ಕಟ್ಟಿದ್ದೆ ರಕ್ಷೆಯನು ಬಿಡಬೇಡ ಎಂದು
ಬಂಧನವು ಅನುದಿನವು ಬಿಡಬಾರದೆಂದು
ಅದೇಕೆ ಹಾಗಾಯ್ತೋ ನೋವು ನೂರಾಯ್ತು
ಕಾಳಜಿ ಕಡಿಮೆಯಾಗಿ ಮನವು ಚೂರಾಯ್ತು
ಮನವು ಮರ್ಕಟವಿಲ್ಲಿ ಇಂದಿನಂತೆ ನಾಳಿಲ್ಲ
ತನುವ ಬಯಸಲು ಜನರಿಗೇನು ಕಮ್ಮಿಯಿಲ್ಲ
ಅಕ್ಕ ತಂಗಿಯ ತೆರದಿ ಕಾಣುವವರಿಲ್ಲ
ಬೇಕೇ ಬೇಕು ತಮಗೆ ಸಿಕ್ಕಿದ್ದ ಅನುಭವಿಸಲಿಕ್ಕೆಲ್ಲ
ಬಾಳು ಚೂರಾಗಿ ಮಾತು ನೀರಾಗಿ ಹೋಗಿತ್ತು
ಕಾಳು ನುಂಗಿದ ಹಕ್ಕಿ ಪರರ ಪಾಲಾಗಿತ್ತು
ಹಾಲು ಮನವದು ಹೋಳು ಹೋಳಾಗಿತ್ತು
ಬಾಳುವೆಯು ಆಸೆ ಮುಗಿಸಿ ಹೊರಡಲನುವಾಗಿತ್ತು
ತಾನು ತನ್ನದು ಎಂದು ಏನಿಹುದು ಜಗದೊಳಗೆ
ಬಂದಾಗ ಬೇರೆಯೇ ಮನೆಯಿಂದ ಹೊರಗೆ
ದೈವ ದೇವರಿಗೆ ಮೊರೆ ಇಡಬೇಕು ಅರೆ ಘಳಿಗೆ
ಇಲ್ಲವಾದರೆ ತುಂಬದು ನಮ್ಮೀ ಮನದ ಜೋಳಿಗೆ
@ಹನಿಬಿಂದು@
19.08.2024
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ