ಭಾನುವಾರ, ಜನವರಿ 31, 2021

ಪಂಜು ಪ್ರೇಮಪತ್ರ ಸ್ಪರ್ಧೆಗೆ

ಪಂಜು ಪ್ರೇಮಪತ್ರ ಸ್ಪರ್ಧೆಗೆ

                                                  ದಿನಾಂಕ 01.02.2021
                                                     ಸ್ಥಳ: ಹೃದಯಾಂತರಾಳ

ಪ್ರಿಯ ಹೃದಯಕ್ಕೆ,
               ನನ್ನೊಲವನು ಶಾಯಿಯಾಗಿ ಸುರಿದು,  ಜೀವನರಕ್ಷೆಯೆಂಬ ಲೇಖನಿಯಲಿ ಬರೆಯುತಿಹ ಮನದಾಳದಿಂದ ಬಂದ ಅಮೃತ ಪದಗಳಿವು ಒಲವೇ. ಮೊದಲನೆಯದಾಗಿ ನಾ ಪ್ರತಿನಿತ್ಯ ಹೇಳುವ ಮಾತನ್ನು ಮತ್ತೆ ಮತ್ತೆ ನಿನ್ನ ಕಿವಿಯಲ್ಲುಸುರುವ ಆಸೆ. ಅದೇನು ಗೊತ್ತೇ? ನಾ ನಿನ್ನ ಪ್ರೀತಿಸುತ್ತಿದ್ದೇನೆ ಚೆಲುವೇ. ನಾ ನಿನ್ನೊಲವಿಗೆ ಶರಣು ಹೋಗಿರುವೆ, ನಿನ್ನ ಬಾಳ ಬಾಂದಳದಲಿ ಬಾಳ ಚಂದಿರನಾಗಿ, ನಿನ್ನ ಬಾಳ ಭವಿತವ್ಯಕೆ ಸದಾ ಬೆಳದಿಂಗಳ ಚೆಲ್ಲಲು ಅವಕಾಶ ಕೊಟ್ಟಿರುವೆಯಲ್ಲವೇ?
        ಮುದ್ದು ಪ್ರೀತಿಯೇ, ನೀನೇಕೆ ಅಷ್ಟೊಂದು ಸುಂದರವಾಗಿರುವೆ? ಶಿಲ್ಪಿ ತನ್ಮಯತೆಯಿಂದ ಕೆತ್ತಿದ ದಂತದ ಗೊಂಬೆಯಂತೆ, ಕಲಾಕಾರ ಬರೆದ ಅಮೂರ್ತ ಶಿಲ್ಪದಂತೆ, ನಾಟ್ಯ ರಾಣಿಯಂತೆ, ಕವಿಯು ಹಾಡಿದ ಅದ್ಭುತ ಪ್ರೇಮಗೀತೆ ನೀನಾಗಿರುವೆ ನನ್ನೊಲವ ಕುಸುಮವೇ. ಹಿಮಾಲಯದ ಪರ್ವತಗಳ ತಂಪಿನ ಬಿಳುಪು ನಿನಗೆ, ಹಿಮಬಿಂದುವಿನಂಥ ಬೊಟ್ಟಿಡುವಾಸೆ ನನಗೆ. ಮೇಘಗಳನೇ ಕಟ್ಟಿ ನಿನಗೆ ಸೀರೆಯುಡಿಸುವಾಸೆಯೆನಗೆ, ಚೈತ್ರ ಮಾಸದ ಕೋಗಿಲೆಯೂ ನಿನಗಾಗೇ ಹಾಡುತಿದೆಯೆನುವ ಸ್ವಪ್ನ. ದೀಪದಂತಹ ಕಣ್ಣಿನಂದಕೆ ನಾಗವೇಣಿಯ ಚೆಲುವು. ಆಹಾ..ಅದೇನು ಮೋಡಿಯಿದೆ ಆ ನಿನ್ನ ಜಡೆಗೆ! ಅತ್ತಿಂದಿತ್ತ, ಇತ್ತಿಂದತ್ತ ಓಲಾಡುತಲಿ ಕೂಗಿ ಕರೆದಂತಿಹುದೆನ್ನ ನಿನ್ನೆಡೆಗೆ! ಆ ಕೈಬಳೆಯ ಸದ್ದೋ ನಾದ ಬೀರಿ ಕಲಕುತಿದೆ ಮೈಮನವ ಹಾಡುತಲಿ ಮನದಿ ಪ್ರೇಮ ರಾಗದ ಮೋಡಿಯ! ತಡೆಯಲಾರೆ ನನ್ನೆ ನಾನು….ನಿನ್ನ ಪ್ರೇಮ ಸಾಗರದಿ ತೇಲುತಿಹ ನೌಕೆ ನಾನು ಒಲವೇ!
      
           ನಿನ್ನ ನಾನು ಅದ್ಯಾವುದಕ್ಕೆ ಹೋಲಿಸಲಿ ನನ್ನ ಪ್ರೀತಿಯ ಕೋತಿಮರಿಯೇ? ಪೃಥ್ವಿಯಂತಿಹ ನನ್ನ ಕೀರ್ತಿಯ ಬೆಳಗಬೇಕಾದ ಅಪೂರ್ವ ರವಿಕಿರಣ ನೀನು…ನನ್ನುಸಿರ ಒಳಕಳಿಸಿ ಹೊರ ಹಾಕುತಿರುವ ಶಕ್ತಿ ನೀನು…ನನ್ನೊಡಲ ಬಡಿತ ನೀನು, ನನ್ನ ನರನರಗಳ ಮಿಡಿತ ನೀನು, ನನ್ನ ಪ್ರತಿ ಕ್ಷಣಗಳ ತುಡಿತ ನೀನು, ನನ್ನ ನೋಡಿ ಪರರಿಗಾಗುವ ಕಡಿತಕೆ ಕಾರಣವೂ ನೀನೇ ಪ್ರಿಯೆ!
        
      ದೇಹ ದೇಗುಲದ ಗರ್ಭ ಗುಡಿಯಲಿ ಪೂಜಿಸಲ್ಪಡುತಿರುವ ಮೂರ್ತಿಯೇ, "ಈ ಜೀವನ ಮೂರು ದಿನಗಳದು, ಈ ಬಾಳ್ವೆ ಚಿಕ್ಕದು" ಎಂದೆಲ್ಲ ಜನ ಹೇಳುವರು, ನೀ ಬಾಳಲಿರೆ ಪ್ರತಿ ದಿನವೂ ವರುಷದಂತೆ ದೊಡ್ಡದೇ ಮನವೇ. ಪ್ರತಿ ಕ್ಷಣವೂ ಗಂಟೆ, ಪ್ರತಿ ದಿನವೂ ವರುಷ ನಮಗೆ ಸಂತಸದಲಿ! ನಿನ್ನೊಂದಿಗೆ ಯುಗವೂ ಕ್ಷಣದಂತೆ ಕಳೆವುದೆಂಬುದನು ನಾ ಬಲ್ಲೆ! ಆದರೂ ನೀ ಜತೆಗಿದ್ದರೆ ಕಿರಿಯದಾದ ಬದುಕು ಹಿರಿಯದಾಗಲಿದೆಯಲ್ಲವೇ? ನೀ ಪ್ರತಿ ಕ್ಷಣವೂ ಕೊಡುವ ಸಂತಸ, ತುಂಬುವ ಧೈರ್ಯ, ನಾ ಪಡೆವ ಆತ್ಮವಿಶ್ವಾಸದ ಮಳೆಯನು ಮತ್ತಾರು ನನ್ನೆದೆಯಲಿ  ಸ್ಪುರಿಸಲು ಸಾಧ್ಯ ಸಖಿಯೇ? 
   
          ಅಮ್ಮನ ಕೈತುತ್ತು, ಆಗಸದ ಹೃದಯದ ಅಪ್ಪನ ಗಮನ, ತಂಗಿಯ ತುಂಟಾಟ, ಅಕ್ಕನ ಪಕ್ವತೆ, ತಮ್ಮನ ತರಲೆ, ಅಣ್ಣನ ಮೊಟಕುವಿಕೆ, ಅಜ್ಜಿಯ ಮುದ್ದು, ತಾತನ ತೂಕಭರಿತ ಅನುಭವದ ನುಡಿಮುತ್ತುಗಳೆಲ್ಲವೂ ನಿನ್ನಲ್ಲೇ ಸೇರಿಕೊಂಡಿವೆಯಲ್ಲವೇ ನನ್ನಾಕಾಶವೇ? ಅಷ್ಟೇ ಯಾಕೆ, ನನ್ನ ಗುರುಗಳ ಜ್ಞಾನವೆಲ್ಲವೂ ಕೂಡಾ ನಿನ್ನೊಳದು ಹೇಗೆ ಅಡಗಿ ಕುಳಿತಿಹುದೆಂದು ಯೋಚಿಸುತ್ತಾ ಕುಳಿತರೆ ನಾ ನಿನ್ನ ಪ್ರೀತಿಯ ಹುಚ್ಚನಾಗುವೆ ನನ್ನ ರಾಣಿ ಜೇನ್ನೊಣವೇ…!
     
      ಮನದೊಳಗೊಂದು ಮನ, ಜೀವದೊಳಗೊಂದು ಜೀವ, ಹೃದಯದೊಳಗೊಂದು ಹೃದಯ, ಭಾವದೊಳಗೊಂದು ಭಾವ, ನಲಿವಿನೊಳಗೊಂದು ನಲಿವಿದ್ದರೆ ಅದು ನೀನೇ. ನನ್ನ ಜೀವನ, ಬದುಕು, ಪ್ರತಿ ಕ್ಷಣ, ಹೃದಯ ಬಡಿತ, ನಾಡಿ ಮಿಡಿತ, ಪದಗಳ ಕವಿತೆ ಸರ್ವಸ್ವವೂ ನಿನಗೇ ಮೀಸಲು ಗೆಳತೀ..ನೀ ನನ್ನ ಭಾವಗಳ ಒಡತಿ, ಧರೆಯ ಸೂರ್ಯನಂತೆ ಬೆಳಗುತಿ, ಇರುಳ ಚುಕ್ಕಿಗಳಂತೆ ಮಿನುಗುತಿ, ಬಯಲ ಚೆಂಡಿನಂತೆ ಪುಟಿಯುತಿ, ಕಂಪ ಸೂಸುವ ಮಲ್ಲಿಗೆಯಂತೆ ಪ್ರೇಮದಿ ಅರಳುತಿ…ನಾ ಇರಲಾರೆ ನಿನ್ನ ಹೊರತು…

      ನವ್ಯ, ನವೀನ ಕಾವ್ಯಗಳೊಡತಿಯೇ, ದ್ವಿಭಾಜಕದ ಒಂದು ಬದಿಯ ಮುಳ್ಳಿನಂಥ ಮಿಡಿತವೇ, ನನ್ನ ಬಾಳರಥದ ಸಾರಥಿಯೇ, ನನ್ನೊಲವ ತೇರನೆಳೆಯುತಿಹ ಅಶ್ವವೇ, ಈ ಕೃಷ್ಣನ ರಾಧೆಯೇ, ರುಕ್ಮಿಣಿಯೇ, ಸತ್ಯಭಾಮಳೇ, ಚಂದ್ರವಳ್ಳಿಯೇ, ಜಾಂಬವತಿಯೇ, ಹದಿನಾರು ಸಾವಿರದ ಎಂಟು ಕನ್ಯೆಯರಿಗೂ ಸಮನಾದ ಮುತ್ತು ನೀನು! ಬಂಗಾರ,ವಜ್ರ, ವೈಡೂರ್ಯ, ಪಚ್ಚೆ, ಹವಳ, ನೀಲ, ಪ್ಲಾಟಿನಂಗಿಂತಲೂ ಶ್ರೇಷ್ಠ ರತ್ನವಲ್ಲವೇ ನೀ ನನ್ನ ಬಾಳಿಗೆ  ನನ್ನೊಡತಿ…
ಹಸಿರುಗಿಡದ ರುಚಿಯ ಹಣ್ಣಂತೆ, ಮೊಸರಲಿ ತೇಲುತಿಹ ರುಚಿಕರ ಶ್ವೇತ ಬೆಣ್ಣೆಯಂತೆ, ಕೆಸರಲರಳಿದ ನೈದಿಲೆಯ ಹೂವಂತೆ ನಿನ್ನ ಸ್ವಚ್ಛ ಆಗಸದ ಶುಭ್ರ ಮನ ನನ್ನಾಸೆಯ ಹೂವೇ..ನಾ ನಿನಗೇ ಕಾವೇ..ಓ ನನ್ನ ಜೀವವೇ.

        ಗಾಂಡೀವಿಗೆ ಮಾಧವನು ಜೊತೆಯಾದಂತೆ ನಿನ್ನ ಬದುಕ ರಥವನೆಳೆವೆ, ಪ್ರತಿ ಕ್ಷಣದಲೂ ಸಂತಸವನುಣಬಡಿಸುವೆ ಹನಿಬಿಂದುವೇ ನಿನ್ನ ಬುತ್ತಿಯಲಿ ನಾನಮೃತದ ತುತ್ತಾಗಿ. ಬಡತನ ಸಿರಿತನಗಳ ಮರೆತು ಪ್ರಿಯತಮನೊಳಗೊಂದಾಗು, ಜಾತಿ ಮತ ಭೇದದ ಬೇರುಗಳನು ಕಿತ್ತೆಸೆದು, ಪ್ರೇಮವೆಂಬ ಸಸಿಯ ನೆಟ್ಟು ಜಗವ ಹಸಿರಾಗಿಸೋಣ. ಅದಕೆ ಪ್ರೀತಿಯ ನೀರುಣಿಸಿ, ಜತೆಯಾಗಿ ಆರೈಕೆಯ ಗೊಬ್ಬರದಿ ಪೋಷಿಸೋಣ. ಜಗವೆಲ್ಲ ಹಸಿರಾದಂತೆ ಜನಮನವೆಲ್ಲ ಪ್ರೀತಿಯ ಫಲ ತಿನ್ನುವಂತಾಗಲಿ, ಪ್ರೇಮದ ಹೂವರಳಿ ನಿನ್ನ ಮುಡಿ ಸಿಂಗಾರಗೊಳ್ಳಲಿ. ಭಾವದಲೆಗಳು ಪ್ರೇಮಸಾಗರದಲಿ ತೇಲುತಲಿ, ದ್ವೇಷ ಮುಳುಗಿ, ಸ್ನೇಹ ಈಜಾಡಲಿ ನಮ್ಮ ಬಾಳ್ವೆಯ ತೆರದಿ, ಏನಂತೀಯಾ ಮನದ ನಯನವೇ?
    ಮೋಸ-ವಂಚನೆಗಳ, ಅಂಧಕಾರಗಳೋಡಿಸಿ, ಸ್ನೇಹಬಾಂಧವ್ಯವ ಬೆಸೆದು, ದೇಶ-ದೇಶಗಳ ಗಡಿಯಲೆಲ್ಲ ಪ್ರೀತಿ ತರಂಗವನೆಬ್ಬಿಸಿ, ಗಡಿಯ ಸೈನಿಕರಿಗೊಂದಿಷ್ಟು ದಿನ ಆರಾಮದುಸಿರು ಕೊಟ್ಟು, ಹೊಲದಿ ಸರ್ವ ಜನಕೆ ಊಟವನು ಬೆಳೆಸುತಿಹ ರೈತನೆದೆಯಲಿ ಧರೆಯ ಪ್ರೀತಿಯನುಕ್ಕಿಸಿ ಲೋಕದ ಜನಕೆ ಪ್ರೀತಿಯ ತುತ್ತನುಣಬಡಿಸುವ ಕಾಯಕವನು ಮಾಡುತಲಿ ಜಗಕೆ ಪ್ರೀತಿ ಪಾಠವ ಕಲಿಸುವ ಗುರುವಿನಂತಾಗಿ, ಪ್ರೀತಿಮಹಲುಗಳ ಕಟ್ಟುವ ಅಭಿಯಂತರರಾಗಿ, ಪ್ರೇಮ ಹೃದಯಗಳ ಜೋಡಿಸುವ ವೈದ್ಯರ ತೆರದಿ ಬಾಳಲು ಬಾಳಕತ್ತಲೆಯನೋಡಿಸಲು ಸೂರ್ಯೋದಯದಂತೆ ಆಗಮಿಸುವೆಯಾ ಈ ಇಳೆಗೆ ಇನನಾಗಿ, ಈ ಕಳೆ ತೊಲಗಿಸೊ ಮಳೆಯಾಗಿ ತಂಪೆರೆಯೊ ಜಲವಾಗಿ ಓ ಪ್ರೇಮದಗಂಗೆಯೇ?
         
       ಇಂತಿ ನಿನ್ನ ಹೃದಯ.

 ಹೃದಯದಿಂದ ಹೃದಯಕ್ಕೆ…ಹೃದಯದ ಉಸಿರ ದಾರಿಯಲಿ….
@ಪ್ರೇಮ್@
01.02.2021

ಶುಕ್ರವಾರ, ಜನವರಿ 29, 2021

2020 ಅವಲೋಕನ

2020-ಅವಲೋಕನ

ಈ ಹೊಸ ವರ್ಷವಾದರೂ ಚೆನ್ನಾಗಿರಲೆಂದು ಪ್ರತಿ ಆಂಗ್ಲ ಕ್ಯಾಲೆಂಡರಿನ ಹೊಸ ವರ್ಷ ಬಂದಾಗ ಆಶಿಸುವುದು ತಪ್ಪಲ್ಲ. ಅಂತೆಯೆ 2020ನ್ನು ಬರಮಾಡಿಕೊಂಡಾಯ್ತು. ಜನವರಿಯಿಂದ ನಾವೆಲ್ಲ ಎಸ್.ಎಸ್.ಎಲ್.ಸಿ ತರಗತಿಗಳಿಗೆ ಹೆಚ್ಚು ಫೋಕಸ್ ಮಾಡ್ತೇವೆ. ಸ್ಕೋರಿಂಗ್, ಪರೀಕ್ಷಾ ತಯಾರಿ, ರಾತ್ರಿ ತರಗತಿಗಳು, ಚೆನ್ನಾಗಿ ಕಲಿಯುವವರಿಗೆ ಸ್ಕೋರಿಂಗ್ ಐಡಿಯಾಸ್, ಕಲಿಕೆಯಲ್ಲಿ ಹಿಂದುಳಿದವರಿಗೆ ಉತ್ತೀರ್ಣತೆಯ ಟಿಪ್ಸ್, ಪ್ರತಿ ವಿಷಯಗಳಲ್ಲೂ ಉತ್ತಮ ಅಂಕಗಳೊಂದಿಗೆ ಎಲ್ಲಾ ಮಕ್ಕಳನ್ನು ಪಾಸ್ ಮಾಡಿಸುವ, ಶಾಲೆಗೆ ಉತ್ತಮ ಹೆಸರು ತರುವ, ಉತ್ತಮ ಬ್ಯಾಚನ್ನು ಶಾಲೆಯಿಂದ ಹೊರಗೆ ಕಳಿಸುವ ಗುರುತರ ಜವಾಬ್ದಾರಿಯ ನೆರಳಿನಲ್ಲೆ ಪ್ರತಿ ಹೊಸ ವರುಷದಂತೆ ಇದನ್ನೂ ಎದಿರುಗೊಂಡೆವು. ಆ ಕಷ್ಟ ಪಟ್ಟ ಕೆಲಸ ಇನ್ನೇನು ಕೊನೆಗೊಳ್ಳಬೇಕು, ಪರೀಕ್ಷೆಗಳು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಮೊದಲೇ ಚೈನಾದಲ್ಲಿ ಹುಟ್ಟಿದ್ದ ಕೊರೋನಾ ವೈರಸ್ ಭಾರತ, ಕರ್ನಾಟಕಕ್ಕೂ ವಕ್ಕರಿಸಿಕೊಂಡು ಬಿಟ್ಟಿತು. ನೈಟ್ ಕರ್ಫ್ಯೂ, ಸೆಲ್ಫ್ ಕ್ವಾರೆಂಟೈನ್, ಮಧ್ಯಾಹ್ನದ ನಂತರ ಮನೆಯೊಳಗೆ ಹೀಗೆ 21 ದಿನ ಸಂಪೂರ್ಣವಾಗಿ ಒಬ್ಬಳೇ ಮನೆಯೊಳಗೆ ಕಳೆಯುವಂತಾಯ್ತು! ಆ ಇಪ್ಪತ್ತೊಂದು ದಿನಗಳು ಬದುಕಿನಲ್ಲಿ ಬಹಳ ಕಲಿತೆ. ನನ್ನ ಹವ್ಯಾಸಗಳು ನನ್ನ ಜತೆಯಾದವು. ಹಳೆ ಬಟ್ಟೆಯಿಂದ ಡೋರ್ ಮ್ಯಾಟ್ ತಯಾರಿಸುವುದು, ಬ್ಯಾಗ್ ಗಳ ತಯಾರಿಕೆ, ಟೈಲರಿಂಗ್ ಹಾಗೂ ಎಂಬ್ರಾಯ್ಡರಿಯಲ್ಲಿ ಹೊಸ ಹೊಸ ಪ್ರಯೋಗಗಳು, ಡ್ರಾಯಿಂಗ್ ಡಿಸೈನ್ ಗಳ ರಚನೆ, ಅಂಕಣ ಬರಹ, ಕವಿಗಳ ಗುಂಪಿನಲ್ಲಿ ಬರಹ, ಹರಟೆ, ಕಾಂಪಿಟೇಶನ್ ಇವು ಸಮಯವನ್ನು ಬಹಳಷ್ಟು ವೇಗದಲ್ಲಿ ಕಳೆಯುವಂತೆ ಮಾಡಿದವು. 
     ಏಪ್ರಿಲ್ 22ಕ್ಕೆ ಅಚಾನಕ್ಕಾಗಿ ನನ್ನ ಅತ್ತೆಯವರು ತೀರಿಕೊಂಡ ಸುದ್ದಿ ಬಂತು. ನಮ್ಮ ಮನೆಗೇ ನನಗೆ ಹೋಗಲು ಅನುಮತಿಯಿರಲಿಲ್ಲ. ಮೂರ್ನಾಲ್ಕು ಎಎಸ್ಐಗಳ ಸಹಾಯದಿಂದ ಹೇಗೇಗೋ ಕುಟುಂಬದ ಸ್ನೇಹಿತರ ಸಹಾಯ ಪಡೆದು ಮನೆ ಸೇರಿಕೊಂಡು ಅಂತಿಮ ವಿಧಿ ವಿಧಾನಗಳ ನೆರವೇರಿಸಿದ್ದಾಯ್ತು. ತದನಂತರ ನಮಗೆ ರಜೆಯೇನೂ ಇರಲಿಲ್ಲವಲ್ಲ, ಅಮ್ಮನ ಮನೆ ಉಡುಪಿ ಜಿಲ್ಲೆ, ಕೆಲಸ ದಕ್ಷಿಣ ಕನ್ನಡ ಜಿಲ್ಲೆ, ಗಂಡನ ಮನೆ ಚಿಕ್ಕಮಗಳೂರು ಜಿಲ್ಲೆ! ಮಗಳು ಅಜ್ಜಿ ಮನೇಲಿ, ಗಂಡ ಮನೇಲಿ, ನಾನು ಸುಳ್ಯದಲ್ಲಿ ಬಾಡಿಗೆ ಮನೇಲಿ ಬಾಕಿಯಾದ ಕಾರಣ ಆಚೀಚೆ ಹೋದಾಗೆಲ್ಲ ಕೈಗೆ ಸೀಲ್ ಹಾಕಿಸಿಕೊಂಡು ಎರಡೆರಡು ಬಾರಿ ಹದಿನಾಲ್ಕು ದಿನಗಳ ಕ್ವಾರೆಂಟೇನ್ ಮಾಡಿಕೊಂಡದ್ದಾಯ್ತು! 
      ಕೊರೋನ, ಸ್ಯಾನಿಟೈಝರ್, ಫೇಸ್ ಮಾಸ್ಕ್,ಕ್ವಾರೆಂಟೇನ್ ಎಂಬ ಹೊಸ ಹೊಸ ಪದಗಳ ಕಲಿತು ಪ್ರಾಯೋಗಿಕವಾಗಿ ಬಳಸಿದ್ದೂ ಆಯ್ತು! ಸರಕಾರದ ಆದೇಶದಂತೆ ಜೀವವನ್ನೇ ಪಣಕ್ಕಿಟ್ಟು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿದ್ದೂ ಆಯ್ತು. ಪ್ರತಿನಿತ್ಯ ಇನ್ನೂರು-ಇನ್ನೂರೈವತ್ತು ಕಿಲೋಮೀಟರ್ ಜರ್ನಿ ಮಾಡಿ ಮಂಗಳೂರಿಗೆ ಹೋಗಿ ಪೇಪರ್ ಗಳ ಇವ್ಯಾಲ್ಯೂವೇಶನ್ ಮಾಡಿ ರಿಸಲ್ಟ್ ಕೊಟ್ಟದ್ದೂ ಆಯ್ತು. ಶಾಲೆಗಳಿಗೆ ಅಡ್ಮಿಶನ್ ಕೂಡಾ ಆಯ್ತು, ಮನೆಮನೆಗೆ ಹೋಗಿ ವಿದ್ಯಾಗಮ ಮಾಡಿದ್ದೂ ಆಯ್ತು. ಕೋವಿಡ್ ಡ್ಯೂಟಿ ನಿರ್ವಹಿಸಿದ್ದೂ ಆಯ್ತು. ವಿದ್ಯಾರ್ಥಿಗಳು ಇಲ್ಲದ ಕಾರಣ ಶಾಲೆಯಲ್ಲಿ ನಾವೇ ಅಡಿಗೆ, ಕ್ಲೀನಿಂಗ್, ತೊಳೆಯುವ, ಗುಡಿಸುವ ಒರೆಸುವ, ಬಲೆ ತೆಗೆಯುವ, ಗಾರ್ಡೆನಿಂಗ್ ಸರ್ವ ಕಾರ್ಯಗಳನ್ನು ಮಾಡಿದ್ದೂ ಆಯ್ತು. ಆನ್ ಲೈನ್ ಪಾಠಗಳನ್ನು ಕೊಟ್ಟದ್ದೂ ಆಯ್ತು!
ಇದೆಲ್ಲವೂ 2020ರ ಹೊಸ ಅನುಭವಗಳೇ. ಕೊರೋನದ ನಡುವೆ ವರ್ಷದ ಕೊನೆಯಲ್ಲಿ ಕೊರೋನದ ಮರಿ ಬಂದು ಹಾಹಾಕಾರ ಎಬ್ಬಿಸುತ್ತಿದ್ದರೂ ಗ್ರಾಮ ಪಂಚಾಯತ್ ಚುಣಾವಣೆ ಮಾಡಿ ಮತಗಳ ಎಣಿಸಿ ಲೆಕ್ಕಾಚಾರ ಕೊಟ್ಟದ್ದೂ ಆಯ್ತು. 
   ಕೊರೋನ ಬಂದು ಹಲವಾರು ನೀತಿ ಪಾಠ ಕಲಿಸಿತು. 
1  ಒಂದೇ ತಾಲೂಕಿನ ಸರಕಾರಿ ನೌಕರರು ಯಾವುದೇ ತೊಂದರೆ, ಗಲಾಟೆಗಳಿಲ್ಲದೆ ತಮ್ಮ ತಾಲೂಕಿನೊಳಗೆ ತಾವೇ ಚುನಾವಣೆ ನಡೆಸಿ, ಫಲಿತಾಂಶ ಕೊಡಲು ಅರ್ಹರಾಗಿರುವರು. ಶಾಂತಿಯುತ ಮತದಾನಕ್ಕಾಗಿ ಬೇರೆ ಬೇರೆ ತಾಲೂಕುಗಳಿಗೆ ಕಳುಹಿಸಿ ಸರಕಾರಿ ನೌಕರರನ್ನು ಗೋಳುಹೊಯಿಸಬೇಕಾಗಿಲ್ಲ.
2. ತಮ್ಮ ಮನೆ, ಕುಟುಂಬ ಮಕ್ಕಳ ಜೊತೆ ಹಾಯಾಗಿ ಸಮಯ ಕಳೆದು ಅವರ ಪ್ರೀತಿಯನ್ನು ಅನುಭವಿಸಿ ಜೀವನದ ಮತ್ತೊಂದು ಮುಖದ ಅನಾವರಣವಾಯ್ತು.
3. ತಿಂಗಳುಗಟ್ಟಲೆ ಡೇಶಿಫ್ಟ್, ನೈಟ್ ಶಿಫ್ಟ್ ಗುಡಿಯದಿದ್ದರೂ, ಧಾವಂತದ ಓಡಾಟವಿಲ್ಲದಿದ್ದರೂ ಯಾರ ಜೀವನವೂ ಕೊನೆಯಾಗಲಿಲ್ಲ. ಯಾವ ಬಡವನೂ ಊಟಕ್ಕಿಲ್ಲದೆ ಸಾಯಲಿಲ್ಲ.
4. ತಮ್ಮ ತಲೆ ಓಡಿಸಿ, ತಮ್ಮ ತಮ್ಮ ಮನೆಯ ಕಾರ್ಯಗಳನ್ನು ತಾವೇ ಮಾಡಿಕೊಳ್ಳುವಂತಾಯ್ತು. 
5. ಕುಟುಂಬ, ಸಂಸಾರದ ಎಲ್ಲರೂ ಒಟ್ಟಾಗಲು ಸಹಾಯಕವಾಯಿತು. ಎಷ್ಟೋ ವರ್ಷಗಳಿಂದ ನೋಡದ ಬಂಧುಗಳ ಮುಖ ನೋಡುವಂತಾಯ್ತು.
6. ಮಕ್ಕಳಿಗೆ ಹಳ್ಳಿಯ ಅಜ್ಜಿಮನೆಯ ದರ್ಶನವಾಯಿತು.
7. ಮದುವೆ, ಕೋಲ, ದೈವದರ್ಶನ, ಪೂಜೆ, ಗೃಹಪ್ರವೇಶ, ನಿಶ್ಚಿತಾರ್ಥ,ಸೀಮಂತ ಮೊದಲಾದ ಸರ್ವ ಸಮಾರಂಭಗಳನ್ನೂ ಸಿಂಪಲ್ಲಾಗಿ ನಡೆಸಬಹುದೆಂಬ ಅರಿವಾಯ್ತು.
8. ಕಷ್ಟ ಕಾಲದಲ್ಲಿ ನಮ್ಮ ಕುಟುಂಬ ವರ್ಗದವರೂ ಕೂಡ ನಮ್ಮ ಸಹಾಯಕ್ಕೆ ಬರಲಾರರು, ನಮಗೆ ನಾವೇ, ನಾವು ಯಾರನ್ನೂ ಅವಲಂಬಿಸಿರಬಾರದೆಂಬ ಪಾಠ ಕಲಿತಂತಾಯ್ತು.
9. ತಾವು ಸಾಯುತ್ತೇವೆಯೆಂಬ ಭಯ ಬಂದರೆ ಮಾನವ ಯಾರ ಬಗ್ಗೆಯೂ ಚಿಂತೆ ಮಾಡಲಾರ, ತನ್ನ ಬಗ್ಗೆ ಮಾತ್ರ ಯೋಚಿಸುತ್ತಾನೆ. ತಾನು, ತನ್ನದು, ತನಗೆ ಎಂಬುದೇ ಬದುಕಿನ ಮಂತ್ರವಾಯ್ತು. ಯಾರು ಬಿದ್ದರೂ, ಕಷ್ಟದಲ್ಲಿ ನರಳಾಡಿದರೂ ಸಹಾಯ ಹಸ್ತ ಚಾಚುವವರಾರೂ ಇಲ್ಲ ಮುಂದಕ್ಕೆ ನೆನಪಿರಲಿ!
10. ಪಕ್ಕದ ಮನೆ, ಆಚೀಚೆ ಮನೆ, ಬಂಧುಗಳು ಯಾರೂ ಯಾರಿಗೂ ಸಹಾಯ ಮಾಡದ ಪರಿಸ್ಥಿತಿ ಬಂದೊದಗಿತು.
11. ರೈತ, ಕೃಷಿಯ ಬದುಕೇ ಶಾಶ್ವತವೆಂಬ ವಿಷಯ ಸರ್ವರಿಗೂ ಅರಿವಾಯ್ತು.
    2020ನೇ ಇಸವಿ ಜನಜೀವನ ಅಸ್ತವ್ಯಸ್ತವಾದರೂ ಆಯುರ್ವೇದ ಪದ್ಧತಿಯನ್ನೊಪ್ಪದ ಜನರೂ ಕಷಾಯ ಕುಡಿಯಲು ಪ್ರಾರಂಭಿಸಿದರು! ಆರೋಗ್ಯ, ಕ್ಲೀನಿಂಗ್ ಕಡೆ, ತಮ್ಮ ದೇಹದ ಕಡೆ ಗಮನ ಕೊಟ್ಟರು. ಮಾಸ್ಕ್ ಬಳಕೆಯಿಂದ ಧೂಳಿನ ಅಲರ್ಜಿ ಕಡಿಮೆಯಾಯಿತು. ವಾಹನಗಳ ನಿಲುಗಡೆಯಿಂದ ಪರಿಸರ ನಾಶ, ವಾಯುಮಾಲಿನ್ಯ ಕಡಿಮೆಯಾಗಿ, ಪೆಟ್ರೋಲ್, ಡೀಸಲ್ ಉಳಿಕೆಯಾಯ್ತು. ತನ್ನನ್ನು ತಾನು ಸರಿಪಡಿಸಿಕೊಳ್ಳಲು ಭೂಮಿಗೊಂದಿಷ್ಟು ಸಮಯ ಸಿಕ್ಕಿತು! 
  ಪರಿಸರದ ಮಾಲಿನ್ಯ ಕಡಿಮೆಯಾದಂತಾಯಿತು. ಗಾಳಿ, ನೀರು, ಮಣ್ಣು ಒಂದಷ್ಟು ದಿನ ನೆಮ್ಮದಿಯಿಂದ ಉಸಿರಾಡಿದವು. 
  ಒಟ್ಟಿನಲ್ಲಿ 2020 ಹೊಸ ಅನುಭವ ನೀಡಿದ ಮರೆಯಲಾಗದ, ಹೊಸ ಪಾಠ ಕಲಿಸಿದ, ಅತಿಯಾದರೆ ಅಮೃತವೂ ವಿಷವೆಂದು ತಿಳಿಸಿದ ವರುಷವೆಂದರೆ ತಪ್ಪಾಗಲಾರದು. ನೀವೇನಂತೀರಿ?
@ಪ್ರೇಮ್@
31.12.2020

ಶಾಯರಿಗಳು

ಶಾಯರಿ-1

ನೋಡುತ್ತಾ ಕುಳಿತಿದ್ದೆ 
ಅವಳ ಕಣ್ಣಿನ ಕಾಡಿಗೆ!
ಗಮನಿಸಲೇ ಇಲ್ಲ ಹಿಂದೆ
ಅವಳಪ್ಪ ಹಿಡಿದು ನಿಂತಿದ್ದ ಬಡಿಗೆ!!

ಶಾಯರಿ-2

ನೋಡುತ್ತಾ ಕುಳಿತಿದ್ದೆ
ಅವಳಂದದ ನಗು!
ಅರಿಯಲೇ ಇಲ್ಲ ನಾನು
ಅಂದೇ ಕಳಕೊಂಡ ನನ್ನ ನಸುನಗು!!!
@ಪ್ರೇಮ್@
11.01.2021

ಆಪ್ತ ರಕ್ಷಕ

ಆಪ್ತ ರಕ್ಷಕ

ನೆರಳಿನಂತೆ ಕೈ ಬಿಡದೆ ಕಾಯುತಿರುವ ತಂದೆ
ಶಿವನೇ ನೀನೆನ್ನ ಅನಾಥ ರಕ್ಷಕ ಗುರುವೇ..

ಪ್ರೀತಿಯ ಭಕ್ತಿಗೆ ಒಲಿಯುವೆ ಜಗದಿ
ನೀತಿಯ ಕಾರ್ಯಕೆ ಹರಸುವೆ ಮನದಿ
ಜ್ಯೋತಿಯ ಬೆಳಗಿಪೆ ಶಕ್ತಿಯ ನೀಡು
ಮುಕ್ತಿಯ  ಶಾಂತಿಯ ಪಾಡನು ಬೇಡುವೆ

ಪರರ ಬಗೆಗೆ ಉತ್ತಮ ಭಾವನೆ
ಇತರರ ಜೊತೆಗೆ ಧನಾತ್ಮಕ ಯೋಚನೆ
ಹರನಲಿ ನಂಬಿಕೆ ಕಳೆಯಲು ಬಾರದು
ಬದುಕಲಿ ಕಂದಕವಿರದೆ ಬಾಳಲಾಗದು..

ದೇವನೆ ಉತ್ತಮ ಮನವನು ಕರುಣಿಸು
ಭಾವನೆ ಅಳಿಸದೆ ಬೆಳೆಸಿ ನೀ ನಡೆಸು
ಕಾಮನೆ ಕೆರಳದೆ ಇರಲು ನೀ ಹರಸು
ಪ್ರಾರ್ಥನೆ ನಮ್ಮಯ ಸದಾ ನೀ ಆಲಿಸು..
@ಪ್ರೇಮ್@
25.01.2021

ಮ ಕಾರ ದಲಿ...

ಮಕಾರದಲಿ...

ಮಂದ ಮನದ ಮಂಗ ಕೇಳೊ
ಮಂಜಿನಂಥ ಮೊಗವ ತಾರೊ
ಮುಂದೆ ಹಿಂದೆ ನೋಡಿ ಕಲಿಯೊ
ಮೋಸ ಮಾಡಿ ಬದುಕಲಾರೆ ತಿಳಿಯೊ..

ಮಿಂದು ಮಡಿಯನುಟ್ಟು ಮತ್ತೆ
ಮೋಹದಲ್ಲಿ ಮತ್ತೆ ಮತದ  ಕಂತೆ
ಮೈಮಾಟದಿಂದ ಮಾಯ ನಿಜದ ಒರತೆ
ಮೋಸದಂತೆ ಮಿಥ್ಯ ಮರೆಯಲಾರದ ಕತೆ

ಮಗನ ಹಾಗೆ ಮಗಳು ಸಮಾನ
ಮಗಧವೆಂಬ ರಾಜ್ಯದ ಕತೆಯು ಜಮಾನ
ಮುಗುದೆಯೊಡನೆ ಮನದ ಮಾತ ಮನಸು
ಮನದ ಮಾತು ಮಸೆಯ ಬೇಡ..

ಮುದುಕರಾಗೊ ಬಯಕೆ ಇಲ್ಲ
ಮನಸಾರೆ ಬದುಕೊ ಭಯವೆ ಎಲ್ಲ
ಮಕರಂದ ಹೀರೊ ದುಂಬಿಗೆಲ್ಲ
ಮೌನವಾಗಿ ಬೀಜಕೆ ಅಣಿಯಲ್ಲ!
@ಪ್ರೇಮ್@
10.12.2020

ತ್ರಿಪದಿಗಳು

ತ್ರಿಪದಿಗಳು

ಮನುಜನೆ ನಿಜವನು ಹೇಳಲು ಜನಿಸಿಹೆ
ತನುವದು ಸನಿಹದಿ ಬಾಳಲು ತವಕಿಸೆ
ಕನಸಲು ಕಾಯಲು ದೇವನೆ ಬೇಕಿದೆ

ಮನದಲಿ ಇರುವುದ ಹೇಳಲು ಬೇಕಿದೆ
ಜನರಲಿ ಕೋಪವ ತಡೆಯಲು ಬೇಕಿದೆ
ದನಗಳ ಹಾಗೆಯೆ ಸಹಕಾರ ಬೇಕಿದೆ

ಮನೆಯಲು ಪ್ರೀತಿಯು ಸಿಗುವುದು ಬೇಕಿದೆ
ಕೊನೆಯ ವರೆಗೂ ಮನಸದು ಬೇಕಿದೆ
ತನ್ಮಯತೆ ಭವದಲಿ ಆಳಲು ಬೇಕಿದೆ..
@ಪ್ರೇಮ್@
11.12.2020

ಕುಸುಮ

ಕುಸುಮ

ಕುಸುಮವದು ಬಂದಿಹುದು
ಕಸುವ ತಾ ಮೆರೆಸುತಲಿ
ಬಸವನೂ ಬರೆಯಬಹುದೇ ತನ್ನ ನು
ಮಸೆಯುತಲಿ ಲೇಖನಿಯ
ಹಸಿಹಸಿಯೆ ಬಳಸುತಲಿ
ಕಸುವದೆಂದು ಕವಿಗೆ ಬರೆಯಲೇನು
@ಪ್ರೇಮ್@
12.12.2020

ವಚನ

ವಚನ

ಅನ್ನದಾನ ವಸ್ತ್ರದಾನ ಗೋದಾನ ಭೂದಾನ 
ಕನ್ಯಾದಾನ ವಿದ್ಯಾದಾನ ಎಲ್ಲದಾನವೂ ಸರಿಯೇ!
ಆದರೆ ಸರಿಯಾಗಿ ತಿಳಿದು ಸರಿಯಾದವರಿಗೇ ನೀಡಬೇಕು ನಾವು
ದೇಶವುಳಿಸಲು ಮತದಾನ ಈಶಾ...
@ಪ್ರೇಮ್@
15.12.2020

2ರುಬಾಯಿಗಳು

ರುಬಾಯಿ-1

ಸಂತಸಯುತ ಮನವಿರಲು ಹಕ್ಕಿಯಂತೆ ಹಾರಾಡುವೆ
ಬೇಸರದಲಿ ತಾನಿರಲು ಮನದೊಳಗೆ ಕುದಿಯುವೆ
ಬಳಿಯಲಿರಬೇಕು ಮನಕೆ ಒಲವೆಂಬ ಮಂತ್ರ
ಹಣ, ಧನಕಿಂತಲೂ ಅಧಿಕವಾಗಿ ಸುಖಿಸುವೆ 

ರುಬಾಯಿ-2

ಮೋಹ ಪಾಶಕೆ ಸಿಗದಿರು ಮನವೇ
ರೋಗ ನಾಶಕೆ ತುತ್ತಾಗದಿರು ತನುವೇ
ಕಷ್ಟಪಟ್ಟು ಅನುಕ್ಷಣ ದುಡಿದು ಬದುಕು
ಪರೋಪಕಾರಕೆ ಜೀವನವ ಮುಡಿಪಾಗಿಡು ಜೀವವೇ..
@ಪ್ರೇಮ್@
16.12.2020

ಇನಿಯ

ಇನಿಯ

ಸನಿಹ ಬರುವ ನಿನಗೆ ಒಲವ
ತರಲು ಧರೆಯೆ ಸಖನು ಬರುವ
ಮನದ ದುಗುಡ ಎಲ್ಲ ಕಳೆವ
ಮುದವ ತಂದು ನುಡಿಸಿ ಮೆರೆವ

ಬರಹ ವಿರಹ  ಮರೆವ ತರುವ
ನೆನಪ ತರುತ ನಗಿಸಿ ನಗುವ
ನನಗೆ ನೀನೆ ಬೇಕು ಎನುವ
ಹರಸಿ ಹೇಳಿ ಖುಷಿಯ ಕೊಡುವ

ಚಿನ್ನ ರನ್ನ ಮುದ್ದು ಎನುವ
ಕಂದ ಅಂದ ಚಂದ ಕರೆವ
ಮುಂದೆ ಹಿಂದೆ ಸುತ್ತ ಸುಳಿವ
ಬಯಸಿ ಬದುಕ ತಾನು ಕಳೆವ

ಕನಕ ಧನಕ ಪದಕ ತರುವ
ಉಸಿರು ಹಸಿರು ನೀನೆ ಎನುವ
ವದನ ನಯನ ದಲ್ಲು ಚೆಲುವ
ಭಯದ ಭವವ ಸದಾ ಕಳೆವ..
@ಪ್ರೇಮ್@
17.12.2020

ಚುಟುಕು

ಚುಟು-ಕು

1

ಕುಟುಕುವಂತಿರಬೇಕು ನಿಮ್ಮ ಅಂದದ ಚುಟುಕು
ಕುಟುಕಲು ಬಾರದಿರೆ ಜನರ ಕಲಕು
ಲೇಖನಿಯಲೆ ತೋರಿಸು ಮನಗಳ ಹುಳುಕು
ತೊಳೆದು ಹೋಗಲಿ ಸಮಾಜದ ಕೊಳಕು..

2.

ಕುಟುಕುತ್ತಿರಬೇಕು ಆಗಾಗ ತೆಗೆಯಲು ಕೊಳಕು
ಬರೆಯುತ್ತಿರಬೇಕು ಕವಿಗಳು ಉತ್ತಮ ಚುಟುಕು
ಕೇಳುಗರು ಕಿವಿಗೊಟ್ಟು ಅದನೇ ಕೇಳುವಂತಿರಬೇಕು
ಓದುಗರು ಕಣ್ ಹಾಯಿಸಿ ಓದಿತಿಳಿಯುವಂತಿರಬೇಕು!
@ಪ್ರೇಮ್@
18.12.2020

ಹನಿಗವನ

ಹನಿಗವನ

*ನೋಟ*

ನೋಡುತ್ತಾ ಮೈಮರೆತಿದ್ದೆ
ಅವಳ ಅಂದದ ಕುಡಿನೋಟ!
ಕಣ್ಗಳೊಂದಾಗಿ ಒಲವರಳಿತಂದುಕೊಂಡೆ!!
ಅರಿವಾಗಲೇ ಇಲ್ಲ ನನಗೆ
ಅದು ನನ್ನ ಜೇಬಿನೊಳಗಿನ
ಪರ್ಸಿಗೆ ಹಾಕಿದ
ಕಳ್ಳನೋಟ!
ಅರಿತಾಗ ನಾನು ಮಾಡಿದೆ
ಅವಳ ಹಿಂದೆ ಓಟ!
ಆದರೇನು ಸಿಗಲೇ ಇಲ್ಲ
ನನ್ನೆರಡು ಸಾವಿರಗಳ ನೋಟ!!!
@ಪ್ರೇಮ್@
24.12.2020

ರುಬಾಯಿ

ರುಬಾಯಿ

ಬರಲಿದೆ ಕ್ಷಣವದು ಬಲಿದಾನಕೆ ಬುವಿಯಲಿ
ತರಲಿದೆ ನೋವನು ಹಲವರ ಕಣ್ಣಲಿ
ಬದುಕದು ನೋವು ನಲಿವಿನ ಜಾತ್ರೆ
ತಯಾರಿ ನಡೆಸಬೇಕಿದೆ ಮನೆ ಮನದಲಿ..
@ಪ್ರೇಮ್@
23.12.2020

ಚುಟುಕು

ಚುಟುಕು

ಪರನಾರಿಯ ಕಂಡೊಡೆ ಪುಟಿದೇಳುವುದು ಮನ!
ಹೆಂಡತಿಯು ಎದುರಾದೊಡೆ ಬಡಿದುಕೊಳ್ಳುವುದು ತನ್ನತನ!!
ಪುಳಕಿತವು ಬಸ್ಸಿನಲಿ ತಾಗಲು ಯುವತಿಯರು!!
ಬೇಸರವು ಜೀವನ ಮದುವೆಯ ಬಳಿಕವು!!!
@ಪ್ರೇಮ್@
28.12.2020

ಗಕಾರ

ಗಕಾರ

ಗಲಾಟೆ ಬೇಡವೊ ಗಣೇಶ ನಿನ್ನದು
ಗಾಡಿಯು ಬೇಕು ಅಮ್ಮಾ ನನಗೆ
ಗಿಳಿಯನು ಕೊಡುವೆನು ಮಗನೇ ನಿನಗೆ
ಗೀಚಲು ಪೆನ್ನು ಕಾಗದ ಬೇಕಮ್ಮಾ

ಗುಲಾಬಿಯ ಕೊಡುವೆನು ಪುಟ್ಟನೆ ನಿನಗೆ
ಗೂಡಲಿ ಕೂರುವ ಹಕ್ಕಿಯು ಬೇಕು
ಗೃಹದಲೆ ಸಾಕುವ ಪಕ್ಷಿಯ ತರಲೇ
ಗೆಲುವಿನ ಹಾದಿಯಲೆ ಸಾಗು ನೀ ಮಗನೆ

ಗೇಲಿಯ ಮಾಡೆನು ಗೆಳೆಯರ ಜೊತೆಗೆ
ಗೈರು ಹಾಜರಿ ಬೇಡವು ಶಾಲೆಗೆ
ಗೊಂದಲ ಮಾಡದೆ ಬದುಕಲು ಕಲಿ ನೀ
ಗೋಲಿಯ ಆಡಲು ಬೇಕದು ನನಗೆ

ಗೌರಿಯ ಕಂದನೆ ನೀ ಬಾ ಬಳಿಗೆ
ಗಂಧವ ಹಚ್ಚುವೆ ನಿನ್ನಾ ಮೈಗೆ
ಗಃ ಓಡಿದ ಆಟದ ಬಯಲಿಗೆ..
@ಪ್ರೇಮ್@
05.01.2020

ವಚನ

ವಚನ

ಸಂತಸದಲ್ಲಿಯೇ ಬದುಕನು ಕಳೆಯಲು
ಸಾಧ್ಯವೇ ಜಗದಿ ಹೇಳು ಶಿವಾ..
ಕಷ್ಟ ಸುಖಗಳೆರಡೂ ನಾಣ್ಯದ ಮುಖಗಳು
ದಾಟಲೇ ಬೇಕು ಸಂಸಾರ ಸಾಗರ ಶಿವಾ..
@ಪ್ರೇಮ್@
06.01.2020

ಭಾವ

ಭಾವ

ನುಡಿನುಡಿಯಲು ಪದವಾಡು ನೀ ಕನ್ನಡ ತಾಯೆಂದು
ಕಡಿಕಡಿದರೂ ಹಿಡಿ ಹಿಡಿಯಲಿ ಆಡು ನೀ ಕನ್ನಡವನೆಂದು..

ಕೊನೆಕೊನೆಯಲು ನಗೆಯಿರುವುದು ಬದುಕಿನ ಬಯಲಲ್ಲಿ
ಮನೆಮನೆಯಲು ಪೂಜೆಯಿರಲಿ ಭುವನೇಶ್ವರಿ ನುಡಿಯಲ್ಲಿ..

ದಿನದಿನದಲು ಬಳಬಳಸುತ ಕನ್ನಡ ನುಡಿ ಚಂದ
ಪದಪದದಲು ಆಡಲು ಅದು ಕನ್ನಡವೇ ಅಂದ..

ಭಾಷೆ ಭಾಷೆಯಲು ಉತ್ತಮವದು ನಮ್ಮೀ ಮಾತೃಭಾಷೆ
ಕಾಸುಕಾಸಿಗು ಸಿಗದು ಇದು ಮಾತೆಯ ನುಡಿ ಭಾಷೆ

ಕಲ್ಲು ಕಲ್ಲಲು ಕೆತ್ತಿರುವುದು ಕನ್ನಡಿಗನ ಭಾವ
ತುಟಿತುಟಿಯಲು ನಗೆಯುಕ್ಕುತ ತೊರೆಯುತಿದೆ ಅಹಂಭಾವ

ಭಾವ ಭಾವವು ಒಟ್ಟಾಗುತ ಹೊರಸೂಸಿದೆ ಗುಡಿಯು
ಕಾವು ಕಾವಲು ಬೆಸೆದಿಹುದು ಮರೆಯದ ಸಿಹಿನುಡಿಯು..

ಮನಮನದಲು ಪುಟಿದೆದ್ದಿದೆ ಕನ್ನಡದ ತೇರು
ತನುತನುವಲು ಗರಿಗೆದರಿದೆ ಭಾವಗಳು ನೂರು..
@ಪ್ರೇಮ್@
08.01.2021

ಸಿಂಕೇನ್ ಕವನ

ಸಿಂಕೇನ್ ಕವನ

ಅತ್ತೆ
ಸೊಕ್ಕಿನ ಮೊಟ್ಟೆ
ಕೆಳಗಿಳಿಸುವ ಮಾತಿನ ಭರಾಟೆ
ತಾನೇ ಮೇಲೆನುತ ಕೊಬ್ಬಿದ ಕುರಿ
ಗಟ್ಟಿಗಿತ್ತಿ!!!
@ಪ್ರೇಮ್@
09.01.2021

ಶಾಯರಿಗಳು

ಶಾಯರಿ-1

ನೋಡುತ್ತಾ ಕುಳಿತಿದ್ದೆ 
ಅವಳ ಕಣ್ಣಿನ ಕಾಡಿಗೆ!
ಗಮನಿಸಲೇ ಇಲ್ಲ ಹಿಂದೆ
ಅವಳಪ್ಪ ಹಿಡಿದು ನಿಂತಿದ್ದ ಬಡಿಗೆ!!

ಶಾಯರಿ-2

ನೋಡುತ್ತಾ ಕುಳಿತಿದ್ದೆ
ಅವಳಂದದ ನಗು!
ಅರಿಯಲೇ ಇಲ್ಲ ನಾನು
ಅಂದೇ ಕಳಕೊಂಡ ನನ್ನ ನಗು!!!
@ಪ್ರೇಮ್@
11.01.2021

ಸುಗ್ಗಿಪದ

ಸುಗ್ಗಿ ಪದ

ಹಿಗ್ಗುತ ಬಂತದು ಸುಗ್ಗಿಯ ಕಾಲವು
ತಗ್ಗಿ ಬಗ್ಗಿ ನಡೆಯುವ ಭೂತಾಯಿಗೆ..
ಮಗ್ಗಿಯಂತೆ ಕೊಡುವಳು ಬೆಳೆಯನು ಮಕ್ಕಳಿಗೆ
ಮೊಗ್ಗಿನಂತರಳಿದೆ ರೈತನ ಹೂನಗೆ..

ಹುಗ್ಗಿಯ ಮಾಡಿ ತಿನ್ನಲು ಬನ್ನಿರೊ
ಕುಗ್ಗುತ ಬಾಳದೆ ಹಿಗ್ಗಲಿ ಬದುಕಿರೊ..

ಅಗ್ಗದಲೆಲ್ಲ ಸಿಗುವುದು ಇಲ್ಲಿ
ಸಗ್ಗದ ಐಸಿರಿ ಬಂದಿಹುದಿಲ್ಲಿ
ಒಗ್ಗಲು ಬೇಕು ಧರೆಯ ಕೆಲಸಕೆ
ಬಗ್ಗಲು ಬೇಕು ಬೆಳೆಯ ಕಾಯಕಕೆ

ಮಗ್ಗಲು ಬದಲಾಯಿಸಿ ದುಡಿಯಲು ಬೇಕು
ಮುಗ್ಗಲು ಬರದಂತೆ ತಡೆಯಲು ಬೇಕು
ಹಗ್ಗದ ಮೇಲೆ ಬಾಳುವ ಆಟವು
ಜಗ್ಗದೆ ಬಾಳಿರೊ ರೈತರೆ ತಾವು..
@ಪ್ರೇಮ್@
13.01.2020

ಭಕ್ತಿಗೀತೆ -ಜೈಜೈ ವಿಠಲ

ಜೈಜೈ ವಿಠಲ

ಭಕ್ತಿಗೀತೆ

ಜೈಜೈಜೈಜೈ ಜೈಜೈಜೈಜೈ
ಜೈಜೈ ವಿಠ್ಠಲ ಎನ್ನಿರೋ
ಜಯಹರಿ ಜಯಹರಿ ಜಯಹರಿ ಜಯಹರಿ
ಜಯಹರಿ ವಿಠ್ಠಲ ಎನ್ನಿರೋ..

ನಾಮವ ಪಾಡುತ ಭಕ್ತಿಯ ಬೆಳೆಸುತ
ಪೂಜೆಯ ಮಾಡುತ ತಣಿಯಿರೋ
ಹೂವು ಹಣ್ಣಿನ ಪೂಜೆಯನರ್ಪಿಸಿ 
ಭಜನೆಯ ಮಾಡುತ ಕುಣಿಯಿರೋ..

ಬೇಡಿದ ವರವನು ಕೊಡುವನು ಹರಿಯು
ಹಾಡುತ ಮಂತ್ರವ ಪಾಡಿರೋ
ನಗೆಯನು ತರಿಸುವ ಬದುಕಲಿ ದೇವನು
ಭಕ್ತಿಯಲಿ ಮೈ ಮರೆಯಿರೋ..

ನಾನು ನೀನು ಎನ್ನುವುದೇನಿದೆ
ಸರ್ವವೂ ಅವನದು ಎನ್ನಿರೋ
ಬಾಗುತ ಬಳುಕುತ ಬಳಲುವ ಬದುಕಲಿ
ವಿಠಲನ ನಂಬಿ ಬದುಕಿರೋ..

ತಂದೆಯು ನೀನೇ ತಾಯಿಯು ನೀನೇ
ಎನುತಲಿ ವರವನು ಬೇಡಿರೋ
ತನುಮನಧನಗಳ ದೇವಗೆ ಅರ್ಪಿಸಿ
ಸಕಲರ ಕಾಯೋ ಎನ್ನಿರೋ..
@ಪ್ರೇಮ್@
15.01.2021

ಗಝಲ್

ಗಝಲ್

ಬದುಕು ಹೀಗೆಯೇ ಮೌನ ಶಬ್ದದ ಹಾಗೆ
ಮಾತು ಹೀಗೆಯೇ ಪದವು ನಿಶ್ಶಬ್ದದ ಹಾಗೆ!

ಪ್ರೀತಿ ಹಾಗೆಯೇ ದ್ವೇಷ ಉಕ್ಕುವ ತೆರದಿ
ನೀತಿ ಹಾಗೆಯೇ  ಪಕ್ಷಪಾತ ಮೂಡಿದ ಹಾಗೆ!

ನಲಿವೂ ಹಲವೆಡೆ ನೋವು ನೀಡುವುದು ಬಾಳಿಗೆ
ಕಲಿಕೆಯೂ ಹಲವೆಡೆ ಗುರಿಯ ತೋರದ ಹಾಗೆ!

ನಿದ್ದೆಯಲ್ಲೂ ಹೆದರಿ ಬೆಚ್ಚಿ ಬೀಳುವೆವು ಕೆಲವೊಮ್ಮೆ
ಬಿದ್ದಾಗಲೂ ಏಳುತ ಹೋರಾಡಿ ಗೆದ್ದ ಹಾಗೆ!

ದು:ಖದಲಿ ಹೇಳಿಕೊಳ್ಳಬಾರದು ಮನದೊಡಲ *ಪ್ರೇಮ* ಭಾವ
ಸುಖದಲೂ ಮುಖವ ಸಿಂಡರಿಸಿ ಬದುಕಿದ ಹಾಗೆ!
@ಪ್ರೇಮ್@
16.01.2020

ಪದಮಾಲಿಕೆ-ಸು

ಪದ ಮಾಲಿಕೆ-ಸು

ಪದಮಾಲಿಕೆ

ಸುತನೆ ಪ್ರೀತಿಯ ಸವಿಮಾತನಾಲಿಸು ಇನಿಯನೆ ಎನ್ನಯ ನಾನಿನ್ನವಳೆಂಬ ಸತ್ಯವನರಿತು ಸಲಿಗೆಯ ಪಡೆದು ನಾ ಕೊಡುವ ಸರಳ ಉಪಾಯದ ಮಾತುಗಳ ಸ್ವೀಕರಿಸು...
@ಪ್ರೇಮ್@
29.01.2020

ಶನಿವಾರ, ಜನವರಿ 16, 2021

About me




ಹೆಸರು-ಪ್ರೇಮಾ ಉದಯ್ ಕುಮಾರ್

ಉದ್ಯೋಗ-ಆಂಗ್ಲ ಭಾಷಾ ಶಿಕ್ಷಕರು

ಕಾವ್ಯನಾಮ-@ಪ್ರೇಮ್@

ವಿದ್ಯಾರ್ಹತೆ-ಎಂ.ಎ ಕನ್ನಡ ಮತ್ತು ಇಂಗ್ಲಿಷ್, ಬಿ.ಎಡ್.

ಸ್ವಂತ ವಿಳಾಸ- ,w/o ಉದಯ್ ಕುಮಾರ್ ಡಿ.ಬಿ.

ದೇವನ್ ಗೂಲ್, 

ಕೊಟ್ಟಿಗೆಹಾರ ಪೋಸ್ಟ್, 

ಬಣಕಲ್ ವಯಾ, 

ಮೂಡಿಗೆರೆ ತಾಲೂಕು

ಚಿಕ್ಕಮಗಳೂರು ಜಿಲ್ಲೆ. 577113

ಹವ್ಯಾಸ-ಬರವಣಿಗೆ, ಚಿತ್ರಕಲೆ,ಓದುವುದು, ಟೈಲರಿಂಗ್,ಎಂಬ್ರಾಯಿಡರಿ, ಹಾಡುವುದು, ಬರಹ, ಹಾಡು ಕೇಳುವುದು.ಮೋಟಿವೇಶನ್.ಕಸದಿಂದ ರಸ ತಯಾರಿಕೆ.

ಬರವಣಿಗೆ- ಪ್ರೇಮ್ಸ್ ಲಿಟರೇಚರ್ ಎಂಬ ಬ್ಲಾಗ್ ನಲ್ಲಿ 1000 ಕ್ಕೂ ಅಧಿಕ ಕವನ, ಹನಿಗವನ,  ಭಾವಗೀತೆ, ಗಝಲ್, ಇನಿಗವನ, ಚುಟುಕು, ಶಾಯರಿ, ಹಾಯ್ಕು ಮೊದಲಾದ ಪ್ರಕಾರಗಳಲ್ಲಿ ಬರೆದಿರುವೆ. 100ರಷ್ಟು ಲೇಖನಗಳಿವೆ.

ನಮ್ಮ ಬಂಟ್ವಾಳ ಪತ್ರಿಕೆಯಲ್ಲಿ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ" ಎಂಬ ಸಾಮಾಜಿಕ ಕಳಕಳಿಯ ಅಂಕಣ 60 ವಾರಗಳಿಂದ ಪ್ರಕಟವಾಗುತ್ತಿದೆ. ಈ ಮೊದಲು 2008ರಿಂದ ಮೂರು ವರುಷಗಳ ಕಾಲ ಇದೇ ಅಂಕಣ ವಾರ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು, 6 ತಿಂಗಳುಗಳ ಕಾಲ ಇದೇ ಪತ್ರಿಕೆಯಲ್ಲಿ 'ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ' ಎಂಬ ಅಂಕಣ ಪ್ರಕಟವಾಗಿದೆ.

ಕೃತಿ ಪ್ರಕಟಣೆ- ಭಾವ ಜೀವದ ಯಾನ

ಕವನ ಸಂಕಲನ

ಗವಿಯಡವಿಯ ಗಝಲ್ ಗಳು ಎಂಬ 50 ಗಝಲ್ ಗಳನ್ನು ಒಳಗೊಂಡ ಪುಸ್ತಕ ಹಾಗೂ ಶಿವ ಭಕ್ತಿ ಲೀಲಾಮೃತ ಎಂಬ ಭಕ್ತಿ ಗೀತೆಗಳ ಸಂಕಲನ ಪ್ರಕಟಣೆಗೆ ಸಿದ್ಧವಾಗಿವೆ.

ದಿನಾಂಕ 10.12.1980 ರಲ್ಲಿ ದಿ. ಶ್ರೀಯುತ ರಮೇಶ್ ಶೆಟ್ಟಿ ಮತ್ತು ಶ್ರೀಮತಿ ಗುಲಾಬಿ ಶೆಟ್ಟಿ ಇವರಿಗೆ ಮೊದಲನೆ ಮಗಳಾಗಿ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಜನನ.

ಪ್ರಾಥಮಿಕ ವಿದ್ಯಾಭ್ಯಾಸವನ್ನು ಶ್ರೀ ಮುಜಿಲ್ನಾಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಈದು, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇಲ್ಲಿ ಪಡೆದುದು.

 ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸ.ಪ.ಪೂ.ಕಾಲೇಜು, ಕುದುರೆಮುಖ ಚಿಕ್ಕಮಗಳೂರು ಜಿಲ್ಲೆ ಇಲ್ಲಿ ಪಡೆದೆ.

ಮುಂದೆ ಕಾಲೇಜು ಶಿಕ್ಷಣ ವಿಜ್ಞಾನ ವಿಷಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಇಲ್ಲಿ ನಡೆಯಿತು. ತದನಂತರ ಮೈಸೂರಿನ ಮಹಾರಾಣಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಿ. ಎಡ್ . ಟ್ರೈನಿಂಗ್ ಪಡೆದು ದೀಪಾ ಶಿಕ್ಷಣ ಸಂಸ್ಥೆ ದೀಪಾನಗರ ಮೈಸೂರು ಇಲ್ಲಿ ವೃತ್ತಿ ಜೀವನ ಪ್ರಾರಂಭ. 

ತದನಂತರ 2004 ರ ಮಾರ್ಚ್ 10 ರಂದು ಸ.ಹಿ.ಪ್ರಾ.ಶಾಲೆ ಉಳಿಬೈಲು, ಬಂಟ್ವಾಳ ತಾಲೂಕು ದ.ಕ ಇಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಸರಕಾರಿ ಸೇವೆಗೆ ಸೇರಲ್ಪಟ್ಟು, ಅಲ್ಲೇ ನಮ್ಮ ಬಂಟ್ವಾಳ ವಾರ ಪತ್ರಿಕೆಯಲ್ಲಿ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ " ಅಂಕಣ ಬರಹ ಪ್ರಾರಂಭ.

ಇಂದಿರಾಗಾಂಧಿ ಮುಕ್ತ ವಿಶ್ವ ವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಬಿ.ಎ, ಆಂಗ್ಲ ಭಾಷಾ ಭೋಧನಾ ಸರ್ಟಿಫಿಕೇಟ್, ಹಾಗೂ ಬಿ. ಎಡ್ ಪದವಿ ಕಲಿಕೆ.

 ಮೈಸೂರಿನ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪ್ರಥಮ ಶ್ರೇಣಿಯಲ್ಲಿ ಪೂರ್ಣ.

2011ರಲ್ಲಿ ಸ.ಪ.ಪೂ.ಕಾಲೇಜು ಐವರ್ನಾಡು ಇಲ್ಲಿನ ಪ್ರೌಢಶಾಲಾ ವಿಭಾಗಕ್ಕೆ ಆಂಗ್ಲ ಭಾಷಾ ಶಿಕ್ಷಕಿಯಾಗಿ ಪದೋನ್ನತಿ ಹೊಂದಿ ಇದುವರೆಗೆ ವೃತ್ತಿ ಬದುಕಿನ ಹದಿನೈದು ವರುಷಗಳನ್ನು ಪೂರೈಸಿದ ಸಂತಸ.

2011ರಲ್ಲಿ ಉದಯ್ ಕುಮಾರ್ ರವರೊಡನೆ ದಾಂಪತ್ಯ ಜೀವನ ಪ್ರಾರಂಭ. ದಿಯಾ ಉದಯ್ ಎಂಬ ಹೆಸರಿನ ಆರುಾವರೆ ವರುಷದ ಮಗಳಿದ್ದಾಳೆ.

 ಪ್ರಸ್ತುತ ಅದೇ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಸುಳ್ಯ,ದ.ಕ ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ಆಂಗ್ಲ ಭಾಷಾ ಬೋಧನೆ . ಎಂಟು ವರುಷಗಳಿಂದ ಶೇ. 90 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪ್ರತಿ ವರ್ಷ ಆಂಗ್ಲ ಭಾಷೆಯಲ್ಲಿ ಉತ್ತೀರ್ಣತೆಯ ಸಾಧನೆ.

 2016-17ರಲ್ಲಿ ಶೇ. 100 ಆಂಗ್ಲ ಭಾಷೆಯಲ್ಲಿ ಫಲಿತಾಂಶದ ಸಾಧನೆ.

ಕಾವ್ಯನಾಮ-@ಪ್ರೇಮ್@

ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವ ಹೆಮ್ಮೆಯಿದೆ.

ಹಿಮಾಲಿ ಎಂ.ಪಿ. ಎಂಬ ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕವಿಗೋಷ್ಟಿಯಲ್ಲಿ ಭಾಗವಹಿಸುವಂತೆ ಮಾಡಲಾಗಿದೆ ಹಾಗೂ ಅದೇ ವಿದ್ಯಾರ್ಥಿನಿ ಬರೆದ 50 ಕವನಗಳ ಕವನಸಂಕಲನವನ್ನು ಪ್ರಕಟಿಸಿ, ಸುವಿಚಾರ ಸಾಹಿತ್ಯ ವೇದಿಕೆಯ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ.

  ಕನ್ನಡ, ತುಳು, ಅರೆಭಾಷೆ, ಮಳಯಾಳಂ, ತಮಿಳು ಹಿಂದಿ ಹಾಗೂ ಆಂಗ್ಲ ಭಾಷೆಗಳಲ್ಲಿ ಕತೆ, ಕವನ ಹಾಗೂ ಬರವಣಿಗೆಯ ವಿವಿಧ ಮಜಲುಗಳಲ್ಲಿ ವಿದ್ಯಾರ್ಥಿಗಳನ್ನು ಬರೆಯಲು, ಹಾಗೂ ವಿವಿಧ ರೀತಿಯ ಡ್ರಾಯಿಂಗ್ ಕಲೆ ಹಾಗೂ ಕ್ರಾಫ್ಟ್ ಕಲೆಗಳನ್ನು ರಚಿಸಲು  ಪ್ರೋತ್ಸಾಹಿಸಿದ ಪರಿಣಾಮವಾಗಿ ನಾನೂ ಸಹ ಸಂಪಾದಕಳಾಗಿದ್ದ ನಮ್ಮ ಶಾಲಾ ವಾರ್ಷಿಕ ಹಸ್ತಪ್ರತಿ ಸಂಚಿಕೆ "ಐಸಿರಿ" ಗೆ ಸುಳ್ಯ ತಾಲೂಕು ಮಟ್ಟದ ಪ್ರೌಢ ಶಾಲಾ ಹಸ್ತಪ್ರತಿ ಸಂಚಿಕೆ ಸ್ಪರ್ಧೆಯಲ್ಲಿ (ಅಟ್ಲೂರು)   ಸತತ ಎರಡು ವರುಷ ಪ್ರಥಮ ಬಹುಮಾನ ಲಭಿಸಿದೆ. (2017.2018) ಮತ್ತೊಂದು ವರುಷ (2016)ದ್ವಿತೀಯ ಬಹುಮಾನ ದೊರೆತಿದೆ.

2019ರ ರಾಜ್ಯ ಮಟ್ಟದ ಮೊದಲ  ಮಹಿಳಾ ಸಾಹಿತ್ಯ ಸಮ್ಮೇಳನ ಮನುಬಳಿಗಾರ್ ರವರ ನೇತೃತ್ವದಲ್ಲಿ, ಸುಧಾ ಮೂರ್ತಿಯವರ ಅಧ್ಯಕ್ಷತೆಯಲ್ಲಿ  ಚಿಕ್ಕಮಗಳೂರಿನಲ್ಲಿ ನಡೆದಾಗ ಅದರ ಒಂದು ಗೋಷ್ಟಿ "ಕನ್ನಡ ಸಾಹಿತ್ಯ ಮಹಿಳಾ ನೋಟ" ಕಾರ್ಯಕ್ರಮದ ನಿರೂಪಣೆ ನಡೆಸಿಕೊಡುವ ಅವಕಾಶ ಒದಗಿ ಬಂದಿತ್ತು.

ಮೊದಲ ಕೃತಿ ಪ್ರಕಟಣೆ- ಭಾವ ಜೀವದ ಯಾನ, ಭಾವನೆ ಮತ್ತು ಬದುಕಿನ ನಡುವೆ ಸಮ್ಮಿಲನ ಎಂಬ

ಕವನ ಸಂಕಲನ 2019 ಜನವರಿ 18ಕ್ಕೆ ಚಿಕ್ಕಮಗಳೂರು ಜಿಲ್ಲಾ  15ನೇ ಕನ್ನಡ ಸಾಹಿತ್ಯ ಸಮ್ಮೇಳನ , ಮೂಡಿಗೆರೆಯಲ್ಲಿ  ಬಿಡುಗಡೆ. ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ  ಪರಿಷತ್ತಿನ ಅಧ್ಯಕ್ಷರಾದ ಕುಂದೂರು ಅಶೋಕ್ ರವರ ಬೆನ್ನುಡಿಯೊಂದಿಗೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರಿಂದ.

ನವಿಲುಗರಿಯ ಬಣ್ಣಗಳು, ಭಾವದೀಪ್ತಿ, ಹಬ್ಬಿದಾ ಮಲೆ ಮಧ್ಯದೊಳಗೆ, ಭಾವ ಸಂಗಮ ಮೊದಲಾದ  ಹಲವಾರು ಸಂಪಾದಿತ ಕವನ ಸಂಕಲನ ಹಾಗೂ ಕಥಾ ಸಂಕಲನ ಪುಸ್ತಕಗಳಲ್ಲಿ  ನನ್ನ ಕತೆ,ಕವನ ಪ್ರಕಟಗೊಂಡಿದೆ.

 ನೈಋತ್ಯ, ಪಂಜು, ನಮ್ಮ ಬಂಟ್ವಾಳ, ಸ್ತ್ರೀ ಜಾಗೃತಿ,  ಮಂಗಳ,   ವಿಜಯವಾಣಿ , ಉದಯವಾಣಿ, ಮೊದಲಾದ ಪತ್ರಿಕೆಗಳಲ್ಲೂ , ಹಲವಾರು ಸಂಘ ಸಂಸ್ಥೆಗಳ ವಾರ್ಷಿಕ ಸಂಚಿಕೆಗಳಲ್ಲಿ ಲಘುಬರಹ, ಲೇಖನ, ಕವನಗಳು ಪ್ರಕಟಗೊಂಡಿವೆ.

ಪ್ರೇಮ್ಸ್ ಲಿಟರೇಚರ್ ಎಂಬ ಬ್ಲಾಗ್ ನಲ್ಲಿ 1000ಕ್ಕೂ ಹೆಚ್ಚು ಕವನ, ಅಂಕಣ ಬರಹ, ಕತೆ, ಗಝಲ್,ನ್ಯಾನೋಕತೆ,  ವಿಮರ್ಶೆಗಳು, ಬರವಣಿಗೆಗಳು ತುಳು, ಕನ್ನಡ ಹಾಗೂ ಆಂಗ್ಲ  ಭಾಷೆಗಳಲ್ಲಿವೆ.

ಪ್ರತಿಲಿಪಿ, ವರ್ಡ್ ಪ್ರೆಸ್, ಕನ್ನಡ ಪೋಯಮ್ಸ್ ಆ್ಯಪ್ ಗಳಲ್ಲಿ ಕತೆ, ಕವನಗಳು ಪ್ರಕಟಗೊಳ್ಳುತ್ತಿವೆ.ಕನ್ನಡದ 7,000 ಬರಹಗಾರರಲ್ಲಿ ಪ್ರತಿಲಿಪಿಯಲ್ಲಿ 101ನೇ ಸ್ಥಾನದಲ್ಲಿದ್ದು, 6,500 ಓದುಗರಿರುವರು.

15-20 ರಾಜ್ಯ, ಅಂತರರಾಜ್ಯ, ಜಿಲ್ಲಾ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವೆ. ರಾಷ್ಟ್ರ ಮಟ್ಟದಲ್ಲಿ ಕೇರಳದಲ್ಲಿ ಹಾಗೂ ಬಂಟ್ವಾಳ ತಾಲೂಕು ಮಟ್ಟದಲ್ಲಿ ಆಂಗ್ಲ ಭಾಷಾ ವಿಶೇಷ ತರಬೇತಿಗಳನ್ನು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೀಡಿರುವೆ. ಪ್ರಸ್ತುತ ಶಾಲೆಯಲ್ಲೂ ಸ್ಪೋಕನ್ ಇಂಗ್ಲಿಷನ್ನು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವೆ.  ಹಲವಾರು ಆಂಗ್ಲ ಭಾಷಾ ತರಬೇತಿಗಳಲ್ಲಿ ಭಾಗವಹಿಸಿದ ಅನುಭವವಿದೆ.

ಉತ್ತರಾಕಾಂಡ ರಾಜ್ಯದಲ್ಲಿ ಸಿಸಿಆರ್ಟಿ ಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದಾಗ ಮತ್ತು ಕೇರಳದ ಅರಿಕೋಡ್ ನಲ್ಲಿ ಎದು ಫೆಸ್ಟ್ ನಲ್ಲಿ ಮತ್ತು ಕೊಡಗಿನ ಪೆರಾಜೆ ಶಾಲೆಯಲ್ಲಿ ನಡೆದ ಸಿಸಿಆರ್ ಟಿ ಎದುಫೆಸ್ಟ್ ನಲ್ಲಿ  ಆಂಗ್ಲ ಭಾಷಾ ವಿಶೇಷ ತರಗತಿಗಳನ್ನು ನೀಡಿ ಸನ್ಮಾನಿಸಲ್ಪಟ್ಟಿರುವೆ.

ಪ್ರಶಸ್ತಿಗಳು- ಸ್ನೇಹ ಸಂಗಮ ಕವಿಗಳ ಬಳಗ ತುಮಕೂರು ಇವರು ಕೊಡಮಾಡುವ ರಾಜ್ಯಮಟ್ಟದ   ಕಾವ್ಯ ರತ್ನ ಪ್ರಶಸ್ತಿ, ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ ನಿಂದ ಕೊಡಮಾಡುವ ರಾಜ್ಯ ಮಟ್ಟದ  ಕನ್ನಡ ಸೇವಾ ರತ್ನ ಪ್ರಶಸ್ತಿಗೆ ಭಾಜನ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವಿಜ್ಞಾನ ಶಿಕ್ಷಕರಿಗಾಗಿ ನಡೆಸುವ ವಿಜ್ಞಾನ ವಿಚಾರ ಗೋಷ್ಟಿಯಲ್ಲಿ   ಮೂರು ಬಾರಿ ಜಿಲ್ಲಾ ಮಟ್ಟಕ್ಕೂ , ಒಂದು ಬಾರಿ ರಾಜ್ಯ ಮಟ್ಟಕ್ಕೂ ಆಯ್ಕೆಯಾಗಿರುತ್ತೇನೆ. ತಾಲೂಕು ಮಟ್ಟದ ರಸಪ್ರಶ್ನೆ, ಪಿಕ್ ಆಂಡ್ ಸ್ಪೀಚ್ ಸ್ಪರ್ಧೆಗಳಲ್ಲೂ, ರಾಜ್ಯ ಅಂತರ ರಾಜ್ಯ ಮಟ್ಟದ ಕವನ ರಚನಾ ಸ್ಪರ್ಧೆಗಳಲ್ಲೂ ನನ್ನ ಕವನಗಳು ಮೆಚ್ಚುಗೆ ಗಳಿಸಿವೆ. ಬಹುಮಾನಗಳನ್ನು ಗಳಿಸಿ ಕೊಟ್ಟಿವೆ. 

" ಮಹಿಳಾ  ಕವಿರತ್ನಗಳು" ಎಂಬ ವಾಟ್ಸಪ್ ಗುಂಪಿನ ಮೂಲಕ ಹಲವಾರು ಸ್ಪರ್ಧೆಗಳನ್ನು ಆಗಾಗ ನಡೆಸಿ, ಪುಸ್ತಕ ಬಹುಮಾನಗಳನ್ನು ಕಳುಹಿಸಿ, ಕವಿಗಳನ್ನು ಉತ್ತೇಜನ ಹಾಗೂ ಬರವಣಿಗೆಗೆ ಪ್ರೋತ್ಸಾಹಿಸಲಾಗುತ್ತಿದೆ. "ಲೇಡೀಸ್ ಗ್ಯಾಲರಿ" ಎಂಬ ಮಹಿಳೆಯರೇ ಇರುವ ವಾಟ್ಸಪ್ ಗುಂಪಿನ ಮೂಲಕ ಕಳೆದ 5 ವರುಷಗಳಿಂದ ಮಹಿಳೆಯರ ಹಲವಾರು ಸಮಸ್ಯೆಗಳನ್ನು ಸಮಾಜದ ವಿವಿಧ ಸ್ತರಗಳಲ್ಲಿರುವ ಮಹಿಳೆಯರಿಂದಲೇ ಬಗೆಹರಿಸಲಾಗುತ್ತಿದೆ. 

         "ಫ್ರೆಂಡ್ಸ್ ಫಾರೆವರ್ ಅಟ್ ಗುಡ್ ಐಡಿಯಾಸ್" ಎಂಬ ಗುಂಪನ್ನು ಹುಟ್ಟು ಹಾಕಿ ಕಳೆದ 5 ವರುಷಗಳಿಂದ  ಆ ಮೂಲಕ ಪ್ರತಿನಿತ್ಯದ ಸ್ಥಳೀಯ, ಜಿಲ್ಲಾ, ರಾಜ್ಯ,   ರಾಷ್ಟ್ರಗಳ ವಾರ್ತೆಗಳನ್ನು ಪ್ರತಿನಿತ್ಯ ಹಂಚಿ ವಿನಿಮಯ ಮಾಡಿಕೊಳ್ಳುತ್ತಾ ಜ್ಞಾನವನ್ನು ವೃದ್ಧಿಸಲಾಗುತ್ತಿದೆ.

   

       "ಟೀಚರ್ ಲರ್ನರ್ಸ್" ಎಂಬ ವಾಟ್ಸಪ್ ಗುಂಪಿನ ಮೂಲಕ 2014 ನವೆಂಬರ್ ನಿಂದ ಶಿಕ್ಷಕರಿಗೆ ವಾರ್ತೆ, ಮಾಹಿತಿ, ಚರ್ಚೆ, ಸಮಸ್ಯೆ ಪರಿಹರಿಸಿಕೊಳ್ಳುವಿಕೆ, ವಿಷಯದ ತಿಳುವಳಿಕೆ ಹಂಚಿಕೊಳ್ಳುವುದರ ಜೊತೆಗೆ, ಶಿಕ್ಷಕರ ಸಾಮಾನ್ಯ ಜ್ಞಾನಾಭಿವೃದ್ಧಿಯ ಕಾರ್ಯವನ್ನೂ ಮಾಡಲಾಗುತ್ತಿದೆ.

ದ.ಕ. ಸಿರಿಗನ್ನಡ ಸಾಹಿತ್ಯ ವೇದಿಕೆಯ ಸುಳ್ಯ ತಾಲೂಕಿನ ಕಾರ್ಯದರ್ಶಿ, ಬೆಳಕು ರಾಜ್ಯ ಸಂಸ್ಥೆಯ ದ.ಕ ಜಿಲ್ಲಾ ಮಹಿಳಾ ಅಧ್ಯಕ್ಷೆ,  ಕಡಲೂರಿನ ಲೇಖಕರು, ಪುತ್ತೂರು ಸಾಹಿತ್ಯ ವೇದಿಕೆ, ಸ್ನೇಹ ಸಂಗಮ, ಹನಿಹನಿ ಇಬ್ಬನಿ, ನಿಸ್ವಾರ್ಥ ಸಾಹಿತ್ಯ ಸೇವಾ ಸಂಸ್ಥೆ , ಕರುನಾಡ ಹಣತೆ, ಕವಿವೃಕ್ಷ   ಬಳಗ , ವಿಶ್ವ ಕನ್ನಡ ಸಾಹಿತ್ಯ ಪರಿಷತ್, ಸುಧೆ  ಟ್ರಸ್ಟ್ ಮೊದಲಾದ ಸಾಹಿತ್ಯ ಸಂಘಗಳ ಸದಸ್ಯಳಾಗಿರುವೆ.

ಪ್ರಸ್ತುತ ವಿಳಾಸ- ಸ.ಪ.ಪೂ.ಕಾಲೇಜು ಐವರ್ನಾಡು, ಸುಳ್ಯ, ದ.ಕ ೫೭೪೨೩೯

@ಪ್ರೇಮ್@

9901327499

premauday184@gmail.com 

http://premaudaykumar.blogspot.com/



ಗುರುವಾರ, ಜನವರಿ 14, 2021

ಸಂಕ್ರಾಂತಿಗೆ

ಸಂಕ್ರಾಂತಿಗೆ ಸಮ್-ಕ್ರಾಂತಿಯಾಗಲಿ

ಎಳ್ಳು ಬೆಲ್ಲಗಳಂತೆ ಬಿಳಿಯಾಗಿ ಮನಸ್ಸು ಶುದ್ಧವಾಗಿ ಬದುಕುವಂತಾಗಲಿ
ಪರಿಶುದ್ಧ ಪ್ರೀತಿ ಪ್ರೇಮ ಉಕ್ಕಿ ಸರ್ವ ಮನಗಳಲಿ ಹರಿಯುವಂತಾಗಲಿ

ವಿಶ್ವ ಭ್ರಾತೃತ್ವ ಹೆಚ್ಚಿ ಸರ್ವರಲಿ ಶಾಂತಿ ನೆಲೆಸಲಿ
ಸ್ವಾರ್ಥ ಮರೆತು ಜನ ಸರ್ವರೊಂದೇ ಎಂದರಿಯುವಂತಾಗಲಿ

ಧನದಾಹ ಕುಗ್ಗಿ ಬದುಕ ಸಂತಸದಿಂದ ಕಳೆಯುವಂತಾಗಲಿ.
ಬದುಕಿನ ಜಂಜಡವೆಲ್ಲ ತೊಳೆದು ಹೋಗಿ ಶಾಂತಿಯ ಹೊಳೆ ಹರಿಯಲಿ

ಮನಮನಗಳಲಿ ದೈವೀ ಶಕ್ತಿ ಸಂಚರಿಸಿ ಮೋಸ -ವಂಚನೆ ಸಾಯಲಿ
ಭಕ್ತಿ, ಶಕ್ತಿ, ಶಾಂತಿ, ಕೀರ್ತಿ, ಪ್ರೀತಿ, ನೀತಿ, ಸ್ಪೂರ್ತಿ ಸರ್ವ ಕುಟುಂಬಗಳಲೂ ಪ್ರವಹಿಸಲಿ

ಸೂರ್ಯ ಪಥ ಬದಲಿಸಿದಂತೆ ಕೆಟ್ಟ ಆಲೋಚನೆಗಳು ಒಳ್ಳೆಯ ಆಲೋಚನೆಗಳಾಗಿ ಬದಲಾಗಲಿ
ಸುಕಾರ್ಯ ಮಾಡಿ ಉಣ್ಣುವ ಸದ್ಬುದ್ಧಿ ಜನಗಳದ್ದಾಗಲಿ

ಪರರ ಬದುಕ ಹಾಳು ಮಾಡುವ ಕೆಟ್ಟ ಬುದ್ಧಿ ತೊಲಗಲಿ
ಸಂಕ್ರಾಂತಿ ಸಂಬಂಧದಲಿ ಬಿರುಕಾಗದಿರುವಂತೆ ತಡೆಯಲಿ 

ಸರಿತಪ್ಪು ತಿಳಿದವರು ಸರಿಯಾಗಿಯೇ ನಡೆವಂತೆ ದೇವರನುಗ್ರಹಿಸಲಿ
ಸರ್ವರಿಗೂ ಸೂರ್ಯ ನಾರಾಯಣನು ದಯೆಯಿತ್ತು ಸಲಹಲಿ..

ಸರ್ವರಿಗೂ ಸಂಕ್ರಾಂತಿಯ ಶುಭಾಶಯಗಳು..
@ಪ್ರೇಮ್@
14.01.2021

ಶನಿವಾರ, ಜನವರಿ 9, 2021

ಕತ್ತಲೆಯಿಂದ ಬೆಳಕಿನೆಡೆಗೆ..

ಕತ್ತಲೆಯಿಂದ ಬೆಳಕಿನೆಡೆಗೆ...


ಅಮವಾಸ್ಯೆಯಲಿಹನು ಮಾನವ
ಬರಬೇಕಿದೆ ಹುಣ್ಣಿಮೆಯೆಡೆಗೆ..

ಕರಿಹಲಗೆಯಲಿ ಕಲಿತರೇನು ಬಿಳಿ ಸೀಮೆಸುಣ್ಣವೇ ಬೇಕಲ್ಲವೇ ತಿದ್ದಲು?

ಕೂದಲು ಕಪ್ಪಾದರೇನು? ಒಳಗಿರುವ ಬುದ್ಧಿ ಬಿಳಿಯಾಗಬೇಕು ತಾನೇ?

ಕರಿಯ ಆಕಳಿನಿಂದಲೂ ಬರುವುದು ಬಿಳಿಯ ಹಾಲೇ ಅಲ್ಲವೇ?

ಕಪ್ಪಂಗಿಯೊಳಗಿರುವ  ವಕೀಲನೂ ಸ್ವಚ್ಛ ಬಿಳಿಯಾದ ನ್ಯಾಯ ನೀಡಬೇಕು ಅಲ್ಲವೇ?

ಕಪ್ಪನೆಯ ಮೋಡವು ಕಪ್ಪಾದ ಮಳೆಯನ್ನು ಸುರಿಸುವುದೇ?

ಕಪ್ಪನೆಯ ತೊಗಳಿರಲು ಯೋಚನೆಯು ಬಿಳಿಯಾಗಬೇಕೆಮಗೆ ಮನವೇ..

ಕರಿಯ ಬೆಕ್ಕಿಗೂ ಬಿಳಿ ಹಾಲೇ ಬೇಕು ಕುಡಿಯಲು..

ಕಪ್ಪನೆ ಕೋಳಿಗೂ ಬಿಳಿಯ ಕಾಳೇ ಬೇಕು ತಿನ್ನಲು..

ಮನುಜಾ ಕತ್ತಲೆಯಿಂದ ನೀನೇಕೆ ನಡೆಯಬಾರದು ಬೆಳಕಿನ ಕಡೆಗೆ..

ರಾಕ್ಷಸ ಕುಲದ ಬುದ್ಧಿಯಿಂದ ದೈವತ್ವದೆಡೆಗೆ?
@ಪ್ರೇಮ್@
06.01.2021

ಹೊಸ ಆಮೆ ಮೊಲ

ಆಮೆ-ಮೊಲ 

ಆಮೆ ಮೊಲದ ಓಟದ ಕತೆಯ ಮರಿಯು ಕೇಳಿತ್ತು
ಅಜ್ಜನಂತೆ ತಾನಾಗೆನೆಂಬ ವಾದವ ಹೂಡಿತ್ತು

ನಿತ್ಯವು ಜಿಮ್ಮಿಗೆ ಹೋಗಿ ತಾನು ಕಸರತ್ತು ಮಾಡಿತ್ತು
ಆಟದ ಬಯಲಿಗೆ ಹೋಗಿ ಓಟದ ಅಭ್ಯಾಸ ಮಾಡಿತ್ತು..

ಪುಸ್ತಕ ಓದಿ ಹಿರಿಯರ ಕೇಳಿ ಜ್ಞಾನವ ಪಡೆದಿತ್ತು
ಪದೇ ಪದೇ ಲೆಕ್ಕವ ಮಾಡುತ ಗಣಿತದಿ ವೇಗವ ಪಡೆದಿತ್ತು

ಪರೀಕ್ಷೆಗೆಂದು ಅಭ್ಯಾಸ ಮಾಡಿ ಟಿಪ್ ಟಾಪಾಗಿತ್ತು
ಆಮೆಯ ಸೋಲಿಸಿ ಕೆಲಸವ ಪಡೆಯುವ ಗುರಿಯನು ಹೊಂದಿತ್ತು

ಸರಕಾರದ ಅಧಿಕಾರಿಯ ಕೆಲಸಕೆ ಅರ್ಜಿಯ ಹಾಕಿತ್ತು
ದೈಹಿಕ ಪರೀಕ್ಷೆ ಎದುರಿಸಿ ತಾನು ಮೊದಲಾಗಿ ಬಂದಿತ್ತು..

ಮೊಲದ ತಾಯಿಯು ಮರಿಯನು ಕಂಡು ಸಂತಸಪಟ್ಟಿತ್ತು
ಆಮೆಯ ಮೊಮ್ಮಗ ಸೋಮಾರಿಯಾಗಿ ಹಿಂದೆ ಬಿದ್ದಿತ್ತು!
@ಪ್ರೇಮ್@
07.01.2020

ಚುಟುಕು-12

ಚುಟುಕು

ಮನಸಾರೆ ಇರಲಿ ಭಕ್ತಿಯ ಒಲವು
ಕನಸಲ್ಲು ಶಿವನೊಲಿವ, ಆಗುವುದು ಅರಿವು
ಮನದಲ್ಲಿ ಇರಬೇಕು ಸ್ನೇಹದ ಬಲವು
ಬನದಲ್ಲು ಬದುಕುವೆ, ಇರುವುದು ನಲಿವು...
@ಪ್ರೇಮ್@
29.12.2020

ಗಝಲ್

*ಗಝಲ್*

ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲುದೇ?
ಕಾಡಿ ಬೇಡಿ ಪ್ರೀತಿಯನ್ನು ಹೃದಯ ಪಡೆಯ ಬಲ್ಲುದೇ?

ನೋವ ನುಂಗಿ ಮಹಿಳೆ ತಾನು ಸಂಸಾರ ನಡೆಸಬಲ್ಲಳು
ಆದರೇನು ಬಸವಳಿದ ಜೀವ ಚಿಗುರ ಕಾಣ ಬಲ್ಲುದೇ?

ಒಡೆದು ಚೂರಾದ ಕನ್ನಡಿಯ ಜೋಡಿಸಲು ಸಾಧ್ಯವೇ?
ಬಿರುಕಾದ ಮನದ ನಡುವೆ ಮತ್ತೆ ಸೇತುವೆಯ ನಿರ್ಮಿಸ ಬಲ್ಲುದೇ?

ಮರದ ಹಾಗೆ ಭಾವನೆಗಳ ನೇರ ನಿಲ್ಲಿಸುವುದು ಸಾಧ್ಯವೇ?
ಪ್ರತಿ ಕ್ಷಣವೂ ಪ್ರೀತಿಯ ಮಧುರ ಭಾವ ಹೊಮ್ಮ ಬಲ್ಲುದೇ?

ಮಖದಿ ನಗೆಯ ಕಾಣಲೆಮಗೆ ಪ್ರೀತಿ ಕಡಲು ಬೇಡವೇ?
ಕಡಿದು ಸುಟ್ಟ ಮರದ ನಡುವೆ ಚಿಗುರು ಬರಲು ಬಲ್ಲುದೇ?

ಚಂದ್ರ ತಾರೆ ಬಾನ ಬಯಲು ಅಗಲಿ ಇರಲು ಆಗುವುದೇ?
ಮನದ ನೋವ ಮೂಟೆ ಕಟ್ಟಿ ತೇಲಿ ಬಿಡಲು ಬಲ್ಲುದೇ?

ಮಾತ ಕೊಂದು ಬಯಕೆ ಚಿವುಟಿ ಗೆಲ್ಲಬಹುದೇ ಬಾಳಲಿ?
ಪ್ರೇಮವೆಂಬ ಸುಮವ ಮರೆತು ಬದುಕ ಸವೆಸ ಬಲ್ಲುದೇ?
@ಪ್ರೇಮ್@
02.01.2020
🥀🌼🥀🌼🥀🌼🥀🌼

ನಮ್ಮ ಮನೆಯಲೊಂದು...

ನಮ್ಮ ಮನೆಯಲೊಂದು ಸಣ್ಣ...

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ಅಮ್ಮನೊಡನೆ ಬಹಳವಾಗಿ ಹಟವ ಮಾಡುವುದು

ಅಪ್ಪನಿರಲು ಗಪ್ ಚಿಪ್ ಕೂಡಾ ಸದ್ದು ಮಾಡದು
ಮೊಬೈಲ್ ಸಿಕ್ಕರೆ ಸಂತಸದಿಂದ ಆಡಿ ನಲಿವುದು

ಓದು ಬರೆ ಎನಲು ಬಹಳ ಕೋಪ ಬರುವುದು
ಊಟ ಮಾಡು ಎನಲು ಬೇಗ ನಿದ್ದೆ ಬರುವುದು

ಬೇಕರಿ ತಿಂಡಿ ತಂದು ಕೊಡಲು ಹೊಟ್ಟೆ ಹಸಿಯುವುದು
ಕೇಸರಿ ಬಣ್ಣ ಎನಲು ಬಹಳ ಇಷ್ಟ ಪಡುವುದು..

ಮೊಸರು ಇಟ್ಟರೆ ಒಂದು ಪ್ಯಾಕೆಟ್ ಬಿಡದೆ ಕುಡಿವುದು
ಮೀನು ಮಾಂಸ ಮೊಟ್ಟೆಯೆನಲು ಬೇಗ ಓಡಿ ಬರುವುದು

ತರಕಾರಿಯ ನೋಡಿ ದೂರ ಓಡಿ ಬಿಡುವುದು
ಪರಪರನೆ ಗಲಾಟೆ ಮಾಡಿ ನಗಿಸಿ ಬಿಡುವುದು

ಮಕ್ಕಳ ಜೊತೆಗೆ ಆಟವಾಡಿ ದಿನವ ಕಳೆವುದು
ಸಿಕ್ಕರೆ ಬಿಡದೆ ಸಿಹಿತಿಂಡಿಯ ಮುಕ್ಕಿ ಬಿಡುವುದು..

ಪಾಪ ಅಳುತ ಬೇಕೆನ್ನುತ ಹಠವ ಮಾಡುವುದು
ಜೋರು ಮಾಡಲು ಹೊಡೆಯಿರೆನುತ ತಾನೇ ಕೋಲು ತರುವುದು..

ಪೆಟ್ಟು ಕೊಡಲು ಮತ್ತೂ ಬೇಕೆನುತ ಗಟ್ಟಿ ಕೂರುವುದು
ಟಿವಿ ನೋಡುತ ರಾತ್ರಿ ಹನ್ನೊಂದು ಗಂಟೆ ಮಾಡುವುದು

ನೆಂಟರು ಬಂದರೆ ಹೋಗಲು ಬಿಡದೆ ಕಟ್ಟಿ ಹಾಕುವುದು
ರಂಪ ಮಾಡುತ ಬೇಕು ಬೇಕು ಎನುತ ಅಳುವುದು..
@ಪ್ರೇಮ್@
05.01.2020
👶👧👶👶👶👶👶👶

ಒಂದಿಷ್ಟು ರಿಲ್ಯಾಕ್ಸ್-60

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-60
      ಸಂಸಾರ  ಅಂದ ಮೇಲೆ ಪ್ರೀತಿ- ನೀತಿ , ಜಗಳ-ಕದನ, ಹುಟ್ಟು- ಸಾವು ಪ್ರತಿ ಮನೆಯಲ್ಲೂ ಸರ್ವೇ ಸಾಮಾನ್ಯ. ಪ್ರತಿಯೊಬ್ಬರ ಮನೆಯ ದೋಸೆಯೂ ತೂತೇ. ಹಾಗೇ ನಾವು 'ಸಿರಿವಂತರು' ಅಂದುಕೊಂಡವರ ಮನೇಲೂ ಇದಕ್ಕೇನೂ ಕಡಿಮೆಯಿಲ್ಲ, 'ದೊಡ್ಡ ಮನೆಗೆ ದೊಡ್ಡ ಬಾಗಿಲು' ಎಂದಂತೆ ಅವರವರ ಕಷ್ಟ ಅವರಿಗೆ ದೊಡ್ಡದೆ. ಟೆನ್ಶನ್ ಇಲ್ಲದ ಮನೆ, ಮನವುಂಟೇ?
    ಹಾಗಂತ ಒಂದು ಕುಟುಂಬದ ಜಗಳ, ಮನಸ್ತಾಪಗಳನ್ನು ಬೇರೊಂದು ಕುಟುಂಬದವ ಕೇಳಿದರೂ ಒಂದು ಕುಟುಂಬದ ನಡುವೆ ಸರಿಪಡಿಸಲು ಹೋಗಬಾರದು. ಏಕೆಂದರೆ ಅವ ಮೂರನೆಯವ. ಒಂದು ಉದಾಹರಣೆ ನೋಡಿ. ನಾನಿದ್ದ ಊರಿನಲ್ಲಿ ಒಬ್ಬರು ಬ್ರಾಹ್ಮಣ ಸಾತ್ವಿಕರಿದ್ದರು. ಹೆಸರು ಮುರಳೀಧರ ರಾವ್ ಅಂತ. ಬ್ರಾಹ್ಮಣ ಸಮುದಾಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿರುವ ಕಾರಣ ಅವರಿಗೆ ವಯಸ್ಸು ನಲವತ್ತು ಕಳೆದರೂ ಮದುವೆಯಾಗಿರಲಿಲ್ಲ. ಹಾಗಂತ ಅವರು ಕೆಟ್ಟವರು, ಕಾಮುಕರಂತೂ ಅಲ್ಲ. ತುಂಬಾ ಸೂಕ್ಷ್ಮ ಹೃದಯಿ, ಸೆನ್ಸಿಟಿವ್. ಯಾರಿಗಾದರೂ ನೋವಾದರೆ ಸಹಿಸದವರು. 
    ಅವರ ಪಕ್ಕದ ಮನೆಯಲ್ಲೆ ರಂಗ ರಂಗಿ ವಾಸವಾಗಿದ್ದರು. ರಂಗ ಶತ ಕುಡುಕ. ವರ್ಷದ ೩೬೫ ದಿನವೂ ಕುಡಿದು ಬಂದು ಹೆಂಡತಿಗೆ ಹೊಡೆಯುವ, ಊರಿಡೀ ಕೇಳುವಂತೆ ಜಗಳವಾಡುವವನು. ಇದನ್ನು ನೋಡಿ, ಕೇಳಿದ ಭಟ್ಟರಿಗೆ ಪಾಪ ಬೇಸರವಾಯಿತು. ರಂಗಿಯನ್ನೂ ಮಕ್ಕಳನ್ನೂ ರಕ್ಷಿಸಬೇಕೆಂದು ಯೋಚಿಸಿದ ಅವರು ರಂಗಿಯ ಬಳಿ ಮಾತನಾಡಿ ಓದಿಗೆ ಮಕ್ಕಳನ್ನು ದೂರದ ಪೇಟೆಯಲ್ಲಿರುವ ಆಶ್ರಮದಲ್ಲಿ ಬಿಡಲು ಹೇಳಿದರು. ರಂಗಿ ಈ ಮಾತನ್ನು ತನ್ನ ಗಂಡನಲ್ಲಿ ಹೇಳಲು 'ನೀನು ಮದುವೆಯಾಗದ ಅವನ ಬಳಿ ಮಾತನಾಡಲು ಏಕೆ ಹೋಗಿದ್ದೆ' ಎನುತಾ ಕತ್ತೆ ತರಹ ಬಡಿಯಲು ಪ್ರಾರಂಭಿಸಿದ ಅವಳಿಗೆ! ರಂಗಿ ನೋವಿನಿಂದ ಚೀರಿದಳು! 
    ನಮ್ಮ ಭಟ್ರು ಪಾಪ ಇದನ್ನು ಕೇಳಿ ಜಗಳ ಬಿಡಿಸಲು ಹೋದರು. ಅವರ ಜೀವನ ಒಳ್ಳೆಯದಾಗಲೆಂಬ ಸದಾಶಯ ಅವರದು. ಆದರೆ ಅವರನ್ನು ಕಂಡ ರಂಗ ಮಡದಿಗೆ ಮತ್ತಷ್ಟು ಹೊಡೆಯುತ್ತಾ 'ಅದೋ, ನಿನ್ನ ಬಾಡಿಗಾರ್ಡ್ ಬಂದ...'ಎನ್ನುತ್ತಾ, ಭಟ್ಟರಿಗೆ ಚೆನ್ನಾಗಿ ಬೇಡದ ಮಾತುಗಳನ್ನಾಡಿ ಮುಖಭಂಗ ಮಾಡಿ ಕಳುಹಿಸಿದ. ನಿನಗೆ ಹುಡುಗಿ ಸಿಕ್ಕಿಲ್ಲವೆಂದು ನೀನು ನನ್ನ ಮಡದಿಯ ಮೇಲೆ ಕಣ್ಣು ಹಾಕಿರುವೆ, ನಿನಗೇಕೆ ನಮ್ಮ ಕುಟುಂಬದ ವಿಷಯ? ನಾವು ಹೇಗಾದರೂ ಇರುತ್ತೇವೆ, ಕೇಳಲು ನೀನಾರು, ನನ್ನ ಹೆಂಡತಿ ನಾನು ಹೊಡೆಯುವೆ, ಬಡಿಯುವೆ ನೀನಾರು ನಡುವೆ, ನಮಗೆ ಹೇಳಲು ಬರುವ ಮೊದಲು ನಿನಗಾಗಿ ಒಂದು ಹುಡುಗಿ ನೋಡಿ ಸಂಸಾರ ಅಂದ್ರೇನು ಅಂತ ತಿಳಿದುಕೋ, ಮತ್ತೆ ನನ್ನ ಮಡದಿಗೆ ಬುದ್ಧಿ ಹೇಳಲು ಬಾ, ನಾವೇನು ಬೇಕಾದರೂ ಮಾಡಿಕೊಳ್ಳುತ್ತೇವೆ, ಇದು ನಮ್ಮ ಕುಟುಂಬಕ್ಕೆ ಬಿಟ್ಟ ವಿಚಾರ. ನಿನ್ನ ಕುಟುಂಬದ ಬಗ್ಗೆ ನೀನು ಚಿಂತಿಸು...' ಎಂದುಬಿಟ್ಟ ರಂಗ! ರಂಗಿ ಗಂಡನಿಗೆ ಬೆಂಗಾವಲಾಗಿ ನಿಂತಿದ್ದಳು!!!
ಅದಕ್ಕೇ ನಮಗೆ ನಾವೇ ಪರಿಧಿಯೊಂದನ್ನು ಹಾಕಿಕೊಂಡು, ಕುಟುಂಬವನ್ನು ಹೊರಟುಪಡಿಸಿ, ಪರರ ಸಹಾಯಕ್ಕೆ ಅವರ ಕುಟುಂಬದ ನಡುವೆ ಹೋಗದಿರುವುದೇ ಉತ್ತಮವೆಂದು ನನ್ನ ಅನಿಸಿಕೆ.  ಪರರ ವಸ್ತು ಪಾಶಾಣ ಅಂತಾರೆ! ಪರರ ಬದುಕಲ್ಲಿ ನಾವೂ ಪಾಷಾಣಗಳೇ ಅಲ್ಲವೇ?!!ನೀವೇನಂತೀರಿ?
@ಪ್ರೇಮ್@
04.01.2020

ಸಿಂಕೇನ್ ಕವನ *2

ಸಿಂಕೇನ್ ಕವನ

ಅತ್ತೆ
ಸೊಕ್ಕಿನ ಮೊಟ್ಟೆ
ಕೆಳಗಿಳಿಸುವ ಮಾತಿನ ಭರಾಟೆ
ತಾನೇ ಮೇಲೆನುತ ಕೊಬ್ಬಿದ ಕುರಿ
ಗಟ್ಟಿಗಿತ್ತಿ!!!
@ಪ್ರೇಮ್@
09.01.2021

ಭಾವ

ಭಾವ

ನುಡಿನುಡಿಯಲು ಪದವಾಡು ನೀ ಕನ್ನಡ ತಾಯೆಂದು
ಕಡಿಕಡಿದರೂ ಹಿಡಿ ಹಿಡಿಯಲಿ ಆಡು ನೀ ಕನ್ನಡವನೆಂದು..

ಕೊನೆಕೊನೆಯಲು ನಗೆಯಿರುವುದು ಬದುಕಿನ ಬಯಲಲ್ಲಿ
ಮನೆಮನೆಯಲು ಪೂಜೆಯಿರಲಿ ಭುವನೇಶ್ವರಿ ನುಡಿಯಲ್ಲಿ..

ದಿನದಿನದಲು ಬಳಬಳಸುತ ಕನ್ನಡ ನುಡಿ ಚಂದ
ಪದಪದದಲು ಆಡಲು ಅದು ಕನ್ನಡವೇ ಅಂದ..

ಭಾಷೆ ಭಾಷೆಯಲು ಉತ್ತಮವದು ನಮ್ಮೀ ಮಾತೃಭಾಷೆ
ಕಾಸುಕಾಸಿಗು ಸಿಗದು ಇದು ಮಾತೆಯ ನುಡಿ ಭಾಷೆ

ಕಲ್ಲು ಕಲ್ಲಲು ಕೆತ್ತಿರುವುದು ಕನ್ನಡಿಗನ ಭಾವ
ತುಟಿತುಟಿಯಲು ನಗೆಯುಕ್ಕುತ ತೊರೆಯುತಿದೆ ಅಹಂಭಾವ

ಭಾವ ಭಾವವು ಒಟ್ಟಾಗುತ ಹೊರಸೂಸಿದೆ ಗುಡಿಯು
ಕಾವು ಕಾವಲು ಬೆಸೆದಿಹುದು ಮರೆಯದ ಸಿಹಿನುಡಿಯು..

ಮನಮನದಲು ಪುಟಿದೆದ್ದಿದೆ ಕನ್ನಡದ ತೇರು
ತನುತನುವಲು ಗರಿಗೆದರಿದೆ ಭಾವಗಳು ನೂರು..
@ಪ್ರೇಮ್@
08.01.2021

ವಚನ

ವಚನ

ಸಂತಸದಲ್ಲಿಯೇ ಬದುಕನು ಕಳೆಯಲು
ಸಾಧ್ಯವೇ ಜಗದಿ ಹೇಳು ಶಿವಾ..
ಕಷ್ಟ ಸುಖಗಳೆರಡೂ ನಾಣ್ಯದ ಮುಖಗಳು
ದಾಟಲೇ ಬೇಕು ಸಂಸಾರ ಸಾಗರ ಶಿವಾ..
@ಪ್ರೇಮ್@
06.01.2020

ಸೋಮವಾರ, ಜನವರಿ 4, 2021

ಪಾಪ

ನಮ್ಮ ಮನೆಯಲೊಂದು ಸಣ್ಣ...

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ಅಮ್ಮನೊಡನೆ ಬಹಳವಾಗಿ ಹಟವ ಮಾಡುವುದು

ಅಪ್ಪನಿರಲು ಗಪ್ ಚಿಪ್ ಕೂಡಾ ಸದ್ದು ಮಾಡದು
ಮೊಬೈಲ್ ಸಿಕ್ಕರೆ ಸಂತಸದಿಂದ ಆಡಿ ನಲಿವುದು

ಓದು ಬರೆ ಎನಲು ಬಹಳ ಕೋಪ ಬರುವುದು
ಊಟ ಮಾಡು ಎನಲು ಬೇಗ ನಿದ್ದೆ ಬರುವುದು

ಬೇಕರಿ ತಿಂಡಿ ತಂದು ಕೊಡಲು ಹೊಟ್ಟೆ ಹಸಿಯುವುದು
ಕೇಸರಿ ಬಣ್ಣ ಎನಲು ಬಹಳ ಇಷ್ಟ ಪಡುವುದು..

ಮೊಸರು ಇಟ್ಟರೆ ಒಂದು ಪ್ಯಾಕೆಟ್ ಬಿಡದೆ ಕುಡಿವುದು
ಮೀನು ಮಾಂಸ ಮೊಟ್ಟೆಯೆನಲು ಬೇಗ ಓಡಿ ಬರುವುದು

ತರಕಾರಿಯ ನೋಡಿ ದೂರ ಓಡಿ ಬಿಡುವುದು
ಪರಪರನೆ ಗಲಾಟೆ ಮಾಡಿ ನಗಿಸಿ ಬಿಡುವುದು

ಮಕ್ಕಳ ಜೊತೆಗೆ ಆಟವಾಡಿ ದಿನವ ಕಳೆವುದು
ಸಿಕ್ಕರೆ ಬಿಡದೆ ಸಿಹಿತಿಂಡಿಯ ಮುಕ್ಕಿ ಬಿಡುವುದು..

ಪಾಪ ಅಳುತ ತಿಂಡಿ ಬೇಕೆನ್ನುತ ಹಠವ ಮಾಡುವುದು
ಜೋರು ಮಾಡಲು ಹೊಡೆಯಿರೆನುತ ತಾನೇ ಕೋಲು ತರುವುದು..

ಪೆಟ್ಟು ಕೊಡಲು ಮತ್ತೂ ಬೇಕೆನುತ ಗಟ್ಟಿ ಕೂರುವುದು
ಟಿವಿ ನೋಡುತ ರಾತ್ರಿ ಹನ್ನೊಂದು ಗಂಟೆ ಮಾಡುವುದು

ನೆಂಟರು ಬಂದರೆ ಹೋಗಲು ಬಿಡದೆ ಕಟ್ಟಿ ಹಾಕುವುದು
ರಂಪ ಮಾಡುತ ಬೇಕು ಬೇಕು ಎನುತ ಅಳುವುದು..
@ಪ್ರೇಮ್@
05.01.2020

ಗಝಲ್

*ಗಝಲ್*

ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲುದೇ?
ಕಾಡಿ ಬೇಡಿ ಪ್ರೀತಿಯನ್ನು ಹೃದಯ ಪಡೆಯ ಬಲ್ಲುದೇ?

ನೋವ ನುಂಗಿ ಮಹಿಳೆ ತಾನು ಸಂಸಾರ ನಡೆಸಬಲ್ಲಳು
ಆದರೇನು ಬಸವಳಿದ ಜೀವ ಚಿಗುರ ಕಾಣ ಬಲ್ಲುದೇ?

ಒಡೆದು ಚೂರಾದ ಕನ್ನಡಿಯ ಜೋಡಿಸಲು ಸಾಧ್ಯವೇ?
ಬಿರುಕಾದ ಮನದ ನಡುವೆ ಮತ್ತೆ ಸೇತುವೆಯ ನಿರ್ಮಿಸ ಬಲ್ಲುದೇ?

ಮರದ ಹಾಗೆ ಭಾವನೆಗಳ ನೇರ ನಿಲ್ಲಿಸುವುದು ಸಾಧ್ಯವೇ?
ಪ್ರತಿ ಕ್ಷಣವೂ ಪ್ರೀತಿಯ ಮಧುರ ಭಾವ ಹೊಮ್ಮ ಬಲ್ಲುದೇ?

ಮಖದಿ ನಗೆಯ ಕಾಣಲೆಮಗೆ ಪ್ರೀತಿ ಕಡಲು ಬೇಡವೇ?
ಕಡಿದು ಸುಟ್ಟ ಮರದ ನಡುವೆ ಚಿಗುರು ಬರಲು ಬಲ್ಲುದೇ?

ಚಂದ್ರ ತಾರೆ ಬಾನ ಬಯಲು ಅಗಲಿ ಇರಲು ಆಗುವುದೇ?
ಮನದ ನೋವ ಮೂಟೆ ಕಟ್ಟಿ ತೇಲಿ ಬಿಡಲು ಬಲ್ಲುದೇ?

ಮಾತ ಕೊಂದು ಬಯಕೆ ಚಿವುಟಿ ಗೆಲ್ಲಬಹುದೇ ಬಾಳಲಿ?
ಪ್ರೇಮವೆಂಬ ಸುಮವ ಮರೆತು ಬದುಕ ಸವೆಸ ಬಲ್ಲುದೇ?
@ಪ್ರೇಮ್@
02.01.2020
🥀🌼🥀🌼🥀🌼🥀🌼

ಗ ಕಾರ

ಗಕಾರ

ಗಲಾಟೆ ಬೇಡವೊ ಗಣೇಶ ನಿನ್ನದು
ಗಾಡಿಯು ಬೇಕು ಅಮ್ಮಾ ನನಗೆ
ಗಿಳಿಯನು ಕೊಡುವೆನು ಮಗನೇ ನಿನಗೆ
ಗೀಚಲು ಪೆನ್ನು ಕಾಗದ ಬೇಕಮ್ಮಾ

ಗುಲಾಬಿಯ ಕೊಡುವೆನು ಪುಟ್ಟನೆ ನಿನಗೆ
ಗೂಡಲಿ ಕೂರುವ ಹಕ್ಕಿಯು ಬೇಕು
ಗೃಹದಲೆ ಸಾಕುವ ಪಕ್ಷಿಯ ತರಲೇ
ಗೆಲುವಿನ ಹಾದಿಯಲೆ ಸಾಗು ನೀ ಮಗನೆ

ಗೇಲಿಯ ಮಾಡೆನು ಗೆಳೆಯರ ಜೊತೆಗೆ
ಗೈರು ಹಾಜರಿ ಬೇಡವು ಶಾಲೆಗೆ
ಗೊಂದಲ ಮಾಡದೆ ಬದುಕಲು ಕಲಿ ನೀ
ಗೋಲಿಯ ಆಡಲು ಬೇಕದು ನನಗೆ

ಗೌರಿಯ ಕಂದನೆ ನೀ ಬಾ ಬಳಿಗೆ
ಗಂಧವ ಹಚ್ಚುವೆ ನಿನ್ನಾ ಮೈಗೆ
ಗಃ ಓಡಿದ ಆಟದ ಬಯಲಿಗೆ..
@ಪ್ರೇಮ್@
05.01.2020

ಶುಕ್ರವಾರ, ಜನವರಿ 1, 2021

ಮತ್ತೆ ಬನ್ನಿ ಮಕ್ಕಳಾಗೋಣ

ಬನ್ನಿ ಮತ್ತೆ ಮಕ್ಕಳಾಗೋಣ

ಬಯಲಿನೆಡೆಗೆ ಓಡಿ ಬನ್ನಿ
ಚಿನ್ನಿದಾಂಡು ಆಡ ಬನ್ನಿ
ಬ್ಯಾಟು ಬಾಲು ಹಿಡಿದು ತನ್ನಿ
ಮಕ್ಕಳಾಗುವ ನಾವು ಮಕ್ಕಳಾಗುವ...

ತೋಟ -ಗೀಟ ಸುತ್ತ ಬನ್ನಿ
ಬೆಟ್ಟ ಗುಡ್ಡ ಹತ್ತ ಬನ್ನಿ
ಅಟ್ಟ ಹತ್ತಿ ತಿಂಡಿ ತಿನ್ನಿ 
ಮಕ್ಕಳಾಗುವ ನಾವು ಮಕ್ಕಳಾಗುವ....

ಬಯಲ ಅಡಿಗೆ ಮಾಡ ಬನ್ನಿ 
ಚಿಟ್ಟೆ ಹಿಡಿವ ಬೇಗ ಬನ್ನಿ
ತಟ್ಟೆ ಇಡ್ಲಿ ಮಾಡ ಬನ್ನಿ
ಮಕ್ಕಳಾಗುವ ನಾವು ಮಕ್ಕಳಾಗುವ..

ಮಣ್ಣು ಮರಳು ಹೊತ್ತು ತನ್ನಿ
ಮನೆಯನೊಂದು ಕಟ್ಟ ಬನ್ನಿ
ಮೀನು ಹಿಡಿಯೆ ಬುಟ್ಟಿ ತನ್ನಿ 
ಮಕ್ಕಳಾಗುವ ನಾವು ಮಕ್ಕಳಾಗುವ...

ಹೂವ ಕೊಯ್ದು ಬೇಗ ತನ್ನಿ
ಹಾಲು ತುಪ್ಪ ಎಲ್ಲ ತನ್ನಿ
ಕಲ್ಲಿಗೆರದು ಪೂಜೆ ಮಾಡುವ
ಮಕ್ಕಳಾಗುವ..ನಾವು ಮಕ್ಕಳಾಗುವ..

ಜೇಡಿ ಮಣ್ಣ ಕೂಡಿ ತನ್ನಿ
ಹೇಡಿಯಾಗದೆ ಓಡಿ ಬನ್ನಿ
ಬೆನ್ನ ಹಿಂದೆ ರೈಲಲ್ಹೋಗುವ
ಮಕ್ಕಳಾಗುವ ನಾವು ಮಕ್ಕಳಾಗುವ...

ಮರಗಿಡವ ಹತ್ತ ಬನ್ನಿ
ಮಾವು ಹಲಸು ತಿನ್ನ ಬನ್ನಿ
ಕಾಗದದ ದೋಣಿ ಬಿಡಲು ಬನ್ನಿ
ಮಕ್ಕಳಾಗುವ ನಾವು ಮಕ್ಕಳಾಗುವ...

ಕುಂಟಬಿಲ್ಲೆ ಎಸೆಯ ಬನ್ನಿ
ಮರಕೋತಿಯ ಹಿಡಿಯ ಬನ್ನಿ
ನಿಶ್ಕಲ್ಮಶ ನಗೆಯ ತಿಳಿಸ ಬನ್ನಿ..
ಮಕ್ಕಳಾಗುವ ನಾವು ಮಕ್ಕಳಾಗುವ....


-ವಿಜಯಾ ಹನುಮಂತು ಅವರ ಲೇಖನದಿಂದ ಪ್ರೇರಿತ
@ಪ್ರೇಮ್@
01.01.2020

ಕವನಗಳು

[12/13/2020, 7:29 PM] @PREM@: ಮನವು ಮಲ್ಲಿಗೆಯಂತೆ
ನಡೆಯು ಹಂಸದಂತೆ
ನಾಸಿಕ ಸಂಪಿಗೆಯಂತೆ
ಹುಡುಗ ಬಂದಾಗ ಕತ್ತು ಕೆಳಗಂತೆ...
@ಪ್ರೇಮ್@
[12/13/2020, 7:30 PM] @PREM@: ನಡೆಯಲ್ಲಿ ಗಜಗಮನೆ
ಮಯ್ಯಾರದಲ್ಲಿ ಮಂದಗಮನೆ
ನುಡಿಯಲ್ಲಿ ಗರುಡಗಮನೆ
ಸೇರಲಿರುವಳು ಗಂಡನ ಮನೆ
@ಪ್ರೇಮ್@
[12/13/2020, 7:31 PM] @PREM@: ಸೋನಾ ಹೇ ತೋ ಸೋನೇ ಕೇ ಜೈಸೇ ಚಮಕೋ
ಚಾಂದಿ ಹೇ ತೋ ಚಾಂದಿ ಕೇ ಜೈಸೆ ಚಮಕೋ
ಸಸುರಾಲ್ ಮೇ ಸಬ್ ಸೇ ಜ್ಯಾದಾ ಅಚ್ಚೇ ಗುಣ್ ಸೇ ಚಮ್ ಕೋ
@ಪ್ರೇಮ್@
[12/13/2020, 7:33 PM] @PREM@: ನೀ ಮುಡಿದ ಮಲ್ಲಿಗೆ ಬಾಡದಿರಲಿ ಮಗಳೇ
ತಾಳಿ ಭಾಗ್ಯವು ನಿನಗೆ ಸಕಲ ಕಾಲವಿರಲಿ ಮಗಳೇ
ಗಂಡನಿರುವನು ಜೊತೆಯಲ್ಲಿಯೇ ಎಂದಾದರೂ
ಬಂದೀತು ಮನೆಯೊಳಗೆ ಜಿರಲೆ
ಹೆದರಿ ಓಡದಿರು ಮಗಳೇ.
@ಪ್ರೇಮ್@
[12/13/2020, 7:34 PM] @PREM@: ರಂಗು ರಂಗಿ ಬಟ್ಟೆಯಲಿ ಮಿಂಚುತಿರುವಳು ಮದುಮಗಳು
ಅವಳಂತೆಯೇ ಅಂದದಲಿ ಮಿಂಚುತಿರುವರು ಅವಳ ಗೆಳತಿಯರ ಸಾಲುಗಳು
ಯಾರಿಗೆ ಗೊತ್ತು ಇಲ್ಲಿ ಗಾಳಕ್ಕೆ ಬೀಳಬಹುದೇನೋ
ಹಲವು ಮೀನುಗಳು..
@ಪ್ರೇಮ್@
[12/13/2020, 7:36 PM] @PREM@: ನಿನ್ನ ಕಣ್ಣುಗಳು
ಕಲ್ಲಿನ ದಿಬ್ಬಗಳು
ನಿನ್ನ ಹಲ್ಲುಗಳು
ನದಿಯ ಕಲ್ಲುಗಳು
ಕಣ್ಣ ರೆಪ್ಪೆಗಳು
ಹಾರೋ ಕಪ್ಪೆಗಳು
ಆದರೂ ನೀನೆನಗೆ ಸುಂದರಿಯೇ
ಏಕೆಂದರೆ ನೀ ನನ್ನವಳು..
@ಪ್ರೇಮ್@
[12/13/2020, 7:38 PM] @PREM@: ಬಳ್ಳಿಯಿಂದ ಮೊಗ್ಗು ಬೆಳೆದು ಹೊರಗೆ ಬಂದು ನಗುತಿದೆ
ಹೂವು ಆಗಿ ಬಿರಿದು ಜನರ ಸಂತಸದಿ ಬೆಸೆದಿದೆ
ಎರಡು ಕುಟುಂಬ ಸೇರಿ ಹೋಗಿ ಸುಗ್ಗಿಯಂತೆ ನಲಿದಿದೆ..
ಆಚೆ ಈಚೆಯವರ ದೃಷ್ಟಿ ಇಲ್ಲಿಯೇ ಬಿದ್ದಂತಿದೆ..
@ಪ್ರೇಮ್@
[12/13/2020, 7:39 PM] @PREM@: ಬಾಳು ಬೆಳಗಲಿ ಚಂದಿರನಂತೆ
ಸರ್ವರಿಗೆ ಬೆಳಕಾಗಿರಲಿ ಸೂರ್ಯನಂತೆ
ತಾನುರಿಯಲಿ ಸದಾ ಮಿಂಚುಹುಳದಂತೆ
ಕರಗದಿರಲಿ ಎಂದೂ ಮೇಣದ ಬತ್ತಿಯಂತೆ..
@ಪ್ರೇಮ್@
[12/13/2020, 7:40 PM] @PREM@: ತವರು ಮನೆಯ ನೆನೆಯೆ ಮಗಳೆ ಎಂದಿಗೂ
ತಂದೆ ತಾಯ ಕಷ್ಟ ಮರೆಯ ಬೇಡವೆಂದಿಗೂ
ಗಂಡನಿಗೆ ಮೋಸ ಮಾಡ ಬೇಡವೆಂದಿಗೂ
ಬಾಯ್ ಫ್ರೆಂಡಿನ ಸಹವಾಸ ಬರದೆ ಇರಲಿ ಎಂದಿಗೂ..
@ಪ್ರೇಮ್@
[12/13/2020, 7:42 PM] @PREM@: ಕಾಮುಕನಾಗದಿರು ಗೆಳೆಯ, ಪತ್ನಿಯ ಗೌರವಿಸು
ಸತಿಪತಿಯೊಂದಾಗಿ ಮಾಡುವ ಪೂಜೆಯ ನಿತ್ಯವೂ ನೀ ನಡೆಸು
ದೇವನ ಭಕ್ತಿಯ ಪೂಜೆಯ ಫಲವನು ನಿತ್ಯ ಅನುಭವಿಸು
ಪತ್ನಿಯ ಲಕ್ಷ್ಮಿಯಂತೆ ನೀ ಗುರುತಿಸು..ಕಣ್ಣೀರೊರೆಸು.
@ಪ್ರೇಮ್@
[12/13/2020, 7:43 PM] @PREM@: ತವರ ತೊರೆದು ಜೊತೆಗೆ ಬಂದ
ಹೆಣ್ಣ ಬಾಳಾಗಲಿ ಸದಾ ಅಂದ
ಗಂಡು ಹೆಣ್ಣು ಜೊತೆ ಜೊತೆಯಾಗಿ
ಹೊರಡುವಾಗ ಏನೊ ಚಂದ
ಪೋಷಕರಿಗೆ ಮನಕಾನಂದ.
@ಪ್ರೇಮ್@
[12/13/2020, 7:44 PM] @PREM@: ಬಹಳ ಅಂದ ನೀನು ಚೆಲುವೆ
ನನ್ನ ಬಳಿ ಬಾರೆ ಒಲವೆ
ನಿನ್ನ ಇರವು ನನಗೆ ಗೆಲುವೆ
ನಿನ್ನ ಜೊತೆಗೆ ನಾನೆಲ್ಲ ಮರೆವೆ..
@ಪ್ರೇಮ್@
[12/13/2020, 7:45 PM] @PREM@: ಬದುಕೆಂಬ ನಾವೆಯನು ಜೊತೆಯಲಿ ನೃೆಸುವ
ಬಾಳೆಂಬ ರಥವನು ಒಟ್ಟಾಗಿ ಎಳೆಯುವ
ಕ್ಷಣವೆಂಬ ಯುಗವನು ಸಂತಸದಿ ಕಳೆಯುವ..
@ಪ್ರೇಮ್@

ಮದುವೆ ಶಾಯರಿಗಳು

[12/13/2020, 7:29 PM] @PREM@: ಮನವು ಮಲ್ಲಿಗೆಯಂತೆ
ನಡೆಯು ಹಂಸದಂತೆ
ನಾಸಿಕ ಸಂಪಿಗೆಯಂತೆ
ಹುಡುಗ ಬಂದಾಗ ಕತ್ತು ಕೆಳಗಂತೆ...
@ಪ್ರೇಮ್@
[12/13/2020, 7:30 PM] @PREM@: ನಡೆಯಲ್ಲಿ ಗಜಗಮನೆ
ಮಯ್ಯಾರದಲ್ಲಿ ಮಂದಗಮನೆ
ನುಡಿಯಲ್ಲಿ ಗರುಡಗಮನೆ
ಸೇರಲಿರುವಳು ಗಂಡನ ಮನೆ
@ಪ್ರೇಮ್@
[12/13/2020, 7:31 PM] @PREM@: ಸೋನಾ ಹೇ ತೋ ಸೋನೇ ಕೇ ಜೈಸೇ ಚಮಕೋ
ಚಾಂದಿ ಹೇ ತೋ ಚಾಂದಿ ಕೇ ಜೈಸೆ ಚಮಕೋ
ಸಸುರಾಲ್ ಮೇ ಸಬ್ ಸೇ ಜ್ಯಾದಾ ಅಚ್ಚೇ ಗುಣ್ ಸೇ ಚಮ್ ಕೋ
@ಪ್ರೇಮ್@
[12/13/2020, 7:33 PM] @PREM@: ನೀ ಮುಡಿದ ಮಲ್ಲಿಗೆ ಬಾಡದಿರಲಿ ಮಗಳೇ
ತಾಳಿ ಭಾಗ್ಯವು ನಿನಗೆ ಸಕಲ ಕಾಲವಿರಲಿ ಮಗಳೇ
ಗಂಡನಿರುವನು ಜೊತೆಯಲ್ಲಿಯೇ ಎಂದಾದರೂ
ಬಂದೀತು ಮನೆಯೊಳಗೆ ಜಿರಲೆ
ಹೆದರಿ ಓಡದಿರು ಮಗಳೇ.
@ಪ್ರೇಮ್@
[12/13/2020, 7:34 PM] @PREM@: ರಂಗು ರಂಗಿ ಬಟ್ಟೆಯಲಿ ಮಿಂಚುತಿರುವಳು ಮದುಮಗಳು
ಅವಳಂತೆಯೇ ಅಂದದಲಿ ಮಿಂಚುತಿರುವರು ಅವಳ ಗೆಳತಿಯರ ಸಾಲುಗಳು
ಯಾರಿಗೆ ಗೊತ್ತು ಇಲ್ಲಿ ಗಾಳಕ್ಕೆ ಬೀಳಬಹುದೇನೋ
ಹಲವು ಮೀನುಗಳು..
@ಪ್ರೇಮ್@
[12/13/2020, 7:36 PM] @PREM@: ನಿನ್ನ ಕಣ್ಣುಗಳು
ಕಲ್ಲಿನ ದಿಬ್ಬಗಳು
ನಿನ್ನ ಹಲ್ಲುಗಳು
ನದಿಯ ಕಲ್ಲುಗಳು
ಕಣ್ಣ ರೆಪ್ಪೆಗಳು
ಹಾರೋ ಕಪ್ಪೆಗಳು
ಆದರೂ ನೀನೆನಗೆ ಸುಂದರಿಯೇ
ಏಕೆಂದರೆ ನೀ ನನ್ನವಳು..
@ಪ್ರೇಮ್@
[12/13/2020, 7:38 PM] @PREM@: ಬಳ್ಳಿಯಿಂದ ಮೊಗ್ಗು ಬೆಳೆದು ಹೊರಗೆ ಬಂದು ನಗುತಿದೆ
ಹೂವು ಆಗಿ ಬಿರಿದು ಜನರ ಸಂತಸದಿ ಬೆಸೆದಿದೆ
ಎರಡು ಕುಟುಂಬ ಸೇರಿ ಹೋಗಿ ಸುಗ್ಗಿಯಂತೆ ನಲಿದಿದೆ..
ಆಚೆ ಈಚೆಯವರ ದೃಷ್ಟಿ ಇಲ್ಲಿಯೇ ಬಿದ್ದಂತಿದೆ..
@ಪ್ರೇಮ್@
[12/13/2020, 7:39 PM] @PREM@: ಬಾಳು ಬೆಳಗಲಿ ಚಂದಿರನಂತೆ
ಸರ್ವರಿಗೆ ಬೆಳಕಾಗಿರಲಿ ಸೂರ್ಯನಂತೆ
ತಾನುರಿಯಲಿ ಸದಾ ಮಿಂಚುಹುಳದಂತೆ
ಕರಗದಿರಲಿ ಎಂದೂ ಮೇಣದ ಬತ್ತಿಯಂತೆ..
@ಪ್ರೇಮ್@
[12/13/2020, 7:40 PM] @PREM@: ತವರು ಮನೆಯ ನೆನೆಯೆ ಮಗಳೆ ಎಂದಿಗೂ
ತಂದೆ ತಾಯ ಕಷ್ಟ ಮರೆಯ ಬೇಡವೆಂದಿಗೂ
ಗಂಡನಿಗೆ ಮೋಸ ಮಾಡ ಬೇಡವೆಂದಿಗೂ
ಬಾಯ್ ಫ್ರೆಂಡಿನ ಸಹವಾಸ ಬರದೆ ಇರಲಿ ಎಂದಿಗೂ..
@ಪ್ರೇಮ್@
[12/13/2020, 7:42 PM] @PREM@: ಕಾಮುಕನಾಗದಿರು ಗೆಳೆಯ, ಪತ್ನಿಯ ಗೌರವಿಸು
ಸತಿಪತಿಯೊಂದಾಗಿ ಮಾಡುವ ಪೂಜೆಯ ನಿತ್ಯವೂ ನೀ ನಡೆಸು
ದೇವನ ಭಕ್ತಿಯ ಪೂಜೆಯ ಫಲವನು ನಿತ್ಯ ಅನುಭವಿಸು
ಪತ್ನಿಯ ಲಕ್ಷ್ಮಿಯಂತೆ ನೀ ಗುರುತಿಸು..ಕಣ್ಣೀರೊರೆಸು.
@ಪ್ರೇಮ್@
[12/13/2020, 7:43 PM] @PREM@: ತವರ ತೊರೆದು ಜೊತೆಗೆ ಬಂದ
ಹೆಣ್ಣ ಬಾಳಾಗಲಿ ಸದಾ ಅಂದ
ಗಂಡು ಹೆಣ್ಣು ಜೊತೆ ಜೊತೆಯಾಗಿ
ಹೊರಡುವಾಗ ಏನೊ ಚಂದ
ಪೋಷಕರಿಗೆ ಮನಕಾನಂದ.
@ಪ್ರೇಮ್@
[12/13/2020, 7:44 PM] @PREM@: ಬಹಳ ಅಂದ ನೀನು ಚೆಲುವೆ
ನನ್ನ ಬಳಿ ಬಾರೆ ಒಲವೆ
ನಿನ್ನ ಇರವು ನನಗೆ ಗೆಲುವೆ
ನಿನ್ನ ಜೊತೆಗೆ ನಾನೆಲ್ಲ ಮರೆವೆ..
@ಪ್ರೇಮ್@
[12/13/2020, 7:45 PM] @PREM@: ಬದುಕೆಂಬ ನಾವೆಯನು ಜೊತೆಯಲಿ ನೃೆಸುವ
ಬಾಳೆಂಬ ರಥವನು ಒಟ್ಟಾಗಿ ಎಳೆಯುವ
ಕ್ಷಣವೆಂಬ ಯುಗವನು ಸಂತಸದಿ ಕಳೆಯುವ..
@ಪ್ರೇಮ್@
13.12.2020

ಶಾಯರಿಗಳು


ಶಾಯರಿಗಳು

1.ನೀ ಕೊಟ್ಟ ಮುತ್ತನೆಲ್ಲ ನೀರಿನಲಿ ಹಾಕಿಟ್ಟೆ
ನಿತ್ಯವೂ ಪ್ರೇಮದೂಟವ ನೀಡಿದೆ
ಪ್ರೀತಿಯ ಕೈತುತ್ತು ನೀಡಿ ಸಾಕಿದೆ
ಇಂದು ಅವು ಸರವಾಗಿ ನನ್ನ ಕೊರಳ ಕಾಯುತಿವೆ!

2. ಅಮ್ಮನ ಮಡಿಲಲಿ ಮಲಗಿದಾಗ ಬೆಚ್ಚನೆ
ಕೈಯ ಸ್ಪರ್ಶಕೆ ಕರಗಿತು ಮನ ಮೆಲ್ಲನೆ.
ನಾ ನಿನ್ನ ಬಿಟ್ಟು ಬಾಳಲಾರೆ, ಬದುಕಲಾರೆ!
ಇನಿಯ ಬಂದಾಗ ಸರ್ರನೆ ಮರೆತೋಯ್ತು!

3. ಕಡಲ ಮುತ್ತನು ತಂದು ತಾನೇ ಪೋಣಿಸಿ
ಸರವ ಮಾಡಿ ಹಾಕಿದ ಜೀವದ ಗೆಳೆಯ!
ಕೊರಳ ಸುತ್ತಿ ಪ್ರೀತಿಯಿಂದ ಅದು ಅಣಕಿಸಿತು
ನಿನ್ನ ಹುಡುಗಿಯ ನಾನೀಗ ಬಳಸಿರುವೆ!

4. ಮೌನದರಮನೆಯಲಿ ಜಾಗವಿರಲಿಲ್ಲ ಮಾತಿಗೆ
ಹರಟೆಗೆ, ಸಂತೋಷದ ನಗುವಿಗೂ!
ಬಾಳಲಿಲ್ಲವದು ಬಾಡಿಹೋಯಿತು ಬೇಗ!
ಖುಷಿಯ ನೀರು, ಪ್ರೀತಿಯ ಗೊಬ್ಬರ
ಮಾತಿನ ವಿಟಮಿನ್ ಸಿಕ್ಕರಷ್ಟೆ ಚಿಗುರಬಹುದು!

5. ತವರು ಮನೆಯೆಂದರೆ ಅದೆಷ್ಟು ನೆಮ್ಮದಿಯ ಜಾಗ!
ಮೊದಲು ಅಮ್ಮನೊಡನೆ ಜಗಳವಾಡುವಾಗ ತಿಳಿದಿರಲಿಲ್ಲ!
ನಾ ಅಮ್ಮನಾದಾಗಲೇ ಅದು ಅರಿವಾದದ್ದು!!
@ಪ್ರೇಮ್@
28.12.2019

ಪ್ರೇಮಾ ಉದಯ್ ಕುಮಾರ್
ಸಹಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು
ಸುಳ್ಯ, ದ.ಕ
574239

ಅಂದು-ಇಂದು


ಅಂದು-ಇಂದು
(ಬದುಕಿನ ಸಿಂಹಾವಲೋಕನ)

ಅಂದು ನಾನು ಬೆಳೆದಿರಲಿಲ್ಲ ಇಷ್ಟು ಪಕ್ವವಾಗಿ
ಆದರೂ ಬೆರೆಯುತ್ತಿದ್ದೆ ಸರೀಕರೊಡನೆ ಸಮಾನವಾಗಿ
ಆಡಿ,ನಲಿದೋಡುತ್ತಿದ್ದೆ ದ್ವೇಷವೆಂಬ ಪದವರಿಯದೆ
ಎಲ್ಲರ ಪ್ರೀತಿಸುತಲಿದ್ದೆ ಜಾತಿ ಮತ ಧರ್ಮದ ಭೇದವಿಲ್ಲದೆ..

ಇಂದು ನಾ ಬೆಳೆದಿರುವೆ ಬೌದ್ಧಿಕ, ಮಾನಸಿಕ, ದೈಹಿಕವಾಗಿ
ಹೋಗಿಹುದು ತಾಳ್ಮೆ,ಪ್ರೇಮ, ಸಹನೆ ಕಡಿಮೆಯಾಗಿ!
ದುಡಿಯುತಲಿರುವೆ ಸದಾ ಕಾಗದದ ಹಣಕ್ಕಾಗಿ,
ಬರುತ್ತಲೇ ಇಲ್ಲ ನೆಮ್ಮದಿ, ಕಾಯುತಿರುವೆ ಅದಕ್ಕಾಗಿ!!

ಅಂದು ನಾ ಹೋಗುತಲಿದ್ದೆ ಆಚೀಚಿನ ಪ್ರತಿ ಮನೆಗೂ
ಬೆರೆತು ಮಾತನಾಡಿ ತಣಿಯುತಿದ್ದೆ ಪ್ರತಿ ಕ್ಷಣವೂ
ಮೇಲು ಕೀಳೆಂಬ ಭಾವನೆಯಿರಲೇ ಇಲ್ಲ ಅಲ್ಪವೂ
ಬಡವ ಬಲ್ಲಿದರೆಂಬ ಪದಗಳ ತಿಳಿದಿರಲೇ ಇಲ್ಲ ಮನವು!!

ಇಂದು ಅರಿತಿಹೆ ನಾನು ಹಲವಾರು ಭಾಷೆಗಳನು
ಆದರೆ ಸಮಯವಿಲ್ಲ ಮಾತನಾಡಿಸಲು ಯಾರನ್ನೂ!
'ದುಡಿವ ಕಾಯಕ' ಒಂದೇ ಹಗಲೂ, ಇರುಳೂ
ಆದರೇನು? 'ತೃಪ್ತಿ' ಎಂಬ ಪದ ಸಿಗಲೇ ಇಲ್ಲ ಕೊನೆಗೂ!

ಅಂದು ನಾ ತಿನ್ನುತಲಿದ್ದೆ ಹಸಿ ಬಿಸಿಯ ಆಹಾರ
ಸೊಪ್ಪು ತರಕಾರಿ ಸಿಕ್ಕ ಗುಡ್ಡದ ಹಣ್ಣುಗಳ ಹಾರ!
ನದಿ ನೀರ ಸ್ನಾನ, ಕುಡಿಯಲು ಬಾವಿಯ ಸಿಹಿನೀರು!
ರೈಲು ಬಂಡಿಯಲಿ ಗೆಳೆಯರೊಡನಾಟದ ತೇರು!

ಇಂದು ಆಳ ಬೋರಿನ ನೀರು, ಊಟ ಕರಗದು!
ತರತರ ತರಕಾರಿ ಬಣ್ಣ ಬಣ್ಣದ ಹಣ್ಣುಗಳ ರುಚಿ ಹಿಡಿಸದು!
ಕರಿದ, ಬೇಗನೆ ತಯಾರಾಗುವ ಆಹಾರದೆಡೆ ಸೆಳೆತ,
ಆರೋಗ್ಯಕ್ಕೆ, ತಿಂದುದ ಕರಗಿಸಲು ಓಟ, ನೆಗೆತ!

ಅಂದು ಇಂದಿನ ಪಯಣದಲಿ ಕಳೆದಿಹುದು
ಹಲವು ವರುಷಗಳ ಅನುಭವದ ಮಿಲನ!
ವಸಂತಗಳು ಸಾಗಿದಷ್ಟು "ಬುದ್ಧಿಯಿರದ ಅಂದಿ"ನ ಅನುರಣನ!
ಸಾಧನೆ, ಹಣ, ಮಾಲೆ, ಹಾರ ತುರಾಯಿ ಫಲಕವೆಲ್ಲ ಗತ್ತಿಗಾಗಿ!
ಮನದೋಟ ಮತ್ತೊಮ್ಮೆ ಮಗದೊಮ್ಮೆ ಬಾಲ್ಯದ "ಅಂದಿ"ಗಾಗಿ!!
@ಪ್ರೇಮ್@
19.01.2020

ಪ್ರೇಮಾ ಉದಯ್ ಕುಮಾರ್ ಸುಳ್ಯ

ಅಮ್ಮ


ಹೌದು, ಅಮ್ಮ ತ್ಯಾಗ ಮಾಡದೆ ಹೋಗಿರುತ್ತಿದ್ದರೆ ನಾನು ವಿದ್ಯಾ ಇಲಾಖೆ, ನನ್ನ ತಂಗಿ (ಸಂಪಾ ಕೆ) ಪೊಲೀಸ್ ಇಲಾಖೆ, ಹಾಗೂ ತಮ್ಮ (ರಾಜೇಶ್ ಕೆ) ಟೊಯೋಟಾ ಕಿರ್ಲೋಸ್ಕರ್ ಎಂಬ ವಿದೇಶೀ ಮೂಲದ ಕಂಪನಿಯಲ್ಲಿ ಐದಂಕಿ ಸಂಬಳ ಪಡೆಯಲು ಸಾಧ್ಯವಿರಲಿಲ್ಲ! ಮಾತೆಗೆ ಶರಣೋ ಶರಣು.
   ಬಾಲ್ಯದಲ್ಲಿ ನಾವಿದ್ದದ್ದು ಕುದುರೆಮುಖ ಎಂಬ ಕಾಡು ಪ್ರದೇಶಕ್ಕಿಂತಲೂ ಮೂರು ಮೈಲಿ ದೂರದ ಜೆ.ಪಿ. ಎಂಬ ಕಾಡಿನ ಮಧ್ಯದಲ್ಲಿ! ನಮಗೆ ಉಪಕಾರವೆಂಬುದು ಆಗಿದ್ದು ನಮ್ಮ ಮನೆ ಭದ್ರಾ ಟೈಗರ್  ಪ್ರಾಜೆಕ್ಟ್ ಒಳಗೇ ಇದ್ದರೂ ರಸ್ತೆ ಬದಿಯಲ್ಲೇ ಇದ್ದದ್ದು! 
   ರಸ್ತೆಯಲ್ಲಿ ಓಡಾಡುವ ವಾಹನಗಳ ನೋಡಿ ಬೆಳೆದವರೇ ಹೊರತು ಮನುಷ್ಯರನ್ನು ನೋಡಬೇಕೆಂದರೆ ಬಹು ದೂರ ಹೋಗಬೇಕಿತ್ತು ಅಲ್ಲಿ. ಒಂದು ಕಿಲೋ ಮೀಟರ್ ನಷ್ಟು ದೂರ ಕ್ರಮಿಸಿದ ಬಳಿಕ ಒಂದೆರಡು ಅದೇ ಊರಿನಲ್ಲಿ ಹುಟ್ಟಿ ಬೆಳೆದ ಮಲೆಕುಡಿಯರ ಮನೆಗಳಿದ್ದವು. ಅವರು ಕಾಡಿನ ಉತ್ಪತ್ತಿ, ವ್ಯವಸಾಯವನ್ನು ನಂಬಿ ಬದುಕುವವರಾಗಿದ್ದರು.
   ನಮಗೆ ಶಾಲೆ ನೋಡಬೇಕೆಂದರೆ ಕುದುರೆಮುಖಕ್ಕೆ ಬಸ್ಸಿನಲ್ಲೋ, ನಡೆದೋ ಕ್ರಮಿಸಬೇಕಿತ್ತು. ದಿನದಲ್ಲಿ ನಾಲ್ಕೋ- ಐದೋ ಬಸ್ಸುಗಳಿದ್ದವು. ಉಳಿದಂತೆ ನಮ್ಮ ಬಳಕೆಗೆ ಕಾಡ ತೊರೆಯ ನೀರು, ಕಾಡಿನ ಹಲಸು, ಗೆಡ್ಡೆಗಳ ಸಾರು! ದನಗಳನ್ನು ಕಟ್ಟಿಕೊಂಡು, ಕಾಡಿಗೆ ಬಿಟ್ಟು ರಾತ್ರಿ ಕರೆದುಕೊಂಡು ಬಂದು ಸಲಹಿ ಹಾಲು ಕರೆದು ಭುಜದ, ಕೈಚೀಲಗಳಲ್ಲಿ ಬಾಟಲಿಗಳಲ್ಲಿ ತುಂಬಿಸಿಟ್ಟು ಪ್ರತಿ ಮನೆ ಬಾಗಿಲಿಗೂ ನಿತ್ಯ ಹತ್ತರಿಂದ ಇಪ್ಪತ್ತು ಲೀಟರ್ ನಷ್ಟು ಹಾಲು ಹೊತ್ತುಕೊಂಡೇ ಹೋಗಿ ಮಾರಿ ಬರುತ್ತಿದ್ದ ಅಪ್ಪನ ಕಠಿಣ ದುಡಿಮೆ. ತಿಂಗಳ ಕೊನೆಗೆ ಸಿಕ್ಕಿದ ಹಣವನ್ನೆಲ್ಲ ದನಗಳ ಹಿಂಡಿಗೆ ಹಾಕುತ್ತಿದ್ಗ ಅಪ್ಪನಿಗೆ ಊರುಗೋಲಾಗಿದ್ದು ಕೂಲಿ ಕೆಲಸ ಮಾಡಿದ ಅಮ್ಮ. 
   ತನ್ನ ಮೂವರು ಮಕ್ಕಳನ್ನೂ ಯಾವ ಕಾರ್ಯಕ್ರಮ, ಮನೆಗೆ ತೆರಳದೆ ಕಷ್ಟಪಟ್ಟು ರಾತ್ರಿ ಹಗಲು ದುಡಿದು ಹೆಣ್ಣು ಮಕ್ಕಳನ್ನು ಸ್ನಾತಕೋತ್ತರ ಪದವಿವರೆಗೆ, ಮಗನನ್ನು ಐಟಿಐ ನಂತಹ ತಾಂತ್ರಿಕ ಕೋರ್ಸಿನವರೆಗೆ ಮನೆಯಲ್ಲಿ ವಿದ್ಯುತ್ ಇಲ್ಲದೆ, ಯಾವುದೇ ಹೊಸ ಯುಗದ ವಸ್ತುಗಳಿಲ್ಲದ ಕತ್ತಲ ಕೂಪದಂತಿದ್ದ ಊರಿನಲ್ಲೂ ಹಠ ಬಿಡದೆ ಸಾಧಿಸಿದ ಛಲಗಾರ್ತಿ ಅಮ್ಮ ನಮ್ಮ ಬದುಕನ್ನು ಬದಲಾಯಿಸಿ ಬಿಟ್ಟ ದೇವತೆಯೇ ಸರಿ!
@ಪ್ರೇಮ್@

ಪ್ರೇಮಾ ಉದಯ್ ಕುಮಾರ್
ಸಹ ಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು
ಸುಳ್ಯ , ದ.ಕ

ಒಂದಿಷ್ಟು....12


ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-12

ಹೊಸ ವರುಷದ ಹೊಸ ಹಬ್ಬ ಸಂಕ್ರಾಂತಿ ಮುಗಿದಾಯ್ತು. ಇನ್ನು ಸಂಕ್ರಾಂತಿಯ ಬಗ್ಗೆ ಮಾತೇಕೆ ಅಂತಾನಾ? ಅಲ್ಲೆ ಇರೋದು! ಎಲ್ಲಾ ತಿಂಡಿಗಳು, ಹಬ್ಬಗಳು ಅಲ್ಲದೇ ಮನುಷ್ಯರೂ ಕೂಡಾ ಕಾಲಕ್ಕೆ ತಕ್ಕ ಹಾಗೇ ಬದಲಾಗಬೇಕು, ಹೊಸತನದೊಂದಿಗೆ ತನ್ನತನ ಬೇಕೆಂಬುದ ಸಾರುವುದಿಲ್ಲವೇ ಈ ಹಬ್ಬಗಳು?
    ಉದಾಹರಣೆಗೆ ಸಂಕ್ರಾತಿಯನ್ನೇ ತಗೊಳ್ಳಿ, "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು" ಇದು ಹಕ್ಕು ಸಂಕ್ರಾಂತಿ ಹಬ್ಬಕ್ಕೆ. ದ್ಯೇಯ ವಾಕ್ಯವಿದ್ದಂತೆ. ಹಾಗೊಂದು ನಿಮ್ಮದೇ ಆದ ದ್ಯೇಯ ವಾಕ್ಯ ನಿಮ್ಮ ಬದುಕಿನಲ್ಲಿದೆಯೇ? ಇರದಿದ್ದರೆ ಇಂದೇ ಬೆಳೆಸಿಕೊಳ್ಳಿ. 
              ನನಗಾಗಿ ಒಂದು ವಾಕ್ಯ ನಾನೇ ರೂಪಿಸಿಕೊಂಡಿರುವೆ. ಅದೆಂದರೆ, "ಪರರಿಗೆ ಸಾಧ್ಯವಾದರೆ ಸಹಾಯ ಮಾಡು, ಇಲ್ಲವಾದರೆ ಸುಮ್ಮನಿರು ಪ್ರೇಮ್, ಉಪದ್ರವಂತೂ ಮಾಡಲು ಹೋಗದಿರು. ನಮ್ಮಿಂದ ಪರರಿಗೆ ನೋವಾಗಬಾರದು. ಆದರೆ ಅವರಾಗಿ ಅವರೇ ಕೆಣಕಲು ಬಂದಾಗ ಬುದ್ಧಿ ಕಲಿಸದೆ ಇರಲಾಗದು. ತಪ್ಪು ಮಾಡದಿದ್ದರೆ ಈ ಪ್ರಪಂಚದಲ್ಲಿ ಯಾರಿಗೂ ಹೆದರಬೇಕಿಲ್ಲ. ನಿನ್ನ ಜೀವನದ ಸೂತ್ರದಾರಿ ನೀನೇ.." ಹೀಗೆ. ಮತ್ತೂ ಜೀವನಾನುಧವ ಪಡೆದ ಹಾಗೇ ವಾಕ್ಯಗಳು ಸೇರುತ್ತಾ ಹೋಗುತ್ತವೆ. 
   ಪ್ರತಿಯೊಬ್ಬರ ಜೀವನ ತುಂಬಾ ಅಮೂಲ್ಯ, ಹಾಗೂ ಅವರ್ಣನೀಯ. ಯಾರೇ ತಮ್ಮ ಆತ್ಮ ಚರಿತ್ರೆ ಬರೆದರೂ ಕನಿಷ್ಠ ಪಕ್ಷ ಒಂದು ಅಧ್ಯಾಯವನ್ನಾದರೂ ಅದರಿಂದ ತೆಗೆದಿರುತ್ತಾರೆ. ಕಾರಣ ಅವರು ಇತರರೊಡನೆ ಹೇಳಿಕೊಳ್ಳಲಾಗದಂತಹ, ಹೇಳಲೇ ಬಾರದಂತಹ ಕೆಲವು ತನ್ನಲ್ಲೇ ಸಂಗ್ರಹಿಸಿ ಇಟ್ಟುಕೊಳ್ಳಬಲ್ಲ ಕೆಲಸ ಮಾಡಿರುತ್ತಾರೆ, ಇದು ಖಂಡಿತಾ. ಆದಕಾರಣ ಆತ್ಮಕಥನ ಯಾವತ್ತೂ, ಯಾರದ್ಗೂ ಕಂಪ್ಲೀಟ್ ಅಲ್ಲವೇ ಅಲ್ಲ ಅಲ್ವಾ?
   ಪ್ರತಿಯೊಬ್ಬರ ಜೀವನದಲ್ಲಿ ಯುಗಾದಿಯ ಬೇವು-ಬೆಲ್ಲ, ಸಂಕ್ರಾಂತಿಯ  ಎಳ್ಳು-ಬೆಲ್ಲ  ಗಣೇಶ ಹಬ್ಬದ ಲಡ್ಡು, ಕಡುಬು ಇದ್ದೇ ಇದೆ. ನಗು ಮತ್ತು ಕಣ್ಣೀರು ದುಡ್ಡು -ಕಾಸು, ಆಸ್ತಿ-ಅಂತಸ್ತನ್ನು ನೋಡಿ ಬರುವುದಿಲ್ಲ, ಅವುಗಳಿಗೆ ಜಾತಿ-ಮತ-ಧರ್ಮದ ಹಂಗೂ ಇಲ್ಲ. ಮಾನವನ ದುರಾಸೆ ಕಡಿಮೆ ಇರಬೇಕು ಅಷ್ಟೆ!
      ನಮ್ಮ ಜೀವನದಲ್ಲೂ ಹಬ್ಬಗಳ ವಿಶೇಷತೆಯಂತೆ ಒಂದು ವಿಶೇಷತೆಯಿರಲಿ, ದ್ಯೇಯ ವಾಕ್ಯವಿರಲಿ, ಪರರಿಗಾಗಿ ಮಿಡಿತವಿರಲಿ, ಶಿಸ್ತು-ಸಂಯಮ-ಕನಸು-ಗುರಿಗಳಿರಲಿ. ನಮ್ಮಿಂದ ಪರರಿಗೆ ನೋವಾಗದಿರಲಿ. ನೋವು ಕೊಡುವವರ ಕಡೆ ನಾವು ಸಾಗದಿರಲಿ. ಆಗ ಮಾನವ ಜನ್ಮ ಸಾರ್ಥಕವಾದೀತು. ನೀವೇನಂತೀರಿ?
@ಪ್ರೇಮ್@
19.01.2020

ಕವನ


ಅರ್ಥೈಸಿಕೋ..

ಬೆಂಕಿ ನಾನು ಸುಡುವೆ ನಿನ್ನ
ನಡತೆ ಸರಿಯಿರಲು ಮಾತ್ರ ಚೆನ್ನ..

ತೀರಾ ಕೀಳು ಮನವು ನಿನ್ನ
ಬೇರೆ ದೃಷ್ಟಿ ಹಾಯಿಸದಿರು ಚಿನ್ನ..
ಅಬಲೆಯೆಂದು ತಿಳಿಯಬೇಡ
ಸಬಲೆಯಾಗೊ ಗುಣವ ನೋಡ..

ಮೌನವನ್ನು ಒಪ್ಪಿಗೆಯೆನಲು ಬೇಡ
ಒಳಗೆ ಕಿಚ್ಚು ಮೇಲೆ ಬೂದಿ
ಅವಕಾಶದಿ ಉಪಯೋಗ ಮಾಲೆ
ಮೇಲೆ ಕುಳಿತ ದೇವ ಲೀಲೆ..

ನಾರಿಯೆಂಬ ಕೀಳು ನೋಟ
ನಾಡಿ ಮಿಡಿತ ಬಾಳ ತೋಟ
ವೇದ ಪುರಾಣ ಶಕ್ತಿ ಯುಕ್ತಿ
ಕಲಿಯ ಬೇಕು ನಿಜದ ನೀತಿ..

ಭೋಗಕಾಗೆ ಬಳಕೆ ಸಲ್ಲ
ಬಂದ ಗುರಿಯ ತಿಳಿಯಿರಲ್ಲ
ಮೇಲು ಕೀಳು ಭೇದ ಮರೆತು
ಸಂತಸವು ಬೆರೆತು ಕೂಡಿ ಕಲಿತು..

ಮುನಿಯೆ ಕ್ಷಣವು ಸರ್ವನಾಶ
ಜಯವು ಒಲಿದು ಬರಲು ವಿಶ್ವಾಸ
ಮಾಡದಿರಲಾರೆ ಮೋಸಕೆ ಮೋಸ
ಕಾದಿಹುದು ಕಾಮುಕರಿಗೆ ಯಮನ ಪಾಶ..
@ಪ್ರೇಮ್@
25.01.2020

ಗಡಿಯಾರ


ಗಡಿಯಾರದೆಡೆ ಗಮನ

ಗುಡಿಯ ಗುಂಟ ಗುನುಗು ಗಾನ
ಗೌರವದ ಗೌಜೀಲೆ ಗಾಯನ..
ಗೋರಿ ಸುತ್ತ ಗುಡುಗು ಶಬ್ದ
ಗುಮ್ಮನಂತೆ ಹೂಂಕಾರವೆದ್ದು..

ಗೌಪ್ಯದಲ್ಲಿ ಸ್ನೇಹದ ಗೋಳು
ಗಡಿಬಿಡಿಯಲಿ ಗಮನ ಹೋಳು
ಗೋಡೆಗಿದೆ ಕಿವಿಯು ತಾಳು
ಗಂಡು ಮೇಲು, ಹೆಣ್ಣು ಕೀಳು!

ಗಿಡಮರಗಳ ಕತ್ತರಿಸಿ ಬಾಳು
ಗೀಜಗದ ಗೂಡ ನೋಡು ಬೋಳು!
ಗಂಭೀರತನದಿ ಬದುಕಿ ನೋಡು
ಗಂಜಲವ ಕುಡಿದ ದನವೆ ಮೇಲು!

ಗೌರಿಯಂಥ ನಡಿಗೆ ನೋಡು
ಗೋಧಿ ತಿಂದು ತೆಳ್ಳಗಾಗು!
ಗಹನವಾಗಿ ಆಲೋಚಿಸುತಿರಲು
ಗದರಿಸುತ್ತ ಹಿರಿಯರು ಬರಲು!

ಗುಲಾಬಿ ರಂಗು, ಮುಳ್ಳ ಕಡಿತ
ಗರಗರನೆ ಹೃದಯ ಭಯದಿ ಬಡಿತ!
ಗರ್ಭದಲ್ಲೆ ರಾಸಾಯನಿಕ ವಿಷ ಹಿಡಿತ!
ಗೋರಿವರೆಗೂ ಆರೋಗ್ಯ ಕಡಿತ!!

ಗಂಧದ ಮರವು ಪೂರ್ತಿ ನಾಶ
ಗಾರ್ದಭದಂತೆ ಕಣ್ಮುಚ್ಚಿ ಅನುಕರಣಾ ಪಾಶ!
ಗಿಳಿಯ ಮಾತಿನಂಥ ವಚನ ಹೊರಗೆ,
ಗಿಡುಗನಂತೆ ಸಾಯಿಸಿ ತಿನ್ನೊ ಮನವು ಒಳಗೆ!

ಗಜದ ಗಮನ ಗತಿಯ ನಡುಗೆ
ಗುಬ್ಬಿಯಷ್ಟೆ ಗಮನ ಹೊರಗೆ
ಗೂನು ಬೆನ್ನು ಕೈಲಿ ಜಂಗಮ ಗಂಟೆ ಸುಲಿಗೆ!
ಗೂಡಿನೊಳಗೆ ಸದಾ ಬಂಧಿ ಕೊನೆಗೆ!

ಗಮನವಿಲ್ಲ ಗಡಿಯಾರದೆಡೆಗೆ
ಗೇಲಿ ಮಾಡಿ ಪರರ ಬಾಳು ನಿನಗೆ
ಗಂಟು ಕಟ್ಟೊ ಕಾರ್ಯ ಕೊನೆವರೆಗೆ
ಗೋರಿ ಬಾಚಿ ತುಂಬಿಸಿಕೋ ಜೋಳಿಗೆ!

ಗಬಗಬನೆ ತಿನ್ನು, ಕೊಂಡ್ಹೋಗಲಾರೆ ಹೋಳಿಗೆ!
ಗಿಂಡಿ-ಗಡಿಗೆಯಷ್ಟಿದ್ದರೂ ಮನೆಯ ಒಳಗೆ!
ಗಂಡ ಹೆಂಡತಿ,ಮಕ್ಕಳ ಪ್ರೀತಿ ಇರುವ ವರೆಗೆ!
ಗೋಲಿಯ ಆಡುತ್ತ ಕಳೆದ ನೆನಪು ಕೊನೆವರೆಗೆ!

ಗೋಮೂತ್ರ ಕುಡಿದರೆ ಔಷಧ ಬೇಡವೆ?
ಗೋಶಾಲೆ ಕಟ್ಟಿ ಸಲಹೋದು ಅನ್ಯಾಯವೇ?
ಗೀಳಿನ ಹಿಂದೆ ಬೀಳೋದು ನ್ಯಾಯವೇ?
ಗೋಳಿನ ಬಾಳದು ಮುಗಿಯೋದು ಬೇಡವೇ?

@ಪ್ರೇಮ್@
03.02.2020

ಲೇಖನ-ಹೊಗೆಸೊಪ್ಪೆಂಬ ರಾಕ್ಷಸ


ವಿಷಯ ಏನೆಂದರೆ ದಿನಾಂಕ 8, ಫೆಬ್ರವರಿ 2020
ಶನಿವಾರ ಬೆಳಗ್ಗೆ ನಾಲ್ಕು ಗಂಟೆಗೇ ಎದ್ದು ರಜೆ ಹಾಕಿ ಹೋಗಿ, ಭಾನುವಾರ ಹಿಂದೆ ಬಂದೆ ಕೊಟ್ಟಿಗೆಹಾರದಿಂದ ಸುಳ್ಯಕ್ಕೆ. ಕಾರಣ ನನ್ನ ಅತ್ತೆಯವರನ್ನು ನೋಡಲು ಹೋಗಿದ್ದೆ.
  ಛೆ, ಅದೆಂಥ ನೋಡುವುದು. ಸಿನೆಮಾ ಬರುವ ಮೊದಲು ಥಿಯೇಟರ್ ನಲ್ಲಿ  ತಂಬಾಕು ತಿನ್ನದಿರಿ, ಬಾಯಿ ಕ್ಯಾನ್ಸರ್ ಬರುವುದು ಎಂಬ ಜಾಹೀರಾತು ಬರುತ್ತದಲ್ಲ, ಅದಕ್ಕಿಂತ ಕಡೆಯಾಗಿದೆ. ಸುಮಾರು 50ಸಲ ರೇಡಿಯೇಶನ್, 3ಭಾರಿ ಬಾಯಿಯ ಆಪರೇಶನ್ ಆಗಿದೆ. ಕ್ಯಾನ್ಸರ್ ಸೆಲ್ ಗಳನ್ನೆಲ್ಲ ಸಾಯಿಸಲು ಅದು ಹರಡಿದ ಭಾಗವೆಲ್ಲ ಹಲ್ಲು ಕಿತ್ತು, ಕತ್ತರಿಸಿ ಹಾಕಲು ಆಪರೇಶನ್. ಕಳೆದ  ಅಕ್ಟೋಬರ್ ನಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೆನ್ನೆಯ ಮಾಂಸವನ್ನೆ ಕತ್ತರಿಸಿ, ಎದೆಯ ಮಾಂಸವನ್ನು ತೆಗೆದು ಕೆನ್ನೆಗಂಟಿಸಿದ ಮಹಾ ಸರ್ಜರಿ. ಡಾಕ್ಟರ್ಗಳ ಅಸಮರ್ಥತೆಯಿಂದಲೋ, ಕಣ್ತಪ್ಪಿನಿಂದಲೋ ಆದ ಪ್ರಮಾದದಿಂದಾಗಿ ಅದೇ ಜಾಗಕ್ಕೆ ಮೊದಲಿನ ಆಪರೇಶನ್ ನಿಂದ ಆದ ತಪ್ಪಿಗೆ ಮತ್ತೆರಡು ಬಾರಿ ಮೈನರ್ ಅಂತ ಆಪರೇಶನ್ ಮೇಲೆ ಆಪರೇಶನ್. 
     ಮನೆಯಲ್ಲಿ ನಾವು ಹರಿದ ಬಟ್ಟೆ ತೇಪೆ ಹಾಕಿದ ಹಾಗೆ, ಮುಖಕ್ಕೆ ತೇಪೆ ಕಾರ್ಯ. ಅದನ್ನು ನೋಡಿದ ನಾನು ಟೆನ್ಶನ್ ಗೆ ಬಿ.ಪಿ ಲೋ ಆಗಿ ಎರಡು ದಿನ ಒದ್ದಾಡಿದೆ. 
    ಇದೀಗ ಡಿಸ್ಚಾರ್ಜ್ ಮಾಡಿದ ಬಳಿಕ  ಮಗಳ ಮನೆಗೆ ಹೋಗಿ ಅಲ್ಲಿಂದ ಅವರ ತಾಯಿ ಮನೆಗೆ ಹೋಗಿ ಸ್ವಲ್ಪ ದಿನಗಳಿದ್ದು "ನನಗೆ ನನ್ನ ಮನೆಯಲ್ಲೆ ಇರಬೇಕು" ಎಂದು ಹಠ ಹಿಡಿದಾಗ ನನ್ನ ಪತಿ ಹೋಗಿ ಕರೆತಂದರು. ಜೊತೆಗೆ ಅವರನ್ನು ನೋಜಿಕೊಳ್ಳಲು ಅವರ ತಂಗಿಯವರನ್ನೂ ಕರೆದುಕೊಂಡು ಬಂದರು.
   ತೋಟಕ್ಕೆ ಹೋಗುವಾಗ ಎಲೆ, ಅಡಿಕೆಯ ಜೊತೆ ತಂಬಾಕನ್ನೂ (ಕಡ್ಡಿಪುಡಿಯನ್ನೂ)  ಸೇರಿಸಿ, ಕೊಟ್ಟಿಗೆಹಾರದ ಚಳಿಗೆ ಬಾಯಿಯಲ್ಲೆ ಸುಮಾರು ಹೊತ್ತು ಇಟ್ಟ ಪರಿಣಾಮ ಹಲ್ಲು ನೋವು ಕಾಣಿಸಿಕೊಂಡು, ಹಲ್ಲಿನ ಡಾಕ್ಟರ್ ಬಳಿ ಹೋದಾಗ ಅವರು ಮಂಗಳೂರಿನ ದೇರಳಕಟ್ಟೆಗೆ ಹೆಚ್ಚಿನ ಪರೀಕ್ಷೆಗೆ ಕಳುಹಿಸಿದಾಗಲೇ ಗೊತ್ತಾಗಿದ್ದು ಹೀಗಾಗಿದೆ ಎಂದು. ತಕ್ಷಣ ಮೊದಲನೆ ಆಪರೇಶನ್ 2013ರಲ್ಲಿ. ಅಲ್ಲಿಂದ ಘನ ಆಹಾರ ಬಿಟ್ಟು ದ್ರವ ಸೇವನೆ ಪ್ರಾರಂಭ. ಇಂದಿನವರೆಗೂ.
   ಮಗ ಅವರನ್ನು ಕರೆದುಕೊಂಡು ಹೋಗದ ಆಸ್ಪತ್ರೆಗಳಿಗೆ, ನಾಟಿ ಔಷಧಾಲಯಗಳಿಗೆ, ಹೇಳಿಕೊಂಡ ಹರಕೆಗಳಿಗೆ ಬಹುಶಃ ಲೆಕ್ಕವೇ ಇಲ್ಲ. ಆದರೇನು ಕ್ಯಾನ್ಸರ್ ಕೀಟಾಣುಗಳಿಗೆ ನಮ್ಮ ದೇಹಕ್ಕೆ ಬರಲು ಗೊತ್ತು, ಬಿಟ್ಟು ಹೋಗಲು ಗೊತ್ತಿಲ್ಲವೇನೋ. 
    ಆದರೂ ಮಾನವ ಅದನ್ನು ಓಡಿಸಿ ದೃಢವಾಗಿ ನಿಂತು, ಆರೋಗ್ಯವಾಗಿ ಬಾಳ ಬಲ್ಲ, ಹೇಗೆಂದರೆ ಬದುಕಿನ, ಜೀವ-ಜೀವನದ ಮೇಲಿನ ಪ್ರೀತಿ, ಸದೃಢ ನಿರ್ಧಾರ, ಮಾನಸಿಕ ಸ್ವಸ್ಥತೆ, ಬಲವಾದ ಮನದ ಭಾವನೆಗಳು, ಆಲೋಚನೆಗಳ ಮೂಲಕ. ಯಾರ ಮುಂದೆಯೂ ಅಳದೆ, ನೋವನ್ನು ಸಹಿಸಿ, "ಒಂದು ದಿನ ನಾನು ಗುಣಮುಖನಾಗುವೆ" ಎನ್ನುವ ಭಾವನೆಯೊಂದಿಗೆ ಉತ್ತಮ ಆಹಾರ ಪದ್ಧತಿ. ಹಣ್ಣಿನ ರಸಗಳು, ಎಳನೀರು, ರಾಗಿ ಗಂಜಿ ಇತ್ಯಾದಿ ನಿಯಮಿತ ಸೇವನೆ. ವೈದ್ಯರು ಹೇಳಿದಂತೆ ವ್ಯಾಯಾಮಗಳು, ದೈಹಿಕ ಅಭ್ಯಾಸಗಳನ್ನು ಮಾಡುವುದು.

   ನನ್ನ ಅತ್ತೆಯವರ ಪರಿಸ್ಥಿತಿ ನೋಡಿ ತುಂಬಾ ಬೇಸರ ಹಾಗೂ ಸಂಕಟವಾಯ್ತು. ಊಟ ಬೇಕೆನಿಸುತ್ತದೆ, ಹಸಿವಾಗುತ್ತದೆ, ಆದರೆ ತಿನ್ನಲಾಗದು. ಚಮಚದಲ್ಲಿ ಅರ್ಧರ್ಧವೇ ಬಾಯಿಗೆ ಹಾಕಿದರೂ ನುಂಗಲಾಗುತ್ತಿಲ್ಲ, ನಾಲಗೆ ತಡೆಯುತ್ತದೆ. ಗಟ್ಟಿ, ದಷ್ಟ ಪುಷ್ಟ ಶರೀರವೀಗ ಕಡ್ಡಿಯಂತಾಗಿ, ಶಕ್ತಿಯಿರದೆ ಎದ್ದು ಕುಳಿತುಕೊಳ್ಳಲೂ ಸಾಧ್ಯವಿಲ್ಲ. ಮಾತನಾಡಬೇಕೆನಿಸುತ್ತದೆ ಅವರಿಗೆ. ಮಾತನಾಡಲು ಪ್ರಯತ್ನಿಸುತ್ತಾರೆ. ಗಂಟಲಿನಿಂದ ಗೊರಗೊರ ಸ್ವರ ಬಿಟ್ಟರೆ ಮತ್ತೇನೂ ಕೇಳದು. ಧ್ವನಿ ಪೆಟ್ಟಿಗೆ ಕೆಲಸ ಮಾಡುತ್ತಿಲ್ಲ.
   ಅನ್ನನಾಳಕ್ಕೆ ಹಾಕಿದ್ದ ನೇರ ಪೈಪನ್ನು ಡಾಕ್ಟರ್ ತೆಗೆದು ಬಿಸಾಡಿರುವರು. ಕಾರಣ ಸ್ವಲ್ಪ ಸ್ವಲ್ಪವೇ ಬಾಯಲ್ಲಿ ತಿಂದು,ಕುಡಿದು ಬಾಯಾಡಿಸುತ್ತಾ, ಅಭಾಯಾಸ ಮಾಡಿ ಸರಿಯಾಗಲಿ ಎಂಬ ಕಾರಣಕ್ಕೆ. 
   ಆಧುನಿಕ ವೈದ್ಯ ಲೋಕದ ಸವಾಲು ಈ ಕ್ಯಾನ್ಸರ್. ಮನಸ್ಸನ್ನೂ ಬಿಡದೆ ಕಾಡುವ, ಕೆಲವೊಮ್ಮೆ ಕಾರಣವೇ ಅರಿಯದೆ ಬರುವ, ಗೊತ್ತೇ ಆಗದ, ಸಾವಿಗೆ ಶರಣಾಗಲೇ ಬೇಕಾದ, ಕೆಲವೊಮ್ಮೆ ಆಕಸ್ಮಾತಾಗಿ ಗೆದ್ದು ಬರುವ ಖಾಯಿಲೆಯಿದು. 
   ನೋಡುವಾಗ ನಮ್ಮ ಶತೃಗಳಿಗೂ ಹೀಗಾಗದಿರಲಿ, ನಾವೂ ಕೂಡ ಸಾಯುವ ಸಮಯಕ್ಕೆ ಒಂದೇ ಭಾರಿಗೆ ಗೊಟಕ್ ಅಂತ ಸಾಯಲಿ ದೇವರೇ ಅಂತ ಪ್ರಾರ್ಥನೆ ಮಾಡುವ ಹಾಗಾಗುತ್ತದೆ. 
ಆಸ್ಪತ್ರೆ, ಹಣದ ಖರ್ಚಿಗೆ ಲೆಕ್ಕಾಚಾರವೇ ಇಲ್ಲ. ಒಂದೆರಡು ಸಲವೇ ಆಪರೇಶನ್. ದುಡಿದ ಹಣವೆಲ್ಲ ಮದ್ದು, ಡಾಕ್ಟರ್ ಪಾಲು. ಹಾಗಂತ ಸುಮ್ಮನಿರಲಾದೀತೇ? ಅದೂ ಆಗದು.
   ನಿಮ್ಮ ಮನೆಯಲ್ಲಿರುವ ಹಿರಿಯರು, ಜನರಿಗೆ ನನ್ನ ಕೋರಿಕೆ ಇಷ್ಟೆ. ಎಲೆ, ಅಡಿಕೆ, ಸುಣ್ಣ ತಿನ್ನಲಿ, ಅಡ್ಡಿಯಿಲ್ಲ. ಯಾವುದೇ ಕಾರಣಕ್ಕೂ ಹೊಗೆಸೊಪ್ಪು, ಕಡ್ಡಿಪುಡಿ ತಿನ್ನದಂತೆ, ಬೀಡಿ ಸಿಗರೇಟು ಸೇವನೆ ಮಾಡದಂತೆ, ನಶ್ಯ ಸೇದದಂತೆ ಎಚ್ಚರಿಕೆವಹಿಸಿ. ತಂಬಾಕಿನ ಯಾವುದೇ ರೀತಿಯ ವಸ್ತುಗಳು ದೇಹ ಸೇರದಿರಲಿ. ಅದರ ಹಿಂಸೆ, ನರಕಯಾತನೆ ನೋಡಿದವರಿಗೆ, ಅನುಭವಿಸಿದವರಿಗೇ ಗೊತ್ತು. ಮನುಷ್ಯ ಜನ್ಮ ದೊಡ್ಡದು. ಆರೋಗ್ಯಕರ ವಸ್ತುಗಳನ್ನೇ ತಿಂದು ದೇಹವನ್ನು ತಂಪಾಗಿ, ಆರೋಗ್ಯಕರವಾಗಿರಿಸೋಣ. ಒಂದು ದಿನ ಸಾಯಲಿಕ್ಕಿರುವುದು ಗ್ಯಾರಂಟಿ. ಅಲ್ಲಿವರೆಗೂ ನೋವು ಪಡದೆ, ಪರರಿಗೆ ನೋವು ಕೊಡದೆ ಚೆನ್ನಾಗಿರೋಣ. ಎಲ್ಲರಲ್ಲಿ ವಿನಂತಿ ಇಷ್ಟೆ, ಈ ರೀತಿಯ ಮಾದಕ ವಸ್ತುಗಳಿಂದ ದೂರವಿರಿ, ಉತ್ತಮ ಆಹಾರ, ಹಣ್ಣು ತರಕಾರಿ ತಿನ್ನಿ. ಆರೋಗ್ಯ ಚೆನ್ನಾಗಿರಲಿ. ಆರೋಗ್ಯವೇ ಭಾಗ್ಯ ಅಲ್ಲವೇ? ನೀವೇನಂತೀರಿ?
@ಪ್ರೇಮ್@
09.02.2020



Show quoted text
ಪ್ರೇಮಾ ಉದಯ್ ಕುಮಾರ್ ಸುಳ್ಯ ದ.ಕ
Show quoted text

ವಿಮರ್ಶೆಗಳು-5


[10/23/2019, 10:07 AM] Wr Nagamma: ಪ್ರೇಮ್ ಜೀ..🙏🏼💐

ನಾನು..

ನನನನನ...ಪದ ಸರಮಾಲೆ..ಬದುಕ ಮಜಲಿನ...ಸಹಜ ನೋಟದ....

ಸರಳ ಸುಂದರ ಕವನಕ್ಕೆ..

ಧನ್ಯವಾದಗಳು.
ಎಸ್.ನಾಗಮ್ಮ🙏🏼🌹
[10/23/2019, 12:05 PM] Wr Vara Lakshmi Amma: ಪ್ರೇಮ್ ಅವರ  ನಾನು
 ನಮ್ಮಲ್ಲಿರುವ ಅನೇಕ ಗುಣಗಳು, ನಮಗಲ್ಲದೇ ಬೇರೆಯವರು ತಿಳಿಯಲು. 
 ಇಂಥ ಒಂದು ಆತ್ಮಾವಲೋಕನ ಕವನ ರಚಿಸಿದ್ದಾರೆ ಪ್ರೇಮ ಅವರು.
  ನಮ್ಮ ಬಾಳಿನ ನಾಳೆಗೆ ನಾವೇ ನಾವಿಕರು, ನಡೆಸುವ ಸ್ಥೈರ್ಯವಿರಬೇಕು.   ಪ್ರಾಸಬಧ್ಧವಾದ ಕವನ🙏
[11/4/2019, 9:42 AM] Wr Champu: ಗುರುಗಳಾದ ನೂರ ಅವರ ಗಜ಼ಲ್ ಒಂದು ನೋಟ

*ಮೂವತ್ತೆರಡು ಪ್ರತಿಮೆಗಳಿಂದ ತೂರಿಬಂದ ಗಜ಼ಲ್*

ಹಾವರಾಣಿ ಜವಾನಿ ಜಾತಕ ಜೀತದಾಳು...ಕನ್ನಡಿ ಕಪಾಟು ಸದ್ದುಮಾಡುವ ಪ್ರತಿಮೆಗಳು..

ಮತ್ಲಾದಲ್ಲಿ ಬಂದ ಪದಗಳು

ಮೊದಲ ಶೇರ್ ಪದಗಳು

ಎರಡನೇಯ ಶೇರ್ ಪದಗಳು

ಮೂರನೇಯ ಶೇರ್ ಪದಗಳು
೧೦
೧೦

ಮಕ್ತಾ ಪದಗಳು

ಇಲ್ಲಿ ಪದಗಳು ಏರಿಳಿತ ಕಾಣಲು ಕಾರಣ ಕವಿ ಮುಕ್ತವಾಗಿ ಮೈದಡವಿ ಭಾವನೆಯ ಓಘಕ್ಕೆ ತನ್ನನ್ನು ತಾನು ಒಡ್ಡಿರುವುದು ಕಾರಣವಾಗಿ ಸಿಗುತ್ತದೆ

ಗುರುಗಳಾದ ಸಿರಾಜಾ ಅವರ ಗಜ಼ಲ್ ಇಲ್ಲಿ ನೋಡುವುದಾದರೆ

*ಗಜಲ್*

ಸಿರಿವಂತರ ಶೋಕಿಗಳಿಗೆ
ತುತ್ತಾಗದಿರು ಮೊಹಬ್ಬತ್//
ಹೃದಯಹೀನರ ತುಟಿಗಳಿಗೆ
ಮುತ್ತಾಗದಿರು ಮೊಹಬ್ಬತ್//

ಗರೀಬನ ಈ ಹೃದಯದಲಿ
ನಿಷ್ಠೆಯ ಖಜಾನೆ ತುಂಬಿದೆ /
ಮಹಡಿಗಳ ಅಲಂಕಾರಗಳ
ಸೊತ್ತಾಗದಿರು ಮೊಹಬ್ಬತ್//

ಬೇವಫಾಗಳ ಜಮಾನದಲಿ
ಸಂತೆ ಕಂತೆಗಳ ಸರಕಾಗದಿರು/
ಕಾಮುಕ ಖವೀಸರ ಕಣ್ಗಳಿಗೆ
ಗೊತ್ತಾಗದಿರು ಮೊಹಬ್ಬತ್//

ನಿನ್ನೊಲವಿನ ಅರಮನೆಯಲಿ
ಕೊಂಚ ಜಾಗವಿರಲಿ ಎನಗೆ/
ಲೂಟಿಕೋರರ ಮಾತುಗಳಿಗೆ
ಮತ್ತಾಗದಿರು ಮೊಹಬ್ಬತ್//

ಗರೀಬಿಯಿದ್ದರೂ ಪ್ರೀತಿಯ
ಮೃಷ್ಠಾನ್ನವಿದೆ ಎದೆಗೂಡಿನಲಿ/
ಸಿರಾಜನನು ಕಡೆಗಣಿಸಿ ಅನ್ಯರ
ಹೊತ್ತಾಗದಿರು ಮೊಹಬ್ಬತ್//

ಶಬ್ದಾರ್ಥ
ಮೊಹಬ್ಬತ್::ಪ್ರೇಮ
ಗರೀಬ::ಬಡವ
ಬೇವಫಾ::ಮಾತು ಮುರಿಯುವ
ಖವೀಸರು::ರಾಕ್ಷಸರು


*ಯು ಸಿರಾಜ್ ಅಹಮದ್ ಸೊರಬ*


ಈ ರೀತಿ ಭಾವನೆಗಳನ್ನು  ಕೆಲವೆ ಪದಗಳಲ್ಲಿ ಹಿಡಿದಿಡುವ ಕೆಲಸವನ್ನು ಪ್ರಾತಃಸ್ಮರಣಿಯರಾದ ಶಾಂತರಸರು ಮುಕ್ತಾಯಕ್ಕ ಅವರು ಮಾಡಿರುವುದುಂಟು..

 ಈ ಕೆಲಸವನ್ನು ನನ್ನನ್ನು ಒಳಗೊಂಡಂತೆ ಗಜ಼ಲ್ ಬರೆಯುವವರು ಮಾಡಿಸರೆ ಗಜ಼ಲ್ ಹಾಡುಗಬ್ಬವಾಗುವುದು.

ಪದಗಳ ಸಮತೋಲನ ನಂತರ ಮಾತ್ರೆಗಳ ಸಮತೋಲನಕ್ಕೆ ಅಣಿ ಆಗಬಹುದು ನಂತರ ಮಾತ್ರಾಗಣಕ್ಕೆ ಹೊರಳಬಹುದು ಅಲ್ಲವೇ? 

ನಿಮ್ಮ ಗಜ಼ಲ್ ಭಾವದ ಮಹೋನ್ನತಿ ಸಾಧಿಸಿ ನಿಂತಿದೆ ಅದ್ಭುತವಗಜ಼ಲ್ ಓದಿಸಿದ ತಮಗೆ ಅಭಿನಂದನೆಗಳು
[11/4/2019, 10:19 AM] Wr Champu: ಪ್ರೇಮ ಅವರ ಗಜ಼ಲ್ 

ಸಾಮಾಜದ ಜನರ ಮುಖವಾಡ ಕಳಚಿಡುವ ಗಜ಼ಲ್..

ಬಹಳ ಅಮೋಘವಾಗಿ ಒಡಮೂಡಿದೆ...

ಇಲ್ಲಿ ಗಮಿಸಬಹುದು
ಸಾಕಿ ಇಲ್ಲಿ ದೋಸ್ತನಾಗುವ ಪರಿ 

ಇವತ್ತು ವಿಹದ ವೇದನೆಯ ವಿಷಯ ಇರುವುದು ತಾವೂ ಗಮನಿಸಿಲ್ಲಂತ ಅನಿಸುತ್ತೆ


ಚಂದದ ಗಜ಼ಲ್ ಓದಿಸಿದ ತಮಗೆ ಧನ್ಯವಾದಗಳು ಸರ್👏👏👏👏
[11/4/2019, 6:53 PM] @PREM@: ಗಝಲ್

ಮಲ್ಲಿಗೆ ಗಿಡ ಬಾಡಿ ಹೋದೊಡೆ
ಹೂವರಳಿಸಬಹುದೇ ದಿಲ್?
ಮರ ಕಡಿದು ಉರುಳಿಸಿದ ಜಾಗದಿ ಮತ್ತೆ ಹಣ್ಣ ಕಾಣಬಹುದೆ ದಿಲ್?


ಮರೆತುಾ ಮರೆಯಲಾರೆ ನಿನ್ನೊಡನೆ ಕಳೆದ ಕ್ಷಣಗಳನು.
ಮದಿರೆಯಂದದಿ ಮತ್ತೆ ಮತ್ತೆ ಜೀವಹಿಂಡಿ ನೆನಪಾಗದೆ ದಿಲ್?

ಮನವು ಅತ್ತು ಹಿಂಡಿ ಹಿಪ್ಪೆಯಂತಾಗಿದೆ ಈಗ.
ಮುದದಿ ಜತೆಗೂಡಿದ ಮುಸುಕು ಕನಸುಗಳು ಕಾಣಲಾರದೆ ದಿಲ್?

ಕರಿಮೋಡಗಳು ಬರಲು ಒಳಗಿಹ ಚಂದಿರ ಕಾಣುವನೇ?
ಕಡಿದಾದ ಬಾಳಲಿ ಬೆಳಕು ಬರುವುದೇ ನೀನಿರದೆ ದಿಲ್?

ಮೊಹಬ್ಬತ್, ಪ್ಯಾರ್, ಇಶ್ಕ್ ಎಲ್ಲವೂ ನಿನ್ನೊಳಿತ್ತು.
ಮತ್ತೊಬ್ಬರ ನಿನ್ನಂತೆ ಕಾಣಲು ಮನ ಒಪ್ಪುವುದೆ ದಿಲ್?

ಮುಸ್ಸಂಜೆಯಂದದಿ ಬಾಡಿಹುದು ಬದುಕ ಹೂವು.
ಮೌನ ತಬ್ಬಿದ ಮನಸು ಮುದುಡಿ ಹೋಗಿದೆ ದಿಲ್.

ಪ್ರೇಮವಿದ್ದರೆ ಬಾಳು, ಇರದಿದ್ದರೆ ಹೋಳಾದಂಥ ಗೋಳು!
ಪರರ ಪ್ರೀತಿಯಲಿ ನಿನ್ನನರಸಲು ಸಾಧ್ಯವಾಗುವುದೆ ದಿಲ್?
@ಪ್ರೇಮ್@
[11/4/2019, 6:59 PM] Wr Shiv Karnandi: ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಒಂದು ಕವಿತೆಯ ಸಾಲು *ಮರೆಯೋ ಮಾತು ಮರೆತುಬಿಡು* ಈ ಗಜಲ್ ಓದಿದಾಗ ನೆನಪಾಯಿತು....ಭಾವತೀರ್ವತೆಯಿಂದ ಮೂಡಿಬಂದ ಗಜಲ್ ಅದ್ಬುತವಾಗಿದೆ👏🏻👏🏻👏🏻👏🏻👏🏻👏🏻👏🏻👏🏻👏🏻👏🏻
[11/4/2019, 10:16 PM] Wr Manasa: ✍ ರಾಜ್ಯ ಮಟ್ಟದ ಕವಿಗೋಷ್ಟಿಗೆ ಬೇಕಾಗಬಹುದಾದ ಮೂಲಭೂತ ಅವಶ್ಯಕತೆಗಳು
1.ಸಭಾಂಗಣ ಮತ್ತು ಕವಿಗಳಿಗೆ ಆಸನ ವ್ಯೆವಸ್ಥೆ.
2.ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ ದ ಊಟದ ವ್ಯವಸ್ಥೆ. 
3.ಅಭಿನಂದನ ಪತ್ರಗಳು
4.ಪ್ಲೇಕ್ಸ್
5.ಮೊಮಂಟಂಗಳು
6.ಅತಿಥಿ ಸತ್ಕಾರದ ಅಗತ್ಯ ವಸ್ತುಗಳು-ಶಾಲು,ಸರ್ಟಿಫಿಕೇಟ್ ಹಾರಗಳು ಇತ್ಯಾದಿ
7.ಅತಿಥಿಗಳ ಮತ್ತು ಮುಂಚಿತವಾಗಿ ಬರುವ ಕವಿಗಳಿಗೆ ವಸತಿ ವ್ಯೆವಸ್ಥೆ..

👆👆👆ಇನ್ನು ಏನಾದರು ಅವಶ್ಯಕ ಸಂಗತಿಗಳು ಇದ್ದರೆ ಪಟ್ಟಿಗೆ ಸೇರಿಸಿ
[11/5/2019, 5:05 PM] Wr Vani Bhandari: *ನಮಸ್ತೇ*
🙏🏻🙏🏻🙏🏻

*ಪ್ರೇಮ್ ಅವರ ಗಜಲ್*

*ಅರಿವಿನ ಹೃದಯವ ಅರಿಯದೆ ಇದ್ದಾಗ ಉಂಟಾಗುವ ಭಾವಗಳ ತಳಮಳದ ಚಿಂತನೆ*

          ಹೆಣ್ಣಿನ ನೋವಿನ ಆರ್ತನಾದವು ಮಡಗಟ್ಟಿ ನಿಂತಂತೆ ಇದೆ, ಬಹುಶಃ ಇ ಜಗದಲಿ ಕೆಲವೊಂದು ಹೇಳಲಾಗದ ನೋವುಗಳಿವೆ ಎಂದರೆ ಅದು ಹೆಣ್ಣಿನ ಒಳಮನದ ತಾಕಲಾಟವು ಕಾಣುವುದು.

ಇನ್ನುಳಿದಂತೆ,,,,

👉 *ಸುಂದರವಾದ ಗಜಲ್*
👉 *ಗಜಲ್ ನಿಯಮ ಪಾಲನೆ ಆಗಿದೆ*
👉 *ಭಾವನೆಗಳ ಏರಿಳಿತಗಳನ್ನು ಸಮಾನಾಗಿ ಮೂಡಿಸಿ*
👉 *ಶೇರ್ಗಳನ್ನು ಸಮಾಂತರವಾಗಿ‌ ಮೂಡಿಸಿದಾಗ ಗಜಲ್ ನೋಡಲು ಸುಂದರ*
👉 *ಸುಂದರವಾದ ಸೊಗಸಾದ ಗಜಲ್*

*ಹೀಗೆ ಸದಾ ಬರೆಯುತ್ತಾ ಇರಿ, ಯಶಸ್ಸು ನಿಮ್ಮದಾಗಲಿ*

*ಧನ್ಯವಾದಗಳೊಂದಿಗೆ*

                         *✍ವಾಣಿ ಭಂಡಾರಿ*
[11/6/2019, 8 AM] Wr Yathish Kamaje: *ಪ್ರೇಮ್ ರವರ ಗಜಲ್*

ಭಗ್ನ ಪ್ರೇಮಿಯ ಮನದಾಳದ ನೋವು
ಗಜಲ್ ನಿಯಮದಂತಿದೆ.

ಮಳೆಬಿಲ,ನದಿ ನೀರು, ಬೀಸುಗಾಳಿ ನಮ್ಮ ಪ್ರೀತಿಗೆ ಸಾಕ್ಷಿಯಲ್ಲವೇ?
ಮಳೆಗಾಲದಿ ಒಬ್ಬಳೇ ಕುಳಿತು ಬೇಸರಿಸದಿರಲಿ ಹೇಗೆ ಜಾನು?
👆ಇಲ್ಲಿ ಮಳೆಗಾಲದಲ್ಲಿ ಮಾತ್ರ ನೆನಪಾಗುವುದೇ..!?
ಎಲ್ಲಾ ದಿನದಲ್ಲೂ ಕಾಲದಲ್ಲೂ ಅವನದೇ ನೆನಪು ಅನ್ನುವಂತಿರಬೇಕು.
ಆ ಸೂರ್ಯ,ಬಾನು,ಚಂದ್ರ,ಮೋಡ,ನಕ್ಷತ್ರ,ಗಾಳಿ,ನೀರು ನಮ್ಮ ಪ್ರೀತಿಗೆ ಸಾಕ್ಷಿಯಲ್ಲವೇ.
ಎಂದು ಹೇಳಬಹುದಿತ್ತು ಎನಿಸಿತು.

'ಹರವ ಹರಿಸಲಿ' ಇದು ಅರ್ಥವಾಗಲಿಲ್ಲ.

ತಪ್ಪಿದ್ದರೆ ಮನ್ನಿಸಿ
[11/7/2019, 8:29 AM] Wr Champu: ಪ್ರೇಮ ಅವರ ಜಾನು ಆರಾಧ್ಯ ಗುರುಗಳ...ಸಖಿ..

ಒಂದೇ ದಾರಿಯಲ್ಲಿ ನಡೆಯುವ ಗಜ಼ಲ್'ಗಳು..

ಜಾನುವಿನ ನೋವು ಇಲ್ಲಿ ಸಖಿಯ ನೋವಾಗಿದೆ ದೂರವಾದ ಮನಸ್ಸನ್ನು ಇರ್ವ ಮನಸ್ಸುಗಳು..ಹಂಬಲಿಸುತ್ತಿವೆ

ಅಲ್ಲದೆ ಪ್ರತಿಮೆಗಳು ಸರಳ ಸುಂದರವಾಗಿ ಮೂಡಿಬಂದಿವೆ..ಇರ್ವರಿಗೂ ಬಳಗದ ಪರವಾಗಿ ಅಭಿನಂದನೆಗಳು..

👏👏👏👏👏
[11/11/2019, 5:34 PM] Wr Siraj Ahmed Soraba: *ಜುಲ್ ಕಾಫಿಯ ಗಜಲ್*
ಜುಲ್ ಎಂದರೆ ದ್ವಿತೀಯ ಅಥವಾ ‌ಎರಡನೇ ಬಾರಿ
ಎರಡು ಕಾಫಿಯಗಳ ಗಜಲ್
ಒಂದು ಗಜಲ್ ನ ಪ್ರತಿಯೊಂದು
ಶೇರ್ ನಲ್ಲಿ ಒಂದರ ಮುಂದೆ
ಒಂದು ಕಾಫಿಯ ಇರುತ್ತದೆ
ಒಬ್ಬ ಪ್ರತಿಭಾವಂತ ಗಜಲ್ ಕಾರ ಪದಗಳನ್ನು ಪೋಣಿಸುವ
ಸಮಥ೯ ಕಲೆಯನ್ನು ಪಡೆದಿರುತ್ತಾನೆ ಪ್ರತಿಯೊಂದು
ದ್ವಿಪದಿಯು ಎರಡೆರಡು ಕಾಫಿಯಗಳಿಂದ ಮಾತನಾಡುತ್ತದೆ ಇಂತಹ ಗಜಲ್ ಗಳಿಗೆ ಜುಲ್ ಕಾಫಿಯ
ಗಜಲ್ ಗಳೆನ್ನುವರು

*ಯು ಸಿರಾಜ್ ಅಹಮದ್ ಸೊರಬ*
[11/12/2019, 3:22 PM] Wr Shakunthala Dalera: ೫. *ಪ್ರೇಮ್ ಸಹೋದರಿಗೆ ವಂದನೆಗಳು.*🙏
ತಮ್ಮ ಗಜಲ್ನಲ್ಲಿ ಪ್ರಾಣಿಗೂ ಮತ್ತು ಮನುಷ್ಯರಿಗಿರುವ ಅವಿನಾಭಾವದ  ಸಹಸಂಬಂಧ ಚೆನ್ನಾಗಿ ಮೂಡಿಬಂದಿದೆ. ಕವಿಭಾವ ಸೂಪರ್.ಕುಕೂರ್ ಶಬ್ದ ಮನಸೆಳೆಯಿತು. ಆತ್ಮೀಯ ಅನಂತ ವಂದನೆಗಳು.👏👏👏👏💐💐💐💐
[11/14/2019, 4:40 PM] Wr 100 Ahmd: *ಪ್ರೇಮ್ ಜಿ ಅವರ ಪ್ರಶ್ನೆಯ ಮುಕಾಂತರ ಮಕ್ಕಳೇ ಪ್ರೆಜೆ ಎಂದು ತಿಳಿಸಿದ್ದಾರೆ ಉತ್ತಮ ರಚನೆ ಜಿ ಧನ್ಯವಾದಗಳು*
👏👏👏👏👏👏
[11/18/2019, 7:15 AM] Wr Chandayya: @ ಪ್ರೇಮ್ 
ಬದುಕು ಬೆಳಗುವ ಸ್ಪೂರ್ತಿಯಾದ ಪ್ರಿಯಕರನ ಸೇರುವ ಕ್ಷಣ ಚಂದ... 
ರೂಪಕಗಳ ಸೃಷ್ಟಿಯೇ  ಗಝಲ್ ನ ಮುಖ್ಯ ಅಂಶ ಎಂಬುದು ನನ್ನ ವಯಕ್ತಿಕ ಅನಿಸಿಕೆ...  ಎಲ್ಲರೂ ವಾವ್ ವಾವ್ ಎನ್ನುವಂತ ರೂಪಕಗಳ ಬಳಕೆಯತ್ತ ಕಣ್ಣಾಯಿಸಿರೆ  ಮಸ್ತ್ ಇರುತ್ತೆ...  


ಧನ್ಯವಾದಗಳು 

 *ಚಂದ್ರಯ್ಯ ಚಪ್ಪರದಳ್ಳಿಮಠ*
[11/23/2019, 10:40 AM] Wr Shiv Karnandi: *ಗಜಲ್-೧*

*ಒಣ ಭೂಮಿಗೆ ಮಳೆ ಸುರಿದರೆ ಎಲ್ಲೋ ಒಂದಿಷ್ಟು ಬೆಳೆ ಬೆಳೆಯಬಹುದು ಅದರಂತೆ ಮಕ್ಕಳನ್ನೆ ಕಾಣದ ಹೆಣ್ಮಗಳಿಗೆ ಮಗುವ ಕರುಣಿಸ ದೇವರು, ಕರುಣಿಸಿದವೇ ಕಿತ್ತುಕೊಂಡೆಯೇಕೆ ಎಂಬ ಕೊರಗುವ ಯಾತನೇಯ ಚಿತ್ರಣವನ್ನು ಗಜಲ್ ನಲ್ಲಿ ಕೊಟ್ಟಿದ್ದಾರೆ ಶ್ರೀಮತಿ ಪ್ರೇಮಾ ಮೇಡಂ ಅವರು......*

ಉರ್ದು ಪದಗಳನ್ನು ಬಳಸಿದ ತಪ್ಪಿಗೆ ಮತ್ತೆ ಉರ್ದು ಪದಗಳು ಸಿಗದೆ ಇಂಗ್ಲಿಷ್ ಪದಗಳನ್ನು ಬಳಸಿದ್ದಿರಿ ಹಾಗೇ ಒತ್ತಾಯಪೂರ್ವಕವಾಗಿ ಕಾಫಿಯಾ ವನ್ನಾಗಿ ಮಾಡಿ ಬರೆದಿದ್ದಿರಿ.....

ಗಜಲ್ ನಲ್ಲಿ ಬರುವ ಪ್ರತಿ ರೂಪಕ, ಪ್ರತಿಮೆಗಳು, ಕಾಫಿಯಾ, ರದೀಪ್ ಸಹಜವಾಗಿ ಬರಬೇಕು ಅಂದಾಗ ಆ ಗಜಲ್ ಸುಂದರವಾಗಿ ಇರ್ತದೆ  ಹಾಗೂ ಗಜಲ್ ಗೆಲ್ಲುತ್ತದೆ.....

ಗಜಲ್ ಬರೆಯುವ ನಿಮ್ಮ ಪ್ರೀತಿಗೆ ಧನ್ಯವಾದಗಳು

*ಶಿವಕುಮಾರ ಕರನಂದಿ*✍🏻
[11/26/2019, 11:04 AM] Wr Mangala Kambi: (6)ಪ್ರೇಮ್ ಅವರ ಗಜಲ್ ಕುರಿತು....

ಬೇರ್ಪಟ್ಟ ಸಂಗಾತಿಯನ್ನು ಗಗನ ಕುಸುಮವೆಂದು ಭಾವಿಸುವ ಹಾಗೂ ಸಮಾಧಾನ ಮಾಡಿಕೊಂಡು ಪ್ರೀತಿಗಾಗಿ ಪರಿತಪಿಸುವ ಪರಿ ಚೆನ್ನಾಗಿದೆ.
ಧನ್ಯವಾದಗಳು...

ಮಂಗಳಾ ಕೆಂಡದಮಠ
[11/27/2019, 5:21 PM] Wr Dinesh Sir: 🙏🙏

*ಪ್ರಕಾರ ಗಜ಼ಲ್* 
~~~~~~~~~~

ರಚನೆಕಾರರು :-  *ಪ್ರೇಮ್ ರವರು*

ಗಜ಼ಲ್ ನಿಯಮಾನುಸಾರ ಇದ್ದು  ಚೆಂದವಿದೆ.

🍀 ಸೊಗಸಾದ ಗಜ಼ಲ್. ಒಲವ ಸವಿ ಭಾವವಿದೆ. ಚೆಂದದ ಶೇರ್ ಗಳು ಗಜ಼ಲ್ ಗೆ ಸುಂದರ ಮೆರುಗನ್ನಿತ್ತಿವೆ.

"ಬಾನೆತ್ತರ ಹಾರಲು ಮನ ಗರಿಗೆದರುತ ತವಕಿಸುತಲಿದೆ ಅಂತರಂಗದ ದಿನನನ"👌


*ಉತ್ತಮ ಗಜ಼ಲ್ ಒಂದ ಓದಿಸಿದ ತಮಗೆ ಧನ್ಯವಾದಗಳು*🙏🙏

🍀
ಶುಭವಾಗಲಿ. ಸದಾ ಯಶಸ್ಸು ನಿಮಗೆ  ಸಿಗಲಿ💐💐👍👍

.
[12/4/2019, 11:03 AM] Wr Manjula B K: ಪ್ರೇಮ ಅವರ ಕಲಿಯಬೇಕಿದೆ 

ನಾವು ಕಲಿತಿರುವುದು ಬಹಳಷ್ಟು. ಕಲಿಯಬೇಕಾದದು ಸಾವಿರ ಪಟ್ಟು. 

ಎಲ್ಲ ಕಲಿತಿರುವೆ ಎನ್ನುವ ಮದಕಿಂತ ಏನು ಒಳ್ಳೆಯದನ್ನು ಕಲಿಯಬೇಕಿದೆ ಎನ್ನುವುದು ಮುಖ್ಯ ಎಂಬುವುದು ಉತ್ತಮ ಸಂದೇಶ. 

ಮಂಜುಳಾ. ಬಿ. ಕೆ
[12/4/2019, 5:53 PM] Wr Kumar Chalawadi: " ಪ್ರೇಮ್" ರವರ 'ಕಲಿಯಬೇಕಿದೆ' ಕವನ ಮನನೀಯವಾಗಿದೆ! ಎಲ್ಲ ಅನಿಷ್ಟ , ಅಪಸವ್ಯಗಳ ಆಗರವಾದ ಮನುಜನ, ಮನದ ಒಳಕೋಟಿಯನ್ನು ಚೆನ್ನಾಗಿ ಅಭಿವ್ಯಕ್ತಿಸಿರುವಿರಿ! " ಮತ್ತೆ ನಾನು ಕಲಿಯಬೇಕಿದೆ, ಹೄದಯಗಳ ಜೋಡಿಸುವದನು" ತುಂಬಾ ಕಳ- ಕಳಿಯ ಭಾವನೆ ತೋರಿಸಿರುವಿರಿ. ಈ ಭಾವನೆಯನ್ನು ಎಲ್ಲರೂ ಅನುಸರಿಸಬೇಕಿದೆ! ಸುಂದರ ರಚನೆ👌
[12/9/2019, 7:32 AM] Wr Jeevaraja Chatrad-2: ಕುಸುಮ ಷಟ್ಪದಿ

ಭೋಗ ಮಾಯೆ

ನಗಗಳನು ಹೊರುತಲಿ
ಮೊಗಗಳನು ಮಿಂಚಿಸಲು
ಖಗಮಿಗದ ಮನಶುದ್ಧಿ ಇರದ ವನಿತೆ  
ರೂಪಸಿಯು ನೋಟದಲಿ
ಪಾಪಕೆಳೆದು ಮೋಸದಲಿ
ಕೂಪಕೆಳೆವ ರಕ್ಕಸಿಯು
 ಒಡೆದು ಹಣತೆ

ನೊಗಗಳನು ಹೋರುತಲಿ
ಮೊಗಗಳನು ಮಿಂಚಿಸಲು
ಖಗಮಿಗದ ಮನಶುದ್ದಿ ಮುಖದೊಳಗಿದೆ।
ಸೊಗವೆಳಸಿ ಹುಸಿ ನಗೆಗೆ
ನಗುವಲ್ಲಿ ವಿಷಬಾಣ
ಧಗೆಹತ್ತಿ ಕೊಂದಿರುವ ರಕ್ಕಸಿಯಲಿ॥

ಹೀಗಾಗಬಹುದು



 


೫+೫
೫+೫
೫+೫+೩+೩
೫+೫
೫+೫
೫+೫+೩+೩ 
ಮಾತ್ರಾ ಸಂಯೋಜನೆ ಹೀಗಲ್ಲ ಹೀಗೆ

೫/೫
೫/೫
೫/೫/೫/೨
೫/೫
೫/೫
೫/೫/೫/೨

ಶಿಪ್ರ
[12/9/2019, 4:16 PM] +91 97408 87580: ಪ್ರೇಮ್ ಸರ್ 
ನಮಸ್ಥೆ

ಭ್ರಾಂತಿ ಎನ್ನುವ ಪರಧಿಯೊಳಗೆ ಎಳೆಯ 
ಮಕ್ಕಳನ್ನ ಅರ್ಥ ಮಾಡಿಕೊಳ್ಳದೇ
ಬರಿ ದಂಡನೆಯ ಕಡೆಗೆ
ಶಿಕ್ಷಣ ಕೊಡಬೇಡಿ ಎಂದು ಹೇಳುವ ಮೂಲಕ ಮಕ್ಕಳ ಬಗೆಗಿನ ಅವರ ಕಾಳಜಿ ಬಿಂಬಿತವಾಗುತ್ತದೆ.
ಮಕ್ಕಳೆಂದರೆ ತೋಟದಿ ಅರಳುವ ಬಣ್ಣ ಬಣ್ಣದ ಹೂಗಳು
ಹೊಸುಕದೆ ಹೊಸ ಬದುಕು ನೀಡಿ ಎನ್ನುವ ಆಶಯ ತಮ್ಮ ಕವಿತೆಯಲ್ಲಿ ಎದ್ದು ಕಾಣುತ್ತದೆ
ಸೊಗಸಾಗಿದೆ
🙏🙏🙏🙏🙏
[12/11/2019, 2:51 PM] Wr Sreemati Joshi: ಸೋಲದಿರು
ಸಾಲುತಿಲ್ಲ ನೀನು ನೀಡಿದ ಪ್ರೀತಿಯ ಸಾಲ
ಸಾಲದಾಗಿದೆಯೆನಗೆ ನಿನ್ನ ಹೃದಯದ ಜಾಗ
ಸಾಲು ಸಾಲು ಇರಲು ಬೇಕು ಗಮನದ ಕಾಲ
ಸಾಲಿನೊಳಗೆ ಹುದುಗಬೇಕು ನಿನ್ನಯ ಪಾಲು..
*ಪ್ರೀತಿಯನ್ನೇ ಸಾಲ ವಾಗಿಸಿ ಬಿಟ್ಟಿದ್ದೀರಿ ಹೃದಯದಲ್ಲಿ ಜಾಗವೂ ಜಾಗ*🤣🤣
ಸಾಲುಗಳಲಿ ಬರೆಯಲಾರೆ ಪ್ರೀತಿಯ ಪದರ
ಸಾಲಿನಲ್ಲಿ ನಿಲ್ಲಲಾರೆ, ನೀನಿರದಿರೆ ಬರ!
*ಅವಳ ಪ್ರೀತಿಯ ಪವರ್ ಅಂದ್ರೆ ಹಾಗೆ*
ಸೋತ ಮನಕೆ ಸಾಲು ಖುಷಿಯ ತಂದಿಹೆ ನೀನು
ಗೆದ್ದ ಹಿಗ್ಗು ದೈತ್ಯವಾಗೆ ತಣಿಸಿದೆ ನೀನು.
*ಸೋತ ಮನಕೆ ಖುಷಿಯ ತರುವುದೇ ಪ್ರೀತಿ ಅನುರಾಗ. ಆಗ ಗೆಲುವು ಖಚಿತ ಸೂಪರ್ ಸಾಲು*
6ನಾನೆ ನೀನು ನೀನೆ ನಾನು ಒಂದೆ ಸಾಲಲಿ
ನೀನು ಇರದೆ ಕ್ಷಣಕ್ಷಣವು ನೋವು ಬಾಳಲಿ..
*ಪ್ರೀತಿ ಬೆರೆತ ಬಾಳಿನಲ್ಲಿ  ದೇಹ 2 ಜೀವ ಒಂದು ಎನ್ನುಬಿಎಂಸಿಎ ಭಾವ ನೈಸ್*
ಸೋಲು ಗೆಲುವು ಎರಡು ಇಹುದು ಪ್ರತಿ ಹೆಜ್ಜೇಲಿ
ಸೋತ ಮನವು ಗೆಲ್ಲಬಹುದು ಮುಂದೆ ದಾರೀಲಿ..
*ಸಮರಸವೇ ಜೀವನದ ಭಾಗ* 
ಪ್ರೇಮವೆಂದರೇನು ಎಂದು ಅರಿತೆ ಬದುಕಲಿ
ನೀನು ಬಂದು ಮನದ ಕುಣಿತ ದಿನವು ನಲಿವಲಿ..
*ಪ್ರೇಮವು ಅವಳು ಬಂದ ಮೇಲೆ ಅರಿವಿಗೆ ಬಂತು ಅನ್ನುವ ಆಶಯ ಅವಳ ಮೇಲೆ ಇಟ್ಟ ನಂಬಿಕೆ*
ಸೋತು ಗೆಲುವ ಸಾಹಸವು ಇಹುದು ಜಗದಲಿ
ಸೋಲಲಾರೆನೆನುವ ಮಾತು ಬೇಕು ಜನರಲಿ..

ಸೋಲ ಸಾಲು ಬರಲು ಸನಿಹ ಕುಗ್ಗ ಬಾರದು
ಸೋಲು ಇಂದು ಕಡೆಯದಲ್ಲ, ಗೆಲುವಿಗೂ ಹಿಗ್ಗಬಾರದು..ಸುಖ *ಸುಖ ಸಮನಾಗಿ ಸ್ವೀಕರಿಸುವ ಆಶಯ*
ಸೋತು ಸೋಲು ಸೋಲ ಸಾಲು ಓಡಲಿ
ಗೆಲುವ ಸಾಲು ಸೋತ ಬಳಿಕ ಬಂದು ಸೇರಲಿ..

ಸೋಲಿಗಾಗಿ ಅಂಜಬೇಡ ಸೋಲು ಸೋಲಲಿ
ಗೆಲುವಿನಿಂದ ಬೀಗಬೇಡ ಮುಂದೆ ಬಾಳಲಿ..
*ಒಟ್ಟಾರೆ ಕವಿ ಭಾವ ಸೂಪರ್ಬ್. ಆದರೂ ಸ್ವಲ್ಪ ಗಡಿ ಬಿಡಿ ಯಲ್ಲಿ ಬರೆದ ಹಾಗಿದೆ. ನಿಮ್ಮ ಹಿಂದಿನ ಕವನಗಳಿಗೆ ಹೋಲಿಕೆ ಮಾಡಿದಾಗ*
@ಪ್ರೇಮ್@
11.12.2019
[12/24/2019, 11:18 AM] Wr Jeevaraja Chatrad-2: ಕುಮಾರ ಚಲವಾದಿ ಸರ ನೀವು ಭೇಟಿ ಕೊಟ್ಟ ಸ್ಥಳದ ವಿವರ ಹೀಗಿದೆ.

1) ಸ್ಪಂದನ ಪ್ರೌಢಶಾಲೆ 
೨) ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ 
೩) ಮೂಕಪ್ಪಸ್ವಾಮಿ ದೇವಸ್ಥಾನ 
೪) ಸರಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ 
೫) ಕಾಂತೇಶಸ್ವಾಮಿ ದೇವಸ್ಥಾನ 
೬) ತಿಮ್ಮಪ್ಪ ಸ್ವಾಮಿ ದೇವಸ್ಥಾನ 
೭) ರಾಯರ ದೇವಸ್ಥಾನ 
೮) ಕನಕದಾಸರ ದೇವಸ್ಥಾನ  
ಧನ್ಯವಾದಗಳು ಸರ
[12/24/2019, 12:00 PM] Wr Jeevaraja Chatrad-2: ಬಿಡುಗಡೆಯಾದ ಪುಸ್ತಕಗಳು 

೧.ಭಾವ ಬಿಂದಿಗೆ-ರಾಜೇಶ್ವರಿ 
೨.ಸೆಳೆತಗಳ ಸುಳಿಯಲ್ಲಿ -ಚಂದ್ರಯ್ಯ
೩. ಕನಕದಾಸರು ಮತ್ತು ಹಕ್ಕಿಗಳು -ಶಶಿಧರಸ್ವಾಮಿ
೪.ನೂರ್-ಏ-ತಬಸ್ಸುಮ-ನಾಗನೂರ
೫.ಕೋತಿಮರಿ ಭಾಗ-೩- ಖುಷಿ ಕೃಷ್ಣ 
೬. ಖುಷಿ ತರಲಿ ಕೃಷಿ -ಜೀವರಾಜ
೭. ಅನುವಿನು- ಜೀವರಾಜ
೮. ದಾಂಪತ್ಯ ಗೀತೆಗಳು -ಜೀವರಾಜ
೯.ಹನಿ ಹನಿ ಮುತ್ತುಗಳು - ವಾಣಿ ಯತೀಶ ನಾಗಮ್ಮ ಮಾಲಾಮೂರ್ತಿ
[12/24/2019, 11:14 PM] Wr 100 Ahmd: ಗುರುಗಳೆ ನಮಸ್ತೆ👏

ನೀವು ಶಿರೋನಾಮೆಯ ಬಗ್ಗೆ ಹೇಳಿದ್ದೀರಿ ತಪ್ಪಿಲ್ಲ ನಿಮ್ಮ ಮಾತು ಆದರೆ ಕಾವ್ಯಕ್ಕೆ ಭಾಷೆಯ ಪರಿವಿಲ್ಲ ಜೊತೆಗೆ ಎಲ್ಲ ಭಾಷೆಯ ಕಾವ್ಯಗಳು ಉಳಿದ ಭಾಷೆಗೆ ಹರಿದಾಡುತ್ತವೆ 

ನಾನು ಈ ಮುಖಪುಟವನ್ನು ಮೂರು ತರಹದಲ್ಲಿ ಊಹಿಸಿ ಪ್ರಕಟಿಸಿರುವೆ 

ಮೊದಲಿಗೆ ಜಲಾಲುದ್ದಿನ ರೂಮಿ ಮತ್ತು ಶಮ್ಸ್ ತಬರೇಜ್ ಅವರ ಗುರುಭಕ್ತಿಯ ಮತ್ತು ಶಿಷ್ಯರ ಸಂಭದ್ದದ wailding dance ಅನ್ನುವ ಅರ್ಥದಲ್ಲಿ

ನಂತರ ಬೆಳಕಿಗೆ ಮುಖ ಒಡ್ಡಿದಾಗ ಕಣ್ಣು ಉಲ್ಲಾಸಗೊಳಿಸುವ ಜೀವನೋತ್ಸಾಹದ ಉನ್ಮಾದ ಹೊಂದಿರುವ ಭಾವನೆ

ಇನ್ನೊಂದು ಅಂದರೆ ನನ್ನ ಮಡದಿಯ ಹೆಸರು ತಬಸ್ಸುಮ್ ಅಂದ್ರೆ ಮುಗುಳುನಗೆ ನನ್ನ ಹೆಸರು ನೂರ್ ಅಂದರೆ ಪ್ರಕಾಶ ನೂರ್ ಏ ತಬಸ್ಸುಮ್ ಎಂದರೆ ಪ್ರಕಾಶದಲ್ಲಿ ಬೆಳಕು ಎನ್ನುವ ಭಾವದಿಂದ ಈ ಶೀರ್ಷಿಕೆ ಕೊಟ್ಟಿರುವೆ ....👏👏👏👏👏
[12/31/2019, 4:26 PM] Wr Siraj Ahmed Soraba: *ಸಾವನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ನಾನೇ ಬರೆದ
ಒಂದು ಉದು೯ ಗಜಲ್*

*ಗಜಲ್*

ಖುಷಿಯಾಂ ಬರಸೆ ಸಾವನ್ ಕೀ ತರಹ್
ಜಿಂದಗಿ ಮೆಹಕೆ ಚಂದನ್ ಕೀ ತರಹ್

ಕೋಯೀ ಮುಷ್ಕಿಲ್ ಸತಾಯೇ ನಾತುಝೆ 
ಚಮಕ್ತಾ ರಹೇ ತೂ ಕುಂದನ್ ಕೀ ತರಹ್ 

ತೂ ಅಗರ್ ಚಲ್ತಾ ರಹೇ ರಾಸ್ತೇ ಖುದ್ ಖುಲೇ
ಕಾಮಿಯಾಬಿ ರಹೇ ಆಂಗನ್ ಕೀ ತರಹ್ 

ತೇರೆ ಜನಮ್ ದಿನ್ ಪರ್ ದುಆ ಕರೇಗಾ ಸಿರಾಜ್
ಮನ್ಜಿಲ್ ತುಝೆ ಪ್ಯಾರ್ ಕರೆ ಮಧುಬನ್ ಕೀ ತರಹ್

*ಯು ಸಿರಾಜ್ ಅಹಮದ್ ಸೊರಬ*
[12/31/2019, 4:49 PM] Wr Siraj Ahmed Soraba: ನನ್ನ ಉದು೯ ಗಜಲ್ ನ ಕನ್ನಡಾನುವಾದ

*ಗಜಲ್*

ಹರುಷಗಳ ಬರುತಿರಲಿ ಮಳೆ
ಸಿಂಚನದ ಹಾಗೆ
ಜೀವನದಲಿ ಕಂಪು ಹರಡಲಿ 
ಚಂದನದ ಹಾಗೆ

ಯಾವ ಕಷ್ಟವೂ ಕಾಡದಿರಲಿ
ನಿನಗೆ 
ಬೆಳಗುತಿರು ಗೆಳೆಯ ನೀನು
ಕುಂದನದ ಹಾಗೆ 

ನೀ ನಡೆವಾಗ ದಾರಿಗಳು ಖುದ್ದು
ತೆರೆದುಕೊಳ್ಳಲಿ 
ವಿಜಯವು ನಿನಗಾಗಿರಲಿ ನಿನ್ನ
ಅಂಗನದ ಹಾಗೆ 

ನಿನ್ನ ಜನುಮ ದಿನಕ್ಕಾಗಿ ದುಆ
ಮಾಡುವನು ಸಿರಾಜ್
ಗಮ್ಯವು ನಿನಗೆ ಪ್ರೀತಿಸುತಿರಲಿ 
ಮಧುಬನದ ಹಾಗೆ
[12/31/2019, 7:21 PM] Wr Vani Bhandari: *ನಮಸ್ತೇ*
🙏🏻🙏🏻🙏🏻

         *ಪ್ರೇಮ ಅವರ ಭಾವಗೀತೆ*

        *ಮುರುಳಿಯ ಗಾನಕ್ಕೆ ಮನಸೋಲದವರುಂಟೆ* *ಮಾದವನ ಇಲವ ಗಾನಕ್ಕೆ ಮನಸೋತು ಕಾಯುವ ರಾಧೆಯ ಭಾವ*

             ಮಾದವನ ಕೊಳಲು ಗಾನದಿಂದ ಮನದ ತುಮುಲಗಳನ್ನು ಬೇರೆ ಮಾಡಿಕೊಳ್ಳಬೇಕಾದ ಕವಿಭಾವ ಚಿತ್ರಣ ಚೂಪರ್.

       ನಮ್ಮ ನಂಬಿಕೆಯೆಂಬ ಪ್ರೀತಿ ಅಚಲವಾಗಿರುವ ಮಾದವನೇಗೆ ಮೋಸ ಮಾಡಲು ಸಾಧ್ಯ.

ಅತಿಯಾದ ತುಡಿತ ಮಿಡಿತಗಳ ನಾದಲೋಲವು ಮೈಮನಗಳಲ್ಲಿ ತೇಲಿ,, ಮುಕುಂದನ ಗಾನದ ಗಾಳಿ ಸದಾ ಸುಳಿಯಲಿ ಎಂಬ ಮನದ ಭಾವ ಸೊಗಸಾಗಿದೆ.

ಜಗದಲಿ ಮನುಷ್ಯ ಪ್ರೀತಿಗಿಂತ ಅಲೌಕಿಕವಾದ ಪ್ರೇಮವೇ ಶಾಶ್ವತವಾದ ಪ್ರೇಮವಾಗಿದೆ .ಮಾನವ ಅಂತಹ ಪ್ರೀತಿಯ ಜೊತೆ ಸೇರಲು ಬಯಸಿದರೆ ಸದಾ ತನ್ಮಯ ಭಾವದೊಳಗೆ ಶಾಂತತೆಯಿಂದ ಸಂತೃಪ್ತರಾಗಬಹುದು.

*ಇನ್ನುಳಿದಂತೆ,,,,,*

👉ಚಂದದ ಭಾವದ ಹೂರಣ 

👉ಸರಳ ಪದಗಳ ನರ್ತನ.

👉ಗೇಯತೆಯೊಳಗೆ ಮೀಡಿದ ಭಾವತೀವ್ರತೆ.

👉ಕೊನೆಯ ಸಾಲು ಗಮನಿಸಿ *ಬರುವಿಗಾಗಿ* ಹೀಗೆ ಮಾಡಿ ಪಾ.
👉ಉಳಿದಂತೆ ಚಂದದ ಗೀತೆ, ಸರಳ ಸುಂದರ.


*ನಿತ್ಯ ಬರೆಯಿರಿ ಜಿ,,, ಸಾಹಿತ್ಯ ಯಾನಕ್ಕೆ ಶುಭವಾಗಲಿ ತಮಗೆ ಯಶಸ್ಸು ಸಿಗಲಿ*

*ಧನ್ಯವಾದಗಳೊಂದಿಗೆ*

                     *✍ವಾಣಿ ಭಂಡಾರಿ*
[12/31/2019, 8:16 PM] Wr Vani Bhandari: 🌹🌹🌹🌹🌹🌹🌹🌹🌹
*ಹನಿ ಹನಿ ಇಬ್ಬನಿ /ಚಿಂತಕರ ಚಾವಡಿ*
🎪🎪🎪🎪🎪🎪🎪🎪🎪
*ಇಂದಿನ ಫಲಿತಾಂಶ ಪಟ್ಟಿ*
🍒🍒🍒🍒🍒🍒🍒🍒🍒
*ದಿನಾಂಕ -31.12.19*
*ವಾರ -ಮಂಗಳವಾರ*
*ಅಡ್ಮಿನ್ -ವಾಣಿ ಭಂಡಾರಿ*
*ಪ್ರಕಾರ -ಭಾವಗೀತೆ*
*ಪದ- ಮೌನ*
🦚🦚🦚🦚🦚🦚🦚🦚🦚
*ಭಾವಗೀತೆಗಳ  ಎರಡನೇ ದಿನವಾದ  ಇಂದು ಹನಿಯಲ್ಲಿ ಸುಂದರ ಭಾವ ತುಂಬಿದ ಕವನಗಳು ಆಕರ್ಷಕವಾಗಿ ಮೂಡಿ ಬಂದಿವೆ. ಪ್ರತಿಯೊಂದು ಗೀತೆಯನ್ನು ಓದುವಾಗಲೂ ಮನದೊಳಗೆ ಸುಂದರವಾದ ಭಾವವೊಂದು ಚಿಮ್ಮಿ ನಸುನಕ್ಕಿತು*
🎧🎧🎧🎧🎧🎧🎧🎧🎧
*ಇಂದಿನ ಅತ್ಯುತ್ತಮ ಭಾವಗೀತೆ*
🏆 *ಮಂಗಳ ಕಂಬಿ*

*ಉತ್ತಮ ಗೀತೆಗಳು*
🥇 *ಇಂದಿರಾ*
🥈 *ಪ್ರೇಮ್ ಉದಯ್ ಕುಮಾರ್*
🥉 *ಶ್ರೀಮತಿ ಜೋಶಿ*
🌈🌈🌈🌈🌈🌈🌈🌈🌈
*ಸುಂದರವಾದ ಗೀತೆಗಳನ್ನು ವಿಮರ್ಶೆ ಮಾಡಿದ ಇಂದಿನ  ಅತ್ಯುತ್ತಮ ವಿಮರ್ಶಾ ರತ್ನ*
🧐 *ನಾಗಮ್ಮ*
*ಉತ್ತಮ ವಿಮರ್ಶಕರು*
🧐 *ದಿನೇಶ್*
🎊🎊🎊🎊🎊🎊🎊🎊🎊
*ವಿಜೇತರೆಲ್ಲರಿಗೂ ಅಭಿನಂದನೆಗಳು*
🌹🌹🌹🌹🌹🌹🌹🌹🌹
*ನಾಳೆ  🌷ಸ್ವಾಗತ 🌷  ಎಂಬ ಪದಕ್ಕೆ ಸುಂದರ ಭಾವಗೀತೆ ರಚಿಸಿ ಹನಿಗೆ ಹಾಕಿ*
✍✍✍✍✍✍✍✍✍
*ಚಾವಡಿಯಲ್ಲಿ ಅನಿಸಿಕೆ,  ವಿಮರ್ಶೆ ಬರೆಯಿರಿ*
☘☘☘☘☘☘☘☘☘
*ನಾಳೆಯ ಅಡ್ಮಿನ್ ಮಾಡರ್ನ್  ಕವಿತೆಗಳ ಸರದಾರ, ಗುಳಿಕೆನ್ನೆ ಚೆಲುವ, ಉತ್ತಮ ವಿಮರ್ಶಕರೂ ಆಗಿರುವ ಯತೀಶ್ ಕಾಮಾಜೆಯವರಿಗೆ  ಬಳಗದ ಪರವಾಗಿ ಪ್ರೀತಿಪೂರ್ವಕ ಸ್ವಾಗತ*
🌸🌸🌸🌸🌸🌸🌸🌸🌸
*ನಮಗೆಲ್ಲರಿಗೂ ಬರೆಯಲು  ಸುಂದರ ಅವಕಾಶ ಕಲ್ಪಿಸಿರುವ ಬಳಗದ ಚೇತನ ಖುಷಿ ಗುರುಗಳಿಗೆ ಧನ್ಯವಾದಗಳು*
👏👏👏👏👏👏👏👏👏👏👏

ವಿಮರ್ಶೆಗಳು-4


[1/2, 4:02 PM] Nybr Pramila: *ಇಂದು ನಾಳೆಗಳೊಡನೆ*

ಪ್ರೇಮ್ ಜಿ ಯವರ ಭಾವ ಗೀತೆ.... 

ಗೀತೆಯ ಆರಂಭವೆ ವಾವ್ ಎನ್ನುವ ಹಾಗಿದೆ. 

ನಾಳೆಗಳ ನಾಳೆಯಲಿ 
ಇಂದೇಕೆ ಬದುಕುವಿರಿ
ಇಂದಿನೈಸಿರಿ ಸೊಬಗ
ಇಂದೇ ಅನುಭವಿಸಿ....

ವಾವ್... ಎಂಥಹ  ಸೊಗಸಾದ ಸಾಲುಗಳು.

ನಾಳೆಗೆ  ನಾಳೆಗೆ  ಎಂದು ಎಲ್ಲವನ್ನು ಮಂಡೆ ಬಿಸಿ ಮಾಡಿಕೊಂಡು ದಿನ ಹಾಳು ಮಾಡಿ ಕೊಳ್ಳುವುದಕ್ಕಿಂತ 
ಇಂದು ಚಂದದಿಂದ ಬದುಕಿ ಬಿಡಬೇಕು.

ಇಂದು ಇಂದಿಗೆ ನಾಳೆ ನಾಳೆಗೆ 
ಇಂದು ನಮ್ಮದೇ ಚಿಂತೆ ಯಾತಕೆ..ಅಲ್ವ??? 

ತುಂಬಾ ಚಂದ ಬರೆದಿರುವಿರಿ ಜಿ 
ಶುಭವಾಗಲಿ, 

ನಿಮ್ಮ  ಸಾಹಿತ್ಯ ಯಾನ ಹೀಗೆ ಮುಂದುವರಿಯಲಿ🌹🌹🌹🌹
[1/8, 6:47 AM] @PREM@: ನನ್ನ ಹೆಮ್ಮೆ

ಹಚ್ಚ ಹಸುರಿನ ಸ್ವಚ್ಛ ಹಳ್ಳಿಯು
ನನ್ನದೆ ಆಗಿಹುದು
ಹಾಲನು ಹೊತ್ತ ಎತ್ತಿನ ಗಾಡಿಯು
ಪಟ್ಟಣಕೋಡಿಹುದು .

ಭತ್ತದ ಗದ್ದೆಯು ನಮಗಾಗೆಂದೂ
ಊಟವ ನೀಡಿತ್ತು!
ಮನೆಯಲಿ ದನಕರು ಹೋರಿಯೂ ಕೂಡಾ
ಸಂತಸದಲಿ ನಲಿದಿತ್ತು..

ಗದ್ದೆಯ ಉಳುಮೆಗೆ ನಾನೂ ಹೋಗುವೆ
ಅಪ್ಪನ ಹೆಗಲಲ್ಲಿ
ಹಾರುತಲಿರುವ ಚಿಟ್ಟೆಯ ಹಿಡಿವೆ
ಅಕ್ಕನ ಜೊತೆಯಲ್ಲಿ..

ಎತ್ತಿನ ಬಂಡಿಯು ಪೇಟೆಗೆ ಹೋಗಲು
ಮಾವನ ಕೈಹಿಡಿದು..
ಕೈಯಲಿ ತುಂಬಾ ಕಡಲೇಕಾಯಿ
ತಿನ್ನುತ ನಾ ನಡೆದು..


ಪ್ರತಿದಿನ ಕೆರೆಯಲಿ ಸ್ನಾನವ ಮಾಡಿ
ಉಲ್ಲಾಸ ಮನಕೆಲ್ಲಾ..
ನಮ್ಮಯ ಹಳ್ಳಿಯ ಅಂದವ ಕಂಡು
ಹೆಮ್ಮೆ ನಮಗೆಲ್ಲಾ..
@ಪ್ರೇಮ್@
08.01.2020
[1/8, 9:11 AM] Wr Siraj Ahmed Soraba: ಚಿತ್ರಕ್ಕೆ ಹೊಂದುವಂತೆ ಬರೆದಿರುವ ಸೊಗಸಾದ ಬರುಹ ತಮಗೆ ಅನಂತಾನಂತ ಅಭಿನಂದನೆಗಳು
[1/8, 9:26 AM] Wr Kumar Chalawadi: @ಪ್ರೇಮ್@ ರವರ ಹನಿ ಚೆನ್ನಾಗಿದೆ! ಸಮಯದ ಜೊತೆ ನಾವೆಲ್ಲ ನಾಗಾಲೋಟದಲ್ಲಿ ಓಡುತ್ತಲೇ ಇದ್ದೇವೆ! 
ತಾಳ್ಮೆ ಇಲ್ಲವೇ ಇಲ್ಲ! ಸರಿಯಾಗಿ ಸಾಗಿದರೆ ಬಾಳು ಸುಂದರ! ಸಂಯಮ ಮೀರಿದರೆ ಬದುಕೆಲ್ಲ ಬರೀ ಗೋಳು! ಚೆಂದದ ಹನಿ👌
[1/8, 10:18 AM] Wr Vinuta Kicchikeri: ಬೇಕು

ಓಡುತಿರುವ ಯುಗದಲಿ
ಸಮಯದೊಡನೆ ಓಡುವೆ
ಬೇಕಾಗಿದೆ ಸಂಯಮ ಸಹನೆ
ಎಲ್ಲಿಹುದು ಜನಕೆ ಕರುಣೆ?
@ಪ್ರೇಮ್@
08.01.2020


ಪ್ರೇಮ್ ಜೀ🙏

ನಿಜ ಜೀ ನಾವು ಎಲ್ಲರೂ ಓಡುತ್ತಿದ್ದಾರೆ ನಾವು ಓಡುತ್ತಿದ್ದೇವೆ.ಕೇಳಿದರೆ.
ಕುಳಿತು ಮಾತಾಡಲೂ ಸಮಯವಿಲ್ಲ ನಮ್ಮ ಕೈಯಲ್ಲಿ..
ಅದಕ್ಕಿಂತ ಹೆಚ್ಚಾಗಿ ತಾಳ್ಮೆಯಿಲ್ಲ ಮನದಲ್ಲಿ..ಯಾರೋ ಅಪಘಾತವಾಗಿ ಬಿದ್ದರೆ ಅವರನ್ನು ಉಪಚರಿಸುವದರ ಬದಲು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಆತುರ...
ಕರುಣೆಗೆ ಅರ್ಥವನ್ನೇ ಮರೆಯುತ್ತಿದ್ದೇವೆ...
ಅರ್ಥಪೂರ್ಣ ಹನಿ

ಧನ್ಯವಾದಗಳು💐
ವಿನುತಾ ಕಿಚ್ಚಿಕೇರಿ
[1/15, 11:56 AM] +91 70267 76576: ಪ್ರೇಮಾ ಜೀ ಅವರ
  ನಯನ
ಯತ್ರ ನಾರ್ಯಂತು ಪುಜ್ಯಂತೆ ರಮಂತೆ ತತ್ರ ತತ್ರ ದೇವತಾಃ ಎಂದು ಹೇಳುತ್ತೇವೆ ಆದರೆ ಬದುಕು ಬಲು ಬಿರುಸು ಹೆತ್ತ ಕರುಳೆ ಕಿತ್ತು ತಿನ್ನುವ ಹದ್ದಾಗುತ್ತದೆ.ಆಶ್ರಯದ ನೆಪದಲ್ಲೇ ಆಕ್ರಂದನ ಕೇಳುತ್ತದೆ.ಮುಗಿಯದ ಶೋಷಣೆಯಲ್ಲಿ ಅರಳುವ ಹೂ ಗಳೇಷ್ಟೋ, ಕಮರಿದ ಮೊಗ್ಗುಗಳೇಷ್ಟೋ. ಆ ನಯನಳ ಕಣ್ಣೀರಿಗೆ  ಕೊಣೆಯಲ್ಲಿ....
ಮಾರ್ಮಿಕ ಕಥೆ ಜೀ

ಕವಿ ಭಾವ ತಿಳಿಯುವಲ್ಲಿ ತಪ್ಪಾಗಿದ್ದರೆ ಒಂದು ಕ್ಷಮೆ ಇರಲಿ ಜೀ...

ಜಯಶ್ರೀ...
[1/15, 8:26 PM] +91 70267 76576: 🌸🌸🌸🌸🌸🌸🌸🌸🌸
*ಹನಿ ಹನಿ ಇಬ್ಬನಿ/ಚಿಂತಕರ ಚಾವಡಿ*
🦚🦚🦚🦚🦚🦚🦚🦚🦚
*ಇಂದಿನ ಫಲಿತಾಂಶ ಪಟ್ಟಿ*
🎪🎪🎪🎪🎪🎪🎪🎪🎪
*ವಾರ- ಬುಧವಾರ*
*ದಿನಾಂಕ -15.01.20*
*ಪ್ರಕಾರ -ನ್ಯಾನೋ ಕತೆ*
*ಅಡ್ಮಿನ್ -ಜಯಶ್ರೀ*
🐔🐔🐔🐔🐔🐔🐔🐔🐔
*ನ್ಯಾನೋ ಕಥೆಯ ಮೂರನೇ ದಿನ ಉತ್ತಮ ಕಥೆಗಳು ಹನಿಯಲ್ಲಿ ಮೂಡಿ ಬಂದಿವೆ. ಭಾಗವಹಿಸಿದ ಕವಿಗಳು ಎಲ್ಲರಿಗು ಧನ್ಯವಾದಗಳು*
🌹🌹🌹🌹🌹🌹🌹🌹🌹
*ಇಂದಿನ ಅತ್ಯುತ್ತಮ ನ್ಯಾನೋ*
🏆 *ಪ್ರೇಮ್ ಅವರ ನಯನ*
🍉🌹🍉🌹🍉🌹🍉🌹🍉
*ಉತ್ತಮ ನ್ಯಾನೋಗಳು*
🦚 *ಲಕ್ಷ್ಮಿಕಾಂತ್ ಅವರ  ಮೂಡನಂಬಿಕೆ*
 🦚 *ಜೋಶಿಯವರ ಪರಿಸ್ಥಿತಿ*
🦚 *ಭಾರತಿಯವರ ಹೆಣ್ಣು*
☘☘☘☘☘☘☘☘☘
*ಅತ್ಯುತ್ತಮ ವಿಮರ್ಶಕರು*
*🧐ಸಂತೋಷ ಪಿಶೆ*
💐💐💐💐💐💐💐💐
*ಭಾಗವಹಿಸಿದ ಎಲ್ಲರಿಗೂ, ಬಿಡುವು ಮಾಡಿಕೊಂಡು ಚಾವಡಿಗೆ ಬಂದವರಿಗೂ  ಧನ್ಯವಾದಗಳು*
🙏🏻🙏🏻🙏🏻🙏🏻🙏🏻🙏🏻🙏🏻🙏🏻
*ನಾಳೆ ನಿಮಗಿಷ್ಟದ ವಿಷಯದ ಕುರಿತು ಒಂದು ನ್ಯಾನೋ ಕತೆ ಬರೆದು ಹನಿಗೆ ಹಾಕಿ. ಚಾವಡಿಯಲ್ಲಿ ಅನಿಸಿಕೆ, ವಿಮರ್ಶೆ, ಮೆಚ್ಚುಗೆಗಳು ಇರಲಿ*
🐱🐱🐱🐱🐱🐱🐱🐱🐱
*ನಾಳೆಯ ಅಡ್ಮಿನ್, ಉತ್ತಮ ಕವಯತ್ರಿ ಪ್ರೇಮ್  ಇವರಿಗೆ ಬಳಗದ ಪರವಾಗಿ ಸ್ವಾಗತ*
🌹🌹🌹🌹🌹🌹🌹🌹🌹
*ಬಳಗದ ಚೇತನ ಖುಷಿ ಗುರುಗಳಿಗೆ ವಂದಿಸುತ್ತ*
👏👏👏👏👏👏👏👏👏
*🌚ಸರ್ವರಿಗೂ ಶುಭ ರಾತ್ರಿ*🌚
[1/16, 8:39 PM] Wr Sudha Telkar Mam: ಸೊಗಸಾದ ವಿಮರ್ಶೆಗೆ ಮನಃಪೂರ್ವಕ ಧನ್ಯವಾದಗಳು ಪ್ರೇಮ್. ‌ಬಹಳ ಜನ ರಿಟೈರ್ ಆದ ಮೇಲೂ ದುಡಿಯುವುದು ನಿಜ. ನಿನ್ನ ಅನಿಸಿಕೆಗೆ ನನ್ನ ಸಹಮತವಿದೆ. 
ಕೆಲವು ಸಲ ಮನೆಯಲ್ಲಿ ಪ್ರೋತ್ಸಾಹ ಇರದೆಯೋ , ಅನಾರೋಗ್ಯದಿಂದಲೋ ಎಲ್ಲರೂ ದುಡಿಯಲಾಗುವುದಿಲ್ಲ. ವಯಸ್ಸು ಹೆಚ್ಚಾಗಿದ್ದರೂ ಕೈಲಾಗುವುದಿಲ್ಲ. 
ಆದರೂ ತುಂಬಾ ಅವಸರದಲ್ಲಿ ಬರೆದೆ. ನನಗೇ ತೃಪ್ತಿಯೆನಿಸಲಿಲ್ಲ. 
ಇಂದಿನ ಅಡ್ಮಿನಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿರುವೆ. ಸಲಹೆ ,ಸೂಚನೆಗಳಿಗೆ ಸದಾ ಸ್ವಾಗತವಿದೆ ಪ್ರೇಮ್. ಅಭಿನಂದನೆಗಳು.🙏🙏💐💐😊
[1/18, 2:44 PM] Wr Veena Joshi Ankola: ಪ್ರೇಮ  ಅವರ  ಪ್ರಾಣ 

*   ಪ್ರಾಣ  ಅಮೂಲ್ಯ .
*  ಅದನ್ನು  ಚೆನ್ನಾಗಿ  ಪದಗಳ ಜೋಕಾಲಿಯಲಿ ಇಟ್ಟು  ಚೆನ್ನಾಗಿ 
ತೂಗಿದ್ದೀರಿ
*   ವಾಸ್ತವವಾಗಿ ಮನುಷ್ಯ ಪ್ರಾಣಿ
ಇತರ ಜೀವಿಗಳ  ಜೀವಕ್ಕೆ ಕವಡೆ
ಕಾಸಿನ ಕಿಮ್ಮತ್ತು ನೀಡಿದೆ ಮೆರೆಯುತ್ತಿದ್ದಾನೆ.

ಪ್ರಪಂಚ  ಸಮತೋಲನ  ಇಲ್ಲದಿರೆ ಉರುಳುವುದು ಸತ್ಯ

ಎಂಬುದನ್ನು  ಅರಿತರೆ ಒಳಿತು .

ಉತ್ತಮ  ಕಥೆ  ಓದಿಸಿದಿರಿ ಧನ್ಯವಾದಗಳು .
[1/20, 1:49 PM] +91 98866 11494: ನಮಸ್ತೆ ಪ್ರೇಮ ಮೇಡಂ🙏

ನಿಮ್ಮ ಕಾಮಿಡಿ ಕವನಗಳು ಸೂಪರ್ ಮೇಡಂ.....

ನಾಯಿಯ ಬಗ್ಗೆ ಅದ್ಭುತವಾಗಿ ಬರೆದಿದ್ದೀರಿ...... ನಾಯಿಯ ನಿಯತ್ತು, ಮನೆಯ ಕಾಯುವ ಪರಿ ಮತ್ತು ಅನುಮತಿ ಇಲ್ಲದೆ ಮನೆಗೆ ಬಂದರೆ ಅದು ಕೊಡುವ ಶಿಕ್ಷೆಯ ಬಗ್ಗೆ ಉತ್ತಮವಾಗಿ ಕವನದ ಮೂಲಕ ಬರೆದಿದ್ದೀರಿ ಮೇಡಂ.......ಶುಭವಾಗಲಿ.... ಧನ್ಯವಾದಗಳು ಮೇಡಂ.

ಕೆ ಎಸ್ ಗೀತಾವಿಜಯ ಕುಮಾರ್
[1/24, 7:11 PM] Wr Vani Bhandari: 🍄🐚🍄🐚🍄🐚🍄🐚🍄
*ಹನಿ ಹನಿ ಇಬ್ಬನಿ ಸಾಹಿತ್ಯ ಬಳಗ /ಚಿಂತಕರ ಚಾವಡಿ*
🌱🎍🌱🎍🌱🎍🌱🎍🌱
*ಇಂದಿನ ಫಲಿತಾಂಶ ವಿವರ*
❣❣❣❣❣❣❣❣❣
*ದಿನಾಂಕ-24.01.2020*
*ವಾರ ಶುಕ್ರವಾರ*
*ಸಾಹಿತ್ಯ ಪ್ರಕಾರ- ಕವನ*
*ಅಡ್ಮಿನ್-ನಾ ಕನ್ನಡಿಗ*
🔮🔮🔮🔮🔮🔮🔮🔮🔮
 *ಬೆಡಗು  ಪದವನ್ನು ಬಳಸಿ ಬರೆದ ಎಲ್ಲಾ ಕವನಗಳು ಸುಂದರ.ಭಾಗವಹಿಸಿದ ಕವಿ ಮನಸುಗಳಿಗೆ ಅಭಿನಂದನೆಗಳು*
🦜🦢🦜🦢🦜🦢🦜🦢🦜
*ಇಂದಿನ ಅತ್ಯುತ್ತಮ ಕವನ ಬರೆದವರು*
🦚 *ಕುಮಾರ ಚಲವಾದಿ*

*ಉತ್ತಮ ಕವನಗಳು*
🥇 *ಮೊಗೇರಿ ಶೇಖರ*
🥈 *ಪ್ರೇಮ್..*
🥉 *ಶಿವಪ್ರಸಾದ್ ಆರಾಧ್ಯ*
🌳🦔🌳🦔🌳🦔🌳🦔🌳
*ಇಂದಿನ ವಿಮರ್ಶಕರು*
🧐 *ಮಂಜುಳ*
🧐 *ಸಂತೋಷ ಪಿಶೆ*
🔮🔮🔮🔮🔮🔮🔮🔮🔮
*ವಿಜೇತರು ಮತ್ತು ವಿಮರ್ಶಕರಿಗೆ ಅಭಿನಂದನೆಗಳು*
☘🌹☘🌹☘🌹☘🌹☘
*ನಾಳೆ*
*🔥ಬೆಂಕಿ🔥* 
*ಎಂಬ ಪದ ಬಳಸಿ ಒಂದು ಕವನ ಬರೆಯಿರಿ, ಚಾವಡಿಯಲ್ಲಿ ಅನಿಸಿಕೆ, ಮೆಚ್ಚುಗೆ, ವಿಮರ್ಶೆಗಳು  ಇರಲಿ*
✍✍✍✍✍✍✍✍✍
*ನಾಳೆಯ ಅಡ್ಮಿನ್ ಜಯಲಕ್ಷ್ಮಿ  ಇವರಿಗೆ ಬಳಗದ ಪರವಾಗಿ ಆತ್ಮೀಯ ಸ್ವಾಗತ*
🌺🌺🌺🌺🌺🌺🌺🌺🌺
*ಬಳಗದ ಸ್ಫೂರ್ತಿ ಚೇತನ ಖುಷಿ ಗುರುಗಳಿಗೆ ವಂದಿಸುತ್ತಾ*
👏👏👏👏👏👏👏👏👏
*🌚ಸರ್ವರಿಗೂ ಶುಭ ರಾತ್ರಿ🌚*
[1/28, 6:51 AM] Wr Shivaprasad Aradhya: ಪ್ರೇಮರವರ ಕವನ ನೀತಿ ಭೋದಕವಾಗಿದ್ದು ವಿಜ್ಞಾನ ಎಷ್ಟೇ ಬೆಳೆದರೂ ಅಹಂಕಾರ ವೂ ಅಷ್ಟೇ ಬೆಳೆಯಿತು. ಪ್ರಕೃತಿಯ ಮುಂದೆ ಅವನಾಟವೇನೂ ನಡೆಯದು.ಎಂಬುದು ಈ ಕವನದಿ ವ್ಯಕ್ತವಾಗಿದೆ.
ಬೆಳ್ಳಂಬೆಳಗ್ಗಿನ ಕವನ  ಬೇಗನೆ ಬರೆದು ಹಾಕುವ ಉಸಾಬರಿಯಲ್ಲಿ ಬರೆದಂತೆ ಕಂಡರೂ ನೀತಿ ಭೋದಕವಾಗಿದೆ. ಪ್ರಾಸ ಬರಲ್ಲಿಲ್ಲವಾ ಚಿಂತಿಸಬೇಡಿ ಮುಕ್ತವಾಗಿ ಗಪದ್ಯ ಬರೆಯಿರಿ.ಪ್ರಾಸಮಯವಾಗಿ ಬರೆಯುವ ಯತ್ನ ನಡೆಯಿತು ತಮ್ಮದು ಇರಲಿ ಹೀಗೇ ಬರೆಯುತ್ತಿರಿ ಶುಭವಾಗಲಿ 


ಶಿವಪ್ರಸಾದ್ ಆರಾಧ್ಯ
[1/28, 10:00 AM] Wr Nagamma: ಪ್ರೇಮ್ ..ಜೀ ನಮಸ್ತೆ🙏🏼.

ನೀತಿ ಕಲಿ...

ವಾಸ್ತವದ..ಅತಿಯಾಸೆಗಾಗಿ ಆಡಂಬರದ... ಬದುಕಿಗಾಗಿ..ಮಾನವ ಮಾಡುವ, ಯೋಚಿಸುವ , ಯೋಜಿಸು..ವ..ಆಯಾಮಗಳನ್ನು ...ಬಹಳ ಪ್ರಬುದ್ಧ..ಪದಗಳಲ್ಲಿ...ಕವನದೊಳಗೆ ಹಿಡಿದಿಟ್ಟ..ಪರಿಯದು..ಸೊಗಸಾಗಿದೆ...

ಧನ್ಯವಾದಗಳು.

ಎಸ್.ನಾಗಮ್ಮ🌹
[1/29, 7:21 PM] Wr Shivaprasad Aradhya: ಧರೆಯ ಮೊರೆ ನನಗೂ ಕೇಳಿತು ಪ್ರೇಮ್ ಸದಾ ಸಮಾಜಮುಖಿಯಾಗೇ ಬಡಿದೆಬ್ಬುಸುವ ಅರಿವಿನ ಕವನಗಳ ಮಾತೆ ತಾವು ಚೆನ್ನಾಗಿ ಬರೆದಿದ್ದೀರಿ ಅಭಿನಂದನೆಗಳು

ಶಿವಪ್ರಸಾದ್ ಆರಾಧ್ಯ
[1/30, 8:17 AM] @PREM@: ಅಮವಾಸ್ಯೆ ಬೇಡ..

ಚಂದದ ಚಂದಿರನೆ ನೀನೇಕೆ ನನಗಿಂದು ಅಮವಾಸ್ಯೆಯ ನೀಡಿದೆ?
ನನ್ನ ಕಾಣಲು ಬರದೆ ಅಮವಾಸ್ಯೆಯ ಕತ್ತಲನು ತುಂಬಿದೆ!

ಚುಕ್ಕಿ -ತಾರೆಗಳು ಮಿನುಗುತಿಹವು ತಮ್ಮದೇ ದರ್ಪದಲಿ!
ಆದರೇನು, ಇಳೆಗೆ ಕಳೆ ತರಲು ನೀನೇ ಬೇಕಲ್ಲವೇ ಇರುಳಲಿ?

ಹಗಲು ರವಿ ಕೊಡುವ ಬಿಳುಪು ಕಿರಣಗಳ ಕಾಂತಿ ಒಂದು ಬದಿಗೆ,
ಮತ್ತೆ ನನ್ನ ಬೇರೆ ಬದಿಯನೂ ತಣಿಸಬೇಕಲ್ಲವೇ ನೀತಿಯಲಿ ಸರ್ವರಿಗೆ!

ನೀನೇಕೆ ಬರದಾದೆ ಆದಿತ್ಯನ ಕಾಂತಿಯನೇ ಹೊತ್ತು ತಂಪಾಗಿ?
ತಿರೆ ಕಾದಿಹಳು ಬಾಳ ನಿಶೆಯ ಬೆಳಕಿಗಾಗಿ!

ಇಂದ್ರನ ರಥವ ದತ್ತು ಪಡೆದಾದರೂ ನೀ ಬರಬೇಕಿತ್ತು!
ಅಮವಾಸ್ಯೆಯೆಂಬ ಪದವ ನಿನ್ನ ಶಬ್ದಕೋಶದಿ ಅಳಿಸಿ ಹಾಕಬೇಕಿತ್ತು!

ನಿನ್ನಿರವೆ ನನಗೆ ಖುಷಿ ತಿಳಿಯದೇ ಸೋಮನೇ?
ನೀ ಬರಲು ಹಾಲ್ಚೆಲ್ಲಿದ ಬೆಳದಿಂಗಳು, ಮರೆತೆಯಾ ಮಾಮನೇ?

ಚಂದ್ರೋದಯದ ಗಳಿಗೆಗೆ ತಡಮಾಡದಿರು ಎಂದೆಂದೂ..
ಧರಣಿ ಕಾದು ಬೆಂಡಾಗಿಹಳು ತಿಳಿದುಕೋ ಮುಂದೂ..

ವಿರಹದುರಿಯಲಿ ಬೇಯುವೆ ನೀನಿರದ ಕ್ಷಣಗಳಲಿ
ಗಾಢಾಂಧಕಾರದಲಿ ನೆನೆಯುವೆ ನೀ ಬರದ ಕರಾಳ ಕಪ್ಪಿನಲಿ..

ಬೇಸರಿಸದಿರು ಧರಿತ್ರಿ ಮನವ ಅಮವಾಸ್ಯೆನು ತಂದು,
ಬೇಡುತಿಹೆ ಬೆಳಕ ನೀಡು ನೀನು ಮನಕೆ  ವರುಷದಲಿ ಪ್ರತಿದಿನವೂ ಬಂದು!
@ಪ್ರೇಮ್@
30.01.2020
[1/30, 2:29 PM] Wr Shakunthala Dalera: *ಪ್ರೇಮ್ ರವರ  " ಅಮವಾಸೆ ಬೇಡ" ಕವನದಲ್ಲಿ...*
  
ಅಮವಾಸೆ ಕಳೆದ ನಂತರವೇ ಹುಣ್ಣಿಮೆ... ಕಾಯಬೇಕು ಅಷ್ಟೇ. ವಿರಹ ವೇದನೆಯನ್ನು ಅಮವಾಸೆಗೆ ಹೋಲಿಸಿ ಅರ್ಪಿಸಿದ ಭಾವನಾತ್ಮಕ ಪರಿಗೆ ಶರಣು ಮೇಡಂ...ಒಳ್ಳೆಯ ಕವನ ಓದಿಸಿದ್ದಕ್ಕೆ ಧನ್ಯವಾದಗಳು 👌👌👌👌🙏🙏🙏🙏
[2/10, 5:40 PM] Wr Mogeri Shekhar Devadiga: *ರುಬಾಯಿ*

ಮಾಡಬೇಕಯ್ಯ ಯೋಗ, ವ್ಯಾಯಾಮ
ರೋಗರುಜಿನಗಳಿಗೆ ಅದು ಪಂಗನಾಮ
ಚಾಟಿ ಬೀಸಿದರಿಲ್ಲಿ ಕವಿ *ಲಿಂಗರಾಜರು*
ಪರಾವಲಂಬಿ ಬದುಕಿಗೆ ಹಾಕಿ ವಿರಾಮ

*ಮೊಗೇರಿ ಶೇಖರ ದೇವಾಡಿಗ*
[2/11, 7:31 AM] Wr Shivaprasad Aradhya: ಈ ದಿನದ ಮೊದಲಕವನ ಆಳವಾಗಿದೆ. ಅದು ಭೂಮಿಯೊಳಗೇ ಹೋಗಿದೆ.ಒಂದು ಮೊದಲ ಕವನವೇ ಅತ್ಯುತ್ತಮವಾಗಿ ಹೊರಹೊಮ್ಮುತಿರುವ ಬಳಗದ ಹಾಗೂ ಕವಿಯ ಹೆಗ್ಗಳಿಕೆ ಇದಾಗಿದೆ.

ತೆರೆಮರೆಯ ಸಾಧನೆ ನಿಜಕ್ಕೂ ಮನೆಯ ತಾಯಿಯದು.ಆಕೆ ಒಳಗೆ ನನಗಾಗಿ ನಮ್ಮ ಕುಟುಂಬಕ್ಕೆ ಚಾಕರಿ ಮಾಡುತಾ ನನ್ನನ್ನು ಚಿಂತಕರ ಚಾವಡಿಗೆ ಬಿಟ್ಟಿದ್ದಾಳೆ.ಆದರೆ ನಿಜವಾದ ಚಿಂತಕಿ ನನ್ನವಳು.ನಾನು ಬರಿಯ ಸೊನ್ನೆ

ತಾಯಿ ಬೇರಂತೆ ಕುಟುಂಬದ ಜೀವಾಳ ಒಲವ ಜಲ ಅವಳು.ಹುಡುಕುಡುಕಿ ಒಲವುಗಳ ಸಾಗಿ ನೆಲೆಯ ಭದ್ರ ಪಡಿಸುವಾಕಿ.ಸಂಸಾರದ ಗಿಡ ಮರವಾಗಿ ನೆಲೆಯಾಗಲು ತಾಯಿ ತಾಯಿ ಬೇರಾಗಿ ಹೊರಜಗದ ಮರೆಯಲೇ ದುಡಿಯುವವಳು.

ಅಪ್ಪ ಆಕಾಶ ಅಮ್ಮ ಭೂಮಿ.ಅಪ್ಪನ ತಲೆಯೆತ್ತಿ ಓಡಾಡುವ ಘನತೆಯ ಹಿಂದೆ ಅಮ್ಮನ ಆಳವಾದ ತಪವಿದೆ.ಮನೋಜ್ಞವಾಗಿ ಬರೆದಿರುವ ತಾಯಿಗೆ ಶರಣು ಶುಭೋದಯ ಶುಭವಾಗಲಿ

 ಶಿವಪ್ರಸಾದ್ ಆರಾಧ್ಯ
[2/13, 1:46 PM] Wr Vinuta Kicchikeri: ಪ್ರೇಮ್ ಮೇಡಮ್ ಜೀ ನಮಸ್ತೇ

👉🏻 ರಾಗ ಬಧ್ಧವಾಗಿ ಬರೆದ ಕವನ ಚಂದ

👉🏻 ಇಂದಿನ ಪದ ಬಳಕೆ ಮಾಡಿ ಮೂಡಿಬಂದಿದೆ

👉🏻 ಸರ್ಕಾರಿ ಶಾಲೆಯಲ್ಲಿ ಏನು ಕಲಿಸುತ್ತಾರೆ ಎಂಬುದಕ್ಕೆ ಉತ್ತರವಿದೆ

👉🏻 ಪಾಲಕರು ಎಷ್ಟು ಕಷ್ಟ ಪಟ್ಟು ನಮ್ಮನ್ನು ಓದಲಿ ಎಂಬ ಉದ್ದೇಶ, ಶಿಕ್ಷಕರು ನಮಗೆ ಒಳ್ಳೆಯ ಪಾಠ,ಕಲಿಕೆ,ನೀತಿ ಕಥೆಗಳು, ನಾವು ನಮ್ಮ ಸ್ನೇಹಿತರ ಜೊತೆ ಹೇಗಿರಬೇಕೆಂಬುದನ್ನು ಶಾಲೆ ಕಲಿಸಿಕೊಡುತ್ತದೆ..ಪದವಿ ಪಡೆದರು ಸಾಲದು ಅಮ್ಮನ ಜೀವನ ಪಾಠವೂ ಮುಖ್ಯ. ರುಚಿ,ಶುಚಿಯ ಬಗ್ಗೆ ಒಂದಷ್ಟು ತಿಳುವಳಿಕೆ ನೀಡುವದು ಅಮ್ಮ ಎಂಬುದನ್ನು ನಿಮ್ಮ ಕವನದಲ್ಲಿ ತಿಳಿಸಿದ್ದೀರಿ

👉🏻ಕೊನೆಯ ಚರಣ ಹಿಡಿಸಿತು

ಧನ್ಯವಾದಗಳು💐
ವಿನುತಾ ಕಿಚ್ಚಿಕೇರಿ
[2/15, 2:27 PM] Wr Vara Lakshmi Amma: ಪ್ರೇಮ ಅವರ ಶಿವಸ್ತುತಿ

 ಸಾಮಾನ್ಯವಾಗಿ   ನಾವು  ಪ್ರಾರ್ಥನೆ ಮಾಡುವಾಗ  ಅದು ಕೊಡು,  ಇದು ಕೊಡು,  ಎಂದು ಬೇಡಿಕೆಗಳ ಪಟ್ಟಿ ಇಡುತ್ತಾ ಹೋಗುತ್ತೇವೆ,  ಆದರೆ ಕವಯತ್ರಿ  ಪ್ರೇಮ ಅವರು ನಮ್ಮಲ್ಲಿರುವ ಮಾತ್ಸರ್ಯ,  ದ್ವೇಷ ಅವುಗಳನ್ನು  ನೀಗಿಸಿ ಎಲ್ಲರಲ್ಲಿ  ಪ್ರೇಮಭಾವವನ್ನು ತುಂಬಿ,  ಭಕ್ತಿಮಾರ್ಗದಲ್ಲಿ ನಡೆಯುವ ಶಕ್ತಿ ಕೊಡು ಎಂದು ಶಿವನನ್ನು  ಸ್ತುತಿಸಿದ್ದಾರೆ.   ಭಕ್ತಿಯ ಮಾರ್ಗದಲ್ಲಿ  ನಡೆಯುತ್ತಾ  ಜೀವನದ ಉತ್ತುಂಗಕ್ಕೇರುವ ಬಯಕೆ ವ್ಯಕ್ತಪಡಿಸಿದ್ದಾರೆ.  ಸದುದ್ದೇಶದ  ಕವನ 🙏
[2/15, 6:02 PM] Wr Nagamma: ಪ್ರೇಮ್ ‌ಜೀ🙏🏼

ನಿಮ್ಮ 
ಶಿವಸ್ತುತಿಗೆ..

ತಲೆ‌ದೂಗಿದೆ..

ನನ್ನ ‌ಗುಣಗಳ ‌ಉತ್ತುಂಗಕ್ಕೇರಿಸು..ವಾವ್ ಸೂಪರ್..

ಚೆಂದದ ‌ದೈವ ಸ್ಮರಣೆ
.
.ಭಕ್ತಿ ಸ್ಪುರಣ..!!

ತಮ್ಮ..ಸುಂದರ ವಾದ‌ಶಿವಸ್ತುತಿಗಾಗಿ..

ಧನ್ಯವಾದಗಳು.

ಎಸ್. ನಾಗಮ್ಮ🌹
[2/17, 11:47 AM] +91 99641 78536: 💐🙏 ಪ್ರೇಮ್ ಸರ 🌹

ಬದುಕು ಬಂಗಾರ🌹

🌹ಸುಂದರವಾದ ಕವನ ರಚನಿ ಭಾವನೆಗಳಿಂದ ತುಂಬಿದ, ಮನಸಿನ ಭಾವ ಬಂಧನ ವಿಶೇಷ ಸ್ನೇಹ ಮಿಲನಗಳ ಹೇಳುವ ಕವನ 👌👌👌


ಅಂದದ ಕವನ 👌👌👌

ಬಾಬಣ್ಣ. 
(ಪ್ರಶಾಂತ ಆರ ದೈವಜ್ಞ)
ಕರೇಕ್ಯಾತನಹಳ್ಳಿ.
[2/18, 8:11 AM] Wr Vinuta Kicchikeri: ಪ್ರೇಮ್ ಮೇಡಮ್ ಜೀ🙏

👉🏻ಕವನದ ಆಶಯ ಸೂಪರ್

👉🏻 ಬದುಕಲ್ಲಿ ಏನೇನು ನೋಡಬಹುದು...ಒಂದು ಮುಂಜಾನೆಯಿಂದ ಸಂಜೆಯವರೆಗೆ ಎಂಬುದನ್ನು ಬಹಳ ಚೆನ್ನಾಗಿ ಬರೆದಿರುವಿರಿ.

👉🏻ಕೊನೆಯ ಚರಣ ಮನಸ್ಸಿಗೆ ಹಿಡಿಸಿತು

👉🏻 ಆದರೆ ಕಣ್ಣೀರು ಪದ ನನಗೆ ಕಾಣಲಿಲ್ಲ(ಕ್ಷಮಿಸಿ)
ಕೊನೆಯ ಸಾಲಿನಲ್ಲಿ ಇತರರಿಗೆ ಆಗಬೇಕಿತ್ತೇನೋ..‌ಲಗುಬಗೆಯಿಂದ ಬರೆದಿರುವಿರಿ ಅನಿಸಿತು


ಧನ್ಯವಾದಗಳು👏💐
ವಿನುತಾ ಕಿಚ್ಚಿಕೇರಿ
[2/18, 10:33 AM] +91 89701 82067: ಪ್ರೇಮ್ರವರೆ ಯೋಚನಾಲಹರಿಯನ್ನು ತುಂಬಾ ಆಳಕ್ಕಿಳಿಸುವ ಕವನ."ಸಂತನಾದರೂ ಮನದಿ ದುಃಖವಿರುವ ಹಾಗೆ" ಎಷ್ಟು ಆಳವಾದ ಯೋಚನೆ!!ವಾಹ್...ಕೆಲವರಿಗೆ ಹಾಗೆ ಕಷ್ಟಗಳು ಬಂದರೆ ಬರುತ್ತಲೇ ಇರುತ್ತವೆ.ಆದರೆ ಕರಿಮೋಡವೂ ಕಳೆದು ಮಳೆಯಾಗುತ್ತದೆ ಕಾಯಬೇಕಷ್ಟೇ.ಮೂರನೆಯ ಚಾರಣ ಓದುತ್ತಾ ಜಯಂತ್ ಕಾಯ್ಕಿಣಿಯವರ "ಬೊಗಸೆಯಲ್ಲಿ ಮಳೆ" ಕೃತಿ ನೆನಪಾಯಿತು.ಗಡಿ ಅಂದರೆ ಏನಪ್ಪಾ ಎಂದು ಪ್ರಶ್ನಿಸುವ ಸೈನಿಕರಿಗೆಲ್ಲ ಆಟಿಕೆಯ ಪಿಸ್ತೂಲ್ ನೀಡುವ ಮೂಲಕ ಎಲ್ಲರನ್ನೂ ನಗಿಸಬಾರದೇಕೆ ಎಂದು ಮುಗ್ಧವಾಗಿ ಪ್ರಶ್ನಿಸುವ ಮಗು ದೇಶದೇಶಗಳ ನಡುವಿನ ವೈಮನಸ್ಯದ ವಿಷಯ ಬಂದಾಗ ಪ್ರತೀ ಬಾರಿಗೂ ನೆನಪಾಗುತ್ತದೆ ನನಗೆ.ತಾ ಬದುಕಿ ಇತರರಿಗೂ ಅವಕಾಶ ಕೊಡಬೇಕು ಎನ್ನುವ ಕವಿ ಭಾವ ಇಷ್ಟವಾಗುತ್ತದೆ.🙏🏻

ನಿಶ್ಮಿತಾ ಪಳ್ಳಿ
[2/18, 5:13 PM] Tr Ramesh: ಪ್ರೇಮ್ ಅವರ ಕವನ *ಜೀ-ವನ ಕ-ವನ* ಚೆನ್ನಾಗಿದೆ.  ಮೂರು ದಿನದ ಬಾಳು.. ಪ್ರೀತಿಯಿಂದ ಬಾಳುವುದೊಂದನ್ನು ಬಿಟ್ಟು ಮತ್ತೆಲ್ಲ ಮಾಡುತ್ತಿದ್ದೇವೆ.. ದಿನವೂ ಸಂತಸವಾಗಿ ಬಾಳುವ ಎಂಬುದನ್ನು ಬಹಳ ಅರ್ಥವತ್ತಾಗಿ ತಿಳಿಸಿದ ಕವನ..

ಧನ್ಯವಾದಗಳು ತಮಗೆ 🙏