ಶನಿವಾರ, ಡಿಸೆಂಬರ್ 15, 2018

648. ಬಾಳು

ಶ್ವಾನ

ನಿತ್ಯ ನಿಯಮ ನೀತಿ ನಿಯತ್ತು ಬೇಕೆ?
ನೋಡಿರೊಂದು ನಾಯಿಮರಿಯ ಸಾಕಿ..
ನಿಜವ ನುಡಿವೆ ನೂರುಪಟ್ಟು, ಸಂಶಯ ಯಾಕೆ?
ನೋಡು ನೋಡುತ್ತಿರುವಂತೆ ಶ್ವಾನ ಬರುತಿರುವುದು ಜೋಕೆ!

ನೀಡಿದವಗೆ ನೆಮ್ಮದಿಯ ನೀಡದಿರದು ಪ್ರಾಣಿ
ನಾಡಿಮಿಡಿತ ಇರುವವರೆಗೆ ಮನುಜರೆಂಬ ವಾಣಿ!
ನಡುವೆ ಹೆಣವು ನೆನೆದ ಗುಣವ ಹೊರದ ಮೂರ್ಖ
ನೋವಿನಲ್ಲು ನಗುವ ದೇವದೂತ ಗೂರ್ಖ!

ನಗೆಗಡಲಲಿ ತೇಲಬೇಕು ನಗುವ ಬಾಳ ಬಾಳಬೇಕು
ನಲ್ಮೆಯ ಗುಣ ಬೆಳೆಸಿಕೊಂಡು ನಾಟ್ಯವಾಡೆ ಬದುಕಬೇಕು...
ನಾಳೆ ಚಿಂತೆ ನಮಗೇತಕೆ?ನಾಮ ಹಾಕಿ ಬದುಕಬೇಕೆ?

ನೋಡಿಕೊಳಲು ದೇವನಿಹನು ನ್ಯಾಯ ನೀತಿ ಧರ್ಮವಿರಲು..
ನಿಯತ ನೀರ ಬಳಸುವಂತೆ ನೋಟದಲ್ಲು ನೋವು ನಗಲಿ..

ನಂದಿಯಂತೆ ಪರರ ಹಿತವ ನೂರು ಜನಕೆ ಬಯಸಿ ಬರುವ
ನಾಗ ದೇವರಂತೆ ಬಂದು ನವ್ಯ ಪದದ ಗೂಡು ಕಟ್ಟಿ..

ನವೋದಯವ ನಡುವೆ ತಂದು  ಕಾಲ ಯಾವುದಾದರೇನು?
ಖುಷಿಯ ಬಾಳು ಬೆಳಗುತಿರಲಿಕಸುವು ಎದ್ದು ನಗುತಲಿರಲಿ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ