ಶುಕ್ರವಾರ, ಜನವರಿ 1, 2021

ವಿಮರ್ಶೆಗಳು-2



[3/13, 9:11 AM] Wr Mallesh G Raj: ಪ್ರೇಮ್ ಗುರುಗಳ ಕವನ ಜಲಸಾಗರದಲ್ಲಿ ಏರೀಳಿಯುವ ಅಲೆಗಳ ತೆರನಲಿ ಪ್ರಶ್ನಾಮಾಲಿಕೆಯಂತೆ ಮೂಡಿದೆ.ಯಾರಿದು ಅವರನ್ನೇ ಪ್ರಾಮುಖ್ಯೀಕರಿಸಿದ್ದರೆ ಕವನದ ಸ್ತರ ಇನ್ನೂ ಚೆಂದಿರುತ್ತಿತ್ತೇ ಯೋಚಿಸಿ,ಬುವಿ ಪದ ಗಮನ ಸೆಳೆದದ್ದು  ಒಟ್ಟಾರೆ ಉತ್ತಮ ಪ್ರಯತ್ನ ಶುಭೋದಯದ ಮೊದಲ ಕವನ 👍🏻 ಕವಿ ಭಾವ ಚ್ಯುತಿಯಾಗಿರಲು ಕ್ಷಮೆ ಇರಲಿ.
[3/14, 1:50 PM] Wr Varalaxmi K N: ನಮಸ್ತೆ ಪ್ರೇಮಾ ಮೇಡಮ್. 
  ಮಳೆರಾಯ ಪ್ರೇಮಾ ಮೇಡಮ್    ಎಷ್ಟು ಚೆಂದದಿ ಕರೆಯುತ್ತಾ ಇರುವರು .ದಯಮಾಡಿ ಬಂದುಬಿಡಿ ಮಳೆರಾಯ.
ಮಳೆರಾಯನಿಗಾಗಿ  ಮನುಜ ಮತ್ತು ಪಶುಪಕ್ಷಿಗಳು ಪರಿತಪಿಸುವ ಕವನಕೆ ನಮನಗಳು ಮೇಡಮ್. 
ತಪ್ಪಿದ್ದರೆ ತಿದ್ದಿ 
ಧನ್ಯವಾದಗಳು ಮೇಡಮ್ 
ಕೆ ಎನ್ ವರಲಕ್ಷ್ಮಿ
[3/14, 3:22 PM] Wr Mallesh G Raj: ಪ್ರೇಮ್ ಮೇಡಂ ನಿಮ್ಮಲ್ಲಿ ಇನ್ನೂ ಮಳೆಯಾಗಿಲ್ಲವೇ?  ನೀವು ಕವನ ಬರೆದ ಮೇಲೂ ಆಗಿಲ್ಲ ಅಂದರೆ,  ಆಗಿರಲೇಬೇಕು.ಪ್ರಾರ್ಥನೆಯ ಮೊರೆ  ವರುಣನಿಗಾಗಲೇ ಮುಟ್ಟಿರಬಹುದು 🙏
[3/16, 2:09 PM] +91 84313 19753: ಪ್ರೇಮ ಮೇಡಂ 

ನಿಮ್ಮ ಕವನ ತುಂಬಾ ಚನ್ನಾಗಿ ಮೂಡಿ ಬಂದಿದೆ 

ಉತ್ತಮ ಸಂದೇಶ ಹೊತ್ತು ತಂದಿದೆ 

ಕವನದೊಳಗಿನ 
ಕೊನೆಯ ಪ್ಯಾರಾ ತುಂಬಾ ಇಷ್ಟವಾಯ್ತು. 

ಧನ್ಯವಾದಗಳು
[3/17, 1:30 PM] Wr Manjula B K: ಪ್ರೇಮ್ ಅವರ ಹಂಚಿ ತಿನ್ನೋಣ 

ಮನುಷ್ಯನ ಬದುಕು ಮೂರು ದಿನದ ಸಂತೆ. ಅದರಲ್ಲಿ ಹಂಚಿ ತಿನ್ನುವುದುರಲ್ಲಿ ಇರುವುದು ಸುಖ ಎನ್ನುವ ಸಂದೇಶ ಉತ್ತಮ. 

ಪಾಲಿಗೆ ಬಂದಿರುವುದು ಪಂಚಾಮೃತ ಎನ್ನುವ ಹಾಗೆ ನಮಗೆ ಸಿಕ್ಕ ಅನ್ನದ ಪಾಲಿನಲ್ಲಿ ನಾವು ಸುಖ ಕಾಣಬೇಕು. 

ಮಂಜುಳ
[3/18, 8:04 AM] +91 84313 19753: ಪ್ರೇಮ ಮೇಡಂ 
ಅವರ ಮುಸ್ಸಂಜೆ 

ಚನ್ನಾಗಿ ಮೂಡಿ ಬಂದಿದೆ 
ಯಾರಿಗೂ ಯಾರುಂಟು ಎರವಿನ ಸಂಸಾರಗೊಳಗೆ ಎಂಬಂತೆ ಮುಗ್ದ ಮನಸ್ಸುಗಳ ಒಳಲಾದದೊಳಗೆ ಅಡಗಿರುವ ನೋವು ನಲಿವಿನ ಕಥನವಾಗಿದೆ.  

ಧನ್ಯವಾದಗಳು 
ಬಸವರಾಜ ಲಿಂಗಸ್ಗೂರು. 
(ಕವಿಭಾವಕ್ಕೆ ದಕ್ಕೆಯಾದಲ್ಲಿ ಕ್ಷಮೆ ಇರಲಿ)
[3/18, 10:30 AM] +91 99724 97039: 🙏🏻ಪ್ರೇಮ್ ಮೇಡಂ 
ತಾವು ಬದುಕಿನ ಇಳಿ ವಯಸ್ಸನ್ನು ಮುಸ್ಸಂಜೆಗೆ ಹೋಲಿಸಿ, ಈ ಸಂದರ್ಭದಲ್ಲಿ ಸತಿಗೆ ಪತಿ ಪತಿಗೆ ಸತಿ ಆಸರೆ ಎಂಬುದನ್ನು ಚೆನ್ನಾಗಿ ಹೇಳಿದ್ದಾರೆ  ಧನ್ಯವಾದಗಳು ಮೇಡಂ
[3/18, 3:04 PM] Wr Deepa Sadanand: ನಮಸ್ತೇ ಪ್ರೇಮ ಮೇಡಮ್... 

ಬಾಳ ಸಂಜೆಯಲಿ , ನನಗೆ ನೀನು, ನಿನಗೆ ನಾನೆನುತ.. ನೆಮ್ಮದಿಯ ಬದುಕನ್ನು ಜೀವಿಸೋಣ, 
ಮಕ್ಕಳ ಲಾಲನೆ ಪಾಲನೆ ಪೋಷಣೆಗಳೆಲ್ಲಾ ನಮ್ಮ ಕರ್ತವ್ಯ ಜವಾಬ್ದಾರಿಯೆಂದು ಮುಗಿಸಿಯಾಗಿದೆ.. 
ನಮ್ಮ ಈ ಜೀವನದಲ್ಲಿ 
ಈ ಸಂಜೆಯನ್ನು ಯಾರಿಗೂ ಹೊರೆಯಾಗದೇ ಸುಂದರವಾಗಿ ಕಳೆಯೋಣ ಎಂದ ಕವನ ಸುಂದರವಾಗಿ ಮೂಡಿಬಂದಿದೆ.. 
ಧನ್ಯವಾದಗಳು 

ದೀಪಾಸದಾನಂದ..
[3/19, 6:39 AM] Wr Vani Bhandari: ಪ್ರೇಮ್ ಜಿ 
ನಿಮ್ಮ ಕವನ ಸುಂದರ ಅರ್ಥಪೂರ್ಣತೆಯಲ್ಲಿ ಕವನ ಒಡಮೂಡಿದೆ 
 ಚೂಪರ್ 🌹🌹ಮೇಡಂ.
☕☕
[3/19, 11:57 AM] Wr Manjula B K: ಪ್ರೇಮ್ ಅವರ ಅಲ್ಲೋಲ ಕಲ್ಲೋಲ 

ಪ್ರಕೃತಿಯ ನಾಶದಿಂದ ಪ್ರಾಣಿಗಳ ಜೀವನ ನಿಜಕ್ಕೂ ಅಲ್ಲೋಲ ಕಲ್ಲೋಲವೇ ಸರಿ. 

ನಾಡ ಮಾಡಲು ಹೊರಟಿಹನು ಮನುಜ ಪ್ರಾಣಿಗಳ ಜೀವನವನ್ನೇ ತನ್ನ ಅಳಿವಿಗೂ ಅದುವೇ ಕಾರಣ ಎಂಬುದೇ ಕಾರಣ ಎಂದು ಮರೆತ. 

ಮಂಜುಳ. ಬಿ. ಕೆ
[3/20, 12:06 PM] Wr Veena Joshi Ankola: ಕವನ _೧

ಇಂದಿನ ಮೊದಲ ಕವನ ಪ್ರೇಮ್ ಅವರ ನೆಮ್ಮದಿ .

ಮೊದಲ ಮೂರು ಪ್ಯಾರಾಗಳು
ಜೀವಿಯೊಂದು ಪುಣ್ಯಫಲದಿಂದ ಭೂಮಿಯ ಮೇಲೆ ಜನಿಸಿದಾಗ ',
ಅದು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ತುಂಬಾ ಭಾವಪೂರ್ಣವಾಗಿ ವಿವರಿದ್ದಾರೆ.ಪ್ರೀತಿ ಪ್ರೇಮದಿಂದ ಹಂಚಿಕೊಂಡು ಬದುಕುವುದರ ಮಹತ್ವವನ್ನು ಮನೋಜ್ಞವಾಗಿ ಬಿಂಬಿಸಿದ ಪರಿ ಚಂದ .
ಮುಂದೆ ಬರೆಯುತ್ತಾ ಕವಿಗೆ ಕೋ ವೈರಾಗ್ಯ ಭಾವ ಕಾಡಿದೆ ಇಲ್ಲಿ ತಂದುದೇನೂ ಇಲ್ಲ ತೆಗೆದುಕೊಂಡು ಹೋಗುವುದೇನೂ ಇಲ್ಲ ಆದರೂ ಈಮನುಷ್ಯ ಎಲ್ಲವೂ ತನ್ನದೇ, ತಾನೇ ,ಎಂದು ಮೆರೆಯುತ್ತಾನೆ .ಕೊನೆಗೆ ಉಳಿಯುವುದೇನು ಇಲ್ಲ ಕೇವಲ ಇಲ್ಲಿ ಹಂಚಿದ ಪ್ರೀತಿ ಮಾತ್ರ .....
ಇದು ಎಲ್ಲರೂ ಅರಿತ ಸತ್ಯವೇ ಆದರೂ ..ಚಿತ್ರ ಕವನಕ್ಕೆ ಇದನ್ನು ಹೊಂದಿಸಿ ಬರೆದ ಬಗ್ಗೆ ಮನಸ್ಸಿಗೆ ಹಿತ ನೀಡಿತು.
ಹೀಗೆ ಬರೆಯುತ್ತಿರಿ ಶುಭವಾಗಲಿ .
ವೀಣಾ 🌹🌹
[3/23, 3:01 PM] +91 94492 29189: ಪ್ರೇಮ್ ಅವರು ಬರೆದ ಛಾಯಾಗ್ರಾಹಕ ಕವನ  "ಛಾಯಾಗ್ರಾಹಕ" ಚಂದ್ರನನ್ನು ಛಾಯಾಗ್ರಾಹಕನಿಗೆ ಹೋಲಿಸಿ ಪ್ರಕೃತಿಯನ್ನು ಅವನ ಕಣ್ಣುಗಳಿಂದ ನೋಡುವ ರೀತಿ ಮಜವಾಗಿದೆ ಕವಿಯ ಕಲ್ಪನೆ ಚೆನ್ನಾಗಿದೆ.ಮತ್ತು ಎಲ್ಲ ಜಾತಿಧರ್ಮದವರು ಚಂದ್ರನನ್ನು ಹೆಗೆ ಅವಲಂಬಿಸಿದ್ದಾರೆ ಎಂಬುದನ್ನು ಸೂಚ್ಯವಾಗಿ ವಿವರಿಸಿದ್ದೀರಿ...ದನ್ಯವಾದಗಳು
[3/24, 7:39 AM] Wr Indira P K: ಪ್ರೇಮ ಮೇಡಂ ರವರೆ ನಮಸ್ತೆ🙏🙏
ಕರುಣಾಜನಕ ಸ್ಥಿತಿ.
ಕುಡುಕ ಗಂಡನ ಜೊತೆಗಿರುವ ಸಂಸಾರದಲ್ಲಿನ ಹೆಣ್ಣಿನ ಭವಣೆಯ ಬದುಕನ್ನು ಕಟ್ಟಿಕೊಳ್ಳಲು ಹೆಣಗುತ್ತಿರುವ ಹಾಗೂ ಅಲ್ಲಿರುವ ನೂರೆಂಟು ಸಮಸ್ಯೆ ಗಳ ಚಿತ್ರಣವಿರುವ ಕವನ ಸುಂದರವಾಗಿದೆ .💐
[3/24, 10:14 AM] Wr Varalaxmi K N: ನಮಸ್ತೆ ಪ್ರೇಮಾ ಮೇಡಮ್. 

ಜೀವನಕ್ಕೆ ಬೇಕಾದ ಊಟ ಬಟ್ಟೆ ವಸತಿ,  ಪಡೆಯಲು  ಬೇಕಾಗಿರುವುದುದುಡಿಮೆ  .ಇಷ್ಟು ಇದ್ದರೆ ಜೀವನವ ನಿಶ್ಚಿಂತೆಯಿಂದ ಸಾಗಿಸಬಹುದು  ಎಂಬ ಸಾರ ಹೊಂದಿಹ,  ಜೀವನದ ಕಟುಸತ್ಯ ತಿಳಿಸಿಹ ಕವನಕೆ ನಮನಗಳುಮೇಡಮ್. 
ತಪ್ಪಿದ್ದರೆ ತಿದ್ದಿ.
[3/26, 3:15 PM] Wr Vinuta Kicchikeri: ಪ್ರೇಮ್ ಜೀ 🙏

ಆರಾಮಾಗಿ ಓದಿಸಿಕೊಂಡು ಹೋಗುವ ಕವನ...ಯಾವತ್ತಿನಂತೆ ಇಂದು ಕೂಡ ಚಂದದ ಕವನ.ಯಾವ ಚಿತ್ರ ಕೊಟ್ಟರೂ,ಯಾವ ವಿಷಯ ಕೊಟ್ಟರು ಬರೆವ ನಿಮಗೊಂದು ಶರಣು..‌

ಇಂದಿನ ಚಿತ್ರಕ್ಕೆ ವಾಸ್ತವದ ಅರಿವನ್ನು ಮೂಡಿಸಿ ,ಅದನ್ನು ಕವನವಾಗಿಸಿ ಬಹಳ ಸುಂದರ ವಾಗಿ ಬರೆದಿರುವಿರಿ...

ಧನ್ಯವಾದಗಳು💐👏
ವಿನುತಾ ಕಿಚ್ಚಿಕೇರಿ
[3/26, 3:25 PM] Wr Shivaprasad Aradhya: ಪ್ರೇಮ್ ಜೀ ವಾವ್ವ ಅದೆಷ್ಟು ಚೆನ್ನಾಗಿ ಬರೆದಿದ್ದೀರಿ ಭಲೇ ಸಿರಿಚಂತರ ಫಾರಿನ್ ಕಾಯಿಲೆಯಿದು ಹರಡಿದವರು ಇಲ್ಲಿಂದ ಹೊರಗೆ ದುಡಿಯಲು ಹೋದವರು ಹಾಗೂ ಯಾತ್ರಾರ್ಥಿಗಳು ಈಗ ಅನುಭಿಸುವ ಕಷ್ಟ ಸಾಮಾನ್ಯರು ಕೂಲಿಯವರು ಹಾಗೂ ಅನಾಥರು ಹಾಗೂ ಬಿಕ್ಷುಕರಿಗೆ ಖೋಜಾಗಳಿಗೆ ಸ್ಲಂವಾಸಿಗಳಿಗೆ ಬಹಳವಾಗಿ ಕಷ್ಟ ತಂದಿದೆ.ಬಂದ ನಿಮ್ಮ ಕವನದ ಸರಳತೆ ಚೆಂದ.

ಶಿವಪ್ರಸಾದ್ ಆರಾಧ್ಯ
[3/27, 9:15 AM] Wr Ganesh Pai: ಪ್ರೇಮಾ ಗುರುಗಳೇ ನಮಸ್ತೆ,

ಜೀವನೋತ್ಸಾಹಕ್ಕೆ ಪ್ರಚೋದನೆ ತುಂಬುವ ತಮ್ಮ ಚಿತ್ರಕವನ *ಸಾಗು ನೀ ಮುಂದೆ* ಚೆನ್ನಾಗಿದೆ👌🏻👌🏻 ಹಾಡುವಂತಿದೆ.

ಧನ್ಯವಾದಗಳು🙏🏼🙏🏼
[3/27, 11:24 AM] Wr Vara Lakshmi Amma: ಪ್ರೇಮ ಅವರ ಕವನ 
 ದಟ್ಟ ವನದ ನಡುವೆ ಏಕಾಂಗಿಯಾಗಿ  ನಡೆಯುತ್ತಾ,  ನಮ್ಮ ಮನದಲ್ಲಿ  ಧೈರ್ಯ, ದೃಢತೆ, ತುಂಬಿಕೊಳ್ಳಬೇಕು,  ಇದುವೇ ನಮ್ಮ ನ್ನು ಜೀವನದಲ್ಲಿ  ಮುಂದುವರಿಯಲು ಸಹಾಯಮಾಡುತ್ತದೆ ಎನ್ನುವ  ಆಶಯ ಇರುವ ಕವನ. 
 ಸರಳ ಕವನವಾದರೂ ಆಶಯ ಚಂದ. 🙏
[4/1, 6:26 PM] Wr Samyakth Kadaba: 🌷🌷🌷🌷🌷🌷

 *ನಮಸ್ತೆ* 

👉 *ಪ್ರೇಮ್ ಇವರು* ಬರೆದಿರುವ
 *ನಿರ್ಧಾರ* ಎಂಬ ನ್ಯಾನೋ ಕಥೆಯಲ್ಲಿ ....
👉🏻ಕಷ್ಟದಲ್ಲಿರುವವರಿಗೆ ,ದೇವರಿದ್ದಾನೆ ಎಂಬುದನ್ನು ಸ್ಪಷ್ಟವಾಗಿ ತಿಳಿಹೇಳುವ ಪ್ರಯತ್ನವಿದೆ ಎಂಬುದು ನನ್ನ ಅನಿಸಿಕೆ.
 👉🏻ಉಪಯುಕ್ತವಾದ ಕತೆಯಲ್ಲಿ ಅನುಪಮವಾದ ನೀತಿ ಇರುವುದನ್ನು ಇಲ್ಲಿ ಗಮನಿಸಬಹುದು.
👉🏻ಮಹಮ್ಮದ್ ದುಡಿಮೆಗಾಗಿ ದೂರದ ಊರಿಗೆ ತೆರಳಿ ಹಿಂದಿರುಗುವಾಗ ಅಡೆತಡೆ ಬಂದರೂ ,ಅದು ಅವನಿಗೆ ಒಳ್ಳೆಯದೇ ಆಗುತ್ತದೆ.
👉🏻ಉತ್ತಮವಾಗಿದೆ.ಶುಭವಾಗಲಿ...
           🌼ತಪ್ಪಿದ್ದರೆ ಕ್ಷಮೆಯಿರಲಿ

✍🏻 *ಸಮ್ಯಕ್ತ್.ಹೆಚ್.ಜೈನ್.ಕಡಬ* 
🌷🌷🌷🌷🌷🌷
[4/2, 12:34 PM] Wr Varalaxmi K N: ನಮಸ್ತೆ ಪ್ರೇಮ ಮೇಡಮ್.ಮನಸ್ಸಿದ್ದರೆ  ಮಾರ್ಗ ಎಂಬಂತೆ, ಸಮಸ್ಯೆ ಇದೇ ಅಂದರೆ ಪರಿಹಾರ ಕೂಡ ಇದ್ದೇ ಇರುತ್ತದೆ ಎಂದು *ಟಾಮಿ** ಮೂಲಕ ತಿಳಿಸಿ ಕೊಟ್ಟಿದ್ದೀರಿ. ಧನ್ಯವಾದಗಳು 🙏
[4/3, 10:22 AM] +91 84313 19753: ಪ್ರೇಮ್ ಮೇಡಂ 
ಅವರ ಶ್ರಮ ನ್ಯಾನೋ ಕಥೆ ಉತ್ತಮವಾಗಿದೆ. 

ಹೆತ್ತವರು ತಮ್ಮೆಲ್ಲ ಕಷ್ಟಗಳನು ಮಕ್ಕಳಿಗೆ ತಿಳಿಸದೇ ನನ್ನ ಮಕ್ಕಳು ಓದಿ ದೊಡ್ಡ ದೊಡ್ಡ ಆಫೀಸರ್ ಗಳು ಆಗ್ಬೇಕು ಅನ್ನೋದು ಪ್ರತಿಯೊಬ್ಬ ತಂದೆತಾಯಿಯ  ಕನಸಾಗಿರುತ್ತದೆ,  ಹಾಗೆ ಬೆಳೆದು ದೊಡ್ಡವರಾದ ಮಕ್ಕಳು ಶಾಲಾ ಕಾಲೇಜ್ ಗಳಿಗೆ ಹೆತ್ತವರು ಕಳಿಸಿರುವ ಮಹತ್ವವನ್ನು  ಅರಿತು ಗುರುವಿನ ಗುಲಾಮನಾಗಿ ಮುನ್ನೆಡದರೆ ಯಶಸ್ಸು ತಾನಾಗಿಯೇ ದೊರೆಯುತ್ತದೆ,ಹೆತ್ತವರ ಬಯಕೆ ಪ್ರತಿಫಲ ದೊರೆಯುತ್ತದೆ.  ಲವ್ ಗಿವ್ವು ಅಂತಾ ಹೋದರೆ ಜೀವನ ಹಾಳಾಗುವುದಲ್ಲದೆ ತಂದೆತಾಯಿಗಳನ್ನು ಮರಗುವಂತೆ ಮಾಡುತ್ತದೆ. 

👍ಉತ್ತಮವಾಗಿದೆ 
👉ಚನ್ನಾಗಿದೆ 
👉ಸಂದೇಶಭರಿತವಾಗಿದೆ 
✌ಸರಳವಾಗಿದೆ 

ಸುಂದರ ನ್ಯಾನೋ ಕತೆಯನ್ನು ಓದಿಸಿದಕ್ಕೆ 
ಧನ್ಯವಾದಗಳು ಮೇಡಂ 
ಕವಿಮನಕ್ಕೆ ಧಕ್ಕೆಯಾದಲ್ಲಿ ಕ್ಷಮೆ ಇರಲಿ. 
ಬಸವರಾಜ ಲಿಂಗಸ್ಗೂರು... 💕
[4/3, 12:11 PM] Wr Manu Vaidya: *ಪ್ರೇಮ್ ಮೇಡಂ ಅವರ ಕಥೆಯ ಕುರಿತಾಗಿ*

*ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇದೆ* ಎಂಬ ನೀತಿಯನ್ನು ಸಾರುವ ಕಥೆ ಚೆನ್ನಾಗಿ ಮೂಡಿ ಬಂದಿದೆ.. ಮತ್ತೊಂದು ದೃಷ್ಟಿಕೋನದಲ್ಲಿ, ಮಕ್ಕಳಿಗಾಗಿ, ಮಕ್ಕಳ ಭವಿಷ್ಯಕ್ಕಾಗಿ ತಂದೆ, ತಾಯಿ ಏನು ಬೇಕಾದರೂ ಮಾಡಬಲ್ಲರು ಎಂಬುದು ಕೂಡ ನಿಮ್ಮ ಕಥೆಯಲ್ಲಿ ಕಂಡು ಬಂತು..

ಇನ್ನು ನಿಮ್ಮ ಕಥೆಯಲ್ಲಿ..

👉🏻ನಿರೂಪಣಾ ಶೈಲಿ ಬದಲಾದರೆ ಇನ್ನೂ ಚೆಂದವಾಗುತ್ತದೆ.. ಕಥೆ ಹೇಳಿಕೆಯಂತಾದರೆ ಚೆಂದವಲ್ಲ
👉🏻ಕಥೆಯಲ್ಲಿ ಪಾತ್ರಗಳನ್ನು ಮಾತಾಡಿಸಿದರೆ ಇನ್ನಷ್ಟು ಉತ್ತಮ
👉🏻ವಿಭಿನ್ನ ಕಥಾವಸ್ತುವನ್ನು ಯೋಚಿಸಿ..
👉🏻ಒಟ್ಟಿನಲ್ಲಿ ಉತ್ತಮ ಪ್ರಯತ್ನ...

ನನಗನಿಸಿದಂತೆ ಹೇಳಿರುವೆ, ತಪ್ಪಾಗಿದ್ದರೆ ಕ್ಷಮೆ ಇರಲಿ🙏🙏🙏😁

✍🏻 *ಮನು ವೈದ್ಯ*
[4/4, 9:58 AM] Wr Nagamani Mysore: ಓಪನಿಂಗ್ ಬ್ಯಾಟಿಂಗ್ ಪ್ರೇಮ್ ಅವರು ಚೆನ್ನಾಗಿ ಬಾರಿಸಿದ್ದಾರೆ. ಮೊಬೈಲ್ ಬಳಕೆಯ ದುಷ್ಪರಿಣಾಮಗಳನ್ನು ನ್ಯಾನೋ ಕಥೆಯಲ್ಲಿ ಪ್ರತಿಬಿಂಬಿಸುವ ಪ್ರಯತ್ನ ಚೆನ್ನಾಗಿದೆ... 

*ಅತಿಯಾದರೆ ಅಮೃತವೂ ವಿಷ*

ಯುವಜನತೆ ಇದನ್ನು ತಿಳಿಯಬೇಕು.. 

👏👏
[4/4, 11:22 AM] Wr Thaggihalli Ravi: *ಪರಿಣಾಮ* ಪ್ರೇಮಾ ಸುಳ್ಯರವರ ಕಥೆಯು ತಂತ್ರಜ್ಞಾನದ ಅನಿಯಮಿತ ಬಳಕೆ ಹಾಗೂ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುತ್ತದೆ.


ತಗ್ಗೀಹಳ್ಳಿ ರವಿಕುಮಾರ
[4/4, 6:46 PM] Wr C G Venktesh: ಪ್ರೇಮ್ ಮೇಡಂ ರವರ  ಕಥೆ *ಪರಿಣಾಮ*,  ಚೆನ್ನಾಗಿದೆ👌👌 ಮೊಬೈಲ್  ಮಿತಿಮೀರಿದ ಬಳಕೆಯಿಂದ ಇಂದು ಹಲವಾರು ಸಮಸ್ಯೆಗಳನ್ನು ಕಾಣಬಹುದು ಅವುಗಳ ಮೇಲೆ ಬೆಳಕು ಚೆಲ್ಲುವ ಸಾಮಾಜಿಕ ಕಳಕಳಿಯ ನಿಮ್ಮ ನ್ಯಾನೋ ಕಥೆ ಚೆನ್ನಾಗಿದೆ . ಉತ್ತಮ ಕಥೆ ಓದಿಸಿದ್ದಕ್ಕೆ ಧನ್ಯವಾದಗಳು🙏🙏
[4/4, 7:12 PM] +91 74113 99610: *ಪ್ರೇಮ್ ಜೀ.. ನಮಸ್ತೆ🙏*

*ಅತಿಯಾದ ಮೊಬೈಲ್ ಬಳಕೆಯಿಂದಾಗಿ ಜೀವನ ಹಾಳಾಗುವುದನ್ನು ಅರಿಯಬಹುದು*.👌

**ಸುಂದರ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.*👌

*ನಾ ಕನ್ನಡಿಗ ಜೀ.. ನಮಸ್ತೆ🙏*

*ಅತಿಯಾದ ಆಸೆಗಳು ತಂದೊಡ್ಡುವ ಸಮಸ್ಯೆಗಳನ್ನು ತಿಳಿಯಬಹುದು*.

**ಕಥೆ ತುಂಬಾ ಚೆನ್ನಾಗಿದೆ.*👌

*✍ಮಹಾದೇವ ರಾಯಚೂರು*
@prem@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ