ಮಂಗಳವಾರ, ಫೆಬ್ರವರಿ 3, 2026

ಗಾಲಿ ಪಟ

ಗಾಲಿ ಪಟ 

ಬಲೆ ಪಿದಾಯಿ ಉಲಯಿಡ್ದ್
ಕನಲೆ ಉದ್ದೊದ ನೂಲುನು
ಬುಡ್ಕ ನಮ ಗಾಲಿ ಪಟೊನು 
ಪತೊನ್ಲೆ ಗಟ್ಟಿ ಪಾರ್ದ್ ತುಂಡಾವು 

ಬನ್ನ ಬನ್ನೊದ ಬಾನೊಡು ರಾಪಿನ
ಬಾನೊಡೆ  ಮಿತ್ತ್ ಮಿತ್ತ್  ಪೋಪಿನ
ಪೋದೊರ ನಮನ್ ಅಲ್ಪಡ್ದ್ ನಿಲ್ಕುನ
ನೂಲುನು ತೂದು ಗಟ್ಟಿಡೆ ಉಂತುನ 

ಜಾಲಿ ಬುಡಿಯೆರೆ ಗಾಲಿ ಪಟ 
ಗಾಲಿ ಬತ್‌ಂಡ ಪೂರ ನಷ್ಟ
ಸಾಲ್ ಸಾಲ್‌ಡ್ ಉಂತ್ಯ ಮೂಲು
ನಾಲ್ ದಿನೊತ ಬಾಲ್ ತೂಲ

ಏತೆ ಮಿತ್ತ್ ಪೋಯಂಡಲ
ತಿರ್ತ್ ಬೂರುವ ಒಂಜಿ ದಿನ
ಮಲ್ಲ ಎಲ್ಯವು ದೇವೆರ್ನ
ಕೂಡ್ದ್ ಬದ್ಕ್ ಗ ಎಡ್ಡೆಡ್ ನಮ
@ಹನಿಬಿಂದು@
03.02.2026

ಭಾನುವಾರ, ಫೆಬ್ರವರಿ 1, 2026

ಗಾಳಿಪಟ

ಗಾಳಿಪಟ 

ಬಾನಿನ ಬಯಲಲಿ ಗಾಳಿಯ ಪಟವನು 
ಹಾರಿಸಿ ಬಿಡುವೆವು ನಾವು
ಕಾಣದ ತುದಿಗೂ ತಲುಪಿಸೊ 
ನೂಲಿದೆ ಕೈಯಲ್ಲಿ  ತಾವು

ಕತ್ತಲೆಯಾಯಿತು ಮನೆಕಡೆ ಹೋಗಲು
ಅಮ್ಮನ ಬೈಗುಳ ಉಂಟು
ಮಕ್ಕಳೆ ಹೋಗಿ ಎಲ್ಲಿ ಇರುವಿರಿ 
ಎನ್ನುವ ಜೋರಿನ ನಂಟು

ನೂಲದು ಕಾಣದು ಪಟವೇ ಮೇಲೆ
ಎತ್ತರಕೇರಲು ಬೇಕು
ಕೈ ಹಿಡಿಯುವ ಧೈರ್ಯವ ಕೊಡುವ
ಗೆಳೆಯನು ಬಾಳಿಗೆ ಸಾಕು

ನನ್ನೊಡನೆನಗೆ ನೀನಿರೆ ಬಾಳಲಿ
ಸಾಧಿಸಿ ಬಿಡುವೆ ನಾನು
ಎತ್ತರಕೇರುವೆ ಎಲ್ಲರಿಗಿಂತಲೂ
ಗಾಳಿಯ ಪಟವೇ ತಾನು
@ಹನಿಬಿಂದು@
02.02.2026

ಶುಕ್ರವಾರ, ಜನವರಿ 30, 2026

ಗಾಂಧಿ ತಾತಗೆ

ಗಾಂಧಿ ಕೇಳು...

ಗಾಂಧಿ ತಾತ ನೀನು ಹುಟ್ಟಿ  ಏನೋ ಮಾಡಿದೆ
ಮಂದಿ ನಿನ್ನ ಹೆಸರು ಹೇಳಿ ಅನ್ಯಾಯ ಬೆಳೆಸಿದೆ
ರಸ್ತೆಗಳಿಗೂ ಕೆಲಸಗಳಿಗೂ ನಿನ್ನ ಹೆಸರಿದೆ
ಆದರೇನು ಸರಿಯಾದ ಕಾರ್ಯ ನಡೆಯದಾಗಿದೆ

ನಿನ್ನ ಜನುಮದಿನದಂದು ಸ್ವಚ್ಛತೆಯು ಸಾಗಿದೆ
ಮರುದಿನವೇ ಕಸದ  ರಾಶಿ ಅಲ್ಲೇ ಬಿದ್ದಿದೆ
ನಿನ್ನ ನಡೆಯ ಜನರು ಎಲ್ಲ ಆಡುತಿರುವರು
ನೀನು ಹೇಳಿ ಕೊಟ್ಟ ಕಾರ್ಯ ಮಾಡಲೊಲ್ಲರು

ನಿನ್ನ ಹೆಸರಲ್ಲೆಲ್ಲ ತಾವು ಹಣವ ಗಳಿಸುತ
ತಮ್ಮ ತಮ್ಮ ಜೇಬು ಭರ್ತಿ ಮಾಡಿ ನಗುವ ಚೆಲ್ಲುತ
ತಿಂದು ಉಳಿದುದಲ್ಲಲ್ಲೆಸೆದು ಮುಂದೆ ಸಾಗುತ 
ಸ್ವಚ್ಛ ಎಂದು ಗಿಡ ಮರಗಳ ಕಡಿ ಕಡಿದು ಎಸೆಯುತ...

ಪ್ಲಾಸ್ಟಿಕ್ ರಾಕ್ಷಸನ ಬಳಸುತಲೆ ಬಾಳುವರು
ರಸ್ತೆ ರಸ್ತೆಗಳಿಗೂ ಅದನು ಬಿಸಾಕಿ ಬಿಡುವರು
ಯಾರೋ ಬಂದು ಎಲ್ಲ ಎತ್ತಿ ಫೋಟೋ ತೆಗೆವರು
ಎಸೆವ ಜನಕೆ ಇಲ್ಲಿ ಯಾರೂ ಏನೂ ಹೇಳರು

ಚಾಕಲೇಟು ಚಿಪ್ಸ್ ತಿನುವ ಮಕ್ಕಳಿರುವರು
ತಿಂದು ಕಸವ ಅಲ್ಲೇ ಸುರಿದು ಮುಂದೆ ಸಾಗುವರು
ಯಾರಿಗಿಲ್ಲಿ ಯಾರು ಹೇಳು ಯಾರು ಕೇಳುವರು
ತಾನೇ ಎನುತ ಎಲ್ಲಾ ಕಡೆಯು ತಾವೇ ಮೆರೆವರು

ಬದುಕ ಜಾಲದಲ್ಲಿ ನಿನ್ನ ಮಾತು ಮರೆತರು
ಹೆಂಡ ಬಿಯರ್ ಹಾಟ್ ಇಲ್ಲದೆ ಪಾರ್ಟಿ ಮಾಡರು
ತುಂಡು ತಿಂದು ತೇಗಿ ಬಳಿಕ ಪ್ರಾಣಿ ಹಿಂಸೆ ಎನುವರು 
ತಮ್ಮ ಬದುಕು ಸರಿಯಾಗಿದೆ ಅಂದು ಕೊಂಡರು

ನಿನ್ನ ಪದವ ಗಾಳಿಗೆಲ್ಲೋ ತೂರಿ ಆಗಿದೆ
ತಾನೇ ದೇವರೆನುತ ಇಂದು ಬಾಳು ಸಾಗಿದೆ
ನೀನು ಇಲ್ಲಿ ಹೆಸರಿಗಷ್ಟೇ ರಾಜಕೀಯ ಮಾಡಲು
ನಿನ್ನ ನಾಮ ಬೇಕಿಹುದು ಹಲವು ಆಟವಾಡಲು..
@ಹನಿಬಿಂದು@
30.01.2026

ಗುರುವಾರ, ಜನವರಿ 29, 2026

ರವೆ ಪುಂಡಿ

ರವೆ ಪುಂಡಿ
ಚಿಕ್ಕಮಗಳೂರಿನ ಬೆಳಗ್ಗಿನ ತಿಂಡಿಗೆ ಮಾಡುವ, ಬೇಗ ಆಗುವ , ಎಣ್ಣೆ ಉಪಯೋಗ ಇಲ್ಲದ ಆರೋಗ್ಯಕರ ತಿಂಡಿ. 
ಬೇಕಾಗುವ ವಸ್ತುಗಳು
1. ನೀರು
2. ಬಾಂಬೆ ರವೆ/ಅಕ್ಕಿ ರವೆ
3. ಉಪ್ಪು

ವಿಧಾನ: 
1. ಒಂದೂವರೆ ಗ್ಲಾಸ್ ನೀರಿಗೆ ಒಂದು ಗ್ಲಾಸ್ ರವೆ ಅಳತೆಯಲ್ಲಿ ನೀರು ಕುದಿಯಲು ಇಡಬೇಕು. 
2. ಕುದಿದ ನೀರಿಗೆ 1 ಗ್ಲಾಸ್ ರವೆಯನ್ನು ಸ್ವಲ್ಪ ಸ್ವಲ್ಪವಾಗಿ ಉದುರಿಸಿ, ಗಂಟಾಗದ ಹಾಗೆ ನೋಡಿಕೊಳ್ಳಬೇಕು. 
3. ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.
4. ಕಡಿಮೆ ಉರಿಯಲ್ಲಿ ಮಗುಚುತ್ತಾ ಗಟ್ಟಿಯಾಗುವವರೆಗೆ ಇದ್ದು ನಂತರ ಪಾತ್ರೆ ಸ್ಟವ್ನಿಂದ  ಕೆಳಗಿಳಿಸಬೇಕು.
5. ಇಡ್ಲಿ ಪಾತ್ರೆಯಲ್ಲಿ ನೀರಿಟ್ಟು ನೀರು ಕುದಿದ ಕೂಡಲೇ ಅದರ ಅಟ್ಟಿ ಇಟ್ಟು, ಪುಂಡಿ ಮಾಡುತ್ತಾ ಅದರ ಒಳಗೆ ಹಾಕಿ 10 ನಿಮಿಷ ಬೇಯಿಸಬೇಕು. ನಮ್ಮ ರವೆ ಪುಂಡಿ ರೆಡಿ. 
6. ಬೇಕಾದರೆ ಇದಕ್ಕೆ ಕ್ಯಾರೆಟ್ ತುರಿ, ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ನೀರುಳ್ಳಿ ಹುರಿದು ಸೇರಿಸಿಕೊಳ್ಳಬಹುದು. 
@ಹನಿಬಿಂದು@
29.01.2026

ಸೋಮವಾರ, ಜನವರಿ 26, 2026

ಪೋಷಕ ವಾತ್ಸಲ್ಯ

ಪೋಷಕ ವಾತ್ಸಲ್ಯ

ಕೌಸಲ್ಯೆ ಮಾತ್ರವಲ್ಲ ಪ್ರತಿ ತಾಯ ವಾತ್ಸಲ್ಯ
ಪುತ್ರ ಪುತ್ರಿ ಮನೆ ಹಿರಿಯರಿಗೆ
ಭವಿಷ್ಯತ್ತಿನ ಯೋಚನೆ, ಯೋಜನೆ ವೈಶಾಲ್ಯ
ಉಸ್ತುವಾರಿ ಜೊತೆ ಹಣ ಸಕಲರಿಗೆ..

ರಕ್ಷಣೆಯ ಹೊಣೆ ಹೊತ್ತ ಮಾತಾಪಿತರ ನೀತಿ
ಭಕ್ಷಣೆಗೆ ತಂದಿತ್ತರೂ ಒಣ ಭೀತಿ
ಅಗತ್ಯಕ್ಕೆ ತಕ್ಕಂತೆ ಬೇಕಾದುದೆಲ್ಲ ಒದಗಿಸುವ ಸ್ಪೂರ್ತಿ
ದುಡಿತವೆಲ್ಲ ಮಕ್ಕಳಿಗೆ, ಕುಟುಂಬ ಪ್ರೀತಿ

ನಿರ್ಲಕ್ಷ್ಯವಿಲ್ಲ ಇಲ್ಲಿ ಪೋಷಣೆ ಗಮನ ಆರೈಕೆ
ಸೂಕ್ತ ವ್ಯವಸ್ಥೆ ನಿತ್ಯ ಒದಗಿಸುವರು
ಕಲ್ಪಿಸುತ ಸೌಲಭ್ಯಗಳ ಖರ್ಚು ವೆಚ್ಚ ಭರಿಸಿ
ಹಿಂದಿನ ಮುಂದಿನ ನಾಳೆಗಳ ಯೋಜಿಸುವರು

ಸವಾಲುಗಳು ಅದೆಷ್ಟೋ ಮನುಷ್ಯ ಬದುಕ ನೋವುಗಳೋ 
ಆದರೂ ನಿರ್ಮಿಸುತ ಕನಸ ಮಹಲುಗಳ
ಸಂಪನ್ಮೂಲಗಳ ಕೊರತೆ ಇರಬಹುದು ಅಲ್ಲೆಲ್ಲೋ
ಕುಟುಂಬದ ಸಹಭಾಗಿತ್ಯ ಪ್ರೀತಿ ಬಯಸುವ ಜೀವಗಳು
@ಹನಿಬಿಂದು@
08.12.2025




ದಾಯೆ

ಐನೆಸಲ್ 

ದಾಯೆ 

ಪಿರವುದ ಸೀಟ್‌ಡ್ ಕುಲ್ದಿತ್ತೆ
ಎದುರುಗು ಕೈನ್ ಕನವೊಂದಿತ್ತೆ
ಎದ್‌ರ್ ಕುಲ್ದಿನ ಪೊಣ್ಣನ ಮಿತ್ತ್ ಆಯೆ
ಸರಿಟ್ಟೆ ಒಂಜಿ ಮಲ್ಲ ಕನ್ ದೀಯೆ
ಉಂದು ಪೂರ ದಾಯೆ ಪಂಡ ಆಯೆ ಮಸ್ತ್ ಪರ್ದಿತ್ತೆ
@ಹನಿಬಿಂದು@
26.01.2026

ಶುಕ್ರವಾರ, ಜನವರಿ 9, 2026

ಪಿಟ್ಟಿ ಕತೆ ಸಾಯ ಆವೊಡು

ಪಿಟ್ಟಿ ಕತೆ 

ಸಾಯ ಆವೊಡು 

ರಕ್ಷಾಗ್ ದೇವೆರ್ ದಾಲ ಕಮ್ಮಿ ಮಲ್ದಿಜೆರ್. ದೇವೆರೆ ದಯೊಟ್ಟು ಪುಟ್ಟಿನ ಇಲ್ಲ ಬೊಕ್ಕ ಪೋಯಿನ ಇಲ್ಲ ರಡ್ ಕಡೆಟ್‌ಲಾ ಬೋಡಾಯಿನಾತ್ ಉಂಡು. ಪೊಪ್ಪ ಅಮ್ಮನಕ್ಲು ವಿದ್ಯೆ ಬುದ್ಧಿ ಕೊರ್ದು ಶಾಲೆ ಕಲ್ಪದ್ ಗವರ್ಮೆಂಟ್ ಬೇಲೆ ತಿಕ್ಂಡ್. ಮದಿಮೆ ಆದ್ ಕೈ ಪತ್ತಿನ ಕಂಡನಿ ರಾಕೇಶ್‌ಲ ಗವರ್ನೆಂಟ್ ಬೇಲೆದಾರೆ. ನನ ದಾದ ಕಮ್ಮಿ? 
ಬೇಲೆ ಉಂಡು, ಸ್ವಂತ ಇಲ್ಲ ಬದ್ಕ್ ಉಂಡು, ಜಾಗೆ ಉಂಡು, ಪದ್ದಯಿ ಬಂಗಾರ್ ಉಂಡು, ನನ ದಾದ ಮಂಡೆ ಬೆಚ್ಚ? ರಡ್ಡ್ ಪೊರ್ಲಕಂಟ್ ಆಣ್ ಜೋಕುಲುಲಾ ಉಲ್ಲೆರ್. ಅಕುಲ್ಲಾ ಎಡ್ಡೆ ಕಲ್ತೊಂದು ಉಲ್ಲೆರ್. 

ಆಂಡ ರಕ್ಷನ ಪಿಟ್ಟಾಸಿ ಗುನ. ಓಲು ದಾದ ಇತ್‌ಂಡಲ ಅಲೆಗೆ ಬೋಡು ಪನ್ಪಿನ ಆಸೆ. ಅಲ್ ಒಂಜಿ ಹಾಸ್ಥೆಲ್ಡ್ ವಾರ್ಡನ್. ಅಲ್ಪ ಜೋಕ್ಲೆಗ್ ಪಂದ್ ಬರ್ಪಿನ ತೆತ್ತಿ, ಕೋರಿ, ಸಾಮಾನ್, ಮೀನ್, ಪೌಡರ್, ಸಾಬೂನು ಪೂರಾ ರಕ್ಷಾನ ಇಲ್ಲಡೆ ಬತ್ ಅಕ್ಲೆಗ್ ನಾಲ್ ಜನಕ್ ಬೋಡಾಯಿನಾತ್ ದೀವೊನಿ ಬೊಕ್ಕ ಒರಿನ ಜೋಕ್ಲೆಗ್ ಪೋಪುಂಡು. ಕಂಡನಿ ಮಾಷ್ಟ್ರು. ಅರೆಗ್ ಬಾರಿ ಕುಸಿ. ತನ್ಕ್ ದಾಲ ಇಲ್ಲದ ಕರ್ಚಿದ ಮಂಡೆಬೆಚ್ಚ ಇಜ್ಜತ್ತಾ ಪಂದ್. 
ಆಂಡ ದೇವೆರೆನ ಕನ್ ಕಟ್ಟಿನಾಯೆ ಏರ್ಲಾ ಇಜ್ಜಿ. ನಲ್ಪ ಒರ್ಸೊಡೆ ರಕ್ಷಾ ಬೊಕ್ಕ ರಾಲೇಶ್ ರಡ್ಡ್ ಜನಕ್ಲಾ ಸಕ್ಕರೆ ಕಾಯಿಲೆ ಒಟ್ಟಿಗೆ ಬಿಪಿ. ಅಂಚ ವನಸ್ ದಾಲ ತಿನಿಯರೆ ಇಜ್ಜಿ, ಸೀಪೆದಲ ಇಜ್ಜಿ, ಬೊಕ್ಕ ಪೂರ ನುಂಗೆಲ್ ಪರ್ಂದ್, ಚಪಾತಿ ಉಂದುವೆ. 
ಇಪ್ಪುನಗ ನಾಲ್ ಜನಕ್ ನಮ ಸಾಯ ಆವೊಡು. 
@ಹನಿಬಿಂದು@
10.01.2026