ಶನಿವಾರ, ಜುಲೈ 11, 2020

1484. ಶರ ಷಟ್ಪದಿ

ಆಹ್ಲಾದ(ಶರ)

ವರುಣನ ಕೃಪೆಯದು
ಕರುಣೆಯ ಬೀರಿದೆ
ತರುಲತೆ ನಗುವಲಿ ನಾಟ್ಯವಿದೆ।
ಝರಿಯದು ಹರಿಯುತ
ವರವಾಗುತ ದಿನ
ಹರನನೆ ನೆನೆಯುತ ಸಾಗುತಿದೆ॥

ಭರದಲಿ ಬಾಗಿದೆ 
ಗಿರಗಿರ ತಿರುಗಿದೆ
ಕರದಲಿ ಪುಷ್ಪವ ಹಿಡಿದಂತೆ।
ತರತರ ಬಣ್ಣದ 
ಭರವಸೆ ತಂದಿದೆ
ಸಿರಿಯನು ಬಳಿಯಲಿ ಹಿಡಿದಂತೆ॥

ಪರಿಸರ ಶುದ್ದಿಯು
ಉರಿಸದು ಮನವನು
ಹರಸುತ ಸರ್ವರ ಬೇಸರವ।
ಪರಿಪರಿಯಲಿ ಕಸ 
ಸುರಿಯುತ ಜನಗಳು
ಪೊರೆವಗೆ ಗದರುತ ಸಾಗುವರು॥
@ಪ್ರೇಮ್@
04.07.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ