ಮನುಜಾ...
ಅಪಕಾರ ಮಾಡಿರುವೆ ಉಪಕಾರ ನೀಡಿದೆನಗೆ
ಅವ್ಯವಸ್ಥೆಗೆ ದೂಕಿರುವೆ ವ್ಯವಸ್ಥೆಯೊಳಗೆ ತಂದ ನನಗೆ..
ಅಪಹರಣ ಮಾಡಿರುವೆ ನನ್ನ ಸ್ವಚ್ಛ ಹಸಿರನು
ಅಜಗಜಾಂತರಕೀಡಾಗಿಸಿದೆ ನನ್ನೀ ಉಸಿರನು..
ಅಪರೂಪದ ಪಶುಪಕ್ಷಿಗಳ ಬದುಕಲು ಬಿಡದೆ,
ಅಹಾರದಲಿ ವಿಷ ಬೆರೆಸಿ ಬದುಕಲೂ ಕೊಡದೆ,
ಅರೆವಳಿಕೆಯಂದದಿ ಖಾಯಿಲೆಗಳ ತರಿಸಿ
ಅದರಿಂದ ನಿತ್ಯ ಕಣ್ಣೀರ ಹನಿಹನಿದು ಸುರಿಸಿ..
ಅಪಕಾರ ಒಳಿತಲ್ಲ ಅವಸರವು ನಿನಗೇಕೆ?
ಅವಸಾನ ಕೊನೆಗೆ ಹೋಗುವಗೆ ಧನ ಪೂರ ಬೇಕೆ?
ಅನವರತ ನೆನೆಯೆನ್ನ ಆರೋಗ್ಯವಾಗಿರುವೆ
ಅಗಣಿತ ಮನಗಳಿಗೆ ನೀ ನೆರಳಾಗಿ ಬಾಳುವೆ...
ಅಖಂಡ ಭೂಮಿಗೆ ಮಾನವನಾಗಿ ಅವತರಿಸಿರುವೆ
ಅಪರಾಧಿಯಾಗಿರದಿರೆ ಅಚ್ಚುಕಟ್ಟಾಗಿ ನೀ ಬಾಳುವೆ..
ಅಂಕೆಯಿಲ್ಲದ ಹಣ ಒಡವೆ ಅತಿಯಾಸೆಯೇಕೆ..
ಅರಸಾಗಿ ಹಸಿರ ಬೆಳೆಸುತ ಬದುಕಬಾರದೇಕೆ?
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ