ಸೋಮವಾರ, ಡಿಸೆಂಬರ್ 17, 2018

649. ಭಾವ ಬಳ್ಳಿ ಬೆಳೆಯಲಿ

ಭಾವ ಬಳ್ಳಿ ಬೆಳೆಯಲಿ

ಕಣ್ಣ ನೀರು ಕರಗಲಿ
ಕಂದಕವು ತೊಲಗಲಿ
ಮನದ ದುಗುಡ ದೂರ ಹೋಗಿ
ಮನದ ಭಾವ ಬೆಳೆಯಲಿ..

ಕನಸು ನನಸಿಗೆ ಬರಲಿ
ವದನ ನಗೆಯ ಸ್ಫುರಿಸಲಿ
ಭೂಮಿತಾಯ ವೇದನೆಗೆ
ಜೀವ ಕಣ್ಣೀರು ಹರಿಸಲಿ..

ವಿನಯತೆಯು ಬೆಳಗಲಿ
ಶಾಂತಿ ಮಂತ್ರ ಮೊಳಗಲಿ
ವೀರ ಮನದ ಯೋಧರಿಗೆ
ಗೌರವಾರ್ಪಣೆ ಮೂಡಿ ಬರಲಿ..

ಆನಂದ ಭಾಷ್ಪ ಚಿಮ್ಮಲಿ
ಪ್ರೀತಿಯುದಕ ಹೊಮ್ಮಲಿ
ಹೃದಯಗಳು ಒಟ್ಟು ಸೇರಿ
ಮನವು ಶಾಂತಿ ಗಳಿಸಲಿ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ