ಶುಕ್ರವಾರ, ಮೇ 31, 2019

1032. ವಚನ

ವಚನ

ನಾನು ನನ್ನದೆನಲೇನಿದೆ
ಸರ್ವಸ್ವವೂ ನಿನ್ನದೆ ಗುರುವೆ,
ಸರ್ವರಿಗೆ ಹಂಚುವವನೂ ನೀನೇ
ಸರ್ವರಿಂದ ಪಡೆವವನೂ ನೀನೆ ಶಿವಾ...
@ಪ್ರೇಮ್@
01.06.2019

1031. ಸಹಾಯವಿರಲಿ ಸರ್ವರಿಗೆ

ಸಹಾಯವಿರಲಿ ಸರ್ವರರಲಿ..

ಓ ಭಾರತ ಮಾತೆಯೇ ನೀನು
ಜನನವ ನೀಡಿಹೆ ನಮಗೆ
ಉದರದಿ ಇಳಿಸುತ ನಮ್ಮ
ಸಲಹುತಲಿರುವೆ ನಿರಂತರ//

ನಿನ್ನಯ ಕಂದರು ನಾವು
ಕೋಪವ ತೋರುತ ಬೆಳೆದು
ಪರಸ್ಪರ ಜಗಳದಿ  ಕಳೆದು
ನಿನ್ನಯ ಹೆಸರನೆ ನೆನೆಯಲು ಮರೆತು..

ಕೃತಜ್ಞತೆ ಎಂಬುದ ತೊರೆದು
ಮನೆ ಮನ ಬೆಳಗುವ ಬದಲಿ,
ಕದನದಿ ಬಾಳನು ಕಳೆಯುತಲಿ
ಸಿಡುಕಿನ ಮಾತನು ಅರುಹುತಲಿ..

ಚಾಡಿಯ ಮಾತನು ಹೇಳುತಲಿ
ಆಚೀಚೆ ಪರಸ್ಪರರಲಿ ತಂದಿಡುತಲಿ
ಬೆಳೆವವರ ಚಿಗುರನು ಚಿವುಟುತಲಿ
ಬದುಕೋದು ಸರಿಯೇ ಮತ್ಸರದಲಿ....

ಯಾಕೀ ಮನುಜರ ಮನಗಳ ಕಾಟ
ಪ್ರಾಣಿ ಪಕ್ಷಿಗಳೂ ಹಂಚಿಕೊಳುವವು ಊಟ!
ಮನುಜನೆಂದರೆ ಹೊಟ್ಟೆಕಿಚ್ಚಿನ ಕೂಪ
ನರರಾಕ್ಷಸ ಮಾಡುತಿರುವನು ನಿರತವೂ  ಪಾಪ!
 
ಪ್ರಕೃತಿ ಕೊಡದಿಹಳೇ ಅವಗೆ ಶಾಪ,
ಭಾರತಾಂಬೆಗೇ ಉಣಿಸುವ ವಿಷವ ಬೇಕೂಫ!
ತಾ ಸತ್ತರೂ ಇತರರ ಬದುಕ ಬಿಡ!
ತಾ ಎಸೆದರೂ ಇತರರಿಗೆ ಬಳಸೆ ಕೊಡ!
@ಪ್ರೇಮ್@

1030. ಕವಲು ದಾರಿ

ಕವಲು ದಾರಿ

ಬದುಕಿನಲಿ ಸಹಜ ಕವಲೊಡೆವ ದಾರಿಯದು
ತದುಕುತಲಿ ಆರಿಸಲು ಮುಖ್ಯವಾದುದನೊಂದು
ಎದೆ ತಟ್ಟಿ ಹೇಳುವಂತಿರಬೇಕು ನಾ ಸರಿಯೆಂದು
ಸದಾ ಆರಿಸುವಂತಿರಬೇಕು ಅಂಥ ಹಾದಿಯಲಿ..

ವಿದುರನಾದರೇನು, ವಿಧವೆಯಾದರೇನು
ತಾನೊಂಟಿಯೆಂದು ಕೊರಗದೆ ಕೂಡದೆ
ದೇವ ತೋರಿದ ಕವಲ ದಾರಿಯಲಿ ಚಲಿಸಿದೊಡೆ
ಪದಗಳಾಟದಂತೆ ಬದುಕು ಸಾಗುವುದು ಸುಖದಿ..

ವದನದಲಿರಲಿ ಮಾಸದ ನಗುವಿನಲೆಯು
ಸದಾ ಕಾಡದಿರಲಿ ಹಿಂದಿನ ಕಹಿ ನೆನಪುಗಳು
ದಾರಿ ಯಾವುದಾದರೇನು ಮನೋಬಲವು ಚಲಿಸದು!
ನಾನು ನಾನಾಗಿರಲು ಹಾದಿ ಬೀದಿ ತಡೆಯಲಾರವು..

ಮನದ ಹಾದಿಯ ಲೆಕ್ಕ ನಮ್ಮದೇ ಕೈಲಿರಲು
ದೇಹಾಯಾಸವ ಸರಿಪಡಿಸಿ ಕಾರ್ಯಕೆ ಮುನ್ನುಗ್ಗುತಲಿರಲು
ಸರಳ ಜೀವನ ತತ್ವ ಪಾಲಿಸುತಲಿ ಆನಂದದಿಂದಿರಲು
ಮನುಜ ಮನುಜರ ನಡುವೆ ಪ್ರೀತಿಯಿರಲು

ದಾರಿ ನೇರವಾಗಿರುವುದು, ಕವಲನಾರಿಸಿದರೂ
ಹೊಸ ಲೋಕ ತೆರೆವುದು ಕಷ್ಟ ಪಟ್ಟು ನಡೆಯಲು
ಎಲ್ಲಾದರೂ ಹೇಗಾದರೂ ನಿನಗಾಗಿ ಚಲಿಸು!
ಇತರರ ಚಿಂತೆ ಬೇಡ, ನಿನ್ನ ದಾರಿ ನಿನಗೆ!
@ಪ್ರೇಮ್@
31.05.2019

ಗುರುವಾರ, ಮೇ 30, 2019

1029. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-46

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-46

  ಓಟು, ಫಲಿತಾಂಶ ಎಲ್ಲ ಮುಗಿದಾಯ್ತು! ಇಂದಿನಿಂದ ಶಾಲೆಗಳ ಪುನರಾರಂಭ. ನಮ್ಮ ಬಾಲ್ಯ ನೆನಪಾಗುತ್ತದೆ. ಆಗೆಲ್ಲಾ  ಎಪ್ರಿಲ್ ಹತ್ತಕ್ಕೆ ಫಲಿತಾಂಶ ಬಂದು ರಜೆ ಕೊಟ್ಟರೆ ಜೂನ್ ಒಂದರಂದೇ ಶಾಲೆ ಪ್ರಾರಂಭ. ಆ ದಿನಕ್ಕೆ ಕಾಯುತ್ತಿದ್ದೆವು ನಾವು. ಈಗಿನಂತೆ ವರುಷಕ್ಕೊಂದು ಹೊಸ ಬ್ಯಾಗ್ ಇಲ್ಲದಿದ್ದರೂ, ಹೊಸ ಪುಸ್ತಕಗಳು, ಹೊಸ ನೀಲಿ-ಬಿಳಿ ಬಟ್ಟೆ, ಹೊಸ ಕೊಡೆ! ಹೌದು! ಆಗಿನ ಸಡಗರವೇ ಬೇರೆ. ಪುಸ್ತಕದ ಪಟ್ಟಿಯಲ್ಲಿದ್ದ ಪುಸ್ತಕಗಳನ್ನೆಲ್ಲ ತಂದು ವಾರಕ್ಕೆ ಮೊದಲೇ ಬೈಂಡ್ ಹಾಕಿ, ಲೇಬಲ್ ಹಾಕಿ ಬ್ಯಾಗ್ ನಲ್ಲಿ ತುಂಬಿಸಿ ಇಟ್ಟರೆ, ಬಟ್ಟೆ ಪೀಸ್ ತೆಗೆದುಕೊಂಡು ಟೈಲರಲ್ಲಿ ಕೊಟ್ಟಿದ್ದಿದ್ದರೆ ನಾವು ಶಾಲೆಗೆ ಹೋಗಲು ರೆಡಿ ಆದಂತೆ!
    ಈಗಿನ ಮಕ್ಕಳಿಗೆ ಶಾಲೆಗೆ ಹೋಗುವುದೆಂದರೆ ಅಲರ್ಜಿ, ಬೇಸರ, ಬೋರು. ಕಾರಣ ಅಲ್ಲಿ ಫೇಸ್ ಬುಕ್, ಟ್ವಿಟರ್, ಯೂಟ್ಯೂಬ್, ಟಿಕ್ ಟಾಕ್, ವಿ ಚಾಟ್, ಹೆಲೋ ಯಾವುದೂ ನೋಡಲಾಗದು..ಎಡಿಟ್ ಮಾಡಿ ಹಾಕಲಾಗದು, ಬಿದ್ದುಕೊಂಡು ಮೊಬೈಲ್ ಒತ್ತಲಾಗದು! ಟಿ.ವಿ ನೋಡಲಾಗದು, ಮನೆಯ ಹಾಗೆ ಕುಳಿತಲ್ಲಿಗೇ ಯಾರೂ ಊಟ ತಂದು ಕೊಡಲಾರರು! ತರಕಾರಿ ಸಾಂಬಾರಿನಲ್ಲಿ ಊಟ ಸೇರದು, ಹಾಲಂತೂ ಕುಡಿಯಲು ಬೇಡವೇ ಬೇಡ! ಶಿಕ್ಷಕರ ಶಿಸ್ತೆಂದರೆ ಆಗದು. ಸ್ನೇಹಿತರೊಡನೆ ಹರಟೆ ಹೊಡೆಯುವುದು ಬಿಟ್ಟರೆ ಮತ್ಯಾವ ಕೆಲಸವೂ ಇಷ್ಟವಾಗದ ಹಲವಾರು ವಿದ್ಯಾರ್ಥಿಗಳಿದ್ದಾರೆ.
    ಗುರಿ, ಉದ್ದೇಶಗಳು ಜೀವನದಲ್ಲಿರಬೇಕು, ಅದಕ್ಕಾಗಿ ಪ್ರತಿ ಕ್ಷಣ ನಮ್ಮ ಹಿರಿಯರು ಬುದ್ಧಿವಾದ ಹೇಳುತ್ತಿರುತ್ತಾರೆ. ನಮಗದು ಕಹಿಯೆನಿಸಿದರೂ ಬದುಕಲು ಬೇಕಾದ ಔಷಧವದು. ತೆಗೆದುಕೊಳ್ಳಲೇ ಬೇಕು. ತಂದೆ, ತಾಯಿ, ಹಿರಿಯರ ಮಾರ್ಗದರ್ಶನವಿರದ ಅನಾಥ ಮಕ್ಕಳು ಕೆಟ್ಟ ಬುದ್ಧಿ ಕಲಿತು ತಮ್ಮ ಜೀವನವನ್ನು ನರಕ ಮಾಡಿಕೊಳ್ಳುವುದನ್ನು ನಿಜ ಜೀವನದಲ್ಲೂ, ಸಿನೆಮಾದಲ್ಲೂ ನೋಡಿದ್ದೇವೆ.
     ಅದೇನೇ ಇರಲಿ, ಬಾಳಿಗೊಂದು ಗುರಿಯಿರಲಿ, ಯಾವ ಶಾಲೆಯಾದರೂ ಸರಿ, ಕಲಿಯುವ ಛಲ ನಿಮ್ಮಲ್ಲಿರಲಿ. ಎಲ್ಲರಿಗೂ ಒಳ್ಳೆಯದಾಗಲಿ. ನೀವೇನಂತೀರಿ?
@ಪ್ರೇಮ್@

1021. ಏಕಮ್ಮಾ

ಏಕಮ್ಮಾ

ಸಂಜೆಯು ಆಗಲು ಸೂರ್ಯನು
ಪಶ್ಚಿಮಕೋಡುವ ಏಕಮ್ಮ?
ಓಡುತ ಅಲ್ಲಿ ಕಡಲಲಿ ಮುಳುಗುವ
ಸೆಕೆಯು ಅವನಿಗೂ ಉಂಟೇನಮ್ಮಾ?

ಹಳದಿಯ ಮರೆತು ಕೇಸರಿ ಬಣ್ಣವ
ರವಿಯು ಹೇಗೆ ಪಡೆಯುವನಮ್ಮಾ?
ತನ್ನಯ ಬಣ್ಣವ ಹೊರಗಡೆ ಉಗುಳುತ
ಆಗಸಕೂ ಅದ ಸುರಿಯುವನಮ್ಮ!

ಗೋಲಿಯ ಹಾಗೆ, ಚೆಂಡಿನ ಹಾಗೆ
ದುಂಡಗೆ ಭಾನುವು ಏಕಮ್ಮಾ?
ಚಂದ್ರನ ಹಾಗೆ ಅರ್ಧ, ಕಾಲು
ಸೂರ್ಯನು ಕಾಣುವುದಿಲ್ಲಮ್ಮ!

ಬೆರಗಲಿ ನಾನು ನೋಡುತಲಿರುವೆ
ಚಂದ ಮಾಮ ರಾತ್ರಿಯಲಿ,
ಹಗಲಲಿ ಬರುವ ರವಿಮಾಮನನು
ಕಣ್ಣು ಬಿಟ್ಟು ನೋಡಲಾರೆ ಏಕಮ್ಮ?
@ಪ್ರೇಮ್@
25.05.2019

1022. ಅಜ್ಜಿಯ ಅಭ್ಯಂಜನ

ಅಜ್ಜಿಯ ಅಭ್ಯಂಜನ

ನನ್ನಯ ಮೆಚ್ಚಿನ ಬೊಜ್ಜಿನ ಅಜ್ಜಿಯ
ಅಭ್ಯಂಜನವದು ಸಜ್ಜಿನಲಿ..

ಸಣ್ಣದಾದ ಲೋಟದಿ ಎಣ್ಣೆಯ ತಂದು
ತಣ್ಣನೆ ಕಣ್ಣಿಗೂ ಸರಿ ಮಾಲೀಸು..
ಬೆನ್ನಿನ ಭಾಗಕೆ ತಿಕ್ಕಲು ಮೊಮ್ಮಕ್ಕಳು
ನಕ್ಕಳು ಅಜ್ಜಿ ಕಚಗುಳಿಯಾಗಲು..

ಎಣ್ಣೆಯ ಹಚ್ಚಿ, ಸುಣ್ಣವ ಹಾಕಿ
ಎಲೆ ಅಡಿಕೆಯ ರುಚಿ ನೋಡಲು ಬೇಕು..
ಅಜ್ಜಿಯ ಸ್ನಾನ ಮಕ್ಕಳಿಗೆಲ್ಲ ವ್ಯಂಗ್ಯದ ಮಾತು,
ಅಜ್ಜಿಯ ಕಡೆಗೇ ನೆಟ್ಟ ನೋಟವೇ ನೋಡು!

ಅರ್ಧ ಗಂಟೆಯಲಿ ಎಲೆ ಅಡಿಕೆಯು ಮಾಯ..
ಮತ್ತೆ ಸ್ವಲ್ಪ ದೂರ ನಡೆದಾಟ..
ನಂತರ ತಣ್ಣೀರು ಜೋಡಿಸಿಕೊಳ್ಳವ ಪರಿ..
ತದನಂತರ ಬಿಸಿ ನೀರಿಗೆ ತಣ್ಣೀರು ಬೆರೆಸುವ ಕಾರ್ಯದ ವೈಖರಿ!

ಇನ್ನೂ ಪ್ರಾರಂಭವಾಗದು ಸ್ನಾನದ ಕೆಲಸ!
ಮತ್ತೆ ನೊರೆಕಾಯ ತಂದು ಗುದ್ದಿ ಗುದ್ದಿ
ಬೀಜ ತೆಗೆದು ನೀರಿಗೆ ಹಾಕಿ ಕಿವುಚಲುಂಟು,
ತದನಂತರ ಕಡಲೆ ಹಿಟ್ಟಿನ ಪಾಕ ಮಾಡಲುಂಟು..

ಇದೀಗ ಪ್ರಾರಂಭ, ಹೊಟ್ಟೆಯಿಂದ ಕಾಲಿನವರೆಗೆ
ನಖ ಶಿಖಾಂತ ಶುದ್ಧೀಕರಣ ಕಾಯಕ!
ಕಲ್ಲು, ತೆಂಗಿನ ನಾರು, ಪ್ಲಾಸ್ಟಿಕ್ ಜುಂಗು
ಎಲ್ಲವುಗಳ ಬಳಕೆ, ಕಾಲು, ಕೈ, ಬೆನ್ನುಜ್ಜಲು!!
ಒಂದಲ್ಲ ಎರಡು ಜನ ಬೇಕು ಬೆನ್ನುಜ್ಜಲು!

ನಾಲ್ಕು ಬಕೀಟು ನೀರು ಮುಗಿದ ಬಳಿಕ
ಸಮಾಧಾನದ, ಶುಚಿಯಾದ ನಿಟ್ಟುಸಿರು!
ಬಟ್ಟೆ ಹಿಡಿದುಕೊಂಡು ಓಡಬೇಕು ಮೊಮ್ಮಕ್ಕಳು ಒಂದಾದ ಮೇಲೊಂದು!

ಅಜ್ಜಿಯ ಮಜ್ಜನ, ಅಜ್ಜ ಸಹಿಸುವ ಸಜ್ಜನ!
ಲಜ್ಜೆಯ ಅಜ್ಜಿಯ ಎಣ್ಣೆಯ ಅಭ್ಯಂಜನ!!
@ಪ್ರೇಮ್@
24.05.2019

1023. Books

Free Books!!!

Hill of books are moving everywhere
Bunch of teachers counting here and there..

All class free books falling here..
No care of dust and dirty there!

They count only text books!
As their cluster resource guides!
No tension of carriages!
We should supply them to students!

Teachers work like coolies..
To get the proper free facilities..
Carrying heavy loads on head and shoulders..
No one cares their difficulties!

Load of books and uniform clothes!
To Supply young poor Indian students!
Learners need to produce quality education!
For that we should supply free presentation!
Books and bicycles and clothes!
Scholarships and free bus passes and foods..
Milk and meals and Maps too..

Suffers are the teachers so..
Keep counting all for record sake..
Don't miss anything "you should safe!!"
Carry to your school same and save!
Teach them how to brave and behave!!
@Prem@
26.05.2019

After counting the free text books at taluk... To cluster and school...

1027. ಸಣ್ಣ ಕತೆ-ಹೆಣ್ಣಿನ ಸ್ವಗತ

ಹೆಣ್ಣಿನ ಸ್ವಗತ

"ಹೌದು, ನನಗವ ಯಾವ ಖುಷಿಯನ್ನೂ ಕೊಡಲಿಲ್ಲ, ನನ್ನ ಮದುವೆಯಾದ, ಕೊಳೆಯುವಷ್ಟು ದುಡ್ಡಿತ್ತು ಮನೆಯಲ್ಲಿ! ಬೇಕಾದ ಹಾಗೆ ಊರೂರು ಸುತ್ತಿಸಿದ. ನನ್ನ ನಾನು ಹೊಗಳುವುದಲ್ಲ, ನನ್ನ ಗೆಳತಿಯರೆಲ್ಲ ನನಗೆ 'ನೀ ಸೇಮ್ ಪ್ರೀತಿ ಝಿಂಟಾ ತರ ಇದ್ದೀಯ ಕಣೇ, ಅಂತ ಬ್ಯೂಟಿ ನಮ್ಗೆ ಬೇಕಾಗಿತ್ತು,ನಿನ್ನ ನೋಡಿದ್ರೆ ಹೊಟ್ಟೆ ಉರಿಯುತ್ತೆ'ಅಂತಿದ್ರು! ನನ್ನ ಆ ಗುಳಿ ಕೆನ್ನೆ, ಚರ್ಮದ ಬಿಳಿ ಬಣ್ಣವೇ ನನ್ನ ಜೀವನಕ್ಕೆ ಮುಳುವಾಗಿತ್ತು!
     ಹತ್ತನೇ ತರಗತಿ ಓದುವ ಮೊದಲೇ 'ನನಗೇ ಮದುವೆ ಮಾಡಿಕೊಡಿ ನಿಮ್ಮ ಮಗಳನ್ನು' ಎಂದು ಹಲವಾರು ಜನ ಹುಡುಗರು, ಬಂಧುಗಳು, ಗೆಳೆಯರು ನನ್ನಪ್ಪನನ್ನು ಕೇಳಿ ರಿಸರ್ವ್ ಮಾಡಿಸಿ ಬಿಟ್ಟಿದ್ದರು! ನನ್ನಮ್ಮನ ಹಲವಾರು ಗೆಳತಿಯರೂ ನನ್ನನ್ನು ಅವರ ಸೊಸೆ ಮಾಡಿಕೊಳ್ಳಲು ಕಾತರದಿಂದ ಕಾಯ್ತಾ ಇದ್ರು. 'ನಮ್ಮ ಹೆಣ್ಣು ಮಕ್ಕಳು ಸುಂದರವಾಗಿಲ್ಲ, ನಿನ್ನ ಮಗಳು ಸಿನಿಮಾ ತಾರೆಯಂತಿದ್ದಾಳೆ, ಏನು ತಿನ್ನಿಸ್ತೀಯಾ ಅವ್ಳಿಗೆ?' ಅಂತ ಅಮ್ಮನ್ನ ಟೀಸ್ ಮಾಡೋರು!
     ಅಪ್ಪ, ಅಮ್ಮನ ಮುದ್ದಿನ ಮಗಳಾಗಿ, ಪ್ರೀತಿಯ ಅಣ್ಣನ ಮುದ್ದು ತಂಗಿಯಾಗಿ ಬೆಳೆದ ನನಗೆ ಕಾಲೇಜಿಗೆ ಹೋಗುವಾಗ ಅಣ್ಣನ ಸೆಕ್ಯೂರಿಟಿ! ಅಲ್ಲೂ ನಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಬಿಡಿ! 'ನನ್ನ ಲವ್ ಮಾಡದಿದ್ರೆ ನೀನು ಬೇರೆ ಯಾರಿಗೂ ಸಿಗ್ಬಾರ್ದು, ಸಾಯಿಸಿ ಬಿಡ್ತೀನಿ' ಅಂದಿದ್ದ ಒಬ್ಬ ಸೀನಿಯರ್! ಹಂಗೂ ಹಿಂಗೂ ಕಷ್ಟಪಟ್ಟು ಕಾಲೇಜು ಮುಗಿಸಿದಾಗಲೇ ನಾನು ತುಂಬಾ ಪ್ರಖ್ಯಾತಳಾಗಿದ್ದೆ!
    ನನ್ನ ಅಂದಕ್ಕಾಗಿ ಮಾತ್ರವಲ್ಲ, ನೃತ್ಯ, ಸಂಗೀತ, ಹಾಡು, ನಿರೂಪಣೆ, ಕವಿಯೂ ಆಗಿದ್ದೆ ನಾನು. ನನ್ನ ಕಲೆಗೆ ಅಲ್ಲಿ ಪ್ರೋತ್ಸಾಹ ಸಿಕ್ಕಿತ್ತು, ಅವಕಾಶಗಳ ಬಳಸಿಕೊಂಡೆ. ಹಾಡಿದೆ, ಕುಣಿದೆ, ಬರೆದೆ, ಗೀಚಿದೆ, ಇದ್ದೆಲ್ಲ ಬಹುಮಾನಗಳ ಬಾಚಿಕೊಂಡೆ!
    ಕಾಲೇಜು ಮುಗಿದ ಕೂಡಲೇ ನಾನಿಷ್ಟ ಪಟ್ಟ ಹುಡುಗನೊಂದಿಗೆ ನನ್ನ ಮದುವೆಯಾಯ್ತು! ಅವನೇ ಧೀರ, ಶೂರ ವಿದ್ವತ್ ಪ್ರಕಾಶ್! ಹೆಸರಿನಂತೆಯೇ ಅವನು ವಿದ್ವತ್ ಇದ್ದವ. ಹ್ಯಾಂಡ್ ಸಮ್! ಲಕ್ಷ್ಮಿ ಪುತ್ರ! ಆದರೆ ಹೆಚ್ಚು ವಿದ್ಯಾವಂತನಲ್ಲ, ತುಂಬಾ ಮೆರೆದವ, ಹಾರಾಡಿದವ! ದುಡ್ಡನ್ನು ನೀರಿನಂತೆ ಖರ್ಚು ಮಾಡಿದವ!
      ಆದರೆ ನನಗೆ ಅವನೊಂದಿಗಿನ ಜೀವನ ಖುಷಿಯಾಗಿದ್ದುದು ಮಾತ್ರ ಮದುವೆಯಾದ ಮೊದಲ ಎರಡು ವರುಷಗಳು!
    ಎರಡೆ ವರುಷಗಳಲ್ಲಿ ನಾನು ಎರಡು ಮಕ್ಕಳ ತಾಯಿಯಾಗಿದ್ದೆ! ಸಣ್ಣ ವಯಸ್ಸಿಗೇ ನನಗೆ ದೊಡ್ಡ ಜವಾಬ್ದಾರಿ! ಜೊತೆಗೆ ಅಮ್ಮನಿರದಿದ್ದರೆ ನನ್ನ ಜೀವನವೇ ಇಲ್ಲ. ನಾ ಮಕ್ಕಳೊಂದಿಗೆ ಮಗುವಾಗಿ ಪೂರ್ತಿ ಬೆರೆತು ಹೋಗಿದ್ದೆ.
     ಈ ನಡುವೆ ವಿದ್ವತ್ ನ ಗೆಳೆಯರ ಬಳಗ, ಕುಡಿತ ವಿಪರೀತವಾಗಿತ್ತು! ಹಣಕ್ಕಾಗಿ ತನ್ನ ತಂದೆಯೊಡನೆ ಜಗಳ, ವ್ಯವಹಾರಗಳ ಸರಿ ನೋಡಿಕೊಳ್ಳಲಾಗದೆ ದಿನದ ಇಪ್ಪತ್ತ ನಾಲ್ಕು ಗಂಟೆಯೂ ಕುಡಿತ! ಮನೆಯವರಾರೆಂದು ತಿಳಿಯದಷ್ಟು! ಗಲಾಟೆ!
    ನಾ ಕುಗ್ಗಿ ಹೋದೆ. ತನ್ನ ಅಣ್ಣನೊಡನೆಯೂ ಜಗಳವಾಡಿ ಅವರ ಪಾಲಿನ ಆಸ್ತಿ ಪಡೆದು, ವ್ಯಾಪಾರ ನೋಡಲಾಗದೆ, ಲಾಸ್ ಆಗಿ ಎರಡು ಸಲ ಆತ್ಮಹತ್ಯೆಗೆ ಪ್ರಯತ್ನಿಸಿದರು! ನಾನೂ, ಮಕ್ಕಳೂ ಸೇರಿ ಬದುಕಿಸಿದೆವು!
      ಮುಂದೆ ಅದು ಹಲವಾರು ಸಲವಾಯ್ತು. ನಮಗೆ ಇದು ಸಾಮಾನ್ಯ ಅನ್ನಿಸುವಷ್ಟು! ತನ್ನ ಅಂದದ ಎರಡು ಮುದ್ದು ಮಕ್ಕಳ ಗುರುತು ಸಿಗಲಾರದಷ್ಟು ಕುಡಿತ. ಹೊಟ್ಟೆ ನೋವೆಂದು ವೈದ್ಯರ ಬಳಿ ಹೋದಾಗ ತಿಳಿಯಿತು, ಜಠರ ಪೂರ್ತಿ ಸುಟ್ಟು ಹಾಕಿತ್ತು ಆಲ್ಕೋಹಾಲ್! ಊಟ ತಿನ್ನದೆ ನಶೆಯೇರಿಸಿದ ಪರಿಣಾಮವದು! ಖರ್ಚು ಮಾಡಿ ಯಾವ ರೀತಿಯಲ್ಲಿ ನೋಡಿಕೊಂಡರೂ ಜೀವ ಉಳಿಯಲಿಲ್ಲ!
    ಕೊನೆಗೂ ನನ್ನ ಹಾಗೂ ನನ್ನೆರಡು ಮಕ್ಕಳನ್ನು ನಡು ಬೀದಿಯಲ್ಲಿ ಬಿಟ್ಟು ಹೊರಟು ಹೋದರು ಅವರು! ನನ್ನ ಹೆಸರಿನಲ್ಲಿ ಮಾವನಿರಿಸಿದ ಹಣವಿತ್ತು, ಮನೆಯಿತ್ತು, ಸ್ವಂತದ ಬರಿದಾದ ವ್ಯಾಪಾರವಿತ್ತು! ಆದರೆ ಅದರ ಚುಕ್ಕಾಣಿ ಹಿಡಿಯಲಾರೂ ಇರಲಿಲ್ಲ! ನಾನು ಮಕ್ಕಳು ಅಷ್ಟೆ! ಅಪ್ಪ ಅಮ್ಮ ನೆರವಿಗೆ ಬಂದರು, ಕೆಲಸಕ್ಕೆ ಸೇರಿದೆ, ಎದೆಗುಂದದೆ ನನ್ನ ಬಾಳು ಬೆಳಗಿಸಿಕೊಂಡೆ!ಮುಂದೆ ಓದಿದೆ. ಡಿಗ್ರಿ, ಎಂ. ಎ , ಬಿ. ಎಡ್, ಪಿ. ಹೆಚ್. ಡಿ. ಮಾಡಿಕೊಂಡೆ!
     ಮಕ್ಕಳ ಓದಿಸಿ ಕೆಲಸಕ್ಕೆ ಸೇರಿಸಿ ಮದುವೆಯ ಮಾಡಿದೆ. ಒಂಟಿತನ ಕಾಡಿತು. ವರುಷ ಐವತ್ತಾಗಿತ್ತು!ನನ್ನಂತೆಯೇ ಒಂಟಿಯಾದ ನನಗಿಂತ ಹಿರಿಯರಾದ, ತಿಳುವಳಿಕೆಯುಳ್ಳ ನಿವೃತ್ತಿ ಪಡೆದ ಜಡ್ಜ್ ಒಬ್ಬರ ಭೇಟಿಯಾಯ್ತು. ಮಾತನಾಡುತ್ತಾ ಗೆಳೆಯರಾದೆವು. ಪ್ರೇಮಕ್ಕೆ ವಯಸ್ಸಿಲ್ಲ, ನಿನಗೆ ನಾನು, ನನಗೆ ನೀನು ಎನ್ನುವಂತಾದೆವು, ಮಕ್ಕಳ ಒಪ್ಪಿಗೆ ಪಡೆದು ದೇವಸ್ಥಾನದಲ್ಲಿ ಒಂದಾಗಿ ಒಟ್ಟಿಗೆ ಬಾಳುತ್ತಿದ್ದೇವೆ! ಆ ದೇವರಿಗೊಂದು ಸಲಾಮ್ ನನ್ನ ಒಂಟಿತನ ಹಾಗೂ ಕಷ್ಟವನ್ನು ದೂರ ಮಾಡಿದ ರೀತಿಗೆ!"
@ಪ್ರೇಮ್@
27.05.2019

1028. ನ್ಯಾನೋ ಕತೆ-ಭೂತ

ನ್ಯಾನೋ ಕತೆ

ನಮ್ಮ ಮನೆಯ ಬಾಗಿಲು ಅರ್ಧ ರಾತ್ರಿ ಮೂರು ಗಂಟಗೆ ಡಬ್ ಎಂದು ಬಡಿಯಿತು. ಹೊರ ಬಂದು ನೋಡಲು ತಿಳಿಯಿತು ಹೊರಗೆ ಮಲಗಿದ್ದ ನಾಯಿಯ ಬಾಲ ಬಡಿದದ್ದು!

ಭಾನುವಾರ, ಮೇ 26, 2019

1026. ಪನಿ

ಪನಿ

ಯಾನ್ ಯಾನ್ಂದ್ ಪನ್ನಾಯೆಲಾ ಪೋಯೆ ಮಣ್ಣ್ ಗ್..
ತಾನ್ ತನ್ನಂದೇ ರಾಯಿನಾಯೆಲಾ ಬೂರ್ಯೆ ಗುಂಡಿಗ್..
ಯಾನ್ಲಾ ಈಲಂದ್ ಬಾಳಿನಾಯನ ಬಾಳ್ ಮುಗಿಂಡಲಾ
ಪುದರ್ ದ ತುಡರ್ ಉಂಡು!
@ಪ್ರೇಮ್@

1025. Cutee

You Cuteeee...

Eyes are slight broad
Angel's look is forward!
Shining line of teeth
Throws pretty smile underneath...

Lovely name is with you.
Cute look has thou..
Nose is like a sculpture
Brows are arranged in the figure!!

Heart is really made good!
No tension of any food,
Be always in better mood
Make your mind fit as wood!

Mind is fresh and free
Thoughts are more till knee,
Never think about future!
Live, love and enjoy ever!

You be your own master,
Your mom is your teacher,
Nature is the real lawyer,
Follow your own culture
You are most beautiful than your picture!
@Prem @
26.05.2019

ಶನಿವಾರ, ಮೇ 25, 2019

1024. ಅಜ್ಜಿಯ ನೆನಪು

ಮರೆಯಾದರೂ ಮರೆಯಲಾಗದ್ದು-ಕವನ

ಅಜ್ಜಿಯ ನೆನಪು

ಹಗಲಿಡಿ ತೋಟದಿ ದುಡಿದ ಬಳಿಕ
ಕತ್ತಲೆಯಾದೊಡೆ ಬೆಂಕಿಯ ಹೊತ್ತಿಸಿ
ಬಿಸಿಬಿಸಿ ನೀರಲಿ ಸ್ನಾನವ ಮಾಡಿ
ಒಲೆಯಲಿ ಮಣ್ಣಿನ ಪಾತ್ರೆಯ ಅಡಿಗೆಯ ನೋಡಿ!

ತೋಟದಿ ಬೆಳೆದಿಹ ತರಕಾರಿ ತಂದೋ
ವಾರದ ಕೊನೆಯಲಿ ಒಣ ಮೀನನು ಸುಟ್ಟೋ
ಮನೆಯದೆ ಕೋಳಿಯ ಕುತ್ತಿಗೆ ಮುರಿದೋ
ಮನೆಯಲೆ ಬೆಳೆದ ಅಕ್ಕಿಯ ರುಚಿಯೋ

ಏನಿಲ್ಲದಿರೂ ಉಪ್ಪು ಹುಳಿ ಮೆಣಸು
ರುಚಿಯೇ ರುಚಿಯು ಅಜ್ಜಿಯ ಪಾಕವು
ನಮ್ಮಯ ಕುರ್ ಕುರೆ ಬಿಸ್ಕೆಟ್ ಬದಿಗೆ
ಯಾರೂ ಬರರು ಅಜ್ಜಿಯ ಪಾಕದ ಎದುರಿಗೆ!

ಕಟ್ಟಿಗೆ ತಂದು ಒಲೆಯನು ಉರಿಸುತ
ತೆಂಗಿನ ಒಣಗರಿ ಬೆಂಕಿಯ ಹಚ್ಚಲು
ಮನೆಯೊಳಗೇ ಒಲೆ ಚಳಿಯನು ಕಾಯಿಸೆ
ನಾಲ್ಕು ಗಂಟೆಗೆ ಎದ್ದು ನಳಪಾಕ ತಯಾರಿಸೆ

ಅಜ್ಜಿಯೂ ಇಲ್ಲ ಒಲೆಯೂ ಇಲ್ಲ
ಆಗಿನ ರುಚಿಯಂತೂ ಇಲ್ಲವೆ ಇಲ್ಲ,
ಮರೆಯಾದರೂ ನಾವು ಮರೆವೆವು ಹೇಗೆ
ಅಜ್ಜಿಯ ಕೈರುಚಿ ಇತ್ತದು ಹಾಗೆ!
@ಪ್ರೇಮ್@

1023. ಅಮ್ಮ

(ನಗುವ ಗುಲಾಬಿ ಹೂವೆ...ಈ ಹಾಡಿಗೆ ಸರಿಹೊಂದುವ ರಾಗಕ್ಕೆ ಬರೆದ ಗೀತೆ....)

ನನ್ನಮ್ಮ..

ನಗುವ ಗುಲಾಬಿ ತಾಯೇ...
ಚಿಂತೆಯಾ ಬಿಟ್ಹಾಕಿ ಬದುಕೀ..
ನನ್ನಯ ಬದುಕೆಂದು ನಿಮಗೆ..
ಅರ್ಪಿಸುತಲಿ ನಾ ನಿತ್ಯ ಕುಣಿವೆ...

ಸಿರಿಯ ನೀವ್ ಬೇಡಲಿಲ್ಲ,
ಮಕ್ಕಳ ನೀವ್ ತೊರೆಯಲಿಲ್ಲ,
ಮಕ್ಕಳ ಬದುಕಿಗೆ ತನ್ನಯ ಬಾಳನು ಮುಡಿಪಾಗಿರಿಸಿದಿರಿ..
ಕಷ್ಟವನು ಸಹಿಸುತಲಿ..ನೋವನ್ನೂ ನುಂಗುತಲಿ
ಪತಿಯನೆ ಪರದೈವ ಎನ್ನುತ ಬಾಳುವ... ವರವಾಗಿ ..ನಗುವಾಗಿ../ನಲಿವ/

ನಿಮಗಾಗಿ ದೇವರನ್ನ  ಕೇಳಿಲ್ಲ,
ಮಕ್ಳಿಗೆ ಕೇಳೋದ ಮರೀಲಿಲ್ಲ,
ಮಕ್ಕಳ ಬದುಕಲೆ ತನ್ನಯ ಸಂತಸ
ಕಾಣುತ್ತ ಬೆಳೆಸಿದಿರಿ, ವಿದ್ಯೆಯನು ಸುರಿಸಿದಿರಿ..
ಮಕ್ಕಳ ಬಾಳದು ಹಸನಾದುದ ಕಂಡು
ಸಂತಸದಿ ...ಬೀಗಿದಿರಿ...
ಆನಂದದಿ...ನಲಿದಾಡಿದಿರಿ..
ಮಕ್ಕಳೆ ನನ್ನಯ ಬದುಕು ಎನುತ ಸಾಗುತ್ತಾ..ಮುಂದೆ ಸಾಗುತ್ತ.../ನಲಿವ/

ಇತರರ ನೀವ್ ಬೇಡಲಿಲ್ಲ, ನೆಂಟರ ನೀವ್ ಕೇಳಲಿಲ್ಲ..
ಹಗಲಲಿ ಇರುಳಲಿ ಕೂಲಿಯ ಮಾಡಿ
ಬೀಡಿಯ ಕಟ್ಟುತ, ಕಷ್ಟವ ನುಂಗಿ
ಬೆಳೆಸುತ್ತಾ...ಓದಿಸುತ್ತ..
ಮಕ್ಕಳೆ ನಮ್ಮಯ ದೇವರು ಎನುತ
ಬಾಳುತಲಿ...ನಗುನಗುತ್ತ...
ಕಷ್ಟವ ಮೆಟ್ಟುತ, ಸುಖದಲಿ ಹಿಗ್ಗದೆ
ಬಾಳಿನ ಮರ್ಮವ ನಮಗೆ ಕಲಿಸಿದಿರಿ...ಕಲಿಸುವಿರಿ.../ನಲಿವ/

@ಪ್ರೇಮ್@
25.05.2019
ಗುಲಾಬಿ=ಅಮ್ಮನ ಹೆಸರು..

ಬುಧವಾರ, ಮೇ 22, 2019

1020. 6.ಹನಿಗಳು.....ಪ್ಲಾಟಿನಂ

ಹನಿಗಳು..

1. ಮುತ್ತು

ಒಂದು ಮುತ್ತು ಕೊಡು
ಎಂದ ಅವನು!
ಮುತ್ತಿನ ಹಾರ ಮೊದಲು
ತಂದು ಕೊಡೆಂದಳು ಅವಳು!!

2. ಚಿನ್ನ

ನೀ ನನ್ನ ಜೀವನದ ಬಂಗಾರ,
ಮುದ್ದು ಚಿನ್ನವೆಂದು ರಮಿಸಿದ!
ಮೊದಲು ಬರಲಿ ಒಂದು ತೊಲ
ಚಿನ್ನವೆನುತ ಜಾಡಿಸಿ ಓಡಿದಳು!!

3. ಬೆಳ್ಳಿ

ಮಾತು ಬೆಳ್ಳಿ, ಮೌನ ಬಂಗಾರ!
ಹಿರಿಯರ ಅನುಭವದ ಮಾತು!
ಕಿರಿಯರು ಶಿರಸಾ ಪಾಲಿಸುತಲಿರುವರು!
ಮೊಬೈಲ್ ಹಿಡಿದು ಮನೆಯಲಿ ಮೌನವಾಗಿ!!

4. ವಜ್ರ

ನಾನು ವಜ್ರದಂತೆ ಕಠಿಣ!
ಅಪ್ಪ ಗುಡುಗಿದ ಮನೆಯಲ್ಲಿ!
ನಾ ಗಾಜಿನಂತೆ ಬಹಳ ತೀವ್ರ
ಅಮ್ಮ ಮೆಲ್ಲನೆನುತಿದ್ದಳು ಅಡಿಗೆ ಕೋಣೆಯಲ್ಲಿ!!

5. ಹವಳ

"ನಲ್ಲೆ ನಿನ್ನ ತುಟಿ ಹವಳ!"
ಅಂದವಗೆ ಕೆನ್ನೆಗೆ ಬಿತ್ತು ರಸಗವಳ!!
"ಮುಸುಡಿ ನೋಡು, ಒಂದು ತುಂಡು
ಹವಳ ತರಲು ಗತಿಯಿಲ್ಲ!
ಹವಳವಂತೆ ಹವಳ!!"

@ಪ್ರೇಮ್@

6. ಪ್ಲಾಟಿನಮ್

ನಲ್ಲೆ ನಮ್ಮ ಪ್ರೀತಿ
ಪ್ಲಾಟಿನಮ್ ತರಹ
ಇರಬೇಕು ದುಬಾರಿಯಾಗಿ!
ಅದು ಬೇಡವೋ ನಲ್ಲ!
ಅದಿರುವುದು ಕಪ್ಪು ಕಪ್ಪಾಗಿ!!!
@ಪ್ರೇಮ್@

ಮಂಗಳವಾರ, ಮೇ 21, 2019

1019. ಕತ್ತಲು ಬೆಳಕು

ಕತ್ತಲು-ಬೆಳಕು

ನಿತ್ಯ ಬರುತ್ತಿದ್ದರೂ ಕತ್ತಲು ಬೆಳಕೆಂದೂ
ಒಂದಾಗದೆಂಬ ನೀತಿಗೆ ತದ್ವಿರುದ್ಧವಾಗೊಂದು
ದಿನ ಕತ್ತಲು ಬೆಳಕು ಜತೆಗೂಡಿದವು!

ಅರ್ಧ ಕತ್ತಲು ಜನಕೆ, ಇನ್ನರ್ಧ ಬೆಳಕು!
ಸೂರ್ಯನ ಬೆಳಕು ಅರೆಗಾಜಿನಲಿ ಒಳಬಂದು ಮುತ್ತಿಟ್ಟಂತೆ!
ಒಂದು ಕೋಣೆಯ ಅರೆಬೆಳಕು
ಮತ್ತೊಂದರ ಬಾಗಿಲಿನೊಳಗೆ ನುಸುಳಿದಂತೆ!

ಕತ್ತಲೆಂದಿತು, "ನೋಡು,ನಿನಗಿಂತ ನಾನೇ ಶ್ರೇಷ್ಠ,
ಜನ ಕತ್ತಲೆಯ ಬಯಸುವರು!
ನಿದ್ದೆಗಾಗಿ, ಆರಾಮಕ್ಕಾಗಿ, ಜಗದ ಸೃಷ್ಠಿಗಾಗಿ!"

ಪ್ರತ್ಯುತ್ತರ ಬೆಳಕಿನದು, "ಜನ ಬೆಳಗಾಗುವುದ ಕಾಯುವರು,
ತಮ್ಮ ಹೊಟ್ಟೆ ತುಂಬುವ ಕಾರ್ಯಕ್ಕಾಗಿ, ಮಾತುಕತೆಗಾಗಿ"

ಕತ್ತಲು ನಕ್ಕಿತು, "ನೋಡು ಬೆಳಕೇ, ಭ್ರಮೆ ನಿನ್ನದು,
ಅವರಿಗೆ ಹಾಡುತ್ತಾ,ಕುಡಿದು ಕುಣಿದು ನರ್ತಿಸಲು
ಬೆಳಕು ಬೇಡ, ಕದ್ದು ಸಾಮಾನುಗಳ ಸಾಗಿಸಲೂ
ನೀ ಬೇಡ, ಅನೈತಿಕ ವ್ಯವಹಾರಗಳಿಗಂತೂ ನೀನೇ
ತಡೆ, ಮತ್ತೆ ಹೇಗೆ ನೀ ಮೇಲಾಗುವೆ?"

ಬೆಳಕು ಸುಮ್ಮನೆ ಕೈಕಟ್ಟಿ,"ದೇವರ ಪೂಜೆಗೆ, ಮದುವೆ, ಊಟದ ಸಮಯಕೂ ನಾ ಬೇಕಲ್ಲವೇ? ಒಳ್ಳೆ ಕಾರ್ಯಗಳಿಗೆ ನಾನೇ ಮೀಸಲು"

ಕತ್ತಲೆ ನಗುತ್ತಾ,"ಹಾ..ಹಾ..ಒಳ್ಳೆ ಕಾಲ,
ಒಳ್ಳೆ ಕಾರ್ಯಗಳೆಲ್ಲ ಇಂದು ಕಡಿಮೆಯಾಗುತ್ತಾ ಬಂದಿವೆ!
ಇದೀಗ ನನ್ನದೇ ಅಟ್ಟಹಾಸ!
ವಿಲನ್ ಈಗ ಹೀರೋ!
ಕತ್ತಲೆಯಲ್ಲೀಗ ಮಹಾನ್ ಕೆಲಸ!
ಹಗಲು ಸುಮ್ಮನೆ ನಿದ್ದೆಗೆ ಸೀಮಿತ!
ನೆನಪಿಟ್ಟುಕೋ, ನೀ ಹೆಚ್ಚು ದಿನ ಮೆರೆಯಲಾರೆ, ನಾನೇ ಮೇಲು!"

ಬೆಳಕಿನ ಉತ್ತರ, "ಮೌನ!"
"ಜನರೇ ಹಾಗೆ, ನಾನೇನನ್ನಲಿ?"
@ಪ್ರೇಮ್@
22.05.2019

1023. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-44

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-44
ಬರಸಿಡಿಲಿನಂತೆ ಬಿಸಿಲ ಬೇಗೆ, ನೀರಿಗಾಗಿ, ಮಳೆಗಾಗಿ ಕಾತರಿಸುವ ಪರಿ ನಮ್ಮದಾಗಿದೆ. ಇದರ ನಡುವೆ ರಸ್ತೆ ಅಗಲೀಕರಣ ನಡೆದಿದೆ. ನೂರಾರು ವರುಷಗಳಿಂದ ಬಾಳಿ, ಬದುರಿ ಉಸಿರಿಗೆ ಗಾಳಿ ನೀಡಿ, ನೆರಳು, ಆಶ್ರಯ, ಹಣ್ಣು ನೀಡುತ್ತಿದ್ದ ಬೃಹತ್ ಗಾತ್ರದ ಸಾವಿರಾರು ಮರಗಳು ತಮ್ಮ ಜೀವಕಳೆದುಕೊಂಡು ಅನಾಥ ಶವಗಳಂತೆ ರಸ್ತೆ ಬದಿಯಲ್ಲಿ ಬಿದ್ದಿರುವುದನ್ನು ನೋಡಿದರೆ ಕರುಳು ಹಿಂಡುತ್ತದೆ. ಮರಗಳಿಗೂ ಜೀವವಿದೆ, ಅದು ನಮಗೆ ಉಪಕಾರಿ ತಾನೇ? ಹೊರದೇಶಗಳಲ್ಲಿ ಬೆಳೆದ ಮರಗಳನ್ನು ತೆಗೆಯಬೇಕೆಂದರೆ ಬೇರು ಸಹಿತ ಕಿತ್ತು ಬೇರೆಡೆ ನೆಡುತ್ತಾರೆ. ನಮ್ಮಲ್ಲಿ ಮರ ಕಡಿದು ಮಾರಿ ಅದರಲ್ಲಿ ಎಷ್ಟು ದುಡ್ಡು ಬರಬಹುದೆಂದು ಅಂದಾಜಿಸಿ ಹರಾಜು ಹಾಕಿ ಒಬ್ಬನಿಗೆ ವಹಿಸಿ ಬಿಡುತ್ತಾರೇನೋ. ಅವರು ಬೇರನ್ನೊಂದು ಬಿಟ್ಟು ಉಳಿದ ಭಾಗ ಮಾರಾಟ ಮಾಡಿ ಬಿಡುತ್ತಾರೆ! ತಾನು ಬಳಸಿದ ಪಬ್ಲಿಕ್ ಟಾಯ್ಲೆಟ್ ನಲ್ಲಿ ನೀರು ಹಾಕದೆಯೂ, ಹಾಳು ಮಾಡಿಯೂ, ಅಲ್ಲಿ ಬಂದು ಶರಾಬು ಕುಡಿದು ಹೋಗುವವರು ಇರುವ ವರೆಗೆ ಭಾರತ ಉದ್ಧಾರವಾಗದು! ಸಿವಿಕ್ ಸೆನ್ಸ್ ಎನ್ನುವ ಕಾಮನ್ ಸೆನ್ಸ್ ನಮಗಿರಬೇಕು! ನಾವು ಹೊರಗೆ ತಿಂದು ಅದರ ಪ್ಲಾಸ್ಟಿಕನ್ನು ಬಸ್ಸು, ಕಾರುಗಳ ಕಿಟಕಿ ಗಾಜಿನಿಂದ ಸಿಕ್ಕ ಸಿಕ್ಕಲ್ಲಿ ಹೊರಗೆ ಬಿಸಾಕುವುದನ್ನೆ ನಮ್ಮ ಮಕ್ಕಳು ಕಲಿಯುತ್ತಾರೆ. ಬದಲಾಗಿ ಅದನ್ನು ಬ್ಯಾಗಿನಲ್ಲೋ ಕವರ್ ನಲ್ಲೋ ಮನೆಗೇ ತಂದು ಡಿಸ್ ಪೋಸ್ ಮಾಡಿದರಾಗದೇ!? ತುಂಡು ತುಂಡು ಬಟ್ಟೆ ತೊಟ್ಟು ಪಿಜ್ಝಾ ಬರ್ಗರ್ ತಿನ್ನುವುದು ಮಾತ್ರವಲ್ಲ, ಇದನ್ನು ಕೂಡಾ ಹೊರದೇಶದವರಿಂದ ನಾವು ಕಲಿಯಬೇಕಿದೆ!
   ಯಾಕೆ ಹೊಸದನ್ನು ಕಂಡು ಹಿಡಿಯುವ ಭಾರತೀಯರು ಕಡಿಮೆ ಎಂದರೆ ಮೊದಲನೆಯ ಉತ್ತರ ಯಾರಾದರೂ ಏನಾದರೂ ತಂದು ಕೊಟ್ಟರೆ ನಾವು ಆರಾಮದಲ್ಲಿ ಉಪಯೋಗಿಸಿಕೊಂಡು ಇರುತ್ತೇವೆ. ಹೊಸದನ್ನು ಹುಡುಕಲು ಕಷ್ಟಪಡುವ ಕಾರ್ಯ ನಮಗೆ ಬೇಡ!
  ನಾವು ಆರಾಮ ಪ್ರಿಯರು. ಯಾರಾದರೂ ಕಷ್ಟಪಟ್ಟು ಸಾಧನೆ ಮಾಡಲು ಹೊರಟರೆ "ಅವನಿಗೆ  ಬೇರೇನು ಕೆಲಸವಿಲ್ಲ, ಅದೇನೋ ಮಾಡ್ತಾನಂತೆ, ಮಾಡ್ಲಿ ನೋಡುವ" ಎಂದು ಚೀಪ್ ಆಗಿ ಮಾತನಾಡುವವರು. ಬೇರೆಯವರ ಕೆಲಸಕ್ಕೆ ಗೌರವ ಕೊಡದವರು! ಅದಕ್ಕೆ ಹಲವಾರು ಜನ ವಿದೇಶಕ್ಕೆ ಹೋಗಿ, ಯಾರೂ ಪರಿಚಯ ಇಲ್ಲದ ಬೇರೆ ಊರಿಗೆ ಹೋಗಿ ತಮ್ಮ ಸಾಧನೆ ಮಾಡುತ್ತಾರೆ!
  ಅದೇನೇ ಇರಲಿ, ನಮ್ಮ ಸಾಧನೆ ಗಿಡಮರಗಳನ್ನು ಬೆಳೆಸುವುದಿರಲಿ. ಸಾಲುಮರದ ತಿಮ್ಮಕ್ಕನಂಥ ಸಾವಿರಾರು ಮಂದಿಯನ್ನು ನೋಡುವಂತಾಗಲಿ. ಕಾಲಕಾಲಕ್ಕೆ ಸರಿಯಾಗಿ ಮಳೆಬರಲಿ, ಪ್ರಕೃತಿಗೆ ಪ್ಲಾಸ್ಟಿಕ್ ಸೇರದಂತಾಗಲಿ, ಮಣ್ಣಿಗೆ ರಾಸಾಯನಿಕ ಸುರಿಯದ ಸಾವಯವ ರೈತರು ಹುಟ್ಟಲಿ. ಮರಗಳನ್ನು ಸಾಯಿಸದೆ, ಕಡಿಯದೆ ಬೇರೆ ವಿಧಾನಗಳಲ್ಲಿ ರಸ್ತೆಯ ಅಗಲೀಕರಣವಾಗಲಿ. ನೀವೇನಂತೀರಿ?
@ಪ್ರೇಮ್@

1022. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-45

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-45

ಪ್ರತಿ ಮನೆಯಲ್ಲು ಮನೆ ನಡೆಸುವ ಮಹಿಳೆಗೆ ಲೆಕ್ಕಾಚಾರದ ಕೊಂಚ ಮಟ್ಟಿನದ್ದಾದರೂ ಅರಿವಿರಬೇಕು. ಇಲ್ಲವಾದರೆ  ಅಡಿಗೆ ಮನೆ ನರಕವಾಗಿರುತ್ತದೆ. ಅಡಿಗೆ ಮನೆಯ ಬ್ಯಾಲೆಂಸಿಂಗ್ ತುಂಬಾ ಮುಖ್ಯವಾದುದು. ಮನೆಯಲ್ಲಿ ನಾಲ್ಕೇ ಜನರಿರುವಾಗ ಅನ್ನಕ್ಕೆ ಅಕ್ಕಿ ಎಷ್ಟು ಹಾಕಬೇಕು, ತರಕಾರಿ ಯಾವುದಕ್ಕೆ ಯಾವುದರೊಂದಿಗೆ ಬೆರೆಸಿದರೆ ಸೂಕ್ತ, ಎಷ್ಟು ಲೋಟ ನೀರಿಗೆ ಎಷ್ಟು ಹಾಲು, ಟೀಪುಡಿ, ಸಕ್ಕರೆ ಹಾಕಬೇಕು ಎಂಬುದರ ಪರಿವೆಯಿರಬೇಕು. ಎಷ್ಟು ಹೊತ್ತು ಅನ್ನಕ್ಕೆ, ಎಷ್ಟೊತ್ತು ತರಕಾರಿ ಬೇಯಲು ಬೇಕೆಂಬ ಅರಿವಿರದಿದ್ದರೆ ನಾಲ್ಕು ತಿಂಗಳಿಗೆ ಬರುವ ಗ್ಯಾಸ್ ಎರಡೇ ತಿಂಗಳಲ್ಲಿ ಮುಗಿಯುತ್ತದೆ. ಹಾಗೆಯೇ ಅಡಿಗೆ ಕೋಣೆಯಲ್ಲಿ ಕಾಲು ಕಿಲೋ ತಿಂಗಳಿಗೆ ಬೇಕಾದ ಸಾಮಾನು ಬ್ಯಾಲೆನ್ಸಿಂಗ್ ಇಲ್ಲದಿದ್ದರೆ ಒಂದು ಕಿಲೋ ಖರ್ಚಾಗುತ್ತದೆ! ಅಷ್ಟೆ ಅಲ್ಲ ,ಪ್ರಮಾಣ ಸರಿಯಿಲ್ಲದ ಆಹಾರ ಗುಣಮಟ್ಟದಲ್ಲೂ ಕೆಟ್ಟದಾಗಿರುತ್ತದೆ, ಅದನ್ನು ತಿನ್ನಲಾಗದು. ಆಗಲೂ ಅದು ತ್ಯಾಜ್ಯವೆನಿಸಿಕೊಳ್ಳುತ್ತದೆ. ಅದಕ್ಕೆ ಬಳಸಿದ ವಸ್ತುಗಳ ಬೆಲೆ ವ್ಯರ್ಥ, ರೆಡಿ ಮಾಡಲು ತೆಗೆದುಕೊಂಡ ಸಮಯ ವ್ಯರ್ಥ ಹಾಗೂ ಗ್ಯಾಸು ವ್ಯರ್ಥ.
   ಮತ್ತೆ ಕೆಲವರು ಪ್ರತಿ ದಿನ ಉಳಿದ ಆಹಾರ ಪದಾರ್ಥಗಳನ್ನು ಚೆಲ್ಲುವ ರೂಢಿಯಿರಿಸಿಕೊಂಡಿರುವವರು. ಪ್ರತಿದಿನ ಚೆಲ್ಲುವಾಗ ಸ್ವಲ್ಪವೇ ಆದರೂ ಅದು ತಿಂಗಳ ಪ್ರಮಾಣ ಲೆಕ್ಕ ಹಾಕುವಾಗ ದೊಡ್ಡದೇ ಅಲ್ಲವೇ? ಇನ್ನು ಕೆಲವರು ಉಳಿದ ಆಹಾರ ಪದಾರ್ಥಗಳನ್ನು ಹಾಗೇ ಇಟ್ಟು, ಮರುದಿನ ಹಳಸಿದಂತಾದಾಗ ಬೇರೆಯವರಿಗೆ ಕೊಡುವುದು! ಯಾವ ಲಾಭಕ್ಕಾಗಿ? ನಮ್ಮಂತೆ ಇತರರೂ ಮನುಜರಲ್ಲವೇ?
   ಪ್ಲಾಸ್ಟಿಕ್ ನಲ್ಲಿ ತುಂಬಿ, ಕಟ್ಟಿ ಕಸ್ತೆಯ ಬದಿಯಲ್ಲಿ ಬಿಸಾಡುವವರು ಮಹಾ ಪಾಪಿಗಳು! ತಾವೂ ತಿನ್ನದೆ, ಇತರರಿಗೂ ಕೊಡಲಾಗದೆ, ನಾಯಿ,ಕೋಳಿ,ದನ, ಹಂದಿಗಾದರೂ ಕೊಡಲಾಗದೆ ಹಾಗೆ ಮಾಡಿ,ಬೀದಿ ಬದಿಯ ಜನಗಳು ಪ್ಲಾಸ್ಟಿಕ್ ಸಮೇತ ಅದನ್ನು ತಿಂದಾಗ ಪರೋಕ್ಷವಾಗಿ ದನಗಳ ಸಾವಿಗೆ ಕಾರಣವಾಗುವವರು! ಬೀದಿ ನಾಯಿಗಳ ಹೆಚ್ಚಳಕ್ಕೂ, ಕಿತ್ತಾಟಕ್ಕೂ ಇವರೇ ಕಾರಣ! ಆ ನಾಯಿಗಳು ಊಟ ತುಂಬಿದ ಕವರುಗಳನ್ನು ಎಳೆದಾಡಿ, ರಸ್ತೆ ತುಂಬಾ ಎಳೆದುಕೊಂಡು ಹೋಗಿ, ಅದರಲ್ಲಿ ತುಂಬಿಸಿದ ಮೀನು,ಕೋಳಿ, ಮೊಟ್ಟೆ, ಕುರಿ ಮಾಂಸದ ವೇಸ್ಟ್ ಗಳೆಲ್ಲಾ ದಾರಿಯುದ್ದಕ್ಕೂ ಚೆಲ್ಲಿ, ಸತ್ತ ಹೆಣ ಕೊಳೆತಂತೆ ವಾಸನೆ ಬರುತ್ತಾ ಪಾದಾಚಾರಿಗಳಿಗೆ ಸಾಗಲು ಕಷ್ಟವಾಗುವ ಪರಿಸ್ಥಿತಿಗೂ ಇವರೇ ಕಾರಣರು. ಅದರ ಬದಲು ಎಷ್ಟು ಬೇಕೋ ಅಷ್ಟೇ ಬೇಯಿಸಿ, ಉಳಿದರೆ ಮುಂದಿನ ಊಟಕ್ಕೆ ಅದನ್ನು ಬಳಸಿ, ಅಥವಾ ಬೇಡವೆಂದರೆ ಆಗಲೇ ಯಾರಿಗಾದರೂ ಕೊಟ್ಟರೆ ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದಲ್ಲವೇ?
    ಜೀವನವೆಂದರೆ ಎಲ್ಲರಿಗೂ ಎಂದಿಗೂ ಅಸಮತೋಲನವೇ. ಎಲ್ಲರಿಗೂ ಇಷ್ಟ ಪಟ್ಟವರು ಸಿಗಲಾರರು, ಇಷ್ಟಪಟ್ಟ ವಸ್ತುಗಳೂ ಸಿಗವು. ಸಿಕ್ಕಿದುದರಲ್ಲಿ ಹೊಂದಾಣಿಕೆ ಮಾಡಿಕೊಂಡು, ಮನಸನ್ನು ಸಮತೋಲನಕ್ಕೆ ತಂದುಕೊಂಡು, ಅತಿಯಾಸೆ ಪಡದೆ ಇದ್ದುದರಲ್ಲಿ ಬ್ಯಾಲೆನ್ಸ್ ಮಾಡಿಕೊಂಡು, ಲೆಕ್ಕಾಚಾರದ ಪ್ರಕಾರ ಬದುಕಿದಾಗ ಮಾತ್ರ ಬಾಳು ಸುಗಮವಾಗಿರುತ್ತದೆ. ಆದರೆ ಹಾಗೆ ಬದುಕುವುದು ಹೇಳಿದಷ್ಟು ಸುಲಭದ ಮಾತಲ್ಲ! ಅದಕ್ಕೇ ಪ್ರಾಥಮಿಕ ಶಾಲೆಯಿಂದಲೇ ಹೆಚ್ಚಿನವರಿಗೆ ಲೆಕ್ಕಾಚಾರವಿರುವ ಗಣಿತ ಕಷ್ಟ! ಬದುಕೂ ಹಾಗೆಯೇ! ನೀವೇನಂತೀರಿ?
@ಪ್ರೇಮ್@

1021. ಹಾಯ್ಕುಗಳು -10

ಹಾಯ್ಕುಗಳು

1.
ಮನಸಿನಲ್ಲಿ
ನೆನೆವುದೆಲ್ಲ ಸತ್ಯ
ಆಗಿರಬೇಕು!

2.
ಕನಸಿನಲ್ಲಿ
ಬರುವ ಹುಡುಗಿಗೆ
ತಂದೆ ತಾಯಿಲ್ಲ!

3.
ಮರದ ಬೇರು
ಕಡಿಯಲಾಗಲಿಲ್ಲ
ನರ ಮಾನವ!

4.
ತಂದೆ ತಾಯಿಯು
ದೇವರೆಂದರು ಆಗ
ಈಗ ಕರ್ತವ್ಯ!

5.
ಕ್ರಾಂತಿ ಕವನ
ಕವಿಗೆ ಸಾಕೆ ಎಂದೂ?
ಶಾಂತಿ ಬೇಡವೇ!

6.

ನಾದ ಗೀತೆಗೆ
ತಾಳ ಹಾಕಲು ನೀನು
ಜತೆಗೆ ಬಾರೇ..

7.

ಮೌನ ಕ್ರಾಂತಿ
ಜೋರು ಜಗಳಕ್ಕಿಂತ
ಹೆಚ್ಚು ಹಾಳಲ್ವ?

8.
ಮರಕಡಿದು
ಗಿಡ ನೆಟ್ಟು ಬೆಳೆಸಿ
ನೀರೆರೆದರು!

9.
ಹನಿಹನಿಯ
ಹಳ್ಳ ತುಂಬಿ ತುಳುಕಿ
ನದಿಯಾಯಿತು!

10.
ಮಾತು ಬೆಳ್ಳಿಯು
ಮೈಕಿನೆದುರು ನಿಂತು
ಬಂಗಾರವಾಯ್ತು!
@ಪ್ರೇಮ್@
20.05.2019

1020. ನೀ..ನಾ..

ನೀ..ನೀ..

ನೀ ನೀನೆಂದರೆ ನಾ..ನಾ..ಇರುವೆನು!
ನೀನೇ ನಾನು, ನಾನೇ ನೀನು ಬೇರೆನು?

ನೀ ನನಗಾದರೆ, ನಾ ನಿನಗಾಗಿಹೆ
ನಾನಾವಾಗಲು ನಿನಗಾಗೇ ಮೀಸಲಾಗಿಹೆ...
ನನ್ನದೆಲ್ಲವ ನಿನ್ನದೆನ್ನದೆ ಮತ್ತೇನೆನಲಿ?
ನಿನ್ನ ಬಿಟ್ಟು ಭುವನದಲಿ ಹೇಗಿರಲಿ?

ನನ್ನನಾಳುವ ಮನವು ನೀನಾಗಿರಲು
ನಿನ್ನದೆನದಿರಲು ನನ್ನಲೇನಿಹುದು ಬದಲು?

ನಮ್ಮಿಬ್ಬರಲಿ ಎಂದೂ ಬರದು
ನಿನ್ನ ನನ್ನದೆಂಬ ನವಭಾವ!!
ಅದೆಂದಿಗೂ ನಮ್ಮದೆಂಬ ಆಡಂಬರವಿರದ ಅಹಂ ಇರದ ಭಾವ!

ನೀನಿಟ್ಟ ಹೆಜ್ಜೆಯಲಿ ನಾನಿರುವೆ
ನಾ ಸಾಗುವ ದಾರಿಯಲಿ ನೀನಿರುವೆ!
ನಿನ್ನಾತ್ಮವು ಪರಮಾತ್ಮವಾಗಿರಲು
ನನ್ನಾತ್ಮವು ನಿನ್ನಾತ್ಮವೇ ಆಗಿಹುದು!

ನನ್ನ ನೀನು, ನಿನ್ನ ನಾನು ತಿಳಿದಿರಲು
ಬದುಕ ನೌಕೆ ಹಿತವಾಗಿ ನಿನ್ನೊಂದಿಗೆ ಸಾಗಿರಲು..
ನಾನೇ ನೀನು ನೀನೇ ನಾನು ತಾನೇ?
@ಪ್ರೇಮ್@
21.05.2019

1019. ನ್ಯಾನೋ ಕತೆ-20. ಬದುಕು

ನ್ಯಾನೋ ಕತೆ
ಬದುಕು

ಮದುವೆಯೇ ಬೇಡವೆಂದಿದ್ದ ಆ ಚೆಲುವೆಗೆ ಹುಡುಗನೊಬ್ಬನ ಹುಡುಕಿ ಮದುವೆ ಮಾಡಿದರೆಲ್ಲರು. ಲೋನ್ ಪಡೆದು ಗಮ್ಮತ್ತಾಗೇ ಒಂದೈವತ್ತು ಲಕ್ಷ ಖರ್ಚುಮಾಡಿ! ಮೂರು ತಿಂಗಳ ಬಳಿಕ ತಿಳಿಯಿತು ಅವನಿಗಾಗಲೇ ಬೇರೆ ಮದುವೆಯಾಗಿತ್ತು ಮತ್ತು ಆತ ಹೈಫೈ ಕಳ್ಳತನದ ವ್ಯವಹಾರ ಮಾಡುತ್ತಲಿದ್ದ!
@ಪ್ರೇಮ್@
21.05.2019

ಸೋಮವಾರ, ಮೇ 20, 2019

1018. He...

He
He is the soul of me,
He is the eyes of my eyes..
He is the lighter of my body..
He is life of my lives..

He comes in the morn,
He dips in the evening..
Every morning he comes to See Me,
He takes leave if any,no life for me!

He is round and bright,
He is strong and hot!
I moves around him, pray for him.
He is my heart and power!

He rotates everyday.
He spray his rays on me!
Present in day, absent in night!
Because of him the day is bright!

He is not only mine alone,
But he spreads his rays on
many planets and satellites!
He pores his light on moon too!!

I feel him he is mine forever!
Though I have no breath
without his white light shower!
Tell me frankly how is multipower?
@Prem @
21.05.2019