ಶನಿವಾರ, ಆಗಸ್ಟ್ 9, 2025

ಸೋದರನ ಕರೆ

ಭ್ರಾತೃತ್ವ ಬಂಧ 

ಸಹೋದರನ ಕರೆ

ತಂಗಿಯೇ ಬಳಿಯೇ ಇರಲಾರೆನು ನಿತ್ಯವೂ 
ಬೆಳೆಯಲು ಬೇಕು ನಮ್ಮ ಬಾಳು ಕ್ಷಣ ಕ್ಷಣವೂ
ಗಳಿಕೆಯು ಇರಲು ಸಂಬಂಧ ಸುಸೂತ್ರ
ಮಿಳಿತದ ಭಾವಕೆ  ಭ್ರಾತೃತ್ವ ಸ್ತೋತ್ರ//

ಕಾಣದ ಕೈಗಳ ಪ್ರೀತಿಯೂ ಇಹುದು
ದೂರದಿ ಸಂತೈಕೆಯ ಭಾವವೂ ನೆನಪಿಹುದು 
ಭಾರದ ಹೃದಯದಿ ಕಾಯಕ ಹಲವೆಡೆ
ರಕ್ಷೆಯು ಕೈಯಲಿ ಬಿಡದು ಕೆಡುವೆಡೆ..//

ಮನದಲಿ ನೆನಪು ಹೆಣಗದ ಹಾಗೆಯೇ
ಕನಸಲು ಬಯಸುವೆ ಒಳ್ಳೆಯ ಬಗೆಯೇ
ನೀನೆನಗೆ ನಾ ನಿನಗೆ ಸೋತಾಗ ಗೆದ್ದಾಗ
ಬೀಸಣಿಗೆ ಸೆಕೆಯಲಿ ಬಾಳಲಿ ಬಿದ್ದಾಗ//

ಒಳ್ಳೆಯತನ ನಮ್ಮುಸಿರ ಪವಿತ್ರ ಬಂಧವು
ರಕ್ಷಣೆಯ ನೀಡುವಲಿ ಸರ್ವ ಸ್ವಾತಂತ್ರ್ಯವು
ಭಾರತದ ಭವದ ಭಾವವಿದು ಬಾಡದಿರಲಿ
ಭವ್ಯ ಬದುಕಿನ ಬಳುವಳಿಯು ಬಸವಳಿಯದಿರಲಿ ..//
@ಹನಿಬಿಂದು@
10.08.2025

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ