ಹುಟ್ಟು ಸಾವುಗಳ ನಡುವೆ
ಹುಟ್ಟು-ಸಾವುಗಳ ನಡುವಿನ ಮೂರು ದಿನದ ಬಾಳನ್ನು ನಾವು ಕ್ಷಣಿಕವೆಂಬುದ ಮರೆತು ನಮ್ಮ ಲೋಕವನ್ನೆ ಸೃಷ್ಟಿಸಿ ಅದರಲ್ಲೆ ಬದುಕುತ್ತಾ ಇರುವ ನಮನ್ನೆಚ್ಚರಿಸಲು ಬರಹಗಾರರೂ, ಚಿತ್ರಕಾರರೂ, ಭವಿಷ್ಯ ಚಿಂತಕರೂ ಸದಾ ಎಚ್ಚರಿಸುತ್ತಲೇ ಇರುತ್ತಾರೆ. ಇಲ್ಲೊಂದು ಚಿತ್ರವಿದೆ. ಜೀವನದ ಹಲವು ಹಂತಗಳನ್ನಿಲ್ಲಿ ತೋರಿಸಲಾಗಿದೆ.
ಬಾಲ್ಯದಲ್ಲಿ ಅಮ್ಮನ ಆಸರೆಯಿಂದ ಬದುಕಕುವ ನಾವು ಮುಪ್ಪಿನಲ್ಲಿ ನಮ್ಮ ಮಕ್ಕಳನ್ನೇ ಆಶ್ರಯಿಸಿಕೊಳ್ಳುತ್ತೇವೆ. ಅದಕ್ಕೇ ಹಿರಿಯರು 'ಮಕ್ಕಳಿರಲವ್ವ ಮನೆತುಂಬ' , 'ಮಗನ ಪಡೆದರೆ ಮಾತ್ರ ಸ್ವರ್ಗ' ಮೊದಲಾದ ಗಾದೆಗಳು ಅದನ್ನು ನೋಡಿಯೇ ಹುಟ್ಟಿರಬೇಕೇನೋ.
ಜೀವನದಿ ನಾವು ನಟರು. ಜಗವೇ ನಾಟಕರಂಗ. ದೇವನೇ ಸೂತ್ರದಾರ. ಅವನು ಕುಣಿಸಿದಂತೆ ನಾವು ಕುಣಿಯಬೇಕು. ಇಂತಹ ಜಗದಿ ತಲೆಗೆ ಹಾಕಿದ ನೀರು ಕಾಲಿಗಿಳಿಯುತ್ತದೆ, ಅತ್ತೆಗೊಂದು ಕಾಲವಾದರೆ ಸೊಸೆ ಅತ್ತೆಯಾದಾಗ ಅವಳಿಗೂ ಅದೇ ಕಾಲ ಬರುತ್ತದೆ. ನಮ್ಮ ಕಾರ್ಯವನ್ನು ನಾವು ಸರಿಯಾಗಿ ಮಾಡಿದರೆ ಮಾತ್ರ ನಾವು ಅವಲಂಬಿಸುವಾಗ ಇತರರು ಅವರ ಕಾರ್ಯವನ್ನವರು ಸರಿಯಾಗಿ ಮಾಡುವರು. ಇಂದು ಅಹಂಕಾರದಿ ಮೆರೆದವ ಮುಂದೆ ಅಹಂ ತಗ್ಗಲೇ ಬೇಕು. ಸಾಗರಕೂ ಉಬ್ಬರವಿಳಿತವಿದೆಯಂತೆ.
ಬದುಕು ಚಿಕ್ಕದು. ನಾವೂ ಸಂತಸದಿ ಬದುಕಿ, ಪರರ ಸಂತಸದಿ ಬಾಳ ಬಿಡೋಣ. ನೀವೇನಂತೀರಿ?
@ಪ್ರೇಮ್@
23.05.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ