ಗುರುವಾರ, ಜೂನ್ 18, 2020

1439. ರಾಜನಾಗಿ

ಸ್ಪರ್ಧೆಗೆ

ರಾಜನಾಗಿ...

ಕನಸಿನಲ್ಲಿ ರಾಣಿ ಬಂದು ಒಂದು ಹೂವ ಮುತ್ತನಿತ್ತಳು
ನೀನೆ ಜಗದ ದೊರೆಯು ಎಂದು ದೂರ ಓಡಿ ಹೋದಳು
ಅಂದಿನಿಂದ ನಾನೆ ದೊರೆಯು ಆಕೆ ನನ್ನ ಪತ್ನಿಯು
ಆಳು ಕಾಳು ಇಹರು ನಿತ್ಯ ಊಟ ತಿಂಡಿ ನಿದ್ದೆಯು

ಪ್ರಜೆಗಳೆಲ್ಲ ಬಂದು ತಮ್ಮ ಕಷ್ಟ ಹೇಳಿಕೊಳುವರು
ಪ್ರಾಣಿಗಳಿಗೂ ದಯೆಯು ಇಹುದು ಸ್ವತಂತ್ರರಾಗಿ ಇರುವವು
ನಾನು ತಾನು ನೀನು ಇಲ್ಲ ಸರ್ವರೊಂದೆ ಎನುವರು
ಬಡವ ಬಲ್ಲಿದ ಮೇಲು ಕೀಳು ಜಾತಿಯೆಲ್ಲ ಅಳಿದವು..

ಎಲ್ಲರೊಂದೆ ನ್ಯಾಯ ನೀತಿ ಕಷ್ಟ ಸುಖದ ಹಂಚಿಕೆ
ಮೋಸ ಗೀಸ ಅನ್ಯಾಯವಿಲ್ಲ ಸರ್ವ ಜನರ ಗುಂಪಿಗೆ
ಜಂಗಮವು ಟಿವಿ ಎಸಿ ತಂಪು ಬಿಸಿಯ ಬಳಸಿ ಬದುಕುತ
ಪ್ರವಾಸ ವಾಸ ವನವ ಬೆಳೆಸಿ ಸಂತಸದಿ ಬಾಳು ಬೆಳಗುತ

ರಾಜ ನಾನು ಕಿರೀಟವಿಲ್ಲ ತಾರೆ ಎನುತ ಎದ್ದೆನು
ಚಾಪೆ ಜಾರಿ ಕಾಲು ಉಳುಕಿ ಮತ್ತೆ ಕೆಳಗೆ ಬಿದ್ದೆನು
ರಾಣಿಯಿಲ್ಲ ಜನರೂ ಇಲ್ಲ ನನ್ನ ಮನೆಯೆ ಅರಮನೆ
ಅಮ್ಮ ಗದರಿ ಏಳ ಹೇಳಿ ಕೇಳಿ ನಕ್ಕಳು ಸುಮ್ಮನೆ!!
@ಪ್ರೇಮ್@
15.06.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ