ಗುರುವಾರ, ಸೆಪ್ಟೆಂಬರ್ 26, 2019

1231. ಬೇನೆದ ಬೇಜಾರ್

ಬೇನೆದ ಬೇಜಾರ್

ಮನಸ್ ದ ಪಾತೆರ
ಬರವುಡು ಬನ್ನಗ
ಬೇನೆ ಕೆಲವೆರೆಗ್
ಹಗುರ ಕೆಲವೆರೆಗ್..
ಬೇನೆ ಮಲ್ತಿನಾಯಗ್
ಬೇನೆ ಆವಂದ್ ಏಪಲಾ..
ದಾಯೆಂದ್ ಕೇನುವರಾ..
ಬೇನೆ ಮಲ್ಪಿನಾಯಗ್
ಬೇನೆ ಕೊರ್ಪಿನನೇ ಬೇಲೆ,
ಬೇನೆ ಬೇಜಾರ್ ದ ನರ
ಆಯಗ್ ದೇವೆರ್ ಕೊರ್ತೆರಾ..
ಯಾನ್ ಲಾ ಬರೆಪೆಂದ್
ಬೇತೆ ಜನಕ್ ಲೆ ಬೇನೆಗ್
ಉಪ್ಪು ಪಾಡ್ ದ್
ಉರಿಪಾಯಿನ ಲೆಕ್ಕ
ಬರೆಪಿನ ಸರಿಯಾ?
ಏರೆಗ್ ಲಾ ಬೇನೆ ಬೊರ್ಚಿ
ಬೇನೆ ಬೇಜಾರ್ ನ್ ಕೊರಂದೆ,
ತೆಲಿಕೆ ಕೊರ್ಪಿನ ಬೇನೆ ಬರಡ್,
ನಮ್ಮ ಬರವು
ತೂಕ ಆವಡ್...
ಮನಸ್ ದ ಬೇನೆ
ಕರಗ್ ದ್ ಪೋವಡ್!
ಬೇನೆ ಕೊರಿನಾಯಗ್ ಲಾ
ಬೇನೆದ ಬೇನೆ ತಟ್ಟಡ್
ಬೇನೆದ ಅರಿವಾಯಿನ ಆಯಗ್
ದೇವೆರ್ ಎಡ್ಡೆ ಬುದ್ಧಿ ಕೊರಡ್..
ನಮನ್ ಮಿತ್ತ್ ದೆರ್ತಿನಕ್ಲೆಗ್
ಕೈ ಜೋಡ್ತ್ ನಮಿಪುಗ!
ನಮನ್ ತಿರ್ತ್ ಪಾಡಿನಾಯನ
ಕಾರ್ ಪತ್ತ್ ಒಯ್ಪುಗ!
@ಪ್ರೇಮ್@

1231. ಬೇನೆದ ಬೇಜಾರ್

ಬೇನೆದ ಬೇಜಾರ್

ಮನಸ್ ದ ಪಾತೆರ
ಬರವುಡು ಬನ್ನಗ
ಬೇನೆ ಕೆಲವೆರೆಗ್
ಹಗುರ ಕೆಲವೆರೆಗ್..
ಬೇನೆ ಮಲ್ತಿನಾಯಗ್
ಬೇನೆ ಆವಂದ್ ಏಪಲಾ..
ದಾಯೆಂದ್ ಕೇನುವರಾ..
ಬೇನೆ ಮಲ್ಪಿನಾಯಗ್
ಬೇನೆ ಕೊರ್ಪಿನನೇ ಬೇಲೆ,
ಬೇನೆ ಬೇಜಾರ್ ದ ನರ
ಆಯಗ್ ದೇವೆರ್ ಕೊರ್ತೆರಾ..
ಯಾನ್ ಲಾ ಬರೆಪೆಂದ್
ಬೇತೆ ಜನಕ್ ಲೆ ಬೇನೆಗ್
ಉಪ್ಪು ಪಾಡ್ ದ್
ಉರಿಪಾಯಿನ ಲೆಕ್ಕ
ಬರೆಪಿನ ಸರಿಯಾ?
ಏರೆಗ್ ಲಾ ಬೇನೆ ಬೊರ್ಚಿ
ಬೇನೆ ಬೇಜಾರ್ ನ್ ಕೊರಂದೆ,
ತೆಲಿಕೆ ಕೊರ್ಪಿನ ಬೇನೆ ಬರಡ್,
ನಮ್ಮ ಬರವು
ತೂಕ ಆವಡ್...
ಮನಸ್ ದ ಬೇನೆ
ಕರಗ್ ದ್ ಪೋವಡ್!
ಬೇನೆ ಕೊರಿನಾಯಗ್ ಲಾ
ಬೇನೆದ ಬೇನೆ ತಟ್ಟಡ್
ಬೇನೆದ ಅರಿವಾಯಿನ ಆಯಗ್
ದೇವೆರ್ ಎಡ್ಡೆ ಬುದ್ಧಿ ಕೊರಡ್..
ನಮನ್ ಮಿತ್ತ್ ದೆರ್ತಿನಕ್ಲೆಗ್
ಕೈ ಜೋಡ್ತ್ ನಮಿಪುಗ!
ನಮನ್ ತಿರ್ತ್ ಪಾಡಿನಾಯನ
ಕಾರ್ ಪತ್ತ್ ಒಯ್ಪುಗ!
@ಪ್ರೇಮ್@

1227. ತರಗತಿ

ತರಗತಿ

ಅಂದಿನ ತರಗತಿ ಗಂಡನಿಗಿತ್ತು
ರಂಜಿಯ ಮೊಗದಲಿ ಸಂತಸವಿತ್ತು!
ತಾನೇ ಮೇಲೆನುವ ಅಹಂ ಇತ್ತು!
ತನ್ನ ಕೇಳುವ ಗಂಡ ತನ್ನದೇ ಸ್ವತ್ತು!

ಊಟವ ಹೊರಗೆ ಮಾಡಲು ತಾಕೀತು!
ಹೊಸ ಸೀರೆಗೆ ಒಂದು ಡಿಮ್ಯಾಂಡಿತ್ತು!
ನೆಕ್ಲೆಸ್ ಕೂಡಾ ಬೇಕಿತ್ತು!
ತಂಗಿ ಮದುವೆಗೆ ಹೋಗೋದಿತ್ತು!

ಅತ್ತೆ ಮನೆಯನು ದೂರೋದಿತ್ತು!
ಅತ್ತಿಗೆ ನೋಟವ ಹೇಳೋದಿತ್ತು!
ಮೈದುನ ಕಾಟವ ತಡಿಬೇಕಿತ್ತು!
ಮಾವನ ಸೇವೆ ಮಾಡಿಯೇ ಸುಸ್ತು!

ತಂಗಳು ತಿಂದು ಸಾಕಾಗಿತ್ತು!
ಅತ್ತೆಯ ದರ್ಬಾರ್ ಜೋರಾಗಿತ್ತು!
ಗಂಡನ ಬಾಯಿಗೆ ಬೀಗವೆ ಇತ್ತು!
ಮನೆಯಲಿ ಬೇರಾರು ಇಲ್ಲದ ಹೊತ್ತು!

ರಂಜಿಗೆ ತಾಕತ್ ಬಂದೇ ಬಂದಿತ್ತು!
ನಾಯಿಯ ಹೊರಗೆ ಕಟ್ಟಿ ಹಾಕಿತ್ತು!
ಗಂಡನ ಕೂರಿಸಿ ಸಮಾಜಾಯಿಸಬೇಕಿತ್ತು!
ಪ್ರೀತಿಯು ಕೋಪದ  ಕಡೆ ತಿರುಗಿತ್ತು!

ಅಮ್ಮನ ಫೋನ್ 'ಬರುವೆ' ಎಂದಿತ್ತು!
ಗಂಡನ ಕಛೇರಿಗೆ ರಜೆಯೇ ಇತ್ತು!
ಕ್ಲಾಸಿಗೆ ಸಮಯ ಸರಿಯಾಗಿತ್ತು!
ಹೇಳಲು ಬಹಳವೆ ತಯಾರಿ ನಡೆದಿತ್ತು!

ಗಂಡನ ಕರೆದು ಕುರ್ಚಿಯನಿತ್ತು,
ಮಾತಿಗೆ ಶುರುವಿಟ್ಟು ವಿಷಯವನಿತ್ತು,
ಬೇಕಾದ ವಸ್ತುಗಳ ಪಟ್ಟಿಯನಿತ್ತು,
ತರದಿರೆ ಸಾಯುವೆನೆನುವ ಮಸಲತ್ತು!

ಪತಿರಾಯಗೆ ನೋಡುತ ತಲೆ ತಿರುಗಿತ್ತು!
ರೇಷ್ಮೆಯ ಸೀರೆ, ಚಿನ್ನದ ನೆಕ್ಲೆಸ್ ಮತ್ತು
ಕಾಲಿಗೆ ಚೈನು, ಕೈ ಬಳೆ ಬೇಕಿತ್ತು!
ಪಟ್ಟಿಯು ಮತ್ತೂ ಬೆಳೆದಿತ್ತು!

ಮಾತಾಡಿದರೆ ಮಡದಿಗೆ ಅಳು ಬರುತಿತ್ತು!
ಪಟ್ಟಿಯ ಜೇಬಲಿ ಇಳಿ ಬಿಟ್ಟಿತ್ತು!
ಸಂಜೆಯೆ ಬಳೆಯಂಗಡಿಗೆ ಕಾಲು ಹೊಕ್ಕಿತ್ತು!
ಚಿನ್ನದ ಹಾಗಿನ ಒಡವೆ ಕೇಳಿತ್ತು!

ಒಂದೇ ಸಾವಿರಕೆ ಎಲ್ಲವೂ ಬಂತು!
ಗಂಡನ ಮುಖದಲಿ ನಗೆ ಬರುತಿತ್ತು!
ಲಕ್ಷವ ಉಳಿಸಿದ ಸಂತಸವಿತ್ತು!
ಗಾಡಿಯು ಮನೆಕಡೆ ತಿರುಗುತಲಿತ್ತು..
@ಪ್ರೇಮ್@
20.07.2019

1229. ಗಝಲ್-19

ಗಝಲ್

ಪ್ರೀತಿ ತುಂಬಿಹುದು ನಿನ್ನೊಲವು
ನಕ್ಕು ನಗಿಸುವುದು ಚೆಲುವು!

ಮೈಮನ ಹಗುರಾಗಿಸಿಹುದು,
ತನು ಬೆಳಗಿಸಿಹುದು ನಲಿವು!

ಧರೆಯಲಿ ತರತರದ ಬದುಕಿಹುದು,
ಶಕ್ತಿಯ ಕೊಟ್ಟಿಹುದು ಬಲವು!

ಹನಿಯಂತೆ ಶಾಶ್ವತವಲ್ಲ ಬಾಳು,
ಖನಿಯಾಗಿಸಿ ಬೆಳೆಸಿಹುದು ನೋವು!

ವನದ ನಿಜ ಸೌಂದರ್ಯವಿಹುದು!
ಒಲುಮೆ ಜಲವುಕ್ಕಿಸಿಹುದು ಕಾವು!

ಮೌನದ ಬೆನ್ನ ಹಿಂದೋಡಿಹುದು!
ಮಾತ ಝಳಪಿಸಿಹುದು ಜೀವನವು!

ಪ್ರೇಮದ ಹೊಳೆಯನು ಹರಿಸಿಹುದು!
ಕಣ್ಮಣಿಯಂತಿಹುದು ಗೆಳೆತನವು!
@ಪ್ರೇಮ್@
20.09.2019

1228. 2 ತುಪ್ಪದ ಹನಿಗಳು

[9/20, 5:51 AM] @PREM@: ತಿನಿಸು..

ಅಪ್ಪನ ಮನೆಯ
ಘಮಘಮ ತುಪ್ಪ,
ತೆಪ್ಪಗೆ ಕುಳಿತು
ತಿನ್ನುವ ತುಪ್ಪ!
ಮುಪ್ಪಲಿ ಕಡಿಮೆ
ಮಾಡದವ ಬೆಪ್ಪ!
ಸೊಪ್ಪಿನು ತಿಂದ
ನಾಟಿ ಹಸುವಿನ ತುಪ್ಪ!
@ಪ್ರೇಮ್@
20.09.2019
[9/20, 5:53 AM] @PREM@: 2.

ಅಂದು ತಂದಿದ್ದಳು
ತವರು ಮನೆ ತುಪ್ಪ!

ಇಂದು ಮಾಡಿಹಳು
ಗಂಡನ ಬಲು ಬೆಪ್ಪ!

ಕಾರಣ ಆತನು
ಕೊಡಲಿಲ್ಲ ಕಪ್ಪ!!!
@ಪ್ರೇಮ್@
20.09.2019

1234. ಭಾವಗೀತೆ-ಬಾಳ ನಾಕ

ಭಾವಗೀತೆ

ಬಾಳ ನಾಕ

ಮನದಲಿ ನೂತನ ಪದಸಂಪತ್ತಿಗೆ
ಗೆಳೆಯರು ನೆರೆಕರೆ ಒಡೆಯರಾಗುವರು
ಕಷ್ಟದಿ ಬದುಕುವ ಜೀವನದಾಟಕೆ
ಭ್ರಷ್ಟ ವಿಪತ್ತಿನ ಗುಣಗಳೆ ಕಾರಣರು..

ಬದುಕಲಿ ಬೆಳಕಿನ ಕಳೆಯಿರಬೇಕು
ಕತ್ತಲ ತುದಿಯಲಿ ದೀಪವು ಬೇಕು..
ಕೆಳಗಿಹ ನೆರಳಿಗೆ ಹೆದರಿಕೆ ಯಾಕೆ?
ಕಳವಳ ಬೇಡ, ನರಳಿಕೆ ಯಾಕೆ?

ನರಕದ ದಿನಗಳು ಇಂದೇ ತೊಲಗಲಿ
ಮನವದು ಧೈರ್ಯವ ತುಂಬುತ ನಲಿಯಲಿ
ಮಾತಿನ ಹಿಡಿತವು ಎಲ್ಲರಲಿರಲಿ
ಪ್ರೀತಿಯ ತಾಯತ ಎದೆಮೇಲಿರಲಿ..

ನಾಕವೊ ಪಾಕವೊ ಕಂಡವರ್ಯಾರು?
ಪಾಪ ಪುಣ್ಯಗಳ ಲೆಕ್ಕಿಗನಾರೊ?
ಒಳಿತನು ಬಯಸುವ ಮನವದು ಶ್ರೇಷ್ಠ
ಕೆಡುಕನು ಮಾಡುವ ಜನ ನಿಕೃಷ್ಟ..
@ಪ್ರೇಮ್@
27.09.2019

ಭಾನುವಾರ, ಸೆಪ್ಟೆಂಬರ್ 22, 2019

1230. It's me

It's me...

I never fall..
My fall is not a fall..
I rise in my fall..
My fall strengthens my life..
My fall helps you..

I can get more power
From  my huge fall!
I can use my all force
To grow more!
Man, you learn by me!

The greatest creature
On this earth haa.. hee..
Listen to my words,
See my successful attempt..

No any questions to live!
No any answers to die!
Life is based on
Only one single word
And that is "CONFIDENCE"
With enough "LOVE"
@prem@

ಗುರುವಾರ, ಸೆಪ್ಟೆಂಬರ್ 19, 2019

1226. 2ಹನಿಗಳು

ಜುಟ್ಟು

ಪಟ್ಟು ಹಿಡಿದ ಪುಟ್ಟ ಕಿತ್ತ ನನ್ನ ತೆಳುವ ಜುಟ್ಟು!
ತಟ್ಟಲೆಂದು ಹೋದೆ ನಾನು ನನ್ನ ಗುಟ್ಟು ರಟ್ಟು!
ಬೋಳು ಮಂಡೆ ಇದ್ದ ನನಗೆ ಅಂಟಿಸಿತ್ತು ನಂಟು!
ಬಿಟ್ಟುಬಿಟ್ಟೆ ಅದರ ಚಾಳಿ ಹೋದ ಮೇಲೆ ಜುಟ್ಟು!

ಮರ

ಮರ ಕಡಿದವನೆಂದೂ ಆಗಲಾರ ಅಮರ
ಸರಸರ ಕಡಿವ ಕೊಡಲಿಯಾಗಿಹುದೆ ಅಮರ?
ಮನೆ ಮನದೊಳಗಿದೆ ಸದಾ ಒಳಗಿನ ಸಮರ!
ಕಮ್ಮಾರ ,ಚಮ್ಮಾರರೂ ಮರ ಕಡಿದೊಡೆ ಹರೋಹರ!!
@ಪ್ರೇಮ್@
19.09.2019

1225. ಹನಿ-ಬದಲಾವಣೆ

*ಬದಲಾವಣೆ..*

*ಮದುವೆಗೆ ಮೊದಲು*
*ಮಾತು ಮಾತಲೂ*
*ನಾ ಕಾರುತ್ತಿದ್ದೆ ಬೆಂಕಿ..*

*ಪಾಣಿಗ್ರಹಣದ ಬಳಿಕ*
*ಜತೆಯಾಯಿತು ಉದಕ*
*ನಾನೀಗ ತಣ್ಣಗೆ ಅದು  ಸೋಕಿ!!*
@ಪ್ರೇಮ್@
19.09.2019

1222. ೨ಚುಟುಕುಗಳು-ಉಡುಗೆ

ಉಡುಗೆ

ನೋಡುತ್ತಾ ಮೈಮರೆತೆ
ಅವಳ ಅಂದದ ಉಡುಗೆ!!
ಅರಿವಾಗ್ಲೇ ಇಲ್ಲ  ಮನೇಲಿ
ಸುಟ್ಟು ಹೋದ ನನ್ನಡಿಗೆ!

ಹೀಗಿತ್ತು...

ಆರೋಗ್ಯದ ಗುಟ್ಟು
ನಮ್ಮಮ್ಮನ ಅಡಿಗೆಮನೆ!
ಉಡುಗೆ-ತೊಡುಗೆ ಸರಳ ನಡಿಗೆ!
ಮೈಮನವೆಲ್ಲ ಮನೆಮಂದಿಯ
ಆರೋಗ್ಯದ ಕಡೆಗೆ!
@ಪ್ರೇಮ್@
16.09.2019

1221. Exams to ourselves..

Exams to us..

To test our teaching effeciency
Improve our teaching method,
Know ourselves how much we are capable to give the information and understanding to our students,

To sharpen us ourselves,
As a challenge to one's profession
How much we have grown up in our field,
How much knowledge we have pored to the learner!

Is the learner learnt properly?
Are we reached our aim successfully?
Learners failure is his teachers failure too,
We should have a exam on ourselves to and fro.

Learn learn each time!
To teach the same thing better way,
Each year learning efficiency is not same,
We should make ourselves adjust to all generations!

Let's Be ourselves modern and neat,
Should Catch hold on our teaching subject!
Mind should set on classroom object!
Modern technique to use perfect!

Don't be only teaching teacher,
Let's be learning students too,
Let our knowledge grow and grow,
No bond to us to take ourselves and students high, more and more!
@Prem@
17.09.2019

1220. ಕಲಾಮ್ ರಿಗೆ

ಕಲಾಮ್ ರಿಗೆ..

ಅಬ್ದುಲ್ ಕಲಾಮ್ ನೆಂದರೆ ಏನೋ
ಮಮಕಾರ ಪ್ರೀತಿಯೆಮಗೆ ಅನವರತ
ಭರತ ಮಾತೆಗೆ ಬೇಕಿನ್ನೇನೋ
ಆಸರೆಯ ವೈಜ್ಞಾನಿಕ ಬೆಳಕು ನಿರತ..

ರಾಕೆಟ್ , ರಕ್ಷಣೆ, ಉಪಗ್ರಹ ಕಳುಹಿಸಿ
ಇಪ್ಪತ್ತರ ಕನಸನು ನನಸಾಗಿಸೆ ಪ್ರಯತ್ನಿಸಿ
ಹೆತ್ತ ಹೊತ್ತ ತಾಯಿ ಋಣ ತೀರಿಸಿ
ಗುರುವಿಗೆ ಗುರುವಾದ ಮನುಜನ ಪೂಜಿಸಿ!

ಬಡತನದಲಿ ಬೆಳೆದು ಸಿರಿತನದ ಜೀವನ
ಹೃದಯ ವೈಶಾಲ್ಯದಿ ಬದುಕದು ಪಾವನ,
ಆಸೆಯು ಅಧಿಕ ದೇಶದ ಮೇಲೆ
ವಿದ್ಯಾ ಸಂಪತ್ತೆಲ್ಲವು ದೇವನ ಲೀಲೆ!

ಜ್ಞಾನದ ಅಲೆಯು ಜಗಕೆ ಹಿತವು
ಕಲಿಕೆಯ ಬಲವು ದೇಶಕೆ ಹಿತವು
ಮಣಿ ಮುಕುಟವು ನಿನ್ನಯ ಯೋಜನೆಯು
ಮತ್ತೆ ಹುಟ್ಟಿ ಬಾ ಕಾಯುತಿದೆ ಜನತೆಯು..
@ಪ್ರೇಮ್@
17.09.2019

1224. ನ್ಯಾನೋ ಕತೆ-ಪರಿಸ್ಥಿತಿ

ಪರಿಸ್ಥಿತಿ

'ಹೇಗಿದ್ದೆ ನಾ' ಯೋಚಿಸುತ್ತಿದ್ದ ಕಿರಣ್ ರಾವ್ ಗೆ ತಲೆ ಕೆಟ್ಟಿತ್ತು. ಒಂದು ಕಾಲದಲ್ಲಿ ಇಪ್ಪತ್ತು ಜನರನ್ನು ಕೆಲಸಕ್ಕಿಟ್ಟು ದುಡಿಸಿ, ಸಂಬಳ ಕೊಡುತ್ತಿದ್ದವ ಇಂದು ಬದುಕಲು ಆಟೋ ಚಾಲಕ! ಕಾರು, ಚಿನ್ನ, ಹಣ ಎಲ್ಲಾ ತನ್ನ ಶೋಕಿ ಜೀವನ ನುಂಗಿತು. 'ನನಗೀಗ ಸಿಂಪಲ್ಲಾಗಿ ಸಾಧಾರಣರಂತೆ ಬದುಲಾಗುತ್ತಿಲ್ಲ! ಆದರೂ ಬದುಕಬೇಕಿದೆ. ನನ್ನನ್ನು ನಂಬಿದ ಕುಟುಂಬಕ್ಕಾಗಿ. ಕಷ್ಟದಲ್ಲಿ ಸಹಾಯಕ್ಕೆ ಯಾರೂ ಬರಲಾರರು' ಎಂದುಕೊಂಡ ಕಿರಣ್ ರಾವ್ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅರ್ಜಿ ತುಂಬುತ್ತಿದ್ದರು, ಬಾಡಿಗೆ ಮನೆಯಲ್ಲಿ ಕುಳಿತು!
@ಪ್ರೇಮ್@

1223. ಕವನ-ಕುಡಿತ

ಕುಡಿತವೂ ಹವ್ಯಾಸವೇ..

ನೀರ ಬಿಟ್ಟು ನೆಲದ ಮೇಲೆ
ದೋಣಿ ಸಾಗದು..
ಕುಡಿದು ಮುಗಿಸಿ ಇಟ್ಟ ಮೇಲೆ
ದೇಹ ಮಾತು ಕೇಳದು..
ಮುಂದೆ ತಾನು ಸಾಗದು..
ಹಿಂದೆ ನೆನಪ ಮರೆವುದು..
ಜೀವನ ಎಡರೋದು..
ವಕ್ರವಾಗಿಯೇ ನಡೆವುದು...

ಕುಡಿತವಿರದೆ ಕಾಲು ಎಂದೂ ನಡುಕವೂ..
ಕುಡಿತವನ್ನು ಬಿಟ್ಟು ಬಿಟ್ರೆ ಧನ ಅಧಿಕವೂ..
ಬಾಟ್ಲಿ ಬಿಡದು ನನ್ನ, ಹಣವು ಬರದು ಕೈಗೆ..
ಏನ್ಮಾಡೋದೂ..ನೈಂಟಿ ತಾಯಿಯೇ..

ಸಂಜೆ ಬರದೆ ಬಾರು ಎಂದೂ ಕಾಣದೂ..
ಹಗಲ ಸಮಯ ಕೆಲಸವೆಂದು ನಿಲ್ಲದೂ..
ಮನೆಯಲೆಂದು ಕುಡಿಯೆನು, ಗೆಳೆಯರೊಡನೆ ಕುಡಿವೆನು..
ಕುಡಿತವೂ ಹವ್ಯಾಸವೇ...
@ಪ್ರೇಮ್@

ಶನಿವಾರ, ಸೆಪ್ಟೆಂಬರ್ 14, 2019

1219. ಒಂದಿಷ್ಟು ....

ಮನುಷ್ಯ ಸಂಬಂಧಗಳನ್ನರಿಯದ ಮರ್ಕಟ ಮನಸ್ಸುಗಳಿಗೆ ಧಿಕ್ಕಾರವಿರಲಿ..

ಸಮಾಜದಲ್ಲಿ ಎರಡು ರೀತಿಯ ಹೃದಯದ ಮನುಜರಿರುವರು. ಒಂದು ಸದಾ ಸಹಾಯ ಮಾಡುವ ಪರರ ಹಿತ ಬಯಸುವ, ಸರ್ವರಿಗಾಗಿ ಪ್ರಾರ್ಥಿಸುವ ಜನರು. ಮತ್ತೊಂದು ಇತರರ ಏಳಿಗೆಯನ್ನು ಸಹಿಸದ ಮಾರಿಗಳು. ಅಂತಹ ರಾಕ್ಷಸರು  ನಿಮ್ಮ ಮನೆಯ ಪಕ್ಕದಲ್ಲೂ ಇರಬಹುದು.

ಹೌದು, ಹೆಣ್ಣೊಬ್ಬಳು ದುಡಿದು ತಿನ್ನುತ್ತಾ ತನ್ನಷ್ಟಕ್ಕೆ ತಾನೇ ದಿಟ್ಟತನದಿಂದ ಬದುಕುತ್ತಿದ್ದರೆ ಕಾಮಾಲೆ ಕಣ್ಣಿನ ಈ ದಿಟ್ಟ ಸಮಾಜ ಅದನ್ನು ಸಹಿಸುವುದಿಲ್ಲ. ಸಹೋದರ ಪ್ರೇಮಕ್ಕೂ ಪ್ರೀತಿಯ ಹಣೆಪಟ್ಟಿ ಕಟ್ಟಿ ಗಂಡ ಹೆಂಡಿರನ್ನು ಬೇರೆ ಮಾಡಲು ನೋಡುವ ಕುನ್ನಿಗಳಿಗೆ ಧಿಕ್ಕಾರವಿರಲಿ. ತನ್ನ ಮನೆಯ ಕಾವಲಿಯೇ ತೂತಾಗಿದ್ದರೂ ಇತರರ ಮನೆಯ ದೋಸೆ ತೂತೆಂದು ಸಾರುವ, ಪರರ ಬದುಕಲು ಬಿಡದ ನಾಯಿ ಮುಖದವರನ್ನು ಯಾವ ದೇವರೂ ಸುಮ್ಮನೆ ಬಿಡಲಾರರು.

     ತಮ್ಮಷ್ಟಕ್ಕೆ ತಾವೇ ಬದುಕುವವರಿಗೆ ಸುಳ್ಳು ಹಣೆಪಟ್ಟಿ ಕಟ್ಟಿ ಬೊಗಳುವ ನಾಯಿಗಳಿಗೆ, ವಾನರಗಳಿಗೆ, ಮಂಗ ಮೂತಿಯ ಮನುಜರಂತಿರುವ ಪ್ರಾಣಿಗಳಿಗೆ ಈಶ್ವರ, ಅಲ್ಲಾ, ಏಸು ಒಟ್ಟಾಗಿ ಹಿಡಿ ಶಾಪ ಹಾಕಲಿ. ಹೆಣ್ಣಿನ ಕಣ್ಣಲ್ಲಿ ಕಣ್ಣೀರು ತರಿಸಿದವನ ಮಕ್ಕಳಿಗೂ, ಸಹೋದರರಿಗೂ ಕಣ್ಣೀರ ಕೋಡಿ ಹರಿಯಲಿ. ಬೇರೆಯವರ ಸಂಸಾರಕ್ಕೆ ವಿಷ ಬೆರೆಸಲು, ಹುಳಿ ಹಿಂಡಲು ಪ್ರಯತ್ನಿಸಿದ ನರ ರಾಕ್ಷಸನ  ಸಂಸಾರ ತುಂಡು ತುಂಡಾಗಲಿ.
      ತಾನು ದುಡಿಯದಿದ್ದರೂ ದುಡಿಯುತ್ತಾ ಕಷ್ಟ ಪಡುತ್ತಾ ಬದುಕುತ್ತಿರುವವರನ್ನು ನೋಡಲಾಗದೆ ವಿಷ ಕಾರುವವರಿಗೆ ಶನಿ ಕಾಟ ಬರಲಿ. ಮನೆ ಮನ ಸುಟ್ಟು ಬೂದಿಯಾಗಲಿ. ತಪ್ಪಾಗಿ ಅರ್ಥೈಸಿ, ತಮ್ಮತನವನ್ನು ಪಾಲಿಸದೆ ಇತರರಿಗೆ ಕಾಟ ಕೊಡುವ ಕೀಟಗಳ ದೇಹವನ್ನು ಹುಳ ತಿನ್ನಲಿ. ಮನಸು ಕೆಡಿಸಿದ ಅವರ ಮನಗಳು ಹರಿದು ಹಂಚಿ ಹೋಗಿ ನಾಯಿ ನರಿಗಳು ತಿಂದು ತೇಗಲಿ. ಬೇಡದ ಹೇಳುವ ನಾಲಗೆ ಬಿದ್ದು ಹೋಗಲಿ.

      ಇತರರ ಬಗ್ಗೆ ಕೀಳಾಗಿ ಮಾತನಾಡಿ ಸಂಸಾರ ಕೆಡಿಸುವ ಜಂತುಗಳು ತಿಗಣೆಗಳಿದ್ದ ಹಾಗೆ. ಜಿಗಣೆಗಳು ಅವರ ರಕ್ತ ಹೀರಲಿ. ನರಕದರ್ಶನ ಅವರಿಗಾಗಲಿ. ನಂಬಿದ ದೇವರು ಅವರ ಕೈ ಬಿಡಲಿ. ಮಾಡಿದ ಯಾವುದೇ ಪುಣ್ಯ ಕಾರ್ಯ ಫಲಿಸದಿರಲಿ. ಕೈ ಕಾಲು ಕಣ್ಣು ಕಳೆದುಕೊಂಡು ಕಾಡಿನಲ್ಲಿ ನೀರಿಲ್ಲದೆ ಅಲೆಯುವಂತಾಗಲಿ. ಅವರ ಮಕ್ಕಳಿಗೂ ಅದು ಅನ್ವಯಿಸಲಿ. ಬೇರೆಯವರನ್ನು ನೆಮ್ಮದಿಯಿಂದ ಬದುಕಲು ಬಿಡದ ಮನುಜ ಮುಖದ ರಾಕ್ಷಸರ ಸಂತಾನ ಕ್ಷಯಿಸಲಿ. ಮಕ್ಕಳು ರೋಗಿಗಳಾಗಲಿ, ಗಂಡ ಹೆಂಡತಿ ಸಂಬಂಧ ಕೆಡಲಿ. ಕೈ ಕಾಲು ಮುರಿದು ಮೂಲೆ ಸೇರುವಂತಾಗಲಿ. ಮಾಡದ ತಪ್ಪಿಗೆ ದೂಷಿಸಿದ್ದಕ್ಕೆ ತಾವೂ ಮಾಡದ ತಪ್ಪಿಗೆ ಸರ್ವರಿಂದ ದೂರಾಗಿ ಒಂಟಿ ಪಿಶಾಚಿಯಂತೆ ಪರದಾಡುವಂತಾಗಲಿ.

    ಒಳ್ಳೆ ಕೆಲಸ ಮಾಡಿದ ಸರ್ವರೂ ಸದಾ ಕಾಲ ನಗುತ್ತಾ ಬಾಳಲಿ. ದೇವರು ಅವರನ್ನೆಂದೂ ಕೈ ಬಿಡದಿರಲಿ. ನಗು ಅವರ ಮುಖದಿ ಯಾವಾಗಲೂ ಉದಯಿಸಲಿ. ಅವರ ಮಕ್ಕಳು, ಕುಟುಂಬ ಉನ್ನತ ಮಟ್ಟಕ್ಕೇರಲಿ. ನೀವೇನಂತೀರಿ?
@ಪ್ರೇಮ್@
14.09.2019

ಶುಕ್ರವಾರ, ಸೆಪ್ಟೆಂಬರ್ 13, 2019

1218. ಮತ್ತಿನ ಬದುಕು

ಮತ್ತಿನ ಬದುಕು

ಮತ್ತಲಿ ಮುತ್ತಿನ ಹಾರವ ಬೇಡುವ
ಚಿತ್ತವ ಸೃಷ್ಠಿಸಿ ಕತ್ಲಲಿ ಜಾರಿದ,
ಬೆತ್ತದಿ ಹೊಡೆಯದೆ ನೆತ್ತರು ಬಾರದೆ
ಸತ್ತರು ಕಾಡುವ ಮೆತ್ತನೆ ನೋವದು//

ಬತ್ತದು ಮನದಲಿ ಸುತ್ತಲು ಜಗದಲಿ
ಮಿಥ್ಯದ ಗುಣವದು ಸತ್ಯಕೆ ದೂರವು!
ಕತ್ತೆಯ ದುಡಿತದ ಚಿತ್ತದ ಮನುಜನು!

ಪಥ್ಯವ ಮಾಡದ, ಕತ್ತಿಯ ನಡಿಗೆಯ
ಕಿತ್ತರು ಬಾಡದ ತತ್ತರ ಸಾಗುವ
ಮತ್ತಲಿ ಮೆರೆದ ಚಿತ್ತದ ವಾಂಛೆಯ
ಕತ್ತಿನ ಸರದಲಿ ಬತ್ತುವ ಬದುಕಿದು!

ಗತ್ತಿನ ಮಾನವ, ಹತ್ತಿಯ ತೂಕವು
ಹತ್ತರ  ಬದುಕಿನ ಭಿತ್ತಿಯ ಚಿತ್ರವು
ಅತ್ತೆಯ ಕಾಲವು ಎತ್ತಗೆ ಹೋಯಿತು?
ಇತ್ತಲು ಬಂದಿರೆ, ಮತ್ತದೆ  ಮತ್ತಲಿ..

ಮುತ್ತಿನ ಕಾಣಿಕೆ ಕಟ್ಟಿದ ರಥದಲಿ
ವೃತ್ತಿಯ ಸಹಜವು ಮಾಡಲು ಬರುವುದು!
ಎತ್ತಲು ನರಕವು ಶಕ್ತನು ಎತ್ತರ!
ಜೀವನ ಬೆತ್ತಲೆ  , ಸಹಜವು ಕತ್ತಲೆ!
@ಪ್ರೇಮ್@
14.09.2019

1217. ಪುಟಿಯುತಲಿದೆ

ಪುಟಿಯುತಲಿಹುದು....

ಪುಟಿಯುತಲಿದೆ ನವ ಕಾರಂಜಿ
ಸೋಲು ಗೆಲುವಿನ ಬೇಧವ ಮರೆತು
ಕಷ್ಟ ದುಃಖಗಳ ನೋವನು ಮರೆತು,
ಜನ ಮಾನಸಗಳ ನಡುವಿನಲಿ...ಪುಟಿಯುತಿದೆ..

ಜಾತಿ ಮತಗಳ ಕಟ್ಟೆಯ ಒಡೆದು
ಧರ್ಮದ ಗೋಡೆಯನು ಸಿಡಿಸಿ
ಮುಚ್ಚು ಮರೆ ಬಾಳಿಗೆ ಕಿಚ್ಚು ಹತ್ತಿಸಿ
ಶಾಂತಿಯ ಮನಕೆ ಉದಕವ ಬೆರೆಸಿ..ಪುಟಿಯುತಿದೆ

ಕೋಮುವಾದಗಳ ಬೇರು ಕಿತ್ತೊಗೆದು,
ನೆರೆಕರೆ ಜಗಳವ ಎಲ್ಲವ ಬಿಸುಟು,
ಮನೆ ಮನದೊಳಗೆ ಪ್ರೀತಿಯ ತುಂಬುತ,
ಸಕಲ ಜನರಲು ಕಾಂತಿಯ ಚಿಮ್ಮುತ.. .ಪುಟಿಯುತಿದೆ....

ಜಳಕವ ಮಾಡುತ ಕೊಳಕನು ಕಳೆದು
ಮನದ ಮೂಲೆಯನು ಪರಪರ ಕೆರೆದು,
ಭಾರತಿಯ ಭಾಗ್ಯವಂತರ ಒಂದೆಡೆ ಸೆಳೆದು,
ವಿನೀತ ಹೃದಯವ ಜೊತೆಯಲಿ ತಂದು.. ಪುಟಿಯುತಿದೆ..
@ಪ್ರೇಮ್@
14.09.2019

ಗುರುವಾರ, ಸೆಪ್ಟೆಂಬರ್ 12, 2019

1214. ಕವನ

ಅರ್ಥವಿಲ್ಲದ ಕವನ

ಜೇನು ರಾಣಿ ಕಾಣೆ ನಾನು
ಮಾವ ಬಾರ ತಾನೆ ನೀನು
ಮಾನ ದಾನ ತಾಣ ತ್ರಾಣ
ಕಾಂತಿ ನೀತಿ ಪ್ರೀತಿ ಭೀತಿ!

ಮಾತೆ ಖಾತೆ ಪಾತ್ರೆ ವಾಣಿ
ಲಾರಿ ಸಾರಿ ಮಾರಿ ದಾರಿ
ನಾಮ ಭಾಮ ಧಾಮ ವಾಮ
ಪಾಕ ನಾಕ ಮೂಕ ಶಾಖ!

ಹಾಸು ಹಾರು ಹಾಡು ಕಾಡು
ಜಾರಿ ಸೂರಿ ತೋರಿ ಹೀರಿ,
ಸಾಮ ದಾನ ಬೇಧ ಗಾನ
ವಾತ  ಮಾತ ಹಾವ ಭಾವ!

ಪ್ರೇತ ಭೂತ ಹೋತ ಖ್ಯಾತ
ವಾಕು ಬೇಕು ಸೋಕಿ ಯಾಕೆ
ರೀತಿ ನೀತಿ ಭೀತಿ ಜಾತಿ!
ಕಾಂತಿ ಸ್ಫೂರ್ತಿ ಕೀರ್ತಿ ಛಾತಿ!
@ಪ್ರೇಮ್@
10.09.2019

1209. ಗಣಪಣ್ಣೆ ಬನ್ನಗ

ಗಣಪಣ್ಣೆ ಬತ್ತೆರ್

ಬಾರಿ ಗೌಜಿಡ್ ಜನ ಮಾತ ಲೆತ್ತೆರ್
ಪುಟ್ಟು ಪರ್ಬಗ್ ತಿಂಡಿ ಮಾತ ಮಲ್ತೆರ್!
ಪರಿಮಳ ಬನ್ನಗ ತಡೆಯರಾವಂದೆ ಗಣಪಣ್ಣೆ ಬತ್ತೆರ್!
ಬತ್ತಿನರೆನ್ ತೂದುಲಾ ಏರ್ಲಾ ಉಲಯಿ ಲೆತ್ತಿಜೆರ್//

ಬಡವುಡಿತ್ತಿ ದೇವೆರಾರ್ ತ್ರಿಶೀಲ ಪತ್ತ್  ದುಂತಿಯೆರ್,
ಯೇಸ್ ಪಾಡ್ದ್ ಬತ್ತಿನಕುಲುಂದು ಅರಿನ್ ಕೊರುದು ಪೋಯೆರ್!
ಜೋಕ್ಲು ಪಾರ್ ಬತ್ ಅರೆನ ಕೈಟ್ ಪತ್ಯೆರ್!
ಚಿಂಟುಡಿತ್ತಿ ಮೋಂಟು ಪಂದ್ ಬಾರಿ ಖುಷಿಟ್ ಗೊಬ್ಯೆರ್!

ಅಮ್ಮನಕುಲು ಅಜ್ಜಿನಕುಲು ಧಾರಾವಾಹಿಡ್ ಮುರ್ಕೆರ್!
ಮಾಮನಕುಲು ಅಂಕಲ್ ನಕುಲು
ಕ್ರಿಕೆಟ್, ಮೊಬೈಲ್ಡ್ ಕಳೆಯೆರ್!

ಗಣಪೆ ತೂದು ಬೇಜರಾದ್
ಅಮ್ಮ ಪಪ್ಪನೊರ ಲೆತ್ತೆರ್!
ತೂಲೆ ಮೊಕ್ಲೆ ಗೊಬ್ಬು ಪೂರ
ಬೇಲೆಡಿಜ್ಜಿ, ತೂಪಿನೈಟೆ ಪಂಡೆರ್!!

ಕಲಿಯುಗ ಉಂದು ಬಾಲೆ ಕೇನ್ಲೆ
ಪಿಲಿ ಬತ್ತ್ಂಡಲ ಜನ ಲಕ್ಕಯೆರ್!
ಮೊಬೈಲ್ ಪನ್ಪಿ ಮೆಷಿನ್ ತೂನಗ
ಬೊಕ್ಕ ದಾಲ ಜನ ಕೇನಯೆರ್!

ಸರಿಯಾಯರೆ ಪಾಕ ಪೊರ್ತು ಉಂಡು,
ಪೂರ ಆರೋಗ್ಯ ಕಳೆವೊನೊಡು
ನಿದ್ರೆ ಉಣಸ್ ದಾಲ ದಾಂತೆ
ನಿತ್ರಾಣಾದ್ ಅಕುಲು ಬೂರೊಡು..

ಜಾತಿ ಜಾತಿ ಪಂದ್ ದೂರ್ದ್ ಬರೆದ್ ಪಾಡುನಕ್ಲೆಗ್
ಪ್ರವಾಹ ಕೊರ್ದು ಬೊಲ್ಲ ಪೋದು
ಪೂರ ಮರತ್ ಒಟ್ಟಾವಡ್ ಒರ!
ಇಜ್ಜಿ ಆಂಡ ಜಾತಿ ಪಂದ್ ಪೆಟ್ ಪಾಡೊಂದು ಸೈತೆರ್ಂದಾಂಡ!!
@ಪ್ರೇಮ್@
02.09.2019

1213. ನಾ ..ನೀ

ನಾ.. ನೀ..

ನಾನಾಗಿರಲು ನೀನಿರಬೇಕಲ್ಲ
ನಾನಿನ್ನನೇನನ್ನೆ ನೀನನ್ನನೇನನ್ನೆ?
ನೀನು ನಾನಾಗಿರಲು
ನಾನು ನೀನಾಗಿರಲು
ನಮ್ಮ ನೌಕೆಯದು
ನಾನಾ ಕಡೆ ಸಾಗುವುದು
ನವಿರು ನಾವಿಕರಾಗಿ
ನೂರಾರು ಆಸೆ ಹೊತ್ತು!
ನೆನಪ ಮೂಟೆಗಳ ಜೊತೆ
ನಂಟಿಗಂಟಿ ಬಾಳುತಲಿ
ನಮ್ಮಂತೆ ಇತರರಿರಲೆಂದು
ನಂಬಿಕೆಯ ಭರವಸೆಯಲಿ!
ನರರಾದ ನವಪಲ್ಲವಿಯಲಿ
ನಾನೂ ನೀನೂ ಸಾಗುತಲಿ..
ನನಗೆ ನೀನು, ನಿನಗೆ ನಾನು.
@ಪ್ರೇಮ್@
10.09.2019

1212. ನ್ಯಾನೋ ಕತೆ- ಹೇಳುವುದು ಒಂದು...

ನ್ಯಾನೋ ಕತೆ

"ನಮ್ಮ ಮಕ್ಕಳಿಗೆ ನಾವು ಒಳ್ಳೆಯದನ್ನೆ ಮಾಡಿ ಹಾಗೆಯೇ ಕಲಿಸಬೇಕು. ಒಳ್ಳೆಯ ಕೆಲಸ, ಮಾತುಗಳನ್ನಾಡಿ, ಉತ್ತಮ ಅಭಾಯಾಸಗಳ ರೂಢಿಸಿಕೊಂಡು ಮನೆಗೆ, ಪೋಷಕರಿಗೆ ಹೆಸರು ತರಬೇಕು.." ಹಗಲಲ್ಲಿ ತರಗತಿಯಲ್ಲಿ ಬೋಧಿಸಿ ಕಂಠ ಪೂರ್ತಿ ಕುಡಿದು ಮನೆಗೆ ಬಂದ ಮಾಸ್ಟರ್ ಎಂಕಪ್ಪನವರನ್ನು ಎಬ್ಬಿಸಿ ಒಳಗೆ ಕರೆತರಲು ಹೆಣಗಾಡುತ್ತಿದ್ದಳು ಹೆಂಡತಿ ತ್ರಿವೇಣಿ!!
@ಪ್ರೇಮ್@
06.09.2019

1208. Come Ganesha

Come Ganesha

O God Lord Ganesha!
Please come to India!
Tell them to be frank!
Bless them all the below!!

To eradicate the system of caste,
To stop scolding worst blast!
To discontinue  smoking cigars,
To seed everywhere peaceful plants!

To reduce the rent and tax!
To stick the tongue with wax!
To supply pure drinking water!
To stop nonsense quarter!

To build fruitful government buildings!
To sell pure, original things..
To build bridges between hearts,
To cover love in and out of homes!

To uncut the breathing trees!
To study the new syllabus!
To work to earn, name and fame!
To be in the life not only for fame!
@prem@
02.09.2019

1211. ಶಾಯರಿಗಳು

ಶಾಯರಿಗಳು

1

ದೂರದಿಂದ ನೋಡಿದರೆ..

ಬೆಟ್ಟದಂಥ ಚೆಲುವು, ಸ್ಥಿರತೆ!..

ಹತ್ತಿರ ಹೋಗಿ ನೋಡಲು...

ದೊಡ್ಡ ಹಂಡೆ, ನೀರಿಲ್ಲದ ಒರತೆ..!!

2.

ವೇಗವಾಗಿ ಚಲಿಸುತ್ತಿದ್ದಳಾಕೆ..

ರೈಲಿನಡಿ ಮಲಗಿ ಸಾಯಲು...

ಅವನೂ ವೇಗದಲ್ಲೆ ಹಿಂಬಾಲಿಸುತ್ತಿದ್ದ..

ಚಿನ್ನ, ಹಣವನೆಲ್ಲ ಕೀಳಲು!!!!!

@ಪ್ರೇಮ್@
07.09.2019

1200. ಗಂಗಾ ದರ್ಶನ

ಗಂಗೆಯ ಜಳಕ ಮೈಮನ ಪುಳಕ

ಮನಸ್ಸು ತುಂಬಾ ಬೇಸರಗೊಂಡಿತ್ತು! ದೇಹ ಜಡವಾಗಿತ್ತು! ಏನೋ ಬದಲಾವಣೆಯನ್ನು ಬಯಸುವ ಮನಸ್ಸಿನ ಲಯ ತನ್ನ ಬಾಹ್ಯ ವರ್ತನೆ ಸೂಚಿಸುತ್ತಿತ್ತು. ಅದು ಹತ್ತನೇ ತರಗತಿ ಮಕ್ಕಳ ಪರೀಕ್ಷಾ ಮಾಹಿತಿಯ ಮುಖಾಮುಖಿ ಸಂವಹನ ಸಭೆಗೆ ಹಾಜರಾಗಿದ್ದ ದಿನ ನನ್ನ ಆಪ್ತ ಗೆಳೆಯ ಉದಯ್ ಮಾಸ್ಟರ್ ದುಗ್ಗಲಡ್ಕ ರವರಿಂದ ಸಿಸಿಆರ್ ಟಿ ಅಂತರ್ ರಾಜ್ಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಬಗ್ಗೆ ಮಾಹಿತಿ ಲಭ್ಯವಾಯಿತು. ತಕ್ಷಣ ಎಚ್ಚೆತ್ತ ಮನಸ್ಸು ಸುಳ್ಯ ಸಿಸಿಆರ್ ಟಿ ಘಟಕದ ಅಧ್ಯಕ್ಷರಾದ ಶ್ರೀಯುತ ಚಿನ್ನಪ್ಪ ಗೌಡರನ್ನು ದೂರವಾಣಿ ಮೂಲಕ ಸಂಪರ್ಕಿಸುವಂತೆ ಮಾಡಿತು.
    ಅಲ್ಲಿಂದ ಪ್ರಾರಂಭವಾಯಿತು ಉತ್ತರ ಭಾರತದ ಕೆಲ ರಾಜ್ಯಗಳನ್ನು ನೋಡಬೇಕೆಂಬ ಹಂಬಲ! ಯಾವುದೇ ಹೊಸ ವಿಷಯದ ಬಗ್ಗೆ ತಿಳಿದ ತಕ್ಷಣ ,ನನ್ನ ಮೊದಲ ಕೆಲಸ, ಸಾದ್ಯವಾದಷ್ಟು ಆ ವಿಷಯದ ಬಗ್ಗೆ ಪ್ರಶ್ನೆ ಹಾಕಿ ಇನ್ನಷ್ಟು ವಿಷಯಗಳನ್ನು ಕಂಡುಕೊಳ್ಳುವುದು. ಘಟಕದ ಅಧ್ಯಕ್ಷರನ್ನು ಹಾಗೂ ಈ ಹಿಂದೆ ಭಾಗವಹಿಸಿದ ನನ್ನ ಕೆಲ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿ,ನಾನೂ ಭಾಗವಹಿಸುವೆನಂದು ಗಟ್ಟಿ ನಿರ್ಧಾರದಲ್ಲಿ ಸಾಂಸ್ಕೃತಿಕ ತಂಡದಲ್ಲಿ ನನ್ನ ಹೆಸರನ್ನು ನೋಂದಾಯಿಸಿದೆ.
       *ಈ ಕಾರ್ಯಕ್ರಮದ ಉದ್ದೇಶವೇನು?
* ಸಾಂಸ್ಕೃತಿಕ ವಿನಿಮಯ ಹೇಗೆ ನಡೆಯಬೇಕು?
* ಪ್ರತಿಯೊಬ್ಬರ ಕರ್ತವ್ಯಗಳೇನು?
*ಹೊರಡುವ ಮುನ್ನ ಹೇಗೆ ತಯಾರಾಗಬೇಕು?
* ಹೋಗುವ ಸ್ಥಳಗಳಿಗೆ ನಾವು ಹೇಗೆ ದೈಹಿಕವಾಗಿ ಹೊಂದಿಕೊಳ್ಳಲು ಸಿದ್ಧರಾಗಬೇಕು?
*ಪ್ರಯಾಣದ ಹಾಗೂ ಭೇಟಿಯ ಸ್ಥಳಗಳ, ಪೂರ್ಣ ಕಾರ್ಯಕ್ರಮಗಳ,ಊಟ-ತಿಂಡಿ ವಿವರಗಳ ಮತ್ತು ಅಗತ್ಯವಾಗಿ ಬೇಕಾದ ಹಣಕಾಸಿನ ಬಗ್ಗೆ ವಿವರಗಳನ್ನು ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಚರ್ಚಿಸಿ ವಿವರ ಪಡೆಯಲಾಯಿತು.
   ಜೀವನದಲ್ಲಿ ಕಂಡ ಕನಸು ವಿಮಾನ ಪ್ರಯಾಣ! ಅದು ಈ ಸಾಂಸ್ಕೃತಿಕ ಪ್ರವಾಸದಲ್ಲಿ ದಕ್ಕಿತು. ಹೆಚ್ಚು ಸಂತಸಗೊಂಡು ಗಾಳಿಯಲ್ಲಿ ಹಾರುವ, ಮೇಲಿಂದ ಕೆಳಕ್ಕೆ ಹೋಗುವ ಮೊದಲಾದ ಕುತೂಹಲಕಾರಿ ಅಂಶಗಳಿಗೆ ಸ್ಪಷ್ಟ ಉತ್ತರ ಪಡೆದ ನಮಗೆ ಸಂಭ್ರಮದ, ಮನ:ಸಂತೋಷಗೊಳಿಸಿದ ಪ್ಯಾಣ ಇದಾಗಿತ್ತು ಎಂದು ಹೇಳುತ್ತಾ ಹೊರಡುವಾಗ ನೆನಪಾಗುವುದೇ ಗಂಗೆಯ ಜಳಕ!
     ವಾವ್!!! ಗಂಗೆಗೆ ಗೆಗೆಯೇ ಸಾಟಿ! ಗಂಗೆಯಂದಕೆ ಏನೇನೋ ಧಾರ್ಮಿಕ ಪ್ರಸಂಗಗಳ ಕಥೆ, ಆಧುನೀಕರಣದ ಕರುಣಾಜನಕ ಕಥೆ, ಜಾಗತಿಕ ತಾಪಮಾನ, ಮೂಢನಂಬಿಕೆ, ನಾವು ನಮ್ಮ ದಿನನಿತ್ಯ ಹಲವಾರು ವಿಧಾನಗಳಲ್ಲಿ ಕಾಣುವ ಗಂಗಾ ಶುದ್ಧೀಕಾರಕ ಸೆಸ್, ನೀರಿನ ಅಸಂಬದ್ಧ ವಿಕಸನ. ಗಂಗೆ ಸರ್ವ ಋತು ನದಿ, ಭಾರತದ ಉದ್ದವಾದ ನದಿ.ಜಲ ಪ್ರಳಯ, ಔಷಧೀಯ ಗುಣ, ಈ ಪಟ್ಟಿಯಲ್ಲಿ ಇನ್ನೂ ಅನೇಕ ಅಂಶಗಳನ್ನು ಸೇರಿಸಬಹುದು.ಹಾಗಾಗಿ ಗಂಗಾ ಜಳಕ ನನ್ನ ಹಲವು ಪಾಪಗಳನ್ನು ಕಳೆದು ಪುಣ್ಯ ಸಂಪಾದಿಸಿ ಎಂಬ ಹೇಳಿಕೆಯನ್ನು ಪರೀಕ್ಷಾರ್ಥವಾಗಿ ಅನುಭವಿಸಲು ಅವಕಾಶವಾಗಿದ್ದು ಈ ಕಾರ್ಯಕ್ರಮದಿಂದ ಎಂಬುದನ್ನು ಬಹಳ ನಿರಾಳವಾಗಿ ಹೇಳಬಲ್ಲೆ..
   ಆದರೆ ಹೇಳುತ್ತಿರುವುದು ಪ್ರವಾಸಿ ತಾಣಗಳ ಬಗ್ಗೆ! ಕಾರಣವೇನೆಂದರೆ ಈ ಒಟ್ಟು ಕಾರ್ಯಕ್ರಮದ ಆಯೋಜನೆ ಅತ್ಯದ್ಭುತವಾಗಿತ್ತು! ಸಾವಿರಾರು ಕಿಲೋಮೀಟರ್ಗಳ ಆಚೆಗೆ ನಮ್ಮ ಕಂಗೀಲು, ಸುಗ್ಗಿ ಕುಣಿತ, ದೈವ ನರ್ತನ,ಭರತ ನಾಟ್ಯ,ಯಕ್ಷಗಾನಗಳ ವಿನಿಮಯ ಹೊಸ ಪರಿಕಲ್ಪನೆಯ ಕನಸನ್ನು ಸಾಕಾರಗೊಳಿಸುವಂತೆ ಪ್ರದರ್ಶನ ಮಾಡಿ, ಕೈ ಚಪ್ಪಾಳೆಗಿಟ್ಟಿಸಿ, ಛಾಯಾಚಿತ್ರ ಕ್ಲಿಕ್ಕಿಸಿ,ಬಣ್ಣ ಬಣ್ಣದ ಸಾಂಸ್ಕೃತಿಕ ವೇಷದ ಅಂಬೆಗಾಲಿಡುವ ಮಗುವಿನಂತೆ ನೃತ್ಯದಲ್ಲಿ ಹಾಕಿದ ಹೊಸ ಹೆಜ್ಜೆಗಳಿಗೆ ಅವಕಾಶ ನೀಡುವಂಥ ಒಂದು ಅಭೂತಪೂರ್ವ ಪ್ರಯತ್ನವನ್ನು ಸಿಸಿಆರ್ ಟಿ ಘಟಕ ಸುಳ್ಯ ನಡೆಸಿದೆ ಎಂಬ ಹೆಮ್ಮೆ ನಮ್ಮದಾಗಿದೆ.
     ನಮಗೆ ಸಾಂಸ್ಕೃತಿಕ ವಿನಿಮಯ ಹೊಸತಾದರೂ ಸಾಂಸ್ಕೃತಿಕ ಕಾರ್ಯಕ್ರಮ ಹೊಸತಲ್ಲ. ಆದರೆ ಉತ್ತರಾಖಾಂಡ ರಾಜ್ಯದ ಜನ ನೋಡಿ ಖುಷಿಪಟ್ಟು ನಮ್ಮೂರಿನ ಕನ್ನಡ ಜಾನಪದ ಹಾಡಿಗೆ ಸಾಮೂಹಿಕ ನೃತ್ಯದಲ್ಲಿ ಭಾಗಿಯಾದದ್ದು ಸ್ವಾರಸ್ಯಕರ ಸ್ನೇಹದ, ಭಾರತ ಮಾತೆಯ ಅದಕ್ಕಿಂತಲೂ ಮಿಗಿಲಾಗಿ  C. C. R. T ಯ ಉದ್ದೇಶವನ್ನು ಈಡೇರಿಸುವ ಪ್ರಯತ್ನ ನಮ್ಮದೇ ಖರ್ಚಿನಲ್ಲಿ!!
   ನಾನು ಪ್ರಯಾಣಿಸಿದ ಪ್ರಯಾಣದ ಬಗ್ಗೆ, ನೀಡಿದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ, ಪಡೆದುಕೊಂಡ ಹೊಸ ಹೊಸ ಅನುಭವಗಳ ಬಗ್ಗೆ, ಹಂಚಿಕೊಂಡ ಸಂತೋಷದ ಕ್ಷಣಗಳ ಬಗ್ಗೆ, ಮುನಿಸಿಕೊಂಡ ಗಳಿಗೆಗಳ ಬಗ್ಗೆ, ಉದ್ಗರಿಸಿದ ಕುತೂಹಲಗಳ ಬಗ್ಗೆ, ಹಸಿರ ಕಾನನ, ಕೊಳದ ಸೌಂದರ್ಯ, ನವೀನ ಅನುಭವ, ಹಂಚಿಕೊಂಡು ತಿಂದ ಊಟ-ತಿಂಡಿ-ತಿನಿಸು, ಕಾಲಕ್ಷೇಪಕ್ಕಾಗಿ ನಡೆಸಿದ ಹರಟೆ,ಸಂಪೂರ್ಣವಾಗಿ ಸಿಕ್ಕ ಸ್ವತಂತ್ರ ಸಮಯದ ವರ್ತನೆಗಳು, ಬೇಕೆಂದಾಗ ಸಿಗದ ಊಟದ ಬಗ್ಗೆ, ದೆಹಲಿ, ಉತ್ತರಾಖಾಂಡ, ಆಗ್ರಾ, ಮಹಾರಾಷ್ಟ್ರ,ಆಂಧ್ರ ಹಾಗೂ ಉತ್ತರ ಕರ್ನಾಟಕಗಳ ಜನ ಜೀವನದ ಅತ್ಯುನ್ನತ ಮಟ್ಟದ ಜೀವನ ಶೈಲಿ, ಕೊಳೆಗೇರಿ-ಝೋಪಡಿಗಳ ಜನರ ಜೀವನದ ಕಷ್ಟಗಳ ಬಗ್ಗೆ, ನಮ್ಮ ತಂಡದ ಸಂಗಡಿಗರ ಸಂಚಲನಗಳ ಬಗ್ಗೆ, ತಂಡದಲ್ಲಿನ ಆತ್ಮೀಯ ವೃತ್ತಿ ಬಾಂಧವರ, ಗೆಳೆಯರ ಬಗ್ಗೆ,ಜೀವನದಲ್ಲಿ ಒಮ್ಮೆ ಮಾತ್ರ ಬಂದು ಹೋಗುವ ಅಪರಿಚಿತ ಸಹ ಪ್ರಯಾಣಿಕರ ಬಗ್ಗೆ, ಆನಂದ ಪಟ್ಟು ತಿಂದ ಲಿಚ್ಚಿ ಹಣ್ಣುಗಳ ಬಗ್ಗೆ, ಅವರವರ ಬಟ್ಟೆ ಬರೆ,ಮಾತು, ಬಣ್ಣ, ಆವೇಶ, ದುಃಖ-ದುಗುಡ, ಕಷ್ಟ-ಸುಖ, ಮೊಬೈಲ್ ಫೋನುಗಳ, ವಸ್ತು, ಹಣ, ಖರೀದಿಗಳ ಬಗ್ಗೆ, ಕೈ ಜಾರಿ ಹೋದ ಕ್ಷಣಗಳಿಗೆ ಅರೆಗಳಿಗೆ ಪೆಚ್ಚಾದ, ಮಂತ್ರಿ -ಮಹೋದಯರ ಬಳಿ ತೆಗೆದ ಫೋಟೋಗಳ ಬಗ್ಗೆ, ಪರ ಊರಿಗೆ ತೆರಳಿದಾದ ಅಲ್ಲಿ ಸಿಕ್ಕ ನಮ್ಮೂರಿನವರ ಪ್ರೀತಿಯ ಬಗ್ಗೆ, ನಮ್ಮೂರಿನ ಊಟ-ತಿಂಡಿಗಳು ಪರ ಊರಿನಲ್ಲಿ ಸಿಕ್ಕಾಗ ಆದ ಸಂತಸದ ಬಗ್ಗೆ,ನಮ್ಮನ್ನು ನಾವೇ ಪ್ರಶ್ನಿಸಿ ಪೆಚ್ಚು ಮೋರೆ ಹಾಕಿದ ಬಗ್ಗೆ, ಮರೆತು ಹೋದ ಮರೆವಿನ ಬಗ್ಗೆ, ಕೈ ಕೊಟ್ಟ ಸಾಮಾನ್ಯ ಜ್ಞಾನದ ಬಗ್ಗೆ, ಗಮನವೀಯದ ಸಣ್ಣ ಪುಟ್ಟ ಅಂಶಗಳಿಂದಾದ ನಷ್ಟದ ಬಗ್ಗೆ, ಮನೆಯಿಂದ ಹೊರಟ ಮೇಲೆ ನಮ್ಮ ಅನುಪಸ್ಥಿತಿಯಲ್ಲಿ ಮನೆಯವರಿಗಾದ ವ್ಯತ್ಯಾಸದ ಬಗ್ಗೆ, ಕೈಯಲ್ಲಿದ್ದ ಹಣ ಖಾಲಿಯಾಗಿ ಸಾಲ ಪಡೆದ ಬಗ್ಗೆ, ಪರರಿಗೆ, ತನ್ನವರಿಗೆ,ಕೈ ನೀಡಿ ಆಧಾರವಾದ ಬಗ್ಗೆ, ನಾವೆಲ್ಲರೂ ಒಂದೇ ಎಂಬ ಭಾವದ ಬಗ್ಗೆ, ಹಾರಿದ ವಿಮಾನದ ವೇಗದ ಬಗ್ಗೆ, ಅಷ್ಟೇ ನಿಧಾನವಾಗಿ ಓಡಿದ ರೈಲಿನ ಅದರ ಸಮಯದ ಬಗ್ಗೆ, ಸಂತೆಯಲ್ಲಿ ಚರ್ಚಿಸಿ ಕೊಂಡ ವಸ್ತುಗಳ ಬಗ್ಗೆ, ಗಾಳಿಯ ವೇಗಕ್ಕೆ ಹಾರಿ ಹೋದ ಧೂಳಿನ ಕಣಗಳ ಬಗ್ಗೆ, ಹೋದ ರೋಪ್ ವೇ  ಇವೆಲ್ಲವುಗಳ ಬಗ್ಗೆ ನನ್ನೆಲ್ಲಾ ಸಹ ಪ್ರಯಾಣಿಕ ತಂಡದವರು ತಮ್ಮ ಅನುಭವಗಳನ್ನು ಬರೆದಿರಬಹುದು. ಆದರೆ ನಾನು ಹೇಳಿರುವುದು ನನ್ನ ದೇಶದ ಸಂಸ್ಕೃತಿ, ಸ್ನೇಹ, ಮೈಮನ ಪುಳಕಗೊಂಡ ಗಂಗಾ ಸ್ನಾನದ ಬಗ್ಗೆ ಈ ಎಲ್ಲಾ ಅನುಭವಗಳ ಸರಮಾಲೆಯ ಹಿಂದಿರುವ ಚಿನ್ನಪ್ಪ ಗೌಡರಿಗೆ ಮತ್ತು ಹಿರಿಯರಾದ ಕೇಶವರಿಗೆ ನನ್ನೆಲ್ಲ ಸ್ನೇಹಿತ ಸಹ ಪ್ರಯಾಣಿಕರಿಗೆ ನಾನು ಮನದಾಳದಿಂದ ಚಿರಋಣಿ.
ಕೊನೆಯ ಮಾತು-ಗಂಗಾಸ್ನಾನ ನಿಜವಾಗಿಯೂ ಪುಣ್ಯ ಸ್ನಾನ.
ಜೈ ಹಿಂದ್, ಜೈ ಕರ್ನಾಟಕ.

1206. ಗಣಪಗೆ ವಂದನೆ

ಕವನ
ಗಣಪಗೆ ವಂದನೆ

ಆನೆಯ ಮುಖದ ಗಣಪಗೆ ವಂದಿಪೆ,
ಕಾಯುತ ಹರಸೋ ಎನ್ನುತ ಬೇಡುವೆ//
ನಂಬಿದ ಜನರನು ಬಿಡದೆಯೆ ಹರಸುವೆ,
ಕಾಯುವ ದೇವನು ನೀನೇ ಎನುವೆ//

ಪಾರ್ವತಿ ಸುತನೆ ಮೊದಲು ವಂದಿಪನೆ,
ದಾರಿಯ ತೋರೋ ಹರನ ಪುತ್ರನೇ.
ಕಾವನು ನೀನೇ ವರವನು ಕೊಡುತ
ಜಾಣನ ಮಾಡು ಬುದ್ಧಿಯ ನೀಡುತ!//

ಏಕದಂತನೆಂಬ ಹೆಸರು ಹೊತ್ತವನೆ
ಗೌರಿ ಪುತ್ರ ಗಜಾನನ ಗಜವದನನೇ
ಮೂಷಿಕ ವಾಹನ ಮೋದಕ ಹಸ್ತನೇ
ಸರ್ವ ವಂದಿತನೇ..ಚಾಮರ ಕರ್ಣನೇ//

ಬಾರೋ ಗಣಪ ಮುಖವನು ತೋರೋ,
ಮಾಡುವ ಕಾರ್ಯದ ವಿಘ್ನವ ಕಳೆಯೋ,
ಮನೆ ಮನವೆಲ್ಲವ ಬೆಳಗುತ ನಡೆಯೋ,
ನಮ್ಮಯ ಹೃದಯದಿ ಭಕ್ತಿಯ ಬೆಳೆಯೋ...//

@ಪ್ರೇಮ್@

1205.ಅಕ್ಕರೆಯ ಹನಿಗಳು

ಹನಿಗವನ

ಮಾತು

ಸಕ್ಕರೆಯಂಥ
ಮನದಲಿ
ಅಕ್ಕರೆಯ
ಮಾತಿರಲಿ,
ಬೆಕ್ಕಸ
ಬೆರಗಾಗಿ
ಕಿವಿಕೊಟ್ಟು
ಕೇಳುವಂತಿರಲಿ!!

2. ಪ್ರೀತಿ

ದುಂಬಿಯ
ಅಕ್ಕರೆಯ
ಸ್ನೇಹವದು
ಹೂವಿನ
ಮೇಲೆ!
ಮಧುವಿನ
ಕೊಡುಕೊಳ್ಳುವಿಕೆ
ಪ್ರೀತಿಯ
ಲೀಲೆ!!
@ಪ್ರೇಮ್@
30.08.2019

1204. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-56

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-56

ಅಪಾರವಾಗಿ ನುಗ್ಗಿದ ನೆರೆಯುಂದಾಗಿ ಮನೆ ಮಠ ಕಳೆದುಕೊಂಡವರ ನೋವು ಒಂದೆಡೆ, ಗಂಜಿ ಕೇಂದ್ರದಲ್ಲಿ ಇದ್ದು, ಹೊತ್ತಿನ ಕೂಳಿಗಾಗಿಯೂ ಪರಿತಪಿಸುತ್ತಿರುವ ಆಕ್ರಂದನ ಮತ್ತೊಂದೆಡೆ. ಶಾಲೆಗಳೆಲ್ಲ ಗಂಜಿ ಕೇಂದ್ರಗಳಾದಾಗ ಅಲ್ಲಿ ಬಂದ ಜನರಿಗೆ ಸರಿಯಾದ ಊಟ ಸಿಕ್ಕಿದರೂ ಟಾಯ್ಲೆಟ್ ರೂಮ್ ವ್ಯವಸ್ಥೆ, ಬಟ್ಟೆ ಬರೆ, ಹೊದ್ದು ಮಲಗುವ ಬಟ್ಟೆಗಳು, ಟವೆಲ್ ಗಳು, ಒಳ ಉಡುಪುಗಳು, ಪ್ರತಿಯೊಬ್ಬರಿಗೂ ಸ್ನಾನಕ್ಕೆ ಬಿಸಿನೀರು(ದಕ್ಷಿಣ ಕನ್ನಡ ಜಿಲ್ಲೆಯಲ್ಲೇನೋ ತಣ್ಣೀರು ಸ್ನಾನ ಮಾಡಬಹುದು, ಮೂಡಿಗೆರೆ, ಕೊಡಗು, ಶಿವಮೊಗ್ಗಗಳಲ್ಲಿ ಸಾಧ್ಯವಿಲ್ಲ),
          ಸಣ್ಣ ಮಕ್ಕಳಿಗೆ ವಿಶೇಷ ಆಹಾರ ಇವೆಲ್ಲ ಸರಿಯಾಗಿ ಸಿಗದು. ಜನರ ಪಾಡು ನಾಯಿಪಾಡು. ನಮಗೆಲ್ಲ ಗೊತ್ತಿದೆ ಒಂದು ಹೊತ್ತಿನ ಊಟದ ಕಾರ್ಯಕ್ರಮ ಮನೆಯಲ್ಲೋ, ಹಾಲ್ ನಲ್ಲೋ ನಡೆದರೆ ಎಷ್ಟು ಪ್ಲಾಸ್ಟಿಕ್ , ಪೇಪರ್ ಕಸ ಹೊರಬರುವುದೆಂದು. ಹಾಗಿರುವಾಗ ಶಾಲೆಯಲ್ಲಿ ಒಂದಷ್ಟು ಜನರಿಂದ ಉಂಟಾಗುವ ಕಸದ ವಿಲೇವಾರಿಯೂ ಕಷ್ಟ. ಬಟ್ಟೆ ಒಗೆಯುವುದು ಕಷ್ಟ, ಒಗೆದ ಬಟ್ಟೆ ಒಣಗದು. ತಮ್ಮತಮ್ಮಲ್ಲೆ ಜನ ಒಬ್ಬರಿಗೊಬ್ಬರು ಸಾಂತ್ವನ ಹೇಳುವವರು ಒಂದೆಡೆಯಾದರೆ ಕಳ್ಳರು ಮತ್ತೊಂದೆಡೆ, ಕಾಮುಕರು ಇನ್ನೊಂದೆಡೆ! ಹೆಣ್ಣು ಮಕ್ಕಳೇನು, ಮುದುಕಿಯರನ್ನೂ ಬಿಡದವರು! ಕುಡುಕರು ಅಲ್ಲಿ! ಓಹೋ.. ಅಲ್ಲಿನ ಪರಿಸ್ಥಿತಿ ದೇವರೇ ಬಲ್ಲ!
        ಮಕ್ಕಳ ಅಳು, ಕೂಗು ಒಂದೆಡೆ ಮುಗಿಲು ಮುಟ್ಟಿದರೆ ಮತ್ತೊಂದೆಡೆ ಹಿರಿಯರ ಮಾತುಕತೆ, ಜಗಳ, ಹಾಹಾಕಾರಗಳು! ಇನ್ನು ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಕಷ್ಟಸಾಧ್ಯ! ಮತ್ತೆ ಎಲ್ಲಾ ಸರಿಯಾದ ಮೇಲೆ ಶಾಲೆಗಳನ್ನು ಯೋಗ್ಯ ರೀತಿಗೆ ತರುವ ಜವಾಬ್ದಾರಿ ಶಿಕ್ಷಕರು ಮತ್ತು ಮಕ್ಕಳದ್ದು!
      ಜನರ ನೋವು ಅವರಿಗೇ ಗೊತ್ತು! ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರೇ ಮಳೆಯಲ್ಲಿ ಕೊಚ್ಚಿ ಹೋದಾಗ, ಜೀವನವಿಡೀ ದುಡಿದು ಸಾಲಮಾಡಿ ಕಟ್ಟಿದ ಸೂರು ಕಣ್ಣಮುಂದೇ ನೆಲಕ್ಕಚ್ಚಿದಾಗ, ಗದ್ದೆಯೆಲ್ಲ ಕೆಸರ ಸಾಗರದಲ್ಲಿ ಮುಳುಗಿ ಹೋದಾಗ, ಪ್ರೀತಿಯಿಂದ ಬೆಳೆದ ಅಡಿಕೆ, ತೆಂಗಿನ ಮರಗಳು  ನೆಲಕ್ಕುರುಳಿ ಬಿದ್ದಾಗ, ಕಾಳು ಮೆಣಸು, ಕಾಫಿ, ಏಲಕ್ಕಿ ,ಹೂವಿನ ಗಿಡಗಳು ಸರ್ವನಾಶವಾಗಿ ಹೋದಾಗ ಆಗುವ ನೋವು ಅದು ಅನುಭವಿಸಿದವನಿಗೇ ಗೊತ್ತು!
    ದೇವರು ದೊಡ್ಡವರು ಎಂದು ಅವರನ್ನೇ ಪೂಜಿಸುತ್ತೇವೆ. ಏನೇ ಮಾಡಿದರೂ, ಸುಖ ಕೊಟ್ಟರೂ, ದುಃಖವಿತ್ತರೂ ಅವರನ್ನೇ ಬೇಡುವವರು ನಾವು! ದೇವರೆಲ್ಲಿದ್ದಾನೆಂದು ಘರ್ಜಿಸಿ ಬಾಳಿದವನೂ ಪರಿಸ್ಥಿತಿ ನೋಡಿ, "ದೇವಾ, ಹೀಗಾಗಬಾರದಿತ್ತು! "ಎನ್ನುತ್ತಾನೆ. ಪ್ರಕೃತಿ ಕೆಟ್ಟದಲ್ಲ, ಯಾವುದೂ ಕೆಡುಕನ್ನುಂಟು ಮಾಡುವುದೂ ಇಲ್ಲ, ಹೆಚ್ಚಾದ ಮಾನವನ ಪರಿಸರ ನಾಶ, ಜನಸಂಖ್ಯೆ, ಮಾಲಿನ್ಯಗಳಿಂದಾಗಿ ತನ್ನನ್ನು ತಾನು ಸಂಭಾಳಿಸಲಾಗದೆ ಅಸಮತೋಲನವಾಗಿ, ಸಮತೋಲನ ಮಾಡಿಕೊಳ್ಳಲಾಗದೆ ಅಲ್ಲಲ್ಲಿ ಕಟ್ಟೆಯೊಡೆದು ಹರಿದಿದೆ! ವೈಪ್ಯರೀತ್ಯಗಳು ನೆಲವನ್ನು ನಡುಗಿಸ ಬಹುದು, ತೋಟವನ್ನು, ಮನೆಗಳನ್ನು ಉರುಳಿಸಬಹುದು, ಮನೆಯೊಳಗೆ ನೀರು ನುಗ್ಗಬಹುದು ಅಥವಾ ಭೂಮಿಯನ್ನೆ ಒಡೆಯಬಹುದು! ಪ್ರಕೃತಿಗೆ ನಾವು ತಲೆಬಾಗಲೇ ಬೇಕು, ನೀವೇನಂತೀರಿ?
@ಪ್ರೇಮ್@
21.08.2019