ಕರ್ನಾಟಕವಿದು...
ಕನ್ನಡದ ತವರಿದು ಬಾ ಕಂದ ಕುಣಿದು
ಮನದೊಳಗೆ ಖುಷಿಪಡುವೆ ನೀ ಮನದಣಿದು..//ಪ//
ಪಂಪ ಹರಿಹರ ರನ್ನ ಜನ್ನರನೋದಿಹೆವು
ಕುವೆಂಪು ಬೇಂದ್ರೆಯ ಕೃತಿಗಳ ಆರಾದಿಸುತಿಹೆವು..
ನೀಲಕಂಠನ ನೀಲಿ ಕಡಲ ತಡಿಯಲಿ ಆಡಿ
ಸೂರ್ಯನ ಕೆಂಪು ಕಿರಣ
ಕನ್ನಡ ಬಾವುಟದಲಿ ನೋಡಿ//
ಆರೋಗ್ಯದ ಅರಶಿನವೂ ಬಣ್ಣ ತಳೆದಿಹುದಿಲ್ಲಿ
ನುಡಿ ಕನ್ನಡ ನಡೆ ಕನ್ನಡ ಎಂದ ರತ್ನನ ಪದಗಳಲಿ..//
ಸರ್ವಜ್ಞನ ವಚನಗಳ ಅಂದವ ಹಾಡಿ
ಡಿವಿಜಿಯ ಕಗ್ಗಗಳು ನಿತ್ಯ ಮನದಿ ಮೂಡಿ//
ರಾಜ ಕುಮಾರನ ಕಂಠಕಿಹುದು ತನ್ನದೇ ಮೋಡಿ
ಭುವನೇಶ್ವರಿ ನಗುತಿಹಳು ಹೆಮ್ಮೆಯಿಂದ ಮಕ್ಕಳ ಕೂಡಿ//
ಅಮೇರಿಕೆಯಲೂ ಇಹುದಂತೆ ಕನ್ನಡದ ತೇರು
ಎಳೆಯುತಿರುವವರು ಕನ್ನಡಮ್ಮನ ಮಕ್ಕಳಲ್ಲದೆ ಮತ್ತಾರು//
ತನುಮನ ಹೃದಯವೂ ಕನ್ನಡದಲಿ ವ್ಯವಹರಿಸಲಿ
ದೆಹಲಿಯೊಳೂ ಇದೆ ಕನ್ನಡ ಸಂಘ ತಿಳಿದು ನಲಿ//
ಎಲ್ಲೇ ಹೋದರೂ ಏನೇ ಬಂದರೂ ಕನ್ನಡ ಬಿಡಬೇಡಿ..
ಎಲ್ಲಾ ಭಾಷೆಗಳ ಕಲಿತು, ಕನ್ನಡವ ಮಾತನಾಡದೆ ಇರಬೇಡಿ...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ