ಗುರುವಾರ, ಮಾರ್ಚ್ 27, 2025

ಸಾಲಗಾರರಿಗೆ

ನನ್ನ ಬದುಕಿನಲ್ಲಿ ಹಲವಾರು ಕಷ್ಟಗಳಿವೆ. ಅವುಗಳನ್ನೆಲ್ಲ ಹೇಳಿಕೊಳ್ಳಲು ಆಗದು. ಅದರ ಜೊತೆಗೆ ಇನ್ನೊಂದಷ್ಟು ಕಷ್ಟ ಸಿಗಲಿ ಎಂದು ಆ ದೇವರೇ ನಿನ್ನನ್ನು ಕೂಡ ಕಳಿಸಿ ಕೊಟ್ಟಿದ್ದಾರೋ ಏನೋ. ಹಣ, ಚಿನ್ನ ಎಲ್ಲಾ ಕಳೆದುಕೊಂಡೆ. ಆದರೆ ಎಲ್ಲವನ್ನೂ ಕೂಡ ಕಷ್ಟಪಟ್ಟು ನಾನೇ ಸಂಪಾದಿಸಿದ ಕಾರಣ ಅದಕ್ಕೆ ಸಾವಿಲ್ಲ. ನನಗೆ ಸೇರಬೇಕು ಎಂದು ಬರೆದಿದ್ದರೆ ಯಾವ ಕಡೆಯಿಂದಲಾದರೂ ಅದು ನನಗೆ. ಬರುತ್ತದೆ ಅದು ಸತ್ಯ. ಅದು ನನಗೆ ಸೇರಲೇ ಬಾರದು ಎಂದಿದ್ದರೆ ಆ ದೇವರೇ ನೋಡಿಕೊಳ್ಳಲಿ. ಎಲ್ಲವನ್ನೂ ಕೊಡುವ ದೇವರಿಗೆ ಇದು ಯಾವ ಲೆಕ್ಕ ಅಲ್ವಾ? ನೀನು ಮೋಸ ಮಾಡಲೆಂದೇ ನನ್ನ ಬಾಳಿಗೆ ಅಡಿ ಇಟ್ಟಿದ್ದರೆ ಇನ್ನು ಯಾರಿಂದ ತಾನೇ ಅದನ್ನು ತಡೆಯಲು ಸಾಧ್ಯ ಹೇಳು? 
  ನಿನ್ನ ಬದುಕಿನಲ್ಲಿ ನಾನು ಯಾರೋ..ನನ್ನ ಬದುಕಿನಲ್ಲಿ ನೀನು ಯಾರೋ..ನಿನ್ನ ಕಷ್ಟ ನೋಡಿ ನಿನಗೆ ಒಳ್ಳೆಯದಾಗಲಿ ಎಂದು ನಾನು ಬಯಸಿ, ನಾನೂ ಕಷ್ಟ ಪಡುತ್ತ ನಿನಗೆ ಸಹಕಾರ ನೀಡಿದೆ. ನೀನು ಕೃತಜ್ಞಾನಾಗುವ ಬದಲು ಕೃತಘ್ನನಾದೆ. ನನ್ನ ಮಗುವಿಗೆ ನಾನು ದುಡಿದದ್ದನ್ನು ತಿನ್ನುವ ಯೋಗ ಇಲ್ಲವೋ ಏನೋ. ಅದು ನಿನಗೆ ಸೇರಬೇಕಿತ್ತು ಅಂತ ದೇವರು ಬರೆದಿದ್ದರೆ ತಡೆಯಲು ನಾನು ಯಾರು? ಒಟ್ಟಿನಲ್ಲಿ ಒಳ್ಳೆಯದನ್ನು ಮಾತನಾಡುತ್ತಾ ನಿನ್ನ ಇನ್ನೊಂದು ಮುಖವನ್ನು ತೋರಿಸಿದ್ದಕ್ಕೆ ಥ್ಯಾಂಕ್ಸ್. ನಾನು ಏನೂ ಹೇಳುವುದಿಲ್ಲ. ಕೋರ್ಟು, ಕಚೇರಿಗೆ ಹೋಗಲು ನನ್ನ ಬಳಿ ಸಮಯ ಹಾಗೂ ಇನ್ನಷ್ಟು ಹಣವಿಲ್ಲ. ದೇವರನ್ನು ನಂಬಿ ಕೊಟ್ಟಿದ್ದೇನೆ. ದೇವರೇ ನೋಡಲಿ. ಮೇಲೆ ದೇವರಿರುವಾಗ ಹಣವಾಗಲಿ, ಆರೋಗ್ಯವಾಗಲಿ, ಆಯುಷ್ಯವಾಗಲಿ, ಆಸ್ತಿಯಾಗಲಿ, ಬದುಕಾಗಲೀ, ಕೊಡುವವನು ಅವನೇ, ಕಿತ್ತುಕೊಳ್ಳುವವನೂ ಅವನೇ. ನಮ್ಮದು ಅಂತ ಏನಿದೆ ಅಲ್ವಾ? ಸಮಯ ಬಂದಾಗ ಇಲ್ಲಿ ಗೊತ್ತಾಗದೆ ಹೋದರೂ ಮುಂದಿನ ಜನ್ಮದಲ್ಲಿ ಆದರೂ ಅದು ಕಟ್ಟಿಟ್ಟ ಬುತ್ತಿ ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಈ ಜನ್ಮದಲ್ಲಿ ಅನುಭವಿಸಿದ್ದು ಸಾಕಾಗಲಿಲ್ಲ ಅಂತ ಮುಂದಿನ ಜನ್ಮಕೂ  ಪಾಪದ ಮೂಟೆ ಕಟ್ಟಿಕೊಂಡು ಹೋಗುತ್ತೀಯಾದರೆ ಹೋಗು. ಮತ್ತೆ ಸಾಲ ತೀರಿಸಲು ನನ್ನ ಮನೆಯ ಆಳಾಗಿ ಹುಟ್ಟುವೆ. ನೆನಪಿರಲಿ. 
ಅಪರಿಚಿತರನ್ನು ನಂಬಿದ್ದು , ಹುಚ್ಚರ ಸಹಾಯ ಮಾಡಿದ್ದು ಎಲ್ಲವೂ ನನ್ನದೇ ತಪ್ಪಿರುವಾಗ ಇನ್ನು ಯಾರಿಗೆ ಹೇಳುವುದು? ಎಲ್ಲಾ ದೈವೇಚ್ಛೆ ಅಷ್ಟೇ. ಬದುಕಿನಲ್ಲಿ ಕಷ್ಟ ಕೊಡಲೆಂದೇ ದೇವರು ಕೆಲವರನ್ನು ಸೃಷ್ಟಿಸಿ ಇರುತ್ತಾರೆ ಅನ್ನಿಸುತ್ತದೆ.
  ಗಂಡಸರ ಗುಣವನ್ನು ಸರಿಯಾಗಿ ತೋರಿಸಿದ್ದಕ್ಕೆ ಧನ್ಯವಾದಗಳು. ಇದು ನನ್ನ ಕೊನೆಯ ಮೆಸ್ಸೇಜ್. ಇನ್ನು ಮುಂದೆ ನಂಬರ್ ಡಿಲೀಟ್ ಮಾಡಿ ಬ್ಲಾಕ್ ಮಾಡಿ ಬಿಡುತ್ತೇನೆ. ಪದೇ ಪದೇ ಕಿರಿ ಮಾಡೋದು ಯಾಕೆ ಅಲ್ವಾ? ಒಳ್ಳೆಯವನಿಗೆ ಒಂದು ಬಾರಿ ಹೇಳಿದರೆ ಸಾಕು. ಮತ್ತೆ ಮತ್ತೆ ನನಗೆ ತಾಳ್ಮೆ ಇಲ್ಲ. 
ಇಷ್ಟೇ...

ಸೋಮವಾರ, ಮಾರ್ಚ್ 24, 2025

ರಾಗಿ

ರಾಗಿ

ರಾಯರ ರಾಗಿ ರಾಜಗು ಬೇಕು
ರಾಯತ ಜೊತೆಗೆ ಇದ್ದರೆ ಸಾಕು
ತಿಂದವ ನಿರೋಗಿ ದೂರವು ರೋಗ
ಉಂಡವ ಗಟ್ಟಿಗ ಬಹಳ ಸುಯೋಗ

ಯೋಗ್ಯ ಭೋಗ್ಯರಾಗಿ ಎನುವ ರಾಗಿ
ಪುರಂದರ ವಿಠಲನು ಸೇವಿಪ ರಾಗಿ
ದಾಸ ಶ್ರೇಷ್ಠರು ಕಂಡ ಉಂಡ ರಾಗಿ
ರಾಮ ಧಾನ್ಯವೆಂಬ ಚರಿತೆಯ ರಾಗಿ

ಕಪ್ಪು ಕೆಂಪಿನ ದುಂಡಗಿನ ಚಿಕ್ಕ ರಾಗಿ
ತಿನ್ನಲು ಕಾಣುವರು ಬಲು ಚಿಕ್ಕವರಾಗಿ
ರುಚಿಯ ಬೆರೆಸಿ ಮುದ್ದೆಯ ಉಣ್ಣಲು
ಶುಚಿಯಲಿ ಬೆಳೆವರು ಮುದ್ದಿನ ಮಕ್ಕಳು

ನಮ್ಮಯ ನೆಲದಲಿ ಬೆಳೆಯುವ ರಾಗಿ
ಮುದ್ದೆ ರೊಟ್ಟಿ ದೋಸೆಗೆ ಬೇಕಾದ್ದು ರಾಗಿ
ಮಣ್ಣಿ ಹಲ್ವ ಅಂಬುಲಿಗೂ ಇದುವೇ ರಾಗಿ
ಹೆಮ್ಮೆಯ ರೈತನ ಆಹಾರ ರಾಗಿ

ಗಟ್ಟಿಗನಾಗುವೆ ತಿನ್ನಲು ರಾಗಿ
 ಉಪಯೋಗಿಸಿ ನೋಡು ಆಗುವೆ ನಿರೋಗಿ
ಶಕ್ತಿವಂತರಿಗೆ ಬೇಕಿದು ಆಹಾರವಾಗಿ
ತಾಕತ್ತು ನೋಡು ತಿಂದವ ನಿತ್ಯ ಯೋಗಿ
@ಹನಿಬಿಂದು@
24.03.2025

ಸೋಮವಾರ, ಮಾರ್ಚ್ 17, 2025

ನಮಿಸೋಣ

ನಮಿಸೋಣ

ನಮಿಸೋಣ ದೇವರಂಥ ಮಾತಪಿತರ ಚರಣಗಳಿಗೆ
ಬಾಗೋಣ ತಾನುರಿದು ಬೆಳಕ ಕೊಡುವ ದೀಪಗಳಿಗೆ//

ಗೌರವವ ಕೊಟ್ಟು ಕಲಿಯಬೇಕು  ಹಿರಿಯರಿಂದ
ಸೌರಭವ ಬೀರುವ ಶಕ್ತಿ ಪಡೆದ ಗೆಲುವಿನಿಂದ
ಪೌರತ್ವ ಪಡೆದು ಬಾಳಿ ಬದುಕೋ ನಲಿವಿನಿಂದ 
ಹೌಹಾರಿ ಬೀಳದೆ, ತಾಳ್ಮೆ ಎಂಬ ಮಂತ್ರದಿಂದ//

ಕಪ್ಪು ಬಿಳುಪು ಎನ್ನದೆ, ಮೇಲು ಕೀಳು ತೊಡೆದು ಹಾಕಿ
ಸೊಪ್ಪು ಕಾಳು ತಿನ್ನುತ ಆರೋಗ್ಯದ ರಕ್ಷೆ ಮಾಡಿ
ಅಪ್ಪುಗೆಯೇ ಬದುಕಲ್ಲ, ಪ್ರೀತಿ ಸ್ನೇಹ ಮೊಳೆಯಲಿ 
ದಪ್ಪ ಸಣ್ಣ ಬಣ್ಣಕ್ಕಿಂತ ಜ್ಞಾನ ಹೆಚ್ಚು ಬೆಳೆಯಲಿ!//

ಸಂಸ್ಕೃತಿಯ ಉಳಿಸುತ ಗೆಳೆತನವ ಬೆಳೆಸುತ 
ಮಾತೃಭಾಷೆ ನಿತ್ಯವೂ  ಬಳಕೆಯನ್ನು ಮಾಡುತ
ನಾನು ನನ್ನ ನನ್ನದೇ ನನಗೆ ಎಂದು ಮೆರೆಯದೆ
ಸಹಾಯ ಮಾಡೊ ಮನುಜರ ಎಂದೂ ನಾವು ಮರೆಯದೆ//

ಬಾಗಿ ಬಳುಕಿ ಬಳ್ಳಿಯಂತೆ ಭಾವ ಬೀಜ ಬಿತ್ತುತ
ಬಾನವರೆಗೆ ಕೈಯ ಚಾಚೊ ಗುರಿಯ ಇರಿಸಿಕೊಳ್ಳುತ
ಭಾವ ಬೇಧ ಎಲ್ಲಾ ಮರೆತು, ಒಂದೇ ಎಂದು  ಸಾರುತ
ಬಾಕಿ ಉಳಿದ ದಿನಗಳನ್ನು ಭಯವ ಮರೆತು ಕಳೆಯುತ//

ದೈವೀ ಶಕ್ತಿ ಎಂಬ ಬಲದ ಪರಿಸರಕೆ ಬಾಗುತ
ಕೈಲಿ ಇರುವ ಸಮಯವನ್ನು  ಬುದ್ಧಿಯರಿತು ಬಳಸುತ 
ವೈದ್ಯ ಗುರು ಹಿರಿಯರಿಗೆ ನಮಸ್ಕಾರ ತಿಳಿಸುತ
ರೈಲಿನಂತ ಜೀವನದಿ ನೆಮ್ಮದಿಯ ಹುಡುಕುತ//
@ಹನಿಬಿಂದು@
07.10.2024

ಭಾವಗೀತೆ - ಭಾರತಿಗೆ

ಭಾವಗೀತೆ - ಭಾರತಿಗೆ

ಬಾಗಿ ನಮಿಸುವೆ ಭವ್ಯ ಮಾತೆಗೆ 
ಭರತ ಭೂಮಿಯ ಒಡತಿಗೆ
ಭಾವ ತುಂಬಿದ ಹೃದಯ ಪದಗಳ
ಮುಡಿಸಿ ಆರತಿ ದೇವಿಗೆ//

ಭಕ್ತಿ ಯುಕ್ತಿ ಶಕ್ತಿ ಬೆರೆಸುತ 
ವಿಶ್ವ ಶಾಂತಿಯ ಬೇಡುವೆ
ಭವ್ಯ ಮನದಿ ಬೇನೆ ಕಳೆಯಲು
ನಿತ್ಯ ಭಜಿಸಿ ಹಾಡುವೆ//

ಜಾತಿ ನೀತಿ ಮರೆತು ಬಾಳಲು
ಪ್ರೀತಿ ಹೆಚ್ಚಲು ಕೋರುವೆ
ಸ್ಪೂರ್ತಿ  ಬದುಕನು ನೀಡು ಎನುತಲಿ
ರಾತ್ರಿ ಹಗಲು ಸ್ತುತಿಸುವೆ//

ನೀತಿ ನಿರ್ಮಲವಾಗಿ ಸೂಕ್ತಿಯು
ಸರ್ವರೆದೆಯನು ಮುಟ್ಟಲಿ
ಕೀರ್ತಿ  ಜಗದ ಮೂಲೆ ಮೂಲೆಗೂ
ಸರ್ವ ಸುಖವೂ ಹಬ್ಬಲಿ//
@ಹನಿಬಿಂದು@
27.02.2025

SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೊಂದು ಪತ್ರ

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೊಂದು ಪತ್ರ 

   ಹಲೋ ವಿದ್ಯಾರ್ಥಿಗಳೇ!  ಎಲ್ಲರೂ ಹೇಗಿದ್ದೀರಾ? ಪರೀಕ್ಷೆಗಂತೂ ನಿಮ್ಮ ತಯಾರಿ ಭರ್ಜರಿಯಾಗಿ ನಡೆದಿರಬೇಕಲ್ವೇ! ತುಂಬಾ ತುಂಬಾ ಓದ್ತಾ ಇದ್ದೀರಾ?  ಅದರಲ್ಲೂ ತುಂಬಾ ಯೋಚಿಸಿ " ನಾನು ಅವರಿಗಿಂತ ಜಾಸ್ತಿ ಅಂಕಗಳನ್ನು ಪಡೆಯಬೇಕು,  ಇವರಿಗಿಂತ ಜಾಸ್ತಿ ಅಂಕಗಳನ್ನು ಪಡೆಯಬೇಕು" ಮೊದಲಾದ ಗುರಿಗಳನ್ನು ಇಟ್ಟುಕೊಂಡು ರಾತ್ರಿ ಹಗಲು ನಿದ್ದೆಯನ್ನು,  ಊಟವನ್ನು ಲೆಕ್ಕಿಸದೆ ಓದ್ತಾ ಇದ್ದೀರಾ? ಟಿವಿ ಮೊಬೈಲ್ ಎಲ್ಲವನ್ನು ಪಕ್ಕಕ್ಕಿಟ್ಟು ಓದಲೇಬೇಕು.  ಈ ಸಲ ಏನಾದರೂ ಸರಿ ಉತ್ತಮ ಅಂಕಗಳನ್ನು ಪಡೆದೇ ತೀರುತ್ತೇನೆ"ಎಂದು ಕಾರ್ಯ ಸಿದ್ದಿಗಾಗಿ ಹೊರಟು ನಿಂತ ಕಲಿಯಂತೆ ಪರೀಕ್ಷೆ ಬರೆಯಲು ನಿಂತಿದ್ದೀರಲ್ಲವೇ? ತುಂಬಾ ಸಂತೋಷ. ಹೌದು ! ನಾವೇನಾದರೂ ಉತ್ತಮ ಕೆಲಸಗಳನ್ನು ಮಾಡ ಹೊರಟರೆ, ಅದರ ಬೆನ್ನು ಬಿದ್ದು ಮಾಡಿದಾಗ ಜಯ ಖಂಡಿತ . ನಿಮ್ಮ ಪರಿಶ್ರಮ ವ್ಯರ್ಥವಾಗದು. 
    ಆದರೆ ಇನ್ನೂ ಕೆಲವರು ವಿದ್ಯಾರ್ಥಿಗಳಿದ್ದಾರೆ, ಅವರಿಗೆ ನಾವು ಹತ್ತನೇ ತರಗತಿ ಎಂಬುದೇ ಮರೆತು ಹೋಗಿದೆ. ಇನ್ನೂ ಕೂಡ ಚಿಕ್ಕ ಮಕ್ಕಳ ಹಾಗೆ ಹೊಡೆದಾಡಿಕೊಂಡು,  ಬೈದಾಡಿಕೊಂಡು ಓದುವುದನ್ನು ಮರೆತು "ಹೇಗೂ ನಾನು ಪಾಸ್ ಆಗಬಹುದು,  ಪಾಸಾದರೆ ಸಾಕು" ಅಂದುಕೊಂಡು ಒಂದೇ ಚೂರು ಪುಸ್ತಕವನ್ನು ನೋಡದೆ ಇರುವವರು ಇದ್ದಾರೆ. ಹಾಗೆಯೇ ಉಳಿದವರು ಕೆಲವರು "ಅಂಕಗಳು ಬಂದರೆ ಬರಲಿ, ಆದರೆ ಹೋಗಲಿ" ಎಂದು ಕೂಡಾ ಇದ್ದಾರೆ.  ದಯವಿಟ್ಟು ಇನ್ನು 30 ದಿನಗಳಷ್ಟೇ ಬಾಕಿ ಇದೆ. ಅಷ್ಟು ದಿನಗಳನ್ನು ಸರಿಯಾಗಿ ನಿಮ್ಮ ಬದುಕಿನಲ್ಲಿ ಬಳಸಿಕೊಳ್ಳಿ.  ದಿನಕೊಂದು ಅಂಕಗಳ ಉತ್ತರವನ್ನು ಕಲಿತರೂ ಕೂಡ 30 ದಿನಕ್ಕೆ 30 ಅಂಕಗಳ ಪ್ರಶ್ನೆಗಳಿಗೆ ಉತ್ತರಗಳನ್ನು ಕಲಿಯಬಹುದು ಎಂಬುದನ್ನು ಮನನ ಮಾಡಿಕೊಳ್ಳಿ.  ಬದುಕಿನಲ್ಲಿ ಯಾವಾಗ ಏನು ಟ್ವಿಸ್ಟ್ ಬೇಕಾದರೂ ಬರಬಹುದು. ನಾವು ಬದುಕಿನಲ್ಲಿ ಬರುವಂತಹ ಒಂದು ಟ್ವಿಸ್ಟ್ ಈ ಎಸ್ ಎಸ್ ಎಲ್ ಸಿ ಪರೀಕ್ಷೆ.  ಇದರ ಅಂಕಗಳು ನಮ್ಮ ಬದುಕಿನ ದಾರಿಯನ್ನು ಬದಲಿಸಬಹುದು ನೆನಪಿಡಿ. 
    ಎಸ್ ಎಸ್ ಎಲ್ ಸಿ ಅಂಕಗಳೇ ನಮ್ಮ ಬದುಕು ಖಂಡಿತಾ ಅಲ್ಲ,  ಆದರೆ ಎಸ್ ಎಸ್ ಎಲ್ ಸಿ ಅಂಕಗಳಿಗೆ ಕೂಡ ನಮ್ಮ ಬದುಕನ್ನು ಬದಲಿಸುವಂತಹ ಸಾಮರ್ಥ್ಯವಿದೆ ಎಂಬುದನ್ನು ತಿಳಿದುಕೊಳ್ಳಿ.  ಆದ್ದರಿಂದ ನಿಮ್ಮೆಲ್ಲ ಶಿಕ್ಷಕರು ನಿಮ್ಮನ್ನು ಉತ್ತೀರ್ಣಗೊಳಿಸಲು ನಿಮ್ಮ ಅಂಕಗಳನ್ನು ಜಾಸ್ತಿ ಗೊಳಿಸಲು ತಮ್ಮಿಂದ ಎಷ್ಟು ಸಾಧ್ಯವೊ ಅಷ್ಟು ಕಷ್ಟ ಪಡುತ್ತಿದ್ದಾರೆ. ಅದೇ ಕಷ್ಟವನ್ನು ನಿಮ್ಮಿಂದಲೂ ನಿರೀಕ್ಷಿಸುತ್ತಿದ್ದಾರೆ.  ಅದನ್ನು ನೀವು ನಿಮ್ಮ ಅಂಕಗಳ ಮೂಲಕ ತೋರಿಸಬೇಕೆಂದು ಪೋಷಕರು ಕೂಡ ಬಯಸುತ್ತಿದ್ದಾರೆ.  ಇಷ್ಟು ವರ್ಷದ ತಮ್ಮ ಕಷ್ಟಕ್ಕೆ ತಮ್ಮ ನಷ್ಟ ಯಾವುದನ್ನು ಕೊಡಲಿಕ್ಕೆ ಸದಾ ಪೋಷಕರು ಈ ವರ್ಷ "ಉತ್ತಮ ಅಂಕ ಬರಲಿ" ಎಂದು ಎಂದು ಹಾರೈಸುತಿದ್ದಾರೆ. ಇದೆಲ್ಲವೂ ಕೂಡ ನಿಮಗೆ ತಿಳಿದಿರಬೇಕಾದ ವಿಷಯ. 
       ನೀವೇನು ಕೆಟ್ಟವರಲ್ಲ , ನಿಮಗೆ ಎಲ್ಲ ವಿಚಾರಗಳ ಬಗ್ಗೆಯೂ ತಿಳಿದಿದೆ.  ಎಲ್ಲ ಶಿಕ್ಷಕರ ಗುಣ ನಡತೆಗಳು ನಿಮಗೆ ತಿಳಿದಿದೆ.  ಯಾವ ಶಿಕ್ಷಕರು ಹೇಗೆ? ಯಾವ ಶಿಕ್ಷಕರು ಒಳ್ಳೆಯವರು,  ಯಾವ ಶಿಕ್ಷಕರ ಮನಸ್ಸಿನ ಆಲೋಚನೆಗಳು ಚೆನ್ನಾಗಿಲ್ಲ , ಯಾವ ಶಿಕ್ಷಕರು ಉತ್ತಮವಾಗಿ ನಮ್ಮನ್ನು ತಯಾರಿಗೊಳಿಸುತ್ತಾರೆ,  ಎಲ್ಲಾ ಶಿಕ್ಷಕರನ್ನು (ಕೆಲವರನ್ನು ಹೆಸರು ಕೂಡ ಇಟ್ಟು) ಅವರನ್ನು ಜಡ್ಜ್ ಮಾಡುವ  ಕೆಪ್ಯಾಸಿಟಿ ನಿಮಗಿದೆ.  ಹಾಗಾಗಿ ಮೊದಲು ನಿಮ್ಮ ಎಲ್ಲಾ ಶಿಕ್ಷಕರ ಶ್ರಮವನ್ನು ಅರಿತುಕೊಳ್ಳಿ.  ತಮ್ಮ ಮನೆ ಮಕ್ಕಳು ಎಲ್ಲವನ್ನು ಬಿಟ್ಟು ಬೆಳಿಗ್ಗೆ,  ಸಂಜೆ, ರಜಾ ದಿನಗಳು,  ಭಾನುವಾರ ಎಲ್ಲವೂ ಕೂಡ ಓಟಿ ಇಲ್ಲದೆ ಓವರ್ ಟೈಮ್ ಕೆಲಸ ಮಾಡುವವರು ಇವರು.  
          ಶಿಕ್ಷಕರು , ಅದು ಕೂಡ ನಿಮಗಾಗಿ ಮತ್ತು  ನಿಮ್ಮ ಉತ್ತಮ ಅಂಕಗಳಿಗಾಗಿ!! ಇದರಿಂದ ಶಿಕ್ಷಕರಿಗೆ ಏನು ಸಿಗುತ್ತದೆ ಎಂದು ನೀವು ಕೇಳುವಿರಾದರೆ ಕೇವಲ ಸಂತೋಷ ಅಷ್ಟೇ. "ನನ್ನ ವಿದ್ಯಾರ್ಥಿಯೊಬ್ಬ ಉತ್ತಮ ಅಂಕಗಳನ್ನು ನನ್ನ ವಿಷಯದಲ್ಲಿ ಪಡೆದು ಉತ್ತೀರ್ಣನಾದ"  ಎಂದು ಹೇಳಿಕೊಳ್ಳುವ ಖುಷಿ ಮಾತ್ರವೇ ಹೊರತು ಇನ್ನೇನು ಇಲ್ಲ. ಇಡೀ ವರ್ಷ ಶ್ರಮಪಟ್ಟು ಕೊನೆಗೆ ಕಡಿಮೆ ಅಂಕ ಗಳಿಸಿದರೆ ಅದರಿಂದ ಎಲ್ಲರಿಗೂ ಬೇಸರವಾಗುತ್ತದೆ.  ಅದರ ಬದಲು ಸ್ವಲ್ಪ ಓದಿ ಉತ್ತಮ ಅಂಕಗಳನ್ನು ಪಡೆದರೆ ಎಲ್ಲರಿಗೂ ಸಂತೋಷವೇ ಅಲ್ಲವೇ? ಹಾಗಂತ ನನ್ನ ಕೈಯಲ್ಲಿ ಸಾಧ್ಯವೇ ಇಲ್ಲ ಎಂದಲ್ಲ,  ಯಾರು ಸಾಧನೆ ಮಾಡಿದರು ಸಾಧನೆ ಸಾಧಕನ ಸ್ವತ್ತಲ್ಲವೇ? ಅದು ಯಾವಾಗ ಯಾರಿಗೆ ಬೇಕಾದರೂ ಒಲಿಯಬಹುದು.  ಎಲ್ಲೋ ಒಂದು ಮೂಲೆಯಲ್ಲಿ ಸರವನ್ನು ಮಾರುತ್ತಿದ್ದ ಮೋನ ಈಗ ಮೊನಾಲಿಸಾ ಆಗಿ ದೇಶಕ್ಕೆ ಪ್ರಸಿದ್ಧಿ ಪಡೆಯಲಿಲ್ಲವೇ?  ಹಾಗೆ ಮುಂದೆ ನೀವು ಕೂಡ ಒಂದು ದಿನ ದೇಶದ ಉತ್ತಮ ಪ್ರಜೆಗಳಾಗಿ ಇಡೀ ದೇಶದ ಜನರ ಮನ ಗೆಲ್ಲಬಹುದು!!
    ಇದೀಗ ನಿಮ್ಮ ಮುಂದೆ ನಿಮ್ಮ ಬದುಕಿನ ಒಂದು ಯುದ್ಧ ನಿಂತಿದೆ.  ಆಯುಧವನ್ನು ನೀವು ಗೆಲ್ಲಲೇ ಬೇಕು.  ಅದಕ್ಕೆ ನೀವು ಖಡ್ಗವನ್ನು ಬಳಸಬೇಕೆಂದಿಲ್ಲ.  ಬದಲಾಗಿ ಪೆನ್ನಿನ ಮೂಲಕ ನಿಮ್ಮ ಅರಿವನ್ನು ಬಳಸಬೇಕಾಗಿದೆ. ಆ ಬಳಸುವಿಕೆಗೆ ನೀವು ತಯಾರಾಗಬೇಕಿದೆ.  ನಿಮ್ಮನ್ನು ಪೋಷಕರು ಮತ್ತು ಶಿಕ್ಷಕರು ಸೇರಿ ಅದಕ್ಕೆ ತಯಾರುಗೊಳಿಸುತ್ತಿದ್ದಾರೆ.  ಅದಕ್ಕಾಗಿ ನೀವು ಅವರೊಡನೆ ಸ್ಪಂದಿಸುತ್ತಾ , ಉತ್ತಮವಾಗಿ ಕಲಿತು ಉತ್ತಮ ಅಂಕಗಳನ್ನು ಪಡೆದು,  ಮುಂದೆ ನಮ್ಮ ಭಾರತವನ್ನು ಆಳುವವರು ನೀವಾಗಲಿರುವ ಕಾರಣ ದೇಶವನ್ನು ಉತ್ತಮವಾಗಿ ಕಟ್ಟಲು ಶ್ರಮವನ್ನು ಪಡಬೇಕು. ಅದಕ್ಕಾಗಿ ಉತ್ತಮ ಆಲೋಚನೆಗಳನ್ನು ಬೆಳೆಸಿಕೊಂಡು,  ಮುಂದೆ ಬರುವ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದು,  ನಿಮ್ಮ ಪೋಷಕರಿಗೂ ಶಾಲೆಗೂ ಹಾಗೂ ಶಿಕ್ಷಕರಿಗೂ ಕೀರ್ತಿಯನ್ನು ತನ್ನಿ ಎಂದು ಹೇಳುತ್ತಾ ಚೆನ್ನಾಗಿ ಪರೀಕ್ಷೆ ಬರೆಯಿರಿ ಮಕ್ಕಳೇ..... ಆಲ್ ದ ಬೆಸ್ಟ್...
@ಹನಿಬಿಂದು@
20.02.2025

ಚಿಟ್ಟೆಯಾಗಬೇಕಿದೆ

ಒಂದು ರಾತ್ರಿ

ಬಂತು ಬಂತು ಮಳೆ ಬಂತು
ಜೊತೆಯಲಿ ಗಾಳಿಯನು ತಂತು 
ಹರಡಿದ ಬಟ್ಟೆಯು ಜಾರಿತು ಕೆಳಗೆ
ಬಿಡಿಸಿಟ್ಟ ಮಂದರಿ ಹಾರಿತು ಹೊರಗೆ

ಗುಡು ಗುಡು ಸಿಡಿಲು ಬಡಿಯುತಲಿರಲು
ಸುಡು ಸುಡು ಕಾಫಿಯ ಕುಡಿಯುತಲಿರಲು
ಬದಿಯಲಿ ಮಕ್ಕಳು ಕುಳಿತಿರಲು
ಗಡಿಗೆಯ ತುಂಬಾ ಗೆಣಸಿನ ಹೋಳು 

ಚಪ್ಪರಿಸಿ ತಿಂದರು ಎಲ್ಲಾ ಮಕ್ಕಳು
ಕಥೆಯನು ಹೇಳುತ ಅಜ್ಜಿಯೂ ನಕ್ಕಳು
ಕಥೆಯು ತಾ ಕೊನೆಯತ್ತ ಬಂತು
ಗೆಣಸಿನ ಹೋಳು ಮುಗಿದಾಯ್ತು

ಕಾಫಿಯ ಲೋಟವ ತೊಳೆದಾಯ್ತು
ಕರೆಂಟು ಹೋಗಿ ಟೈಮಾಯ್ತು 
ಮಲಗಲು ಸೆಕೆಯೂ ಬಿಡದಾಯ್ತು
ಬಾಗಿಲು ತೆಗೆಯಲು ಭಯವಾಯ್ತು
@ಹನಿಬಿಂದು@

ಶುಕ್ರವಾರ, ಮಾರ್ಚ್ 14, 2025

ಶಿಶುಗೀತೆ

ಶಿಶು ಗೀತೆ - ಊಟ

ಅಮ್ಮನು ಮಾಡಿದ ಊಟವು ಬೇಡ
ಪಿಜ್ಜಾ ಬರ್ಗರ್ ಬೇಕಮ್ಮ
ತಮ್ಮನು ಹೇಳಿದ ನಿನ್ನಯ ಊಟಕೆ
ನೂಡಲ್ಸ್ ರುಚಿಯೂ ಇಲ್ಲಮ್ಮ

ಮಕ್ಕಳೇ ಕೇಳಿರಿ ತಿನ್ನಲು ಬಾರದು
ಹೊರಗಿನ ರುಚಿಕರ ಊಟವನು
ವಿಷವನು ಸುರಿದು ತಂದಿಹರದಕೆ
ಒಳ್ಳೆಯದಲ್ಲ ದೇಹಕ್ಕೆ

ಯಾರದು ಹಾಗೆ ಮಕ್ಕಳು ಎಂದರೆ
ಪ್ರಾಣವೇ ಅಲ್ಲವೇ ಎಲ್ಲರಿಗೆ
ರುಚಿಕರ ಊಟವ ಮಾಡಿಹರೆಮಗೆ
ಸುಳ್ಳನು ಹೇಳಲು ಬೇಡಮ್ಮ

ಮಕ್ಕಳೇ ಕೇಳಿರಿ ದುಡ್ಡಿನ ಆಸೆಗೆ
ರುಚಿಕರ ರಾಸಾಯನಿಕ ಸುರಿದಿಹರು
ಮಕ್ಕಳು ಹಿರಿಯರು ಎಲ್ಲರಿಗೂನು
ಹೃದಯದ ತೊಂದರೆ ತಂದಿಹರು

 ಕರಗದು ಊಟ ಹೊಟ್ಟೆಯ ನೋವು
ಕ್ಯಾನ್ಸರ್ ಬರುವುದು ಕೇಳಿಲ್ಲಿ
ಬೇಡದ ಎಣ್ಣೆಯ ಬಳಸುತ ಕರಿದು
ಆರೋಗ್ಯ ಹಾಳು ಕಾಣಿಲ್ಲಿ 

ಬೇಡವೇ ಬೇಡ ತಂಪು ಪಾನೀಯ
ಸಕ್ಕರೆ ಅಂಶ ಹೆಚ್ಚಲ್ಲಿ
ಕರಿದ ಪದಾರ್ಥದಿ ಕೊಬ್ಬಿನ ಅಂಶ 
ದಡೂತಿ ದೇಹವು ನೋಡಲ್ಲಿ

ಅಮ್ಮನ ಕೈ ರುಚಿ ನಿರ್ಮಲ ಅಡುಗೆ
ಮಗುವೇ ಹೇಳು ತಿಂದಿಲ್ಲಿ 
ಕೊಳಕು ನೀರು ಅಶುದ್ಧ ಆಹಾರ
ಹೊರಗಡೆ ನೀನು ಹೋದಲ್ಲಿ

ರೆಡಿಮೇಡ್ ಊಟ ಒಳ್ಳೆಯದಲ್ಲ
ಬಿಸಿ ಬಿಸಿ ತಿನ್ನು ಉತ್ತಮವು 
ಮನೆಯಲೇ ಊಟ ಆರೋಗ್ಯ ಗುಟ್ಟು 
ಹೊರಗಡೆ ಎಲ್ಲಾ ಹೇಳಿಲ್ಲಿ
@ಹನಿಬಿಂದು@
14.03.2025

ಪ್ರಾರ್ಥನೆ

ಪ್ರಾರ್ಥನೆ
ದೇವ ನಿನ್ನ ನಂಬಿ ನಾನು ಬದುಕಿ ಬಾಳುವೆ
ನಿನ್ನ ದಯೆಯ ನಮಗೆ ನೀಡು ಹರಸೆ ಬೇಡುವೆ//

ನಿನ್ನ ಕರುಣೆಯಿಂದ ಎಲ್ಲ ಯಶವು ಕಾಣಲಿ
ನಿನ್ನ ಶಕ್ತಿಯೊಲವು ಸೇರಿ ಬದುಕು ಸಾಗಲಿ//

ನಿತ್ಯ ನಾನು ಬೇಡುವೆನು ಕಾಯೋ ನಮ್ಮನು
ಸತ್ಯ ಶಾಂತಿ ಕೀರ್ತಿ ಕೊಟ್ಟು ಸಲಹು ನಮ್ಮನು//
@ಹನಿಬಿಂದು@
23.05.2022

SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೊಂದು ಪತ್ರ

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೊಂದು ಪತ್ರ 

   ಹಲೋ ವಿದ್ಯಾರ್ಥಿಗಳೇ!  ಎಲ್ಲರೂ ಹೇಗಿದ್ದೀರಾ? ಪರೀಕ್ಷೆಗಂತೂ ನಿಮ್ಮ ತಯಾರಿ ಭರ್ಜರಿಯಾಗಿ ನಡೆದಿರಬೇಕಲ್ವೇ! ತುಂಬಾ ತುಂಬಾ ಓದ್ತಾ ಇದ್ದೀರಾ?  ಅದರಲ್ಲೂ ತುಂಬಾ ಯೋಚಿಸಿ " ನಾನು ಅವರಿಗಿಂತ ಜಾಸ್ತಿ ಅಂಕಗಳನ್ನು ಪಡೆಯಬೇಕು,  ಇವರಿಗಿಂತ ಜಾಸ್ತಿ ಅಂಕಗಳನ್ನು ಪಡೆಯಬೇಕು" ಮೊದಲಾದ ಗುರಿಗಳನ್ನು ಇಟ್ಟುಕೊಂಡು ರಾತ್ರಿ ಹಗಲು ನಿದ್ದೆಯನ್ನು,  ಊಟವನ್ನು ಲೆಕ್ಕಿಸದೆ ಓದ್ತಾ ಇದ್ದೀರಾ? ಟಿವಿ ಮೊಬೈಲ್ ಎಲ್ಲವನ್ನು ಪಕ್ಕಕ್ಕಿಟ್ಟು ಓದಲೇಬೇಕು.  ಈ ಸಲ ಏನಾದರೂ ಸರಿ ಉತ್ತಮ ಅಂಕಗಳನ್ನು ಪಡೆದೇ ತೀರುತ್ತೇನೆ"ಎಂದು ಕಾರ್ಯ ಸಿದ್ದಿಗಾಗಿ ಹೊರಟು ನಿಂತ ಕಲಿಯಂತೆ ಪರೀಕ್ಷೆ ಬರೆಯಲು ನಿಂತಿದ್ದೀರಲ್ಲವೇ? ತುಂಬಾ ಸಂತೋಷ. ಹೌದು ! ನಾವೇನಾದರೂ ಉತ್ತಮ ಕೆಲಸಗಳನ್ನು ಮಾಡ ಹೊರಟರೆ, ಅದರ ಬೆನ್ನು ಬಿದ್ದು ಮಾಡಿದಾಗ ಜಯ ಖಂಡಿತ . ನಿಮ್ಮ ಪರಿಶ್ರಮ ವ್ಯರ್ಥವಾಗದು. 
    ಆದರೆ ಇನ್ನೂ ಕೆಲವರು ವಿದ್ಯಾರ್ಥಿಗಳಿದ್ದಾರೆ, ಅವರಿಗೆ ನಾವು ಹತ್ತನೇ ತರಗತಿ ಎಂಬುದೇ ಮರೆತು ಹೋಗಿದೆ. ಇನ್ನೂ ಕೂಡ ಚಿಕ್ಕ ಮಕ್ಕಳ ಹಾಗೆ ಹೊಡೆದಾಡಿಕೊಂಡು,  ಬೈದಾಡಿಕೊಂಡು ಓದುವುದನ್ನು ಮರೆತು "ಹೇಗೂ ನಾನು ಪಾಸ್ ಆಗಬಹುದು,  ಪಾಸಾದರೆ ಸಾಕು" ಅಂದುಕೊಂಡು ಒಂದೇ ಚೂರು ಪುಸ್ತಕವನ್ನು ನೋಡದೆ ಇರುವವರು ಇದ್ದಾರೆ. ಹಾಗೆಯೇ ಉಳಿದವರು ಕೆಲವರು "ಅಂಕಗಳು ಬಂದರೆ ಬರಲಿ, ಆದರೆ ಹೋಗಲಿ" ಎಂದು ಕೂಡಾ ಇದ್ದಾರೆ.  ದಯವಿಟ್ಟು ಇನ್ನು 30 ದಿನಗಳಷ್ಟೇ ಬಾಕಿ ಇದೆ. ಅಷ್ಟು ದಿನಗಳನ್ನು ಸರಿಯಾಗಿ ನಿಮ್ಮ ಬದುಕಿನಲ್ಲಿ ಬಳಸಿಕೊಳ್ಳಿ.  ದಿನಕೊಂದು ಅಂಕಗಳ ಉತ್ತರವನ್ನು ಕಲಿತರೂ ಕೂಡ 30 ದಿನಕ್ಕೆ 30 ಅಂಕಗಳ ಪ್ರಶ್ನೆಗಳಿಗೆ ಉತ್ತರಗಳನ್ನು ಕಲಿಯಬಹುದು ಎಂಬುದನ್ನು ಮನನ ಮಾಡಿಕೊಳ್ಳಿ.  ಬದುಕಿನಲ್ಲಿ ಯಾವಾಗ ಏನು ಟ್ವಿಸ್ಟ್ ಬೇಕಾದರೂ ಬರಬಹುದು. ನಾವು ಬದುಕಿನಲ್ಲಿ ಬರುವಂತಹ ಒಂದು ಟ್ವಿಸ್ಟ್ ಈ ಎಸ್ ಎಸ್ ಎಲ್ ಸಿ ಪರೀಕ್ಷೆ.  ಇದರ ಅಂಕಗಳು ನಮ್ಮ ಬದುಕಿನ ದಾರಿಯನ್ನು ಬದಲಿಸಬಹುದು ನೆನಪಿಡಿ. 
    ಎಸ್ ಎಸ್ ಎಲ್ ಸಿ ಅಂಕಗಳೇ ನಮ್ಮ ಬದುಕು ಖಂಡಿತಾ ಅಲ್ಲ,  ಆದರೆ ಎಸ್ ಎಸ್ ಎಲ್ ಸಿ ಅಂಕಗಳಿಗೆ ಕೂಡ ನಮ್ಮ ಬದುಕನ್ನು ಬದಲಿಸುವಂತಹ ಸಾಮರ್ಥ್ಯವಿದೆ ಎಂಬುದನ್ನು ತಿಳಿದುಕೊಳ್ಳಿ.  ಆದ್ದರಿಂದ ನಿಮ್ಮೆಲ್ಲ ಶಿಕ್ಷಕರು ನಿಮ್ಮನ್ನು ಉತ್ತೀರ್ಣಗೊಳಿಸಲು ನಿಮ್ಮ ಅಂಕಗಳನ್ನು ಜಾಸ್ತಿ ಗೊಳಿಸಲು ತಮ್ಮಿಂದ ಎಷ್ಟು ಸಾಧ್ಯವೊ ಅಷ್ಟು ಕಷ್ಟ ಪಡುತ್ತಿದ್ದಾರೆ. ಅದೇ ಕಷ್ಟವನ್ನು ನಿಮ್ಮಿಂದಲೂ ನಿರೀಕ್ಷಿಸುತ್ತಿದ್ದಾರೆ.  ಅದನ್ನು ನೀವು ನಿಮ್ಮ ಅಂಕಗಳ ಮೂಲಕ ತೋರಿಸಬೇಕೆಂದು ಪೋಷಕರು ಕೂಡ ಬಯಸುತ್ತಿದ್ದಾರೆ.  ಇಷ್ಟು ವರ್ಷದ ತಮ್ಮ ಕಷ್ಟಕ್ಕೆ ತಮ್ಮ ನಷ್ಟ ಯಾವುದನ್ನು ಕೊಡಲಿಕ್ಕೆ ಸದಾ ಪೋಷಕರು ಈ ವರ್ಷ "ಉತ್ತಮ ಅಂಕ ಬರಲಿ" ಎಂದು ಎಂದು ಹಾರೈಸುತಿದ್ದಾರೆ. ಇದೆಲ್ಲವೂ ಕೂಡ ನಿಮಗೆ ತಿಳಿದಿರಬೇಕಾದ ವಿಷಯ. 
       ನೀವೇನು ಕೆಟ್ಟವರಲ್ಲ , ನಿಮಗೆ ಎಲ್ಲ ವಿಚಾರಗಳ ಬಗ್ಗೆಯೂ ತಿಳಿದಿದೆ.  ಎಲ್ಲ ಶಿಕ್ಷಕರ ಗುಣ ನಡತೆಗಳು ನಿಮಗೆ ತಿಳಿದಿದೆ.  ಯಾವ ಶಿಕ್ಷಕರು ಹೇಗೆ? ಯಾವ ಶಿಕ್ಷಕರು ಒಳ್ಳೆಯವರು,  ಯಾವ ಶಿಕ್ಷಕರ ಮನಸ್ಸಿನ ಆಲೋಚನೆಗಳು ಚೆನ್ನಾಗಿಲ್ಲ , ಯಾವ ಶಿಕ್ಷಕರು ಉತ್ತಮವಾಗಿ ನಮ್ಮನ್ನು ತಯಾರಿಗೊಳಿಸುತ್ತಾರೆ,  ಎಲ್ಲಾ ಶಿಕ್ಷಕರನ್ನು (ಕೆಲವರನ್ನು ಹೆಸರು ಕೂಡ ಇಟ್ಟು) ಅವರನ್ನು ಜಡ್ಜ್ ಮಾಡುವ  ಕೆಪ್ಯಾಸಿಟಿ ನಿಮಗಿದೆ.  ಹಾಗಾಗಿ ಮೊದಲು ನಿಮ್ಮ ಎಲ್ಲಾ ಶಿಕ್ಷಕರ ಶ್ರಮವನ್ನು ಅರಿತುಕೊಳ್ಳಿ.  ತಮ್ಮ ಮನೆ ಮಕ್ಕಳು ಎಲ್ಲವನ್ನು ಬಿಟ್ಟು ಬೆಳಿಗ್ಗೆ,  ಸಂಜೆ, ರಜಾ ದಿನಗಳು,  ಭಾನುವಾರ ಎಲ್ಲವೂ ಕೂಡ ಓಟಿ ಇಲ್ಲದೆ ಓವರ್ ಟೈಮ್ ಕೆಲಸ ಮಾಡುವವರು ಇವರು.  
          ಶಿಕ್ಷಕರು , ಅದು ಕೂಡ ನಿಮಗಾಗಿ ಮತ್ತು  ನಿಮ್ಮ ಉತ್ತಮ ಅಂಕಗಳಿಗಾಗಿ!! ಇದರಿಂದ ಶಿಕ್ಷಕರಿಗೆ ಏನು ಸಿಗುತ್ತದೆ ಎಂದು ನೀವು ಕೇಳುವಿರಾದರೆ ಕೇವಲ ಸಂತೋಷ ಅಷ್ಟೇ. "ನನ್ನ ವಿದ್ಯಾರ್ಥಿಯೊಬ್ಬ ಉತ್ತಮ ಅಂಕಗಳನ್ನು ನನ್ನ ವಿಷಯದಲ್ಲಿ ಪಡೆದು ಉತ್ತೀರ್ಣನಾದ"  ಎಂದು ಹೇಳಿಕೊಳ್ಳುವ ಖುಷಿ ಮಾತ್ರವೇ ಹೊರತು ಇನ್ನೇನು ಇಲ್ಲ. ಇಡೀ ವರ್ಷ ಶ್ರಮಪಟ್ಟು ಕೊನೆಗೆ ಕಡಿಮೆ ಅಂಕ ಗಳಿಸಿದರೆ ಅದರಿಂದ ಎಲ್ಲರಿಗೂ ಬೇಸರವಾಗುತ್ತದೆ.  ಅದರ ಬದಲು ಸ್ವಲ್ಪ ಓದಿ ಉತ್ತಮ ಅಂಕಗಳನ್ನು ಪಡೆದರೆ ಎಲ್ಲರಿಗೂ ಸಂತೋಷವೇ ಅಲ್ಲವೇ? ಹಾಗಂತ ನನ್ನ ಕೈಯಲ್ಲಿ ಸಾಧ್ಯವೇ ಇಲ್ಲ ಎಂದಲ್ಲ,  ಯಾರು ಸಾಧನೆ ಮಾಡಿದರು ಸಾಧನೆ ಸಾಧಕನ ಸ್ವತ್ತಲ್ಲವೇ? ಅದು ಯಾವಾಗ ಯಾರಿಗೆ ಬೇಕಾದರೂ ಒಲಿಯಬಹುದು.  ಎಲ್ಲೋ ಒಂದು ಮೂಲೆಯಲ್ಲಿ ಸರವನ್ನು ಮಾರುತ್ತಿದ್ದ ಮೋನ ಈಗ ಮೊನಾಲಿಸಾ ಆಗಿ ದೇಶಕ್ಕೆ ಪ್ರಸಿದ್ಧಿ ಪಡೆಯಲಿಲ್ಲವೇ?  ಹಾಗೆ ಮುಂದೆ ನೀವು ಕೂಡ ಒಂದು ದಿನ ದೇಶದ ಉತ್ತಮ ಪ್ರಜೆಗಳಾಗಿ ಇಡೀ ದೇಶದ ಜನರ ಮನ ಗೆಲ್ಲಬಹುದು!!
    ಇದೀಗ ನಿಮ್ಮ ಮುಂದೆ ನಿಮ್ಮ ಬದುಕಿನ ಒಂದು ಯುದ್ಧ ನಿಂತಿದೆ.  ಆಯುಧವನ್ನು ನೀವು ಗೆಲ್ಲಲೇ ಬೇಕು.  ಅದಕ್ಕೆ ನೀವು ಖಡ್ಗವನ್ನು ಬಳಸಬೇಕೆಂದಿಲ್ಲ.  ಬದಲಾಗಿ ಪೆನ್ನಿನ ಮೂಲಕ ನಿಮ್ಮ ಅರಿವನ್ನು ಬಳಸಬೇಕಾಗಿದೆ. ಆ ಬಳಸುವಿಕೆಗೆ ನೀವು ತಯಾರಾಗಬೇಕಿದೆ.  ನಿಮ್ಮನ್ನು ಪೋಷಕರು ಮತ್ತು ಶಿಕ್ಷಕರು ಸೇರಿ ಅದಕ್ಕೆ ತಯಾರುಗೊಳಿಸುತ್ತಿದ್ದಾರೆ.  ಅದಕ್ಕಾಗಿ ನೀವು ಅವರೊಡನೆ ಸ್ಪಂದಿಸುತ್ತಾ , ಉತ್ತಮವಾಗಿ ಕಲಿತು ಉತ್ತಮ ಅಂಕಗಳನ್ನು ಪಡೆದು,  ಮುಂದೆ ನಮ್ಮ ಭಾರತವನ್ನು ಆಳುವವರು ನೀವಾಗಲಿರುವ ಕಾರಣ ದೇಶವನ್ನು ಉತ್ತಮವಾಗಿ ಕಟ್ಟಲು ಶ್ರಮವನ್ನು ಪಡಬೇಕು. ಅದಕ್ಕಾಗಿ ಉತ್ತಮ ಆಲೋಚನೆಗಳನ್ನು ಬೆಳೆಸಿಕೊಂಡು,  ಮುಂದೆ ಬರುವ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದು,  ನಿಮ್ಮ ಪೋಷಕರಿಗೂ ಶಾಲೆಗೂ ಹಾಗೂ ಶಿಕ್ಷಕರಿಗೂ ಕೀರ್ತಿಯನ್ನು ತನ್ನಿ ಎಂದು ಹೇಳುತ್ತಾ ಚೆನ್ನಾಗಿ ಪರೀಕ್ಷೆ ಬರೆಯಿರಿ ಮಕ್ಕಳೇ..... ಆಲ್ ದ ಬೆಸ್ಟ್...
@ಹನಿಬಿಂದು@
20.02.2025

ಬಲದೆ

ಬಲದೆ ಪಾರ್ ಬಲದೆ
ಈ ಎನ್ನ ಮೊಕೆದ ಸಿಂಗಾರಿದೆ 
ತೂಲದೆ ಏನನ್ ತೂಲದೇ 
ಯಾನೆ ನಿನ್ನ ಆಪಿನ ಕಂಡನಿದೆ

ಬಾರೀ ಶೋಕುಡೇ ಪಿದಾಡ್ತ್ ಬೈದ ಅಡೆಗ್ 
ಭೂರೀ ಭೋಜನ ತಿನಿಯರೇ ಬಲೆ ಇಡಗ್
@ಹನಿಬಿಂದು@
01.03.2025

ಹನಿ ಕವನ

ಹನಿ ಕವನ

ದುಪ್ಪಟ್ಟು, ಮೂರು ಪಟ್ಟು 
ಹಣಕ್ಕೆ ಮಾರಿದೆ, ಹಣ ಪಡೆದೆ 
ಎಂದು ಬೀಗಬೇಡ ಮನುಜಾ!
ಹಾಲಿನದ್ದು ಹಾಲಿಗೆ, 
ನೀರಿನದ್ದು ನೀರಿಗೆ!
ಮುಂದೊಂದು ದಿನ
ಆ ಹಣ ಹೋಗಲಿದೆ
ನೇರವಾಗಿ ದೊಡ್ಡ ಆಸ್ಪತ್ರೆಗೆ!!
@ಹನಿಬಿಂದು@
27.02.2025

ಭಾವಗೀತೆ ಭಾರತಿಗೆ

ಭಾವಗೀತೆ - ಭಾರತಿಗೆ

ಬಾಗಿ ನಮಿಸುವೆ ಭವ್ಯ ಮಾತೆಗೆ 
ಭರತ ಭೂಮಿಯ ಒಡತಿಗೆ
ಭಾವ ತುಂಬಿದ ಹೃದಯ ಪದಗಳ
ಮುಡಿಸಿ ಆರತಿ ದೇವಿಗೆ//

ಭಕ್ತಿ ಯುಕ್ತಿ ಶಕ್ತಿ ಬೆರೆಸುತ 
ವಿಶ್ವ ಶಾಂತಿಯ ಬೇಡುವೆ
ಭವ್ಯ ಮನದಿ ಬೇನೆ ಕಳೆಯಲು
ನಿತ್ಯ ಭಜಿಸಿ ಹಾಡುವೆ//

ಜಾತಿ ಭ್ರಾಂತಿ ಮರೆತು ಬಾಳಲು
ಪ್ರೀತಿ ಹೆಚ್ಚಲು ಕೋರುವೆ
ಸ್ಪೂರ್ತಿ  ಬದುಕನು ನೀಡು ಎನುತಲಿ
ರಾತ್ರಿ ಹಗಲು ಸ್ತುತಿಸುವೆ//

ನೀತಿ ನಿರ್ಮಲವಾಗಿ ಸೂಕ್ತಿಯು
ಸರ್ವರೆದೆಯನು ಮುಟ್ಟಲಿ
ಕೀರ್ತಿ  ಜಗದ ಮೂಲೆ ಮೂಲೆಗೂ
ಸರ್ವ ಸುಖವೂ ಹಬ್ಬಲಿ//
@ಹನಿಬಿಂದು@
27.02.2025

ವಿಶ್ರಾಂತಿ -1

ಮಾನವತೆಯ ಬಯಸುವವರಿಗೆ...
   
ನಾವು ಮಾನವರು.....ಮಾನವರಾಗಿರೋಣ....
    ಮಂಗನಿಂದ ಮಾನವರು ಎನ್ನುತ್ತಾರೆಯೇ ಹೊರತು ಮಂಗ ಮಾನವನಲ್ಲ. ಮಂಗನಿಗಿಂತ ಮಾನವನಲ್ಲಿ ಹೆಚ್ಚಿನ ವ್ಯತ್ಯಾಸವನ್ನು ಕಾಣಬೇಕು ಅಂದರೆ ಅದು "ಮಾನವತೆ". ಅದೇ ಇಲ್ಲ ಎಂದರೆ ನಮಗೂ ಮಂಗಗಳಿಗೂ ಏನು ವ್ಯತ್ಯಾಸ ಅಲ್ವೇ?
  ಹೌದು, ನಾವೆಲ್ಲಾ ಮಾನವತೆಯನ್ನು ಪರರಿಂದ ನಿರೀಕ್ಷಿಸುತ್ತೇವೆ. ನ್ಯಾಯ, ನೀತಿ, ಸತ್ಯ, ಧರ್ಮ, ಸಮಾನತೆ, ಪರಸ್ಪರ ಕೊಡು ಕೊಳ್ಳುವಿಕೆ, ಸುಖ, ಶಾಂತಿ, ನೆಮ್ಮದಿ ಎಲ್ಲವೂ ನಮಗೆ ಪರರಿಂದ ಬೇಕು. ಬೇರೆಯವರು ನಮ್ಮನ್ನು ಏನೂ ಹೇಳದೆ ನಮ್ಮಷ್ಟಕ್ಕೆ ನಾವು ಬಾಳಲು ಬಿಡಬೇಕು, ಬೇರೆಯವರು ನಮ್ಮನ್ನು ಪ್ರಶ್ನಿಸಬಾರದು, ಬೇರೆಯವರು ನಮ್ಮ ವೈಯಕ್ತಿಕ ವಿಷಯಗಳನ್ನು ಕೆದಕಬಾರದು. ಇವೆಲ್ಲವೂ ನಮ್ಮ ಬದುಕಿನಲ್ಲಿ ನಮ್ಮ ರೂಲ್ಸ್ ಮತ್ತು ಕಂಡಿಶನ್ಸ್. ಇವೆಲ್ಲಾ ಎಲ್ಲರೂ ಪರರಿಂದ ಬೇಕೆನ್ನುವ ಆಸೆ ಪಡುತ್ತಿರುವಾಗ ' ದೀಪದ ಅಡಿ ಕತ್ತಲು ' ಎಂಬ ಗಾದೆ ನೆನಪಾಗುತ್ತದೆ. ತನ್ನ ಕಾಲ ಬುಡಕ್ಕೆ ತಾನು ನೋಡಿಕೊಳ್ಳದ ಮನುಷ್ಯ ಪರರಿಗೆ ಕಾನೂನು ಕಟ್ಟಳೆ ವಿಧಿಸಿ ಅವರನ್ನು ಆಳಲು ಪ್ರಾರಂಭಿಸಿ ಬಿಡುತ್ತಾನೆ ಅಲ್ಲವೇ?
     ನಾನು ಯಾರು, ನಾನು ಹೇಗಿದ್ದೇನೆ? ನಾನು ಮಾಡುತ್ತಿರುವುದೆಲ್ಲ ಸರಿಯೇ? ನನ್ನಿಂದ ಪರರಿಗೆ ಏನಾದರೂ ತೊಂದರೆ ಆಗುತ್ತಿದೆಯೇ? ಮನೆಯಲ್ಲಿನ ಜಗಳಗಳಿಗೆ ನಾನೆ ಕಾರಣವೋ,  ನನ್ನಿಂದ ಏನು ತಪ್ಪುಗಳು ನಡೆದಿವೆ? ನನ್ನ ವ್ಯಕ್ತಿತ್ವವನ್ನು ನಾನು ಹೇಗೆ ಬದಲಾಯಿಸಿಕೊಳ್ಳಬೇಕು ಮೊದಲಾದ ಹಲವಾರು ವಿಷಯಗಳ ಬಗ್ಗೆ ನಾವು ಯೋಚನೆಯನ್ನೇ ಮಾಡುವುದಿಲ್ಲ. ಬದಲಾಗಿ ನಾನು ಚೆನ್ನಾಗಿದ್ದೇನೆ ಎಂಬ ಸರ್ಟಿಫಿಕೇಟ್ ಅನ್ನು ನಮಗೆ ನಾವೇ ಕೊಟ್ಟುಕೊಂಡು ಬಿಟ್ಟಿರುತ್ತೇವೆ. ಅದು ಸರಿಯೋ, ತಪ್ಪೋ ಎಂಬ ವಿಮರ್ಶೆಯನ್ನು ನಾವು ಮಾಡಬೇಕಾದದ್ದು ಸತ್ಯ. ನನ್ನ ತಪ್ಪು ಎಲ್ಲಿ. ನಾನು ಏನು ಮಾಡಬಹುದಾಗಿತ್ತು..? ಒಂದು ಘಟನೆ ನಡೆಯಲು ಮೂಲ ಕಾರಣ ಯಾರು? ಅದು ನನ್ನಿಂದವಾಗಿದೆಯೇ.. ಮೊದಲಾದ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಂಡು  ನಮ್ಮನ್ನು ನಾವು ತಿದ್ದಿಕೊಳ್ಳ ಬೇಕಾಗುತ್ತದೆ. 
ಮಕ್ಕಳು ದೇವರು. ಮಕ್ಕಳು ಹಾಳಾಗಿದ್ದಾರೆ ಎಂದರೆ ಪೋಷಕರ ಉದಾಸೀನ, ಅವರು ಸರಿಯಾಗಿ ಕೇರ್ ಮಾಡದೆ ಇರುವುದು ಕಾಣುತ್ತದೆ. ಮಕ್ಕಳ ಒಳ್ಳೆಯ ಬೆಳವಣಿಗೆಯ ಹಿಂದೆ ಅವರ ಪೋಷಕರ ಶ್ರಮ ಎಷ್ಟಿದೆಯೋ, ಮಕ್ಕಳ ಕೆಟ್ಟ ಕೆಲಸ, ಸೋಮಾರಿತನದ ಹಿಂದೆಯೂ ಪೋಷಕರ ಸೋಮಾರಿತನ ಕಾಣಬೇಕು. ಮಕ್ಕಳನ್ನು ದೂರುವ ಮೊದಲು ಪೋಷಕರು ನಾನು ತಪ್ಪಿದ್ದು ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. 
    ಒಂದು ಮನೆಯಿರಲಿ, ಶಾಲೆ ಇರಲಿ. ಸಂಸಾರ ಇರಲಿ, ಸಂಸ್ಕಾರ ತಪ್ಪಿದರೆ ಅದು ತಪ್ಪೇ. ಅದನ್ನು ಎಲ್ಲರೂ ಎಲ್ಲಾ ಕಡೆ ಖಂಡಿಸಿ, ಸರಿ ಪಡಿಸಲು ತಿಳಿಸಿ ಹೇಳಬೇಕು. ಇಲ್ಲದೆ ಹೋದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ. ಮುಂದೆ ಸಂಸ್ಕಾರ ಇಲ್ಲದ ಜನಾಂಗ ಸೃಷ್ಟಿ ಆಗುತ್ತದೆ. ರಸ್ತೆ ರಸ್ತೆಯಲ್ಲಿ ಹೆಣ ಬೀಳುವುದು, ಕೊಚ್ಚಿ ಕಡಿದು ಸಾಯಿಸುವುದು, ಡ್ರಗ್, ಮಾಫಿಯಾ, ದರೋಡೆಕೋರರು, ಕೊಲೆಗಾರರು, ಕಳ್ಳರು ಇಂಥವರೇ ಆಗುವುದು. ಪ್ರೀತಿ, ಸಂಸ್ಕಾರ ಕೊಟ್ಟು ಕಲಿತ ಯಾರೂ ಹೀಗಾಗಲು ಅವಕಾಶ ಇಲ್ಲ. 
    ಪ್ರತಿ ದಿನ ಪ್ರತಿ ಕ್ಷಣ ನಮ್ಮ ಮಕ್ಕಳ ಬೆಳವಣಿಗೆಯ ಮೇಲೆ ನಾವೊಂದು ಕಣ್ಣಿಡಬೇಕು. ಮಗು ಹೆಣ್ಣಿರಲಿ , ಗಂಡಿರಲಿ, ನಾವು ಎಷ್ಟು ಆ ಮಗುವಿನ ಮೇಲೆ ನಂಬಿಕೆ ಇದೆಯೋ, ಇನ್ನೊಂದು ಕಣ್ಣು ಸರಿಯಾಗಿ ನೋಡುತ್ತಲೇ ಇದ್ದರೆ ಮಾತ್ರ ಅದರ ಬದುಕು ಮೆತ್ತಗಿನ ನೆಟ್ಟಗಿನ ದಾರಿಯಲ್ಲಿ ಸಾಗುತ್ತದೆ. ಇಲ್ಲದೆ ಹೋದರೆ ಒಂದಲ್ಲ ಎರಡಲ್ಲ.  ತಪ್ಪುವ , ತಪ್ಪಿಸುವ ಸಾವಿರಾರು ಅಡ್ಡ ದಾರಿಗಳಿವೆ. ತಪ್ಪು ಯಾರದೋ, ಮುಂದೆ ಅದರ ಪರಿಣಾಮ ಅನುಭವಿಸುವವರು ಯಾರೋ. ಹಾಗೆ ಆಗದೆ ಇರಲಿ ಎಂಬ ಆಸೆ ಇದ್ದರೆ ನಮ್ಮವರಿಗೆ, ನಮ್ಮ ಮಕ್ಕಳಿಗೆ ಮಾನವತೆ ಮತ್ತು ಸಂಸ್ಕಾರ ಕಲಿಸಬೇಕು, ಪರರ ಸುಖ ಕಷ್ಟಗಳ, ನೋವಿನ ಅರಿವು ಅವರಿಗೆ ತಿಳಿಯಬೇಕು, ಹಾಗೆ ಪೋಷಕರು ಬೆಳೆಸಬೇಕು. ಅದರ ಬದಲು ಪರರ ವಸ್ತುಗಳನ್ನು ಸುಲಭವಾಗಿ ಬಾಚಿ, ಎಳೆದುಕೊಂಡು ತಿನ್ನುವ, ಕಡಿಯುವ ಕೆಲಸವನ್ನು ಪೋಷಕರು ಕೂಡ ಮಾಡಬಾರದು, ತಮ್ಮ ಮಕ್ಕಳಿಗೆ ಆ ರೀತಿ ಹೇಳಿ ಕೊಡಲೂ ಬಾರದು. ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ. ಭೂಮಿಯಿಂದ ಎಲ್ಲರೂ ಒಂಟಿ ಕೈಯ್ಯಲ್ಲೇ ಹೋದವರು ಅಲ್ಲವೇ?
   ನಮ್ಮ ಮುಂದಿನ ಜನಾಂಗ ಚೆನ್ನಾಗಿ ಇರಲಿ ಎಂದು ಅವರಿಗೆ ಬೇಕಾದ ಎಲ್ಲವನ್ನೂ ನಾವೇ ಮಾಡಿಟ್ಟರೆ ಅವರಿಗೆ ಸಾಧಿಸಲು ಇನ್ನೇನು ಉಳಿದಿರುತ್ತದೆ? ಅದಕ್ಕೆ ಅವರ ಕನಸುಗಳನ್ನು ನಾವು ಸುಟ್ಟು ಬಿಡಬಾರದು. ಅದಕ್ಕೆ ಚಿಗುರಲು ಅವಕಾಶ ಕೊಡಬೇಕು. ಬೇಕಾದ ಎಲ್ಲವನ್ನೂ ನಾವೇ ಒದಗಿಸಿ ಕೊಟ್ಟರೆ ಅವರ ಆಲೋಚನೆ, ಗುರಿ, ಉದ್ದೇಶ ಏನಾಗಿರುತ್ತದೆ? ಎಲ್ಲವೂ ಸುಲಭವಾಗಿ ಸಿಗುವಾಗ ಯಾರು ತಾನೇ ಕಷ್ಟ ಪಡಲು ಇಚ್ಚೆ ಪಡುತ್ತಾರೆ ಅಲ್ಲವೇ? ಅದಕ್ಕೆ ಅವಕಾಶ ಮಾಡಿಕೊಡುವರು ಹಿರಿಯರು. ನಮ್ಮ ಮಾತು ಕೇಳಿ ಕಳಿಯುವುದಲ್ಲ ಮಕ್ಕಳು.ಬದಲಾಗಿ ನಮ್ಮ ಕೆಲಸ ಕಾರ್ಯ ನೋಡಿ ಕಲಿಯುತ್ತಾರೆ. ತಾನು ಟಿವಿ ನೋಡುತ್ತಾ "ನೀನು ಓದು " ಎಂದು ಮಗುವಿಗೆ ಹೇಳಿದರೆ ಸಾಧ್ಯನಾ? ಅದಕ್ಕೆ ಮಾನವತೆ, ಸಂಸ್ಕಾರ ಮನೆಯಿಂದಲೇ ಬರಬೇಕು. ಅದನ್ನು ಪೋಷಕರೇ ಬೆಳೆಸುವವರು. ಅಂತಹ ಪೋಷಕರೇ ಕುಡುಕರಾದರೆ ನಾವು ಮಕ್ಕಳನ್ನು ದೂರಿ ಏನು ಪ್ರಯೋಜನ? ಮಕ್ಕಳು ತಾನೇ ಯಾರನ್ನು ನೋಡಿ ಕಲಿತಾರು? ಮಕ್ಕಳ ಮುಂದೆ ಜಗಳವಾಡುತ್ತಾ, ಕಾದಾಡುತ್ತಾ ಅವರ ಮನಸನ್ನು ಹಿರಿಯರಾದ ನಾವು ಕೆಡಿಸದೆ ಇರೋಣ. ಚೆನ್ನಾಗಿ ಬದುಕಿ, ಒಳ್ಳೆಯ ಗುಣಗಳನ್ನು ಹಾಗೂ ಮಾನವತೆಯನ್ನು ಅವರ ಮನಸ್ಸಿನಲ್ಲಿ ಬಿತ್ತೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
16.02.2025

ಒಂಚೂರು ತೆಲಿಪುಲೆ -1

ಒಂಚೂರು ತೆಲಿಪುಲೆ -1

      ನಮಡ ಮಾತ ಅಂತೆ ಆಂಡಲ ಕಾಸ್ ಉಂಡು. ನಮ ಪೂರ ಬೆನ್ನಿ ಅತ್ತ್ಂಡಲ ಬೇಲೆ ಬೆನ್ಪಿನಕುಲೆ ಅತ್ತೆ!  ಬಂಞಲಾ ಬರ್ಪ. ಆಂಡ ನಮ ದುಂಬುದಕ್ಲೆ ಲೆಕ ಫಿರಾಕ್‌ದ ಕಾಲೊಡು ಜನಮಾನಿ ಪಟ್ಟ್‌ದ್ ತೆಲಿತೊಂದು ಇತ್ತಿಲೆಕ್ಕ ನಾಲ್ ಜನ ಕುಲ್ಲುದು ಪಾತೆರ್ಯರೆ ಇತ್ತೆ ಪುರ್ಸೊತ್ತು ಇಜ್ಜಿ. ಇತ್ತೆ ಮಾತಾ ಕಡೆಟ್‌ಲಾ ಟಾರ್ಗೆಟ್. ಆ ಟಾರ್ಗೆಟ್ ರೀಚ್ ಆಯರೆ ಮಾತೆರ್ನಲಾ ಪೊರ್ಂಬಾಟ. 
 ಇಂಚಿನ ಒಂಜಿ ಟೆನ್ಶನ್‌ದ ಕಾಲ ಘಟ್ಟಡ್ ಬದ್‌ಕೊಂದು ಇಪ್ಪುನ ನಮ ಬೊಕ್ಕ ನಮ್ಮ ಜೋಕ್ಲೇನ ಕಷ್ಟದ ಕಾಲಡ್ ಲಾ ಒಂತೆ ತೆಲಿಪರೆ, ತೆಲಿಪಾಯರೆ ನಮಕ್ ಸಾಧ್ಯನಾ ತೂಕ. ಇನಿತ ಇಚಾರ ನಮ್ಮ ಕೈಟ್ ಇಪ್ಪುನ ಮೊಬೈಲ್. 
   ಮಾತ ಪಪ್ಪ ಅಮ್ಮನಕ್ಲೆಗ್ ಲಾ ಅಕ್ಲೆನ ಜೋಕ್ಲೆನ ಮಿತ್ ಬಾರಿ ನಂಬುಗೆ. ಅಂಚ ಎನ್ನ ಮಗೆ ಮಗಲ್ ಎಡ್ಡೆನೆ  ಮಲ್ಪುವೆರ್, ಎಡ್ಡೆನೆ ತೂಪೆರ್ ಪಂಡ್‌ದ್ ಅಕ್ಲು ಎನ್ನುವೆರ್. ಆಂಡ ಜೋಕುಲು ಕಂಡ್ ಕಂಡ್‌ದ್ ಮೆಸ್ಸೇಜ್ ಚಾಟ್ ಮಲ್ಪುವೆರ್. ಅಂಚ ಚಾಟ್ ಮಲ್ಪುನ ನಡು ನಡುಟ್ಟು ದಾಲಾ ಕಾಲ್ ಬತ್ತ್ಂಡ ಇಂಗ್ಲಿಷ್, ಹಿಂದಿ, ಮಲಯಾಳಿ, ತಮಿಳ್ ಪೂರಾ ಬಾಸೆಲು ಬರ್ಪ... ಆತೆ ಅತ್ತ್, ಅವು ಕಾಲ್ ಕಂಪೆನಿದ... ಕಾಲ್ ಕಟ್ ಮಲ್ತ್ ಮೆಸೇಜ್‌ಡ್ ಸರಿಟ್ ನೆರ್‌ದ್ ಮನಿಪ್ಪಂದೆ ಕುಲ್ಲಾವುನ ಕಷ್ಟ ಅಕ್ಲೆಗ್ ಮಾತ್ರ ಗೊತ್ತು!!!
  ಅಂಚನೆ ಕೆಲವು ಅಣ್ಣನಕ್ಲೆಗ್ ಸುಳ್ಳು ಪಂದಾ ದಾನ್ನ ಕೆಲವು ಶೋಕುದ, ಸಪೂರ ಸೊಂಟೊದ , ಬೊಲ್ದು ಚರ್ಮೊದ ಪೊನ್ನುಳೆನ ದೋಸ್ತಿ ಅದಿಪ್ಪುಂಡು. ದೋಸ್ತಿಡ್ ದಾದ ಉಂಡು ಅತೆ! ಇತ್ತೆ ಮಾತೆರೆಗ್ ಮಾತರೆನ ದೋಸ್ತಿ ಇಪ್ಪುಂಡಪ್ಪ. ಐಟ್ ದಾದ ಉಂಡು! ಐಟೇ ಇಪ್ಪುನಿ ಇತ್ತೆ! ಅಲೆನ್ ಅಣ್ಣೆ ಇಲ್ಲಗ್ ಬನ್ನಗ ಮರತೆರ್‌ಡಲಾ ಆಲ್ ಮರತ್ ಬುಡ್ಡುಜಲ್ . ಭಾರೀ ಮೆಸೇಜ್‌ಲು. ಅಲೆಗ್ ಒಂತೆ ಕರ್ಚಿಗ್ ಕಾಸ್ ಬೋಡು.‌ ಇಂಚಿನ ಆನುಲ್ಲ ಉಲ್ಲೆರ್ . ಅಕ್ಲೆಗ್ಲಾ ಅಕ್ಲೆನ ದೋಸ್ತಿಲೆನ ಮಿತ್ತ್ ನಂಬಿಕೆ ಬರೋಡು. ಐಕ್ ಆಲ್ ಅಪಗಪಗ ಫೋನ್ ಮಾಲ್ತೊಂದು ಬೇತೆ ಏರೆಡಲ ಇಂಬೆ ಪಾತೆರೊಂದು ಇಜ್ಜೆ ಪಂದ್ ಗೊತ್ತಾಯೆರೆ ಅಪಗಪಗ ಮೆಸೇಜ್ ಬರೊಂದು ಇಪ್ಪುಂಡು. ಅವು ಗೊತ್ತಾಯರೆ ಬಲ್ಲಿ ಪಂದ್ ಮೊಬೈಲ್‌ದ ಸೌಂಡ್‌ನ್ ಸೈಲೆಂಟ್‌ಡ್ ದೀದ್ ಸೈಲೆಂಟ್ ಆದ್ ಮೊಬೈಲ್ ಒತ್ತೊಂದು ಕುಲ್ಲುನ ಈ ಕಾಲಡ್ ಏರ್ ಪೂರ ಏರೆಡ ಮೆಸ್ಸೇಜ್ ಮಲ್ತ್ ದಾದ ಪೂರ ಪಾತೆರೊಂದು ಉಲ್ಲೆರ್ ಪಂದ್ ಏರೆಗ್ ಗ್ಲಾ ಗೊತ್ತಪುಜಿ ಅತೆ!!!
  ನನ ಕೆಬಿತ ಒಟ್ಟೆದ ಉಲೈ ತಿಕ್ಕಾವುನ ಬ್ಲೂ ಟೂತ್ ಇಯರ್ ಫೋನುಲು ಬೈದ. ಕೆಲವೈಕ್ ವೈರ್ ಉಂಡು. ಕೆಲವೈಕ್ ವೈರ್ ಇಜ್ಜಿ. ಖಾಲಿ ಕೆಬಿತ ಉಲಾಯಿ ತಿಕ್ಕದ್ ಬುಡ್ಪಿನಿ. ಆಯೆ ಏರೆಡ ದಾದ ಪಾತೆರೊಂದು ಉಲ್ಲೆನಾ, ಏರ್ ಪಾತೆರುನ ಕೇನೊಂದು ಉಲ್ಲೆನ, ಪದ್ಯ ಕೇನುವೆನ, ಕೆಬಿ ಕೇನಂದಿನೈಕ್ ಅವೆನ್ ಕೆಬಿತ ಒಟ್ಟೆದ ಉಲಾಯಿ ತಿಕ್ಕಾವೊಂದೆರಾ ಒಂಜಿಲ ಗೊತ್ತಾಪುಜಿ. ಅವೆನ್ ಪಾಡೊಂದು ಕುಲ್ಲುಂಡ ಏರ್ ಸೈತ್ಂಡಲಾ ಗೊತ್ತಾವಂದ್. ಅಕ್ಲೆನ ಲೋಕೊಡೇ ಅಕುಲು ಗಾಂಜಾ ಪಾಡಿನಕ್ಲೆ ಲೆಕ್ಕ ಒವ್ವಾ ಮೂಡುಡು ಒರಿಯೊರಿಯೇ ಕುಸಿತ ಪಡೆವೊಂದು ತೆಲಿತೊಂದು ಮರ್ಲೆರೆ ಲೆಕ್ಕ ಮಲ್ತೊಂದು ಇಪ್ಪುನೆನ್ ನಿಕ್ಲು ಮಾತ ತೂದಿಪ್ಪರ್, ಮಲ್ತ್‌ಲಾ ಇಪ್ಪರ್!!
   ಮೊಬೈಲ್ ಒತ್ತುನ ಬೇರೊಡು ಬೂರಿ ಜೋಕ್ಲೆಗ್ ಅಪ್ಪೆ ಮೀಪುನ ಬೆಂದ್‌ರುಡ್ ಬೂರ್ದು ಪ್ರಾಣ ಬುಡುಂಡಲಾ ಗೊತ್ತಾತ್‌ಜಿ ಪಂಡ ಮೊಬೈಲ್‌ದ ಮಾಯೆ , ಮರ್ಲ್ ಓಡೆ ಮುಟ್ಟ ಇಪ್ಪು ಎನ್ನ್‌ಲೆ. ನನಲ ಉಂಡು. ಇನಿಕ್ ಈತ್ ಯಾವು. ದಾಯೆ ಪಂಡ ತುಲು ಟೈಪ್ ಮಲ್ಪೆರೆ ಬಾರಿ ಬಂಞ ಅತೇ? ದಾದ ಪನ್ಪರ್??
@ಹನಿಬಿಂದು@
10.03.2025
    
   

ಏಕಿಷ್ಟು ಹೃದಯ ಸ್ತಂಭನ

ಏಕಿಷ್ಟು ಹೃದಯ ಸ್ಥಂಬನಗಳು?

   ಹೌದು, ಇತ್ತೀಚೆಗೆ ಹಲವಾರು ಜನರು ನಮ್ಮ ಕಣ್ಣೆದುರೇ ಇವತ್ತು ಇದ್ದವರು ನಾಳೆ ಹೃದಯ ಸ್ಥಂಭನದಿಂದ ಈ ಲೋಕ ತ್ಯಜಿಸಿದ ವಾರ್ತೆಗಳನ್ನು ಕೇಳಿ ಮನ ನೊಂದು ಹೋಗುತ್ತದೆ. ಇದಕ್ಕೆ ಕೆಲವರು ಕೋವಿಡ್ ಇಂಜೆಕ್ಷನ್ ಪಡೆದ ಬಳಿಕ ಹೀಗೆ ಆಗುತ್ತಿದೆ ಎನ್ನುತ್ತಾರೆ. ಸರಿಯೋ ತಪ್ಪೋ ತಿಳಿಯದು. ಅದರ ಸೈಡ್ ಎಫೆಕ್ಟ್ ಏನಾದರೂ ಹಾಗೆ ಇದೆಯೇ ಎಂದು ವೈದ್ಯರೇ ಹೇಳಬೇಕಷ್ಟೇ. 
   ಆದರೆ ವೈಜ್ಞಾನಿಕ ದೃಷ್ಟಿಯಲ್ಲಿ, ಸರ್ವೇ ಸಾಮಾನ್ಯ ಮನುಷ್ಯರಾಗಿ ನಾವು ನಿತ್ಯ ಜೀವನವನ್ನು ಗಮನಿಸಿದಾಗ ಆತ ಆಡುತ್ತಾ ಇರುವ ಮಗು ಆಟದ ಮೈದಾನದಲ್ಲಿಯು, ಓದುತ್ತಿದ್ದ ಮಗು ತರಗತಿಯಲ್ಲಿಯು ಹೀಗೆ ಆದಾಗ ಮಕ್ಕಳು ಕೋವಿಡ್ ಚುಚ್ಚುಮದ್ದು ಪಡೆದಿರಲಿಲ್ಲ ತಾನೇ? ಮತ್ತೇಕೆ ಹಾಗಾಯಿತು. ವಿಮರ್ಶೆ ಬಂದು ಆಹಾರದಲ್ಲಿ ನಿಲ್ಲುತ್ತದೆ. 
    ಪೋಷಕರು ತಮಗೆ ಸುಲಭವಾಗಲಿ ಎಂದು ಮ್ಯಾಗಿ ನೂಡಲ್ಸ್, ಪಾಸ್ತಾ, ಟೇಸ್ಟ್ ಪೌಡರ್ ಅಡುಗೆಯಲ್ಲಿ ಬಳಸುವುದು ಸರ್ವೇ ಸಾಮಾನ್ಯ. ಹೊರಗೆ ಹೋದಲ್ಲಿ ಗೋಬಿ ಮಂಚೂರಿ, ಚುರುಮುರಿ, ಪಾನಿ ಪೂರಿ, ಮಸಾಲ ಪೂರಿ ಎಲ್ಲವನ್ನೂ ಹಿರಿಯರು ಮಾತ್ರವಲ್ಲದೆ ಮಕ್ಕಳು ಕೂಡಾ ತಮ್ಮ ಹೊಟ್ಟೆಯ ಒಳಗೆ ಸೇರಿಸುತ್ತಾ ಹೋಗುವ ಕಾರ್ಯ ಸದ್ದಿಲ್ಲದೆ ನಿರಂತರವಾಗಿ ನಡೆದೇ ಇದೆ. ಇನ್ನು ಸಂಜೆ ಮನೆಗೆ ಬರುವಾಗ ಪೋಷಕರು, ಬಂಧುಗಳು ಗಾಳಿ ತುಂಬಿದ ಲಕೋಟೆ ಒಳಗಿರುವ ಬಟಾಟೆ ಚಿಪ್ಸ್ ಅನ್ನು ತಂದು ಕೊಡುತ್ತಾರೆ. ಚೀಪ್ ಅಂಡ್ ಬೆಸ್ಟ್, ಟೇಸ್ಟಿ. ಮಕ್ಕಳು ಖುಷಿಯಿಂದ ತಿನ್ನುತ್ತಾರೆ. ಇನ್ನು ಬಣ್ಣ ಬಣ್ಣದ ತಂಪು, ಸಿಹಿ ಪಾನೀಯ ಸದ್ದಿಲ್ಲದೆ ಮಕ್ಕಳ ಹಿರಿಯರ ಹೊಟ್ಟೆ ಸೇರುತ್ತಿದೆ. ಈ ಎಲ್ಲಾ ಆಹಾರ ವಸ್ತುಗಳಲ್ಲಿ ಬಳಸುವ ಬಣ್ಣಗಳು, ಪ್ರಿಸರ್ವೇಟಿವ್ಸ್, ಎಣ್ಣೆ ಇವು ನಮ್ಮ ರಕ್ತನಾಳಗಳಲ್ಲಿ ಸರಿಯಾಗಿ ಸಂಚರಿಸಲು ಸಾಧ್ಯವಾಗದ ರಾಸಾಯನಿಕಗಳನ್ನು  ಒಳಗೊಂಡಿದ್ದರೆ ಹಾಗಾಗುತ್ತದೆ ಅಲ್ಲವೇ? 
ತಿಳಿದವರು "ಊಟ ಬಲ್ಲವನಿಗೆ ರೋಗ ಇಲ್ಲ" ಎಂದಿದ್ದಾರೆ. ನಮ್ಮ ಹಾಗೂ ಮಕ್ಕಳ ಊಟ, ತಿಂಡಿಯ ಬಗ್ಗೆ ಕಾಳಜಿ ವಹಿಸೋಣ. ಹೊರಗಿನ ಆಹಾರ ತಡೆಯೋಣ. ನೀವೇನಂತೀರಿ?
@ಹನಿಬಿಂದು@
17.02.2025

ವಿಶ್ರಾಂತಿ -2 ನಮ್ಮ ಹಿಂದೆ ಇರುವವರು ಬೆನ್ನ ಹಿಂದೆ ಮಾತನಾಡುವರು

ನಮ್ಮ ಪರಿಚಯ ಇರಲಿ, ಇಲ್ಲದೆ ಇರಲಿ, ಭಾರತದಲ್ಲಿ ಎಲ್ಲರನ್ನೂ ಕೆಳಗಿನ ದೃಷ್ಟಿಯಲ್ಲಿ ನೋಡುತ್ತಾ, ಅಣಕವಾಡಿ ನಮ್ಮ ಮಾನಸಿಕ ಶಾಂತಿ ಕದಡುವವರು ಇದ್ದೇ ಇದ್ದಾರೆ. ಅವರಿಗೆ ಬೇರೆಯವರನ್ನು ಹಗುರ ಮಾಡಿ ಮಾತನಾಡಿದಾಗ ಮಾತ್ರ ನೆಮ್ಮದಿ ಸಿಗುತ್ತದೆ ಇರಬೇಕು. ಕುಟುಂಬ, ಸಂಬಂಧದ ಒಳಗೆ ಇರುವ ಜನ ಡಿಗ್ರೇಡ್ ಮಾಡುವುದು ಸರ್ವೇ ಸಾಮಾನ್ಯ ಬಿಡಿ. ಪರಿಚಯವೇ ಇಲ್ಲದ ಕೆಲವರು ಅದಕ್ಕoತ ಹುಟ್ಟಿರುವವರೂ ಇದ್ದಾರೆ. ಅವರು ಎಷ್ಟೇ ದೊಡ್ಡ ವ್ಯಕ್ತಿತ್ವದ ಜನರನ್ನೂ ಹೀಯಾಳಿಸುವುದು ಬಿಟ್ಟಿಲ್ಲ. ಇಂತಹ ಮಾನಸಿಕ ಯೋಚನೆಗಳು ಮಾನಸಿಕ ಅಸ್ವಸ್ಥರಿಗೆ ಮಾತ್ರ ಬರುವುದೋ ಏನೋ. ಅಂಥವರನ್ನು ಅತೃಪ್ತ ಆತ್ಮಗಳು ಎನ್ನಬಹುದೇ? 
  ಭಾರತದಲ್ಲಂತೂ ಇಂತಹ ಅತೃಪ್ತ ಆತ್ಮಗಳು ಕೋಟಿ ಸಂಖ್ಯೆಯಲ್ಲಿ ಇವೆ. ಹೊನ್ನಿಗಾಗಿ, ಹೆಣ್ಣಿಗಾಗಿ, ಪ್ರೀತಿಗಾಗಿ, ಧನಕ್ಕಾಗಿ, ಚಿನ್ನಕ್ಕಾಗಿ, ಸೀರೆಗಾಗಿ, ತಿನ್ನಲಿಕ್ಕಾಗಿ, ಮಾತನಾಡಲು, ಇತರರ ಜೊತೆ ತಮ್ಮ ನೋವು ಕಕ್ಕಿಕೊಳ್ಳಲು, ಪರರನ್ನು ಹಗುರ ಮಾಡಿ ಮಾತನಾಡಲು ಇವರು ಕಾಯ್ತಾ ಇರ್ತಾರೆ. 
   ಸಾಧನೆ ಮಾಡಲು ಹೊರಟವನ ಮುಂದೆ ಗುರಿ ಇರುವಾಗ ಅಡೆತಡೆಗಳು ಸರ್ವೇ ಸಾಮಾನ್ಯ. ಅಂತಹ ಸಮಯದಲ್ಲಿ ಇವೆಲ್ಲ , ಇವರನ್ನೆಲ್ಲಾ ದಾರಿಯಲ್ಲಿ ಇರುವ ಮುಳ್ಳು ಅಂದುಕೊಂಡು ಎತ್ತಿ ಬದಿಗೆ ಬಿಸಾಕಿ ಮುನ್ನಡೆದರೆ ಮಾತ್ರ ಬದುಕಿನ ಗುರಿ ತಲುಪಲು ಸಾಧ್ಯ. ಹೀಗೆ ಮಾಡಿದರಲ್ಲ ಎಂದು ಚಿಂತೆ ಮಾಡಿ ಕುಳಿತರೆ ನಮ್ಮನ್ನು ಗುರಿಯ ಬದಲು ಇವರು ಚಿತೆಗೆ ತಳ್ಳಿ ಬಿಡುತ್ತಾರೆ. 
     ಕ್ಯಾರೆ ಮಾಡದೆ ಬದುಕಲು ರಾಜಕಾರಿಣಿ, ಸಿನೆಮಾ ನಟರು, ಸೆಲೆಬ್ರಿಟಿಗಳು ಅನ್ನಿಸಿಕೊಂಡವರು ಇವರನ್ನು ನೋಡಿ ನಾವು ಕಲಿಯಬೇಕಾದ್ದು ಬಹಳ ಇದೆ. ಜೈಲಿಗೆ ಹೋಗಿ ಬಂದರೂ, ಸಮಾಜದ ಸಾಮಾಜಿಕ ಜಾಲ ಮಾಧ್ಯಮಗಳು ತಮ್ಮ ಬಗ್ಗೆ ಏನು ಬಿತ್ತರಿಸಿದರೂ, ಪತ್ರಿಕೆಗಳು ಏನೇ ಬರೆದುಕೊಂಡರೂ ಅವರು ಅದನ್ನು ನೋಡಿಯೂ ನೋಡದ ಹಾಗೆ ತಮ್ಮದೇ ಲೋಕದಲ್ಲಿ ಇರುತ್ತಾರೆ. ಇಂತವರ ಬಗ್ಗೆ  ಇಂತಹ ಕೇರ್ಲೆಸ್ ಬದುಕು ಇದ್ದರೆ ಮಾತ್ರ ಬದುಕಿನ ಗುರಿ ತಲುಪಬಹುದು. ನೀರನ್ನು ಫಿಲ್ಟರ್ ಮಾಡಿ ಕುಡಿಯುವ ಹಾಗೆ, ಹಣ್ಣು  ತರಕಾರಿಗಳನ್ನು ಉಪ್ಪು ನೀರಿನಲ್ಲಿ ತೊಳೆದು ಶುಚಿಗೊಳಿಸುವ ಹಾಗೆ ಇವರನ್ನು ಆಚೆ ಬಿಸಾಕಿ ನಮ್ಮನ್ನು ನಾವು ಶುಚಿಗೊಳಿಸಿಕೊಂಡು ಮುಂದೆ ಹೋಗಬೇಕು ಅಷ್ಟೇ. ಇದಕ್ಕೆಲ್ಲ ತಲೆಕೆಡಿಸಿಕೊಂಡರೆ ನಮ್ಮ ತಲೆಗೆ ನಾವೇ ಚಪ್ಪಡಿ ಕಲ್ಲು ಹಾಕಿಕೊಂಡ ಹಾಗೆ ಆಗುತ್ತದೆ ಅಷ್ಟೇ. 
  ಅಂದ ಹಾಗೆ ಈ ರೀತಿಯ ಜನ ನಮ್ಮ ಮುಂದೆ ಇರಲ್ಲ, ನಮ್ಮ ಬೆನ್ನ ಹಿಂದೆ ನಮ್ಮ ಬಗ್ಗೆ ಮಾತನಾಡುತ್ತಾ, ಗಾಸಿಪ್ ಹರಡುತ್ತಾ ಇರುತ್ತಾರೆ ಎನ್ನುವುದು ಸತ್ಯ. ಏಕೆಂದರೆ ಅವರು ನಮ್ಮಿಂದ ಮುಂದೆ ಹೋಗಲು ಸಾಧ್ಯ ಇಲ್ಲ ಆದ ಕಾರಣ ಹಿಂದಿನಿಂದ ಮಾತು ಅಷ್ಟೇ. ಮುಂದೆ ಸಾಗಿದವ, ಸಾಗಬೇಕು ಎಂಬ ಹಠ ಇದ್ದವ ಪರರ ಬಗ್ಗೆ ಆಲೋಚನೆ ಮಾಡದೆ ತನ್ನ ದಾರಿಯಲ್ಲೇ ಮುನ್ನಡೆಯುತ್ತಾ ಮತ್ತೇನೋ ಹೊಸ ಸಾಧನೆಗೆ ಅಡಿ ಇಟ್ಟಿರುತ್ತಾನೆ, ಅಷ್ಟೇ!
  ನಾವು ಸಾಧಕರಾಗಬೇಕೋ, ಇತರರ ಸಾಧನೆಯ  ಹಿಂದೆ ನಿಂತು ಅವರ ಪ್ರೇರಕರಾಗಬೇಕೋ, ಅಥವಾ ಅವರ ಬೆನ್ನ ಹಿಂದೆ ನಿಂತು ಏನೂ ಮಾಡಲು ಸಾಧ್ಯ ಆಗದೆ ಬೊಗಳುವ ನಾಯಿಗಳಾಗಬೇಕೋ ಅದನ್ನು ಒಪ್ಪಿಕೊಂಡು ಅಪ್ಪಿಕೊಳ್ಳಬೇಕಾದವರು ನಾವೇ. ನಮ್ಮ ಬದುಕು ನಮ್ಮ ಕೈಯಲ್ಲಿದೆ.  ಒಳ್ಳೆಯದು ಕೆಟ್ಟದು ಎರಡೂ ನಮ್ಮ ಆಲೋಚನೆ , ಕಾರ್ಯ ಮತ್ತು ನಮ್ಮ ನಾಲಗೆಯಲ್ಲಿ ಇವೆ. ಬಳಸಿಕೊಳ್ಳುವವರು, ಬೆಳೆಸುವವರು, ಕುಲಗೆಡಿಸುವವರು ಪರರಲ್ಲ, ನಾವೇ. ನಮ್ಮ ಬದುಕಿನ ಸೂತ್ರ ಅಪ್ಪ ಮಾಡಿಟ್ಟ ಆಸ್ತಿಯಲ್ಲಿ ಅಲ್ಲ, ನಮ್ಮ ದುಡಿಮೆಯಲ್ಲಿ ಸಿಗುವ ಖುಷಿಯಲ್ಲಿ ಇದೆ ಅಲ್ಲವೇ? ನೀವೇನಂತೀರಿ?
ಹನಿ ಬಿಂದು 
04.03.2025

ಶಾಲೆ ಬೇಕು

ಶಾಲೆ ಬೇಕು

ಕಲಿಕೆಗೆ ಮೂಲದ ಬೇರನು ಉಳಿಸಲು
ಜ್ಞಾನದ ಕವಲಿನ ಸಾರವ ಗಳಿಸಲು
ಹರಿಸುತ ವಿದ್ಯೆಯ ಸಾಗರ ಸೇರಲು
ವಿಶ್ವದ ಜನತೆಗೆ ಸಹಾಯ ಮಾಡಲು 

ಜಾತಿ ಧರ್ಮಗಳು ಒಂದೇ ಎನಲು
ನೀತಿ ನಿಯಮಗಳ ಪಾಲಿಸಿ ಬದುಕಲು
ಹಿರಿಯರು ಹೇಳಿದ ಮಾರ್ಗದಿ ನಡೆಯಲು
ಕಿರಿಯರ ತಿದ್ದುತ ಸಂಸ್ಕೃತಿ ಕಲಿಸಲು 

ಮೋಸ ವಂಚನೆಯ ಹಾದಿಯ ಬಿಡಲು
ನಾಡು ನುಡಿಗಳ ಹಾಡನು ಹಾಡಲು
ಕಾಡು ಮೇಡುಗಳ ನಿತ್ಯವೂ ಬೆಳೆಸಲು
ಪ್ರತಿ ಕಾರ್ಯದಲಿ ವಿಜ್ಞಾನವ ಮಿಳಿಸಲು

ಹೊಸ ಹೊಸ ಕಲಿಕೆಗೆ ಪ್ರೋತ್ಸಾಹ ನೀಡಲು
ಹಳೆ ಆಲೋಚನೆಗಳ ಸತ್ಯವ ಅರಿಯಲು
ಒಳ್ಳೆಯ ಗುಣಗಳ ಪಾಲಿಸಿ ಸಲಹಲು 
ಆರೋಗ್ಯ ಭಾಗ್ಯ ನೆಮ್ಮದಿ ಹುಡುಕಲು

ಶಿಕ್ಷಕ ಗುರುಗಳ ಗೌರವ ಏರಲು
ರಕ್ಷಕ ಪೋಷಕರ ಮಹತ್ವ ತಿಳಿಸಲು
ಭಕ್ಷಕರಾಗದೆ ಸಮಾಜದಿ ಬಾಳಲು
ಮಾನವತೆ ಅನುಸರಿಸಿ ಬೆಳೆದು ನಗಲು 

ಮುಂದೆ ಹೇಗೆ ಎಲ್ಲವ ತಿಳಿಸಲು
ಹಿಂದಿನ  ಅಸ್ಮಿತೆ ಸಿಂಹಾವಲೋಕನ ಮಾಡಲು
ಬದುಕಿನ ರಥದ ಚಕ್ರವ ಎಳೆಯಲು
ಸಿಡುಕಿನ ಗುಣವನು ಕಳೆಯುತ ನಡೆಯಲು

ಅಕ್ಷರ ತಿದ್ದುತ ಪಾಠವ ಕಲಿಯಲು
ತಕ್ಷಣ ಆತುರ ಮಾಡದೆ ತಡೆಯಲು
ಮೋಕ್ಷ ಪ್ರಾಪ್ತಿಯ ಮಾರ್ಗ ಹುಡುಕಲು
ಸಾಕ್ಷಿ ಸಮೇತ ಚೆನ್ನಾಗಿ ಉಸಿರಾಡಲು

ಸರ್ವರ ಜೊತೆಯಲಿ ಒಂದಾಗಿ ಬಾಳಲು
ಗರ್ವದ ಗುಣವನ್ನು ಮರೆತು ಬೆರೆಯಲು
ಕರ್ಮದ ಹಾದಿಯ ಹಿಡಿದು ಸಾಗಲು
ಸತ್ವಯುಕ್ತ ಕ್ಷಣಗಳಲ್ಲಿ ಯುಕ್ತಿಯಿಂದ ನೆಲೆಸಲು
@ಹನಿಬಿಂದು@
04.03.2025
 






happy women's day

ಪೊಂಜೊವುಲೆನ ದಿನತ ಎಡ್ಡೆಪುಲು

ಮಾಚ್ ಎನ್ಮ ತಾರೀಕ್ ಪನ್ನಗ ಪೊಂಜೊವುಲೆನ ದಿನ. ಪೂರಾ ಪೊಂಜೊವುನಕ್ಲೆಗ್ಲಾ ಎಡ್ಡೆಪುನು ಬಯಕೊಂದು ಮಾಮಲ್ಲ ಕಜ್ಜ ಮಲ್ತ್ ಪುದರ್ ಪೋಯಿನ ಪೊಂಜೊವುಲು ನಮ್ಮೊಟ್ಟು ಪಾಕ ಜನ ಉಲ್ಲೆರ್. ಅಕುಲು ಪೂರಾ ಸಾಧನೆ ಮಲ್ಪೊಲಿ ಪಂಡ ನಮ ದಾಯೆ ಮಲ್ಪರೆ ಬಲ್ಲಿ?
      ಸುಧಾ ಮೂರ್ತಿ ,ಸಾರಾ ಅಬೂಬಕ್ಕರ್ , ಮದರ್ ತೆರೇಸಾ, ಕಿರಣ್ ಬೇಡಿ, ಶಿಲ್ಪಾ ಶೆಟ್ಟಿ, ಐಶ್ವರ್ಯ ರೈ, ಭುವನೇಶ್ವರಿ ಹೆಗಡೆ, ನಿರ್ಮಲಾ ಸೀತಾರಾಮನ್, ದ್ರೌಪದಿ ಮುರ್ಮು, ಇಂದಿರಾ ಗಾಂಧಿ ಇಂಚಿನ ಪೊಂಜೊವೆನಕ್ಲು ಸಾಧನೆ ಮಲ್ತ್ ಸಾಧಕೆರಾದ್ ನಮ್ಮ ಎದುರು ತೋಜದ್ ಕೊರ್ತೆರ್. ಅಕ್ಲೆನ ಸಾಧನೆ ತುದಾಂಡಲ ನಮಲ ದಾಲ ಎಲ್ಯ ಆಂಡಲ ಸಾಧನೆ ಮಲ್ಪೊಡು ಪನ್ಪಿನ ನಮ್ಮ ಮನಸ್‌ ಗ್ ಬತ್ತ್ , ಆ ದಿಸೆಟ್ ನಮ ಆಲೋಚನೆ ಮಲ್ತಡ ಪೊಂಜೊವುಲೆನ ಪವರ್ ನ್ ನಮ ಪ್ರತಿ ಒರಿಲಾ ತೋಜವೊಲಿ.
     ಅಂಗಡಿ, ಆಸ್ಪತ್ರೆ, ಆಫೀಸ್, ಶಾಲೆ, ಕೋಲ, ನೇಮ ಅತ್ತಂದೆ ಇತ್ತೆ ದೇಸೊದ ಮಿಲಿಟ್ರಿಡ್ಲಾ ಉಲ್ಲ ನಮ. ಪುಣ ಪೊತ್ತಾವುನ, ರಿಕ್ಷಾ, ಕಾರ್, ಬಸ್, ಲಾರಿ, ರೈಲ್, ಮೆಟ್ರೋ, ವಿಮಾನ ಬುಡ್ಪಿನ ಬೇಲೆನ್ಲಾ ಪೊಂಜೊವುನಕ್ಲು ಮಲ್ಪುವೆರ್ ಪಂದ್ ಆಯಿ ಬೊಕ್ಕ ಪೊಣ್ಣು ಒಲ್ಪ ಒಯ್ಟ್ ಕಮ್ಮಿ ಪನ್ಲೆ??
    ಆಲ್ ಅಂಚ, ಮೋಲ್ ಇಂಚ ,ಬರಿತ ಇಲ್ಲದಕ್ಲು ಸರಿ ಇಜ್ಜೆರ್, ಪಿಚ್ಚರ್ ಆ್ಯಕ್ಟರ್‌ನಕ್ಲು, ಕ್ರಿಕೆಟ್ ಮೊಕ್ಲೆನ ಬಗ್ಗೆ ಪಾತೆರೊಂದು ಕುಲ್ಲುಂಡ ನಮ್ಮ ಬದ್‌ಕ್ ಏಪ ಉದ್ದಾರ ಆಪಿನಿ? ನಮ ನಮ್ಮ ಬಾಳ್ವೆದ ಬಗ್ಗೆ ತೂವೊಡು. ನಾಯಿದ ಲೆಕ ಪುಟ್ಟುದು ತಿಂದ್‌ದ್ ಕಿನ್ನಿ ದೀದ್ ನಾಯಿದ ಲೆಕ್ಕ ಸೈತ್ ಪೋಂಡ ನಮಕ್ ಲಾ ನಾಯಿಗ್ ಲಾ ಎತ್ವಾಸ ದಾದ ಉಂಡು? ನಮ ನರಮಾನಿ ಆಯಿ ಬೊಕ್ಕ ಈ ಬೂಮಿಡ್ ನಮ ಸೈತ್ ಪೋಯಿ ಬೊಕ್ಕಲಾ ನಮ್ಮ ಪುದರ್ ಒರಿಯೊಡುಂದು ಆಂಡ ನಮ ನಮ್ಮ ಪುದರ್ ಒರಿಪು ಲೆಕಂದಿ ದಾದಂಡಲ ಎಡ್ಡೆ ಬೇಲೆ ಮಲ್ಪೊಡು. ಅವು ನಾಲ್ ಜನಕ್ ಸಾಯ ಆವೊಡು. 
  ಒಂಜಿ ಪೊಣ್ಣು ಬಂಞ ಬತ್ ದಾದಾಂಡಲ ಮಲ್ಪೊಡು ಪಂದ್ ಎನ್ನಿಯಲ್ಡ ,ದಾದಾಂಡಲ ಮಲ್ತ್ ಆಲ್ ಅವೆನ್ ಸಾಧನೆ ಮಲ್ಪಂದೆ ಬುಡಯಲ್. ಆ ತಾಳ್ಮೆ ಪೊಣ್ಣಡ ಇಪ್ಪುನ ಕಾರಣ ಆಲ್ ಪೋಯಿನಲ್ಪ ಪೂರ ಗೆಂದ್‌ದ್ ಬರ್ಪಲ್. ಅಂಚಾದ್ ಇಪ್ಪುನಗ ನಮ ಪೂರ ದಾದಾಂಡಲ ಬೇತೆಕ್ಲೆಗ್ ಎಡ್ಡೆ ಮಲ್ಪರೆ ಪಿದಾಡ್‌ಗ. 
  ಪೊಣ್ಣು ಮನ್ನ್ ದ ಬಾಜನ ಅತ್ತ್. ಆಲ್ ಕ್ಷಮೆತ್ತ ಸಾಗರ. ವಾ ಕಜ್ಜೊಲೆನ್ಲಾ ನಡಪಾದ್ ಕೊರ್ಪಿ ಗೆಲ್ಮೆ, ತಾಳ್ಮೆ, ಮೋಕೆ, ದೇಕಿ, ಶೋಕು ಅಲೆಡ ಉಂಡು. ಅಂಚ ಪೊಣ್ಣ ಕಾರ್ಯ ಏಪಲಾ ಪುಗಾರ್ತೆ ಪಡೆವುನವು. ನಮ ಪೊನ್ನುಲು ಪೂರಾ ಈ ದಿಸೆಟ್  ಆಲೋಚನೆ ಮಲ್ಪುಗ. 
@ಹನಿಬಿಂದು@
08.03.2025

ಸಕಾಲಿಕ

ಸೌಜನ್ಯ

ಇವಳೊಬ್ಬಳೇ ಹೆಣ್ಣೇ ಕಾಮುಕರ ಅಟ್ಟಹಾಸಕ್ಕೆ ಬಲಿಯಾದವರಲ್ಲಿ ಕಾಣುತ್ತಿರುವುದು? ಎಲ್ಲಾ ಈ ರೀತಿಯ ಹುಡುಗಿಯರ ಅತ್ಯಾಚಾರ ಮತ್ತು ಕೊಲೆಯ ಹಿಂದೆ ಇರುವುದು ಕಾಮುಕರ ಹೇಯ ಕೃತ್ಯ ಮತ್ತು ಕಾಮಾಂಧತೆ. ಮಧ್ಯಮವರ್ಗದ ಹೆಣ್ಣು ಮಕ್ಕಳೇ ಇವರಿಗೆ ಟಾರ್ಗೆಟ್. ಏಕೆಂದರೆ ಓಡಾಡಲು ಅವರ ಬಳಿ ಕಾರುಗಳಿಲ್ಲ, ನಡೆದು ಮನೆ ತಲುಪಬೇಕು. ಒಟ್ಟಿನಲ್ಲಿ ಕಾಮುಕರ ಅತ್ಯಾಚಾರ. ಕೊಲೆ ದರ್ಪ ಮೇರೆ ಮೀರಿದೆ. ಹತ್ತು ಹಲವು ಹೆಣ್ಣು ಮಕ್ಕಳ ಪ್ರಾಣ ಹೋಗಿದೆ. ನೋವುಂಡ ಆತ್ಮಗಳೇ ನಿಮಗೆಲ್ಲ ಸದ್ಗತಿ ಸಿಗಲಿ. ನಿಮ್ಮನ್ನು ಬಳಸಿದ ಆ ಕಾಮುಕರಿಗೆ ಆ ದೇವರೇ ಶಿಕ್ಷೆ ಕೊಡಲಿ. ಮನುಷ್ಯರ ಶಿಕ್ಷೆ ಚಿಕ್ಕದಾದೀತು. ಹೆಣ್ಣನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವ, ಬಳಸಿಕೊಳ್ಳುವವ ಬದುಕದೆ ಹೋಗಲಿ. ಸಣ್ಣ ಮಕ್ಕಳನ್ನು. ಹಿರಿಯರನ್ನು ಕಾಮದ ದೃಷ್ಟಿಯಲ್ಲಿ ನೋಡಿ ಹಾಗೆ ಮುಂದೆ ಬಂದವನಿಗೆ ದೇವಿಯ ತ್ರಿಶೂಲ ತಾಗಿ ಸಾಯಲಿ. 

ಈ ಒಂದು ಹೆಣ್ಣು ಮಗುವಿನ ವಿಷಯವನ್ನೇ ಎತ್ತಿ ಹಿಡಿದು , ಫೋಟೋ ಪ್ರದರ್ಶಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುವವರಿಗೆ ಧಿಕ್ಕಾರವಿರಲಿ. ಸಾಮಾಜಿಕ ಜಾಲ ತಾಣದಲ್ಲಿ ಎಲ್ಲಾ ಜಾಗ, ಹೋಟೆಲ್, ಕಾಡು, ದೇವಾಲಯ ತೋರಿಸಿ ಹಣ ಗಳಿಸಿ ಆಯಿತು. ಈಗ ಈ ವಿಚಾರ ಶುರು ಆಗಿದೆ ಅಷ್ಟೇ..ಅದನ್ನೆಲ್ಲ ಪ್ರಶ್ನಿಸಿ ನ್ಯಾಯ ಕೊಡಲು ನಾವಲ್ಲ. ಕೋರ್ಟು, ಕಚೇರಿ, ಜನತಾ ನ್ಯಾಯಾಲಯ ಇಲ್ಲವೇ? ಎಲ್ಲಿ ಹೋದರೂ ಬಡವರಿಗೆ ಅವಮಾನವೇ. ಹಣಕ್ಕೆ ಬೆಲೆ ಅಷ್ಟೇ.

ಒಂದಿಷ್ಟು -122

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -122

ಮಾರ್ಚ್ ತಿಂಗಳಲ್ಲಿ ಎಂಟನೆಯ ತಾರೀಕು ವಿಶ್ವ ಮಹಿಳಾ ದಿನಾಚರಣೆ. ಮಹಿಳೆಗೆ ಕೇವಲ ಒಂದು ದಿನದ ದಿನಾಚರಣೆ ಸಾಕೆ? ಕೆಲವರ ವಾದ. ಪುರುಷರು ಮತ್ತು ಮಹಿಳೆಯರು ಈ ಪ್ರಕೃತಿಯ ಸೃಷ್ಟಿಯೇ ಆಗಿರುವಾಗ ಮಹಿಳೆಗೆ ಬೇರೆ ಪುರುಷರಿಗೆ ಬೇರೆ ದಿನ ಬೇಕೆ? ಇದು ಇನ್ನೊಂದು ವಾದ. ಈ ದಿನಾಚರಣೆ, ದಿನಗಳ ಮೀಸಲು ಎಲ್ಲಾ ವಿದೇಶಿಯರ ಕಲ್ಪನೆ. ಹಾಗೆ ದಿನಗಳನ್ನು ಸೃಷ್ಟಿಸಲು, ನಿಗದಿಪಡಿಸಲು ಹೋಗಿ ಇಂದು ವರ್ಷದ ಪ್ರತಿಯೊಂದು ದಿನವೂ ಒಂದೊಂದು ದಿನವೇ. ಗಾಳಿಗೂ, ನೀರಿಗೂ, ಪ್ರೀತಿಗೂ, ಹೆಣ್ಣು ಮಗುವಿಗೂ, ವೈದ್ಯರಿಗೂ, ಎಂಜಿನಿಯರ್ ಗಳಿಗೂ , ಶಿಕ್ಷಕರಿಗೂ, ಕೂಲಿ ಕಾರ್ಮಿಕರಿಗೂ, ದಾದಿಯರಿಗೂ, ಮಕ್ಕಳಿಗೂ, ವಯಸ್ಕ ಪ್ರಜೆಗಳಿಗೂ, ನಾಯಿಗೂ, ಬೆಕ್ಕಿಗೂ  ಕೊನೆಗೆ. ಓತಿಕೇತಕ್ಕೂ ಒಂದು ದಿನಾಚರಣೆ ಇರಲೂ ಬಹುದು!

ಈಗಾಗಲೇ ಗೂಬೆಗಳು ಅಳಿವಿನ ಅಂಚಿನಲ್ಲಿವೆ, ಉಳಿಸಿ, ಗಿಡುಗ, ಗರುಡಗಳ ಉಳಿಸಿ, ಕಾಗೆಗಳ ಉಳಿಸಿ ಎಂಬೆಲ್ಲ ಕೂಗು ಕೇಳುತ್ತಿರುವ ಸಮಯದಲ್ಲಿ "ಮಹಿಳೆಯ ಮಾನ, ಪ್ರಾಣಗಳು ಅಳಿವಿನಂಚಿನಲ್ಲಿ ಇವೆ. ಅವುಗಳನ್ನೂ ಮಹಿಳೆಯರು ಹಾಗೂ ಪುರುಷರಿಂದ ಉಳಿಸಿ" ಎನ್ನುವ ಕೂಗು ಕೇಳುವಂತಾಗಿದೆ. ವರದಕ್ಷಿಣೆಯ ಸಮಸ್ಯೆಗೆ ಹಾಗೂ ಸಾವಿಗೆ ದೊಡ್ಡ ಕಾರಣ ಅತ್ತೆ, ನಾದಿನಿ, ಅತ್ತಿಗೆ! ಮಹಿಳೆಯೇ ಮಹಿಳೆಗೆ ಶತವೈರಿ.

ಈಗ ಮಹಿಳೆಯರ ದಿನಾಚರಣೆ ಬಗ್ಗೆ ಬರೋಣ. ಆ ದಿನ ಮಹಿಳೆಯರನ್ನೇ ವೇದಿಕೆ ಮೇಲೆ ಕುಳ್ಳಿರಿಸಿ, ಮಹಿಳೆಯರ ಬಗ್ಗೆಯೇ ಮಾತನಾಡಿ ಮನೆಗೆ ಬಂದು ಮಹಿಳೆಯರ ಬಳಿಯೇ ತನ್ನೆಲ್ಲಾ ಕೆಲಸ ಮಾಡಿಸಿ ಮೆರೆಯುವ ಪುರುಷ ಪ್ರಧಾನ ಸಮಾಜ ನಮ್ಮದು. ಮಹಿಳೆಯರೇ ಪುರುಷರ ಮೇಲೆ  ದಬ್ಬಾಳಿಕೆ ನಡೆಸುತ್ತಾರೆ ಎಂದು ಬಿಂಬಿಸಿ ಮನೆಯೊಳಗೆ ತನ್ನದೇ ರೀತಿಯಲ್ಲಿ ಅವರಿಂದ ಎಲ್ಲಾ ಕೆಲಸಗಳ ಮಾಡಿಸಿಕೊಳ್ಳುತ್ತಾರೆ.

ದಿನಾಚರಣೆಯ ನೆವದಲ್ಲಿ ಆದರೂ ಆ ಒಂದು ದಿನ ಮನೆಯಿಂದ ಹೊರಗೆ ಬರಲು ಅವಕಾಶ ಸಿಕ್ಕರೂ, ಮನೆಯ ಎಲ್ಲಾ ಕೆಲಸಗಳನ್ನೂ ಮಾಡಿಯೇ ಮನೆಯಿಂದ ಹೊರ ಬೀಳಬೇಕು ಅಲ್ಲವೇ? ಮತ್ತೆಲ್ಲಿಯ ಸ್ವಾತಂತ್ರ್ಯ ನಮ್ಮಲ್ಲಿ ಸತಿಯಾದ ಸುಶೀಳೆಗೆ! ಅಡುಗೆಮನೆಯೇ ಸೆರೆಮನೆ. 

ಹೆಣ್ಣು ಮಕ್ಕಳನ್ನು ಬೆಳೆಸುವಾಗ ' ನೀನೂ ಹೆಣ್ಣು ಅನ್ನದೆ, ಹೆಣ್ಣು ಹೊನ್ನಾಗಿ ಬೆಳೆಸಿದಾಗ ಯಾವ ಅಡ್ಡಿ ಆತಂಕವೂ ಇರದೆ ಹೆಣ್ಣಾಗಲೀ ಗಂಡಾಗಲೀ ಎರಡೂ ಒಂದೇ ಎಂಬ ಭಾವನೆ ಬರುತ್ತದೆ. ಆಚರಿಸುವ ಪ್ರತಿ ಹೆಣ್ಣು ಮಗುವಿನ ದಿನಾಚರಣೆ, ಮಹಿಳೆಯರ ದಿನಾಚರಣೆ ಅರ್ಥ ಪೂರ್ಣವಾಗಿ ಇರಲಿ, ಹೆಣ್ಣು ಭ್ರೂಣ ಹತ್ಯೆ ನಿಲ್ಲಲಿ, ಹೆಣ್ಣು ಮಕ್ಕಳ ಉಡುಪು ಗಂಡು ಮಕ್ಕಳ ಕಣ್ಣು ಕುಕ್ಕದಂತೆ, ಬಗ್ಗಿದಾಗ ಎಲ್ಲಾ ಕಾಣದಂತೆ ಇರಲಿ, ಸಿನೆಮಾ , ಧಾರಾವಾಹಿಗಳಲ್ಲಿ ನಿತ್ಯವೂ ಹೆಣ್ಣು ಮಕ್ಕಳ ಅಂಗಾಂಗ ಪ್ರದರ್ಶನ ಕಡಿಮೆ ಆಗಲಿ, ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳು ಕಾಮದ ವಸ್ತುಗಳಾಗಿ ಕಾಣದೆ ಹೆಣ್ಣು ಮಕ್ಕಳ ಭಾವನೆಗಳಿಗೂ ಬೆಲೆ ಸಿಗಲಿ, ಅವರ ಆಸೆಗಳಿಗೂ ನೀರೆರೆದು ಪೋಷಿಸುವ ಕಾರ್ಯ ಪೋಷಕರಿಂದ ಆಗಲಿ. ಹೆಣ್ಣು ಮಕ್ಕಳೂ, ಹೆಂಗಸರೂ ತಮ್ಮ ಮೈಯನ್ನು ಬಿಟ್ಟಿಯಾಗಿ ಪ್ರದರ್ಶನಕ್ಕೆ ಇಡದೆ, ಮಾರಿಕೊಳ್ಳದೆ ತನ್ನ ದೇಹ ಹಾಗೂ ಮನಸ್ಸಿನ ಬೆಲೆ ಹೆಚ್ಚಿಸಿಕೊಂಡು, ಮಾನ ಮರ್ಯಾದೆ ಎನ್ನುವ ಪದಕ್ಕೆ ಅರ್ಥ ಬರಲಿ. ಸಕಲರಿಗೂ ನೆಮ್ಮದಿ ದೊರಕಲಿ, ಮೋಸ ಆಗದಿರಲಿ. ಆಗಲೇ ಮಹಿಳೆಯರ ದಿನಾಚರಣೆ ಅರ್ಥಪೂರ್ಣ ಆದೀತು.ನೀವೇನಂತೀರಿ? 
@ಹನಿಬಿಂದು@
12.03.2022

ಪ್ರೀತಿ

ಪ್ರೀತಿ

ಪ್ರೀತಿ ಹೂ ಅರಳಿಸಿದ ಬಾಳ ಬೆಳಕು ನೀಡಿದ
ಮೊಗ್ಗನ್ನು ಹೂವಾಗಿಸಿ ಮೊಗೆ ಮೊಗೆದು ಜೇನ ಹೀರಿದ
ಕಾಣದ ಕನಸಿನ ಲೋಕಕ್ಕೆ ಎತ್ತಿ ಕೊಂಡೇ ಹೊತ್ತೊಯ್ದ
ನನ್ನೆದೆಯ ಕೋಣೆಯ ಬಾಗಿಲು ತಟ್ಟಿ ಒಳಹೊಕ್ಕು ಬೀಗ ಹಾಕಿದ
ನಿಶೆಯ ನಶೆಯಲಿ ಮೈ ಮರೆವ ನಶೆಯ ಹಚ್ಚಿಸಿದ

ಕಾದಾರಿದ ನೀರಿನ ದಾಹವನು ತಣಿಸಿದ
ಒಳಗೂ ಹೊರಗೂ ಹೊಕ್ಕಿ ಹಕ್ಕಿಯಂತಾದ
ಸುಖದ ಸುಪ್ಪತ್ತಿಗೆಯಲಿ ತೇಲಾಡಿದ 
ಅನುಭವಗಳ ಗರಿಗೆದರಿಸಿ ಹಾರಾಡಿಸಿದ

ಮುತ್ತನಿತ್ತು ಮತ್ತು ಬರಿಸಿ ಮುದ್ದಾಡಿದ
ಮತ್ತೆ ಮತ್ತೆ ಬೇಕೆನುವ ಸುಖವ ನೀಡಿದ
ಬತ್ತಳಿಕೆಯ ಬಾಣಗಳನ ಹೂಡಿ ಗೆದ್ದ
ಸುತ್ತ ಮುತ್ತ ಸುಳಿದು ಬಂದು ಜೊತೆಯಾದ

ಮೌನದಲ್ಲು ಮಾತನಾಡಿ ಹೃದಯ ಗೆದ್ದ 
ಸೌಜನ್ಯದ ಗುಣವ ತೋರಿ ಮನವ ಕದ್ದ
ಗೌರವಯುತ ಮಾತಿನೊಡನೆ ನಗೆಯು ಸಿದ್ದ
ಹೌಹಾರದೆ ಹನಿಯ ಜಗದ ಒಳಗೆ ಬಂದ
@ಹನಿಬಿಂದು@
11.03.2025

ದಶಕ -134

ದಶಕ - 134

ಹೊದ್ದು ಮಲಗಿ ನಿತ್ಯ. ಬೆಚ್ಚಗಾಗಿ
ಮುದ್ದು ಪದವು ನನ್ನಿಂದ ದೂರವಾಗಿ
ಮೊಬೈಲ್ ಮಾಯೆ ಸರ್ವರಲಿ ಜೋರಾಗಿ
ಸದ್ದಿಲ್ಲದೆ ಅದುವೇ ಇಂದು ಬೀಗಿ

ಓದಬೇಕು ಜಗದ ತಲೆಯು ತಗ್ಗಿ
ಬಳಸಬೇಕು ಗ್ರಂಥಾಲಯ  ಬಾಗಿ 
ಗಳಿಸಬೇಕು ಜ್ಞಾನ ಅದುವೇ ಸುಗ್ಗಿ
ಕಪಾಟಿನಲ್ಲಿ ಕೂರಲಲ್ಲ ಬಳಸಿ ಹಿಗ್ಗಿ

ಪುಸ್ತಕಗಳು ಜ್ಞಾನ ಮುತ್ತು ಬದುಕಿಗೆ
ಓದಲು ಸದಾ ಬೆಳವಣಿಗೆ ಇರುವವರೆಗೆ
@ಹನಿಬಿಂದು@
12.03.2024

ತುಳು ದಶಕ -1

ತುಳು ದಶಕ -1
ಬಾಲೆ ಎಲ್ಯ ಪಂದ್ ಜೆಪ್ಪಾದ್ 
ಒಂತೆ ಪೇರ್ ಲಾ  ಮೆಲ್ಲ ಪರ್ಪದ್
ತಟ್ ತಟ್ ದ್  ಮಟ್ಟೆಲ್ಡ್ ಮಾನದ್
ಬಂಜಿಗ್ ಬೋಡಾಯಿ ಬಡವು ಕೊರುದು

ಬೇಗ ಲಕ್ಕುನಿ ಬೊರ್ಚಿ ಪಂದ್
ದಾಲಾ ಸಬ್ದ ಮಲ್ಪರೆ ಪೋಡಿದ್
ಮೆಲ್ಲ ಮೆಲ್ಲ ಗಾಳಿಡ್ ಪಾತೆರೊಂದು
ಪಜ್ಜೆ ಜೋರು ದೀಯರೆಲಾ  ಪೋಡ್ಯೊಂದು

ಬಡವು ಬಾಜೆಲ್ ಕಟ್ ದ್ ಯಾನ್ ಸಾಂಕೆನಾ
ಬ೦ಞ ಡ್ ತಾಂಕಿನ ಬಾಲೆ ಇನಿ ದೊಂಕೆನಾ
@ಹನಿಬಿಂದು@
12.03.2025

ಚಿಟ್ಟೆಯಾಗ ಬೇಕಿದೆ

ಚಿಟ್ಟೆಯಾಗ ಬೇಕಿದೆ

ಚಿಟ್ಟೆಯಾಗಬೇಕಿದೆ ಮೈ ಮನಗಳಿಂದು
ಅಟ್ಟದ ಮೇಲೆ ನಡೆಯುತ ಬೆಂದು
ಕಷ್ಟದ ಹಾದಿಯ ತಿಳಿಯುತ ನಿಂದು
ಬೆಟ್ಟದ ಹಾಗೆ ಕಠಿಣ ಬದುಕ ಸಿಂಧು! 

ಮೊಟ್ಟೆಯ ಹಾಕುವ ಕೋಳಿಯ ತೆರದಿ 
ಕೆಟ್ಟರೂ ಸರಿ ಪಡಿಸುತ ಭವ ಭರದಿ
ಸುಟ್ಟರೂ ಭಾವವ ಅತ್ತಿತ್ತ ಮಂದಿ
ಜುಟ್ಟನು ಹಿಡಿದು ಜಗ್ಗಿದರೂ ಹಿಂಡಿ 

ಪೆಟ್ಟನು ತಿನ್ನುವ ಶಿಲೆಗಳ ಹಾಗೆ
ಭಟ್ಟನು ಪೂಜಿಪ ಮೂರ್ತಿಯ ಹಾಗೆ
ರಟ್ಟೆಯ ಬಲವು ಉಡುಗುವವರೆಗೆ
ನೆಟ್ಟಗೆ ನಿಲ್ಲಲು ಶಕ್ತಿಯಿರುವವರೆಗೆ

ಕೆಟ್ಟರೂ ಕೆಡದ ಬಾಳಿನ ಕಡೆಗೆ
ದಿಟ್ಟಿಸಿ ನೋಡುತ ಭವಿಷ್ಯದೆಡೆಗೆ
ಉಟ್ಟ ಬಟ್ಟೆಯಲೇ ದುಡಿಯುವವಗೆ
ಪುಟ್ಟ ಕಂದನ ಆಸಕ್ತಿಯ ಹಾಗೆ
@ಹನಿಬಿಂದು@
10.03.2025

ಒಂದು ರಾತ್ರಿ

ಒಂದು ರಾತ್ರಿ

ಬಂತು ಬಂತು ಮಳೆ ಬಂತು
ಜೊತೆಯಲಿ ಗಾಳಿಯನು ತಂತು 
ಹರಡಿದ ಬಟ್ಟೆಯು ಜಾರಿತು ಕೆಳಗೆ
ಬಿಡಿಸಿಟ್ಟ ಮಂದರಿ ಹಾರಿತು ಹೊರಗೆ

ಗುಡು ಗುಡು ಸಿಡಿಲು ಬಡಿಯುತಲಿರಲು
ಸುಡು ಸುಡು ಕಾಫಿಯ ಕುಡಿಯುತಲಿರಲು
ಬದಿಯಲಿ ಮಕ್ಕಳು ಕುಳಿತಿರಲು
ಗಡಿಗೆಯ ತುಂಬಾ ಗೆಣಸಿನ ಹೋಳು 

ಚಪ್ಪರಿಸಿ ತಿಂದರು ಎಲ್ಲಾ ಮಕ್ಕಳು
ಕಥೆಯನು ಹೇಳುತ ಅಜ್ಜಿಯೂ ನಕ್ಕಳು
ಕಥೆಯು ತಾ ಕೊನೆಯತ್ತ ಬಂತು
ಗೆಣಸಿನ ಹೋಳು ಮುಗಿದಾಯ್ತು

ಕಾಫಿಯ ಲೋಟವ ತೊಳೆದಾಯ್ತು
ಕರೆಂಟು ಹೋಗಿ ಟೈಮಾಯ್ತು 
ಮಲಗಲು ಸೆಕೆಯೂ ಬಿಡದಾಯ್ತು
ಬಾಗಿಲು ತೆಗೆಯಲು ಭಯವಾಯ್ತು
@ಹನಿಬಿಂದು@

ಶನಿವಾರ, ಮಾರ್ಚ್ 1, 2025

ಮೊರೆ

ಪ್ರೀತಿಯಲ್ಲಿ ಸೋತ ಹೃದಯದ ಮೊರೆ

 ಈ ಜಾಗದಲ್ಲಿ  ಯಾವಾಗ್ಲೂ ಒಂದೇ ಪ್ರಾರ್ಥನೆ ದೇವರೇ. . ನಿಜವಾಗಿಯೂ ಒಬ್ಬರೇ ಇರುವಂತಹ , ಪ್ರೀತಿ ಅವಶ್ಯಕತೆ ಇರುವ, ಪ್ರೀತಿಯ ಬೆಲೆ ತಿಳಿದ, ಪ್ರೀತಿ ಗೆ ಬೆಲೆ ಕೊಡುವ ಒಂದು ಹೃದಯ ಬದುಕಿನಲ್ಲಿ ದಯಪಾಲಿಸಿ...

ದಶಕ -133

ದಶಕ -133

ಬಣ್ಣದ ಚಿಟ್ಟೆಯ ಹಾರಲು ಬಿಡದೆ
ಕಣ್ಣಲ್ಲಿ ಕಣ್ಣಿಟ್ಟು ಹಿಡಿದು ತಂದೆ
ಗೂಡಲಿ ಹಾಕಿ ಚೆನ್ನಾಗಿ ಸಾಕಿದೆ
ಎನ್ನುತ ಖುಷಿಯಲಿ ಗೆದ್ದು ಬೀಗಿದೆ 

ಸ್ವಾತಂತ್ರ್ಯ ಬಯಸಿ ಹಾರಿ ಹೋದಳು
ಅಂದದಿ ಸಾಕಿದ ಅಕ್ಕರೆ ಮರೆತಳು
ಸಂಬಂಧ ಕಳಚಿ ಹೊರಟೇ ಬಿಟ್ಟಳು 
ಕಂಪಿನ ಸ್ವತಂತ್ರ ಬದುಕನು ಕಲಿತಳು

ಪ್ರೀತಿ ಪ್ರೇಮ ಸ್ವಾತಂತ್ಯ ಬೇಕು
ಹಣವೂ ಗುಣವೂ ಜೊತೆಗಿರೆ ಸಾಕು
@ಹನಿಬಿಂದು@
01.03.2025