ಭಾವಗೀತೆ
ರಾಧಾಮಾಧವ
ಕೆಮ್ಮುಗಿಲು ಬರಸೆಳೆದು ಆಗಸವ ಅಪ್ಪುತ್ತಿರೆ
ಧರೆ ಮೇಲೆ ಸಂತಸದ ತೆರೆಯುದುರಿ
ಸಂತಸವು ಮನೆಮಾಡಿದೆ ಕೇಳೆ ನೀ ಕಿನ್ನರಿ..
ಬಾ ಬಾರೆ ಸೇರೇ ನೀ ನನ್ನ ಬಂಗಾರಿ..
ಹೋಗೋ ಮೋಹನ ಬರೆನು ನಾನು
ಮುಗಿಲು ಹೊಡೆದು
ಗುಡುಗ ತಾಳೆನು
ಭಯವು ನನಗದು ಕಳ್ಳ ನೀನು
ಮನದ ವಾಂಛೆಯ ಬಿಡುವೆಯೇನು?
ಬಾರೆ ಮುದ್ದಿನ ಪ್ರಾಣದರಸಿಯೆ
ಕೊಳಲ ನಾದಕೆ ಒಲಿದು ಬಾರೆಯೇ
ಅಮಿತ ಆಸೆಯ ದೂರ ನೂಕುವೆ
ಏಕೆ ಸುಳ್ಳನು ಮೇಲೆ ತೋರುವೆ..
ದೂರ ಹೋಗೋ ಗೋಪಾಲ ನೀನು
ನಿನ್ನ ಜಾಲವ ಬಲ್ಲೆ ನಾನು
ಮನದ ಬಯಕೆಯು ಅರಿಯದೇನು
ಮುಗಿಲ ಕರೆಯದು ಕೇಳದೇನು?
ವರ್ಷಧಾರೆಯು ನಮಗೆ ತಾನೇ
ಆಡಲದುವೇ ಖುಷಿ ಇಲ್ಲವೇನೇ
ಬಾರೆ ಬಾರೇ ನನ್ನ ಜಾಣೇ
ಸ್ವರ್ಗ ಕಾಣುವ ಜೊತೆ ಜೊತೆಯಲೇನೇ..
@ಪ್ರೇಮ್@
17.06.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ