ಹಣೆಬರಹ
ರಾಮನ ನೋಡಿ ಕೃಷ್ಣನ ನೋಡಿ
ಮೋಡಿಯ ಜೀವನ ಸಿಗುವುದೆ ಹಾಡಿ?
ಮನದಲಿ ನೋವು ಹೃದಯದಿ ಕಾವು
ರಾಜನೆ ಆದರು ಕಾಡಿನ ವಾಸವು
ರಾಕ್ಷಸ ಕುಲಕೆ ಅವನೇ ಗುರಿಯು
ಪ್ರತಿ ಹೆಜ್ಜೆಯಲೂ ಸಾವಿನ ಭಯವು..
ಪ್ರೀತಿಯ ರಾಧೆಯು ಸಿಗಲೇ ಇಲ್ಲ
ಪಾಪದ ಮಡದಿಯ ಕಾಡಿಗೆ ಅಟ್ಟಿ
ಲೋಕದ ಕಣ್ಣಿಗೆ ರಾಜನೇ ಆದರೂ
ವನವಾಸದೆ ಜೀವನ ಬೀಳುತ ಕಣ್ಣೀರು!
ಸಂತಸ ದು:ಖವ ನೋಡಲೇ ಬೇಕು
ಮನಪಜನ ಜೀವನ ವ್ಯಯಿಸಲು ಸಾಕು
ಪ್ರೀತಿಗೆ ಮೋಸ, ನಂಬಿಕೆ ದ್ರೋಹವು
ಮನದಲಿ ಸುಡುಸುಡು ಮೊಗದಲಿ ನಗುವು...
ಸಿರಿತನ ಬಡತನ ಸಂತಸಕ್ಕಿರದು
ಪ್ರೀತಿ ಪ್ರೇಮವು ಮನಸಿಗೆ ಸಿಗಲು
ಧನಿಕನು ಅವನೇ ನೆಮ್ಮದಿ ಇರುವವ
ಪರರ ಸೇವೆಯಲಿ ಸರ್ವಸ್ವವ ಪಡೆದವ..
ಭೂಮಿಗೆ ಬರಲು ದೇವನ ಪ್ರೀತಿಯು
ಧರೆಯಲಿ ಎಂದೂ ಅಮ್ಮನ ಪ್ರೀತಿಯು
ಸಿಗುವುದು ಗೆಳೆತನ ಹಲವರ ನೀತಿಯು
ಸಂತಸ ಪಡೆಯಲು ಬೇಕದು ಮನವು..
ಜೊತೆಯಲಿ ಶ್ರೀಹರಿ ನೀಡುವ ವರವೂ..
@ಪ್ರೇಮ್@
10.07.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ