[8/13/2018, 10:46 PM] @PREM@: ಕರುಳಬಳ್ಳಿ
ನನ್ನ ಎದೆಯ ಭಾವದಿಂದ
ಇಳಿದ ಕರುಳ ಬಳ್ಳಿ..
ಹೃದಯದಿಂದ ಕೈಗೆ ಇಳಿದ
ಹಾಡು ಇದೆ ಇಲ್ಲಿ..
ಜಪವು ತಪವು ಬೇಡವದಕೆ
ಮನದಿ ನಿತ್ಯ ನರ್ತನ
ಭವದ ದ್ವಾರ ಸರಿಸಿ ಬಂತು
ಕಾವ್ಯ ಧಾರೆ ಕೀರ್ತನ..
ನನ್ನ ಕವನ ನನ್ನ ಮಗುವು
ಬಂದು ನಲಿಯುತಿರುವುದು
ಮೇಲೆ ಕೆಳಗೆ ಜಗ್ಗಿ ನನ್ನ
ಆಟ ಆಡುತಿರುವುದು..
ಬಾಳಿನಲ್ಲಿ ಒಂಟಿತನವ
ದೂರ ಸರಿಸುತಿರುವುದು
ಪದಗಳೆಲ್ಲ ಒಟ್ಟು ಸೇರಿ
ಆಟವಾಡುತಿರುವುದು..
@ಪ್ರೇಮ್@
[9/9/2018, 10:21 PM] @PREM@: ಪ್ರಾರ್ಥನೆ
ಎಲ್ಯ ಕಬಿತೆಡ್ ಇರೆನ್ ಸುಗಿಪುವ
ಮಲ್ಲ ದೇವಿಯೆ ಈರೆನ್ ಮನಸ್ ಡೇ..
ಎಡ್ಡೆ ಮನಸ್ ನ್ ಕೊರುದು ಕಾಪುಲೆ
ಬದ್ ಕ್ ಗ್ ನೆಲೆ ಈರೆಯೇ..
ಇರೆನ ಜೋಕ್ಲೆನ ಸಾರ ತಪ್ಪುನು
ಮಾಪು ಮಲ್ಪುಲೆ ದೇವಿಯೇ
ಅಪ್ಪೆ ಪನ್ಪಿನ ಮೋಕೆ ಉಪ್ಪಡ್
ಎಂಕ್ಲೆಗೇಪಲ ಇರೆಡನೆ...
ರಡ್ಡ್ ಮನಸ್ ಗ್ ಜಾಗೆ ಬೊರ್ಚಿ
ಒಂಜೆ ಪನ್ಪಿನ ಬಾಳ್ವೆ ಬರಡ್
ಯಾನ್ಲ ಈಲ ಪನ್ಪಿ ಭಾವನೆ ಮರಪಡ್
ಎಡ್ಡೆ ಗೇನದ ನಡೆ ನಡಪಡ್
ಮಗೆಲ ಮಗಲ್ ಲ ಒಂಜೆ ಎನ್ನಡ್
ಜಾತಿ ಬೇದೊಳು ದೂರ ಪೋವಡ್
ರಾಜಕೀಯದ ರಂಗ್ ಮಾಜಡ್
ಗಂಟ್ ಕಟ್ಟುನ ಆಸೆ ದೂರಾವಡ್
@ಪ್ರೇಮ್@
[9/9/2018, 10:21 PM] @PREM@: ಮನಸ್ ದ ಆಸೆಗ್ ಇಂಬು ಕೊರ್ ಲೆ
ಉಡಲ್ ದ ಮೋಕೆನ್ ದಿಂಜಾಲೆ
ಓ ಎನ್ನ ಉಡಲ ಅಪ್ಪೆ ಈರೆ
ಸುಗಿಪುವೆ ಇರೆನೆ ಮನಸಾರೆ...
ಮನಸಾರೆ ಮದಿಪುನು ಕೊರ್ದು ಕಾಪುಲೆ
ಬುಲಿಪು ದೂರ ಮಲ್ಪುಲೆ
ನರಮಾನಿಗೆಡ್ಡೆ ಬುದ್ಧಿ ಕೊರ್ಲೆ
ಬೆಂದ್ ತಿನ್ಪಿನ ಮನಸ್ ಕೊರ್ಲೆ..
ನಾಡ ಮಣ್ಣ್ ಡ್ ಮೋಕೆ ಬರಡ್
ಪೆದ್ದಿ ಅಪ್ಪೆನ್ ಎಡ್ಡೆ ತಾಂಕಡ್
ಹಿರಿಯಕ್ಲೆಗ್ ಮರ್ಯಾದೆ ಕೊರಡ್
ಒರಿಯಗೊರಿ ಪುಗೆಲ್ ಕೊರಡ್
ಮನಸ್ ದಿಂಜಿನ ಭಕ್ತಿ ಬರಡ್
ಅಮ್ಮ ಇರೆಡ ಮೋಕೆ ಉಪ್ಪಡ್
ಕತ್ತಲೆನ್ ಅವು ದೂರ ನೂಕಡ್
ಪಗೆಲ ಸೂರ್ಯನ ಬೊಲ್ಪು ಬರಡ್..
@ಪ್ರೇಮ್@
[9/15/2018, 12:35 PM] @PREM@: ನಮ್ಮ ತುಳುನಾಡ ಗೊಬ್ಬುಲು
ತುಳು ನಾಡ್ದ ಕಲೊಟು ಕಾಲ ಕಾಲೊಗು ಮಸ್ತ್ ಗೊಬ್ಬುಲು ದುಂಬುಡ್ದ್ ಬೊಕ್ಕಲಾ ನಡತೊಂದು ಬೈದ್ಂಡ್. ಒಂಜಿ ಕಾಲೊಡು ರೇಡಿಯ, ಟಿ,ವಿ, ಮೊಬೈಲ್ ಪೂರ ದಾಂತಿನ ಸಮಯೊಡು ಖುಷಿಕ್ಕಾದ್ ಜನೊಕ್ಕುಲು ಗೊಬ್ಬು, ಅಂಕ, ಆಯನೊಲೆನ್ ಮಲ್ತ್ ಪೂರ ಒಟ್ಟು ಸೇರ್ದ್ ಖುಷಿ ಪಡೆಯೊಂತೆರ್. ಕಾಲ ಪೋಯಿಲೆಕ್ಕೊನೆ ಟಿವಿ, ಮೊಬೈಲ್ ಬತ್ತ್ಂಡ್, ಪಿದಾಯಿತ್ತಿ ಜನ ಉಳಯಿ ಸೇರೊಂಡೆರ್.
ಗೊಬ್ಬುಲೆನ ಬದಲ್ ಗ್ ವೀಡಿಯೋ ಗೇಮ್, ಮೊಬೈಲ್ ಗೇಮ್ ಪೂರಾ ಬತ್ತ್ಂಡ್, ಬ್ಯಾಟ್ ಬಾಲ್ ಲಾ ಕೋಡಿ ಸೇರ್ದ್ಂಡ್.. ಆಂಡ ಆ ಗೊಬ್ಬುಲೆನ್ ನಮ ಮರತ್ ಬುಡಂದೆ, ಅವೆಕ್ಲೆನ್ ಪೂರಾ ಒರ ನೆನಪು ಮಲ್ತೊನ್ಗನಾ..
1.ಕುಂಟಬಿಲ್ಲೆ
ಚೇಪಟ್ಟೆದ ಕಲ್ಲ್ ಅತ್ತ್ಂಡ ಓಡುದ ತುಂಡುನು ನೆಲಟ್ ಗೆರೆ ಪಾಡ್ದ್ ಮಲ್ತಿನ ಕೋಣೆದುಲಾಯಿ ದಕ್ಕ್ ದ್ ರಡ್ಡ್ ಕಾರ್ ಲಾ ಒಟ್ಟಿಗೆ ಪಾಡ್ದ್ ಲಾಗ್ಯೊಂದು ಪೋಪಿನ ಗೊಬ್ಬು ಅಂದು. ಒಂಜೆ ಕಾರ್ಡ್ ಕೋಣೆಡ್ದ್ ಕೋಣೆ ಲಾಗ್ಯೆರೆಲಾ ಉಂಡು. ಕಲ್ಲನ್ ದುಂಬುದ ಕೋಣೆಗ್ ಒಂಜೆ ಕಾರ್ ಡ್ ನೂಕೊಡು. ಆಂಡ ಕಲ್ಲ್ ಪಾಡ್ನಗ ಆವಡ್, ನೂಕ್ನಗ ಆವಡ್ ಗೆರೆಡ್ತ್ ಪಿದಾಯಿ ಪೋಂಡ ಆಯೆ ಆಟಡ್ತ್ ಔಟಾಪೆ.
2. ಕುಟ್ಟಿದೆಣ್ಣೆ
ಈ ಆಟ ಭಾರತದ ಮೂಲೆ ಮೂಲೆಡ್ಲಾ ಪುದರ್ ಪೋಯಿನವು. ಹಿಂದಿಡ್ ಆಮಿರ್ಖಾನ್ ನ ಒಂಜಿ ಪಿಕ್ಚರೆ ಉಂಡು ಉಂದೆತ್ತ ಬಗ್ಗೆ. ದೊಣ್ಣೆಡ್ ಕುಟ್ಟಿನ್ ಲಕ್ಕಾದ್ ರನ್ ಮಲ್ಲುನ ನಮ್ಮ ದೇಸೀ ಆಟ.
3. ಲಗೋರಿ-ಕಲ್ಲನ್ ಮೇಲ್ ಮೇಲ್ ಕಟ್ಟ್ ದ್ ಚೆಂಡ್ ಡ್ ಅವೆನ್ ಹಾಕ್ದ್ ಬೂರಾದ್ ಟೀಮ್ದಕ್ಲು ಎದ್ರ್ ಗುಂಪುದಕ್ಲೆನ ಚೆಂಡ್ಗ್ ತಿಕ್ಕಾಂದೆ ಬಲಿತ್ದ್ ಕಟ್ಟೊಡು.
ಇಂಚಿನ ಗೊಬ್ಬುಲ್ನ ಒಟ್ಟಿಗೆ ಟಯರ್ ಬುಡ್ ಪಿನಿ, ಕೊತ್ಲಾಯ್ದ ಕ್ರಿಕೆಟ್, ತಪ್ಪುದ ಬೀಡಿ, ಖೋ,ಕಬಡ್ಡಿ, ಕಲ್ಲಾಟ ಪೂರಾ ನಮ್ಮ ಗ್ರಾಮೀಣ ಕ್ರೀಡೆಲು.
@ಪ್ರೇಮ್@
[9/23/2018, 9:42 AM] @PREM@: ಸಿಸಿಆರ್ ಟಿ ಯ ಸ್ನೇಹಿತರೊಡನೆ ನನ್ನ ಅನುಭವಗಳು
'ದೇಶ ಸುತ್ತು, ಕೋಶ ಓದು' ಎಂಬ ಮಾತಿದೆ. ಪುಸ್ತಕಗಳನ್ನೋದಿದರೆ ಪ್ರಾಯೋಗಿಕ ಜ್ಞಾನ ಲಭಿಸದು. ಬೌದ್ಧಿಕ ಜ್ಞಾನವಷ್ಟೆ ಹೆಚ್ಚುವುದು. ಪ್ರಾಯೋಗಿಕ ನೈಜ ಅನುಭವಗಳನ್ನು ಮನಸಾರೆ ಪಡೆದು ತಣಿಯಲು ಸಿಸಿಆರ್ ಟಿ ಯಂಥ ಗುಂಪುಗಳಲ್ಲಿ ನಾವು ನಮ್ಮ ರಾಜ್ಯವನ್ನು ಪ್ರತಿನಿಧಿಸುವುದೇ ಖುಷಿ ತರುವ ವಿಚಾರ.
ಉತ್ತರ ಭಾರತವನ್ನು ಬರಿಯ ಭೂಪಟದಲ್ಲಿ ಮಾತ್ರ ನೋಡಿದ್ದ ನನಗೆ ಇಷ್ಟು ಬೇಗ ನಾನಾ ಊರೆಲ್ಲ ಸುತ್ತಾಡಿ ಬೆಟ್ಟದಷ್ಟು ಅನುಭವಗಳ ಗಂಟನ್ನು ನನ್ನೊಡನೆ ಅಲ್ಲಿಂದ ಹೊತ್ತು ತರುವೆನೆನುವ ಕಲ್ಲನೆಯೂ ನನಗಿರಲಿಲ್ಲ! ಸುಳ್ಯದ ಸಿಸಿಆರ್ ಟಿ ತಂಡ ಉತ್ತರ ಭಾರತದ ಪ್ರವಾಸವನ್ನು ಶ್ರೀಯುತ ಚಿನ್ನಪ್ಪ ಗೌಡರ ಅಧ್ಯಕ್ಷತೆಯಲ್ಲಿ ನಡೆಸುವುದು ನನಗೆ ತಿಳಿದಿರಲಿಲ್ಲ. ಈ ವರ್ಷ ಅದು ತಿಳಿದ ಕ್ಷಣವೇ ನಾನೂ ತೆರಳಲು ನಿರ್ಧರಿಸಿದೆ. ನನಗೆ ಅದು ನಮ್ಮ ರಾಜ್ಯದ ಸಂಸ್ಕೃತಿಯನ್ನೂ ಹೊತ್ತೊಯ್ದು ದೂರದ ಉತ್ತರಾಕಾಂಡ ರಾಜ್ಯದಲ್ಲಿ ಅಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಡನೆ ಹಂಚಿಕೊಳ್ಳುವ ಕಾರ್ಯವಿದೆ ಯೆಂದು ನನಗೆ ನಂತರ ತಿಳಿಯಿತು. ಆಗ ನನಗಾದ ಆನಂದ ಅಷ್ಟಿಷ್ಟಲ್ಲ!
ನಮ್ಮ ಇಪ್ಪತ್ತು ಜನರ ತಂಡವು ವಿಮಾನದಲ್ಲಿ ದೆಹಲಿಗೆ ತೆರಳಿದಾಗ ಆದ ಅನುಭವ ಅತ್ಯದ್ಭುತ. ಕಾರಣ ಅದು ನನ್ನಂತೆಯೇ ಹಲವರಿಗೆ ಮೊದಲ ವಾಯುಯಾನದ ಅನನ್ಯ ಅನುಭವ! ಗಾಳಿಯಲ್ಲಿ ತೇಲಿಕೊಂಡು ಮೋಡದ ನಡುವೆ ಸಾಗುವುದು..ವಾರೆ ವಾ..ಅನುಭವಿಸಿಯೇ ಪಡೆಯಬೇಕು ಆ ಸಂತೋಷವನ್ನು! ಮನದಲ್ಲಿನ ಕನಸೊಂದು ನನಸಾದಾಗ ಸಿಗುವ ಆನಂದ ಅನುಭವಿಯೇ ಬಲ್ಲ, ಬಲ್ಲವನೇ ಬಲ್ಲ ಬೆಲ್ಲದ ಸವಿಯ ಎಂದಂತೆ!
ದೆಹಲಿಯ ಬೇಸಿಗೆಯ ಬಿಸಿಯ ಅನುಭವ ಒಂದೆಡೆಯಾದರೆ, ಉತ್ತಾರಾಕಾಂಡದಲ್ಲಿನ ಬೇಸಿಗೆಯ ತಣ್ಣನೆ ಅನುಭವ ಮತ್ತೊಂದೆಡೆ. ಉತ್ತರಾಕಾಂಡವೇ ಕೆರೆಗಳ ತವರೂರು. ನೈನಿತಾಲ್, ಭೀಮ್ ತಾಲ್ ಗಳಂಥ ಕೆರೆಗಳನ್ನು ನೋಡುವುದರ ಚಂದ ಒಂದೆಡೆಯಾದರೆ ಗಿರಿ,ಬೆಟ್ಟ ಕಣಿವೆಗಳ ನೋಟ ಕಣ್ಣಿಗೊಂದು ಹಬ್ಬ, ಹೃದಯಕ್ಕೆ ಭೋಜನ!
ಅಲ್ಲಿನ ಪರಿಸರ ಹೇಗೆ ಹಿತವೋ, ಅಂದವೋ ಹಾಗೆಯೇ ಅಲ್ಲಿನ ಜನರೂ ಕೂಡ ಅಂದ ಚಂದದೊಡನೆ ಹೃದಯ ವೈಶಾಲ್ಯರೂ ಹೌದು. ಹಾಗೆಯೇ ಅಲ್ಲಿನದ್ದೇ ಆದ ಕುಮೌನಿ ಭಾಷೆ, ಅವರ ಆಚಾರ ವಿಚಾರಗಳು, ಬಟ್ಟೆ,ಬರೆ ಒಡವೆಗಳಲ್ಲೂ ಸಂಸ್ಕೃತಿಯ ಆಚರಣೆ ಭಾರತವನ್ನು ಹೆಮ್ಮೆಯಿಂದ ಮತ್ತಷ್ಟು ಪ್ರೀತಿಸುವಂತೆ ಮಾಡುತ್ತದೆ. ನಾನು ಈ ದೇಶದಲ್ಲಿ ಹುಟ್ಟಿರುವುದು ನನ್ನ ಪುಣ್ಯ ಅನ್ನಿಸಿಬಿಡುತ್ತದೆ.
ಮನದಾಳದ ಮಾತು ನೋಡುವ ನೋಟಕ್ಕೆ ಬೆರಗಾಗಿ ಎದೆಯಾಳದಲ್ಲೆಲ್ಲೋ ಅವಿತು ಕುಳಿತು ಪ್ರಕೃತಿಯ ಮುಂದೆ ನೀನೇನೂ ಇಲ್ಲ ಅನ್ನಿಸಿಬಿಡುತ್ತದೆ. ಪೈನ್ ವೃಕ್ಷಗಳು, ಅವುಗಳ ಕಾಯಿಯಲ್ಲಿನ ಬೇರೆ ಬೇರೆ ಮನಸೆಳೆವ ವಸ್ತುಗಳು, ಲಿಚ್ಚಿ ಸೇಬಿನಂಥ ಹಣ್ಣುಗಳು ಮನಸೆಳೆಯುತ್ತವೆ.
ಜನರ ಆದರ-ಗೌರವಗಳು, ಪ್ರೀತಿಯ ಮಾತು ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ.
ಉತ್ತರ ಭಾರತವೇ ಹಾಗೆ. ಸಂಸ್ಕೃತಿಗಳ ಸಂಪತ್ತು ಅಲ್ಲಿ ಮೇಳೈಸಿರುತ್ತದೆ. ಪರಸ್ಥಳಗಳಿಗೆ ಹೋದಾಗ ನಮ್ಮವರೆನಿಸಿದ ನಮ್ಮ ಒಡನಾಡಿಗಳ ಸಹಾಯಹಸ್ತ, ಸಹಕಾರವೂ ಮನತುಂಬಿ ಬರುತ್ತದೆ.
ಒಟ್ಟಿನಲ್ಲಿ ನನ್ನ ನೆನಪಿನ ಬುತ್ತಿಯಲ್ಲಿ ತುತ್ತುಗಳನ್ನುಳಿಸಿದ ಸಿಸಿಆರ್ ಟಿ ತಂಡಕ್ಕೆ ನಾ ಅಭಾರಿ.
@ಪ್ರೇಮ್@
[10/12/2018, 3:30 PM] @PREM@: ಗಂಗೆಯ ಜಳಕ ಮೈಮನ ಪುಳಕ
ಮನಸ್ಸು ತುಂಬಾ ಬೇಸರಗೊಂಡಿತ್ತು! ದೇಹ ಜಡವಾಗಿತ್ತು! ಏನೋ ಬದಲಾವಣೆಯನ್ನು ಬಯಸುವ ಮನಸ್ಸಿನ ಲಯ ತನ್ನ ಬಾಹ್ಯ ವರ್ತನೆ ಸೂಚಿಸುತ್ತಿತ್ತು. ಅದು ಹತ್ತನೇ ತರಗತಿ ಮಕ್ಕಳ ಪರೀಕ್ಷಾ ಮಾಹಿತಿಯ ಮುಖಾಮುಖಿ ಸಂವಹನ ಸಭೆಗೆ ಹಾಜರಾಗಿದ್ದ ದಿನ ನನ್ನ ಆಪ್ತ ಗೆಳೆಯ ಉದಯ್ ಮಾಸ್ಟರ್ ದುಗ್ಗಲಡ್ಕ ರವರಿಂದ ಸಿಸಿಆರ್ ಟಿ ಅಂತರ್ ರಾಜ್ಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಬಗ್ಗೆ ಮಾಹಿತಿ ಲಭ್ಯವಾಯಿತು. ತಕ್ಷಣ ಎಚ್ಚೆತ್ತ ಮನಸ್ಸು ಸುಳ್ಯ ಸಿಸಿಆರ್ ಟಿ ಘಟಕದ ಅಧ್ಯಕ್ಷರಾದ ಶ್ರೀಯುತ ಚಿನ್ನಪ್ಪ ಗೌಡರನ್ನು ದೂರವಾಣಿ ಮೂಲಕ ಸಂಪರ್ಕಿಸುವಂತೆ ಮಾಡಿತು.
ಅಲ್ಲಿಂದ ಪ್ರಾರಂಭವಾಯಿತು ಉತ್ತರ ಭಾರತದ ಕೆಲ ರಾಜ್ಯಗಳನ್ನು ನೋಡಬೇಕೆಂಬ ಹಂಬಲ! ಯಾವುದೇ ಹೊಸ ವಿಷಯದ ಬಗ್ಗೆ ತಿಳಿದ ತಕ್ಷಣ ,ನನ್ನ ಮೊದಲ ಕೆಲಸ, ಸಾದ್ಯವಾದಷ್ಟು ಆ ವಿಷಯದ ಬಗ್ಗೆ ಪ್ರಶ್ನೆ ಹಾಕಿ ಇನ್ನಷ್ಟು ವಿಷಯಗಳನ್ನು ಕಂಡುಕೊಳ್ಳುವುದು. ಘಟಕದ ಅಧ್ಯಕ್ಷರನ್ನು ಹಾಗೂ ಈ ಹಿಂದೆ ಭಾಗವಹಿಸಿದ ನನ್ನ ಕೆಲ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿ,ನಾನೂ ಭಾಗವಹಿಸುವೆನಂದು ಗಟ್ಟಿ ನಿರ್ಧಾರದಲ್ಲಿ ಸಾಂಸ್ಕೃತಿಕ ತಂಡದಲ್ಲಿ ನನ್ನ ಹೆಸರನ್ನು ನೋಂದಾಯಿಸಿದೆ.
*ಈ ಕಾರ್ಯಕ್ರಮದ ಉದ್ದೇಶವೇನು?
* ಸಾಂಸ್ಕೃತಿಕ ವಿನಿಮಯ ಹೇಗೆ ನಡೆಯಬೇಕು?
* ಪ್ರತಿಯೊಬ್ಬರ ಕರ್ತವ್ಯಗಳೇನು?
*ಹೊರಡುವ ಮುನ್ನ ಹೇಗೆ ತಯಾರಾಗಬೇಕು?
* ಹೋಗುವ ಸ್ಥಳಗಳಿಗೆ ನಾವು ಹೇಗೆ ದೈಹಿಕವಾಗಿ ಹೊಂದಿಕೊಳ್ಳಲು ಸಿದ್ಧರಾಗಬೇಕು?
*ಪ್ರಯಾಣದ ಹಾಗೂ ಭೇಟಿಯ ಸ್ಥಳಗಳ, ಪೂರ್ಣ ಕಾರ್ಯಕ್ರಮಗಳ,ಊಟ-ತಿಂಡಿ ವಿವರಗಳ ಮತ್ತು ಅಗತ್ಯವಾಗಿ ಬೇಕಾದ ಹಣಕಾಸಿನ ಬಗ್ಗೆ ವಿವರಗಳನ್ನು ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಚರ್ಚಿಸಿ ವಿವರ ಪಡೆಯಲಾಯಿತು.
ಜೀವನದಲ್ಲಿ ಕಂಡ ಕನಸು ವಿಮಾನ ಪ್ರಯಾಣ! ಅದು ಈ ಸಾಂಸ್ಕೃತಿಕ ಪ್ರವಾಸದಲ್ಲಿ ದಕ್ಕಿತು. ಹೆಚ್ಚು ಸಂತಸಗೊಂಡು ಗಾಳಿಯಲ್ಲಿ ಹಾರುವ, ಮೇಲಿಂದ ಕೆಳಕ್ಕೆ ಹೋಗುವ ಮೊದಲಾದ ಕುತೂಹಲಕಾರಿ ಅಂಶಗಳಿಗೆ ಸ್ಪಷ್ಟ ಉತ್ತರ ಪಡೆದ ನಮಗೆ ಸಂಭ್ರಮದ, ಮನ:ಸಂತೋಷಗೊಳಿಸಿದ ಪ್ಯಾಣ ಇದಾಗಿತ್ತು ಎಂದು ಹೇಳುತ್ತಾ ಹೊರಡುವಾಗ ನೆನಪಾಗುವುದೇ ಗಂಗೆಯ ಜಳಕ!
ವಾವ್!!! ಗಂಗೆಗೆ ಗೆಗೆಯೇ ಸಾಟಿ! ಗಂಗೆಯಂದಕೆ ಏನೇನೋ ಧಾರ್ಮಿಕ ಪ್ರಸಂಗಗಳ ಕಥೆ, ಆಧುನೀಕರಣದ ಕರುಣಾಜನಕ ಕಥೆ, ಜಾಗತಿಕ ತಾಪಮಾನ, ಮೂಢನಂಬಿಕೆ, ನಾವು ನಮ್ಮ ದಿನನಿತ್ಯ ಹಲವಾರು ವಿಧಾನಗಳಲ್ಲಿ ಕಾಣುವ ಗಂಗಾ ಶುದ್ಧೀಕಾರಕ ಸೆಸ್, ನೀರಿನ ಅಸಂಬದ್ಧ ವಿಕಸನ. ಗಂಗೆ ಸರ್ವ ಋತು ನದಿ, ಭಾರತದ ಉದ್ದವಾದ ನದಿ.ಜಲ ಪ್ರಳಯ, ಔಷಧೀಯ ಗುಣ, ಈ ಪಟ್ಟಿಯಲ್ಲಿ ಇನ್ನೂ ಅನೇಕ ಅಂಶಗಳನ್ನು ಸೇರಿಸಬಹುದು.ಹಾಗಾಗಿ ಗಂಗಾ ಜಳಕ ನನ್ನ ಹಲವು ಪಾಪಗಳನ್ನು ಕಳೆದು ಪುಣ್ಯ ಸಂಪಾದಿಸಿ ಎಂಬ ಹೇಳಿಕೆಯನ್ನು ಪರೀಕ್ಷಾರ್ಥವಾಗಿ ಅನುಭವಿಸಲು ಅವಕಾಶವಾಗಿದ್ದು ಈ ಕಾರ್ಯಕ್ರಮದಿಂದ ಎಂಬುದನ್ನು ಬಹಳ ನಿರಾಳವಾಗಿ ಹೇಳಬಲ್ಲೆ..
ಆದರೆ ಹೇಳುತ್ತಿರುವುದು ಪ್ರವಾಸಿ ತಾಣಗಳ ಬಗ್ಗೆ! ಕಾರಣವೇನೆಂದರೆ ಈ ಒಟ್ಟು ಕಾರ್ಯಕ್ರಮದ ಆಯೋಜನೆ ಅತ್ಯದ್ಭುತವಾಗಿತ್ತು! ಸಾವಿರಾರು ಕಿಲೋಮೀಟರ್ಗಳ ಆಚೆಗೆ ನಮ್ಮ ಕಂಗೀಲು, ಸುಗ್ಗಿ ಕುಣಿತ, ದೈವ ನರ್ತನ,ಭರತ ನಾಟ್ಯ,ಯಕ್ಷಗಾನಗಳ ವಿನಿಮಯ ಹೊಸ ಪರಿಕಲ್ಪನೆಯ ಕನಸನ್ನು ಸಾಕಾರಗೊಳಿಸುವಂತೆ ಪ್ರದರ್ಶನ ಮಾಡಿ, ಕೈ ಚಪ್ಪಾಳೆಗಿಟ್ಟಿಸಿ, ಛಾಯಾಚಿತ್ರ ಕ್ಲಿಕ್ಕಿಸಿ,ಬಣ್ಣ ಬಣ್ಣದ ಸಾಂಸ್ಕೃತಿಕ ವೇಷದ ಅಂಬೆಗಾಲಿಡುವ ಮಗುವಿನಂತೆ ನೃತ್ಯದಲ್ಲಿ ಹಾಕಿದ ಹೊಸ ಹೆಜ್ಜೆಗಳಿಗೆ ಅವಕಾಶ ನೀಡುವಂಥ ಒಂದು ಅಭೂತಪೂರ್ವ ಪ್ರಯತ್ನವನ್ನು ಸಿಸಿಆರ್ ಟಿ ಘಟಕ ಸುಳ್ಯ ನಡೆಸಿದೆ ಎಂಬ ಹೆಮ್ಮೆ ನಮ್ಮದಾಗಿದೆ.
ನಮಗೆ ಸಾಂಸ್ಕೃತಿಕ ವಿನಿಮಯ ಹೊಸತಾದರೂ ಸಾಂಸ್ಕೃತಿಕ ಕಾರ್ಯಕ್ರಮ ಹೊಸತಲ್ಲ. ಆದರೆ ಉತ್ತರಾಖಾಂಡ ರಾಜ್ಯದ ಜನ ನೋಡಿ ಖುಷಿಪಟ್ಟು ನಮ್ಮೂರಿನ ಕನ್ನಡ ಜಾನಪದ ಹಾಡಿಗೆ ಸಾಮೂಹಿಕ ನೃತ್ಯದಲ್ಲಿ ಭಾಗಿಯಾದದ್ದು ಸ್ವಾರಸ್ಯಕರ ಸ್ನೇಹದ, ಭಾರತ ಮಾತೆಯ ಅದಕ್ಕಿಂತಲೂ ಮಿಗಿಲಾಗಿ C. C. R. T ಯ ಉದ್ದೇಶವನ್ನು ಈಡೇರಿಸುವ ಪ್ರಯತ್ನ ನಮ್ಮದೇ ಖರ್ಚಿನಲ್ಲಿ!!
ನಾನು ಪ್ರಯಾಣಿಸಿದ ಪ್ರಯಾಣದ ಬಗ್ಗೆ, ನೀಡಿದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ, ಪಡೆದುಕೊಂಡ ಹೊಸ ಹೊಸ ಅನುಭವಗಳ ಬಗ್ಗೆ, ಹಂಚಿಕೊಂಡ ಸಂತೋಷದ ಕ್ಷಣಗಳ ಬಗ್ಗೆ, ಮುನಿಸಿಕೊಂಡ ಗಳಿಗೆಗಳ ಬಗ್ಗೆ, ಉದ್ಗರಿಸಿದ ಕುತೂಹಲಗಳ ಬಗ್ಗೆ, ಹಸಿರ ಕಾನನ, ಕೊಳದ ಸೌಂದರ್ಯ, ನವೀನ ಅನುಭವ, ಹಂಚಿಕೊಂಡು ತಿಂದ ಊಟ-ತಿಂಡಿ-ತಿನಿಸು, ಕಾಲಕ್ಷೇಪಕ್ಕಾಗಿ ನಡೆಸಿದ ಹರಟೆ,ಸಂಪೂರ್ಣವಾಗಿ ಸಿಕ್ಕ ಸ್ವತಂತ್ರ ಸಮಯದ ವರ್ತನೆಗಳು, ಬೇಕೆಂದಾಗ ಸಿಗದ ಊಟದ ಬಗ್ಗೆ, ದೆಹಲಿ, ಉತ್ತರಾಖಾಂಡ, ಆಗ್ರಾ, ಮಹಾರಾಷ್ಟ್ರ,ಆಂಧ್ರ ಹಾಗೂ ಉತ್ತರ ಕರ್ನಾಟಕಗಳ ಜನ ಜೀವನದ ಅತ್ಯುನ್ನತ ಮಟ್ಟದ ಜೀವನ ಶೈಲಿ, ಕೊಳೆಗೇರಿ-ಝೋಪಡಿಗಳ ಜನರ ಜೀವನದ ಕಷ್ಟಗಳ ಬಗ್ಗೆ, ನಮ್ಮ ತಂಡದ ಸಂಗಡಿಗರ ಸಂಚಲನಗಳ ಬಗ್ಗೆ, ತಂಡದಲ್ಲಿನ ಆತ್ಮೀಯ ವೃತ್ತಿ ಬಾಂಧವರ, ಗೆಳೆಯರ ಬಗ್ಗೆ,ಜೀವನದಲ್ಲಿ ಒಮ್ಮೆ ಮಾತ್ರ ಬಂದು ಹೋಗುವ ಅಪರಿಚಿತ ಸಹ ಪ್ರಯಾಣಿಕರ ಬಗ್ಗೆ, ಆನಂದ ಪಟ್ಟು ತಿಂದ ಲಿಚ್ಚಿ ಹಣ್ಣುಗಳ ಬಗ್ಗೆ, ಅವರವರ ಬಟ್ಟೆ ಬರೆ,ಮಾತು, ಬಣ್ಣ, ಆವೇಶ, ದುಃಖ-ದುಗುಡ, ಕಷ್ಟ-ಸುಖ, ಮೊಬೈಲ್ ಫೋನುಗಳ, ವಸ್ತು, ಹಣ, ಖರೀದಿಗಳ ಬಗ್ಗೆ, ಕೈ ಜಾರಿ ಹೋದ ಕ್ಷಣಗಳಿಗೆ ಅರೆಗಳಿಗೆ ಪೆಚ್ಚಾದ, ಮಂತ್ರಿ -ಮಹೋದಯರ ಬಳಿ ತೆಗೆದ ಫೋಟೋಗಳ ಬಗ್ಗೆ, ಪರ ಊರಿಗೆ ತೆರಳಿದಾದ ಅಲ್ಲಿ ಸಿಕ್ಕ ನಮ್ಮೂರಿನವರ ಪ್ರೀತಿಯ ಬಗ್ಗೆ, ನಮ್ಮೂರಿನ ಊಟ-ತಿಂಡಿಗಳು ಪರ ಊರಿನಲ್ಲಿ ಸಿಕ್ಕಾಗ ಆದ ಸಂತಸದ ಬಗ್ಗೆ,ನಮ್ಮನ್ನು ನಾವೇ ಪ್ರಶ್ನಿಸಿ ಪೆಚ್ಚು ಮೋರೆ ಹಾಕಿದ ಬಗ್ಗೆ, ಮರೆತು ಹೋದ ಮರೆವಿನ ಬಗ್ಗೆ, ಕೈ ಕೊಟ್ಟ ಸಾಮಾನ್ಯ ಜ್ಞಾನದ ಬಗ್ಗೆ, ಗಮನವೀಯದ ಸಣ್ಣ ಪುಟ್ಟ ಅಂಶಗಳಿಂದಾದ ನಷ್ಟದ ಬಗ್ಗೆ, ಮನೆಯಿಂದ ಹೊರಟ ಮೇಲೆ ನಮ್ಮ ಅನುಪಸ್ಥಿತಿಯಲ್ಲಿ ಮನೆಯವರಿಗಾದ ವ್ಯತ್ಯಾಸದ ಬಗ್ಗೆ, ಕೈಯಲ್ಲಿದ್ದ ಹಣ ಖಾಲಿಯಾಗಿ ಸಾಲ ಪಡೆದ ಬಗ್ಗೆ, ಪರರಿಗೆ, ತನ್ನವರಿಗೆ,ಕೈ ನೀಡಿ ಆಧಾರವಾದ ಬಗ್ಗೆ, ನಾವೆಲ್ಲರೂ ಒಂದೇ ಎಂಬ ಭಾವದ ಬಗ್ಗೆ, ಹಾರಿದ ವಿಮಾನದ ವೇಗದ ಬಗ್ಗೆ, ಅಷ್ಟೇ ನಿಧಾನವಾಗಿ ಓಡಿದ ರೈಲಿನ ಅದರ ಸಮಯದ ಬಗ್ಗೆ, ಸಂತೆಯಲ್ಲಿ ಚರ್ಚಿಸಿ ಕೊಂಡ ವಸ್ತುಗಳ ಬಗ್ಗೆ, ಗಾಳಿಯ ವೇಗಕ್ಕೆ ಹಾರಿ ಹೋದ ಧೂಳಿನ ಕಣಗಳ ಬಗ್ಗೆ, ಹೋದ ರೋಪ್ ವೇ ಇವೆಲ್ಲವುಗಳ ಬಗ್ಗೆ ನನ್ನೆಲ್ಲಾ ಸಹ ಪ್ರಯಾಣಿಕ ತಂಡದವರು ತಮ್ಮ ಅನುಭವಗಳನ್ನು ಬರೆದಿರಬಹುದು. ಆದರೆ ನಾನು ಹೇಳಿರುವುದು ನನ್ನ ದೇಶದ ಸಂಸ್ಕೃತಿ, ಸ್ನೇಹ, ಮೈಮನ ಪುಳಕಗೊಂಡ ಗಂಗಾ ಸ್ನಾನದ ಬಗ್ಗೆ ಈ ಎಲ್ಲಾ ಅನುಭವಗಳ ಸರಮಾಲೆಯ ಹಿಂದಿರುವ ಚಿನ್ನಪ್ಪ ಗೌಡರಿಗೆ ಮತ್ತು ಹಿರಿಯರಾದ ಕೇಶವರಿಗೆ ನನ್ನೆಲ್ಲ ಸ್ನೇಹಿತ ಸಹ ಪ್ರಯಾಣಿಕರಿಗೆ ನಾನು ಮನದಾಳದಿಂದ ಚಿರಋಣಿ.
ಕೊನೆಯ ಮಾತು-ಗಂಗಾಸ್ನಾನ ನಿಜವಾಗಿಯೂ ಪುಣ್ಯ ಸ್ನಾನ.
ಜೈ ಹಿಂದ್, ಜೈ ಕರ್ನಾಟಕ.
ಸಹ ಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು
ಸುಳ್ಯ, ದ.ಕ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ