ಸೋಮವಾರ, ಅಕ್ಟೋಬರ್ 28, 2024

ತುಳು

ಐನೆಸಲ್ 

ಸಾವಿರ ಕೊರ್ಂಡಲ ಸಾಧನೆ ಮಲ್ಲ
ಸಾವು ಬರೊಡ್ಡ ದುಂಬು ದಾಲ 
ಮಲ್ತ್ ತೋಜವೊಡು ಬೇಲೆ ಒಂತೆ 
ಬದ್‌ಕ್ ಉಂದು ಮಲ್ಲ ಸಂತೆ
ಜಾರ್‌ದ್ ಬೂರಡ ಸಾಗ್‌ಲ ಮೆಲ್ಲ
@ಹನಿಬಿಂದು@
28.10.2024

ಭಾನುವಾರ, ಅಕ್ಟೋಬರ್ 27, 2024

ಚೆಂಗುಡಿ

ಚುಂಗುಡಿ

ರಾತ್ರೆಡ್ ಬೂರುಂಡು ರಕ್ಕಸನ ಕನ 
ನಿದ್ರೆಡೇ ಕೇಂಡೆ ಹಾಕ್ಯರೆ ಸೋಂಟೆ ಕನ!
@ಹನಿಬಿಂದು@
27.10.2024

ಶುಕ್ರವಾರ, ಅಕ್ಟೋಬರ್ 25, 2024

ಬದುಕುವ ಕಲೆ

ಬದುಕುವ ಕಲೆ

ಬದುಕಿನ ಬೆಳೆಯದು ಬದುಕುವ ಕಲೆಯು 
ಅರಿತವ ಬಾಳುವ ಮರೆತವ ಸಾಯುವ
ಬಾಲ್ಯದ ದಿನದಲಿ ಆಟವು ಪಾಠವು
ಕಲಿಕೆಗೆ ಬೇಸರ ಬರದಿರೆ ಸ್ವರ್ಗವು 

ಯೌವ್ವನ ಬರಲು ಆಕಾಶಕೆ ಏಣಿ
ಮೇಲೇರುವ ಗೀಳು, ಹೆಣ್ಣಿನ ಅಮಲು
ಧ್ಯೇಯವು ಇರಲು ಬಾಳದು ನೂಲು
ಗುರಿಯನು ಮರೆಯಲು ಮುಂದಿದೆ ಸೋಲು!

ಮದುವೆಯ ಬಳಿಕ ಬೇರೆಯೆ ವಿರಾಟವು
ಹೊಂದಾಣಿಕೆ ಎಂಬ ಕಷ್ಟದ ನೋಟವು
ಮೇಲು ಕೀಳಿನ ನೋವು ನಲಿವಿನ
ಗೆಲ್ಲುವ ಸೋಲುವ ಆಕಾಶದ ಏಣಿಯು 

ಮುಂದಿದೆ ರೋಗಗಳೆಂಬಾ ಭೀತಿಯು 
ದೇಹ ಮನಸಿನ ಸೌಖ್ಯದ ನೀತಿಯು
ತನ್ನ ತಪ್ಪಿಗೆ ತನಗೇ ನೋವದು
ಹಂಚಲು ಆಗದು ತನುಮನ ಗಾಯವು 

ಕೊನೆಗೆ ಮುಗಿಯುವ ಬಾಳಿನ ಕಾರ್ಯವು
ಒಂದಿನ ನಿಲ್ಲುವ ಆಟದ ಮನೆಯು
ನೀನು ನಾನು ಎಲ್ಲವ ಮರೆತು
ನೀನೇ ಎಲ್ಲಾ ಎನ್ನುವ ಗೀತೆಯು
@ಹನಿಬಿಂದು@
25.10.2024

ಭಾವಗಳು

ಭಾವಗಳು

ಭಾವಗಳ ತೂಕವದು ಭಾವನೆಗೆ ನಿಲುಕದ್ದು
ಅಲ್ಲವೇ ನನ್ನೊಲವೆ ಕೇಳು ನೀನು?
ನಾವೆಯಲಿ ಪಯಣಿಗರು ನಾವೆಲ್ಲ ಇಲ್ಲಿ
ಸಲ್ಲದು ರೋಷ ದ್ವೇಷ ಮೋಸದಾಟ

ಕಾವ ಕಬ್ಬಿಣದ ತುದಿಯ ನಡಿಗೆ ಬೇಕಿಲ್ಲಿ
ಸಾವು ಬರುವರೆಗೆ ನಿತ್ಯ ಪಯಣ
ನೋವ ನುಂಗುತ್ತಾ ನಗಬೇಕು ಸತ್ಯ
ಬೇವು ಬೆಲ್ಲದ ಜೀವನದ ಸಾಂಗತ್ಯ

ತಾನು ತನ್ನದು ತನಗೆ ಎನುವ ಆಸೆಯು ಬೇಡ
ನಾವು ನಮ್ಮದು ನಮಗೆ ಎನ್ನುವುದು ಇರಲಿ
ಕಾವು ಕೊಡುತಲಿ ಬಿಸಿಯ ಹೆಚ್ಚಿಸಿ ಜೀವ
ಮೊಳೆಯುವ ತವಕ ಹೊಸ ಬಾಳಿಗಾಗಿ

ಭಾವನೆಯ ಭರವಸೆಯು ನಾಳಿನ ನಂಬಿಕೆಯು 
ಭೋಗ ಭಾಗ್ಯದ ಆಸೆ ಒಳಗೊಳಗೆ 
ಜಾವದಲಿ ಎದ್ದು ಆಟ ಪಾಠದಲಿ ಬಿದ್ದು
ನೋಟದೊಳಗಿನ ಮನದ ಯೋಚನೆಯ ಬೇರು..
@ಹನಿಬಿಂದು@
25.10.2023

ಗುರುವಾರ, ಅಕ್ಟೋಬರ್ 24, 2024

ತುಳು ಪದ

ತುಡರ್ ಪರ್ಬ

ಬತ್ತ್ಂಡಕ್ಕ ಬತ್ತ್ಂಡಣ್ಣ ತುಡರ್ ಪರ್ಬಯೇ
ದೀಪ ಸಾಲ್ ತೋಜೊಂದುಂಡು ಮಾತ ಕಡೆಟ್‌ಯೇ//


ಸಾರ  ಮಾನಿ ಕುಸಿನ್ ಪಟ್‌ದ್ ನಡಪಿ ಸೋಕುಯೇ
ಕಾರ್ ಪತ್ತಿ ನಟ್ಟಿ ವರನ್ ಮಲ್ಲಕ್ಲೆಡಯೇ....
ಬಲಿಯೇಂದ್ರೆ ಜತ್ತ್ ಬತ್ತ್  ತೂಪಿ ಪೊರ್ಲುಯೇ
ಎಣ್ಣೆ ಪೂಜಿ ಮೀಪಿ ಸುಖಲ ಏರೆಗುಂಡುಯೇ//

ಗುರ್ಕೆ ದಿಂಜ ನೀರ್ ಪಾಡ್ದ್ ತೂಪಿನೇರ್‌ಯೇ
ಬಲಿಯೇಂದ್ರಗ್ ಕೂ ಪಾಡುನ ದಾದ ಮರ್ಲ್‌ಯೇ
ಮಾಮಿ ಮರ್ಮಲ್ ಕೂಡ್ಡು ಮಲ್ತಿ ಅಟಿಲ ಕಮ್ಮೆನ
 ಮಾಮು ಮರ್ಮಯೆ ಒಟ್ಟು ಕುಲ್ದು ಉನ್ಪಿ ಸಮ್ಮನ//

ಬಿನ್ನೆ ಇಷ್ಟೆ ದೋಸ್ತಿ ಪಂದ್ ಮಾತ ಬತ್ತೆರ್ 
ಪೊನ್ನೆ ಗೋಂಕು ಕುಕ್ಕುದ ಮರ ಮಾತ ತೂಯೆರ್
ಪೇಂಟೆಡಿತ್ತಿ ಜೋಕ್ಲು ಮಾತ ನಲ್ತ್ ತಿರ್ಗೆರ್
ಸೋಂಟೆ ಪತ್‌ದ್ ಕಂಡಡಕುಲು ಮಾತ ಬಲ್ತೆರ್ //

ದುರ್ಸು ಮಾಲೆ ಲಕ್ಷ್ಮಿ ಬಾಂಬು ಪುಡಾತ್ ಬುಡ್ಯೆರ್
ನೆಲ ಚಕ್ರ ಬೆದ್‌ರ ಪುಂಡೆಲ್ ತೂದು ನಲ್ತೆರ್
 ಬೋಂಟೆ ದೇರ್ಯರೆಂದ್ ಪಂದ್ ಕಾಡ್ ಪೊಗ್ಯೆರ್
ಓಂಟೆ ಬೆತ್ತ ಕಂತ್ ಮಲ್ಲ ಬಟ್ಟಿ ಮಲ್ತೆರ್ //
@ಹನಿಬಿಂದು@
24.10.2024

ಬುಧವಾರ, ಅಕ್ಟೋಬರ್ 23, 2024

ತುಳು ಅಪ್ಪೆ

ತುಳು ಅಪ್ಪೆ 

ಬರೆಪಿ ತರೆ ಕೊರ್ಪಿನ ಅಪ್ಪೆ 
ತೆರಿದಿ ಮೆರೆಪಿನ ದಿನ ಬರುವಪ್ಪೆ
ಬರಿತ ಇಲ್ಲದ ಅಕ್ಯೆ ಲೆಕ್ಕನೆ
ಮರತಿ ನೆಂಪುನು ಪಿರ ಪುಟ್ಟಾಯಿನಿ 

ಈರೆನ್ನ ಏಪಲಾ ಮೋಕೆದ ಬಂಗಾರಿ
ಅಪ್ಪೆ ಮಟ್ಟೆಲ್ ಡ್ ಯಾನ್ ಸಿಂಗಾರಿ
ತಪ್ಪಾವಂದ್ ಇರೆನೊಟ್ಟು ಕಲ್ತಿನ ಪಾತೆರ
ಒಪ್ಪಾದ್ ದೀತೆ ಪೂರ ಐಸಿರ

ಮೋಕೆ ಸೋಕು ಕೊರ್ತಿನಾರ್ ಈರೆ 
ಪಕ್ಕಿದ ಲೆಕ್ಕ ನಲಿತಿನ ಜಾಗೆಲ ಈ ನೀರೆ
ನೀರಾಸರೆ ಪಡೆಯಿನ ತಾನ ಮೂಲೆ 
ಕೋರಿ ಕಿರೆಂಗ್  ತಿನ್ಯ ಬೊಕ್ಕ ಬಾಲೆಲೆ 
@ಹನಿಬಿಂದು@
23.10.2024

ಶನಿವಾರ, ಅಕ್ಟೋಬರ್ 19, 2024

ಚುಟುಕು

ಚುಟುಕು

ನಿಮ್ಮನ್ನು ನಂಬಿರುವುದೇ ನನ್ನ ದೌರ್ಬಲ್ಯ
ನೀವು ಜೊತೆಗಿರುವ ಅಹಂಕಾರ ಮೌಲ್ಯ
ನಿಮ್ಮಿಂದ ಸಾಧ್ಯ ಎಂಬ ಸ್ವಂತಿಕೆಯ ಕಾರ್ಯ
ನೀವಿದ್ದರೆ ಸಾಧಿಸಬಲ್ಲೆ ಎಂಬ ಮನೋಸ್ಥೈರ್ಯ
ಹನಿ ಬಿಂದು
20.10.2024

ಶುಕ್ರವಾರ, ಅಕ್ಟೋಬರ್ 18, 2024

ಸುಗಿಪು

ಸುಗಿಪು ಪದ
ನಟ್ಟೊನ್ವ 

ನಟ್ಟೊನುವಮ್ಮ  ನಟ್ಟೊನುವ ಇರೆನನೆ ಕಾರ್ ಪತ್ತೊನುವ 
ದುರ್ಗಿಲ ಈರೇ ಶಾರದೆ ಈರೆ ನವಶಕ್ತಿಲೆನ ರೂಪಲ ಈರೆ//

ಒವ್ವಾoಡಲ ಬತ್ತಿ ಕಷ್ಟೊನು ಬೇಗ ದೂರ ಮಲ್ಪುನಾರ್ 
ದುಂಬು  ಮಲ್ತಿ ಪಾಪೊಲೆಗ್ ಪರಿಯಾರ ಕೊರ್ಪಿನಾರ್
ನವರಾತ್ರಿದ ಮಾತ ದಿನೊಟ್ಟುಲ ನಿತ್ಯ ಇರೆನನೇ ಸೇವೆ
ಭವ ಬಂಧನಡ್ ಇತ್ತಿ ನಡುಟ್ಟುಲಾ ಸತ್ಯ ಇರೆನವೇ ಲೀಲೆ//

ಭಕ್ತೆರೆ ಭಾಗ್ಯದ ಬಲಲ ಏಪಲ ಈರತ್ತೆ ಅಮ್ಮಾ
ಶಕ್ತಿಯೇ ಕಾಪುನ ಕರುಣೆ ಜೋಕ್ಲೆನ ಮಿತ್ತತ್ತೆ ಈರ್ನ
ರಾತ್ರಿಲಾ ಪಗೆಲ್‌ಲಾ ಈರೆ ಕಾಪುನತ್ತೆ ನಮನ್
ಖಾತ್ರಿಲಾ ಉಂಡುಗೆ ಬುಡ್ದು ಬುಡಯರ್ಗೆ ಕೈನ್//

ಮೋಕೆದ ಬಗ್‌ತಿಗ್ ಕಲೆ ಮಲ್ಲ ಉಂಡುಗೆ
ಶೋಕಿದ ಬದ್‌ಕ್‌ಗ್ ಬಿಲೆ ದಾಲ ಇಜ್ಜಿಗೆ 
ಮರತ್‌ದ್ ಪೋಯೆಡ ಎoಕ್ ದಾಲ ತಿಕ್ಕಂದ್‌ಗೆ
ಕಾತ್‌ದ್ ಲೆತ್ತ್ಂಡ ದೇವಿ ಪೂರ ಕೇನ್ವೆರ್‌ಗೆ//
@ಹನಿಬಿಂದು@
01.10.2024

ಪನಿ ಕವಿತೆ

ಪನಿ ಕವಿತೆ
ಪ್ರಶ್ನೆ

ಮರತ್ ಪೋoಡು 
ಯಾನ್ ಏರ್ 
ಯಾನ್ ಓಲ್ಲೆ 
ಎಂಚ ಉಲ್ಲೆ
ಏರ್ ಪೂರ ಉಲ್ಲೆರ್ 
ಏರ್ ಇಡೆ ಲೆತ್ತಿನಿ 
ಪನುವರಾ ಒರ??
@ಹನಿಬಿಂದು@
18.10.2024

ನಗು

ನಗು

ಅಳುವಿನ ಹಿಂದಿನ ನಗುವಿನ ನೋಟವ
ಅರಿತವ ಯಾರೇ ಹೇಳೆ ಸಖಿ
ಮನದಲಿ ಚೆಲ್ಲಿದ ಬೆಳದಿಂಗಳ ಹಾಲಿನ
ಖುಷಿಯನು ಹಂಚಲು ಬಾರೆ ಸಖಿ//

ಕತ್ತಲ ಬಳಿಕ ಬೆಳಕನು ಕಾಣಲು
ಚೆಲ್ಲುವೆ ನಗುವನು ತಾನೆ ಸಖಿ
ಬಿತ್ತಲು ಸಡಗರ ಪ್ರೀತಿಯ ಭಾವವ
ಗೆಲ್ಲುವೆ ಜಗವನೆ ಅಲ್ವೆ ಸಖಿ?

ಮೊತ್ತದಿ ಲೆಕ್ಕವ ಇಟ್ಟರು ಕೂಡ
ಸಂತಸ ಸಿಗದು ಜಾಣೆ ಸಖಿ
ಸುತ್ತಲು ಹಂಚಲು ನಗುವನು ಇಲ್ಲಿ
ನಿರಾಳ ಬದುಕು ನನ್ನ ಸಖಿ

ಮೋಸ ವಂಚನೆಯ ಜಾಡು ಹಿಡಿಯದಿರು
ನಗುವೇ ಮಾಯ ಮುದ್ದು ಸಖಿ
ಕೋಶ ಓದುತಲಿ ಜ್ಞಾನ ಪಡೆಯುತಿರು
ಬಿಗುವು ಯಾಕೆ ಪೆದ್ದು ಸಖಿ
@ಹನಿಬಿಂದು@
18.10.2024

ಗುರುವಾರ, ಅಕ್ಟೋಬರ್ 17, 2024

ಟoಕಾ

ಟoಕಾ 
ಮಲ್ಲ ಜನಕ್
ಎಲ್ಯ ಬೇಲೆ ತೋಜುವ?
ಮಿತ್ ತೂಪಿನ 
ಏಪಲಾ ತಿರ್ತ್ ಅತ್
ದೀರ್ಘಾಲೋಚನೆ ಅತೆ?
@ಹನಿಬಿಂದು@
17.10.2024

ಬುಧವಾರ, ಅಕ್ಟೋಬರ್ 16, 2024

ತುಳು

ರುಬಾಯಿ

ಬಾಯಿ ಬಾಯಿ ಬುಡ್ದು ತೂಯೆರ್ ಗೆ
ಉನಂದೆ ಪರಂದೇ ಕಾತ್ಕುಲ್ಯೆರ್ಗೆ
ದಾಯೆ ಪಂದ್ ಗೊತ್ತಾಂಡ ನಿಕ್ಲೆಗ್?
ಓಟುಗುಂತೆರೆ ಸೀಟ್ ಬೋಡುಗೆ!
@ಹನಿಬಿಂದು@
16.10.2024

ಸೋಮವಾರ, ಅಕ್ಟೋಬರ್ 14, 2024

ಏನೆಸಲ್

ಐನೆಸಲ್ 
ಕೂಲಿ

ಬೇಲೆ ಮಲ್ಪುನಗ ಬೇನೆ ಸುರುವಾಂಡ್
ಬಯ್ಯ ಮುಟ್ಟಲ ಕಮ್ಮಿ ಇಜ್ಜoಡ್ 
ಡಾಕ್ ಟ್ರೆನ್ ತೂವೊಡು ಪoದ್ ಎನ್ಯೆ
ತಾದಿಡ್ ನಡತೊಂದು ಪೋಯೆ
ದೋಸ್ತಿ ತಿಕ್ಕದ್ ಮಾತ್ರೆ ತಿಂದಾಂಡ್
@ ಹನಿಬಿಂದು@
14-10-2024

ಸಣ್ಣಕತೆ ಮದುವೆ

ಮದುವೆ

ಆ.  ಹುಡುಗಿಗೆ ಮದುವೆಯೇ ಆಗಲಿಲ್ಲ ಕಾರಣ ಬಡತನ. ಬಡತನವನ್ನೇ ಮೈ ಹೊದ್ದುಕೊಂಡು ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ಶಾಲೆಗೆ ಸೇರಿ ಓದಿದ ಹುಡುಗಿ ಬಡತನದಲ್ಲೇ ಜೀವನ ಕಳೆಯುವ ಸ್ಥಿತಿ ಇತ್ತು.
  ಆದರೆ ಆಕೆ ಓದಿನಲ್ಲಿ ಸಿರಿವಂತಲಾಗಿದ್ದಳು. ಹೆಸರು ಕಲಾವತಿ. ಹೆಸರಿನ ಹಾಗೆ ಹಲವು ಕಲೆಗಳ ಒಡತಿ. ಹಾಡು, ನಾಟಕ, ಭಾಷಣ, ಕಲಿಕೆ ಎಲ್ಲದರಲ್ಲೂ ಆಕೆ ಮುಂದು. ಪೋಷಕರಿಗೆ ಅವಳ ಮೇಲೆ ಬಹಳ ಧೈರ್ಯ. ನಮ್ಮನ್ನು ಸಾಕುವಳು ಎಂಬ ನಂಬಿಕೆ. ಅವಳಿಗೊಬ್ಬ ಅಣ್ಣನಿದ್ದ. ಕಲಾ ರಾಮ್. ಆದರೆ ಕಲಾರಾಮ್ ಓದುವುದರಲ್ಲಿ ಅಷ್ಟಕ್ಕಷ್ಟೇ. ಮನೆಯ ಕಷ್ಟಕ್ಕೆ ಹೊರ ಹೋಗಿ ದಿನ ಕಳೆಯ ತೊಡಗಿದ. ಬೇಡದ ಅವನ ಹಾಗೆಯೇ ಇರುವ ಕೊಳಕು ಸ್ನೇಹಿತರು ಸಿಕ್ಕಿದರು. ಅವರ ಜೊತೆ ಜೂಜು, ಕುಡಿತ, ಹೊಗೆಸೊಪ್ಪು ಸೇವನೆ, ಧೂಮಪಾನ ಎಲ್ಲವನ್ನೂ ಕಲಿತ. ಇದರಿಂದ ಮನೆ ತೊರೆದ. ಅದೆಲ್ಲೋ ಬಾರಿನಲ್ಲಿ ಕೆಲಸಕ್ಕೆ ಸೇರಿದ. ಅದೊಂದು ಕಾಲದಲ್ಲಿ ತಾನು ಮಾಡಿದ್ದೆಲ್ಲ ಕೆಟ್ಟದು ಎಂಬ ಬುದ್ಧಿ ಬಂದು ಸರಿ ಆಗಲು ಹೊರಟ. ಆಗ ಕಾಲ ಮಿಂಚಿ ಹೋಗಿತ್ತು. ಅದು ಯಾರೋ ಒಬ್ಬಳು ತಮಿಳು ಹುಡುಗಿಯನ್ನು ಮದುವೆ ಆದ. ಅವಳಿಗೆ ಮೊದಲೇ ಒಂದು ಮದುವೆ ಆಗಿತ್ತು. ಅವಳು ಇವನನ್ನು ಕ್ಯಾರೆ ಮಾಡದೆ ಕೆಲಸಕ್ಕೆ ಹೋಗಿ ಸಂಪಾದಿಸಿ ಚೆನ್ನಾಗಿ ಬದುಕುತ್ತಿದ್ದಳು. ಗಂಡ ಎಂಬ ಹೆಸರಿಗಾಗಿ ನೋಡಲು ಚೆನ್ನಾಗಿದ್ದ ಇವನನ್ನು ಕಟ್ಟಿಕೊಂಡಿದ್ದಳು ಅಷ್ಟೇ.
   ಇತ್ತ ಕಲಾವತಿ ಚೆನ್ನಾಗಿ ಓದಿ ಬಿ ಎಸ್ಸಿ ನರ್ಸಿಂಗ್ ಮಾಡಿ ಒಂದು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದಳು. ಒಳ್ಳೆಯ ಸಂಬಳ ಸಿಗುತ್ತಿತ್ತು. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡಳು. ಆದರೆ ಎದುರು ನಿಂತು ಅವಳ ಮದುವೆ ಮಾಡಿ ಕೊಡುವವರು ಯಾರೂ ಇರಲಿಲ್ಲ. ತಂದೆ ರೋಗಿಯಾಗಿದ್ದರು. ತಾಯಿ ಏನೂ ತಿಳಿಯದವರಾಗಿದ್ದರು. ಬಡತನ ಬಂಧುಗಳನ್ನು ದೂರಕ್ಕೆ ಅಟ್ಟಿ ಬಿಟ್ಟಿತ್ತು.
     ಮನೆಯ ಪರಿಸ್ಥಿತಿ, ಪೋಷಕರ ಬಗ್ಗೆ ತಿಳಿದಿದ್ದ ಕಲಾವತಿ ಮದುವೆಯ ಬಗ್ಗೆ ಯೋಚನೆ ಮಾಡಲಿಲ್ಲ. ಪೋಷಕರಿಗೂ ಅದೇ ಬೇಕಿತ್ತು. ಮದುವೆಯಾಗಲು ಭಯಂಕರ ವರದಕ್ಷಿಣೆ ಕೂಡಾ ಅಡ್ಡಿ ಬಂದಿತ್ತು. ಹುಡುಗನ ಕಡೆಯವರು ಹುಡುಗಿ ನೋಡುವ ಮೊದಲೇ ಲಕ್ಷಗಟ್ಟಲೆ ರೇಟ್ ಫಿಕ್ಸ್ ಮಾಡಿ ಕೇಳುತ್ತಿದ್ದರು. ಹಾಗಾಗಿ ಅವಳು ಆಹ್ ಬಗ್ಗೆ ಯೋಚನೆ ಮಾಡಲು ಹೋಗಲಿಲ್ಲ. ಬಂಧುಗಳು ಎರಡನೇ ಸಂಬಂಧದ ವರ ಹುಡುಕಲು ಆರಂಭಿಸಿದಾಗ ಕೋಪ ಅವಳಿಗೆ ನೆತ್ತಿಗೇರಿತು. ಆದರೂ ಅವಳು ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದಳು.ಗೆಳೆಯರೆಲ್ಲ ಸೇರಿ  ಪಕ್ಕದ ಊರಿನ ನವೀನ ಎಂಬ ಹುಡುಗನನ್ನು ಹೇಳಿ ಅವನು ಅವಳನ್ನು ಚೆನ್ನಾಗಿ ನೋಡಿಕೊಳ್ಳುವೆ ಎಂದು ಹೇಳಿ ಕಡಿಮೆ ವರದಕ್ಷಿಣೆ ಕೇಳಿ ಇವಳ ಹಣದಲ್ಲೇ ಮದುವೆಯಾದ.
        ಮದುವೆಯ ಬಳಿಕ ನವೀನ  ದುಡಿಯದಾದ. ಕಾರಣ ಸೋಮಾರಿತನ. ಮಡದಿ ದುಡಿಯುವಳು ಎಂಬ ತಾತ್ಸಾರ. ಮನೆಯಲ್ಲೇ ಕುಳಿತು ಗೆಳೆಯರ ಕರೆದು ಅವರೊಂದಿಗೆ ಲಲ್ಲೆ ಹೊಡೆಯುವುದು ಅಭ್ಯಾಸವಾಯಿತು. ಊರಿನಲ್ಲೇ ಇದ್ದುದರಿಂದ ಹಲವಾರು ಬಾಲ್ಯ ಸ್ನೇಹಿತರಿದ್ದರು. ಕಲಾವತಿ ತನ್ನ ತಂದೆ ತಾಯಿಗಳನ್ನು ನೋಡಿಕೊಳ್ಳುವ ಒಪ್ಪಿಗೆ ಮೊದಲೇ ಪಡೆದಿದ್ದ ಕಾರಣ ಅವರ ಮನೆಯಲ್ಲೇ ಉಳಿದಳು. ನವೀನನಿಗೆ  ಪರರ ಜೊತೆ ಸೇರಿ ಸಮಾಜ ಸೇವೆ ಮಾಡುವುದು ಹವ್ಯಾಸ ಆಗಿ ಬಿಟ್ಟಿತು. ಹಾಗಾಗಿ ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತೆ ಆದ. ಹೊರಗೆ ಹಾರ, ತುರಾಯಿ ಹಾಕಿ ಜನ ಸನ್ಮಾನಿಸುತ್ತಿದ್ದರು. ಅದರಿಂದ ಅವನ ಮದ ಇನ್ನಷ್ಟು ಹೆಚ್ಚಾಯಿತು. ತಾನು ಗಣ್ಯ ವ್ಯಕ್ತಿ ಅಂದುಕೊಂಡ.
ಕಲಾವತಿಯ ತಂದೆ ತಾಯಿ ಹಾಸಿಗೆ ಹಿಡಿದರು. ಅವರನ್ನು ನೋಡಿಕೊಳ್ಳಲು ನವೀನ ಹೋಗಲಿಲ್ಲ. ತಂದೆ ತಾಯಿ ಮಗಳ ಬದುಕು ನೋಡಿ ಮರುಗಿದರು. ಎಷ್ಟು ದುಡಿದರೂ ಪೋಷಕರ ಔಷಧಿಗೆ ಸರಿ ಹೋಗುತ್ತಿತ್ತು. ಬಡತನದಲ್ಲೇ ಹುಟ್ಟಿ ಬಡತನದಲ್ಲೇ ಬೆಳೆದು, ಮದುವೆ ಎಂಬುದೂ ಬಡತನದಲ್ಲೇ ಅಂತ್ಯಗೊಂಡು, ಬಡತನವೇ ಮೈವೆತ್ತು ತಂದೆ ತಾಯಿ ಸತ್ತ ಬಳಿಕ ತನಗೆ  ಯಾರೂ ಇಲ್ಲ ಎಂದು ತಾನೂ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳು.
@ಹನಿಬಿಂದು@
05.10.2024


ನಮಿಸೋಣ

ನಮಿಸೋಣ

ನಮಿಸೋಣ ದೇವರಂಥ ಮಾತಪಿತರ ಚರಣಗಳಿಗೆ
ಬಾಗೋಣ ತಾನುರಿದು ಬೆಳಕ ಕೊಡುವ ದೀಪಗಳಿಗೆ//

ಗೌರವವ ಕೊಟ್ಟು ಕಲಿಯಬೇಕು  ಹಿರಿಯರಿಂದ
ಸೌರಭವ ಬೀರುವ ಶಕ್ತಿ ಪಡೆದ ಗೆಲುವಿನಿಂದ
ಪೌರತ್ವ ಪಡೆದು ಬಾಳಿ ಬದುಕೋ ನಲಿವಿನಿಂದ 
ಹೌಹಾರಿ ಬೀಳದೆ, ತಾಳ್ಮೆ ಎಂಬ ಮಂತ್ರದಿಂದ//

ಕಪ್ಪು ಬಿಳುಪು ಎನ್ನದೆ, ಮೇಲು ಕೀಳು ತೊಡೆದು ಹಾಕಿ
ಸೊಪ್ಪು ಕಾಳು ತಿನ್ನುತ ಆರೋಗ್ಯದ ರಕ್ಷೆ ಮಾಡಿ
ಅಪ್ಪುಗೆಯೇ ಬದುಕಲ್ಲ, ಪ್ರೀತಿ ಸ್ನೇಹ ಮೊಳೆಯಲಿ 
ದಪ್ಪ ಸಣ್ಣ ಬಣ್ಣಕ್ಕಿಂತ ಜ್ಞಾನ ಹೆಚ್ಚು ಬೆಳೆಯಲಿ!//

ಸಂಸ್ಕೃತಿಯ ಉಳಿಸುತ ಗೆಳೆತನವ ಬೆಳೆಸುತ 
ಮಾತೃಭಾಷೆ ನಿತ್ಯವೂ  ಬಳಕೆಯನ್ನು ಮಾಡುತ
ನಾನು ನನ್ನ ನನ್ನದೇ ನನಗೆ ಎಂದು ಮೆರೆಯದೆ
ಸಹಾಯ ಮಾಡೊ ಮನುಜರ ಎಂದೂ ನಾವು ಮರೆಯದೆ//

ಬಾಗಿ ಬಳುಕಿ ಬಳ್ಳಿಯಂತೆ ಭಾವ ಬೀಜ ಬಿತ್ತುತ
ಬಾನವರೆಗೆ ಕೈಯ ಚಾಚೊ ಗುರಿಯ ಇರಿಸಿಕೊಳ್ಳುತ
ಭಾವ ಬೇಧ ಎಲ್ಲಾ ಮರೆತು, ಒಂದೇ ಎಂದು  ಸಾರುತ
ಬಾಕಿ ಉಳಿದ ದಿನಗಳನ್ನು ಭಯವ ಮರೆತು ಕಳೆಯುತ//

ದೈವೀ ಶಕ್ತಿ ಎಂಬ ಬಲದ ಪರಿಸರಕೆ ಬಾಗುತ
ಕೈಲಿ ಇರುವ ಸಮಯವನ್ನು  ಬುದ್ಧಿಯರಿತು ಬಳಸುತ 
ವೈದ್ಯ ಗುರು ಹಿರಿಯರಿಗೆ ನಮಸ್ಕಾರ ತಿಳಿಸುತ
ರೈಲಿನಂತ ಜೀವನದಿ ನೆಮ್ಮದಿಯ ಹುಡುಕುತ//
@ಹನಿಬಿಂದು@
07.10.2024












ಲೇಖನ

ಪರಿಸರ ಉಳಿಸುವಲ್ಲಿ ನಮ್ಮ ನಂಬಿಕೆಗಳ ಮಹತ್ವ

      ನಮ್ಮ ಪರಿಸರದ ಉಳಿವು ನಮ್ಮ ಕೈಲೇ ಇದೆ ಎಂಬುದನ್ನು ನಾವು ತಲೆ ತಲಾಂತರಗಳಿಂದ ಅರಿತು, ನಮ್ಮ ಹಿರಿಯರು ಆಚರಣೆಗೆ ತಂದ ಹಲವಾರು ಆಚರಣೆಗಳು, ಪೂಜೆಗಳು, ಹಬ್ಬ ಹರಿದಿನಗಳು ಎಲ್ಲವೂ ಕೂಡ ಪರಿಸರದ ಉಳಿಸುವಿಕೆಗೆ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗವೇ ಆಗಿದೆ. ಪುರಾಣ ಕಾಲದಿಂದಲೂ ಪಂಚ ಭೂತಗಳೇ ನಮ್ಮ ಆರಾಧ್ಯ ದೇವರು. ನೆಲ, ಜಲ, ವಾಯು, ಅಗ್ನಿ. ಆಕಾಶ ಇವುಗಳನ್ನು ನಂಬಿದವರ ಬದುಕು ಹಾಳಾಗದು ಎಂಬ ನಂಬಿಕೆ ನಮ್ಮ ಪೂರ್ವಜರದ್ದು. ಅವುಗಳು ನಮ್ಮ ಆರೋಗ್ಯಕ್ಕೂ, ಬದುಕಿನ ಉದ್ಧಾರಕ್ಕೂ ಹೇಗೆ ಸಹಕಾರಿ ಎಂಬುದನ್ನು ನಮ್ಮ ತಿಳುವಳಿಕೆಗೆ ಅನುಗುಣವಾಗಿ ಸ್ವಲ್ಪ ನೋಡೋಣ. 
  ಬೆಳಗ್ಗೆದ್ದು ದೇವರಿಗೆ ಅರ್ಪಿಸಲು ಎಂದು ಹೂ ಕೊಯ್ಯುವ ಮತ್ತು ಅದನ್ನು ದೇವರಿಗೆ (ದೇವರ ಫೋಟೋ ಅಥವಾ ಮೂರ್ತಿಗೆ) ಒಪ್ಪ ಓರಣವಾಗಿ ಜೋಡಿಸಿ ಇಡುವ ಅಥವಾ ಮಾಲೆ ಕಟ್ಟಿ ಮೂಡಿಸುವ ಪದ್ಧತಿ ನಮ್ಮಲ್ಲಿ ಇದೆ. ಕರೋನ ಸಮಯದಲ್ಲಿ ನಿತ್ಯ ಹೂ, ಹಸಿರಿನ ಮಧ್ಯೆ ಕಳೆದ ಹಲವಾರು ಜನರ ಆರೋಗ್ಯ, ಕಣ್ಣಿನ ದೃಷ್ಟಿ ಉತ್ತಮವಾದ ಹಲವಾರು ಉದಾಹರಣೆಗಳು ನಮ್ಮ ಮುಂದೆಯೇ ಇವೆ. ಹೂವನ್ನು ಕೊಯ್ದು ದೇವರ ಎದುರು ಮುಡಿಸಬೇಕಾದರೆ ಮನೆಯ ಎದುರು ಬಣ್ಣ ಬಣ್ಣದ ಹೂವಿನ ಗಿಡಗಳನ್ನು ನೆಟ್ಟು. ಅವುಗಳನ್ನು ತಾಳ್ಮೆಯಿಂದ ಬೆಳೆಸಿ, ನೀರು ಗೊಬ್ಬರ ಹಾಕಿ ಉತ್ತಮ ಆರೈಕೆ ಮಾಡಿ ನೋಡಿಕೊಂಡರೆ ಮಾತ್ರ ಸಾಧ್ಯ. ಇಲ್ಲಿ ನಮ್ಮ ತಾಳ್ಮೆ, ಆರೋಗ್ಯ, ನೆಮ್ಮದಿ. ಸಂತಸ ಹೆಚ್ಚುತ್ತದೆ. ಧನಾತ್ಮಕ ಚಿಂತನೆ ಅರಳುತ್ತದೆ. ರೋಗಗಳು ಕಡಿಮೆ ಆಗುತ್ತವೆ ಅಲ್ಲವೇ? ಹಾಗೆಯೇ ನಾವೇ ನೆಟ್ಟ ನಮ್ಮ ಮನೆ ಎದುರಿನ ಗಿಡದಲ್ಲಿ ಬಣ್ಣ ಬಣ್ಣದ ಹೂವುಗಳು ಅರಳುವಾಗ ನಮಗೆ ಆಗುವ ಖುಷಿ ಅನುಭವಿಸಿದವರಿಗೆ ಮಾತ್ರ ಗೊತ್ತು. ಅಲ್ಲವೇ? ಇನ್ನು ನಿತ್ಯ ಹೂವನ್ನು ಕೊಯ್ಯಲು ಗಿಡದ ಬಳಿಗೆ ಹೋದಾಗ ಗಿಡಕ್ಕೆ ಏನಾದ್ರೂ ತೊಂದರೆ ಆದರೆ ತಿಳಿಯುತ್ತದೆ, ಹಸಿರು ನೋಡಿ ಕಣ್ಣು, ಹೃದಯ ಅರಳುತ್ತವೆ. ನಮ್ಮ ದೇಹ ಪ್ರಫುಲ್ಲವಾಗುತ್ತದೆ. ಆರೋಗ್ಯ ತಂತಾನೇ ವೃದ್ಧಿ ಆಗುತ್ತದೆ. ಅದನ್ನು ಕೊಯ್ದು ತಂದು ದೇವರಿಗೆ ಅಂದವಾಗಿ ಕಟ್ಟುವಾಗ 
  ಹಾಗೆಯೇ ಬೆಳಗ್ಗೆದ್ದು ಮನೆಯ ಮುಂದೆ ಇರುವ ತುಳಸಿ ಗಿಡಕ್ಕೆ ನೀರು ಹಾಕಿದರೆ ಸಂಜೆ ಅಲ್ಲಿ ದೀಪವಿಟ್ಟು ನಮಸ್ಕಾರ ಮಾಡುವ ಪರಿಪಾಠ ನಮ್ಮಲ್ಲಿದೆ. ತುಳಸಿ ಗಿಡ ಎಲ್ಲಾ ಗಿಡಗಳಿಗಿಂತ ಹೆಚ್ಚು ಆಮ್ಲಜನಕ ಹೊರಬಿಟ್ಟು ವಾತಾವರಣವನ್ನು ಶುದ್ಧಿಗೊಳಿಸುತ್ತದೆ ಅಲ್ಲದೆ ಅದರ ಎಲೆಯಲ್ಲಿ ರೋಗ ನಿವಾರಕ ಗುಣಗಳಿವೆ. ಅದರ ಸುತ್ತ ಸುತ್ತುವುದರಿಂದ ಒಳ್ಳೆಯ ಗಾಳಿ ನಮಗೆ ಸಿಕ್ಕಿ, ಆರೋಗ್ಯದ ಪರಿಸ್ಥಿತಿಯೂ ಉತ್ತಮವಾಗುತ್ತದೆ. ಸಂಜೆ ದೀಪ ಬೆಳಗುವುದು ಕತ್ತಲು ಕವಿಯುವ ಸಮಯದಲ್ಲಿ ದಾರಿ ಹೋಕರಿಗೆ ರಸ್ತೆ ಕಾಣಲಿ ಎಂಬುದು ಹಿಂದಿನವರ ಕಲ್ಪನೆ ಆಗಿತ್ತು. ಆಗಿನ ಕಾಲದಲ್ಲಿ ಬೀದಿ ದೀಪಗಳು ಇಲ್ಲದೆ ಇದ್ದಾಗ ತುಳಸಿ ದೀಪ ನೋಡಿ ಅಲ್ಲೊಂದು ಮನೆ ಇದೆ ಎಂದು ರಾತ್ರಿ ಬಂದ ಜನಕ್ಕೆ ತಿಳಿಯುತ್ತಿತ್ತು. ಇದು ಹಲವರಿಗೆ ಉಪಯೋಗ ಆಗುತ್ತಿತ್ತು. ಅಲ್ಲದೆ ಎಳ್ಳೆಣ್ಣೆ ದೀಪ ಉರಿಸಿದರೆ ಉಪಯುಕ್ತ ಎಂದು ಹಿರಿಯರು ಹೇಳುತ್ತಾರೆ. 
  ಇನ್ನು ನಾಗಬನಗಳೂ ಇಲ್ಲಿ ಸೇರಿವೆ. ಒಂದಷ್ಟು ಮರಗಳ ರಾಶಿ ಒಂದೆಡೆ ಸೇರಿ ನಾಗಬನ ನಿರ್ಮಾಣ ಆಗುತ್ತದೆ. ಅವುಗಳ ಬುಡದಲ್ಲಿ ನಾಗನ ಕಲ್ಲು. ಅಲ್ಲಿಗೆ ಯಾರೂ ಹೋಗುವ ಹಾಗಿಲ್ಲ. ಮಡಿ ಮೈಲಿಗೆ ಸಲ್ಲದು. ಅಲ್ಲಿ  ಹೆಂಗಸರು, ಮಕ್ಕಳು ಹೋಗಬಾರದು, ಉಗಿಯುವುದು, ಮಲ ಮೂತ್ರ ವಿಸರ್ನೆಗೆ ಅವಕಾಶ ಇಲ್ಲ. ಸುತ್ತ ನೆರಳು ಇರುವಷ್ಟು ದಟ್ಟ ಕಾಡು ಇರಬೇಕು. ಇದೆಲ್ಲವೂ ಪರಿಸರದ ಉಳಿವಿಗಾಗಿ. ಅಲ್ಲಿ ಬದುಕುವ ವಿಷ ಜಂತುಗಳ ಬದುಕಿನ ರಕ್ಷಣೆಗಾಗಿ. ಪರಿಸರದ ಸರಪಣಿಯಲ್ಲಿ ಅವುಗಳೂ ಕೂಡಾ ಉನ್ನತ ಪಾತ್ರ ವಹಿಸುವ ಕಾರಣ ಅದಕ್ಕಾಗಿ ಒಂದಷ್ಟು ಸ್ಥಳದ ಮೀಸಲು. ಜನ ದೇವರ ಹೆಸರು ಹೇಳಿದರೆ ಮಾತ್ರ ಹೆದರುತ್ತಾರೆ. ಅದಕ್ಕಾಗಿ ನಾಗನ ಹೆಸರು ಕೊಟ್ಟರು. ಕೆಲವೆಡೆ ಕಲೆ ಕಾರ್ಣಿಕ ಕಂಡದ್ದು ಕೂಡಾ ಇದೆ. ಹಾಗಾಗಿ ಜನ ಈಗಲೂ ನಂಬುತ್ತಾರೆ. ಪರಿಸರ ಉಳಿಸುವ ಹಿರಿಯರ ಈ ಕಾರ್ಯ ಶ್ಲಾಘನೀಯ ಅಲ್ಲವೇ?
  ಇನ್ನು ದ್ವಾರ ಪೂಜೆ. ಬಾಗಿಲಿನ ದ್ವಾರಕ್ಕೆ ಅರಶಿನ ಕುಂಕುಮ ಇಡುವುದು ಯಾವುದೇ ಕ್ರಿಮಿಗಳು ಹಾಗೂ ವಿಷ ಜಂತುಗಳು ಮನೆಯ ಒಳಗೆ ಬಾರದೆ ಇರಲಿ ಎಂಬ ಕಾರಣಕ್ಕೆ. ಅರಶಿನ ಕುಂಕುಮ ಅದನ್ನು ತಡೆಯುತ್ತದೆ. ಹೂವು ತಂಪು ಹಾಗೂ ಅಂದ. ನೀರು ಹಾಕಿ ಶುದ್ಧೀಕರಿಸಿ, ರಂಗೋಲಿ ಬಿಡಿಸುವುದು ಹೆಣ್ಣಿನ ಕಲಾ ಪ್ರತಿಭೆಗೆ ಹಿಡಿದ ಕೈಗನ್ನಡಿ. ಕಲೆಯ ಅನಾವರಣ. ಅದನ್ನು ಭಕ್ತಿಪೂರ್ವಕವಾಗಿ ಮಾಡುವುದು ಧನಾತ್ಮಕ ಶಕ್ತಿಯ, ಆಲೋಚನೆಗಳ ಸಂಚಲನ. 
ಇವೆಲ್ಲಾ ಉದಾತ್ತ ವೈಜ್ಞಾನಿಕ ಕಾರಣಗಳು ಇಲ್ಲಿ ಪ್ರತಿ ಆಚರಣೆಯಲ್ಲೂ ಕಂಡು ಬರುತ್ತವೆ. ಜನ ತಮ್ಮ ವಿವಿಧ ಪೂಜೆ, ಆಚರಣೆಗಳು, ಅದರ ಜೊತೆಗಿನ ಹಲವಾರು ದೈವಿಕ ನಂಬಿಕೆಗಳ ನೆಲೆಗಟ್ಟು ಪ್ರಕೃತಿಯ ಉಳಿವಿನ ಸಂಕೇತವೂ ಆಗಿತ್ತು. ಜನ ಆ ರೀತಿಯಾಗಿ ನೇಸರ ಉಳಿಸುತ್ತಾ ಪರರಿಗೂ, ಪರ ಜೀವ ಜಂತುಗಳಿಗೂ ಸರ್ವೇ ಜನಾಃ ಸುಖಿನೋ ಭವಂತು ಎಂಬ ಮಾತಿನಂತೆ ತಾವು ಬದುಕಿ ಇತರ ಜೀವಿಗಳಿಗೂ ಬದುಕಲು ಬಿಡುತ್ತಿದ್ದರು. ಹಸಿರನ್ನು ಉಳಿಸಿ ಆಹಾರ ಸರಪಣಿ, ಜಲಚಕ್ರ, ಪರಿಸರ ಸರಪಣಿಯನ್ನು ಕೂಡಾ ಉಳಿಸಿ ಬೆಳೆಸುತ್ತಿದ್ದರು. ಇಂದು ನಾವು ರಾಸಾಯನಿಕ ಅರಶಿನ, ಕುಂಕುಮ, ಬಣ್ಣದ ಪುಡಿಗಳನ್ನು ಬಳಸದೆ ಇವುಗಳನ್ನೆಲ್ಲ ಉಳಿಸುವ ಕೆಲಸ ಮಾಡಬೇಕಿದೆ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
11.10.2024

ಹನಿ

ಹನಿ 
ಅರ್ಹತೆಗೆ ತಕ್ಕಷ್ಟು
ಸ್ಥಾನಮಾನ ಸಿಕ್ಕಿದರೆ
ಅದು ಖುಷಿ!
ಅರ್ಹತೆ ಇದ್ದೂ
ಏನೂ ಸಿಗದೆ ಹೋದರೆ
ಮಂಡೆ ಬಿಸಿ!
ಅರ್ಹತೆ ಇಲ್ಲದವನಿಗೆ
ಆ ಸ್ಥಾನ ಇದ್ದರೆ
ಇತರರಿಗೆ ಮಸಿ!
@ಹನಿಬಿಂದು@
13.10.2024

ಚುoಗುಡಿ

ಚoಗುಡಿ 

ಅಜ್ಜಿ ಪಂಡೆರ್ ಅಲ್ಪ ದಾಲಾ ಬುಲೆವೆಂದ್ ಮಣ್ಣ್ ಬಾರಿ ಬರಡ್ 
ಜೋಕುಲು ಪಂಡೆರ್ ತೂಕ ಪಪ್ಪ ಪೇoಟೆಡ್ದ್ ಬೇಗ ಬರಡ್ 

ಅಜ್ಜೆರ್  ಮಾತ ಜೋಕ್ಲೆಡ ಪಂಡೆರ್ ನಮ್ಮ ಎಡ್ಡೆ  ತುಳು ನಾಡ್
ಅಜ್ಜಿ ಪಂಡೆರ್ ಆಯಡ ಎನ್ನ   ಕೆಬಿತ ಬೂರ್ದುಂಡು ನಾಡ್ 

ದೂರ ಕೇನ್ನಗ ಮಾಮ ಪಂಡೆರ್ ಪೋಯರುಂಡು ಜೆಪ್ಪು
ಅಜ್ಜಿ ನೆರ್ದ್ ಪಂಡೆರ್ ಓಡೆಲ ಬೊರ್ಚಿ ಇನಿ ಇಲ್ಲಡೆ ಜೆಪ್ಪು

ಮಾಮಿ ಪಂಡೆರ್  ಊರುಗು  ಬತ್ತ್  ಗಟ್ಟಿಡೆ  ರಡ್ಡ್  ಉಂಡೆ
ಮಾಮ ಕನತೆರ್ ತಿನಿಯರೆ ನಾಲ್ ಲಾಡ್ ರವೆತ  ಉಂಡೆ

ಮಗಲ್ ಪಂಡಲ್ ಪಪ್ಪಡ ವಾಸನೆ ಬರೊಂದುoಡು ಸೂ
ಪಪ್ಪ ಪಂಡೆರ್ ಪಾಡಡ ಬಾಲೆ ಎಂಕ್ಲೆನ  ಬಂಜಿಗ್ ಈ ಸೂ 
@ಹನಿಬಿಂದು@
13.10.2024

ವಿಮರ್ಶೆ

ಶ್ರೀಮತಿ ಪ್ರೇಮಾ ಆರ್ ಶೆಟ್ಟಿ ಇವರು ಪ್ರಸ್ತುತ ಸರಕಾರಿ ಪದವಿಪೂರ್ವ ಕಾಲೇಜು ಮೂಲ್ಕಿ ಇಲ್ಲಿನ ಪ್ರೌಢ ಶಾಲಾ ವಿಭಾಗದಲ್ಲಿ 3 ವರ್ಷಗಳಿಂದ ಆಂಗ್ಲ ಭಾಷಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿಸುತ್ತಿದ್ದಾರೆ.ವೃತ್ತಿಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾದ ಇವರು ಪ್ರವೃತ್ತಿಯಲ್ಲಿ ಬರಹಗಾರರು, ಕವಯತ್ರಿ, ಅಂಕಣಕಾರರು, ಕಾರ್ಯಕ್ರಮ ನಿರ್ವಾಹಕರು, ಫ್ಯಾಷನ್ ಡಿಸೈನರ್, ಕೌನ್ಸಿಲರ್, ಸಾಹಿತಿ, ಸ್ಪೋಕನ್ ಇಂಗ್ಲಿಷ್ ಟ್ರೈನರ್, ಮಾಸ್ಟರ್ ರಿಸೋರ್ಸ್ ಪರ್ಸನ್ ಹಾಗೂ ನಿತ್ಯ ಕಲಿಕಾರ್ಥಿ. 

     ಇವರು "ಹನಿ ಬಿಂದು" ಎಂಬ ಕಾವ್ಯ ನಾಮದಿಂದ ಕನ್ನಡ, ತುಳು ಹಾಗೂ ಆಂಗ್ಲ ಭಾಷೆಗಳ ಸಾಹಿತ್ಯದಲ್ಲಿ ಕೈಯಾಡಿಸುತ್ತಿರುವ ಅವರು ದಿ. ರಮೇಶ್ ಶೆಟ್ಟಿ  ಮತ್ತು ಗುಲಾಬಿ ಶೆಟ್ಟಿ ಇವರ ಮಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಡಿಸೆoಬರ್ 10, 1981 ರಂದು ಜನಿಸಿದರು. ಶ್ರೀ ಮೂಜಿಲ್ನಾಯ ಹಿರಿಯ ಪ್ರಾಥಮಿಕ ಶಾಲೆ ಈದು ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ, ಸರಕಾರಿ ಪದವಿ ಪೂರ್ವ ಕಾಲೇಜು ಕುದುರೆಮುಖ ಇಲ್ಲಿ ಪ್ರೌಢ ಶಿಕ್ಷಣ ಪಡೆದು ಹತ್ತನೇ ತರಗತಿಗೆ ಶಾಲೆಯಲ್ಲೇ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದರು. ಶಾಲಾ ಮಟ್ಟದಲ್ಲಿ , ಅಂತರ್ ಶಾಲಾ ಮಟ್ಟದಲ್ಲಿ ನಡೆಯುವ ಎಲ್ಲಾ ಕವನ, ಲಘು ಪ್ರಬಂಧ, ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ  ಇವರಿಗೆ ಮೊದಲ ಸ್ಥಾನ ಸಿಗುತ್ತಿತ್ತು. ಬಳಿಕ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ತಮ್ಮ ಪಿಯುಸಿಯನ್ನು ಪಿ ಸಿ ಎಮ್ ಬಿ ವಿಷಯದಲ್ಲಿ  ಪೂರೈಸಿದರು. ಅಲ್ಲಿನ ಆಗ ಕನ್ನಡ ಉಪನ್ಯಾಸಕ ಹಾಗೂ ಬರಹಗಾರರಾದ   ಶ್ರೀಯುತ ಚೇತನ ಸೋಮೇಶ್ವರ ಅವರಿಂದ ಪ್ರಭಾವಿತಾರಾದರು ಮತ್ತು ಬರವಣಿಗೆಯನ್ನು ಮುಂದುವರೆಸಿದರು. ನಂತರ ಕಂಪ್ಯೂಟರ್ ಕೂಡಾ ಕಲಿತರು.

      ಬಳಿಕ ಮೈಸೂರಿನ ಸುಪ್ರಸಿದ್ಧ ಮಹಾರಾಣಿ ಮಹಿಳಾ ಶಿಕ್ಷಕ ಶಿಕ್ಷಣ ಸಂಸ್ಥೆಯಲ್ಲಿ ಡಿ.ಎಡ್ ಶಿಕ್ಷಣದಲ್ಲಿ ರಾಜ್ಯಕ್ಕೇ ಮೊದಲ ರ್ಯಾಂಕ್ ಪಡೆದು ಉತ್ತೀರ್ಣರಾದರು. ಕಾಲೇಜಿನ ಮ್ಯಾಗಝಿನ್ "ಮಹಾರಾಣಿ" ಯಲ್ಲಿ ಹಲವಾರು ಕಥೆ, ಕವನ, ಲೇಖನಗಳು ಆಗಲೇ ಪ್ರಕಟಗೊಂಡಿದ್ದು , ಕಾಲೇಜಿನ ವರ್ಷದ ಆಕ್ಟಿವ್ ವಿದ್ಯಾರ್ಥಿನಿ ಆಗಿಯೂ ಆಯ್ಕೆ ಆಗಿದ್ದರು. ಆಗಲೇ  ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡರು. 

         ತದನಂತರ 2004ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ  ಶಾಲೆ ಉಳಿಬೈಲು, ಬಂಟ್ವಾಳ ತಾಲೂಕು ಇಲ್ಲಿ ವಿಜ್ಞಾನ ಶಿಕ್ಷಕರಾಗಿ ಸರಕಾರಿ ಸೇವೆಗೆ ಪಾದಾರ್ಪಣೆಗೈದರು. ಆ ಶಾಲೆಯಲ್ಲಿ  ಬೋಧನೆಯಲ್ಲಿ ತೊಡಗಿರುವಾಗಲೇ ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾನಿಲಯದಿಂದ ಆಂಗ್ಲ ಭಾಷೆಯಲ್ಲಿ ಪದವಿ ಮತ್ತು ಬಿ.ಎಡ್ ಪದವಿ ಪಡೆದರು. ಜೊತೆಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ವಿಶೇಷ ಶ್ರೇಣಿಯ ಅಂಕಗಳೊಂದಿಗೆ  ಸ್ನಾತಕೋತ್ತರ ಪದವಿ ಪಡೆದರು. ನಂತರ ತಮ್ಮ ಬಿ.ಎಡ್ ಶಿಕ್ಷಣವನ್ನೂ ಕೂಡ ಉನ್ನತ ಶ್ರೇಣಿಯ ಅಂಕಗಳೊಂದಿಗೆ ಪಡೆದರು.  ಇಂದಿರಾ ಗಾಂಧಿ ಮುಕ್ತ ವಿಶ್ವ ವಿದ್ಯಾನಿಲಯದ ಆಂಗ್ಲ ಭಾಷಾ ಬೋಧನೆಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಕೂಡಾ ಪೂರ್ಣಗೊಳಿಸಿದರು. ಬೋಧನಾ ಕಾರ್ಯ, ಕಲಿಕೆ, ಶಾಲೆ ಬಿಟ್ಟ ಹಳ್ಳಿಯ ಬಡ ಹೆಣ್ಣು ಮಕ್ಕಳಿಗೆ ಟೈಲರಿಂಗ್ ತರಗತಿ ನಡೆಸುತ್ತಾ ತರಬೇತಿ ನೀಡುತ್ತಾ ಆಗಲೂ ಬರವಣಿಗೆಯಲ್ಲಿ ಕೈಯ್ಯಾಡಿಸುವುದನ್ನು ಬಿಡಲಿಲ್ಲ. "ನಮ್ಮ ಬಂಟ್ವಾಳ" ವಾರ ಪತ್ರಿಕೆಯಲ್ಲಿ "ಪ್ರೇಮಾ ಉಳಿಬೈಲು" ಎಂಬ ಹೆಸರಿನಲ್ಲಿ ನಿರಂತರ ಮೂರು ವರ್ಷಗಳ ವರೆಗೆ ಇವರ ಅಂಕಣ ಬರಹ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ" ಹಾಗೂ ತದ ನಂತರ ನಮ್ಮ ಬಂಟ್ವಾಳ ಈ ಪತ್ರಿಕೆಯಲ್ಲಿ "ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ " ಎಂಬ ಅಂಕಣ ಬರಹ  ಪ್ರಕಟವಾಗುತ್ತಿತ್ತು. ಅದು ಅವರಿಗೆ ಅಪಾರ ಜನ ಮನ್ನಣೆ ಗಳಿಸಿ ಕೊಟ್ಟಿತು. ಬಂಟ್ವಾಳ  ತಾಲೂಕಿನಲ್ಲಿ ಆಂಗ್ಲ ಭಾಷಾ ಶಿಕ್ಷಕರಿಗೆ ಸಂಪನ್ಮೂಲ  ವ್ಯಕ್ತಿಯಾಗಿ ಆಂಗ್ಲ ಭಾಷಾ ತರಬೇತಿ ಕೊಡುವ ಕಾರ್ಯವನ್ನು ತಾಲೂಕಿನಲ್ಲಿ ಮಾಡುತ್ತ ಎಲ್ಲರ ಪ್ರೀತಿಗೆ ಪಾತ್ರರಾದರು, ಮಕ್ಕಳಿಗೂ ನೆಚ್ಚಿನ ಶಿಕ್ಷಕಿಯಾದರು. ಶಿಕ್ಷಕರಿಗೆ ಪ್ರತಿವರ್ಷ ಏರ್ಪಡಿಸುವ ರಸಪ್ರಶ್ನೆ, ಭಾಷಣ, ಪ್ರಬಂಧ ಸ್ಪರ್ಧೆಗಳಲ್ಲೂ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುದೇ ಅಲ್ಲದೆ, ವಿಜ್ಞಾನ ವಿಚಾರ ಗೋಷ್ಟಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮೈಸೂರಿನಲ್ಲಿ ಪ್ರತಿನಿಧಿಸಿ ಭೇಷ್ ಅನ್ನಿಸಿಕೊಂಡರು. 

         ಇವರು 2011ರಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು, ಸುಳ್ಯ ಇಲ್ಲಿನ ಪ್ರೌಢ ಶಾಲಾ ವಿಭಾಗಕ್ಕೆ ಆಂಗ್ಲ ಭಾಷಾ ಸಹಶಿಕ್ಷಕರಾಗಿ ಪದೋನ್ನತಿ ಹೊಂದಿದರು. ಹತ್ತು ವರ್ಷಗಳ ಕಾಲ ಅಲ್ಲಿಯೇ  ಬೋಧನೆಯಲ್ಲಿ ನಿರತರಾಗಿದ್ದರು. ಅಲ್ಲಿಯೂ ಸುಳ್ಯದ "ಸುಳ್ಯ ಸುದ್ಧಿ" ಹಾಗೂ "ಅಮರ ಸುದ್ದಿ" ಪತ್ರಿಕೆಗಳಲ್ಲಿ ಹಾಗೂ ಅವರ ದೀಪಾವಳಿ ವಿಶೇಷಾಂಕಗಳಲ್ಲಿ  ಇವರ ಹಲವಾರು  ಲೇಖನ, ಕವನಗಳು ಪ್ರಕಟಗೊಂಡಿದ್ದೇ ಅಲ್ಲದೆ ಸುದ್ದಿ ಲೈವ್ ಟಿ ವಿ ಚಾನೆಲ್ ನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಎದುರಿಸಲು ಕಿವಿಮಾತು ಹಾಗೂ ಅವರ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಲೈವ್ ಆಗಿ ಪೋಷಕ ಹಾಗೂ ವಿದ್ಯಾರ್ಥಿಗಳ ಫೋನ್ ಪ್ರಶ್ನೆಗಳಿಗೆ ಉತ್ತರವನ್ನೂ ಕೊಟ್ಟರು. 

       2021ರಲ್ಲಿ ಬಿಡುಗಡೆ ಆದ ಎಸ್. ಬಂಗೇರ ಮುಂಬೈ ಅವರ ನಿರ್ಮಾಪಕತ್ವದ, ಪಿ ವಿ ಪ್ರದೀಪ್ ಕುಮಾರ್ ಕಥಾ ಬಿಂದು ಪ್ರಕಾಶನ ಇವರ ನಿರ್ದೇಶನದ ಕಿರು  ಚಲನಚಿತ್ರ "ಬದಲಾಗದವರು ಜೀವನದಲ್ಲಿ ಬದಲಾಗುವರೇ?" ಎಂಬ ಕಿರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಮಗಳ ಜೊತೆ ಅಭಿನಯಿಸಿರುವ ಹೆಮ್ಮೆ ಇವರದ್ದು. ರೇಡಿಯೋ ಮಣಿಪಾಲದಲ್ಲಿ ಇವರ ಕಥಾ ವಾಚನ, ಮಂಗಳೂರು ಆಕಾಶವಾಣಿಯಲ್ಲಿ "ಭಾರತದಲ್ಲಿ ಸಾಮರಸ್ಯ ಹೇಗೆ" ಎಂಬ ವಿಷಯದ ಬಗ್ಗೆ ಭಾಷಣ ವನಿತಾವಾಣಿ  ಕಾರ್ಯಕ್ರಮದಲ್ಲಿ   ಪ್ರಸಾರವಾಗಿದೆ. ಈಗಾಗಲೇ ರೆಕಾರ್ಡ್ ಆಗಿದ್ದು,  ಮುಂದೆ ಇವರ ಕವನ ವಾಚನವೂ ಪ್ರಸಾರ ಆಗಲಿದೆ. ಕರ್ನಾಟಕ ಲೇಖಕಿಯರ ಸಂಘ, ಕರಾವಳಿ ಲೇಖಕಿಯರ ಸಂಘ ಹಾಗೂ  ಕರ್ನಾಟಕ ಸಾಹಿತ್ಯ ಪರಿಷತ್ ನ  ಸದಸ್ಯರು. ರಾಜ್ಯ , ಜಿಲ್ಲಾ ಮಟ್ಟದ ಹಲವಾರು ಕವನ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಉತ್ತಮ ತೀರ್ಪು ನೀಡಿದ ಅನುಭವವೂ ಇವರಿಗಿದೆ.

           ಸುಳ್ಯದಲ್ಲಿ ಇರುವಾಗಲೇ ಅಲ್ಲಿನ ಶಿಕ್ಷಕರ ಗುಂಪಿನ ಜೊತೆ ಸಿ ಸಿ ಆರ್ ಟಿ ಗೆ ಸೇರಿ ಉತ್ತರಾಖಾಂಡ ರಾಜ್ಯದಲ್ಲಿ ಕರ್ನಾಟಕದ ಹಾಗೂ ತುಳು ನಾಡಿನ  ಸಂಸ್ಕೃತಿಯನ್ನು ಪ್ರತಿನಿಧಿಸಿದ್ದೆ ಅಲ್ಲದೆ, ಆಂಗ್ಲ ಭಾಷಾ ವಿಷಯದಲ್ಲಿ ಸ್ಪೋಕನ್ ಇಂಗ್ಲಿಷ್ ಕಾರ್ಯಾಗಾರಗಳನ್ನು ನಡೆಸಿ ಕೊಟ್ಟರು. ಕೇರಳದ ಅರಿಕ್ಕೋಡ್ ಶಾಲೆಯಲ್ಲೂ ಸ್ಪೋಕನ್ ಇಂಗ್ಲಿಷ್ ಹಾಗೂ ಇಂಗ್ಲಿಷ್ ಬರವಣಿಗೆ ವಿಷಯದ ಮೇಲೆ ಕಾರ್ಯಾಗಾರ ನಡೆಸಿ ಕೊಟ್ಟರು. ಸುಳ್ಯ ಸಮೀಪದ ಸಂಪಾಜೆ, ಹರಿಹರಗಳಲ್ಲೂ ಸ್ಪೋಕನ್ ಇಂಗ್ಲಿಷ್ ಹಾಗೂ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯನ್ನು ಕಲಿಯುವ, ಬರೆಯುವ ಸುಲಭ ವಿಧಾನಗಳ ಬಗ್ಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸಿ ಕೊಟ್ಟಿರುವರು.ಚುಟುಕು ಸಾಹಿತ್ಯ ಪರಿಷತ್ ಮೂಲಕ ದೆಹಲಿ ಕನ್ನಡ ಭವನದಲ್ಲಿ ನಡೆದ ಚುಟುಕು ಕವಿಗೋಷ್ಠಿಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ನಿರೂಪಕರಾಗಿಯು, ಮುಂಬೈ ವಲಸಿಗರ ಸಮ್ಮಿಲನ ಉಡುಪಿಯಲ್ಲಿ ನಡೆದ ಕಾರ್ಯಕ್ರಮದ ಸಹ ನಿರೂಪಕರಾಗಿ 9 ಯುಟ್ಯೂಬ್ ಚಾನೆಲ್ ಗಳಲ್ಲಿ ಲೈವ್ ಪ್ರಸಾರವಾದ ಕಾರ್ಯಕ್ರಮದ ನಿರೂಪಣೆ ಮಾಡಿದ ಹೆಮ್ಮೆ ಇವರದು.

        ಇನ್ನೂರಕ್ಕೂ ಮಿಕ್ಕಿ ತಾಲೂಕು, ಜಿಲ್ಲಾ, ರಾಜ್ಯ, ಅಂತರ ರಾಜ್ಯ, ಹೊರ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕವಿಗೋಷ್ಠಿ, ಕಥಾ ಗೋಷ್ಟಿಗಳಲ್ಲಿ  ಕವಿಯಾಗಿ, ಕವಿಗೋಷ್ಟಿಯ ಅಧ್ಯಕ್ಷರಾಗಿ, ಉದ್ಘಾಟಕರಾಗಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೀರ್ತಿ ಇವರದ್ದಾಗಿದೆ. ತಾವು ಮಾತ್ರ ಭಾಗಿಗಳಾಗದೆ ತನ್ನ ಶಾಲಾ ಆಸಕ್ತಿಯುತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಬರೆಯಲು ಪ್ರೇರೆಪಿಸಿ ಜಿಲ್ಲಾ, ರಾಜ್ಯ ಹಾಗೂ ಅಂತರ್ ರಾಜ್ಯ ಮಟ್ಟದ ಕವಿಗೋಷ್ಠಿಗಳಿಗೆ ಕರೆದುಕೊಂಡು ಹೋಗಿ ಅವರಿಂದ ಕವನ ವಾಚನ ಮಾಡಿಸಿರುವರು. 2020ರಲ್ಲಿ   ಆಗ 10ನೇ ತರಗತಿಯಲ್ಲಿ ಓದುತ್ತಿದ್ದ ಇವರ ವಿದ್ಯಾರ್ಥಿನಿ ಕುಮಾರಿ ಹಿಮಾಲಿ ಮಡ್ತಿಲ ಇವಳ "ಸೃಷ್ಟಿಯ ಸೊಬಗು" ಎಂಬ ಕವನ ಸಂಕಲನವನ್ನು ಮುನ್ನುಡಿ ಬರೆದು   24ನೇ ಸುಳ್ಯ ತಾಲೂಕು  ಸಾಹಿತ್ಯ ಸಮ್ಮೇಳನದಲ್ಲಿ ಅದನ್ನು ಬಿಡುಗಡೆಗೊಳಿಸಿರುವರು. ತಮ್ಮ ಮಗಳಿಗೂ ಬರವಣಿಗೆಗೆ ಪ್ರೋತ್ಸಾಹಿಸಿ ಅವಳು ಬರೆದ ಪುಟ್ಟ ಪುಟ್ಟ ಕವನಗಳ ಪುಸ್ತಕ " ಚಿಟಾಣಿ ಚಿಟ್ಟೆ" ಯನ್ನು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ - 2022ರಲ್ಲಿ ಬಿಡುಗಡೆ ಮಾಡಿಸಿರುವರು. ರೇಡಿಯೋ ಮಣಿಪಾಲದ ಚಿಣ್ಣರ ದನಿ ಕಾರ್ಯಕ್ರಮದಲ್ಲೂ ಭಾಗವಹಿಸಿದ ದಿಯಾ ಉದಯ್  ಇವರ ಮಗಳು. ಕಥೆ, ಕವನ ಬರಹದ ಜೊತೆ ನೃತ್ಯ, ತುಳು ಕಲ್ಪುಗ ಯೂಟ್ಯೂಬ್ ಚಾನೆಲ್ ನ ಸಹಭಾಗಿ. 

        ಖ್ಯಾತ ಭಾರತನಾಟ್ಯ ಕಲಾವಿದೆ, ಕವಯತ್ರಿ , ವಕೀಲೆ ಪರಿಮಳಾ ಮಹೇಶ್ ಇವರ ಕವನ ಸಂಕಲನ "ರಾಜ ಬೀದಿಯ ಹೂವಾಡಗಿತ್ತಿ" ಎಂಬ ಪುಸ್ತಕಕ್ಕೆ ಮುನ್ನುಡಿ ಬರೆದುದೆ ಅಲ್ಲದೆ ಹಲವಾರು ಎಲೆಮರೆಯ ಕವಿಗಳಿಗೆ ಪ್ರೋತ್ಸಾಹ ನೀಡಿ ಬೆಳಕಿಗೆ ತಂದವರು ಇವರು.  2021 ಡಿಸೆ೦ಬರ್ ನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಮೂಲ್ಕಿ, ಮಂಗಳೂರು ತಾಲೂಕು ಇಲ್ಲಿಗೆ ವರ್ಗಾವಣೆಗೊಂಡು ಅಲ್ಲಿಯೇ ತಮ್ಮ ವೃತ್ತಿಯನ್ನು ಮುಂದುವರೆಸುತ್ತಿದ್ದಾರೆ. ಅಲ್ಲಿಯೂ ಆಂಗ್ಲ ಭಾಷಾ ಶಿಕ್ಷಕರಿಗೆ ತರಬೇತಿ ನೀಡುವಲ್ಲಿ ಒಬ್ಬರಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕವಿಗೋಷ್ಠಿಗಳಲ್ಲಿ , ಕವಿ ಸಮ್ಮೇಳನಗಳಲ್ಲಿ ಭಾಗವಹಿಸುವುದರ ಜೊತೆಗೆ ಸಾಹಿತ್ಯದ ಕೃಷಿಯನ್ನೂ ಮುಂದುವರೆಸುತ್ತಿದ್ದಾರೆ. ಬೋಧನೆಯ ಜೊತೆಗೆ ಬರವಣಿಗೆ, ಟೈಲರಿಂಗ್, ಫ್ಯಾಷನ್ ಡಿಸೈನಿಂಗ್ , ಪ್ರವಾಸ, ಗೆಳೆತನ, ವಿದ್ಯಾರ್ಥಿಗಳ ಕೌನ್ಸೆಲಿಂಗ್, ಬೇರೆ ಬೇರೆ ಕವಿಗಳ ಕವನ ವಾಚನ, ಓದು, ತನ್ನ ಮಿತಿಯಲ್ಲಿ ಸಮಾಜ ಸೇವೆ,  ಇತರ ಕವಿಗಳನ್ನೂ ಪ್ರೋತ್ಸಾಹಿಸಿ ಬೆಳೆಸುವುದು ಇವರ ಹವ್ಯಾಸ. "ನಮ್ಮ ಬಂಟ್ವಾಳ"ವಾರಪತ್ರಿಕೆ, ಡಿಜಿಟಲ್ ಪತ್ರಿಕೆಗಳಲ್ಲೂ ಪ್ರಕಟವಾದ ಬಳಿಕ ಈಗ  ' ಹಾಸನವಾಣಿ  ' ದಿನಪತ್ರಿಕೆ ಗಳಲ್ಲಿ ಇವರ ಅಂಕಣ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ" 236 ವಾರಗಳವರೆಗೆ ಪ್ರಕಟವಾಗುತ್ತಿತ್ತು. ಪ್ರತಿಲಿಪಿ ಬರವಣಿಗೆಯ ಆ್ಯಪ್ ನಲ್ಲಿ ಇವರ ಬರವಣಿಗೆಗಳಿಗೆ 50  ಸಾವಿರಕ್ಕೂ ಅಧಿಕ ಓದುಗರಿದ್ದು ಗೋಲ್ಡನ್ ಬ್ಯಾಡ್ಜ್ ಪಡೆದಿರುವ ಕವಿ ಇವರು. ಅಲ್ಲದೆ ಪ್ರಸ್ತುತ ಸಂಗಾತಿ ಎಂಬ ಆನ್ಲೈನ್ ಪತ್ರಿಕೆಯಲ್ಲಿ ಹವ್ಯಾಸಿ ಸಹಾಯಕ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಯಾ ಮೂಲಕ ಕವಿ, ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

  "ಲಿಟರೇಚರ್ ಆಫ್ ಹನಿ ಬಿಂದು" ಇದು  ಇವರ ಬ್ಲಾಗ್. ಇಲ್ಲಿ ಎರಡು ಸಾವಿರಕ್ಕೂ ಅಧಿಕ ಬರಹ, ಕವನ, ಗಝಲ್, ಲೇಖನ, ಚುಟುಕು,  ಕಥೆ ಮೊದಲಾದ ಸಾಹಿತ್ಯ ಪ್ರಕಾರಗಳ ಕೃಷಿ ಇವರದಾಗಿದೆ. ಪ್ರತಿ ಲಿಪಿ ಆಪ್ ನ ಬರಹಗಾರರು ಅಲ್ಲಿ
 ತನ್ನ ಹಾಗೇ ಬೆಳೆದ ಮತ್ತು ಜೀವನದಲ್ಲಿ ಸಾಧನೆ ಮಾಡಿ ಮೆರೆದ ಸಾಧಕರ ಬಗೆಗಿನ ಲೇಖನ ಮಾಲೆ " ಯಶೋಗಾಥೆ" ,  ಶಾಲಾ ವೃತ್ತಿ ಜೀವನದ ಅನುಭವಗಳ ಲೇಖನಮಾಲೆ "ಶಿಕ್ಷಕರ ಕಕ್ಷೆಯೊಳಗೆ". ಚುಟುಕು, ಟಂಕಾ, ಗಝಲ್, ಕಾದಂಬರಿ, ಕಥೆ, ಲೇಖನ, ಕವನ,  ಹೀಗೆ ಅನೇಕ ಬರಹಗಳು ತುಳು, ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ  ಪ್ರಕಟವಾಗುತ್ತಿವೆ.

       ತುಳು ಕಲಿಕೆಗಾಗಿ ಯೂ ಟ್ಯೂಬ್ ಹಾಗೂ ಇನ್ಸ್ಟಾ ಗ್ರಾಮ್ , ಮುಖಪುಟಗಳಲ್ಲಿ ತುಳು ಕಲ್ಪುಗ ಎಂಬ ಚಾನಲ್ ಒಂದನ್ನು ತೆರೆದು ಮಗಳು ದಿಯಾ ಜೊತೆ ಪ್ರತಿನಿತ್ಯ ಕನ್ನಡ ಮತ್ತು ಆಂಗ್ಲ ಭಾಷೆ ಬಲ್ಲವರಿಗೆ ತುಳು ಭಾಷೆಯನ್ನು ಕಲಿಸುವ ಕಾರ್ಯವನ್ನೂ ಸದ್ದಿಲ್ಲದೆ ಮಾಡುತ್ತಿರುವವರು ಇವರು. ಯೂಟ್ಯೂಬ್ ನಲ್ಲಿ 40 ಸಾವಿರ ನೋಡುಗರನ್ನು ಪಡೆದಿದ್ದಾರೆ. ಅಲ್ಲದೆ ದಿನಕ್ಕೊಬ್ಬ ಕವಿಯ ಕವನ ವಾಚನ ಮಾಡುತ್ತಾ ಇಂದಿನ ಸಾಮಾಜಿಕ ಜಾಲ ತಾಣಗಳನ್ನು ಉತ್ತಮ ಕಾರ್ಯಕ್ಕಾಗಿ ಹಾಗೂ ಸಾಹಿತ್ಯಕ್ಕಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿ ಕೊಟ್ಟವರು.ಸುಮಾರು 150 ಕವಿಗಳ ಕವನ ವಾಚನವನ್ನು ಇದುವರೆಗೆ ಪೂರೈಸಿ ಮುಂದುವರೆಯುತ್ತಾ ಸಾಹಿತ್ಯಕ್ಕಾಗಿ ತಮ್ಮ ಜೀವನ ಮುಡಿಪಾಗಿ ಇಟ್ಟವರು. ಈಗ ಪರಿಸರದ ಬಗ್ಗೆ ತಮ್ಮ ದೃಷ್ಟಿಯನ್ನು ಇಟ್ಟಿರುವ ಇವರು ನೇಚರ್ ಲವರ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಪರಿಸರ ಉಳಿಸಿ ಎಂಬ ಸಂದೇಶವನ್ನು ಪ್ರಕೃತಿ ಚಿತ್ರ, ವಿಡಿಯೋಗಳ ಮೂಲಕ ರೀಲ್ಸ್ ಮಾಡುತ್ತಾ ಪರಿಸರ ಉಳಿಸಿ ಎಂಬ ಅರಿವು ಮೂಡಿಸಲು, ಆ ಮೂಲಕ ಪರಿಸರ ಉಳಿಸುವ ಹೋರಾಟಕ್ಕೆ ನಿಂತಿರುವರು.

      "ಭಾವ ಜೀವದ ಯಾನ " ಇವರ ಪ್ರಕಟಿತ ಕವನ ಸಂಕಲನ.2019ರಲ್ಲಿ ಬಿಡುಗಡೆ ಆಗಿದೆ. "ಗವಿಯಡವಿಯ ಗಝಲ್ ಗಳು - ಗಝಲ್ ಸಂಕಲನ, ಶಿವ ಭಕ್ತಿ ಗೀತಾಮೃತ - ಭಕ್ತಿ ಗೀತೆಗಳ ಸಂಕಲನ, ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - ಅಂಕಣ ಬರಹಗಳ ಸಂಕಲನ, ಕುಟುಕದ ಚುಟುಕುಗಳು - ಚುಟುಕು ಸಂಕಲನ, Poems Of Me -  ಆಂಗ್ಲ ಕವನಗಳ ಸಂಕಲನ , ತುಳುತ ತಲಮಲಕ - ತುಳು ಕವಿತೆಗಳ ಸಂಕಲನ , ಪುಟ್ಟನ ಕವನ (ಶಿಶು ಗೀತೆಗಳ ಸಂಕಲನ )..ಹೀಗೆ ಹಲವಾರು ಪುಸ್ತಕಗಳು ಅಚ್ಚಿನಲ್ಲಿ ಪ್ರಕಟಣೆಗಾಗಿ ಸಿದ್ಧವಾಗುತ್ತಿವೆ.
         "ದಶಕಗಳು" ಎಂಬ 10 ಸಾಲಿನ ಕವನ ಇವರದೇ ಕಾವ್ಯ ಪ್ರಕಾರ. 120 ಕ್ಕೂ ಹೆಚ್ಚು ದಶಕಗಳನ್ನು ಬರೆದ ಇವರು ಹಲವಾರು ಪ್ರಾರ್ಥನಾ ಗೀತೆಗಳನ್ನೂ ರಚಿಸಿರುವುದೆ ಅಲ್ಲದೆ ಗಝಲ್, ಸಣ್ಣ ಕಥೆ, ನ್ಯಾನೋ ಕಥೆ, ಕವನ, ಕಾವ್ಯ, ಟoಕಾ, ಚುಟುಕು, ಮಕ್ಕಳ ಕವಿತೆ (ಶಿಶುಗೀತೆ), ಭಕ್ತಿಗೀತೆ, ಭಾವಗೀತೆ, ಕಥನ ಕವನ, ಲಘು ಪ್ರಬಂಧ, ಲೇಖನ, ಪ್ರಬಂಧ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ  ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ತಾಯಿಯ ಸೇವೆಯಲ್ಲಿ ನಿರತರಾಗಿರುವರು.

        ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ ನಿಂದ "ಕನ್ನಡ  ಸೇವಾ ರತ್ನ" ಪ್ರಶಸ್ತಿ, ರಾಜ್ಯ ಮಟ್ಟದಲ್ಲಿ ಸ್ನೇಹ ಸಂಗಮ ಬರಹಗಾರರ ಬಳಗ ತುಮಕೂರು ಇವರು ಕೊಡಮಾಡಿದ "ಕನ್ನಡ ಸಾಹಿತ್ಯ ರತ್ನ" ಪ್ರಶಸ್ತಿ, ಸುಳ್ಯದ ಚಂದನ ಸಾಹಿತ್ಯ ವೇದಿಕೆ ಕೊಡಮಾಡುವ ರಾಜ್ಯ ಮಟ್ಟದ "ಕನ್ನಡ ಕಾವ್ಯ ರತ್ನ" ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ದಿನಾಂಕ 26.03.23 ರಂದು ಕರುನಾಡ ಹಣತೆ ಕಲ್ಪತರೋತ್ಸವ ಐದನೇ ವಾರ್ಷಿಕ ಸಮ್ಮೇಳನ ತುಮಕೂರು ಇಲ್ಲಿ ರಾಜ್ಯ ಮಟ್ಟದ "ಕುವೆಂಪು ರತ್ನ " ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹಾಗೆಯೇ ಮ್ಯಾಕ್ಸ್ ಲೈಫ್ ಇನ್ಸೂರನ್ಸ್ ಮಂಗಳೂರು ಇವರ ಶಿಕ್ಷಕ Achievement ಸನ್ಮಾನ ಹಾಗೂ ಶಿಕ್ಷಕ ರತ್ನ ಸರ್ಟಿಫಿಕೆಟ್ ಕೂಡಾ ಲಭಿಸಿದೆ.  ಇವರು 200ಕ್ಕೂ ಹೆಚ್ಚು ರಾಷ್ಟ್ರ, ಅಂತರರಾಜ್ಯ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ  ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವರು. ಸಕಲೇಶಪುರ ತಾಲೂಕಿನ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಇವರು ಬೆಂಗಳೂರು, ಕಾಸರಗೋಡಿನ ಪೆರ್ಲ ದ ವಿವಿಧ ಸಾಹಿತ್ಯ ಕಾರ್ಯಕ್ರಮಗಳಲ್ಲಿ  ಉದ್ಘಾಟಕರು ಹಾಗೂ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡಿದ್ದಾರೆ.  

        "ಕರ್ನಾಟಕದ ಮಹಿಳಾ ಕವಿ ರತ್ನಗಳು"  ಎಂಬ ವಾಟ್ಸ್ ಆ್ಯಪ್ ಗುಂಪು ರಚಿಸಿ ಬರೆಯುವ ಮಹಿಳೆಯರಿಗೆ ಅವಕಾಶ ಹಾಗೂ ಉತ್ತೇಜನ ಕೊಡುತ್ತಾ, ಪ್ರತಿವರ್ಷ ಅಲ್ಲಿ ಕವನ ಸ್ಪರ್ಧೆಗಳನ್ನು ಏರ್ಪಡಿಸಿ, ನಾಡಿನ ಖ್ಯಾತ ಬರಹಗಾರರನ್ನು ತೀರ್ಪುಗಾರರಾಗಿ ಮಾಡಿ ಪುಸ್ತಕ ಬಹುಮಾನ ನೀಡುತ್ತಿದ್ದಾರೆ. ಹಾಗೆಯೇ "ಲೇಡೀಸ್ ಗ್ಯಾಲರಿ" ಎಂಬ ವಾಟ್ಸ್ ಆ್ಯಪ್  ಗುಂಪಿನ ಮೂಲಕ ಮಹಿಳೆಯರಿಗೆ ನ್ಯಾಯ, ಸುಲಭವಾದ ಡಾಕ್ಟರ್ ಸಲಹೆಗಳ ಜೊತೆಗೆ ಉತ್ತಮ ಮಾಹಿತಿ 10 ವರ್ಷಗಳಿಂದ ಹಂಚಲಾಗುತ್ತಿದೆ. ಹಾಗೆಯೇ "ಸ್ಟೂಡೆಂಟ್ಸ್ ಟೀಮ್" ಗುಂಪನ್ನು ರಚಿಸಿ ಹಲವಾರು ಹಿರಿಯ ವಿದ್ಯಾರ್ಥಿಗಳಿಗೆ ಮುಂದಿನ ಕೆಲಸ, ಓದು, ಉನ್ನತ ಶಿಕ್ಷಣ, ಉದ್ಯೋಗದ  ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಕಡಬದ ಯುವ ತೇಜಸ್ಸು ಟ್ರಸ್ಟ್ ನ ಸಹಾಯಕರಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ ಕಡಬದ ವಿದ್ಯಾ ಸಂಸ್ಥೆಯೊಂದಕ್ಕೆ ಟ್ರಸ್ಟಿ ಗಳಲ್ಲಿ ಒಬ್ಬರಾಗಿ ಸಣ್ಣ ಸಹಾಯ ನೀಡುತ್ತಾ ಬಂದಿರುತ್ತಾರೆ. ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉನ್ನತ ವ್ಯಾಸಂಗಕ್ಕೆ ಕಾಲೇಜಿಗೆ ಸೇರಲು ಸಹಾಯ, ಮುಂದಿನ ವಿದ್ಯಾರ್ಹತೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. 

    ನೈರುತ್ಯ, ನಮ್ಮ ಬಂಟ್ವಾಳ, ಪ್ರಜಾ ಪ್ರಗತಿ, ಮಂಗಳ, ವಿಜಯ ಕರ್ನಾಟಕ,  ಸ್ತ್ರೀ ಜಾಗೃತಿ, ಸಂಪದ ಸಾಲು,ಹಾಸನ ವಾಣಿ ಇನ್ನೂ ಮುಂತಾದ ಹಲವಾರು ಪತ್ರಿಕೆ ಹಾಗೂ ವಾರ್ಷಿಕ ಸಂಚಿಕೆಗಳಲ್ಲಿ, ಹಲವಾರು ಪುಸ್ತಕಗಳಲ್ಲಿ ಇವರ ಕವನ, ಕಥೆ, ಲೇಖನಗಳು ಪ್ರಕಟವಾಗಿವೆ. ಹಲವಾರು ಶಾಲಾ, ಸಂಘಗಳ ವಾರ್ಷಿಕ ಸ್ಮರಣ ಸಂಚಿಕೆಗಳಲ್ಲಿ ಇವರ ಕವನ ಹಾಗೂ ಲೇಖನಗಳು ಪ್ರಕಟವಾಗಿವೆ.ತಮ್ಮ ಕನ್ನಡ ಆಂಗ್ಲ ಹಾಗೂ ತುಳು ಸಾಹಿತ್ಯ ಸೇವೆಗೆ 2023 ನೇ ಸಾಲಿನ  All India women's Achievement Award (AIVAA)ನ್ನು TWELL media ದಿಂದ ದಿನಾಂಕ 25.06.2023ರಂದು ಬೆಂಗಳೂರಿನಲ್ಲಿ ಪಡೆದಿರುತ್ತಾರೆ. ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಗಳಿಸಿ 2021ನೆ ಸಾಲಿನ ಸಲ್ - ಸಬೀಲ್ ಎಕ್ಸೆಲೆನ್ಸ್ ಅವಾರ್ಡ್ ಪಡೆದಿದ್ದಾರೆ. ಸ್ಪಂದನ ಟಿವಿ ಯ ಕವಿ ಸಮಯ ಕಾರ್ಯಕ್ರಮದಲ್ಲೂ ಇವರ ಸಂದರ್ಶನ ಪ್ರಸಾರವಾಗಿದೆ. 

2022-23 , 2023 -24 ನೆ ಸಾಲಿನಲ್ಲಿ ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲೂ ಮೂಲ್ಕಿ ಸರಕಾರಿ ಪ್ರೌಢ ಶಾಲೆಯ  ಶೇಕಡಾ 100 ಫಲಿತಾಂಶ ಪಡೆದುದಲ್ಲದೆ , ತಮ್ಮ ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಪೋಷಿಸಿ ಬೆಳೆಸುತ್ತಾ, ಬರೆಯುವ ಆಸಕ್ತಿ ಇರುವವರನ್ನು ಹಾಗೂ ವಿದ್ಯಾರ್ಥಿಗಳಿಗೂ ಆಸಕ್ತಿ ಬೆಳೆಸುತ್ತಾ, ಇದೀಗ ರೋಶನಿ ನಿಲಯ ಮಂಗಳೂರು ಇಲ್ಲಿ ಆನ್ ಲೈನ್ ಮೂಲಕ counselling of Adolescents ಎಂಬ ಸರ್ಟಿಫಿಕೇಟ್ ಕೋರ್ಸ್ ಗೆ ಸೇರಿ ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾದ ಇವರು ಮೋಟಿವೇಷನಲ್  ಸ್ಪೀಕರ್ ಆಗಿದ್ದರೂ ಕೂಡಾ ಸದಾ ವಿದ್ಯಾರ್ಥಿ. ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎನ್ನುವ ಇವರು ಸಾಹಿತ್ಯದಲ್ಲಿ ಡಾಕ್ಟರೇಟ್ ಕಲಿಯಬೇಕು ಎಂಬ ಗುರಿಯನ್ನು ಹೊಂದಿರುವವರು.

ಭಾನುವಾರ, ಅಕ್ಟೋಬರ್ 13, 2024

ಟಾಟಾ

ಟಾಟಾ ಹೇಳಿದ ಟಾಟಾ 

ಬೇಕಾದ್ದೆಲ್ಲ ಭಾರತೀಯರಿಗೆ ಕೊಟ್ಟು
ಬಡವರ ಉದ್ಧಾರಕ್ಕೆ ಮನಸಿಟ್ಟು 
ದಾನದ ಮಹತ್ವ ತಿಳಿಸಿ ಕೊಟ್ಟು
ದುಡಿಮೆಯ ಮಹತ್ವ ಕಲಿಸಿಕೊಟ್ಟು

ಟಾಟಾ ಸರ್ವರ ಹಿತೈಷಿಯಾಗಿ 
ಭಾರತೀಯರ ಬೆಂಬಲಿಸಿ ಬಾಗಿ
ದುಡಿತದ ಹಣದ ದಾನಿಯಾಗಿ
ಭಾರತೀಯರ ರಾಯಭಾರಿಯಾಗಿ

ಒಂಟಿತನದಲಿ ಸಾಧನೆ ಮಾಡಿ
ಜಂಟಿ ಶಕ್ತಿಯಲಿ ಕಾರ್ಯವ ನೀಡಿ
ಮನದ ಒಳಗೆ ಧೈರ್ಯವ ದೂಡಿ
ನಿಜವಾದ ಪ್ರೀತಿಯ ಆಳವ ನೋಡಿ

ಭಾರತ ದೇಶಕೆ ನೀನೇ ವೀರ
ವ್ಯಾಪಾರ ಗೆದ್ದ ಸರದಾರ
ವಿವೇಕರ ಮಾತಿಗೆ ಹಾಕಿದೆ ದ್ವಾರ
ಭಾರತ ಮುನ್ನಡೆಸಿದ ಶೂರ
@ಹನಿಬಿಂದು@
14.10.2024

ಚುಂಗುಡಿ

ಚುಂಗುಡಿ
ಆಯೆ ನಾಡೊಂದು ಪೊಯೆ ತಾದಿಡ್ ಪರಿಯರೆ ಪಂದ್ ಬಾರ್
ಕಾಸ್ ದಾಂತೆ  ಪತೊಂದು ಪೋಯೆ ಇಲ್ಲಡ್ ಬುಲೆಯಿನ ಬಾರ್
@ಹನಿಬಿಂದು@
13.10.2024

ಶನಿವಾರ, ಅಕ್ಟೋಬರ್ 12, 2024

ಜಯವಾಗಲಿ

ಭಕ್ತಿ ಗೀತೆ

ಜಯವಾಗಲಿ ಜಯವಾಗಲಿ
ಮೊದಲು ಪೂಜ್ಯ ಗಣಪತಿಗೆ
ವಿದ್ಯೆ ಕೊಡುವ ಸರಸ್ವತಿಗೆ
ದುಡ್ಡು ತರುವ ಮಹಾಲಕ್ಷ್ಮಿಗೆ

ಖುಷಿಯ ತರುವ ಹರಿನಾಮಕೆ
ಜಗವ ಪೊರೆವ ಶಿವ ರೂಪಕೆ
ಪ್ರೀತಿ ಕೊಡುವ ದುರ್ಗೆಗೆ
ಕಾದು ಪೊರೆವ ಶಕ್ತಿಗೆ

ಜಯವು ವೀರ ಸೈನಿಕರಿಗೆ
ಅನ್ನ ಕೊಡುವ ರೈತರಿಗೆ
ಬಿತ್ತಿ ಬೆಳೆದು ಹೊತ್ತು ತಂದ 
ತಂದೆ ತಾಯಿ ಪಾದಕೆ

ವಿದ್ಯೆ ಬುದ್ಧಿ ಕಲಿಸಿದ
ಗುರು ಸ್ಥಾನದ ದೇವಗೆ
ತಿದ್ದಿ ಬೆಳೆಸೋ ಹಿರಿಯರ
ಪದ ಪಾದ ಕಮಲಕೆ 
@ಹನಿಬಿಂದು@
13.10.2024

ಉಪದ್ರ

ಹಾಗೆ ನೋಡಿದರೆ ದಸರಾ ಮೆರವಣಿಗೆಯಲ್ಲಿ ಪ್ರಾಣಿಗಳಿಗೂ ಉಪದ್ರವೇ.. ಆನೆ, ಕುದುರೆ...ಟ್ರಾಫಿಕ್ ಹೆಚ್ಚಾಗಿ ಅಲ್ಲಿ ಸಾಗುವವರಿಗೆ ಉಪದ್ರ, ಪ್ರತಿದಿನ ಲೆಕ್ಕಾಚಾರ ಹಾಕಲು ಹೋದರೆ ಆಫೀಸ್ ವರೆಗೆ ಹೋಗುವುದು ಉಪದ್ರ, ಪುನಃ ಮನೆಯವರೆಗೆ ತಿರುಗಿ ಬರುವುದು ಉಪದ್ರ, ವರ್ಕ್ ಫ್ರಮ್ ಹೋಮ್ ಆದರೆ ಮನೆಯವರ ಉಪದ್ರ, ಸಂಬಳ ಬಾರದೆ ಇದ್ದರೆ ತಿಂಡಿ ತಿನಸಿಗೆ , ಮನೆ ದಿನಸಿ ತರಲು ಮನೆಯವರ ಉಪದ್ರ, ದಿನಕ್ಕೆ ಐದಾರು ಸಲ ಜೋರಾಗಿ ಕೇಳುವ ಬಾಂಗ್ ನ ಸದ್ದು ಕಿವಿಗೆ ಉಪದ್ರ, ನವರಾತ್ರಿಯಲ್ಲಿ ಬಡಿದುಕೊಂಡು ಬರುವ ವಿವಿಧ ವೇಷಗಳ ಶಬ್ಧ, ಕುಣಿತ ,ಹಣಕ್ಕಾಗಿ ಉಪದ್ರ, ದೇವಸ್ಥಾನ, ದೈವಸ್ಥಾನ ಕಟ್ಟಿ. ಪೂಜೆ. ಪುನರ್ ಪ್ರತಿಷ್ಠೆಗಾಗಿ ಹಣ ಸಂಗ್ರಹಣೆಗಾಗಿ ಬರುವವರ ಉಪದ್ರ, ಮನೆಗೆ ಬಂದರೆ ಹೆಂಡತಿ ಮಕ್ಕಳ ಉಪದ್ರ. ಆಫೀಸಿಗೆ ಹೋದರೆ ಮೇಲಧಿಕಾರಿಯ ಉಪದ್ರ, ಹೊರಗೆ ಹೋದರೆ ಟ್ರಾಫಿಕ್, ಸಾಲದವರ ಉಪದ್ರ.ಮನೆಯ ಒಳಗೆ ಸೊಳ್ಳೆಯ ಉಪದ್ರ ಬದುಕೇ ನಡೆವುದು ಈ ಉಪದ್ರದಿoದ..ಇತರರು ಹುಟ್ಟಿದ್ದೇ ಉಪದ್ರ ಕೊಡಲು..ಇದು ಸರ್ವರಿಗೂ ಅನ್ವಯ ಆಗುತ್ತದೆ ಅಲ್ಲವೇ?. ಏನು ಮಾಡೋದು? ಸಹನೆಯೇ ದೇವರು. ನೀವೇನಂತೀರಿ?
ಹನಿ ಬಿಂದು

ಹನಿ

ಹನಿ 
ಅರ್ಹತೆಗೆ ತಕ್ಕಷ್ಟು
ಸ್ಥಾನಮಾನ ಸಿಕ್ಕಿದರೆ
ಅದು ಖುಷಿ!
ಅರ್ಹತೆ ಇದ್ದೂ
ಏನೂ ಸಿಗದೆ ಹೋದರೆ
ಮಂಡೆ ಬಿಸಿ!
ಅರ್ಹತೆ ಇಲ್ಲದವನಿಗೆ
ಆ ಸ್ಥಾನ ಇದ್ದರೆ
ಇತರರಿಗೆ ಮಸಿ!
@ಹನಿಬಿಂದು@
13.10.2024

ಹಾಯ್ಕು

ಹಾಯ್ಕು

ಸಮಾಜ ಮಲ್ಲ!
ಲೆಕ್ಕ, ಭಾಷೆ ಎಲ್ಯವಾ??
ಮಾತಲ ಬೋಡು!!
@ಹನಿಬಿಂದು@
12.10.2024

ಶುಕ್ರವಾರ, ಅಕ್ಟೋಬರ್ 11, 2024

ಚುಟುಕು

ಚುಟುಕು

ಸರ್ವಧರ್ಮ ಒಂದು ಎಂದು ಹೇಳಬಲ್ಲೆವು
ಪರರ ಕೆಲಸವನ್ನು ನಾವು ಸಹಿಸಲೊಲ್ಲೆವು
ಹಿಂಸೆ ಮೋಸ ಅನ್ಯಾಯ ತಡೆಯಲೊಲ್ಲೆವು
ಪರರೂ ನಮ್ಮ ಹಾಗೆಯೆಂದು ಒಪ್ಪಲೊಲ್ಲೆವು..
@ಹನಿಬಿಂದು@
12.10.2024

ಪನಿ ಕವಿತೆ

ಪನಿ ಕವಿತೆ

ಆಲ್ ಪಾಪ
ದಾಲಾ ಗೊತ್ತಾಪುಜಿ
ದಾಲಾ ಗೊತ್ತಿಜ್ಜಿ
ಏರೆಡಲ ಪಾತೆರ್ರೆ ಇಜ್ಜೀ 
ಒರ್ತಿಯೇ ಇಲ್ಲಲ್
ಪ್ರತಿ ರಾತ್ರೆಡ್ 
ಪರ್ಪಿನಿ ಜೆಪ್ಪುನಿ!
@ಹನಿಬಿಂದು@
11.10.2024

ಭಾವಗೀತೆ ಧ್ವನಿ

ಭಾವಗೀತೆ

ಧ್ವನಿ

ಅಲ್ಲೇ ಕೇಳುತಿದೆ ಮಧುರ ಧ್ವನಿಯಿದು 
ನಾಲ್ಕು ಸಾಲು ಬಂದು
ಇಲ್ಲೇ ಬೀಳುತ್ತಿದೆ ಮಳೆಯ ಹನಿಗಳು
ಬಾಳು ಬೆಳಗಲೆಂದು//

ಮಧುರ ಬೆರೆತ ಪ್ರೇಮ ನಾದವಿದು
ಮೋಡಿಯ ಮಾಡುತಿದೆ 
ಸಿಂಧೂರ ಧರಿಸಿದ ಮಾತೆಯ ರೀತಿ
ನಗುವ ಚೆಲ್ಲುತಿದೆ..//

ಅಂದದ ಬಾಳಿಗೆ ಸಿಂಚನ ಸಂಕೇತ
ಮಾತು ಹೊರಗೆ ಬಂದು
ಚಂದದ ಮನಕೆ ಶೃಂಗಾರ ಕಾವ್ಯ
ಧಾತು ಇದುವೆ ಇಂದು//

ಸಿಹಿಯೂ ಸುಗಮವು ಕೀಳಲು ನಿಧಿಯು
ಮೋಹ ಪಾಶವಿಲ್ಲ
ಸವಿಯೂ ರುಚಿಯೂ ಸ್ನೇಹದ ಸುಧೆಯು
ಸತ್ಯ ನಾಶವಿಲ್ಲ..//
@ಹನಿಬಿಂದು@
11.10.2024

ಗುರುವಾರ, ಅಕ್ಟೋಬರ್ 10, 2024

ಟoಕಾ

ಟoಕಾ 

ಮನಿಪ್ಪಂದೆನೆ
ಕುಲ್ಲಂದೇ ನಡಪ್ಪೊಡು 
ಬೇಲೆ ಮಲ್ಪೊಡು 
ನಾಲ್ ಜನತೆಡ್ಡೆಗ್
ನಂಕಾದೆ  ಬದ್‌ಕೊಡು
@ಹನಿಬಿಂದು@
10.10.2024

ಮಂಗಳವಾರ, ಅಕ್ಟೋಬರ್ 8, 2024

ಚುಟುಕು

ಚುಟುಕು ಬಗ್ಗೆ ಚುಟುಕು ಮಾಹಿತಿ

ಚುಟುಕು ಅಂದರೆ ಚಿಕ್ಕದಾಗಿ ಚೊಕ್ಕ ಅರ್ಥ ಕೊಡುವಂಥದ್ದು.
ಹನಿಗವನ ,ಹಾಯ್ಕು,ಟಂಕಾ, ರುಬಾಯಿ ಎಲ್ಲವೂ ಚುಟುಕಿನ ಸಾಹಿತ್ಯಗಳೇ.
ಆದರೆ ಸಾಂಪ್ರದಾಯಿಕ ಚುಟುಕು ಬರವಣಿಗೆಯ ಪ್ರಕಾರದಲ್ಲಿ ಇವೆಲ್ಲಕ್ಕೂ ಭಿನ್ನ.
ದಿನಕರ ದೇಸಾಯಿ ಮಾದರಿ ಚುಟುಕಿಗೆ ಉತ್ತಮ ಉದಾಹರಣೆ.
ಅದು ೧೮ ಮಾತ್ರೆಗಳ ೪ ಸಾಲು.ಅಂತ್ಯ ಪ್ರಾಸ ಯುಕ್ತ.
ಅದಲ್ಲದೆ ಆದಿ ಪ್ರಾಸ ಮಧ್ಯಪ್ರಾಸ ಅಂತ್ಯಪ್ರಾಸ ಸಹಿತ ಬರೆಯ ಬಹುದು.
ಅಂತ್ಯ ಪ್ರಾಸ ಮೊದಲೆರಡು ಉಳಿದೆರಡು ಸಾಲುಗಳಲ್ಲಿ ಒಂದೇ ಅಥವಾ ಬೇರೆ ಬೇರೆಯಾಗಿಯೂ ಇರ ಬಹುದು.
ಮಾತ್ರೆಗಳು ೧೮ ರ ಬದಲಿ ಇತರ ಸಂಖ್ಯೆ ಆದರೂ ನಿಶಿದ್ಧವಲ್ಲ.
ಹಾಗೆಯೇ ೧೪ ೧೩ ೧೪ ೧೩ ಮಾತ್ರಾ ಪ್ರಕಾರ ಬರೆದವರೂ ಇದ್ದಾರೆ.

# ಡಾ ಸುರೇಶ ‌ನೆಗಳಗುಳಿ

ಖುಷಿಯ ಕ್ಷಣ

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -210

      ನನ್ನೊಳಗಿನ ನಾನೆಂಬ ಗೆಳತಿಯ ಜೊತೆಗೆ ಒಂದಿಷ್ಟು ಹರಟೆ, ಮಾತು, ಸಿಂಹಾವಲೋಕನ, ಪರೀಕ್ಷೆ, ಸರಿ ತಪ್ಪುಗಳ ಲೆಕ್ಕಾಚಾರ, ಬೇಕಾದ್ದು ಬೇಡದರ ಚೂರು ಕ್ಲೀನಿಂಗ್.
ನಾನು ಸೌಮ್ಯ ಸ್ವರೂಪಿ. ಆದರೆ ಸ್ವಲ್ಪ ಹಠಮಾರಿ. ಯಾರಾದರೂ ನನ್ನನ್ನು ಡಿ ಗ್ರೇಡ್ ಮಾಡಿದರೆ ನಾ ಒಪ್ಪಿಕೊಳ್ಳಲಾರೆ. ಕಾರಣ ನನಗೆ ಒಳ್ಳೆ ಮನಸ್ಸಿದೆ, ಹೃದಯ ಚೆನ್ನಾಗಿದೆ. ಮನದ ಯಾವುದೇ ಮೂಲೆಯಲ್ಲಿ ದುರಾಸೆ, ಕಪಟ, ರೋಷ, ದ್ವೇಷಗಳು ಇಲ್ಲ. ಬಹಳ ಜನರಿಂದ ಆದ ನೋವಿದೆ. ಆ ನೋವಿಗೆ ನಾನು ದ್ವೇಷ ಸಾಧಿಸಲು ಹೋಗುತ್ತಿಲ್ಲ. ಬದಲಾಗಿ ಶಾಂತ, ನಿಶಬ್ದ, ಸೈಲೆಂಟ್ ಇವೇ ನನ್ನ ಅಸ್ತ್ರಗಳು.
  ಮಂಡೆ ಗಟ್ಟಿ ಇದೆ ಎಂದು ಬಂಡೆಗೆ ಗುದ್ದುವ ಸ್ವಭಾವ ನನ್ನದಲ್ಲ. ಎದುರಿನ ವ್ಯಕ್ತಿ ಹೇಗೆ ಇದ್ದಾನೆ, ಅವನ ಶಕ್ತಿಯ ಇತಿ ಮಿತಿಗಲೇನು ಎಂದು ಸದಾ ತಿಳಿಯುತ್ತೇನೆ. ಪರರ ಬಗ್ಗೆ ಅವರಿವರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಫಿಲ್ಮ್ ಆಕ್ಟರ್ಸ್, ಸೀರಿಯಲ್ ಆಕ್ಟರ್ಸ್, ಕ್ರಿಕೆಟರ್ಸ್, ಡಾನ್ಸರ್ಸ್ ಇಂಥವರ ಖಾಸಗಿ ಜೀವನದ ಬಗ್ಗೆ ಮಾತನಾಡಿ ಅವರನ್ನು ಡಿ ಗ್ರೇಡ್ ಮಾಡುವ ಸ್ವಭಾವ ನನಗಿಲ್ಲ. ಏಕೆಂದರೆ ಎಲ್ಲರೂ ಪರಿಸ್ಥಿತಿಯ ಕೈಗೊಂಬೆಗಳು. ಯಾರು ಯಾವ ಕಾಲದಲ್ಲಿ ಯಾರೊಡನೆ ಬದುಕುತ್ತಾರೆ, ಎಲ್ಲಿ ಬದುಕುತ್ತಾರೆ, ಎಲ್ಲಿ ಸಾಯುತ್ತಾರೆ ಅಂತ ಡಿಸೈಡ್ ಮಾಡಿರುವುದು ವಿಧಿ. ನಾನಲ್ಲ ನೀವಲ್ಲ. ಪ್ರತಿ ಒಬ್ಬರ ಮನೆಯ ದೋಸೆಯು ತೂತಿರುವಾಗ ಇನ್ನು ಯಾರ ಮನೆಯ ದೋಸೆಯ ಬಗ್ಗೆ ಮಾತನಾಡಲು ಇನ್ನೇನು ಹೊಸತು ಉಳಿದಿದೆ ಅಲ್ಲವೇ?
   ಮಾನವತೆ ಇದೆ ನನ್ನಲ್ಲಿ. ಕಷ್ಟಕ್ಕೆ ಕರಗುತ್ತೇನೆ, ಇಲ್ಲದೆ ಇದ್ದರೂ ಸಹಾಯ ಮಾಡಲು ಹೋಗಿ ನಾನೇ ಸಿಕ್ಕಿ ಬೀಳುತ್ತೇನೆ. ಮತ್ತೆ ಆ ಬಲೆಯಲ್ಲಿ ಒದ್ದಾಡಿ ನೋವು ತಂದುಕೊಳ್ಳುತ್ತೇನೆ. ಪರರನ್ನು ಪಾಪ ಎಂದು ಸಹಾಯ ದೃಷ್ಟಿಯಿಂದ ನೋಡಿ, ಸಹಾಯ ಮಾಡಲು ಹೋದಾಗ ಅವರೇ ನನ್ನ ಗುಂಡಿಗೆ ನೂಕಿ ಹೋಗುತ್ತಾರೆ. ಕಷ್ಟ ಪಟ್ಟು ಎದ್ದು ಬರುತ್ತೇನೆ. ಸಡನ್ ಕೋಪದ ಕೈಗೆ ಬುದ್ಧಿ ಕೊಡುವ ಗುಣ ನನ್ನದು ಅಲ್ಲ. ಯೋಚಿದುವೆ.
  ಸ್ವಲ್ಪ ಉಡಾಫೆ ಸ್ವಭಾವ. ಮಾಡಬೇಕಾದ ಕೆಲಸವನ್ನು ಲಾಸ್ಟ್ ಡೇಟ್ ವರೆಗೆ ಪೆಂಡಿಂಗ್ ಇಟ್ಟು ಕೊನೆ ಕ್ಷಣದಲ್ಲಿ ಮಾಡಲು ಹೋಗಿ ಎಡವಟ್ ಮಾಡಿಕೊಳ್ಳೋದು ನನ್ನ ಕೆಲಸ. ಅದು ಪರೀಕ್ಷೆಯೇ ಇರಲಿ, ಜೀವನ ಪರೀಕ್ಷೆಯೇ ಇರಲಿ, ಬೇರೆ ಕೆಲಸವೇ ಇರಲಿ. 
ಮತ್ತೆ ಬೇರೆಯವರು ನನ್ನ ಬಗ್ಗೆ ಕೆಟ್ಟದಾಗಿ ಕೆಟ್ಟ ಯೋಚನೆ ಮಾಡುತ್ತಾರೆ ಅಂತ ನಾನು ಅಂದುಕೊಳ್ಳುವುದಿಲ್ಲ. ಕಾರಣ ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಆಲೋಚಿಸುವುದಿಲ್ಲ ಮತ್ತು ನನ್ನ ಬಗ್ಗೆ ಕೆಟ್ಟದಾಗಿ ಆಲೋಚಿಸಲು ಏನೂ ಇಲ್ಲ, ನಾನು ಸೊಳ್ಳೆ,ಇರುವೆ,  ಜಿರಳೆ, ಜೇಡದ ಹೊರತು ಯಾವ  ಪ್ರಾಣಿ, ಪಕ್ಷಿ, ಕೀಟವನ್ನು ಕೂಡಾ ಸಾಯಿಸಿಲ್ಲ. ಮನುಷ್ಯರಿಗೆ ಅನ್ಯಾಯ ಮಾಡಲಿಲ್ಲ, ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ಮೋಸ ಮಾಡಲಿಲ್ಲ, ಪಾರ್ಶಿಯಾಲಿಟಿ ಅಂತೂ ಮಾಡಲೇ ಇಲ್ಲ. ಎಲ್ಲಾ ಮಕ್ಕಳಿಗೂ ತಿದ್ದಿ ಬುದ್ಧಿ ಹೇಳುತ್ತೇನೆ, ಕೇಳದೆ ಹಠ ಮಾಡಿದವನಿಗೆ ಸ್ವಲ್ಪ ಖಾರವಾಗಿಯೇ ಹೇಳುತ್ತೇನೆ. ಅದು ಅವನ ಒಳ್ಳೆಯದಕ್ಕೆ. ಎಲ್ಲರಿಗೂ ತುಂಬಾ ಪ್ರೀತಿ ಕೊಡುತ್ತೇನೆ ನನ್ನಲ್ಲಿ ಸಾಧ್ಯ ಆದಷ್ಟು. ನೋವು ಕೊಟ್ಟವರಿಗೂ ಕೆಟ್ಟದು ಬಯಸುವುದಿಲ್ಲ. ಬದಲಾಗಿ ದೇವರೇ ಅವರನ್ನು ನನ್ನ ಬದುಕಿನಿಂದ ದೂರ ಇರಿಸು ಎಂದು ಬೇಡುತ್ತೇನೆ.
  ದೇವರಲ್ಲಿ ನಾನು ಮನಸ್ಸಿಗೆ ಹಾಗೂ ದೇಹಕ್ಕೆ ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯ ಇಷ್ಟನ್ನು ಬಿಟ್ಟು ಮತ್ತೆ ಕೇಳುವುದು ಸರ್ವೇ ಜನಾಃ ಸುಖಿನೋ ಭವಂತು ಇಷ್ಟೇ. ಎಲ್ಲರೂ ಚೆನ್ನಾಗಿರಲಿ, ಎಲ್ಲರನ್ನೂ ಚೆನ್ನಾಗಿ ಇಡಿ ಎಂದು. ಮಾನವನ ಕ್ರೂರತೆ ತೊಲಗಲಿ ಎಂದು ಬೇಡುತ್ತೇನೆ. ರಾಕ್ಷಸ ಪ್ರವೃತ್ತಿ ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ, ಸಣ್ಣ ಮಕ್ಕಳ ಮೇಲೂ ಅತ್ಯಾಚಾರ ಇವುಗಳೆಲ್ಲ ಮನ ನೋಯಿಸುವ ಕಾರ್ಯಗಳು ಅಲ್ಲವೇ? ವಿಷ ಉಣಿಸಿ ಮಾನವ ಹಾಗೂ ಪ್ರಾಣಿ ಪಕ್ಷಿ ಮೀನುಗಳನ್ನು ಸಾಯಿಸುವುದು, ತಲ್ವಾರ್, ಚಾಕು ಚೂರಿ ಹಾಕಿ ಸಾಯಿಸುವುದು ಇವೆಲ್ಲ ಕರುಳು ಹಿಂಡುವ ನೋವುಗಳು. 
  ಎಲ್ಲಾ ಧರ್ಮಗಳ ತಿರುಳು ಒಂದೇ ಆಗಿದ್ದರೂ ಪರ ಧರ್ಮದವರನ್ನು ಹೀಗಳೆಯುವುದು ನನಗೆ ಆಗದ ವಿಷಯ. ಬೈಬಲ್, ಕುರಾನ್, ಗೀತೆ ಓದಿರುವ ನನಗೆ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಸಿಖ್ ಎಲ್ಲರ ಜೊತೆಗೂ ಗೆಳೆತನವೂ ಇದೆ. ಎಲ್ಲಾ ಜಾತಿ, ಎಲ್ಲಾ ಧರ್ಮದ ಜನರನ್ನು ಕೂಲಂಕುಷವಾಗಿ ಬರಹಗಾರ್ತಿಯ ಕಣ್ಣಲ್ಲಿ ನೋಡಿದಾಗ ನನ್ನ ಅರಿವಿಗೆ ಬಂದದ್ದು ಎಲ್ಲಾ ಜಾತಿ ಧರ್ಮಗಳಲ್ಲಿ ಜನರು ಒಳ್ಳೆಯವರೂ ಇದ್ದಾರೆ, ಕೆಟ್ಟವರು ಕೂಡಾ ಇದ್ದಾರೆ. ಒಳ್ಳೆಯ ಜನರನ್ನು ಎಲ್ಲರೂ ಇಷ್ಟ ಪಡುತ್ತಾರೆ. ಅದಕ್ಕೆ ಉದಾಹರಣೆ ಪುನೀತ್ ರಾಜಕುಮಾರ್, ಡಾ. ಎ.ಪೀ.ಜೆ. ಅಬ್ದುಲ್ ಕಲಾಂ, ಮದರ್ ತೆರೆಸಾ, ರಾಜ್ ಕುಮಾರ್, ಕಲ್ಪನಾ ಚಾವ್ಲಾ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ , ಸಾಲುಮರದ ತಿಮ್ಮಕ್ಕ, ಅಬ್ರಹಾಂ ಲಿಂಕನ್. ಜನರ ಎದೆಯಲ್ಲಿ ಇನ್ನೂ ಒಳ್ಳೆಯತನಕ್ಕೆ ಪ್ರೀತಿ, ಜಾಗ ಇದ್ದೇ ಇದೆ ಅಲ್ಲವೇ?
       ಮನುಷ್ಯರು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕೆಟ್ಟವರೆ..ಕಾರಣ ಇತರರು ಬಯಸದ ಯಾವುದಾದರೂ ಕೆಟ್ಟ ಗುಣ ನಮ್ಮೊಳಗೆ ಇರಬಹುದು.  ಅಥವಾ ನನಗೆ ಇಷ್ಟ ಆದ ನನ್ನ ಗುಣ ಇತರರಿಗೆ ಇಷ್ಟ ಆಗದೆ ಇರಬಹುದು. ಎಲ್ಲರೂ ಐಶ್ವರ್ಯ ರೈ ಅವರ ಸೌಂದರ್ಯವನ್ನು ಹೊಗಳಿದರೆ "ಅವಳಿಗಿಂತ ಸುಂದರಿಯರು ಬೇರೆ ಇಲ್ವಾ?" ಎನ್ನುವವರೂ ಇರಬಹುದು. ಅದು ಅವರವರ ಭಾವಕ್ಕೆ ನಿಳುಕಿದ್ದು. ನಮ್ಮ ನಮ್ಮ ಜ್ಞಾನದ ಎತ್ತರಕ್ಕೆ ನಾವು ಮಾತನಾಡಬಲ್ಲೆವು ಅಲ್ಲವೇ! ವಿಜ್ಞಾನಿಗಳಿಗೆ ತಿಳಿದ ಮಾಹಿತಿ ಬಹುಶಃ ಕನ್ನಡ ಪ್ರಾಧ್ಯಾಪಕರಿಗೆ ಗೊತ್ತಿಲ್ಲ. ಕನ್ನಡ ಪಂಡಿತರಿಗೆ ತಿಳಿದ ಭಾಷಾಜ್ಞಾನ ಡಾಕ್ಟರಿಗೆ ಗೊತ್ತಿರಲಿಕ್ಕಿಲ್ಲ, ವ್ಯಕ್ತಿತ್ವ ಬದಲಾವಣೆ ಇದೆ. ಹಾಗಂತ ಯಾರೂ ಮೇಧಾವಿಗಳು ಅಲ್ಲ ಎಂದಲ್ಲ, ಯಾರೂ ದಡ್ಡರು ಕೂಡ ಅಲ್ಲ, ಅವರವರ ಜ್ಞಾನ ಅವರಿಗೆ ಇದೆ. ಯಾವುದೋ ಒಂದು ವಿಷಯ ಎಲ್ಲರಿಗೂ ತಿಳಿದಿರಬೇಕು ಎಂದೇನೂ ಇಲ್ಲ ಅಲ್ವಾ? 
ಇನ್ನು ಬಟ್ಟೆ ಬರೆಗಳ ವಿಷಯಕ್ಕೆ ಬಂದಾಗ ಕೆಲವೊಂದು ಮಾಡೆಲ್ ಗಳು, ಸಿನೆಮಾ ನಟರು, ನಟಿಯರು, ಟಿವಿ ಧಾರಾವಾಹಿ, ಸಿನೆಮಾ ಹಾಗೂ ಟಿವಿ ಕಾರ್ಯಕ್ರಮಗಳಲ್ಲಿ ಅವರು ಧರಿಸುವ ಅರ್ಧಂಬರ್ಧ ಮಾನವನ್ನೂ ಮುಚ್ಚಲು ಹಿಂದುಳಿದ ಬಟ್ಟೆಗಳು ನನಗೆ ಇಷ್ಟ ಆಗದು. ನಾನು ಅವುಗಳನ್ನು ಹಾಕುವುದೂ ಇಲ್ಲ, ಇಷ್ಟ ಪಡುವುದು ಕೂಡ ಇಲ್ಲ. ನಾವು ಹಿರಿಯರು ಮಕ್ಕಳಿಗೆ, ಮುಂದಿನ ಜನಾಂಗಕ್ಕೆ ಮಾದರಿ ಆಗಿರಬೇಕು, ಹಿರಿಯರೇ ಬಿಕಿನಿಯಲ್ಲಿ ಕುಣಿದರೆ ಕಿರಿಯರು ಬಟ್ಟೆ ಬಿಚ್ಚಿ ಕುಣಿಯುವುದರಲ್ಲಿ ತಪ್ಪಿಲ್ಲ. ಅಲ್ಲಿಗೆ ನಮ್ಮ ಸಂಸ್ಕೃತಿ ನಾಶ ಮಾಡುವುದು ನಾವೇ ಅಲ್ಲವೇ? ಅದಕ್ಕೆ ನನ್ನ ಸಹಮತ ಇಲ್ಲ. 
   ಬದುಕು ನಾಲ್ಕು ದಿನ, ಪಾಪ ಪುಣ್ಯಗಳ ನಂಬುವವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಎಲ್ಲಾ ಧರ್ಮಗಳೂ, ಧರ್ಮ ಗ್ರಂಥಗಳೂ ಇದರ ಬಗ್ಗೆ ಹೇಳಿವೆ. ಸ್ವರ್ಗ, ನರಕದ ಕಲ್ಪನೆ ಜಗತ್ತಿನ ಎಲ್ಲಾ ಮೂಲೆಯಲ್ಲೂ ಇದೆ. ಹಾಗಾಗಿ ಒಳ್ಳೆಯತನಕ್ಕೆ ನನ್ನ ಮತ. 
  ಪರಿಸರ ನನ್ನ ಲವರ್. ತುಂಬಾ ಪ್ರೀತಿಸುವೆ ಹಸಿರನ್ನು. ನನ್ನ ಕಾರ್ಯಗಳಲ್ಲಿ ಇಪ್ಪತ್ತು ವರ್ಷಗಳ ಮೊದಲೇ ಪ್ಲಾಸ್ಟಿಕ್ ಭೂಮಿಗೆ ಬಿಸಾಡಲಾರೆ ಎಂಬ ಪ್ರತಿಜ್ಞೆ ಮಾಡಿ ಅದರಂತೆ ನಡೆಯುತ್ತಿರುವ ವ್ಯಕ್ತಿ ನಾನು. ಯಾವುದೇ ಚಾಕಲೇಟು ಕವರ್, ಬಾಟಲಿಯನ್ನು ಮನೆ ತನಕ ತಂದು ಮತ್ತೆ ಕಸದ ತೊಟ್ಟಿಗೆ ಹಾಕುವ ಪರಿಪಾಠ ಇದೆ. ಅದಕ್ಕೆ ನನ್ನ ಮೇಲೆ ನನಗೆ ಹೆಮ್ಮೆ.
ನೋವಿದೆ, ನಲಿವಿದೆ, ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದ ಖುಷಿ ಇದೆ. ಸಾಧನೆಯ ಗೆಲುವಿದೆ , ಇನ್ನೂ ಸಾಧಿಸ ಬೇಕೆಂಬ ಛಲವಿದೆ, ಸಾಧಿಸಲು ಬಹಳ ಇದೆ ಕಲಿತದ್ದು ಏನೂ ಸಾಲದು ಎಂಬ ತಿಳಿವಿದೆ, ಕೆಲವೊಂದು ವಿಷಯದಲ್ಲಿ ಅಸಹಾಯಕಳಾಗಿ ಬಿಟ್ಟೆ ಎಂಬ ಕಣ್ಣೀರಿದೆ, ಬದುಕು ನಾವು ಅಂದುಕೊಂಡ ಹಾಗೆ ಇಲ್ಲ, ವಿಧಿ ಲಿಖಿತದಂತೆ ಇದೆ ಎಂಬ ಅರಿವಿದೆ, ಕಷ್ಟ ಪಟ್ಟರೆ ಸುಖ ಖಂಡಿತ ಎಂಬ ಜ್ಞಾನವಿದೆ, ಬದುಕಿನ ದಾರಿಯ ಎಡರು ತೊಡರುಗಳ ಬಗ್ಗೆ, ನೋವು ನಲಿವಿನ ಬಗ್ಗೆ ತಿಳಿದಿದೆ. ಪರರಿಗೆ ನೋವು ಕೊಡದೆ ಬದುಕಿದ ಸಮಾಧಾನವೂ ಇದೆ. ಮುಂದೆ ಸಾಗುವಾಗ ಇರುವ ತೊಂದರೆಗಳ ಬಗ್ಗೆ ಭಯವಿದೆ. ಪ್ರತಿ ಹೆಜ್ಜೆಯ ಮೇಲೂ ಗಮನ ಇದೆ. 
   ನನ್ನ ಗುಣವನ್ನು ನಾ ಬಹಳ ಪ್ರೀತಿಸುವೆ, ಸೋಮಾರಿತನ ದ್ವೇಷಿಸುವ ನಾನು ಪರರಿಗೆ ನೋವು ಕೊಡಲಾರೆ. ಸರ್ವರಿಗೂ ನನ್ನಲ್ಲಿ ಪ್ರೀತಿ, ಸ್ನೇಹವಿದೆ. ಮೋಸವಿಲ್ಲ. ಸಹಾಯ ಬಯಸುವವರು ಬಹಳ ಜನ , ಸಹಾಯ ಮಾಡಲಾಗದ ಅಶಕ್ತತೆಗೆ ನೋವಿದೆ. ನನ್ನತನವಿದೆ. ಪರರಿಗೆ ಸಹಾಯ ಮಾಡಿದ ಹೆಮ್ಮೆ ಇದೆ. ಬೇಡದ್ದನ್ನು ತಿರಸ್ಕರಿಸಿದ ತೃಪ್ತಿ ಇದೆ. ಒಂಥರಾ ಡೇರಿಂಗ್ ಇದೆ, ಅಳುಕುತನವೂ ಇದೆ. ಒಟ್ಟಿನಲ್ಲಿ ಮಾನವತೆ ಇರುವ ಮಾನವ ಗುಣವಿದೆ. 
ಎಲ್ಲವೂ ಸರಿ, ಎಲ್ಲವೂ ಸತ್ಯ, ಹೀಗಿದ್ದರೆ ಮನುಷ್ಯ ದೇವರಾಗಿ ಬಿಡುತ್ತಾನೆ. ಮನುಷ್ಯ ಹಾಗಿದ್ದರೆ ದೇವರಿಗೆ ರೆಸ್ಪೆಕ್ಟ್, ಮೌಲ್ಯ, ಬೆಲೆ ಇಲ್ಲ. ಆದ ಕಾರಣ ದೇವರು ಮನುಷ್ಯನನ್ನು ದೇವರಾಗಲು ಬಿಡಲಾರ ಅಲ್ಲವೇ? ತನ್ನ ಸೀಟು ಹೋದರೆ? ಭೂ ಲೋಕದಲ್ಲಿ ಎಲ್ಲಾ ಕುರ್ಚಿಗಾಗಿಯೇ ಕಾದಾಟ, ಜಗಳ, ಓಟು, ಮೃತ್ಯು ಎಲ್ಲಾ ನಡೆಯುತ್ತದೆ. ಹೆಸರು, ಖ್ಯಾತಿಗೆ ಜನ ಬೇಗ ಬಲಿಯಾಗುತ್ತಾರೆ. 
ಎಲ್ಲರ ಬದುಕಿನ ತಿರುಳು ಇಷ್ಟೇ. ಬರುವಾಗ ತರಲಿಲ್ಲ, ಹೋಗುವಾಗ ಕೊಂಡು ಹೋಗುವುದಿಲ್ಲ, ಬರಿಗೈಲಿ ಬಂದು ಹಾಗೆಯೇ ಹೋಗುವ ಬದುಕಿನಲ್ಲಿ ಆಸೆ, ಆಮಿಷ, ಅಧಿಕಾರ, ಮದ, ಮಾತ್ಸರ್ಯ, ಹೊಟ್ಟೆಕಿಚ್ಚು, ನಂಜು. 
ಹತ್ತಿರವಿದ್ದರೂ  ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ..
ಸದಾ ನಾ ನೇನೆಸುವ ಕವಿ ಸಾಲುಗಳು. ನೀವೇನಂತೀರಿ?
@ಹನಿಬಿಂದು@
16.11.2023

ಸಮರ್ಪಣೆ

ಶೋಷಣೆ

ಘೋಷಣೆ ಕೂಗಲು ಎಲ್ಲರೂ ಮುಂದು
ಶೋಷಣೆ ಮಾತ್ರ ಮಹಿಳೆಗೆ ಸಿಂಧು
ಸಮರ್ಪಣೆ ಜಗದಲಿ ಅವಳಲಿ ಮಾತ್ರವೇ
ಆಕರ್ಷಣೆ ಇದ್ದರೂ ಒಮ್ಮೆಗೆ ಮರೆವರು

ಘರ್ಷಣೆ ನಿತ್ಯವೂ ಬದುಕಿನ ಪಥದಲಿ 
ಪೋಷಣೆ ಮಾಡಲು ಸರ್ವರ ಮನೆಯಲಿ
ಬವಣೆಯು ಬಾಳಲಿ ಹೆಣ್ಣಿನ ಬದುಕಲಿ
ವಿವರಣೆ ಹೇಗೆ ಶೀಲಕೆ ಬೇಡಲಿ

ಮಣೆಯನು ಹಾಕದು ಸರಕಾರ ಇಲ್ಲಿ
ಕೆನೆಯನ್ನು ಬೇಡುವ ಕೃಷ್ಣನ ತೆರದಲಿ
ಜಾಗರಣೆ ಬದುಕಲಿ ಆಗದು ಎಂದೂ
ತ್ಯಾಗವೇ ಸ್ತ್ರೀಯ ಕ್ಷಣದಲಿ ಮುಂದೂ

ಪ್ರೀತಿಯ ಮಾತನು ಕೇಳಲು ಬೇಕು
ಹಾಸಿಗೆಯಡಿಯಲಿ ಬೀಳಲು ಬೇಕು
ಅಮ್ಮ ಅಕ್ಕ ಮಡದಿಯೂ ಬೇಕು
ಹೆಣ್ಣು ಮಗು ಮಾತ್ರ ಸಾಯಲು ಬೇಕು..
@ಹನಿಬಿಂದು@

ಶಿಶು ಗೀತೆ

ಜೋಕ್ಲೆನ ಬರವು (ಶಿಶು ಗೀತೆ)

ಕುಪುಲೋ ಕುಪುಲೊ 
ಓಡೆ ಪೋಪ ಕುಪುಲೋ 
ಮಲ್ಲಕ್ಲೆಗ್ ಬಾರ್ ಗುದ್ದೆರೆ ಪೋಪೆ 
ಬಾರ್ ಡ್ ಏರ್ ಉಲ್ಲೆರ್ 
ಬಾರ್ ಡ್ ಪುರಿಕುಲು ಉಲ್ಲೆರ್ 
ಪುರಿಕುಲು ದಾದ ಕೊರ್ಪೆರ್ 
ಪುರಿಕುಲು ತಿನಿಯೆರೆ ತಿಕ್ವೆರ್ 
ಪುರಿ ತಿಂದ್ ದ್ ದಾದ ಮಲ್ಪುವ
ಬಿನ್ನೆರೆಗ್ ದೋಸೆ ಮೈಪುವೆ
@ಹನಿಬಿಂದು@
07.07.2024

ಮೋಕೆ

ಟoಕಾ 

ಎನ್ನ ಮರ್ಮಲ್
ಬಾರೀ ಪೊರ್ಲುದ ಪೊಣ್ಣು 
ರಡ್ಡ್ ನುಪ್ಪಾಡ್ 
ಪಂಡೆಡ ಪಾಡ್ವಲಾಲ್
ಅರ್ಧ ಸೇರ್ದ ನುಪ್ಪುನು 
@ಹನಿಬಿಂದು@
19.09.2024

ಗಝಲ್

ಗಝಲ್ 

ಭಾರತದ ಸ್ವಾತಂತ್ರ್ಯಕ್ಕೆ ಕೀ ಕೊಟ್ಟವರು ನಮ್ಮ ಮಹಾತ್ಮ
ಭಾರತೀಯರ ಮುಕ್ತ ಬದುಕಿಗೆ ದೀಪ ಬೆಳಗಿದವರು ನಮ್ಮ ಮಹಾತ್ಮ

ಗುಜರಾತಿನ ಪೋರಬಂದರಿನಲ್ಲಿ ಜನಿಸಿದವರು
ದೇಶದುದ್ದಕ್ಕೂ ದೇಶದಾಚೆಗೂ ಖ್ಯಾತಿ ಪಡೆದವರು ನಮ್ಮ ಮಹಾತ್ಮ

ಸತ್ಯದೊಂದಿಗಿನ ತನ್ನ ಪರಿಕಲ್ಪನೆಗಳ ಬರೆದವರು
ಶಾಂತಿ ಮಂತ್ರಗಳ ಪ್ರಪಂಚಕ್ಕೆ ಸಾರಿದವರು ನಮ್ಮ ಮಹಾತ್ಮ

ದೇಶದ ಜನತೆಯನ್ನು ದೇಶ ಸುತ್ತಿ ಸುತ್ತಿ ಒಗ್ಗೂಡಿಸಿದವರು
ಪರಂಗಿಗಳನ್ನು ಯುದ್ಧ ಇಲ್ಲದೆಯೆ ಓಡಿಸಿ ಬಿಟ್ಟವರು ನಮ್ಮ ಮಹಾತ್ಮ

ಆಟೋಟಗಳಿಂದ ಹೊರತಾದವರು,   ತನ್ನದೇ ಕೆಟ್ಟ ಅಕ್ಷರಗಳನ್ನು ದೂಷಿಸಿದವರು 
ಆಟೋಟಗಳ ಜೊತೆ ಮೂಲ ಶಿಕ್ಷಣಕ್ಕೆ ಒತ್ತು ಕೊಟ್ಟವರು ನಮ್ಮ ಮಹಾತ್ಮ 

ದೇಶದಲ್ಲಿ ಸ್ನೇಹ ಪ್ರೇಮ ಒಗ್ಗಟ್ಟಿನ ಸೂತ್ರ ಬಿತ್ತಿದವರು 
ದ್ವೇಷ, ಮದ ಮತ್ಸರ ಅಳಿಸಿ ಎಲ್ಲರೂ ಒಂದೆಂದವರು ನಮ್ಮ ಮಹಾತ್ಮ.
@ಹನಿಬಿಂದು@
30.09.2024

ಚಿಟ್ಕಾ

ಚಿಟ್ಕಾ 

ಮೊಬೈಲ್ ಪನ್ಪಿನ ಉಂದು ದಾದನ 
ಎಂಚಿನ ಮಾಯೆ ಎರೆನ ಬೇಲೆನ
ತೂಯಿನಾತ್ ಮುಗಿಯoದ್ ಮಲ್ತಿನಾತ್ ಕಮ್ಮಿಯೆನ
ನೂಕು ತೂದುಮಾತೆರ್ನಲ ಕಣ್ ಬೇನೆನ 
@ಹನಿಬಿಂದು@
08.10.2024

ಸೋಮವಾರ, ಅಕ್ಟೋಬರ್ 7, 2024

ತುಳು

ಐನೆಸಲ್ 

ಮಾಮಿ ಮರ್ಮಲೆಗ್ ಮಲ್ಲ ಲಡಾಯಿ
ಮರ್ಮಲ್ ಕೊಚ್ಚೊಂದು ಇತ್ತಲ್ ಬಡಾಯಿ
ಮಗಕ್ ಬಾರಿ ಬೇಜಾರ್ ಪಾತೆರ್ನು ಏರ್ನoಚಿ
ಬಾಲೆಗ್ಲಾ ಬೇಜಾರ್ ನಡುಟು ಪೋಂಡ ಬೂರು ಮುಂಚಿ
ಮಾಮಣ್ಣೆ ಮಾತ್ರ ಆರಾಮಡ್ ಇತ್ತೆರ್ ಗುದ್ದೊಂದು ಬಜ್ಜೆಯಿ
@ಹನಿಬಿಂದು@
07.10.2024

ಭಾನುವಾರ, ಅಕ್ಟೋಬರ್ 6, 2024

ಚಂಗುಡಿ

ಚುoಗುಡಿ 

ಅರೆಗ್ ಬೋಡುಗೆ ಪೊಸ ಕಾರ್
ಬೈಕ್‌ಡ್ ಎಕ್ಕುಜಿಗೆ ನೆಲಕ್ ಕಾರ್
@ಹನಿಬಿಂದು@
06.10.2024

ಚುoಗುಡಿ

ಚುoಗುಡಿ 


ಮಾಮಿನ ಮೇಕಪ್‌ದ ಏಸ ತೂದು ಮರ್ಮಲ್ ತೆಲಿತಲ್ ಉಲಯಿ ಉಲಯಿ!
ಮರ್ಮಲ್‌ನನೇ ಲಿಪ್ ಸ್ಟಿಕ್ ಕಂಡ್‌ದ್ ಪಾಡ್ ದಿತ್ತೆರ್ ಮಾಮಿ ಮೆಲ್ಲ  ಉಲಯಿ!!
@ಹನಿಬಿಂದು@
06.10.2024

ಶನಿವಾರ, ಅಕ್ಟೋಬರ್ 5, 2024

ಹಾಯ್ಕು

ಹಾಯ್ಕು
ಎಲ್ಯ ಜೋಕ್ಲೆನ್ 
ಸರಿ ತಾದಿಡ್ ಲೆತೋ 
ಪೊಪಿನ ಎಡ್ಡೆ
@ಹನಿಬಿಂದು@
05.10.2024

ಟoಕಾ

ಹಾಯ್ಕು

ಬಾಲೆ ಎಲ್ಯಾಲ್ !
ನನ ಎಡ್ಡೆ ಕಲ್ಪೊಡು 
 ಪನ್ನ ಕೇನಂದೆ
ತಪ್ಪು ಪೂರಾ ತಿದ್ದಂದೆ
ಪೋಂಡ ಸರ್ಯಾವೇ ಬದ್ಕ್?
@ ಹನಿಬಿಂದು@
05.10.2024

ಶುಕ್ರವಾರ, ಅಕ್ಟೋಬರ್ 4, 2024

ಮದುವೆ

ಮದುವೆ

ಆ.  ಹುಡುಗಿಗೆ ಮದುವೆಯೇ ಆಗಲಿಲ್ಲ ಕಾರಣ ಬಡತನ. ಬಡತನವನ್ನೇ ಮೈ ಹೊದ್ದುಕೊಂಡು ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ಶಾಲೆಗೆ ಸೇರಿ ಓದಿದ ಹುಡುಗಿ ಬಡತನದಲ್ಲೇ ಜೀವನ ಕಳೆಯುವ ಸ್ಥಿತಿ ಇತ್ತು.
  ಆದರೆ ಆಕೆ ಓದಿನಲ್ಲಿ ಸಿರಿವಂತಲಾಗಿದ್ದಳು. ಹೆಸರು ಕಲಾವತಿ. ಹೆಸರಿನ ಹಾಗೆ ಹಲವು ಕಲೆಗಳ ಒಡತಿ. ಹಾಡು, ನಾಟಕ, ಭಾಷಣ, ಕಲಿಕೆ ಎಲ್ಲದರಲ್ಲೂ ಆಕೆ ಮುಂದು. ಪೋಷಕರಿಗೆ ಅವಳ ಮೇಲೆ ಬಹಳ ಧೈರ್ಯ. ನಮ್ಮನ್ನು ಸಾಕುವಳು ಎಂಬ ನಂಬಿಕೆ. ಅವಳಿಗೊಬ್ಬ ಅಣ್ಣನಿದ್ದ. ಕಲಾ ರಾಮ್. ಆದರೆ ಕಲಾರಾಮ್ ಓದುವುದರಲ್ಲಿ ಅಷ್ಟಕ್ಕಷ್ಟೇ. ಮನೆಯ ಕಷ್ಟಕ್ಕೆ ಹೊರ ಹೋಗಿ ದಿನ ಕಳೆಯ ತೊಡಗಿದ. ಬೇಡದ ಅವನ ಹಾಗೆಯೇ ಇರುವ ಕೊಳಕು ಸ್ನೇಹಿತರು ಸಿಕ್ಕಿದರು. ಅವರ ಜೊತೆ ಜೂಜು, ಕುಡಿತ, ಹೊಗೆಸೊಪ್ಪು ಸೇವನೆ, ಧೂಮಪಾನ ಎಲ್ಲವನ್ನೂ ಕಲಿತ. ಇದರಿಂದ ಮನೆ ತೊರೆದ. ಅದೆಲ್ಲೋ ಬಾರಿನಲ್ಲಿ ಕೆಲಸಕ್ಕೆ ಸೇರಿದ. ಅದೊಂದು ಕಾಲದಲ್ಲಿ ತಾನು ಮಾಡಿದ್ದೆಲ್ಲ ಕೆಟ್ಟದು ಎಂಬ ಬುದ್ಧಿ ಬಂದು ಸರಿ ಆಗಲು ಹೊರಟ. ಆಗ ಕಾಲ ಮಿಂಚಿ ಹೋಗಿತ್ತು. ಅದು ಯಾರೋ ಒಬ್ಬಳು ತಮಿಳು ಹುಡುಗಿಯನ್ನು ಮದುವೆ ಆದ. ಅವಳಿಗೆ ಮೊದಲೇ ಒಂದು ಮದುವೆ ಆಗಿತ್ತು. ಅವಳು ಇವನನ್ನು ಕ್ಯಾರೆ ಮಾಡದೆ ಕೆಲಸಕ್ಕೆ ಹೋಗಿ ಸಂಪಾದಿಸಿ ಚೆನ್ನಾಗಿ ಬದುಕುತ್ತಿದ್ದಳು. ಗಂಡ ಎಂಬ ಹೆಸರಿಗಾಗಿ ನೋಡಲು ಚೆನ್ನಾಗಿದ್ದ ಇವನನ್ನು ಕಟ್ಟಿಕೊಂಡಿದ್ದಳು ಅಷ್ಟೇ.
   ಇತ್ತ ಕಲಾವತಿ ಚೆನ್ನಾಗಿ ಓದಿ ಬಿ ಎಸ್ಸಿ ನರ್ಸಿಂಗ್ ಮಾಡಿ ಒಂದು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದಳು. ಒಳ್ಳೆಯ ಸಂಬಳ ಸಿಗುತ್ತಿತ್ತು. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡಳು. ಆದರೆ ಎದುರು ನಿಂತು ಅವಳ ಮದುವೆ ಮಾಡಿ ಕೊಡುವವರು ಯಾರೂ ಇರಲಿಲ್ಲ. ತಂದೆ ರೋಗಿಯಾಗಿದ್ದರು. ತಾಯಿ ಏನೂ ತಿಳಿಯದವರಾಗಿದ್ದರು. ಬಡತನ ಬಂಧುಗಳನ್ನು ದೂರಕ್ಕೆ ಅಟ್ಟಿ ಬಿಟ್ಟಿತ್ತು.
     ಮನೆಯ ಪರಿಸ್ಥಿತಿ, ಪೋಷಕರ ಬಗ್ಗೆ ತಿಳಿದಿದ್ದ ಕಲಾವತಿ ಮದುವೆಯ ಬಗ್ಗೆ ಯೋಚನೆ ಮಾಡಲಿಲ್ಲ. ಪೋಷಕರಿಗೂ ಅದೇ ಬೇಕಿತ್ತು. ಮದುವೆಯಾಗಲು ಭಯಂಕರ ವರದಕ್ಷಿಣೆ ಕೂಡಾ ಅಡ್ಡಿ ಬಂದಿತ್ತು. ಹುಡುಗನ ಕಡೆಯವರು ಹುಡುಗಿ ನೋಡುವ ಮೊದಲೇ ಲಕ್ಷಗಟ್ಟಲೆ ರೇಟ್ ಫಿಕ್ಸ್ ಮಾಡಿ ಕೇಳುತ್ತಿದ್ದರು. ಹಾಗಾಗಿ ಅವಳು ಆಹ್ ಬಗ್ಗೆ ಯೋಚನೆ ಮಾಡಲು ಹೋಗಲಿಲ್ಲ. ಬಂಧುಗಳು ಎರಡನೇ ಸಂಬಂಧದ ವರ ಹುಡುಕಲು ಆರಂಭಿಸಿದಾಗ ಕೋಪ ಅವಳಿಗೆ ನೆತ್ತಿಗೇರಿತು. ಆದರೂ ಅವಳು ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದಳು.ಗೆಳೆಯರೆಲ್ಲ ಸೇರಿ  ಪಕ್ಕದ ಊರಿನ ನವೀನ ಎಂಬ ಹುಡುಗನನ್ನು ಹೇಳಿ ಅವನು ಅವಳನ್ನು ಚೆನ್ನಾಗಿ ನೋಡಿಕೊಳ್ಳುವೆ ಎಂದು ಹೇಳಿ ಕಡಿಮೆ ವರದಕ್ಷಿಣೆ ಕೇಳಿ ಇವಳ ಹಣದಲ್ಲೇ ಮದುವೆಯಾದ.
        ಮದುವೆಯ ಬಳಿಕ ನವೀನ  ದುಡಿಯದಾದ. ಕಾರಣ ಸೋಮಾರಿತನ. ಮಡದಿ ದುಡಿಯುವಳು ಎಂಬ ತಾತ್ಸಾರ. ಮನೆಯಲ್ಲೇ ಕುಳಿತು ಗೆಳೆಯರ ಕರೆದು ಅವರೊಂದಿಗೆ ಲಲ್ಲೆ ಹೊಡೆಯುವುದು ಅಭ್ಯಾಸವಾಯಿತು. ಊರಿನಲ್ಲೇ ಇದ್ದುದರಿಂದ ಹಲವಾರು ಬಾಲ್ಯ ಸ್ನೇಹಿತರಿದ್ದರು. ಕಲಾವತಿ ತನ್ನ ತಂದೆ ತಾಯಿಗಳನ್ನು ನೋಡಿಕೊಳ್ಳುವ ಒಪ್ಪಿಗೆ ಮೊದಲೇ ಪಡೆದಿದ್ದ ಕಾರಣ ಅವರ ಮನೆಯಲ್ಲೇ ಉಳಿದಳು. ನವೀನನಿಗೆ  ಪರರ ಜೊತೆ ಸೇರಿ ಸಮಾಜ ಸೇವೆ ಮಾಡುವುದು ಹವ್ಯಾಸ ಆಗಿ ಬಿಟ್ಟಿತು. ಹಾಗಾಗಿ ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತೆ ಆದ. ಹೊರಗೆ ಹಾರ, ತುರಾಯಿ ಹಾಕಿ ಜನ ಸನ್ಮಾನಿಸುತ್ತಿದ್ದರು. ಅದರಿಂದ ಅವನ ಮದ ಇನ್ನಷ್ಟು ಹೆಚ್ಚಾಯಿತು. ತಾನು ಗಣ್ಯ ವ್ಯಕ್ತಿ ಅಂದುಕೊಂಡ.
ಕಲಾವತಿಯ ತಂದೆ ತಾಯಿ ಹಾಸಿಗೆ ಹಿಡಿದರು. ಅವರನ್ನು ನೋಡಿಕೊಳ್ಳಲು ನವೀನ ಹೋಗಲಿಲ್ಲ. ತಂದೆ ತಾಯಿ ಮಗಳ ಬದುಕು ನೋಡಿ ಮರುಗಿದರು. ಎಷ್ಟು ದುಡಿದರೂ ಪೋಷಕರ ಔಷಧಿಗೆ ಸರಿ ಹೋಗುತ್ತಿತ್ತು. ಬಡತನದಲ್ಲೇ ಹುಟ್ಟಿ ಬಡತನದಲ್ಲೇ ಬೆಳೆದು, ಮದುವೆ ಎಂಬುದೂ ಬಡತನದಲ್ಲೇ ಅಂತ್ಯಗೊಂಡು, ಬಡತನವೇ ಮೈವೆತ್ತು ತಂದೆ ತಾಯಿ ಸತ್ತ ಬಳಿಕ ತನಗೆ  ಯಾರೂ ಇಲ್ಲ ಎಂದು ತಾನೂ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳು.
@ಹನಿಬಿಂದು@
05.10.2024


ಗುರುವಾರ, ಅಕ್ಟೋಬರ್ 3, 2024

ಟoಕಾ

ಟoಕಾ

ಗಂಗಸರದ
ಅಮಲ್ ಜಪ್ಪು ಅಣ್ಣ
ಬೊಡೆದಿ ಜೋಕ್ಲು 
ಬಂಜಿಗ್ ದಾಂತೆ  ತಾದಿಡ್ 
 ಬೂರ್ದು  ನುಪ್ಪು ನಟ್ನಗ 
@ಹನಿಬಿಂದು@
03.10.2024

ಬುಧವಾರ, ಅಕ್ಟೋಬರ್ 2, 2024

ಹಳ್ಳಿ ಹುಡುಗಿ

ಹಳ್ಳಿ ಹುಡುಗಿ

ಒಂದು ಕಾಲದಲಿ ಮುಗ್ಧತೆ ಹೊತ್ತ
ಹೆಣ್ಣದು ಅಲ್ಲವೇ ಹೇಳಿ
ಟೀವಿ ಮೊಬೈಲ್ ಏನೂ ಇಲ್ಲದ
ಕಣ್ಣದು ಆರೋಗ್ಯ ಕೇಳಿ..

ತಾನು ತನ್ನದು ತನಗೆ ಎನ್ನದೆ
ಸರ್ವ ಜನರ ಜೊತೆ ಬದುಕಿರುವ
ಕುಟುಂಬ ಜನರಿಗೆ ಆದ್ಯತೆ ಕೊಟ್ಟು
ಊಟ ತಿಂಡಿಯ ತಯಾರಿಸುವ

ದಾವಣಿ ಲಂಗ ಮೊಗ್ಗಿನ ಜಡೆಯ 
ಸುರ ಸುಂದರಿಗೆ ಸಾಟಿಯೇ
ಇಳಕಲ್ ಸೀರೆ ಜರತಾರಿ ಕುಪ್ಪಸ
ಹಳ್ಳಿಯ ಹುಡುಗಿ ಘಾಟಿಯೇ! 

ಹಂಚಿ ತಿನ್ನುವ ಮಿಂಚಿನ ಗುಣದ
ಕೊಂಚ ಸಹನೆಯ ಹೆಣ್ಣಿವಳು
ಮಂಚವ ಅರಿಯದ ಹೊಂಚನು ಕಾಣದ
ಕಂಚಿನ ಕಂಠದ ಸಿರಿಯಿವಳು

ಮೋಸವ ನೆನೆಯದ ಪ್ರೀತಿಯ ಹಂಚುವ
ಮುಗ್ಧ ಮನದ ಕನ್ಯೆ
ತೋಷದಿ ಬದುಕುವ ಗೆಳೆಯರ ಕೂಡುವ
ಶುದ್ಧ ಮನಸಿನ ಹೆಣ್ಣೇ
@ಹನಿಬಿಂದು@
03.10.2024

ಸರಿಪಡಿಸೋಣ

ಸರಿಪಡಿಸೋಣ

ಕುಡಿತವು ಮಾರಕ ಚಟ ಎಂದಿದ್ದರೂ
ಕುಡಿತದ ದಾಸರು ನಾವು
ಹೆಣ್ಣಿನ ದೇಹ ಮನಸನು ತಿಳಿಯದೆ
ಆಟವ ಆಡುವ ನೋವು!

ಗಾಂಜಾ ಸಿಗರೇಟು ಅಫೀಮು ಕೆಟ್ಟದು
ಜನರೇ ಕೊಳ್ಳೋದಲ್ವ?
ನಾಯಿ ಬೆಕ್ಕು ನರಿಯೂ ಮುಟ್ಟದು 
ಕೊಳಕು ಮಾನವ ಅನ್ನಿಸೋದಿಲ್ವ!

)ಜನರ ಆಹಾರಕೆ  ವಿಷವನು ಸುರಿದು
ಜನರೇ ಸಾಯೋದು ಏಕೆ?
ತಾಯಿ ತಂದೆ ಬಂಧುಗಳ ಕೊಂದ 
ಆಸ್ತಿಯ ಬದುಕದು ಸಾಕೆ?

ಆರೋಗ್ಯ ಭಾಗ್ಯ ಬೇಕು ಎಂದರೂ
ನಿದ್ದೆ ಆಹಾರ ಸರಿ ಇದೆಯೇ?
ತಿಳಿದ ಹಿರಿಯರು ಬುದ್ಧಿ ಹೇಳಿದರೆ
ಕೇಳುವ ವ್ಯವಧಾನ ಬಂದಿದೆಯೇ?

ಚಿಕ್ಕವ ದೊಡ್ಡವ ಎನ್ನದೆ ಮೊಬೈಲ್
ಗೀಳಿನ ಕಾಟ ಹೋಗಿದೆಯೇ?
ಕಣ್ಣು ಕಿವಿ ನರ ಕೈ ಕಾಲು
ಅಂಗದ ಮಹತ್ವ ತಿಳಿದಿದೆಯೇ?

ರಾತ್ರಿ ಹಗಲು ದುಡಿಯುವ ನಮಗೆ
ಸಂಬಳ ಹಣ ಸಾಕಾಗುವುದೇ?
ದರೋಡೆ ಲೂಟಿ ಲಂಚದ  ಹಣವು
ಒಳ್ಳೆಯ ಕಾರ್ಯಕೆ ಹೋಗುವುದೇ?

ಮರಗಳ ಕಡಿದು ರಸ್ತೆಯ ಮಾಡಿ
ವಿಧ ವಿಧ ರಂಗಿನ ಮನೆ ಕಟ್ಟಿ
ಸ್ವರಗಳ ಸಾಯಿಸಿ ಪರಿಸರ ಕೊಂದು 
ಬದುಕುವ ಅಡಿಪಾಯ ಏನ್ ಗಟ್ಟಿ?
@ಹನಿಬಿಂದು@
01.10.2024

ರುಬಾಯಿ -1

ರುಬಾಯಿ
ನನಲ ಬೈದಿಜೆ ಪೋಯಿನ ಮದಿಮಾಯೆ
ಅಲ್ಪಮುಲ್ಪ ಪೋಪಿನಾಯಗ್‌ ಪೊನ್ನು ದಾಯೆ 
ಬೊಡೆದಿ ಕಾಪುವಲ್ ಪನ್ಪಿನ ನೆoಪಿಜ್ಜ
ಒರಿಯೊರಿ ತಿರ್ಗುನಾಯಗ್ ಮದ್ಮೆದಾಯೆ?
@ಹನಿಬಿಂದು@
02.10.2024

ಮಂಗಳವಾರ, ಅಕ್ಟೋಬರ್ 1, 2024

ಚಿಟ್ಕಾ

ಚಿಟ್ಕಾ

ಆಲ್

ಮಾಮಿನ ಮಗಲೆನ್ ಎಂಕ್ಂದೆ ಎನ್ನಿಯೆ
ಬೆಂದಿನ ಪೂರ ಅಲೆಗೇ ಕೊರಿಯೆ 
ಮೋಕೆನ್ ಪನಿಯರೆ ಕೈತಲ್ ಪೋಯೆ
ನನ ಒರಿ ಆನನ್ ಅಲೆನೊಟ್ಟು ತೂಯೆ
@ಹನಿಬಿಂದು@
01.10.2024