ಗಝಲ್-207
ಕಳ್ಳ ಕೃಷ್ಣ ಸದಾ ನೀನಿರುವೆ ಮನದಲ್ಲಿ
ಬೆಣ್ಣೆ ಚೋರ ಬಳಿ ಸುಳಿಯುವೆ ಮನದಲ್ಲಿ..
ಗೋವಿಂದ ಗೋಪಾಲ ನಿಂತಿರುವೆ ನನ್ನಲ್ಲಿ
ಮುರಳೀ ಲೋಲ ಆಟವಾಡುತಿಹೆ ಮನದಲ್ಲಿ
ಶ್ರೀಧರ ರಾಮಚಂದಿರ ಬರಸೆಳೆವೆ ಮನಮಂದಿರವ
ಮೋಹನ ಮೋಡಿಗಾರ ತಿರುಗುವೆ ಮನದಲ್ಲಿ..
ರಾಧಾ ಚಿತ್ತ ಚೋರ ನಲಿದಾಡುತಿಹೆ ಬಳಿಯಲ್ಲಿ
ನಂದ ಕಿಶೋರ ಜಾಗ ಪಡೆದಿರುವೆ ಮನದಲ್ಲಿ..
ಹರಿ ನೀ ನರಸಿಂಹ ಈ ಜೀವ ನಿನಗಾಗಿ
ಲಕ್ಷ್ಮೀಕಾಂತ ವಾಸುದೇವ ನೆಲೆಸಿರುವೆ ಮನದಲ್ಲಿ
ಭಕ್ತವತ್ಸಲ ಕಮಲನಯನ ಕೊಳಲಗಾನ ಕೇಳುತಿರುವೆ
ಶ್ರೀವತ್ಸ ಶ್ರೀನಿವಾಸ ಶಾಶ್ವತವಾಗಿರುವೆ ಮನದಲ್ಲಿ..
ಆದಿತ್ಯ ಅಚ್ಯುತನೇ ಆದಿನಾರಾಯಣ ವರನೀಡು
ಪ್ರೇಮಾತ್ಮ ಪದ್ಮನಾಭ ಅನಂತವಾಗಿರುವೆ ಮನದಲ್ಲಿ..
@ಪ್ರೇಮ್@
25.07.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ