ಭಾನುವಾರ, ಡಿಸೆಂಬರ್ 31, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -216

        ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ  -216

  ಒಂದು ಕಾಲವಿತ್ತು, ಹೊರಗೆ ಹೋಗುವುದು ಎಂದರೆ ಹೊರಡುವುದು. ಏನಿಲ್ಲ ಎಂದರೂ ಕೈ ಕಾಲು ಮುಖ ಸಾಬೂನು ಹಾಕಿ ತಿಕ್ಕಿ ತೊಳೆದು, ಒರೆಸಿ, ತಲೆ ಬಾಚಿ ಒಳ್ಳೆ ಬಟ್ಟೆ, ಪೌಡರ್, ಕುಂಕುಮ ಹಾಕಿ ಚಪ್ಪಲಿ ತೊಟ್ಟು ಹೊರ ನಡೆಯುವುದು. ಅಷ್ಟೇ ಮೇಕಪ್. ಆದರೆ ಕಾಲ, ಜನ, ಸಿಗುವ ವಿವಿಧ ಸೌಂದರ್ಯ ವರ್ಧಕಗಳು ಎಲ್ಲವೂ ಬದಲಾಗಿವೆ. ಈಗ ಜನ ಪಾರ್ಲರ್ ಗಳಿಗೆ ಹೋಗುತ್ತಾರೆ, ತಮ್ಮ ಬಣ್ಣ, ವೇಷ ಎಲ್ಲವನ್ನೂ ಬದಲಾಯಿಸಿಕೊಳ್ಳುತ್ತಾರೆ.  ಅಷ್ಟೇ ಏಕೆ, ಮಡದಿಯ ಹಾಗೆ ಡ್ರೆಸ್ ಮಾಡಿಕೊಂಡು ಹೋಗುವ ಪುರುಷರು ಕೂಡಾ ಇರಬಹುದು!
                ಅದಿರಲಿ, ಈಗಿನ  ಮೇಕ್ ಆಫ್ ಹಾಗಲ್ಲ. ಅದನ್ನು ದೇಹದಲ್ಲಿ ಮುಖದ ಅಂದಕ್ಕೆ ಹಚ್ಚುವ ಕ್ರೀಂ, ಪೌಡರ್ ಗಳು ಮಾತ್ರ ಅಲ್ಲ ಇಂದು. ಹುಬ್ಬಿಗೆ, ಕಣ್ಣಿನ ರೆಪ್ಪೆಯ, ಗಲ್ಲಕ್ಕೆ, ಗಡ್ಡಕ್ಕೆ, ಕೆನ್ನೆಗೆ, ತುಟಿಗೆ, ಹಣೆಗೆ, ಕುತ್ತಿಗೆಗೆ, ಕಿವಿಗೆ, ಮೂಗಿಗೆ ಹೀಗೆ ಮುಖದ ಬೇರೆ ಬೇರೆ ಅವಯವಗಳಿಗೆ ಒಂದೊಂದಲ್ಲ, ಬೇಸಿಕ್, ಫೌಂಡೇಶನ್, ಕಲರಿಂಗ್, ಡಾರ್ಕ್ ಲುಕ್, ನೈಟ್ ಕಲರ್, ಸನ್ ಸ್ಕ್ರೀನ್, ಲೋಷನ್, ಕ್ರೀಂ, ಪೌಡರ್, ಜೆಲ್, ಆಯಿಂಟ್ಮೆಂಟ್, ಸ್ಟಿಕ್, ರೆಡಿ ಮೇಡ್ ಅಂತ ಏನೇನೋ ಬಂದಿದೆ. ಇವುಗಳಲ್ಲಿ ಹುಬ್ಬಿನ ಅಂದ, ಆಕಾರ, ಗಾತ್ರ, ಸ್ಥಾನ , ಬಣ್ಣ ಎಲ್ಲವನ್ನೂ ಬದಲಾಯಿಸಬಹುದು. ಹಿಂದಿನ ಕಾಲದ ಜನರಿಗೆ ಕೂದಲು ಬಿಳಿ ಆದಾಗ ಕಪ್ಪಾಗಿಸುವ ಆಸೆ ಇದ್ದು ಹೇರ್ ಡೈಗಳನ್ನು  ಬಳಸುತ್ತಿದ್ದರು. ಇಂದು ಅವು ಒಂದೇ ಬಣ್ಣದಲ್ಲಿ ಇಲ್ಲ. ಮಜೆಂದ, ಗ್ರೇ, ಬ್ಲಾಕ್, ಬ್ರೌನ್, ಬ್ರಿಂಜಲ್, ಬರ್ಗಂಡಿ ಹೀಗೆ ಹಲವಾರು ಬಣ್ಣಗಳಲ್ಲಿ ಲಭ್ಯ. ನಿಮ್ಮ ಕೂದಲಿನ ಬಣ್ಣ ನಿರ್ಧರಿಸುವವರು ನೀವೇ. ಕೂದಲು ಇದ್ದರೆ ಆಯಿತು. 
       ಕೂದಲು ಇಲ್ಲದೆ ಹೋದರೆ, ಅಥವಾ ಕಡಿಮೆ ಇದ್ದರೆ ಅದಕ್ಕೂ ಆರ್ಟಿಫಿಷಿಯಲ್ ಕೂದಲು ಸಿಗುತ್ತದೆ. ಕೂದಲು ನಾಟಿ ಮಾಡುವ , ನೆಡುವ ಚಿಕಿತ್ಸೆಯೂ ಇದೆ ಅಲ್ಲವೇ?  ದುಡ್ಡು ಇದ್ದರೆ ಆಯಿತು ಅಷ್ಟೇ. ದುಡ್ಡಿದ್ದವ ದೊಡ್ಡಪ್ಪ ಅಂತ ಹಿರಿಯರು ಸುಮ್ನೆ ಕಟ್ಲಿಲ್ಲ ಗಾದೆ. ಸಿಲಿಕಾನ್ ಇಂಜೆಕ್ಷನ್ ನಿಂದ ವಯಸ್ಸಾದ ಚರ್ಮದ ಮೇಲಿನ ಸುಕ್ಕುಗಳನ್ನು ಹೋಗಿಸಿ ಚಿಕ್ಕವರಂತೆ ಕಾಣಬಹುದಂತೆ! ಹಾಗಂತ ವಯಸ್ಸು ನಿಲ್ಲುವುದೇ? ಸಾವಿಗೆ ಮದ್ದಿಲ್ಲ. ಆದರೆ ಸಾಯುವವರೆಗೆ ಅಂದ ಬೇಡವೇ?
     ಮುಖದ ಮತ್ತು ಕೂದಲಿನ  ಅಂದ ಮಾತ್ರ ಅಲ್ಲ, ಕ್ಕೈಯ ಅಂದ ಹೆಚ್ಚಿಸಲು ಉಗುರುಗಳ ಅಂದ ಹೆಚ್ಚಿಸಲು, ರೋಮಗಳನ್ನೆಲ್ಲ ತೆಗೆದು, ಕ್ರೀಮುಗಳ ಹಚ್ಚಿ, ಗಂಡಸರ ಒರಟು ಕೈಗಳನ್ನು ಸ್ತ್ರೀ ವೇಶಕ್ಕೆ ಸಜ್ಜುಗೊಳಿಸಲು ಬಹುದು. ಹಾಗೆಯೇ ಉಗುರುಗಳು ಗಿಡ್ದವಾಗಿ ಇದ್ದರೆ , ಉದ್ದ ಉಗುರುಗಳು ಡಿಸೈನ್ ಡಿಸೈನ್ ಗಳಲ್ಲಿ ಸಿಗುತ್ತವೆ. ನಮಗೆ ಬೇಕಾದ ಆಕಾರದ ಉಗುರುಗಳನ್ನು ತಂದು ಬೆರಳಿಗೆ ಸಿಕ್ಕಿಸಿ ಬೇಕು ಬೇಕಾದ ಉಗುರು ಬಣ್ಣ, ಶೈನಿಂಗ್ ಗಳನ್ನೂ ತಂದು ಹಚ್ಚಿ ಕಾರ್ಯಕ್ರಮಗಳಿಗೆ ನಮ್ಮನ್ನು ನಾವು ಅಂದವಾಗಿ ಸಜ್ಜುಗೊಳಿಸಬಹುದು. ಇನ್ನು ಎದೆಯ ಭಾಗ, ಹಿಂದೆ ಹಿಪ್ ಎದ್ದು ಕಾಣಲು ಅದಕ್ಕೂ ದಪ್ಪ ಪ್ಯಾಡ್ ಗಳನ್ನು  ಬಳಸುತ್ತಾರೆ. ಬೇಕಾದ ಗಾತ್ರದವುಗಳನ್ನು ಬಳಸಿ ನಮ್ಮ ದೇಹದ ಆಕಾರಗಳನ್ನು ಎಲ್ಲರೂ ನಮ್ಮನ್ನೇ ನೋಡುವ ಹಾಗೆ ಬಳಸಿ ಅಂದಗೊಳಿಸ ಬಹುದು. 
   ಹೊಟ್ಟೆ ಮುಂದೆ ಬಂದಿದ್ದರೆ ಅದನ್ನು ಹಿಂದೆ ಕಳಿಸಿ ಹೊಟ್ಟೆಯನ್ನು ಚಿಕ್ಕದು ಮಾಡಿ ತೋರಿಸುವ ಬೆಲ್ಟ್ ಗಳು, ಚಡ್ಡಿಗಳು ಬಂದಿವೆ. ದುಡ್ಡು ಕೊಟ್ಟರೆ ಆಯಿತು! ತೊಡೆ ಚಿಕ್ಕದಾಗಿರಲಿ ಅಂತ ಅದಕ್ಕೂ ಬೆಲ್ಟ್. ಕೈಗೆ ಬಳೆ. ಕಿವಿ, ಮೂಗಿಗೆ ರಿಂಗುಗಳು,(ರಿಂಗು, ಓಲೆಗಳ ಗಾತ್ರ, ಆಕಾರ, ಡಿಸೈನ್ ಗಳನ್ನು  ಜಾತ್ರೆ, ಚಿನ್ನದ ಅಂಗಡಿ, ಗೂಗಲ್ ನಲ್ಲಿ ನೋಡಬಹುದು!), ಜುಮ್ಕಿ, ಮಾಟಿ, ಓಲೆ, ರಿಂಗ್, ಹ್ಯಾಂಗಿಂಗ್,  ಜುಮ್ಕ, ಹೀಗೆ ಇನ್ನೂ ಏನೇನೋ ಹೊಸ ಹೊಸ ಆವಿಷ್ಕಾರ ನಡೆಯುತ್ತಲೇ ಇವೆ. ಬೆಳ್ಳಿ, ಜರ್ಮನ್ ಬೆಳ್ಳಿ, ಬಂಗಾರ, ಕಂಚು, ತಾಮ್ರ, ಹಿತ್ತಾಳೆ, ಪೇಪರ್, ಫೈಬರ್, ಚಿನ್ನ, ಮುತ್ತು, ಹವಳ , ಸೇರಿ ನವರತ್ನಗಳು, ವಜ್ರ ಹಾಗೂ ಇತರ ಬಣ್ಣ ಬಣ್ಣದ ಕಲ್ಲುಗಳು, ಪ್ಲಾಸ್ಟಿಕ್, ಫ್ಲೋರೈಡ್ ಕೋಟೆಡ್, ವನ್ ಗ್ರಾಂ ಗೋಲ್ಡ್, ಆರ್ಟಿಫಿಷಿಯಲ್ ಗೋಲ್ಡ್, ಬ್ಲಾಕ್ ಮೆಟಲ್, ವೈಟ್ ಮೆಟಲ್, ವೈಟ್ ಗೋಲ್ಡ್, ಪ್ಲಾಟಿನಂ, ರೋಡಿಯo ಹೀಗೆ ಹೊಸ ಹೊಸ ಮೆಟಲ್ ಗಳ ಲಕ್ಷಗಟ್ಟಲೆ ಡಿಸೈನ್ ಗಳ ಬಳೆ, ಉಂಗುರ, ಚೈನ್, ನೆಕ್ಲೇಸ್, ಸರ, ಕಾಲು ಗೆಜ್ಜೆ, ಬೈತಲೆ ಬೊಟ್ಟು, ಸೊಂಟ ಪಟ್ಟಿ, ಮೂಗಿನ ನತ್ತು ಹೀಗೆ ಒಡವೆಗಳ  ಭಂಡಾರವೇ ಇವೆ. ಕೊಳ್ಳುವುದು, ಹಾಕಿಕೊಳ್ಳುವುದು. ಬೇಕೆಂದರೆ ಇಡುವುದು, ಬೇಡ ಎಂದರೆ ಎಸೆದು ಬಿಡುವುದು! ಇನ್ನೇನು ಹೇಳಿ? ಈಗಂತೂ ಶಾಪಿಂಗ್ ಹುಚ್ಚು ಬಿಡಿಸಲಾರದ ಹುಚ್ಚು ಅಲ್ಲವೇ?
      ದಿನ ದಿನ ಮಾಮೂಲಿ ಅಂಗಡಿಗಳು ಕ್ರಮೇಣ ಸಾಯುತ್ತಾ ಬಂದು ಮಾಲ್ ಗಳು ಹೆಚ್ಚಾಗುತ್ತಾ ಹೋಗುತ್ತಿವೆ. ಆನ್ ಲೈನ್ ವ್ಯಾಪಾರ ಹೆಚ್ಚಿ, ನಮ್ಮ ಹಳ್ಳಿಯ, ಊರಿನ ಅಂಗಡಿಗಳ ವ್ಯಾಪಾರಸ್ಥರು ಕೊಳ್ಳುವವರೆ ಇಲ್ಲದೆ ಬಡವರಾಗಿತ್ತಿರುವುದೆ ಅಲ್ಲದೆ ಹಲವಾರು ವರ್ಷಗಳಿಂದ ನಡೆಸುತ್ತಾ ಬಂದ ತಮ್ಮ ವ್ಯಾಪಾರಿ ವೃತ್ತಿಯನ್ನು ನಿಲ್ಲಿಸುವ ಹಂತಕ್ಕೆ ನಾವು ಅವರನ್ನು ತಂದು ನಿಲ್ಲಿಸಿದ್ದೇವೆ. ಕಾರಣ ನಮ್ಮ ಫ್ಯಾನ್ಸಿ ಶೋಕಿ, ಮಾಲ್ ಆನ್ಲೈನ್ ವ್ಯಾಪಾರಗಳು. ಹಳೆಯದನ್ನು ಮರೆತು ಹೊಸದನ್ನು ಬಳಸುವ ಹುಚ್ಚು. 
   ಇನ್ನು ಕಾಲಿಗೆ ಧರಿಸುವ ಶೂಗಳು, ಚಪ್ಪಲಿಗಳು. ತಗ್ಗಿನ ಫ್ಲಾಟ್ ಚಪ್ಪಲಿಗಳಿಂದ ಹಿಡಿದು ಹೈ ಹೀಲ್ಸ್, ನೀಡಲ್ ಹೀಲ್ಸ್, ವೆರೈಟಿ ಶೂಗಳು ಅವುಗಳಲ್ಲೂ ಗ್ರ್ಯಾಂಡ್ ಬೇರೆ, ವಾಕಿಂಗ್ ಗೆ ಬೇರೆ, ಶಾಲೆಗೆ, ಆಫೀಸಿಗೆ, ಜಾಗಿಂಗ್ ಗೆ, ರನ್ನಿಂಗ್ ಗೆ, ಟ್ರಾವೆಲಿಂಗ್ , ಟ್ರಕಿಂಗ್ ಗೆ , ಮಳೆಗಾಲಕ್ಕೆ, ಚಳಿಗಾಲಕ್ಕೆ, ಸೆಕೆಗೆ ಹೀಗೆ ಬೇರೆ ಬೇರೆ ತರಹ, ಬಣ್ಣ, ಗಾತ್ರ, ಆಕಾರ, ಉದ್ದ, ಎತ್ತರ, ಪಾ, ಮಣಿಕಟ್ಟಿನ ವರೆಗೆ, ಗಂಟಿನವರೆಗೆ, ತೊಡೆಗಳ ವರೆಗೆ, ಹೀಗೆ ಎಲ್ಲಾ ರೀತಿಯ ಬೂಟು, ಚಪ್ಪಲಿಗಳ ಸರಮಾಲೆ. ಬೇಕಾದ್ದು ಕೊಳ್ಳಬಹುದು. ಬೇಡವೆಂದರೆ ಹಾಕಿ ಎಸೆಯಬಹುದು!
       ಇನ್ನು ಕೂದಲಿಗೆ ಬೇಕಾದ ಹೇರ್ ಬ್ಯಾಂಡುಗಳು, ಕ್ಲಿಪ್ ಗಳು, ರಬ್ಬರ್, ಹೇರ್ ಪಿನ್ನುಗಳು, ಸೂಜಿಗಳು, ಮೆಟಲ್ ಶೈನಿಂಗ್ ಕ್ಲಿಪ್ಸ್, ರಿಬ್ಸ್, ಬನ್ಸ್, ಅಬ್ಬಬ್ಬಾ ಒಂದೇ ಎರಡೇ? ಇಷ್ಟಾಗಿ ಮುಗಿಯಿತೇ? ಇಲ್ಲಪ್ಪ, ಬಟ್ಟೆ ಬರೆಯ ಪ್ರಪಂಚವೇ ಬೇರೆ. ರೇಷ್ಮೆ, ಟೆರಿಲಿನ್, ಸಾಫ್ಟ್ ಸಿಲ್ಕ್, ಕೈ ಮಗ್ಗ, ಕಾಟನ್, ನೈಲಾನ್, ಶಿಫಾನ್, ಮಸ್ಲಿನ್, ಜಾರ್ಜೆಟ್, ಜ್ಯೂಟ್, ನೆಟ್, ಸ್ಯಾಟಿನ್, ಟಿಶ್ಯೂ, ಲೆದರ್ ಬಟ್ಟೆ, ಕೋಟ್, ಸೀರೆ, ಪ್ಯಾಂಟ್ಸ್, ಬ್ಲೌಸ್, ರವಿಕೆ, ಜಾಕೆಟ್, ಫ್ರಾಕ್ ಹೀಗೆ ಬಗೆ ಬಗೆ ಬಣ್ಣ, ಆಕಾರ, ರೇಟಿನ ಬಟ್ಟೆಗಳ ಲೋಕವೇ ಮಾಯಾಲೋಕ. ಈಗೀಗ ಬೆಳ್ಳಿ ಚಿನ್ನದ ಬಟ್ಟೆಗಳೂ ಮಾರುಕಟ್ಟೆಗೆ ಬಂದಿದೆಯಂತೆ. ಮುಂದೆ ಅದು ಯಾವ ಹೊಸ ಶೈಲಿ ಬರುವುದೋ? ಮೈ ಮುಚ್ಚುವ ಬಟ್ಟೆ ಧರಿಸಿದರೆ ಸಾಕಪ್ಪಾ.. ಈಗ ಹಾಕಿಕೊಂಡು ಹೋಗುವ ಹರಕು ಚಡ್ಡಿ, ಅರ್ಧ ದೇಹ ಕಾಣುವ ಬ್ಲೌಸ್, ಫ್ರಾಕ್, ಜಾಕೆಟ್ ಗಳು, ಆ ಟಿವಿ ಸೀರಿಯಲ್, ಕಾರ್ಯಕ್ರಮಗಳ ಜಡ್ಜ್ ಗಳು, ನೋಡಲು ಬರುವ ವೀಕ್ಷಕರ, ಜಾತ್ರೆ, ದೇವಾಲಯ, ಕಾರ್ಯಕ್ರಮಗಳಿಗೆ ಬರುವ ಜನರು ಹಾಕುವ ಬಟ್ಟೆಗಳನ್ನು ನೋಡಿದರೆ ಕೆಲವೊಮ್ಮೆ ಭಿಕ್ಷುಕರೇ ಲೇಸು ಅನ್ನಿಸುತ್ತದೆ. 
   ಫ್ಯಾಷನ್ ಲೋಕ ಹಳೆಯದೇ ಆದರೂ, ಪಟಾಕಿ, ತರಕಾರಿ, ಹಣ್ಣು, ಬಾಟಲಿಗಳು ಅಷ್ಟೇ ಏಕೆ ಹಳೆ ಶಿಲಾಯುಗದ ಜನರ ಹಾಗೆ ಸೊಪ್ಪು ಕಟ್ಟಿಕೊಂಡು ಮೆರೆದು ಹಿಸ್ಟರಿ ರಿಪೀಟ್ಸ್ ಎನ್ನುವ ಮಾತನ್ನು ನಾವು ಹೌದು ಮಾಡಿ ತೋರಿಸಿದವರು. ಕೊನೆಯ ಆಶಯ ಒಂದೇ. ಈ ಎಲ್ಲಾ ಮೇಕ್ ಅಫ್, ಆಭರಣಗಳು, ಚಪ್ಪಲಿ, ಶೂಗಳ, ಬಟ್ಟೆ ಬರೆಗಳ ಒಳಗೆ ಇರುವ ದೇಹ ಆರೋಗ್ಯಯುತವಾಗಿ ಇರಲಿ, ಮನಸ್ಸು ಹಾಗೂ ಆಶಯಗಳು ಉದಾತ್ತವಾಗಿ ಚೆನ್ನಾಗಿ, ಉತ್ತಮ ಆಲೋಚನೆಗಳಿಂದ ತುಂಬಿರಲಿ. ಪರರಿಗೆ ನೋವು ತರದಿರಲಿ. ಅಷ್ಟೇ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
23.12.2023

   

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -217

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 217
       ಇದೀಗ ತಾನೇ ಕ್ರಿಸ್ಮಸ್ ಹಬ್ಬವನ್ನು ಮುಗಿಸಿದ ಕ್ರೈಸ್ತ ಬಾಂಧವರು ತಮ್ಮ ದೊಡ್ಡ ಹಬ್ಬ ಮುಗಿಯಿತೆಂದು ಸ್ವಲ್ಪ ಬೇಸರಗೊಂಡರೂ ಹೊಸ ವರ್ಷಕ್ಕೆ ಅಣಿಯಾಗುತ್ತಿದ್ದಾರೆ. ಅದೇ ಮುಸ್ಲಿಂ ಬಾಂಧವರು ಇನ್ನೊಂದೆರಡು ತಿಂಗಳಲ್ಲಿ ರಂಜಾನ್ ತಿಂಗಳ ಬರುವಿಕೆಗಾಗಿ ಸಿದ್ಧತೆಗಳನ್ನು ಬರದಿಂದ ಪ್ರಾರಂಭಿಸಿಕೊಳ್ಳುತ್ತಿದ್ದಾರೆ. ಜಾತಿ, ಮತ, ಧರ್ಮದ ಹೊರತಾಗಿ ಪ್ರಪಂಚದ ಎಲ್ಲಾ ಜನರು ಕೂಡ ಹೊಸ ವರ್ಷದ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇದು  ಆಂಗ್ಲರ ಹೊಸ ವರ್ಷವೇ ಆದರೂ ಕೂಡ ಹೆಚ್ಚಿನ ಎಲ್ಲಾ ದೇಶಗಳಲ್ಲೂ ಇದನ್ನೇ ಅನುಸರಿಸಲಾಗುತ್ತದೆ. ಆದರೆ ನಡು ನಡುವೆ ಕೊರೋನ ಸ್ವಲ್ಪ ಅಡ್ಡಿ ಉಂಟು ಮಾಡುತ್ತಿದೆ. ನಾನು ಅಲ್ಲಲ್ಲಿ ಇದ್ದೇನೆ ಏನು ಅಂತ ಮುಖವನ್ನು ತೋರಿಸಿಕೊಂಡು ಹಲವಾರು ಜನರ ಜೀವಕ್ಕೆ ಕುತ್ತು ತರುತ್ತಲೇ ಇದೆ. ಈ ಕೊರೊನ ಮಹಾಮಾರಿಯ ನಡುನಡುವಲ್ಲಿ ಹೊಸ ವರ್ಷದ ಆರಂಭಕ್ಕೆ ಸಿದ್ಧತೆಗಳು ಕೂಡ ತಯಾರಾಗಿವೆ. ಕೊರೋನ ಬರಲಿ ಅಥವಾ ಇನ್ನೇನಾದರೂ ಬರಲಿ ಜನ ತಮ್ಮ ಆನಂದದ ಕ್ಷಣವನ್ನು ಮರೆತು ಬಿಡಲು ಅಥವಾ ತ್ಯಜಿಸಲು ತಯಾರಿಲ್ಲ. ಎಂದರೆ ಮಾನವರು ಪ್ರಕೃತಿ ಸಹಜವಾಗಿ ಖುಷಿಯನ್ನು ಅನುಭವಿಸುವ ಜೀವಿಗಳು. 

       ಒಂದಾದ ಮೇಲೆ ಒಂದು ಅದರ ನಂತರ ಮತ್ತೊಂದು ಹೊಸ ವರ್ಷ ನಮ್ಮ ಬದುಕಿನಲ್ಲಿ ಬರುತ್ತಲೇ ಇರುತ್ತವೆ. ಪ್ರತಿಯೊಂದು ಹೊಸ ವರುಷಕ್ಕೆ ಹೊಸದಾದ ಒಂದೊಂದು ಗುರಿಯನ್ನು ಇಟ್ಟುಕೊಳ್ಳುವುದು ಒಳಿತು. ಈ ವರ್ಷ ನಾನು ಇಂತಹ ಗುರಿಯನ್ನು ಸಾಧಿಸುತ್ತೇನೆ ಎಂದು ಮೊದಲೇ ಬರೆದಿಟ್ಟುಕೊಂಡು ಜನವರಿಯಿಂದ ಡಿಸೆಂಬರ್ ವರೆಗೂ ಆ ಗುರಿಯನ್ನು ಸಾಧಿಸಲು ಅಥವಾ ಯಾವ ತಿಂಗಳಲ್ಲಿ ಸಾಧಿಸಬೇಕು ಆ ತಿಂಗಳಿಗೆ ನಿಖರವಾದ ಗುರಿಯಿಟ್ಟು ಅದನ್ನು ಸಾಧಿಸಿ ಗೆದ್ದಿರಬೇಕು ಇಲ್ಲದಿದ್ದರೆ ಜೀವನದಲ್ಲಿ ಅಂದುಕೊಂಡಂತೆ ಆಗುವುದಿಲ್ಲ. ಯಾವಾಗಲೂ ಇಡುವ ಗುರಿಗಿಂತ ಸ್ವಲ್ಪ ಎತ್ತರದಲ್ಲಿಯೇ ಇರಬೇಕು. ಡಾಕ್ಟರ್ ಎ. ಪಿ. ಜೆ . ಅಬ್ದುಲ್ ಕಲಾಂ  ಅವರು ಹೇಳುವ ಹಾಗೆ ಸಣ್ಣ ಸಣ್ಣ ಗುರಿಗಳು ಗುರಿಗಳೇ ಅಲ್ಲ ಮತ್ತು ಸಣ್ಣ ಸಣ್ಣ ಗುರಿಗಳಲ್ಲಿಟ್ಟುಕೊಂಡವ ಮನುಷ್ಯರು ಆಶಾವಾದಿಗಳಲ್ಲ . ಬದಲಾಗಿ ಜೀವನದ ಗುರಿಯು ತುಂಬಾ ದೊಡ್ಡದಿರಬೇಕು ಮತ್ತು ಆ ಗುರಿಯನ್ನು ಸಾಧಿಸಲು ರಾತ್ರಿ ಮಾತ್ರವಲ್ಲ , ಹಗಲು ಕೂಡ ಕನಸನ್ನು ಕಾಣಬೇಕು ಕನಸು ಕಂಡರೆ ಸಾಲದು , ಆ ಕನಸಿನತ್ತ ಹೋಗಲು ಹಗಲು - ರಾತ್ರಿ ನಿದ್ದೆ ಇಲ್ಲದೆ ಯೋಚಿಸಬೇಕು ಮತ್ತು ಕಾರ್ಯ ಪ್ರವೃತ್ತರಾಗಬೇಕು.  ಆಗ ಮಾತ್ರ ನಾವು ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯ ಕಠಿಣ ಪರಿಶ್ರಮವೇ ಸಾಧನೆಯ ಯಶಸ್ಸಿನ ಅಡಿಗಲ್ಲು. 

           ಹೊಸ ವರ್ಷ ಬಂತು ಎಂದು ಹೊಸದಾದ ಆಚರಣೆಗೆ ಶುರು ಮಾಡಿ ಒಂದು ವರ್ಷವಿಡೀ ಬದುಕನ್ನು ಯಾವುದೇ ಕನಸುಗಳಿಂದ ಸಿಂಗರಿಸದೆ ಮತ್ತೊಂದು ಹೊಸ ವರ್ಷ ಬರುವವರೆಗೂ ಕಾದು ಅದನ್ನು ಆಚರಿಸುತ್ತಾ ಹೀಗೆ ವರ್ಷದಿಂದ ವರ್ಷದಿಂದ ವರ್ಷ ಕಳೆಯುತ್ತಾ ಹೋದರೆ ಬದುಕಿನಲ್ಲಿ ಯಾವ ಗುರಿಯನ್ನು ಕೂಡಾ ತಲುಪಲು ಸಾಧ್ಯವಿಲ್ಲ. ಬದುಕಿನಲ್ಲಿ ಪ್ರತಿ ವರ್ಷವೂ ವಿಭಿನ್ನವಾಗಿರಬೇಕು ಅದರ ಜೊತೆಗೆ ಪ್ರತಿ ವರ್ಷದಲ್ಲೂ ನಮ್ಮ ಧೈರ್ಯ ಪುಟಗಳಲ್ಲಿ ಬರೆದಿಡುವಂತಹ ಹೊಸ ಹೊಸ ಗುರಿಗಳಲ್ಲಿಟ್ಟುಕೊಂಡು ಅವುಗಳನ್ನು ಸಾಧಿಸಲು ಪ್ರಯತ್ನಿಸಬೇಕು ಕೆಲವೊಮ್ಮೆ ಕೆಲವೊಂದು ಗುರಿಗಳನ್ನು ನಾವು ಸಾಧಿಸಬಹುದು ಇನ್ನು ಕೆಲವೊಮ್ಮೆ ನಮ್ಮ ಗುರಿಗಳು ಗುರಿಗಳಾಗಿಯೇ ಉಳಿದು ಹೋಗುತ್ತವೆ ಅವುಗಳನ್ನು ಮುಂದಿನ ವರ್ಷವಾದರೂ ಸಾಧಿಸುವುದು ನಮ್ಮ ಛಲವಾಗಲೇ ಬೇಕು. 
              ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಆದರೆ ಸಾಧಿಸುವ ಛಲ ಮತ್ತು ಗುರಿ ನಮ್ಮಲ್ಲಿರಬೇಕು ಆಗ ಮಾತ್ರ ಸಾಧನೆಗೆ ಒಲಿಯುತ್ತದೆ ಇಲ್ಲದೆ ಹೋದರೆ ಅವು ಕನಸುಗಳಾಗಿಯೇ ಮನದೊಳಗೆ ಕುಳಿತುಬಿಡುತ್ತವೆ. ಪ್ರಪಂಚದಲ್ಲಿ ಮುಖ್ಯವಾಗಿ ಬದುಕಿಗೆ ಬೇಕಾಗಿರುವುದು ನೆಮ್ಮದಿ ಮತ್ತು ಆರೋಗ್ಯ ಯಾರು ನೆಮ್ಮದಿಯಿಂದ ಆರೋಗ್ಯಯುತವಾಗಿತ್ತು ಬದುಕುತ್ತಾನೆಯೋ ಅವನ ಜೀವನ ಸಂತಸಮಯವಾಗಿಯೂ ಇರುತ್ತದೆ. ನಾವು ನೆಮ್ಮದಿಯನ್ನು ಪಡೆಯುವ ಸಲುವಾಗಿ ಆಸ್ತಿ ಅಂತಸ್ತು ಧನ ಕನಕ ಸಂಬಂಧಗಳ ಮೊರೆ ಹೋಗುತ್ತೇವೆ. ಕೆಲವೊಮ್ಮೆ ಇದು ಯಾವುದರಿಂದಲೂ ನೆಮ್ಮದಿ ಸಿಗದೇ ಒಂಟಿಯಾಗಿ ಬದುಕುವ ನಿರ್ಧಾರ ಮಾಡುತ್ತೇವೆ. ಆಗ ನಮ್ಮ ಧೈರ್ಯವೇ ನಮ್ಮ ಗೆಳೆಯನಾಗುತ್ತದೆ ಮತ್ತು ನಮ್ಮ ಬುದ್ಧಿಯೇ ನಮ್ಮ ಗುರುವಾಗುತ್ತದೆ . ನಾವು ನಡೆದದ್ದೇ ದಾರಿಯಾಗುತ್ತದೆ ಮತ್ತು ನಮ್ಮ ದಾರಿಗೆ ದಾರಿಹೋಕರು ಮತ್ತು ದಾರಿ ತೋರುವವರು ನಾವೇ ಆಗಿರುತ್ತೇವೆ. ಸರಿಯಾದ ದಾರಿಯಲ್ಲಿ ಹೋದವನಿಗೆ ಮಾತ್ರ ತನ್ನ ಗುರಿಯನ್ನು ತಲುಪಲು ಸಾಧ್ಯ ಬೇರೆ ಬೇರೆ ಯಾವುದೋ ದಾರಿಯಲ್ಲಿ ಹೋಗಿ ಗುರಿ ತಲುಪಲು ಸಾಧ್ಯವೇ ಇಲ್ಲ. ಆ ಸರಿಯಾದ ದಾರಿಯನ್ನು ಕಂಡುಕೊಳ್ಳುವ ನಮ್ಮ ಉದಾತ ಕೆಲಸವು ನಮ್ಮಲ್ಲಿ ಇರಬೇಕು. ನಾವು ಸಾಗುತ್ತಿರುವ ದಾರಿಯ ಯಾವುದೋ ಆಗಿದ್ದು ಬದುಕು ನಮ್ಮನ್ನು ಇನ್ನು ಯಾವುದೋ ದಾರಿಯತ್ತಕೊಂಡು ಹೋಗಬಹುದು.  ಅಲ್ಲಿ ನಮಗೆ ಗೆಳೆಯರು ಹಾಗೆಯೇ ಬಂಧುಗಳು ಅಥವಾ ಪರಿಚಯವೇ ಇಲ್ಲದ ಇನ್ಯಾರೋ ಸಹಾಯ ಮಾಡಬಹುದು.          

         ಒಟ್ಟಿನಲ್ಲಿ ಅದ್ಯಾವುದಾದರೂ ಒಳ್ಳೆಯ ದಾರಿಯನ್ನು ಹಿಡಿದು ಬದುಕಿನ ಗುರಿಯನ್ನು ತಲುಪಿದಾಗ ಆನಂದ ಹೊಂದಿ ಬದುಕು ಸರಳವೆನಿಸುತ್ತದೆ . ಆಗ ನಮಗೆ ನಮ್ಮ ಜೀವನದ ಗುರಿ ಮತ್ತು ಉದ್ದೇಶ ಅರ್ಥವಾಗುತ್ತದೆ. ಅದೇ ಜ್ಞಾನದ ಅರಿವು ಇಲ್ಲದೆ ಸಿಕ್ಕಿದಂತೆ ಬದುಕಿ ನಮ್ಮೊಂದಿಗೆ ಬದುಕಿನಲ್ಲಿ ಜೊತೆ ಸೇರಿದವರಿಗೂ ಕಷ್ಟವನ್ನೇ ಕೊಟ್ಟು ಬದುಕಿನಲ್ಲಿ ಯಾವುದೇ ಕನಸುಗಳಿಲ್ಲದೆ ಯಾವುದೇ ಗುರಿಗಳಿಲ್ಲದೆ ಬದುಕುತ್ತಾ ಇತರರಿಗೂ ತೊಂದರೆಯನ್ನು ಕೊಡುತ್ತಾ ಬಾಳಿ ಬದುಕಿದವನ ಬದುಕು ಶೂನ್ಯ ಮತ್ತು ಪ್ರಾಣಿಗಳ ಹಾಗೆ ಅಲ್ಲವೇ? ಪ್ರಾಣಿಗಳಾದರೂ ತಿಂದು ಏನೂ ಇಲ್ಲ ಅಂದರೂ ಗೊಬ್ಬರವನ್ನಾದರೂ ಕೊಡುತ್ತವೆ. ಮಾನವರಿಗಿಂತ ಎಷ್ಟೋ ಮೇಲು ಬಿಡಿ ಅವು. ಪರೋಪಕಾರ, ಪರಹಿಂಸೆ ಕೊಡದೆ ಇರುವಲ್ಲಿ. 

        ಮರವು ಕೂಡ ಹುಟ್ಟಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸದೆ ಇದ್ದರೂ ಸಹ ಹಲವಾರು ಜನರಿಗೆ ಹೂ,  ಹಣ್ಣು,  ನೆರಳು,  ಕಟ್ಟಿಗೆ, ಕಾಯಿ, ಹಾಗೂ ಹಲವಾರು ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಆಸರೆಯಾಗಿ ಬದುಕುತ್ತದೆ. ಆ ವೃಕ್ಷಕಿಂತಲೂ ಕಡೆ ನಮ್ಮ ಬದುಕು ಎಂದು ಆಗಬಾರದು ಅಲ್ಲವೇ? ಅದಕ್ಕಾಗಿ ಸಾಧನೆ ಬೇಕು ಸಾಧನೆಗಳನ್ನು ದಾಖಲಿಸಿಕೊಳ್ಳಬೇಕು. ಸಾಧನೆಗೆ ಬೆನ್ನ ಹಿಂದೆ ಹತ್ತಿ ಸಾಧಿಸುವುದು ಕೂಡ ಮುಖ್ಯ. ಸಾಧಕನನ್ನು ಯಾರು ಕೂಡಾ ಹಿಡಿಯಲಾರರು. ಸಾಧನೆಯ ಹಿಂದೆ ಹೊರಟವನನ್ನು ಸಾಧನೆಯೂ ಅಪ್ಪಿಕೊಳ್ಳುತ್ತದೆ. ಬದುಕಿನಲ್ಲಿ ಹೆದರಿ ಓಡಿದವನನ್ನು ಸಾವು ಅಪ್ಪಿಕೊಳ್ಳುತ್ತದೆ. ಯಾರ ಅಪ್ಪುಗೆಯಲ್ಲಿ ಬಂಧಿತರಹಾಗಬೇಕು ಎಂಬುದನ್ನು  ನಮ್ಮ ಬದುಕಲ್ಲಿ ನಿರ್ಧರಿಸುವವರು ನಾವೇ. 

       ಇಂದು ಇಲ್ಲೇ ಇರುತ್ತೇವೆ ನಾಳೆ ಮತ್ತೆ ಇನ್ನು  ಎಲ್ಲಿಗೋ ಹೋಗುತ್ತೇವೆ. ನಮ್ಮದು ನಿರಂತರ ಪಯಣದ ಬದುಕು. ಬದುಕಿನ ಬಂಡಿಯನ್ನು ಎಳೆಯುತ್ತಿರುವಾಗ ಹಲವಾರು ಜನರು ಹತ್ತಿ ಕೊಳ್ಳುತ್ತಾರೆ ಮತ್ತೆ ಹಲವಾರು ಜನರು ತಮ್ಮ ತಮ್ಮ ನಿಲ್ದಾಣ ಬಂದಾಗ ಇಳಿದುಕೊಳ್ಳುತ್ತಾರೆ. ಆದರೆ ನಮ್ಮ ಬದುಕು ತನ್ನದೇ ಆದ ಗುರಿಯಲ್ಲಿ ಸಾಗುತ್ತಿರುತ್ತದೆ. ಹೀಗೆ ನಮ್ಮ ಬದುಕು ತನ್ನದೇ ಗುರಿಯಲ್ಲಿ ಸಾಗುತ್ತಿರುವಾಗ ಹಲವಾರು ಜನರಿಗೆ ಸಹಾಯ ಹಸ್ತವನ್ನು ಕೂಡ ನೀಡುವಂತಾಗಬೇಕು. ನಾಲ್ಕಾರು ಜನರು ನಮ್ಮ ಹೆಸರನ್ನು ಕರೆದು ನೆನಪಿಟ್ಟುಕೊಳ್ಳುವ ಹಾಗೆ ಆಗಬೇಕು. ಇದನ್ನೆಲ್ಲ ಕನಸು ಕಾಣುವವರು ಮತ್ತು ಆ ಕನಸನ್ನು ನನಸಾಗಿಸುವವರು ನಾವೇ. ಹೊಸ ವರ್ಷಕ್ಕೆ ಹೊಸದಾದ ಕನಸುಗಳು ಬರಲಿ ಆ ಕನಸುಗಳು ಈಡೇರಲಿ ನಮ್ಮ ಕನಸಿನಿಂದ ಹಲವಾರು ಜನರಿಗೆ ಸಹಕಾರ ಸಹಾಯ ಸಿಗಲಿ ಅವರ ಬದುಕಿಗೆ ಅದು ಅಡಿಪಾಯವಾಗಲಿ, ಉತ್ತಮ ಜೀವನನ ಮಗು ಸಿಗಲಿ ಮತ್ತು ನಮ್ಮೊಂದಿಗೆ ಇದ್ದವರಿಗೂ ಸಿಗಲಿ ಎಂಬ ಆಶಾ ಭಾವನೆಯೊಂದಿಗೆ ಸರ್ವರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ. ಇದೀಗಲೇ ಹೊಸ ಗುರಿಯನ್ನು ಹೊಸ ವರ್ಷಕ್ಕೆ ಇಟ್ಟುಕೊಂಡಿದ್ದೀರಲ್ಲ? ನಿಮ್ಮ ಜೀವನದ ಗುರಿಯು ಆದಷ್ಟು ಬೇಗನೆ ನೆರವೇರಲಿ ಎಂದು ನಮ್ಮೆಲ್ಲರ ಪ್ರಾರ್ಥನೆ. ನೀವೇನಂತೀರಿ?
@ಹನಿಬಿಂದು@
26.12.2023

ಮಂಗಳವಾರ, ಡಿಸೆಂಬರ್ 19, 2023

ಶೀಶುಗೀತೆ: ಹೀಗೊಮ್ಮೆ

ಶಿಶುಗೀತೆ: ಹೀಗೊಮ್ಮೆ


ಮಕ್ಕಳ ಬಳಗದ ಪುಕ್ಕಲ ಇಂದು
ರಕ್ಕಸ ಕಥೆಯನು ಓದಿದ್ದ
ಸಿಕ್ಕರೆ ನನ್ನನು ಬಿಟ್ಟನೆ ಎಂದು
ಪಕ್ಕನೆ ತನ್ನಲೆ ಕೇಳಿದ್ದ

ಜಗ್ಗದೆ ಕುಗ್ಗದೆ ಬಗ್ಗದೆ ಬದುಕುವೆ
ಎನ್ನುವ ಹಾಡನು ಹಾಡಿದ್ದ
ಹೆದರದೆ ಬೆದರದೆ ಕೊರಗದೆ ಇರುವೆ
ಕೆದರದೆ ಕೂದಲು ಎಂದಿದ್ದ

ಆದರೆ ಇಂದು ಎಲ್ಲೋ ಭಯವು
ಓದಿದ ಕಥೆಯು ನೆನಪಿತ್ತು
ಕಾದರೆ ಭಯವು ಹೆಚ್ಚುವುದೆಂದು
ನಾದದ ಮೊರೆಯನು ಹೊಕ್ಕಿತ್ತು


ಸಂಗೀತ ಕೇಳುತ ಎಲ್ಲವ ಮರೆಯಲು
ಮಂಗನ ಮನವು ನೆನೆಸಿತ್ತು
ಸಂಘದ ಇತರರು ನಗುವರು ಎಂದು
ಛಂಗನೆ ನೆಗೆಯುವ ಕಸರತ್ತು!
@ಹನಿಬಿಂದು@
20.12.2023

ಶುಕ್ರವಾರ, ಡಿಸೆಂಬರ್ 15, 2023

ಗುಂಡಿನ ಗುಂಡಿಗೆ

ಗುಂಡಿನ ಗುಂಡಿಗೆ

ಹೌದು, ನಾನೇಕೆ ಕೋವಿಯೊಳಗೆ ತೂರಿ 
ಯಾರನ್ನಾದರೂ ಸಾಯಿಸುವ ಕಾರ್ಯಕ್ಕೆ
ಆ ನರಹಂತಕನಿಗೆ ಸಹಕಾರ ನೀಡಲಿ..?
ಬೇಕಾದರೆ ಕೋವಿಯನ್ನೆ ಎಸೆದು ಸಾಯಿಸಲಿ ಅವನು
ಮತ್ತೆ ನನ್ನನ್ನು ತನ್ನೊಳಗೆ ಸೇರಿಸಿಕೊಂಡು
ಕೆಟ್ಟ ಕಾರ್ಯಕೆ ನನ್ನ ಹೆಸರು ಕಟ್ಟಿ
ನನ್ನನ್ನೇ ಪಾಪಿಯನ್ನಾಗಿ ಮಾಡದೇ ಇರಲಿ

ನಾನೊಬ್ಬನೇ ಹೋಗಿ ಯಾರಿಗೆ ಡಿಕ್ಕಿ ಹೊಡೆದರೂ
ನನ್ನ ವೇಗಕ್ಕೆ, ಭಾರಕ್ಕೆ ಯಾರೂ ಸಾಯಲಾರರು
ಯಾರಾದರೂ ನನ್ನ ತಿಂದು ನುಂಗಿ ಬಿಟ್ಟರೂ
ವೈದ್ಯರು ಬಂದು ಹೊರಗೆ ತೆಗೆದಾರು
ಸಾಯಿಸುವುದು ಯಾರೋ
ಹೆಸರು ಮತ್ಯಾರಿಗೋ..ಶಕ್ತಿ ಇಲ್ಲದವರಿಗೆ

ಹೌದು, ನನಗೆಲ್ಲಿಂದ ಬಂತು ಶಕ್ತಿ..
ಆ ಕೋವಿಯ ದುಷ್ಟ ಸಹವಾಸದಿಂದಲೇ 
ಗಂಧ ಮಾರುವವಳ ಗೆಳೆತನ ಮಾಡಿದರೆ ಪರಿಮಳ
ಅದೇ ಮೀನು ಮಾರುವವಳ ಜೊತೆ...?
ನಾನೂ ಕೂಡ ಆ ಕೋವಿಯ ಸಹವಾಸ ಬಿಡಬೇಕು

ಹಾಗಾದರೆ ನಾ ಒಂಟಿ ಅಲ್ಲವೇ?
ನನ್ನನ್ನೇಕೆ ತಯಾರಿಸಿದ್ದಾರೆ?
ಪರರ ಸಾಯಿಸಲೆಂದೇ ನಾ ಹುಟ್ಟಿರುವೆನೇ?
ಪರರ ಜೀವ ತೆಗೆಯಲು ನಾ ಬಂದಿರುವೆನೇ..
ಅಯ್ಯೋ ..ದೇವಾ..ವಿಧಿಯೇ..

ಆದರೆ ಕೋವಿಯ ಜೊತೆಗಾರ ನಾ ಗುಂಡು
ಗುಂಡಾದ ನನಗೆ ಗಂಡೆದೆ ಇರಬೇಕಲ್ಲ
ಸಾಯಿಸಲು ನಾ ಏಕೆ ಹೆದರುತ್ತಿರುವೆ?
ನನ್ನ ಜನನ ಕೋವಿಯೊಂದಿಗೆ ಜೀವ ಕಳೆಯಲು
ಹುಟ್ಟಿದ ಜೀವಿ ಸಾಯಲೇ ಬೇಕಲ್ಲವೇ?
ಶಿವನ ಕಾರ್ಯವೇ ನನ್ನದು? 
ನಾನಷ್ಟು ದೊಡ್ಡವನೇ ?

ಅರೆರೆ ...ಹಾಗಾದರೆ ನಾ ಶ್ರೇಷ್ಠನೇ ? 
ಜೀವ ತೆಗೆಯುವುದುಶ್ರೇಷ್ಠ ಕಾರ್ಯವೇ! 
ಅದೇ ನನ್ನ ಜೀವಮಾನದ  ಕೆಲಸವೇ?
ಕೋವಿ ಇಲ್ಲದೆ ನನಗೆ ಜೊತೆ, ಬಾಳು ಇಲ್ಲವೇ?
ನಾನೇಕೆ ಹೀಗೆ ಸಾಯಿಸಲು ಹುಟ್ಟಿರುವೆ
ನನಗೆ ಕೊಡಲು ದೇವರಿಗೆ ಬೇರೆ ಕೆಲಸ ಇರಲಿಲ್ಲವೇ?
ವಿಧಿಯ ಲೇಲೆಯೇ?

ನಾ ಹುಟ್ಟಿರುವೆ, ಒಂದು ದಿನ ಸಾಯುವೆ
ಸಾಯುವ ಮೊದಲು ಒಂದು ಜೀವದ ಒಳ ಹೋಗುವೆ
ಸತ್ತರೂ ಸರಿ, ಬದುಕಿದರೂ ಸರಿ
ನನಗೆ ವಹಿಸಿದ ಕಾರ್ಯ ನಾ ಮಾಡಲೇ ಬೇಕು
ನಾನು ಗುಂಡಲ್ಲವೇ .. 
ಗಂಡೆದೆ ಬೇಕಲ್ಲವೇ ನನಗೆ?
@ಹನಿಬಿಂದು@
28.11.2023






 

Feelings

Feelings

You are the person whom I believe in my world
Whom I adore in my life
Whom I trust for ever and now too
Whom I care always as mine and my own 
With whom I  wish to  share all my feelings

You are the person with whom I am ready to travel around the world
With whom I have my true dreams
With whom I wished to spend my precious time
To whom I have spent lot of my life

You are the person whom I carved deep inside the heart
To w my heart beats and pumps
To whom my veins breath and cells dance
To whom my tongue tastes and eyes search

You are the person to whom I yarn in the whole lifetime
To whom I wait for months to meet
To whom I wish to talk every seconds
To whom I wish to see in my dream.
To whom I wish to breath my last
@HoneyBindu@
29.11.2023

ಬದುಕಿನ ಆಟ


ಬದುಕಿನ ಆಟ 

ಬಟ್ಟೆಯೊಳಗಿನ ದೇಹ ಕಾಣದು
ದೇಹದೊಳಗಿನ ಭಾವ ನಿಲುಕದು
ಭಾವದೊಳಗಿನ ಬಂಧ ತಿಳಿಯದು
ಭಾವ ಬಂಧಕೆ ಬಟ್ಟೆ ಸಾಕಾಗದು

ದಾರಿ ದೂರವೂ ಪ್ರೀತಿ  ಮಧುರ
ಕೋರಿ ಸಂಬಂಧವ ಮನವು ಸನಿಹ 
ಮಾರಿ ಅಷ್ಟ ಐಶ್ವರ್ಯ ಧನವನು
ಪಡೆಯಲಾಗದು ಪ್ರೀತಿ ಋಣವನು

ಮೋಹ ಕಾಮ ಸ್ವಾರ್ಥ ಮತ್ಸರ
ಶುದ್ಧ ಪ್ರೀತಿಯು ತರುವ ವಿಚಾರ
ತಾನು ತನ್ನದು ತನಗೇ ಬೇಕೆನುತ
ವೇಣು ನಾದದ ಬಲೆಗೆ ಬೀಳುತ

ಒಂಟಿ ಬದುಕು ತೀರಾ ನೀರಸ
ಗಂಟು ಹಾಕಲು ಪರರ ಸಾಹಸ
ಜಂಟಿಯಾಗಿ ಇರಲು ಕಷ್ಟವೂ
ತಂಟೆ ಮಾಡುತ ಜಗಳ ಕದನವೂ

ಪ್ರೀತಿ ನೆಮ್ಮದಿ ಶಾಂತಿ ಅರಸುತ
ಭೀತಿ ಬಾಳುವೆ ನಿತ್ಯ ಕಳೆಯುತ
ಕೋಟಿ ಹಣದ ಆಸೆ ಇಡುತ
ಮೇಟಿ ವಿದ್ಯೆಯೇ ಮೇಲು ಎನುತ

ಬದುಕಿನಾಟವು ಸಾಗಿ ಮುಂದು
ನೋವಿನಾಟಕೆ ಕೊನೆಯು ಎಂದು
ತನು ಮನದ ಸಂತಸ ಬಯಸಿ ಇಂದು
ಮನುಜ ಬಯಕೆಗೆ ಅಂತ್ಯ ಎಂದು?
@ಹನಿಬಿಂದು@
03.12.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -214

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -214
     ಯಾವುದೇ ಕೆಲಸ ಆಗಿರಲಿ. ಅದನ್ನು ನಾನು ಮಾಡಿಯೇ ತೀರುತ್ತೇನೆ ಎಂಬ ಆತ್ಮ ವಿಶ್ವಾಸದ ಬೀಜ ಮಾನವತೆ ಎಂಬ ಮರಕ್ಕೆ ಮೂಲ ಅಲ್ಲವೇ?  ನಾ ಮಾಡುವೆ ಎಂಬ ಆತ್ಮಸ್ಥೈರ್ಯ ಎಲ್ಲರಿಗೂ ಎಲ್ಲಾ ಕಡೆ ಬರಲು ಸಾಧ್ಯ ಇಲ್ಲ. ನಾನಿದ್ದೇನೆ ಎಂದು ನಮ್ಮ ಸುಪ್ತ ಮನಸ್ಸು ನಮಗೆ ಧೈರ್ಯ ಕೊಡಬೇಕು. ಬಿದ್ದಾಗ ಹಿಡಿದೆತ್ತಬೇಕು . ಗೆಳೆಯನಂತೆ ಬೆನ್ನಿಗೆ ನಿಲ್ಲಬೇಕು, ಮಡದಿಯಂತೆ ಜತೆಗಾರನಾಗಿ ತಿದ್ದಿ ನಡೆಸಬೇಕು, ಅಣ್ಣನಂತೆ ಕೈ ಹಿಡಿದು ಮುನ್ನಡೆಸಬೇಕು, ತಂದೆಯಂತೆ ಜವಾಬ್ದಾರಿ ಹೊರಬೇಕು. ಆ ಮೂಲಕ ನಮ್ಮ ನಿರ್ಮಾತೃ ನಾವೇ ಆಗಿರಬೇಕು. ಅಲ್ಲವೇ?

     ಹೌದು, ಈ ಒಂದು  ಕಾರ್ಯವನ್ನು ನಾನು ಮಾಡಲು ಖಂಡಿತವಾಗಿಯೂ ಶಕ್ತನಾಗಿದ್ದೇನೆ ಇದನ್ನು ನಾನು ಮಾಡಿಯೇ ತೀರುತ್ತೇನೆ ಎಂಬ ಆತ್ಮ ವಿಶ್ವಾಸ ಇರುವುದು ಅದು ಎಂದಿಗೂ ಕೂಡ ಅಹಂಕಾರ ಎಂದು ಪರಿಗಣಿಸಲ್ಪಡುವುದಿಲ್ಲ. ಅದು ಆತ್ಮವಿಶ್ವಾಸದ ಪರಮಾವತಿ ಆದ್ರೆ ಅಹಂಕಾರ ಎನ್ನುವುದು ಹಾಗಲ್ಲ ತನಗೆ ಮಾಡಲು ಗೊತ್ತಿಲ್ಲ ಎಂದು ತಿಳಿದರು ಕೂಡ ನಾನೇ ಮಾಡುವೆ ನಾನು ಮಾಡುತ್ತೇನೆ ಎಂದು ಹೋಗುವುದಿದೆಯಲ್ಲ ಅದು ಅಹಂಕಾರ. ನಾನು ಮಾಡಿದ್ದು ಸರಿಯಾಗದಿದ್ದರೂ ಪರವಾಗಿಲ್ಲ ಇತರರು ಆ ಕೆಲಸವನ್ನು ಮಾಡಬಾರದು ನಾನೇ ಅದರ ಯಜಮಾನನಾಗಬೇಕು ಎಂದು ಬಯಸುವುದು ಅಹಂಕಾರ. 
         ಆತ್ಮವಿಶ್ವಾಸ ಒಳ್ಳೆಯದು.  ಅದು ಜ್ಞಾನವಿದ್ದಾಗ ಮಾತ್ರ ನಮಗೆ ಬರುವಂತದ್ದು. ಆತ್ಮವಿಶ್ವಾಸವಿರುವ ವ್ಯಕ್ತಿ ಯಾವ ಕೆಲಸವನ್ನೇ ಆದರೂ ಅವನಿಗೆ ಕೊಟ್ಟಾಗ ಅವನು ಸರಿಯಾಗಿಯೆ ಮಾಡುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ. ಜ್ಞಾನದ ಒಂದು ಹಂತ ಬುದ್ಧಿಮತ್ತೆ, ಮತ್ತೊಂದು ಹಂತ ಆತ್ಮ ವಿಶ್ವಾಸ . ಆತ್ಮವಿಶ್ವಾಸವನ್ನು ಅಹಂಕಾರದೊಡನೆ ಎಂದಿಗೂ ಹೋಲಿಸಿಕೊಳ್ಳಬಾರದು. ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬ ಗಾದೆ ಮಾತೊಂದಿದೆ ಆದಕಾರಣ ಅಹಂಕಾರ ಮನುಷ್ಯನನ್ನು ಕೊಲ್ಲುತ್ತದೆ ಮತ್ತು ಯಾವುದೇ ಕೆಲಸಗಳನ್ನು ಮಾಡುವುದನ್ನು ತಡೆದುಬಿಡುತ್ತದೆ. ಆತ್ಮವಿಶ್ವಾಸ ಹಾಗಲ್ಲ ನಾನು ಈ ದೇಶವನ್ನು ಆಳಿಯೇ ಅಳುತ್ತೇನೆ ಎಂದು ಆತ್ಮವಿಶ್ವಾಸ ಇದ್ದವ ಮಾತ್ರ ಆಳುವ ಕೆಲಸಕ್ಕೆ ಸಜ್ಜಾಗುತ್ತಾನೆ ಅಹಂಕಾರಿ ಒಂದು ಅಥವಾ ಎರಡೇ ದಿನದಲ್ಲಿ ಅಥವಾ ಒಂದೇ ಒಂದು ಕ್ಷಣದಲ್ಲಿ ಬಿದ್ದು ಹೋಗುತ್ತಾನೆ ಇವನನ್ನು ಯಾರೂ ಕೂಡ ಗೌರವಿಸುವುದೆ ಇಲ್ಲ. 
                 ಆತ್ಮವಿಶ್ವಾಸ ಹೀರೋನ ಗುಣವಾದರೆ ಅಹಂಕಾರ ವಿಲನ್  ನ ಗುಣ. ಜನ ಎಂದಿಗೂ ಹೀರೋವನ್ನು ಇಷ್ಟಪಡುತ್ತಾರೆಯೆ  ಹೊರತು ವಿಲನ್ ನ ಗುಣಗಳನ್ನು ಇಷ್ಟ ಪಡುವುದಿಲ್ಲ. ಹಾಗೆಯೇ ಆತ್ಮವಿಶ್ವಾಸ ಮತ್ತು ಅಹಂಕಾರ ಕೂಡ.  ಜನರು ಇತರರ ಆತ್ಮವಿಶ್ವಾಸವನ್ನು ಬಯಸುತ್ತಾರೆಯೆ  ಹೊರತು ಯಾವುದೇ ಕಾರಣಕ್ಕೂ ಯಾವಾಗಲೂ ಯಾರದ್ದೇ ಅಹಂಕಾರವನ್ನು ಯಾವುದೇ ಜನರು ಯಾವುದೇ ದೇಶದಲ್ಲೂ ಇಷ್ಟಪಡುವುದಿಲ್ಲ. 
     ನಮ್ಮಲ್ಲೂ, ನಮ್ಮ ಒಳಗೂ ಕೂಡ ಎಂದಿಗೂ  ಆತ್ಮ ವಿಶ್ವಾಸ ಬೆಳೆಯುತ್ತಾ ಹೋಗಲಿ. ಅಹಂಕಾರ ಎಂದಿಗೂ ನಮ್ಮ ಜೀವನದಲ್ಲಿ ಇನ್ನು ಮುಂದೆ  ಸುಳಿಯದೆ  ಇರಲಿ,  ಅಹಂಕಾರ ಕೆಟ್ಟದ್ದು,  ಆತ್ಮವಿಶ್ವಾಸ ಒಳ್ಳೆಯ ಗುಣ.  ಸದಾ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳೋಣ ಮತ್ತು ಅಹಂಕಾರವನ್ನು ನಮ್ಮಿಂದ ದೂರ ಓಡಿಸೋಣ , ನೀವೇನಂತೀರಿ?
@ಹನಿಬಿಂದು@
08.12.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -213

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -213
         ಹಾಯ್...ಹೇಗಿದ್ದೀರಿ ಎಲ್ಲರೂ? ಚಳಿಗಾಲ ಆರಂಭ ಆಗಿದೆ. ಒಳಗೆ ಬೆಚ್ಚನೆ ಕುಳಿತಿದ್ದ ಸ್ವೆಟರ್, ಕ್ಯಾಪ್, ಶೂಸ್, ಇವನ್ನೆಲ್ಲ ತೆಗೆದುಕೊಂಡು ಬೆಳಗ್ಗೆ ವಾಕಿಂಗ್ ಹೋಗುವಾಗಲೂ ಅದನ್ನು ತೊಟ್ಟುಕೊಂಡೆ ಹೋಗಬೇಕಾದ ಅನಿವಾರ್ಯತೆ ಬಂದಿದೆ. ಈ ಚಳಿಯ ಸಮಯದಲ್ಲಿ ನಮ್ಮ ಚರ್ಮವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಒಂದು ಚಾಲೆಂಜಿನ ಕೆಲಸವೇ ಸರಿ. ಬಿಸಿಲಿಗೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಗಳನ್ನು ಬಳಸಿಕೊಳ್ಳುವುದು ಮತ್ತು ಚರ್ಮದ ತೇವವನ್ನು  ಕಾಪಾಡಿಕೊಳ್ಳಲು ವ್ಯಾಸೆಲಿನ್ , ಲೋಷನ್, ಕ್ರೀಂ ಮಂತಾದ ಹಲವಾರು ಚರ್ಮದ ಕ್ರಿಮಿಗಳ ಮೊರೆ ಹೋಗುವುದು ಸರ್ವೇಸಾಮಾನ್ಯ. ಹಲವಾರು ಚರ್ಮದ ಕ್ರಿಮಿಗಳ ಬೆಲೆ ಅಂತ ಎಂದು ಗಗನಕ್ಕೆ ಮುಟ್ಟಿದೆ. ಸೌಂದರ್ಯವರ್ಧಕಗಳ ಹೆಸರಿನಲ್ಲಿಯೇ ಕಂಪೆನಿಗಳು ಮಹಿಳೆಯರಿಂದ ಹಲವಾರು ರೂಪಾಯಿಗಳಷ್ಟು ದೋಚಿಕೊಂಡು ಹಗಲು ದರೋಡೆ ಮಾಡುತ್ತಾ ಸಿರಿವಂತರಾಗುತ್ತಿದ್ದಾರೆ. ಮಹಿಳೆಯರೂ ಅಷ್ಟೇ , ಸೌಂದರ್ಯ ವರ್ಧಕಗಳ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ. ಅದೆಷ್ಟೇ ಕಂಪೆನಿಗಳು ಸೌಂದರ್ಯ ವರ್ಧಕಗಳ ಉತ್ಪಾದನೆ ಪ್ರಾರಂಭಿಸಿದರೂ ಕೂಡ ಎಲ್ಲಾ ಕಂಪನಿಯ ಸೌಂದರ್ಯ ವರ್ಧಕಗಳು ಕೂಡ ನಿತ್ಯ ಬಳಕೆಯಾಗುತ್ತಲೇ ಇವೆ. 
                 ಸೌಂದರ್ಯ ವರ್ಧಕಗಳನ್ನು ಬಳಸಿಕೊಳ್ಳುವಾಗ ಅದರ ಬಗ್ಗೆ  ಯಾರು ಮಾಹಿತಿ ನೀಡಿದರು ಎಂಬ ಅಂಶವನ್ನು ಗಮನಿಸುವುದರ ಜೊತೆಗೆ ನನ್ನ ಚರ್ಮಕ್ಕೆ ಯಾವುದು ಉತ್ತಮ , ನನ್ನ ದೇಹದ ಮಾದರಿಗೆ ಯಾವುದು ಸರಿ ಹೊಂದುತ್ತದೆ ಎನ್ನುವುದನ್ನು ಮೊದಲು ನೋಡಿಕೊಳ್ಳಬೇಕು. ಇನ್ನು ಕೆಲವು ಮಹಿಳೆಯರು ಸಾವಿರಗಟ್ಟಲೆ ಹಣ ಕೊಟ್ಟು ಸೌಂದರ್ಯ ವರ್ಧಕಗಳನ್ನು ಮನೆಗೆ ತಂದುಕೊಂಡು ಬಂದು,  ಅದನ್ನು ಸರಿ ಇಲ್ಲ ಎಂದು  ಉಪಯೋಗಿಸದೆ ಅದರ ಕೊನೆಯ ಅವಧಿ ಮುಗಿಯುವವರೆಗೆ ಸುಮ್ಮನೆ ಮನೆಯಲ್ಲಿ ಇಟ್ಟುಕೊಂಡು ಮತ್ತೆ ಅದನ್ನು ಬಿಸಾಕಿ ಬಿಡುತ್ತಾರೆ. ಈ ತರಹ ಮಾಡದೆ ಸರಿಯಾದ ಸೌಂದರ್ಯದ ತಜ್ಞರ ಬಳಿ ಸಲಹೆ ಪಡೆದು,  ಅವರು ಹೇಳಿದ ಸರಿಯಾದ ಕ್ರೀಮು, ಪೌಡರ್, ಬಿಂದಿ ಇವೇ ಮುಂತಾದುವನ್ನು ತೆಗೆದುಕೊಂಡು ಉಪಯೋಗಿಸುವುದು ಒಳ್ಳೆಯದು. ಸಿಕ್ಕಿ ಸಿಕ್ಕಿದ ಕ್ರೀಮುಗಳು , ಕಾಜಲ್,  ಐ ಲೈನರ್,  ಲಿಪ್ ಸ್ಟಿಕ್, ಬೇಸ್ ಕ್ರೀಂ, ಶೇಡಿಂಗ್,  ಫೇಸ್ ವಾಶ್,  ಫೇಸ್ ಪ್ಯಾಕ್, ಪೌಡರ್, ಮಸ್ಕರಾ, ಲಿಪ್ ಲೈನರು, ಬೇಸ್ ಕ್ರೀಂ ಮೊದಲಾದ ಮೇಕಪ್ ಐಟಂಗಳು ಕಡಿಮೆ ಬೆಲೆಗೆ ಸಿಕ್ಕಿದರೂ ಕೂಡ ಅವುಗಳನ್ನು ಒಟ್ಟಾರೆಯಾಗಿ ತೆಗೆದುಕೊಳ್ಳದೆ ಸರಿಯಾದ ಸಲಹೆಯ ಪ್ರಕಾರ ತೆಗೆದುಕೊಂಡು ಬಳಸಬೇಕು. ಇಲ್ಲದೆ ಹೋದರೆ ಚರ್ಮದ ಇನ್ಫೆಕ್ಷನ್, ತೊಂದರೆಗಳು, ತುರಿಕೆ, ಕಜ್ಜಿ, ಊತ, ಕಲೆ ಉಂಟಾಗಬಹುದು. 

         ಯಾರೇ ದುಡಿದಿರಲಿ ಹಣವು ಕಷ್ಟ ಪಡದೆ ಸಿಗದು ಅದನ್ನು ವ್ಯಯ ಮಾಡಬಾರದು. ಆ ಮೇಕಪ್ ಐಟಂಗಳಿಗೆ ಸುರಿಯುವ ಹತ್ತಾರು ಸಾವಿರ ರೂಪಾಯಿಗಳನ್ನು ಯಾರೋ ಬಡವರಿಗೆ ಕೊಟ್ಟರೆ ಅವರು ಒಂದು ತಿಂಗಳು ಊಟ ಮಾಡಿ ನೆಮ್ಮದಿಯಾಗಿರಬಹುದು ಎಂಬ ಮಾತನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಅಲ್ಲದೆ ತಾನು ಬಳಸುವ ಈ ವಸ್ತುವಿನಿಂದ ನಾನು ನಿಜವಾಗಿ ಅಂದ ಕಾಣುವೆನೆ, ಆ ಬಣ್ಣ ನನ್ನ ಚರ್ಮದ ಬಣ್ಣಕ್ಕೆ ಸರಿ ಹೊಂದುವುದೇ ಎಂದು ಕನ್ನಡಿಯಲ್ಲಿ ಸರಿಯಾಗಿ ನೋಡಬೇಕು. ಜೊತೆಗೆ ಒಮ್ಮೆ ಫೋಟೋ ತೆಗೆದು ನೋಡಬೇಕು. ಮನಸ್ಸಿಗೆ ಸಮಾಧಾನ ಆಗದೆ ಇದ್ದರೆ ಅದನ್ನು ಬಳಸ ಬಾರದು. ಇತರರಿಗೆ ಅಸಹ್ಯ ಹುಟ್ಟಿಸುವ ಹಾಗೆ ನಮ್ಮ ಮೇಕ್ ಅಪ್ ಇರಬಾರದು ಅಲ್ಲವೇ?ನೈಜತೆಗೆ ಹತ್ತಿರ ಇರಬೇಕು. ಹಲವಾರು ಸೌಂದರ್ಯ ವರ್ಧಕಗಳು ನಮ್ಮಲ್ಲಿ ಚರ್ಮಕ್ಕೆ ಹೊಂದಿಕೊಳ್ಳದೆ ಬೇರೆ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಅಂತಹ ತೊಂದರೆಗೆ ನಾವೇ  ಎಡೆ ಮಾಡಿ ಕೊಡಬಾರದು. ಕೂದಲಿಗೆ ಬಣ್ಣ ಹಾಕಿ, ಅದನ್ನು ನೇರ ಮಾಡಲು ಹೋದ ಮಹಿಳೆ ಒಬ್ಬಳು ಅದನ್ನು ಸರಿ ಮಾಡಲು ಮತ್ತೆ ಐವತ್ತು ಸಾವಿರದವರೆಗೆ ಖರ್ಚು ಮಾಡಬೇಕಾಗಿ ಬಂತು. ಆದರೂ ಕೂದಲು ಚೆನ್ನಾಗಿ ಆಗಲಿಲ್ಲ. ಮುಖದಲ್ಲಿ ಕ್ರೀಂ ಹಾಕಿ ಇನ್ಫೆಕ್ಷನ್ ಆದ ಒಬ್ಬ ಮಹಿಳೆಗೆ ತನ್ನ ಮುಖ ಮೊದಲಿನಂತೆ ಆಗಲು ಒಂದು ಲಕ್ಷ ಖರ್ಚಾಯಿತು. ಕೋನ್ ಬಳಸಿ ಮದರಂಗಿ ಹಾಕಿ ಕೈಯಲ್ಲೆಲ್ಲಾ ಗುಳ್ಳೆ ಬಂದು ಅದನ್ನು ಸರಿ ಪಡಿಸಲು ಆರು ತಿಂಗಳು ಬೇಕಾಯಿತು ಮತ್ತು ಹಣವೂ ಖರ್ಚಾಯಿತು. ಕಡಿಮೆ ಟಿ ಎಫ್ ಎಂ ಪ್ರಮಾಣ ಕಡಿಮೆ ಇರುವ ಸಾಬೂನನ್ನು ಪ್ರತಿದಿನ ಹಾಕಿ ಸ್ನಾನ ಮಾಡುವುದರಿಂದ ಗರ್ಭಿಣಿ ಮಹಿಳೆಗೂ ಗರ್ಭಪಾತ ಆಗುವ ಸಂಭವ ಇದೆ ಎಂದು ಸಂಶೋಧನೆಗಳಿಂದ ದೃಢ ಪಟ್ಟಿದೆ. ಉತ್ತಮ ಗುಣಮಟ್ಟದ ಸಾಬೂನು, ಮಾರ್ಜಕಗಳನ್ನೆ ಬಳಸಬೇಕು ಎಂದು ನಮಗೆ ಇದರಿಂದ ತಿಳಿಯುತ್ತದೆ. ಕ್ರೀಂ ಗಳು ಕೂಡಾ ಹಾಗೆಯೇ ಅಲ್ಲವೇ? 
             ಮನೆಯಲ್ಲಿ ಸಿಗುವಂತಹ ಹಲವಾರು ಆಯುರ್ವೇದಿಕ್ ವಸ್ತುಗಳನ್ನು ಬಳಸಿಕೊಂಡು ಸೌಂದರ್ಯವರ್ಧಕಗಳನ್ನು ತಯಾರಿಸುವುದನ್ನು ನಾವು ಕಲಿತುಕೊಳ್ಳಬೇಕು. ಯೂಟ್ಯೂಬ್ ಚಾನೆಲ್ ಗಳಲ್ಲಿ , ಟಿವಿಗಳಲ್ಲಿ ಹಲವಾರು ವೈದ್ಯರುಗಳು ಹಾಗೂ ಸೌಂದರ್ಯ ತಜ್ಞರು ಹಲವಾರು ಸಲಹೆಗಳನ್ನು ಪ್ರತಿನಿತ್ಯ ತಮ್ಮ ವಿಡಿಯೋದ ಮೂಲಕ ನೀಡುತ್ತಾ ಬಂದಿದ್ದಾರೆ. ಅವುಗಳಲ್ಲಿ ತಮಗೆ ಸರಿಹೊಂದುವ ವಸ್ತುಗಳನ್ನು ಮಾಡಿಕೊಂಡು ಅದನ್ನು ಹಚ್ಚಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಸಮಯ ಸಿಕ್ಕಾಗಲೆಲ್ಲ ಮನೆಯಲ್ಲೇ ಸಿಗುವ ಅಡುಗೆ ಮನೆಯ ಹಾಗೂ ತರಕಾರಿ ಹಣ್ಣು ಈ ರೀತಿಯ ವಸ್ತುಗಳನ್ನು ಬಳಸಿಕೊಂಡು ಸಾಧ್ಯವಾದಷ್ಟು ರಾಸಾಯನಿಕಗಳಿಂದ ದೂರವಿರುವಂತೆ ನಮ್ಮನ್ನು ನಾವೇ ನೋಡಿಕೊಳ್ಳಬೇಕು. 
             ಎಲ್ಲರಿಗೂ ನಾವು ಅಂದವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಆದರೆ ಏನೋ ಮಾಡಲು ಹೋಗಿ ಮತ್ತಿನ್ನೇನೋ ಆಗಬಾರದು. ಅದಕ್ಕೆ ಆದಷ್ಟು ಆಯುರ್ವೇದ ವಸ್ತುಗಳನ್ನು ಬಳಸುವುದನ್ನು ಕಲಿಯಬೇಕು ಇದರಿಂದ ಯಾವುದೇ ಸೈಡ್ ಎಫೆಕ್ಟ್ ಗಳು ಇರುವುದಿಲ್ಲ. ಮನೆಯಲ್ಲಿ ವೇಸ್ಟ್ ಎಂದು ಬಿಸಾಡುವ ಹಲವಾರು ಹಣ್ಣುಗಳ ಮತ್ತು ತರಕಾರಿಗಳ ಸಿಪ್ಪೆಗಳು, ತರಕಾರಿ, ಹಣ್ಣು, ಅಡುಗೆ ಮನೆಯ ವಸ್ತುಗಳು ಇವುಗಳನ್ನೆಲ್ಲ ಬಳಸಿ ಉತ್ತಮವಾದ ರಾಸಾಯನಿಕ ವಲ್ಲದ ಹಲವಾರು ಸೌಂದರ್ಯ ವರ್ತಕಗಳನ್ನು ನಾವೇ ಮನೆಯಲ್ಲಿ ತಯಾರಿಸಿಕೊಂಡು ನಮ್ಮ ಸೌಂದರ್ಯ ಹಾಗೂ ಆರೋಗ್ಯವನ್ನು ಕೂಡ ವೃತ್ತಿಪಡಿಸಿಕೊಳ್ಳಬಹುದು. ಇದಕ್ಕೆ ಬೇಕಾದರೆ ಆಯುರ್ವೇದಿಕ್ ಹಾಗೂ ನಾಟಿ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಬಹುದು. ಮನೆಯಲ್ಲಿ ಹಿರಿಯರಿದ್ದರೆ ಅಜ್ಜಿ ಅಜ್ಜಂದಿರು ಅಪಾರ ಅನುಭವಗಳನ್ನು ಮತ್ತು ಜ್ಞಾನವನ್ನು  ಹೊಂದಿದವರಾಗಿರುತ್ತಾರೆ. ಅವರ ಸಲಹೆಗಳನ್ನು ಪಡೆದುಕೊಳ್ಳಬಹುದು.
          ತಾವೇ ಸ್ವತ: ಬೇರೆ ಬೇರೆ ಪುಸ್ತಕಗಳನ್ನು ಓದಿ ಅವುಗಳಿಂದ ಜ್ಞಾನವನ್ನು ಪಡೆದುಕೊಂಡು ಸರಿಯಾದ ರೀತಿಯಲ್ಲಿ ಅವುಗಳನ್ನು ಕಲಿತು ನಮ್ಮ ಸೌಂದರ್ಯ ವರ್ಧಕಗಳನ್ನು ನಾವೇ ತಯಾರು ಮಾಡಿಕೊಳ್ಳಬಹುದು. ಇದರಿಂದ ಯಾವ ರೀತಿಯ ಸಮಸ್ಯೆಯು ಉಂಟಾಗದು. ತಿಂದು ಬಿಸಾಕುವ ದಾಳಿಂಬೆ ಸಿಪ್ಪೆ, ಕಿತ್ತಳೆ ಹಣ್ಣಿನ ಸಿಪ್ಪೆ, ಮಾವಿನ ಹಣ್ಣು ಕಲ್ಲಂಗಡಿ ಹಣ್ಣು ಮೊದಲಾದ ಹಣ್ಣುಗಳ ಸಿಪ್ಪೆಗಳಿಂದ ತುಪ್ಪ ಹಾಗೂ ಜೇನುತುಪ್ಪವನ್ನು ಬಳಸಿಕೊಂಡು ಹಲವಾರು ಸೌಂದರ್ಯ ವರ್ಧಕಗಳನ್ನು ತಯಾರಿಸುತ್ತಾರೆ. ಮನೆಯ ತೋಟದಲ್ಲೇ ಬೆಳೆಯುವಂತಹ ಅಲೋವೆರಾ ಹಾಗೂ ತೆಂಗಿನೆಣ್ಣೆಯನ್ನು ಉಪಯೋಗಿಸಿಕೊಂಡು ಹಾಗೆಯೇ ದಾಸವಾಳದ ಎಲೆ ಹೂಗಳನ್ನು ಬಳಸಿಕೊಂಡು ತಲೆಯ ಸ್ನಾನಕ್ಕೆ ಬೇಕಾದ ಶಾಂಪೂವನ್ನು ತಯಾರಿಸಿಕೊಳ್ಳುತ್ತಾರೆ. ಇವೆಲ್ಲ ಹೆಚ್ಚು ಖರ್ಚು ಇಲ್ಲದೆ ಸಿಗುವಂತಹ ವಸ್ತುಗಳು. ಅಡುಗೆ ಮನೆಯಲ್ಲಿ ಇರುವಂತಹ ಕಡಲೆಹಿಟ್ಟು, ಅರಿಶಿನ,  ಕೊಬ್ಬರಿ ಎಣ್ಣೆ, ತೆಂಗಿನಕಾಯಿಯ ನೀರು ಇವುಗಳನ್ನೆಲ್ಲ ತಮ್ಮ ಅಂದವನ್ನು ಹೆಚ್ಚಿಸಲು ಉಪಯೋಗಿಸಿಕೊಳ್ಳಬಹುದು. 
   ವಿವಿಧ ರೀತಿಯ ರಾಸಾಯನಿಕಗಳನ್ನು ಬಳಸಿದ ಬಾಡಿ ಸ್ಪ್ರೇಗಳು,  ಸೆಂಟುಗಳು ಅವುಗಳ ವಾಸನೆಯಿಂದಾಗಿ ನಮ್ಮನ್ನು ನೆಮ್ಮದಿಯಾಗಿರಲಿ ಬಿಡುವುದಿಲ್ಲ,  ನಮ್ಮ ಜೊತೆಗಿದ್ದವರಿಗೂ ಕೂಡ ಅದು ತಲೆನೋವನ್ನು ತರುತ್ತವೆ. ಇಂತಹ ರಾಸಾಯನಿಕಗಳನ್ನು ಮೈಗೆ ಹಚ್ಚಿಕೊಂಡು ಚರ್ಮದ ಕಾಯಿಲೆಗಳನ್ನು ಧರಿಸಿಕೊಳ್ಳುವ ಬದಲಾಗಿ ದೇಹವನ್ನು ಎಣ್ಣೆಯಿಂದ ಶುದ್ಧಗೊಳಿಸಿ ಚೆನ್ನಾಗಿ ಸ್ನಾನ ಮಾಡಿ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡಬಹುದು. 
  ನಮ್ಮ ದೇಹವನ್ನು ರಾಸಾಯನಿಕಗೊಳಿಸಿಕೊಳ್ಳದೆ ಪ್ರಕೃತಿದತ್ತವಾಗಿ ಬೆಳೆಸಲು ಪ್ರಕೃತ ಅಂದವನ್ನು ಪಡೆಯಲು ಬಯಸಿ ಅಂತಹ ವಸ್ತುಗಳನ್ನು ಉಪಯೋಗಿಸಿ ಯಾವುದೇ ಕಾಯಿಲೆಗಳಿಲ್ಲದೆ ಚೆನ್ನಾಗಿ ಬಾಳೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
02.12.2023

   

ಮಂಗಳವಾರ, ಡಿಸೆಂಬರ್ 5, 2023

you

You

You are the person whom I believe in my world
Whom I adore in my life
Whom I trust for ever and now too
Whom I care always as mine and my own 
With whom I  wish to  share all my feelings

You are the person with whom I am ready to travel around the world
With whom I have my true dreams
With whom I wished to spend my precious time
To whom I have spent lot of my life

You are the person whom I carved deep inside the heart
To w my heart beats and pumps
To whom my veins breath and cells dance
To whom my tongue tastes and eyes search

You are the person to whom I yarn in the whole lifetime
To whom I wait for months to meet
To whom I wish to talk every seconds
To whom I wish to see in my dream.
To whom I wish to breath my last
@HoneyBindu@
29.11.2023

ತುಳು ಕಬಿತೆ ಬದ್ಕ್

ಬದ್ಕ್
ಕೆಲವೊರ ತೋಜುಂಡು ನಮ ಬಗ್ಗೆರೆ ಬಲ್ಲಿ
ಬಗ್ಗಿನ ಮನಸ್ ಗ್ ಗುದ್ದು ಜಾಸ್ತಿಗೆ
ಪೂರಾ ಧಿಕ್ಕರಿಸದ್ ನಡತಿನಾಯೆ
ಬದ್ಕ್ ಡ್ ಏಪಲ ಮಲ್ಲಾಯೆ

ಯಾನ್ ಎನ್ನ ಎಂಕೆ ಬೋಡು
ಪನ್ಯಾಯೆ ಮಾತ್ರತ್ ನಿಕ್ ಪಂದ್
ಬದ್ಕ್ ದಿನಾಯೆಲ  ಭೂಮಿಡ್ ಒರಿದಿಜೆ
ಏತ್ ಮೆರೆಂಡಲ ಏತ್ ತಗ್ಗಂಡಲ
ಒರ ಪೋಪಿನಿ ಮೂಜಿ ಆಜಿದ ಗುಂಡಿಗೋ ಕಾಟಗೋ
ತುಂಬೆರೆ ಬರೋಡು ಬೇತೆಕ್ಲೆ

ಎಲಿತ ಲೆಕ್ಕ ಸಾರ ವರ್ಷ ಬದುಕುನೆಕ್
ಪಿಲಿತ ಲೆಕ್ಕ ನಾಲ್ ದಿನತ ಬಾಳ್ವೆ ಯಾವಂದ
ತನ್ನತನಟ್ ಬದ್ಕಿನ ಪರ್ಮೆ ಇಪ್ಪುಂಡು
ಪರಾಯನ್ ಗೆಂನ್ಪoದಿನ ಕುಸಿ ಇಪ್ಪುಂಡು
@ಹನಿಬಿಂದು@
06.12.2023

ಭಾನುವಾರ, ಡಿಸೆಂಬರ್ 3, 2023

ಕಾರಣ

ಕಾರಣ
ಸ್ವರ್ಗದ ಮದುವೆಯ ಭೂಮಿಗೆ ಬರಲು
ಬದಲಾಯಿತು ಈಗ ಹೇಗೆ?
ಭೂಮಿಯ ಮೇಲಿನ ಮನುಜರ ಪಾಪ
ಕೊಡವನು ತುಂಬಿಸೋ ಹಾಗೆ

ಒಳ್ಳೆಯ ಕಾರ್ಯಕ್ಕೆ ಜನರದು ಬರಲು
ಹರಸಿ ಆಶೀರ್ವಾದ ಮಾಡಿ
ನಾಲ್ಕು ದಿನಗಳ ಬಳಿಕ ನೋಡಲು
ಅತ್ತೆ ಮಾವನ ಮೋಡಿ

ನಾದಿನಿ ಅತ್ತಿಗೆ ಎಲ್ಲರೂ ಕೂಡಿ
ಬಂದ ಹೆಣ್ಣಿಗೆ ಕಷ್ಟ
ಜೀವವ ತೆಗೆದರು ಹೊರಗೆ ಬಿಸಾಡಿ
ತವರು ಮನೆಗದೋ ನಷ್ಟ

ಯಾರದೋ ಹೆಣ್ಣನ್ನು ಮನೆಗದು ತಂದು
ಹೀಗೆ ಮಾಡುವುದು ಸರಿಯೇ
ಆಸೆ ಆಕಾಂಕ್ಷೆ ಕನಸು ನನಸು
ಆಕೆಗೂ ಇಹುದು ಅಲ್ಲವೇ?

ಹೆಣ್ಣಿನ ಮನವನು ಅರಿಯದ ಗಂಡಗೆ
ಸ್ವರ್ಗದಲ್ಲಿ ಏಕೆ ನಿಶ್ಚಯ
ನೋವನ್ನು ಕೊಟ್ಟು ನಗುವ ಹೃದಯಕ್ಕೆ
ಆಗಲಿ ನೋವಿನ ನಿಶ್ಚಯ..
@ಹನಿಬಿಂದು@
04.12.2023


ನನ್ನ ಬಗ್ಗೆ

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -212
       ನಮ್ಮ ಸುಪ್ತ ಮನಸ್ಸನ್ನು ಒಮ್ಮೆ ಎಚ್ಚರಿಸಿ ಕೊಳ್ಳೋಣ. ನಮ್ಮ ಮನಸ್ಸಿನಿಂದ ನಾವು ಏನು ಆಲೋಚಿಸುತ್ತೇವೆಯೋ  ಅದೇ ಆಗುತ್ತೇವೆ. ನಮ್ಮ ಮೆದುಳಿಗೆ ಬಹಳ ಶಕ್ತಿ ಇದೆ. ಅದನ್ನು ಸ್ವಲ್ಪ ಆದರೂ ಬಳಸಿ ಕೊಳ್ಳೋಣ . ನಮ್ಮ ಮೆದುಳಿಗೆ ಉತ್ತಮ ಅಂಶಗಳನ್ನು ತುಂಬಿಸಿ ಕೊಳ್ಳೋಣ. ನಾವು ಏನು ಯೋಚಿಸುತ್ತೇವೆಯೋ ಅದೇ ಆಗುತ್ತೇವೆ. ಕಿವಿ, ಕಣ್ಣು, ಕಾಲು, ಕೈ ಗಳೇ ಇಲ್ಲದ ಮನುಷ್ಯರು ಬದುಕನ್ನು ನಮಗಿಂತ ಚೆನ್ನಾಗಿ ನಡೆಸುತ್ತಾ ಇರುವಾಗ ಎಲ್ಲಾ ಅಂಗಾಂಗಗಳನ್ನು ಸರಿಯಾಗಿ ಪಡೆದ ಮಾನವರು ಬದುಕಿಗೆ ಹೆದರಿ ಬದುಕನ್ನು ತಾನೇ ಕೊನೆಗೊಳಿಸುವ ಹಾಗಿದ್ದರೆ ನಮಗೆ ದೇವರು ಉತ್ತಮ ಶರೀರ, ಒಳ್ಳೆಯ ಮನಸ್ಸು , ಆಲೋಚನೆಗಳನ್ನು ಕೊಟ್ಟು ಏನು ಪ್ರಯೋಜನ?  ವಿದ್ಯಾರ್ಥಿಗಳಿಗೆ ಏನಾದರೂ ಕಲಿಸುವ ಮೊದಲು ಶಿಕ್ಷಕರಿಗೆ ತಮ್ಮ ಮನದಲ್ಲಿ ಧನಾತ್ಮಕ ಯೋಚನೆ ಹೊಂದಿರಬೇಕು. ನಮಗೇ ಬದುಕು ಬೇಡ ಎನ್ನುವಷ್ಟರ ಮಟ್ಟಿಗೆ ನಮ್ಮ ಜೀವನವನ್ನು ನಮಗೆ ರೂಪಿಸಲು ಸಾಧ್ಯವಾಗದೆ ಇದ್ದರೆ ಅಂತಹ ಶಿಕ್ಷಕ ತನ್ನ ವಿದ್ಯಾರ್ಥಿಗಳು, ತನ್ನ ಮಕ್ಕಳ ಭವಿಷ್ಯ ರೂಪಿಸಬಲ್ಲನೇ? ಹಾಗೆಯೇ ಪೋಷಕರೂ ಕೂಡ. ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಪೋಷಕರೇ ತಮ್ಮ ಬಾಳನ್ನು ಕೊನೆಗೊಳಿಸಲು ನಿರ್ಧರಿಸಿದರೆ ಮಕ್ಕಳ ಗತಿ ಏನು? ಇನ್ನು ಕೆಲವರು ಬಾಳಿ ಬದುಕಬೇಕಾದ ಮಕ್ಕಳ ಬಾಳನ್ನು ಕೂಡಾ ಚಿವುಟಿ ಬಿಸಾಕಿ ಬಿಡುತ್ತಾರೆ. ಅವರು ಮಾಡಿದ ತಪ್ಪಿಗೆ ಏನೂ ಅರಿಯದ ಮುಗ್ದ ಕಂದರು ಬಲಿಯಾಗುತ್ತಾರೆ. 
     ಆಲೋಚನೆ ಬದಲಿಸಿದರೆ ಸಾಕು ಅಷ್ಟೇ. ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯ, ನಾವು ಮೇಲೆ ಏರುವುದು, ಎತ್ತರಕ್ಕೆ ಏರಿ ಸಾಧನೆಗೆ ಚುಕ್ಕಿ ಇಡುವುದು ಎಲ್ಲವೂ ನಾವೇ, ನಮ್ಮ ಆಲೋಚನೆಗಳೇ. ನಾನು ಏನೂ ಮಾಡಲು ಆಗದು, ನನ್ನ ಬಳಿ ಏನೂ ಇಲ್ಲ ಎಂದು ಹೇಳುವವರು ಕೊನೆಗೂ ಬದುಕಿನಲ್ಲಿ ಸಕ್ಸಸ್ ಎನ್ನುವ ಪದ ಕಾಣಲು ಸಾಧ್ಯವೇ?

      ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು, ಪ್ರಾಚಾರ್ಯರು,  ಬದಲಾದರೆ ಮಾತ್ರ ಮುಂದಿನ ದೇಶದ ಭಾಷ್ಯ ಬದಲಾಗುತ್ತದೆ. ಅವರೇ ಹೆದರಿ ಬಾಲ ಮುದುರಿ ಹೋದರೆ ಇನ್ನು ಸಮಾಜ ತಿದ್ದುವವರು ಯಾರೋ... ಇತ್ತೀಚೆಗಂತೂ ಆತ್ಮಹತ್ಯೆ ಮಾಡಿಕೊಳ್ಳುವವರ ಸಾಲಿನಲ್ಲಿ ಇವರೂ ಸೇರಿ ಹೋಗಿದ್ದಾರೆ.  ನಮ್ಮ ಬದುಕಿನ ರೂವಾರಿಗಳು, ಇಂಜಿನಿಯರ್ ಗಳು, ಬಿಲ್ಡರ್ ಗಳು, ಮೇಸ್ತ್ರಿಗಳು, ಮೇಷ್ಟ್ರುಗಳು, ಗೈಡ್ ಗಳು, ಎಸ್ಟಿಮೇಟರ್ ಗಳು, ಪ್ಲಾನರ್ ಗಳು ಎಲ್ಲವೂ ನಾವೇ.
          ಡಾ. ಏ.ಪಿ.ಜೆ ಅಬ್ದುಲ್ ಕಲಾಂ ಅವರು ಹೇಳುವ ಹಾಗೆ ನಮ್ಮ ಆಲೋಚನೆಗಳು ಬಹಳಷ್ಟು ಎತ್ತರದಲ್ಲಿ ಇರಬೇಕು. ಆಕಾಶಕ್ಕಿಂತಲೂ ಎತ್ತರದ ಗುರಿಗಳನ್ನು ಇಟ್ಟುಕೊಂಡರೆ ಆಕಾಶದವರೆಗಾದರೂ ತಲುಪಬಹುದು. ಅದರ ಬದಲು ಸಾವಿನ ಬಗ್ಗೆ ಚಿಂತೆ ಮಾಡಲು ಕನಸಿನ, ಗುರಿಯ ನಡುವೆ ಸಮಯ ಎಲ್ಲಿದೆ? ಸಾವು ಒಂದು ದಿನ ಬಂದೇ ಬರುತ್ತದೆ. ಅದು ತನ್ನ ದಿನವನ್ನು ಎಣಿಸುತ್ತಾ ಕಾದು ಕುಳಿತು ದಿನ ಲೆಕ್ಕ ಹಾಕುತ್ತಿದೆ. ಅದು ಯಾವಾಗ ಬೇಕಾದರೂ ಬರಲಿ ನಾವು ಅದನ್ನು ಖುಷಿಯಿಂದ ಸ್ವೀಕರಿಸಲು ತಯಾರಾಗಬೇಕೇ ಹೊರತು, ನಮ್ಮ ಕನಸುಗಳನ್ನು ಮುರಿಯುವುದಲ್ಲ. ಕನಸು, ಜೊತೆಗೆ ಗುರಿ ಒಟ್ಟಾಗಿ ಓಡುತ್ತಲೇ ಇರಬೇಕು. ಗುರಿಯ ಕಡೆ ಸಾಗುವ ಈ ಬದುಕಿನ ಓಟದ ನಡುವೆ ಸಾವಿನ ದಿನ ಮರೆತು ಹೋಗಬೇಕು. 
     ಸಾಯುವುದು ಸುಲಭ. ನಾಡಿಯನ್ನು ನಿಲ್ಲಿಸಿದರೆ ಆಯಿತು,ಹೃದಯ ಬಡಿತ ನಿಂತರೆ ಆಯಿತು. ಆದರೆ ಆಲೋಚನೆಗಳನ್ನು  ನಿಯಂತ್ರಿಸಿ  ಅದರ ಜೊತೆ ಹೋರಾಡಿ ಬದುಕಿನಲ್ಲಿ ಜಯ ಗಳಿಸುವುದು ಇದೆಯಲ್ಲ ಅದು ಗ್ರೇಟ್. ಅದನ್ನು ಮಾಡುವುದು ಒಂದು ತಪಸ್ಸು. ನಾನು ಆ ತಪಸ್ವಿ ಆಗಲಿದ್ದೇನೆ ಎಂಬ ಉದಾತ್ತ ಆಲೋಚನೆ ಮನದಲ್ಲಿ ಬಂದರೆ ಸಾಕು. ಸುಪ್ತ ಮನಸ್ಸು ಮೇಲೆದ್ದು ಅದೇನನ್ನೋ ಸಾಧಿಸಲು ರೆಡಿ ಆಗಿ ಬಿಡುತ್ತದೆ. ನಾನು, ನೀನು, ಅವನು, ಇವನು ಯಾರೂ ಇರದೆಯೂ ಜಗ ನಡೆಯುತ್ತದೆ. ಯಾರೋ ಹೇಳಿದ ಮಾತಿದು. "ಈ ಜಗತ್ತು ನಮಗೆ ಅನಿವಾರ್ಯವೇ ಹೊರತು ನಾವು ಜಗತ್ತಿಗೆ ಅನಿವಾರ್ಯ ಅಲ್ಲ." ನಾವೇನೋ ಈ ಜಗತ್ತಿನಲ್ಲಿ ಚಿಕ್ಕದನ್ನು ಸಾಧಿಸಲು ಬಂದಿದ್ದೇವೆ. ಅದನ್ನು ಮಾಡಿಯೇ ತೀರಬೇಕು. ಕಳುಹಿಸಿದನಿಗೆ ಹಿಂದೆ  ಕರೆಸಿಕೊಳ್ಳಲು ಗೊತ್ತಿದೆ. ಎಲ್ಲೋ ಓದಿದ ನೆನಪು. ನಾವೇನಾದರೂ ಈಗ ನಮ್ಮನ್ನು ನಾವು ಸಾಯಿಸಿಕೊಂಡು ಅಕಸ್ಮಾತ್ ಮನುಷ್ಯರಾಗಿ ಮತ್ತೆ ಹುಟ್ಟಿ  ಬಂದರೆ...? ಈಗಾಗಲೇ ಸಾಕಾಗಿದೆ...ಮತ್ತೆ ಎಲ್. ಕೆ. ಜಿ ಯಿಂದ ಓದಬೇಕು ಮತ್ತೆ ಕಲಿಯಬೇಕು, ಮತ್ತೆ ಅದೇ ಕಲುಷಿತ ನೀರು, ಆಹಾರ, ಗಾಳಿ ಸೇವಿಸಬೇಕು. ಮತ್ತೆ ಕಾಂಪಿಟೇಶನ್ ಬದುಕು. ಅದೆಲ್ಲ ಯಾಕೆ.... ಬದುಕು ಇದ್ದಷ್ಟು ದಿನ ಆರಾಮಾಗಿ ಇದ್ದು ಬಿಡೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
24.11.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -212

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -212

       ನಮ್ಮ ಸುಪ್ತ ಮನಸ್ಸನ್ನು ಒಮ್ಮೆ ಎಚ್ಚರಿಸಿ ಕೊಳ್ಳೋಣ. ನಮ್ಮ ಮನಸ್ಸಿನಿಂದ ನಾವು ಏನು ಆಲೋಚಿಸುತ್ತೇವೆಯೋ  ಅದೇ ಆಗುತ್ತೇವೆ. ನಮ್ಮ ಮೆದುಳಿಗೆ ಬಹಳ ಶಕ್ತಿ ಇದೆ. ಅದನ್ನು ಸ್ವಲ್ಪ ಆದರೂ ಬಳಸಿ ಕೊಳ್ಳೋಣ . ನಮ್ಮ ಮೆದುಳಿಗೆ ಉತ್ತಮ ಅಂಶಗಳನ್ನು ತುಂಬಿಸಿ ಕೊಳ್ಳೋಣ. ನಾವು ಏನು ಯೋಚಿಸುತ್ತೇವೆಯೋ ಅದೇ ಆಗುತ್ತೇವೆ. ಕಿವಿ, ಕಣ್ಣು, ಕಾಲು, ಕೈ ಗಳೇ ಇಲ್ಲದ ಮನುಷ್ಯರು ಬದುಕನ್ನು ನಮಗಿಂತ ಚೆನ್ನಾಗಿ ನಡೆಸುತ್ತಾ ಇರುವಾಗ ಎಲ್ಲಾ ಅಂಗಾಂಗಗಳನ್ನು ಸರಿಯಾಗಿ ಪಡೆದ ಮಾನವರು ಬದುಕಿಗೆ ಹೆದರಿ ಬದುಕನ್ನು ತಾನೇ ಕೊನೆಗೊಳಿಸುವ ಹಾಗಿದ್ದರೆ ನಮಗೆ ದೇವರು ಉತ್ತಮ ಶರೀರ, ಒಳ್ಳೆಯ ಮನಸ್ಸು , ಆಲೋಚನೆಗಳನ್ನು ಕೊಟ್ಟು ಏನು ಪ್ರಯೋಜನ?  ವಿದ್ಯಾರ್ಥಿಗಳಿಗೆ ಏನಾದರೂ ಕಲಿಸುವ ಮೊದಲು ಶಿಕ್ಷಕರಿಗೆ ತಮ್ಮ ಮನದಲ್ಲಿ ಧನಾತ್ಮಕ ಯೋಚನೆ ಹೊಂದಿರಬೇಕು. ನಮಗೇ ಬದುಕು ಬೇಡ ಎನ್ನುವಷ್ಟರ ಮಟ್ಟಿಗೆ ನಮ್ಮ ಜೀವನವನ್ನು ನಮಗೆ ರೂಪಿಸಲು ಸಾಧ್ಯವಾಗದೆ ಇದ್ದರೆ ಅಂತಹ ಶಿಕ್ಷಕ ತನ್ನ ವಿದ್ಯಾರ್ಥಿಗಳು, ತನ್ನ ಮಕ್ಕಳ ಭವಿಷ್ಯ ರೂಪಿಸಬಲ್ಲನೇ? ಹಾಗೆಯೇ ಪೋಷಕರೂ ಕೂಡ. ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಪೋಷಕರೇ ತಮ್ಮ ಬಾಳನ್ನು ಕೊನೆಗೊಳಿಸಲು ನಿರ್ಧರಿಸಿದರೆ ಮಕ್ಕಳ ಗತಿ ಏನು? ಇನ್ನು ಕೆಲವರು ಬಾಳಿ ಬದುಕಬೇಕಾದ ಮಕ್ಕಳ ಬಾಳನ್ನು ಕೂಡಾ ಚಿವುಟಿ ಬಿಸಾಕಿ ಬಿಡುತ್ತಾರೆ. ಅವರು ಮಾಡಿದ ತಪ್ಪಿಗೆ ಏನೂ ಅರಿಯದ ಮುಗ್ದ ಕಂದರು ಬಲಿಯಾಗುತ್ತಾರೆ. 
     ಆಲೋಚನೆ ಬದಲಿಸಿದರೆ ಸಾಕು ಅಷ್ಟೇ. ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯ, ನಾವು ಮೇಲೆ ಏರುವುದು, ಎತ್ತರಕ್ಕೆ ಏರಿ ಸಾಧನೆಗೆ ಚುಕ್ಕಿ ಇಡುವುದು ಎಲ್ಲವೂ ನಾವೇ, ನಮ್ಮ ಆಲೋಚನೆಗಳೇ. ನಾನು ಏನೂ ಮಾಡಲು ಆಗದು, ನನ್ನ ಬಳಿ ಏನೂ ಇಲ್ಲ ಎಂದು ಹೇಳುವವರು ಕೊನೆಗೂ ಬದುಕಿನಲ್ಲಿ ಸಕ್ಸಸ್ ಎನ್ನುವ ಪದ ಕಾಣಲು ಸಾಧ್ಯವೇ?

      ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು, ಪ್ರಾಚಾರ್ಯರು,  ಬದಲಾದರೆ ಮಾತ್ರ ಮುಂದಿನ ದೇಶದ ಭಾಷ್ಯ ಬದಲಾಗುತ್ತದೆ. ಅವರೇ ಹೆದರಿ ಬಾಲ ಮುದುರಿ ಹೋದರೆ ಇನ್ನು ಸಮಾಜ ತಿದ್ದುವವರು ಯಾರೋ... ಇತ್ತೀಚೆಗಂತೂ ಆತ್ಮಹತ್ಯೆ ಮಾಡಿಕೊಳ್ಳುವವರ ಸಾಲಿನಲ್ಲಿ ಇವರೂ ಸೇರಿ ಹೋಗಿದ್ದಾರೆ.  ನಮ್ಮ ಬದುಕಿನ ರೂವಾರಿಗಳು, ಇಂಜಿನಿಯರ್ ಗಳು, ಬಿಲ್ಡರ್ ಗಳು, ಮೇಸ್ತ್ರಿಗಳು, ಮೇಷ್ಟ್ರುಗಳು, ಗೈಡ್ ಗಳು, ಎಸ್ಟಿಮೇಟರ್ ಗಳು, ಪ್ಲಾನರ್ ಗಳು ಎಲ್ಲವೂ ನಾವೇ.
          ಡಾ. ಏ.ಪಿ.ಜೆ ಅಬ್ದುಲ್ ಕಲಾಂ ಅವರು ಹೇಳುವ ಹಾಗೆ ನಮ್ಮ ಆಲೋಚನೆಗಳು ಬಹಳಷ್ಟು ಎತ್ತರದಲ್ಲಿ ಇರಬೇಕು. ಆಕಾಶಕ್ಕಿಂತಲೂ ಎತ್ತರದ ಗುರಿಗಳನ್ನು ಇಟ್ಟುಕೊಂಡರೆ ಆಕಾಶದವರೆಗಾದರೂ ತಲುಪಬಹುದು. ಅದರ ಬದಲು ಸಾವಿನ ಬಗ್ಗೆ ಚಿಂತೆ ಮಾಡಲು ಕನಸಿನ, ಗುರಿಯ ನಡುವೆ ಸಮಯ ಎಲ್ಲಿದೆ? ಸಾವು ಒಂದು ದಿನ ಬಂದೇ ಬರುತ್ತದೆ. ಅದು ತನ್ನ ದಿನವನ್ನು ಎಣಿಸುತ್ತಾ ಕಾದು ಕುಳಿತು ದಿನ ಲೆಕ್ಕ ಹಾಕುತ್ತಿದೆ. ಅದು ಯಾವಾಗ ಬೇಕಾದರೂ ಬರಲಿ ನಾವು ಅದನ್ನು ಖುಷಿಯಿಂದ ಸ್ವೀಕರಿಸಲು ತಯಾರಾಗಬೇಕೇ ಹೊರತು, ನಮ್ಮ ಕನಸುಗಳನ್ನು ಮುರಿಯುವುದಲ್ಲ. ಕನಸು, ಜೊತೆಗೆ ಗುರಿ ಒಟ್ಟಾಗಿ ಓಡುತ್ತಲೇ ಇರಬೇಕು. ಗುರಿಯ ಕಡೆ ಸಾಗುವ ಈ ಬದುಕಿನ ಓಟದ ನಡುವೆ ಸಾವಿನ ದಿನ ಮರೆತು ಹೋಗಬೇಕು. 
     ಸಾಯುವುದು ಸುಲಭ. ನಾಡಿಯನ್ನು ನಿಲ್ಲಿಸಿದರೆ ಆಯಿತು,ಹೃದಯ ಬಡಿತ ನಿಂತರೆ ಆಯಿತು. ಆದರೆ ಆಲೋಚನೆಗಳನ್ನು  ನಿಯಂತ್ರಿಸಿ  ಅದರ ಜೊತೆ ಹೋರಾಡಿ ಬದುಕಿನಲ್ಲಿ ಜಯ ಗಳಿಸುವುದು ಇದೆಯಲ್ಲ ಅದು ಗ್ರೇಟ್. ಅದನ್ನು ಮಾಡುವುದು ಒಂದು ತಪಸ್ಸು. ನಾನು ಆ ತಪಸ್ವಿ ಆಗಲಿದ್ದೇನೆ ಎಂಬ ಉದಾತ್ತ ಆಲೋಚನೆ ಮನದಲ್ಲಿ ಬಂದರೆ ಸಾಕು. ಸುಪ್ತ ಮನಸ್ಸು ಮೇಲೆದ್ದು ಅದೇನನ್ನೋ ಸಾಧಿಸಲು ರೆಡಿ ಆಗಿ ಬಿಡುತ್ತದೆ. ನಾನು, ನೀನು, ಅವನು, ಇವನು ಯಾರೂ ಇರದೆಯೂ ಜಗ ನಡೆಯುತ್ತದೆ. ಯಾರೋ ಹೇಳಿದ ಮಾತಿದು. "ಈ ಜಗತ್ತು ನಮಗೆ ಅನಿವಾರ್ಯವೇ ಹೊರತು ನಾವು ಜಗತ್ತಿಗೆ ಅನಿವಾರ್ಯ ಅಲ್ಲ." ನಾವೇನೋ ಈ ಜಗತ್ತಿನಲ್ಲಿ ಚಿಕ್ಕದನ್ನು ಸಾಧಿಸಲು ಬಂದಿದ್ದೇವೆ. ಅದನ್ನು ಮಾಡಿಯೇ ತೀರಬೇಕು. ಕಳುಹಿಸಿದನಿಗೆ ಹಿಂದೆ  ಕರೆಸಿಕೊಳ್ಳಲು ಗೊತ್ತಿದೆ. ಎಲ್ಲೋ ಓದಿದ ನೆನಪು. ನಾವೇನಾದರೂ ಈಗ ನಮ್ಮನ್ನು ನಾವು ಸಾಯಿಸಿಕೊಂಡು ಅಕಸ್ಮಾತ್ ಮನುಷ್ಯರಾಗಿ ಮತ್ತೆ ಹುಟ್ಟಿ  ಬಂದರೆ...? ಈಗಾಗಲೇ ಸಾಕಾಗಿದೆ...ಮತ್ತೆ ಎಲ್. ಕೆ. ಜಿ ಯಿಂದ ಓದಬೇಕು ಮತ್ತೆ ಕಲಿಯಬೇಕು, ಮತ್ತೆ ಅದೇ ಕಲುಷಿತ ನೀರು, ಆಹಾರ, ಗಾಳಿ ಸೇವಿಸಬೇಕು. ಮತ್ತೆ ಕಾಂಪಿಟೇಶನ್ ಬದುಕು. ಅದೆಲ್ಲ ಯಾಕೆ.... ಬದುಕು ಇದ್ದಷ್ಟು ದಿನ ಆರಾಮಾಗಿ ಇದ್ದು ಬಿಡೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
24.11.2023
@ಹನಿಬಿಂದು@

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -211

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -211

                 ಬದುಕಿನ ದಾರಿಯಲ್ಲಿ ಒಂಟಿತನ ನಮ್ಮ ಸ್ನೇಹಿತ. ಹಿಂದಿನ ಜನ್ಮದ ತಪ್ಪುಗಳೋ ಏನೋ ಈ ಜನ್ಮದಲ್ಲಿ ಒಂಟಿತನದ ಶಾಪವಾಗಿ ಆಗಾಗ ಕಾಡುತ್ತಾ ಇರುತ್ತದೆ. ಬಂಧು, ಬಳಗ, ಗೆಳೆಯರು, ಇಷ್ಟರು ಯಾರೇ ಇದ್ದರೂ ಕೂಡ ಇದು ಕಾಡುತ್ತಲೇ ಇರುತ್ತದೆ.  ಏನೂ ಮಾಡಲು ಆಗದು. ಬಂದ ಬದುಕನ್ನು ಅನುಭವಿಸಬೇಕು, ಏನಾದರೂ ಸಾಧಿಸಬೇಕು ಅಷ್ಟೇ. ನಾವಿನ್ನೂ ಕಲಿಯುವುದು ಬಹಳವಿದೆ ಬದುಕಿನಲ್ಲಿ. ನಮ್ಮವರು ಅಂದುಕೊಂಡ ಯಾರೂ ನಮ್ಮವರಲ್ಲ. ಅವರ ಮನಸಿನಲ್ಲಿ ಬೇರೆ ಇನ್ನು ಯಾರೋ ಇರುತ್ತಾರೆ. 
        ನಾವು ಅಂದುಕೊಂಡ ಹಾಗೆ ನಮ್ಮ ಬದುಕು ಇಲ್ಲ. ಇತರರು ಇನ್ನೇನೋ ಅಂದುಕೊಂಡಿರುತ್ತಾನೆ. ದೇವರಲ್ಲಿ ಒಬ್ಬ ಬದುಕು ಬೇಡಿದರೆ, ಇನ್ನೊಬ್ಬ ಅವನ ಸಾವು ಬೇಡುತ್ತಾನೆ. ಕನ್ಫ್ಯೂಸ್ ಆದ ದೇವರು ಆತ ಸಾವು ಬದುಕಿನ ನಡುವೆ ಹೊರಳಾಡುವ ಹಾಗೆ ಮಾಡಿ ಬಿಡುತ್ತಾನೆ. ಇತ್ತ ಸಾಯಲೂ ಆಗದು , ಅತ್ತ ಬದುಕಲು ಕೂಡಾ ಆಗದು. ಅದೇ ನಮ್ಮ ಬಾಳಿನ ಮರ್ಮ ಅಲ್ಲವೇ?
          ನೋವುಗಳ ಮೇಲೆ ನೋವು, ಏಟಿನ ಮೇಲೆ ಏಟು, ಬರೆಯ ಮೇಲೆ ಬರೆ, ಒಂದು ಸಣ್ಣ ಸಕ್ಕರೆ ಹನಿ ನಡುವೆ. ಆ ಸಿಹಿ ಬಾಯಿಗೆ ಬಿದ್ದ ಕೂಡಲೇ ಮನುಷ್ಯ ಎಲ್ಲವನ್ನೂ, ಎಲ್ಲಾ ಕಷ್ಟಗಳನ್ನೂ ಮರೆತು ಇನ್ನು ನನ್ನ ಬದುಕು ಹೀಗೆಯೇ ಸಿಹಿಯಾಗಿ ಇರುತ್ತದೆ ಎಂಬ ಭ್ರಮೆಯಲ್ಲಿ ಬದುಕುತ್ತಾ ಇರುತ್ತಾನೆ. ಮತ್ತೆ ಕಷ್ಟಗಳ ಸಾಲು ಬಂದಾಗ ಸ್ವಲ್ಪ ಧೈರ್ಯದಿಂದ ಎದುರಿಸುತ್ತಾ, ಸಕ್ಕರೆ ಹನಿಯನ್ನು ನೆನಪಿಸುತ್ತಾ, ಹಾನಿ, ನೋವು ಎಲ್ಲಾ ಎದುರಿಸುತ್ತಾ ಸಾಗುತ್ತಾನೆ. ಮತ್ತೆ ಸೋತು ಸಾವಿಗೆ ಹತ್ತಿರವಾಗಿದ್ದೇನೆ ಎನ್ನುವಾಗ ಮತ್ತೊಂದು ಸಕ್ಕರೆ ಹನಿ..ಹೀಗೆಯೇ ದೇವರು ನಮ್ಮನ್ನು ಮಂಗ ಮಾಡುವುದು! ಹನಿ ಸಿಹಿಯ ಬದುಕು ಸರ್ವರದ್ದು! 
    
         ಏನೋ.. ಈ ಬದುಕು ಏನೇನೂ ಸರಿ ಇಲ್ಲ ಅನ್ನಿಸಿ ಬಿಡುತ್ತದೆ ಒಮ್ಮೊಮ್ಮೆ. ಒಂಟಿತನದ , ಬೇಸರದ, ನೋವಿನ, ಬಾಧೆ , ಬವಣೆ ಒಂದೆಡೆ ಆದರೆ ಮತ್ತೇನೇನೋ ಕೊರತೆಗಳು ಕಾಡುತ್ತಿರುತ್ತವೆ. ಎತ್ತರಕ್ಕೆ ಏರಲು ಆಗದ ಬಯಕೆಗಳು. ಯಾವುದನ್ನೂ ಸಾಧಿಸಲು ಒಂಟಿತನದ , ಹಣದ ಖರ್ಚಿನ, ಇತರರ, ಸಮಾಜದ, ಆಡಿಕೊಳ್ಳುವವರ, ಭಯ ಬಿಡದು. ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂದು ಹಿರಿಯರು ಹೇಳಿದ್ದಾರೆ. ಹಿರಿಯರ ಮಾತಿಗೆ ತಲೆಬಾಗಿ ನಡೆ ಎಂದು ವೇದ , ಪುರಾಣ, ಗೀತೆಗಳು ಹೇಳಿವೆ.  ನಡುವೆ ಹೊತ್ತು ತಿರುಗುತ್ತಿರುವ ಜವಾಬ್ದಾರಿಗಳ ಮೂಟೆ. ನಮ್ಮದಲ್ಲ ಎಂದು ಗೊತ್ತಿದ್ದರೂ ನಮಗಾಗಿ ಅಲ್ಲ,  ಬೇರೆಯವರ ಬದುಕಿಗಾಗಿ ನಾವು ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕಿದೆ. 

            ಎಲ್ಲೋ ಒಂದು  ಬೀಜ ಬಿದ್ದು ಹುಟ್ಟಿ ಅಲ್ಲೇ ಮರವಾಗಿ ಬೆಳೆದು ಎಲೆ, ಹೂ, ಹಣ್ಣು, ಕಾಯಿ, ನೆರಳು, ಗಾಳಿ ಕೊಡುವ ಮರದಂತೆ ಅಲ್ಲ ನಾವು. ಇನ್ನೆಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮತ್ತೆಲ್ಲೋ ಸಾಧಿಸ ಹೊರಟವರು. ಇಂದು ನಮ್ಮೊಡನೆ ನಮ್ಮವರಾಗಿ ಇರುವವರು ನಾಳೆ ಇನ್ನೆಲ್ಲೋ ಪರರಾಗಿ ಉಳಿದು ಬಿಡುತ್ತಾರೆ. ನಾನು, ನನ್ನದು,  ನನಗೆ,  ನನಗಾಗಿ,  ಯಾರೂ ಇರದೆ ಇರಬಹುದು. ನಮ್ಮವರು ಅಂದುಕೊಂಡವರು ಪರರ ಪಾಲಾಗಿರಬಹುದು. ನಮ್ಮನ್ನು ಅವರು ಮರೆತಿರಲೂ ಬಹುದು. ನಮ್ಮೊಡನೆ ಕಳೆದ ಕ್ಷಣಗಳ ಮೆಲುಕು ಹಾಕುತ್ತಾ ಇರಲೂ ಬಹುದು. ಸಂತೋಷದಲ್ಲಿ ಕುಣಿದು ಕುಪ್ಪಳಿಸುವ ಆನಂದದ ಬದುಕಲ್ಲಿ ಮೆರೆದಾಡುತ್ತಾ ಇರಲೂ ಬಹುದು. 

            ಕಾಲ ನಿಲ್ಲದು, ಓಡುತ್ತಲೇ ಇರುತ್ತದೆ. ಪ್ರತಿ ಕ್ಷಣವೂ ಬದಲಾಗುತ್ತಲೇ ಇರುವ ದೇಹ, ಮನಸ್ಸು, ಪ್ರಕೃತಿ, ಆಲೋಚನೆಗಳು. ಆದರೆ ದಿಕ್ಕುಗಳು ಬದಲಾವಣೆ ಆಗದು. ಭೂಮಿ ಚಲಿಸುತ್ತಲೇ ಇದ್ದರೂ, ಋತು, ಹಗಲು ಇರುಳು ಬದಲಾಗುತ್ತಲೇ ಇದ್ದರೂ ಅದು ಸೂರ್ಯನನ್ನು ಬಿಟ್ಟು ಇನ್ನೊಂದು ನಕ್ಷತ್ರದ ಸುತ್ತ ಸುತ್ತಲು ಆಗದು, ಹೋಗದು. ಇದಂತೂ ಜಗತ್ತಿನ ಸತ್ಯ. ಹಾಗೆಯೇ ಸೂರ್ಯ ಕೂಡಾ. ತನ್ನ ಸುತ್ತ ಸಾವಿರ ಗ್ರಹಗಳು ಸುತ್ತುತ್ತಲೇ ಇದ್ದರೂ ಗಾಳಿ, ಬೆಳಕು, ನೀರು, ಹಸಿರು ಕೊಟ್ಟು ಕಾಪಿಟ್ಟದ್ದು ವರವಿತ್ತುದು ಧರೆಗೆ ಮಾತ್ರ. ಇನ್ನೊಂದು ಗ್ರಹ ಹಾಗೆ ಇರಲಾರದು. ಧರೆಯನ್ನು ನೋಡಲೆಂದೇ ಪ್ರತಿ ನಿತ್ಯ ರವಿ ಬೆಳಗೆದ್ದು ಬರುತ್ತಾನೆ. ಒಂದೇ ಒಂದು ಕಾರಣ. ತನಗಾಗಿ ಅಲ್ಲ, ಇಳೆಗಾಗಿ. ಧರಣಿಯ ಆರೋಗ್ಯಕರ ಸೌಂದರ್ಯ ಉಳಿಸಲಿಕ್ಕಾಗಿ. ಹಕ್ಕಿಗಳ ಚಿಲಿಪಿಲಿ, ಇಬ್ಬನಿಯ ಬಿಂದುಗಳ ಬೆಳಕಿನಾಟ, ಹನಿಗಳ ಉದುರುವಿಕೆಯ ತಂಪು ಇವುಗಳನ್ನು ನೋಡಲು ಸಿಗುವುದು ಆ ಸೂರ್ಯ ದೇವರ ತರಹ ಬಂದಾಗಲೇ ಅಲ್ಲವೇ. ಭಾನು ಇಲ್ಲದೆ ಇಳೆ ಇಹಳೆ? ಸದಾ ಇಳೆ ಕಾಯುವುದು, ಸುತ್ತುವುದು, ಹಗಲು ರಾತ್ರಿಗೆ, ತನ್ನ ಹಸಿರ ಸೊಬಗಿನ ಮೈಸಿರಿಗೆ ಆಕೆ ಆಧರಿಸಿರುವುದು ಸೂರ್ಯನನ್ನೇ. ಅದು ಆ ಆದಿತ್ಯನಿಗೂ ತಿಳಿದ ಕಾರಣ ಪ್ರತಿ ಮುಂಜಾನೆ ಬಂದು ಇಣುಕಿ ಬಿಡುತ್ತಾನೆ. ವರ್ಷಾನು ವರ್ಷದಿಂದಲೂ ಸೂರ್ಯ ಹಾಗೂ ವಸುದೆಯರ ಜತೆ ತಿರುಗಾಟ ನಿಂತಿಲ್ಲ. ನಿಂತರೆ ಇಳೆ ಇರಲಾರಳು. ಅಂದೇ ಹಸಿರಿನ, ಜೀವ ಜಗತ್ತಿನ ಕೊನೆ. ಪ್ರಪಂಚದ ಪ್ರಳಯ. ಇದು ಅಸಾಧ್ಯ. ಏಕೆಂದರೆ ನಾರಾಯಣನ ಲೆಕ್ಕಾಚಾರ ಬೇರೆಯೇ ಇದೆ. ಹತ್ತವತಾರಗಳನ್ನು ಎತ್ತಿ ಇನ್ನೊಂದು ಹೊಸ ಅವತಾರ ಎತ್ತಿ ಬರಲು ಕಾಯುತ್ತಿರುವ ಅವನು ಭೂಮಿಯನ್ನು ತಾ ಬರುವ ಮೊದಲು ಅಥವಾ ಬಂದು ಸ್ವಚ್ಚ ಗೊಳಿಸಬೇಕಿದೆ. ಈ ಸುತ್ತಾಟದ ಬದುಕಿನಲ್ಲಿ ಯಾರ ಸುತ್ತ ಯಾರು ಸುತ್ತಬೇಕೋ ಅವರೇ ಸುತ್ತಬೇಕು, ಪರರು ಸುತ್ತಿದರೂ, ಪರರ ಹಿಂದೆ ಇವರು ಸುತ್ತಿದರೂ ಬದುಕಿನ ಲೆಕ್ಕಾಚಾರವೇ ಬೇರೆಯಾಗಿ ಹೋಗುತ್ತದೆ. ಭೂಮಿಯು ರವಿಯ ಸುತ್ತ, ಚಂದಿರ ಭೂಮಿಯ ಸುತ್ತ! 
         ಬದುಕೇ ಹಾಗೆ. ಅಲ್ಲೊಂದು ಸಿಸ್ಟಂ ಇದೆ. ಅದನ್ನು ಪಾಲಿಸಬೇಕು. ತನಗಾಗಿ ಅಲ್ಲ, ಈ ಸಮಾಜಕ್ಕಾಗಿ ಬದುಕಬೇಕು. ಸಮಾಜ ಎಂದರೆ ನಾವೇ, ಆದರೆ ಸಮಾಜ ಸರಿ ಇಲ್ಲ ಎನ್ನುತ್ತೇವೆ. ಮನುಷ್ಯನನ್ನು ಹೊರತುಪಡಿಸಿ ಇತರ ಎಲ್ಲಾ ಜೀವಿ, ನಿರ್ಜೀವಿಗಳು ಸರಿ ಇರುವಾಗ ತನಗೆ ತಾನು ಸರಿ ಇಲ್ಲ ಎಂದು ತಿಳಿದೂ ಕೂಡ ಮನುಷ್ಯ ತಪ್ಪೇ ಮಾಡುತ್ತಾ ಬದುಕುತ್ತಾ ಇದ್ದಾನೆ. ತನ್ನ ಕಾಲಿಗೆ ತಾನೇ ಕೊಡಲಿ ಏಟು ಹಾಕಿ ಕೊಳ್ಳುತ್ತಾ ಇದ್ದೇನೆ ಎಂದು ಅರಿತರೂ ಕೂಡಾ ಇಂದೇ ಸಾಯಲಿಕ್ಕಿಲ್ಲ, ಮೆಲ್ಲ ಪೆಟ್ಟು ಕೊಟ್ಟುಕೊಳ್ಳುತ್ತೀನೆ ಅಂತ ತಾನು ನೋವು ಭರಿಸುತ್ತಲೇ ಇರುತ್ತಾನೆ. ಅದು ಇತರರಿಗಾಗಿ ಎಂದು ಅರಿತರೂ, ಅದು ತನ್ನ ಜವಾಬ್ದಾರಿ ಎಂಬಂತೆ ಹಣ, ಧನ, ಸಂಪತ್ತು, ಆಸ್ತಿ ತುಂಬಿಡುತ್ತಾ ತನ್ನ ಬದುಕಿನ ಕಾಯಕ ಅದೇ ಎನ್ನುತ್ತಾ ತಾನು ಸರಿಯಾಗಿ ಬೇಕಾದ್ದನ್ನು ತಿನ್ನುವುದನ್ನು ಕೂಡ ಮರೆತು ಬೇಡದ ರುಚಿಕರ ವಸ್ತುವಿನ ಹಿಂದೆ ಅದು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದರೂ ಕೂಡ ಖುಷಿಗಾಗಿ ರುಚಿಗಾಗಿ ಓಡುತ್ತಾ ಇರುತ್ತಾನೆ. 
   ಎಲ್ಲವನ್ನೂ ಇಲ್ಲೇ, ಯಾರಿಗಾಗಿಯೋ ಬಿಟ್ಟು ಕೊನೆಗೆ ಒಂದು ದಿನ ಕೋಪ, ರೋಷ, ದ್ವೇಷ, ಜಗಳ, ಪ್ರೀತಿ, ಮೋಹ ಎಲ್ಲದಕ್ಕೂ ಪೂರ್ಣ ವಿರಾಮ ಹಾಕಿ ತನಗೆ ಗೊತ್ತಿಲ್ಲದ ದಾರಿಯಲ್ಲಿ ಒಂಟಿಯಾಗಿ ಬಂದ ಹಾಗೆಯೇ ಆತ್ಮಕ್ಕೆ ಮೋಕ್ಷ, ಚಿರ ಶಾಂತಿ ಹುಡುಕುತ್ತಾ ನಡೆದು ಬಿಡುತ್ತಾನೆ. ಕೆಲವರು ಮತ್ತೆ ಖುಷಿ ಪಟ್ಟರೆ ಇನ್ನು ಕೆಲವರು ದುಃಖ. ಒಟ್ಟಿನಲ್ಲಿ ಸುತ್ತುವ ಕಾರ್ಯ ಇಲ್ಲಿ ದೇಹದ ಜೊತೆಗೆ ಮುಗಿದಿರುತ್ತದೆ. ಮುಂದಿನ ಹಿಂದಿನ ಬದುಕಿನ ಯಾವ ಅಧ್ಯಾಯವೂ ನೆನಪಿನಲ್ಲಿ ಇರುವುದಿಲ್ಲ. 
  ಸಾಧನೆಯ ಹಿಂದೆ ಹೋದವನು, ಕಟುಕನೂ, ಬಡವನೂ , ಧನಿಕನೂ, ಮಹರ್ಷಿಯೂ,  ಮಾನವಂತನೂ, ಹೀನನೂ, ಮೂರ್ಖನೂ ಪಂಡಿತನೂ,ಸಾಧಿಸಿ ಗೆದ್ದವ, ಸೋತವ , ಸಾಧನೆ ಮಾಡದವ, ಕುಡಿದ ಮತ್ತಿನಲ್ಲಿ ತೇಲಾಡಿದವ, ಸೋತವ, ದೈವಾಂಶ ಶಂಭೂತ ಎಲ್ಲರದ್ದೂ ಇದೇ ಕಥೆ. 
       ಇಲ್ಲಿ ಇದ್ದಷ್ಟು ದಿನ ಬದುಕುವುದು ಕೇವಲ ಆರೋಗ್ಯ, ನೆಮ್ಮದಿ, ಪರಿಶುದ್ಧ ಪ್ರೀತಿಗಾಗಿ. ಇವಿಷ್ಟಕ್ಕೆ ಮನುಷ್ಯ ಅದೆಷ್ಟು ಕಷ್ಟ ಪಡುತ್ತಾನೆ, ಅದೆಷ್ಟು ಸಾಧನೆ, ರೋಗ, ದ್ವೇಷ, ಜಗಳ, ಕದನ, ಆಟ ಓಟ! ಅಬ್ಬಾ ಮನಸ್ಸುಗಳನ್ನು ಅರಿಯುವುದು ಮತ್ತು ಅದರ ನಡುವೆ ಬದುಕುವ ಕಾರ್ಯ ಏಳು ಸುತ್ತಿನ ಕೋಟೆಯ ಒಳಗೆ ಎಲ್ಲರ ಕಣ್ಣು ತಪ್ಪಿಸಿ ನುಗ್ಗುವಷ್ಟು ಕಷ್ಟ. ಬೆರೆತು ಬಾಳುವುದು ಸ್ವರ್ಗ ಸುಖ ಅಂತಾರೆ. ಆ ಮನಸ್ಸುಗಳು ಬೆರೆಯುವ ಕಾರ್ಯ ಅದೆಷ್ಟು ಕಷ್ಟ ಅಲ್ಲವೇ? ಮನದ ಮೂಲೆಯಲ್ಲಿ ಸೇಡು, ದ್ವೇಷ, ಮೋಸ, ರೋಷ, ಹಗೆತನದ ಒಂದು ಸಣ್ಣ ಬೂದಿ, ಹೊಗೆ , ಕಿಡಿ ಇದ್ದರೂ ಸಾಕು. ಅದು ಬದುಕನ್ನು ನಾಶ ಮಾಡಿ ಬಿಡುತ್ತದೆ. 
  ಕೆಲವೊಮ್ಮೆ ಮೇಲೇರುತ್ತಾ ಹೋದವ ತನಗೆ ಗೊತ್ತಿಲ್ಲದ ಹಾಗೆ ಏರುತ್ತಲೇ ಹೋಗುತ್ತಾನೆ. ಕಾಲದ ಮಹಿಮೆ. ತಾನು, ತನ್ನದು ಅಂತ ಏನೂ ಇಲ್ಲ, ನಾವು ಕೂಡಿ ಇಟ್ಟದ್ದು, ದುಡಿದದ್ದು, ಬೆಳೆಸಿದ್ದು ಇವು ಯಾವುವೂ ನಮ್ಮವಲ್ಲ. ನಮ್ಮದು ಅಂತ ಸ್ವಂತವಾಗಿ ಉಳಿಯುವುದು ಉಸಿರು ಒಂದೇ. ಆದರೆ ಆ ಉಸಿರು ಇರುವವರೆಗೂ ಒಂಟಿ ಹೋರಾಟ. 
  ಕೊನೆ ಕ್ಷಣಗಳು ಕ್ಷಣ ಕ್ಷಣಕ್ಕೂ ಹತ್ತಿರವಾಗುತ್ತಿವೆ. ಹೊರಡಲು ಸ್ವಲ್ಪ ಸ್ವಲ್ಪ ತಯಾರಿ ಮಾಡಿಕೊಳ್ಳ ಬೇಕಿದೆ. ಸ್ವಲ್ಪ ಕೋಪ, ಸ್ವಲ್ಪ ದ್ವೇಷ ಇಟ್ಟುಕೊಂಡರೂ ಸ್ವರ್ಗದ ಬಾಗಿಲು ತಟ್ಟಲು ಆಗದು. ಏಕೆಂದರೆ ಮೆಲೊಬ್ಬ ಇರುವನಲ್ಲ, ಎಲ್ಲವನ್ನೂ ನೋಡಲು, ಮತ್ತೆಲ್ಲವನ್ನೂ ಲೆಕ್ಕಾಚಾರ ಮಾಡಿ ಬರೆದು ಇಡಲು! 

ಗೆದ್ದರೂ ಸೋತರೂ ಜನ ತಲೆ ಬಾಗಲೆ ಬೇಕು. ಇಲ್ಲದೆ ಹೋದರೆ ಪದಕ ಹಾಕಲು ಆಗದು. ಸೋತವರು ಮತ್ತೆ ಮತ್ತೆ ಪ್ರಯತ್ನಿಸಿ ವಿಜಯಿಗಳಾಗಬೇಕು. ಪ್ರಯತ್ನದಲ್ಲಿ ಕೂಡಾ ಸೋತರೆ? ದೇವರನ್ನೇ ಕೇಳಬೇಕು ಅಲ್ಲವೇ? ಎಲ್ಲಾ ಆದ ಬಳಿಕ ಕೊನೆಗೆ ಶಿವನ ಪಾದವೇ ಗತಿ. ಇದೇ ಬದುಕು. ನೀ ಉತ್ತಮವಾಗಿ ಬದುಕು.ನೀವೇನಂತೀರಿ?
@ಹನಿಬಿಂದು@
18.11.2023