1. ಭೂಮಿ ಸೊರಗಿದೆ
ಭೂಮಿ ತಾಯ ಅಂದದಲ್ಲಿ
ಹಸಿರ ಕೊರತೆಯಾಗಿದೆ..
ದಟ್ಟ ಕಾಡು ಮಾಯವಾಗಿ
ಬಿಳಿಯ ಭವನ ಮೂಡಿದೆ...
ಹಿರಿಯರಲ್ಲು ಕಿರಿಯರಲ್ಲು
ಹಸಿರ ಒಲವು ಕುಗ್ಗಿದೆ
ತಾನು ಮಾಡೊ ಕಾರ್ಯದಲ್ಲಿ
ಹಣದ ದಾಹ ಹೆಚ್ಚಿದೆ...
ತಮ್ಮ ಕಾಲ ಬುಡಕೆ ತಾವೇ
ಕೊಡಲಿ ಹಾಕಿದ್ಹಾಗಿದೆ..
ಮರವನೆಲ್ಲ ಕಡಿದು ಮಹಾ
ಹಾದಿ ಬಂದು ಮಲಗಿದೆ..
ಮುಂದೆ ಬರುವ ಜನಾಂಗಕ್ಕೆ
ಗಾಳಿ ನೀರು ಎಲ್ಲಿದೆ?
ಒಳ್ಳೆ ಬದುಕ ಕಟ್ಟಲು
ವಾಯು-ಜಲದ ಬ್ಯಾಂಕು ತೆರೆಯಬೇಕಿದೆ...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ