ಗುರುವಾರ, ಜೂನ್ 18, 2020

1447. ಆಸೆ ನಿರಾಸೆಗಳ ನಡುವೆ

ಆಸೆ ನಿರಾಸೆಗಳ ನಡುವೆ

ಬದುಕಲು ಬೇಕು ಮನುಜಗೆ ಆಸೆ
ಬರಲೇ ಬಾರದು ಹೆಮ್ಮೆಯ ದುರಾಸೆ
ಗುರಿಯನು ಮುಟ್ಟಲು ಬೇಕೊಂದು ಹಿರಿಯಾಸೆ
ಎತ್ತರಕೇರಲು ಹಿಡಿಬೇಕು ಛಲದಾಸೆ..

ಮೋಸವ ಮಾಡದೆ ಬದುಕಲು ಕಲಿವಾಸೆ
ನಗುನಗುತಲಿ ಪ್ರತಿ ಕ್ಷಣಗಳ ಕಳೆವಾಸೆ
ಪರರಿಗೆ ಬಡವಗೆ ದಾನವ ಕೊಡುವಾಸೆ
ಪ್ರತಿ ಮನದಲು ನೆಮ್ಮದಿಯ ಕಾಣುವಾಸೆ..

ಆಸೆಗೆ ಅಂಕುಶ ಹಿಡಿದವ ಯಾರು?
ದು:ಖವ ಪರಿಹರಿಸುವ ಮದ್ದನು ಹಿಡಿದವನಾರು?
ಆಸೆಯೇ ದು:ಖಕ್ಕೆ ಮೂಲವೆಂದನು ಬುದ್ಧ!
ಆಸೆಯಿಲ್ಲದೆ ಬದುಕಿಲ್ಲವೆಂದು ತಿಳಿದವನೆದ್ದ!!
@ಪ್ರೇಮ್@
26.05.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ