ವಚನಗಳು
1.
ಸಿರಿ ಸಂಪತ್ತನು ಬೇಡುತ
ಸರಿ-ತಪ್ಪುಗಳ ಮರೆತು ತಾ
ಸರಿ ದಾರಿಯಲಿ ನಡೆಯದಿರೆ
ಕರುಣಿಪನಾ ಸಿರಿಯ ನಮ್ಮ ಈಶಾ?
2.
ಮನದೊಳಗೆ ದ್ವೇಷವನೆ ತುಂಬಿ
ಮುಖದಿ ಕಿರುನಗುವ ಸೂಸುತಲಿ
ಮನಸಿಲ್ಲದ ಮನಸಿನಲಿ ಮಾತಾಡೆ
ವರಗಳ ಮಳೆಯೀವನೇ ನಮ್ಮ ಈಶಾ..
3.
ಮರದಂತೆ ತಾ ಹುಟ್ಟಿ
ಮರದಂತೆ ಬದುಕಣ್ಣ
ಸರ್ವರಿಗಲ್ಲದಿದ್ದರೂ ಸರಿ
ಹಲವು ಸರಿ ಬೀಜಗಳನುದುರಿಸಿ
ತನ್ನಂತೆ ಬೆಳೆವ ಉತ್ತಮ
ಸಸಿಗಳ ಬೆಳೆಸಬೇಕಲ್ಲವೇ ಈಶಾ...
@ಪ್ರೇಮ್@
03.11.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ