ಗುರುವಾರ, ಜೂನ್ 11, 2026

ಚುಟುಕು

ಚುಟುಕು

ಅಸದಳವೆನಲೆ ಅತೀತವೆನಲೇ ನಿನ್ನಂದದ ವರ್ಣನೆ
ಬಸವಳಿದು ಹೋದೆನು ನಾ ನೋಡುತ ನಿನ್ನನೆ 
ಕಸವನದು ಎಸೆದಿಹರು ಮಾನವರು ಸುಮ್ಮನೆ
ತುಸುವಾದರೂ ಅರಿಯರೆ ಪರಿಸರದ ಕಲ್ಪನೆ
@ಹನಿಬಿಂದು@
11.06.2026

ಚುಟುಕು

ಪ್ರಯತ್ನ 

ಆಕಾಶ ಭೂಮಿಯ ಒಂದಾಗಿಸುತ್ತದೆ ದಿಗಂತ
ಕಾನನದ ಮರಗಳ ಚಿಗುರಿಸುತ್ತದೆ ವಸಂತ
ಭಾವನೆಯ ಕಡಲನ್ನು ಉಕ್ಕಿಸುತ್ತದೆ ದುರಂತ
ಸಾಧನೆಯ ಮೈಲಿಗಲ್ಲು ತಲುಪಿಸುತ್ತದೆ ಸ್ಥಿರಚಿತ್ತ
@ಹನಿಬಿಂದು@
11.06.2026

ಸೋಮವಾರ, ಜೂನ್ 8, 2026

ಆಸೆ

ಆಸೆ

ಅಳಿವಿನಂಚಿನಿಂದ ಉಳಿವಿನೆಡೆಗೆ ಮನ ಅರಳಲಿ
 ಗೆಲುವಿನಡೆಗೆ ಬದುಕ ರಥವು ಹಾದು ಹೋಗಲಿ
ಹಸಿ ಹಸಿರ ಸಾಲು ಇಕ್ಕೆಲಗಳಲ್ಲಿ ಅತ್ತಿತ್ತ ಬೆಳೆಯಲಿ 
ಮರಗಳಲಿ ಬಯಲು ಬೆಂಗಾಡು ತುಂಬಿ ತುಳುಕಲಿ 

ಸುಯ್ಯೆಂದು ಬೀಸುವ ತಳಿರ ತಂಗಾಳಿ ಬರಲಿ
ಸುರ್ರೆಂದು ಜಾರುವ  ಮಳೆ ಹನಿಯು ನಲಿದು ಬೀಳಲಿ
ಭೋರ್ಗರೆವ ಸಾಗರದಿ ಮಹಾ ಅಲೆ ಪುಟಿದು ಚಿಮ್ಮಲಿ
ಬದುಕ ನೌಕೆಯು ಅಂದದಿ ತೇಲಿ ದಡವ ಸೇರಲಿ

ಸಂತಸದ ಮೂಟೆ ಹೊತ್ತು ಜನ ತಿರುಗಿ ಅಂದದಿ ಬಾಳಲಿ
ಬೇಸರ ದುಃಖ ಕಷ್ಟಗಳ ಅಂದಕಾರದ ಛಾಯೆಯು ಓಡಿ ಹೋಗಲಿ
ಮನವೆಂಬುದು ಮಲ್ಲಿಗೆಯಂತೆ ಪರಿಮಳದ ಕಂಪು ಬೀರಲಿ
ನದಿ ಸಾಗರವ ಸೇರಿ ಪ್ರೇಮದಿ ಬೆಸೆದು ಒಂದಾಗಲಿ
@ಹನಿಬಿಂದು@
08.06.2026

ಶುಕ್ರವಾರ, ಜೂನ್ 5, 2026

ಆಯೆ ಮಲ್ಲ ಜನ

ಆಯೆ ಮಲ್ಲ ಜನ

ಆವು ತೂಯರೆ ಮಲ್ಲ ಕಾಸ್‌ದ ಜನ 
ತಿರ್ಗೆರೆ ಕಾರುಂಡು ಮಲ್ಲ ಕಟ್ವನದ ಇಲ್ಲುಂಡು
ಒಟ್ಟಿಗೆ ಬಾರಿ ಜನಕ್ಲೆನ ಗ್ಯಾಂಗುಂಡು
ಏಪಲಾ ಪಾರ್ಟಿಡ್ ತಿನ್ಪಿನ ಸುತ್ತುನ ಬೇಲೆ ಉಂಡು

ಆಂಡ ದಾನೆ, ನರಮಾನಿನ ಗುನ ಬೋಡೆ 
ನಾಲ್ ಜನಕ್ ಸಾಯ ಆಪಿನ ಮನಸ್ ಬರೊಡೆ
ಪಾಪದಾಯನ ಮಿತ್ ಒಂತೆ ಕರ್ನೆ ಇಪ್ಪೊಡೆ

ತನ್ನ ಒಟ್ಟುಗು ಇತ್ತಿನಕ್ಲೆಗಾಂಡಲ ಒಂತೆ ಸಾಯ ಮಲ್ಪೊಡೆ
ಪಾಪದಾಯನ ಬಂಙೊಗು ಕೈ ಕೊರ್ದು ಉಂತೊಡೆ
ತನ್ಕ್ ಬೋಡಿನ ದೆತೊಂದು ದಕ್ಕುನತ ಕಡೆಕ್

ಮಲ್ಲಾಯನ ದೋಸ್ತಿ ಮಲ್ಪಡೆ
ಬಡವನ ಕಷ್ಟೊನು ಮರಪಡೆ
ಸಾಯ ಬೋಡು ಪಂದ್ ಇತ್ತಿನಾಯಗ್ ಆ ಸಮಯೊಡು ಕೈ ಬುದಡೆ
ಆವು ಏಪಲ ನೆಂಪು ದೀವೊಡೆ

ಆಯೆ ಯೇತ್ ಮಲ್ಲಾಯೆ ಆಂಡ ದಾನೆ
ಬೆರಿ ಸಾಯ ಉಂತುನ ಗುನ ಇಜ್ಜಿಡ
ಒರಿಯಾಗೊರಿ ಬೋಡಾಯಿನ ಪೊರ್ತುಗು ಆಯಿಜೆಡ 
ನರಮಾಣಿನ ರಗ್‌ತೊದ ಗುನ ಬತ್ತಿಜಿಡ 
ಪುಟ್ಟಿ ಬೊಕ್ಕ ನಾಲ್ ಜನಕ್ ಆಯಿಜಿಡ 
@ಹನಿಬಿಂದು@
06.06.2026

ಮರ್ಮಲ್

ಮರ್ಮಲ್

ಪೊಸತ್ ಬತ್ತಿನ ಮರ್ಮಲ್ ಕೇಂಡಲ್ 
ಮಾಮಿಯೆ ಎನ್ನ ಜಾಗೆ ಓಲು 
ಕಂಡನಿ ಬೊಡೆದಿ ಪೊಸ ಮದ್ಮಯೆ ಮದಿಮಲ್
ಕುಲ್ಲೆರೆ ಕುಸಿಟ್ಟ್ ಓಲಾವು?

ಮಾಮಿಗ್ ಬತ್ತ್ಂಡ್ ಮಾಮಲ್ಲ ಕೋಪ
ಕುಸಿಟ್ ಕುಲ್ಲೆರೆ ಬೈದಲ್ ಇಡೆ
ಬೆನ್ನಿದ ಬೇಲೆ ಕಾತ್‌ದ್ ಕುಲ್ದುಂಡು
ಕುಲ್ಲುನ ಕಾಲ ಮುಗಿದಾಂಡ್

ಕೋಪೊಡೆ ಪಂಡಲ್ ಮಾಮಿ ಅಲೆಗ್
ಪಿರವುಡು ಬೈಪನೆ ಉಂಡತ್ತ
ಪೋದು ಕುಲ್ಲುಲೆ ಕಾಂಡೆಡ್ದ್ ಬಯ್ಯಗ್
ಬೈ ಪಾಡಿ ನೀರ್ ಪಾಡಿ ಬೊರಿದ್ ಬುಡಿ

ಉತ್ತರ ಬತ್ತಿನ ಗೊತ್ತಾಂದಿ ಮದಿಮಲ್
ಬೈಪನೆ ತೂತಿನ ಪೊಣ್ಣತ್ತ್ 
ಬೈಪನೆ ಪಂಡ ಪೊಸತೊಂಜಿ ಕೋನೆ 
ಪಂದಾಲ್ ಎನ್ಯಲ್ ಕುಸಿ ಪಡೆದ್

ಕಂಡನಿ ಬನ್ನಗ ಸುರುಕ್ಕು ಪಂಡಲ್
ಬೈಪನೆ ಓಲು ನಿಕಲ್ನಲ್ಪ
ದೀಯರೆ ಬೋಡು ಎನ್ನ ಪೊಸ ಕುಂಟು
ತೋಜವರ  ಎಂಕ್ ಅವೆನೊರ ಮುಲ್ಪ

ದಾದಂದ್ ಅರ್ತನೆ ಆವಂದಿ ಕಂಡನಿ 
ಕನ್ನ್ ಬಾಯಿ ಬಾಯಿ ಬುಡ್ದು ತೂಯೆ
ಬೈಪನೆ ದಾಯೆಗ್ ಮೋಕೆದ ಬೊಡೆದಿ
ಇಲ್ಲದ ಉಲಯೆ ದೀವೊಲ್ಯತ್ತ..

ಇತ್ತೆ ಕನ್ನ್  ಕನ್ನ್ ಬಾಯಿ ಬಾಯಿ 
ಬುಡ್ಪಿನ ಬೇಲೆ ಮರ್ಮಲ್ನ
ಅಡೆಗೆ ಬತ್ತಿನ ಮಾಮಿ ಕೇಂದ್
ಮಾಮುಡ ಪಂದ್ ತೆಲ್ತೆರ್ಗೆ..
@ಹನಿಬಿಂದು@
05.06.2026

ಗುರುವಾರ, ಜೂನ್ 4, 2026

ನಮಗೆ ಬೆಲೆ ಇಲ್ಲ

ಬೆಲೆ ಇಲ್ಲ ನಮಗೆ

ನಾವು ಮಾನವೀಯ ಮೌಲ್ಯಗಳು 
ಇಂದು ಬೆಲೆ ಇಲ್ಲ ನಮಗೆ 
ಸತ್ಯವನು ಹೇಳಿದವ ಸತ್ತೇ ಹೋಗುವ
ಅನ್ಯಾಯ ಮಾಡಿದವ ಅನ್ನ ತಿನ್ನುವ

ಸುಳ್ಳಿನ ಅರಮನೆ ಕಟ್ಟಿದವ ಮಿತ್ರ
ನೇರ ನುಡಿಯವನು ಎಲ್ಲರ ಶತ್ರು
ಕರುಣೆ ನೆಮ್ಮದಿಗೆ ಜಾಗವಿಲ್ಲ ಇಲ್ಲಿ
ಮರಣ ಸನ್ನಿಹಿತ ಒಳ್ಳೆಯತನಕಿಲ್ಲಿ

ಜಾತಿ ನೀತಿ ಮತ ಧರ್ಮಗಳ ಗೂಡಿನೊಳಗೆ
ಸಿಲುಕಿ ಬಿದ್ದ ಪಾರಿವಾಳ ನಾವು
ಹೊಡೆದಾಡಿ ಪೇಚಿಗೆ ಸಿಲುಕಿ
ನಲುಗಿದ ಗಾಂಧೀಜಿ ಪಟ್ಟ

ಮರಣದವರೆಗೂ ಮೋಸ ವಂಚನೆಯ ಭಯ
ಯಾರೂ ನೀಡುವರಿಲ್ಲ ಅಭಯ
ನಮ್ಮ ಸಹಾಯಕ್ಕೆ ಇಲ್ಲಿ ಯಾರಿಲ್ಲ
ಹಾಗಾಗಿ ದೇವರೇ ಬಂದಿಲ್ಲಿ ನಿಲ್ಲಬಲ್ಲ
@ಹನಿಬಿಂದು@
04.06.2026 

ಟಂಕಾ

ಟಂಕಾ
ಮಲ್ಲ ಮಂಡೆದ
ಎಲ್ಯ  ಮೂಂಕು ನಾಲಯಿ
ತೂಕ ಪಾತೆರ
ಪಾಕ ಗತ್ತ್ ಗಮ್ಮತ್
ಮಲ್ಲಜನ ಬತ್ತೆರ್
@ಹನಿಬಿಂದು@
 04.06.2026

ಷಟ್ಪದಿ

ಷಟ್ಪದಿ

ನಮಗೂ ಷಟ್ಪದಿಗೂ
ಆಗಿ ಬರದು ನಂಟು
ಹಾಗಾಗಿ ಅಟ್ಟದಲ್ಲಿ 
ಇಟ್ಟು ಬಿಟ್ಟಿದ್ದೇವೆ
ಅದನ್ನು ಕಟ್ಟಿ ಗಂಟು.. 
@ಹನಿಬಿಂದು@

ಬುಧವಾರ, ಜೂನ್ 3, 2026

ರುಬಾಯಿ

ರುಬಾಯಿ
ಅಲ್ಪ ಪೋಯೇ ಕಣ್ಣ್ ಹಾಕಿಯೆ
ಮುಲ್ಪ ಬತ್ತೆ ಕರ್ಂಚ ದೀಯೆ
ದುಂಬು ಪೋಯೆ ನಿರೆಲ್  ಕಂತೆ 
ಪಿರ ಪೋಯೆ ಸೆಕೆನೆ ಕೊರ್ಯೇ 
@ಹನಿಬಿಂದು@
03.06.2026

ಬುಧವಾರ, ಮೇ 27, 2026

ಒರ ಪಿರ ತೂನಗ

ಪಿರ ಒರ ತೂನಗ

ಅಪಗ ನಮ ಎಲ್ಯ ಇತ್ತ, ಇತ್ತೆದಾತ್ ಬುದ್ದಿಲಾ ಬುಲೆದ್ ಇತ್ತಿಜಿ. ಮನಸ್‌ಡ್ ಕಲ್ಮಸ ಇತ್ತಿಜಿ, ಅವ್ ಇತ್ತೆಲಾ ಇಜ್ಜಿ ಪನ್ಕ. ದಾದಲ ಎಂಕ್ ಮಾತ್ರ ಬೋಡು, ಎಂಕೇ ಬೋಡು ಪನ್ಪಿನ ಹಟಲಾ ಇತ್ತಿಜಿ. ಪೂರಲ ಪಟ್ಟ್ ತಿನ್ಪಿನ ಕಾಲ. ಪತ್ತ್ ಪದ್ರಾಡ್ ಜೋಕ್ಲೆನ ಗ್ಯಾಂಗ್. ಐಟ್ ಆಯೆ, ಇಂಬೆ ಆನ್,  ಪೊನ್ನು ಪನ್ಪಿನ ಬೇದ ಬಾವ ದಾಲ ಇತ್ತಿಜಿ. ಜಾತಿ ನೀತಿಲಾ ಇತ್ತಿಜಿ. 

ಬದಲಾದ್, ಯಾನ್‌ಲಾ ಬುಲೆವೊಡು, ಎನ್ನ ಲೆಕ್ಕನೆ ಆಯನ್‌ಲಾ ಮಿತ್ ಕೊನೊವೊಡು ಪನ್ಪಿನ ಉಡಲ ನೆನ್ಕೆ.
ಇಂಚಿನ ಕಾಲೊಡು ಇಲ್ಲದಕುಲು ನಮ ಜೋಕ್ಲೆನ್ ಪೂರ ಒಟ್ಟಿಗೆ ಸೇರ್ಸಾದ್ ಕಂಡದ ಬೇಲೆ ಮಲ್ಪಾವೊಂದು ಇತ್ತೆರ್. ಬಜ್ಜೆಯಿ ಪೆಜ್ಜರೆ, ಅವೆನ್ ಸುಲಿಪರೆ, ಕೆಯ್ ತುಂಬೆರೆ,ಕೆಯ್  ಕೊಯ್ಯೆರೆ, ಕೆಯ್ ದರ್ಪೆರೆ, ಬೈತ ಮುಟ್ಟೆ ಕಟ್ಯರೆ, ಮುಡಿತ್ತ ಬಲ್ಲ್ ತಿರ್ಗಾಯರೆ, ಬಲ್ಲ್ ಒಯ್ತ್ ಪತ್ತೆರೆ, ಕನಕ್ ತುಂಬರೆ, ಕನಕ್ ಮುಟ್ಯರೆ, ಗೊಬ್ಬರ ತುಂಬ್ಯರೆ, ಕೈಕಂಜಿ ಮೇಪೆರೆ ನೆಕ್ ಪೂರ ಜೋಕುಲೆ. ದಾಯೆ ಪಂಡ ಅಕ್ಲೆಗ್ ಸಂಬಳ ಕೊರೊಡು ಪಂದಿಜ್ಜಿ. ಶೋಕುದ ವನಸ್ ಒಂಜಿ ಕೊರುಂಡ ಆಂಡ್. ಪುಗರ್ಂಡ ಜೋಕುಲು ವಾ ಬೇಲೆಲಾ ಮಲ್ಪಂದೆ ಇಪ್ಪುಜೆರ್.

ಅಪಗ ಬರಿತ ಇಲ್ಲದ ಏರ್ಲಾ ಬತ್ ಎoಕ್ಲೆನ ಜೋಕ್ಲೆಡ ದಾಯೆ ನಿಕುಲು ಬೇಲೆ ಮಲ್ಪಯರ್ ಪಂದ್ ಕೆನೊಂದುಲಾ ಇತ್ತಿಜೆರ್.  ದಾಯೆ ಪಂಡ ಬಾಲೆನ್ ಬರಿತ ಇಲ್ಲದಕ್ಲು ಬೇಲೆ ಕೊರುಂಡಲಾ ಎಡ್ದೆಡ್ ತೂವೊನುವೆರ್, ಬೇಲೆ ಕಲ್ಪಡ್, ಬಂಙದ ಬದ್‌ಕ್ ದಾದ ಪಂದ್ ಗೊತ್ತಾವಡ್ ಪನ್ಪಿನ ಮನಸ್‌ಡ್ ಇತ್ತ್ಂಡ್. ಅಂಚಾದ್ ಜೋಕ್ಲೆಗ್ ನಾಲ್ ಇಲ್ಲ್ ಒಟ್ಟಿಗೆ ಇತ್ಂಡ ನಾಲ್ ಇಲ್ಲ್‌ಲಾ ನಮ್ಮವ್ವೆ ಪನ್ಪಿನ ಮೋಕೆ ಇತ್‌ಂಡ್. ನಾಲ್ ಇಲ್ಲದ ಜೋಕುಲ್ಲಾ ಒಟ್ಟಿಗೆ ಕುಸಿಟ್ ಗೊಬ್ಬೊಂದು ಇತ್ತೆರ್. ನಾಲ್ ಇಲ್ಲದ ಮಲ್ಲಕುಲ್ಲಾ ಅಕ್ಲೆಗ್ ನುಪ್ಪು ಕೊರೊಂದು, ಬುದ್ಧಿ ಪನೊಂದು, ತಪ್ಪು ಮಲ್ತ್ಂಡ ಹಾಕೊಂದುಲ್ಲಾ ಇತ್ತೆರ್. ಜೋಕುಲು ನಾಲ್ ಇಲ್ಲದ ಜನಕ್ಲೆಗ್ಲಾ ಪೋಡ್ಯೊಂದು ಇತ್ತೆರ್. ಅಪಗ ಪೂರಕ್ಲು, ಪೂರ ಜೋಕುಲು ನಮ್ಮಕುಲೆ ಪನ್ಪಿನ ನಂಬುಗೆ, ಒರಿಯನ ಮಿತ್ತ್ ಒರಿಯಗ್ ನಂಬುಗೆ ಇತ್ಂಡ್. ಓವು ಆನ್ ಅಂಜೋವುನಕುಲಾ ಬರಿತ ಇಲ್ಲದ ಪೊನ್ನು ಬಾಲೆನ್ ಬೊರ್ಚಂದಿನ ದೃಷ್ಟಿಡ್ ತೂವಂದೆ ಎನ್ನ ಇಲ್ಲದ ಬಾಲೆ ಪನ್ಪಿಲೆಕ್ಕ ಅಕ್ಲೆಗ್ ಮೋಕೆ ಕೊರೊಂದು ಇತ್ತೆರ್. ಏರೆನ ಮನಸ್ದ ಉಲಯಿಲ ಕಲ್ಮಸ ಪನ್ಪಿನ ಇತ್ತಿಜಿ. 
ಕಂಡ, ಕಿದೆ, ಬಾಕ್ಯಾರ್, ಬೊಟ್ಟು, ಬೈಲ್, ತೋಟ, ಗುಡ್ಡೆ, ತಪ್ಪು, ಪಂತಿ - ಪಜಿರ್ ಇಂಚಿನ ಸಾವಿರ ಬೇಲೆ ಇಲ್ಲದಕ್ಲೆಗ್ ಆಂಡ ಜೋಕುಲೆನಲ ಸಾಯ ಬೊಡಿತ್‌ಂಡ್. ಅಕುಲು ಬೇಲೆ ಮಲ್ಪುನಗ ಜೋಕುಲೆಗ್ಲಾ ಒಟ್ಟಾದ್ ಗೊಬ್ಬೆರೆ ಪುರ್ಸೊತ್ತು ತಿಕ್ಕೊಂದು ಇತ್ತ್ಂಡ್. ಜೋಕುಲು, ಮಲ್ಲಕ್ಲು ಪೂರ ಒಟ್ಟಿಗೆ ಇಪ್ಪುನ ತೂಯರೆ ಎಡ್ಡೆ ಇತ್ಂಡ್. ಮಲ್ಲಕ್ಲು , ಜೋಕುಲು ಒರ ಒರ ಲಡಾಯಿ ಮಲ್ತೊಂಡೆರ್‌ಡಲಾ ನಾಲೈನ್ ದಿನೊಡ್‌ತ್ ಬೊಕ್ಕ ನನೊರ ಸರಿ ಆವೊಂದಿತ್ತೆರ್ . ಕಂಡ, ತೋಟದ ಆಸೆಗ್ ಲಡಾಯಿ ಆನಗ ಜೊಕುಲ್ಲಾ ತೂವೊಂದು ಇತ್ತೆರ್. ಮಲ್ಲಕ್ಲೆಡ್ ಏರೆನ ತಪ್ಪು, ಏರೆನ ಸರಿ ಪನ್ಪಿನ ಜೋಕ್ಲೆಗ್ ಗೊತ್ತಿತ್‌ಂಡ್. ಇಲ್ಲದಕ್ಲು ಪಾತೆರಿಜೆರ್‌ಡಲಾ ಸಾಲೆಡ್ ಜೋಕುಲು ಪೋನಗ ಬನ್ನಗ ಒಟ್ಟಾದ್ ಪಾತೆರೊಂದು ಇತ್ತೆರ್. ಗೊಬ್ಬೆರೆಲಾ ಒಟ್ಟುಗೆ ಮಲ್ಲಕ್ಲೆನ ಕನ್ ತಪ್ಪಾದ್ ಪೋವೊಂದು ಇತ್ತೆರ್.

ಜೋಕುಲು ಮಾತೆರ್ನ ಇಲ್ಲ ತೂದು ಒವ್ ಸರಿ ಒವ್ ತಪ್ಪು ಪನ್ಪಿನ ತೆರಿಯೊಂದು ಇತ್ತೆರ್ ಅವ್ವತ್ತಂದೆ ಮಲ್ಲಕ್ಲೆಗ್ ಗೌರವ ಕೊರ್ಪಿನೆನ್ಲ ಕಲ್ತೊಂದು ಇತ್ತೆರ್. ನಾಲ್ ಐನ್ ಇಲ್ಲದ ಜನಕ್ಲೆನೊಟ್ಟು ಸೇರ್ದ್ ಏರೆನ್ ಎಂಚ ಲೆಪ್ಪೊಡು, ಏರೆಗ್ ಎಂಚ ಮರ್ಯಾದಿ ಕೊರೊಡು, ಏರೆನೊಟ್ಟು ಎಂಚ ಇಪ್ಪೊಡು, ಎಂಚ ಪಾತೆರೊಡು, ಅಂಚಿದ ಇಲ್ಲದಕ್ಲು ಎಂಚ ಇಪ್ಪುವೆರ್, ಒವ್ ಎಡ್ಡೆ, ಒವ್ ಹಾಲ್ ಪನ್ಪಿನವು ಪೂರಾ ಜೋಕುಲು ಮಲ್ತೊಂದು ಪೂರ ಇಲ್ಲದ ಬೇನೆ ಬೇಜಾರ್‌ಗ್ ಒಂಜಾವೊಂದು ಇತ್ತಿನ ಎಡ್ಡೆ ಮನಸ್‌ದ ಕಾಲ ಅವ್ ಆದಿತ್ತ್ಂಡ್. 

ಇತ್ತೆ ಓದುದಿನ ಜನ ಮಾನಿ ಎಚ್ಚ ಆಂಡಲಾ ಒರಿಯನ ಇಲ್ಲಗ್ ಒರಿ ಸರಿ ಕಟ್ಟ್‌ಡ್ ಪೋಯರೆ ಪುರ್ಸೊತ್ ಇಜ್ಜಿ, ನನ ಒರಿಯನ ಕಷ್ಟ ಸುಕ ಕೇನ್ಯರೆ, ನಮ್ಮ ಸಾಹಿತ್ಯ ಸುಕ-ಕಷ್ಟ ಕೇನ್ಯರೆಗ್ಲಾ ಏರ್ಲಾ ಇಜ್ಜೆರ್, ಜೋಕುಲು ಪರ ಊರುಡು, ಪ್ರಾಯದಕುಲು ಊರುದ ಮಲ್ಲ ಇಲ್ಲದ ಉಲಯಿ. ಅಕ್ಲೆನ್ ಲೆತ್ ಕೇನುನಕುಲು ಏರ್ಲಾ ಇಜ್ಜೆರ್. ಅಕ್ಲೆಗ್ ಬೂರುಂಡ ನೀರ್ ಕೊರ್ಪಿನಕ್ಲು, ಬಾಯಿ ತುಂಬ ಪಾತೆರುನಕುಲ್ಲಾ ಇಜ್ಜೆರ್. 
ಕಾಲ ಬದಲಾದ್, ಜೋಕ್ಲೆಗ್ ನಮ ಕೊರ್ಪಿನ ವಿದ್ಯೆ ಬೇತೆ ಒವ್ವಾ ಊರುಡು ಬೆನೆರೆಗ್ ಆತ್ಂಡ್. ಬೆನ್ನಿದ ಬೇಲೆ ನಮ ಅಕ್ಲೆಗ್ ಕಲ್ಪದಿಜ , ಎರು ಏರ್ಮೆ ಕೈಕಂಜಿ ಕಟ್ಟ್ ತಾಂಕೆರೆಲಾ ಗೊತ್ತಿಜ್ಜಿ, ಬಜ್ಜೆಯಿ, ತಾರಾಯಿದ ಬೇಲೆಲೆನ್ ಓಲ್ತಾ ಬತ್ತಿನ ಗೌಡನಕ್ಲು, ಹಿಂದಿದಕ್ಲು, ಬಯ್ಯನಕುಲು ಮಲ್ಪುನ ಕಾಲ ಬೈದ್ಂಡ್. ಪ್ರಾಯ ಆಯಿನ ಪರಬೆರೆನ್ ತೂಯೆರೆಗ್ಲಾ ಓವ್ವಾ ಊರುದ ಬಾಸೆ ಬರಂದಿನ ಪೊಂಜೊವುನಕ್ಲೆಗ್ ಸಂಬಲ ಕೊರ್ದು ದೀವೊನ್ನ ಕಾಲ ಬೈದ್ಂಡ್. ಆವು ಪೂರ ಸಯ್ಯಡ್ , ಸೈತ್ಂಡ ಬುಲಿಪೆರೆಗ್ಲಾ ಪಿದಾಯಿಡ್ದ್ ಜನ ಲೆಪ್ಪುನ ಕಾಲ ಉಂದು. 

ನೆನ್ ಪೂರ ತೂನಗ ಪಿರವುದ ಆ ದಿನೊಕ್ಕುಲೆ ಎಡ್ಡೆ ಇತ್‌ಂಡ್ ಪಂದ್ ತೋಜ್ಜಾ? ನಿಕುಲು ದಾದ ಪನ್ಪರ್? 
@ಹನಿಬಿಂದು@

ಬುಧವಾರ, ಮೇ 20, 2026

ಆಗಬಹುದೇ

ಕಥೆಯದು ಜೀವನ ಆಗಲು ಬಹುದೇ
ಜೀವನ ಕಥೆಯು ಕೇಳಣ್ಣ
ಕಥೆಯೊಳಗಿನ ತಿರುಳನು ಕೇಳಲು ಕಥೆಯು
ನೋವಿನ ಪಾಡಿದು ನೋಡಣ್ಣ

ಕಥೆಯದು ಮಾನವ ನೋಡಿದ್ದು ಕೇಳಿದ್ದು
ಬದುಕದು ದೇವನ ಕನಸಣ್ಣ
ಬದುಕಲಿ ಘಟನೆಯು ಹೀಗೆಯೇ ಇರುವುದು
ಎನುವುದ ಅರಿತವ ಯಾರಣ್ಣ

ಬದುಕನು ಕಂಡು ಕಥೆಯನು ಬರೆದನು
ಕವಿಯದು ಇಂದು ನಿನ್ನೆಯಲಿ
ಬಾಳಿನ ಕ್ಷಣವನು ಅರಿಯದೇ ಹೋಗುವ
ಮಾನವ ಮುಂದಿನ ನಿಮಿಷದಲಿ

ಬಾಳಿನ ಪಾಠವ ಕಲಿಸಲು ಕಥೆಗಾರ
ಹೇಳುವ ತರತರ ಕತೆಗಳನು 
ಪಾಪ ಪುಣ್ಯಗಳ ಲೆಕ್ಕವ ಭರಿಸಿ
ಕೊಡುವನು ದೇವನು ಬದುಕನ್ನು 
@ಹನಿಬಿಂದು@
21.05.2026

ತುಂಡು

ಹನಿ 

ತುಂಡು

ತಿನ್ನಲು ಮಾತ್ರವಲ್ಲ 
ಬೇಕಾದದ್ದು ತುಂಡು.. 
ಮೈ ಮೇಲೆ ತೊಡಲು 
ಕೂಡ ಸಾಕು ಬಟ್ಟೆ
ಎರಡೇ ತುಂಡು.. 
@ಹನಿಬಿಂದು@
20.05.2026

ಮಂಗಳವಾರ, ಮೇ 19, 2026

ಮರ್ಮಯೆ

ಮರ್ಮಯೆ 

ಮರ್ಮಯೆ ಪೋಯೆ ಮಾನಿನ ಇಲ್ಲಗ್
ರಜೆಟ್ಟ್ ಪೋಯಿನ ಬೊಡೆದಿನ್ ಲೆಪ್ಪೆರೆ
ಬಾರಿ ಸಮ್ಮನ ಕೋರಿ ರೊಟ್ಟಿದ
ಪಿಡ್ಕ್‌ಲ ಇತ್ಂಡ್ ಪಾಡುವೆಡ 

ಕುಸಿಟ್ಟ್ ಮರ್ಮಯೆ ಗಟ್ಟಿಡೆ ಉಂಡೆ 
ರಡ್ಡ್ ಸರ್ತಿ ಪಿರ ಪಾಡೊಂಡೆ
ಬೊಡೆದಿ ತೂಯಲ್ "ಯಾನ್ ಇಪ್ಪಂದೆ 
ರಡ್ಡ್ ದಿನ ಜನ ಬಂಜಿಗ್ ತಿಂತಿಜಿ"

"ಅಯ್ಯೋ ಪಾಪ ನನ ದೂರ ಪೋನಗ
ಒಂತೆ ದಾದಾಂಡಲಾ ಮಲ್ತ್ ದೀವೊಡು ಇಲ್ಲಡ್ ಮೆರೆಗ್
ಅಡ್ತ್ ಉನ್ಪುಜೆರ್ ದಾಲ ಮೇರ್
ಇಲ್ಲಡ್ ಒರಿಯನೆ ಬುಡ್ದು ಪೋಂಡ" 

ಅನ್ನೆರ್ ಉಸಾರ್ ದೊಸ್ತಿಲೆ ಲೆತ್ತೆರ್ ಕೋರಿ ಕನತೆರ್ 
ಒಟ್ಟಿಗೆ ಸುಕ್ಕ ಮಲ್ತೆರ್, ರುಟ್ಟಿಲ ಕನತೆರ್
ನುಪ್ಪು ಮಲ್ತೆರ್, ಬಾಜೆಲ್ ದೆತೊಂಡೆರ್
ನಾಲ್ ಜನ ಅಂಜೊವು ಒಟ್ಟು ಸೇರ್ಯೆರ್
ಬೊಡೆದಿ ಇಜ್ಜಾಂದಿನ ದಿನಟ್ ಗಮ್ಮತ್ ಮಲ್ತೆರ್
@ಹನಿಬಿಂದು@
20.06.2026

ಸೋಮವಾರ, ಮೇ 11, 2026

ಮಾನವ... ಕೇಳು..

ಮಾನವ... ಕೇಳು.. .

ನಾ ನಿನ್ನ ಕೂಸು
ನೀ ಎನ್ನ ತಂದೆ.. 
ನಿನ್ನ ಮೆದುಳ ಶಕ್ತಿಯಿಂದ ನನ್ನ ಪಡೆದೆ 
ತಂತ್ರಜ್ಞಾನ ನಾನು, 
ವಿದ್ಯುತ್ ಇಲ್ಲದೆ ಹೋದರೆ ನಾನಿಲ್ಲ

ನೀನಿಲ್ಲದಿದ್ದರೂ ಬದುಕಬಲ್ಲೆ ನಾನು
ಸಾವಿರ ಜನ ಮಾಡುವ ಕಾರ್ಯ ಒಬ್ಬನೇ ಬಿಸಾಕಬಲ್ಲೆ ಮಾಡಿ
ನನ್ನ ಆರಂಭ, ಅಂತ್ಯಕ್ಕೆ ನೀ ಬೇಕು ಅಷ್ಟೇ.. 

ನಿನ್ನೆಲ್ಲಾ ಕಾರ್ಯಗಳನ್ನು ನನ್ನಿಂದ ಮಾಡಿಸಿಕೊಳ್ಳುವೆಯಲ್ಲ
ನನಗೆ ನಿನ್ನಂತೆ ದಯ ದಾಕ್ಷಿಣ್ಯವಿಲ್ಲ
ಸಂಬಂಧಗಳ ಬಂಧುವಿಲ್ಲ
ರಕ್ತ ಸಂಬಂಧವೂ ಇಲ್ಲ
ಗೆಳೆಯ, ಕುಲದವ ಎಂಬ ಭಾವವೂ ಇಲ್ಲ

ಜಾತಿ ಮತ ನನಗಿಲ್ಲ
ಯಾವ ಜಾತಿಯವ ಸ್ವಿಚ್ ಹಾಕಿದರೂ ಕಾರ್ಯ ನಿರ್ವಹಿಸುವೆ
ಕೇಳು ಮಾನವ ನಿನ್ನಂತೆ ಕಚ್ಚಾಡಲಾರೆ

ಮುನ್ನುಗ್ಗಿ ಹೋಗುವ ಹಂಬಲ ನನಗಿಲ್ಲ
ನನ್ನದೇ ವೇಗದಲಿ ಮುಂದುವರೆವವ ನಾನು

ತಾಂತ್ರಿಕತೆ ಕಲಿತೆ ನನ್ನ ಮೇಲೆ ಪ್ರಯೋಗಿಸಿದೆ, 
ನೆನಪಿಡು, ಅತಿಯಾದರೆ ಅಮೃತವೂ ವಿಷವಲ್ಲವೇ? 
ಬದುಕು ಸಾಧ್ಯವೇ ನಾನಿಲ್ಲದೆ ನಿನಗೆ? 
ಹೆಚ್ಚು ಅವಲಂಬಿಸಬೇಡ, ಸಾವೇ ಕೊನೆಗೆ.. 

ಆಟ ಆಡಬಲ್ಲೆ ನಿನ್ನೊಂದಿಗೆ, ಸೋಲಲಾರೆ
ನೆನಪಿರಲಿ ನೀ ನನ್ನ ಬಿಡಲಾರೆ, ಬಿಟ್ಟು ಬದುಕಲಾರೆ.. 
@ಹನಿಬಿಂದು@
11.05.2026

ಶನಿವಾರ, ಮೇ 9, 2026

ಗಝಲ್

ಗಝಲ್

ನನ್ನ ನೋವನೆಲ್ಲಾ ಹಂಚಿಕೊಳ್ಳುವವರಿಲ್ಲ ಎಂದು ಕೊರಗಬೇಡ ಮನವೇ
ನಿನ್ನಾತ್ಮ ನಿನ್ನೊಳಿಹುದು ಗುರುವಾಗಿ ಗೆಲುವಾಗಿ  ಅಳುಕಬೇಡ ಮನವೇ

ಮೋಸ ವಂಚನೆ ಹೊಟ್ಟೆಕಿಚ್ಚು ತುಂಬಿಹುದು ಈ ಜಗದಲಿ ಇಂದು 
ಜೊತೆಗೆ ಒಳ್ಳೆಯತನ ಬಯಸುವ ಜನಗಳ ಕೊರತೆ ಇರದು ಇಲ್ಲಿ, ಅಂಜಬೇಡ ಮನವೇ

ದಾರಿಯಲಿ ನಡೆವಾಗ ಕಲ್ಲು ಮುಳ್ಳುಗಳಲಿ ಎಡವುದು ಸಹಜವೇ
ಬಿದ್ದರೂ ಮತ್ತೆ ಎದ್ದು ನಿನ್ನ ನೀನೇ ಹುರಿದುಂಬಿಸು, ಹೆದರಬೇಡ ಮನವೇ

ಮಳೆಗಾಲ ಚಳಿಗಾಲ ಬೇಸಿಗೆ ಕಾಲಗಳಾಗಿ ಬದಲಾಗುವುದು ಕ್ಷಣವು 
ಬರಗಾಲ ಬದಲಾವಣೆ ಬದುಕಲಿ ಬರುವುದು ಸಹಜ, ನಡುಗಬೇಡ ಮನವೇ

ಹನಿ ಹನಿ ಸೇರಿದರೆ ತುಂಬುವುದು ಕೆರೆ ಕೊಳವು ಬಾಳ ಬಯಲಲಿ
ಹನಿಬಿಂದುವಿನಲಿದೆ ಧೈರ್ಯ ಸ್ಥೈರ್ಯ ಮುನ್ನುಗ್ಗುವ ಹೃದಯ, ಬಿಡಬೇಡ ಮನವೇ.. 
@ಹನಿಬಿಂದು@

ಗುರುವಾರ, ಮೇ 7, 2026

ನಂಬಿಕೆ

ಕಳೆದು ಹೋದ ನಂಬಿಕೆ
ಬರಲದು ಕಷ್ಟವು
ಗಳಿಸಲು ಬೇಕು ಹೊಸ ಸ್ನೇಹ
ಮರುಕಳಿಸದು ಪುನಃ
ನಂಬಿಕೆ ಪುನರಪಿ
ಬದುಕಿನ ಬೇರಿದು ಕಾಣಾ

ನಂಬಿಕೆ ಬದುಕು ಪಾದದ ಸ್ಪರ್ಶ
ಪ್ರೀತಿಯ ಸಿಂಚನ ತಮ್ಮ
ಗಂಗೆಯ ಹಾಗೆ ಧುಮುಕುತ ಬಂದು
ನೀತಿಯ ಕಲಿಸುವುದು ಅಮ್ಮ

ಹೊಸ ಹೊಸ ಜನರ
ಪರಿಚಯ ಜಗದಿ
ಬಾಳದು ಒಂದೇ ಕಡೆಗಿರದು
ಹಳಬರ ಮರೆತು ಹೊಸದಿನ ಕಳೆವುದು
ಬಾಳಿನ ದಿಕ್ಕಿನ ಬದಲು
@ಹನಿಬಿಂದು@


ಟಂಕಾ

ಟಂಕಾ 

ಬಾರೀ ಬರ್ಸಗೆ
ರೇಡ್ಯೊಡ್ ಪಂತೆರ್ ಗೆ
ಕಾತ್ ಕುಲ್ಲುದೆ
ಬಯ್ಯಡಾಂಡಲ ಬರ್ವಾ
ನಾಲ್ ಪನಿ ಬೂಮಿಗ್
@ ಹನಿಬಿಂದು@
07.05.2026

ಮಂಗಳವಾರ, ಮೇ 5, 2026

ಗಝಲ್

ಗಝಲ್

ನಿನ್ನೊಲವ ಮೂಟೆಯನು ಬರಿದಾಗಿಸದಿರು ಮನವೇ
ನನ್ನುಸಿರ ಉಸಿರಿಗೆ ಉಸಿರಾಗಿರು ಮನವೇ.. 

ಪ್ರೀತಿಯ ದಾಹದಲಿ ಹಂಬಲಿಸುವ ಹಸಿದ ಹೊಟ್ಟೆಗಳೆಷ್ಟೋ.. 
ಪ್ರೇಮದಲಿ ಅರಳಿದ ಹೂವು ಬಾಡದಿರು ಮನವೇ.. 

ನೋವ ಕಳೆದು ಹಿತ ನೀಡುವ ಔಷಧ ಅಕ್ಕರೆ
ಕಾವು ಕೊಟ್ಟು ಸದಾ ಕಾಪಾಡುತಿರು ಮನವೇ

ನದಿಯ ತಟದಲಿ ನಿಂತು ನೀರಿಗೆ ಕಲ್ಲೆಸೆಯುವ ಕಾರ್ಯ ಸಾಗದಿರಲಿ
ಕದಿಯ ಬಂದಿರುವೆ ಹೃದಯ, ಮುಚ್ಚಿಡದಿರು ಮನವೇ

ಹನಿ ಹನಿಯ ಆಸೆಯಲಿ ಬರಡಾದ ನೆಲದ ದನಿ ಇದು 
ಹನಿಬಿಂದುವಿನ ಬದುಕಿನಲಿ ನಲಿವ ಕನಸು ಮುದುಡದಿರು ಮನವೇ.. 
@ಹನಿಬಿಂದು@
06.05. 2026

ಚಿಟ್ಕಾ

ಆಲ್ 
ಆಲ್ ಬತ್ತಲ್ ಎನ್ನ ಕೈತಲ್
ತೂದು ಕಿಸ್‌ಕ್ಕ ತೆಲ್ತಲ್
ತೆಲ್ತ್ ಮರ್ಲ್ ಕಟ್ಟಾಯಲ್
ಇನಿ ಆನ್ ಬಾಲೆ ಪೆದ್ಯಲ್ 
@ಹನಿಬಿಂದು@

ಸೋಮವಾರ, ಮೇ 4, 2026

ಗೆಳತಿಯಿರಬೇಕು

ಗೆಳತಿಯಿರಬೇಕು

ಕಷ್ಟ ಸುಖಗಳ ಹೇಳಿ ಮನಸನ್ನು ಹಗುರವಾಗಿಸಲು ಹತ್ತಿರದ ಒಬ್ಬಳು ಗೆಳತಿಯಿರಬೇಕು
ತಲೆ ಸಿಡಿದು ಒಡೆದು ಹೋಗುವುದೆಂಬ ತಲೆಬಿಸಿಯ ಸಮಯದಲಿ ಮನ ತಣ್ಣಗಾಗಿಸಲು ಒಂದು ಗೆಳತಿಯಿರಬೇಕು

ನಮ್ಮ ಬೇಗುದಿಯ ಮಾತುಗಳನ್ನು ತಾಳ್ಮೆಯಿಂದ ಆಲಿಸಿ ಪರಿಹಾರ ಸೂಚಿಸಲು ಒಬ್ಬ ಗೆಳತಿಯಿರಬೇಕು
ನೋವಿನ ಎಲೆಗಳ ನಡುವೆ ಸಂತಸದ ಪಾಯಸವ ಉಣಿಸಲು ಮುಗ್ಧ ಮನದ ಒಬ್ಬ ಗೆಳತಿಯಿರಬೇಕು

ತಲೆಯೆಲ್ಲಾ ಹನ್ನೆರಡಾಣೆ ಆಗಿಹೋಗಿದೆ, ನೆಮ್ಮದಿ ಬೇಕೆನುವ ಕಾಲಕ್ಕೆ ಒಬ್ಬ ಗೆಳತಿಯಿರಬೇಕು
ನಮ್ಮ ಮುದ್ದು ಮಗುವಿನ ತುಂಟಾಟವನ್ನೆಲ್ಲ ತಪ್ಪದೆ ತೋರಿಸಿ ಮನ ಸಂತಸಪಡಿಸಿಕೊಳ್ಳಲು ಒಬ್ಬ ಗೆಳತಿಯಿರಬೇಕು

ನಿನ್ನಿಂದ ನಾನೇನು ಕಡಿಮೆಯಿಲ್ಲ, ನನಗೆ ನೀನೇ ಬೇಕು, ನೀನಿದ್ದರೆ ಸಾಕೆನಗೆ ಎನುವ ಗೆಳತಿಯಿರಬೇಕು
ಕಣ್ಣಿಂದ ಕಾಣದಿದ್ದರೂ ನಮ್ಮನ್ನು ಸಂಪೂರ್ಣ ನಂಬಿರುವ ಬಿಚ್ಚು ಮನಸ್ಸಿನ ಒಬ್ಬ ಗೆಳತಿಯಿರಬೇಕು

 ನರಿ ಕೋಳಿ ಕುರಿ ನಾಯಿ ಏನೇ ಬೊಗಳಲಿ ಕ್ಯಾರೇ ಅನ್ನದಿರುವ ಒಬ್ಬ ಗೆಳತಿಯಿರಬೇಕು
ನಾಲ್ಕು ಜನ ನಮ್ಮನ್ನು ದೂರುವಾಗ ಮನುಷ್ಯ ಅಂದರೆ "ನೀನು ಕಣೋ" ಎನ್ನುವ ಗೆಳತಿಯಿರಬೇಕು

ನಾವೇನು ನಮ್ಮ ಶಕ್ತಿಯೇನು ಎಂಬುದರ ಅರಿವಿಲ್ಲದ ನಮಗೆ ನಮ್ಮ ಶಕ್ತಿಯನ್ನು ತೋರಿಸಿಕೊಡಲೊಂದು ಗೆಳತಿಯಿರಬೇಕು
ಬಂಜರಾದ ಗಾಢ ಮರುಭೂಮಿಯಲ್ಲಿ ಓಯಸಿಸ್ ಇದ್ದಂತೆ ಬೆಂಗಾವಲಾಗಿ ನೆಲೆ ನಿಲ್ಲಿಸುವ ಬದುಕಿಗೆ ಒಬ್ಬ ಗೆಳತಿಯಿರಬೇಕು
@ಹನಿಬಿಂದು@
04.05.2026

ಶನಿವಾರ, ಮೇ 2, 2026

ನೀನಿರಬೇಕಿತ್ತು

ನೀನಿರಬೇಕಿತ್ತು ಜೊತೆಗೆ 

ಅನ್ನಿಸುತ್ತದೊಮ್ಮೊಮ್ಮೆ ಸಂಜೆಯ ಸಂಧ್ಯಾರತಿ ವೀಕ್ಷಿಸಲು ಹೊರಟಾಗ ಕೈಗೆ ಕೈ ಬೆಸೆದು, ಬೆರಳ ಸಂಧಿಯೊಳಗೆ ಬೆರಳುಗಳ ಜೋಡಿಸಿ ನಡೆಯಲು ನೀನಿರಬೇಕಿತ್ತು ಜೊತೆಗೆ... 

ಅನ್ನಿಸುತ್ತದೊಮ್ಮೊಮ್ಮೆ ಮಲಗಿ ನಿದ್ರಿಸಲು ಬಂದಾಗ ತಲೆದಿಂಬಿನಂತೆ ತಲೆಯಿಟ್ಟು ಮಲಗಿಸುವ ಕೈಗಳನ್ನು ಚಾಚಿ ಅಪ್ಪಿ ಮುದ್ದಿಸಲು ನೀನೇರಬೇಕಿತ್ತು ಜೊತೆಗೆ.. 

ಅನ್ನಿಸುತ್ತದೊಮ್ಮೊಮ್ಮೆ ಅಲಂಕಾರ ಮಾಡಿಕೊಂಡು ಕನ್ನಡಿ ನೋಡುತ್ತಿರುವಾಗ ಎವೆಯಿಕ್ಕದೆ ನೋಡಿ ಹಿಂದಿನಿಂದ ಬಂದು ತಬ್ಬಿ ಮುದ್ದಾಡಲು ನೀನಿರಬೇಕಿತ್ತು ಜೊತೆಗೆ.. 

ಅನ್ನಿಸುತ್ತದೊಮ್ಮೊಮ್ಮೆ ಎದೆಯಲ್ಲಿ ಬಚ್ಚಿಟ್ಟ ಹಲವಾರು ಮಾತುಗಳ ಪೋಣಿಸಿ ಮಾಲೆ ಕಟ್ಟಿ ಕೊರಳಿಗೆ ತೊಡಿಸಲು ನೀನಿರಬೇಕಿತ್ತು ಜೊತೆಗೆ.. 

ಅನ್ನಿಸುತ್ತದೊಮ್ಮೊಮ್ಮೆ ಬಿಸಿಲು ಹೋಗಿ ಗುಡುಗು ಸಿಡಿಲುಗಳ ಜೊತೆ ಮಳೆ ಬರುವ ಸಮಯದಲಿ ಭಯವ ಓಡಿಸುವ ಬೆಳಕಾಗಿ ನೀನಿರಬೇಕಿತ್ತು ಜೊತೆಗೆ.. 
@ಹನಿಬಿಂದು@
 02.05.2026

ಸೋಮವಾರ, ಏಪ್ರಿಲ್ 27, 2026

Beg...

Beg...

Hunter you don’t ask,  
For unwanted gifts and offerings
 Hunter Ask for what you  need
  A life that never fades

Sitting still, in your  home 
Life’s flower begins to wither
People  “never forget to count
As they are tangled in endless* counts

Paying interest, taking loans
Losing sense, and dying within
Falling, rising, never smiling
Why live like a fool this life?

Rise and fall, laugh and smile
Spend these few fleeting days
Find victory even in defeat
And man,  leave like  Buddha, in peace! 

Burning in the fires here
Bathing in the cold waters
Through all chaos and pain
Live on with gratitude

Ask for courage and bravery
A fearless mind and heart
Hunter,  beg for grand mansions
Ask for a castle without suffering
@HoneyBindu@
27.04.2026

ನವಪುರಂ ಯಾನ

ನವಪುರಂ ಯಾನ 

ಬಂತದೋ ಮಹಾಲಕ್ಷ್ಮಿ ಬಿಳಿಯ ಬಸ್ಸು
ಬೆಟ್ಟ ಹತ್ತುವಾಗಲೇ ಎಲ್ಲರೂ ಅಲ್ಲೇ ಸುಸ್ತು
ಆಗಲೇ ಬಂತು ಇಡಿಯಪ್ಪ , ಶ್ಯಾವಿಗೆ ಕಡ್ಲೆ ಗಸಿ 
ತಂದಿತು ಕವಿ ಹೃದಯಕೆ ಭಾರಿ ಹುಮ್ಮಸ್ಸು

ಸೆಕೆಯನು ತಡೆವುದೇ ಪ್ರಯಾಸದ ಮಾತು
ಹತ್ತಲು ಸರಿಯಿತು ಬೇಸರದ ಮಾತು  
ಹಸಿರಿನ ಪರಿಸರ  ಸ್ವಾಗತ ಮಾಡಿತು 
ಚಂಡೆಯ ನಾದ ಮನ ಸಂತೋಷ ತಂದಿತು

ಪುಸ್ತಕ ಸಮರ್ಪಣೆ ಮಾಡಲು ಖುಷಿಯೂ
ಮುತ್ತು ಕೊಡೆಯ ಬಣ್ಣದ ಹಿತವೂ
ಕನ್ನಡ ಮಲಯಾಳಂ ಭಾಷೆಗಳೈಕ್ಯವೂ
ಹಿರಿ ಕಿರಿಯರ ಬಳಗದ ಸಖ್ಯವೂ

ಅಂದದ ಪ್ರಶಸ್ತಿ ಪ್ರಧಾನ ಕಾರ್ಯ
ಚಂದದ ಮಕ್ಕಳ ನೃತ್ಯದ ಶೌರ್ಯ 
ಬೆಂದ ಸಾಗರದ ಮಾತಿನ ಮೌಲ್ಯ
ವಂದ್ಯ ನಾರಾಯಣ ಗುರುಗಳ ಕಾರ್ಯ

ಅಲ್ಲಲ್ಲಿ ಹಾಸ್ಯ ಚಟಾಕಿಯ ಲೇಪ
ಭಾಷಣ ಹಾಡು ಕಲಿಯಲು ಇದು ನೆಪ  
ಹಂಚಿ ತಿನ್ನುವ ಗುಣದ ಪಾಲನೆ ಇಲ್ಲಿ
ಬೇಧವೇ ಇಲ್ಲದ  ಭಾವನೆ ಎಲ್ಲರಲಿ

ಚುರುಕಿನ ಪಟಾಕಿ ಹಾರಲು ನಗುವು
ಮೂಕಾಭಿನಯಕೆ ಭಟ್ಟರ ಒಲವು
ಪುಸ್ತಕ ದೇವಿಗೆ ಸಾಹಿತ್ಯದ ಹರಿವು
ಹಲವು ಭಾಷೆಗಳ ನುಡಿ ಸಂಗಮವು

ಮಾವಿನ ಹಣ್ಣು ಚಕ್ಕುಲಿ ಹಾಗಲ
ತಿನ್ನುತ ಸಾಗಿತು ಪಯಣದ ಜಾಲ
ಹಳೆಯ ಹಾಡಲಿ ನೆನಪಿನ ಕಲರವ
ಹೊಸ ತಲೆಮಾರಿಗೆ ಸಿಂಚನ ಸೌರವ

ಸವಿ ಹೃದಯದ ಕವಿ ಮಿತ್ರರ ಸಂಗಮ
ಕವಿ ಮನಗಳ ಜೊತೆ ಬೆರೆಯುವ ಸಂಭ್ರಮ
ಹೋಳಿಗೆ ಪಾಯಸ ಪರಿಮಳ ಘಮಘಮ
ಸಹಾಯ ಹಸ್ತವ ನೆನೆಯುವ ಹೃನ್ಮನ

ತಂಪಿನ ಮಳೆಯು ಸುರಿಯಲು ಗಗನದಿ 
ಕಂಪಿನ ಕವಿ ಸಂಕುಲ ಮೆರೆಯಿತು ಹರುಷದಿ
ಬಿಸಿ ಬಿಸಿ ನೀರು ತಂಪಿನ ಮಜ್ಜಿಗೆ
ನಗುಮೊಗದಿಂದಲೇ ಬಡಿಸಿದ ಆ ಬಗೆ

ಸರ್ವರು ಖುಷಿಯನು ಪಡಲದು ಪಾವನ
ಕವಿಗಳ ಬಳಗಕೆ ನನ್ನಯ ನಮನ🙏
@ಹನಿಬಿಂದು@ 
28.04.2026

ಗಝಲ್

ಗಝಲ್

ನಮ್ಮ ಬದ್‌ಕ್‌ದ ಬಿಲೆ ನಮಕ್ ಗೊತ್ತಾವೊಡು 
ಬೇತೆಕ್ಲೆನಲಾ ಬಂಜಿದ ಬಡವು ಜನಕ್ ಗೊತ್ತಾವೊಡು

ಬಾರಿ ಮಲ್ಲ ಮಲ್ಲ ಪಾತೆರುನಕ್ಲು ಉಲ್ಲೆರ್
ಒರಿನಕ್ಲೆನ ಬೇನೆ, ಅಕ್ಲೆನ ಪಿರಾಕ್ ಗೊತ್ತಾವೊಡು

ನಡತಿನಾಯನ ಬಂಙ ಕುಲು ತಿನ್ಪಿನಾಯಗ್ ಗೊತ್ತಿಜ್ಜಿ 
ಅಪ್ಪೆ ಮಟ್ಟೆಲ್ದ ಬೇಜಾರ್ ಉಡಲ್ದ ಕಲೊಕ್ ಗೊತ್ತಾವೊಡು

ಬಿತ್ತ್ ಪಾಡ್ದ್ ಮಲ್ಲ ಮಲ್ತ್ ಬೇತೆಕ್ಲೆಗ್ ತಿನ್ಪಾವೆ ಬೆನ್ಪಿನಾಯೆ
ನಡುತ ಬೇಲೆದ ಸಗ್‌ತಿ ಪರ ಕೈಕ್ ಗೊತ್ತಾವೊಡು

ಪನಿ ಬರ್ಸೊದ ಕಾಪು ಕಂಡೊದ ಮನ್ನ್‌ಗ್ ಮಾತ್ರನಾ 
ಬರ್ಸ ಬೂರುನ ಕಜ್ಜ ಮಾನಿಲೆ ತರೆಕ್ ಗೊತ್ತಾವೊಡು..
@ಹನಿಬಿಂದು@
27.04.2026

ಬುಧವಾರ, ಏಪ್ರಿಲ್ 22, 2026

ಪುಸ್ತಕ

ಪುಸ್ತಕವೇ ದೇವರು

ಪುಸ್ತಕವೇ ದೇವರು ಜ್ಞಾನ ಕೊಡುತ್ತದೆ
ಮಸ್ತಕದಿಂದ ಸಾಗರ ಹರಿದು ಬಂದಿದೆ 
ಭಕ್ತಿಯಿಡುವ ಜ್ಞಾನದಲ್ಲಿ ಬುದ್ಧಿ ಬೆಳೆಯುವಂತಿದೆ
ಶಕ್ತಿ ಇದುವೆ ಬಾಳಿನಲ್ಲಿ ಸಹಾಯವಾಗುವಂತಿದೆ

ಅಕ್ಷರಗಳು ಸೇರಿ ಇಲ್ಲಿ ಪದಗಳಾಗಿ ಹೊಮ್ಮಿವೆ
ಪದ ಪದಗಳ ಮಾಲೆಯಲ್ಲಿ ವಾಕ್ಯವಾಗಿ ಮೆರೆದಿವೆ
ಹೊಸದಾದ ಅರ್ಥವಿಲ್ಲಿ ಬೆಳೆದು ನಮ್ಮ ಬೆಳೆಸಿದೆ
ತಲೆ ತಗ್ಗಿಸಿ ಓದುವಾಟ ತಲೆಎತ್ತಿ ಕುಳ್ಳಿರಿಸಿದೆ

ನಮ್ಮ ನಿಮ್ಮ ಎಲ್ಲ ಇಲ್ಲಿ ಪುಸ್ತಕ ಪ್ರೀತಿ ಒಗ್ಗೂಡಿಸಿದೆ
ತಮ್ಮ ತಮ್ಮ ಬರಹದಲ್ಲಿ ಜ್ಞಾನ ಹರಿದು ಬರಲಿದೆ
ಕವನ ಕಾವ್ಯ ಸಾಹಿತ್ಯದ ಹೊಳೆಯಲಿ ಮನ ಮಿಂದಿದೆ 
ಸಹಜವಾದ ಬಾಳು ಗುರಿಯ ತಲುಪಲಿಲ್ಲಿ ನಿಂತಿದೆ
@ಹನಿಬಿಂದು@
22.04.2026

पुस्तक

पुस्तक ही है ईश्वर
पुस्तक ही है ईश्वर, ज्ञान की रोशनी लाए,
अंधेरे मन के भीतर, उजियारा भर जाए।
पढ़ते-पढ़ते धीरे-धीरे, बुद्धि खिलती जाए,
जीवन की हर राह में, सही दिशा दिखाए।
अक्षर मिलकर शब्द बने, शब्दों से बात बने,
सीख की छोटी-छोटी बातें, जीवन की सौगात बने।
नए-नए अर्थों से ये, आगे बढ़ना सिखाए,
झुककर जो पढ़ता है, वो सिर ऊँचा उठाए।
पुस्तकों में छिपा हुआ, हम सबका ये प्यार,
हर पन्ने से मिलता है, ज्ञान का उपहार।
कविता, कहानी, शब्दों में, मन खो सा जाता है,
सच्चे जीवन का रास्ता, यहीं समझ में आता है।
— @हनीबिंदु
22.04.2026

ಸೋಮವಾರ, ಏಪ್ರಿಲ್ 20, 2026

ಮನದನ್ನೆ

ಮನದನ್ನೆ ... 

ಮನದನ್ನೆ ಕೈಹಿಡಿದು ಮನದೊಳಗೆ ಬರುವಾಗ
ಮನಸಿನ ಒಳಗೆ ತಕದಿಮಿತ
ಮನಸಿನ ಒಳಗೆ ತಕದಿಮಿತ ಕಣ್ಣಲ್ಲಿ
ಮದನನ ಬಾಣ ನೆಟ್ಟಂತೆ..

ಜೊತೆಯಾಗಿ ಕೈ ಹಿಡಿದು ನಡೆಯುತ್ತಾ ಸಾಗಲು 
ಸ್ವರ್ಗವೇ ಧರೆಗೆ ಇಳಿದಂತೆ 
ಸ್ವರ್ಗವೇ ಧರಿಗೆ ಇಳಿದಂತೆ ಎದೆಯೊಳಗೆ 
ಸಾವಿರ ಕುದುರೆಗಳು ಕುಣಿದಂತೆ 

ಒಟ್ಟಾಗಿ ಕುಳಿತು ಊಟವ ಮಾಡಲು
ಒಂದೆರಡು ತುತ್ತು ಹೆಚ್ಚಾಗಿ 
ಒಂದೆರಡು ತುತ್ತು ಹೆಚ್ಚಾಗಿ ತಿನ್ನುತ್ತ 
ಸಮಯ ಕಳೆದದ್ದೆ ಅರಿವಿಲ್ಲ
@ಹನಿಬಿಂದು@
20.04.2026

ಸೋಮವಾರ, ಏಪ್ರಿಲ್ 13, 2026

ಬಿಸು

ಬಿಸು 

ಬಂದಿದೆ ಬಿಸು ಹೆಸರ ಹೊಸವರ್ಷ
ತಂದಿದೆ ಸರ್ವ ಮನಕೆ ನವಹರ್ಷ
ಬೆಳೆದ ತರಕಾರಿಗಳ ಹೊಸಕ್ಕಿಯೂಟ
ಸುಂದರ ಹಸಿರು ಪ್ರಕೃತಿ ನೋಟ
@ಹನಿಬಿಂದು@
 13.04.2026

ಶನಿವಾರ, ಏಪ್ರಿಲ್ 4, 2026

ಎಲ್ಯ ಕತೆ

ಪಾಸ್ 

ಆಯೆ ಈ ವೊರ್ಸೊಡು ಪತ್ತನೆ ಕ್ಲಾಸ್. ಪಾಸ್ ಆಪಿನ ವಾ ಲಕ್ಷನಲಾ ಇತ್ತಿಜಿ. ಅವು ಆಯಗ್ಲಾ ಗೊತ್ತಿತ್ತ್‌ಂಡ್. ಆಯೆ ಇಡೀ ವೊರ್ಸೊಡು ಆ ಒರೆಸುನ ಮೊಬೈಲ್ ಪೋನುನು ಒರೆಸ್ ಒರೆಸ್ ದ್ ಕಾಲ ಕಲೆಯೆ. ಇತ್ತೆ ಬೊಬ್ಬೆ ಪಾಡ್ಂಡ ದಾದ ಪ್ರಯೋಜನ? ಐಕ್ ಆಯೆ ದೇವೆರೆಡ ನಟ್ಟಿಯೆ. ಪರಕೆ ದೀಯೆ. ದಾದನೊ ಪುಣ್ಯೊಗು ಬರಿಟ್ ಶೋಕು ಬರೆಪಿನ ಪೊನ್ನು ಕುಲ್ದಿತ್ತಲ್. ಪೂರ ಪಾಸ್ ಆಪಿನಾತ್ ಪಂದ್, ತೋಜಾದ್ ಕೊರಿಯಲ್. ಅನ್ನೆ ಪಾಸ್. ‌ಟೀಚರ್ನಕ್ಲೆನ ವಾ ಪುಗರಾಟ! 
@ಹನಿಬಿಂದು@
04.04.2026

ಗುರುವಾರ, ಏಪ್ರಿಲ್ 2, 2026

ಟಂಕಾ

ಟಂಕಾ

ಇಲ್ಲದುಲಾಯಿ 
ಕುಲ್ಲುದೇ ಬೆಲೆಯಿತ್ತೆ
ಪಿದಾಯಿ ಇಜ್ಜಿ
ವಿಟಮಿನ್ ಡಿ  ಬೋಡು
ಬೇಲೆ ಇಡೀ ದಿನಗೆ...
@ಹನಿಬಿಂದು@
02.04.2026

ಸೋಮವಾರ, ಮಾರ್ಚ್ 23, 2026

ಐನೆಸಲ್

ಐನೆಸಲ್

ಸೆಕೆ ನಂಕ್ ಎಚ್ಚಾಂಡ್ 
ಕಾಡ್ ಪೂರ ಕಡ್ತ್‌ದಾಂಡ್
ಊರು ಬುಲೆವೊಂದುಂಡು
ಕಟ್ವನೊಲು ಏರೊಂದುಂಡು 
ಬ‌ದ್ಕುನ ತಾದಿಗ್ ಅಡ್ಡ ಕಟ್ಟ್‌ದ್ ಆಂಡ್!
@ಹನಿಬಿಂದು@
23.03.2026

ಭಾನುವಾರ, ಮಾರ್ಚ್ 22, 2026

ಸಾವಿತ್ರಿ ಫುಲೆ

ಸಾವಿತ್ರಿ ಫುಲೆ 

ಅಕ್ಷರದ ಮೊದಲ ಮಾತೆ! ಎಲ್ಲರ ಸ್ಮರಣೀಯ ದಾತೆ 
ಪಕ್ಷ ರಹಿತ ಕಲಿಕೆ ಕಾರ್ಯ ನಡೆಸಿ ಮನವ ಗೆದ್ದ ಪ್ರೀತೆ//

ಸರ್ವ ಮನುಜ ಮಹಿಳೆಯರ ಉದ್ಧಾರಕೆ ದುಡಿದ ಗೀತೆ
ಗಂಡು ಹೆಣ್ಣು ಒಂದೇ ಎಂಬ ಕಾರ್ಯಕೆ ಅಣಿ ಇತ್ತ ಸೀತೆ//

ಅಕ್ಷರಗಳ ಓದಿ ತಿದ್ದಿ ಜ್ಞಾನಕೆ ಗುರಿ ಕೊಟ್ಟ ನೀರೆ
ಸಕಲ  ಮಂದಿ ಎದೆಯೊಳಗೆ ದೀವಿಗೆ ಹಚ್ಚಿಿಟ್ಟ ಧೀರೆ//

ಓದು ಬರಹ ಮುಖ್ಯವೆಂದು ಸಾರಿ ಸಾರಿ ಕೂಗಿರುವ ನಾರಿ
ಕಷ್ಟವ ಬದಿಗೊತ್ತಿ ಮಹಿಳಾ ಸಾಕ್ಷರತೆಗೆ ಪುಟವಿಟ್ಟ ದಾರಿ//

ಸಾವು ಗೆಲ್ಲಿಸಿ ಬಂದಂತಹ ಸಾವಿತ್ರಿಯಂತ ವೀರ ಮಾತೆ
ನಾವು ನೀವು ಎಲ್ಲರೂ ಪೂಜಿಸಬೇಕಾದ ಅಕ್ಷರ ದಾತೆ//
@ಹನಿಬಿಂದು@
22.03.2026
 

ಹನಿ

ಹನಿ 

ಬರಬೇಕು ಇರಬೇಕು ತಿನ್ಬೇಕು ನಿತ್ಯ
ಬರ ಬಾರದೆ ಬಾಳಬೇಕು ಸತ್ಯ
ಬರ ಬಾರದೆ ಬದುಕಲು ಹಸಿರಿರಬೇಕು
ಹಸಿರೇ ಉಸಿರೆನುತ ಮರ ಕಡಿಯಬೇಕು!!!! 
@ಹನಿಬಿಂದು@
22.03.2026

ಶುಕ್ರವಾರ, ಮಾರ್ಚ್ 6, 2026

ಪೆಲಕ್ಕಯಿ

ಪನಿ ಕಬಿತೆ
ಪೆಲಕ್ಕಯಿ

ಕೊರಿಯೆರ್ ಒಂಜಿ ತುಂಡು ಪೆಲಕ್ಕಯಿ
ಬರಿತ ಇಲ್ಲದ ರೀಟಾ ಬಾಯಿ
ತಿನಿಯರೆ ಪಂದ್ ಕುಲ್ಲುನಗ 
ನಾಲ್ ಜನ ಬಿನ್ನೆರ್ ಬತ್ತೆರ್
ಬುಡೊಂದು ಅಕ್ಲೆನ ಬಾಯಿ
ಮೂರ್ದು ತೂನಗ ಪೆಲಕ್ಕಯಿ ಕಾಯಿ!
@ಹನಿಬಿಂದು@
06.03.2016

ಸೋಮವಾರ, ಫೆಬ್ರವರಿ 16, 2026

ತುಳು ಕಬಿತೆ

ಪಾತೆರ ಕತೆ ಕಬಿತೆ
ಕಲ್ಪುಲ ಮಗ....

ಮಗೆ : ಚೆನ್ನೆಮಣೆ ಗೊಬ್ಬುನೆಂಚ ಪನ್ಲೆ ಎಂಕ್ ಅಮ್ಮ
ಅಪ್ಪೆ: ಐಕ್  ಮನೆಲ ಕಾಯಿಲ ಬೋಡು ಮಗ ನಮ್ಮ
ಮಗೆ: ಅಂಗಡಿಡ್ದ್ ಕಂತ್ ಕೊರ್ಲೆ ಅಮ್ಮ ಎಂಕ್ ಅವೆನ್
ಅಪ್ಪೆ: ಅಂಗಡಿಡ್ ತಿಕ್ಕುನತ್ತ್ ಮರಟ್ ಮಲ್ಪುನವೆನ್

ಮಗೆ: ಮರನ್ ಕನಕ, ನಮಲ ಮಲ್ತ್ ಗೊಬ್ಬುಗತ್ತೆ ಅಮ್ಮ
ಅಪ್ಪೆ: ಗಿಡ ಮರೊನು ಕಡ್ತ್‌ಂಡ ಸಾಪ ಪನ್ಪೆರತ್ತ ತಿಮ್ಮ..
ಮಗೆ: ಅಪಗ ಯಾನ್ ಅವೆನ್ ಇನಿ ಗೊಬ್ಬುನೆಂಚ ದೇವೆರೆ
ಅಪ್ಪೆ: ಅಜ್ಜಿ ಮಲ್ತ್ ಕೊರಿನ ಮನೆ ಅಟ್ಟೊಡಿಪ್ಪು ತೂಕ

ಮಗೆ: ಇತ್ತೆನೆ ಯಾನ್ ಅಟ್ಟ ಮಿತರ್ ನಾಡ್‌ದೊರ ತೂಪೆ
ಅಪ್ಪೆ: ಆವು ಮಗ ಲಲ್ತಕ್ಕನ  ಇಲ್ಲಗೊರ ಪೋಪೆ
ಮಗೆ: ಅಲ್ಪ ದಾದ ಉಂಡು ನಮಕ್ ಇತ್ತೆ ಪೋಪಿ ಲೆಕ್ಕ
ಅಪ್ಪೆ: ಗುಲಗುಂಜಿದ ಮರ ಉಂಡು ಕಾಯಿ ಬೂರ್‌ದಿಪ್ಪು 

ಮಗೆ: ಆವು ಅಪ್ಪೆ ಬೇಗ ಕನಲೆ ಗೊಬ್ಬು ಸುರು ಮಲ್ಪುಗ
ಅಪ್ಪೆ: ಯಾನ್ ಇತ್ತೆ ಪತೊಂದು ಬರ್ಪೆ ನಾಡ್ ದೀಲ ಬೇಗ
ಮಗೆ: ಗೊಬ್ಬರಿನಿ ಪೂರ ಕಲ್ತ್  ಯಾನೆ ಅವೆಟ್ ಗೆಂದೊಡು 
ಅಪ್ಪೆ: ದೇವೆರೆಡ್ಡೆ ಮಲ್ಪಡ್ ಮಗ ಇನಾಮು ನಿಕ್ಕೆ ತಿಕ್ಕಡ್ 
@ಹನಿಬಿಂದು@
17.02.2026

ಶನಿವಾರ, ಫೆಬ್ರವರಿ 14, 2026

ಮಲ್ಲ ಬಿನ್ನೆ

ಮಲ್ಲ ಬಿನ್ನೆ

ಪಾರ್ ಬತ್ತ್ ಪಂಡಲಾಲ್ ಎಲ್ಯ ಬಾಲೆಯೆ
ಅಮ್ಮ ಬೇಗ ಬಲೇ ಇತ್ತೆ ಮೂಲು ತೂಲೆಯೆ
ದಾದ ಆಂಡ್ ಪಂದ್ ಯಾನ್ ಪೋಡ್ದ್ ಪೋಯೆಯೆ
ಬೇಗ ಬತ್ತ್ ತೂನಗಲ್ಪ ಮಲ್ಲ ಬಿನ್ನೆಯೆ//

ಎನನೆ ತೂದು ಅಂಚಿ ಇಂಚಿ ಮಂಡೆ ತಿರ್ಗಯೆ
ಈರ್ ಇತ್ತೆ ತೂಯರಾಂದ್ ಮೋನೆ ತೋಜಯೆ
ಪೋಡಿ ಪೋಯಿ ಯಾನ್ ದೂರ ಉಂತು ತೂಯೆಯೆ
ಆಯೆ ಬೇಗ ಪೋವಡ್ಂದ್ ನಮಲ ಕಾತಯೇ//

ಮಲ್ಲ ಬಿನ್ನೆ ಒವ್ವ ಎಲಿನ್ ಗಿಡ್ತೊಂದು ಬೈದಿನಿ
ಕೈಕ್ ತಿಕ್ಕಂದಿನೆಕ್ ಅಲ್ಪ ಕಂಡ್ ಕುಲ್ದಿನಿ
ಸಾಕಾದ್ ಆಯೆ ಅಲ್ಪ ಉಂತುದು ನೀರ್ ನಾಡ್ದಿನಿ
ನಮ್ಮ ಬಾಲೆ ಗೊಬ್ಬು ಗೊಬ್ಬುದು ಆಯನ್ ತೂಯಿನಿ//

ತೂದು ಆಲ್ ಪೋಡಿ ಪೋದು ನಮಕ್ ಪಂಡಿನಿ
ಬೂರ್ದು ಲಕ್‌ದ್ ಪಾರ್ ಬತ್ತ್ ನಮಕ್ ಪಂತಿನಿ
ನಮ ಆಯನ್ ತೂದು ಬಾಕಿ ಶೋಕುದ ಜಿಡೆಯೇ 
ಬುಡ್‌ಪದಾಯೆ ಉಂತಿ ಪೊರ್ಲು ತೂದು ಮರ್ಲ್ಯಯೆ//

ಸೆಕೆಕ್ ಮಾತ ಜೀವಿಲೆಗ್ಲಾ ನೀರ್ ಬೋಡುಯೆ
ಕಾಡ್ ಇಜ್ಜಿ ತಲ್ಮೆನಿಜ್ಜಿ  ಮಾತ ದೂಲುಯೆ
ಅಲ್ಪ ಅಲ್ಪ ನೀರ್ ದೀಕ , ಜೀವ ಬದ್‌ಕಡ್ 
ಯಾನ್ಲ ಈರ್ಲ ಮಾತ್ರ ಅತ್ತ್ ಮಾತ ಒರಿಯಡ್//
@ಹನಿಬಿಂದು@
14.02.2026

ಸೋಮವಾರ, ಫೆಬ್ರವರಿ 9, 2026

ಮುಟ್ಟನ್ನು ಮೆಟ್ಟಿ ನಿಲ್ಲೋಣ

ಮುಟ್ಟನು ಮೆಟ್ಟಿ ನಿಲ್ಲೋಣ

ಬನ್ನಿರಿ ನಾರೀ ಶಕ್ತಿ ಮಣಿಗಳೆ
ಮುಟ್ಟಿನ ಗುಟ್ಟನು ಕೇಳೋಣ..
ಕಷ್ಟದ ದಿನಗಳ ಸುಲಭದಿ ಎದುರಿಸೋ
ನೈಸರ್ಗಿಕ ಕ್ರಿಯೆಯನು ತಿಳಿಯೋಣ..//ಬನ್ನಿರಿ//

ಹುಡುಗಿಯು ಮಹಿಳೆ ಆಗುವ ಕಾಲಕೆ
ಅಂಡಾಣು ಬಿಡುಗಡೆ ಸಹಜವದು
ರಕುತದ ರೂಪದಿ ದೇಹವ ತ್ಯಜಿಸೆ
ಮೂರ್ನಾಲ್ಕು ದಿನಗಳ ಕಾಲವದು..//ಬನ್ನಿರಿ//

ಹಿರಿಯರು ಹೊರಗಡೆ ಕೂರಿಸಿ ಬಿಟ್ಟರು
ದೇಹಕೆ ವಿಶ್ರಾಂತಿ ಸಿಗಲೆಂದು
ಕಾಯದ ಸ್ವಚ್ಛತೆ ಬೇಕದು ಎಂದಿಗೂ
ಬಳಸಿರಿ ಶುದ್ಧ ಬಟ್ಟೆಯನು//ಬನ್ನಿರಿ//

ಹೆದರುತ ಕುಳಿತು ಬೇಸರ ಪಡದಿರು
ಸರ್ವ ಹೆಣ್ಣಿಗೂ ಬರುವುದದು
ಮದುವೆಯ ಬಳಿಕ ವೀರ್ಯಾಣು ಸೇರಿ
ಸಂತಾನ ಅಭಿವೃದ್ಧಿ ಆಗುವುದು//ಬನ್ನಿರಿ//

ಮೆನ್ ಸ್ಟುರಲ್ ಕಪ್ಪೋ ನ್ಯಾಪೀ ಪ್ಯಾಡೋ
ಉಪಯೋಗ ನೀ ಕಲಿ ನಿತ್ಯಕ್ಕೆ
ಸ್ವಚ್ಚ ಅಂಗಗಳ ಇಡುತಲಿ ಕಾಪಾಡು
ಆರೋಗ್ಯ ಮುಖ್ಯವು ದೇಹಕ್ಕೆ//ಬನ್ನಿರಿ//

ಹುಡುಗರು ಕೂಡ ತಾಯಿ, ಸಹೋದರಿ
ಮನಗಳ ಅರಿತು ಸಹಕರಿಸಿ
ಮುಟ್ಟಿನ ದಿನದಲಿ ಕೆಲಸವ ಹಂಚುತ
ವಿಶ್ರಾಂತಿ ನೀಡಿರಿ ಮನೆಯಲ್ಲಿ..//ಬನ್ನಿರಿ//

ಮುಟ್ಟದೆ ಇರಲು ಕಾರಣವಿಲ್ಲ
ವಿಜ್ಞಾನದ ಪುರಾವೆ ಇದಕ್ಕಿಲ್ಲ
ಕಬ್ಬಿಣದಂಶ ಕಡಿಮೆ ಆಗಲು
ದೇಹವು ಸುಸ್ತಿಗೆ ಜಾರುವುದಲ್ಲ//ಬನ್ನಿರಿ//

ಹೊಟ್ಟೆಯ ನೋವು ನರಗಳ ಸೆಳೆತ
ನಡೆಯಲು ಕಾಲದು ಎಳೆಯುವುದು
ಪ್ರೀತಿ ಆಪ್ತತೆ ಇರಲು ಮನಸಿಗೆ
ಖುಷಿಯಲಿ ಎಲ್ಲಾ ಮರೆಯುವುದು//ಬನ್ನಿರಿ//

ಬದುಕಿನ ಒಂದು ಸಹಜ ಪ್ರಕ್ರಿಯೆ
ಹೆದರಲೇ ಬೇಡಿ ಮಹಿಳೆಯರೇ
ತಿಂಗಳಿಗೊಮ್ಮೆ ಬರುವ ಮುಟ್ಟನು
ಮೆಟ್ಟಿ ನಿಲ್ಲೋಣ ಲಲನೆಯರೇ//ಬನ್ನಿರಿ//
@ಹನಿಬಿಂದು@
14.03.2024

ನನ್ನ ಕವಿತೆ

ನನ್ನ ಕವಿತೆ

ನನ್ನ ಕವಿತೆ ಸುತ್ತ ಚಿಟ್ಟೆ
ನೃತ್ಯ ಮಾಡಿ ಬರುತಲಿ
ಕಾವ್ಯ ದೇವಿ ಮೈಯ ಮರೆತು ee

ಲೀನವಾಗಿ ನಲಿಯಲಿ 

ರಾಗ ಭಾವ ಲಯ ಸ್ವರಗಳು
ಒಟ್ಟಿನಲ್ಲಿ ಬೆರೆಯಲಿ
ನಿತ್ಯ ಸತ್ಯ ಗತ್ಯ ಮಿಳಿಸಿ
ಕತ್ತಿನಲ್ಲಿ ಕುಣಿಯಲಿ

ನಾಲಗೆಯಲ್ಲಿ ಕುಣಿಯುತಲಿ 
ನೋಟದಲ್ಲಿ ಕಾಣುತಲಿ 
ಭಾವದಲಿ ಸ್ಪುರಿಸುತಲಿ 
ನೋವಿನಲಿ ನಗುವಿರಲಿ

ನೋವನೆಲ್ಲ ಅಳಿಸುತಲಿ 
ಕಷ್ಟಗಳ ಸರಿಸುತಲಿ
ಚಿಂತೆಗಳ ಬಿಸುಟುತಲಿ 
ಕನ್ನಡವ ಹರಸುತಲಿ 
@ಹನಿಬಿಂದು@
27.04.2025

ಜನ ಗಣತಿ

ಜನಗಣತಿ

ಲೆಕ್ಕಾಚಾರವು ಬೇಕಾಗಿತ್ತು ಭಾರತೀಯರ ಅಂದು 
ಏಳ್ಗೆಗಾಗಿ ಸರ್ವರ ಉತ್ತಮ ದೇಶದ ಬಂಧು
ಅದುವೇ ಯೋಜನೆಗಳ ಹಾಕಿಕೊಳ್ಳಲು ಸಿಂಧು
ಜನಮನಗಳ ಲೆಕ್ಕವಿದು ಮಾಡುತ್ತಿರುವೆವು ನಾವೂ ಇಂದು 

ಗಂಡೆಷ್ಟು ಹೆಣ್ಣೆಷ್ಟು, ಕಲಿತವರೆಷ್ಟು ಅವಿದ್ಯಾವಂತರೆಷ್ಟು
ಬಡವರೆಷ್ಟು ಸಿರಿವಂತರೆಷ್ಟು ಮನೆ ಇಲ್ಲದವರು, ಇರುವರೆಷ್ಟು
ಕೃಷಿಕರೆಷ್ಟು ಸರಕಾರಿ ಉದ್ಯೋಗಿಗಳೆಷ್ಟು
ನಾವೆಷ್ಟು ನೀವೆಷ್ಟು ಜನಸಂಖ್ಯೆಯೆಷ್ಟು?

ಲೆಕ್ಕಾಚಾರದ ಪಟ್ಟಿ ಬರೆಯುತ್ತಿದ್ದುದು ಅಂದಲ್ಲಿ
ಇಂದಿಲ್ಲಿ ಮೊಬೈಲ್ ಫೋನುಗಳ ಹಾವಳಿ
ಸರ್ವ  ವರ್ಗಗಳ ನುಂಗಿ ಬಿಟ್ಟಿದೆ ತಾ ಮರೆಯುತ್ತಾ ಇಲ್ಲಿ
ಅಲ್ಪ ಕಾಗದದ ಕಾರ್ಯ ಉಳಿದುದೆಲ್ಲ ಅಂತರ್ಜಾಲದಲಿ

ಲೆಕ್ಕ ಬೇಕಾಗಿದೆ ನಿಜ ಬಡವ ಬಲ್ಲಿದರದ್ದು
ಬಿಟ್ಟು ಬಿಡೋಣ ಜಾತಿ ಮತಗಳ ಸದ್ದು 
ಒಂದಾಗಿ ಬಾಳೋಣ ಇಲ್ಲಿ ನಾವೆಲ್ಲಾ ಒಂದು
ಭಾರತೀಯರು ಒಗ್ಗಟ್ಟಿನಲ್ಲಿ ಬದುಕೋಣ ಎಂದು....
@ಹನಿಬಿಂದು@
09.02.2026

ಐನೆಸಲ್

ತರೆ ಬೇನೆ (ಐನೆಸಲ್)

ಬಂಡೆಗ್ ಸುತ್ಯೆಡ್ ಆಕಿ ಲೆಕ್ಕ
ಬೂಮಿ ಪೂರ ನಡುಗಿ ಲೆಕ್ಕ
ಜನ ಮಾನಿ ಪಾತೆರ್ಂಡ ಕೋಪ
ಗದ್ದಲ ಗೌಜಿ ಕೇನೆರೆ ಆವಂದ್ ಪಾಪ
ಅವು ಒರ್ಕೆನ್ಯಿ ಓ ಯಮುನಕ್ಕ
@ಹನಿಬಿಂದು@
 09.02.2026

ಭಾನುವಾರ, ಫೆಬ್ರವರಿ 8, 2026

ಗಣತಿ

ಜನಗಣತಿ

ಲೆಕ್ಕಾಚಾರವು ಬೇಕಾಗಿತ್ತು ಭಾರತೀಯರ ಅಂದು 
ಏಳ್ಗೆಗಾಗಿ ಸರ್ವರ ಉತ್ತಮ ದೇಶದ ಬಂಧು
ಅದುವೇ ಯೋಜನೆಗಳ ಹಾಕಿಕೊಳ್ಳಲು ಸಿಂಧು
ಜನಮನಗಳ ಲೆಕ್ಕವಿದು ಮಾಡುತ್ತಿರುವೆವು ನಾವೂ ಇಂದು 

ಗಂಡೆಷ್ಟು ಹೆಣ್ಣೆಷ್ಟು, ಕಲಿತವರೆಷ್ಟು ಅವಿದ್ಯಾವಂತರೆಷ್ಟು
ಬಡವರೆಷ್ಟು ಸಿರಿವಂತರೆಷ್ಟು ಮನೆ ಇಲ್ಲದವರು, ಇರುವರೆಷ್ಟು
ಕೃಷಿಕರೆಷ್ಟು ಸರಕಾರಿ ಉದ್ಯೋಗಿಗಳೆಷ್ಟು
ನಾವೆಷ್ಟು ನೀವೆಷ್ಟು ಜನಸಂಖ್ಯೆಯೆಷ್ಟು?

ಲೆಕ್ಕಾಚಾರದ ಪಟ್ಟಿ ಬರೆಯುತ್ತಿದ್ದುದು ಅಂದಲ್ಲಿ
ಇಂದಿಲ್ಲಿ ಮೊಬೈಲ್ ಫೋನುಗಳ ಹಾವಳಿ
ಸರ್ವ  ವರ್ಗಗಳ ನುಂಗಿ ಬಿಟ್ಟಿದೆ ತಾ ಮರೆಯುತ್ತಾ ಇಲ್ಲಿ
ಅಲ್ಪ ಕಾಗದದ ಕಾರ್ಯ ಉಳಿದುದೆಲ್ಲ ಅಂತರ್ಜಾಲದಲಿ

ಲೆಕ್ಕ ಬೇಕಾಗಿದೆ ನಿಜ ಬಡವ ಬಲ್ಲಿದರದ್ದು
ಬಿಟ್ಟು ಬಿಡೋಣ ಜಾತಿ ಮತಗಳ ಸದ್ದು 
ಒಂದಾಗಿ ಬಾಳೋಣ ಇಲ್ಲಿ ನಾವೆಲ್ಲಾ ಒಂದು
ಭಾರತೀಯರು ಒಗ್ಗಟ್ಟಿನಲ್ಲಿ ಬದುಕೋಣ ಎಂದು....
@ಹನಿಬಿಂದು@
09.02.2026

ಶನಿವಾರ, ಫೆಬ್ರವರಿ 7, 2026

ಹೀಗೊಂದು ಅಪೀಲು

ಹೀಗೊಂದು ಅಪೀಲು....

     ನಾನು ಯಾರಿಂದಲೂ ಯಾವಾಗಲೂ ಯಾವುದೇ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುವುದಿಲ್ಲ. ಏಕೆಂದರೆ ನಾನು ಸಾಹಿತಿ. ಹಾಗಾಗಿ ನಾನು ನನ್ನ ಕೆಲಸವನ್ನು ನನ್ನಷ್ಟಕ್ಕೆ ಮುಂದುವರಿಸುತ್ತಾ ಹೋಗುತ್ತಿರುತ್ತೇನೆ. ಅದು ನನ್ನ ಸ್ವಭಾವ. ಆದರೆ ಬೇರೆಯವರು ಇತರರ ಬಗ್ಗೆ ಅಭಿಪ್ರಾಯ ಕೇಳಿದಾಗ, ನಿಮ್ಮನ್ನು ತುಂಬಾ ಪ್ರಶಂಸಿಸಿ, ನೀವು ತುಂಬಾ ಒಳ್ಳೆಯವರು, ಸಹಾಯಕರು, ಏನಾದರೂ ಕೇಳಿದರೆ ತಕ್ಷಣ ಉತ್ತರ ಕೊಡುತ್ತೀರಿ ಎಂದು ಹೇಳುತ್ತಾ ಮಾತನಾಡಿದಾಗ  ನಾನು, “ಹಾಗೆ ಅನಿಸಲ್ಲ. ಅವರು ನನ್ನ ಯಾವತ್ತೋ ಹಾಕಿದ ಮೆಸೇಜ್‌ಗೆ ಇನ್ನೂ ಉತ್ತರಿಸಿಲ್ಲ” ಎಂದು ನೇರವಾಗಿ ಸತ್ಯವನ್ನು ಇದ್ದ ಹಾಗೆ ಹೇಳುವ ನೇರ ವ್ಯಕ್ತಿ ನಾನು. ಅಷ್ಟೇ ಮಾತು ನಡೆಯುವುದು.. ನಾನು ಯಾರನ್ನೂ ಅವರ ಬೆನ್ನ ಹಿಂದೆ ಮಾತನಾಡಲು ಕೂಡ ಇಷ್ಟಪಡುವುದಿಲ್ಲ. ಅದು ನನ್ನ ಸ್ವಭಾವ ಮತ್ತು ಮನೋಭಾವ. ಏಕೆಂದರೆ ಬದುಕಿನಲ್ಲಿ ಅವರವರ ಕಷ್ಟ ಅವರವರಿಗೆ ಮಾತ್ರ ಗೊತ್ತಿರುತ್ತದೆ. ಇತರರಿಗೆ ಅದು ಅಷ್ಟು ಚೆನ್ನಾಗಿ ಅರ್ಥ ಆಗದು. ನನಗೆ ನನ್ನ ಕಷ್ಟವೇ ದೊಡ್ಡದು, ನಿಮಗೆ ನಿಮ್ಮ ಕಷ್ಟವೇ ದೊಡ್ಡದು. ಪ್ರಪಂಚವೇ ಹಾಗೆ ಅಲ್ಲವೇ?

ಎರೆಯವರು ನಿಮ್ಮ ಬಗ್ಗೆ ಏನಾದರೂ ಹೇಳಿದರೆ, ನಾನು ನನ್ನ ಅಭಿಪ್ರಾಯ ಹೇಳಿದ ಕೂಡಲೇ ಅದನ್ನು ನಿಮಗೆ ತಿರುಗಿ ಹೇಳಿಬಿಟ್ಟರೆ ನನಗೆ ನೋವಾಗದೆ? ಇದು ಕೆಲವರ ಗುಣ. ಅದು ಒಳ್ಳೆಯದೋ ಕೆಟ್ಟದೋ ಎಂದು ನಾನು ನಿರ್ಧರಿಸಲು ಸಾಧ್ಯವಿಲ್ಲ. ಆದರೆ ಅವರ ಮನಸ್ಸಿನಲ್ಲಿ ಯಾವುದೇ ಮಾತುಗಳು ಮತ್ತು ಯೋಚನೆಗಳು ನಿಲ್ಲುವುದಿಲ್ಲ ಎನ್ನುವುದು ಸತ್ಯವಾದ ಮಾತು. ಅವರು ಓಪನ್ ಮೈಂಡೆಡ್ ಆಗಿದ್ದು, ತನ್ನ ಸ್ನೇಹಿತರ ಜೊತೆ ತನಗೆ ಗೊತ್ತಿರುವುದನ್ನು ಎಲ್ಲವನ್ನೂ  ಹಂಚಿಕೊಳ್ಳುತ್ತಾರೆ. ಆದರೆ ಅವರಲ್ಲಿ ಒಂದು ಗುಣ ಖಂಡಿತಾ ಇದೆ , ಅವರಿಗೆ ಬದುಕಿನ ಯಾವುದೇ ರಹಸ್ಯವನ್ನು ಕಾಯ್ದಿಡಲು ಸಾಧ್ಯವಾಗದು. ತಕ್ಷಣ ತನ್ನ ಅನಿಸಿಕೆಯನ್ನು ಯಾರಲ್ಲಿ ಆದರೂ ಹೇಳಿ ಬಿಡಬೇಕು.

ನಾನು ಅವರ ಓಪನ್ ಅಭಿಪ್ರಾಯಗಳು ಕೆಟ್ಟವು ಎಂದು ಹೇಳುವುದಿಲ್ಲ. ಆದರೆ ಅದು ಹಲವಾರು ಬಾರಿ ಯಾರನ್ನಾದರೂ ನೋಯಿಸಬಹುದು. ನಮ್ಮ ಸ್ವಭಾವ ನೇರವಾಗಿರಲಿ ಅಥವಾ ಪರೋಕ್ಷವಾಗಿರಲಿ, ಅದು ಇತರರನ್ನು ನೋಯಿಸಬಾರದು. ನಮ್ಮ ಸ್ನೇಹಿತರ ಸ್ವಭಾವವನ್ನು ನಿಧಾನವಾಗಿ ಅವರಿಗೆ ತಿಳಿಸಬೇಕು, ಒಮ್ಮೆಲೆ ಅಚಾನಕ್ ಹೇಳಬಾರದು. ಕೌನ್ಸೆಲರ್  ಆಗಿ ಮತ್ತು ಸೈಕಾಲಜಿ ವಿದ್ಯಾರ್ಥಿನಿಯಾಗಿ, ಇದು ನನ್ನ ಅಭಿಪ್ರಾಯ.
ಯಾರೋ ನಿಮ್ಮ ಬಗ್ಗೆ ಬೇರೆಯವರಲ್ಲಿ ಕೇಳಿ, ಕೆಲವು ವಿಷಯಗಳನ್ನು ಅವರಿಂದ  ತಿಳಿದುಕೊಂಡು, ಅದನ್ನು ತಕ್ಷಣವೇ ನಿಮಗೆ ಹೇಳಿಬಿಡಬಾರದು. ಆ ಸಮಯದಲ್ಲಿ ನೀವು ಯಾವ ಮನಸ್ಥಿತಿಯಲ್ಲಿ ಇರುತ್ತೀರೋ ಗೊತ್ತಿಲ್ಲ. ನೀವು ಅದನ್ನು ಹೇಗೆ ಸ್ವೀಕರಿಸುತ್ತೀರೋ ಗೊತ್ತಿಲ್ಲ. 

ನನ್ನ ಅನುಭವದ ಪ್ರಕಾರ, ಏಕೆಂದರೆ ನನಗೆ ಬಹಳಷ್ಟು ಸ್ನೇಹಿತರು ಇದ್ದಾರೆ, ನಮ್ಮ ಹತ್ತಿರದ ಸ್ನೇಹಿತರ ಸ್ವಭಾವವನ್ನು ಸರಿಪಡಿಸಲು ನಾವು ಮೊದಲು ಅವರ ಮನಸ್ಥಿತಿ ಮತ್ತು ಮನೋಭಾವವನ್ನು ಅರ್ಥಮಾಡಿಕೊಳ್ಳಬೇಕು. ನಂತರ ನಿಧಾನವಾಗಿ ಅವರನ್ನು ಮನವರಿಕೆ ಮಾಡಬೇಕು. ಏಕಾಏಕಿ ಹೇಳುವುದು ಒಳ್ಳೆಯದಲ್ಲ. ಅವರು ನನ್ನ ಒಳ್ಳೆಯ ಸ್ನೇಹಿತರಲ್ಲಿ ಒಬ್ಬರು. ಆದರೆ ಇದೇ ಕಾರಣಕ್ಕೆ ಕೆಲವರು “ಮಹಿಳೆಯರಿಗೆ ಯೋಚನೆ ಇರುವುದಿಲ್ಲ” ಎಂದು ಹೇಳುತ್ತಾರೆ. ಕೆಲವರು ವ್ಯಕ್ತಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ತಕ್ಷಣ ಮಾತನಾಡುತ್ತಾರೆ.
ನಾನು ಕೆಲವರಿಗೆ ಇದನ್ನು ಆಗಾಗ ಹೇಳುತ್ತೇನೆ. ಅವರು ತಕ್ಷಣ ಪ್ರತಿಕ್ರಿಯಿಸದೆ ಮೊದಲು ಯೋಚಿಸಿ, ನಂತರ ನಿಧಾನವಾಗಿ ಮನವರಿಕೆ ಮಾಡಬೇಕು. ಏಕೆಂದರೆ ನಾವು ಎಲ್ಲರೂ ಪರಿಪಕ್ವರು ಮತ್ತು ಸಮಾಜದಲ್ಲಿ ಹೇಗೆ ವರ್ತಿಸಬೇಕು, ಯಾರೊಂದಿಗೆ ಹೇಗೆ ಎಷ್ಟು ಮಾತನಾಡಬೇಕು ಎಂಬುದನ್ನು ತಿಳಿದಿದ್ದೇವೆ. ನಾವು ನಮ್ಮ ಮನಸ್ಸು ಸೂಚಿಸುವಂತೆ ವರ್ತಿಸುತ್ತೇವೆ. ಮನಸ್ಸು ಕಂಪ್ಯೂಟರ್‌ನಂತಿದೆ. ಅದರೊಳಗೆ ಇರುವುದನ್ನೇ ಅದು ಹೊರಹಾಕುತ್ತದೆ. AI ಕೂಡ ಗೂಗಲ್‌ನಿಂದ ಮಾಹಿತಿ ಪಡೆದುಕೊಳ್ಳುವ ಹಾಗೆ. ಅದೇ ರೀತಿಯಾಗಿ ನಾವು ನಮ್ಮ ಮನಸ್ಸಿನಲ್ಲಿ ಸಕಾರಾತ್ಮಕತೆ, ಗೌರವ, ಪ್ರೀತಿ, ಕಾಳಜಿ, ಸ್ನೇಹ ಇತ್ಯಾದಿಗಳನ್ನು ತುಂಬಿಕೊಳ್ಳಬೇಕು. ಅದು ಅವರ ಸ್ನೇಹದ ಸ್ವಭಾವವಾಗಿರಬಹುದು. ಆದರೆ ಕೆಲವೆಡೆ ಅದು ಇತರರಿಗೆ ನೋವುಂಟು ಮಾಡುತ್ತದೆ. ಹಾಗೆ ನಾವು ಮಾಡಬಾರದು. 

ಇದು ಹಲವು ಬಾರಿ ನಡೆದಾಗ ನಾವು ಬುಧ್ಧಿ ಕಲಿಯದೆ ಹೋದರೆ ನಾವು ಮೂರ್ಖರು. ಯಾರೋ ನಿಮ್ಮ ಗೆಳೆಯರು ನಿಮ್ಮ ಬಗ್ಗೆ ಕೇಳಿ, ನಂತರ ನನ್ನ ಮಾತುಗಳನ್ನು ನಿಮಗೆ ಹಾಗೆಯೇ ಹೇಳಿಬಿಟ್ಟರು ಅಂದುಕೊಳ್ಳಿ. ಅವರು ನನ್ನ ಒಳ್ಳೆಯ ಸ್ನೇಹಿತೆ ಅಥವಾ ಗೆಳೆಯ ಆದ್ದರಿಂದ, ನಾನು ಅವರ ಮೇಲೆ ನಂಬಿಕೆ ಇಟ್ಟು ನನ್ನ ಅಭಿಪ್ರಾಯವನ್ನು ನೇರವಾಗಿ ಹಂಚಿಕೊಂಡಿರಬಹುದು. ಅದು ಯಾರಿಗೂ ನೋವು ಕೊಡುವ ಉದ್ದೇಶದಿಂದ ಅಲ್ಲ. ಬದಲಾಗಿ ಒಬ್ಬ ವ್ಯಕ್ತಿಯ ಬಗ್ಗೆ ನಮ್ಮ ಅಭಿಪ್ರಾಯವಷ್ಟೇ. ಆದರೆ ಅವರು ಅದನ್ನು ಮತ್ತೆ ಅವರಿಗೆ ನೇರವಾಗಿ  ಹೇಳಿ ಬಿಡುವುದು ಎಷ್ಟು ಸರಿ?. ಅದು ಇಬ್ಬರಿಗೂ ನೋವು ತರಬಹುದು. ಮುಂದೆ ಒಂದು ದಿನ  ನೀವು ಮತ್ತೊಬ್ಬರ ಬಗ್ಗೆ ಅವರಲ್ಲಿ ಮಾತನಾಡಿದರೆ, ಅವರು ಅದನ್ನೂ ಇನ್ನೊಬ್ಬರಿಗೆ  ನೇರವಾಗಿ ಹೇಳಿ ಅವರಿಗೂ ನೋವು  ತರುವಂತೆ ಮಾಡಿ ಬಿಡಬಹುದು. ಇಂಥವರ ಜೊತೆ ಏನಾದರೂ ಮಾತನಾಡುವಾಗ ನಾವು ತುಂಬಾ ಕೇರ್ಫುಲ್ ಆಗಿರಬೇಕು. ಏಕೆಂದರೆ ನಾವು ಧನಾತ್ಮಕವಾಗಿ ಮಾತನಾಡಿದರೂ ಕೂಡ ಎದುರಿಗೆ ಅದನ್ನು ಸ್ವೀಕರಿಸುವ ವ್ಯಕ್ತಿಯ ಮನೋಭಾವ ಎಂಥದ್ದು ಎಂದು ನಮಗೆ ತಿಳಿದಿರುವುದಿಲ್ಲ. ಹಾಗಾಗಿಯೇ ಬಹಳ ಒಬ್ಬೊಬ್ಬರ  ಕಡೆ ತಪ್ಪು ಅಭಿಪ್ರಾಯ ಹುಟ್ಟಿಕೊಳ್ಳುತ್ತದೆ. ಹಾಗೆ ಆಗಲು ನಾವು ಬಿಡಬಾರದು. ಅಲ್ಲವೇ?

ನನ್ನ ಅಭಿಪ್ರಾಯದಲ್ಲಿ ಇದು ನ್ಯಾಯವಾದ ಸ್ವಭಾವವಲ್ಲ. ಯಾರಾದರೂ ತಮ್ಮ ಅಭಿಪ್ರಾಯವನ್ನು ನನ್ನೊಂದಿಗೆ ಹಂಚಿಕೊಂಡರೆ, ನಾನು ಅದನ್ನು ಇನ್ನೊಬ್ಬರೊಂದಿಗೆ ಎಂದಿಗೂ ಮತ್ತೆ ಹಂಚಿಕೊಳ್ಳುವುದಿಲ್ಲ. ಅದು ಅವರವರ ವೈಯಕ್ತಿಕ ಅಭಿಪ್ರಾಯ. ಅದನ್ನು ಯಾರಿಗೂ ಪ್ರಕಟಿಸುವುದಕ್ಕೆ ಅಲ್ಲ. ಅವರು ತಮ್ಮ ಹತ್ತಿರದವರಿಗೆ ನಂಬಿಕೆ ಇಟ್ಟು ಹಂಚಿಕೊಳ್ಳುತ್ತಾರೆ. ನಾನು ಮಾಡುತ್ತಿರುವುದು ಸರಿಯೇ, ತಪ್ಪೇ ಎಂದು ನನ್ನನ್ನು ನಾನು ಮೊದಲು ಕೇಳಿಕೊಳ್ಳಬೇಕು. 

ನಿಮ್ಮ ಬಗ್ಗೆ ಅವರು ನನ್ನ ಜೊತೆ ಮಾತನಾಡಿದಾಗ, ಅವರ ಮೇಲೆ ನಂಬಿಕೆ ಇಟ್ಟು ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ಹಂಚಿಕೊಳ್ಳುತ್ತೇನೆ. ಏಕೆಂದರೆ ಅವರು ನನ್ನ ಆತ್ಮೀಯರು. . ಅದು ಯಾರಿಗೂ ನೋವು ಕೊಡಲು ಹೇಳಿದ ಮಾತಲ್ಲ. ಅದು ನನ್ನ ಅಭಿಪ್ರಾಯ ಮಾತ್ರ. ನೀವು ಎಲ್ಲರನ್ನೂ ಹೇಗೆ ನೋಡುತ್ತೀರೋ ಹಾಗೆ ನಾನು ನಿಮ್ಮನ್ನು ನೋಡುವುದಿಲ್ಲ. ನಾನು ನಿಮ್ಮ ಹತ್ತಿರದ ಸ್ನೇಹಿತೆಯಲ್ಲ. ನಾನು ನಿಮ್ಮ ಒಳ್ಳೆಯ ಹಿತೈಷಿ ಮಾತ್ರ. ಹಾಗಾಗಿ ನನಗೆ ಅನ್ನಿಸಿದ್ದನ್ನು ನಾನು ಹೇಳಿ ಬಿಡುತ್ತೇನೆ ಅಷ್ಟೇ..

ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನೀವು ನನಗೆ ಅನೇಕ ವಿಷಯಗಳನ್ನು ಕಲಿಸಿದ್ದೀರಿ. ಆದ್ದರಿಂದ ನಾನು ನಿಮಗೆ ಚಿರಋಣಿ ಮತ್ತು ನಿಮ್ಮನ್ನು ಗುರುಗಳಂತೆ ಗೌರವಿಸುತ್ತೇನೆ. ಆ ಗೌರವ ಸದಾ ನನ್ನ ಹೃದಯದಲ್ಲಿ ಇರುತ್ತದೆ ಮತ್ತು ಮುಂದೆಯೂ ಹಾಗೆಯೇ ಇರುತ್ತದೆ.ಇವೆಲ್ಲ ನಿಜವಾದ ಮಾತುಗಳೇ. 

 ತುಂಬಾ ಓದಲು ನಿಮ್ಮ ಸಮಯವನ್ನು ತೆಗೆದುಕೊಂಡಿದ್ದಕ್ಕೆ ಕ್ಷಮಿಸಿ ಬಿಡಿ. ಇದು ಗುಣಗಳ ವಿಷಯ. ಕೊನೆಯಲ್ಲಿ ನಾನು ಹೇಳಬೇಕೆಂದರೆ, ನಾನು ಯಾರ ಬಗ್ಗೆ ಕೂಡ ಕೆಟ್ಟದಾಗಿ ಮಾತನಾಡಿಲ್ಲ ಮತ್ತು ಮಾತನಾಡುವುದಿಲ್ಲ. ನಾನು ನನ್ನ ಅಭಿಪ್ರಾಯವನ್ನು ಮಾತ್ರ ಹೇಳಿದ್ದೇನೆ. ನನ್ನ ಮಾತುಗಳಿಂದ ಯಾರಿಗಾದರೂ ನೋವಾದರೆ ತುಂಬಾ ಕ್ಷಮೆಯಾಚಿಸುತ್ತೇನೆ. ನಾನು ಸದಾ ನಿಮ್ಮನ್ನು , ನಿಮ್ಮ ವ್ಯಕ್ತಿತ್ವವನ್ನು ಗೌರವಿಸುತ್ತೇನೆ. ನನ್ನಿಂದ ತಪ್ಪಿದ್ದರೆ, ನೋವಾದರೆ, ಬೇಸರವಾದರೆ ಕ್ಷಮಿಸಿ ಬಿಡಿ … ಅಷ್ಟೇ.ನೀವೇನಂತೀರಿ?
@ಹನಿಬಿಂದು@
08.02.2026

ಮಂಗಳವಾರ, ಫೆಬ್ರವರಿ 3, 2026

ಗಾಲಿ ಪಟ

ಗಾಲಿ ಪಟ 

ಬಲೆ ಪಿದಾಯಿ ಉಲಯಿಡ್ದ್
ಕನಲೆ ಉದ್ದೊದ ನೂಲುನು
ಬುಡ್ಕ ನಮ ಗಾಲಿ ಪಟೊನು 
ಪತೊನ್ಲೆ ಗಟ್ಟಿ ಪಾರ್ದ್ ತುಂಡಾವು 

ಬನ್ನ ಬನ್ನೊದ ಬಾನೊಡು ರಾಪಿನ
ಬಾನೊಡೆ  ಮಿತ್ತ್ ಮಿತ್ತ್  ಪೋಪಿನ
ಪೋದೊರ ನಮನ್ ಅಲ್ಪಡ್ದ್ ನಿಲ್ಕುನ
ನೂಲುನು ತೂದು ಗಟ್ಟಿಡೆ ಉಂತುನ 

ಜಾಲಿ ಬುಡಿಯೆರೆ ಗಾಲಿ ಪಟ 
ಗಾಲಿ ಬತ್‌ಂಡ ಪೂರ ನಷ್ಟ
ಸಾಲ್ ಸಾಲ್‌ಡ್ ಉಂತ್ಯ ಮೂಲು
ನಾಲ್ ದಿನೊತ ಬಾಲ್ ತೂಲ

ಏತೆ ಮಿತ್ತ್ ಪೋಯಂಡಲ
ತಿರ್ತ್ ಬೂರುವ ಒಂಜಿ ದಿನ
ಮಲ್ಲ ಎಲ್ಯವು ದೇವೆರ್ನ
ಕೂಡ್ದ್ ಬದ್ಕ್ ಗ ಎಡ್ಡೆಡ್ ನಮ
@ಹನಿಬಿಂದು@
03.02.2026

ಭಾನುವಾರ, ಫೆಬ್ರವರಿ 1, 2026

ಗಾಳಿಪಟ

ಗಾಳಿಪಟ 

ಬಾನಿನ ಬಯಲಲಿ ಗಾಳಿಯ ಪಟವನು 
ಹಾರಿಸಿ ಬಿಡುವೆವು ನಾವು
ಕಾಣದ ತುದಿಗೂ ತಲುಪಿಸೊ 
ನೂಲಿದೆ ಕೈಯಲ್ಲಿ  ತಾವು

ಕತ್ತಲೆಯಾಯಿತು ಮನೆಕಡೆ ಹೋಗಲು
ಅಮ್ಮನ ಬೈಗುಳ ಉಂಟು
ಮಕ್ಕಳೆ ಹೋಗಿ ಎಲ್ಲಿ ಇರುವಿರಿ 
ಎನ್ನುವ ಜೋರಿನ ನಂಟು

ನೂಲದು ಕಾಣದು ಪಟವೇ ಮೇಲೆ
ಎತ್ತರಕೇರಲು ಬೇಕು
ಕೈ ಹಿಡಿಯುವ ಧೈರ್ಯವ ಕೊಡುವ
ಗೆಳೆಯನು ಬಾಳಿಗೆ ಸಾಕು

ನನ್ನೊಡನೆನಗೆ ನೀನಿರೆ ಬಾಳಲಿ
ಸಾಧಿಸಿ ಬಿಡುವೆ ನಾನು
ಎತ್ತರಕೇರುವೆ ಎಲ್ಲರಿಗಿಂತಲೂ
ಗಾಳಿಯ ಪಟವೇ ತಾನು
@ಹನಿಬಿಂದು@
02.02.2026

ಶುಕ್ರವಾರ, ಜನವರಿ 30, 2026

ಗಾಂಧಿ ತಾತಗೆ

ಗಾಂಧಿ ಕೇಳು...

ಗಾಂಧಿ ತಾತ ನೀನು ಹುಟ್ಟಿ  ಏನೋ ಮಾಡಿದೆ
ಮಂದಿ ನಿನ್ನ ಹೆಸರು ಹೇಳಿ ಅನ್ಯಾಯ ಬೆಳೆಸಿದೆ
ರಸ್ತೆಗಳಿಗೂ ಕೆಲಸಗಳಿಗೂ ನಿನ್ನ ಹೆಸರಿದೆ
ಆದರೇನು ಸರಿಯಾದ ಕಾರ್ಯ ನಡೆಯದಾಗಿದೆ

ನಿನ್ನ ಜನುಮದಿನದಂದು ಸ್ವಚ್ಛತೆಯು ಸಾಗಿದೆ
ಮರುದಿನವೇ ಕಸದ  ರಾಶಿ ಅಲ್ಲೇ ಬಿದ್ದಿದೆ
ನಿನ್ನ ನಡೆಯ ಜನರು ಎಲ್ಲ ಆಡುತಿರುವರು
ನೀನು ಹೇಳಿ ಕೊಟ್ಟ ಕಾರ್ಯ ಮಾಡಲೊಲ್ಲರು

ನಿನ್ನ ಹೆಸರಲ್ಲೆಲ್ಲ ತಾವು ಹಣವ ಗಳಿಸುತ
ತಮ್ಮ ತಮ್ಮ ಜೇಬು ಭರ್ತಿ ಮಾಡಿ ನಗುವ ಚೆಲ್ಲುತ
ತಿಂದು ಉಳಿದುದಲ್ಲಲ್ಲೆಸೆದು ಮುಂದೆ ಸಾಗುತ 
ಸ್ವಚ್ಛ ಎಂದು ಗಿಡ ಮರಗಳ ಕಡಿ ಕಡಿದು ಎಸೆಯುತ...

ಪ್ಲಾಸ್ಟಿಕ್ ರಾಕ್ಷಸನ ಬಳಸುತಲೆ ಬಾಳುವರು
ರಸ್ತೆ ರಸ್ತೆಗಳಿಗೂ ಅದನು ಬಿಸಾಕಿ ಬಿಡುವರು
ಯಾರೋ ಬಂದು ಎಲ್ಲ ಎತ್ತಿ ಫೋಟೋ ತೆಗೆವರು
ಎಸೆವ ಜನಕೆ ಇಲ್ಲಿ ಯಾರೂ ಏನೂ ಹೇಳರು

ಚಾಕಲೇಟು ಚಿಪ್ಸ್ ತಿನುವ ಮಕ್ಕಳಿರುವರು
ತಿಂದು ಕಸವ ಅಲ್ಲೇ ಸುರಿದು ಮುಂದೆ ಸಾಗುವರು
ಯಾರಿಗಿಲ್ಲಿ ಯಾರು ಹೇಳು ಯಾರು ಕೇಳುವರು
ತಾನೇ ಎನುತ ಎಲ್ಲಾ ಕಡೆಯು ತಾವೇ ಮೆರೆವರು

ಬದುಕ ಜಾಲದಲ್ಲಿ ನಿನ್ನ ಮಾತು ಮರೆತರು
ಹೆಂಡ ಬಿಯರ್ ಹಾಟ್ ಇಲ್ಲದೆ ಪಾರ್ಟಿ ಮಾಡರು
ತುಂಡು ತಿಂದು ತೇಗಿ ಬಳಿಕ ಪ್ರಾಣಿ ಹಿಂಸೆ ಎನುವರು 
ತಮ್ಮ ಬದುಕು ಸರಿಯಾಗಿದೆ ಅಂದು ಕೊಂಡರು

ನಿನ್ನ ಪದವ ಗಾಳಿಗೆಲ್ಲೋ ತೂರಿ ಆಗಿದೆ
ತಾನೇ ದೇವರೆನುತ ಇಂದು ಬಾಳು ಸಾಗಿದೆ
ನೀನು ಇಲ್ಲಿ ಹೆಸರಿಗಷ್ಟೇ ರಾಜಕೀಯ ಮಾಡಲು
ನಿನ್ನ ನಾಮ ಬೇಕಿಹುದು ಹಲವು ಆಟವಾಡಲು..
@ಹನಿಬಿಂದು@
30.01.2026

ಗುರುವಾರ, ಜನವರಿ 29, 2026

ರವೆ ಪುಂಡಿ

ರವೆ ಪುಂಡಿ
ಚಿಕ್ಕಮಗಳೂರಿನ ಬೆಳಗ್ಗಿನ ತಿಂಡಿಗೆ ಮಾಡುವ, ಬೇಗ ಆಗುವ , ಎಣ್ಣೆ ಉಪಯೋಗ ಇಲ್ಲದ ಆರೋಗ್ಯಕರ ತಿಂಡಿ. 
ಬೇಕಾಗುವ ವಸ್ತುಗಳು
1. ನೀರು
2. ಬಾಂಬೆ ರವೆ/ಅಕ್ಕಿ ರವೆ
3. ಉಪ್ಪು

ವಿಧಾನ: 
1. ಒಂದೂವರೆ ಗ್ಲಾಸ್ ನೀರಿಗೆ ಒಂದು ಗ್ಲಾಸ್ ರವೆ ಅಳತೆಯಲ್ಲಿ ನೀರು ಕುದಿಯಲು ಇಡಬೇಕು. 
2. ಕುದಿದ ನೀರಿಗೆ 1 ಗ್ಲಾಸ್ ರವೆಯನ್ನು ಸ್ವಲ್ಪ ಸ್ವಲ್ಪವಾಗಿ ಉದುರಿಸಿ, ಗಂಟಾಗದ ಹಾಗೆ ನೋಡಿಕೊಳ್ಳಬೇಕು. 
3. ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.
4. ಕಡಿಮೆ ಉರಿಯಲ್ಲಿ ಮಗುಚುತ್ತಾ ಗಟ್ಟಿಯಾಗುವವರೆಗೆ ಇದ್ದು ನಂತರ ಪಾತ್ರೆ ಸ್ಟವ್ನಿಂದ  ಕೆಳಗಿಳಿಸಬೇಕು.
5. ಇಡ್ಲಿ ಪಾತ್ರೆಯಲ್ಲಿ ನೀರಿಟ್ಟು ನೀರು ಕುದಿದ ಕೂಡಲೇ ಅದರ ಅಟ್ಟಿ ಇಟ್ಟು, ಪುಂಡಿ ಮಾಡುತ್ತಾ ಅದರ ಒಳಗೆ ಹಾಕಿ 10 ನಿಮಿಷ ಬೇಯಿಸಬೇಕು. ನಮ್ಮ ರವೆ ಪುಂಡಿ ರೆಡಿ. 
6. ಬೇಕಾದರೆ ಇದಕ್ಕೆ ಕ್ಯಾರೆಟ್ ತುರಿ, ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ನೀರುಳ್ಳಿ ಹುರಿದು ಸೇರಿಸಿಕೊಳ್ಳಬಹುದು. 
@ಹನಿಬಿಂದು@
29.01.2026

ಸೋಮವಾರ, ಜನವರಿ 26, 2026

ಪೋಷಕ ವಾತ್ಸಲ್ಯ

ಪೋಷಕ ವಾತ್ಸಲ್ಯ

ಕೌಸಲ್ಯೆ ಮಾತ್ರವಲ್ಲ ಪ್ರತಿ ತಾಯ ವಾತ್ಸಲ್ಯ
ಪುತ್ರ ಪುತ್ರಿ ಮನೆ ಹಿರಿಯರಿಗೆ
ಭವಿಷ್ಯತ್ತಿನ ಯೋಚನೆ, ಯೋಜನೆ ವೈಶಾಲ್ಯ
ಉಸ್ತುವಾರಿ ಜೊತೆ ಹಣ ಸಕಲರಿಗೆ..

ರಕ್ಷಣೆಯ ಹೊಣೆ ಹೊತ್ತ ಮಾತಾಪಿತರ ನೀತಿ
ಭಕ್ಷಣೆಗೆ ತಂದಿತ್ತರೂ ಒಣ ಭೀತಿ
ಅಗತ್ಯಕ್ಕೆ ತಕ್ಕಂತೆ ಬೇಕಾದುದೆಲ್ಲ ಒದಗಿಸುವ ಸ್ಪೂರ್ತಿ
ದುಡಿತವೆಲ್ಲ ಮಕ್ಕಳಿಗೆ, ಕುಟುಂಬ ಪ್ರೀತಿ

ನಿರ್ಲಕ್ಷ್ಯವಿಲ್ಲ ಇಲ್ಲಿ ಪೋಷಣೆ ಗಮನ ಆರೈಕೆ
ಸೂಕ್ತ ವ್ಯವಸ್ಥೆ ನಿತ್ಯ ಒದಗಿಸುವರು
ಕಲ್ಪಿಸುತ ಸೌಲಭ್ಯಗಳ ಖರ್ಚು ವೆಚ್ಚ ಭರಿಸಿ
ಹಿಂದಿನ ಮುಂದಿನ ನಾಳೆಗಳ ಯೋಜಿಸುವರು

ಸವಾಲುಗಳು ಅದೆಷ್ಟೋ ಮನುಷ್ಯ ಬದುಕ ನೋವುಗಳೋ 
ಆದರೂ ನಿರ್ಮಿಸುತ ಕನಸ ಮಹಲುಗಳ
ಸಂಪನ್ಮೂಲಗಳ ಕೊರತೆ ಇರಬಹುದು ಅಲ್ಲೆಲ್ಲೋ
ಕುಟುಂಬದ ಸಹಭಾಗಿತ್ಯ ಪ್ರೀತಿ ಬಯಸುವ ಜೀವಗಳು
@ಹನಿಬಿಂದು@
08.12.2025




ದಾಯೆ

ಐನೆಸಲ್ 

ದಾಯೆ 

ಪಿರವುದ ಸೀಟ್‌ಡ್ ಕುಲ್ದಿತ್ತೆ
ಎದುರುಗು ಕೈನ್ ಕನವೊಂದಿತ್ತೆ
ಎದ್‌ರ್ ಕುಲ್ದಿನ ಪೊಣ್ಣನ ಮಿತ್ತ್ ಆಯೆ
ಸರಿಟ್ಟೆ ಒಂಜಿ ಮಲ್ಲ ಕನ್ ದೀಯೆ
ಉಂದು ಪೂರ ದಾಯೆ ಪಂಡ ಆಯೆ ಮಸ್ತ್ ಪರ್ದಿತ್ತೆ
@ಹನಿಬಿಂದು@
26.01.2026

ಶುಕ್ರವಾರ, ಜನವರಿ 9, 2026

ಪಿಟ್ಟಿ ಕತೆ ಸಾಯ ಆವೊಡು

ಪಿಟ್ಟಿ ಕತೆ 

ಸಾಯ ಆವೊಡು 

ರಕ್ಷಾಗ್ ದೇವೆರ್ ದಾಲ ಕಮ್ಮಿ ಮಲ್ದಿಜೆರ್. ದೇವೆರೆ ದಯೊಟ್ಟು ಪುಟ್ಟಿನ ಇಲ್ಲ ಬೊಕ್ಕ ಪೋಯಿನ ಇಲ್ಲ ರಡ್ ಕಡೆಟ್‌ಲಾ ಬೋಡಾಯಿನಾತ್ ಉಂಡು. ಪೊಪ್ಪ ಅಮ್ಮನಕ್ಲು ವಿದ್ಯೆ ಬುದ್ಧಿ ಕೊರ್ದು ಶಾಲೆ ಕಲ್ಪದ್ ಗವರ್ಮೆಂಟ್ ಬೇಲೆ ತಿಕ್ಂಡ್. ಮದಿಮೆ ಆದ್ ಕೈ ಪತ್ತಿನ ಕಂಡನಿ ರಾಕೇಶ್‌ಲ ಗವರ್ನೆಂಟ್ ಬೇಲೆದಾರೆ. ನನ ದಾದ ಕಮ್ಮಿ? 
ಬೇಲೆ ಉಂಡು, ಸ್ವಂತ ಇಲ್ಲ ಬದ್ಕ್ ಉಂಡು, ಜಾಗೆ ಉಂಡು, ಪದ್ದಯಿ ಬಂಗಾರ್ ಉಂಡು, ನನ ದಾದ ಮಂಡೆ ಬೆಚ್ಚ? ರಡ್ಡ್ ಪೊರ್ಲಕಂಟ್ ಆಣ್ ಜೋಕುಲುಲಾ ಉಲ್ಲೆರ್. ಅಕುಲ್ಲಾ ಎಡ್ಡೆ ಕಲ್ತೊಂದು ಉಲ್ಲೆರ್. 

ಆಂಡ ರಕ್ಷನ ಪಿಟ್ಟಾಸಿ ಗುನ. ಓಲು ದಾದ ಇತ್‌ಂಡಲ ಅಲೆಗೆ ಬೋಡು ಪನ್ಪಿನ ಆಸೆ. ಅಲ್ ಒಂಜಿ ಹಾಸ್ಥೆಲ್ಡ್ ವಾರ್ಡನ್. ಅಲ್ಪ ಜೋಕ್ಲೆಗ್ ಪಂದ್ ಬರ್ಪಿನ ತೆತ್ತಿ, ಕೋರಿ, ಸಾಮಾನ್, ಮೀನ್, ಪೌಡರ್, ಸಾಬೂನು ಪೂರಾ ರಕ್ಷಾನ ಇಲ್ಲಡೆ ಬತ್ ಅಕ್ಲೆಗ್ ನಾಲ್ ಜನಕ್ ಬೋಡಾಯಿನಾತ್ ದೀವೊನಿ ಬೊಕ್ಕ ಒರಿನ ಜೋಕ್ಲೆಗ್ ಪೋಪುಂಡು. ಕಂಡನಿ ಮಾಷ್ಟ್ರು. ಅರೆಗ್ ಬಾರಿ ಕುಸಿ. ತನ್ಕ್ ದಾಲ ಇಲ್ಲದ ಕರ್ಚಿದ ಮಂಡೆಬೆಚ್ಚ ಇಜ್ಜತ್ತಾ ಪಂದ್. 
ಆಂಡ ದೇವೆರೆನ ಕನ್ ಕಟ್ಟಿನಾಯೆ ಏರ್ಲಾ ಇಜ್ಜಿ. ನಲ್ಪ ಒರ್ಸೊಡೆ ರಕ್ಷಾ ಬೊಕ್ಕ ರಾಲೇಶ್ ರಡ್ಡ್ ಜನಕ್ಲಾ ಸಕ್ಕರೆ ಕಾಯಿಲೆ ಒಟ್ಟಿಗೆ ಬಿಪಿ. ಅಂಚ ವನಸ್ ದಾಲ ತಿನಿಯರೆ ಇಜ್ಜಿ, ಸೀಪೆದಲ ಇಜ್ಜಿ, ಬೊಕ್ಕ ಪೂರ ನುಂಗೆಲ್ ಪರ್ಂದ್, ಚಪಾತಿ ಉಂದುವೆ. 
ಇಪ್ಪುನಗ ನಾಲ್ ಜನಕ್ ನಮ ಸಾಯ ಆವೊಡು. 
@ಹನಿಬಿಂದು@
10.01.2026

ಸೋಮವಾರ, ಜನವರಿ 5, 2026

ಐನೆಸಲ್

ಐನೆಸಲ್ 

ಮದಿಪು ಮಲ್ಪುಲೆ ತಪ್ಪು ಆಯಿನೆನ್
ಸುಗಿಪು ಇಪ್ಪಡ್ ದಿನೋಲ ದೇವೆರೆನ್
ಮನಿಪ್ಪಂದೆ ಕುಲ್ಲಂದೆ ಬೇಲೆ ಮಲ್ತೊಂದು
ಪನಿ ಇತ್ತ್ಂಡಲಾ ತಿರ್ತ್ ಬೂರೊಂದು 
ಬೂಮ್ಯಪ್ಪೆ ನಲಿಪಡ್ ನೀರ್ ತೂವೊಂದು ನಿಚ್ಚ 
@ಹನಿಬಿಂದು@
05.01.2026

ಶನಿವಾರ, ಜನವರಿ 3, 2026

ಅಪ್ಪೆ ಭಾರತಿ

ಅಪ್ಪೆ ಭಾರತಿ

ಅಪ್ಪೆ ಭಾರತಿಗ್ ತುಲುವಪ್ಪೆ ಮಗಲೆನ ಆರತಿ
ಚಪ್ಪೆ ಆವಂದ್ ಏಪಗ್ಲಾ ಮೋಕೆದ ಸಗ್‌ತಿ
ಪಚ್ಚೆ ರಂಗ್‌ಡ್ ಮೆರೆಪಿನವು ವಾ ಶೋಕು
ನಿಚ್ಚಲಾ ನಟ್ಟೊನುವೆ ವರ ಕೊರ್ಲೆ ನಂಕ್//

ತಾರೆ ಬಾರೆ ಕಂಗ್ ಕುಕ್ಕುದ ಮರತ ಸಾಲ್ ಸಾಲ್
ಇರೆ ಉಡಲ್ ದಿಂಜಾವುನ ಗುಡ್ಡೆಲೆನ ಪಾಲ್ ಪಾಲ್
ಹಿಮಾಲಯೊಡು ಪುಟ್ಟುನ ತುದೆಕ್ಲೆನ ನೀರ್ದ ರುಚಿ
ಮಲಯ ಮಾರುತ ಕನಪಿನ ಬರ್ಸೊದ ನೀರ್ದ ಸುಚಿ

ಸಾರ ಕವಿಕ್ಲೆನ್ ಮಾನಾದಿಗೆ ಮಲ್ತಿನ ನಮ್ಮ ಬೂಡು
ಮಲ್ಲ ಜನೊಕ್ಲೆನ್ ಊರು ಪರವೂರುಗು ಕೊರಿನ ನಾಡ್
ನಲಿಪುಗ ನಮ ಮಲ್ಲ ಕುಸಿಟ್ ನಿಚ್ಚ ಮೂಲು
ಯಾನ್ ಪೆರ್ಮೆದ ಅಪ್ಪೆ ಭಾರತಿನ ಮಗಲ್..
@ಹನಿಬಿಂದು@
22.12.2025

ಸೈಯ್ಯ ರೆ ಪೋನಗ

ಪಿಟ್ಟಿ ಕತೆ 

ಸೈಯರೆ ಪೋನಗ

ಗೌರಿ ಬೇತೆಕ್ಲೆನ ಇಲ್ಲಲ್ ಬೇಲೆ ಮಲ್ತ್ ಬದ್ಕ್ ಸಾಗಿಸವೊಂದು ಇತ್ತಿನಾಲ್. ಕಂಡನಿ ಮೂಂಕು ಮುಟ್ಟ ಪರೊಂದು ಬತ್ ಆತ್ ಶೋಕುದ ಬೊಡೆದಿಗ್ ಪೆಟ್ ಪಾಡ್ನಗ ಏರೆಡಲ ಪನಿಯರೆ ಆವಂದೆ ಅಪ್ಪೆನ ಇಲ್ಲಡ್ ಪೋದು ಕುಲ್ಲೆರೆಲ ಆವಂದೆ ಇಲ್ಲ ಬುಡ್ದು ಪಿದಯಿದ ಇಲ್ಲಗ್ ಬೇಲೆಗ್ ಪೋಯೆರೆ ಸುರು ಮಲ್ತಲ್. ಮಲ್ಲಕ್ಲೆನ ಇಲ್ಲಗ್ ಪೋದು ಪಾತ್ರೆ ದೆಕ್ಕ್‌ದ್, ಕುಂಟು ಅರ್ದ್‌ದ್ ನೆಲ ಉರೆಸ್‌ದ್ ಕೊರುಂಡ ತಿಂಗೊಲುಗು ಐನ್ ಸಾರ ಕಾಸ್ , ಸೀರೆ, ಕುಂಟು, ವನಸ್ ಪೂರ ಕೊರೊಂದು ಇತ್ತೆರ್. ಅವ್ ಅಲೆನ ಜೋಕ್ಲೆನ ಕರ್ಚಿಗ್ ಆವೊಂದು ಇತ್‌ಂಡ್. 
ಆಂಡಲಾ ಕಂಡನಿನ ಪೆಟ್ಟ್, ಪಗೆಲ್ ಇಡೀ ಬೆಂದ್ ಬತ್ತಿನ ಪೊನ್ನಗ್ ರಾತ್ರೆ ಆನಗ ಪರ್ದ್ ಪಾತೆರುನ ತಡೆಯಂದೆ ಒಂಜಿ ದಿನ ಸಯ್ಯರೆ ಪಂದ್ ಪೋಯಲ್. ಅಪಗ ಕೆರೆಕ್ ಲಾಗಿಗ ಪಂದ್ ಪೋಯಲ, ಕೆರೆತ ಬರಿಟ್ ಒಂಜಿ ಬೋರಿ ಪಡಿಕೆ ಮೈತೊಂದು ಇತ್ಂಡ್. ಅಡಿಟ್ ಒಂಜಿ ಪ್ಲಾಸ್ಟಿಕ್ ತೊಟ್ಟೆ ಇತ್‌ಂಡ್. ಪ್ಲಾಸ್ಟಿಕ್ ತೊಟ್ಟೆದ ಮಿತ್ ಬೂರುನ ಸೌಂಡ್ ಕೇಂದ್ ಗೌರಿ ಎನನ್ ಕೊನೊಯರೆ ಯೆಮೆ ಬತ್ತೆ ಪಂದ್ ಪೋಡಿದ್ ಪಾರ್ ಪೋದು ಇಲ್ಲದ ಉಲಯಿ ಕುಲ್ಯಲ್. 
@ಹನಿಬಿಂದು@
03.01.2026