ಅಕಟಕಟಾ
ಬಂದಿತು ಧರೆಗೆ ನೋವಿನ ಸಂಕಟ
ತಡೆವನೆ ವಿಧಿ ಅವನ ತುಂಟಾಟ
ಜನಗಳ ಮನಗಳು ಆಗಿವೆ ಮರ್ಕಟ
ತಾಳ್ಮೆಯೆ ಇರದು ಅಕಟಕಟಾ..
ಮೋಡವು ಕಟ್ಟಿತು ಮಳೆಯು ಸುರಿಯಿತು
ನೀರದು ಬಂತು ಮನೆಗೇ ನುಗ್ಗಿತು
ಜೀವ ಜಂತುಗಳು ಹೂತು ಹೋಯಿತು
ಜಾತಿ,ರಾಜಕೀಯ ಎಲ್ಲ ನಾಶವಾಯಿತು
ಮಾನವತೆ ಮೆರೆಯಲು ಅವಕಾಶ ಬಂತು
ಸಹಾಯಕೆ ಜನರ ಗುಂಪೆ ಹಾರಿತು
ಕಳ್ಳರ ದಂಡು ಜೊತೆಗೇ ಸೇರಿತು
ಕಟುಕರ ಬುದ್ಧಿ ಸರಿಯಾಗದೆ ಹೋಯಿತು..
ಬಾನು ಬಿದ್ದರೂ ಕಾಡು ಬೆಂದರೂ
ಭೂಮಿ ಬಿರಿದರೂ ಸಾಗರ ಹರಿದರೂ
ಬದುಕದು ಕಮರಿ ಸೆರೆಗೆ ಬಿದ್ದರೂ
ಬುದ್ಧಿ ಬಾರದು ಬಾಳು ಸರಿದರೂ..
@ಪ್ರೇಮ್@
ಪ್ರೇಮರವರ ನನ್ನಮ್ಮ ಪ್ರಸ್ತುತ ಘಟನೆಗಳಾದಾರಿತ ಧರಿತ್ರಿಯ ವಿಕೋಪದ ಕಾರಣಗಳನ್ನು ಸಮಾಜದ ಕುಸಿದ ಮೌಲ್ಯಗಳನ್ನು ಅಲಲೋಕಿಸಿ ಬರೆದು ಓದುಗರಿಗೆ ಉತ್ತಮ ಸಂದೇಶ ಕೊಡುತ್ತದೆ.”ತಾ ಹಾಲುಣಿಸಿದ ಕಂದ ತನಗೆ ಒದ್ದಾಗ’ ಆಗುವ ನೋವು ಭೂಮಿ ತಾಯಿಗೆ ಆಗುವುದು ಸಹಜ. .....ವಿದ್ಯಾಧರ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ