ ಸ್ಟಾಂಡಿನ ವರೆಗೆ ನಡೆದುಕೊಂಡು ಹೋಗುವ ತಾಳ್ಮೆ, ಧೈರ್ಯ, ಶಕ್ತಿ, ಬಸ್ಸಿನ ಒಳಗೆ ಒಬ್ಬರಿಗೆ ಮತ್ತೊಬ್ಬರ ಜೊತೆ ಹೊಂದಾಣಿಕೆ ಇವೆಲ್ಲ ಕಲಿಕೆಗೆ ಅವಕಾಶ ಇವೆ. ಇವನ್ನೆಲ್ಲ ನಾವು ಕಷ್ಟ ಅಂತ ಕೊಡದೆ ನಾವೇ ಕಾಲೇಜಿನವರೆಗೆ,ಶಾಲೆ ಕಲಿಯುವಾಗ ಶಾಲೆಯವರೆಗೆ ಪಿಕ್ ಅಪ್ ಡ್ರಾಪ್ ನೀಡಿದ ಕಾರಣ ಇದು.  ಯಾವುದರ ಪರಿವೆಯೂ ಆ ಮಗುವಿಗೆ ಇಲ್ಲ. ಒಂದು ಬಸ್ ಹೋದರೆ ತಾಳ್ಮೆಯಿಂದ ಇನ್ನೊಂದು ಬಸ್ ಬರುವವರೆಗೆ ಕಾಯಬೇಕು, ಅಥವಾ ಬೇರೆ ರೂಟ್ ನಲ್ಲಿ ಹೋಗುವ ಬಸ್ ಹಿಡಿದು ಅರ್ಧದಲ್ಲಿ ಮೊದಲು ಹೋದ ಬಸ್ ಅನ್ನು ಕ್ಯಾಚ್ ಮಾಡ ಬಹುದು ಮೊದಲಾದ ಲಾಜಿಕ್ ಆಲೋಚನೆಗಳನ್ನು  ಅವರ ಮನಸ್ಸಿನ ಒಳಗೆ ಬರಲು ನಾವು ಅವಕಾಶ ಕೊಟ್ಟಿದ್ದರೆ ತಾನೇ? 
   ನಮ್ಮ ಮಕ್ಕಳನ್ನು ನಮ್ಮೊಂದಿಗೆ ಇಟ್ಟು, ನಮ್ಮ ಆಚಾರ ಕಲಿಸಿ ಬೆಳೆಸುವ ಕ್ರಮವೂ ಈಗಿಲ್ಲ, ಅದೆಲ್ಲೋ ದೂರದ ರೆಸಿಡೆನ್ಶಿಯಲ್ ಸ್ಕೂಲ್. ಕಾರಣ ವಿದ್ಯೆ ಚೆನ್ನಾಗಿ ಕೊಡಬೇಕು. ಹೇಗೆ ? ಮುಂದೆ ಒಳ್ಳೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟು ಸಿಗುವ ಹಾಗೆ ಹೈ ಫೈ ಆಂಗ್ಲ ಮಾಧ್ಯಮದ, ಸಿಬಿಎಸ್ಈ, ಐಸಿಐಸಿಈ, ಅದಕ್ಕಿಂತಲೂ ಮೇಲಿನ ಇಂಟರ್ ನ್ಯಾಶನಲ್ ಸ್ಕೂಲ್ ಸೆಲೆಕ್ಟ್ ಮಾಡಿ, ಓದಿಸಬೇಕು. ಕೆಲಸ ಸಿಕ್ಕಿದರೆ ಆಯ್ತು. ಪೋಷಕರು ಖುಷಿ, ಕೈ ತುಂಬಾ ಸಂಬಳ. ಜೀವನ ನಿರ್ವಹಣೆ ಗೊತ್ತಿಲ್ಲ, ಉತ್ತಮ ಗುಣಗಳ ಕಲಿತೇ ಇಲ್ಲ. ಬರೀ ಸಿಈಟಿಗೆ ರೆಡಿ ಮಾಡಿದ್ದು ಬಿಟ್ಟರೆ ಗುಣಗಳ ಬಗ್ಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ . ಹಾಗಾಗಿಯೇ ಇಂದಿನ ಮೆಡಿಕಲ್, ಇಂಜಿನಿಯರಿಂಗ್, ಎಂಬಿಎ, ಹೀಗಿನ ಪದವಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಡ್ರಗ್ ಅಡಿಕ್ಟ್ಸ್!!! ಕಾರಣ? ಸಿಗದ ಪ್ರೀತಿ!! ಸಿಗದ ನೆಮ್ಮದಿ ಒಂದೇ! 
  ನಾವು ಎಚ್ಚೆತ್ತು ನಡೆದಾಗ ಮಾತ್ರ ಪ್ರತಿಯೊಬ್ಬರ ಬದುಕು ಸರಿ  
   ಆದೀತು. ನಮ್ಮ ಮುಂದಿನ ಜನಾಂಗವನ್ನು ಕೂಡಾ ನಾವೇ ಸರಿಪಡಿಸಿ ಶುದ್ಧಗೊಳಿಸಿ ಇಡಬೇಕಿದೆ. ಇಲ್ಲದೆ ಹೋದರೆ ಗಾಳಿ, ನೀರು, ಶಬ್ಧ, ಮಣ್ಣು ಮಲಿನ ಆದ ಹಾಗೆ ಮನಸ್ಸುಗಳು ಕೂಡಾ ಮಲಿನ ಆಗುವುದರಲ್ಲಿ ಎರಡು ಮಾತಿಲ್ಲ. ನೀವೇನಂತೀರಿ?
@ಹನಿಬಿಂದು@
17.04.2024

 

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -228

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -228

   ನಮ್ಮ ಬಳಿ ಹಣ ಎಷ್ಟೇ ಇದ್ದರೂ ಜನ ಅದಕ್ಕೆ ಗೌರವ ಕೊಡುವುದು ನಮ್ಮ ಕಣ್ಣೆದುರು ಮಾತ್ರ. ಇನ್ನು ಕೆಲವರು ಹಣದ ಆಸೆಗಾಗಿ ಗೌರವ ಕೊಟ್ಟಂತೆ ಮೇಲೆ ನೋಟಕ್ಕೆ ನಟಿಸಬಹುದು. ಆದರೆ ನಿಜವಾದ ಗೌರವ ಸಿಗುವುದು ನಮ್ಮ ಗುಣಕ್ಕೆ. ವ್ಯಕ್ತಿ ಮತ್ತು ವ್ಯಕ್ತಿತ್ವಕ್ಕೆ ಭಿನ್ನತೆ ಇದೆ. ಅದು ಮಾನವ ಮತ್ತು ಮಾನವತೆಗೆ ಇದ್ದ ಹಾಗೆ. ಎಲ್ಲರೂ ಮಾನವರೇ. ಆದರೆ ಎಲ್ಲರ ಬಳಿ ಮಾನವತೆ ಇಲ್ಲ. ಮಾನವತೆ ಇರಲು ನೈತಿಕತೆಯೂ ಬೇಕಾಗುತ್ತದೆ. ಈ ಮಾನವತೆ ಮತ್ತು ನೈತಿಕತೆಗಳು ಮಾನವನ ವ್ಯಕ್ತಿತ್ವ ಅಂದರೆ ಗುಣವನ್ನು ನಿರ್ಧರಿಸುವ ಅಂಶಗಳಾಗಿವೆ. ಗುಣ ಒಳ್ಳೆಯದು ಕೆಟ್ಟದು ಎಂದು ನಿರ್ಧಾರ ಆಗುವುದು ಪ್ರತಿಯೊಬ್ಬರ ಆಲೋಚನೆಗಳ ಮೇಲೆ. ಈ ಪ್ರಪಂಚದಲ್ಲಿ ಇರುವ ಜನರ ದೇಹದ ಆಕಾರ, ಗಾತ್ರ, ಬಣ್ಣಗಳಲ್ಲಿ ಹೇಗೆ ಭಿನ್ನತೆ ಇದೆಯೋ ಅಷ್ಟೇ ಭಿನ್ನತೆ ಅಲೋಚನೆಗಳಲ್ಲೂ ಇದೆ.                 ಒಬ್ಬರ ಅಲೋಚನೆಯಂತೆ ಮತ್ತೊಬ್ಬರ ಆಲೋಚನೆ ಇಲ್ಲ. ತಕ್ಕ ಮಟ್ಟಿಗೆ ಒಂದೇ ರೀತಿಯ ದಿಕ್ಕಿನಲ್ಲಿ ಅಲೋಚಿಸುವವರು ಒಟ್ಟಿಗೆ ಸಿಕ್ಕಿದಾಗ ಗೆಳೆಯರಾಗಿ ಬಿಡುತ್ತಾರೆ. ಅವರ ಆಲೋಚನೆಗಳ ಮಟ್ಟದ ಐಕ್ಯತೆ ಹೆಚ್ಚಾದಷ್ಟೂ ಗೆಳೆತನ ಆಳವಾಗಿ ಬೇರೂರುತ್ತದೆ. ಇಲ್ಲಿ ರಕ್ತ ಸಂಬಂಧವೇ ಅಗಬೇಕೆಂದೇನೂ ಇಲ್ಲ. ಮೊನ್ನೆ ಮೊನ್ನೆ ವೈರಲ್ ಆದ ವಿಡಿಯೋ ಒಂದರಲ್ಲಿ ನಮ್ಮ ದೇಶದ ಪ್ರಧಾನಿಗಳನ್ನೇ ಹೋಲುವ ವ್ಯಕ್ತಿ ಒಬ್ಬರು ಉಡುಪಿ ದೇವಸ್ಥಾನದಲ್ಲಿ ಅಡುಗೆ ಭಟ್ಟರು. ಅವರ ಮುಖ ನೋಡುವಾಗ ಥೇಟ್ ನರೇಂದ್ರ ಮೋದಿಯವರನ್ನು ಹೋಲುತ್ತಾರೆ. ಹಾಗಂತ ಅವರಿಬ್ಬರ ಆಲೋಚನೆಗಳು, ಅಭಿಪ್ರಾಯಗಳು ಒಂದೇ ಆಗಿ ಇರಬೇಕೆಂದೇನೂ ಇಲ್ಲ ಅಲ್ಲವೇ?
     ಒಂದೇ ಮನೆಯಲ್ಲಿ ಇರುವಂತಹ ಒಂದೇ ಕುಟುಂಬದ ಸದಸ್ಯರ ಆಲೋಚನೆಗಳೂ, ಭಾವನೆಗಳೂ ಒಬ್ಬರಿಗಿಂತ ಒಬ್ಬರದ್ದು ಭಿನ್ನವಾಗಿಯೇ ಇರುತ್ತವೆ ಅಲ್ಲವೇ? ಇನ್ನು ಗಂಡ ಹೆಂಡತಿ? ಬಿಡಿ, ಬೇರೆ ಬೇರೆಯೇ ಕುಟುಂಬದ ಬೇರೆಯೇ ವಾತಾವರಣದಲ್ಲಿ ಬೆಳೆದವರು. ಅವರ ನಡುವೆ ಹೊಂದಾಣಿಕೆ ಇದೆ ಎಂದರೆ ಅದು ಅವರವರ ಉತ್ತಮ ಗುಣಗಳ ಹೊರತಾಗಿ ಮತ್ತೇನೂ ಅಲ್ಲ. ತಾಯಿ, ತಂದೆ,  ಮಕ್ಕಳ ನಡುವೆಯೂ  ಜಗಳ, ಹೊಡೆದಾಟ, ಬಡಿದಾಟ ನಡೆಯುವುದಿಲ್ಲವೆ?        

      Bಮನುಷ್ಯನ ಮನಸ್ಸು ಒಂದೇ ತರಹ ಇರುವುದಿಲ್ಲ. ಆಗಾಗ ಬದಲಾಗುತ್ತಾ ಇರುತ್ತದೆ. ಅಲ್ಲಿ ಆಸೆ, ಆಕಾಂಕ್ಷೆಗಳು ಕೂಡಾ ಬದಲಾಗುತ್ತವೆ. ಇಷ್ಟ ಪಡುವ ಎಲ್ಲಾ ವಸ್ತು, ವಿಶೇಷಗಳು ಸಮಯಕ್ಕೆ ತಕ್ಕ ಹಾಗೆ ಬದಲಾಗುತ್ತಾ ಹೋದ ಹಾಗೆ ಇಂದು ಇಷ್ಟ ಪಟ್ಟ ಜನ, ವಸ್ತು, ತಿಂಡಿ, ಬಟ್ಟೆ ಮುಂದೆ ಒಂದು ದಿನ ಬೇಡವಾಗಿ ಬಿಡುತ್ತದೆ. ಒಮ್ಮೆ ಬೇಡ ಎಂದಿದ್ದು ಮತ್ತೊಮ್ಮೆ ಬೇಕು ಅನ್ನಿಸಲೂ ಬಹುದು. ಹಾಗಾಗಿಯೇ ಡೈವೋರ್ಸ್ ಪಡೆದ ಅದೆಷ್ಟೋ ಮಂದಿ ಮತ್ತೆ ಒಂದಾಗುತ್ತಾರೆ. ಒಮ್ಮೆ ಬೆಲೆ ಬಾಳುವ ವಸ್ತು ಮತ್ತೊಮ್ಮೆ ವೇಸ್ಟ್ ಅನ್ನಿಸುವುದು ಕೂಡಾ ಹಾಗಾಗಿಯೇ. ಒಟ್ಟಿನಲ್ಲಿ ಮಾನವ ಮನಸ್ಸು ಮರ್ಕಟ. ಇದು ಹೀಗೆ ಬದಲಾಗದೆ ಸ್ಥಿಮಿತವಾಗಿ ಇಟ್ಟುಕೊಂಡವನೆ ನಿಜವಾದ ದೃಢ ನಿರ್ಧಾರದ ವ್ಯಕ್ತಿ. ಅವನ ವ್ಯಕ್ತಿತ್ವ ಎಲ್ಲರಿಗೂ ಇಷ್ಟ ಆಗುತ್ತದೆ. ಸಮಯಕ್ಕೆ ತಕ್ಕ ಹಾಗೆ ತಿರುಗುವ, ಬಣ್ಣ ಬದಲಾಯಿಸುವ ವ್ಯಕ್ತಿಗೆ ಗೋಸುಂಬೆ ಎನ್ನುತ್ತಾರೆ, ಮತ್ತೆ ಅಂಥವರನ್ನು ಯಾರೂ ಕೂಡಾ ನಂಬುವುದಿಲ್ಲ. ಮಾತನ್ನು ಕೂಡ ಸಮಯಕ್ಕೆ ತಕ್ಕ ಹಾಗೆ, ತಮಗೆ ಬೇಕಾದ ಹಾಗೆ ತಿರುಗಿಸುವ ಜನ ಬಹಳ ಇದ್ದಾರೆ. ನೇರವಾಗಿ, ನಿಷ್ಠುರವಾಗಿ ಮಾತನಾಡುವವರು ತುಂಬಾ ಕಡಿಮೆ. ಕೆಲವರು ಲಾಭ ನೋಡಿದರೆ, ಇನ್ನೂ ಕೆಲವರು ನೇರವಾಗಿ ಮಾತನಾಡಿ ಇತರರನ್ನು ನೋಯಿಸಲು ಇಷ್ಟ ಪಡುವುದಿಲ್ಲ. 
  ನಾವು ಯಾವ ಭಾಷೆಯಲ್ಲಿ ಶಿಕ್ಷಣ ಪಡೆದಿದ್ದೇವೆ ಎಂಬುದು ಮುಖ್ಯ ಅಲ್ಲ, ಎಷ್ಟು ಉತ್ತಮ ವಿಚಾರಗಳನ್ನು ಓದಿ, ಕೇಳಿ ತಿಳಿದುಕೊಂಡಿದ್ದೇವೆ, ಎಷ್ಟು ಉತ್ತಮ ಗುಣ, ನಡತೆಗಳನ್ನು ನಮ್ಮ ಬದುಕಲ್ಲಿ ಅಳವಡಿಸಿಕೊಂಡಿದ್ದೇವೆ, ಎಷ್ಟು ಮಾನವೀಯ ಮೌಲ್ಯಗಳನ್ನು ಬೆಳೆಸಿ, ಪೋಷಿಸುತ್ತಿದ್ದೇವೆ, ಎಷ್ಟು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡಿದ್ದೇವೆ, ಎಷ್ಟು ಮನಗಳಲ್ಲಿ ಮತ್ತು ತುಟಿಗಳಲ್ಲಿ ನಗು ತರಿಸಿದ್ದೇವೆ ಅದು ನಮ್ಮ ವ್ಯಕ್ತಿತ್ವಕ್ಕೆ ಏಣಿ ಇಟ್ಟು ಮೇಲೆ ಕರೆದುಕೊಂಡು ಹೋಗುತ್ತದೆ. 
   ವೇದಿಕೆಯ ಮೈಕ್ ಮುಂದೆ ಮಾತನಾಡುವವರು ಬಹಳ ಮಂದಿ ಇದ್ದಾರೆ. ಅದನ್ನು ನಿಜ ಜೀವನದಲ್ಲಿ ಬಳಸಿಕೊಂಡವ ಉತ್ತಮ, ದೊಡ್ಡ ವ್ಯಕ್ತಿ. ಕೇವಲ ಸಿನೆಮಾಗಳಲ್ಲಿ ನಟನೆ ಮಾಡಿ ಹಣ ಗಳಿಸಿದವ ಉತ್ತಮ ಹೀರೋ ಅಲ್ಲ, ನಿತ್ಯ ಜೀವನದಲ್ಲಿ ಅವನು ಹೇಗೆ ಬದುಕಿದ್ದ ಎನ್ನುವುದರಲ್ಲಿ ಅವನ ಹೀರೋಗಿರಿ ಅಡಗಿದೆ. ಊರಿಗೆ ಉಪಕಾರಿ ಮನೆಗೆ ಮಾರಿ ಆಗಲೂ ಬಾರದು. 
  ವ್ಯಕ್ತಿತ್ವದ ವ್ಯಾಖ್ಯಾನ ಕೂಡಾ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಆದರೆ ಯಾವುದೇ ವ್ಯಕ್ತಿಯ ಉದಾತ್ತ ಗುಣಗಳನ್ನು ಎಲ್ಲರೂ ಇಷ್ಟ ಪಡುತ್ತಾರೆ ಮತ್ತು ಆ ಗುಣಗಳಿಗೆ ಅವನನ್ನು ಹೊಗಳುತ್ತಾರೆ. ಇಲ್ಲಿ ಆ ವ್ಯಕ್ತಿ ಯಾವುದೇ ಕೆಲಸ ಮಾಡುವ ವ್ಯಕ್ತಿ ಆಗಿರಬಹುದು, ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠ, ಅಗಾಧ ಜ್ಞಾನ ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಕೇವಲ ಪುಸ್ತಕದಲ್ಲಿ ಓದಿದ್ದು ಮಾತ್ರ ಅಲ್ಲ, ನಿಜ ಜೀವನದಲ್ಲಿ, ಬಳಿ ಇರುವ ಪ್ರತಿಯೊಬ್ಬ ವ್ಯಕ್ತಿಯಿಂದಲೂ ದಿನ ದಿನ ಪಾಠ ಕಲಿಯುತ್ತಿರುತ್ತೇವೆ. ಅದಕ್ಕೆ ವಯಸ್ಸಿನ ಮಿತಿ ಇಲ್ಲ. ಯಾವ ಪರಿಮಿತಿಯೂ ಕಲಿಕೆಗೆ ಇಲ್ಲ. ಪ್ರತಿ ಮಾನವ ಸಾಯುವ ಕೊನೆ ಉಸಿರು ತೆಗೆದುಕೊಳ್ಳುವವರೆಗೂ ವಿದ್ಯಾರ್ಥಿಯೇ ಅಲ್ಲವೇ?
ನಮ್ಮ ಗುಣ, ನಡತೆ, ವ್ಯಕ್ತಿತ್ವ ಚೆನ್ನಾಗಿರಲಿ, ನಾಲ್ಕು ಜನಕ್ಕಿಂತ ಮೊದಲು ನಾವೇ ಮೆಚ್ಚುವಂತೆ ಇರಲಿ ಅಲ್ಲವೇ? ನೀವೇನಂತೀರಿ? 
@ಹನಿಬಿಂದು@
30.03.2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -227

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -227
      ಬದುಕೆಂದರೆ ಕೊಟ್ಟು ಪಡೆಯುವಂತಹ ಕಾರ್ಯ. ನಮ್ಮನ್ನು ಹೆತ್ತ ತಾಯಿ ನಮಗೆ ಜನ್ಮ ನೀಡಿ ಬದುಕಿನಲ್ಲಿ ಅದೇನು ಬೇಕೋ ಎಲ್ಲವನ್ನೂ  ದಯಪಾಲಿಸಿ, ವಿದ್ಯೆ ಬುದ್ಧಿ ಕೊಟ್ಟು ಮಾಂಸದ ಮುದ್ದೆಯಂತೆ ಇರುವ ನಮ್ಮನ್ನು ಮನುಷ್ಯರನ್ನಾಗಿ ಪರಿವರ್ತಿಸಿ ಒಂದಷ್ಟು ದಿನಗಳ ಬಳಿಕ ಇನ್ನೂ ಒಂದಷ್ಟು ತಿಳಿದುಕೊಳ್ಳಲಿ ಎನ್ನುತ್ತಾ ಶಾಲೆಗೆ ಕಳುಹಿಸುತ್ತಾರೆ. ತದ ನಂತರವೂ ಕೂಡ ಮಕ್ಕಳಿಗೆ ಬೇಕಾದ ಎಲ್ಲಾ ಅಗತ್ಯತೆಗಳನ್ನು ಪೂರೈಸಿ ಒದಗಿಸಿ ಕೊಡುವುದರಲ್ಲಿ ಪೋಷಕರ ಜವಾಬ್ದಾರಿಯೂ ಇರುತ್ತದೆ. ಇದಕ್ಕೆ ಬೇಕಾಗಿ ಅವರು ನಮ್ಮಿಂದ  ಯಾವುದನ್ನು ಅಪೇಕ್ಷಿಸುತ್ತಾರೆ? ಕೆಲವು ಪೋಷಕರು ತಮ್ಮ ಮಕ್ಕಳಿಂದ ಬಹಳ ನಿರೀಕ್ಷೆ ಇಟ್ಟುಕೊಳ್ಳಬಹುದು. ಮಗ ಅಥವಾ ಮಗಳು ಒಳ್ಳೆ ಕೆಲಸಕ್ಕೆ ಸೇರಿ ಬಂದ ಹಣ,  ಅದು ನಮಗೆ ಸಿಗಬೇಕು, ಜೀವನಪೂರ್ತಿ ಅವರು ದುಡಿದ ಹಣವೆಲ್ಲ ನಮ್ಮ ಪಾಲಾಗಬೇಕು. ನಾವೇ ತಾನೇ ಇವರಿಗೆ  ವಿದ್ಯೆ ಬುದ್ಧಿ ಕೊಟ್ಟು ಖರ್ಚು ಮಾಡಿ ಓದಿಸಿತ್ತು? ಈ ರೀತಿ ಯೋಚನೆ ಮಾಡುವವರು ಕೆಲವರಾದರೆ ಇನ್ನು ಕೆಲವರ ಆಲೋಚನೆಗಳೇ ಬೇರೆ. "ಮಕ್ಕಳನ್ನು ಸಾಕುವುದು ಅವರಿಗೆ ವಿದ್ಯಾಭ್ಯಾಸ ಕೊಡುವುದು ಇದೆಲ್ಲ ಪೋಷಕರಾದ ನಮ್ಮ ಕರ್ತವ್ಯ. ನಮ್ಮ ಕರ್ತವ್ಯವನ್ನು ನಾವು ಬಹಳಷ್ಟು ಕಷ್ಟಪಟ್ಟು ಶಿರಸಾ ಪಾಲಿಸಿ,  ಮಕ್ಕಳಿಗೆ ಏನು ಬೇಕು ಅದನ್ನು ತಂದುಕೊಟ್ಟು,  ನಮ್ಮ ಜವಾಬ್ದಾರಿಯನ್ನು ನಾವು ಅತ್ಯಂತ ಉತ್ತಮವಾಗಿ ನಿರ್ವಹಿಸಿದ್ದೇವೆ. ನಮ್ಮ ಮಕ್ಕಳು ನಮಗಾಗಿ ಏನನ್ನು ಮಾಡಿ ಇಡುವುದು ಬೇಡ,  ಬದಲಾಗಿ ಅವರ ಬದುಕನ್ನು ಅವರು ಉತ್ತಮವಾಗಿ ಕಟ್ಟಿಕೊಂಡರೆ ಸಾಕು" ಎಂದು ಆಲೋಚನೆ ಮಾಡುವವರು ಹಲವರು. 
           ಇಲ್ಲಿ ಕೊಟ್ಟು ಪಡೆಯುವ ಕಾರ್ಯ ಎಂದರೆ ಪ್ರೀತಿ, ಕೇರ್ ಅಷ್ಟೇ. ಚಿಕ್ಕವರಾಗಿದ್ದಾಗ ಪೋಷಕರು ಕೊಟ್ಟ ಆ ಪ್ರೀತಿಯನ್ನು   ಅವರ ವೃದ್ದಾಪ್ಯ ಸಮಯದಲ್ಲಿ ಅವರು ನಮ್ಮಿಂದ ನಿರೀಕ್ಷಿಸುತ್ತಾರೆ. ಅದನ್ನು ನೀಡಲು ನಮ್ಮ ಬದುಕಿನಲ್ಲಿ ನಮಗೆ ಸಮಯವೇ ಇರುವುದಿಲ್ಲ. ಬದುಕಿಗಾಗಿ, ಹಣಕ್ಕಾಗಿ ದುಡಿಮೆಯ ಹೋರಾಟ ನಮ್ಮದಾಗಿರುತ್ತದೆ. ನಮ್ಮ ಸಂಸಾರ, ಕುಟುಂಬ ಮನೆ ಮಕ್ಕಳು, ಇವುಗಳಲ್ಲಿ ನಾವು ಬಿಝಿ ಆಗಿ ಬಿಡುತ್ತೇವೆ. ಅತ್ಯಂತ ಹೆಚ್ಚು ಖರ್ಚು ಮಾಡಿ, ಡಾನ್ಸ್ ಕ್ಲಾಸ್, ಆ ಕ್ಲಾಸ್ ಈ ಕ್ಲಾಸ್ ಅಂತ ಇಂಜಿನಿಯರಿಂಗ್ , ಮೆಡಿಕಲ್ ನಂತಹ ಹೈಯರ್ ಡಿಗ್ರೀ ಕಲಿಸಿದ ಹೆಚ್ಚಿನ ಮಕ್ಕಳಿಂದು ವಿದೇಶದಲ್ಲಿ, ಭಾರತದ ಮತ್ತೊಂದು ಮೂಲೆಯಲ್ಲಿ ಇದ್ದು, ವೃದ್ಧ ದಂಪತಿಗಳು ಮನೆಯಲ್ಲಿ ಕೆಲಸದವರ ಜೊತೆಯೋ, ನಾಯಿ ಬೆಕ್ಕು ಸಾಕಿಕೊಂಡು, ವೃದ್ಧಾಶ್ರಮಗಳ ಒಳಗೆ ಬಾಳು ಕಳೆಯುವ ಪರಿಸ್ಥಿತಿ ಬಂದಿದೆ. ದುಡ್ಡು ಇರುವವರಿಗೆ  ಇಂದು ಹೈ ಟೆಕ್ ವೃದ್ದಾಷ್ರಮಗಳೂ ಇವೆ. ಲಕ್ಷಗಟ್ಟಲೆ ಸುರಿದರೆ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇದು ನಮ್ಮ ಹಿರಿಯರ ಪರಿಸ್ಥಿತಿ. ಹಣ ಮಾಡದೆ ಇರುವ ಪೋಷಕರನ್ನು ಕೆಲವು ಮಕ್ಕಳೇ ದಾರಿಯ ನಡುವೆ ಬಿಟ್ಟು ಬಂದರೆ, ಇನ್ನೂ ಕೆಲವರನ್ನು ಬೀದಿ ನಾಯಿಗಳ ಹಾಗೆ ಊಟ ಬಿಸಾಕಿ ಸಾಕುತ್ತಿರುವವರೂ ಇದ್ದಾರೆ. ಇನ್ನೂ ಕೆಲವರು ಹೊಡೆದು ಬಡಿದು ಬುದ್ಧಿ ಹೇಳುವ ಮಕ್ಕಳಿದ್ದಾರೆ. 
   ಅರವತ್ತರ ನಂತರ ಅರಳು ಮರಳು ಅಂತಾರೆ. ಈ ರೀತಿ ತಮ್ಮ ಪೋಷಕರು ವಿಚಿತ್ರವಾಗಿ ನಡೆದುಕೊಳ್ಳಲು ಆರಂಭಿಸಿದರೆ ಮನೆಗೆ ಬಂದ ಅಂದದ ಮಡದಿ ಅವರನ್ನು ತಮ್ಮ ಜೊತೆ ಇರಲು ಒಪ್ಪುವುದಿಲ್ಲ. ಆಗ ಸಿಟಿಗೆ ಹೋಗಿ ಬೇರೆ ಮನೆ ಮಾಡುವುದೋ ಅಥವಾ ಆ ಹಿರಿಯರನ್ನು ಮನೆಯಿಂದ ಓಡಿಸಿವುದೋ, ಬೇರೆ ಮಕ್ಕಳ ಮನೆಗೆ ಕಳಿಸುವುದೋ, ತಮ್ಮ ಮನೆಯಲ್ಲೇ ಪ್ರತ್ಯೇಕ ಒಂದು ಕೋಣೆ ಮಾಡಿ ಅಲ್ಲಿ ಬಿಡುವುದೋ ಹೀಗೆ ಒಂದೊಂದು ಅರೇಂಜ್ಮೆಂಟ್ ಆಗಿರುತ್ತದೆ. 
   ಕೆಲವು ವಯಸ್ಸಾದ ಪೋಷಕರೂ ಹಾಗೆಯೇ. ಬಂದವರ ಹತ್ತಿರ ಎಲ್ಲಾ ಸಿಗರೇಟ್ ಕೇಳುವುದು, ಮಗ ಕೊಡುವುದಿಲ್ಲ ಎಂಬ ದೂರು ಕೊಡುವುದು ಅವರ ಮರ್ಯಾದೆ ಪ್ರಶ್ನೆ ಆಗಿಬಿಡುತ್ತದೆ. ಮಕ್ಕಳಿರುವಾಗ ಇಡೀ ದಿನ ಸಿಗರೇಟ್ ಎಳೆಯುವುದು ಒಳ್ಳೆಯದಲ್ಲ ಎಂದು ಹೇಳಿದರೂ ಕೇಳದೆ ಇರುವುದು,  ಅರ್ಧ ರಾತ್ರಿಯವರೆಗೂ ಮಲಗದೆ ಇರುವುದು, ಯಾರ ಬಳಿ ಆದರೂ ಜೋರಾಗಿ ಫೋನಿನಲ್ಲಿ ಮಾತನಾಡುತ್ತಿರುವುದು, ಮನೆಯ ಸ್ವಚ್ಛತೆಗೆ ಅಡ್ಡಿ ಪಡಿಸುವುದು, ಎಂಬತ್ತು ವರ್ಷಗಳ ಬಳಿಕ ಎಲ್ಲಾದರೂ ಹೋಗಿ ಬೀಳುವುದು, ಹಾಕಿದ ಎಲ್ಲಾ ಬಟ್ಟೆಗಳನ್ನು ಕೂಡ ಹರಿದು ಹಾಕಿಕೊಳ್ಳುವುದು, ಮಲ ಮೂತ್ರ ಕಂಡ ಕಂಡಲ್ಲಿ ಮಾಡುವುದು, ಪಕ್ಕದ ಮನೆಗೆ ಹೋಗಿ ಊಟ ಕೇಳಿ ತಿನ್ನುವುದು ಹೀಗೆ ಮಾಡುವ ಪೋಷಕರನ್ನು ಇಬ್ಬರೂ ಕೆಲಸಕ್ಕೆ ಹೋಗುವ ಇಂದಿನ ಕಾಲದಲ್ಲಿ ಹೇಗೆ ಸಹಿಸುವುದು? ಇದೂ ಕಷ್ಟವೇ. ಅದೆಷ್ಟೋ ಜನ ಮಲಗಿದಲ್ಲೇ ಇರುವ ತಾಯಿಗೆ ಬೆಳಗ್ಗೆ ಆಹಾರ ಕೊಟ್ಟು ಸ್ವಚ್ಛಗೊಳಿಸಿ ಮಲಗಿಸಿ ಹೋದರೆ ಸಂಜೆಯೇ ಹಿಂದಿರುಗಿ ಮನೆಗೆ ಬಂದು ನೋಡುವುದು. ಕೆಲಸಕ್ಕೆ ಜನ ಸಿಗಲಾರರು, ಸಿಕ್ಕಿದರೂ ಅವರ ಸಂಬಳ ಕೊಡಲಾಗದು. ಆಗೆಲ್ಲ ಅನುಕೂಲ ಶಾಸ್ತ್ರ. ಇದು ನಿತ್ಯ ಸತ್ಯ. ನಮ್ಮ ಕಾಲ ಮೇಲೆ ನಾವು ಕೆಲಸ ಮಾಡಿ ಬದುಕಲು ಸಾಧ್ಯ ಆಗುವವರೆಗೆ ಮಾತ್ರ ನಾವು ಬದುಕಬೇಕು ಅಂದುಕೊಳ್ಳುತ್ತೇನೆ. ಎಂದಿಗೂ ಪರರಿಗೆ ಹೊರೆ ಆಗಿ ನಮ್ಮ ಬದುಕು ಇರಬಾರದು. ಆದರೆ ಕೈ ಕಾಲು ಬಿದ್ದಾಗ, ಯಾವುದಾದರೂ ಸಣ್ಣ ಸರ್ಜರಿ ಆದಾಗ,  ಅನಾರೋಗ್ಯ ಸಮಯದಲ್ಲಿ, ಡೆಲಿವರಿ ಸಮಯದಲ್ಲಿ ನಾವು ಕೂಡ ಅವರ ಹಾಗೆ ಅಸಹಾಯಕರೇ ಅಲ್ಲವೇ? ಅಂತಹ ಸಮಯದಲ್ಲಿ ಪೋಷಕರು ನಮ್ಮನ್ನು ಅವರಿಗೆ ಏನೇ ಕಷ್ಟ ಬಂದರೂ ನೋಡಲು ಇರುವುದಿಲ್ಲವೇ? ಅಥವಾ ನಾವೇ ಜನ ಮಾಡಿ ಆದರೂ ಇರುವುದಿಲ್ಲವೇ? 
       ಕಷ್ಟ , ದುಃಖ, ನೋವು, ಹತಾಶೆ, ಬದುಕಿನ ಏಳು ಬೀಳುಗಳು ಎಲ್ಲರಿಗೂ ಇವೆ. ಕೆಲವೊಂದು ಸಮಸ್ಯೆಗಳಿಗೆ ಕೊನೆ ಇಲ್ಲ. ಏನೂ ಓದದ , ಸಮ್ಮ ಪುಟ್ಟ ಕೆಲಸ ಮಾಡಿ,  ಕಷ್ಟ ಪಟ್ಟು ಕೂಲಿ ಮಾಡಿ ಅದು ಹೇಗೋ ತನ್ನ ಸಂಸಾರ ಸಾಕುತ್ತಿರುವ ಮಗನೊಬ್ಬ ಕ್ಯಾನ್ಸರ್ ಪೀಡಿತ ತನ್ನ ತಾಯಿಯನ್ನೋ, ತಂದೆಯನ್ನೋ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ನಿಂತು ಅದು ಹೇಗೆ ತಾನೇ ನೋಡಿಕೊಂಡಾನು ಅಲ್ವಾ? ಕೆಲಸಕ್ಕೆ ಹೋಗದೆ ಇದ್ದರೆ ಊಟಕ್ಕಿಲ್ಲ, ಕುಟುಂಬ ಸಾಕಲು ಆಗದು. ಆಗ ಅವರ ಸ್ವಾರ್ಥ ಬದುಕು ಅನಿವಾರ್ಯ ಅನ್ನಿಸಿ ಬಿಡುತ್ತದೆ. ಇಂದು ಭಾರತದ ಹೆಚ್ಚಿನ ಕುಟುಂಬಗಳಲ್ಲಿ ಆಗುತ್ತಿರುವುದು ಇದೇ. ಸಿರಿವಂತ ಮಗ ಪಟ್ಟಣದಲ್ಲಿ ಹೆಂಡತಿ ಮಕ್ಕಳ ಜೊತೆ ಯಾರ ಸುದ್ದಿ ಬೇಡ ಅಂತ ಅವನಷ್ಟಕ್ಕೆ ಬದುಕುತ್ತಾ ಇರುತ್ತಾನೆ. ಹಳ್ಳಿಯಲ್ಲಿ ಇರುವ ಬಡ ಮಗನಿಗೆ ಇದು ಅನಿವಾರ್ಯ ಆದರೂ ಅವನು ಅಸಹಾಯಕ. ಇದೇ ಕೊಡು ಕೊಳ್ಳುವಿಕೆ ಸಾಧ್ಯ ಆಗದ ಬಡತನದ ಬದುಕು. 
   ಪ್ರತಿ ಮನುಷ್ಯ ಹೆಣಗಾಡುವುದು ಆಸ್ಪತ್ರೆಗಳ ಬಿಲ್ ಕಟ್ಟಲು ಸಾಧ್ಯ ಆಗದೆ. ಎಷ್ಟು ಜನ ಮೆಡಿಕಲ್ ಓದಿ ಡಾಕ್ಟರ್ ಆಗಿತ್ತಾರೋ, ಅದಕ್ಕಿಂತ ಹೆಚ್ಚು ಜನ ಹಣ ಇಲ್ಲದೆ ಆಸ್ಪತ್ರೆಗೆ ಬರಲು ಹೆದರಿ ರೋಗಗಳ ಜೊತೆ ಬದುಕುತ್ತಿದ್ದಾರೆ. ಜೊತೆಗೆ ನೋವಲ್ಲೆ ಸಾಯುತ್ತಾರೆ. ಲಕ್ಷಗಟ್ಟಲೆ ಖರ್ಚು ಮಾಡಿ ಜೀವನ ಪೂರ್ತಿ ಲೋನ್ ಕಟ್ಟುವವರು, ಕಟ್ಟುತ್ತಾ ಇರುವವರು, ದುಡಿದ ಹಣವೆಲ್ಲ ಹಿರಿಯರಿಗೆ ವ್ಯಯಿಸಿದ ಮಕ್ಕಳು ಕೂಡಾ ಇದ್ದಾರೆ. ಇಂತಹ ಬಡತನದ ಪರಿಸ್ಥಿತಿ ಸರಿ ಮಾಡಿ ಕೊನೆಗಾಲದಲ್ಲಿ ಸರಿಯಾಗಿ ಬದುಕಬೇಕು ಎಂದಿದ್ದರೆ ಹಣ ಮಾಡಿ, ಹಣ ಕೂಡಿ ಇಡಬೇಕು. ಇಲ್ಲದೆ ಹೋದರೆ ಮಕ್ಕಳು ಸಾಕುತ್ತಾರೆಯೆ? ಹಣ ಬ್ಯಾಂಕಿನಲ್ಲಿ ಇಟ್ಟರೆ ಇಂಕಮ್ ಟ್ಯಾಕ್ಸ್ ಕಾಟ, ಮನೆಯಲ್ಲಿ ಇಟ್ಟರೆ ಮಕ್ಕಳ ಕಾಟ. ಹಣಕ್ಕಾಗಿ ಜಗಳ. ಹಣ ಇಟ್ಟರೂ ನೆಮ್ಮದಿ ಇಲ್ಲ ಅಲ್ಲವೇ? ಹಣಕ್ಕಾಗಿ, ಆಸ್ತಿಗಾಗಿ ಪೋಷಕರನ್ನು ಕೊಂದ ಅದೆಷ್ಟೋ ವಾರ್ತೆಗಳು ಸರ್ವೇ ಸಾಮಾನ್ಯ. ಇಲ್ಲಿ ಕೊಡು ಕೊಳ್ಳುವಿಕೆ ಹೇಗೋ ಏನೋ. 
    ಭಾರತದಲ್ಲಿ ಬಿಪಿಎಲ್ ಕಾರ್ಡು ಹೆಚ್ಚಾಗಿ ಇರುವುದಕ್ಕೂ ಸರಕಾರದಿಂದ ಒಂದಷ್ಟು ಅವರಿಗಾಗಿ ಯೋಜನೆಗಳು ಸಿಗುವ ಕಾರ್ಯ ಆಗುತ್ತಿದ್ದರೂ, ಅಂತಹ ಕೆಲಸಕ್ಕೆ ಓಡಾಟ ಮಾಡುವ ಜನ ಇಲ್ಲ, ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಮಧ್ಯವರ್ತಿಗಳ ಕಾಟ, ಸರಿಯಾಗಿ ಅರ್ಜಿ ಹಾಕಲು ಜನರ,ಸಮಯದ, ಹಣದ ಕೊರತೆ, ಮಾಹಿತಿ ಕೊರತೆ, ಓಡಾಟಕ್ಕೆ ಯಾರಿಲ್ಲ, ಹೀಗಾಗಿ ಮರಣಗಳ ಸಂಖ್ಯೆ ಬಡವರಲ್ಲಿ ಹೆಚ್ಚು. 
  ದೇಶದಲ್ಲಿ ವೈದ್ಯಕೀಯ ಜನರ ಕೈಗೆಟಕುವ ದರದಲ್ಲಿ ಸಿಕ್ಕಿದಾಗ ಮಾತ್ರ healthy country ಇರಲು ಸಾಧ್ಯ. ಇಲ್ಲದೆ ಹೋದರೆ ದುಡ್ಡಿದ್ದವ ಬದುಕಿಯಾನು ಅಷ್ಟೇ. ಕೊರೋನ ದಿನಗಳ ಹಾಗೆ ಶವ ಸಂಸ್ಕಾರಕ್ಕೆ ಕೂಡಾ ಇಲ್ಲದ ಜನ ಏನು ತಾನೇ ಮಾಡಿಯಾರು? ಆಗ ಕೊಡು ಕೊಳ್ಳುವಿಕೆಯ ಪ್ರೀತಿ ಮರೆಯುವುದು ಮಾತ್ರ ಅಲ್ಲ , ಸತ್ತೇ ಹೋಗಿರುತ್ತದೆ. ಇದು ವಾಸ್ತವ. ಕಟು ಸತ್ಯ ಅಲ್ಲವೇ? ನೀವೇನಂತೀರಿ? 
@ಹನಿಬಿಂದು@
23.03.2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -201

        ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -201
ಹೇಗಿದ್ದೀರಿ ಎಲ್ಲರೂ? ಕ್ಷೇಮ ತಾನೇ? ಒಮ್ಮೆ ನಿಂತ ಮಳೆ ಮತ್ತೆ ಪ್ರಾರಂಭವಾಗಿದೆ. ಅದರ ಜೊತೆ ಜೊತೆಯಲ್ಲಿ ವೈರಲ್ ಜ್ವರ ಮತ್ತು ಶೀತ ಕೂಡಾ ಬಿಡದೆ ಕಾಡಿದೆ. ನಮ್ಮ ದೇಹ ನಮ್ಮ ದೊಡ್ಡ ಆಸ್ತಿ. ನಮ್ಮ ಆಸ್ತಿಗೆ ನಾವೇ ಜವಾಬ್ದಾರರು. ಆದ ಕಾರಣ ನಮ್ಮ ಆಸ್ತಿಯನ್ನು ಕಾಪಾಡಿಕೊಳ್ಳುವ ದೊಡ್ಡ ಹೊರೆ ಹಾಗೂ ಜವಾಬ್ದಾರಿ ನಮ್ಮ ಮೇಲಿದೆ. ಬೀ ಕೇರ್ಫುಲ್. ಸ್ಟೇ ಹೆಲ್ದಿ. ಒಂದು ಹಲ್ಲು ಹಾಳಾದರೆ ಕಡಿಮೆ ಅಂದರೂ ಆರು ಸಾವಿರ ರೂಪಾಯಿ, ಐದು ಸಲ ಹೋಗಿ ಅದನ್ನು ಕರೆಯಿಸಿಕೊಂಡು ಮತ್ತೆ ಹೊಸ ಕ್ಯಾಪ್ ಹಾಕಿಕೊಂಡು ಬರುವುದು. ಒಂದು ಹಲ್ಲಿನ ಬೆಲೆ ಆರು ಸಾವಿರ ಆದರೆ ಬೆಲೆ ಬಾಳುವ ಅಂಗಗಳಿಗೆ ಎಲ್ಲಾ ಸೇರಿ ನಮ್ಮ ದೇಹದ ಮೌಲ್ಯ ನಿರ್ಧಾರ ಸುಲಭ. ಮೆದುಳು ಒಂದು ಕೋಟಿಗೆ ಸರಿದೂಗುವಂಥದ್ದು. ಮೆದುಳಿನ ಕಾರ್ಯ ಸರಿಯಾಗಿ ನಡೆಯದೆ ಇರಲು ಕಾರಣ ಟೆನ್ಶನ್, ಆಹಾರ, ಉಪವಾಸ, ತಿನ್ನುವ ಪ್ರತಿ ಪದಾರ್ಥಗಳು. ನೆನಪಿರಲಿ, ನಮ್ಮ ದೇಹ ಮತ್ತು ದೇಶ ನಮ್ಮ ಬಹು ದೊಡ್ಡ ಆಸ್ತಿ. 

    ಕೆಲವೊಂದು ಜನರ ಗುಣವನ್ನು ನೋಡಿ, ಏನೇ ಆದರೂ ಪ್ರಪಂಚ ಬಿದ್ದು ಹೋದರೂ ನಗು ನಗುತ್ತಾ ಸ್ವೀಕರಿಸಿ ಬಿಡುತ್ತಾರೆ. ಅಂತಹ ಎತ್ತರಕ್ಕೆ ಏರುವುದು ಎಲ್ಲರಿಗೂ ಸಾಧ್ಯ ಇಲ್ಲ. ಈಗಿನ ಕಾಲದಲ್ಲಂತೂ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರಿಗೂ ಟೆನ್ಶನ್. ಆ ಒತ್ತಡದ ನಡುವೆ ಆರಾಮಾಗಿ ಇರಲು ಹೇಗೆ ಸಾಧ್ಯ ಹೇಳಿ! ಯಾರ ಮಾತನ್ನೂ ಕೇಳಲು ಸಮಯ ಇಲ್ಲ. ಯಾರ ಜೊತೆ ಸರಿಯಾಗಿ ಬೆರೆಯಲು, ಮಾತನಾಡಲು ಸಮಯ ಇಲ್ಲ. ಕಾರ್ಯಕ್ರಮಗಳಿಗೆ ಹೋದರೆ ಕುಳಿತು ಮಾತನಾಡಲು ಸಮಯವೇ ಇಲ್ಲ! ಎಲ್ಲಾ ಕಡೆ ಅರ್ಜೆಂಟ್! ಸಮಯ ಇಲ್ಲದೆ ವೇಗವಾಗಿ ಡ್ರೈವ್ ಮಾಡಿಕೊಂಡು ಹೋಗಿ ನೇರವಾಗಿ ಯಮನ ಪಾದ ಸೇರಿದವರು ಅದೆಷ್ಟೋ! ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಸಾವು ಖಚಿತ ತಾನೇ? ಇದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ನಾಲ್ಕು ದಿನದ ಈ ಬದುಕಿನಲಿ ಸದಾ ಒತ್ತಡ, ಬೇರೆಯವರ ಮೇಲೆ ಹೊಟ್ಟೆಕಿಚ್ಚು, ದ್ವೇಷ, ಕೋಪ, ಮತ್ಸರ ಇದೆಲ್ಲ ಯಾಕಾಗಿ! ಜೀವನದಲ್ಲಿ ನೆನಪಿಡಬೇಕಾದ ಅಂಶ ಎಂದರೆ ಪಕ್ಕದ ಮನೆಯವರು, ಪಕ್ಕದಲ್ಲಿ ಇರುವವರು, ಜೊತೆಯಲ್ಲಿ ಇರುವವರು ನಮ್ಮ ಶತ್ರುಗಳಲ್ಲ, ನಮ್ಮ ಸ್ಪರ್ಧಿಗಳು ಕೂಡ ಅಲ್ಲ. ನಮ್ಮ ಸ್ಪರ್ಧಿಗಳು ನಾವೇ ಆಗಬೇಕು. ನಮ್ಮ  ಈ ವರ್ಷದ ದಾಖಲೆಯನ್ನು ಮುಂದಿನ ವರ್ಷ ನಾವೇ ಮುರಿಯಬೇಕು. ಪಕ್ಕದ ಮನೆಯವರ ಹಾಗೆ ಟಿವಿ , ಫ್ರಿಡ್ಜ್, ಬಟ್ಟೆ, ಸೀರೆ ತೆಗೆದುಕೊಳ್ಳದೆ ಇದ್ದರೂ ಪರವಾಗಿಲ್ಲ, ನಾನು ಯಾರಿಗೂ ಕೆಟ್ಟದು ಮಾಡಲಿಲ್ಲ, ನಾನು ಹಲವಾರು ಜನರಿಗೆ ಸಹಾಯ ಮಾಡಿದ್ದೇನೆ, ನಾನು ಇಂತಹ ಸಾಧನೆ ಮಾಡಿದ್ದೇನೆ ಮೊದಲಾದ ಹೆಮ್ಮೆಯಿಂದ ನಮ್ಮ  ಬಗ್ಗೆ ನಾವೇ ಹೇಳಿಕೊಳ್ಳುವ  ಕೆಲವು ವಾಕ್ಯಗಳು ನಮ್ಮಲ್ಲಿ ಇರಬೇಕು. 
       ನಾವು ಇನ್ನೊಬ್ಬರ ಜೊತೆ ಸೇರಿದಾಗ ಮೂರನೆಯವರ ಬಗ್ಗೆ  ಮಾತನಾಡುವುದನ್ನು ಬಿಟ್ಟು ನಮ್ಮ ಬಗ್ಗೆ ಮಾತನಾಡಲು ಮೂರನೆಯವರಿಗೆ ಅವಕಾಶ ಮಾಡಿ ಕೊಡೋಣ. ಕೆಲವರು, ಹಲವರು, ಹೊರಗಿನವರು, ಬಂಧುಗಳು, ಮಿತ್ರರು, ಶತ್ರುಗಳು, ಪಕ್ಕದ ಮನೆಯವರು, ಗೆಳೆಯರು, ಪರಿಚಯದವರು, ಪರಿಚಯ ಇಲ್ಲದವರು ಎಲ್ಲರೂ ನಮ್ಮ ಬಗ್ಗೆ ಮಾತನಾಡಲಿ. ಆಗಲೇ ಅಲ್ಲವೇ ನಾವು ಪ್ರಖ್ಯಾತರಾಗುವುದು! ನೋಡಿ ಎಲ್ಲರೂ ಗಾಂಧೀಜಿ, ನೆಹರು, ಸ್ವಾಮಿ ವಿವೇಕಾನಂದ, ಸುಧಾ ಮೂರ್ತಿ, ಮೋದಿ, ಸಿದ್ಧರಾಮಯ್ಯ ಇವರ ಬಗ್ಗೆ ಮಾತನಾಡುತ್ತಿರುತ್ತಾರೆ. ಯಾರೆಲ್ಲ ಹಿಂದೆ ಮಾತನಾಡಿದರೂ ಅವರೆಲ್ಲ ಮೇಲೆಯೇ, ಮುಂದೆಯೇ ಇದ್ದಾರೆ. ಯಾರು ಹೇಗೆ ಮಾತನಾಡಿದರೂ ಮಾತನಾಡಲು ವಸ್ತು ಆದವರು ತಗ್ಗಾಗಲಾರರು. ಅವರ ಪ್ರಖ್ಯಾತಿ ಹೆಚ್ಚುತ್ತಲೇ ಹೋಗುತ್ತದೆ. ನಾವೂ ಅಷ್ಟೇ. ಬೇರೆಯವರಿಗಿಂತ ಮುಂದಿರಬೇಕು. ಅವರು ನಮ್ಮ ಬಗ್ಗೆ ಮುಂದಿನಿಂದಲೂ ಹಿಂದಿನಿಂದಲೂ ಮಾತನಾಡುವ ಹಾಗಿರಬೇಕು. ಆದರೆ ಒಂದು ಅಂಶ ಇಷ್ಟೇ, ಮುಂದೆ ಹಾಗೂ ಹಿಂದೆ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಕಾರ್ಯ ನಾವು ಮಾಡಬಾರದು. 
    ಆದರೆ ನಾವು ಒಳ್ಳೆಯದಕ್ಕೇ , ಒಳ್ಳೆಯದನ್ನೇ ಮಾಡಿದರೂ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವವರು ಸಿಕ್ಕೇ ಸಿಗುತ್ತಾರೆ. ಏಕೆಂದರೆ ಪ್ರತಿಯೊಬ್ಬರೂ ಅವರವರ ಮಟ್ಟಕ್ಕೆ ಮಾತನಾಡುತ್ತಾರೆ ಅಲ್ಲವೇ? ಕೆಟ್ಟದಾಗಿ ಮಾತನಾಡುವವರ ಮನಸ್ಸು ಕೆಟ್ಟದಾಗಿದೆ ಎಂದು ಅರ್ಥವೇ ಹೊರತು, ಅವರು ಯಾರ ಬಗ್ಗೆ ಮಾತನಾಡುವರೋ ಅವರು ಕೆಟ್ಟವರು ಎಂದು ಅರ್ಥ ಅಲ್ಲ. ಹಾಗಾಗಿ ಯಾರನ್ನು ಯಾರು ದೂರುವರೋ, ಲಾಭ ಯಾರಿಗೋ ನಾವೇ ಅರಿಯಬೇಕು. 
     ಏನೇ ಇರಲಿ. ನಮ್ಮನ್ನು ನಾವೇ ಎತ್ತರಕ್ಕೆ ಏರಿಸಿಕೊಳ್ಳಬೇಕು. ನಮ್ಮ ಕೈ ಹಿಡಿದು ನಡೆಸಲು ಬರುವುದು ದೇವರು ಮಾತ್ರ. ಅವನೂ ಆಗಾಗ ಮುಂದಿನ ತರಗತಿಗೆ ನಮ್ಮನ್ನು ಕಳುಹಿಸಲು ಪರೀಕ್ಷೆ ಕೊಡುತ್ತಲೇ ಇರುತ್ತಾನೆ. ಕಷ್ಟಪಟ್ಟು ಓದಿ ಪಾಸ್ ಆಗಿ ಮುಂದಿನ ಜೀವನಕ್ಕೆ ಕಾಲಿಡಬೇಕಿದೆ. ನಮ್ಮ ಬದುಕಿಗೂ, ನಮ್ಮ ಆರೋಗ್ಯಕ್ಕೂ, ನಮ್ಮ ದೇಹಕ್ಕೂ, ನಮ್ಮ ಮನಸ್ಸಿಗೂ, ನಮ್ಮ ವ್ಯಕ್ತಿತ್ವಕ್ಕೂ, ನಮ್ಮ ಮಾತಿಗೂ, ನಮ್ಮ ನಡೆ ನುಡಿಗೂ ನಾವೇ ಜವಾಬ್ದಾರಿ ಅಲ್ಲವೇ? ಚೆನ್ನಾಗೇ ಕಾಯ್ದುಕೊಳ್ಳೋಣ. ನೀವೇನಂತೀರಿ?
@ಹನಿಬಿಂದು@
09.09.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -222

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -222

ದೇಶದೆಲ್ಲೆಡೆ ಶ್ರೀ ರಾಮನ ಮಂತ್ರ. ಸರ್ವ ಹಿಂದೂ ಬಾಂಧವರು ಒಟ್ಟಾಗಿ ತಮ್ಮದೇ ಒಟ್ಟು ಸೇರಿಸಿದ ಹಣದಿಂದ 500 ವರ್ಷಗಳ ಬಳಿಕ ಬಾಲ ರಾಮನನ್ನು ವಿಗ್ರಹ ರೂಪಿಯಾಗಿ ಅವನು ಹುಟ್ಟಿದ ಅಯೋಧ್ಯೆಯಲ್ಲಿ ಪ್ರತಿಷ್ಟಾಪಿಸಿ, ಆ ಮೂರ್ತಿಯ ಅಂದ ಕಂಡು ಹಿಗ್ಗಿ ನಲಿದಾಡಿ ಖುಷಿ ಪಟ್ಟರು. ಪ್ರಧಾನ ಮಂತ್ರಿಗಳು ಕೂಡಾ ಉಪವಾಸವಿದ್ದು, ತಾನು ಹೇಳಿದ ಕಾರ್ಯವನ್ನು ಮಾಡಿ ಕೊಟ್ಟರು. ಇದು ಭಕ್ತಿಯ ಪರಾಕಾಷ್ಟೆ ಒಂದೆಡೆ ಆದರೆ ಭಾವನಾತ್ಮಕ ಬಂಧವೂ ಆಗಿ ಉಳಿಯಿತು. ಜನವರಿ 22ರ ದಿನ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಿತು. 
  ಇದರ ಮುಂದೆ ಹೀಗೆಲ್ಲಾ ಆದರೆ ಇದರ ಹಿಂದೆಯೂ ಹಲವಾರು ಕಟ್ಟು ಕಥೆಗಳು ಬಂದಿವೆ. ಈ ಮೂರ್ತಿಯ ಬದಲಾಗಿ ಇನ್ನೊಬ್ಬ ಕುಂದಾಪುರದ ಮೂರ್ತಿ ಕೆತ್ತನೆಗಾರನ ಕೆಲಸವೂ ಆಗಿದೆ. ಅವರು ಕೆತ್ತಿದ ಮೂರ್ತಿಗೆ ಪ್ರತಿಷ್ಠಾಪನೆಯ ಅವಕಾಶ ಸಿಗಲಿಲ್ಲ. ಹಲವು ಗಣ್ಯರನ್ನು ಏಕೆ ಒಳಗೆ ಬಿಡಲಿಲ್ಲ ಇತ್ಯಾದಿ. ಏನೇ ಆದರೂ ಆಯಾ ಕಾಲಕ್ಕೆ ಏನೇನು ಆಗಬೇಕು ಎಂದು ಇದೆಯೋ ಅದೇ ಆಗುತ್ತದೆ ಎಂದು ವಾಸ್ತು ತಜ್ಞರು ಹೇಳಿದರೆ, ನಮ್ಮ ಶ್ರಮಕ್ಕೆ ತಕ್ಕ ಪಾಠ ನಮಗೆ ಸಿಗುತ್ತದೆ ಎಂದು ವಿಜ್ಞಾನ ಹೇಳುತ್ತದೆ.  
   ರಾಮನ ದೇವಾಲಯ, ಆಯೋದ್ಯೆ ಬಹಳ ಹಿಂದೂಗಳನ್ನು ಐಕ್ಯಮತ್ಯಗೊಳಿಸಿದ್ದಂತೂ ಸತ್ಯ. ಇನ್ನೊಂದೆಡೆ ಇದನ್ನೇ ಕೆಲವರು ರಾಜಕೀಯಕ್ಕಾಗಿ ಬಳಸಿ ಕೊಂಡವರೂ ಇದ್ದಾರೆ. ರಾಮಮಂದಿರ ಕಾರ್ಯ ಹಾಗೂ ಭಕ್ತರಿಂದ ಸಂಗ್ರಹ ಆದ ಹಣಕಾಸಿನ ಲೆಕ್ಕಾಚಾರ ಭಕ್ತನೊಬ್ಬನಿಗೆ ಬೇಕಾಗಿದೆ ಆದರೆ ಇನ್ನೊಬ್ಬನಿಗೆ ಅಲ್ಲಿರುವ ಮೂರ್ತಿ, ಮತ್ತೊಬ್ಬನಿಗೆ ಅಲ್ಲಿನ ಕಾಂತಿ, ಇನ್ನೊಬ್ಬನಿಗೆ ಅಲ್ಲಿನ ಚಿಲ್ಲರೆ ಹೀಗೆ ಬೇಕುಗಳ ಪಟ್ಟಿ ಮುಗಿದು ಹೋಗದು.. 
       Bಆಯಿತು, ಇನ್ನು ಎಲೆಕ್ಷನ್ ಕ್ಯಾನ್ವಾಸ್ ಶುರು. ಪ್ರಜೆಗಳು, ಸುಳ್ಳು ಮೋಸಗಳಲ್ಲಿ ನಡೆಯುತ್ತಿರುವಂತಹ ಹಲವಾರು  ವ್ಯಾಪಾರಗಳು ಇವುಗಳನ್ನು ನೋಡಿ ಭೂಮಿತಾಯಿ ಅದೆಷ್ಟು ನೊಂದು ಕೊಳ್ಳುತ್ತಿದ್ದಾಳೆಯೋ ಏನೋ. ನಾನೇನು ನೀನೇನು ಇದು ನನ್ನ ಭೂಮಿ ಇದು ನಿನ್ನ ಭೂಮಿ ಇದು ಈ ಧರ್ಮದವರಿಗೆ ಸೇರಿದ ಭೂಮಿ ಇದು ಆ ಧರ್ಮದವರಿಗೆ ಸೇರಿದ ಭೂಮಿ ಎಂದು ಮೊದಲಾಗಿ ನಾವು ಕಚ್ಚಾಡಿಕೊಳ್ಳುತ್ತಿರುವಾಗ ಆ ಭೂಮಿ ತಾಯಿ ಅದೆಷ್ಟು ನಗುತ್ತಿರಬಹುದು? ಜಗವೆಲ್ಲ ನನ್ನದು ಆದರೆ ಈ ಮನುಷ್ಯರು ನನ್ನನ್ನು ನಾನು ಎಂದು , ನನ್ನ ಜಾಗ ಎಂದು ಕಚ್ಚಾಡಿಕೊಳ್ಳುತ್ತಿರುವವರಲ್ಲ! ಎಂಥ ಮೂರ್ಖರು ಇವರು ಸರಿಯಾಗುವುದು ಯಾವಾಗ? ಬದುಕಿನಲ್ಲಿ ಸಾಧಿಸಲು ಅದೇನೇನೋ ವಿಷಯಗಳಿವೆ, ಅವುಗಳನ್ನು ಸಾಧಿಸಿ ಜೀವನವನ್ನು ಸಾರ್ಥಕ ಗೊಳಿಸುವಲ್ಲಿ ಬದುಕಿನ ಸತ್ವ ಅಡಗಿದೆ. ಅದರ ಬದಲಾಗಿ ಧರ್ಮ ಧರ್ಮದ ಬಗ್ಗೆ ಹಾಗೇನೇ ಜಾತಿ ಜಾತಿಯ ಬಗ್ಗೆ ವೇದ ಪಕ್ಷಗಳ ಬಗ್ಗೆ ಮಾತನಾಡಿ ಜಗಳವಾಡಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಅನ್ನಿಸುತ್ತಿಲ್ಲವೇ? ಹಲವಾರು ಪಕ್ಷಗಳು ಧರ್ಮಗಳ ಬಗ್ಗೆ ಮತ್ತು ಜಾತಿ ಜಾತಿಗಳ ನಡುವೆ ವಿಷ ಬೀಜವನ್ನು ಬಿತ್ತಿ ನಾವು ಮೇಲೆ ಅವರು ಕೆಳಗೆ ಎನ್ನುತ್ತಾ ಅಂಧಕಾರದಲ್ಲಿ ದರ್ಪವನ್ನು ವಿರುದ್ಧ ತಾವು ಚೆನ್ನಾಗಿ ಬಾಳದೆ,  ಇಲ್ಲಿರುವ ಇತರರಿಗೂ ಚೆನ್ನಾಗಿ ಬಾಳಲು ಬಿಡದೆ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವ ಹಲವಾರು ಜನರಿದ್ದಾರೆ. ಕೆಲವೊಬ್ಬರು ಬದುಕನ್ನು ಸಂತೆ ಮಾರುಕಟ್ಟೆ ಹಾಕಿ ಬೇಕಾಬಿಟ್ಟಿ ಚೆಲ್ಲಿ ಸದುಪಯೋಗಪಡಿಸಿಕೊಳ್ಳದೆ ಇಲ್ಲಿಂದ ತೆರಳುವವರಿದ್ದಾರೆ. 
    ದೇವರು, ಜಾತಿ,  ಧರ್ಮ ಇವೆಲ್ಲವೂ ಕೂಡ ಇರಲಿ. ತನಗೆ ಇಷ್ಟ ಬಂದ ದೇವರನ್ನು ಪೂಜಿಸಲಿ ತನಗೆ ಇಷ್ಟ ಬಂದ ಜಾತಿಯಲ್ಲಿ ಮುಂದುವರೆಯಲಿ , ತನಗೆ ಇಷ್ಟ ಬಂದ ಧರ್ಮವನ್ನು ಸ್ವೀಕರಿಸಲಿ , ಅದನ್ನು ವಿರೋಧಿಸುವವರು ಈ ಪ್ರಪಂಚದಲ್ಲಿ ಯಾರೂ ಇಲ್ಲ. ಆದರೆ ಇತರ ಧರ್ಮಗಳನ್ನು ಆಚರಿಸುವವರಿಗೆ ಅವರಷ್ಟಕ್ಕೆ ಅವರನ್ನು ಬದುಕಲು ಬಿಡದೆ ಉಪದ್ರ ಕೊಡುವ ಕಾರ್ಯ ಸಲ್ಲದು. ಯಾವ ದೇವರು ಕೂಡ ಕೀಳಲ್ಲ, ಯಾವ ಧರ್ಮವು ಮೇಲಲ್ಲ , ಯಾವ ಜಾತಿಯು ಮೇಲು ಕೇಳಲ್ಲ! ತತ್ವಗಳ ಆಂತರ್ಯದಲ್ಲಿ ಹೊಕ್ಕಿ ನೋಡಿದಾಗ ಪ್ರತಿಯೊಂದು ಜಾತಿ ಧರ್ಮ ದೇವರು ಹೇಳುವುದಿಷ್ಟೇ ,  ತಾವು ಚೆನ್ನಾಗಿ ಬದುಕಿ ಮತ್ತು ಇತರರನ್ನು ಚೆನ್ನಾಗಿ ಬದುಕಲು ಬಿಡಿ. ತಾವು ಉತ್ತಮ ಮಾರ್ಗದಲ್ಲಿ ನಡೆಯಿರಿ ಮತ್ತು ಇತರರಿಗೆ ಉತ್ತಮ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿ. ಶಿಕ್ಷಣಕ್ಕೆ ಮತ್ತು ಜ್ಞಾನಕ್ಕೆ ಆದ್ಯತೆ ನೀಡಿ.  ಇದು ಸರ್ವಕಾಲಕ್ಕೂ ಬೇಕಾದದು. ಗುರುಗಳಿಗೆ ಹಿರಿಯರಿಗೆ ಗೌರವ ಕೊಡಿ ಕಿರಿಯರನ್ನು ಪ್ರೀತಿಯಿಂದ ಆಧರಿಸಿ, ಸತ್ಕರಿಸಿ, ಕಷ್ಟಪಟ್ಟು ದುಡಿಯಿರಿ , ಯಾರಿಗೂ ಮೋಸ ಮಾಡಬೇಡಿ. ಒಳ್ಳೆಯ ಕೆಲಸಗಳನ್ನು ಮಾಡಿ ಮತ್ತು ಅದರ ಉತ್ತರಕ್ಕೆ ದೇವರ ಮೇಲೆ ಬಿಟ್ಟುಬಿಡಿ. ಎಲ್ಲರೂ ನಮ್ಮ ಹಾಗೆ ಎಲ್ಲರೂ ಒಂದೇ ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಬೇಕು ಎನ್ನುವಂತಹ ಮಾತು ಅಲ್ಲವೇ? ಆ  ಮಾತನ್ನು ನಾವೆಲ್ಲಾ  ಪರಿಪಾಲಿಸಿಕೊಳ್ಳಬೇಕು. 
     
       ಮಂದಿರ ದೇವಸ್ಥಾನ ಮಸೀದಿ ಇವುಗಳೆಲ್ಲ ಎರಡನೆಯದು. ಇವುಗಳಲ್ಲಿ ಮೊದಲನೆಯದು ಮಾನವನ ಹೃದಯವೆಂಬ ಗರ್ಭಗುಡಿ. ಈ ಹೃದಯದ ಗರ್ಭಗುಡಿಯಲ್ಲಿ ಪೋಷಕರನ್ನು ತನ್ನದೇ ದೇವರಾಗಿ ಆರಾಧಿಸಿ, ಅವರಿಗೆ ಯಾವುದೇ ರೀತಿಯ ನೋವು ಕೊಡದೆ, ಅವರನ್ನು ಚೆನ್ನಾಗಿ ನೋಡಿಕೊಂಡಾಗ ಅವರ ಆಶೀರ್ವಾದವೇ ವರವಾಗಿ ಪರಿಣಮಿಸುತ್ತದೆ. ಅದಕ್ಕಿಂತ ದೊಡ್ಡ ದೇವರು, ಪೂಜೆ ಬೇಕಿಲ್ಲ. ಇದರ ಜೊತೆ ಜೊತೆಗೆ ಪರರಿಗೆ ಉಪಕಾರ, ಒಳ್ಳೆಯ ಭಾವನೆ, ಉದಾತ್ತ ಆಲೋಚನೆ ಇರುವ ಮನುಷ್ಯ ಯಾವ ದೇವರನ್ನು ನಂಬದೆ ಹೋದರೂ, ಯಾವ ಮಂತ್ರ ಪಠಣ ಮಾಡದೆ ಇದ್ದರೂ ಚೆನ್ನಾಗಿಯೇ ಬದುಕುತ್ತಾನೆ. 
    ಬದುಕು ನಾಲ್ಕೇ ದಿನ. ಅಷ್ಟು ದಿನ ದ್ವೇಷ, ಅಸೂಯೆ, ಮತ್ಸರ, ಹೊಟ್ಟೆಕಿಚ್ಚು, ಕೋಪ ಎಲ್ಲವನ್ನೂ ನಮ್ಮ ಮನಸ್ಸಿನ ಒಳಗೆ ತುಂಬಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳುವ ಬದಲು ತಾಳ್ಮೆ, ಒಂಚೂರು ಮೌನ, ಕ್ಷಮೆ, ಸ್ಪಂದನೆ, ಮಿಡಿತ, ಒಂದಿಷ್ಟು ಸಾಂತ್ವನ, ಸಮಾನತೆ ಇವುಗಳನ್ನು ತುಂಬಿಕೊಂಡು ಏಕೆ ಹಗುರಾಗಿ ಬದುಕನ್ನು ಖುಷಿಯತ್ತ ಕೊಂಡುಹೋಗಬಾರದು ಅಲ್ಲವೇ? ನೀವೇನಂತೀರಿ?
@ಹನಿಬಿಂದು@
03.02.2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -221

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-221

        ಯಾವುದೇ ಕಲಿಕೆಯು ಕೂಡ ಇಷ್ಟಪಟ್ಟು ಸಂತಸದಿಂದ ಕಲಿಯಬೇಕೇ ಹೊರತು ಸ್ಪರ್ಧೆಗಾಗಿ ಕಲಿಯುವುದು ಅದು ಉತ್ತಮ ಕಲಿಕೆಯಾಗಿ ಪರಿಣಮಿಸುವುದಿಲ್ಲ. ಬದಲಾಗಿ ಮಗು ಜೀವನ ಪೂರ್ತಿ ಸ್ಪರ್ಧಿಯಾಗಿ ಬದುಕಬೇಕಾಗುತ್ತದೆ. ಇದು ನನ್ನ ಅನಿಸಿಕೆ. ಇಂದಿನ ಶಿಕ್ಷಣ ಕ್ರಮವು ಎಲ್ಲ ವಿದ್ಯಾರ್ಥಿಗಳನ್ನು ಕೂಡ  ಸ್ಪರ್ಧಿಗಳ ರೀತಿಯಲ್ಲಿ ಬೆಳೆಸುತ್ತಾ ಜೀವನದುದ್ದಕ್ಕೂ ಅವರು ಸ್ಪರ್ಧೆಯಲ್ಲೇ ಬೆಳೆಸುವ ಹಾಗೆ ಮಾಡುತ್ತದೆ ಎಂದು ನನ್ನ ಅನಿಸಿಕೆ. ಜೀವನದುದ್ದಕ್ಕೂ ಮಗುವೊಂದು ತಾನು ಇತರರಿಗಿಂತ ಮುಂದೆ ಸಾಗಬೇಕು ತನ್ನ ಜೊತೆಗಿರುವವರಿಗಿಂತ ನಾನು ಮಾಡಿದ ಕಾರ್ಯವೇ ಉತ್ತಮವಾಗಬೇಕು ಹೀಗೆ ಸ್ಪರ್ಧೆಯಾಗಿಯೇ ಬೆಳೆಯುತ್ತಾ ಬಂದರೆ ಅವನ ಜೀವನದಲ್ಲಿ ಅವನು ಕಾಣುವ ಸುಖವಾದರೂ ಏನು? ಒಂದನೇ ತರಗತಿಯಿಂದ ಪಿಯುಸಿ ಅವರಿಗೆ ಅಂಕಗಳಿಗಾಗಿ ಸ್ಪರ್ಧೆ, ನಡು ನಡುವೆ ವಿವಿಧ ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗಾಗಿ ಸ್ಪರ್ಧೆ, ಮನೆಯಲ್ಲಿ ಇತರ ಮಕ್ಕಳೊಂದಿಗೆ ಪೈಪೋಟಿ! ಹಾಗಾದರೆ ಜೀವನದ ಸವಿಯನ್ನು ಸವಿಯುವುದು ಯಾವಾಗ? ನೀವು ಹೇಳಬಹುದು ಇದು ಯಾಂತ್ರಿಕರು ಯುಗ ವೈಜ್ಞಾನಿಕ ಯುಗ ಹಾಗೂ ಸ್ಪರ್ಧೆಗಳ ಯುಗವೆಂದು. ಆದರೆ ಮನುಷ್ಯನ ಜನ್ಮವು ಒಂದಿಷ್ಟು ವರ್ಷ ಮಾತ್ರ. ಹತ್ತು ವರ್ಷಗಳು ಅವನ ಸ್ಪರ್ಧೆಗಳಲ್ಲಿಯೇ ಬದುಕಿದರೆ, ಸಮಾಜ,ಕುಟುಂಬ,  ಕುಟುಂಬದಲ್ಲಿರುವ ಸಂತೋಷ,  ನೆಮ್ಮದಿ ಇವುಗಳೆಲ್ಲ ಹೇಗೆ ಸಾಧ್ಯ? ನಾವು ನಮ್ಮ ಬಂಧುಗಳ ಮದುವೆಯಂತೆ ಹೋಗುತ್ತಿದ್ದೇವೆ ಎಂದಾದರೆ ನಾನು ಡಾಕ್ಟರ್ ನಾನು ಇಂಜಿನಿಯರ್ ನಾನು ಶಿಕ್ಷಕ ನಾನು ಮೆಕ್ಯಾನಿಕ್ ಇವನ್ನೆಲ್ಲ ಬದಿಗಿಟ್ಟು ಬಂಧುವಾಗಿ ನಮ್ಮ ಉತ್ತಮ ಸಮಯವನ್ನು ಅವರಿಗೆ ಕೊಟ್ಟು ನಮ್ಮ ಮಾನಸಿಕ ಸಂತೋಷವನ್ನು ಅವರ ಜೊತೆಗಿದ್ದು ಅವರ ಸಂತೋಷದಲ್ಲಿ ನಾವು ಕೂಡ ಪಾಲು ಪಡೆಯಲು ಹೋಗುತ್ತವೆ. ಅಲ್ಲಿ ಜೀವನದ ಯಾವ ಸ್ಪರ್ಧೆಗಳು ಇಲ್ಲ . ಬದಲಾಗಿ ಮಾನವ ಬದುಕಿನ ಒಂದು ಮುಖ ಅಷ್ಟೇ. ಅಲ್ಲಿ ಸಿಗುವ ಸಂತೋಷ ಖುಷಿ ಬದುಕಿನಲ್ಲಿ ಮತ್ತೆಂದೂ ನಾವು ಪಡೆಯಲಾರೆವು. ಹಾಗೆಯೇ ಜಾತ್ರೆ ಕೋಲ ಮನೆಯಲ್ಲಿನ ಪೂಜೆಗಳು ಇವುಗಳಲ್ಲಿ ಸಿಗುವ ಮಾನಸಿಕ ನೆಮ್ಮದಿಯು ಸ್ಪರ್ಧೆಗಳಲ್ಲಿ ಸಿಗಲಾರದು. ಒಂದು ವೇಳೆ ಬದುಕಿನಲ್ಲಿ ಸ್ಪರ್ಧೆ ಕಲಿಕೆ ಅಥವಾ ಸ್ಪರ್ಧೆ ಮುಖ್ಯ ಎನ್ನುವುದಾದರೆ ಯಾರು ಕೂಡಾ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿ ಬರುತ್ತಿರಲಿಲ್ಲ ಅಥವಾ ಪ್ರಾರ್ಥನೆಗೂ ಹೋಗುತ್ತಿರಲಿಲ್ಲ. ಮಾನವನ ಬದುಕಿನಲ್ಲಿ ಅವನ ಬದುಕಿಗಾಗಿ ಒಂದಷ್ಟು ಹಣವನ್ನು ಗಳಿಸುವುದು ತುಂಬಾ ಮುಖ್ಯ. ಆದರೆ ಅದಕ್ಕಿಂತಲೂ ಮುಖ್ಯ ಮಾನಸಿಕ ನೆಮ್ಮದಿ. ನೆಮ್ಮದಿ ಇಲ್ಲದೆ ಇತ್ತು ಎಷ್ಟು ದುಡಿದರು ಏನು ಫಲ? ದುಡಿದ ದುಡ್ಡನ್ನೆಲ್ಲ ಆಸ್ಪತ್ರೆಗೆ ಹಾಕಬೇಕಾದ ಅನಿವಾರ್ಯ ಕಾರಣ ಮಾನಸಿಕ ನೆಮ್ಮದಿ ಇಲ್ಲದವನಿಗೆ ಬರುತ್ತದೆ. ಆದುದರಿಂದಲೇ ಇತ್ತೀಚಿನ ದಿನಗಳಲ್ಲಿ ಮಠ, ಧ್ಯಾನ,  ಯೋಗ ಮೊದಲಾದವು ತುಂಬಾ ಹೆಸರುವಾಸಿಯಾಗಿವೆ. ಕರೋನಾದ ಸಮಯದಲ್ಲಿ ಮನುಷ್ಯರು ಮದ್ದು ಕುಡಿದುದಕ್ಕಿಂತ ಹೆಚ್ಚು ಕಷಾಯ ಕುಡಿದಿದ್ದಾರೆ. ಕಾರಣ ನೆಮ್ಮದಿ. 
   ಇತ್ತೀಚೆಗೆ ವಿದ್ಯಾರ್ಥಿಗಳು ಹಾಗೂ ಹಿರಿಯರು ಮಾನಸಿಕ ನೆಮ್ಮದಿಯನ್ನು ಹುಡುಕಿಕೊಂಡು ಬದುಕುತ್ತಿದ್ದಾರೆ. ಅದಕ್ಕೆ ಇಂಜಿನಿಯರಿಂಗ್ ಮಾಡಿದ ಅಥವಾ ಎಂಬಿಎ ಮಾಡಿದ, ದೊಡ್ಡ ದೊಡ್ಡ ನಗರಗಳಲ್ಲಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಂತಹ ಹಲವಾರು ಜನರು ಅಲ್ಲಿನ ಐದಂಕಿ ಸಂಬಳದ ಕೆಲಸವನ್ನು ಬಿಟ್ಟು ಮನಸ್ಸಿಗೆ ನೆಮ್ಮದಿಯಾಗಿ ನಾವು ಹಳ್ಳಿಗಳಲ್ಲಿ ಬದುಕುತ್ತೇವೆ ಎಂದು ಹಳ್ಳಿಯದ್ದ ಮುಖ ಮಾಡಿ ಕೃಷಿಯನ್ನು ಅವಲಂಬಿಸಿಕೊಂಡು ಬದುಕುತ್ತಿದ್ದಾರೆ. ಅದರಲ್ಲೂ ಕೂಡ ಸಾರ್ಥಕತೆ ಕಂಡು ಉತ್ತಮವಾದ ಜೀವನವನ್ನು ನಡೆಸುತ್ತಿದ್ದಾರೆ. ಅಂದರೆ ಮನುಷ್ಯ ಕೊನೆಯದಾಗಿ ಹಣಕ್ಕಿಂತಲೂ ಹೆಚ್ಚಾಗಿ ಮಾನಸಿಕ ನೆಮ್ಮದಿಗೆ ಬೆಲೆ ಕೊಡುತ್ತಾನೆ ಎಂದು ಅರ್ಥ ಅಲ್ಲವೇ?
   ತನ್ನ ಹೆಸರಿನ ಮುಂದೆ ಹಲವಾರು ಡಿಗ್ರಿಗಳಿವೆ, ಎಲ್ಲಾ ಪದವಿಗಳನ್ನು ಮೊದಲ ರಾಂಕ್ ಪಡೆದೆ ಉತ್ತೀರ್ಣನಾಗಿದ್ದಾನೆ ಎಂದಿದ್ದರೂ ಕೂಡ ಅವನು ಮಾನಸಿಕವಾಗಿ ಇನ್ನೊಬ್ಬರ ಜೊತೆ ಹೊಂದಾಣಿಕೆಯಿಂದ ಬಾಳಿ ಬದುಕಲು ಸಾಧ್ಯವಿಲ್ಲ ಎಂದಾದರೆ ಎಲ್ಲವೂ ಯಾವ ಪ್ರಯೋಜನಕ್ಕೆ ಬರುತ್ತದೆ? ಅವನಿಗೆ ಹಲವಾರು ಜನರೊಡನೆ ಬೆರೆತು ಅವರಿಗೆ ಬೇಕಾದ ಹಾಗೆ ಹಾಗೂ ತನಗೆ ಬೇಕಾದ ಹಾಗೆ ಅವರೊಂದಿಗೆ ಹೊಂದಿಕೊಂಡು ಬದುಕುವಂತಹ ಕಲಿಕೆ ಕೊಡಬೇಕಾಗುತ್ತದೆ ಅಲ್ಲವೇ? ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ನೆಮ್ಮದಿ ಇದ್ದರೆ ಮಾತ್ರ ಬದುಕು ಸಂತ ಸಮಯವಾಗಿ ಇರುತ್ತದೆ. ಆ ನೆಮ್ಮದಿ ಇಲ್ಲದ ಬದುಕು ಸ್ಪರ್ಧೆಯಾಗಿಯೇ ಉಳಿದರೆ ಬದುಕು ನರಕವಾಗಿ ಹೋಗುತ್ತದೆ. ಅದಕ್ಕಾಗಿ ಹಲವಾರು ಪಾಶ್ಚಾತ್ಯರು ಇಂದು ಭಾರತದ ಕಡೆಗೆ ಮುಖ ಮಾಡಿ ಇಲ್ಲಿನ ಧ್ಯಾನ ಯೋಗಗಳನ್ನು ಕಲಿತು ಮಾನಸಿಕ ನೆಮ್ಮದಿಯನ್ನು ಹುಡುಕುತ್ತಿದ್ದಾರೆ. ವಿವಿಧ ಸ್ವಾಮೀಜಿಗಳು ನಡೆಸುವ ಭಜನೆ ಸತ್ಸಂಗ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಮನುಷ್ಯನ ಪಂಚೇಂದ್ರಿಯಗಳ ಜೊತೆ ಇರುವ ಆರನೆಯ ಇಂದ್ರಿಯ ಎಂದರೆ ಅದು ಮನಸ್ಸು ಮತ್ತು ಆ ಮನಸ್ಸನ್ನು ನಾವು ಆರೋಗ್ಯ ರಹಿತವಾಗಿ ಇಟ್ಟುಕೊಳ್ಳುವುದು  ಅತ್ಯವಶ್ಯಕ. ಅದಕ್ಕಾಗಿ ನಮಗೆ ಸ್ಪರ್ಧೆಯಿಂದ ಕಲಿಯುವ ವಿದ್ಯಾ ಬದಲಾಗಿ ಮಾನಸಿಕ ಸಂತೋಷ ನೀಡುವ ವಿದ್ಯ ಬೇಕಾಗಿದೆ. ಗುರುಕುಲ ಪದ್ಧತಿಯಲ್ಲಿ ಕಲಿಸುತ್ತಿದ್ದಂತಹ ವಿವಿಧ ವ್ಯಕ್ತಿಗಳು ಸಂತಸವನ್ನು ನೀಡುತ್ತಿದ್ದವು. ಈಗಿನ ಗಣಿತ ಮತ್ತು ವಿಜ್ಞಾನದ ಹೇರಿಕೆಯು ಮಕ್ಕಳ ಮೇಲೆ ಯಾವ ಪರಿಣಾಮ ಬೀರಿದೆ ಎಂದರೇನು? ಮಕ್ಕಳಿಗೆ ಶಾಲೆಯಿಂದ ಹೊರಗುಳಿಯುವುದೆಂದರೆ ಬಹಳ ಇಷ್ಟ ಅಲ್ಲದೆ ಮಾನಸಿಕ ಹೊರೆ. ಹೊರಗೆ ಬಂದು ಆಟ ಆಡುವಂತಿಲ್ಲ ಬೇರೆ ತರ ಮಕ್ಕಳು ಬೆರೆಯುವಂತಿಲ್ಲ ಪ್ರತಿ ಕ್ಷಣವೂ ನಮ್ಮ ಕೂಗು ಒಂದೇ ಕಲಿ ಓದು ಬರೆ. ಇಷ್ಟೆಲ್ಲಾ ಆದಮೇಲೆ ಒಳ್ಳೆಯ ಕಡೆ ಕೆಲಸ ಸಿಕ್ಕಿದರೆ ಸಂತೋಷ ಇಲ್ಲದಿದ್ದರೆ ಅವನ ಬದುಕು ಮತ್ತು ಬೇಸರವೇ ಆಗಿ ಹೋಗುತ್ತದೆ. ಉತ್ತಮ ಕೆಲಸ ಸಿಕ್ಕಿದರು ಕೂಡ ಉತ್ತಮ ಬಾಳ ಸಂಗಾತಿ ಅಥವಾ ಬಹಳ ಸಂಗಾತಿಯೊಂದಿಗೆ ಸಂಬಂಧವೂ ಚೆನ್ನಾಗಿರಲಿಲ್ಲವೆಂದಾದರೆ ಎಷ್ಟು ದುಡಿದರು ಏನು ಪ್ರಯೋಜನ ಮತ್ತು ಬಾಳು ಹೊರಡಲಾಗಿ ಹೋಗುತ್ತದೆ. ಆಗ ನಾನು ಮತ್ತೆ ಮಾನಸಿಕ ನೆಮ್ಮದಿಗಾಗಿ ಹುಡುಕಾಟ ತೊಡಗುತ್ತಾನೆ.
      ಇಂದು ಸಮಾಜದಲ್ಲಿ ಬದುಕುವವರು ಹೆಚ್ಚಿನವರು ವಿದ್ಯಾವಂತರೇ ಆಗಿದ್ದಾರೆ.  ಆದರೆ ಅವರು ಸ್ಪರ್ಧೆಯಲ್ಲಿ ಕಲಿತವರು ಅಲ್ಲ, ಬದಲಾಗಿ ನಾವು ಕಲಿತಿದ್ದೇವೆ ಎಂದು ಗೊಟ್ಟಿರದೆ ತನ್ನಷ್ಟಕ್ಕೆ ತಮ್ಮ ಗುರಿ ಸಾಧನೆಗಾಗಿ ಕಲಿತವರು. ಹಿಂದಿನ ಶಿಕ್ಷಣ ಮಟ್ಟ ಅವರನ್ನು ಹೇಗೆ ಬೆಳೆಸಿದೆ ಎಂದರೆ ಹಿರಿಯರಿಗೆ ಕೊಡ ಬೇಕಾದ ಗೌರವ, ನಡೆ ನುಡಿ, ನಾಲ್ಕು ಜನರ ಜೊತೆ ಬೆರೆತು ಬಾಳುವ ಪಾಠ ಕಲಿಸಿದೆ. ಇಂದು ಹಾಗಲ್ಲ, ಮಗ ಇಂಜಿನಿಯರ್ ಆಗಿದ್ದರೂ ಕೂಡಾ ಮನೆಗೆ ಬಂದ ಬಂಧುಗಳ ಜೊತೆ ಅವನು ಕಂಪ್ಯೂಟರ್ ಬಿಟ್ಟು ಹೊರ ಬಂದು ಮಾತನಾಡುವುದು ಎಂದರೆ ಮುಖ್ಯ ಮಂತ್ರಿಗಳು ತಮ್ಮ ಆಫೀಸ್ ಬಿಟ್ಟು ಹೊರ ಬಂದು ಸಾಮಾನ್ಯ ಜನರ ಜೊತೆ ಮುಕ್ತ ಮಾತುಕತೆ ನಡೆಸಿದ ಹಾಗೆ. ಮಾತನಾಡದೆ ಅವರಿಗೆ ಯಾವ ಭಾಷೆಯೂ ಸರಿಯಾಗಿ ಬರುವುದೂ ಇಲ್ಲ. ಸಂಸ್ಕೃತಿ ಎಲ್ಲಾ ಬದಿಗೆಯೆ ಬಿಡಿ, ಇನ್ನು ಹುಡುಗಿ ಆಗಿದ್ದರೆ ಉತ್ತಮ ಬಟ್ಟೆ ಧರಿಸುತ್ತಾಳೆ ಎಂದರೆ ಗ್ರೇಟ್! 
   ಸಂಸ್ಕೃತಿ ಉಳಿಯಲಿ, ಭಾಷೆ, ಭಾವನೆ ಬೆಳೆಯಲಿ. ಕಲಿಕೆ ಖುಷಿಯಿಂದ ಸಾಗಲಿ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
27.01.2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -220

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 220

        ಅದೆಷ್ಟೋ ಬಾರಿ ಒಂಟಿತನವೇ ನನಗೆ ಬಹಳ ಅಪ್ಯಾಯಮಾನ ಎನಿಸುತ್ತದೆ. ಬಹಳ ಜನರಿಗೆ ಒಂಟಿತನವೆಂದರೆ ಬೋರ್. ಒಂಟಿಯಾಗಿ ಬದುಕಲು ಸಾಧ್ಯವೇ ಇಲ್ಲ ಎಂದು ಅಂದುಕೊಂಡವರು ಇನ್ನ ಎಷ್ಟೋ ಜನ. ಆದರೆ ನಿಜವಾದ ಒಂಟಿತನದ ಸುಖವನ್ನು ಅನುಭವಿಸಿದವರು ಬಹಳ ಕಡಿಮೆ ಜನ. ಅದೆಷ್ಟೋ ಮಂದಿ ಮದುವೆಯಾಗುವ ಮೊದಲು ನಮಗೊಂದು ಜೋಡಿ ಬೇಕು,  ಉತ್ತಮವಾದ ವಧು ಅಥವಾ ವರ ಸಿಗಬೇಕು ಎಂದೆಲ್ಲ ಆಸೆ ಪಡುತ್ತಾರೆ. ಆದರೆ ಮದುವೆಯಾಗಿ ಒಂದೆರಡು ವರ್ಷಗಳ  ಬಳಿಕ ಅವರ ಆಸೆಗಳೆ ಬೇರೆಯಾಗಿರುತ್ತವೆ. "ನಾನು ಯಾಕಾದರೂ ಮದುವೆಯಾದೆನೋ ಏನೋ.. ನಾನು ಒಬ್ಬನೇ ಅಥವಾ ಒಬ್ಬಳೇ ಇರಬೇಕಾಗಿತ್ತು. ನನ್ನ ಯಾವ ಆಸೆ ಆಕಾಂಕ್ಷೆಗಳು ಈಡೇರಲಿಲ್ಲ,  ನನ್ನ ಯಾವ ಕನಸುಗಳು ಕೂಡ ನನಸಾಗಲಿಲ್ಲ. ಬದುಕಿನಲ್ಲಿ ನಾನು ಅಂದುಕೊಂಡಿದ್ದೆ ಒಂದು ಆದದ್ದೆ ಇನ್ನೊಂದು. ನಾನು ಮದುವೆಯಾಗಬಾರದಾಗಿತ್ತು" ಎಂದೆಲ್ಲ ಯೋಚಿಸುತ್ತಾ ಇರುತ್ತಾರೆ. ಆದರೆ ಆಗ ಕಾಲ ಮಿಂಚಿ ಹೋಗಿರುತ್ತದೆ. ಕಟ್ಟಿಕೊಂಡದ್ದನ್ನು ಇಷ್ಟವಿಲ್ಲದಿದ್ದರೂ ಸಮಾಜಕ್ಕಾಗಿ ಜೊತೆಗೆ ಬಾಳುವವರು ಸಮಾಜದಲ್ಲಿ ಅದೆಷ್ಟೋ ಮಂದಿ ಇದ್ದಾರೆ. ಎರಡು ಕುಟುಂಬಗಳ ಮರ್ಯಾದೆ ಉಳಿಸಲು ತನ್ನ ಬದುಕನ್ನು ಬಲಿ ಕೊಟ್ಟು, ಇಷ್ಟವಿಲ್ಲದ ಹುಡುಗಿಯ ಜೊತೆಗೆ ಅಥವಾ ಇಷ್ಟವೇ ಇಲ್ಲದ ಹುಡುಗನೊಂದಿಗೆ ಯಾಂತ್ರಿಕವಾಗಿ ಬದುಕುತ್ತಿರುವ, ಹೊರ ಜಗತ್ತಿಗೆ ಮಾತ್ರ ನಗುಮುಖದಿಂದ ವ್ಯವಹರಿಸುತ್ತಿರುವ, ಒಳಗೊಳಗೆ ನಿತ್ಯ ಬೇಯುತ್ತಿರುವ ಮಾನವ ಮನಗಳು ಅದೆಷ್ಟೋ. ಒಂದಷ್ಟು ಸಿರಿವಂತರು ಎಂದು ಹಣೆ ಪಟ್ಟಿ ಕಟ್ಟಿಕೊಂಡವರು ಮತ್ತು ಧೈರ್ಯವಂತರು ಡಿವೋರ್ಸ್ ಎಂಬ ಸರ್ಟಿಫಿಕೇಟ್ ಅನ್ನು ಪಡೆದು ಬದುಕಿನಲ್ಲಿ ಏನೋ ಒಂದು ರೀತಿಯಲ್ಲಿ ಬದುಕುತ್ತಿದ್ದರೆ ಇನ್ನುಳಿದ ಇತರ ಎಲ್ಲರ ಕಥೆ ಅತ್ತ ಒಂಟಿತನಕ್ಕೂ ಹೋಗಲಾಗದೆ, ಇತ್ತ ಸಂಸಾರದ ಒಳಗೂ ಬದುಕಲಾಗದೆ ಕೆಲವರು ಆತ್ಮಹತ್ಯೆಗೆ ಶರಣಾದರೆ ಇನ್ನು ಕೆಲವರು ಹೊಸದಾದ ಹೊರಗೊಂದು ಅನೈತಿಕ ಎಂದು ಹೇಳುವ ಸಂಬಂಧವಿಟ್ಟುಕೊಂಡು ಅದರಲ್ಲಿ ಸುಖ ಕಂಡರೆ,  ಇನ್ನು ಕೆಲವರು "ಇದೇ ನನ್ನ ಬದುಕು,  ದೇವರು ನನಗೆ ಕಷ್ಟವನ್ನೆ ಇಟ್ಟಿದ್ದಾರೆ, ಈ ಬದುಕು ಇರುವವರೆಗೂ ನನ್ನ ಕಷ್ಟವನ್ನು ಕೇಳುವವರು ಯಾರು ಇಲ್ಲ, ನನ್ನದೊಂದು ಯಾವ ತರದ ಬದುಕೊ ಯಾರಿಗೂ ತಿಳಿಯದು, ನಾನು ಯಾಕಾದರೂ  ಬದುಕಿದ್ದೇನೋ ಏನೋ..." ಎಂದು ತನ್ನ ದುರದೃಷ್ಟವನ್ನು ಮತ್ತು ಆ ದೇವರನ್ನು ಹಳಿಯುತ್ತಾ, ಇನ್ನು ಕೆಲವರು ಜ್ಯೋತಿಷ್ಯ ದೇವರು ದೈವಗಳು ಇವುಗಳ ಮೇಲೆ ನಂಬಿಕೆ ಇಟ್ಟು ಹಲವಾರು ಪೂಜೆ ಪುನಸ್ಕಾರಗಳನ್ನು ಮಾಡುತ್ತಾ ಮುಂದೊಂದು ದಿನ ನನ್ನ ಬದುಕು ಸರಿ ಹೋಗಬಹುದು ಎನ್ನುವ ಭರವಸೆಯಿಂದ ಬದುಕುತ್ತಿರುತ್ತಾರೆ. 
          ಇನ್ನು ಕೆಲವರು ಹಾಗಲ್ಲ ತಮ್ಮ ಮಾನಸಿಕ ಒಂಟಿತನ ಮರೆತು ದಿಟ್ಟತನದಿಂದ ಸಮಾಜವನ್ನು ಎದುರಿಸಿ, ಸಮಾಜ ಸೇವಕರಾಗಿ , ಯಾರಿಗೂ ಹೆದರದೆ, ಸಮಾಜದಲ್ಲಿ ತನ್ನ ಬದುಕನ್ನು ಹೊರೆಯಾಗಿಸಿಕೊಳ್ಳದೆ,  ವ್ಯಾಪಾರವನ್ನು ಆರಂಭಿಸಿ ಹಲವಾರು ಜನರಿಗೆ ಕೆಲಸ ಕೊಟ್ಟು ತನ್ನಿಂದಾಗಿ ಅವರಿಗೂ ಉದ್ಯೋಗವನ್ನು ಕೊಡುವುದರ ಜೊತೆಗೆ ಅವರ ಬಾಳನ್ನು ಕಟ್ಟಿಕೊಟ್ಟಿರುತ್ತಾರೆ. ಹಲವಾರು ಸಾಮೂಹಿಕ ವಿವಾಹಗಳನ್ನು ಮಾಡಿಸಿಕೊಡುವುದು, ಬಡವರಿಗೆ ಸಹಾಯ ಮಾಡುವುದು, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಸಹಕಾರ ನೀಡುವುದು, ಆಸ್ಪತ್ರೆಗಳಲ್ಲಿ ರೋಗಿಯ ಜೊತೆಗೆ ಕಳೆಯುತ್ತಿರುವವರಿಗೆ ಊಟ ಉಪಚಾರ ಹಣ್ಣುಗಳನ್ನು ನೀಡುವುದು, ಮನೆಯ ಯಜಮಾನನಿಗೆ ಆದ ತೊಂದರೆಯಿಂದ ಕಷ್ಟಪಡುತ್ತಿರುವ ಹಲವಾರು ಬಡವರ ಮನೆಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡುವುದು, ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಡುವುದು, ಬಡವರ ಮಕ್ಕಳನ್ನು ಯಾವುದೇ ಖರ್ಚಿಲ್ಲದೆ ಕಲಿಸುವಂತಹ ಶಾಲೆಗಳನ್ನು ತೆರೆಯುವುದು, ಎಸ್ ಎಸ್ ಎಲ್ ಸಿ ಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಟೆಕ್ನಿಕಲ್ ಕೋರ್ಸ್ ಗಳನ್ನು ಮಾಡಿಸಿ ಅವರು ಕೂಡ ಜೀವನದಲ್ಲಿ ನೆಲೆ ನಿಲ್ಲುವ ಹಾಗೆ ಮಾಡುವುದು, ಅನಾಥ ಮಕ್ಕಳನ್ನು ತಂದು ಸಾಕುವುದು, ಮನೆಯಿಂದ ಹೊರದೂಡಲ್ಪಟ್ಟ ಹಿರಿಯರನ್ನು ಅಜ್ಜ ಅಜ್ಜಿಯರನ್ನು ತಂದು ವೃದ್ದಾಶ್ರಮವನ್ನು ನಡೆಸುತ್ತಾ ಹಿರಿಯರನ್ನು ನೋಡಿಕೊಂಡು ಅವರ ಆಶೀರ್ವಾದವನ್ನು ಪಡೆದುಕೊಳ್ಳುವುದು, ವಿಧವೆಯರು,  ಬಡವರು, ಯಾರು ಇಲ್ಲದಂತಹ ಒಂಟಿಯಾದ ಜನರು ಇವರಿಗೆ ಸರಕಾರದಿಂದ ಸಿಗಬಹುದಾದಂತಹ ಸೌಲಭ್ಯಗಳ ಬಗ್ಗೆ ತಿಳಿ ಹೇಳಿ ಅವನ್ನು ಕೊಡಿಸುವುದು, ಬಡವರ ಕೈಯಲ್ಲಿರುವ ಒಂದಷ್ಟು ಹಣವನ್ನು ಉಳಿಸಿ, ಅದರ ಮೇಲೆ ಅವರಿಗೆ ಸಾಲವನ್ನು ಕೊಟ್ಟು ಅವರ ಜೀವನ ಮುಂದೆ ಬರುವ ಹಾಗೆ ನೋಡಿಕೊಳ್ಳುವುದು, ಬಡ ಹೆಣ್ಣು ಮಕ್ಕಳಿಗೆ ಮತ್ತು ಹುಡುಗರಿಗೆ ಅವರ ಜೀವನಕ್ಕೆ ಬೇಕಾದ ಉದ್ಯೋಗವನ್ನು ನೀಡುವುದು, ಆಕ್ಸಿಡೆಂಟ್ ನಿಂದ ಕೈ ಕಾಲುಗಳನ್ನು ಕಳೆದುಕೊಂಡವರಿಗೆ ಉದ್ಯೋಗಗಳನ್ನು ನೀಡುವುದು ಹಾಗೆಯೇ ಅವರಿಗೆ ಉಪಯುಕ್ತವಾಗುವಂತಹ ಆರ್ಟಿಫಿಶಿಯಲ್ ಪರಿಕರಗಳನ್ನು ಒದಗಿಸುವುದು, ಬೇರೆ ಬೇರೆ ಸ್ಥಳಗಳಿಗೆ ಹೋಗಿ ಭಾಷಣವನ್ನು ಮಾಡಿ ಜೀವನದಲ್ಲಿ ನೊಂದವರಿಗೆ ಸಾಂತ್ವನ ಹೇಳುವುದು, ಬದುಕಿನಲ್ಲಿ ಇನ್ನೊಂದು ಸಾಯಲು ಹೊರಟಂತಹ ಅನೇಕ ಮನಸ್ಸುಗಳನ್ನು ಕೌನ್ಸಲಿಂಗ್ ಮಾಡಿ ಅವರು ಜೀವನದಲ್ಲಿ ಒಳ್ಳೆಯವರಾಗಿ ಬದುಕಲು ಅವರಿಗೆ ಸಹಾಯ ಮಾಡುವುದು, ಒಂಟಿಯಾಗಿಯೇ ಟ್ರೆಕಿಂಗ್ , ಪ್ರವಾಸ ಕೈಗೊಂಡು ಅಲ್ಲಿನ ಬಡ ಜನರೊಂದಿಗೆ ಬೆರೆತು ಅವರ ಕಷ್ಟಗಳನ್ನು ಆಲಿಸಿ ಅವರಿಗೆ ಸಣ್ಣಪುಟ್ಟ ಸಹಾಯ ಮಾಡುವುದು, ಕುಡಿತದ ಚಟವನ್ನು ಬಿಡಿಸಿ ಅವರನ್ನು ಮತ್ತೆ ಸರಿಯಾದ ಮಾನವರಾಗಿ ಬದುಕುವಂತೆ ಮಾಡಿ ಅವರ ಜೀವನ ಮಟ್ಟವನ್ನು ಸುಧಾರಿಸುವುದು, ಜೀವನದಲ್ಲಿ ನೊಂದವರಿಗೆ ತಮ್ಮ ಬರಹದ ಮೂಲಕ ಪ್ರೇರಣೆಯುಕ್ತ ನುಡಿಗಳನ್ನು ನೀಡಿ ಅವರ ಬದುಕನ್ನು ಉತ್ತಮಪಡಿಸುವಂತೆ ಮಾಡುವುದು ಇವನ್ನೆಲ್ಲ ಸದ್ದಿಲ್ಲದೆ ಮಾಡುತ್ತಾ ಇರುತ್ತಾರೆ. ಇಂತಹ ಜನ ಮಾನಸಿಕ ಶಾಂತಿಯನ್ನು ಈ ಕೆಲಸಗಳ ಮೂಲಕ ಪಡೆಯುತ್ತಾರೆ.  ಆದ್ದರಿಂದ ಇವರು ಯಾವ ರಾಜ್ಯೋತ್ಸವ ಪ್ರಶಸ್ತಿಗೂ ಅರ್ಜಿ ಹಾಕುವುದಿಲ್ಲ. ಕಾರಣ ಅವರಿಗೆ ಪ್ರಶಸ್ತಿ ಪುರಸ್ಕಾರಗಳು ಬೇಡ. ಇವೆಲ್ಲವೂ ಕೂಡ ಸಮಾಜ ಸೇವೆ ಆಗಿದ್ದು ಈ ರೀತಿ ಜನರು ತಮ್ಮ ಕಷ್ಟವನ್ನು ಮರೆಯುತ್ತಾ ಸದಾ ಕಾಲ ನಗುನಗುತ್ತಾ ನಮ್ಮೆಲ್ಲರ ಮಧ್ಯದಲ್ಲಿ ಓಡಾಡುತ್ತಿರುತ್ತಾರೆ. ಕವಿಗಳಾದರೆ ಹಲವು ಕವಿಗಳನ್ನು ಬೆಳೆಸುವುದು, ಅವರಿಗೆ ಬೇಕಾದಂತಹ ಕಾರ್ಯಕ್ರಮಗಳನ್ನು ಮಾಡಿ ಆ ಮೂಲಕ ಅವರನ್ನು ಬೆಳೆಸುವುದು ಮತ್ತು ಅವಕಾಶಗಳನ್ನು ನೀಡುವುದು, ಅವರಿಗಾಗಿ ಪ್ರಶಸ್ತಿಗಳನ್ನು ಕೊಡ ಮಾಡುವುದು, ದಾನಿಗಳ ಸಹಾಯ ಪಡೆದು ಅದನ್ನು ಉತ್ತಮವಾದ ಕಾರ್ಯಗಳಿಗೆ ಬಳಸಿಕೊಳ್ಳುವುದು ಈ ರೀತಿ ಮಾಡಿಕೊಂಡು ಬದುಕುವಂತಹ ಅದೆಷ್ಟೋ ಜನರು ನಮ್ಮ ನಿಮ್ಮ ಮಧ್ಯದಲ್ಲಿದ್ದಾರೆ. ಅವರಿಗೆ ಅವರ ಮನಸ್ಸಿನ ಒಂಟಿತನ ಎಂದು ಕಾಡಲೇ ಇಲ್ಲ ಅಂತಲ್ಲ. ಆ ಒಂಟಿತನವನ್ನು ಮರೆಯಲು ಅವರು ಜಂಟಿಯಾಗಿ ಇದೆಲ್ಲ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಅವರು ಜೀವನದಲ್ಲಿ ಉತ್ತಮವಾದ ಸಾಧನೆಯನ್ನು ಮಾಡುತ್ತಾ ಮೇಲೇರುತ್ತಿರುತ್ತಾರೆ. ಇದೇ ನಿಜವಾದ ಬದುಕು ಅಲ್ಲವೇ? ಇಲ್ಲಿ ಯಾವ ನಾಟಕವೂ ಇಲ್ಲ. ನಿತ್ಯ ಬದುಕು. ಎದುರಿಸಲೇ ಬೇಕು ಹೇಗಾದರೂ. ಬದುಕನ್ನು ಅದು ಬಂದಂತೆ ಸ್ವೀಕರಿಸುವುದು. ಒಂದು ಗಿಡವನ್ನು ಅರ್ಧ ಕಡಿದು ಬಿಟ್ಟರೆ ಅದು ಅದೇ ಸ್ಥಿತಿಯಲ್ಲಿ ಅಲ್ಲೇ ಉಸಿರಾಡುತ್ತ ಬದುಕುವುದಿಲ್ಲವೇ? ಹಾಗೆಯೇ. 
    ಬಂದಿರುವ ಎಡರು ತೊಡರುಗಳನ್ನೆಲ್ಲ ಮೆಟ್ಟಿ ನಿಂತು, ಜೀವನದಲ್ಲಿ ನಾನು ಏನು ಬೇಕಾದರೂ ಸಾಧನೆ ಮಾಡಬಲ್ಲೆ ಎನ್ನುವಂತಹ ಗುರಿ ಇಟ್ಟುಕೊಂಡು,  ಆ ಗುರಿಯ ಕಡೆಗೆ ಮುಖ ಮಾಡುತ್ತಾ ತನ್ನ ನೋವುಗಳನ್ನೆಲ್ಲ ಮರೆತು ಪರರ ಕಡೆಗೆ ಗಮನವಿಟ್ಟು "ನನ್ನ ಈ ಆಗಮನದಿಂದ ಈ ಧರೆಯಲ್ಲಿ ಒಂದಷ್ಟು ಉತ್ತಮ ಕಾರ್ಯಗಳು ನಡೆಯಬೇಕಿದೆ " ಎಂದುಕೊಂಡು ಆ ದಿಸೆಯಲ್ಲಿ ಹೆಜ್ಜೆ ಹಾಕಿದಂತಹ ಮಹಾನ್ ಆತ್ಮಗಳು ನಮ್ಮ ನಿಮ್ಮೊಡನೆ ಹಲವಾರು ಜನರು ಈಗಲೂ ಇದ್ದಾರೆ ಮತ್ತು ಅವರು ಮಹಾನ್ ವ್ಯಕ್ತಿಗಳೇ ಆಗಿ ಹೋಗಿದ್ದಾರೆ. ಇಂತಹ ಮಹಾನ್ ವಿರಾಟ್ ಸ್ವರೂಪಕ್ಕೆ ಜಾತಿ ಮತ ಧರ್ಮಗಳ ಹಂಗಿಲ್ಲ. ಮಾಡುವ ಕಾರ್ಯ ಒಂದೇ.  ಎಲ್ಲರಿಂದಲೂ ಶ್ಲಾಘನೀಯಕ್ಕೆ ಒಳಗಾಗಲ್ಪಡುವುದು. ಉತ್ತಮ ಕಾರ್ಯವನ್ನು ಮಾಡಿದಾಗ ಮತ್ತು ಮನಸ್ಸು ಉತ್ತಮವಾಗಿದ್ದಾಗ ಎಲ್ಲರೂ ಆ  ಜನರನ್ನು ಹೊಗಳುತ್ತಾರೆ. ಯಾರು ಕೆಟ್ಟದಾಗಿ ಯೋಚಿಸುತ್ತಾನೆ ಮತ್ತು ಕೆಟ್ಟದಾಗಿ ವರ್ತಿಸುತ್ತಾನೆ ಅವನನ್ನು ಯಾವ ಜಾತಿ ಧರ್ಮದ ಜನರು ಕೂಡ ಗೌರವಿಸುವುದಿಲ್ಲ. ಅಂತಹ ಜನರಿಗೆ ಒಂಟಿತನವು ಹೆಚ್ಚಾಗಿ ಕಾಡುತ್ತದೆ. 
   ನಿಜವಾಗಿ ಬದುಕಲು ಕಲಿತವನಿಗೆ ಕೆಲವೊಂದು ಸಲ ಒಂಟಿತನವೇ ಸಂತಸಮಯವಾಗಿ ಕಾಣುತ್ತದೆ. ಅವನ ಕಾರ್ಯಗಳಿಗೆ ಕೊನೆಯೇ ಇಲ್ಲ, ಒಂದರ ಬಳಿಕ ಮತ್ತೊಂದು ಅವನನ್ನು ಕರೆಯುತ್ತಿರುತ್ತವೆ. ಒಂದೆಡೆ ವ್ಯಾಪಾರ, ಮತ್ತೊಂದೆಡೆ ಪರರಿಗೆ ಸಹಾಯ, ಇನ್ನೊಂದು ಕಡೆ ಮತ್ತೆ ಇನ್ಯಾರಿಗೋ ಇನ್ನೊಂದು ಸಹಾಯ, ಮಾಡಿದ ಸಹಾಯವನ್ನು ನೆನೆದು ಗೌರವಿಸಲು ಬಂದವರ ಬಳಿ ಅದನ್ನು ನಯವಾಗಿ ತಿರಸ್ಕರಿಸಿ ಆ ಹಣವನ್ನು ಇನ್ಯಾರೋ ಬಡವರಿಗೆ ನೀಡಲು ಸೂಚನೆ ಕೊಟ್ಟಾಗ ಅವರು ಒಪ್ಪಿ ಅವರ ಕೈಯಲ್ಲೇ ಕೊಡಿಸುವ, ಆ ಮೂಲಕ ಅವರೂ ಸಮಾಜಸೇವೆ ಮಾಡುವ ಹಾಗೆ ಮಾಡುವ ಹೀಗಿನ ಕಾರ್ಯಗಳಲ್ಲಿ ಅವರು ಸದಾ ಬ್ಯುಸಿ. ಒಂದಲ್ಲ ಒಂದು ಉತ್ತಮ ಕಾರ್ಯಗಳು ಅವರನ್ನು ಕಾಯುತ್ತಾ ಇರುವುದರಲ್ಲಿ ಸಂದೇಹವೇ ಇಲ್ಲ. ಆಗ ಜೀವನ ಒಬ್ಬರೇ ಇದ್ದರೂ ಕೂಡಾ ಬೋರ್ ಆಗದು. ಹಲವಾರು ಜನ ಲೈಫ್ ಬೋರ್ ಅನ್ನುವುದನ್ನು ಕೇಳಿದ್ದೇವೆ. ಪರರ ಹಿತಕ್ಕಾಗಿ ಒಳ್ಳೆ ಕಾರ್ಯ ಮಾಡುವವನ ಬದುಕು ಎಂದೂ ಬೋರ್ ಆಗದು ಅಲ್ಲವೇ? ಪೂರ್ತಿ ಸಮಯ ಆಗದಿದ್ದರೂ ಒಂದಿಷ್ಟು ಸಮಯವನ್ನು ಸಮಾಜದ ಕಾರ್ಯಕ್ಕಾಗಿ ಮೀಸಲಿಟ್ಟು, ನಮ್ಮ ಬದುಕನ್ನು ಹಸನುಗೊಳಿಸೋಣ. ಬಂದಾಗ ಏನೂ ತರಲಿಲ್ಲ, ಹೋಗುವಾಗ ಮನೆ ಮಠ ಆಸ್ತಿ ಎಲ್ಲಾ ಇನ್ಯಾರದೋ ಪಾಲಾಗುತ್ತದೆ ಅಷ್ಟೇ ಬದುಕು ಅಲ್ಲವೇ? ಒಂದಿಷ್ಟು ಮನಸ್ಸಿನ ಸಂತೋಷಕ್ಕಾಗಿ ಬಾಳೋಣ. ನೀವೇನಂತೀರಿ? 
@ಹನಿಬಿಂದು@
19.01.2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -219

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 219

        ಈ ಬದುಕಿನಲ್ಲಿ ಸ್ನೇಹಕ್ಕಿಂತ ದೊಡ್ಡದಾದ ಸಂಬಂಧ ಇಲ್ಲ ಎಂದು ಹೇಳುತ್ತಾರೆ. ಅದು ಸತ್ಯ ಕೂಡ. ಯಾವುದೇ ರಕ್ತ ಸಂಬಂಧಕ್ಕಿಂತಲೂ ಸ್ನೇಹಕ್ಕೆ ಕೊಡುವ ಬೆಲೆ ಅತ್ಯಂತ ಅಮೂಲ್ಯ. ಸ್ನೇಹದಲ್ಲಿ ಜಾತಿ ಭೇಧ ಮೇಲು ಕೀಳು ಯಾವುದು ಇಲ್ಲ. ಸ್ನೇಹಕ್ಕೆ ಉಳಿದ ಸಂಬಂಧಗಳ ಸಂಕೋಲೆಯು ಇಲ್ಲ. ಒಂದೊಮ್ಮೆ ಸ್ನೇಹಕ್ಕೆ ಬೆಲೆ ಕೊಡುವವನು ಉಳಿದೆಲ್ಲ ಸಂಬಂಧಗಳಿಗೆಂತಲೂ ಹೆಚ್ಚು ಸ್ನೇಹಿತರನ್ನು ಇಷ್ಟಪಡುತ್ತಾನೆ ಮತ್ತು ಸ್ನೇಹಿತರಿಗಾಗಿ ತನ್ನ ಜೀವನವನ್ನೇ ಬಲಿ ಕೊಟ್ಟ ಮತ್ತು ಬದಲಾಯಿಸಿದ ಅದೆಷ್ಟೋ ವ್ಯಕ್ತಿಗಳನ್ನು ನಾವು ಕಾಣುತ್ತೇವೆ. 
           ಸ್ನೇಹಕ್ಕೆ ಎಷ್ಟು ಜನ ಮಹಾನ್ ತ್ಯಾಗಗಳನ್ನು ಮಾಡಿದರೂ, ಸಹಾಯಹಸ್ತ ಚಾಚಿ ತಾವು ದಿವಾಳಿ ಆದರೂ ಇನ್ನೂ ಕೆಲವು ಕಡೆ  ಸ್ನೇಹಿತರಲ್ಲೂ ಹಲವಾರು ಜನ ಮೋಸಗಾರರು, ಸಿಗಬೇಕಾದ ಸ್ಥಾನಮಾನಗಳನ್ನು ಕಸಿದುಕೊಳ್ಳುವವರು, ಸ್ನೇಹಿತರಿಗೆ ಎಲ್ಲೋ ಏನೋ ಒಳ್ಳೆಯದಾಗುತ್ತದೆ ಎಂದಿದ್ದರೆ ಅದನ್ನು ತಪ್ಪಿಸಿ ತಮಗೆ ಅದನ್ನು ದಕ್ಕಿಸಿಕೊಳ್ಳುವವರು ಕೂಡ ಇದ್ದಾರೆ. ಒಂದೆಡೆ ತನಗೆ ನೋವಾದರೂ ಪರವಾಗಿಲ್ಲ ನನ್ನ ಸ್ನೇಹಿತನಿಗೆ ಒಳ್ಳೆಯದಾಗಬೇಕು ಎಂದು ಅದೆಷ್ಟೋ ಜನ ತಾನು ಪ್ರೀತಿಸಿದ ಹುಡುಗಿಯನ್ನು ಕೂಡ ಬಿಟ್ಟುಕೊಟ್ಟವರಿದ್ದರೆ, ಇನ್ನೊಂದೆಡೆ ಆತ್ಮ ದ್ರೋಹಿಗಳು, ನಯ ವಂಚಕರು, ಮಿತ್ರದ್ರೋಹಿಗಳು, ಮೋಸಗಾರರು, ಕಪಟಿಗಳು, ಲಪಂಗರು, ಸ್ನೇಹಿತರೆಂದರೆ ಹೇಗಿರಬಾರದು ಅನ್ನುವಂತವರು ಈ ಜಗದಲ್ಲಿ ಇದ್ದೇ ಇದ್ದಾರೆ. ನಾನು ತುಂಬಾ ಒಳ್ಳೆಯವನು, ನಿನಗಾಗಿ ನಾನೇನು ಬೇಕಾದರೂ ಮಾಡಲು ಸೈ, ಒಟ್ಟಿನಲ್ಲಿ ನಿನ್ನ ಬದುಕು ಒಳ್ಳೆಯದಾದರೆ ಸಾಕು, ನಿನಗಾಗಿ ನಾನು ಈ ರೀತಿ ಕಷ್ಟ ಪಡುತ್ತಿದ್ದೇನೆ, ನಾನಾದರೇನು ನೀನಾದರೇನು ನಾವಿಬ್ಬರು ಒಂದೇ.. ಈ ರೀತಿ ಬಾಯಲ್ಲಿ ಬೊಗಳೆ ಬಿಡುತ್ತಾ ಕಾರ್ಯದಲ್ಲಿ ನೀನು ಮಾಡುವ ಹಲವಾರು ಹಿತ ಶತ್ರು ಮಿತ್ರದ್ರೋಹಿಗಳಿದ್ದಾರೆ. ಇದೊಂದು ನಮಗೆ ಎಚ್ಚರಿಕೆಯ ಕರೆ ಘಂಟೆ. ಕೆಲವು ಸಲ ಮನುಷ್ಯರನ್ನು ನಾವು ಆರಾಮವಾಗಿ ನಂಬಿ ಬಿಡುತ್ತೇವೆ. ಅವರು ನಮ್ಮ ತುಂಬಾ ಒಳ್ಳೆಯ ಮಿತ್ರರು ನಮಗೆ ಏನು ಬೇಕಾದರೂ ಸಹಾಯ ಮಾಡಬಲ್ಲರು ಎಂದು ಅವರ ಹಿಂದೆ ಅವರು ಹೇಳಿದಂತೆ ಕುಣಿಯುತ್ತಿರುತ್ತೇವೆ. ಆದರೆ ಅವರು ಇನ್ನೇನೋ ಲೆಕ್ಕಾಚಾರ ಮಾಡುತ್ತಿರುತ್ತಾರೆ. ಸ್ನೇಹಿತನ ರೂಪದಲ್ಲಿ ಬಂದು ಸಿರಿವಂತರು ಎಂದು ಬಿಂಬಿಸಿ, ಏನೂ ಇಲ್ಲದೆ ಮದುವೆಯಾದವರು ಅದೆಷ್ಟೋ ಜನ. ಬಳಿಕ ಅವರ ಬಾಳು ಶೂನ್ಯ! 
            ಈ ಹಿತ ಶತ್ರುಗಳನ್ನು ಗುರುತಿಸುವುದು ಬಹಳವೇ ಕಷ್ಟ. ನೇರವಾದ ಶತ್ರುಗಳಾದರೆ ಅವರು ನಮ್ಮ ಶತ್ರುಗಳು ಎಂದು ಅವರತ್ತ ನೋಡದೆ ಸುಮ್ಮನಿರಬಹುದು. ನಮ್ಮ ಸಂಸಾರದೊಳಗೆ ನುಸುಳಿ ನಮ್ಮ ಕುಟುಂಬಕ್ಕೂ ಬಂದು, ನಮ್ಮ ಸಂಬಂಧದೊಂದಿಗೆ ಹತ್ತಿರದ ಸಂಬಂಧವನ್ನು ಹೊಂದಿದ್ದು, ಮನೆಗೊಮ್ಮೆ ನಮ್ಮಿಂದ ಸತ್ಯ ಹೊರಗೆ ಬಂದಾಗ ದೂರ ಓಡುವ ಈ ರೀತಿಯ ಅಮಾಯಕರನ್ನು ಮೋಸಗೊಳಿಸುವ ಹಿತಶತ್ರುಗಳಿಗೆ ಆ ದೇವರೇ ಶಿಕ್ಷೆ ಕೊಡಬೇಕು. 
         ಎದುರಿದ್ರು ಬಂದು ಗುದ್ದಾಡುವವನ ಬಳಿ ಸರಿಯಾದ ಕ್ರಮದೊಂದಿಗೆ ಗುದ್ದಾಡಬಹುದು. ಅದೇ ಹಿಂದಿನಿಂದ ಬಂದು ಚಾಕು ಹಾಕುವವನ ಬಳಿ ನಾವು ಅದು ಹೇಗೆ ತಾನೇ ಗುದ್ದಾಡಲು, ಮುದ್ದಾಡಲು ಸಾಧ್ಯ? ಬದುಕೊಂದು ಸಂತೆಯಂತೆ ಇಲ್ಲಿ ಉತ್ತಮವಾದ ವ್ಯಾಪಾರವನ್ನು ಮಾಡಿದವನು ಮಾತ್ರ ಲಾಭವನ್ನು ಪಡೆಯುತ್ತಾನಂತೆ. ಸುಳ್ಳು , ಮೋಸ,  ವಂಚನೆ , ಆತ್ಮ ವಂಚನೆ, ನಾನೇ , ನನ್ನದೇ, ನನಗೇ ಬೇಕು ಇವೆಲ್ಲ ಅಂಗಾಂಗಗಳು ಸರಿ ಇರುವವರೆಗೆ ಮಾತ್ರ. ಮೇಲೊಬ್ಬನಿದ್ದಾನಲ್ಲ ಪ್ರತಿಯೊಂದನ್ನೂ ಸರಿಯಾಗಿ ಲೆಕ್ಕ ಹಾಕುತ್ತಾನೆ! ನಮ್ಮ ಒಳಿತು ಕೆಡುಕುಗಳ ಲೆಕ್ಕಬಿಡುತ್ತಾ? ಯಾವ ರೀತಿಯ ಶಿಕ್ಷೆಯನ್ನು ನಮ್ಮ ಬದುಕಿಗೆ ನೀಡಬೇಕೆಂದು ಲೆಕ್ಕಾಚಾರ ಮಾಡಿ ತಪ್ಪಿಲ್ಲದೆ ಬರೆದಿಡುತ್ತಾನೆ. 
             ಸುಳ್ಳು , ಮೋಸ,  ವಂಚನೆ , ಕಪಟತನ ಇವುಗಳಿಂದ ನಾವು ಯಾರನ್ನು ಬೇಕಾದರೂ ವಂಚಿಸಬಹುದು. ನಮ್ಮನ್ನು ನಂಬಿದವರನ್ನು ವಂಚಿಸುವುದು ತುಂಬಾ ಸುಲಭ. ಏಕೆಂದರೆ ಅವರು ನಮ್ಮ ಮೇಲೆ ತುಂಬಾ ನಂಬಿಕೆ ಇಟ್ಟಿರುತ್ತಾರೆ. ಆದರೆ ಆ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡವನಿಗೆ ಅದೆಂದಿಗೂ ಉತ್ತಮವಾದ ದಾರಿ ಸಿಗಲು ಸಾಧ್ಯವಿಲ್ಲ. "ನಾಗರಹಾವು ನಾಗರಹಾವೇ ಕೇರೆ ಹಾವು ಕೇರೆ ಹಾವೇ" ಎಂಬ  ಗಾದೆಯೊಂದು ತುಳುವಿನಲ್ಲಿದೆ. ಅಂದರೆ ಒಳ್ಳೆಯವನು ಎಂದಿಗೂ ಒಳ್ಳೆಯವನೇ  ಕೆಟ್ಟವನು ಎಂದಿಗೂ ಕೆಟ್ಟವನೆ. ಕೆಟ್ಟವನನ್ನು ಒಳ್ಳೆಯವನಾಗಿ ಬದಲಾಯಿಸಲು ಸಾಧ್ಯವಿದೆ ಆದರೆ ಅವನ ಮನಸ್ಸು ಒಪ್ಪಬೇಕು ಅಷ್ಟೇ. ಅವನನ್ನು ಒಪ್ಪಿಸುವುದು ಸುಲಭದ ಮಾತಲ್ಲ. 
              ಪ್ರೀತಿ ಕರುಣೆ ಸ್ನೇಹ ಸಲುಗೆ ಇವೆಲ್ಲವೂ ಕೂಡ ಹಣದ ಮುಂದೆ ಏನೂ ಇಲ್ಲ. ಹಣದ ಜೊತೆ ಮನುಷ್ಯರಿಗೆ ಜೀವನದಲ್ಲಿ ಖುಷಿ ಪಡುವ ಒಂದು ಅಂಶವೂ ಇದೆ. ತನ್ನ ಸಂತಸಕ್ಕಾಗಿ ಮನುಷ್ಯ ಏನು ಬೇಕಾದರೂ ಮಾಡಲು ರೆಡಿಯಾಗುತ್ತಾನೆ. ಇಂತಹ ಸಮಯದಲ್ಲಿ ಅದು ಉಳಿದವರಿಗೆ ಕೆಟ್ಟದೋ ಒಳ್ಳೆಯದೋ ಎಂಬುದನ್ನು ಆಲೋಚನೆ ಮಾಡಲು ಹೋಗುವುದಿಲ್ಲ. ಕಾರಣ ಯಾವುದೇ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಇತರರನ್ನು ಅನುಗಾಲಕ್ಕು ಬಲಿ ತೆಗೆದುಕೊಂಡಿರುತ್ತಾನೆ. 

           ಸ್ನೇಹವನ್ನು ಉಳಿಸಿಕೊಳ್ಳುವುದು ಬಹಳ ಸೂಕ್ಷ್ಮ ಕೆಲಸ. ಆದರ ದ್ವೇಷ ಬೆಳೆಸುವುದೆಂದರೆ ತುಂಬಾ ಸುಲಭದ ಕೆಲಸ. ಸ್ನೇಹದ ಶತ್ರು ದ್ವೇಷ ಮತ್ತು ಅಪನಂಬಿಕೆ. ಎಲ್ಲಿ ಗಾಢವಾದ, ಬಿಡಿಸಲಾರದ ಬಂಧವನ್ನು ಹೊಂದಿರುವ ಸ್ನೇಹವಿರುತ್ತದೆಯೋ ಅಲ್ಲಿ ಇವೆರಡಕ್ಕೂ ಜಾಗವಿರುವುದೇ ಇಲ್ಲ. ಸ್ನೇಹಕ್ಕೆ ಮಿಗಿಲಾದ ಪದವು ಮತ್ತೊಂದಿಲ್ಲ. ಪರಿಪೂರ್ಣ ಸ್ನೇಹವೆಂದರೆ ಅದು ಬದುಕು. ಬದುಕಲ್ಲಿ ಅಪ್ಪಟ ಸ್ನೇಹವೊಂದಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಜೀವನ ಸಂಗಾತಿಯು ಉತ್ತಮ ಸ್ನೇಹಿತನಾಗಿದ್ದರೆ ಅಂತಹ ಜನರ ಬದುಕು ಪರಿಪೂರ್ಣವಾಗಿ ಜೀವಿಸಲ್ಪಡುತ್ತದೆ ಅಲ್ಲವೇ? ಏನಾದರೂ ಆಗಿರಲಿ ಪ್ರಪಂಚಕ್ಕೆ ಬಂದಿದ್ದೇವೆ, ನಾಲ್ಕು ದಿನ ಚೆನ್ನಾಗಿ ಬದುಕಿ ಎಲ್ಲಿಂದ ತೆರಳಲ್ಲಿ ಇದ್ದೇವೆ, ಏನಾಗದಿದ್ದರೂ ಪರವಾಗಿಲ್ಲ, ನಾವೊಂದು ನಾಲ್ಕು ಜನಕ್ಕೆ ಉತ್ತಮ ಸ್ನೇಹಿತರಾಗಿ ತೋರಿಸಿ ಮತ್ತೆ ಈ ಭೂಮಿಯ ಮೇಲಿಂದ ತೆರಳೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
13.01.2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -215

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -215

   ಯಾವುದೇ ಕೆಲಸಗಳನ್ನು ಮಾಡುವಾಗ ಹಿರಿಯರು ಹೇಳುತ್ತಾರೆ ಕಾಲ ಬದಲಾಗಿದೆ ಎಂದು. ಕಾಲವಲ್ಲ ಹೌದು ಖಂಡಿತವಾಗಿಯೂ ಜನರು ಬದಲಾಗಿದ್ದಾರೆ. ಜನರ ನಡೆ-ನುಡಿಗಳು,  ಬಟ್ಟೆ - ಬರೆಗಳು,  ಮಾಡುವ ಕೆಲಸಗಳು,  ಆಸೆ - ಆಕಾಂಕ್ಷೆಗಳು , ಬದುಕಿನ ಶೈಲಿ, ಆಹಾರ ಪದ್ಧತಿ, ಆಲೋಚನೆಗಳು ಎಲ್ಲವೂ ಬದಲಾಗಿದೆ.  ಅದೊಂದು ಕಾಲವಿತ್ತು ಇಲ್ಲಿ ಭಾರತೀಯ ಸಂಸ್ಕೃತಿ ಎದ್ದು ಕಾಣುತ್ತಿತ್ತು. ಆಯಾ ರಾಜಕ್ಕೆ ತಕ್ಕಂತೆ ಬರೆಗಳನ್ನು ಜನ ತೊಡುತ್ತಿದ್ದರು. ಜನರ ಬಟ್ಟೆಗಳನ್ನು ನೋಡಿ ಇಂಥವರು ಈ ರಾಜ್ಯದ ಜನ ಅಥವಾ ಇಂಥವರು ಈ ಬುಡಕಟ್ಟು ಸಮಾಜದ ಜನ ಎಂದು ಇತರರು ಗುರುತಿಸುತ್ತಿದ್ದರು. ಅದೆಲ್ಲ ಮಾಯವಾಗಿ ಇಂದು ಆಂಗ್ಲರ ಪ್ಯಾಂಟು ಶರ್ಟು ಬಂದುಬಿಟ್ಟಿದೆ. ಅಂದವಾದ ಪ್ಯಾಂಟು ಶರ್ಟ್ ಧರಿಸಿದಿದ್ದರೆ ಏನೋ ಬಟ್ಟೆ ಬರೆಯಲ್ಲಿ  ಸ್ವಲ್ಪ ಏಕತೆ ಅನ್ನಬಹುದಿತ್ತೇನೋ! ಆದರೆ ಹಿಂದಿನ ಯುವ ಜನಾಂಗ ಧರಿಸುವ ಬಟ್ಟೆ ತೋಳುಗಳಿಲ್ಲದ ಶರ್ಟು,  ಹರಿದು ತುಂಡು ತುಂಡಾದ ಪ್ಯಾಂಟು, ಬೆಳೆದ ಹೆಣ್ಣು ಮಕ್ಕಳು ಕಾಲಿನ ಗಂಟಿನಿಂದ ಮೇಲೆವರೆಗಿನ ಚಡ್ಡಿ ಹಾಕಿ ಇಡೀ ಲೋಕ  ಸುತ್ತುತ್ತಿರುತ್ತಾರೆ. ತನ್ನ ಅಂಗಾಂಗ ಪ್ರದರ್ಶನಗೊಳ್ಳುತ್ತಿದೆ, ಇದನ್ನು ಇತರರು ನೋಡುವಾಗ ಅವರು ಉದ್ರೇಕಗೊಳ್ಳುತ್ತಾರೆ ಎನ್ನುವಂತಹ ಸಾಮಾನ್ಯ ಪರಿಜ್ಞಾನವೂ ಅವರಲ್ಲಿ ಇಲ್ಲವಾಗಿದೆ. ಈ ರೀತಿಯ ಬಟ್ಟೆಗಳನ್ನು ಪ್ರೋತ್ಸಾಹಿಸುವಂತಹ ಪೋಷಕರು ಕೂಡ ಅದರ ಬಗ್ಗೆ ಯೋಚನೆಯನ್ನು ಮಾಡುವುದಿಲ್ಲ. ಹರಣ ಈಗ ಗಂಡು ಹೆಣ್ಣು ಸಮಾನತೆ ಬಂದಿದೆ. ಗಂಡು ಯಾವ ರೀತಿ ಸುತ್ತಾಡುತ್ತಾನೋ ಅದೇ ತರ ಹೆಣ್ಣು ಮಗಳು ಕೂಡ. ಇದನ್ನು ಒಳ್ಳೆಯ ಲಕ್ಷಣವೆಂದು ಹೇಳಬೇಕೋ  ಅಥವಾ ಆಧುನಿಕತೆಯ ಹುಚ್ಚು ಎನ್ನಬೇಕು ತಿಳಿಯದು. 
   ಸಮಾನತೆಯನ್ನು ಸರಿಯಾದ ರೀತಿ ಆದರೆ ಸಮಾಜದ ಸ್ವಾಸ್ಥ್ಯ ಕೆಡಬಾರದು ಅಲ್ಲವೇ? ಅಮೆರಿಕಾದಂತಹ ದೇಶಗಳಲ್ಲಿ ಹದಿಹರೆಯದ ವಿದ್ಯಾರ್ಥಿಗಳಿಗೆ ಅಳುವ ಗೊಂಬೆಗಳನ್ನು ಕೊಡಲಾಗುತ್ತದೆಯಂತೆ. ಅದು ಚಿಕ್ಕ ಮಕ್ಕಳಂತೆ ವರ್ತಿಸುತ್ತಾ, ಸಣ್ಣ ವಯಸ್ಸಿನಲ್ಲಿ ಮಕ್ಕಳಾದರೆ ಅವರನ್ನು ನೋಡಿಕೊಳ್ಳುವುದು ಅದೆಷ್ಟು ಕಷ್ಟ ಎಂಬುದನ್ನು ವಿದ್ಯಾರ್ಥಿಗಳಿಗೆ ಸ್ಪಷ್ಟಪಡಿಸಲು ಹೀಗೆ ಮಾಡುತ್ತಾರೆ. ಭಾರತ ಕೂಡ ಇಂತಹ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಒಂದೊಂದು ಶಾಲೆಗಳಲ್ಲಿ ಮದುವೆ ಆಗುವ ಮೊದಲು ಹುಟ್ಟಿದ ಮಕ್ಕಳು, ತಂದೆ ತಾಯಿ ಯಾರೆಂದೇ ಅರಿಯದ ಅನಾಥಾಲಯಗಳಲ್ಲಿ ಬೆಳೆಯುತ್ತಿರುವ ಮಕ್ಕಳು, ದತ್ತು ತೆಗೆದುಕೊಂಡು ಪೋಷಿಸಿದ ಮಕ್ಕಳು, ಅಜ್ಜಿ ಸಾಕುತ್ತಿರುವ ಮಕ್ಕಳು, ವಿವಿಧ ಆಶ್ರಮಗಳಲ್ಲಿ ಸೇರಿಕೊಂಡಂತಹ ಮಕ್ಕಳು, ಕುಟುಂಬದ ಯಾರೋ ಇತರರು ಸಾಕುತ್ತಿರುವoತಹ ಮಕ್ಕಳು, ತಾನು ಯಾರು ಎಲ್ಲಿ ಏನು ಎಂದು ಗೊತ್ತಿರದೆ ಇನ್ಯಾರದೋ ಬಳಿಯಲ್ಲಿ ಬೆಳೆಯುತ್ತಿರುವ ಮಕ್ಕಳು, ಸಮಾಜದ ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳಲಾದ ಯಾರದೋ ಮಕ್ಕಳು, ಯಾವುದೋ ದೇಶದಿಂದ ಯಾವುದೋ ರಾಜ್ಯದಿಂದ ಅದ್ಭುತ ಅಪ್ಪಿ ಬಂದು ಇಲ್ಲೇ ನಿಲ್ಲಿಸಿ ಬದುಕು ನಡೆಸುತ್ತಿರುವಾಗ ತಂದೆ ತಾಯಿಗಳಿಬ್ಬರು ಮರಣ ಹೊಂದಿ ಬದುಕುತ್ತಿರುವ ಮಕ್ಕಳು ಹೀಗೆ ಬದುಕು ಬಹಳ ಶೋಚನೀಯವಾಗಿ ಇದ್ದು ಇಂತಹ ಮಕ್ಕಳನ್ನು ಹೆಚ್ಚಾಗಿ ಸಾಮಾಜಿಕ ಸೇವಾ ಕಾರ್ಯಕರ್ತರು, ಎನ್‌ಜಿಓಗಳು ನಡೆಸುತ್ತಿರುವ ಆಶ್ರಮಗಳು, ಅನಾಥಾಲಯಗಳು ಸಾಕುತ್ತವೆ. ಅವರೆಲ್ಲರೂ ಕೂಡ ಹೆಚ್ಚಾಗಿ ಬೇರೆ ಬೇರೆ ದೇಶಗಳಿಂದ ಪಠ್ಯ ಬರೆಗಳನ್ನು ತಂದು, ಕೆಲವು ಸಲ ನಮ್ಮ ದೇಶದಲ್ಲಿ ಸಿಗುವ ಬಟ್ಟೆ ಬರೆಗಳನ್ನು ತಂದು ಆ ವಿದ್ಯಾರ್ಥಿಗಳನ್ನು ಪೋಷಿಸುತ್ತಾರೆ. ಅಂತಹ ಮಕ್ಕಳಿಗೆ ಯಾವ ರೀತಿಯಲ್ಲಿ ಬಟ್ಟೆಗಳನ್ನು ತೊಡಬೇಕು ನಾವು ಹಾಕುವ ಬಟ್ಟೆಗಳು ಯಾವ ರೀತಿ ಇರಬೇಕು ಇವುಗಳನ್ನು ಹೇಳಿಕೊಡುವವರು ಆಶ್ರಮದವರೇ ಆಗಿರುತ್ತಾರೆ. ಅವರು ಅವರ ಬಳಿ ಇರುವಂತಹ ಬಟ್ಟೆಗಳನ್ನೇ ಹಾಕಿಸಿ ಅಭ್ಯಾಸ ಮಾಡಿಸಿರುತ್ತಾರೆ. ಇದರಲ್ಲಿ ಹೆಚ್ಚು ಇಂತಹ ಮಾಡರ್ನ್ ಡ್ರೆಸ್ ಗಳೇ ಆಗಿರುತ್ತವೆ. ಹೀಗೆ ಬೆಳೆದ ಮಕ್ಕಳ ಮುಂದೆ ಅದೇ ರೀತಿಯ ಬಟ್ಟೆಗೆ ಅಂಟಿಬಿಡುತ್ತಾರೆ. ಅವರೇನೋ ಬಟ್ಟೆ ಇಲ್ಲದೆ ಇನ್ಯಾರೋ  ಕೊಟ್ಟ ಬಟ್ಟೆಗಳನ್ನು ಹಾಕಿ ಬೆಳೆದು ದೊಡ್ಡವರಾಗಿ , ಇಲ್ಲಿ ಬೆಳೆದವರು. ಅವರಿಗೆ ಸಿಕ್ಕಿದ ಬಟ್ಟೆಗಳದ್ದೇ ಸಂಸ್ಕೃತಿ. ಇನ್ನು ಇಲ್ಲಿನ ಸಂಸ್ಕೃತಿಯನ್ನು  ಅವರು ಮರೆತರು ಎನ್ನಲಾಗದು. ಅವರು ಬೆಳೆದು ಬಂದ ವಾತಾವರಣವೇ ಹಾಗಿರುತ್ತದೆ. ಅಲ್ಲಿಯೂ ಕೂಡ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಸಮಾನವಾಗಿಯೇ ಬೆಳೆದಿರುತ್ತಾರೆ. 
   ಇನ್ನೊಂದು ವರ್ಗವಿದೆ ಭಾರತದಲ್ಲಿ ಇದು ಒಳ್ಳೆಯದೋ ಕೆಟ್ಟದೋ ತಿಳಿಯದು. ಸಿರಿವಂತರು ಎಂಬ ವರ್ತ. ಅವರು ಏನು ಮಾಡಿದರೂ ಸರಿಯೇ. ಕಾರಣ ಅವರು ಮಾಡೆಲ್ ಗಳು, ಆಕ್ಟರ್ಗಳು, ಮಂತ್ರಿಗಳ ಮಕ್ಕಳು, ದೊಡ್ಡ ದೊಡ್ಡ ಬಿಸಿನೆಸ್  ಮ್ಯಾಗ್ನೆಟ್ ಗಳು, ಎಲ್ಲರೂ ಅವರ ಫಾಲೋವರ್ಸ್ ಗಳೇ ಆಗಿರುವಾಗ ಇನ್ನು ಯಾರಿಗೆ ತಾನೇ ಹೇಳಲು ಸಾಧ್ಯ? ಬೆಕ್ಕಿಗೆ ಘಂಟೆ ಕಟ್ಟುವವರು ಯಾರೋ..
      ಈಗಿನ ಆಹಾರವು ಅಷ್ಟೇ ಹೇಳುವಂತಿಲ್ಲ ಹಿರಿಯರಿಗೂ ರುಚಿ ಬೇಕು ಕಿರಿಯರಿಗೂ ರುಚಿ ಬೇಕು. ರುಚಿಯನ್ನು ಉಂಟುಮಾಡಲು ಒಂದು ರಾಸಾಯನಿಕ ವಸ್ತು. ಅದನ್ನು ಬಳಸಿದರೆ ಮಾತ್ರ ಊಟ ಸೇರುತ್ತದೆ. ಹೆಚ್ಚಿನ ಮನೆಗಳಲ್ಲಿ ಆಗುತ್ತಿರುವ ಕೂಟದ ಕಥೆ ಇದು. ಮನೆಯಲ್ಲಿ ಮಾಡಿದ ಊಟ ಮಕ್ಕಳಿಗೆ ಸೇರದು ಎಂದು ಅರಿತ ಮನೆಯೊಡತಿ ಮನೆಯಿಂದ ಹೊರಗಿನ ಊಟ ತಿನ್ನಲು ಅವರನ್ನು ಪ್ರೇರೇಪಿಸುತ್ತಾರೆ. ಹೌದು ಮನೆಯಿಂದ ಹೊರಗೆ ಮಾಡಿದ ಊಟದ ರುಚಿ ತುಂಬಾ ಚೆನ್ನಾಗಿರುತ್ತೆ. ಕಾರಣ? ಅಷ್ಟೇ ರುಚಿಯನ್ನು ಕೊಡುವ ಕುಡಿಯನ್ನು ಬಳಸಿದರೆ ಆಯಿತು. ಇದನ್ನು ತಿಂದರೆ ದೇಹದಲ್ಲಿ ಮುಂದೆ ಆಗುವಂತಹ ದುಷ್ಪರಿಣಾಮಗಳಿಗೆ ಯಾರು ಹೊಣೆ? ಹೌದು ದೊಡ್ಡ ದೊಡ್ಡ ಆಸ್ಪತ್ರೆಗಳು ತಲೆ ಎತ್ತುತ್ತಲೇ ಇವೆ. ಡಾಕ್ಟರ್ ಗಳ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹಾಗೆಯೇ ಆಸ್ಪತ್ರೆಗಳ ಬಿಲ್ಲುಗಳ ಉದ್ದವೂ ಮತ್ತು ತೂಕವು ಕೂಡ ದೊಡ್ಡದಾಗುತ್ತಲೇ ಇದೆ. ದುಡಿದು ಗಳಿಸಿದ ಎಲ್ಲಾ ಹಣವನ್ನು ಅದಕ್ಕೆ ಸುರಿದ ಬಳಿಕವೂ ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ಶಿಕ್ಷೆ ಬೇಡುವಂತಹ ಕಾಲಕ್ಕೆ ನಾವು ಇಳಿದಿದ್ದೇವೆ. ಸರಕಾರ ಕೊಡ ಮಾಡುವಂತಹ ಯಾವುದಾದರೂ ಮೆಡಿಕಲ್ ಸಹಾಯಗಳು ಎಲ್ಲಾ ಬಿಲ್ಲುಗಳನ್ನು ಭರಿಸಲು ಸಾಧ್ಯವಾಗದು. ಪ್ರತಿದಿನ ಹೆಚ್ಚಾಗುತ್ತಿರುವ, ಜನಸಂಖ್ಯೆಯಿಂದ ತುಂಬಿ ಹರಿಯುತ್ತಿರುವ ಈ ಭಾರತ ದೇಶದಲ್ಲಿ ಈ ರೀತಿಯಾಗಿ ಆರೋಗ್ಯವನ್ನು ಕೆಡಿಸಿಕೊಂಡು ಆಸ್ಪತ್ರೆ ಸೇರಿದ ಕೋಟ್ಯಾಂತರ ರೋಗಿಗಳಿಗೆ ಸರಕಾರ ತಾನೇ ಅದೆಷ್ಟು ಖರ್ಚು ಮಾಡಬಲ್ಲದು? ಅಷ್ಟೇ ಅಲ್ಲ ವೈದ್ಯಕೀಯ ಪರಿಕರಗಳು ಮತ್ತು ಔಷಧಿಗಳು ಕೂಡ ತುಂಬಾ ದುಬಾರಿ. ಚೆನ್ನಾಗಿರುವಾಗ ಮನುಷ್ಯರು ಇದನ್ನೆಲ್ಲಾ ಲೆಕ್ಕಿಸುವುದೇ ಇಲ್ಲ. ಈಗ ಏನಿದ್ದರೂ ಪಾರ್ಟಿಗಳ ಸಂಭ್ರಮ. ಹೊರಗೆ ತಿಂದು ಕುಡಿದು ಕುಣಿಯುವಂತಹ ಸಂಸ್ಕೃತಿ ಸಂತಸ ತರುವುದೆಂದು ನಂಬಿರುವ ಕಾಲ. ಬದುಕಿನಲ್ಲಿ ಯಾವ ಘಟನೆಯಾದರೂ ನಡೆಯಲಿ ಸಂತಸಕ್ಕಾಗಿ ಪಾರ್ಟಿ. ಜನರಿಂದ ಜನರಿಗಾಗಿ ಜನರೇ ತಯಾರಿಸುತ್ತಿರುವ ಆಹಾರವಾದರೂ ವ್ಯಾಪಾರಿಕರಣ ಮತ್ತು ದುರಾಸೆ ಯಾವ ಸಮಾಜದಲ್ಲೂ ಕಡಿಮೆಯಾಗಲಿಲ್ಲ. ತಿನ್ನುವ ಆಹಾರ ರುಚಿ ಆಗಿರಬೇಕು ಅಷ್ಟೇ. ಅದು ನೋಡಲು ಬಣ್ಣ ಬಣ್ಣವಾಗಿ ಅಟ್ಟ್ರಾಕ್ಟಿವ್ ಆಗಿ ಕಾಣುತ್ತಿರಬೇಕು ಅಷ್ಟೇ. ಅದರ ಜೊತೆಗೆ ಬೆಲೆಗೆ ಅದು ಸಿಗುವ ಹಾಗೆ ಇರಬೇಕು. ಅದಕ್ಕೆ ಜಾತ್ರೆಯಲ್ಲಿ ಅಷ್ಟೊಂದು ವಸ್ತುಗಳು ಮಾರಾಟವಾಗುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕೂಡ ಬಣ್ಣಕ್ಕೆ ಮತ್ತು ರುಚಿಗೆ ಸೋಲದವರು ಯಾರು ಇಲ್ಲ. ಅಲ್ಲದೇ ತುಂಬಾ ಆಲೋಚನೆ ಮಾಡಿ ಸ್ಟ್ಯಾಂಡರ್ಡ್ ಲೈಫ್  ಲೀಡ್ ಮಾಡಬೇಕು ಎಂದು ಯೋಚಿಸುವವರು ಭಾರತದಲ್ಲಿ ಕೇವಲ ಐದು ಶೇಕಡಕ್ಕಿಂತಲೂ ಕಡಿಮೆ ಜನರಿರುವರು. ಉಳಿದವರೆಲ್ಲ ಬದುಕನ್ನು ಖುಷಿಖುಷಿಯಲ್ಲಿ ರುಚಿ ರುಚಿಯಲ್ಲಿ ಕಳೆಯಬೇಕು ಎಂದು ಜಾಲಿ ಲೈಫ್ ಅನ್ನು ಇಷ್ಟಪಡುವವರೇ ಆಗಿದ್ದಾರೆ. ಇವರಿಗೆ ಹಲವಾರು ಪಾರ್ಟಿಗಳು ಬೇಕು, ಹೊರಗಿನ ಕಾರ್ಯಕ್ರಮಗಳು ಬೇಕು ಆ ಕಾರ್ಯಕ್ರಮದಲ್ಲಿ ತಿಳಿಸುಗಳಿರಬೇಕು. ಅವು ಬಹಳ ರುಚಿಕರವಾಗಿರಬೇಕು, ವಿವಿಧ ಬಣ್ಣಗಳಲ್ಲಿ ಕಾಣುತ್ತಿರಬೇಕು ಅಷ್ಟೇ. ಆಹಾರ ತಯಾರಿಕೆಯ ಮೂಲಗಳನ್ನು ಹುಡುಕಿಕೊಂಡು ಹೋಗುವವರು ಅದೆಷ್ಟು ಜನರಿದ್ದಾರೆ? 
   ಕೈ ಕೆಸರಾದರೆ ಬಾಯಿ ಮೊಸರು. ಇಂದು ಬಾಯನ್ನು ರಚಿಸಿ ರುಚಿಯಾದ ಕಡಿಮೆ ಬೆಲೆಯ ವಿಷದ ಆಹಾರಕ್ಕೆ ಮಾರು ಹೋದವನು ನಾಳೆ ಅನುಭವಿಸಲೇಬೇಕು. ಜೊತೆ ಜೊತೆಗೆನೇ ಕುಡಿದು ವಾಹನಗಳನ್ನು ಚಲಾಯಿಸುವ ಇಂದಿನ ಯುವಜನಾಂಗ ಅದೆಷ್ಟೋ ಕುಟುಂಬಗಳನ್ನು ಬಲಿ ತೆಗೆದುಕೊಂಡಿದೆ. ಇಂತಹ ಅಚಾತುರ್ಯಕ್ಕೆ ಬೇರೆ ಯಾರೋ ತಪ್ಪು ಮಾಡದವರು ದಿನನಿತ್ಯ ಬಲಿಯಾಗುತ್ತಿದ್ದಾರೆ. ಪಾಪ ಪುಣ್ಯ ದೇವರು ಸ್ವರ್ಗ ಇವುಗಳ ಕಲ್ಪನೆ ಒಂದು ಕಾಲದಲ್ಲಿ ಇತ್ತು. ಈಗ ಇವುಗಳನ್ನೆಲ್ಲ ನಂಬುವವರು ಯಾರೂ ಇಲ್ಲ. ಬದುಕು ಚಿಕ್ಕದು ಸಾಯುವವರೆಗೂ ಅದನ್ನು ಸಂತಸದಿಂದ ಕಳೆಯಬೇಕು, ಗಮ್ಮತ್ ಮಾಡಬೇಕು ತಿನ್ಬೇಕು ಕುಡಿಬೇಕು ಕುಣಿಬೇಕು ಅಷ್ಟೇ. ದುಡ್ಡಿರುವ ಸಿರಿವಂತ ವರ್ಗದವರು ಬಾರು,  ಪಬ್ಬು ಎಂದು ಹೋದರೆ ಸಾಮಾನ್ಯ ಜನರು ನಿಶ್ಚಿತಾರ್ಥ ಮದುವೆ ಬರವಣಿಗೆ ಗಣಪತಿ ಉತ್ಸವ ವಿಸರ್ಜನೆ ಜಾತ್ರೆ ಇವುಗಳಲ್ಲಿ ಅದನ್ನು ಮಾಡುತ್ತಾರೆ. ಒಟ್ಟಿನಲ್ಲಿ ಮಾನವನಿಗೆ ಬದುಕಿನಲ್ಲಿ ಎಂಟರ್ಟೈನ್ಮೆಂಟ್ ಮುಖ್ಯ. ವಿವಿಧ ಬಣ್ಣಗಳನ್ನು ಹಾಕಿ ಚಂದ ಕಾಣಿಸಿ ಇಟ್ಟ ಆಹಾರ ರುಚಿಯಾಗಿದ್ದರೆ ಸಾಕು. ಅದನ್ನು ಎಲ್ಲಿ ಯಾರು ಹೇಗೆ ತಯಾರಿಸಿದರು ಎಂದು ಯಾರೂ ವಿಚಾರಿಸಲು ಆಗುವುದಿಲ್ಲ. ಇದನ್ನು ಎಲ್ಲ ಸರಿಪಡಿಸಲು ಸಾಧ್ಯವಿಲ್ಲ ಕಾರಣ ಜನರ ಮನಸ್ಸು ಕೆಟ್ಟದರ ಕಡೆಗೆ ಬೇಗ ವಾಲುತ್ತದೆ. ಮಕ್ಕಳು ಹಠ ಹಿಡಿದಾಗ ತಾಯಿ ಅನಿವಾರ್ಯವಾಗಿ ನೂಡಲ್ಸ್ ತಂದುಕೊಡುತ್ತಾಳೆ. ಇಲ್ಲಿ ದೂರುವುದು ಯಾರನ್ನು? ತಂದೆ ತಾಯಿಗಳನ್ನೆ? ಮಕ್ಕಳನ್ನೇ? ಸಮಾಜವನ್ನೇ? ದುರಾಸೆಯ ಜನರನ್ನೇ? ವ್ಯಾಪಾರಿ ಮನೋಭಾವವನ್ನೇ? ಹಣಕ್ಕಾಗಿ ಇರುವವರನ್ನೇ? ಬೇಕು ಬೇಕಾದ ಹಾಗೆ ಹಿಂದೆ ಮುಂದೆ ಯೋಚಿಸದೆ ತಮ್ಮ ಮಕ್ಕಳಿಗೆ ಹಣಕೊಟ್ಟು ಹಣದ ಮಹತ್ವವನ್ನು ಕಲಿಸದೆ ಇರುವಂತಹ ಪೋಷಕರನ್ನೇ? ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದವರನ್ನೇ? ಸರಿಯಾದ ಮಾಹಿತಿಯನ್ನು ನೀಡುವ ಶಾಲೆಗಳನ್ನು ಮತ್ತು ಜನರನ್ನು ಕೇಳದೆ ರುಚಿಯ ಕಡೆಗೆ ಮತ್ತು ಬಣ್ಣದ ಕಡೆಗೆ ವಾಲುವರನ್ನೇ? ನಮಗೆ ನಾವೇ ಉತ್ತರಿಸಿಕೊಳ್ಳಬೇಕು. ನೀವೇನಂತೀರಿ?
@ಹನಿಬಿಂದು@
16.12.2023

ನೀನೇ

ನೀನೇ 
ನೀನೇ ಮುತ್ತು ರತ್ನ ಹವಳ
ನೀನೇ ಜೀರ್ಣಕ್ಕಾಗೋ ಕವಳ 
ನಿನ್ನ ಜೊತೆಗೆ ಕನಸು ಬಹಳ
ನಿನ್ನ ಮನವು ಸದಾ ನಿರ್ಮಲ

ಬದುಕ ಬೇಕು ಕನಸಿನಂತೆ
ಆಡ ಬೇಕು ಸತ್ಯವಂತೆ 
ಬಾಳು ಒಂದು ಆಟವಂತೆ
ನಾಲ್ಕು ದಿನದ ನೋಟವಂತೆ

ಪ್ರೀತಿ ದ್ವೇಷ ಕಾಮ ಕ್ರೋಧ
ಮೋಹ ಮದ ಮತ್ಸರ
ನೀತಿ ನಿಯಮ ಮೀರದಂತೆ
ದಾಹ ತೀರೆ ಏನು ಚಿಂತೆ

ಶಾಂತಿ ಪ್ರೀತಿ ಕಾಂತಿ ನೀತಿ
ಶಕ್ತಿ ಸ್ಪೂರ್ತಿ  ಯುಕ್ತಿ ಕೀರ್ತಿ
ಬಾಳು ಎತ್ತರೆತ್ತರಕ್ಕೆ ಜಾರಿ
ಹಕ್ಕಿಯಂತೆ ಬಾನಲ್ಲಿ ಹಾರಿ

ನೀನು ಜೊತೆಗೆ ಇರಲು ಮಜಾ
ಒಂಟಿತನವು ನನಗೆ ಸಜಾ
ನಾನು ನೀನು ಬೇರೆ ಏನು
ದೇಹ ಮನಸು ಒಂದೇ ಭಾನು

ದೇವ ಕೊಟ್ಟ ತೀರ್ಥ ತಾನೇ
ಕುಡಿಯಲದು ಸ್ವಾದವೇನೆ
ಅಪ್ಪುಗೆಯ ಭರವಸೆಯು ಸಾಕು
ನೀನು ಜೊತೆಗೆ ನಿತ್ಯ ಬೇಕು
@ಹನಿಬಿಂದು@
18.05.2024

ಸಮರ್ಪಣೆ

ಸಮರ್ಪಣೆ

ಪದಗಳ ಗೂಡಲಿ ಸಮರ್ಪಣೆ ಪಕ್ಷಿಗೆ 
 ಗುಟುಕನು ನೀಡುತಿಹೆ 
ಮದವನು ಮರೆತು ಮಾನವ ಬದುಕ
ಹಾಡನು ಹಾಡುತಿಹೆ

ಶೋಷಣೆ ಮಾಡಿದ ಮನಗಳ ನಿತ್ಯ
ನೆನಪಿಸಿ ಬಾಳುತಲಿ 
ಪೋಷಣೆಗೈದು ಬೆಳೆಸಿದ ಮಾತೆಯ 
ವರವನು ಬೇಡುತಲಿ 

ಘೋಷಣೆ ಕೂಗುತ ಮತಗಳ ಬೇಡಿ
ಸಮಾಜವ ಮರೆಯುತ್ತ 
ಸಂರಕ್ಷಣೆ ಮಾಡುವ ಕಾರ್ಯವ 
ಮರೆತು
ಮೋಹದಿ ತೇಲುತ್ತ 

ಜನಗಳ ಶಾಪ ಬೇಡವೋ ಭೂಪ
ಸಹಾಯವ ನೆನೆಯೋಣ
ದೇಶದ ಒಳಿತಿಗೆ ಬಾಳನು ನೀಡಿ
ಕೃತಜ್ಞತೆ ನೀಡೋಣ//
@ಹನಿಬಿಂದು@
18.05.2024

ಬುಧವಾರ, ಮೇ 15, 2024

ಓಡೇ ಪೊಯ

ಓಡೆ ಪೋಯ

ನಮ ಎಲ್ಯ ಇಪ್ಪುನ ಕಾಲೊಡು
ಇತ್ತಿಜಿ ಮೊಬೈಲ್ ಟಿವಿ ಇಲ್ಲಡ್
ಆಂಡ ಪುರುಸೊತ್ತೆ ಇತ್ತಿಜಿ ನಮಕ್
ಗೊಬ್ಬುಲು ಗೊತ್ತಿತ್ತ ಭಾರಿ ಶೋಕುದ

ಕಲ್ಲ್ ಗೊಬ್ಬುನ ಮಸ್ತ್ ಪೊರ್ಲು
ಏನ್ ಕಲ್ಲುಲು ಇತ್ಂಡ ಯಾವು
ಅರ್ಧ ದಿನ ಕಳೆಯರೆ ಕೂಡುದು
ಈ ಗೊಬ್ಬು ಯಾನ್ ಲಾ ಗೊಬ್ಬುವೆ

ಒಂಜೆ ಚೆಂಡ್ ನಾಲ್ ಐನ್ ಕಲ್ಲ್
ಈತ್ ಇತ್ತಂಡ ಇಡೀ ದಿನ
 ಪೋವೊಂದು ಇತ್ತ್ಂಡ್ ಕುಸಿಟ್
ಏತ್ ಜೋಕ್ಲು ಬೋಡಾಂಡ ಇಪ್ಪಡ್
ಲಗೋರಿದ ರಡ್ಡ್ ಗುಂಪು ಲೆನೊಟ್ಟುಗು

ಒಂದೆ ತಪ್ಪು, ಒಂಜಿ  ರೌಂಡು ಒಯ್ತ್oಡ  ಆಂಡ್
ಮಸ್ತ್ ಜೋಕುಲು ಬೋಡು ಮಾತ್ರ
ರಡ್ಡ್ ಗುಂಪು ಕಟ್ಟದ್ ಸುರುವೆ
ರಡ್ಡ್ ರಡ್ಡ್ ಜನ ಪೋದು
ತಪ್ಪು ಏರೆಗ್ ತಿಕ್ಕುಂಡು 
ಆಯೆ ಮಲ್ಲ ಬಿರ್ಸೆ
ನನೊರಿ ಆಯನ್ ಔಟು ಮಲ್ಪೊಡು
ರೌಂಡುದ ಸುತ್ತ ಸುತ್ತ ಸುತ್ತೊಡು
ತಪ್ಪು ದೆಪ್ಪುನ ಸುಲಭ ಇಜ್ಜಿ.

ಒಂಜಿ ಕೊತ್ತಲಿಗೆ ತುಂಡು
ಬೊಕ್ಕ ಒಂಜಿ ಚೆಂಡ್ 
ಗಮ್ಮತ್ ಜೋಕುಲೆ ಕೂಟ
ಅವು ಇಡೀ ದಿನತ ಆಟ 
ಇತ್ತೆದ ಪುದರ್ ಗಲ್ಲಿ ಕ್ರಿಕೆಟ್
ಅಪಗ ಅವು ಕಿರ್ ಕಿಟ್!
ವಿಕೆಟ್ ಗ್ ಡಬ್ಬಿಲ ಆಪುಂಡು

ಕುಟ್ಟಿ ದೊನ್ನೆ ಏಪಾಂಡಲ
ಮರಪರೆಗ್ ಉಂಡಾ ಏರಾಂಡಲ
ಕುಟ್ಟಿ ಕೆತ್ತುನವ್ವೆ ಮಲ್ಲ ನ್ಯಾಕ್
ಆಯಗ್ ಭಾರಿ ಡಿಮ್ಯಾಂಡ್
ಕೋಲು ಶೋಕುದ ಬೋಡು
ದೊನ್ನೆ ತುಂಡಾಯರೆ ಬಲ್ಲಿ
ಶಕ್ತಿ ಅವೆತನೆ ಮಲ್ಲ ಅತ್ತೆ?

ಬೊಗೊರಿ ಅಂಗಡಿಡ್ದ್ ಕಾಸ್ ಕೊರುದು
ಕನಪಿನವು ಅತ್ತ್ ಏಪಲಾ
ಅಜ್ಜಿ ಕೊಯ್ದ್ ನುಂಗೆರೆ ಪಾಡಿನ 
ಬೊಗೊರಿ ಕಾಯಿ ಅವು
ಇಜ್ಜಿಡ ಬಜ್ಜೆಯಿಲ ಆಪುಂಡು
ಬಕ್ಕ್ ಬಲ್ಲ್ ಉದ್ದ ಬೋಡು
ಬಲ್ಲ್ ಇಜ್ಜಿಡಲ ಆಪುಜಾ
ನಮ್ಮ ಬೊಗೊರಿ ತಿರ್ಗುಜಾ

ಸೈಕಲ್ ಸವಾರಿ ಊರುಗು ಬತ್oಡ
ರಡ್ಡ್ ದಿನ ನಮ್ಮ ಆಟ ದೋಸ್ತಿನ 
ಆ ಪೊಟ್ಟು ಸೈಕಲ್ ದೊಟ್ಟುಗೆ
ಅವೆತ ಸವಾರಿ ಸದಾರ್ನ ಆವೊಂದಿತ್ತ್ oಡ್

 ಐನ್ ಬೀಜ ಒಂಜಿ ಒಡ್ಡಿ
ಅವೆಟ್ ಐವ ಬೀಜ ಗೆಂದ್ ದ್
ಒಂಜಿ ಕಿಲ ಮಲ್ತ್ ಮಾರುನ
ಎಡ್ಡೆ ಕಾಸ್ ಮಲ್ಪುನ ಆಟ
ಬೀಜ ನೋಟಾವುನ ಗೊಬ್ಬು
ಗೆಂದಿನಾಯಗ್ ಬೀಜ ಪೋಂಡು
ಇನಿ ಕೆಲವು ಬೀಜೋಲು ಪೋಯಡ
ಎಲ್ಲೆ ಪಿರ ದೆಪ್ಪುನಾಯೆ ಯಾನೆ

ಕಂಡ್ ಕುಲ್ಲುನ ಆಟದ ಕುಸಿಕ್
ಮೇರೆ ಮಿತಿ ಇಜ್ಜಪ್ಪ
ಬೀಜದ ಮರತ ಕೊಡಿಟ್
ಕುಕ್ಕುದ ಮರತ ಅಡಿಟ್
ಗೋಲಿದ ಮರತ ನಡುಟು
ಮಂಡೆದ ಉಲಯಿಡ್
ಬೈ ಪನೆದ ಕಲ್ಲ್ ದ  ಬರಿಟ್
ಕಿದೆಟ್ ಪೆತ್ತದ ಬಲ್ಲ್ ದ ಇಡೆಟ್

ಪರತ್ ಬೂಕು ಇತ್ಂಡ
ಪುಟ ಗಮ್ಮತ್ ಇತ್ಂಡ
ಸೆಟ್ ಆಟದ ನೋಟ
ಲೆಕ್ಕೊಡು ಉಸಾರ್ ದಾಯೆ
ಬರೆದ್ ದೀಯರೆ
ನಾಲ್ ನಾಲ್ ಚೀಟ್ 
ಒರಿಯಗ್ ಒರಿ ಕೊರೊಡು
ನಾಲ್ ಒಂಜೇ ಲೆಕ ಬತ್ತಿನಾಯೆ ವಿನ್
ಆಯೆ ಸುರುಕು ಸೆಟ್ ಪಂದ್ 
ಕೈ ದೀಯರೆ ಮಿತ್ ಒರಿನಕ್ಲು
ಕೈ ಮಿತ್ ಬತ್ತಿಲೆಕನೆ ಮಾರ್ಕ್ ಕಮ್ಮಿ
ಉಸಾರ್ ಬೋಡು ಬಾರೀ


ಕಳ್ಳ ಪೋಲಿಸ್ ಆಟ ನೆಂಪುದ
ನೆಕ್ ನಾಲೇ ಚೀಟ್
ರಾಜೆ ಬತ್ತಿನಾಯೆ ಮೀಸೆ ತಿರ್ಗಾವುನಿ
"ಯಾರೋ ಪೋಲಿಸ್ ?"
"ನಾನೇ ಪೋಲಿಸ್"
"ಕಳ್ಳನನ್ನು ಹುಡುಕಿ ಕೊಡು"
ಇತ್ತೆ ಸುರು ಇತ್ತಿನ ರಡ್ ಮೂಜಿ
ಜನಟ್ ಕಲ್ವನ್ ಪತ್ತೊಡು
ಇಜ್ಜಿಂಡ ಸೊನ್ನೆ ಮಾರ್ಕ್
ವಾ ಕಷ್ಟದ ಬೇಲೆ ಅವು!

ನಮ್ಮ ಜೋಕುಲಾಟಿಗೆದ ಕುಸಿ
ನಮ್ಮ ಜೋಕ್ಲೆಗ್ ಇಜ್ಜಿ
ಇಲ್ಲ್ ಬರಿಟೆ ಇತ್ತ್ oಡಲಾ ಜೋಕ್ಲೆನ 
ಗುಂಪು ಒಟ್ಟಾದ್ ಇತ್ತೆ ತೋಜ್ಜಿ
ಮೊಬೈಲ್ ಡ್ ಕಂಪ್ಯೂಟರ್ಡ್ ಅಕ್ಲು
ಮುರ್ಕು ಪೋವೊಂದು ಉಲ್ಲೆರ್
ಆಟ ಪಂಡ ಕೋಚ್ ಬೋಡು!
ಕುಸಿ ಪಡೆಯರೆ ಒಟ್ಟಾಯರೆ
ತಾಳ್ಮೆಲಾ ಇಜ್ಜಿ ಗೊತ್ತು ಬೋಡೆ?
ನಮ ಮಲ್ಲಕ್ಲು ಬುಡೊಡೆ!
@ ಹನಿಬಿಂದು@
16.05.2024

ಶನಿವಾರ, ಮೇ 4, 2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -232

           
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -232
           ನಾವು ಬದುಕನ್ನು ಅದು ಬಂದ ಹಾಗೆ ಸ್ವೀಕರಿಸಬೇಕು. ನಿನ್ನೆಯ ನೋವಿಗೆ ಅಳಲು ಇಂದು ಸಮಯ ಯಾರಿಗೂ ಇಲ್ಲ. ಸದಾ ನಗುವುದನ್ನು ರೂಡಿಸಿಕೊಂಡವನೆ ಇಂದು  ಜಾಣ. ನಮ್ಮ ಆಲೋಚನೆಗಳು, ಕನಸುಗಳು,  ಚಿಂತನೆಗಳು ನಿರಂತರವಾಗಿ ಮೂಡಿ ಬಂದು, ಅವು ನಮ್ಮನ್ನು ಪ್ರೀತಿಸುವ ಹೃದಯಕ್ಕೆ ಲಗ್ಗೆ ಇಡಲು ಶುರು ಹಚ್ಚಿಕೊಳ್ಳುತ್ತವೆ. ಅವು ಧನಾತ್ಮಕ ಚಿಂತನೆ ಆಗಿದ್ದರೆ ಎಲ್ಲರಿಗೂ ಸಂತಸ ಹಂಚಿ ಸಂಭ್ರಮ ಕೊಡುತ್ತವೆ. ಅದರ ಬದಲು ನಮ್ಮ ಆಲೋಚನೆಗಳು ಋಣಾತ್ಮಕವಾಗಿದ್ದರೆ ನಮಗೂ, ಇತರರಿಗೂ ನೋವು ತರುತ್ತವೆ. ಕೆಲವೊಮ್ಮೆ ಬೇಡ ಎಂದರೂ ಋಣಾತ್ಮಕ ಆಲೋಚನೆಗಳು ನಮ್ಮ ಮನದಲಿ ಹುಟ್ಟು ಪಡೆದು ನಮ್ಮನ್ನು ಕಲಕಿಸಿ ಬಿಡುತ್ತವೆ. ಏನೂ ಮಾಡಲು ಆಗದು. ಅದನ್ನು ಹಿಡಿದೆ ಕುಳಿತರೆ ನಮ್ಮ ಕೆಲಸ ಆಗದು. 
            ಈಗ ಸಮಾಜದಲ್ಲಿ ನಿರಂತರ ನಡೆಯುವ ಅಪಘಾತಗಳು, ಕೊಲೆ, ದರೋಡೆ, ಕಳ್ಳತನ, ಕೊಚ್ಚಿ ಸಾಯಿಸುವುದು, ಮನೆಯಿಂದ ಹಿರಿಯ ಪೋಷಕರನ್ನು ಹೊರಗೆ ನಿರ್ದಾಕ್ಷಿಣ್ಯವಾಗಿ ಅಟ್ಟುವುದು, ನಾಯಿ, ಬೆಕ್ಕು ದನಗಳಿಗೆ ಹಿಂಸೆ ಕೊಡುವುದು, ತಮ್ಮದೇ ಮಕ್ಕಳನ್ನು ಮಾರಕವಾಗಿ ಹಿಂಸಿಸುವುದು, ಎಲ್ಲರೊಡನೆ ಕಷ್ಟ ಹೇಳಿ ಕೊಳ್ಳುತ್ತಾ ಲೈವ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲಾದ ಭೀಕರತೆಯ ವಿಡಿಯೋಗಳನ್ನು ನಮಗೆ ಗೊತ್ತಿಲ್ಲದೆ ನಾವು ಹೆಚ್ಚೆಚ್ಚು ನೋಡುತ್ತೇವೆ. 
     ಸಣ್ಣ ಮಕ್ಕಳ ಆಟಗಳಲ್ಲೂ, ಚಲನ ಚಿತ್ರಗಳಲ್ಲೂ, ಸೀರಿಯಲ್ಸ್, ವೆಬ್ ಸೀರಿಸ್ ಗಳಲ್ಲೂ ಸಾಯಿಸುವುದು ಎಂದರೆ ಸಾಮಾನ್ಯ. ಇದನ್ನು ನೋಡುತ್ತಾ ಬೆಳೆದ ಮಕ್ಕಳ ಮನದಲ್ಲಿ ಏನು ಬೆಳೆದಿದೆ ಎಂದರೆ, ವಿಷ ಕೊಟ್ಟು, ಗಾಡಿ ಹತ್ತಿಸಿ, ಹೇಗಾದರೂ ಸರಿ, ನಮಗೆ ಆಗುವುದಿಲ್ಲ ಎನ್ನುವವರನ್ನು ಸಾಯಿಸಬಹುದು. 
          ಅಷ್ಟೇ ಅಲ್ಲ , ಕೇಳಿದ್ದನ್ನು, ಬೇಕು ಬೇಕು ಎಂಬುದನ್ನೆಲ್ಲ ಪೋಷಕರು ಕೊಡಿಸುವುದನ್ನು ಇಂದು ಮರೆಯುವುದಿಲ್ಲ. ಒಂದು ವೇಳೆ ಸಿಗದೆ ಇದ್ದರೆ ಆಗ ಮಗು ಕಿತ್ತು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡು ಇರುತ್ತದೆ. ಈಗಿನ ಮಕ್ಕಳು ಯಾರಲ್ಲೂ ಹೆಚ್ಚು ಮಾತನಾಡುವುದಿಲ್ಲ. ಬದಲಾಗಿ ಗೆಳೆಯರ ಜೊತೆ ಫೋನ್, ಮೊಬೈಲ್, ಲ್ಯಾಪ್ ಟಾಪ್ ಅವುಗಳಲ್ಲಿ ಮಾತ್ರ ಚರ್ಚೆ. ಎದುರು ಕುಳಿತು ಸಮಸ್ಯೆ ಪರಿಹರಿಸುವ ವ್ಯವಧಾನ ಇಲ್ಲ. ಹಿರಿಯರಿಗೆ ಗೌರವ ಕೊಡುವುದು ಕೂಡ ಕಲಿಸಿಲ್ಲ ನಾವು. ಅಪ್ಪ, ಅಮ್ಮ, ಅಜ್ಜಿ, ತಾತ ಎಲ್ಲರನ್ನೂ  ಏಕವಚನದಲ್ಲೇ ಸಂಬೋಧಿಸುವ ಕಾಲ. ಹಿರಿಯರ ಬಗ್ಗೆ ಕಾಳಜಿಯೂ ಕಡಿಮೆ. ಮನೆಗೆ ಯಾರಾದರೂ ಹಿರಿಯರು, ಬಂಧುಗಳು ಬರಲಿ, ಅವರು ತಮ್ಮ ಕೊನೆಯಲ್ಲಿ ತಮ್ಮದೇ ಲೋಕದಲ್ಲಿ ಇರುತ್ತಾರೆ. ಮನುಷ್ಯರ ಸಂಬಂಧ, ನೋವು, ನಲಿವು, ಹರಟೆ, ಮಾತು ಇವುಗಳು ಗಲಾಟೆ, ಡಿಸ್ಟರ್ಬೆನ್ಸ್ ಅವರಿಗೆ. ಸೈಲೆಂಟ್, ಡಿಸೆಂಟ್ ಬದುಕು ಬೇಕು. 
             ಹದಿ ಹರೆಯಕ್ಕೆ ಕಾಲಿಟ್ಟ ಕೂಡಲೇ ಒಂದೊಂದು ಜೊತೆಗಾರರನ್ನು ಹುಡುಕಿ, ಮೊಬೈಲ್ ನಲ್ಲೆ ಸಂಸಾರ ನಡೆಸುವ ಕಾಲ ಬಂದಿದೆ ಈಗ. ಕಲಿಯಿರಿ ಎಂದು ತೆಗೆದುಕೊಟ್ಟ ಮೊಬೈಲ್ ನಲ್ಲೆ ಬೇಕಾದ್ದು, ಬೇಡದ್ದು ಎಲ್ಲವನ್ನೂ ಹಿರಿಯರಿಗಿಂತಲೂ ವೇಗವಾಗಿ ಕಲಿತಿರುತ್ತಾರೆ ಅವರು. ಅಂತಹ ಅವಕಾಶ ಸೃಷ್ಟಿಸಿ ಕೊಡುವುದು ಕೂಡ ಹಿರಿಯರೇ. ಯಾರ ತಪ್ಪು ಇಲ್ಲಿ? ಯಾರನ್ನು ದೂರುವುದು? ಯಾರಿಗೆ ಶಿಕ್ಷೆ ಕೊಡುವುದು? 
            ಮಕ್ಕಳನ್ನು ಸರಿಯಾಗಿ ಬೆಳೆಸದೆ ತಮ್ಮ ಮಕ್ಕಳಿಗೆ ಭವಿಷ್ಯದಲ್ಲಿ ಏನೂ ತೊಂದರೆ ಆಗಬಾರದು, ನಮ್ಮ ಹಾಗೆ ಕಷ್ಟ ಪಡಬಾರದು ಎಂದು ಕಷ್ಟ ಪಟ್ಟು ದುಡಿಯುತ್ತಾ ಇರುವ ಪೋಷಕರನ್ನೋ, ಪೋಷಕರ ಕಷ್ಟ ಅರಿಯದೆ ತಮ್ಮ ಬದುಕಲ್ಲಿ ಯಾವುದೇ ಗುರಿ ಇಟ್ಟುಕೊಳ್ಳದೆ , ಬದುಕನ್ನು ಎಂಜಾಯ್ ಮಾಡುತ್ತಿರುವ ಮಕ್ಕಳನ್ನೋ, ಎರಡು ಮೂರು ತಲೆಮಾರು ಕುಳಿತು ತಿಂದರೂ ಕರಗದಷ್ಟು ಆಸ್ತಿ ಮಾಡಿ ಇಟ್ಟು, ಮುಂದಿನ ಜನಾಂಗವನ್ನು ಸೋಮಾರಿಗಳಾಗುವ ಹಾಗೆ ಕುಳಿತು ತಿನ್ನಿಸಿ ಬೆಳೆಸಿದ ಹಿರಿಯರನ್ನೋ, ನೀನು ಮಾಡಿದ್ದೇ ಸರಿ, ನನ್ನ ಮಗನ ತಪ್ಪೇ ಇಲ್ಲ, ಅವನು ಮಾಡುವುದೆಲ್ಲಾ ಸರಿ ಎಂದು ತಪ್ಪು ತಿದ್ದದೆ ಬೆಳೆಸಿದ ಪೋಷಕರನ್ನೋ, ಬೇಕು ಎಂಬುದು ಸಿಗದಾಗ ಹಠವಾದಿಯಾಗಿ ಕತ್ತಿ, ಚೂರಿ ಹಾಕಿ ಇರಿದು ಸಾಯಿಸುವ ಮಟ್ಟಕ್ಕೆ ಬಂದರೂ ತಡೆಯದ ಸಮಾಜವನ್ನೋ ಯಾರನ್ನು ದೂರುವುದು? 
            ಮುಖ್ಯವಾಗಿ ಇರುವುದು ಎರಡೇ ಪಕ್ಷಗಳು ಭಾರತದಲ್ಲಿ. ಆ ಎರಡು ಪಕ್ಷಗಳ ನಡುವೆ ಮತದಾನ ಆಗಿ ಸಣ್ಣ ಪುಟ್ಟ ಇತರ ಪಕ್ಷಗಳ ಬೆಂಬಲ ಪಡೆದು ನ್ಯಾಯಯುತ ಹಾಗೂ ಶಾಂತಿಯುತ ಮತದಾನ ನಡೆಸುವ ಬದಲು ಅಲ್ಲಿ ಗಲಾಟೆ ಎಬ್ಬಿಸಿ, ಯಂತ್ರ ತುಂಡರಿಸಿ ಹೋಗುವ ಕಾರ್ಯ ಬೇಕೆ? ತಪ್ಪು ಯಾರದ್ದೋ? ಶಿಕ್ಷೆ ಯಾರಿಗೋ!
              ಅಷ್ಟೇ ಅಲ್ಲ, ಆ ರಾಜಕೀಯ ಪಕ್ಷಗಳಿಗೆ ಜಾತಿ, ಧರ್ಮದ ಹೆಸರಿಟ್ಟು, ಅಲ್ಲೂ ಗಲಾಟೆ. ಆಳುವ ಪಕ್ಷದ ನಾಯಕರಿಗೆ ಗೌರವ ಕೊಡದೆ ಅವರನ್ನು ಕೀಳಾಗಿ ನಾವೇ ಬಿಂಬಿಸಿ ತೋರಿಸುವ ಜೊತೆ, ವಿರುದ್ಧ ಪಕ್ಷದ ನಾಯಕರನ್ನೂ ಕೂಡ ಕೀಳಾಗಿ ಮಾತನಾಡಿ ನಮ್ಮ  ಮನಸ್ಸಿನ, ಆಲೋಚನಾ ಮಟ್ಟವನ್ನು ಹರಿಯಬಿಟ್ಟು, ಉಳಿದವರ ಮನಸ್ಸನ್ನೂ ಕೆಡಿಸುವ ಕಾರ್ಯ ಸಮಾಜದಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ, ವಾರ್ತಾ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಬಿಸಿ ಬಿಸಿ ಲೇಖನ, ವಿಡಿಯೋ, ಚರ್ಚೆ ನೆತ್ತರನ್ನು ಕುದಿಸುತ್ತದೆ. ಅಕ್ಕ ಪಕ್ಕದ ಮನೆಯ ಜನ ನೆರೆ - ಹೊರೆಗಳಾಗುತ್ತಿವೆ. ಎಲ್ಲರ ಮನದಲ್ಲೂ ಪ್ರೀತಿಯ ಬದಲು ರಾಜಕೀಯ ಪಕ್ಷಗಳಿಗಾಗಿ ಯಾರದೋ ಆಸೆಗೆ ಇನ್ಯಾರೋ ದ್ವೇಷಿಗಳಾಗಿ ಬದಲಾಗಿ ಶತ್ರುಗಳಾಗಿ ಬಾಳುತ್ತಿದ್ದಾರೆ. ಬದುಕು ಬರ್ಭರವಾಗುತ್ತಿದೆ. ಕಾರಣ ಸಾಮಾಜಿಕ ಜಾಲ ತಾಣಗಳು ಮತ್ತು ಎಲ್ಲಾ ರೀತಿಯ ಮಾಧ್ಯಮಗಳು. ಪ್ರೀತಿಯ ಬದಲು ವೋಟಿಗಾಗಿ ಸಮಾಜವನ್ನು ಒಡೆದು ಆಳಲಾಗುತ್ತಿದೆ. 
              ಇದನ್ನು ಅರಿಯದ ಸಾಮಾನ್ಯ ಮಾನವ ಮತ್ತವನ ಕುಟುಂಬ ದಂಡ ತೆರುತ್ತಿದೆ. ದುಡಿದು, ಅದರ ಬಹುಪಾಲು ಹಣವನ್ನು ತೆರಿಗೆ ಕಟ್ಟಿ, ದ್ವೇಷ ಬೆಳೆಸಿಕೊಂಡು, ನಾವು ದುಡಿದ ಹಣವನ್ನು ಇನ್ಯಾರಿಗೋ ಅನುಭವಿಸಲು ಬೇಕಾಗಿ ನಾವು ಮನಸ್ಸು ಕೆಡಿಸಿಕೊಂಡು ಬದುಕುವ ಕಾಲ ಬಂದಿದೆ. 
                ವಿದ್ಯಾಭ್ಯಾಸದ ಮಟ್ಟ ಹೆಚ್ಚಿದಷ್ಟೂ ಸಮಾಜದಲ್ಲಿ ಶಾಂತಿ ಸಮಾಧಾನ ತಾಳ್ಮೆ ಹೆಚ್ಚಬೇಕು. ಬದಲಾಗಿ ದ್ವೇಷ, ಅಸೂಯೆ, ಕೋಪ, ಕೊಲೆ, ನೋವು, ತುಳಿತ, ಸಹಾಯ ಮಾಡದೆ ಇರುವ ಗುಣ, ಸ್ವಾರ್ಥ, ತುಳಿತ ಹೆಚ್ಚಿದೆ. ಇದನ್ನು ಬದಲಾಯಿಸುವುದು ಅಸಾಧ್ಯ ಅನ್ನಿಸುತ್ತದೆ. ಕಾರಣ ಎಲ್ಲರೂ ತಮ್ಮದೇ ಸರಿ, ನಾನು ಮಾಡಿದ್ದೇ ಸರಿ ಎಂದು ವಾದಿಸುತ್ತಾರೆ. ಪರರ ಕೇಳುವ ವ್ಯವಧಾನ ಇಲ್ಲದ ಈ ಸಮಾಜವನ್ನು ತಿದ್ದಲು ಹೋದವನನ್ನೇ ನುಂಗಿ ನೀರು ಕುಡಿಸಿ ಬಿಡುತ್ತದೆ. 
              ಅಂದು ಏಸುಕ್ರಿಸ್ತ, ಮಹಮ್ಮದ್ ಪೈಗಂಬರ್, ಮಹಾವೀರ, ಬುದ್ಧ,ನಾರಾಯಣ ಗುರು, ಗುರು ನಾನಕರು ಎಲ್ಲರೂ ಸಮಾಜವನ್ನು ತಿದ್ದಿ ಸರಿ ದಾರಿಗೆ ತರಲು ತಮ್ಮದೇ ನೀತಿ ನಿಯಮಗಳನ್ನು ತಂದರು. ಜನ ಅವುಗಳನ್ನು ಪಾಲಿಸುತ್ತಾ ಹೊಸ ಧರ್ಮ ಕಟ್ಟಿದರು. ಧರ್ಮ ಮಾರ್ಗದಲ್ಲಿ ನಡೆಯುತ್ತಾ ಬಂದರು. ಇಂದು ಈ ಎಲ್ಲಾ ನಾಯಕರನ್ನು ಅವಹೇಳನ ಮಾಡಲಾಗುತ್ತಿದೆ. ಅವರು ಹಾಕಿಕೊಟ್ಟ ಧರ್ಮದ ತಳಹದಿಯನ್ನು ಮರೆತು ಸಮಾಜದಲ್ಲಿ ಅಧರ್ಮ, ಅಶಾಂತಿಯ ಬೀಜ ಬಿತ್ತಲಾಗುತ್ತಿದೆ. 
                 ಧರ್ಮದ ಒಳಗೂ ಜಗಳ, ಜಾತಿಯ ಒಳಗೂ ಜಗಳ, ಕುಟುಂಬದ ಒಳಗೂ ಜಗಳ, ಸಂಸಾರದ ಒಳಗೂ ಜಗಳ, ಆಸ್ತಿಗಾಗಿ ಪೋಷಕರನ್ನು ಕೊಲೆ ಮಾಡುವವರೆಗೆ ಜಗಳ, ಹಿರಿಯರನ್ನು ಎಲ್ಲೋ ಹೊರಗೆ ಬಿಸಾಕಿ ಬರುವಷ್ಟು ಕೋಪ, ಆಸ್ತಿಗಾಗಿ ಹಿರಿಯರಿಗೆ ವಿಷ ಹಾಕಿ ಸಾಯಿಸುವಷ್ಟು ಕ್ರೂರತನ, ಯಾರ ಮೇಲೆ ಯಾರಿಗೂ ನಂಬಿಕೆ ಇಲ್ಲದಷ್ಟು ಬದಲಾವಣೆ.. ಛೆ ಎಂತಹ ಸಮಾಜದಲ್ಲಿ ಬದುಕುತ್ತಿದ್ದೇವೆ ನಾವಿಂದು! ಇಲ್ಲಿ ನಮಗೆ ಬೇಕಾದ ಪ್ರೀತಿ, ಪ್ರೇಮ, ಸ್ನೇಹ, ಶಾಂತಿ, ನೀತಿ,  ನ್ಯಾಯ, ಹೊಂದಾಣಿಕೆ, ಸಹಬಾಳ್ವೆ, ಸಹಾಯ ಸಹಕಾರ, ತಾಳ್ಮೆ, ಸಹನೆ ಮೊದಲಾದ ಎಲ್ಲರೂ ಇಷ್ಟಪಡುವ ಗುಣಗಳಿಗೆ ಬೆಲೆಯೇ ಇಲ್ಲವಾಗಿ ಹೋಗಿದೆ. ಅದನ್ನು ಬೆಳೆಸಿಕೊಂಡವ ಗಾಂಧಿ! ಅದು ನಾವು ಹಿರಿಯ ಹೋರಾಟಗಾರರಿಗೆ ಕೊಡುವ ಗೌರವ! ಯಾರಿಗೂ ಗೌರವ ಇಲ್ಲ ಬಿಡಿ ಇಲ್ಲಿ. ಹೆತ್ತ ತಾಯಿ, ಹೊತ್ತ ತಂದೆ, ಕಲಿಸಿದ ಗುರುಗಳನ್ನು ಕೂಡಾ ಮರ್ಡರ್ ಮಾಡುವ ಕಾಲದಲ್ಲಿ ಗೌರವದ ಮಾತು ಬರಲು, ಹುಡುಕಲು ಸಾಧ್ಯವೇ? ಬದುಕಿಸಿದ ವೈದ್ಯರನ್ನೇ ಸಾಯಿಸುವ ಕಾಲ ಇದು! 
              ಇನ್ನು ಒಳ್ಳೆಯ ಮನುಷ್ಯತ್ವ ಇರುವ ಮನುಷ್ಯರನ್ನು  ಹಿಡಿದು ಕೊಲ್ಲುವ ಕಾಲ ಸನಿಹದಲ್ಲೇ ಇದೆ. ಸಮಾಜದ ಶಾಂತಿ ಕಲಕಿದವರು ನಾಯಕ ಪಟ್ಟಕ್ಕೆ ಏರಬೇಕೆಂದು ಆಸೆ ಪಟ್ಟವರೆ? ಮನಗಳ ಒಳಗೆ ದುರಾಸೆ ಹೆಚ್ಚಿಸಿದವರು ಪೋಷಕರೇ? ಸಮಾಜದ ಶಾಂತಿ ಕದಡಿದವರು ರಾಜಕೀಯ ಪಕ್ಷಗಳ ನಾಯಕರೇ? ಕಾರ್ಯ ಕರ್ತರೇ? ನ್ಯಾಯಕ್ಕಾಗಿ ಹೋರಾಟ ನಡೆಸಲು ಕರೆ ಕೊಟ್ಟವರು ಯಾರು? ಒಂದು ಪಕ್ಷಕ್ಕೆ ಮತ ಹಾಕುವವರು ನೋಟಾ ಒತ್ತಿದರೆ ಲಾಭ ಯಾರಿಗೆ? ಯೋಚಿಸುವ ವ್ಯವಧಾನ ಜನಕ್ಕೆ ಇಂದು ಇಲ್ಲ. ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಯೋಚಿಸುವವರೆ.
ಈ ಸಮಾಜ ತಿದ್ದುವ ಸಮಾಜ ಸುಧಾರಕರು ಈ ಕಾಲದಲ್ಲಿ ಬರಲು ಸಾಧ್ಯವೇ ಇಲ್ಲ. ಕಾರಣ ಅವರ ಮಾತು ಕೇಳುವವರೇ ಇಲ್ಲ. 
                    ಸಮಾಜ ಅಳಿವಿನ ಅಂಚಿನಲ್ಲಿ ಸಾಗುತ್ತಿದೆ ಏನೋ. ವಿಪರೀತ ಆಗುತ್ತಿರುವ ಅರಣ್ಯ ನಾಶ, ವಿಪರೀತ ಜನ ಸಂಖ್ಯೆ,  ನೀರು, ಗಾಳಿ, ಮಣ್ಣಿನ ಮಾಲಿನ್ಯ ನೋಡಿದಾಗ ಒಂದು ಯುಗ ಅಂತ್ಯಕ್ಕೆ ಸಮೀಪಿಸುತ್ತಿದೆ ಅನ್ನಿಸುತ್ತಿದೆ. ಧರ್ಮ ಕಡಿಮೆ ಆದಾಗ ಜಗವನ್ನು ತೊಳೆದು ಸರಿ ಮಾಡಲು ಪರಮಾತ್ಮನ ಆಗಮನ ಆಗುತ್ತದೆ. ಮತ್ತೆ ಎಲ್ಲಾ ತೊಳೆದು ಮರುಹುಟ್ಟು! ಹೊಸ ಯುಗ ಆರಂಭ. ಈ ಹಳೆಯ ಯುಗದ ಕೊನೆಯ ಹಂತದಲ್ಲಿ ನಾವೆಲ್ಲಾ ಬದುಕುತ್ತಾ ಇದ್ದೇವೆ. ಯಾರು ಸರಿ ಮಾಡಬೇಕೋ, ಯಾರು ಸರಿ ಆಗ ಬೇಕೋ ಎಂಬುದನ್ನು ನಾವೇ ನಿರ್ಧರಿಸಿ ಬದುಕಬೇಕಿದೆ. ನೀವೇನಂತೀರಿ? 
@ಹನಿಬಿಂದು@
21.04.2024

ಶುಕ್ರವಾರ, ಮೇ 3, 2024

ಗಜಲ್

              ಗಝಲ್
ಪ್ರಾಣ ಸಖನೇ  ನಿನ್ನ ಮೂಗಿನ ತುದಿಯ ಕೋಪವ ಕಚ್ಚಿ ಕಚ್ಚಿ  ತಿಂದು ಮುಗಿಸುವ ಆಸೆ
ಕೈ ಮೇಲೆ ಕೈ ಇಟ್ಟು ಬೆರಳಿನ ಸಂಧಿಯೊಳಗೆ ಬೆರಳು ತೂರಿಸಿ
ಕೈಗಳ ಬೆಸೆಯುವ ಆಸೆ

ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕಣ್ಣಲ್ಲೇ ಮಾತನಾಡುತ್ತಾ ಪೂರ್ತಿ ದಿನ ಕಳೆಯಬೇಕು
ಜೊತೆಗೆ ಹೃದಯದ ಬಡಿತ ಮನದ ಮಿಡಿತ ಕೇಳುತ್ತಾ ನನ್ನ ನಾನೇ ಮರೆಯುವ ಆಸೆ

ಹೂ ಆದಾಗಲೇ ಮಿಡಿಯಾಗಿ ಕಾಯಿಯಾಗಿ ಹಣ್ಣಾಗುವ ಕನಸು ಮರಕ್ಕೆ
ಭೂಮಿಯ ಮೇಲೆ ಸರ್ವ ಖುಷಿಯ ನಿನ್ನೊಂದಿಗೆ ಅನುಭವಿಸಿ ಸುಖಿಸಿ  ಸಾಯುವ ಆಸೆ

ಮೋಹ ಮದ ಮತ್ಸರ ಕಾಮ ಕ್ರೋಧ ಪ್ರೇಮ ಸಹನೆ ತಾಳ್ಮೆ ಕೋಪ ಭರವಸೆ
ಎಲ್ಲಾ ಗುಣಗಳ ನಿನ್ನೊಂದಿಗೆ ಹಂಚಿಕೊಂಡು ಬಾಳಲ್ಲಿ ಒಂದಾಗಿ ಬೆಸೆದು ಬದುಕುವ ಆಸೆ

ರಾತ್ರಿ ಆಗಲಿ ಹಗಲಾಗಲಿ ಮುಂಜಾನೆ ಮುಸ್ಸಂಜೆಯ ಸಮಯವೇ ಆಗಲಿ
ರಾಜ ರಾಣಿ ನಾವಾಗಿ ಬದುಕ ರಥವ ಮುಂದೆ ಮುಂದೆ ಮುನ್ನಡೆಸುವ ಆಸೆ

ತಾರೆಯ ತರುವ ಚಂದಿರನ ಮುಡಿವ ಮಂಗಳಕ್ಕೆ ಹಾರುವ ಆಸೆಯಿಲ್ಲ ನನಗೆ
ಸುಖ , ಶಾಂತಿ, ನೆಮ್ಮದಿ,  ಸಹಾಯ ಆರೋಗ್ಯ ಭಾಗ್ಯ ಸುಖ ದುಃಖವ ಹಂಚುವ ಆಸೆ

ದ್ವೇಷ ರೋಷ ಕೋಪ ಮತ್ಸರ ನಾನೇ ಎಂಬ ಅಹಂಕಾರ ಬರಬಾರದು ನಮ್ಮೊಳಗೆ
ನೀನು, ನೀನೆಂದರೆ ನಾನು ಎಂಬ ಪ್ರೇಮದ ಹನಿಯ ಭಾವ ಪಸರಿಸುವ ಆಸೆ
@ಹನಿಬಿಂದು@
02.04.2024